ಒಟ್ಟು 19311 ಕಡೆಗಳಲ್ಲಿ , 135 ದಾಸರು , 7892 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎರಡನೆಯ ಸಂಧಿ ಶ್ರೀಕಾಂತನ ಕರುಣವುಳ್ಳವಗೆ ಕುಂತಳಪುರಕೆ ಕಳುಹಿದನು 1 ಗಂಧಾಕ್ಷತೆ ಫಲಪುಷ್ಪದಿಂದ ಸಾಕ್ಷಾತು ಗಣಪತಿಗರ್ಪಿಸಿ ತರಳನ ಶಿಕ್ಷಾಗುರುವಿಗೆ ಒಪ್ಪಿಸಿದ2 ಮಣ್ಣ ಹರಹಿ ಅಕ್ಷರವ ಬರೆದು ಎನ್ನಣ್ಣನೀ ತಿದ್ದು ಬಾ ಎನಲು ಎನ್ನೊಡೆಯ ಶರಣೆಂದು ಬರೆದ 3 ನಿನ್ನ ಜ್ಞಾನ ಬೇರೆ ಚಿತ್ತ ಬೇರೆ 4 ಎಂದು ಧಿಕ್ಕರಿಸಿ ಹೇಳಿದನು 5 ಚಾತುರ್ಯದ ಬುದ್ಧಿ ಬೇರೆ ತೊಡರು ತಾತಗೆ ಒಯ್ದು ಒಪ್ಪಿಸಿದ 6 ಮುಕುಂದನ ಭಜಕನೆಂದೆನದೆ ಬಂದ ಹಾಂಗಿರಲೆಂದು ಸುತನ 7 ಧ್ರುವ ಪ್ರಹ್ಲಾದ ಅಕ್ರೂರಾಂಬರೀಷ ಮಾಧವ ಮುರಾರಿಯನ್ನು ಭಜಿಸಿ ಭವ ಭಯಾದಿಗಳಿಲ್ಲ ನಮಗೆ 8 ಕಟ್ಟಿಕೊಟ್ಟರು ಕರಲೇಸು ಎನುತ ಕಟ್ಟೆದರ್ ವೇದೋಕ್ತದಲಿ 9 ಓದಿಸಿದರು ಗುರುಮುಖದಿ ಮಾಧವನಲ್ಲದೆ ಅನ್ಯತ್ರರಿಲ್ಲವೆಂದು ಭೇದಾಭೇದವನೆಲ್ಲ ತಿಳಿದು 10 ಹೊಳೆವ ಶ್ರೀ ಮುದ್ರಿಕೆಯಿಟ್ಟು ಗೆಳೆಯರೆಲ್ಲರಿಗೆ ಬೋಧಿಸಿದ 11 ಪತಿತರಾದಪಗತಿ ಕುಮಾರರಿಗೆಲ್ಲ ಸದ್ಗತಿಯಾಗಬೇಕೆಂದೆನುತ ಮಾಡಿಸಿದನಾಜೆÉ್ಞಯಲಿ 12 ದ್ವಾದಶ ನಾಮವ ಹಚ್ಚಿ ಸಾದಿ ಸಾಧಿಸಿರಿ ಏಕಾದಶಿ ವ್ರತವೆಂದು ಬೋಧಿಸಿದನು ಎಲ್ಲರಿಗೆ13 ಜಾಗರ ಮಾಡಿ ಫುಲ್ಲನಾಭನ ಭಜಿಸುವರು ಪರಗೋಷ್ಠಿಯಿಲ್ಲ 14 ಬೆಳೆಸುವ ಹÀರಿಭಕ್ತರೊಡನೆ ಪರಾಕ್ರಮಿಯೆನಿಸಿದನು 15 ಇಮ್ಮಡಿಯನು ಗೆದ್ದು ಹೇರಿಸಿದನು ತನ್ನ ಪುರಕೆ 16 ತಂದು ಆರತಿಗಳನೆತ್ತಿ ಚರಣಕ್ಕೆರಗಿದನು 17 ಜಗದಧಿಪತಿಯಾಗು ಎಂದು ಹರುಷವನೆ ತಾಳಿದಳು 18 ಲೇಸಾದ ಶುಭಲಗ್ನವ ಕಟ್ಟಿ ಸುತನ ಸಿಂಹಾಸನದಲ್ಲಿ ಕುಳ್ಳಿರಿಸಿ ಭೂಸುರ ಬಂಧುಗಳೆಲ್ಲರು ನೆರೆದಿಂದುಹಾಸಗೆ ಪಟ್ಟಗಟ್ಟಿದರು19 ಪರಿ ಪಾಲಿಸುತ್ತ ರಾಜ್ಯನೀತಿಯಿಂದಾಳುತಲಿಹನು 20 ಲಾಲಿಸು ಕುಂತಳೇಶ್ವರಗೆ ಕಾಲಕಾಲಕೆ ಕಪ್ಪವ ಕೊಟ್ಟು ಬಹೆವು ಆಲಸ್ಯವಾಯಿತು ಎಂದ21 ಉದಾರಬುದ್ಧಿಯಲಿಂದುಹಾಸ ವಿಚಾರಿಸಿದನು ತನ್ನಪಿತನ 22 ಜೋಯಿಸ ಪುರೋಹಿತಗೆ ಕಾಂತಿಗೊಡದ ಕನಕಾಭರಣವೆಲ್ಲವ ಅಂತಸ್ಥದಿಂದ ಕಟ್ಟಿದನು23 ಜ್ಞಾನವುಳ್ಳ ಭೃತ್ಯರೊಡನೆ ದಾನವಾಂತಕನ ಕಿಂಕರನು 24 ತೆರಳಿದರಲ್ಲಿಂದ ಮುಂದೆ ಹೆಬ್ಬಾಗಿಲ ಮುಂದೆ 25 ದಿಟ್ಟರಾರೆಂದು ಕೇಳಿದನು ಅಟ್ಟಿದೆನ್ನೊಡೆಯ ಪುಳಿಂದ 26 ಮಂದಿರಕಾಗಿ ಕರೆಸಿದ ಕರವ ಮುಗಿದರು 27 ಕಡೆಗಣ್ಣಲಿ ನೋಡಲಿಲ್ಲವರೊಳು ಮಾತನುಡಿಯದೆ ಸನ್ಮಾನಿಸದೆ ಝೇಂಕರಿಸಿ ಕೇಳಿದನು 28 ಜೀಯ ಹಸಾದ ನಿಮ್ಮಡಿಗೆ ಇಂದಿನ ವಾಯಿದ ಕಟ್ಟಿದ ಧನವು ದೇವರು ಕೈಕೊಂಬುದೆನಲು 29 ನಗ ನಾಣ್ಯ ದೇವಾಂಗವನು ನಗ ನಾಣ್ಯ ದೇವಾಂಗವನು 30 ಸೊಗಸಾಗಿ ಮಾಡಿಸು ಎಂದ ನಗೆಮುಖದಿಂದ ಹೇಳಿದನು 31 ಸಣ್ಣ ರಾಜಾನ್ನದಕ್ಕಿಯನ್ನ ಶಾಕವು ಅಣ್ಣೆವಾಲೆರೆದ ಪಾಯಸವು ಉಣ್ಣೇಳಿರೆಂದು ಕರೆದರು 32 ನಿರಾಹಾರವು ನಮಗೆ ಎಂದು ಕೇಳಿದನು 33 ಎಮ್ಮೊಡೆಯನ ಸುಕುಮಾರ ತಮ್ಮ ರಾಜ್ಯದಲ್ಲಿ ಏಕಾದಶಿವ್ರತ ನಿರ್ಮಾಣವನ್ನೆ ಮಾಡಿದನು34 ಸತಿ ಎಂದೆಲ್ಲರು ಹೇಳುತಲಿಹರು ಎಲ್ಲಿದ್ದ ಆತಗೆ ಸುತನು 35 ಹಿಂದಟ್ಟಿ ಹೋದನು ಪುಳಿಂದ ಅಟ್ಟಡವಿಯೊಳಗಿರಲು 36 ಪೋಷಣೆಯನು ಮಾಡಿದರು ಭೂಸುರರನೆ ಪಾಲಿಸುವನು 37 ನಟ್ಟಂದದಿ ಮನದೊಳು ಮರುಗಿ ಎಂದು ತಾ ಮನದೊಳು ತಿಳಿದ 38 ಅನುಕೂಲವಾದ ಕಾರ್ಯವು ಮನದಲ್ಲಿ ಚಿಂತೆ ಮಾಡಿದನು 39
--------------
ಹೆಳವನಕಟ್ಟೆ ಗಿರಿಯಮ್ಮ
ಎರಿ ಮುಂಡೆ ಇವನೆರಿ ಮುಂಡೆ ಏನುಅರಿಯದೆ ಒದರುವ ಎರಿಮುಂಡೆ ಪ ತನ್ನ ನಿಜವ ತಾನು ಅರಿಯದೆ ತತ್ವದಕುನ್ನಿಯಂತೆ ಒದರುವ ಎರಿಮುಂಡೆಭಿನ್ನ ಬುದ್ಧಿಯಲಿದ್ದು ನಾ ಬ್ರಹ್ಮವೆಂಬುದನುಚೆನ್ನಾಗಿ ಅರಿಯದ ಎರಿಮುಂಡೆ 1 ಯೋಗವ ತಿಳಿಯದೆ ಯೋಗವ ಹಳಿವನುಈಗ ಹೇಳಿವನೀಗ ಎರಿಮುಂಡೆಆನಿಹೆ ಬ್ರಹ್ಮವು ನಾನೆಂದು ಎತ್ತೆತ್ತೆನುಡಿವನು ಎರಿಮುಂಡೆ 2 ಕೋಟಿ ಸೂರ್ಯರ ತೇಜ ಪಾಟಿಸಿ ಕಾಣದೆಬೂಟಕ ನುಡಿವವ ಎರಿಮುಂಡೆದಾಟಿ ಸಹಸ್ರಾರ ಬ್ರಹ್ಮರಂಧ್ರದ ನಾಳ ಕೇಳದ ನರನಾಗ ಎರಿಮುಂಡೆ 3 ಮಾತರಿಯದೆ ಜ್ಞಾನ ನುಡಿಯಿದ್ದುದಕಳೆದು ಮಣ್ಣು ಹೋಯ್ಯೆಂಬುವ ಎರಿಮುಂಡೆಮಾತಿಲಿ ಬ್ರಹ್ಮವು ಆಗಬೇಕಾದರೆ ಮಹಾಸಾಧನವೇಕೆ ಎರಿಮುಂಡೆ 4 ಒಂದು ಹೋಗಲಿಲ್ಲ ಒಂದೇ ನಾನೆಂಚಿನುಇಂದು ಕೇಳುವನೀಗ ಎರಿಮುಂಡೆಸುಂದರ ಚಿದಾನಂದ ಸ್ವರೂಪ ತಿಳಿಯದೆ ಸುಲಭ ಎಂದೆಂಬುವ ಎರಿಮುಂಡೆ 5
--------------
ಚಿದಾನಂದ ಅವಧೂತರು
ಎಲರುಣಿಯ ಶಯ್ಯ ಪವನಾ |ಕಾವೇರಿ ಕೂಲಗ ಚೆನ್ನಾ | ಬಾಬಾರನ್ನಾ ಪ ಕಾಳಿರಮಣನುತ | ಕಾಳಿಂದಿಯ ಮನಕೀಲಾಲಜ ರವಿ | ಬಾಲ ಗೋಪಾಲಾ ಅ.ಪ. ಜಾಣಾ | ನೀರದವರ್ಣಾ | ಜಟೆ ಹೇಮವರ್ಣಾ | ಭಕ್ತ ಪಾವನ್ನಾ |ಮೌನಿ ಕುಲಕೆ ಸನ್ಮಾನ್ಯ ಪರಾಶರಮುನಿ ಸಂಭವ ತವ ಚರಣಕೆ ಶರಣು 1 ಅಹಿ | ಪೇಂದ್ರ ವಂದ್ಯ ಮನಮಂದಿರ ಚಂದಿರ ನಂದವನೀಯೋ 2 ಹೃದ್ಯಾ | ಅಚ್ಛೇದ್ಯ ಭೇದ್ಯಾ | ಹೇ ಅನವದ್ಯಾ | ಇಂದಿರಾರಾಧ್ಯ ಭಾಧ್ಯ ಭಾದಕ ಸನ್ಮೋದ ಪ್ರಮೋದನೆವೇದ ವೇದ್ಯ ಗುರು | ಗೋವಿಂದ ವಿಠಲ 3
--------------
ಗುರುಗೋವಿಂದವಿಠಲರು
ಎಲೆ ಎಲೆ ಎಲೆ ಥೂ ಪರದೇಸಿ ನೀ ಸುಳ್ಳೆ ಸುಳ್ಳೆ ಮಾಡಬೇಡ ಚೌಕಾಸಿ ಪ ತಿಳಕೊಂಡು ನೋಡು ನೀನು ಸುಧಾರಿಸಿ ಬಲವಾಗಿ ಬರದೇನು ಹಿಂಬಾಲಿಸಿ ಅ.ಪ ಎಷ್ಟು ದುಡಿದಿ ಸತಿಸುತರಿಗಾಗಿ ಗಂಟು ಕಟ್ಟಿಕಟ್ಹ್ಹೂಳಿಟ್ಟಿ ಇವರಿಗಾಗಿ ಅಷ್ಟು ಬಿಟ್ಟು ನಡೀತಿದ್ದಿ ಹಾಳಾಗಿ ನಿನ್ನ ಇಟ್ಟು ಬಂದು ಉಣುತಾರೋ ಹೋಳಿಗಿ 1 ಕಣ್ಣು ಮುಚ್ಚ್ಯಾಟವನಾಡುತಿದ್ದಿ ನೀ ಬಣ್ಣಗೆಟ್ಟು ಖರೆಯೆನುತಿದ್ದಿ ಸುಣ್ಣದ್ಹರಳ್ಹೊತ್ತ ಕೋಣ ಹೋಗಿ ಭರದಿ ಕಂಡು ತಣ್ಣೀರಿನೊಳು ಬಿದ್ದು ಸತ್ತ ಗಾದಿ2 ಘಟ ಇದು ಪುಸಿಯು ಬರಿದೆ ಗಾಳಿಯ ಮಟ್ಟ ವಸುಧೇಯೊಳಧಿಕೆಂದು ತೊಡು ನಿಷ್ಠೆ ನಮ್ಮ ಅಸಮ ಶ್ರೀರಾಮನ ಪಾದ್ಹಿಡಿ ಗಟ್ಟಿ 3
--------------
ರಾಮದಾಸರು
ಎಲೆ ಎಲೆ ಎಲೆ ಮನ ಉಳಿ ಉಳಿ ಸಿರಿ ವಲ್ಲಭನ ಭಜನೆಯೋಳ್ನಲಿ ನಲಿ ಪ ಮಲಿನ ಮಲದಭಾಂಡ ತೊಳಿತೊಳಿ ಈ ಹೊಲೆಮಯ ಸಂಸಾರ ತುಳಿ ತುಳಿ ಅ.ಪ ಶಮೆಶಾಂತಿ ಖಡ್ಗವ ಹಿಡಿಹಿಡಿ ಕಾಲ ಯಮನ ಭಟರ ಭೀತಿ ಕಡಿ ಕಡಿ ಕ್ರಮದಿ ಬಿಡದೆ ಸತ್ಯ ನುಡಿ ನುಡಿಮಹ ಪಡಿ ಪಡಿ ವಿಮಲ ಸನ್ಮಾರ್ಗದಿ ನಡಿ ನಡಿ ರಮಾರಮಣನ ಪಾದಕಮಲ್ಹಿಡಿ ಹಿಡಿ1 ಮಾನಾಪಮಾನ ಸಮ ತಿಳಿ ತಿಳಿ ನಿಜ ಸುಳಿ ಸುಳಿ ನಾನಾ ಕಲ್ಪನೆ ಕಳಿ ಕಳಿ ಸ್ಥಿರ ಧ್ಯಾನ ದಾಸರೊಳು ಹೊಳಿ ಹೊಳಿ ಹೀನ ಭವಾಂಬುಧಿಬಂಧ ಗೆಲಿ ಗೆಲಿ ಹರಿ ಅಮೃತ ಸದಾ ಮೆಲಿ ಮೆಲಿ 2 ಗಜಿಗಜಿ ಮಾಯ ಮುಸುಕು ತೆಗಿ ತೆಗಿ ನೀ ಕುಜನ ಕುಹಕಸಂಗ ಒಗಿ ಒಗಿ ಸುಜನ ಸುಸಂಗವ ಬಗಿ ಬಗಿ ಬಾಳು ಭಜನಾನಂದಕೆ ತಲೆದೂಗಿದೂಗಿ ಭಜಿಸಿ ಶ್ರೀರಾಮಪಾದ ಲಗಿಲಗಿ ಹಿಗ್ಗಿ ನಿಜಮುಕ್ತಿ ಸಾಮ್ರಾಜ್ಯದಿ ಜಿಗಿ ಜಿಗಿ 3
--------------
ರಾಮದಾಸರು
ಎಲೆ ಎಲೆ ಎಲೆ ಮುದಿಮೂಳಿ ನಿನ್ನ ಕಲ್ಮಷ ಇನ್ನು ತೊಳಿವಲ್ಲಿ ಪ ತಿಳಿಯದೆ ಸುಮ್ಮನೆ ಕಳಕೊಂಡಿ ವಯವೆಲ್ಲ ಸುಳ್ಳೆ ಸುಳ್ಳಿಗಾಗಿ ಹೋಗಿ ಮೃತ್ಯುಕೈಲಿ ಅ.ಪ ಹಿಡಿದಿದ್ದಿ ಸುಡುಗಾಡ ಪಥವ ಇನ್ನು ಬಿಡವಲ್ಲಿ ಮಾಯಮತವ ಹೆಡತಲೆಮೃತ್ಯು ನಾಳೆ ಅಡರಿ ಪಿಡಿದು ನಿನ್ನ ಕೆಡ ಕೆಡವಿ ಒದೆವಾಗ ಬಿಡಿಸೊರಾರವ್ವ 1 ಇನತು ನಾಚಿಕಿಲ್ಲ ರೋಗಿ ನೀನು ತಿಣಿತಿಣಿಕಾದಿ ಮುದಿಗೂಗಿ ಕನಿಕರಿಲ್ಲದೆ ಯಮನ ಠೊಣಪರ್ಹಿಡಿದು ನಿನ್ನ ಹೊಗೆರ್ಹೊಣಿಕಿಲ್ಹೇರುವಾಗ ನಿನಗ್ಯಾರೆ ಕಾಗಿ 2 ಹಣವೆಷ್ಟಿರಲು ನಿನ್ನದಲ್ಲ ನಾಳೆ ಮನೆಮಾರು ಬರದು ಹಿಂಬಲ ಮಣಿಕಟ್ಟೆಲವು ಮುರಿದ್ಹಣಿಯುವಾಗ ನಿನ್ನ ತನುಜನುಜರು ಯಾರು ಹಣಿಕ್ಹಾಕುವರಿಲ್ಲ 3 ಎಷ್ಟು ನಿನ್ನಗೆ ಬಡೆದಿದಮ್ಮಾ ನಿನ್ನ ಖೊಟ್ಟಿ ಕಡೆಯಿಲ್ಲಮ್ಮ ಉಟ್ಟ ಸೀರೆಯ ಬಿಡಿಸಿ ಕೊಂಡೊಯ್ದು ನಿನ್ನ ಸುಟ್ಟು ಸುರೆಹೊಯ್ವಾಗ ಆಟ ನೋಡಮ್ಮ 4 ಭಿನ್ನ ಭೇದಗಳನ್ನು ಕಡಿ ನಿನ್ನ ಒಡಲೊಳು ತಿಳಕೊಂಡುನೋಡಿ ಧನ್ಯ ಶ್ರೀರಾಮನ ಉನ್ನತ ಚರಣ ಇನ್ನಾದರು ಮನಮುಟ್ಟಿ ನೆನೆಕಂಡ್ಯ ಖೋಡಿ 5
--------------
ರಾಮದಾಸರು
ಎಲೆ ಜೀವನ್ಮುಕ್ತ ನೀನೆ ಬ್ರಹ್ಮವೆಂದು ಕಾಣೋಎಲೆ ಜೀವನ್ಮುಕ್ತ ನೀನೆ ಬ್ರಹ್ಮವೆಂದು ಕಾಣೋ ಪ ಭಾನುವ ನೋಡಲು ಒಳಕಂಡಿಯ ಹಂಗ್ಯಾಕೆನೀನು ನಿನ್ನರಿವುದಕೆ ಯೋಗಗಳ ಸಾಧನ ಬೇಕೆ 1 ನಳಿನ ಸಖನ ನೋಡುವುದಕೆ ಬೆಳಕನು ಕೋರಲುಬೇಕೆಬಲು ನಿನ್ನನು ಕಾಣುವುದಕೆ ಸಾಧಕರ ಸಾಧನ ಬೇಕೆ 2 ಯೋಗಗಳೆಂಬುವುದಿನ್ನು ಜೀವ ಭ್ರಾಂತಿಯೆನ್ನುಈಗಲು ಇತರರಿಲ್ಲೆನ್ನು ಚಿದಾನಂದ ಸದ್ಗುರು ತಾನೆ ಎನ್ನು 3
--------------
ಚಿದಾನಂದ ಅವಧೂತರು
ಎಲೆ ಮನ ಮುರಾರಿಯನು ಕೊಂಡಾಡು ಪ ಸಾಧನಕಿದು ಉಪಾಯ ನೋಡು ಅ.ಪ ಕಾಲನ ದೂತರ ಕಾಲಿಗೆ ಬಿದ್ದರೆ | ನಾಳೆಗೆ ನಿಲುವರೆ ನೋಡು 1 ಮಂದಿಯ ಮಾತಿಗೆ ಎಂದೆಂದು ಮರುಗದೆ | ಮುಂದಿನ ಗತಿ ನೀ ನೋಡು 2 ರಾಜೀವ ಮುಖಿಯರ ಸೋಜಿಗ ಮೆಚ್ಚದೆ | ವಿಜಯವಿಠಲನ ಪಾಡೋ3
--------------
ವಿಜಯದಾಸ
ಎಲೆ ಮನವೆ ಚಲಿಸದಿರು ಕಂಡಕಡೆಗೆ ನಿಲು ನೀನು ಸ್ಥಿರವಾಗಿ ಧ್ಯಾನ ಮಂಟಪದೊಳಗೆ ಪ ಕಲುಷಪೂರಿತವಾದ ಬಲೆಯ ದೂರಕೆ ದೂಡು ಒಲಿದು ರಕ್ಷಿಪುದೆಂದು ಜಲಜಾಕ್ಷನನು ಬೇಡು ಅ.ಪ ಆರು ಮಂತ್ರಿಗಳುಂಟು ಮೂರು ದುರ್ಗಗಳುಂಟು ಮೂರು ಮತ್ತೆರಡಶ್ವ ಸಹಿತ ನೀನು ದೂರ ದೂರದ ಸಿರಿಯ ತರುವೆ ನಾನೆಂದೆನುವೆ ಧೀರ ನೀನೇ ಎಂಬೆ ಮರುಳತನದಿಂದೆ 1 ನಡೆಯೆ ಸತ್ಪಥವೆಂಬೆ ನುಡಿಧರ್ಮವೆಂದೆಂಬೆ ಕುಡುಕನಂತತ್ತಿತ್ತ ಅಲೆಯುತಿರುವೆ ಸಿಡಿಲು ಬಡಿವುದ ಮರೆತು ದುಡುಕಿ ನಿರ್ದಯವಾಂತು ಕೆಡಬೇಡ ಮಾಂಗಿರಿಯ ಅಡಿವಿಡಿದು ಸುಖಿಯಾಗು2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಎಲೆ ಮನಸೆ ಎಲೆ ಮನಸೆ ಹರಿಪಾದ ನಂಬು ಸುಲಭ ಭಕ್ತರಿಗಾತ ಕೊಡುವ ನಿನಗಿಂಬು ಪ ಕುಲಹೀನನೆನಬೇಡ ಹಳಿದುಕೊಳ್ಳಲಿ ಬೇಡ ತಿಳಿಗೇಡಿಯೆನಬೇಡ ಕಳವಳಿಸಬೇಡ ಮಲಿನವೆಂದೆನಬೇಡ ಜಳಕ ಮಡಿಯೆನಬೇಡ ತಿಳಿದು ಭಜಿಪರ ಬೆಂಬಲನು ನಾನೆಂಬ 1 ವಿಪಿನ ಸೇರಲಿಬೇಡ ಕೌಪೀನ ಬೇಡ ಕಪಟಬುದ್ಧಿಯ ಬಿಟ್ಟು ಸಫಲ ಮಾನಸದಿಂದ ಆಪತ್ತು ಬಂಧುಯೆನೆ ಕೃಪೆಮಾಡ್ವ ಬಂದು 2 ದಾನಧರ್ಮವು ಬೇಡ ನಾನಾ ಕರ್ಮವು ಬೇಡ ಮೌನದೊಳಿರಬೇಡ ಏನುವ್ರತಬೇಡ ಧ್ಯಾನದಾಯಕ ಎನಗೆ ನೀನೆ ಗತಿಯೆಂದೆನಲು ದೀನದಯ ಶ್ರೀರಾಮ ಮಾಣದೆ ಕಾಯ್ವ 3
--------------
ರಾಮದಾಸರು
ಎಲೆ ಮನಾ ವ್ಯರ್ಥಗಳೆವರೇ ಜನುಮವನು | ನೆಲಿಯ ನಿನ್ನರುವದಾ ಹೊಲಬು ಮರೆದು ಪ ಇಳಿಯೊಳಗ ನರದೇಹದಲಿ ಜನಿಸಿ ಕೊಡುವದು | ಸುಲಭವಲ್ಲವೊ ಹೋದ ಬಳಿಕ ನಿನಗದು ಮುಂದ ಅ.ಪ ಮೇದಿನಿಯೊಳಗ ಮಿಗಿಲಾದ ಜನ್ಮದಿ ಬಂದು| ಐದಿದಾವರ್ಣ ಕರ್ಮಾಧರಿಸಿ ಮಾಡುತಲಿ | ಗೈದು ನಿತ್ಯಾನಿತ್ಯ ವೈದಿಕ ವಿಚಾರವನು | ಆದಿ ಪುರುಷನ ಕಾಂಬ ಹಾದಿ ಕೂಡಿ | ಖೇದವನು ಕುಡುವ ವಿವಾದ ಗುಣವನೆ ನೀಗಿ | ಮೋದದಲಿ ಶರಣ್ಹೊಕ್ಕು ಸಾಧು ಜನರನು ಸರಿಸಿ | ವೇದಾಂತ ಬ್ರಹ್ಮ ಸೂತ್ರಾದಿ ವಾಕ್ಯಾರ್ಥವನು 1 ಬೋಧೆಯಲಿ ಪಡೆದು ಜ್ಞಾನೋದಯ ಕಾಣದೆ ಭವ ಶರಧಿಯನು ಗೆಲಲಾಗಿ | ಶರಣ ಜನರಿಗೆ ತೆಪ್ಪ ಪರಿಯಂದಾತಾಗಿಹ | ಹರಿನಾಮವ ನೆನೆದು ಹರಿಧ್ಯಾನಗೈವುತಲಿ | ಹರುಷದಲಿ ಪದಿನಾರು ತೆರ ಪೂಜಿಸಿ | ಪರಮ ಸದ್ಭಾವದಲಿ ಗುರುಡಿಂಗರ ಮೇಳದಲಿ | ಭರದಿ ತಾಳದಂಡಿಗೆಯ ಕರದೊಳಗ ತಾ ಪಿಡಿದು | ಶರೀರ ಭಾವನೆ ಮರೆದು ಭರಿತ ಪ್ರೇಮಿತನಾಗಿ | ಇರಳು ಹಗಲು ಪಾಡುತಲಿ ಹರಿಭಕ್ತನಾಗದೇ 2 ವನಧಿಯೊಳು ಥೆರೆಸಂಗ ಧನುಮತದಿದೋರ್ವ | ಗುಳ್ಳಿಯ ಪರಿಸೇವೆಯೀತನು ವೆಂದು-ದರಿಯು | ಆನದೊಳಗ ಉತ್ಕ್ರಷ್ಟ ತನದಿ ಮೆರೆಸ್ಯಾಡುತಿಹ | ಕನಕದಧಿದೇವಿ ಕಿವಿಯನು ಬೀಸುವಾಗ | ಅಣುಗ ಕರಿಯಂತೆ ಅರಕ್ಷಣದವಳು ಯಂದು ಅತಿ | ಹೆಣಗುತಿಹ ಸಾಯಾಸವನೆ ತ್ಯಜಿಸಿ ತಾ ದೊರಕಿ | ಧನಿತದರಿಂತುಷ್ಟವನು ಕರಿಸಿ ದೃಢದಿಂದ | ಘನ ನಂಬು ಗುರು ಮಹಿಪತಿ ಚರಣ ಬಿಡದಂತೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಎಲೆ ಮಾನವಾ ಅಭಿಮಾನವಾ ಅವಿವೇಕವಾ ದೂಡೈ ಸುಖದುಃಖದಾ ಘನ ಮೂಲವಾ ಸುವಿವೇಕದೀ ನೋಡೈ ಪ ಪರರಿಂದ ಈ ಪರಿತಾಪವು ಬರುತಿರ್ಪುದೆಂಬುದಿದೋ ಬರಿ ಬ್ರಾಂತಿಯೋ ನಿಜವಲ್ಲವೋ ಅಲೋಚಿಸಿ ನೋಡೈ 1 ಗ್ರಹಕಾಲಗಳ್ ಘನ ಕರ್ಮಗಳ್ ಇವು ಕಾರಣಲ್ಲವಿದೋ ಮನವೇ ಇದೇ ಪರಿತಾಪದ ಘನಮೂಲವೈ ನೋಡೋ 2 ಸಟೆಯಾಗಿಹ ಸಂಸಾರವ ದಿಟವೆಂದು ತೋರ್ಪುದಿದೋ ಮನದಿಂದಲೇ ಇದು ಕಾಂಬುದೋ ಮನವಿಲ್ಲದಾಗಿಲ್ಲ 3 ಪರಮಾತ್ಮನ ಪರಿಪೂರ್ಣನ ಮರೆಮಾಡುತೀಮನವು ಹರಿದಾಡುತಾ ಸುಖದುಃಖವಾ ಗುಣಿಸುತ್ತ ತಾನಿಹುದೋ 4 ವನದಾಟಕೇ ಮರುಳಾಗದೇ ಗುರುಶಂಕರಾರ್ಯನಲಿ ಮನ ನಿಲ್ಲಿಸಿ ಈ ಮೋಹವಾ ಬಿಡು ಬೇಗ ನೀನೀಗ 5
--------------
ಶಂಕರಭಟ್ಟ ಅಗ್ನಿಹೋತ್ರಿ
ಎಲ್ಯಾಡಿ ನೀ ಬಂದ್ಯೋ ಹರಿ ಫುಲ್ಲಲೋಚನ ಕೃಷ್ಣ ಧ್ರುವ ಬಲಿ ಮಹಿಮರನೆಲ್ಲ ಸಂರಕ್ಷಿಸಿ ಮಲ್ಲದೈತ್ಯರ ಹಲ್ಲು ಮುರಿದು ನೀ ಬಂದ್ಯೊ 1 ಸುಗಮ ಸುಪಥದೋರಿ ನಿನ್ನ ಉಗಮ ಸಾರಿ ನೀ ಬಂದ್ಯೊ ನಗ ನೆಗಹಿ ನಿಂದು ಜಗದೋದ್ಧಾರವ ಮಾಡಿ ನೀ ಬಂದ್ಯೋ 2 ಶರಣ ರಕ್ಷಕನಾಗಿ ನಿನ್ನ ಕರುಣ ನೀ ಬೀರಿ ಬಂದ್ಯೋ ತರಳಗೊಲಿದು ಧÀರಿ ಮೂರಡಿಯೆನೆ ಮಾಡಿ ಪರಶುಧರನಾಗಿ ಆಡಿ ನೀ ಬಂದ್ಯೊ 3 ಮೊರೆಯ ಹೊಕ್ಕವರಿಗೆ ಪದ ಸ್ಥಿತವನಿತ್ತುನೀ ಬಂದ್ಯೊ ಸುರರ ಸ್ಥಾಪನೆ ಮಾಡಿ ತುರುಗಳ ಕಾಯಿದು ಪರ ನಾರೇರ ವ್ರತವಳಿದು ನೀ ಬಂದ್ಯೋ 4 ನೀನೆ ರಾವುತನಾಗಿ ನಿನ್ನ ಖೂನ ನೀ ದೋರಿ ಬಂದ್ಯೊ ದೀನ ಮಹಿಪತಿ ಸ್ವಾಮಿ ಭಾನುಕೋಟಿ ತೇಜ ನೀನೆ ನೀನಾಗೆನ್ನ ಹೊರಿಯಲು ಬಂದ್ಯೊ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎಲ್ಯಾಡಿ ಬಂದ್ಯೋ ಮುದ್ದು ರಂಗಯ್ಯಾ ನೀ - * ನೆಲ್ಯಾಡಿ ಬಂದ್ಯೋ ಎನ್ನ ಕಣ್ಣ ಮುಂದಾಡದೆ ಪ ಆಲಯದೊಳಗೆ ನೀನಾಡದೆ ಬೆಣ್ಣೆ ಪಾಲು ಸಕ್ಕರೆಯನೊಲ್ಲದೆ ಚಿಕ್ಕ ಬಾಲೇಯರೊಳು ನೀನಾಡದೆ ಬಾಲಯ್ಯ ನೀಯೆನ್ನ ಕಣ್ಣ ಮುಂದಾಡದೆ 1 ಬಿಟ್ಟ ಮುತ್ತಿನ ಬೊಗಸೆ ಕಂಗಳು ಫಣಿಯೊಳಿಟ್ಟ ಕಸ್ತೂರಿ ತಿಲಕ ಗಂಧವು ದಿಟ್ಟತನದಿ ಬರುವ ಅಂದವು ಮುದ್ದು ಕೃಷ್ಣ ನೀಯೆನ್ನ ಕಣ್ಣ ಮುಂದಾಡದೆ 2 ಅಷ್ಟದಿಕ್ಕಲಿ ಅರಸಿ ಕಾಣದೆ ಬಾಳ ದೃಷ್ಟಿಗೆಟ್ಟೆನೊ ನಿನ್ನ ನೋಡದೆ - ನ್ನೆಷ್ಟು ಪೇಳಲಿ ಹೇಳಬಾರದೆ ಶ್ರೀದ - ವಿಠಲ ನೀಯೆನ್ನ ಕಣ್ಣ ಮುಂದಾಡದೆ 3
--------------
ಶ್ರೀದವಿಠಲರು
ಎಲ್ಲ ದೇವರ ಗಂಡ | ಕೃಷ್ಣ ಚಿಲ್ಲರೆ ದೈವರ ಮಿಂಡ ಪ ಪಾದದಿ ನದಿಯನು ಪೆತ್ತ | ಅದನು ರುದ್ರನು ಶಿರದಲಿ ಪೊತ್ತ ಮಾಧವನ್ಹೊಕ್ಕಳ ಜಾತ | ಶತ ಮೋದನು ಲೋಕ ಪ್ರಖ್ಯಾತ 1 ಸೃಷ್ಟಿ ಸಂಹಾರಗೈದ | ಪರ ಮೇಷ್ಟಿ ರುದ್ರರನಾಳ್ದ ಯೆಟ್ಟ ದೈತ್ಯರ ಶಿರ ಮುರಿದ | ದುರಿತ- ದೃಷ್ಟಿಸಿ ನಾಶಗೈದ 2 ಬಂಟರ ಪಾಲಕನೀತ | ವೈ- ಕುಂಠದ ಒಡೆಯನು ದಾತ ತುಂಟರ ಮಡಹುವ ಸತತ | ನಮಗೆ ನಂಟನು ಗೋಕುಲನಾಥ 3 ಮನಸಿಗೆ ಬಂದುದು ಸಿದ್ಧ | ಪ್ರತಿ ಯೆಣಿಸುವ ಜೀವನೆ ಬದ್ಧ ನೆನೆಸುವರಲಿ ತಾನಿದ್ದ | ದಯ ವನಧಿಯು ಬೆಣ್ಣೆಯ | ಕದ್ದ 4 ಭಂಗ | ತಾ ನಿರುತ ಮಾಡುವ ರಂಗ ಜಯೇಶವಿಠಲ ತುಂಗ | ಮಹಿ ಮಾ ರಕ್ಷಿಸು ದಯಾಪಾಂಗ
--------------
ಜಯೇಶವಿಠಲ