ಒಟ್ಟು 1888 ಕಡೆಗಳಲ್ಲಿ , 110 ದಾಸರು , 1462 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಪ್ರಹ್ಲಾದ ಚರಿತ್ರೆ ಅಧ್ಯಾಯ ಒಂದು ಪದ ಆದಿಯಲಿ ಲಕ್ಷ್ಮೀಸಹಿತ ಪ್ರಹ್ಲಾದವರದನ ಪಾದಕೊಂದಿಸಿ ಬೋಧನಿಧಿ ಮಧ್ವಾದಿ ಗುರುಗಳ ಪಾದಕೊಂದಿಸುತಾ ಕೇಳುವರ ಮನಕಾ ಲ್ಹಾದ ಕೊಡುತಿರುವಂಥ ಶ್ರೀ ಪಹ್ಲಾದ ಚರಿತವನು 1 ಸಹಿತಾಗಿ ಪರಮಾ ನಂದದಿಂದ ವಿಹಾರ ಮಾಡುತ ಚಂದದಿಂದಿರಲು ಬಂದರಾ ಕಾಲದಲಿ ಸನಕ ಸನಂದನಾದಿಗಳಲ್ಲೆ ಬೇಡೆಂ ತೆಂದು ಆ ಜಯವಿಜಯರವನು ಹಿಂದುಕೊತ್ತಿದರು 2 ಮೂರುಜನ್ಮದೊ ಳಸುರರಾಗಿರಿ ನೀವು ಹೀಗೆಂತೆಂದು ಶಾಪಿಸಲು ಅಸುರರಾಘ್ಯುಟ್ಟಿದರು ಶಾಪದಿ ಹುಸಿಯದಾಗದು ದೊಡ್ಡವರು ಕೋಪಿಸುತ ನುಡಿದದ್ದು 3 ದಿತಿಯ ಸುತರಾಗ್ಯವರು ಮುಂದಕೆ ಪ್ರಥಿತರಾದರು ದ್ವಿತೀಯ ಹಿರಣ್ಯಾಕ್ಷಾ ಪೃಥಿವಿಯನು ಮುಣುಗಿಸಿದ ಕಾರಣ ಅತಿರಭಸದಲೆ ಕೊಂದು ಮತ್ತಾ ಪೃಥಿವಿಯನು ತಂದಾ 4 ತನ್ನ ಅನುಜನ ನಾಶವನು ಕೇಳುತಲೆ ಮನದಲಿ ಕ್ಲೇಶವನು ಪಟ್ಟು ಶ್ರೀಸುರೇಶನ ಮೇಲೆ ಬಹಳಾಕ್ರೋಶದಿಂದಲೆ ನಡೆದ ತಪಸಿಗೆ ದೋಷ ರಹಿತಾನಂತಾದ್ರೀ±ನÀ ದ್ವೇಷಿತಾನಾಗಿ5 ವಚನ ಸುರರು ಆ ಸಂಧಾನ ಯುದ್ಧವ ಮಾಡಿ ಕೊಂದುಹಾಕಿದರು ಆ ಇಂದ್ರನಾ ಕಂಡು ಒಂದು ನೋಡದೆ ಪ್ರಾಣ ಒಂದು ಉಳಿದರೆ ಸಾಕು ಯೆಂದು ಓಡಿದರು 1 ಅಡಗಿರಲು ದೇವೇಂದ್ರ ಬಂದು ನಡತೆ ಕಂಡವನ ಬಿಡು ಬೇಗ ಈಕೆಯ ನಿಮಗೆ ಕೆಡಕು ಕೊಡುತೆಲ್ಲರ ಮುಂದೆ ನುಡಿದನಾ ರಾಜನ ಮಡದಿಗೀಪರಿಯು 2 ರಾಗ ಅಂಜಿಕೆಯ ಬಿಡಿಸುವೆನಮ್ಮಾ ಪ ಪುಟ್ಟುವನಮ್ಮಾ ಸಂದರ್ಭವನು ತಿಳಿಸುವೆನಮ್ಮಾ 1 ಸ್ಮರಿಸುವನು ಹರಿಗುಣಗಳಮ್ಮಾ ಗಭಯ ಕಾಣಮ್ಮಾ 2 ಅಭಯದಾನಂತಾದ್ರೀಶನ ಭಕ್ತನಮ್ಮಾ ನಿಶ್ಚಿಂತೆಯಿಂದಲಿ ನೀನಿರಮ್ಮಾ 3 ರಾಗ ಕೇಳಿ ಅರ್ಭಾಟವು ಗರ್ಭಿಣಿಯುದರದಲಿರುವಾ ನಡೆದರು ಅರ್ಭಕನಾ ಸ್ಮರಿಸಿ 1 ಕೊಟ್ಟು ತಂದೆಯ ಪರಿ ಮುಂದಾಕೆಯು ನಾರದನ ಬೇಡಿದಳು ವಂದಿಸಿ ವರಗಳನ್ನು2 ಭೋ ಮಹಾ ಮುನಿಯೇ ಮಾತನು ಕೇಳುತಲೆ ಆ ಮಹಾ ಮುನಿ ನಾರದನು ಪ್ರೇಮದಿ ನುಡಿದನು ಕೊಟ್ಟಕಾಮಿತ ವರಗಳನ್ನು 3 ನಿನಗಿನ್ನು ಪರತತ್ವವÀ ನೀ ಕೇಳಮ್ಮಾ ಹರಿಮಹಿಮೆಯ ಹರುಷವ ಕೊಡುತಿಹುದು 4 ಪರಿ ಗರ್ಭದಲಿ ಇರುವನೆ ವರದಾನಂತಾದ್ರೀಶನ ಸ್ಮರಿಸುತ ಪರಮೇಷ್ಠಿಯ ಸುತನು 5 ವಚನ ತಪವನು ಮಾಡಿ ಮನಸಿನೊಳಗಿಟ್ಟು ಪಾದದುಂಗುಷ್ಠವನು ನೆಟ್ಟನೆ ಮೇಲೆತ್ತಿ ಘಟ್ಯಾಗಿ ನಿಂತಾ 1 ಸುಡತಲೆ ಸಕಲ ಕಣವಿದು ಮುಚ್ಚಿತು ಅವನ ಭಯದಲಿ ತಮ್ಮ ಭವನ ಅವನ ಮುಂದು ಸುರಿದರು ಅವನ ಕಥೆಯಾ ಸಕಲ ಭುವನ ಪಾಲಕರೂ 2 ರಾಗ ಮೊರೆಯ ಕೇಳೋ ನೀನುಪ ಹಿರಣ್ಯ ಕಶಿಪು ಮೂಜಗ ಸಂಹರಿಸುವನಯ್ಯ ಅ.ಪ ದಿಟ್ಟ ಕೇಳವನ ವಿಶಿಷ್ಟ ಕಥೆಯ ಪಾದಾಂಗುಷ್ಟದಿಂದಲಿ ಭೂಮಿ ಮೆಟ್ಟಿನಿಂತಿ- ಮಂದರಾದ್ರಿಯಲ್ಲಿರುವಾ 1 ಉಪವಾಸದಿಂದುಗ್ರ ತಪಸಿ ಲೋಕಗಳನೆಲ್ಲ ಸುಡುವಾ 2 ರೋಷದಿ ಮಾಡುವಾ ದ್ಷೇಷ ನಮ್ಮಲ್ಲೆ ನಿತ್ಯದಲ್ಲೆ ನಿತ್ಯದಲ್ಲೆ ಅನಂತಾದ್ರೀಶನಲ್ಲೆ 3 ವಚನ ಮಾಡುವ ಚರ್ಯಾ ಹತ್ತಿತಾ ಹಂಸವನು ಸತ್ವರದಿ ಕಂಡು ನೆತ್ತಿಯಾ ಮೇಲಗ್ನಿ ಬೆಳದಿಹದಲ್ಲೆ ಸುತ್ತಲೆ ನುಡಿದನು ಬ್ರಹ್ಮದೈತ್ಯ ಗೀಪರಿಯ 1 ರಾಗ ಹಿರಣ್ಯ ಕಶಿಪು ಏಳು ಏಳು ಏಳು ಬೇಗನೇ ಪ ಮಾತು ನಿನ್ನ ಭಾಳ ತಪಸಿಗಾಗಿ ನಾನು ಭಾಳ ಮೆಚ್ಚಿದೆನೋ ಇನ್ನು ಅ.ಪ ಹೋದುವಯ್ಯಾ ಮತ್ತು ತಪಸಿ ನಲ್ಲಿ ನೀನು ಚಿತ್ತಮಾಡಬೇಡ ಬಿಟ್ಟು 1 ಕೊಡುವೆನು ವರಗಳನ್ನು ದಾನವೇಶ ಎನ್ನ ನೋಡು ಮೌನಬಿಟ್ಟು ಮಾತನಾಡು 2 ಬಲ್ಲಿದವನೋ ನೀನು ಬೇಡಿ ದ್ದೆಲ್ಲ ನಾನು ಕೊಡುವೆ ನಿನಗೆ 3 ವಚನ ಮನ್ನಿಸಿದನಾ ದೇಹವನ್ನು ಘನ್ನದಿವ್ಯೋದಕದಿ ಚೆನ್ನಾಗಿ ಘನ್ನ ದೈತ್ಯನು ಎದ್ದು ಮುನ್ನನತಿ ಸ್ತುತಿಮಾಡಿ ಹಿರಣ್ಯ ಕಶಿಪಿಂತು 1 ರಾಗ ಮರಣ ಬೇಡಾ ಧರೆಯೊಳು ನಿನ್ನಿಂದ್ಹುಟ್ಟಿರುವ ಪ್ರಾಣಿಗಳಿಂದ ಮರಣಬೇಡಾ 1 ಮರಣ ಬೇಡ ಇಳೆ ಯೊಳೆನಗಾಕಾಶದೊಳೆನಗೆ ಮತ್ತು ಮರಣ ಬೇಡಾ 2 ಮರಣ ಬೇಡಾ ಮೃಗಗಳೊಗ್ಹೆಚ್ಚಿನ ಮೃಗಗಳಿಂದಾದದರು ಮರಣ ಬೇಡಾ 3 ಮರಣಬೇಡಾ ನರರಿಂದ ವಿಷವುಳ್ಳ ಹರಿವ ಹಾವುಗಳಿಂದ ಮರಣ ಬೇಡಾ 4 ವಿಸ್ತಾರವಾದ ದೇ ವಾಸ್ತ್ರಗಳಿಂದಲಿ ಮರಣಬೇಡಾ 5 ಮರಣಬೇಡಾ ಅಂತಕ ನಾದ ಅನಂತಾದ್ರೀಶನ ಮುಂಚೆ ಸ್ಮರಣೆ ಬೇಡಾ 6 ರಾಗ ಹಾಗೆ ಆಗಲಿ ಎಂದು ಸಾಗಿದತಾನು ಆಗೆದ್ದು ಮದವೇರಿದ ನಾಗೇಂದ್ರನಂತೆ ಬೇಗ ಮನೆಯಲಿ ಬಂದಸಾಗಿ ದೈತ್ಯೇಂದ್ರಾ 1 ತಂದು ಒಪ್ಪಿಸಿದಾತಗೆ ಚಂದಾಗಿ ಮುನಿಯು ಹಿಂದಾದುದೆಲ್ಲಾತನ ಮುಂದೆ ತಿಳಿಸಿದನು ಮುಂದಾ ಸ್ಥಳವನು ಬಿಟ್ಟು ಬಂದಾ ಸ್ವಸ್ಥಳಕೆ
--------------
ಅನಂತಾದ್ರೀಶ - ಕಥನಕಾವ್ಯಗಳು
ಶ್ರೀ ಪ್ರಾಣೇಶದಾಸಾರ್ಯರ ಸ್ತುತಿ ತೆರಳಿದರು ಪರಮ ತೋಷದಲಿ ಹರಿಪರಕೆ |ಹರಿಪ್ರೀಯರಾದ ಪ್ರಾಣೇಶದಾಸರು ತ್ವರದಿ ಪ ನಿರುತದಲಿ ಹರಿಪೂಜೆ |ಮರಿಯದಲಿ ಮಾಡಿ ಬಲು |ಸ್ಥಿರ ಬುದ್ಧಿ ಪೂರ್ವಕದಲಿ |ಗುರುಗಳಲಿ ಸರ್ವಜ್ಞರಾಯರಿಂದಧಿಕ ಮ ||ತ್ತಿರಲುಂಟೆ ಎಂದು ತಿಳುಹಿ |ದುರುಳ ಜನರನುಸರಿಸದಲೆ ಕವಿಗಳೊಡನಾಡಿ |ಚರಿಸಿ ದೇಶಗಳಲ್ಲಿ ಮೆರೆದು ಖ್ಯಾತಿಯ ಪಡದು 1 ಭಾಗವತ ಶ್ರೇಷ್ಟ ಜಗನ್ನಾಥ ದಾಸಾಖ್ಯರಡಿ |ಜಾಗುಮಾಡದಲರ್ಚಿಸಿ |ಭೋಗಿವರ ಶಯನ ಪ್ರಾಣೇಶವಿಠಲಾಂಕಿತವ ||ಆ ಗುರುಗಳಿಂದ ಕೊಂಡು |ರಾಗದ್ವೇಷಗಳೆಂಬ ಅರಿಗಳನು ಸಂಹರಿಸಿ |ರಾಗದಲಿ ಹರಿಕಥನ ಕವನ ರೂಪದಿ ಪೇಳಿ2 ಪ್ರಾಣಮತವನನುಸರಿಸಿ ಆಚರಣಿಯನು ಮಾಡಿ |ಪ್ರಾಣಿಗಳಿಗೆ ತಿಳಿಸದೆ |ಕ್ಷೋಣಿಯೊಳಗಿನ್ನು ಇರಸಾಕೆಂದು ಆ |ಚಿತ್ರಭಾನು ಆಶ್ವಯುಜ ಶುದ್ಧ ಸಪ್ತಮಿಯಲಿ ||ಜ್ಞಾನಪೂರ್ವಕ ಲಯ ಚಿಂತನೆಯ ಮಾಡಿ ಗುರು |ಪ್ರಾಣೇಶ ವಿಠಲನಿದ್ದಾ ಪುರಕೆ ಜವದಿಂದ3
--------------
ಗುರುಪ್ರಾಣೇಶವಿಠಲರು
ಶ್ರೀ ಬದರಿ ಬದರೀಯಾ | ಯಾತ್ರೆಯಾ ಮಾಡಿ | ಬದರೀಯಾ ಪ ಬದರಿಯ ಯಾತ್ರೆಯ ಮಾಡಿ | ನಿಮ್ಮಮುದ ಶಾಶ್ವತವನ್ನೆ ಬೇಡಿ | ಆಹಸದಮಲ ದೇಹದಾಲಯವೆ | ಸದಾಶ್ರಿತ್ಹಿಮಾಲಯಹೃದಯ ಮಧ್ಯದಲೀಹ | ಬದರೀನಾಥನ ನೋಡೀ ಅ.ಪ. ಶ್ವೇತ | ದ್ವೀಪಾದ್ಯಾಲಯಗಳಸುಪದ ತೀರ್ಥವು ಸ | ರಿತ್ಪ್ರವರಾದಿ ಚಿಂತಿಸಿ 1 ತನುಮನ ಧನಗಳಾಶೆಯ | ತೊರೆದುಮನ ಆದಿಕರಣಗಳ್ಹರಿಯ | ಪಾದವನಜದಲ್ಲಿಡೆ ಅದು ಅಭಯ | ಸುದತಿಮಣಿ ಸಹ ಪೋಗೋದೆ ಹೃದಯ | ಆಹವನ ಭುವನ ಚರಿಸಿ ಸತ್ಪಾ | ವನ ಕ್ಷೇತ್ರಗಳಮಣಿದು ಸರ್ವತೀರ್ಥ | ಸ್ನಾನಾದಿ ಗೈಯುತ 2 ಸಿಂಧು ಮಾಧವ ಸಿರಿ ಕೃಷ್ಣನ ನೆನೆದು 3 ಶೌರಿ ಪಾಂಡುರಂಗರಾರಾಧನೆಯ ಗೈದು | ತೋರುತ ಮುದವನು 4 ಶಾರದ ನಾಡೀಲಿ ಗಂಡಕೀ ಮತ್ತೆಚಾರು ಲಂಬುಶಿಖಿ ಗೋಮತಿ | ಆ ಗಾಂ-ಧಾರಿಯೊಳಗೆ ಮಾರುಧೃತಿ | ನೆನೆಚಾರು ಶಂಕಿನಿ ನಾಡಿ ತಪತೀ | ಆಹವೀರ ರಾಮಾ ಮಧು | ವೈರಿಯು ಶ್ರೀರಂಗನಾರಾಯಣನ ರೂಪ | ಸಾರುತ ತಪತೀಲಿ 5 ಸಿರಿ ಮಾಧವನ ನೆನೆಯೆಪರಿಹರಿಸುತ ಪಾಪ ಸರುವಾಭೀಷ್ಟವ ನೀವ 6 ಸ್ತವರನದಲೀಪರಿ ಮಿಂದು | ದೇಹಪವಿತರವಾಯಿತು ಎಂದು | ಕ್ಷೇತ್ರಸರ್ವವ ಸ್ತುತಿಸುತ ಮುಂದೆ | ಪೋಗೆಭವರಹಿತ ಹರಿದ್ವಾರ ಅಂದು | ಆಹಭುವನ ಪಾವನ ಗಂಗಾ | ಪ್ರವಹಮೀಯುತ ಮತ್ತೆಭವಹರ ಹರಿನಾಮ | ಶ್ರವಣ ಮನನಗೈದೂ 7 ಸೂರ್ಯ ಪ್ರಭೆ ನೇತ್ರಎಸೆವೊ ಲಲಾಟದಿ | ಹೃದಯ ದೋಳ್ವಿಕಾಲ 8 ಹೇಮ ಧಾಮ | ಕಂಡುನೀಗೊ ನೀ ದೇಹದ ಶ್ರಮ | ಓಡಿಪಂಚ ರೂಪಗಳನೆ ತಂದು | ಆಹಪಂಚ ನಾಡಿಯ ಮಧ್ಯ | ಮಿಂಚಿಪ ಗೃಹದಿ ವಿ-ರಂಚಿ ಪಿತನ ನೋಡಿ | ಸಂಚಿತಾದಿಯ ಕಳೆ 9 ಕಮಲ ಮಧ್ಯ | ಮುದದಲರ್ಚಿಸುತಲಿ 10
--------------
ಗುರುಗೋವಿಂದವಿಠಲರು
ಶ್ರೀ ಮಧ್ವಾಚಾರ್ಯರು ಮಧ್ವೇಶಾರ್ಪಣಮಸ್ತು ಮಹಾಪ್ರಭು ಮಧ್ವೇಶಾರ್ಪಣಮಸ್ತು ಪ ಎದ್ದು ಕೂತು ಮಲಗೆದ್ದು ಮಾಡುವ ಕರ್ಮಮಧ್ವೇಶಾರ್ಪಣಮಸ್ತು ಅ.ಪ. ಕರ್ಮ ಮಧ್ವೇಶಾರ್ಪಣಮಸ್ತುದುಷ್ಟರಾಡುತಿಹ ಕೆಟ್ಟ ನುಡಿಗಳು ಮಧ್ವೇಶಾರ್ಪಣಮಸ್ತುಮೆಟ್ಟಿ ಹೆಜ್ಜೆ ಇಟ್ಟದಾಡುವುದು ಮಧ್ವೇಶಾರ್ಪಣಮಸ್ತುಶಿಟ್ಟಿಲಿ ಜನರಿಗೆ ನಿಷ್ಠುರಾಡುವುದು ಮಧ್ವೇಶಾರ್ಪಣಮಸ್ತು 1 ಮಾಳ್ಪದು ಓಲಗ ಮಾಳ್ಪದು ಕ್ಲೇಶ ಬಡುವುದು ಮಧ್ವೇಶಾರ್ಪಣಮಸ್ತುಹೇಸಿಕೆ ವಿಷಯಗಳಾಶೆ ಮಾಡುವುದು ಮಧ್ವೇಶಾರ್ಪಣಮಸ್ತು 3 ಬಗೆ ಬಗೆ ವಸ್ತ್ರಗಳಗಲದೆ ಹೊದಿವುದು ಮಧ್ವೇಶಾರ್ಪಣಮಸ್ತುಝಗ ಝಗಿಸುವ ಹೊಸ ನಗಗಳನಿಡುವುದು ಮಧ್ವೇಶಾರ್ಪಣಮಸ್ತುಸೊಗಸಿಂದುತ್ತರಗಳ ಸೇವಿಸುವುದು ಮಧ್ವೇಶಾರ್ಪಣಮಸ್ತುಹಗಲಿರುಳಲಿ ಮಾಳ್ಪಗಣಿತ ಕರ್ಮವು ಮಧ್ವೇಶಾರ್ಪಣಮಸ್ತು 4 ರಮಣಿಯರಿಂದಲಿ ರಮಣ ಮಾಡುವುದು ಮಧ್ವೇಶಾರ್ಪಣಮಸ್ತುಕ್ರಮದಿಂ ದಶೇಂದ್ರಿಯ ಕರ್ಮಗಳೆಲ್ಲವು ಮಧ್ವೇಶಾರ್ಪಣಮಸ್ತುಭ್ರಮಿಸಿ ಗುರುಗಳ ಮನ ಸ್ತೋಷಿಸುವುದು ಮಧ್ವೇಶಾರ್ಪಣಮಸ್ತುರಮಾಪತಿ ವಿಠಲನ ಮನದಿ ಧ್ಯಾನಿಸುವುದುಮಧ್ವೇಶಾರ್ಪಣಮಸ್ತು 5
--------------
ರಮಾಪತಿವಿಠಲರು
ಶ್ರೀ ರಘುರಾಮ ಬಾರೋ ಪದವನ್ನು ತೋರೋ ಪ. ದಶರಥಪ್ರಿಯ ಬಾಲ ದಶಮುಖಾಸುರ ಕಾಲ ಫಾಲ 1 ಶತಪತ್ರಾಯತನೇತ್ರ ಶತಪತ್ರಾಪ್ತಜ ಮಿತ್ರ ಶತಮನ್ಯುಸ್ತುತಿಪಾತ್ರ ಶತಯಾಗ ಸಹಜಾತ 2 ವರಶೇಷಗಿರಿನಿಲಯ ಶರಣರಕ್ಷಕ ಸದಯ ಗಿರಿಜಾಧವಪ್ರಿಯ ನತಸುರ ಸಮುದಾಯ 3
--------------
ನಂಜನಗೂಡು ತಿರುಮಲಾಂಬಾ
ಶ್ರೀ ರಘೂತ್ತಮ ಗುರು ಸ್ತೋತ್ರ ಗುರುರಾಜ ರಘೂತ್ತಮ ಗುರುರಾಜ ಗುರುರಾಜ ನಮೋ ನಮೋ ನಿನ್ನ ಪಾದ ಸರಸಿಜಯುಗಳದಿ ನಾ ಶರಣು ಅಹ ಧರಣಿಜಾಪತಿ ರಾಮ ಭದ್ರಗೆ ಪ್ರಿಯ ನೀನು ಕರುಣದಿ ಸಲಹೆನ್ನ ದುರಿತಗಳಳಿದು ಪ ನಿವ್ರ್ಯಾಜ ಕರುಣಿ ರಘುವರ್ಯ ಗುರು ವರ್ಯ ಸುಮೇಧರ ದಿವ್ಯ ಚಾರು ತೋಯಜ ಕರದಿಂದ ಉದಯನಾಗಿ ನಿಗಮ ಸಾಮ್ರಾಜ್ಯ ಅಹ ಮಾಯೇಶ ಕಾಳೀಶ ಗುರುಗಳ ಪ್ರಿಯ ಬಾಲ ವಯಸ್ಸಲ್ಲೇ ಉದ್ದಾಮ ಪಂಡಿತನಾದಿಯೋ 1 ಬದರೀಶ ನಿರ್ಣೀತತತ್ವ ಅರ್ಥ ವಿಸ್ತಾರ ಮಾಡಿದ ಮಧ್ವ ಟೀಕೆ ಜಯತೀರ್ಥ ಬರೆದ ತದ್ಭಾವ ಪೇಳಿ ಒದಗಿಸಿದೆಯೊ ಜ್ಞಾನ ಸುಖವ ಅಹ ಮುದ ಜ್ಞಾನ ಸೌಭಾಗ್ಯ ಸಾಧು ವೈಷ್ಣವತನ ಇತ್ತು ಪಾಲಿಪುದೆನ್ನ ಕುಂದುಗಳೆಣಿಸದೆ 2 ಧರೆಯಲ್ಲಿ ದಕ್ಷಿಣಕಾಶಿ ಸ್ವರ್ಗ ಧರೆಯಳದವನ ಸೇವಿಸಿ ಗಂಗಾ ಧರಷಡಾನನ ಇಲ್ಲಿ ವಾಸಿಸುವ ಈ ಕ್ಷೇತ್ರ ವೃಂದಾವನ ವಾಸಿ ಅಹ ಪರಮೇಶ ಕೇಶವ ಪ್ರಿಯಾ ಪಿನಾಕಿನಿಯಿಂದ್ರಾ ತೀರ ಮಧ್ಯದಿ ತಪಗೈದು ಭಕ್ತರ ಕಾಯ್ವಿ 3 ಸುರವೃಂದ ಶ್ರೇಷ್ಠ ನೀನಹುದು ಎನ್ನ ಪರಿ ಬಾಧೆಯ ತರಿದು ಸರ್ವ ಸಿರಿ ಇತ್ತು ಹರಿ ಗುರು ಭಕ್ತಿ ಬೆಳೆಸಿ ಪಾಲಿಪುದು ಅಹ ಹರ ಸಮೀಪಕೆ ಒಳ್ಳೆ ಸಾಧನ ಸರ್ವದಾ ಕಾರುಣ್ಯದಲಿ ಎನ್ನೊಳ್ ನಿಂತು ಮಾಡಿಸೋ ಗುರೋ 4 ರಾಮನೃಕೇಸರಿ ವ್ಯಾಸ ಸತ್ಯ ಭಾಮ ರುಕ್ಮೀಣಿ ದೇವಿ ಅರಸ ಭೂಮ ಶ್ರೀಮಂತ ಕ್ಷೀರಾಬ್ಧಿವಾಸ ಮಧ್ವ ಭೀಮಹನುಮ ವಂದ್ಯ ಶ್ರೀಶ ಅಹ ಹೇಮಗರ್ಭನ ತಾತ `ಪ್ರಸನ್ನ ಶ್ರೀನಿವಾಸ' ರಮೆಯರಸನ ಪ್ರಿಯತಮ ಜೀಯ 5 || ಶ್ರೀ ಕೃಷ್ಣಾರ್ಪಣಮಸ್ತು ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ರಮಣಿಯರಸ ಕಂ ಜೋದ್ಬವಾರ್ಚಿತ ಪುಣ್ಯ | ಚಾರುತರ ಯುಗ್ಮಪದ ರಂಜನಾಸುರ ಸಂ | ಹಾರ ಸುರ ಜನ ಪಾಲ ಪರಮಾನಂದ ಸಾ | ಕಾರನಲಿದುಪ್ಪವಡಿಸಾ ಹರಿಯೇ ಪ ಹರಿವೇಗ ಮಂಮೀರ್ವ ಹರಿಗಳೇಳಂಗಳದಲಿ | ಹರಿಯಾಗ್ರಜನನಿಂದ ಹರಿಪದದೊಳಗ ಜವದಿ ಹರಿವುತಿಹ ಝಗ ಝಗಿಪ ಹರಿಮಯದ ರಥದೊಳಗ | ಹರುಷಾದೊಳಡರ್ದು ಬಳಿಕಾ || ಹರಿದಿಕ್ಕಿ ಲಿಂದೊಗೆದು ಹರಿಜಗಳ ವಿಸ್ತರಿಸಿ | ಹರಿಯುಮೊದಲಾದವರ ಹರಿಸಿ ತೇಜವ ಜಗಕ | ಪರಿ ಹರಿಸಿ ಉದಿಸಿದಹರಿಯು ನರಹರಿಯೆ ಉಪ್ಪವಡಿಸಾಹರಿಯೇ1 ಪವನಜ ಖಗರಾಜ | ಭಜಿಪಧ್ರುವದ ಶಶಿರಾನುಜ ಭಿಷ್ಮಾ ತನ್ನ ಆ | ತ್ಮ ಜರಿತ್ತ ರಿಕ್ಷಪತಿ ರಜನೀಶ ವಾನ್ನರ | ಧ್ವಜ ವಿಧುರ ಅಂಬರೀಷಾ || ದ್ವಿಜ ಪುಂಡಲೀಕ ಪದ್ಮಜ ಮುಖ್ಯರಾದ ನಾ | ಶುಕ ಉದ್ಧವ ಬಲಿ ಜಯ ವಿಜಯರ ಕೂಡಿ | ಸುಜನರೈ ತಂದ | ರಂಬುಜ ಪದಕ ನಮಿಸೆ ವಾ | ರಿಜನಾಭ ಉಪ್ಪವಡಿಸಾ ಹರಿಯೇ 2 ಪಾಕ ಶಾಸನ ಅಗ್ನಿ ಆಕಾಳ ನೈಋತಿರ | ತ್ನಾಕರ ಪ್ರಭಂಜನಪಿ ನಾಕಿವರ ಕೌಬೇರ | ನಾಕೆರಡು ದಿಕ್ಕಿನವರೇಕೋ ಭಾವದಲಿಂದ ನಾಕ ಪುರಗಜ ಅಜಮಹಾ ಕೋಣ ಮನುಜ ಮಕ | ಹಾಕುರಂಗಂದಣವು ಗೋಕುಲೆಂದ್ರನು ಇಂತು | ವಾಹನ ವಿವೇಕದೇರಿ ಬಂದಿದೆ | ಲೋಕೇಶ ಉಪ್ಪವಡಿಸಾ ಹರಿಯೇ3 ಶ್ರೇಷ್ಠ ಕಶ್ಯಪ ಋಷಿ ವಶಿಷ್ಠ ಗಾರ್ಗೇಯ ತಪೋ | ನಿಷ್ಠ ವಿಶ್ವಾಮಿತ್ರ ಸೃಷ್ಠಿಯೊಳ ಜಲದ ಸಂ | ದಷ್ಟ ವರುಣನ ಗರ್ವ ಭಷ್ಟ ಮಾಡಿದಗಸ್ತಿ | ಅಷ್ಟಾದಶ ಧ್ವಯ ಬಾರಿ ಸೃಷ್ಟಿರ ಚನೆಯ ಕಂಡ | ತುಷ್ಟ ಬಕದಾಲ್ಪ್ಯ ಉತ್ಕøಷ್ಟ ಸನಕಾದಿಗಳು | ದೃಷಮಾನಿಸರಾಗಿ ಮುಟ್ಟಿಸ್ತುತಿ ಸುತಲಿದೇ | ಕೃಷ್ಣ ನೊಲಿ ದುಪ್ಪವಡಿಸಾ ಹರಿಯೇ 4 ವರ ವಾಮ ದೇವಾತ್ರಿ ಪರಮಗಾಲ ವನುಸೌ | ಭರಿಯ ಕೌಡಿಣ್ಯ ಸುಖ ಭರಿತ ಕೌಸಿರ ಮತಿ | ಪರಿಪೂರ್ಣ ಜಯಾಮುನೀರ್ವರು ಭರತರುಸುಗುಣ ಶರಧಿ ವೈಶಂ ಪಾಯನಾ|| ಸುರಪುರೋಹಿತ ಮಹಾ ಸುರರ ವಂಶಾವಳಿಯು | ತರಣಿಜ ಬುಧಾದಿಗಳ | ಕರದೊಳು ಸುಫಲವಿರಿಸಿ ಹರುಷಾದಲಿ ನಿಂದಿದೆ || ಪರಬೊಮ್ಮ ಉಪ್ಪ ವಡಿಸಾ ಹರಿಯೇ 5 ಡಮರುಧರ ಜಡೆಯೊಳಗ ಸಮುಲ್ಲಾಸದಲಿ ಮೆರೆವ ಅಮರ ನದಿ ಪಾಪಹರ ಸಮಕೃಷ್ಣ ವೇಣಿ ಸು | ವಿಮಲ ಗೋದಾವರಿ ಕುಮುದ್ವತಿ ಕಾವೇರಿ | ಶ್ರಮಹಾರಿ ತುಂಗ ಭದ್ರಿ || ಯಮುನಿ ಫಲ್ಗುಣಿ ಮಹೋತ್ತಮ ಸರಸ್ವತಿ-ಕಪಿಲ | ನರ್ಮದಿ ಮೊಲಾಗಿ ಅಮಲಗ್ರೋದ ಕವ | ಕ್ರಮದಿಂ ಕೊಂಡು ನದಿ ಚಮು ಬಂದಿದೇ ಪೊರಗ | ಕಮಲಾಕ್ಷ ಉಪ್ಪವಡಿಸಾ ಹರಿಯೇ6 ದಾರುಣೀ ಚರರಾದಾ ಚಾರುಗೋ ಬ್ರಾಹ್ಮಣರು | ಸಂರಕ್ಷಣೆಯ ಮಾಳ್ವ ಧೀರಯ ಯಾತಿ | ಮೇರು ಸಮ ಹರಿಶ್ಚಂದ್ರ ವೈರಾಟ ಪತಿಜನಕ | ಆರಾಯ ನಳ ನಹುಷನು || ಶೂರ ಹಂಸಧ್ವಜನು ಸಾರಿ ವಿಷ್ಟಕ್ಸೇನ | ವೀರ ಪಾಂಚಾಲನ - ಕ್ರೂರ ಚಂದ್ರಹಾಸ ಮ | ಯೂರ ಧ್ವಜ ಪ್ರಮುಖರಾರತದಿ ಬಂದರಿದೆ | ಕಾರುಣನೆ ಉಪ್ಪಾವಡಿಸಾ ಹರಿಯೇ 7 ವಾರಿಯೋಳ್ ನಡೆವಹತೇರಗಜ ಶೃಂಗರಿಸಿ | ಏರಿಬಂದಿಳಿದು ಮಹಾ ವೀರ ಭಟರೋಗ್ಗೀನೊಳು | ಬಾರಿ ಬಾರಿಗೆ ನಿಮ್ಮ ಚೀರುತ ಬಿರುದಂಗಳನು ಭೂರಿಜನ ಸಚಿದಣಿಸುತಾ || ಪಾರವಿಲ್ಲದ ಪಟಹ ಭೇರಿ ನಿಸ್ಸಾಳತಹ | ಳಾರವರಿದು ಊದುತಲಿ ಈ ರೀತಿ ನೃಪರದಳ | ಚಾರುವಾಲಗವ ಮನವಾರಗುಡುತಿದೆ ಪರಮ ಶೌರಿ ವಲಿದು ಪ್ಪವಡಿಸಾಹರಿಯೇ 8 ಕೇಣವನು ಗೊಳ್ಳದಿಹ ಜಾಣ ಕಲೆಯಿಂದ ಗೀ | ರ್ವಾಣ ಸ್ತ್ರೀಯರು ನೃತ್ಯ ಮಾಣುತಲಿ ಬರೆಕರದಿ | ವೀಣೆಯನು ತಾಂ ಪಿಡಿದು ವಾಣಿ ತುಂಬರ ಸುಪ್ರ ವೀಣನಾರದ ಗಣಪನು || ಶ್ರೇಣಿಯಿಂ ತೊಡಗೂಡಿ ತ್ರಾಣದಿಂದಲಿ ನಾಮ | ವಾಣಿಯಲಿ ವಚಿಸುತಿದೆ ಕಾಣಲ್ಕೆ ನಿಂದಿದೆ | ಏಣಾಂಕನುಜೆ ಮುಗಿದು ಪಾಣಿಯನು ಗುರು ಮಹಿಪತಿ ಪ್ರಾಣನೊಲಿದುಪ್ಪವಡಿ ಸಾ ಹರಿಯೇ 9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀ ರಾಘವೇಂದ್ರ ಗುರುವೇ ಪರಮ ದಯಾಳು ಪ್ರಭುವೇ ಪ ನಿರುತಾದಿ ಸೇವಿಸುವರಾ ಕಾಮಿತ ಕಲ್ಪತರುವೇಅ.ಪ ತುಂಗಾ ತೀರದೊಳ್ ಬಂದೂ ಮಂಗಾಳ ಮಹಿಮರು ನಿಂದೂ ಮಂಗಳಾ ಮೂರುತಿ ಶ್ರೀ ರಾಮಚಂದ್ರನ್ನ ಪೂಜೀಪರಿಂದೂ 1 ಕಾವೀಶಾಠಿಯನುಟ್ಟೂ ಗಂಧಾಕ್ಷತೆಗಳಿಟ್ಟೂ | ತಿರ್ದಿ ಹಚ್ಚಿರುವಾನಾಮಾ ಫಣಿಯಲ್ಲಿ ಹೊಳೆÉಯುತಾಲೀ 2 ವೀಣಾವಾದನದಿಂದಾ ಗಾನವ ಮಾಡುತಲೀ ವೇಣುಗೋಪಾಲ ಕೃಷ್ಣನ್ನ ಕುಣಿಸಿ ಕೊಂಡಾಡುತಿಹರು3 ಭಕ್ತಿಯಿಂದಲಿಸ್ತುತಿಪ ಜನರಾ ಆಪತ್ತುಗಳೆಲ್ಲವ ಕಳೆವಾ ಸಂಪತ್ತು ಸೌಭಾಗ್ಯವೀವಾ ಶರಣೇಂದವರ ಪೊರೆವಾ 4 ಸರಿಯಾರು ನಿಮಗೆ ದೇವಾ ಈ ಧರುಣಿಯೊಳರಸೆ ಕಾವಾ ದೊರಗಳ ನಾ ಕಾಣೆನಯ್ಯ ಶ್ರೀ ರಾಘವೇಂದ್ರ ಜೀಯಾ 5
--------------
ರಾಧಾಬಾಯಿ
ಶ್ರೀ ರಾಘವೇಂದ್ರರು ಈ ಪದಾರಾಧಾನಾ, ಪಾವನ ಮಹಾ ಪಾವೇಭ ಸಂಚಾನನಾ ಪ ತಾಪತ್ರಯ ಹರ, ರಾಘವೇಂದ್ರರ ಬಹುಪದವ್ಯಾಪಾರನಾ, ಅನುದಿನಾ ಅ.ಪ. ದುರಿತ ರೇಣು ಮುಂತಾದ ತೃಣಪ ರಕ್ಷಿಪಗಿಡು ತೃಣ ಪರಿಹಾರವಿದೆ, ನಾಘಾದೆ 1 ಅಂಧ ಬದಿರ ಮೂಕರು ಸೇವಿಸುತ ನಂದಾಗಳೇರುವರು ವೃಂದಾವನ ಸೇವೆ, ಗೈದು ವಂದಿಸಿ ದಿವ್ಯ ಕಂದನ್ನೆತ್ತಾಡಿಸಿರೋ, ಜೋ ಎನ್ನಿರೊ 2 ಕುಪ್ಠ ಭಗೇಂದ್ರಕ್ಷಯಾ, ಬಾಲಗ್ರಹ ದುಷ್ಟ ಪಿಶಾಚಭಯ ಕಷ್ಟ ಓಡಿಸಿ ದಯ ದಯದೃಷ್ಟಿಯಿಂದ ನಿಖಿ- ಳಾಷ್ಠ ವಿಟ್ಟು ಕರೆವಾ, ತಾ ಮೆರೆವಾ 3 ಆರಾಧಿಸುತಲಿ ಬಂದ, ನವಲಗುಂದ ಸಾರಸಿಂದಾರ್ಯರಿಂದ ಕ್ಷೀರ ಸೇಚನ ಮೂವತ್ತಾರು ವರುಷ ಗುರುವಾರ ಮೃಷ್ಠಾನ್ನದಿಂದ, ಆನಂದ 4 ಬಹಳ ಗುಣಗಳ ನೋಡಿ, ಒಲಿದು ಒಲಿದು ಮಂತ್ರಾ ಲಯದೊಳು ನಿಂತು ಶೀಲ ಸಂಪತ್ತಿಗೆ ಒಲಿದಿಹ ರಾಜ ಗೋಪಾಲ ಭಕ್ತರ ಚಯಾ ಆಶ್ಚರ್ಯ ಶ್ರೀರಸ್ತು5
--------------
ರಾಜಗೋಪಾಲದಾಸರು
ಶ್ರೀ ರಾಘವೇಂದ್ರರು ನೋಡಿದೆ ನಾ ಗುರುವರನ ಈರೂಢಿಗಧಿಕ ರಾಘವೇಂದ್ರರಾಯನ ಪ ವೃಂದಾವನ ರೂಪನ ಭಕ್ತ ವೃಂದಕಾನಂದ ಕೊಡುವ ಕಲ್ಪದ್ರುಮನಕಂದರ್ಪನ ಗೆಲಿದವನಅಂದಣದಲಿ ನಾಲವಿಂದ ಮೆರೆವರ 1 ಕಮಲಾಕ್ಷಿಮಾಲಾ ಕಂಧರನ ಈ ಕ್ಷಿತಿಯೊಳು ಮಧ್ವಮತಾಬ್ಧಿ ಚಂದಿರನತಮವೈರಿಸಮತೇಜದವನ ಸಾಧುಸುಮನ ಪ್ರಿಯ ಸುಧೀಂದ್ರ ಕರಜನ2 ಶೃಂಗಾರಾಭರಣಭೂಷಣ ದಿವ್ಯಅಂಗ ಪುಣ್ಯದಿ ಲೋಕ ಪವಿತ್ರ ಗೈಯುವನತುಂಗಾತಟ ಮಂದಿರನ ಮಹಮಂಗಲಪ್ರದ ಮಂತ್ರಾನಿಲಯದೊಲ್ಲಭನ 3 ಲೇಸಾದ ಭಿಕ್ಷು ಎನಿಪನ ತನ್ನದಾಸರಾ ಸ್ತುತಿಗೆ ಸರ್ವಾರ್ಥದಾಯಕನಭಾಸುರಾಗಮ್ಯ ಮಹಿಮನ ಜಗಧೀರ ನರಹರಿದೂತ ದೇವಸ್ವಭಾವನ 4 ಪರವಾದಿ ಹೃದಯದಲ್ಲಣನ ದ್ವೈತಸ್ಥಿರವೆಂದು ಜಗದಿ ಭೇರಿಯ ಹೊಡಿಸಿದನಪರಿಮಳಾದಿ ಗ್ರಂಥ ಬೀರಿದನ ಕರಿವರದ ಐಹೊಳೆ ವೆಂಕಟನ ಕಿಂಕರನ 5
--------------
ಐಹೊಳೆ ವೆಂಕಟೇಶ
ಶ್ರೀ ರಾಘವೇಂದ್ರರು ರಾಘವೇಂದ್ರ ಗುರುರಾಯರ ಸೇವಿಸಿರೊ ಸೌಖ್ಯದಿ ಜೀವಿಸಿರೊ ಪ ವಾಸೋತ್ತುಂಗಾ ತೀರದಲ್ಲೆ ನಿಂತು ವಸುಧೆಯೊಳು ಬಂದು ಅ.ಪ. ಕರ ಸರೋಜ ಸಂಜಾತ ವಸುಧೆಯೊಳು ಪುನೀತಾ ದಾಶರಥಿಯ ದಾಸತ್ವವ ತಾನೂಹಿಸಿ ದುರ್ಮತಿಗಳ ಜಯಿಸಿ ತ್ಯಜಿಸಿ ಈ ಸಮೀರಮತ ಸಂಸ್ಥಾಪಕರಾಗಿ ನಿಂದಕರನು ನೀಗಿ ಭೂಸುರರಿಗೆ ಸಂಸೇವಸಹಾಚರಣೀ ಕಂಗೊಳಿಸುವ ಕರುಣಿ 1 ಕುಂದದೆ ವರ ಮಂತ್ರಾಲಯದಲ್ಲಿರುವಾ ಕರೆದಲ್ಲಿಗೆ ಬರುವಾ ಸಂದರುಶನದಿಂದಲಿ ಮಹತ್ಪಾಪ ಪರಿದೋಡಿಸಲಾಪಾ ವೃಂದಾವನ ಮೃತ್ತಿಕೆ ಜಲಪಾನ ಮುಕ್ತಿಗೆ ಸೋಪಾನ ಮಂದ ಭಾಗ್ಯರಿಗೆ ದೊರೆಯದಿವರ ಸೇವಾ ಶರಣರ ಸಂಜೀವಾ 2 ಶ್ರೀದವಿಠ್ಠಲನ ಸನ್ನಿಧಾನ ಪಾತ್ರಾ ಸಂಸ್ತುತಿಸಿದ ಮಾತ್ರಾ ಮೋದಬಡಿಸುವ ತಾನಿಹಪರದಲ್ಲಿ ಈತಗೆ ಸಮರೆಲ್ಲಿ ಮೇದಿನಿಯೊಳಗಿನ್ನರಸಲು ಕಾಣೆ ಪುಸಿಯಿಲ್ಲೆನ್ನಾಣೆ ಪಾದಸ್ಮರಣೆ ಮಾಡದವನೆ ಪಾಪಿ ನಾ ಪೇಳ್ವೆನು 3
--------------
ಶ್ರೀದವಿಠಲರು
ಶ್ರೀ ರಾಘವೇಂದ್ರಸ್ತುತಿಗಳು ಏಕಯ್ಯ ಎನ್ನ ಮರೆತಿರುವೆ ಓ ರಾಘವೇಂದ್ರ ಪ ಯಾಕೀ ಪ್ರಕೋಪ ಇನ್ನೆಗಮಾಂ ಗೈದುದೇನು ಅ.ಪ ನೀನೆ ಶ್ರೀವೆಂಕಟಾರ್ಯಗೊಲಿದೆ ಪತಿತನ್ನ ಪೊರೆದೆ ದೀನಪಾಲಕ ಜ್ಞಾನಪರಿಪೂರ್ಣ ಮಾಂಗಿರೀಶ ಕೃಪಾರ್ಣ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀ ರುದ್ರ ದೇವರ ಸ್ತುತಿ ಪಾಲಿಸೆನ್ನ ಕಾಪಾಲಿಯೆ ನೀನು ಪ ವಾಲಗ ಕೊಟ್ಟು ಅ.ಪ ನೀ ಮಹದೌಷಧಿ ಕಾಮಾದಿಗಳೆಂಬಾಮಯ ಸ್ತೋಮಕೆ ಹೇ ಮಮಸ್ವಾಮಿ 1 ನೀ ಕಾಯದೆ ಬಿಡೆ ಕಾಯಜ ಭಯ ನೂಕೆಯನ್ನ ಕಡೆಗ್ಹಾಕುವರ್ಯಾರೈ 2 ತಿಂಗಳಚೂಡ ತ್ರಿಗಂಗಳ ಶೋಭಿತ ಅಂಗಜ ರಿಪು ಭಸಿತಾಂಗನೆ ಲಿಂಗಾ 3 ನಾಕರಮುಗಿಯುವೆನು ನಾಕಪನುತ ರ ತ್ನಾಕರ ಸುತೆವರನಾ ಕರತಾರೋ 4 ಕಂದನು ಇವನೆಂತೆಂದು ಎನ್ನ ನೀ ಮುಂದಕೆ ಕರೆಯೈ ನಂದಿಶ್ಯಂದನಾ 5 ಅರ್ಧಂಗನ ವಪುಸ್ವರ್ಧುನಿಧರಾ ಅಘ ಮರ್ದನ ಕಾಯೋ ಕಪರ್ದಿಯೆ ನಿರುತಾ 6 ಪತಿ ಮಹರುದ್ರನೆ ನಮಿಸುವೆ ಕ್ಷುದ್ರ ಮನಸಿನ ಉಪದ್ರವ ಬಿಡಿಸಿ 7 ದುರ್ಜನರರಿ ಖತಿವರ್ಜಿತ ಪಾಲಿಸೋ ನಿರ್ಜರನುತನ ಗುರು ಅರ್ಜುನ ವರದಾ 8 ನೀನೊಲಿಸಿದ ಸಿರಿಗೋವಿಂದವಿಠಲನ ಪಾವನ ಮೂರುತಿ ಕೋವಿದರೊಡೆಯ 9
--------------
ಅಸ್ಕಿಹಾಳ ಗೋವಿಂದ
ಶ್ರೀ ಲಕ್ಷ್ಮೀಸ್ತುತಿ ಅಪರೋಕ್ಷಜ್ಞಾನ ಸಂಚಯೇ ಶ್ರೀಪದ್ಮನಾಭ ನಿಲಯೇ ಪ ತಪಯೋಗ ಭಕ್ತಿನಿಧಿಯೆ ಅಪಾರಮಹಿಮಾವಲಯೇ ಅ.ಪ ಕಮಲಾ ಕಮಲಸದನೆ | ಕಮಲನಯನೆ ಕಮಲವದನೆ ಕಮಲಾಂಬರೆ ಕುಂದರದನೆ | ಕಮಲಾಂಬಿಕೆ ಮನಮೋಹನೆ 1 ಸರಸೀರುಹಜಾತನಮಿತೆ | ವರ ಮಾಂಗಿರಿರಂಗಪ್ರೀತೆ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶ್ರೀ ಲಕ್ಷ್ಮೀಸ್ತುತಿ ನಿವಾಸಿನಿ ಸಿರಿಯೆ ಪ ಬಾರೆ ಬಾರೆ ಕರವೀರ ನಿವಾಸಿನಿ ಬಾರಿಬಾರಿಗು ಶುಭ ತೋರು ನಮ್ಮ ಮನಗೆ ಅ.ಪ ಲೋಕಮಾತೆಯು ನೀನು ನಿನ್ನ ತೋಕನಲ್ಲವೆ ನಾನು ಆಕಳು ಕರುವಿನ ಸ್ವೀಕರಿಸುವಪರಿ ನೀ ಕರುಣದಿ ಕಾಲ್ಹಾಕು ನಮ್ಮ ಮನಗೆ 1 ನಿಗಮ ವೇದ್ಯಳೆ ನಿನ್ನ ನಾ ಪೊಗಳಲಾಪೆನಲ್ಲ ಮಗನಪ ರಾಧವ ತೆಗೆದೆಣೆಸದಲೆ ಲಗು ಬಗೆಯಿಂದಲಿ ಪನ್ನಗವೇಣಿ2 ಕಡೆಗೆ ನಮ್ಮನೆ ವಾಸ ಒಡೆಯ 'ಅನಂತಾದ್ರೀಶ' ಒಡೆಯನಿದ್ದಲ್ಲಿಗೆ ಮಡದಿಯು ಬಾಹೊದು ರೂಢಿಗುಚಿತವಿದು ನಡೆ ನಮ್ಮ ಮನೆಗೆ 3
--------------
ಅನಂತಾದ್ರೀಶರು