ಒಟ್ಟು 2071 ಕಡೆಗಳಲ್ಲಿ , 111 ದಾಸರು , 1592 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಕನೀತಿ ಮನವೇ ನೀ ಭಜಿಸು| ರಾಮನಾಮವನು ಘನ ಮುಕ್ತಿಸಾಧನೆ | ಪಾದನಾಮವನು ಪ ಅಂದದ ನಾಮ| ಚಂದದ ನಾಮ|| ವಂದಿಸೆ ಮನಕಾ| ನಂದದ ನಾಮ 1 ಕೋಮಲ ನಾಮ| ನಿರ್ಮಲ ನಾಮ| ಕಾಮಿತವೀವ ಸು| ಪ್ರೇಮದ ನಾಮ 2 ಪಾವನ ನಾಮ| ಶ್ರೀವರ ನಾಮ|| ಪವನಸಂಜಾತನು ಸ್ಮರಿಸುವ | ನಾಮ 3 ಅಗಣಿತ ಮಹಿಮ|| ಜಗದಭಿರಾಮನ | ಘನಗುಣ ನಾಮ 4 ಭಕ್ತಾದಿ ಜನರು| ಭಜಿಸುವ ನಾಮ| ಮುಕ್ತಿಸಾಧನವಾದ| ಭಕ್ತಿಯ ನಾಮ 5
--------------
ವೆಂಕಟ್‍ರಾವ್
ಲೋಕನೀತಿಯ ಹಾಡುಗಳು ಆರು ಹಿತರಾದಾರು ಈ ವಿಶ್ವದೊಳಗೆ ಕೃತಿ ಹೊರತು ಪ ಪಿತನಲ್ಲ ಸುತನಲ್ಲ ರತಿಯಲ್ಲ ಸುತೆಯಲ್ಲ ಅತಿ ಪ್ರೀತಿಯಿಂ ಪೊರೆದ ನಿಜಮಾತೆಯಲ್ಲಾ ಸುತನಪೇಕ್ಷಿಸಿ ಹೆದರಿ ಅಜಮಿಳನು ಕರೆಯಲ್ಕೆ ಪತಿತ ಪಾವನ ಹರಿಯ ನಾಮ ಹಿತವಾಯ್ತು 1 ಧನವಲ್ಲ ಸಿರಿಯಲ್ಲ ಬಹು ಬೆಳೆದ ಮೈಯಲ್ಲ ಹಣ ರಾಶಿ ಗಳಿಸುವ ದುರ್ಬುದ್ಧಿಯಲ್ಲ ಮನ ಮತ್ಸರಗಳಲ್ಲ ಕಾಮಕ್ರೋಧಗಳಲ್ಲ ತನುವಲ್ಲ ಡಂಬರದ ವೇದಾಂತವಲ್ಲ2 ತರಳನಾಗಿಹ ಧೃವಗೆ ತರುಣ ಪ್ರಲ್ಹಾದನಿಗೆ ಕರಿರಾಜ ಹನುಮಾದಿ ನಿಜ ಭಕ್ತರಿಂಗೇ ವರಧರ್ಮ ಪುತ್ರನಿಗೆ ಮಧ್ಯ ಪಾಂಡವನಿಗೇ ಪರಮ ಪತಿವ್ರತಾ ರಮಣಿ ದ್ರೌಪದಿಗೇ 3 ಧರಣಿಯನು ಹೊತ್ತಿರುವ ಆದಿಶೇಷಗೆ ಮತ್ತೆ ನಿರುತವೂ ಭಜಿಸಿದ ಪರಮ ದಾಸರಿಗೆ ಸಿರಿಯರಸ ಶ್ರೀಹರಿಯ ಭಜನೆಯೊಂದುಳಿದು 4 ಜನ್ಮಬಂಧವ ನೀಗಿ ಪರಮ ಪದವಿಯ ಕೊಡುವ ಸನ್ನುತವು ನಿಜ ಸೌಖ್ಯವನ್ನು ಕರುಣಿಸುವ ಪ್ರಾಣಿಯಲಿ ಆತ್ಮನಲಿ ಶ್ರಧ್ಧೆ ಹುಟ್ಟಿಸುವಂಥ ಚನ್ನಕೇಶವ ಸ್ವಾಮಿ ಭಕ್ತಿಯೊಂದುಳಿದು 5
--------------
ಕರ್ಕಿ ಕೇಶವದಾಸ
ಲೋಕೈಕ ಬಂಧು ಹೇ ದಯಾಸಿಂಧು ಜೋಕೆಮಾಡಭವ ನೀನೆನ್ನೊಳು ನಿಂದು ಪ ಹೇಯಪ್ರಪಂಚದ ಮಾಯಾಮೋಹದಿ ಎನ್ನ ಕಾವದೇವರು ನೀನೆ ಕೈಯ ಪಿಡಿದು ಸಲಹೊ 1 ದಿವನಿಶಿ ಬಿಡದೊಂದೇಸಮನೆ ಬೆನ್ನ್ಹತ್ತಿ ಮಾಯ ಕವಿದು ವಿಧವಿಧದೆನ್ನ ಸುವಿಚಾರ ಮರೆಸಿ ಭವಭವದೊಳಗೆಳಸಿ ಭವಿಯೆಂದೆನಿಸಿ ಕೆಟ್ಟ ಜವನಿಗೀಡೆನಿಸುವ ಭವಮಾಲೆ ಗೆಲಿಸು 2 ಘನದು:ಖಮಯವಾದ ಜನನಮರಣಬಾಧೆ ರಿಣಭಾದೆ ತನುಭಾದೆಯನು ಪರಿಹರಿಸಿ ತನುತ್ರಯದಲಿ ನಿನ್ನ ನೆನೆವೆನಗೆ ಪಾಲಿಸು ಕನಿಕರದಿಂ ಕಾಯೊ ಜನಕ ಶ್ರೀರಾಮ ಪ್ರಭು 3
--------------
ರಾಮದಾಸರು
ಲೋಭಿಯು ಬೇಡಲು ಲಾಭವೇನಿರುವುದು ನಾಭಿಯು ಒಣಗುವುದು ಪ ಲೋಭಿಗೆ ಧನದಿಂದ ಶೋಭೆಯುಂಟೆ ಮನ ಕ್ಷೋಭೆಯಲ್ಲದೆ ಸತತ | ತನ್ನಯ ಮನಕ್ಷೋಭೆಯಲ್ಲದೆ ಸತತ ಅ.ಪ ನೂರು ಛಿದ್ರಗಳಲ್ಲಿ ತೋರುತಿದ್ದರು ದೇಹ ಕೋರನು ನವವಸನ | ಏನೆಂದು ಕೋರನು ನವವಸನ ಮೂರು ಕಾಸಿಗೆರಡು ಮಾರುತಿದ್ದರು ಅದ ದೂರದಿ ತ್ಯಜಿಸುವನು | ನೂತÀನವಸ್ತ್ರ ದೂರದಿ ತ್ಯಜಿಸುವನು 1 ಬಂಧು ಜನರು ತನ್ನ ಮಂದಿರಕ್ಕಿಳಿಯಲು ನೊಂದುಕೊಳ್ಳುವ ಮನದಿ | ತತ್ತಳಿಸುತ ನೊಂದುಕೊಳ್ಳುವ ಮನದಿ ತೊಂದರೆಗಳ ಪೊಂದಿಹೆನೆನ್ನುತ ಮುಂದಕೆ ಸಾಗಿಸುವ | ಬಂದವರನು ಮುಂದಕೆ ಸಾಗಿಸುವ 2 ಮುಗ್ಗಿದ ಧವಸವು ಅಗ್ಗÀದಿ ಮಾರಲು ಹಿಗ್ಗುತ ಕೊಳ್ಳುವನು | ಸೊಗಸಿನಲಿ ಹಿಗ್ಗುವನು ಒಗ್ಗಿಹುದೆನ್ನುತ ನುಗ್ಗಿಸಿ ಉದರದಿ ಸಗ್ಗದೆ ನಡೆಯುವನು | ಪರನುಡಿಗೆ ಸಗ್ಗದೆ ನಡೆಯುವನು 3 ಹಣದಲಿ ಲೋಭಕೆ ಕೊನೆ ಮೊದಲಿಲ್ಲದೆ ಒಣಗಿಸುವನು ತನುವ | ಕಾರ್ಪಣ್ಯದಿ ಒಣಗಿಸುವನು ತನುವ ಗೆಣೆಯನಿವನು ನಾಲ್ಕಾಣೆಯ ಕಂಡರೆ ಕುಣಿಯುವನು ಮನದಲ್ಲಿ | ಎಣೆಯಿಲ್ಲದೆ ಕುಣಿಯುವ ಮನದಲ್ಲಿ4 ಕಿಕ್ಕಿರಿದರು ಧನ ಕಕ್ಕುಲತೆಯೊಳ್ ತನ್ನ ಮಕ್ಕಳ ಸಲಹುವನು | ರಕ್ಕಸನಿವ ಮಕ್ಕಳ ಸಲಹುವನು ಮಿಕ್ಕ ಧನವ ಬಲು ಅಕ್ಕರೆಯಿಂದ ಎವೆ ಯಿಕ್ಕದೆ ನೋಡುವನು | ನೇತ್ರದಿ ಎವೆಯುಕ್ಕದೆ ನೋಡುವನು 5 ನುಡಿದರೆ ಸವಿಮಾತ ಒಡವೆ ವಸನಗಳಿ ಗ್ಹಿಡಿವಳೆಂದರಿಯುತಲಿ | ಸಡಗರದಿ ಹಿಡಿವಳೆಂದರಿಯುತಲಿ ಕರವ ಪಿಡಿವ ತನ್ನ ಮಡದಿಯ ಕಂಡರೆ ಸಿಡಿಮಿಡಿಗÀುಟ್ಟುವನು | ನಿರ್ಘೃಣನಿವ ಸಿಡಿಸಿಡಿ ಗುಟ್ಟುವನು 6 ರಾಯರೆ ನಿಮ್ಮ ಸಹಾಯ ಹೊರತು ಕಾಣೆನೆನಲು ಕಾಯುವ ಧಣಿ ನಾರಾಯಣನೆನುತಲಿ ನುಡಿಯುವನು 7 ಈ ಧನವೆ ದೊಡ್ಡ ಸಾಧನವೆನ್ನುವ ಮೇಧಾವಿಯು ಇವನು | ಓದಲರಿಯದ ಮೇಧಾವಿಯು ಇವನು ಪಾದ ಕಮಲದಲಿ ಆದರವರಿಯನಿವ | ಎಂದೆಂದಿಗು ಆದರವರಿಯನಿವ 8 ಘನತೆಯು ಬೇಡವು ಜನತೆಯು ಬೇಡವು ಧನವಿದ್ದರೆ ಸಾಕು | ಈ ನರನಿಗೆ ಧನವಿದ್ದರೆ ಸಾಕು ಮನುಜ ಮುಟ್ಟದ ಗುಬ್ಬಿಯನನುಕರಿಸುತ ಜೀ ವನವನು ಕಳೆಯುವನು | ಕ್ಲೇಶದಿ ಜೀವನವನು ಕಳೆಯುವನು9 ಗಳಿಸಿದವನ ಧನ ಬಳಸಿದವನಿಗೆಂಬ ಮುಳುಗಿ ಮುಳುಗುತಿರುವ | ಕ್ಲೇಶಗಳಲಿ ಮುಳುಗು ಮುಳುಗುತ್ತಿರುವ 10 ಭುಜಗಶಯನ ಹರಿ ಸುಜನರು ತನ್ನನು ಅಜನೆಂದು ಕರೆಯುತಿರೆ | ಸೃಷ್ಟೀಶನ ಅಜನೆಂದು ಕರೆಯುತಿರೆ ತ್ಯಜಿಸದೆ ಹೆಸರನು ಅಜಗಳ ಸ್ತನದಂತೆ ಸೃಜಿಸಿದನೀ ಜನರ | ಪ್ರಸನ್ನ ಹರಿ ಸೃಜಿಸಿದನೀ ಜನರ 11
--------------
ವಿದ್ಯಾಪ್ರಸನ್ನತೀರ್ಥರು
ವಂದಿಪೆ ಮುದದಿಂದಲಿ ನಾನು ವಂದಿಪೆ ಮುದ್ದು ಗಣಪಗೆ ವಂದಿಪೆ ಪ ನಂನಂದನನಾಮ ಮನದೊಳು ಆ- ನಂದದಿ ಭಜಿಸುವ ಚಂದ್ರಶೇಖರಸುತಗೆ ಅ.ಪ. ಆಕಾಶಕಭಿಮಾನಿ ಶ್ರೀಕಂಠವರಪುತ್ರ ರಾಕೇಂದುವದನ ಶ್ರೀಕಾಂತ ನಿಜಭಕ್ತ ಏಕಾಂತದಲಿ ಹರಿ ಆಕಾರತೋರಿಸಿ ನೂಕುತಭವಪಾಶ ಸಾಕು ಸಾಕು ಎಂದು 1 ವರವರದಾಯಕ ಸುರಗಣಪೂಜಿತ ವರಕರಿಮುಖವೇಷ ವರಸರ್ಪಕಟಿಸೂತ್ರ ಸಿರಿಕಾಂತಸೇವೆಗೆ ಬರುವ ವಿಘ್ನಂಗಳೆಲ್ಲ ಭರದಿಂದ ತರಿಯುತ ಕರುಣದಿ ಸಲಹೆಂದು 2 ವೇದವ್ಯಾಸರಶಿಷ್ಯ ಮೋದಕಗಳ ಪ್ರಿಯ ಮದನನಸೋದರ ಮುದವಿದ್ಯೆದಾಯಕ ಮಧ್ವಾಗಮದಲಿ ಅದ್ದುತ ಎಮ್ಮನು ಶುದ್ಧರನು ಮಾಡೋ ಸಿದ್ಧಿ ವಿನಾಯಕನೆಂದು 3 ಏಕದಂತನೆ ವರ ಆಖುವಾಹನ ಭಕ್ತರ ಶೋಕ ಹರಿಸೊ ಬೇಗ ಲೋಕ ವಂದಿತನೆ ರಕ್ತಾಂಬರ ತನು ರಕ್ತಗಂಧಪ್ರಿಯ ವಿ - ರಕ್ತಿನೀಡುತ ಹರಿಭಕ್ತನೆಂದೆನಿಸು ಎಂದು 4 ಪಾಶಾಂಕುಶ ಶಶಿದರ್ಪಭಂಜನ ಶ್ರೀಶನಾಭಿವಾಸ ವಿಶಾಲಕರ್ಣಯುತ ನಾಶಗೈಸುತವಿಷಯ ವಾಸನೆಗಳೆಲ್ಲ ವಿಶ್ವೋಪಾಸಕ ಪ್ರಭು ಶ್ವಾಸಾವೇಶಯುತನೆಂದು 5 ಚಾರುದೇಷ್ಣನೆ ನಿನ್ನ ಚರಣಕ್ಕೆ ಶರಣೆಂಬೆ ಸರಿನೀನು ಧನಪಗೆ ಗುರುಶೇಷಶತರಿಗೆ ತರಿದು ತಾಪತ್ರಯ ವರಜ್ಞಾನ ವೈರಾಗ್ಯ ಹರಿಭಕ್ತಿ ಹರಿ ಧ್ಯಾನ ನಿರುತ ಕೊಡು ಎಂದು 6 ಜಯತೀರ್ಥ ಹೃದಯದಿ ವಾಯುವಿನೊಳಿಪ್ಪ ಸಿರಿ ತಾಂಡವ ಕೃಷ್ಣವಿಠಲ ರಾಯನ ಧ್ಯಾನ ಕಾಯಾ ವಾಚಾ ಮನಸಾ ದಯಮಾಡಿ ಸಲಹೈಯ್ಯ ಜೀಯಾ ಗಣಪನೆಂದು7
--------------
ಕೃಷ್ಣವಿಠಲದಾಸರು
ವಂದಿಸುವೆನು ನಿನ್ನ ಅರವಿಂದಲೋಚನ- ದಿಂದ ನೋಡೊ ನೀ ಎನ್ನ ವಂದಿಸುವೆ ಅರವಿಂದಲೋಚನ- ದಿಂದ ನೋಡೊ ದಯಾಸಿಂಧು ಎನಿಸುವೆ ನಂದನಂದನನಾದ ಶ್ರೀ ಮುಕುಂದ ನೀ ಮುಚು- ಕುಂದ ವರದ ವಂದಿಸುವೆನು ನಿನ್ನ ಪ ಅಂಬರೀಷನು ಏನೋ ಮುಚುಕುಂದ ಮುನಿವರ- ನೆಂದು ರಕ್ಷಿಸುವೇನೊ ದ್ವಿಜ ತಂದವಲಕ್ಕಿ ತಿಂದ ಭಿಡೆಯಗಳೇನೊ ನೀನೆ ಸುರಧೇನು ಕಂದ ಧ್ರುವಪ್ರಹ್ಲಾದ ಕರೆಯಲು ಬಂದು ಭರದಿಂದವರ ಸಲಹಿದೆ ಮಂದಮತಿ ನಾ ಮ- ತ್ತೊಂದನರಿಯದೆ ವಂದಿಸುವೆ ನಿನ್ನ 1 ಗಜನು ಅಜಮಿಳನೇನೊ ಪಾದಾಂಬುಜ ಸ್ತುತಿಸ- ಲಜಸುತನು ನಾರದನೇನೊ ನಿಜ ಭಕುತಿಯಿಂದಿರಲ್ವಿದುರ ಉದ್ಧವನೇನೊ ನದಿಯಲ್ಲಿ ನಿನ್ನ ನಿಜಸ್ವರೂಪವ ತೋರಲಿಕ್ಕೆ ನಿನ್ನ ಬಾಂಧವಕ್ರೂರನೇ ನಾ ಕೇಳು ಘನ್ನ ಮಹಿಮ ಪ್ರಸನ್ನನಾಗಲಿಕ್ವಂದಿಸುವೆನು ನಿನ್ನ 2 ಸತ್ವರೊಳು ನಾನಲ್ಲ ಅಹಲ್ಯೆ ದ್ರೌಪದಿ ಭಕ್ತಿ ಮೊದಲೆನಗಿಲ್ಲ ಪಾಂಡವರ ದುರಿತಾಪತ್ತು ಕಳೆದ್ಯೊ ನೀಯೆಲ್ಲ ಕೇಳೆನ್ನ ಸೊಲ್ಲ ಭಕ್ತಾಧೀನನೆ ಭಯನಿವಾರಣ ಇಷ್ಟು ಭವಭಯ ಬಿಡಿಸಿ ಭೀಮೇಶಕೃಷ್ಣ ನಿನ್ನದಯ- ವಿಟ್ಟುಕರುಣಿಸೊ ವಂದಿಸುವೆನು ನಿನ್ನ 3
--------------
ಹರಪನಹಳ್ಳಿಭೀಮವ್ವ
ವಂದಿಸುವೆನು ರಘುವರನಾ ಸುರವಂದಿತ ಚರಣಾಂಬುಜನ ಪ ತಂದೆ ಮಾತಿಗೆ ವನಕ್ಹೋಗಿ ಬಂದವನಾಸುಂದರ ಸಹ ಸೀತೆಯಿಂದ ಅನುಜನಾ ಅ.ಪ ಚಾಪ ಭಂಜಕನಾ 1 ವಾರಿಧಿ ಸೇತು ಬಂಧಕನಾ ಸೀತಾ -ಚೋರನ ಶಿರವಳಿದವನಾಚಾರು ಸಿಂಹಾಸನವೇರುತ ಸರಯು -ತೀರದ ಅಯೋಧ್ಯಾ ವಿಹಾರ ಸುಂದರನಾ2 ಕೇಸರಿ ಸುತಗೆ ತನುಧನಮಣಿಆಶ್ರಯವನು ಕೊಟ್ಟವನಾಕೋಸಲ ಜನರಿಗೆ ಮೋಕ್ಷವವಿತ್ತವನಾಇಂದಿರೇಶ ಸುಖಾತ್ಮ ನಿರ್ದೋಷ ಪುರುಷನಾ 3
--------------
ಇಂದಿರೇಶರು
ವಂದಿಸುವೆನೆಲೆ ತಾಯೆ ವಂದಿತಾಮರೆಯೆ ಪ. ಶ್ರೀಕಲಶಾಬ್ಧಿಕನ್ಯೆ ಸುರಕುಲಮಾನ್ಯೆ ಶ್ರೀಕರ ಗುಣಪೂರ್ಣೆ ಶೋಕಾಪಹರಣೆ ಲೋಕನಾಯಕೆ ಘನ್ನೆ ಪಾಕಶಾಸನಸುತೆ ಪವನಜಸೇವಿತೆ ಸಾಕೇತನಿಲಯೆ ಸರಾಗದಿ ರಕ್ಷಿಸು 1 ಆನತನುತ ಗೀರ್ವಾಣಿ ಅಂಬುಜಪಾಣಿ ಮಾನಿನೀಮಣಿ ಕಲ್ಯಾಣಿ ಭಯವಾರಿಣಿ ಭಾವಜಾತ ಜನನೀ ಭಾಗವತಾರ್ಚಿತೆ ಭಕ್ತಾಭಯಪ್ರದಾತೆ ಬಾಗುತೆ ಶಿರ ನಿನಗೇಗಳುಂ ಮನವಾರೆ 2 ಅರಿಯೆನು ನಿನಗೆಣೆಯಾರ ಕಾಣೆನು ಹಿತರ ಚರಣವ ನಂಬಿದೆ ಮನವಾರ ಪಿಡಿಯೆನ್ನ ಕರವ ಕರುಣದಿ ನೋಡೆನ್ನಿರವ ಪರಮಪಾವನ ಶೇಷಗಿರೀಶನ ಕರುಣಾರೂಪಿಣಿ ಜಗತ್ಕಾರಿಣಿ3
--------------
ನಂಜನಗೂಡು ತಿರುಮಲಾಂಬಾ
ವಂದೇ ಗೋಪಾಲಂ ಕೃಷ್ಣಾನಂದ ಜಲಪಾಲಂ ಮಂದಹಾಸ ಮುನಿವೃಂದ ವಿಶಾಲಂ ಇಂದಿರೇಶ ಯದುನಂದನ ಬಾಲಂ ಪ ಸಾರಿದನು ಸಾರಂ ಕೃಷ್ಣ ಚಾರು ಮೋಹನಾ ಕಾರಂ ಸಾರೋದ್ದಾರಂ ಸುಜನಮಂದಾರಂ ಶ್ರೀರಮಣೀ ಮುಖ ಚಂದ್ರ ಚಕೋರಂ 1 ಕಾಂಚೀ ಮಣಿಹಾರಂ ಕೃಷ್ಣ ವಾಂಛಿತದನುಸಾರಂ ಪಂಚಭೂತ ಪಂಚಸ್ಯಾಕಾರಂ ಪಾಂಚ ಜನ್ಯ ಭೃಗುಲಾಂಛನ ಧಾರಂ 2 ಚಾಪಲ ಗುಣಧಾಮಂ ಕೃಷ್ಣ ಗೋಪೀಜನ ಕಾಮಂ ನೀ ಪರಮಾತ್ಮ ಸ್ವರೂಪ ಸುನಾಮಂ ಶ್ರೀಪತಿ ಯದು ಕುಲದೀಪ ನಿಸ್ಸೀಮಂ 3 ಪಾಂಡವ ಸಾಕಾರಂ ಕೃಷ್ಣ ಪಂಡಿತನುಸಾರಂ ಚಂಡ ಕಿರಣ ಮಣಿಕುಂಡಲ ಧಾರಂ ಮಂಡಲದೊಡೆಯ ಉದ್ದಂಡತಿ ಶೂರಂ 4 ಶರಣರ ಭವದೂರಂ ಕೃಷ್ಣ ಸುರಜನ ಸಾಕಾರಂ ಹರಿಸೂನು ಕೋಣೆ ಲಕ್ಷ್ಮೀಶ ಶೃಂಗಾರಂ ಪರಮಾತ್ಮಕ ಸದ್ಗುರು ಮಂದಾರಂ 5
--------------
ಕವಿ ಪರಮದೇವದಾಸರು
ವನಜಗಂಧಿಯೆ ನಿನ್ನ ಮನದಸಂದೆಗೆವನ್ನು ಸನುಮತದಿ ಪೇಳಿನ್ನು ಮುನಿಸಿದೇನು ಚಾಡಿಮಾತನು ಕೇಳಿ ರೂಢಿಯಿಂ ಖತಿತಾಳಿ ಕಾಡುತಿಹುದೇಂ ಚಾಳಿ ರೌದ್ರಕಾಳಿ ಸೂಚನೆಯ ಕೊಡದಿಂತು ವಾಚನದಿ ಬಿರುಸಾಂತು ರಾಚುತಿರ್ಪೆಯದೇನೆ ನಾಚದಿಂತು ಮಾನವತಿನೀನೆಂದು ನಾನು ನಂಬಿರಲಿಂದು ಏನು ಮಾಡಿದೆನೆಂದು ಜರಿದೆ ಬಂದು ಸಾಕು ಸಾಕೀಬಗೆಯ ಕಠಿಣವಾಕ್ಕು ಕೋಕಿಲಾರವೆ ನಿನ್ನೊಳಿರುವ ಸೊರ್ಕು ಸಾಕುಮಾಡಿಹುದೆನ್ನ ನೋಡು ಮುನ್ನ
--------------
ನಂಜನಗೂಡು ತಿರುಮಲಾಂಬಾ
ವನಜಾಕ್ಷ ನೀನೀಗ ಘನ ಕನಿಕರದಿ ಕಾಯಭವ ಘನತರದ ಗುಣ ಎನ್ನೊಳಿನಿತಿಲ್ಲ ದೇವ ಪ ಮನ ತುಸು ಗಟ್ಟಿಲ್ಲ ತನುಮೋಹ ಸುಟ್ಟಿಲ್ಲ ಧನದಾಸೆ ಬಿಟ್ಟಿಲ್ಲ ಬಿನುಗುಗುಣಟ್ಟಿಲ್ಲ 1 ಪರಮಮದ ಮುರಿದಿಲ್ಲ ಪರನಿಂದೆ ತೊರೆದಿಲ್ಲ ಶರಣರಿಗೆ ಎರಗಿಲ್ಲ ಹರಿಪಾದವದರಿವಿಲ್ಲ 2 ಏನು ಅಪರಾಧವಿರೆ ನೀನೆ ಕ್ಷಮಿಸೆನಗೆ ಜ್ಞಾನದಿಂ ಸಲಹಯ್ಯ ಪ್ರಾಣೇಶ ಶ್ರೀರಾಮ 3
--------------
ರಾಮದಾಸರು
ವನಭೋಜನ ಊರ್ವಶಿ:ಇದೀಗ ಮನವು ಇಂದಿರಾಕ್ಷಿ ಇದೀಗ ಮನವು ಪ. ಮಧುಸೂದನ ತನ್ನ ಸದನದಿಂದಲಿ ಒಮ್ಮೆ ಒದಗಿ ಪಯಣಗೈದು ಪದುಳದಿ ಮಂಡಿಪ 1 ವಾಸುದೇವ ತಂಪಾಶುಗದಿಂದಾ- ಯಾಸವ ಬಿಡಿಸಿ ಸಂತೋಷಪಡಿಸುವಂತಿದೀಗ 2 ಭಾಗವತರು ಅನುರಾಗದಿ ಕೂಡಿ ಸ- ರಾಗದಿ ಯೋಗಾರೋಗಣೆಮಾಡುವದೀಗ 3 ಸತ್ಪಾತ್ರ ವಿಯೋಗ ಸು- ಕ್ಷೇತ್ರ ಸುಧಾಮಯ ಕೀರ್ತಿಯೆಂದಿನಿಸುವ 4 ತರುಗುಲ್ಮಾವಳಿ ಸುರಮುನಿಗಳು ಕಾಣೆ ಉರು ಪಾಷಾಣವೆಲ್ಲವು ಸಚ್ಚರಿತವು 5 ರಂಭೆ : ಪೋಗಿ ಬರುವ ವನಕ್ಕಾಗಿ ನಾಗವೇಣಿ ಲೇಸಾಗಿ ಬೇಗ ನಾವು ಪ. ಭಾಗವತಾದಿ ಸಮಾಗಮವಾದರೆ ಭಾಗ್ಯವಂತೆಯರ್ನಾವಾಗಿ 1 ಹರಬ್ರಹ್ಮಾದಿ ನಿರ್ಜರರಿಗಸಾಧ್ಯವು ಹರಿಪ್ರಸಾದವೆಂದು ಸಾಗಿ ಬೇಗ 2 ನಾರಿ ನಿನ್ನ ಉಪಕಾರ ಮರೆಯೆ ನಾ ಭೂರಿ ಪುಣ್ಯವಶಳಾಗಿ 3 ಕಾಣದಿರಲು ಯೆನ್ನ ಪ್ರಾಣ ನಿಲ್ಲದು ಕಾಣೆ ಶ್ರೀನಿವಾಸನ ಭೇಟಿಗಾಗಿ 4 ಊರ್ವಶಿ :ಅಭಿಷೇಕವನು ಗೈದರಾಗ ಮನಸಿಗನುರಾಗ ಪ. ವಿಭುಧೋತ್ತಮರೆಲ್ಲರು ಕೂಡುತ್ತ ಶುಭ ಋಗ್ವೇದೋಕ್ತದಿ ನಲಿಯುತ್ತ ಅ.ಪ. ಕ್ಷೀರಾರ್ಣವದೊಳಗಾಳಿದವಂಗೆ ಕ್ಷೀರಾಬ್ಧಿಯ ದುಹಿತೆಯ ಗಂಡನಿಗೆ ನೀರಜನಾಭನ ನಿಖಿಲ ಚರಾಚರ ಪೂರಿತ ಕಲ್ಮಷದೊರಗೆ ಕ್ಷೀರದ1 ಚದುರತನದಿ ಗೊಲ್ಲರೊಳಾಡಿದಗೆ ದಧಿಪಾಲ್ ಬೆಣ್ಣೆಯ ಸವಿದುಂಡವಗೆ ಮದನಜನಕ ಮಹಿಮಾಂಬುಧಿ ಕರುಣಾ- ಸ್ಪದ ಸತ್ಯಾತ್ಮ ಸನಾಥಗೆ ದಧಿಯ 2 ಶ್ರುತಿಸ್ಮøತಿತತಿನುತ ರತಿಪತಿಪಿತಗೆ ಅತುಲಿತಗುಣ ಸೂನೃತಭಾಷಿತಗೆ ದಿತಿಸುತಹತ ಶೋಭಿತ ಮೂರುತಿ ಶಾ- ಶ್ವತವಾಶ್ರಿತ ವಾಂಛಿತಗೆ ಘೃತವ 3 ಮಧುಸೂದನ ಮಂದರಗಿರಿಧರೆಗೆ ಮೃದುವಾಕ್ಯಗೆ ಮಂಗಲಾಂಗನಿಗೆ ಪದಮಳಾಕ್ಷ ಪರಾತ್ಪರವಸ್ತು ನೀ- ರದ ಶ್ಯಾಮಲ ನಿತ್ಯಾತ್ಮಗೆ ಮಧುವಿನ 4 ಕರುಣಾಕರ ಕಮಲಜತಾತನಿಗೆ ದುರುಳ ಸುಬಾಹು ತಾಟಕಿ ಮರ್ದನಗೆ ನರಕಾಂತಕ ನಾರಾಯಣ ಸಕಲಾ- ಮರಪೂಜಿತಗೆ ಸರ್ವಾತ್ಮಗೆ ಸಕ್ಕರೆ 5 ಎಳೆತುಳಸೀವನಮಾಲಾಧರಗೆ ಫಲದಾಯಕ ಪರಬ್ರಹ್ಮರೂಪನಿಗೆ ಕಲುಷರಹಿತ ನಿರ್ಮಲಚಾರಿತ್ರ್ಯ ನಿ- ಶ್ಚಲಿತಾನಂದ ನಿತ್ಯನಿಗಳ ನೀರಿನ 6 ಕನಕಾಂಬರಧರ ಶೋಭತನಿಂಗೆ ಮನಕಾನಂದವ ಪಡಿಸುವನಿಂಗೆ ಚಿನಮಯ ಪರಿಪೂರ್ಣ ವಿಶ್ವಂಭರ ಜನಕಜಾ ವರನಿಗೆ ಕನಕಾನನೀಕದ 7 * * * ವೆಂಕಟೇಶ ಕಣ್ಣ ಮುಂದೆ ನಿಂತಿದಂತಿದೆ ಪ. ಶಿರದೊಳು ರತ್ನಕಿರೀಟದ ಝಳಕ ಮೆರೆವ ಲಲಾಟದಿ ಕಸ್ತೂರಿತಿಲಕ ವರ ಕರ್ಣಕುಂಡಲಗಳ ಮಯಕನಕ ಚೆಲುವ ಚರಾಚರಭರಿತಜ ಜನಕ1 ಕಂಬುಕಂಠದಿ ಕೌಸ್ತುಭವನಮಾಲ ಇಂಬಾಗಿಹ ಭೂಷಣ ಶುಭಲೋಲ ಸಂಭ್ರಮಿಸುವ ಮೋಹನ ಗುಣಶೀಲ ಅಂಬುಜನಾಭಾಶ್ರಿತಜನಪಾಲ 2 ಶಂಖಸುದರ್ಶನಗದಾಪದ್ಮ ಧಾರಿ ಕಂಕಣವೇಣುವಡ್ಯಾಣವಿಹಾರಿ ಬಿಂಕದ ಬಿರುದಾಂಕಿತ ಕಂಸಾರಿ ಶಂಕೆಯಿಲ್ಲದ ಭೂಷಣಾಲಂಕಾರಿ 3 ಎಡಬಲದಲಿ ಮಡದಿಯರ ವಿಲಾಸ ಕಡುಬೆಡಗಿನ ಪೀತಾಂಬರಭೂಷ ಕಡಗ ಕಾಲಗೆಜ್ಜೆ ಅಂದುಗೆಯಿಟ್ಟು ತೋಷ ಒಡೆಯ ಶ್ರೀನಾರಾಯಣ ಸರ್ವೇಶ 4 ಈ ರೀತಿಯಲಿ ಶೃಂಗಾರನಾಗುತ್ತ ಭೂರಿಭಕ್ತರ ಕಣ್ಮನಕೆ ತೋರುತ್ತ ನಾರದಾದಿ ಮುನಿವರ ಗೋಚರದ ಚಾರುಚರಣವನು ತೋರಿಸಿ ಪೊರೆದ 5 * * * ಆರೋಗಣೆಯ ಗೈದನು ಶ್ರೀರಂಗ ಸಾರಸವಾದ ಸಮಸ್ತ ವಸ್ತುಗಳ ಪ. ಧೂಪದೀಪನೈವೇದ್ಯವಿಧಾನ ಶ್ರೀಪರಮಾತ್ಮ ಮಂಗಲಗುಣಪೂರ್ಣ 1 ಸುರತರುವಿನ ಸೌಭಾಗ್ಯದ ತೆರನ ಮರಕತಮಯ ಹರಿವಾಣದೊಳಿದನ 2 ಭಕುತರ ಸೌಖ್ಯವಿನ್ನೇನೆಂಬುವೆನು ಶಕುತ ಶ್ರೀಮಾಧವ ನಿರತ ತೋರುವನು 3 * * * ಆರತಿ ಶ್ರೀನಿವಾಸಂ ಶ್ರೀವೆಂಕಟೇಶಂ ಗಾರತಿ ಶ್ರೀನಿವಾಸಂ ಪ. ಮಂಗಲಾಂಗ ನರಸಿಂಗ ಮನೋಹರ ರಂಗರಾಯ ಶ್ರೀಗಂಗಾಜನಕಗೆ 1 ಮಾಧವ ಮಧುಹರ ಮೋದಭರಿತ ಜಗ- ದಾಧಾರ ವೇಣುನಾದವಿನೋದಗೆ 2 ನಿತ್ಯನಿರಂಜನ ಸತ್ಯಸ್ವರೂಪಗೆ ಪ್ರತ್ಯಗಾತ್ಮಪರತತ್ತ್ವಸ್ವರೂಪಗೆ3 ಭೋಜನವ ಗೈದರು ಪ. ಮೂಜಗತ್ಪತಿಯ ಪ್ರಸಾದಪ್ರತಾಪದಿ ನೈಜವಾಗಿಹ ಪಾಪ ಮಾಜಿ ಹೋಗಾಡುತ್ತ1 ಜಿಹ್ವೆಗೆ ರುಚಿಕರವಪ್ಪುದ ಮಿಗಿಲಾದ ಶಾಕಪಾಕಗಳನ್ನು ಪಾತ್ರದಿ ತೆಗೆದು ಸಂತೋಷ ಬೆಡಗುಗಳ ತೋರುತ್ತ 2 ಹಪ್ಪಳ ಸಂಡಿಗೆಯು ತಪ್ಪು ಒಗರ ಶಾಲ್ಯನ್ನಗಳೆಲ್ಲವ ತಪ್ಪದೆ ಸವಿದು ಬಾಯ್ ಚಪ್ಪರಿಸಿದರಾಗ 3 ಹೋಳಿಗೆಯು ಕಾಯದ ಜಡಗಳು ಮಾಯಕವಾದವು ಆಯುರಾರೋಗ್ಯ ಸುಶ್ರೇಯ ಕಾರಣವಾಯ್ತು 4 ಸುರರು ಉರಗ ಮಾನವರೆಲ್ಲರೂ ದೊರೆಯ ಪ್ರಸಾದವು ದೊರಕಿತು ಎನುತ ವಿ- ಸ್ತರವಾದ ತೋಷದಿ ಭರದಿಂದೊದಗುತಲಿ 5 ಭೋಗವಿನ್ನಂತೆಯಿಲ್ಲಿ ರೋಗ ದುರಿತವೆಲ್ಲ ನೀಗಿತು ಎನುತನು- ರಾಗದಿ ಸವಿದುಂಡು ತೇಗಿದರೆಲ್ಲರು 6 ಪುಣ್ಯ-ಫಲದಿಂದ ದೊರಕಿತಲ್ಲೇ ನಲವಿಂದಾನತರು ಕೈ ತೊಳೆದ ನೀರಿನೊಳಿದ್ದ ಜಲಜಂತು ಸಹವು ನಿರ್ಮಲಿನವಾದವು ಕಾಣೆ 7 ಪಾವನವಾದರು ಹಿಂಡು ಉದ್ದಂಡ ಮೃಗಗಳೆಲ್ಲ &ಟಿb
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವನರುಹ ನಯನಾ | ವನಜೇಕ್ಷಣ ಪ್ರಿಯವನರುಹ ನಯನಾ | ಪ ತನುಮನ ಧನಗಳಾ | ನಿನಗರ್ಪಿಸುವಂಥಜನರ ಮನೋರಥ | ಅನುನಯದಿಂದಲೀವೆ 1 ಮನಸಿಜ ಜನಕನೇ | ಫಣಿಶೈಲ ಸದನನೇಅನಲಾಕ್ಷನ ಪ್ರಿಯ | ಗುಣ ಪರಿಪೂರ್ಣ 2 ಮನೆ ಮಗ ಮಡಧ್ಯಬಿ | ಮಾನವು ಪೋಗಲಿಲ್ಲಘನ ವಿಷಯಕೆ ಮನ | ಅನುಸರಿಸುವುದಯ್ಯ 3 ಕನಸು ಮನಸಿನೊಳು | ನಿನಪದ ಧ್ಯಾನವಅನುನಯದಿಂದಲಿತ್ತು | ಜನುಮ ಸಾರ್ಥಕ ಮಾಡೊ 4 ವ್ರಜ ಕರ ಪಿಡಿದು 5
--------------
ಗುರುಗೋವಿಂದವಿಠಲರು
ವಾಣಿನಾಥ ನಿನ್ನ ಮಹಿಮೆಕ್ಷೋಣಿಯೊಳಗೆ ಪೊಗಳುವೆನು ಪ ಶ್ರೀನಿವಾಸನಮಲ ಮುಖವಾಮಾನಸಾದಿ ತೋರಿಸೀಗ ಅ.ಪ. ಹರಿಯ ನಾಭಿ ಕಮಲದಲ್ಲಿ ಧರಿಸಿ ತನುವ ತಪತಪೆಂದುಎರಡುವರ್ಣ ಕೇಳಿ ಚರಿಸೆಪರಮಪುರುಷನನ್ನು ಕಂಡೆ 1 ಸಣ್ಣಬಾಲ ನಾಮ ಹರಿಯತಿನ್ನಬೇಡ ನಿನಗೆ ಬಹಳಅನ್ನಮಾಡಿಕೊಡುವೆನೆಂದುಧನ್ಯ ಜಗವ ನಿರ್ಮಿಸಿದೆಯಾ 2 ಕರ್ಮ ಮಾಡದಲೆಇಂದಿರೇಶ ನಿನ್ನ ಮನದಿಪೊಂದಿ ಭಜಿಪೆ ಪಾವನಾತ್ಮಾ 3
--------------
ಇಂದಿರೇಶರು
ವಾದಿರಾಜರ ಪದವ ಸ್ಮರಿಸುವೆ ಅ- ಗಾಧ ಮಹಿಮರ ಸದಯ ಹೃದಯರ ಪ ಸಾಧು ಜನರಿಗೆ ಬೋಧಿಸಿರ್ಪರ ಗೆದ್ದು ಮುತ್ತಿನ ಪೀಠವೇರ್ದರ 1 ಮೋದದಿಂದ ಚರಿಸಿ ತೀರ್ಥ ಪ್ರ- ಬಂಧ ಗ್ರಂಥವ ರಚಿಸಿ ಮಾನ್ಯರಾ ಗಿರ್ದ ಗುರುಗಳನೆಂತು ಬಣ್ಣಿಪೆ 2 ರಾಜಸಭೆಯೊಳು ರಾಜಭೀಷ್ಮಕ ತನುಜೆಯರಸನ ಸ್ತುತಿಪ ಕಾವ್ಯವ ಈ ಜಗತ್ತಿನೊಳ್ ಶ್ರೇಷ್ಠ ಕಾವ್ಯವೆಂ ದಿದನೆ ಗಜದೊಳು ಮೆರೆಸಿದರಸನು 3 ಒಂದುನೂರ ಇಪ್ಪತ್ತು ವರ್ಷದೊಳ್ ಸಿಂಧುಶಯನನ ಸೇವಿಸುತ್ತಲಿ ಇಂದ್ರದತ್ತ ವಿಮಾನದಿಂದಲಿ ಸತ್ಯಲೋಕವನೈದಿದ ಗುರುವರ 4 ರಾಜೇಶ ಹಯಮುಖಾನಂತ ಗುಣಗಳ ಪೊಗಳುತಿರ್ಪರ ರಾಗಶೂನ್ಯರ ಋಜು ಗಣೇಶರ ಜ್ಞಾನಪೂರ್ಣರ 5
--------------
ವಿಶ್ವೇಂದ್ರತೀರ್ಥ