ಒಟ್ಟು 7932 ಕಡೆಗಳಲ್ಲಿ , 127 ದಾಸರು , 4530 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳಲೊಲ್ಲನೆ ಎನ್ನ ಮಾತನು ರಂಗ ಪ. ಕಾಳೀಮರ್ದನ ಕೃಷ್ಣಗೆ ಹೇಳೆ ಗೋಪ್ಯಮ್ಮ ಬುದ್ಧಿಅ. ಪ.ಬಿಟ್ಟ ಕಣ್ಣನು ಮುಚ್ಚಲೊಲ್ಲನೆ ದೊಡ್ಡ ಬೆಟ್ಟಕ್ಕೆ ಬೆನ್ನೊತ್ತಿ ನಿಂದನೆ ಬಲುಸಿಟ್ಟಲಿ ಕೋರೆ ಹಲ್ಲ ಕಿರಿದನೆ ಈಗಗಟ್ಟಿ ಉಕ್ಕಿನ ಕಂಬವೊಡೆದು ಬಂದನೆ ರಂಗ1 ಮೂರಡಿ ಭೂಮಿ ಬೇಡಿ ಬಂದನೆ ತಾಯ- ಶಿರವ ಕಡಿಯಲಿಕೆ ಕೊಡಲಿ ತಂದನೆನಾರಸೀರೆಯನುಟ್ಟುಕೊಂಡನೆ ಬಲುಚೋರತನÀದಲಿ ಹರವಿಹಾಲ ಕುಡಿದನೆÉ ರಂಗ 2 ಬತ್ತಲೆ ನಾರಿಯರ ಅಪ್ಪಿದ ಹೋಗಿಉತ್ತಮ ಅಶ್ವವ ಹತ್ತಿದಹತ್ತವತಾರವ ತೋರಿದ ದಿಟ್ಟಮೂರ್ತಿ ನಮ್ಮ ಚೆಲುವ ಶ್ರೀ ಹಯದವನ 3
--------------
ವಾದಿರಾಜ
ಕೇಳವ್ವ ತಂಗಿ ಕೇಳವ್ವ ಕೇಳಿ ತಿಳಿದು ನೀ ಬಾಳವ್ವ ಪ ನೀಲವರ್ಣನ ಕೃಪೆಯ ಪಡೆಯಲಿಕ್ಕೆ ನಾಳೆಂದರೆ ಮನೆಹಾಳವ್ವ ಅ.ಪ ಅಂಬುಜಾಕ್ಷನ ಪಾದಪಕಮಲವ್ವ ನೀ ನಂಬಿದ್ದಿ ಬಿಡಬೇಡ ಸಂಗವ್ವ ನಂಬಿದ ಭಕ್ತರ ಬೆಂಬಲಿಸಾತನು ಇಂಬುಗೊಟ್ಟು ಕಾಯ್ವ ಸಂಭ್ರಮ ಕೀರ್ತೆವ್ವ 1 ಒಂದೆ ಮನಸಿನ ಬಾಗವ್ವ ಗೋ ವಿಂದನ ವರಪಡಿ ಚೆಂದವ್ವ ಮಂದರಧರನ ಹೊಂದಿಕೊಳ್ಳಲಿಕ್ಕೆ ಹಿಂದು ಮುಂದು ನೋಡಬೇಡ ಮುಕ್ತ್ಯವ್ಯ 2 ಒಂದಿನ ಹೋಗ್ವುದು ಸತ್ಯವ್ವ ತಂಗಿ ಸಂದೇಹ್ಯ ಪಡಬೇಡ ಹುಚ್ಚವ್ವ ತಂದೆ ಶ್ರೀರಾಮ ಗತಿಯೆಂದು ನಂಬಲು ನಿನಗೆ ಬಂಧನವೆಲ್ಲ ಬೈಲವ್ವ 3
--------------
ರಾಮದಾಸರು
ಕೇಳಿದ್ಯಾ ಈ ಕೌತುಕ ಕೇಳಿದ್ಯಾ ಕೇಳಿದ್ಯಾ ಕೌತುಕವನ್ನು ಈಗ ಪ ಪೇಳುವೆ ನಾ ನಿಮಗಿನ್ನು ಆಹಾ ಜಾರ ಚೋರ ಕೃಷ್ಣ ಅ.ಪ. ಕರೆಯೆ ಬಂದಿಹನೊಬ್ಬ ಚೋರಾ ತನ್ನ ಕಿರಿಯಯ್ಯನಂತೆ ಅಕ್ರೂರಾ ಊರ ಹೊರ ಹೊಳಿಯಲಿ ಬಟ್ಟ ತೇರಾ ಆಹಾ ಹಿರಿಯನೆಂದು ಕಾಲಿಗೊರಗೋರಾ ರಾಮಕೃಷ್ಣರ ಭರದಿ ಅಪ್ಪಿಕೊಂಡು ಮರುಳು ಮಾಡಿದ ಸುದ್ದೀ 1 ಸೋದರಮಾವನ ಮನೆಯೋಳ್ ಬೆಳ - U್ಫದ ನಾಳಿನ ದಿನದೋಳ್ ಕೃಷ್ಣ ಪೋದರೆ ನೆರೆದ ಜನರೋಳ್ ಆಹಾ ಕಾದುವ ಮಲ್ಲರ ಮೇಲ್ಹಾರ ಬಿಲ್ಹಬ್ಬ ಸಾಧಿಸಿ ಸಮಯಕ್ಕೆ ಹೋದೆವೆಂಬ ಅರ್ತಿ 2 ಹುಟ್ಟಿದ ಸ್ಥಳವಂತೆ ಮಧುರೀ ಕಂಸ - ನಟ್ಟುಳಿಗಾಗಿ ತಾ ಬೆದರೀ ಇ - ಲ್ಲಿಟ್ಟಳಾತನ ತಂಗಿ ಚದುರೀ ತೋರಿ ಕೊಟ್ಟರೆ ತನ್ನನು ಬೆದರೀ ಆಹಾ ಇಷ್ಟು ಸ್ನೇಹವು ಶ್ರೀದವಿಠಲ ಮಾವನ ಭೆಟ್ಟಿಗಾಗಿ ಒಡಂಬಟ್ಟು ಹೋಗುವನಂತೆ 3
--------------
ಶ್ರೀದವಿಠಲರು
ಕೇಳಿದ್ಯಾ ಕೌತಕವನ್ನು ಕೇಳಿದ್ಯಾಪ ಕೇಳಿದ್ಯಾ ಕೌತಕವನ್ನು ನಾಕೇಳಿದೆ ನಿನಗಿಂತ ಮುನ್ನ ಆಹಾಚಾಳಿಕಾರ ಕೃಷ್ಣ ಪೇಳದೆ ಮಧುರೆಗೆಕೋಳಿ ಕೂಗದ ಮುನ್ನ ನಾಳೆ ಪಯಣವಂತೆಅ.ಪ. ಕರೆಯ ಬಂದಿಹನಂತೆ ಕ್ರೂರ ತಮ್ಮಕಿರಿಯಯ್ಯನಂತೆ ಅಕ್ರೂರ ಪುರಹೊರವಳಯದಿ ಬಿಟ್ಟು ತೇರ ಆಹಾಹಿರಿಯನೆಂದು ಕಾಲಿಗೆರಗಲು ರಾಮಕೃ-ಷ್ಣನ ಠಕ್ಕಿಸಿಕೊಂಡುಮರುಳುಮಾಡಿದ ಬುದ್ಧಿ 1 ಸೋದರ ಮಾವನ ಮನೆಗೆ ಬೆಳ-ಗಾದರೆ ನಾಳಿನ ಉದಯ ಪರ-ಮಾದರವಂತೆ ತ್ವರೆಯ ಅಲ್ಲಿ ತೋರಿದ ಮನಕೆ ನಾರಿಯ ಆಹಾಸಾದಿಮಲ್ಲ ಮೊದಲಾದ ಬಿಲ್ಲಹಬ್ಬಸಾಧಿಸಿಕೊಂಡು ಬರುವೆನೆಂದು ಸುದ್ದಿ 2 ಹುಟ್ಟಿದ ಸ್ಥಳವಂತೆ ಮಧುರೆ ಕಂಸ-ನಟ್ಟುಳಿಗಾರದೆ ಬೆದರಿ ತಂ-ದಿಟ್ಟ ತನ್ನ ತಂದೆ ಚದುರೆ ತೋರಿಕೊಟ್ಟಳು ಭಯವನ್ನು ಬೆದರಿ ಆಹಾಎಷ್ಟು ಹೇಳಲಿ ರಂಗವಿಠಲನು ಮಾವನಭೆಟ್ಟಿಗಾಗಿ ಒಡಂಬಟ್ಟು ಪೋಗುವ ಸುದ್ದಿ3
--------------
ಶ್ರೀಪಾದರಾಜರು
ಕೇಳಿಪೇಳಮ್ಮ ನಮ್ಮಮ್ಮ ಲಕುಮೀ ಪ ಕೇಳಿಪೇಳೆ ಹರಿಯಲಿ ಪೋಗಿ ಬಹಳ ಸೋಕಿನವ ಗೋಪಿಬಾಲೀಯರಿಗೆ ಮೆಚ್ಚಿ ಬಹು ಜಾಲವ ಮಾಡಿದ ಕೃಷ್ಣನ ಅ.ಪ. ಪ್ರಳಯ ಕಾಲದಲ್ಲಿ ಆಲದೆಲೆ ಮೇಲೆ ಮಲಗಿಪ್ಪನುಒಲುಮಿಗಳ ಒಲುಮಿಕಾಂತ ಲಲನೆ ನೀನು ಕಮಲಾದೇವಿ 1 ನಿತ್ಯಮುಕ್ತೆ ನಿತ್ಯತೃಪ್ತೆ ನಿತ್ಯಾವಿಯೋಗಿನಿ ಹರಿಗೆಭೃತ್ಯನಲ್ಲೆ ನಾನು ಸ್ವಲ್ಪ ಚಿತ್ತವಿಟ್ಟು ನೋಡೆ ತಾಯಿ 2 ನಿನ್ನ ಹೊರತು ಆತನನ್ನು ತೋರುವರ ಕಾಣೆನಮ್ಮಸನ್ನುತಾಂಗಿ ಸಾರಸಾಕ್ಷಿ ಎನ್ನೊಳು ಕರುಣವ ಮಾಡೇ 3 ಎಲ್ಲ ದಿವಿಜರಲ್ಲಿ ಪೋಗೆ ಬಲುಬಗೆ ಪೇಳಿಕೊಂಡೆಫುಲ್ಲನಾಭನಲ್ಲಿ ಒಂದು ಸೊಲ್ಲನಾಡೋ ಶಕ್ತಿಯಿಲ್ಲ 4 ಪಾದ ಬಾಲ್ಯದಿಂದ ಸೇರಿದ್ದಕ್ಕೆನೀರಜಾಕ್ಷನನ್ನು ತೋರೆ ಭಾರಿ ಫಲವಾಯಿತೆಂಬೆ 5 ನಿಮ್ಮ ಮಾತು ಮೀರ ಶೂರ ನಮ್ಮ ಮಾರಜನಕ ಕೃಷ್ಣಅಮರ ತರುವ ಕಿತ್ತಿ ನಿಮ್ಮ ಮನೆಯೊಳ ಹಚ್ಚಿದನಂತೆ 6 ಸುಂದರಿ ಸೌಭಾಗ್ಯವಂತೆ ಮಂದಿರದೋಳಿಪ್ಪನನ್ನುಇಂದಿರೇಶನನ್ನು ತೋರೆ ನಂದ ಬಾಲ ಮಹಿಳೆ ಅಂಬಾ 7
--------------
ಇಂದಿರೇಶರು
ಕೇಳಿರಿ ಕೌತುಕ ಪೇಳುವೆನೀಗ ಶೀಲ ಶ್ರೀ ಗುರುಗಳ ಕರುಣದಲಿ ಪ. ವ್ಯಾಳಶಯನ ರಂಗ ತಾಳಿ ಕರುಣಿಸಿದ ಮೇಲು ಮೇಲು ಭಕ್ತಿಯ ನೀಡುತಲಿ ಅ.ಪ. ಅರಿಯದ ದೇಶದಿ ಅರಿಯದ ಕಾಲದಿ ಅರಿಯದವಸ್ಥೆಯ ಅನುಭವವು ಸಿರಿಯರಸನ ವ್ಯಾಪಾರವಿದಲ್ಲದಡೆ ನರರಿಗೆ ಸಾಧ್ಯವೆ ನಾಡಿನೊಳು 1 ಸಂಭÀ್ರಮದಲಿ ಸಮಾರಂಭವು ಕಲೆತಿರೆ ಬೆಂಬಿಡದಲೆ ರಕ್ಷಿಸುತಿರಲು ಕುಂಭಿಣಿಯೊಳು ಸ್ಥಿರವಾದ ಪದವಿಗೆ ಅಂಬುಜನಾಭನ ಕರುಣವಿದು 2 ಅಗ್ನಿಗಳೆರಡು ಕಲೆತು ಶಾಂತವಾಗಿ ಭಗ್ನವಿಲ್ಲದ ಆನಂದ ತೋರೆ ವಿಘ್ನವಾಗದ ಕಾಲಗಳೊದಗುತ ಮಗ್ನಗೈಸಿತಾನಂದದಲಿ 3 ಚಲಿಸದ ವಸ್ತುಗಳ್ ಚಲಿಸಿತು ಮತ್ತೆ ಚಲನೆಯಿಲ್ಲದೆ ಸುಸ್ಥಿರವಾಯ್ತು ಬಲು ವಿಚಿತ್ರವು ಭೂತಲದೊಳಗಿದು ನಳಿನನಾಭನ ಸಮ್ಮತವು4 ಬಿಂಬನಾಗಿ ಹೃದಂಬರ ಮಧ್ಯದಿ ಸಂಭ್ರಮಗೊಳಿಸೆಲೊ ಶ್ರೀ ವರನೆ ನಿತ್ಯ ಇಂಬುಗೊಟ್ಟು ಕಾಯೊ ಬಿಂಬ ಶ್ರೀ ಗೋಪಾಲಕೃಷ್ಣವಿಠ್ಠಲ 5
--------------
ಅಂಬಾಬಾಯಿ
ಕೇಳಿಸಲೊಲ್ಲದೇನೋ ಕೃಷ್ಣಾ ಕೇಳಿಕೇಳದಂತಿರುವಿಯೇನೋ ಪ ಬಾಳುವೆಯೊಲು ಕೀಳಾದೆನಾನಿಂತುಏಳಿಸೆನ್ನನು ಎಂದು ಕೇಳಿಕೊಳ್ಳುವದಿನ್ನು ಅ.ಪ ಯಾವತ್ತೂ ತಿಳಿದವನು ಎಂಬರು ಎನ್ನನೋವು ತಿಳಿಯದಾಯ್ತೇನುಸಾವಿರ ವಿಥಿಗಳಿದ್ದೆನ್ನಯ ಪಾಲಿಗೆದೇವಾ ಅವಲ್ಲವು ಕಿವುಡಾದವೇನೋ 1 ತುಂಬಿ ನಿಂತಿಹನೆಂಬೀಭಾವಕೆ ನೀನೆಂಬಿ ಆವಾವಜೀವರ ಭಾವವರಿತು ನೀಕಾವುದೆಂತೆಂಬೊ ಈ ವಚನವು ನಿನಗೆ 2 ಭೇದಭಾವವು ಇಲ್ಲೆಂದೂ ಸಾಧಿಸುವವುವೇದಗಳೆಲ್ಲ ಎಂದುಬಾಧೆಯ ಬಿಡಿಸೆಂದು ಬೇಡಿಕೊಳ್ಳುವೆಗದುಗಿನ ಆಧಾರಿ ದೇವನೆ ವೀರನಾರಾಯಣ 3
--------------
ವೀರನಾರಾಯಣ
ಕೇಳು ಕಲ್ಮಷಹಾರಿ ಕರುಣಾವಾರುಧಿ ಶೌರಿ ತಾಳು ಕ್ಷಮೆಯ ಕೃಪೆದೋರಿ ಕೇಳು ಸಂಸೃತಿ ದುಃಖ ತಾಳಲಾರೆನು ಮಾತ ನಾಲಿಸು ಮಲ್ಲಕಂಸಾರಿ ಪ. ಮೂರೊಂದು ಎಂಬತ್ತು ಲಕ್ಷ ಯೋನಿಗಳನ್ನು ಸಾರಿ ಕಡೆಗೆ ಮಾನುಷ್ಯವನು ಸೇರಿದೆನಿದಿರಲಿ ಷಡ್ವೈರಿ ಗಣವೆನ್ನ ಗಾರು ಮಾಡುವುದನೇನೆಂಬೆ 1 ದೂರಾಪುರದ ಕಾಮ ವಾರುಧಿವಳಗೀಸ ಲಾರದೆ ಬಾಯಬಿಟ್ಟೊರವೆ ಕ್ಷೀರಾಬ್ಧಿಶಯನ ಥಟ್ಟನೆ ಬಂದು ಸಲಹೊ ಮು- ರಾರಿ ನೀನ್ಯಾಕೆನ್ನ ಮರೆವೆ 2 ಬುದ್ಧಿ ಬರುವ ಮೊದಲಿದ್ದ ಪರಿಯು ಮಣ್ಣ ಮುದ್ದೆಯಂತಾಯ್ತನಂತರದಿ ಹದ್ದಿನಂದದಿ ಹಂಗಿನನ್ನವ ಕಾಯುತ್ತ ಇದ್ದೆನು ಪರರ ಮಂದಿರದಿ 3 ಮಧ್ಯವಯಸ್ಸಿನೊಳ್ ಮದನನ ¨ಲೆಯೊಳು ಬಿದ್ದು ಹೊರಳಿ ಬಹು ಬಳಲಿ ಮಧ್ವವಲ್ಲಭ ನಿನ್ನ ಮರೆತೆನು ಮುಂದಾದ- ರುದ್ಧರಿಸೆನ್ನ ಬೇಗದಲಿ 4 ನೇಮವ್ರತಗಳನೊಂದಾದರು ಮಾಡದೆ ಕಾಮಲಾಲಸನಾದೆ ಬರಿದೆ ವ್ಯಾಮೋಹ ಕಡಲಿಗೆ ಕೊನೆಗಾಣೆ ಕಾರುಣ್ಯ ಧಾಮನ ಬಿಡೆ ನಿನ್ನ ಸ್ಮರಣೆ 5 ಸಾಮಜೋದ್ಧಾರ ಸಕಲಸುರವೈರಿ ನಿ- ರ್ನಾಮವತಾರ ಭೂಧಾರ ನಿತ್ಯ ಸವಿದು ಬಾಳುವ ಮುಖ್ಯ ಕಾಮಿತಾರ್ಥವ ನೀಡು ವರದಾ 6 ಸುರಮುನಿ ಪಿತೃಋಣ ಭರವ ನೀಗುವ ಮೂರು ಕಾಲ ಕಳೆದೆ ವರ ದೇವಾಲಯ ಕೂಪಾ ರಾಮಯಜ್ಞಾದಿ ಸ- ತ್ಕರಗಳ ವಾರ್ತೆಯ ತೊರೆದೆ 7 ಗುರು ಹಿರಿಯರ ಸೇವೆ ಮರೆತು ಮನಸಿನಲ್ಲಿ ಸರಿಯಲ್ಲ ಎನಗೆಂದು ತಿಳಿದೆ ಮರಿಯಾದೆ ಗೆಟ್ಟು ಮಾಯಾತಂತು ಬಂಧದೊ- ಳಿರುವೆ ಈ ಪರಿಯಿನ್ನು ಥರವೆ 8 ಲೋಕನಾಯಕ ನಿನ್ನ ಸ್ಮರಣೆ ಒಂದಿದ್ದರೆ ಸಾಕೆಂಬ ಶ್ರುತಿ ಪುರಾಣಗಳು ವಾಕಾನುವಾಕುಗಳು ಸುರಿದ ಸರ್ವಜ್ಞ ಶ್ರೀಕರ ಪಾದದ ಮತವ 9 ಸ್ವೀಕರಿಸುತ ನಿನ್ನ ಸೇವೆ ಮಾಡಲು ಬ್ಯಾರಿ- ನ್ಯಾಕಿನ್ನು ಡಾಂಭಿಕರ ವ್ಯಾಕುಲವ ಬಿಡಿಸಿ ವೆಂಕಟನಾಥ ಕರುಣಿಸ ಬೇಕು ಶ್ರೀವರ ನಿನ್ನ ಪಥವಾ 10
--------------
ತುಪಾಕಿ ವೆಂಕಟರಮಣಾಚಾರ್ಯ
ಕೇಳು ಜೀವನವೆ ನೀ ಮಧ್ವಮತವನುಸರಿಸಿ ಶ್ರೀಲೋಲನಂಘ್ರಿಯನು ನೆನೆದು ಸುಖಿಸೊ ಪ. ನರನಾಗಿ ಪುಟ್ಟುವುದು ದುರ್ಲಭವೆಲವೊ ಭೂ- ಸುರಕುಲದಿ ಜನಿಸುವುದು ಬಹು ದುರ್ಲಭ ಪರಮ ಸುಕೃತವದೇನು ಫಲಿಸಿತೊ ನಿನಗೀಗ ದೊರಕಿದೀ ಜನುಮವನು ಸಫಲ ಮಾಡೊ 1 ಅರಘಳಿಗೆ ಮಾತ್ರವೆ ಪೊತ್ತು ಪೋಗಲು ಆಯು ಕೊರತೆಂದು ತಿಳಿ ನಿನ್ನ ಕ್ಲುಪ್ತದೊಳಗೆ ಮರಳುತನದಲಿ ಬರಿದೆ ದಿನಗಳಿಯಬ್ಯಾಡೆಲವೊ ಸ್ಥಿರವಲ್ಲ ಈ ದೇಹ ಸ್ವಪ್ನಸಮವೊ 2 ದುರುಳರೊಡನಾಡಿ ದುರ್ವಿಷಯ ಲಂಪಟನಾಗಿ ನರಕಯಾತನೆಗೆ ಗುರಿಯಾಗದಿರೆಲೊ ಎರಡುದಿನದೋಡ್ಯಾಟ ಇರಬಂದುದಲ್ಲವಿದು ಪರಗತಿಗೆ ಸಾಧನ ಮಾಡಿಕೊಳ್ಳೊ 3 ಹೋಗುತಿವೆ ಹೋಗುತಿವೆ ದಿವಸ ವ್ಯರ್ಥವಾಗಿ ಹೀಗೆ ಮೈಮರೆದಿಹುದು ನಿನಗೊಳ್ಳಿತೆ ಬ್ಯಾಗ ಹರಿಯನು ಭಜಿಸು ಬಾ ಈ ಮಾತಲ್ಲ ನೀ ಹೋಗಿನೋಡಲು ಯಮನ ಬಾಧೆ ಬಿರುಸೊ4 ಏನ ಹೇಳಲಿ ನಿನ್ನ ಮಂದಮತಿಯನು ಹಿಂದೆ ಶ್ವಾನಸೂಕರ ಮೊದಲಾದ ನೀಚ- ಯೋನಿಗಳೊಳಗೆ ಬಂದು ಅಂದದನು ಕ್ರಮಿಸಿದವನು ಆ ನೋವನಾಗಲೆ ಮರೆದಿಯಲ್ಲೊ 5 ಮುನ್ನ ದುಷ್ಕರ್ಮವ ಮಾಡಿದ ಪ್ರಾಣಿಗಳು ಉನ್ನತ ನೀಚ ದೇಹಗಳ ಧರಿಸಿ ಬನ್ನಬಡುತಿಹುದು ನೀ ನೋಡಿ ನೋಡಿ ಮತ್ತೆ ದುರ್ನಡತೆಯನು ಮಾಡಲುದ್ಯೋಗಿಪೆ 6 ಎಂಬತ್ತು ನಾಲ್ಕು ಲಕ್ಷ ಯೋನಿಗಳೊಳಗೆ ಕುಂಭಿಣಿಯೊಳಗೆ ತಿರುತಿರುಗಿ ಪಾಪ ಉಂಬುದನುಚಿತವೆಂದು ಮನ ಹೇಸಿ ವಾಕರಿಸಿ ನಂಬುನಾರಾಯಣನ ಇನ್ನಾದರೂ 7 ಜನನಿಯ ಗರ್ಭವಾಸ ದುಃಖ ಅತಿಶಯವೊ ಜನನ ಮರಣದ ದುಃಖ ಬಲು ಅಧಿಕವೊ ಘನ ನರಕದಾ ದುಃಖ ಪೇಳಲೊಶವಲ್ಲ ನಿನ- ಗಿನಿತಾದರೂ ನಾಚಿಕಿಲ್ಲವೇನೊ 8 ಸಾರಿ ಪೇಳುವೆನೀಗ ಪುಟ್ಟಿ ಬೆಳೆದಳಿವ ಸಂ- ಸಾರ ಸುಖವಲ್ಲ ಮಹ ದುಃಖಪುಂಜ ಘೋರ ಸಂತಾಪಕ್ಕೆ ಕಡೆಮೊದಲಿಲ್ಲವೊ ವಾರಿಜಾಂಬಕನ ಮರೆಯೊಕ್ಕು ಬದುಕೊ 9 ಹಿಂದೆ ಬಹುಜನುಮದಲಿ ಬಂದು ಬಳಲಿದ ಬವಣೆ ಒಂದೊಂದು ನೆನೆಸಿಕೊಳಲತಿ ಕಷ್ಟವೊ ಮುಂದಾದರು ಸರಿ ಎಚ್ಚೆತ್ತು ಬಿಡದೆ ಗೋ- ವಿಂದನ ಪದಾಂಬುಜವ ಧ್ಯಾನ ಮಾಡೊ 10 ಮಾರಿ ಇಲ್ಲಿದೆಯೆಂದು ಕೇಳುತಲಿ ಪೋಗಿ ನೀ ಭೂರಿ ಭಯಕೊಳಗಹದು ನೀತಿಯಲ್ಲ ದೂರ ತಿಳಿದು ನೋಡಿ ದುರ್ಮಾರ್ಗವನು ಜರಿದು ಸೇರಿ ಸಜ್ಜನರ ಸುಪಥವ ಪಡೆಯೊ 11 ನಿನ್ನಯ ಸ್ವರೂಪಕ್ಕೆ ಹೀಗಾಗುವುದೆಂದು ಪುಣ್ಯವನೆ ಗಳಿಸಿಕೊ ಬ್ಯಾಗ ನೀನು ಇನ್ನು ಈ ಧರೆಯಲ್ಲಿ ಬಿಟ್ಟು ಹೋಗುವ ದೇಹ- ವನ್ನು ಪೋಷಿಸಿಕೊಂಡು ಹಿಗ್ಗಬೇಡ 12 ವನಿತೆಸುತರನು ಪೊರೆಯಬೇಕೆಂಬ ಬುದ್ಧಿಯಲಿ ಧನದಾಸೆಯಿಂದಲಗಣಿತ ಪಾಪವ ಕ್ಷಣದೊಳಗೆ ಸಂಪಾದಿಸಿಕೊಂಬೆ ಎಲೊ ಮೂಢ ನಿನಗಿವರು ಕೊನೆಗೆ ಸಂಗಡ ಬರುವರೆ 13 ಕೆಡಬ್ಯಾಡ ವ್ಯರ್ಥಮೋಹಕೆ ಸಿಲುಕಿ ಜವನವರು ಪಿಡಿದೊಯ್ದು ಕಡಿದಿರಿದು ಕೊಲ್ಲುವಾಗ ಬಿಡಿಸುವವರಾರಿಲ್ಲ ಈಗಳೆ ಮುಂದರಿತು ಕಡಲಶಯನನ ಪೊಂದಿ ಮುಕುತಿ ಪಡೆಯೊ 14 ಈಗಲೇನೊ ಇನ್ನು ಕ್ಷಣಕೇನು ಬಪ್ಪುದೊ ನೀ ಗರುತರಿಯದಲೆ ಹಿತ ರಾಗದಲಿ ಸರ್ವವನು ಎನ್ನದೆಂದಾಡದಿರು ನಾಗಾರಿಗಮನನಾಧೀನವೆನ್ನೊ 15 ನೀ ಮಗುಳೆ ಮಹಿಯೊಳಗೆ ಕಂಡುಕಂಡುದ ಬಯಸಿ ಭ್ರಾಮಕರ ನುಡಿಗೇಳಿ ಭ್ರಾಂತಿಗೊಳದೆ ಕಾಮಾದಿಗಳ ತ್ಯಜಿಸಿ ಸತ್ಕರ್ಮವನು ಮಾಡಿ ಶ್ರೀಮನೋ ಹರನಿಗರ್ಪಣೆಯ ಮಾಡೊ16 ಏನುಧಾವತಿಗೊಳಲೇನೇನು ಫಲವಿಲ್ಲ ಮಾನವಜನುಮ ಜೊಳ್ಳು ಮಾಡಬ್ಯಾಡ ಆನಂದತೀರ್ಥರ ಪಾದಕಮಲವ ಪೊಂದಿ ಅಚ- ಲಾನಂದವಿಠಲನ್ನ ನೀನೊಲಿಸಿಕೊ 17
--------------
ಅಚಲಾನಂದದಾಸ
ಕೇಳು ಪೊರೆ ಶಾಂತ ತಾಳು ರಂಗಾ ನಿನ್ನಾಳು ನಾನಿರುವೆ ಕೃಷ್ಣಾ ಪ ಆಳೋ ಅರಸನೇ ಅ.ಪ. ಗಾಣ ಎಳೆಯುವ ಕ್ವಾಣನಾದೆನೋ ಕಾಣವೋ ನಯನಾ ಕಾಣಿ ವೇಣುಗೋಪಾಲ 1 ಮಾಯಾ ಮಗನಿಗೆ ನಾಯನಾಗಿರುವೆ ಮಾಯಾ ಕಾಯೋ ನರಹರಿ 2 ಬೇಡುವರು ಧನ ಕಾಡಿ ಎನ್ನನು ನೋಡು ಫಣಿಶಯನಾ ನಾಡಿಗೊಡೆಯಾ ಕೈ ಜೋಡಿಸುವೆನಯ್ಯಾ 3 ಬೇಗ ತವದಾಸನಾಗಿ ಮಾಡಿಕೋ ಸಾಗರಶಯನಾ ಈಗ ಭವಭಯ ನೀಗಿಸೈಯ್ಯ ಕೈ ಸಾಗದಾಯಿತು ಭಾಗವತಪ್ರಿಯಾ 4 ಆಶಾ ಬಿಡಿಸಿ ನೀ ಲೇಸು ಕೊಡು ಹನುಮೇಶವಿಠಲನೇ ಘಾಸಿಯಾದೆನು ಪೋಷಿಸಯ್ಯ ರಮೃಶ ಪಂಢರಿವಾಸ ವಿಠಲ 5
--------------
ಹನುಮೇಶವಿಠಲ
ಕೇಳು ಮನವೇ ನೀನು | ಅನವರತಾ | ಬಾಳು ಹಿರಿಯ ನಂಬಿರು ತಾ ಪ ಸದ್ಗುರು ದಯ ಪಡೆದು | ಭವದಲಿ ಪಡಿ ಭಾಗ್ಯದಲಿ 1 ಹಲವು ಹಂಬಲ ತ್ಯಜಿಸಿ | ದೃಢದಿಂದ | ಬಲಗೊಳ್ಳುಗುರು ಪದದ್ವಂದ್ವ 2 ಉದರ ಕುದಿಯಗಾಗಿ | ಕಂಡವನಾ | ವದಕೆರಗಲು ಬಹದೇನಾ 3 ಇಂದು ಸುಖಿಸು ಹೊಂದಿ ಕೃಷ್ಣಯ್ಯನ | ಸನ್ನುತ ಮಹಿಪತಿ ಚರಣಾ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕೇಳೆ ಯಶೋದೆ ನಿನ್ನ ಮಗನ ಲೂಟಿಯಪ ತಾಳಲಾರೆವೆ ನಾವು ತರಳನ ದುಡುಕುಪೇಳಬಾರದೆ ಗೋಪಾಲಕೃಷ್ಣಗೆ ಬುದ್ಧಿಅಮ್ಮಾ-ಇದು ಚೆನ್ನಾಯಿತು ತಿಳಿದವನಲ್ಲವೆನೀ ಕೇಳೆ ಯಶೋದೆ ನಿನ್ನ ಮಗನ ಲೂಟಿಯ ಅ.ಪ. ಬಾಲಕನೆಂದು ಲಾಲಿಸಿ ಕರೆದರೆಮೂಲೆ ಮನೆಯೊಳಗೆ ಪೊಕ್ಕುಪಾಲು ಮೊಸರು ಬೆಣ್ಣೆಗಳ ಮೆದ್ದುಕೋಲಲಿ ನೀರ ಕೊಡಗಳೊಡೆದನೀಲವರ್ಣದ ದಿಟ್ಟ ನಿತ್ಯವೀ ಹೋರಾಟಬಾಲೆಯರಲ್ಲಿ ನೋಟ ಬಹಳ ಬಗೆಯಲ್ಲಿತಿಳಿದೆವೆಂದರೆ ಮೇಲೆ ಎಂಜಲುಗುಳಿ ಪೋದಅಮ್ಮಾ ಇದು ಚೆನ್ನಾಯ್ತು ತಿಳಿದವನಲ್ಲವೆನೀ ಕೇಳೆ ಯಶೋದೆ ನಿನ್ನ ಮಗನ ಲೂಟಿಯ 1 ಮತ್ತೆ ಭಾಮಿನಿಯರೆಲ್ಲರು ಕೂಡಿಮಡುವಿನೊಳು ಜಲಕ್ರೀಡೆಯನಾಡಲುಚಿತ್ತಚೋರ ನಮ್ಮ ಸೀರೆಗಳೆಲ್ಲವಹೊತ್ತು ಕೊಂಡು ಮರವನೇರಿದಬತ್ತಲೆ ಭಾಮೆಯರೆಲ್ಲ ಬೇಡಿದರೆ ಕೊಡನಲ್ಲಯುಕ್ತಿ ಬಹುಬಲ್ಲ ಹತ್ತಿಲಿ ಬಂದು ಕರವೆತ್ತಿ ಮುಗಿದರೆ ವಸ್ತ್ರ ಕೊಡುವೆನೆಂದಅಮ್ಮಾ ಇದು ಚೆನ್ನಾಯ್ತು ತಿಳಿದವನಲ್ಲವೆನೀ ಕೇಳೆ ಯಶೋದೆ ನಿನ್ನ ಮಗನ ಲೂಟಿಯ 2 ಸದ್ದು ಮಾಡದೆ ಸರಿ ಹೊತ್ತಿಲಿನಿದ್ದೆಗಣ್ಣಿಲಿ ನಾನಿರಲುಮುದ್ದು ಕೃಷ್ಣ ನಮ್ಮ ಮನೆಯವರಂತೆಮುದದಿಂದಲೆನ್ನನು ತಾ ಕೂಡಿದಎದ್ದು ನೋಡುವೆನಲ್ಲ ಆಹ ಏನೆಂಬುವರೆಲ್ಲಬುದ್ಧಿ ಮೋಸ ಬಂತಲ್ಲ ಪೊದ್ದಿ ಸಲ್ಲಿಸಿದೆಬುದ್ಧಿವಂತನೆಂದರೆ ಪರಿಹಾಸ್ಯ ಮಾಡಿ ನಗುವಅಮ್ಮಾ ಇದು ಚೆನ್ನಾಯ್ತು ತಿಳಿದವನಲ್ಲವೆನೀ ಕೇಳೆ ಯಶೋದೆ ನಿನ್ನ ಮಗನ ಲೂಟಿಯ 3
--------------
ವ್ಯಾಸರಾಯರು
ಕೇಳೇ ಯಶೋದೆ ನಿನ್ನ ತನಯನ ಲೀಲೆಯ ಪೇಳಲು ಅಳವಲ್ಲವೇ ಪ ಬಾಳುವ ಸತಿಯರ ಧಾಳಿ ಮಾಡುವ ಯದÀು ಮೌಳಿ ಶ್ರೀ ಕೃಷ್ಣಗೆ ಪೇಳೀ ವಿವೇಕವ ಅ.ಪ ಇಂದುವದನ ಎಮ್ಮ ಮಂದಿರಗಳ ಪೊಕ್ಕು ಪೊಂದುವ ಪಾಲ್ಬೆಣ್ಣೆಯ ಇಂದು ಸಿಕ್ಕಿದನೆಂದು ಕರಗಳಿಂ ಪಿಡಿಯಲು ಮಂದಹಾಸವ ಬೀರಿ ಮನವ ಸೋಲಿಸುವನು 1 ನೀರಿಗೆ ಪೋಗಲು ಯಾರೂ ಇಲ್ಲದ ವೇಳೆ ಸೇರುವ ಎಮ್ಮೊಡನೆ ಮೀರಿ ಪೋಗಲು ಕಾಲು ಬಾರದ ಎಮ್ಮೊಳು ಸಾರಸಾಕ್ಷ ಕೃಷ್ಣ ಸರಸವ ತೋರುವ 2 ನಿನ್ನ ತನಯ ಪ್ರಸನ್ನ ಶ್ರೀಕೃಷ್ಣನು ಅನ್ಯಾಯಕಾರನಮ್ಮ ಚನ್ನಾಗಿ ಇವನಿಗೆ ಬುದ್ಧಿ ಕಲಿಸದಿರೆ ಬೆನ್ನು ಹತ್ತುವೆವು ಕನ್ಯೆಯರೆಲ್ಲರು 3
--------------
ವಿದ್ಯಾಪ್ರಸನ್ನತೀರ್ಥರು
ಕೇಳೋನಂದ ಇದು ಏನು ಚೆಂದ ಹಾಲಿನ್ಹರವಿಯ ಒಡೆದೋಡಿ ಬಂದು ಬಾಲರನು ಕೂಡ್ಯಾಡಿ ಗೋವಿಂದ ಬವಣೆಬಡಿಸುವ ಬಲುಬಗೆಯಿಂದ ಪ ಕಣ್ಣ ತೆರೆದು ಉದಕದೊಳಾಡುವನು ಸಣ್ಣ ಮೋರೆಯ ಮಾಡಿ ಬಗ್ಗುವನು ಮಣ್ಣಕೆದರುತ ಕ್ರೋಡಾಗಿ ತಾನು ಚಿನ್ನಸುರ ಎಲ್ಲೆ ಕರುಳ್ಹಾರ್ಹಾಕುವನು 1 ತಿರುಕನಂದದಿ ಬೇಡಿಕೊಂಬುವನೊ ಗುರುತದಾರದರಿಯ ತಾಯ್ಹಂತಕನು ದೊರೆತನವ ಬಿಟ್ಟಡವಿಲಿರುವವನು ಶರತಮಾಡಿ ಮಾತುಳನ ಕೊಲ್ಲುವನು 2 ಬËದ್ಧರೂಪದಿ ಲಜ್ಜೆಗೆಡಿಸುವನು ಎದ್ದು ತುರುಗನೇರ್ಯೋಡಿ ಪೋಗುವನು ಕದ್ದು ಬೆಣ್ಣೆಯ ಮೆಲ್ಲುವ ತಾನು ಮುದ್ದು ಭೀಮೇಶಕೃಷ್ಣ ಎಲ್ಲಿಹನು 3
--------------
ಹರಪನಹಳ್ಳಿಭೀಮವ್ವ
ಕೈಕೊಂಡ - ನೃಹರಿ ಕೈಕೊಂಡ ಪ ಕೈಕೊಂಡ ಪೂಜೆಯ ನೃಹರಿ | ತ್ರೈಲೋಕ್ಯಕನಾಥನು ಅಸುರಾರಿ | ಆಹತೋಕನ ಸಲಹಲು | ಏಕಮೇವನ ಲೀಲೆಕೈಕೊಂಡ ಅವತಾರ | ಆ ಕಂಬೋದ್ಭವನಾಗಿಅ.ಪ. ಭಕ್ತಿ ಭಾವದಿ ಪರಾಶರ | ಬಹುತಪ್ತ ಭಾವದಿ ಕೃಷ್ಣೇ ತೀರ | ದಲ್ಲಿಸಕ್ತನಿರೆ ಧ್ಯಾನ ಗೋಚರ | ನಾಗಿವ್ಯಕ್ತನು ಷೋಡಶಕರ | ಆಹದೃಪ್ತ ದಾನವ ಧ್ವಂಸಿ | ದೀಪ್ತಾನಂತ ತೇಜಮೂರ್ತಿ ಕಾಣಿಸಿದನ | ವ್ಯಕ್ತನಾಗಿದ್ದಂಥ 1 ಕಟಿಸೂತ್ರ ಸ್ಮರ ಕೋಟಿ ಲಾವಣ್ಯಕರ ಪಾಶ ಅಸಿಕುಂತ | ವರದಾ ಭಯವು ಹಸ್ತ 2 ಕಂಬು ಚಕ್ರ ಚರ್ಮಕರ | ಮತ್ತೆಅಂಬುಜ ಶಾಂಙÁ್ರ್ಞದಿಧರ | ಗದಸಂಭೃತ ತುಳಸಿಯ ಹಾರ | ಮತ್ತೆಇಂಬಿನ್ವ್ಯೊ ಜಯಂತಿ ಹಾರ | ಆಹಅಂಬುಜದಳ ನೇತ್ರ | ಇಂಬಾಗಿ ಕರಪಾತ್ರತುಂಬ ಪೀಯುಷಧಿ | ಪೊಂಬಸಿರ ವಂದ್ಯನು 3 ಶ್ರೀವತ್ಸ ಲಾಂಛನ ಭೂಷ | ತನ್ನಭ್ರೂವಿಲಾಸದಿ ಬ್ರಹ್ಮ ಈಶ | ರಿಗೆತಾವೊಲಿದೀವ ಆವಾಸ | ಯೆನುತವ ವೇದಂಗಳು ಅನಿಶ | ಆಹಮಾವಿನೋದಿಯ ಗುಣ | ಸಾವಕಾಶಿಲ್ಲದೆಸಾರ್ವದ ಪೊಗಳುತ್ತ | ಭಾವದೊಳ್ಹಿಗ್ಗುವವು 4 ಪೊತ್ತು ರೂಪವ ಬಲಪಾದ | ಚಾಚುತ್ತ ರಕ್ಕಸನೊಡಲಗಾಧ | ಇಟ್ಟುವತ್ತುತ ತೊಡೆಯಲ್ವಿನೋದ | ದ್ವಯಹಸ್ತ ನಖದಿ ಉದರ ಬಗೆದ | ಆಹಕಿತ್ತುತ ಕರುಳನ್ನ | ಕತ್ತಿನೊಳ್ಹಾಕುತಭಕ್ತನ ಸಂಬಂಧ | ಎತ್ತಿ ತೋರ್ದ ಜಗಕೆ 4 ಪಂಚ ಮೋಕ್ಷಪ್ರದ ಹರಿ | ಆಯ್ತುಪಂಚಾಮೃತಭಿಷೇಕ ಅವಗೆ | ಮತ್ತೆಪಂಚಕಲಶಾರ್ಚನವು ಆವಗೆ | ಆಯ್ತುಪಂಚ ಕುಂಭಾಭಿಷೇಕವಗೆ | ಆಹಸಂಚಿಂತಿಸುತ ಹೃ | ತ್ಪಂಕಜದೊಳು ನೋಡೆಸಂಚಿಂತಾಗಮ ನಾಶ | ಕೊಂಚವು ಪ್ರಾರಬ್ಧ 6 ಶಾಲಿಗ್ರಾಮದ ಶಿಲ ಏಕ | ಪೊತ್ತುಪೋದಕ ಬಾಹು ಅಲೀಕ | ಶತಶಾಲೀವಾಹನವೆಂಬ ಶಕ | ದೊಳುಜ್ವಾಲಾ ನರಹರಿ ನಾಮಕ | ಆಹಯೇಳು ಐದೊರ್ಷದ | ಭಾಳ ತಪಕೆ ಮೆಚ್ಚಿಶೀಲ ದ್ವಿಜ ದಂಪತಿ | ಗೊಲಿದು ಪೇಳಿದ ಹೀಗೆ 7 ಭೀಮಕ ರಾಜಗೆ ಪೇಳು | ತೃಣಜಾಲವ ಹಾಕೆ ನೀರೊಳು | ಅಲ್ಲಿಜ್ವಾಲೆ ಉದ್ಭವಿಸಲು ಬಲು | ನೀರಮೇಲಕ್ಕೆ ಒಳಗಿಂದ ಬರಲು | ಆಹತೋಳೆರಡಲಿ ರಾಜ | ಮೇಲೆತ್ತೆ ಬರುವನುತಾಳ ಮೇಳ್ವೈಭವ | ದೊಳಗೆ ಸ್ಥಾಪಿಸಲೆಂದು 8 ಅಂಗಹೀನರೆ ಕೇಳಿ ಆವ | ನಿಮ್ಮಭಂಗಿಪ ಮೂಕಾಂಧ ಭಾವ | ನೀಗಿಶೃಂಗಾರ ರೂಪ ಸ್ವಭಾವ | ನರಸಿಂಗ ಕೊಡುವೆನು ಸೇವ | ಆಹ ಹಿಂಗದೆ ಕೊಡುವೆನು | ಅಂಗಜ ಪಿತ ನರಸಿಂಗಪುರವೆಂದು | ಸಂಗೀತವಾಗಲಿ 9 ವತ್ಸರ ಸೌಮ್ಯವು ಪುಷ್ಯ | ದಿನದರ್ಶ ವ್ಯಾಸತೀರ್ಥ ಶಿಷ್ಯ | ಆದರ್ಶ ದಾಸರ ದಿನ ಭವ್ಯ | ಭಕ್ತವತ್ಸಲ ಸ್ವೀಕಾರ ಆಲ್ಪ್ಯ | ಆಹಉತ್ಸವ ಕೊಳ್ಳುತ | ಉತ್ಸಾಹವೆನಗಿತ್ತುಮತ್ಸ್ಯಾದಿ ದಶರೂಪಿ | ಕೃತ್ಸ್ನ ಕಾರುಣ್ಯನು 10 ಪರಾಶರಗೊಲಿದ ಸುಶೀಲ | ಖಗವರನು ಭೂದೇವಿಯು ಬಲ | ಎಡವರಲಕ್ಷ್ಮೀ ಪ್ರಹ್ಲಾದ ಬಾಲ | ಸುರವರರಿಂದ ಸ್ತುತ್ಯ ವಿಶಾಲ | ಆಹಗುರು ಗೋವಿಂದ ವಿಠ್ಠಲ | ಗುರು ಬಿಂಬ ನರಸಿಂಗಶರಣರ ಅಪಮೃತ್ಯು | ಹರಿಸಿ ಸಂತತ ಕಾಯ್ವ11
--------------
ಗುರುಗೋವಿಂದವಿಠಲರು