ಒಟ್ಟು 49258 ಕಡೆಗಳಲ್ಲಿ , 138 ದಾಸರು , 11863 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಏನೆ ಯಶೋದೆ ಇದು ಏನೆ ಯಶೋದೆ ದಧಿಯ ದಾಮೋದರ ಹೆದರಿಕಿಲ್ಲದೆ ಕುಡಿದೋಡಿ ತಾ ಪೋದ ಪ ಕೊಳಲನೂದುತಲೆ ಆಕಳನೆ ಕಾಯುತಲ್ಹೋಗಿ ಕಳಲ ಗಡಿಗೆಸುತ್ತ ಕುಣಿದಾಡುವುದು 1 ವತ್ಸಕಾಯುತ ವನದೊಳಗೆ ಆಡೆಂದರೆ ಕಿಚ್ಚುನುಂಗಿ ಸರ್ಪವ ತುಳಿಯುವುದು 2 ಚೆಂಡನಾಡುತ ತುರುವ್ಹಿಂಡು ಕಾಯೆಂದರೆ ಗಂಡನುಳ್ಳವರ್ಹಿಂದ್ಹಿಂದೆ ತಿರುಗುವುದು 3 ವಛ(ತ್ಸ?) ನಂದದಲಿ ಬಾಯ್ ಹಚ್ಚ ಗೋವಿನ ಕ್ಷೀರ ಅಷ್ಟು ಕುಡಿದನಾಶ್ಚರ್ಯ ನೋಡಮ್ಮ 4 ಇಂದೆನ್ನ ಮನೆಯಲ್ಲೊಂದಿಷ್ಟು ಕ್ಷೀರಗಳಿಲ್ಲ ಗಂಡ(ಅ?) ತಿ ದುಷ್ಟೆನ್ನ ಕೊಲ್ಲುವನಮ್ಮ 5 ಮೌನಗೌರಿಯ ನೋತು ನೀರೊಳಗಿದ್ದೆವೆ ಮಾನಹೀನರ ಮಾಡಿ ಮರವನೇರುವುದು 6 ಬಟ್ಟೆ ನೀಡೆಂದಾಲ್ಪರಿಯಲು ಜೋಡಿಸಿ ನಿಮ್ಹಸ್ತ ಮುಗಿ(ಯಿ) ರೆಂದಾಡುವುದು7 ಬುದ್ಧಿಹೇಳೆಂದರೆ ಮುದ್ದು ಮಾಡುವರೇನೊ ಕದ್ದು ಬಂದರೆ ಕಾಲು ಕಟ್ಟಿ ಹಾಕಮ್ಮ 8 ದಧಿ ಬೆಣ್ಣೆ ಚಂದ್ರನಂತ್ಹೊಕ್ಕು ತಾ ತಿಂದ ನೋಡಮ್ಮ 9 ಕೇರಿ ಮಕ್ಕಳ ನೋಡೊ ಮಹರಾಯ ಬಲರಾಮ ದೊಡ್ಡಮಗನು ಎಲ್ಲೆ ದೊರಕಿದನಮ್ಮ 10 ಮೀಸಲ್ಹಾಕಿದ ಬೆಣ್ಣೆ ನೀ ಸವಿದೀಯೆಂದು ಲೇಸಾಗಿ ಹೇಳೆ ಭೀಮೇಶಕೃಷ್ಣನಿಗೆ11
--------------
ಹರಪನಹಳ್ಳಿಭೀಮವ್ವ
ಇದು ಏನೊ ನಿನ್ನ ಮತೀ ಮತೀ | ಇದರಿಂದಾಗದು ಗತೀ ಗತೀ ಪ ಸತಿ ಸುತರಿಂದಲಿ ಗತಿಯನ್ನು ಪಡೆದ ಕೇಳ ಬಲ್ಲೆಯಾ ಕಥೀ ಕಥೀ1 ಸಂಚಿತ ಪ್ರಾರಬ್ಧ ಕ್ರಿಯಮಾಣಾ | ತೀರಲಿಲ್ಲವೋ ಮಿತೀ ಮಿತೀ | ಪಂಚ ದಶಾಕ್ಷರೀ ಮಂತ್ರವ ಜಪಿಸಲು | ನೀ ಪರಶಿವನೆಂಬುದೋ ಶ್ರುತೀ ಶ್ರುತೀ 2 ಮೂರ್ತಿ ಭವತಾರಕ ದೇವನ | ಪೂಜಿಸಿ ಮಾಡೊ ಸ್ತುತೀ ಸ್ತುತೀ | ಅರಿಯದಿರ್ದರರ್ಚಕರನು ಸೇವಿಸಿ |ಆಗು ನೀ ಭೂಪತೀ ಭೂಪತೀ 3
--------------
ಭಾವತರಕರು
ಇದು ಏನೋ ನಿನ್ನ ಗುಡೀ ಗುಡೀ |ಒಳಗಿನ ಕಸವನು ಹೊಡೀ ಹೊಡೀ ಪ ಹಗಲಿರುಳೊ ನೀ ಬದುಕ ಮಾಡಿ |ಏನು ಗಳಿಸಿದ್ಯೋ ಹುಡೀ ಹುಡೀ ||ಜಗದೊಳು ದೇವನ ತಿಳಿಯಲೊಲ್ಲಿ |ತಿಳಿದೀತೊ ಅಲ್ಲಿಗೆ ನಡೀ ನಡೀ 1 ಹಸಿದು ಬಂದು ನೀ ವಸ್ತಿಯಾಗಿಳಿದರೆ |ಮತ್ತೇನಾರ ಕೊಡೂ ಕೊಡೂ ||ಅಸ್ತಮಯಾದಿತು ಉದಯದಲೆದ್ದು |ತಪ್ಪದೆ ಇಲ್ಲೆಂಬೊ ನುಡೀ ನುಡೀ 2 ನಾಕು ಕಾಯದೊಳು ಎರಡಿಟ್ಟನು ನೀ |ಎರಡನೆ ದೇವರಿಗೊಡೀ ಒಡೀ ||ಲೋಕಪಾಲಕ ಭವತಾರಕನಂಘ್ರಿಯ |ಈ ಕಾಯದಿ ದಯಾ ಪಡೀ ಪಡೀ 3
--------------
ಭಾವತರಕರು
ಇಂದು ಕಂಡೆ ಕಣ್ಣಾರೆ ನನ್ನ ಸ್ವಾಮಿಯ ಬಂದ ಜನ್ಮಸಾಫಲ್ಯವಾಯಿತೀಗ ಧ್ರುವ ಮುಂಬಿಗಾಗ್ಯಾವೆನ್ನೊಳು ಸುಉಲ್ಹಾಸ ಅಂಬುಜಾಕ್ಷನ ಕಂಡೆ ಸುಪ್ರಕಾಶ ತುಂಬಿತುಳುಕುತಲ್ಯದ ಬಲುಹರುಷ ಇಂಬುಸಾಲದು ಬ್ರಹ್ಮಾಂಡ ಆಕಾಶ 1 ಎನ್ನಹೃದಯ ಮಂದಿರದೊಳು ನೋಡಿ ತನ್ನಿಂದ ತಾಂ ಬಂದನು ದಯಮಾಡಿ ಕಣ್ಣುಪಾರಣೆಗೈಸಿದೆನ್ನ ಕೂಡಿ ಇನ್ನು ದಣಿಯದೆನ್ನಮನ ಕೊಂಡಾಡಿ 2 ಘನ ಸುಖದೋರುತದೆ ಎನಗಿಂದು ಭಾನುಕೋಟಿ ಉದಯವಾದನೆಂದು ದೀನ ಮಹಿಪತಿಸ್ವಾ,ಮಿ ಕೃಪಾಸಿಂಧು ಮನೋಹರ ಮಾಡಿದ ತಾನೆ ಬಂದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ಕಂಡೆ ಚರಣಾ ಶ್ರೀಕೃಷ್ಣನಾ ಪ ಕೊಳಲ ದ್ವನಿಗೈದನಾ ಚಲುವಿಗೆ ಗೆದ್ದ ಕಾವನಾ 1 ಹೆಡೆಯಲಿ ಕಾಳಿಂಗನಾ ಒಡನೆ ಕುಣಿದ ರಂಗನಾ 2 ಗೋವರ್ಧ ನೆತ್ತಿದನಾ ಗೋವಳಕ ಕಾಯದನಾ 3 ಬಾಲಕ ಲೀಲಾ ಲೋಲನಾ ಮೂರುಲೋಕ ಜೀವನ ಪಾಲನಾ 4 ಮಹಿಪತಿ ನಂದನ ಜೀವನಾ ಸಹಕಾರಿ ಪಾವನ್ನನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದು ಕಂಡೆ ನಾ ಇಂದಿರಾಪತಿ ತಂದೆ ತಾಯಿ ಗೋವಿಂದನ ಬಂಧು ಬಳಗೆನಗೆಂದು ನಾ ನಂದ ಕಂದ ಮುಕುಂದನ 1 ಕಾಮಪೂರಿತ ಕಂಜಲೋಚನ ಸ್ವಾಮಿ ಕಾವನೈಯನ ಸಾಮಗಾಯನ ಪ್ರಿಯನ ಸೋಮಶೇಖರ ಧ್ಯೇಯನ 2 ಸಾನುಕೂಲ ಸಕಲಕ ಸಾಧನ ಭಾನುಕೋಟಿ ಪ್ರಕಾಶನ ಜ್ಞಾನಗಮ್ಯ ವಿನಾಶನ ದೀನ ಮಹಿಪತಿ ಈಶನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ಕಂಡೆನಾನು | ಶಂಕರನಾ | ನಿಂದಿಹ ಕೋಟೇಶ್ವರನಾ ಪ ಅವದುಂಬರ ಮುನಿಯಾ | ತಾಪಕೊಲಿದು ತಾವದಗಿದೇ ನಡೆತಂದು 1 ಕೃಷ್ಣ ವೇಣಿಯಾ ಮಧ್ಯಾ ಜಲದೊಳಗ | ವಿಷ್ಣು ಸಹಿತ ಸಲುವನೀಗ 2 ವರ ಶೂರ್ಪಾಲಯದೀ | ತಾಮೆರೆವಾ | ಗುರುಮಹಿಪತಿ ಸುತ ಜೀವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಇಂದು ಕಂಡೆನು ಹರಿಯ | ಭವಹಾರಿಯ ಇಂದು ಕಂಡೆನು ಕಂಬದಿಂದಲಿ ಪ ಬಂದು ದೈತ್ಯನ ಕೊಂದು ಕಂದನಿ- ಗಂದು ಒಲಿದಾನಂದ ಸಾಂದ್ರನ ಇಂದಿರಾ ಮಂದಿರನ ವಂದ್ಯನ ಅ.ಪ. ಎಂದಿನಂದದಿ ಬರುತ | ಮನದಲಿ ಶ್ರೀ ಮು- ಕುಂದ ನಾಮವ ನೆನೆಯುತ ಮುಂದು ಮುಂದಕೆ ನಡೆಯುತ | ಆ- ನಂದದಿ ಹೋಗುತಲಿರೆ ಸುಂದರಿ ಶ್ರೀ ತುಲಸಿಗೊಲಿದು ಬೃಂದೆಯನು ಕರವಿಡಿದು ಪೊಳೆದು ಬಂದು ಗಂಡಕಿಯಿಂದ ಭಕ್ತರ ವೃಂದ ಪೊರೆಯಲು ಪಥದಿ ನಿಂದನ1 ಸುಕೃತ | ಬಂದೊದಗಿತೊ ಶ್ರೀಶನೆನಗೆ ದೊರೆತ | ಪ್ರಭಾವದೆ ದುರಿತ | ರಾಶಿಯು ಇನ್ನು ದಾಸರಾಯರ ಕುಲದಿ ಜನಿಸಿದ ಕೂಸೆನುತ ದೇಸಿಗರ ಸೇವೆಗೆ ಮೀಸಲಾಗಿಸಲೋಸುಗೆನ್ನ ಮ- ಹಾಶಯವ ಲೇಸೆನಿಸಿ ಬಂದವ 2 ವಿಕಳ ತತಿಗೆ ಬಾಧಕ | ಈತನ ನಾಮ ಪ್ರಕಟಿಸಲಿನ್ನು ಸುಖ | ಪಾಲಿಸುವನು ಯುಕುತಿಗೆಂದಿಗು ನಿಲುಕ | ಸುಕೃತರಿಂದ ಭಕುತಿ ಸೇವೆಯನೊಂದೆ ಕೊಳ್ಳುವ ಭಕುತಿ ಮುಕುತಿಗಳನ್ನು ಕೊಡುವ ಸಕಲ ಕಾಲದಿ ನಿಂತು ಸಲಹುವ ಲಕುಮಿಕಾಂತನ ಸರ್ವ ಶಕ್ತನ 3
--------------
ಲಕ್ಷ್ಮೀನಾರಯಣರಾಯರು
ಇಂದು ಕಣ್ಣಿಲೆ ಕಂಡಿತು ಧ್ರುವ ಆಯಿತು ವಸ್ತು ಒಂದು ಕಣ್ಣಿಗೆ ಕಣ್ಣು ಕಾಣಬಂದು ಕಾಣಿಸಿ ನಿಜಪುಣ್ಯಗೈಸಿತು ಎನಗಿಂದು 1 ಹೊಳೆಯುತಿಹ್ಯದು ನಿಜಘನ ನೋಡಲಿಕ್ಕಾಯಿತುನ್ಮನ 2 ಕಣ್ಣುಗುರುತಾದ ಪೂರ್ಣಗುರುಬೋಧ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದು ಕಲಿಗಾಲದ ಮಹಿಮೆಯ ಗುಟ್ಟು ಮುದಿತನ ಬಂದರೆ ಮಾಯದ ಪೆಟ್ಟು ಪ ವಿಧವೆಯಾದರೆ ತಲೆಯ ಮೇಲ್ಮೊಟ್ಟು ವಿಧುರನಾಗೆ ದುರ್ನೀತಿಯ ಕಟ್ಟು ಅ.ಪ ಕುರುಡನಾದರೆ ಅಣಕದ ಬಾಳು ಅರೆಕಿವುಡಗೆ ಬೈಗುಳ ಕೂಳು ನರಳಿದರೆ ಸಾಯಲಿಲ್ಲವೆಂಬ ಗೀಳು ಕೊರಗಿ ಕಣ್ಣೀರನು ಸುರಿಸುವ ಗೋಳು 1 ಇತ್ತಬಾರದಿರು ಎಂಬರು ಕೆಲರು ಅತ್ತಲೆ ಹೋಗು ಹೋಗೆಂಬರು ಕೆಲರು ಎತ್ತಹೋದರೂ ಬಂದುದೇಕೆಂಬರು ತುತ್ತೊಂದಾದರೂ ಸಿಗದೆಂಬುವರು 2 ಹದ್ದುಹದ್ದೆಂಬುವ ಬಿರುನುಡಿಯಿಂದ ಒದ್ದೋಡಿಸುವಳು ಸೊಸೆ ಮನೆಯಿಂದ ಕದ್ದೋಡುವನು ಮಗ ಭಯದಿಂದ ಮದ್ದುಕೊಡಯ್ಯ ಮಾಂಗಿರಿಯ ಗೋವಿಂದ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಇಂದು ಕಾಯಲಾ ಭಕ್ತವತ್ಸಲಾ ಬಂದು ಒದಗಿ ನಿಂದು ಭಯವ ದೂರ ಮಾಡಲಾ ಧ್ರುವ ಮೊರಿಯು ಕೇಳೆಲಾ ಹರಿಯು ನಿಶ್ಚಲಾ ದುರಿತ ಹರಿಸೆಲಾ 1 ಸುಳವದೋರಲಾ ಹೊಳೆದು ವಿಠ್ಠಲಾ ಖಳರ ಕೈಯ ಸೆಳೆದುಕೊಂಡು ಬಲೆಯ ಬಿಡಿಸೆಲಾ 2 ಬಂಧುಬಳಗ ದೈವ ಕುಲಕೋಟಿ ನೀನೆಲಾ3 ಹಿಂದೆ ಶರಣರ ಬಂದು ಕಾಯ್ದೆಲಾ ಸಂದು ವಿಘ್ನದೊಳು ಬಂದು ರಕ್ಷಿಸಿದೆಲಾ 4 ಅಂದು ಒದಗಿ ನೀ ಬಂದ ಪರಿಯಲಾ ಇಂದು ಅಭಿಮಾನ ಕಾವ ಬಿರುದು ನಿನ್ನದಲ್ಲಾ 5 ದಾತ ನೀನೆಲಾ ಅಣುಗ ನಿನ್ನ ದಾಸನೆಂದು ಪ್ರಾಣನುಳುಹೆಲಾ 6 ಪುಣ್ಯಪ್ರಭೆಯಿಂದಾ ಕಣ್ಣುದೆರಿಯಲಾ ಧನ್ಯಗೈಸಿ ಮಹಿಪತಿ ಮಾತ ಮನ್ನಿಸೆಲಾ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದು ಗುರುಪೂಜಿ ಮಾಡುವ ನಿಂದು ಮನದೊಳು ಹರುಷಪಡುವ ಧ್ರುವ ತಂದೆ ಸದ್ಗುರುಸೇವೆ ಮಾಡುವ ಬಂದ ಜನ್ಮದ ಹಾದಿ ಬಿಡುವ ಪಥ ಬ್ಯಾಗೆ ಹಿಡುವ ಹೊಂದಿ ಸದ್ಗತಿ ಮುಕ್ತಿ ಕೊಡುವ 1 ಬಂದು ಸಾರ್ಥಕ ಮಾಡುವ ಪಾದ ನೋಡುವ ತಂದು ರತಿಪ್ರೇಮ ನೀಡುವ ಒಂದು ನಾಮ ನಿಶ್ಚಯವಿಡುವ 2 ಒಂದು ಮನದಿ ಪೂಜಿಮಾಡುವ ಎಂದು ಬಿಡದೆ ನಾಮವ ಕೊಂಡಾಡುವ ಇಂದು ನಲಿನಲಿದಾಡುವ ಕಂದ ಮಹಿಪತಿಸ್ವಾಮಿ ನೋಡುವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದು ಥರವೇ ಥರವೇ ದೇವಾ ಥರವೇ ನಿನ್ನವರ ವಂಚಿಸಿ ನೀ ಮರೆಯಲ್ಲಿ ಇರುವುದು ಥರವೆ ಪ. ಪರಿಪರಿಯಲಿ ಸ್ತುತಿಗೈಯುತಲಿ ನಿನ್ನ ಪರಮ ಮಂಗಳ ಪಾದಗಾಣದೆ ಮರುಗುತಿರುವಾ ವರ ಭಕುತರಿಗೆ ಕರುಣದೋರದೆ ಇರುವೆ ವೆಂಕಟ ಅ.ಪ. ಅಜಭವಾದಿಗಳು ಸ್ತುತಿಸಿ ಪೂಜಿಸಿದ ಪಾದ ತ್ರಿಜಗವಂದಿತ ಕೃಷ್ಣ ನಿನ್ನಪಾದ ಭಜನೆಯನು ಮಾಡುತ ನಿನ್ನ ತ್ಯಜಿಸದನುದಿನ ಸುಜನರೆಲ್ಲರು ಸ್ತುತಿಸಿ ಪಾಡುತಿರೇ ತ್ರಿಜಗ ಪೂಜಿತನಾಗಿ ಭಕುತರ ಭಜನೆ ನಿನಗರಿವಿಲ್ಲೇ ದೇವನೆ ಸ್ವಜನರನು ಪಾಲಿಸುವ ಬಿರುದನು ತ್ಯಜಿಸುವರೆ ಸಿರಿಯರಸ ವೆಂಕಟ 1 ಮಚ್ಛಕೂರ್ಮವರಾಹನಾಗಿ ದೈತ್ಯರ ಸ್ವಚ್ಛಭಕುತರ ಸಲಹೆ ಸಂಹರಿಸಿ ಅಚ್ಛಪ್ರಲ್ಹಾದನಿಗೊಲಿದ ನರಹರಿಯಾಗಿ ಅಚ್ಛವಾಮನನಾಗಿ ಬಲಿಯತಲೆಯತುಳಿದು ಸ್ವಚ್ಛಗಂಗೆಯ ಇಂಬಿಡದೇ ದುಷ್ಟ ರಾಜರನಳಿದ ಭಾರ್ಗವ ದುಷ್ಟ ತಾಟಕಿ ಸಂಹರಿಸಿದನೆ ಕೃಷ್ಣರೂಪದಿ ಗೋಪೆರಿಗ್ವಲಿದನೆ ಉತ್ಕøಷ್ಟ ಬೌದ್ಧ ಕಲ್ಕಿ ವೆಂಕಟ 2 ಪರಮಪುರುಷ ಬಾ ವರದ ಮೂರುತಿ ಬಾ ಪರಿಪರಿ ಸ್ತುತಿಸಿ ವಂದಿಪೆ ಸಿರಿವರದ ಬಾ ಶರಧಿಶಯನ ನಿನ್ನ ಚರಣ ಸ್ಮರಣೆಯೀಯೆ ಶರಣಾಗತ ರಕ್ಷಾಮಣಿ ಬೇಗ ಬಾ ಸಿರಿಗೆ ಪೇಳದೆ ಬಂದು ಕರಿಯ ಪೊರೆದ ದೊರೆ ಶ್ರೀ ಶ್ರೀನಿವಾಸ ಬಾ ಗರುಡ ಗಮನನೆ ಶರಣಜನರನು ಮರೆಯದಲಿ ನೀ ಕರುಣ ವೆಂಕಟ 3
--------------
ಸರಸ್ವತಿ ಬಾಯಿ
ಇಂದು ದಯದಿ ಸಂದರ್ಶನವಿತ್ತೆಯಾ ಇಂದಿರಾಧವಾ ದೇವಾ ಪ ಸುಂದರಾಂಗ ರಂಗ ಮುಂದೆ ಬಂದುನಿಂದೆ ಬೆಳಕಿನೊಳ್ ನಭದೆ ಅ.ಪ ವಿಭವದಿರ ರಥದಿ ಹಿತದಿ ಶುಭದ ಶ್ರೀಭೂನೀಳಾಸಹಿತ ಆಭಯವ ನೀಯುತಾ ನಾಥಾ 1 ಭಕ್ತ ಬೃಂದ ಗೈವ ಸೇವೆಯಾ ಸಕ್ತಿಯಂ ಪಡೆದು ದೃಢದಿ ನಿತ್ಯಗಾರುಡ ಸೂರ್ಯಮಂಡಲ ಡೊಲೊತ್ಸವದಿ2 ಮುದಗೆರೆರಂಗ ವೊರಿದಗೆನಗೆ ಮಹಿಮೆತೋರುತಾ ನಿರುತ ಪೊರೆವುದು ಜಾಜೀನಾಥ 3
--------------
ಶಾಮಶರ್ಮರು
ಇಂದು ಧನ್ಯನಾ ಪ ಇಂದು ಧನ್ಯನ ಇಂದಿರೇಶನಾ| ಇಂದುವದನವ ಕಂಡೇನಾ| ಕಂದರೊಳಗುದ್ಧಂಡನಾ| ಬಂದು ಪಾಲ್ಬೆಣ್ಣೆ ಉಂಡನಾ 1 ಅರ್ನವೊಪಮ ವರ್ಣಕಾಯಸು| ವಾಹನ ಕರುಣನಾ| ನಿರ್ನಸುವರಣ ನಿಪುಣನಾ| ಸ್ವರ್ಣವಸನಾ ವಿರ್ಣನಾ 2 ಮಹಿಯ ಭಾರವನಿಳುಹಲೋಸುಗ|ದಯ| ಗೃಹದೊಳಗ ತಾಬೆಳೆದನಾ| ಇಹಪರ ಜನ ಹೊರೆದನಾ| ಮಹಿಪತಿಸುತ ವರದನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು