ಒಟ್ಟು 2736 ಕಡೆಗಳಲ್ಲಿ , 100 ದಾಸರು , 1962 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂದರಧರ ಪಾವನ ಇಂದಿರಾರಮಣನ _ ಗೋವಿಂದ ಎನ್ನಿರೋ ಪ ನಂದನ ಕಂದ ಮುಕುಂದಾಬ್ಧಿಶಯನನ - ಗೋವಿಂದ ಎನ್ನಿರೋ ಅ ಗರಳ ಕಂಧರ ಸಖನನುಜನ ಕೊಂದನ - ಗೋವಿಂದ ಎನ್ನಿರೋಸುರಮುನಿಯನುಜನ ಪಾದವ ಪಿಡಿದನ - ಗೋವಿಂದ ಎನ್ನಿರೋಪರಮ ವೈಷ್ಣವರ ಕೈಲಿ ದಾನವ ಪಿಡಿದನ _ ಗೋವಿಂದ ಎನ್ನಿರೋಉರಗನ ಮಗಳ ಗಂಡಗೆ ಪ್ರಾಣವಿತ್ತನ - ಗೋವಿಂದ ಎನ್ನಿರೋ 1 ಸತಿ ರೂಪ ತಾಳ್ದನ _ ಗೋವಿಂದ ಎನ್ನಿರೋಪಿತನ ಮಾತನು ಶಿರದೊಳಗಾಂತು ನಡೆದನ - ಗೋವಿಂದ ಎನ್ನಿರೋಮತಿವಂತನಾಗಿ ಮಾತೆಯ ಶಿರವ ತರಿದನ - ಗೋವಿಂದ ಎನ್ನಿರೋ 2 ಕರೆತರಿಸಿದ ಮಾವನ ಕೊಂದಾತನ - ಗೋವಿಂದ ಎನ್ನಿರೋಧರೆಯ ಒಯ್ದನ ಕಾಯಗಳೆದನ - ಗೋವಿಂದ ಎನ್ನಿರೋಈರೇಳು ಭುವನಗಳ ಉದರದೊಳಿಟ್ಟಹನ - ಗೋವಿಂದ ಎನ್ನಿರೋಮಾರಜನಕ ಕಾಗಿನೆಲೆಯಾದಿಕೇಶವನ - ಗೋವಿಂದ ಎನ್ನಿರೋ 3
--------------
ಕನಕದಾಸ
ಮಂದರೊದ್ಧಾರ ಮುಚುಕುಂದವರದ ಮುಕುಂದ ಇಂದಿರಾನಂದ ಗೋವಿಂದ ವರದ ಕಂದನತಿ ದೈನ್ಯದಿಂ ತಂದೆ ಬಾರೆನ್ನಲಾ ನಂದದಿಂ ಭದಿಂ ಬಂದೆ ಭರದಿಂ ನಂದಾತ್ಮ ಸಂಜಾತನೆಂದೆನಿಸಿ ನಲವಿನಿಂ ಬೃಂದಾವನದಿ ನಿಂದೆ ವರದನೆಂದೆ ನಂದಮಂ ಕೃಪೆಗೆಯ್ದುದರರೆ ಪಿರಿದು ಅಚ್ಚುತಾನಂತ ಚಿದ್ರೂಪ ವಿಭವ ಪಚ್ಚಕರ್ಪೂರದಿಂ ಮಿಳಿತವಾಗಿ ಪೆರ್ಚೆ ಪರಿಮಳ ವೀಳ್ವಮಿದನುಕೊಂಡು ಮೆಚ್ಚಿ ಪೊರೆಯೆನ್ನ ಶೇಷಾದ್ರಿರನ್ನ
--------------
ನಂಜನಗೂಡು ತಿರುಮಲಾಂಬಾ
ಮಂದಾನ ಬಾಧೆಗೆ ಮನಿ ಮಂದಿ ನಾವು ಸಹಿತ ಬೆಂದು ಬೇಸರ ಗೊಂಡು ಬಳಲು ತೇವು ಹರಿ ತಂದಿ ಬೇಗದಿ ಬಂದು ದಯಮಾಡಿ ಸಲಹೋ ಗೋವಿಂದಾ ಕೃಪಾಳು ಶ್ರೀ ಕರುಣಾಂಬುಧಿಯೆ ಪ ಕೃಷ್ಣಾ ರೌದ್ರಾಂತಕನ ಕ್ರೂರದೃಷ್ಟಿ ಮುಖ ಹಲಾ ತ್ಕøಷ್ಠವಾಗಿ ಎನ್ನ ಕಾಡುತಿರಲು ನಿಷ್ಠೆ ನೇಮಗಳೆಲ್ಲ ಜರಿದು ಮತಿ ಭೃಷ್ಟನಾಗಿ ಕಷ್ಟಕ್ಕೆ ಒಳಗಾದೆ ಕಡೆಹಾಯಿಸೊ ಧೊರಿಯೆ ಇಷ್ಟದಾಯಕ ನಿನ್ನಲ್ಲಿನ ಮಾಯವೆ ಆಡುದು (ಅಹುದು) ಕೃಷ್ಣಮೂರುತಿ ಬೇಗ ಕೈಹಿಡಿ ಇನ್ನಾ ಸೃಷ್ಟಿಗೊಡೆಯ ಶ್ರೀನಿವಾಸಕೇಶವ ಎನ್ನ ಕಷ್ಟವು ಪರಿಹರಿಸಿ ಕಾಯೋ ಸಂಪೂರ್ಣ 1 ಸೂರ್ಯಾನ ಪುತ್ರನ ಕಾರ್ಯಾವು ಎಮ್ಮ ಮೇಲೆ ಭಾರಿ ಕಾಣುತಲಿದೆ ಪರಮಾತ್ಮನೆ ------- ಘಟಗಳಿಗುಪದ್ರಕಾರನಾಗಿ ವ್ಯಾಧಿ ಖಂಡಿಸೋ ವೇಳೆ ಆರು ಈ ಗ್ರಹಕರ್ತರಾಗಿರಲು ದೇವರಿನ್ನು ಧಾರುಣಿಯೊಳು ಹರಿ ದನುಜಾಂತಕಾ ವಾರಿಜಾನಾಭಾ ಶ್ರೀ ವೈದೇಹಿ ಪತಿರಾಮಾ ಸಾರನೆ ಗಡ ಬಂದು ಸಲಹೋ ತಂದೆ 2 ಗರ್ಭಾದಿ ಮುದನಿಂ ಸುಖಭ್ರೂಣ ಭಯವೆಂಬ ದೆಬ್ಬಿಗೆ ತಾಳದೆ ತಲ್ಲಣಿಸುವೆ ಅರ್ಭಕ ನಾನೊಂದು ಅರಿತು ಅರಿಯೆ ದೇವ ಸಭ್ಯಾ ನೀ ನಂದ ಸರ್ವೋತ್ತುಮಾ ನಿರ್ಭಯನನು ಮಾಡಿ ನೀನೆ ರಕ್ಷಿಸದಿರೆ ದಾರು ಮನಸು----ಳಗೆ ದರ್ಭಶಯನ ರಾಮನ-----'ಹೊನ್ನ ವಿಠ್ಠಲ’ ಸಾಕಾರ ನೀ ಎನ್ನ ತ್ವರದಿ ಪೊರೆಯೊ 3
--------------
ಹೆನ್ನೆರಂಗದಾಸರು
ಮಂದೇಹರ ಹರವೂ | ಕಾಲದಿ | ಸಂಧ್ಯಾ ವಂದನವೂ ಪ ಶುಭ | ವೆಂದ್ಹೇಳುವುದು ಅ.ಪ. ಶಚಿ ನೀನಾಗಿರಲೂ | ಕಾಯೋ | $ಶುಚೀ ಎನಿಸಿರಲೂ ||ಶುಚಿಯೆನಿಸುವಿ ಕಿವಿಯು | ಪಚರಿಸುತಲ್ಹರಿವಚ ನುಡಿಸುತ ಶ್ರೀ | ತಾಚಮನದಲೀ 1 ಕಾಲ ಕಾಲ ಮೂರ್ತಿಯನು 2 ಯುಕುತಿ ತಿಳಿದು ನೀನು | ಆರ್ಯರ | ಉಕುತಿ ಪಾಲಿಸಿನ್ನೂಮುಕುತಿದಾಯಕ ಗುರು ಗೋವಿಂದ ವಿಠಲನುಭಕುತಿಗೊಲಿದು ನಿಜ ಭಕುತರ ಪಾಲಿಪ 3
--------------
ಗುರುಗೋವಿಂದವಿಠಲರು
ಮಧುರಾಪುರದಿಂದ ಎಂದಿಗೆ ಬರುವಿಯೊ ಕೃಷ್ಣಾ ಮಧುರಾಪುರದ ಬಾಲೆಯರು ಬಲು ಮೋಸಗಾರರು ಪ. ಗೋಕುಲದ ನಾರಿಯರು ನಾವು ಏಕವಾಗಿ ಬರುವೆವು ಅನೇಕ ಬಗಿಯ ಸುಖದಿಂದಾ ಗೋಪಿಯ ತಂದಾ ಅ.ಪ. ಯೆಂದಿಗೆ ನಿನ್ನ ಮುಖಾರವಿಂದವ ನೋಡುವೆವೋ ಅಂದಿಗೆ ಸುಖವೋ ಮಾಧವ ಮಂದರೊದ್ಧರನೆ ಮಾವ ಕಂಸನ ಕೊಂದು ಸಿಂಧುರನಯನನೆ ನೀ ಬೇಗ ಬರಬೇಕೆಂದು ನಾವು ಬೇಡುವೆವು ಬಂದು 1 ಮಧುವನದಲ್ಲಿ ನಿನ್ನಾ ಮಧುರ ಸ್ವರವನ್ನು ಕೇಳಿ ಮದನ ತಾಪಕೆಮ್ಮ ಮರುಳು ಮಾಡಿಸಿ ಮುರಲಿ ನುಡಿಸಿ ಆಧರಾಮೃತ ಪಾನವನ್ನೇ ಮಾಡಿಸಿದ ನಿನ್ನ ಮಹಿಮೆಯನ್ನು ತೋರಿದಿ2 ಯೆಷ್ಟು ಮೊರೆ ಪೊಕ್ಕಾರು ಒಂದಿಷ್ಟು ದಯವ್ಯಾಕೆ ಬಾರದೊ ನಿನ್ನ ಬಿಟ್ಟು ಒಂದರಘಳಿಗಿರಲಾರೆವು ನಾನು ಪ್ರಾಣನಾಯಕನೇ ಎನ್ನ ಪ್ರಾಣದೊಲ್ಲಭನೆ ಕೇಳೊ ಸರ್ವಪ್ರಾಣಿಗಳಿಗೆ ಪ್ರೇರಕನೆ ನಮ್ಮ ಕಾಳಿಮರ್ಧನ ಕೃಷ್ಣನು 3
--------------
ಕಳಸದ ಸುಂದರಮ್ಮ
ಮಧ್ವವರದಾ ಕೃಷ್ಣಾ ವಿಠಲ ಪೊರೆಯಿವಳ ಪ ಅಧ್ವರೇಡ್ಯನೆ | ದೇವ ಕಾರುಣ್ಯ ಮೂರ್ತೇ ಅ.ಪ. ಸುಸ್ತೇಶ ಸೂಚಿಸಿದ ಕ್ಲುಪ್ತಿಯನ್ನನುಸರಿಸಿಇತ್ತಿಹೆನು ಉಪದೇಶ ಚಿತ್ತಜನಪಿತನೆಅರ್ಥಿಯಲಿ ಮನ್ನಿಸುತ ಚಿತ್ತೈಸು ಬಿನ್ನಪವಕೃತ್ತಿವಾಸನ ತಾತ ಸ್ತುತ್ಯ ಸರ್ವೇಶ 1 ಸನ್ನುತ ಚರಣ ಸೀಮೆ ಮೀರಿದ ಮಹಿಮಭಾಮಿನಿಯ ಪೊರೆಯೆಂದು ಪ್ರಾರ್ಥಿಸುವೆ ಹರಿಯೇ2 ತರತಮದ ಸುಜ್ಞಾನ ಎರಡು ಮೂರ್ಭೇದಗಳುಅರಿವನೇ ಇತ್ತಿವಳ ಪೊರೆವುದೈ ಹರಿಯೆಮರುತ ಮತದಲ್ಲಿಹಳ ನಿರುತ ಕಾಯಲಿ ಬೇಕುಕರಿವರದ ಧೃವವರದ ತರಳೆಹಲ್ಯಯ ವರದ 3 ಪತಿಸೇವೆ ಹಿತದಿಂದ ಕೃತನಾಗಿಯಿವಳಿಂದಗತಿಗೆ ಸಾಧನವೆನಿಸೋ ಮರುತಾಂತರಾತ್ಮಹಿತ ವಹಿತವೆರಡರಲಿ ರತಿ ಸಮತೆ ಪ್ರದನಾಗಿಕೃತ ಕೃತ್ಯಳೆಂದೆನಿಸೊ | ಕೃತಿರಮಣದೇವ 4 ಜೀವ ಅಸ್ವಾತಂತ್ರ ದೇವ ನಿಜ ಸ್ವಾತಂತ್ರಜೀವ ಜಡರೂ ದೇವರಾಧೀನ ವೆಂಬಭಾವನೆ ತಿಳಿಸು ಗುರುಗೋವಿಂದ ವಿಠಲಯ್ಯಸಾವಧಾನದಿಯಿವಳ ಕೈಯನೇ ಪಿಡಿಯೋ 5
--------------
ಗುರುಗೋವಿಂದವಿಠಲರು
ಮಧ್ವಾರ್ಯ - ಮಧ್ವಾರ್ಯ ಪ ಅದ್ವೈತಾರಣ್ಯ | ಪ್ರಧ್ವಂಸಾನಲ ಅ.ಪ. ಬಡವರು ಎನಿಸಿದ | ನಡುಮನೆ ದ್ವಿಜನಲಿಸಡಗರದಲಿ ಜನ | ಮೃಡನುತ ಗುರುವೇ 1 ಬಾಲನೆ ವೃಷಭನ | ಬಾಲ ಪಿಡಿದು ದೇ ವಾಲಯ ವನದಲಿ | ಲೀಲೆಯ ತೋರ್ದೆ2ಹಸು ಕೂಸಾಗಿಯೆ | ಬಿಸಿ ಹುರುಳಿ ಮೆದ್ದೆವೃಷ ವಿಕ್ರಯಿ ಋಣ | ತಿದ್ದಿದೆ ಬೀಜದಿ 3ಅಚ್ಚ್ಯುತ ಪ್ರೇಕ್ಷರಿಂ | ತಚ್ಚತುರಾಶ್ರಮಸ್ವೇಚ್ಛೇಲಿ ಸ್ವೀಕರ | ಕೃಛ್ರಾದ್ಯಾಚರ 4 ಇಷ್ಟ ಸಿದ್ದಿಗತ | ಭ್ರಷ್ಟ ವಿಷಯಗಳಎಷ್ಟೊ ತೋರಿ ಸುವಿ | ಶಿಷ್ಟನು ಎನಿಸಿದೆ 5 ಬೋಧ ಬದರಿಯಲಿಸಾದರ ಸ್ವೀಕೃತ | $ಗಾಧ ಭಾಷ್ಯಕೃತ 6 ಮೂಲ ಮೂರು ಹತ್ತು | ಏಳು ಗ್ರಂಥಗಳುಲೀಲೆಯಿಂದ ಕೃತ | ಶೀಲ ಸುಜನರಿಗೆ 7 ನಾನೆ ದೇವನೆಂ | ದ್ಹೀನ ಮಾಯಿಗಳಗೋಣು ಮುರಿದು ಸು | ಜ್ಞಾನವನಿತ್ತೆಯೊ8 ಏಕ ವಾಕ್ಯದಿಂ | ದೈತ್ಯವನಳಿಯುತಏಕ ಮೇವ ಹರಿ | ಏಕಾತ್ಮನೆಂದೇ 9 ಬುದ್ಧ್ಯಾಬ್ಧಿಯು ಬರೆ ಗೆದ್ದು | ವಾದದಲಿಅದ್ವೈತವ ಮುರಿ | ದದ್ವಿತೀಯ ಗುರು 10 ಕುಸುಮ ಫಲ | ನಿತ್ತು ತೋರ್ದೆ ನಿಜ 11 ಗೋಪಿ ಚಂದನದಿ | ಶ್ರೀಪ ಗೋಪ ಬರೆಶ್ರೀಪತಿ ಸ್ಥಾಪಿತ | ಆಪುರಿ ಉಡುಪಲಿ 12 ಅಷ್ಟಯತಿಗಳಿಂ | ಕೃಷ್ಣ ಪೂಜೆಗಳಸುಷ್ಠು ಗೈಯ್ಯಲೇ | ರ್ಪಟ್ಟಿತು ನಿನ್ನಿಂ13 ಐತರೇಯ ಸುವಿ | ನೀತರೆನಿಪ ತವಛಾತ್ರರಿಗಾಗಿಯೆ | ಕೂತು ಪೇಳ್ದೆ ಗುರು14 ಶೇಷ ಮುಖ್ಯರಾ | ಕಾಶದಿ ನಿಂತುಪದೇಶವ ಕೇಳುತ | ತೋಷವ ಪಟ್ಟರು 15 ತಕಿಟ ತಕಿಟವೆಂ | ದುತ್ಕಟ ನಾಟ್ಯದಿಪ್ರಕಟ ಹರ್ಷ ಸ್ತ್ರೀ | ನಿಕರಾವಳಿಯಿಂ16 ದೇವ ತತಿಯು ತಮ | ದೇವ ವಾದ್ಯದಿಂಪೂವ ಮಳೆಯ ಗರೆ | ಆವೃತನದರಿಂ 17 ಕೃತ ಕಾರ್ಯನೆ ತವ | ಸ್ತುತಿಯಗೈಯ್ಯ ಸುರತತಿಯ ಬದರಿ ಪುರ | ಗತ ನೆಂದೆವಿಸಿದೆ 18 ವ್ಯಾಸಾತ್ಮನು ಗುರು | ಗೋವಿಂದ ವಿಠಲನದಾಸ ಹೃದಯದವ | ಕಾಶದಿ ಭಾಸಿಸು 19
--------------
ಗುರುಗೋವಿಂದವಿಠಲರು
ಮಧ್ವೇಶಾರ್ಪಣ ಮಧ್ವೇಶಾರ್ಪಣ ಮಧ್ವೇಶಾರ್ಪಣಮಸ್ತುಶುದ್ಧ ಶ್ರುತಿ ಪದ್ಧತಿ ನಡೆಸುವೆ ಮಧ್ವೇಶಾರ್ಪಣಮಸ್ತು 1 ವಂದಿಸುವೆನು ಗೋವಿಂದನ ಚರಣಕೆ ಮಧ್ವೇಶಾರ್ಪಣಮಸ್ತುನಿಂದು ಕರಂಗಳ ವಂದಿಸಿ ಪ್ರಾರ್ಥನೆ ಮಧ್ವೇಶಾರ್ಪಣಮಸ್ತು 2 ಅಂಬುಜನಾಭನ ನಿತಂಬಿನಿ ಕಮಲಕೆ ಮಧ್ವೇಶಾರ್ಪಣ ಮತ್ತುಡಿಂಗರಿಗನು ನಾಜಗದಂಟೆಯ ಪ್ರಾರ್ಥನೆ ಮಧ್ವೇಶಾರ್ಪಣಮಸ್ತು 3 ಸಂಧ್ಯಾದೇವಿಗೆ ವಂದಿಸುತಿರುವೆನು ಮಧ್ವೇಶಾರ್ಪಣಮಸ್ತುಒಂದಿನ ಬಿಡದೆ ತ್ರಿಕಾಲದಿ ಮಧ್ವೇಶಾರ್ಪಣಮಸ್ತು 4 ಚಾಮರ ಹಾಕುವೆ ಶ್ರೀಮನೋಹರಗೆ ಮಧ್ವೇಶಾರ್ಪಣಮಸ್ತುಕೋಮಲ ಶಯನದಿ ಮಲಗಿಸುವೆನು ಮಧ್ವೇಶಾರ್ಪಣಮಸ್ತು 5 ಕೃಷ್ಣನ ಮಲಗಿಸಿ ತೊಟ್ಟಿಲ ತೂಗುವೆ ಮಧ್ವೇಶಾರ್ಪಣಮಸ್ತುಬಿಟ್ಟು ಅಭಿಮತ ಘಟ್ಟಿಸಿ ಪಾಡುವೆ ಮಧ್ವೇಶಾರ್ಪಣಮಸ್ತು 6 ಪರಿ ತೂಗುವೆ ಮಧ್ವೇಶಾರ್ಪಣಮಸ್ತುಗುರು ಪುಷ್ಕರ ಮುನಿ ಸುರದ್ವಾರದಿ ಮಧ್ವೇಶಾರ್ಪಣಮಸ್ತು 7 ಕರ್ಮವು ಸಿರಿಯಂದು ಹರಿಗರ್ಪಿಸುವೆ ಮಧ್ವೇಶಾರ್ಪಣಮಸ್ತುದಾಸರ ಚರಣಕೆ ಶಿರಬಾಗುವೆ ನಾ ಮಧ್ವೇಶಾರ್ಪಣಮಸ್ತು 8 ಕೃತಿ ಇಂದಿರೇಶಗರ್ಪಿಸುವೆ ಮಧ್ವೇಶಾರ್ಪಣಮಸ್ತು ಮಧ್ವೇಶಾರ್ಪಣ ಮಧ್ವೇಶಾರ್ಪಣ ಮಧ್ವೇಶಾರ್ಪಣಮಸ್ತು 9
--------------
ಇಂದಿರೇಶರು
ಮನವೆ ಶ್ರೀನಾರಾಯಣನನು ಸ್ಮರಿಸದೆ ಮಾಯಾಪಾಶಕೆ ಸಿಲುಕುವರೇ ಪ. ವನಜನಾಭನ ಪದ ವನರುಹಯುಗ್ಮವ ಅನುದಿನ ನೆನೆಯದೆ ಒಣಗುವರೇ ವನಿತಾಲಂಪಟನಾಗುತ ಸಂತತ ಮನಸಿಜಯಂತ್ರಕೆ ಮನಮರಗುವರೇ ಅ.ಪ. ತುಂಡು ಸೂಳೆಯರ ದುಂಡುಕುಚವ ಪಿಡಿದು ಗಂಡಸುತನವನು ಕೆಡಿಸುವರೆ ದಂಡಧರನ ಬಾಧೆ ಹೆಂಡತಿಯನು ಪಡ ಕೊಂಡು ವೇದನೆಯನು ತಾಳುವರೆ ಕಂಡು ಕಂಡು ನೀ ಗುಂಡಿಗೆ ಬಾಳ್ವರೆ ಹೆಂಡಿರ ಸುಖರಸ ಉಂಡರು ಸಾಲದೆ 1 ಬಂದ ಸುಖಕೆ ನೀ ಮುಂದುವರೆಯುತಲಿ ಮಂದ ಅಸಮ ದುಃಖ ತಾಳುವರೇ ಬಂದುದೆನ್ನ ಕಣ್ಣ ಮುಂದೆಯನುಭವಿಪೆ ಎಂದಿಗೆನ್ನಾಜ್ಞೆಯು ಬಂದಪುದೋ ನಿಜ 2 ಇಷ್ಟು ದಿನದಿ ನೀ ಭ್ರಷ್ಟೆಯರಲಿ ಮೋಹ ಪಟ್ಟ ಭಾಗ್ಯವನೆಲ್ಲ ತೋರೊ ನೀನು ಕಷ್ಟ ಮಾನಧನ ನಷ್ಟವಲ್ಲದೆ ಎಳ್ಳಿ- ನಷ್ಟು ಸುಖವನ್ನು ಕಾಣೆನಿನ್ನು ಇಷ್ಟಾರ್ಥಗಳೆಲ್ಲ ದೊರೆಕುವುದೈ ಪರ ಮೇಷ್ಠಿ ಪಿತನ ಮನಮುಟ್ಟಿ ನೀವ್ ಭಜಿಸಿರೊ 3 ವಿಷಯ ಪಳಂಚಿತನಾಗುವ ಸಂತತ ಪಂಚಡಕೀರನು ಆಗುವರೇ ಕರ್ಮ ಸಾಲದೆಂದೆನುತಲಿ ಸಂಚಿತ ಪಾಪವ ಸಂಗ್ರಹಿಸುವರೇ ಚಂಚಲಾಕ್ಷಿಯರ ಚಪಲದ ಮಾತನು ವಂಚನೆ ಎಂಬುದು ತಿಳಿಯದೆ ಇರುವರೆ 4 ಸಾರಿಸಾರಿ ಕೈ ಮುಗಿದು ಬೇಡುವೆನು ವಿ- ಕಾರ ದುರ್ಬುದ್ಧಿಯ ಬಿಡು ಎಂದು ಭಾರಿ ತಪ್ಪುಗಳ ಕ್ಷಮಿಸಿ ಕಾವ ಲಕ್ಷ್ಮೀ ನಾರಾಯಣ ನೀನೇ ಗತಿಯೆಂದು ಪಾರಮಾರ್ಥಿಕ ವಿಚಾರವ ಮಾಡುತ ಶ್ರೀ ರಮೇಶನ ಚರಣಾರವಿಂದವ ಸೇರೋ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮನಸಿಜ ಪಿತ ವಿಠಲ | ನೀನಿವನ ಸಲಹೋ ಪ ಅನುಮಾನ ವಿನ್ನಿಲ್ಲ | ಅಣುಗ ನಿನ್ನವನೋ ಅ.ಪ. ಸಿಂಧು ಮೂರುತಿಯೇ 1 ಸ್ವಪ್ನ ಸೂಚನೆಯಂತೆ | ಒಪ್ಪಿದಂಕಿತವಿತ್ತುಅರ್ಪಿಸಿಹೆ ನಿನ್ನಡಿಗೆ | ಸರ್ಪ ಶಯನಾ |ಒಪ್ಪಿಡಿಯ ಅವಲಿಗ್ಯೆ | ಅಪ್ಪಾರವಿತ್ತಿರುವೆಇಪ್ಪರಿಯ ಮಹಿಮೆಗಳು | ಇನ್ನಾರಿಗುಂಟೋ 2 ವಿಷ ಅಮೃತವಾದಂತೆ | ದುಷ್ಕರ್ಮ ಫಲರಹಿತಎಸೆಗುತ್ತ ಸಂತಾಪ | ನಶಿಸುವಂತೆಸಗೋಅಸಮ ಮಹಿಮನೆ ಭಕ್ತಿ | ಪಾಶಕ್ಕಾವಶನಾಗಿಮಿಸುಣಿ ಮೇಲ್ಮಣಿಯಂತೆ | ಭಾಸಿಸೋ ಹರಿಯೇ 3 ಮೋದ ಮೋದ ದ್ವಂದ್ವ | ಬುದ್ಧಿ ಸಮವೆನಿಸೋ 4 ಆವದೇಶವು ಇರಲಿ | ಆವಕಾಲವು ಇರಲಿನೀವೊದಗೊ ಸ್ಮøತಿ ಪಥಕೆ | ಕೋವಿದರ ಒಡೆಯಾಕಾವ ಕೊಲ್ಲುವ ಗುರೂ | ಗೋವಿಂದ ವಿಠ್ಠಲನೆಭಾವದಲಿ ಮೈದೋರೇ | ಓವಿ ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ಮನುಜ ಮೃಗವೇಷ | ವಿಠಲ ಪೊರೆ ಇವಳಾ ಪ ಅನಘ ಅನಿಲಾಂತಸ್ಥ | ಗುಣಪೂರ್ಣ ಹರಿಯೇ ಅ.ಪ. ಗುರುಮಹಿಮೆ ಅರಿಯದಲೆ | ಚಿರಕಾಲ ಬಾಳಿಹಳೊಮರುತಾಂತರಾತ್ಮಹರಿ | ವರಭೋಗಿ ಶಯನಾತರತಮದ ಸುಜ್ಞಾನ | ಎರಡು ಮೂರ್ಭೇದಗಳಅರುಹಿ ನೀ ಪೊರೆ ಇವಳ | ಸರ್ವ ಸುಲುಭಾಖ್ಯ 1 ಬದಿಗ ನೀನಾಗಿದ್ದು | ಮುದುಡ ಜೀವಿಯ ಮನಕೆವದಗಿ ಬಾರದಲೇವೆ | ಅಜ್ಞಾನ ಮುಸುಕೀಸದಮಲಾಂತಃ ಕರಣ | ದುದಯವನೆ ಕಳಕೊಂಡುವಿಧವಿಧದಿ ಪರಿತಪಿಸಿ | ನೊಂದಿಹಳ ಪೊರೆಯೋ 2 ಸರ್ವ ಬಗೆಯಲಿ ವಂದ್ಯ | ಸರ್ವಂತರಾತ್ಮಕನೆನಿರ್ವಿಕಾರನೆ ನಿನ್ನ | ನಾಮ ಸುಧೆಯಾಸರ್ವದಾ ಉಣಿಸಿ ಪೊರೆ | ಇವಳ ಎನೆ ಬಿನ್ನವಿಪೆಸರ್ವಸುಂದರ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಮನ್ನಿಸೆನ್ನ ಮಧುಸೂದನ ಪ. ಮದನನಯ್ಯ ಮೋಹನಕಾಯಉನ್ನತಗುಣನಿಲಯ ಉಡುಪಿನ ಕೃಷ್ಣರಾಯ ಅ.ಪ. ಶ್ರುತಿಗಳ ತಂದೆ ಮುನ್ನ ಸುರಮುನಿಗಳ ಮನ-ಕತಿ ಹರುಷವ ಕೊಟ್ಟೆ ಅಗಣಿತಗುಣರನ್ನಯತಿಗಳ ಪಾಲಿಸಿದೆ ಮುಂದುವರಿವದಿತಿಜರ ಸೋಲಿಸಿದೆ ಈ ಮಹಿಯೊಳುಮತಿವಂತರ ಪೊರೆದೆ ಮಹಿಮೆಯಿಂದ ಮೆರೆದೆ1 ಅಚ್ಚಹಾರಶೋಭಿತ ಕಂಠ ಆಶ್ರಿತರಿಗೆ ನೀ ನಂಟಮೆಚ್ಚಿದ ಪಾರ್ಥನ ಮಿತ್ರನೆನಿಸಿದೆ ಸುಚರಿತ್ರಮೆಚ್ಚಿದ ನಿನ್ನಯ[ಭಕ್ತÀ್ತ]ವೈಕುಂಠದಮುಚ್ಚಳ ತೆಗೆಸಲು ಶಕ್ತ ಅಚ್ಚುತ ನಿನ್ನಅರ್ಚಿಸಿದವ ಕೃತಾರ್ಥ ಅವನೆ ಸರ್ವಸಮರ್ಥ2 ಎಂದೆಂದು ನಿನ್ನವರೊಳು ಎನ್ನ ಕೂಡಿಸೊ ಕೃಪಾಳುವಂದ್ಯ ಗರುಡನ ಸ್ಕಂಧವೇರಿ ಬಹ ಗೋವಿಂದತಂದೆ ನೀನೆ ತಾಯಿ ನೀನೆ ಹಯವದನಬಂಧು ನೀನೆ ಬಳಗ ನೀನೆ ಮತ್ತದರಿಂದಕುಂದುಮಾಡುವುದು ಬಿಡೋ ಕಂಡು ಕರುಣವ ಮಾಡೋ 3
--------------
ವಾದಿರಾಜ
ಮನ್ನೀಸಯ್ಯಾ - ಮನಸಿಜನಯ್ಯಾ |ಮೌನಿಜನರ ಪ್ರಿಯ ಪಂಡರೀರಾಯಾ ಪ ಪರಿ | ಅನಘ ನೀ ಕರುಣಿಸಿ ಅ.ಪ. ಪರಿ ಏನಿದು ಹರಿಮೊರೆ ಕೇಳೆನನ್ನದು | ಪೊರೆವುದು ಜೀಯಾ 1 ಪರಿ ಗೋಪಿ ಜನರ ಪ್ರಿಯದ್ರೌಪತಿ ಗೋಪ್ತಾ | ಬಲು ಆಪ್ತಾ |ಕೈಪಿಡಿಯುವುದೀ | ಪಾಪಿಯಾದೆನ್ನನುಶ್ರೀಪತಿ ಶ್ರೀಹರೇ | ಮುರಾರೇ ||ಲೇಪಿಸು ಕೀರ್ತಿಕ | ಲಾಪಗಳ್ನಿನ್ನ ಸು-ರಾಪಗಪಿತ ಶ್ರೀ ಪಾವನ ಮೂರ್ತೇ 2 ಭವ ಶರ ನಿಧಿಯಲಿ | ಭವಣೆಯ ಪಡಲಾರೆಭವ ಜನಕನ ಪಿತಾ | ಹೇ ದಾತಾ |ಹವಣೆಯು ದಾವುದು | ಭವವನುತ್ತರಿಸಲುತವಪದ ಸ್ಮರಿಸುತಾ | ಸ್ಮರಿಸುತ್ತಾ ||ಸವನ ಮೂರರೊಳು | ಅವಶದಿ ಕೀರ್ತಿಸಿಬೆವರೆಂಬ ವಿರಜೆಯ | ಅವಗಾಹಿಸುವನುಭವವ ಕೊಡಿಸು ಹರಿ | ಅವನಿಜೆ ವಲ್ಲಭಪವನ ವಂದಿತ ಗುರು | ಗೋವಿಂದ ವಿಠಲಾ 3
--------------
ಗುರುಗೋವಿಂದವಿಠಲರು
ಮನ್ಮಥ ಚರಿತೆ340 ವರಸಿದ್ಧಿ ಗಣೀಶನ ಬಲಗೊಂಡೀ- ಶ್ವರನ ಪದಕೆ ನಮಿಸಿ | ಶಾರದೆಯ ಹರುಷದಿ ಸಂಸ್ಮರಿಸಿ | ಚ ತುರ್ಮುಖಗಳ ನೆರೆ ಭಜಿಸಿ ಹರುಷದಿ ನುತಿ ಮಾಡಿ | ಮಾಡಿ- ದ ಕೃತಿಯ ಸುಜನರು ನೋಡಿ 1 ಕಾಮಜನಕ ನಿಷ್ಕಾಮಜನಾಪ್ತ | ಸು- ಧಾಮನ ಸಖ ಹರಿಯು | ಮೂರು ಲೋಕಗಳಿಗೆ ತಾ ದೊರೆಯು | ಎನ್ನಹೃ- ತ್ಕಮಲದೊಳೀಪರಿಯು ಕಾಮನ ಸುಚರಿತೆಯು | ಸಜ್ಜನರು- ಇಹಪರ ಸದ್ಗತಿಯು | 2 ಪೃಥಿವಿಯೊಳಿಹ ಸುಜನರು ಕೇಳಿ | ಮ ನ್ಮಥ ಚರಿತ್ರೆಯನು | ಸಹ- ರ್ಷೋತ್ಕರದಿ ನೀವ್ಗಳಿದನು | ಭಜಿಸೆ ಸ- ದ್ಗತಿಗಳನು ಕೊಡುವನು | ಶತಮುಖವಂದಿತ ಸಿರಿದೇವಿಯರಸ- ನೊಲಿದು ಪಾಲಿಸುವನು | ಜನರ ಕೋ- ರಿದ ಕೋರಿಕೆಗಳನು | ತಾ ಕೊಟ್ಟವರನು ಪಾಲಿಪ ತಾನು 3 ತಾರಕಾಸುರನ ಭಯದಿಂದಲಿ ವೃಂ- ದಾರಕರೆಲ್ಲ ಕೂಡಿ | ಮನದಿ ಆಲೋಚನೆಗಳ ಮಾಡಿ | ವನಜ ಸಂ- ಭವನಡಿಗಳ ಬೇಡಿ | ಯಾರು ನಮಗೆ ದಿಕ್ಕೆಂದು ಕಳವಳಿಸಿ ನಾರಾಯಣನ ತ್ವರಿತದಲಿ | ಕಂಡು ವಂ- ದಿಸಿದರು ತವಕದಲಿ | 4 ವಾರಿಜಾಕ್ಷ ಪರುಷೋತ್ತಮ ವಿಶ್ವಾ- ಧಾರ ಪರಾತ್ಪರನೆ | ಅನಂತನವ- ತಾರ ಕೃಪಾಕರನೆ | ನಾವೆಲ್ಲ ಸೇರಿದೆವೈ ನಿನ್ನನೆ | ತಾರಕಾಸುರನ ಬಾಧೆ ಪರಿಹರಿಪ- ರ್ಯಾರನು ನಾವ್ ಕಾಣೆವೈಯ್ಯ | ಉ-- ದ್ಧಾರ ಮಾಳ್ಪನು ನೀನೆ | ಭಕ್ತಜನ- ವಾರಿಧಿ ಚಂದ್ರಮನೆ | 5 ಎನಲು ಸುರರೊಡನೆ ನುಡಿದನಾಗಲಾ- ವನಜನಾಭ ತಾನು | ಈ ಕಾರ್ಯ- ಕೆನಾ ಮಾಡುವುದೇನು | ಭ- ವಾನೀಧವನಾಗಿ ಶಿವನು | ಘನತಪವನಾಚರಿಸುತ್ತ ಮೇರುಗಿರಿ ಗುಹೆಯೊಳು ಕುಳಿತಿಹನೊ | ಫಾಲದಲಿ ಉರಿಗುಣ್ಣುಳ್ಳವನು | ಏನಾದರು ಸರಿ ತಾ ಲೆಕ್ಕಿಸನು | 6 ಕಾಮನಿಂದ ಶಂಕರನ ತಪಕಿಡಿಸಿ ಕರುಣಿಸಬೇಕೆಂದು ಬೇಡಿ | ಕೊಂ- ಡರವ ನಿಮ್ಮೊಳು ದಯಮಾಡಿ | ತ- ಕ್ಕಯೋಚನೆಗೈಯ್ಯುವ ನೋಡೀ | ತಾಮಸನ ಮುರಿದು ನಿಮಗೆ ಸಂತತವ ಕೊಡುವನು ಮುದಗೂಡಿ | ಎಂದು ಪೇಳಿದ ಶ್ರೀಹರಿಯನುಡಿ | ಕೇಳಿ ಇಂದ್ರನು ಗುರುವನು ನೋಡಿ 7 ಚಂದದಿಂದ ಸೇರಿ | ಸ್ಮರಗೆಯಿದ- ರಂದವೆಲ್ಲವುಸುರಿ | ಅವನಮನ ಶೌರಿ ಕಂದನೆಯಂತಾದರು ತಂದರೆ ಸುಖ- ವೆಂದನುಪಕಾರಿ | ಗುರು ವಂದಿಸೆ ಸುರರ ದೊರಿ | ಬೀಳ್ಕೊಂಡು ಬಂದನು ಕುಸುಮಪುರಿ8 ಕುಸುಮಾವತಿಯಲಿ ಮೀನಕೇತನನ ಶಶಿನಿಭವದನೆಯರು | ಸೇ- ವಿಸುತಿರೆ ಹಸನಾದ ಪನ್ನೀರು | ಪುನಗು ಅಗರು | ಕುಸುಮಶರನ ಉಪಚರಿಸುತ ಬಾಲೆಯ- ರೆಸೆಯಲು ಮೋದದೊಳು | ರತಿ- ಕ್ರೀಡೆಯಲಿ ಮನಕರಗಲು | ಬೃ ಹಸ್ಪತಿಯನಿತರೊಳೈತರಲು 9 ಊಳಿಗದವರಿಂದ್ಹೇಳಿ ಕಳುಹೆ ಗುರು ಕೇಳಿ ಸುದ್ದಿ ಮಾರಾ | ತವಕ ಪರಿಪರಿಯುಪಚಾರ | ಶ್ರೀಪತಿಯ ಕುಮಾರ | ಬಂದಹದ- ನೇನೆನುತ ಪದಾರ | ವಿಂದ- ಕೆರಗಿದನಾ ಕುಸುಮಶರ 10 ಭಯದೊಳಮರರೆಲ್ಲ | ಕ್ಷೀರಸಾಗರಕೆ ಪೋಗಿ ಎಲ್ಲ | ಬಿನ್ನೈ- ಸಲು ಕೇಳಿ ಸಿರಿಯನಲ್ಲಾ | ಅರಘಳಿಗಾಲೋಚಿಸಿ ಎನ್ನೊಳುನುಡಿ- ದನುಕೇಳಿಸಿರಿಯನಲ್ಲಾ | ಖಳಗೆಧರೆ- ಪರಿ ಎಲ್ಲವನು ಬಲ್ಲ 11 ಕಾಮನು ಪುಷ್ಪ ಶರಗಳಿಂದೆಸೆಯಲು ಗೌ- ರಿಮನೋಹರನೂ | ಬ- ಹಿರ್ಮುಖನಾಗುತ ಶಂಕರನೂ | ನಿ- ಕ್ಷೇಮವ ಪಾಲಿಪನು | ರಜತಗಿ ರಿವಾಸಿ ಮಹೇಶ್ವರನು | ಇದಕೆ ಗುರಿಯಾದ ಎನ್ನ ಮಗನು 12 ನಾವು ಪೇಳಿರುವೆವೆಂದು ನಮ್ಮ ಸು- ಕುಮಾರ ಮನ್ಮಥನಿಗೆ | ಇದೆಲ್ಲಾ ಪೇ- ಳಿವಿವರಮಾಗೆ | ಕರೆದುಕೊಂ- ಡ್ಹೋಗಿ ಶಿವನ ಬಳಿಗೆ | ಪಾವಕಾಕ್ಷ ಬಲು ಕರುಣಾನಿಧಿಯಿ- ನ್ನೇನು ಚಿಂತೆ ನಮಗೆ | ಬೇಗನಡೆ ಯೆಂದ ಹರಿಯು ಎನಗೆ | ಸಕಲವೂ ತಿಳಿಸಿದೆ ನಾನಿನಗೆ | 13 ಪರಿಯೋಚನೆ ಮಾಡು | ಸ- ತ್ಕೀರ್ತಿಯ ಸಂಪಾದನೆ ಮಾಡು | ಭರದಿ ಹೂ ಶರಗಳ ನೀ ಹೂಡು | ಹರನ ತಪವ ಭಂಗಿಸಿ ನಮ್ಮೆಲ್ಲರ ಕರುಣದಿ ಕಾಪಾಡು | ತಂದೆಯ- ಪ್ಪಣೆಯ ಮನದಿ ನೋಡು | ಮೂಜಗದಿ ಯಾರು ನಿನಗೆ ಜೋಡು | 14 ಈ ಪರಿಪೇಳಿದ ಗುರುವಿನ ನುಡಿಯನು ಶ್ರೀಪತಿಯ ಕುಮಾರ | ರತಿಯೊಡನೆ ಮಾರ | ನುಡಿದಳಾ ಶಿವನು ಮಹಾಕ್ರೂರ | ಆಪತ್ತೊದಗುವುದೀಗ ಬೇಡ ಎಂ- ಕಂದರ್ಪಮನದಿ ಸೋತು | ಬೃಹಸ್ಪತಿ- ಗೆಂದ ಕಾಮನಿನಿತು 15 ಸಮ್ಮತಿಯಿದು ಕೇಳಿ | ಪೂಶರನ ಬಿಡಲು ಚಂದ್ರಮೌಳಿ | ಕೋಪಿಸಲಾ ಹಣೆಗಣ್ಣೆನಗಾಳೀ | ಬ್ರಹ್ಮಾಂಡಗಳಾದರು ದಹಿಸುವುದು ಎನ್ನಳವೇ ಎಂದಾ | ಈ ಕಾರ್ಯಕೆ ನಾನು ಬಾರೆನೆಂದ | ನುಡಿಗೆ ಸುರ- ಗುರುಮತ್ತಿಂತೆಂದ | 16 ಮರೆಹೊಕ್ಕಿರುವಮರರ ಪಾಲಿಸುನೀ ಕಂದರ್ಪ | ಜಗ- ತ್ಕಾರಣನೈನಿಮ್ಮಪ್ಪ | ಪೇಳ್ದನುಡಿ ನಡಿಸಲು ಬೇಕಪ್ಪಾ | ಪರಿಪರಿಯಲಿ ನೋಡಿದರು ಜಗದೊಳಗೆ ನಿನ್ನ ಸರಿಯಾರಪ್ಪಾ | ನಮ್ಮ ನುಡಿ ಮೀರಬಾರದಪ್ಪಾ | ಅಷ್ಟು ಪೇಳಿ- ದರು ಕಾಮವೊಪ್ಪಾ | 17 ಕಾಮನವೊಪ್ಪಿಸಿ ಕರದೊಯಿದಮರರು ಕೈಲಾಸವ ಸೇರಿ | ಅರುಹಿದರು ಗಿರಿರಾಜ ಕುಮಾರಿ | ಕೇಳಿನಡೆತಂದಳಾಗಗೌರಿ | ವ್ಯೋಮಕೇಶನಿಹ ಗವಿಯ ದ್ವಾರಕೇ ಬರಲು ನೋಡಿ ನಂದಿ | ತಾಯಿನೀ- ನಿಲ್ಲಿಗೇಕೆ ಬಂದಿ | ಏನು ಅ- ಪ್ಪಣೆಯೆಂದನು ನಂದಿ 18 ವಂದನೆ ಒಳಗೆ ಹೋಗುವನು ಇವನನೀ ತಡೆಯಬೇಡವಯ್ಯ | ಎನ್ನ ಕಂದನು ಇವ ಕೇಳಯ್ಯ | ಎಂದು ಪೇ- ಳಿದ ಗೌರಿಯ ನುಡಿಯಾ | ಮುದದಿ ಶಿರದೊಳಾಂತನು ನಂದೀಶ್ವರ ಮುಂದೆ ಕೇಳಿ ಕಥೆಯ | ಅನಿತರೊಳ್ ಬಂದ ಕಾಮರಾಯ | ಪೋಗ ಬಹು- ದೆಂದ ಪ್ರಥಮಗೇಯ | 19 ಕಾಮಪೊಕ್ಕನಂದು | ಕರದಿ ಜ- ಪಮಾಲೆ ಪಿಡಿದು ಮುಂದು | ಮ- ಹಾಮಂತ್ರಗಳ ಜಪಿಸುತಂದು | ನೇಮದೊಳೇಕೋಭಾವದೊಳಿರುತಿಹ ಸೋಮಧರನ ಕಂಡ | ಏ- ನು ಮಾಡುವದೆಂದು ಪ್ರಚಂಡಾ | ಇಕ್ಷುಧ- ನುಶರಗಳ ಕೈಕೊಂಡಾ | 20 ವಿನಯದಿಂದ ಪ್ರಾರ್ಥಿಸಿ ಮಾತಾಡಿಸು- ವೆನೆಂದು ಶಂಕರನ | ನುತಿಸಿ ಬೇಡಿ- ದನು ಶೂಲಧರನಾ | ಎಷ್ಟಾದರು ಕರಗಲಿಲ್ಲವನಮನಾ | ಪರಿಪರಿಯೋ- ಚನೆ ಮಾಡಿ ಮನ್ಮಥನು | ಬೆರಗಾಗುತಾ ನಿಂತಾ ಸಮಯನೋಡುತ- ಲಿರತಿಯ ಕಾಂತಾ | ಮನ ದಿ ಹೊಂದಿದನು ಮಹಾಚಿಂತಾ 21 ನೆಂದು ಯೋಚಿಸಿದನು | ಇ- ಕ್ಷು ಧನುವನು ಜೇ ಹೊಡೆದಾನು | ಮಹೇ- ಶನ ಮರ್ಮಸ್ಥಳಗಳನು | ಪುಷ್ಪ ಬಾಣಗಳೂಡೆಸೆಯೆ ಮ- ಶರಗಳನು ಸುರಿದಾನು | ಜ- ನರೆ ಕೇಳೀಯಾಶ್ಚರ್ಯವನು | 22 ಆ ಮಹೇಶ್ವರನ ಮೂಲ ತಿಳಿಯಲಿಂ- ದ್ರಾದಿಸುರರಿಗಳವೆ | ಕೇಳಿಯೀ ಕಾಮನೇನು ಲಕ್ಷ್ಯವೆ | ಕರಿಚರ್ಮಾಂಬರನಾ | ಮೀನ ಕೇ- ತನನ ಬಾಣಕೆ ಮನಾ | ಬಹಿರ್ಮು- ಖನಾಗಿ ನೋಡಿ ಸ್ಮರನಾ | 23 ಕಣ್ಣುತೆಗೆದು ಮುಕ್ಕಣ್ಣಯಲೋ ನಿನ- ಗೆನ್ನೊಳೇಕೆ ಪಂಥಾ | ಛೀ ಛೀನಡಿ ಹೋಗು ಹೋಗು ಭ್ರಾಂತ | ಎಂದು ತಾ- ತನ್ನನಿಜಸ್ವಾಂತ-| ವನ್ನು ಪೂರ್ವದಂದದಿ ತಪದಲ್ಲಿರಿಸಚ- ಪೋಲ್ವಂದದಲಾ ಶಾಂತಾ | ಶೂರ್ಪಕಾ- ರಿಯು ಎದುರಲಿ ನಿಂತಾ | 24 ನಾನು ಬಂದಾ ಕಾರ್ಯವ ಕೇಳದಲೆ ಇ- ದೇನೀ ಪುರಹರನು | ಛೀಹೋಗೋ- ಗೆಂದು ಗರ್ಜಿಸಿದನು | ಎನುತ ತೆ- ಗೆದೆಚ್ಚ ಪೂಶರವನು | ನಾನಾವಿಧದಲಿ ತನ್ನ | ಚಮತ್ಕಾ- ರಗಳ ತೋರಿಸಿದನು | ಮನದಿ ಭಯಗೊಳುತ ಮನಸಿಜನು | ಮುಂದಾಗುವ ಕಥೆಯ ಕೇಳಿಯಿನ್ನು 25 ಭರ್ಗಕಣ್ದೆರೆದು ನೋಡಲಾಕ್ಷಣದಿ ಭರದಿಂ ಮನ್ಮಥನಾ | ಕೋಪಕಿಡಿ- ಯಿಡುತ ಫಣೆಗಣ್ಣ | ತೆಗೆದು ನೋಡಲು ತಕ್ಷಣ | ಚಿಣ್ಣಾ ಭುಗ್ಗು ಭುಗ್ಗುಯೆಂದೇಳ್ವ ಉರಿಗಳಿಂ ದಗ್ಧನಾದ ಮದನಾ | ಭಸ್ಮದಂ- ತಿದ್ದು ಮರ್ಮಸದನಾ | ಅಗ್ನಿವ್ಯಾ ಪಿಸೆ ಬ್ರಹ್ಮಾಂಡವನಾ 26 ಸುರರು ಕಿನ್ನರರು ಗಡಗಡ ನಡುಗುತ ಬೆರಗಾದರು ನೋಡಿ | ಅವರ- ಶಿರವನಲ್ಲಾಡಿ | ಚರರು ಬಂದು ರತಿಗೀ ಸುದ್ದಿಯ ಪೇಳಿ- ದರು ದುಃಖ ಮಾಡಿ | ಕೇಳಿ ನಾರಿಯರು ಶೋಕವಮಾಡಿ | ರತಿಯು ನೆಲದೋಳ್ ಬಿದ್ಹೊರಳಾಡಿ | 27 ಹಾಹಾರಮಣಾ ಹಾ ನಿಜೇಶ ಹಾ ಪ್ರಾಣಕಾಂತಕಾಮಾ | ಎನ್ನ ಕರ್ಕಶನಿಸ್ಸೀಮ | ಸಾಹಸ ಮಾಡುವೆನೆಂದು ಪೋಗಿ ಶಂ- ಕರನಿಂದಲಿ ಮಡಿದೆ | ಪೇಳಿದಮಾ- ತ್ಕೇಳದೆ ನೀ ನಡೆದೇ | ಪೋಗಬೇ- ಡೆಂದು ನಾನು ನುಡಿದೆ 28
--------------
ಗುರುರಾಮವಿಠಲ
ಮನ್ಮಥಪಿತ ವಿಠಲ ನೀನಿವಳ ಸಲಹೊ ಹರಿಯೇಮನ್ಮನೋರಥ ಭಿನ್ನಪವ ಸಲಿಸೋ ಪ ಜನ್ಮಜನ್ಮಾಂತರದ ಪುಣ್ಯ ಸಂಚಯ ಫಲಿಸಿನಿನ್ನ ದಾಸತ್ವದಲಿ ಕಾಂಕ್ಷೆ ಬಹುಯಿರಿಸೆನನ್ನೆಯಿಂದಲಿ ಪೂಜೆ ಪರಿಕರಂಗಳ ಕೊಂಡುಸ್ವಪ್ನ ಸೂಚಕದಂತೆ ನಿನ್ನರ್ಚನೆಯ ಕಾತುರಳ 1 ತರತಮದಿ ಸುಜ್ಞಾನ ಹರಿಗುರೂ ಸದ್ಭಕ್ತಿಪರಮ ವೈರಾಗ್ಯವನು ವಿಷಯಾದಿಗಳಲೀಪರತತ್ವ ಹರಿಯೆಂಬ ವರಮತಿಯ ನೀನಿತ್ತುಗುರುಮಧ್ವ ಮತದಲ್ಲಿ ಪರಮದೀಕ್ಷೆಯನೀಯೋ 2 ಪತಿ ಸುತರು ಹಿತರಲ್ಲಿ | ಗತಿದಾತ ಗುರುವಿನೊಳುಕ್ಷಿತಿರಮಣ ತವವ್ಯಾಪ್ತಿ ಮತಿಯ ಪಾಲಿಸುತಗತಿ ದೋರೊ ಸನ್ಮುಕುತಿ ಪಥವನೀ ಸಲಿಸುತ್ತಹುತವಹಕ್ಷಾಂತರ್ಗತ ಮನದಿ ನೆಲಸುತಲೀ 3 ಸಂಜೀವ ಪಿತನೇ |ನಂಜು ಸಂಸ್ಕøತಿ ಬಂಧ ಮೋಚಕೇಚ್ಛೆಯ ಮಾಡಿಅಂಜಿಕೆಯನೆ ಕಳೆಯೊ | ಕಂಜಾಕ್ಷ ಹರಿಯೇ 4 ಪಾವಮಾನಿಯ ಪ್ರೀಯ ಭಾವುಕಳ ಹೃದ್ಗತನೆನೀವೊಲಿದು ತವಸ್ಮರಣೆ ಸರ್ವದಾ ಸರ್ವತ್ರಈವುದಿವಳಿಗೆ ಎನ್ನ ಬಿನ್ನಪವ ಸಲ್ಲಿಪುದುಗೋವಿದಾಂಪತಿಯೆ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು