ಒಟ್ಟು 50999 ಕಡೆಗಳಲ್ಲಿ , 138 ದಾಸರು , 11453 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸು ಬಾಲಗೋಪಾಲ ಕೃಪಾಳು ನೀಪಾಲಿಸು ಬಾಲಗೋಪಾಲ ಬಾಲಕಲೀಲಾ ವಿಶಾಲ ಮಾಲೋಲಜ ಲಲಿತ ಬಾಲಗೋಪಾಲ ಪ.ರಂಗು ರನ್ನುಂಗುರದಂಗುಲಿ ಸಂಜÕದಿಪೊಂಗೊಳಲ ಸಂಗೀತ ರಂಗಮಂಗಳ ಭಾಂಗ ತ್ರಿಭಂಗ ಗೋಜಂಗುಳಿಸಂಗವ ಹಿಂಗದ ರಂಗಅಂಗಜತಿಂಗಳ್ಪತಂಗ ರೂಪಂ ಗೆಲ್ವತುಂಗೋಜ್ವಲಾಂಗ ಶ್ರೀರಂಗಮಂಗಳಪಾಂಗ ಗುಣಂಗಳ್ತರಂಗ ಆಸಂಗಿ ಜಗಂಗಳ್ಗೆ ರಂಗ 1ಕೆಂದಾವರ್ಯಂದದಿ ಸುಂದರ ದ್ವಂದ್ವಾಂಘ್ರಿಚೆಂದುಳ್ಳ ತಂದೆ ಗೋವಿಂದಬಂದಿ ಕಾಲಂದುಗೆ ಪೊಂದುಡುಗಿಂದೆಸೆವನಂದನ ಕಂದ ಗೋವಿಂದನಂದವ್ರಜ ಹೊಂದಿದವೃಂದಾರಕೇಂದ್ರಗೋವೃಂದದಿ ನಿಂದ ಗೋವಿಂದಇಂದಿರಜ ಇಂದುಮೌಳೀಂದ್ರ ಮುನೀಂದ್ರಾದಿವಂದಿತ ನಂದ ಗೋವಿಂದ 2ಉನ್ನತ ಪುಣ್ಯ ಗೋಗನ್ನೇರ ಮನ್ನಿಪಚೆನ್ನಿಗ ಚಿನ್ನಪಾವನ್ನಪನ್ನಗಔನ್ನತ್ಯ ಭಿನ್ನ ದಯಾರ್ಣವ ಜಗನ್ನ ಮೋಹನ್ನಪಾವನ್ನಸನ್ಮುನಿಜನ್ನ ಭಾರ್ಯಾನ್ನವನುಣ್ಣುವಚಿನ್ಮಯ ಪುಣ್ಯಪಾವನ್ನಸ್ವರ್ಣಗಿರಿ ನಿಕೇತನ್ನ ನೀ ಧನ್ಯ ಪ್ರಸನ್ನವೆಂಕಟರನ್ನಪಾವನ್ನ3
--------------
ಪ್ರಸನ್ನವೆಂಕಟದಾಸರು
ಪಾಲಿಸು ಭಕ್ತವತ್ಸಲನೇ ನಿನ್ನಬಾಲಕನಂತೆನ್ನ ಸಲಹೋ ಶ್ರೀವರನೇ ಪಬಾಲ ಪ್ರಹ್ಲಾದ ಧ್ರುವನು ಚಂದ್ರಹಾಸಮೇಲಾದ ಮುಚುಕುಂದನಂತೆನ್ನ ಸತತ ಅ.ಪಸುರರುನಾರದರು ಕಿನ್ನರರುಮುನಿವರರು ವಸಿಷ್ಠ ವಾಲ್ಮೀಕಿ ಗೌತಮರುಗರುಡ ಗಂಧರ್ವ ಗಾಯಕ ಯಕ್ಷವಾಸುಕಿತರಣಿನಂದನ ಆಂಜನೇಯ ಜಾಂಬವರಂತೆ 1ನಳ ನಹುಷ ಸಗರಂಬರೀಷ ನಿನ್ನ ಒಲಿಸಿಭಗೀರಥ ಬಲಿಯುನಾಕೇಶಸಲಹೆಂದು ಹರಿಶ್ಚಂದ್ರರುಕ್ಮಾಂಗದ ವಿಭೀಷಣಗೊಲಿದಧರ್ಮಜ ಪಾರ್ಥ ಕರಿರಾಜನಂತೆ 2ಚರಣದಿ ಅಹಲ್ಯೆಯನು ಕಾಯ್ದೆ ನೀನುಪೊರೆದೆ ಶಬರಿಯನ್ನು ಕುಬುಜೆಯನೆನದೆಹರುಷದಿ ಎರಡೆಂಟು ಸಾವಿರ ತರುಣಿಯರೊಡಗೂಡಿಸೆರಗಿಗೆ ವರವಿತ್ತೆ ದ್ರುಪದನಂದನೆಗೆ 3ಸಿಂಧುಶಯನ ನಿನ್ನ ಕರುಣ ಎನ-ಗೆಂದಿಗೆ ತೋರುವೆ ಶ್ರೀಲಕ್ಷ್ಮೀರಮಣಮಂದರಧರಅರವಿಂದವದನಹರಿನಂದನ ಕಂದ ಗೋವಿಂದನೆ ದಯದಿ 4
--------------
ಗೋವಿಂದದಾಸ
ಪಾಲಿಸು ಲೋಕನಾಯಕನೆಗುಣಶೀಲ ಶಂಕರ ಗಂಗಾಧರನೆಫಾಲಲೋಚನಘೋರಕಾಲಭಯ ವಿದೂರನೀಲಕಂಠೇಶ್ವರನೇ ಭಕ್ತರಕಾವಬಾಲ ಚಂದಿರಧರನೇ ಪನಂಬಿದ ಮುನಿಬಾಲನ ಪೊರೆಯುವನೆ ನರರರುಂಡಮಾಲೆಯ ಧರಿಸಿದ ಶೂಲಪಾಣಿಯೆನಿನ್ನ ಮಹಿಮೆಯ ಪೇಳುವರೆ ಪಾತಾಳಲೋಕದಸೀಳು ನಾಲಗೆಯುಳ್ಳ ಸಹಸ್ರಕಪಾಲಶೇಷಗೆಗಿಂತು ಸಾಧ್ಯವೇ 1ಉರಗಕುಂಡಲಧರ ರಜತಾದ್ರಿ ಗಿರಿವರಕರಿಚರ್ಮಾಂಬರಧರನೇ ಮುಕ್ತಿಯನೀವಪರಮೇಶ ಗುಣಕರನೇ ರಾಮನ ರಾಣಿ-ಗಿರವ ತೋರಿಸಿದವನೇಕಾಮನ ಕಣ್ಣ ಉರಿಯೊಳು ದಹಿಸಿದಕರುಣನಿಧಿ ಕೈಲಾಸದಲೀ ಸ್ಥಿರದಿ ನೆಲಸಿದನಿನ್ನ ಚರಣವಸುರರುನರದಾನವರು ಭಜಿಸಲುವರವನಿತಾ ತೆರದೊಳೆನ್ನನು 2ಒಂದಿನ ಸುಖವಿಲ್ಲ ಬಂಧು ಬಾಂಧವರಿಲ್ಲನಂದಿವಾಹನ ದೇವನೆನಿನ್ನಯ ಪಾದಕೊಂದಿಸುವೆನು ಶಿವನೆಎನ್ನೊಳು ಬಂದು ಪಾಲಿಸು ಪರಮೇಶನೆಭೀಮನಿಗಂದು ವರವಿತ್ತು ಮೆರೆಸಿದೆಇಂದ್ರಸುತನಿಗೆ ವನದಿ ನೀನತಿಚಂದದಲಿ ಶರ ಒಂದ ಪಾಲಿಸಿದಂದು ಕುರುಕುಲ ವೃಂದವನು ಗೋವಿಂದಸಾರಥಿಯಾಗಿ ಕೊಂದನು ಚಂದ್ರಧರನೇ 3
--------------
ಗೋವಿಂದದಾಸ
ಪಾಲಿಸು ಶ್ರೀಪಾದಭಜಕೋದ್ಧಾರಣ ಪಮನುಮುನಿವಿನಮಿತ ಘನಗುಣಚರಿತಕನಿಕರಸದನ 1ದೀನಜನಾಧಾರ ದಾನವಭಂಜನಜಾಹ್ನವೀಜನಕ 2ಕಾಮಿತದಾಯಕ ಕೋಮಲನಾಮಸ್ವಾಮಿ ಶ್ರೀರಾಮ 3
--------------
ರಾಮದಾಸರು
ಪಾಲಿಸೆ ಶ್ರೀ ಗೌರೀ ಎನ್ನನು ಪಪಾಲಿಸೆ ನಿನ್ನಯ ಪಾಲಿಗೆ ಬಂದೆನು |ಬೀಳುವೆ ಸರ್ವದ ಕಾಲಿಗೆ ಕರುಣದೀ ಅ.ಪ.ಶರಣೆಂದವರನು ಪೊರೆವಳು ಎಂಬುವ |ಬಿರಿದು ನಿನ್ನದು ಎಂದರಿದೆನು ತ್ವರದಿಂ1ಸನ್ಮತಪುರುಷನ ಯಿನ್ನೆಲ್ಲಿ ಕಾಣೆನೋ |ಮನ್ಮಥನೆಂಬುವ ಬನ್ನಬಿಡಿಪ ಬಲು2ಕಾಣೆನು ಶಾಂತಿಯ ಏನೆಂಧೇಳಲಿ |ಪ್ರಾಣೇಶ ವಿಠಲನು ತಾನೆಯೇ ಬಲ್ಲನು 3
--------------
ಪ್ರಾಣೇಶದಾಸರು
ಪಾಲಿಸೆನ್ನ ಪಾರ್ವತೀಪತಿ ಪಾಲಿಸೆನ್ನನುಪಾಲಿಸೆನ್ನನು ಚೆಲ್ವ ಕಾಲಕಂದರ ಹರಪಾಲಯಮಾಂ ಶಿವಲೋಲವಿರೂಪಾಕ್ಷಪಶರನಾಮ ಸುರನ ಕುವರಿಯನಾಳಿದವನಹಿರಿಯ ಪಿತನ ಶಿರವ ತರಿದವನ ಸುತನಿಗೆತುರಗವಾದವನ ಜೆಹ್ವೆಯ ತುದಿಗೆ ಸಿಲುಕಿಮರುಳಾಗಿದ್ದವನ ಬಾಯ ತುತ್ತಾಗಿಮರೆಯೊಳಿದ್ದವನ ಕಾಯವಾಧರಿಸಿ ನೀಶಿರದೊಳು ತಾಳಿದೆಯಾ ಎನ್ನೊಡೆಯ1ಬಾಯೊಳಗಿಹ ರಮಣನ ಅನುಜನ ಮಾವನ ದಿನದಮೈಯವನ ಮಗನ ಶಿರದಾಯತವಾಗಿಪ್ಪನ ವೈ-ರಿಯ ನೇರಿದಾಯತಾಕ್ಷಿಯ ಪೆತ್ತನ ವಂಶವ ಮುರಿ-ದಾ ಯಾಗಗಳ ಕಿತ್ತವನ ಆತ್ಮಜನಿಗೆಆಯಾಮಾರ್ಗಣವಿತ್ತವನೆ2ಸರಸಿಜಮಿತ್ರನ ಸೂನುವಿನ ಕಂದನವರಪುರಂಧ್ರಿಯಮಾನವಕಾಯ್ದನಣ್ಣನಕರದೊಳಿದ್ದಾಯುಧವ ಪೆಗಲೊಳಾತುನರರ ರಕ್ಷಿಸಿ ಪೊರೆವ ದೇವನನೇರಿಚರಿಪ ಪಂಪಾಪುರವನಾಳ್ವ ಸದ್ಗುರುಚಿದಾನಂದ ದೇವಭಕ್ತರಕಾವ3
--------------
ಚಿದಾನಂದ ಅವಧೂತರು
ಪಾಲಿಸೆನ್ನ ಮಂದಬಾಲಿಶನ್ನಪಾಲಗಡಲೊಡೆಯ ಸಿರಿಲೋಲ ಪ.ಅಂಬುರುಹಸಂಭವ ತ್ರಿಯಂಬಕ ಶೇಷಾಂಬರಗದಂಭೋಳಿಸಂಭೃತನುತಾಂಘ್ರಿ 1ಅಷ್ಟಕೃತ್ಯ ಅಷ್ಟವಿಭವ ಅಷ್ಟ ಭೋಗ್ಯಥೇಷ್ಟ ಶಕ್ತಅಷ್ಟಹರಿತ ಶ್ರೇಷ್ಠವರ್ಯ ಶ್ರೇಷ್ಠ 2ದ್ಯುಗ ಶಶಿಭಾಯುಗನಯನ ಜಗಜಠರಘಹರಾಹಿನಗನಿಲಯ ಜಘನಕಟಿಪಾಣಿ 3ಕಿರೀಟ ಕುಂಡಲರಿದರಕೇಯೂರಕೌಸ್ತುಭಸಿರಿವತ್ಸವರಾಂಬರ ಮನೋಹರ ಮೇಖಲಧಾರಿ 4ದ್ರೌಪದಿ ಮುನಿವಧು ಬಾಲಧ್ರುವ ಪ್ರಹ್ಲಾದ ವಿಭೀಷಣೋದ್ಧವಾಕ್ರೂರ ಮುಖ್ಯವಮಾನಹಾರಿ 5ಋಗ್ಯಜುಸಾಮನಿಗಮಧರವಗೋಚರ ಮುನಿಗಣ ಸುಮನಗೇಹನಂತ ಸುಗುಣಾನಂದ ಪೂರ್ಣ 6ಮಧು ಕೈಟಭ ಮದನೇಮಿ ಜಲಂಧರಕಂಬುಸದನಖಳಾಬುಧಿ ಕುಲಾಂತಕ ದ್ವಿಜೋಪಕಾರಿ 7ಋಷಿ ಹನುಮ ರಸಗಾಯನ ತೋಷಭರಿತ ಹಾಸವದನಪ್ರಸನ್ನ ವೆಂಕಟೇಶ ನಮೋ ಸ್ವಾಮಿ 8
--------------
ಪ್ರಸನ್ನವೆಂಕಟದಾಸರು
ಪಾಲಿಸೈ ಪರಮೇಶ್ವರ | ಕ-|ಪಾಲ ಲೋಚನ ಶಂಕರಾ ||ನೀಲಕಂಧರಶಶಿಧರಾ ತ್ರಿ-|ಶೂಲಪಾಣಿ ಮಹೇಶ್ವರ 1ದಂಡಧರ ಶಿರಖಂಡನಾ | ಬ್ರ -|ಹ್ಮಾಂಡಪತಿ ಪಂಚತುಂಡನಾ ||ಖಂಡ ಪರಶುಪ್ರಚಂಡನಾ | ಈಗ |ಕಂಡೆ ನಾ ರುಂಡಮಾಲನಾ 2ಉರಗಕುಂಡಲಧಾರನೇ |ಭವ|ದುರಿತಘೋರವಿಹಾರನೇ ||ಶರಧಿಸಮ ಗಂಭೀರನೇ | ನಿನ -|ಗೆರಗುವೆನು ಪರಮೇಶನೇ 3ದೂತನಾಥ ತ್ರಿಲೋಚನಾ | ಪುರು - |ಹೂತವಂದ್ಯಾ ಸುಖ್ಯಾತನಾ ||ಆರ್ತರಕ್ಷಕ ದೇವನಾ | ಬಲು |ಪ್ರೀತಿಯೊಳು ನಂಬಿರ್ದೆನಾ 4ಚಂದ್ರಕೋಟಿ ಪ್ರಕಾಶನೇ | ಪೂ -|ರ್ಣೇಂದು ಮುಖಿ ಗಿರಿಜೇಶನೆ ||ಅಂಧಕಾಸುರ ನಾಶನೇ | ಗೋ- |ವಿಂದ ದಾಸನಪೋಷನೇ ||ಪಾಲಿಸೈ| | 5
--------------
ಗೋವಿಂದದಾಸ
ಪಾಲಿಸೈ ವಿಶಾಲಗುಣಭರಿತ ನಿನ್ನಯ ಚರಿತಕಾಲಭೈರವ ನುತಿಪೆ ನಾ ಸತತಕಾಲಕಲ್ಪಿತ ಲೀಲೆಯರಿತು ಸು-ಶೀಲತನವನು ಮೆರೆಯಲೋಸುಗಸ್ಥೂಲಸೂಕ್ಷ್ಮಾಕೃತಿಯ ಧರಿಸಿದಮೂಲಿಕಾ ಶ್ರೀನಿವಾಸ ಭೈರವ 1ಪರಮಪಾವನ ಕ್ಷೇತ್ರದಲ್ಲಿರುತ ಐತಂದು ಮತ್ತಾ-ವೀರ ಶ್ರೀರಾಮನ ಸೇತು ನೋಡುತ್ತಧರೆಯ ಸಂಚರಿಸುತ್ತ ಬರುತಿರೆಮಿರುಪ ಶೇಷಾಚಲ ನಿರೀಕ್ಷಿಸಿಭರದಿ ಗಿರಿಮೇಲಡರಿ ಶ್ರೀಶನಚರಣಕಾನತನಾಗಿ ಸ್ತುತಿಸಿದೆ 2ಸುರವರೇಶನು ನಿನಗೆ ಪ್ರೀತಿಯಲಿ ಮಂತ್ರತ್ವದಲ್ಲಿಇರಿಸಿ ಮೆರೆಸಿದೆ ಕೀರ್ತಿಕರವಲ್ಲಿತ್ವರಿತದಿಂ ನೀನೆಲ್ಲ ದೇಶದಪರಿಪರಿಯ ಕಾಣಿಕೆಯ ತರಿಸುತಹರಿಯ ದರುಶನಗೈವ ಮೊದಲೆಹರುಷದಿಂದಲಿ ಪೂಜೆಗೊಂಬುವೆ 3ಶರಣರನು ನೀ ಕಾಯ್ವೆ ಮಮತೆಯಲಿ ಅಲ್ಲಲ್ಲಿರುತಲಿಧರಿಸಿ ಮೃದುತರವಾದ ವಾಕ್ಯದಲಿಕರೆಸಿ ಒಬ್ಬೊಬ್ಬರ ವಿಚಾರಿಸಿಸರಸದಿಂದಲಿ ಪೊಗಳಿಕೊಳ್ಳುತನರರ್ಗೆ ಸೋಂಕಿದೆ ಭೂತಪ್ರೇತದಭಯಗಳನು ಪರಿಹರಿಸಿ ಪಾಲಿಪೆ 4ಭೂತಳದೊಳಧಿಕವಾಗಿರ್ಪ ಕಾರ್ಕಳಕಧಿಪಖ್ಯಾತ ವೆಂಕಟಪತಿಗೆ ಸಖಿಯಷ್ಪಖ್ಯಾತಿಯಿಂ ದೊರೆಯಿದಿರಿನಲಿ ಸಂ-ನಿಧಿಸನ್ನುತನಾಗಿ ಮೆರೆದಿಹೆಓತು ಕರುಣದೊಳೊಲಿದು ಪಾಲಿಪದಾತಲಕ್ಷ್ಮೀನಾರಾಯಣಾಪ್ತನೆ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪಾಲಿಸೊ ವನಮಾಲಿ ಮುಂದೆನ್ನಬಾಲಕನಲೆಯಲೆಸದವನ ಪ.ಹದ್ದನೇರ್ವನಿರುದ್ಧ ನಿನ್ನಲ್ಲಿಬುದ್ಧಿ ನಿಲ್ಲದು ಶುದ್ಧ ವೃತ್ತಿಲಿಮುದ್ದುಮಕ್ಕಳು ಮುಗ್ಧರಲ್ಲೆಅಯ್ಯತಧ್ಯಾನಾಲಾಪ ಬಿದ್ದದ್ದಲ್ಲಯ್ಯ 1ತುಲಸಿ ಪುಷ್ಪಾಂಜಲಿ ತರಲಿಲ್ಲಹೊಳೆವಂಘ್ರಿಗರ್ಪಿಸಲು ಹೊತ್ತಿಲ್ಲಬಲು ಧನ ಬಹ ಕೆಲಸ ಕೈಕೊಂಡೆಕಲಿಕೂಡ ನಿರಯದ ಭೋಗುಂಡೆ 2ಆಡುವ ಮಾತು ಮಾಡಲರಿತರಿಯೆಬೇಡುವರಿಗುಣ ನೀಡಲಿಕ್ಕರಿಯೆಖೋಡಿಗೇನುಂಟು ಸುಖ ಹೇಳು ತಂದೆಹಾಡುವೆ ನಿನ್ನ ಕಾಡುವೆನಿಂದೆ 3ಹೆತ್ತ ತಾಯಿ ಕುತ್ತಿಗೊತ್ತಿದರಾರೊಮತ್ತೆ ತಂದೆ ಮಾರಲಿತ್ತರಿನ್ನಾರೊಪೃಥ್ವಿಪ ಸುಲಿದರೊತ್ತರೆಂಬುವರುಕರ್ತನೀನಿದ್ದೆನ್ನೆತ್ತುವರಾರು4ಕರುಣವಾರಿಧಿ ಕರುಣಿಸು ಗಡಪರಮಭಾಗವತರಿರುವಲ್ಲೆನ್ನಿಡುಪರಸನ್ನ ವೆಂಕಟರಸ ನೀ ಬಾರೊಮರಣ ಹೊಂದದ ಅರಮನೆಗೊಯ್ಯೊ 5
--------------
ಪ್ರಸನ್ನವೆಂಕಟದಾಸರು
ಪಾಲಿಸೊಲಿದು ಲಕ್ಷ್ಮೀಲೋಲ ವೆಂಕಟಪತಿಪಾಲಾಬ್ಧಿಶಯನ ಕೃಪಾಳು ಪರೇಶ ಪ.ಆಲಸ್ಯವಜ್ಞಾನಜಾಲ ಪರಿಹರಿಸುನೀಲನೀರದನಿಭ ಕಾಲನಿಯಾಮಕ ಅ.ಪ.ಪ್ರೇರಕ ಪ್ರೇರ್ಯನು ಮೂರು ವಿಧ ಜೀವರಾ-ಧಾರಾಧೇಯಾಪಾರ ಮಹಿಮನೆಸಾರಭೋಕ್ತ್ರವೆಯೆನ್ನಘೋರದುರಿತಭಯದೂರಮಾಡುತ ಭಕ್ತಿ ಸಾರವನೀಯುತ 1ಪಾಪಾತ್ಮಕರೊಳು ಭೂಪಾಲಕನು ನಾಕಾಪಾಡೆನ್ನನು ಗೋಪಾಲ ವಿಠಲಶ್ರೀಪದದಾಸ್ಯವ ನೀಪಾಲಿಸುಭವತಾಪಪ್ರಭಂಜನ ಹೇ ಪರಮಾತ್ಮನೆ 2ಶ್ರೇಷ್ಠರ ಸಂಗವ ಕೊಟ್ಟೆನ್ನ ರಕ್ಷಿಸುಕಷ್ಟಪಟ್ಟೆನು ಬಹಳ ಸೃಷ್ಟಿಗೊಡೆಯನೆಮುಷ್ಟಿಕಾರಿಯೆ ಎನ್ನಿಷ್ಟ ಬಾಂಧವ ನೀನೆಕೃಷ್ಣಗೋವಿಂದನೆ ಬೆಟ್ಟದೊಡೆಯಹರಿ3ಆಶೆಗೆ ಸಿಕ್ಕಿ ಹರಿದಾಸನೆಂದೆನಿಸಿದೆದೋಷಸಮುದ್ರದೊಳೀಜಾಡುವೆನುಕೇಶವ ತವಪದ ದಾಸಜನರ ಸಹವಾಸವಕೊಡು ಮಹಾಶೇಷಪರಿಯಂಕನೆ4ಛತ್ರಪುರೈಕಛತ್ರಾಧಿಪ ನಿನ್ನಪ್ರಾರ್ಥಿಸುವೆನು ಪರಮಾರ್ಥಹೃದಯದಿಕರ್ತಲಕ್ಷ್ಮೀನಾರಾಯಣ ಗುಣನಿಧಿ ಶ್ರೀವತ್ಸವಕ್ಷಸ್ಥಲ ಕೌಸ್ತುಭಾಭರಣನೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪಾಲಿಸೋ ಪಾಲಿಸೋ || ಕರುಣಾಲಯ ವರದೇಂದ್ರ ಮುನಿ ಸುಖ ಸಾಂದ್ರ ಪಪುಣ್ಯ ಮಂದಿರ ವಾಸ |ಸನ್ನುತಜನಪಾಲ ||ಬನ್ನಪಡಿಸದಲೆ | ಯನ್ನನುದ್ಧರಿಸೋ 1ದೀನ ಸುರದ್ರುಮ | ಹೀನಪಂಕಜಸೋಮ||ಮಾನಿ ಸುಜ್ಞಾನಿ ನಿ | ನ್ನೇನು ಬಣ್ಣಿಪೆನೋ 2ತ್ರುಟಿಮಾತ್ರ ಬಿಡದಲೆ | ಘಟನೆಯ ಮಾಡಿಸೊ ||ಸಟೆಯಲ್ಲ ಪ್ರಾಣೇಶ | ವಿಠಲನ ಸ್ಮರಣೆ 3
--------------
ಪ್ರಾಣೇಶದಾಸರು
ಪಾಲಿಸೋ ವೆಂಕಟಗಿರಿ ರಾಯಾ ಲಕ್ಷ್ಮೀ |ಲೋಲನೀಲಾಂಬುದ ಸಮ ಕಾಯಾ ಪಮಾಕಮಲಾಸನವಾಸವ- ಸುರ |ನೀಶ ಕರಾಧ್ಯ ಕೇಶವ ||ಲೋಕೇಶ ಯನ್ನಲ್ಲಿ ವಾಸವ-ಮಾಡಿನೂಕು ತುಚ್ಛತರ ಕ್ಲೇಶವ 1ಹಿಂದಿನ ಜನುಮಗಳೆಣಿಕಿಲ್ಲ - ದಯಾ |ಸಿಂಧುಸಾಧನವೀಗಲಿನಿತೆಲ್ಲಾ ||ಮುಂದಿನ ಗತಿಯೇನೋ ತಿಳಿದಿಲ್ಲ - ಇದ |ರಿಂದಲಂಜುವೆ ಜಾಂಬವತೀ ನಲ್ಲ 2ಬಾಲಕನಾದೆ ಕೆಲವು ದಿನ - ಪ್ರಾಯ |ಕಾಲವೊದಗಲು ಪರಾಂಗನಾ ||ಮೇಲೆ ಅಭಕ್ಷಣೆಯಲಿ ಮನವಿಟ್ಟೆ - ಹೇ |ಳಲೊಂದೆರಡೇ ಯನ್ನವಗುಣ 3ಉದಯ ಸ್ನಾನವು ಸಂಧ್ಯಾವಂದನೆ - ಅಘ್ರ್ಯ |ವಿಧಿಗುರುಹಿರಿಯರ ವಂದನೆ |ಮೊದಲಾಗಿ ಪಿತರಾರಾಧನೆ ಬಿಟ್ಟೆ |ಮದದಿಂದ ಹೀನನೆಂಬುವ ನಾನೇ4ಅನ್ಯರ ಮನೆ ದ್ವಾರ ಕಾಯ್ವೆನೋ - ಸ್ವಾಮಿ |ನಿನ್ನ ಸ್ಮರಣೆಯ ಕ್ಷಣ ಮಾಡೆನೋ ||ಅನ್ನಕ್ಕೆ ಬಹುದೂರ ಪೋಪೆನೋ - ಸಾರೆ |ಪುಣ್ಯಕ್ಷೇತ್ರಗಳಿರೆ ನೋಡೆನೋ 5ಧನಹೀನನಾದ ಕಾರಣದಿಂದ -ಸತಿ|ಮನೆ ಹೊಂದಿಸಳೋ ಪರಮಾನಂದ ||ತನುಜರಶನ ವಸನಗಳಿಂದ ಕಾಡು |ವಣು ಮಾತ್ರ ಸುಖವಿಲ್ಲ ಇದರಿಂದ6ಏಸುಹೇಳಲಿ ಮಾತ ಲಾಲಿಸೋ - ಶ್ರೀ ಪ್ರಾ- |ಣೇಶ ವಿಠ್ಠಲ ನೀನೇ ತಾರಿಸೋ ||ಆ ಸತ್ಕರ್ಮದಿ ಮನ ಪ್ರೇರಿಸೋ - ನಿನ್ನ |ದಾಸವರ್ಗದೊಳೆನ್ನ ಕೂಡಿಸೋ 7
--------------
ಪ್ರಾಣೇಶದಾಸರು
ಪಾಹಿಮಾಂ ರಾಮಚಂದ್ರ ಅಚಲಾಂ ಭಕ್ತಿಂದೇಹಿ ಕಲ್ಯಾಣಸಾಂದ್ರ ಪ.ಶ್ರೀಹರಿ ನಾಗಾರಿವಾಹನ ಶ್ಯಾಮಲ-ದೇಹ ರಾಕ್ಷಸ ಸಮೂಹವಿದಾರಕಅ.ಪ.ಸಜ್ಜನ ಕಲ್ಪವೃಕ್ಷ ಪಾಪಾಂಕುರ-ಭರ್ಜನ ವಿಬುಧಪಕ್ಷಧೂರ್ಜಟಿಸಖ ದೂಷಣಾರಿ ದ್ಯುಮಣಿಕೋಟಿ-ಪ್ರಜ್ವಲಿಪಪರಮಜಗಜ್ಜೀವನಧಾಮನಿರ್ಜರೇಂದ್ರ ಪ್ರಮುಖ ಸುರಗಣ ಪೂಜ್ಯಪೂರ್ಣಬ್ರಹ್ಮ ರಘುವಂ-ಶೋರ್ಜಿತಾತ್ಮ ಮಹಾಮಹಿಮ ರಿಪುದುರ್ಜಯಜಯಾಕಾಂತ ಪ್ರಭುವೆ 1ವೇದೋದ್ಧಾರಣ ಕೂರುಮವರಾಹಪ್ರ-ಹ್ಲಾದವರದ ಗುಣಧಾಮಸಾಧುವಟುವೇಷವಿನೋದಭಾರ್ಗವಬಹುಕ್ರೋಧಿ ಕ್ಷತ್ರಿಯಕುಲ ಭೇದಿ ರಾವಣಾಂತಕಯಾದವಕುಲಾಂಬೋಧಿಚಂದ್ರಕುವಾದಿಜನದುರ್ಬೋಧಬದ್ಧವಿ-ರೋಧ ಕಲಿಮಲಸೂದನಾಚ್ಯುತಶ್ರೀಧರ ರಮಾಮೋದಮಾನಸ 2ಕಾಶಿಮಠಸ್ಥ ಯತಿ ಪರಂಪರ್ಯ-ಭೂಷಣ ಶುದ್ಧಮತಿಶ್ರೀ ಸುಕೃತೇಂದ್ರ ಸನ್ಯಾಸಿ ಪೂಜಿತಪಾದವಾಸುದೇವತವ ದಾಸ್ಯವ ಪಾಲಿಸುಶೇಷಶಯನ ವಿಲಾಸ ಪರಮದಯಾಸಮುದ್ರಸುಭದ್ರ ಶ್ರವಣ ಪ-ರೇಶಭವರುಗ್ಭೇಷಜನೆ ನರಕೇಸರಿಯೆ ಶ್ರೀ ವ್ಯಾಸ ರಘುಪತಿ 3ಪಾರಗಾಣರು ನಿನ್ನಯ ಬ್ರಹ್ಮಾದ್ಯರುಭೂರಿಗುಣದ ಮಹಿಮೆಯಸೂರಿಜನಪ್ರೀತ ಸೀತಾನಯನ ಚ-ಕೋರಚಂದ್ರನು ಮಹೋದಾರ ಶಾಙ್ರ್ಗಧರಮೀರಣಾತ್ಮಜವರದ ನತಮಂದಾರ ಕೈರವಶ್ಯಾಮ ರಾಮನ 4ಪ್ರಣವರೂಪ ನಿರ್ಲೇಪ ನಿತ್ಯಾತ್ಮದು-ರ್ಜನವನೋದ್ದಹನೋದ್ದೀಪಮನುಕುಲಮಣಿ ಮುನಿಗಣ ಸಮಾಹಿತ ಜನಾ-ರ್ದನ ಬ್ರಹ್ಮಾದ್ಯಖಿಳ ಚೇತನರು ನಿನ್ನಾಧೀನಜನುಮ ಜನುಮಕೆ ಲಕ್ಷುಮಿನಾರಾಯಣಚಿದಾನಂದೈಕ ದೇಹನೆಮನ ವಚನ ಕಾಯದಲಿ ಧ್ಯಾನಿಪಘನಭಕುತಿ ಭಾಗ್ಯವನು ಪಾಲಿಸು 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪಾಹಿಮಾಂಪಾಹಿಸೀತಾಪತೆಪ.ವಾಣೀಧವ ಪಿತ ಘÉೂೀಣಿ ರಥಪದಪಾಣಿನಂದಕೃಪಾಣಿ ಜಯ ಜಯಕ್ಷೋಣಿವಲ್ಲಭ ಕ್ಷೋಣಿಸುತಾಚಿದ್ಗೌಣ ವರಾಹಾಗ್ರಣಿ ಶ್ರೀರಾಮ 1ರಾಜಕುಲಾಂಬುಧಿ ರಾಜಾರಮಣರಾಜತೇಜವೈರಾಜ ಜಯ ಜಯರಾಜಸೂಯಾರ್ಚಿತ ರಾಜೇಶ್ವರ ಸುರರಾಜಾನುಜ ರಘುರಾಜ ಶ್ರೀರಾಮ 2ಮಂದರಧರನಿಜಸುಂದರ ಚಿನ್ಮಯಮಂದಿರ ನಿತ್ಯಾನಂದ ಜಯ ಜಯವೃಂದಾವನಚರವೃಂದಾರಕಮುನಿವೃಂದ ನೃಪಾನ್ವಯವಂದ್ಯ ಶ್ರೀರಾಮ 3* . . * . . * . . * . . * 4ಶ್ರೀಪದ ಶ್ವೇತದ್ವೀಪನಿಲಯಶ್ರುತಿತಾಪಹರಣ ನಿರ್ಲೇಪ ಜಯ ಜಯಶ್ರೀ ಪ್ರಸನ್ವೆಂಕಟ ಭೂಪತಿಭುವನವ್ಯಾಪಕ ಪೂರ್ಣಪ್ರತಾಪ ಶ್ರೀರಾಮ 5
--------------
ಪ್ರಸನ್ನವೆಂಕಟದಾಸರು