ಒಟ್ಟು 344 ಕಡೆಗಳಲ್ಲಿ , 69 ದಾಸರು , 317 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚೆನ್ನಕೇಶವದೇವರಾಯಇನ್ನು ಸುಖಿಪೆನೆಂತೆನಗೆ ಅನ್ಯಥಾ ಗತಿಯಿಲ್ಲ ಪ. ಅನುದಿನ ಸಂದಣಿಸೆ 1 ಉಡುವಾಸೆ ನುಡಿವಾಸೆ ಬೇಡುವಾಸೆ ಕೊಡುವಾಸೆಒಡಲ ತುಂಬಬೇಕೆಂಬ ಆಸೆಕೊಡದವನ ಬಡಿದು ಜಡಿವಾಸೆ ಬಿಡದಿರಲು 2 ಹಯವದನನೆ ದೇವ ನಿನ್ನ ನೆನೆಯದಿದ್ದೀಮನಕೆಭಯವೆಲ್ಲಿಹುದು ಜಗನ್ನಾಥ ನಿನ್ನದಯವನೆ ಬೀರಿ ನಿರ್ದಯನನ್ನುದ್ಧರಿಸೊ 3
--------------
ವಾದಿರಾಜ
ಜಯ ಜಯ ಮಂಗಳಜಯ ಮಂಗಳ ಶುದ್ಧಾದೈತನಿಗೆ ಪ ಅಗಣಿತ ಮಹಿಮಗೆ ಅಕ್ಷಯರೂಪಗೆಅಖಂಡ ಸಹಜಾನಂದನಿಗೆಝಗಿ ಝಗಿತಾತ್ಮಗೆ ಝಳುಕಿಸಿ ಕರ್ಣದಿಝಣನಾದವ ಕೇಳ್ವನಿಗೆಸೊಗಯಿಸಿ ಚಂದ್ರನ ಶತಕೋಟಿಯಪ್ರಭೆ ಸಾರವ ಸವಿಸವಿದುಣ್ಣುವಗೆಬಗೆ ಆನಂದದಿ ಸುಖಿಸುವ ದೇವಗೆಭಾಸ್ಕರ ತೇಜಃಪುಂಜನಿಗೆ1 ನಿತ್ಯಾನಂದಗೆ ನಿರ್ಮಲರೂಪಗೆನಿಶ್ಚಲ ಪರಬ್ರಹ್ಮಾತ್ಮನಿಗೆನಿತ್ಯಶುದ್ಧಗೆ ನಿಜನಿರ್ಮಾಯಗೆನಿಜಬೋಧ ಜ್ಞಾನೈಕ್ಯನಿಗೆಪ್ರತ್ಯಗಾತ್ಮಗೆ ಪೂರ್ಣಬ್ರಹ್ಮನಿಗೆಪರಮ ಪರತರ ಪಂಡಿತಗೆನಿತ್ಯತೃಪ್ತಗೆ ನಿಗಮಾಗಮನಿಗೆನಿಶ್ಚಿಂತಾತ್ಮ ನಿಸ್ಪøಹಗೆ 2 ಕೈಯಲಿ ಪಿಡಿದಿಹ ಜಪಮಾಲೆಯಸರ ಕರ್ಣಕುಂಡಲವಿಟ್ಟಿಹಗೆಮೈಯೊಳು ಪೊದ್ಹಿಹ ಕಾಷಾಯಂಬರಮಿರುಪಿನ ಕೌಪೀನವುಟ್ಟಿಹಗೆಮೈಯೊಲೆದಾಡುವ ಸ್ವಾತ್ಮಾನಂದದಿನಲಿವ ಸದ್ಗುಣ ಶಾಂತನಿಗೆಮೈಯನೆ ಸದ್ಗತಿ ಭಕ್ತರಿಗೀಯುವವ್ಯಾಪಿತ ಜೀವನ್ಮುಕ್ತನಿಗೆ3 ಆರವಸ್ಥೆಯ ಧರಿಸಿಯೆ ಜಗದಲಿಅನಂತರೂಪ ತಾನಾಗಿಹಗೆಮೀರಿಯೆ ಸದ್ಗುಣ ನಿರ್ಗುಣ ರೂಪವಮೆರೆದಿಹ ಮುಮುಕ್ಷಾಂಗನಿಗೆತೋರುವ ತ್ವಂಪದ ತತ್ತ್ವಮಸಿಪದತೋರಿ ವಿರಾಜಿಪ ತುಷ್ಟನಿಗೆಧೀರೋದ್ಧಾರಗೆ ದೀನರನಾಥಗೆದೃಶ್ಯಾದೃಶ್ಯ ವಿದೂರನಿಗೆ 4 ನಿರುಪಮ ನಿರಮಯ ನಿಜ ನಿರ್ಲಿಪ್ತಗೆನಿರ್ಭಯ ನಿರ್ವಿಕಲ್ಪನಿಗೆಪರಮಪುರುಷಗೆ ನಿಗಮೋದರನಿಗೆಪರಮಾರೂಢಾ ಮಾರ್ಗನಿಗೆಗುರುಚಿದಾನಂದ ಅವಧೂತಾತ್ಮಗೆಗುಣನಿಧಿ ತುರಿಯಾತೀತನಿಗೆಸ್ಥಿರಸಿದ್ಧ ಪರ್ವತದಾಸ ಶ್ರೀಪುರುಷಗೆಬಗಳಾ ಶ್ರೀಗುರು ರೂಪನಿಗೆ 5
--------------
ಚಿದಾನಂದ ಅವಧೂತರು
ಜಿಜ್ಞಾಸುವಿನ ಲಕ್ಷಣಾ ಕೇಳು ನೀಕ್ಷಣಾ ಪರಮಸುಖಾಕಾಂಕ್ಷಕನಾ ಬಾಳಿನ ವಿಷಯದಿ ಬೇಸರಗೊಳು ತಾ ವಿರತಿಯಿಂದರುವಾ ಬೋಧ ಕೇಳ್ವನಿವಾ ಚಿತ್ತದಿ ಭಕ್ತಿಭಾವನಾ ತಾಳುತ ಸಾಧನಾ ಮಾಡುತಲಿಹನಿವ ಕಾಣಾ ಆತ್ಮಾನಾತ್ಮನಿವೇಕ ವಿಚಾರ ಕೇಳುತ ತನ್ನೊಳಗÉೀ ಮಿಥ್ಯಾರೊಪಿತ ಜೀವಭಾವನನಾ ಜರÉಯುತ ಮನದೊಳಗೇ ಮಾಡುವ ಸುವಿಚಾರಾ ಇವನೆ ಧೀರ ಪರಮಸುಖಕಾಂಕ್ಷಕನಾ ವಿಷಯದಿ ಹರಿಯುವ ಮನವÀನೆಳೆÀದು ಬೋಧದೊಳಗಿರುವಾ ಮೋದ ಹೊಂದುವ ತಾ ಶ್ರೀ ಗುರುಶಂಕರನಾ ಆನಂದರೂಪನಾಬೆರೆತು ನಾ ಸುಖಿಸುವನಾ
--------------
ಶಂಕರಭಟ್ಟ ಅಗ್ನಿಹೋತ್ರಿ
ಜೀವಿಸು ಜಗದಿ ಬಾಲಕನೆ | ಚಿರಂಜೀವಿಯಾಗುತ ಪ ಚಿತ್ತಸುಶಿದ್ಧಿಯಿಂದಲಿ | ನಿತ್ಯಾನುಷ್ಟಾನ ಗೈಯುತಲಿ || ಸತ್ಯಸುಶೀಲನಾಗುತ | ಅತ್ಯಾನಂದವನನುಭವಿಸು 1 ಕ್ರೋಧಾದಿ ಗುಣವ ನಿಗ್ರಹಿಸಿ | ಸಾಧುಸತ್ವಥವಲಂಬಿಸಿ ಭೂದೈವರಾರಾಧಿಸುತ ನೀ | ಸಂಪದಿಸು ಪರಮಸತ್ಕೀರ್ತಿ 2 ಶ್ರೀಮಧ್ವಮತವಲಂಬಿಸಿ | ಪಾಮರ ಮತವ ಧಿಕ್ಕರಿಸಿ | ಈ ಮಹೀಮಂಡಲದಿ ಸುಖಿಸು ಜೀವಿಸು 3
--------------
ಶಾಮಸುಂದರ ವಿಠಲ
ಜೀವಿಸು ನೀ ಸುಖಿಯಾಗು ಜಗದಿ ಪ ಬಾಲೆ ನೀ ಗುಣವಂತೆ ಸುಶೀಲಳೆಂದೆನಿಸಿ || ಬಾಲರ ಪಡೆದು ಬಾಲೆ ಸನ್ಮುದದಿ 1 ಪತಿಯ ಆರಾಧಿಸುತ ಬಲುಹಿತ ತೋರುತಲಿ 2 ಶಾಮಸುಂದರನ ನಾಮ ಸಂಕೀರ್ತನ | ಮಣಿ ನೀ 3
--------------
ಶಾಮಸುಂದರ ವಿಠಲ
ಡಿಂಬದಲ್ಲಿ ಇರುವ ಜೀವ ಕಂಬಸೂತ್ರ ಗೊಂಬೆಯಂತೆಎಂದಿಗಿದ್ದರೊಂದು ದಿನ ಸಾವು ತಪ್ಪದು ಪ ಬಟ್ಟೆ ಕಾಣದು1 ಹತ್ತು ಎಂಟು ಲಕ್ಷ ಗಳಿಸಿ ಮತ್ತೆ ಸಾಲದೆಂದು ಪರರಅರ್ಥಕಾಗಿ ಆಸೆಪಟ್ಟು ಸುಳ್ಳು ನ್ಯಾಯ ಮಾಡ್ವರುಬಿತ್ತಿ ಬೆಳೆದು ತನ್ನದೆಂಬ ವ್ಯರ್ಥಚಿಂತೆಯನ್ನು ಮಾಡೆಸತ್ತು ಹೋದ ಮೇಲೆ ಅರ್ಥ ಯಾರಿಗಾಹುದೊ 2 ಹೊನ್ನು ಹೆಣ್ಣು ಮಣ್ಣು ಮೂರು ತನ್ನಲಿದ್ದು ಉಣ್ಣಲಿಲ್ಲಅಣ್ಣತಮ್ಮ ತಾಯಿ ತಂದೆ ಬಯಸಲಾಗದುಅನ್ನ ವಸ್ತ್ರ ಭೋಗಕಾಗಿ ತನ್ನ ಸುಖವ ಕಾಣಲಿಲ್ಲಮಣ್ಣುಪಾಲು ಆದಮೇಲೆ ಯಾರಿಗಾಹುದೊ 3 ಬೆಳ್ಳಿ ಬಂಗರಿಟ್ಟುಕೊಂಡು ಒಳ್ಳೆ ವಸ್ತ್ರ ಹೊದ್ದುಕೊಂಡುಅಳ್ಳಾಚಾರಿ ಗೊಂಬೆಯಂತೆ ಆಡಿ ಹೋಯಿತುಹಳ್ಳ ಹರಿದು ಹೋಗುವಾಗ ಗುಳ್ಳೆ ಬಂದು ಒಡೆಯುವಂತೆಉಳ್ಳೆ ಪೊರೆಯಂತೆ ಕಾಣೊ ಸಂಸಾರದಾಟವು 4 ವಾರ್ತೆ ಕೀರ್ತಿಯೆಂಬುವೆರಡು ಸತ್ತ ಮೇಲೆ ಬಂದವಯ್ಯವಸ್ತು ಪ್ರಾಣನಾಯಕನು ಎಲ್ಲಿ ದೊರಕ್ಯಾನುಕರ್ತೃ ಕಾಗಿನೆಲೆಯಾದಿಕೇಶವನ ಚರಣಕಮಲನಿತ್ಯದಲ್ಲಿ ಭಜಿಸಿ ಸುಖಿಯಾಗಿ ಬಾಳೆಲೊ 5
--------------
ಕನಕದಾಸ
ತಂದೆ ಪ್ರಾಣೇಶವಿಠ್ಠಲರಾಯ ಒಲಿದು ಆ |ನಂದ ಕೊಡು ಈ ಭಕ್ತಗೆ ||ಪೊಂದಿಕೊಂಡಿಹ ನಿನ್ನನೆಂದು ನಾ ಪ್ರಾರ್ಥಿಸುವೆ ಮಂದರೋದ್ಧರ ಮುಕುಂದಾ | ನಂದಾ ಪ ವೈರಿ ನಿನ್ನವರಡಿಗೆ ನಡಿಯೆ ಪದವನುಕೂಲವಾಗಿರಲೀ ಬರಲಿ1 ಇವನ ಕವನಾ ಕೇಳಿ ಹರುಷಯುತರಾಗಿ ಸತ್ಕವಿಗಳೂ ತಲಿದೂಗಲಿ |ಪವನ ಮತದಲಿ ಪೇಳಿದಂತೆ ಅದನನುಸರಿಸಿ ಕವಿತೆಯು ಬಂದೊದಗಲಿ ||ನವರಾಗಗಳಿಂದೊಪ್ಪಿ ಲಘು ದೀರ್ಘ ಮೊದಲು ಮರ್ಮವ ತಿಳಿದು ಪೇಳುತಿರಲಿ |ಭುವನದೊಳಗುಳ್ಳ ಸುಜ್ಜನರು ಶೋಧಿಸಿ ಆಶುಕವಿಯೆಂದು ಕರೆಯುತಿರಲಿ | ಮೆರೆಯಲಿ || ಚಿರಕಾಲ ಬಾಳಿ ಬಹು ಕೀರ್ತಿಯುತನಾಗಿ ಈ ಧರಿಯೊಳಗೆ ಸುಖಿಸುತಿರಲಿಪರಮ ಭಕುತಿಯು ಪೆಚ್ಚಿ ಸೋತ್ತುಮರ ಪದಗಳಿಗೆ ಎರಗಿ ಕರುಣವ ಪಡೆಯಲಿ ||ಮರೆಯದಲೆ ಇಹಪರದಿ ಸುಖಗಳನು ಕೊಟ್ಟು ಶ್ರೀ ಹರಿಯೆ ಪೊರೆಯಂದಾಡಲಿ |ಮರುತಾಂತರ್ಯಾಮಿ ಗುರು ಪ್ರಾಣೇಶ ವಿಠಲನೆ ಶರಣ ಜನ ಕಾಮಧೇನೂ ನೀನು 3
--------------
ಗುರುಪ್ರಾಣೇಶವಿಠಲರು
ತಂದೆ ಮುದ್ದುಮೋಹನ ದಾಸರಾಯರ ಪದವ ಪೊಂದಿದವರಿಗೆ ಕಷ್ಟವೆ ಪ. ಬಂಧನವ ಪರಿಹರಿಸಿ ಸಿಂಧುಶಯನನ ಮೂರ್ತಿ ತಂದು ತೋರುವರು ಮನದಿ | ಮುದದಿ ಅ.ಪ. ಅತಿಶಯದ ತಪದಿಂದ ಪತಿತ ಪಾವನನಂಘ್ರಿ ಮತಿವಂತರಾಗಿ ಭಜಿಸಿ ಪೃಥುವಿಯೊಳಗವತರಿಸಿ ಯತನವಿಲ್ಲದೆ ಕರ್ಮ ಪಥವನ್ನೆ ಕೊನೆಗಾಣಿಸಿ ಪತಿತರಿಗೆ ಅಂಕಿತವ ಹಿತದಿಂದ ಬೋಧಿಸಿ ಅತಿ ಅದ್ಭುತವ ತೋರಿಸಿ ಸುತರಂತೆ ಶಿಷ್ಯರನು ಹಿತದಿಂದನುಗ್ರಹಿಸಿ ಗತಿಯ ಮಾರ್ಗವ ತೋರ್ವರು | ಇವರು 1 ದೇವತೆಗಳೊಡೆಯರು ಪಾವಮಾನಿಗೆ ಪ್ರಿಯರು ಭೂವಲಯದೊಳು ಮೆರೆವರು ಆವಕಾಲದಲಿ ಸುಖಾನಂದಭೋಗಿಗಳು ಪಾವನ ಸುಚರಿತ್ರರು ದೇವ ನರಹರಿ ಕರುಣ ಪೂರ್ಣವಾಗಿ ಪಡೆದು ಭಾವಶುದ್ಧಿಯಲಿಪ್ಪರು ಈ ವಿಧದ ಇವರ ಚರ್ಯೆಯನರಿಯುವರನರಿಯೆ ಕಾವ ಭಕ್ತರ ಕರುಣಿಯ | ದೊರೆಯ 2 `ತ' ಎನಲು ತಪಸಿಯಹ `ದೇ' ಎನಲು ದೇಹ ಶುದ್ಧಿ `ಮು' ಎನಲು ಮುಕ್ತನಾಗ್ವ `ದು' ಎನ್ನಲು ದುರ್ಜನರು ದೂರವಾಗಿರುತಿಹರು `ಮೋ' ಎನಲು ಮೋಕ್ಷದಾರಿ `ಹ' ಎನಲು ಹರಿಬಂದು `ನ' ಎನಲು ನರ್ತಿಸುವ `ದಾ' ಎನಲು ದಾರಿದ್ರನಾಶ `ಸ' ಎನಲು ಸತ್ವಗುಣಿ `ರಾಯ' ಎನೆ ಪದವಾಳ್ವ `ರು' ಎನಲು ಋಜುಮಾರ್ಗಿಯು | ಸುಖಿಯು 3 ಈ ರೀತಿಯಿಂ ತಂದೆ ಮುದ್ದುಮೋಹನದಾಸ ರಾ - ಯರೆಂತೆಂದು ಜಪಿಸೆ ಪಾರುಗಾಣಿಸಿ ಭವದ ಬಂಧನವ ಬಿಡಿಸುವರು ದೇವಾಂಶ ಸಂಭೂತರು ಕಾರುಣ್ಯ ನಿಧಿಗಳು ತೋರುವರು ಹರಿಮಾರ್ಗ ಸಾರಿ ಭಜಿಪರಿಗೆ ಸತತ ನಾರಸಿಂಹನ ಚರಣ ಸೇರಿಸಿ ಹೃದಯದಲಿ ಸೂರೆಗೊಂಡಿಹರು ಮುಕ್ತಿ | ಸುಕೀರ್ತಿ 4 ಅಪಾರ ಅದ್ಭುತದ ಕರ್ಮಗಳ ನಡೆಸಿಹರು ಪಾಪಿ ಜನಗಳ ಪೊರೆವರು ರೂಪ ರೂಪಾಂತರದಿ ತೋರ್ಪರು ಸುಜನರಿಗೆ ಶ್ರೀಪತಿಯ ವರ ಭಕ್ತರು ಕೋಪತಾಪಗಳಿಂದ ನಿರ್ಲೇಪರಾಗಿಹರು ತಾಪತ್ರಯಗಳ ಕಡಿವರು ಗೋಪಾಲಕೃಷ್ಣವಿಠ್ಠಲನ ಪದಧ್ಯಾನವನು ಗೋಪ್ಯದಿಂದಲಿ ಇತ್ತರು | ಇವರು5
--------------
ಅಂಬಾಬಾಯಿ
ತನ್ನ ಪ್ರಾಪ್ತಿಯ ಫಲವ ತಾನರಿಯದೆ ಪ ಇನ್ನು ನುಡಿವುದು ಮೂರ್ಖತನವಲ್ಲದೆ ಅ ಸರಸಿಜೋದ್ಭವನು ಫಣೆಯೊಳು ಬರೆದು ನಿರ್ಮಿಸಿದತೆರನೊಂದು ಬೇರುಂಟೆ ತಾನರಿಯದೆಕೆರಕೊಂಡು ಕಂಡವರ ಕೂಡೆ ತಾನಾಡಿದರೆನೆರೆ ದುಃಖವಿದು ಬಿಟ್ಟು ಕಡೆಗೆ ತೊಲಗುವುದೆ 1 ವಿಧಿ ಬೆನ್ನ ಬಿಡಲರಿವುದೆಅಡಿಗಡಿಗೆ ಶೋಕದಲಿ ಅವರಿವರಿಗುಸುರಿದರೆಬಡತನವು ತಾ ಬಿಟ್ಟು ಕಡೆಗೆ ಕದಲುವುದೆ2 ದೆಸೆಗೆಟ್ಟು ನಾಡದೈವಂಗಳಿಗೆ ಎರಗಿದರೆನೊಸಲ ಬರೆಹವ ತೊಡೆದು ತಿದ್ದಲಳವೆವಸುಧೇಶ ಕಾಗಿನೆಲೆಯಾದಿಕೇಶವಸನಂಘ್ರಿಬಿಸಜವನು ಕಂಡು ನೀ ಸುಖಿಯಾಗು ಮನುಜ3
--------------
ಕನಕದಾಸ
ತಾವಲ್ಲಿ ನೆನೆಯಲು ದಶಮತಿ ಗುರುಗಳು ನಾವಿಲ್ಲಿ ಸುಖಿಗಳು ಸುಲಭದಿಂದ ಪ ಪೂರತಿ ಮನದೊಳಗಾಗುವಂತೆ ತಾರಾ ರಮಣನು ತಾ ಮ್ಯಾಲೆ ಉದಿಸಲು ವಾರಿಧಿ ಹರುಷದಿ ಉಕ್ಕುವಂತೆ 1 ತರಣಿ ಕಿರಣ ಪಸರಿಸೆ ಸರೋವರದಲ್ಲಿ ಸರಸಿಜ ವಿಕಸಿತವಾಗುವಂತೆ ವಾರಿದ ಮ್ಯಾಲಿರೆ ತಾ ನೋಡಿ ಮಯೂರ ಮೀರಿ ಹರುಷದಿ ಕುಣಿ ಕುಣಿದಾಡುವಂತೆ2 ವ್ಯಾಸ ದೇವರ ಕೂಡ ಮಾತುಗಳಾಡುವಾಗ ಶುಭ ನಮಗೆ ವಾಸುದೇವವಿಠಲ ಪಾಶದಿಂದಾಡುವಾಗ ವಾಸ ಅಕ್ಷಯವೆನ್ನಿ ಕೃಷ್ಣೆಯಂತೆ 3
--------------
ವ್ಯಾಸತತ್ವಜ್ಞದಾಸರು
ತಾಸು ಬಾರಿಸುತಿದೆ ಕೇಳೋ ಮನುಜತಾಸು ಬಾರಿಸುತಿದೆ ಕೇಳೋ ಪ ಮೋಸ ಹೋಗಲು ಬೇಡ | ಆಶಪಾಶಕೆ ಶಿಲ್ಕಿವಾಸುದೇವನ ಮನ | ಒಲಿಸುವುದೆಂದೂ ಅ.ಪ. ಶ್ರೀ ತರುಣೇಶನ ಜಗಕೇಕನೆನಿಪನಮಾತು ಮಾತಿಗೆ ನೆನೆ ಮನುಜಾ |ಗಾತುರಗೋಸುಗ ಆತುರ ಪಡದಲೆಪ್ರೀತಿ ಬಿಡಿಸೊ ಸಂಕೀರ್ತಿಸಿ ಎಂದು 1 ಕಾಲ ಕಳೆಯ ಬೇಡ ||ವ್ಯಾಳ ಶಯ್ಯ ಶ್ರೀ ವೆಂಕಟ ನಿಲಯನ |ವ್ಯಾಳೆ ವ್ಯಾಳೆಕೆ ನೆನೆ ಅಲಸದಲೆಂದು 2 ಹೆಣ್ಣು ಹೊನ್ನು ಮಣ್ಣುಗಳ ನೆಚ್ಚಿಬನ್ನ ಬಹಳವ ಪಡವಿಯೊ ಮನುಜಮುನ್ನವೆ ಯೋಚಿಸಿ ಎಚ್ಚರದಲ್ಲಿ |ಪನ್ನಗಶಯ್ಯನ ನೆನೆವುದೆಂದೂ 3 ಭವ ಸಿಂಧುವ ಕಳೆಯೋನಂದವನೀಯುವ ಇಂದಿರೆಯರಸನಚಂದದ ಚರಣಾರವಿಂದತುತಿಪುದೆಂದು 4 ತನುವು ಅಸ್ಥಿರ ಮನವು ಚಂಚಲವೊಧನವೂ ಸಾಧನಗಳು ಬಲು ದುಷ್ಟಾ |ಘನ ಮಹಿಮನು ಗುರು ಗೋವಿಂದ ವಿಠಲನದಿನ ದಿನ ನೆನೆದು ಸುಖಿಸುವುದೆಂದೂ5
--------------
ಗುರುಗೋವಿಂದವಿಠಲರು
ತುರು ಮನವಾರ್ತೆಯಹರಿಬಲೆಯೊಳುಬಿದ್ದು ಹಲುಗಿರಿವುದ ನೋಡಿಪರಮವೈರಾಗ್ಯ ಖಡ್ಗದಿ ಮೋಹ ಪಾಶವಪರಿದು ಜ್ಞಾನಾಮೃತ ಪಾನಗೈಯೆಂದೆನು 1ಪರಧನವನು ಕಳಬೇಡ ಕೊಲ್ಲುವರೆಂದುವರದರು 'ುೀರಿಕದ್ದೊಡನೆ ಕೊಳದಿ ಸಿಕ್ಕಿಕೊರಗುತೆಲ್ಲರಿಗೆ ಪಲ್ಗಿರಿವಂತೆ ಬಯಲಿಗೆಬೆರತು ನೀ ಮುಂಗೆಡಬೇಡೆಂದು ಪೇಳಿದೆ 2ತಿರಿದುಂಬ ಪಾಪಿಗೆ ತುಪ್ಪ ಸಕ್ಕರೆ ಪಾಲುಬೆರೆದ ಮೃಷ್ಟಾನ್ನ ತಾ ಬರೆ ಸುಖದಿಂದುಂಡುುರದನ್ಯರೆಂಜಲಿಗೆರಗುವಂದದಿ ಪೂರ್ವದಿರವ ಬಯಸಿ ನೀನೀತೆರದಲಿ ಕೆ[ಡದೆ] 3ಹರಿಸ್ಮರಣೆಯ ಮಾಡು ಹರಿಕಥೆಗಳ ಕೇಳುಹರಿಯನರ್ಚಿಸಿ ನೋಡಿ ಹರುಷದಿಂ ಕುಣಿದಾಡುಹರಿ ಸರ್ವೋತ್ತಮನೆಂದು ಹಸನಾಗಿ ಬಾಳುವೆ'ರಿಯರೊಪ್ಪುವ ಮಾರ್ಗ 'ೀಗಿರು ನೀನೆಂದೆ 4ದೂಸುವವನಿಂದ ದೋಷ ಪೋಪುದು ನಿನ್ನಪೋಸುವವನಿಗೆ ಪುಣ್ಯ ಕೈಸಾರ್ವುದುರೋಷ ಹರ್ಷಗಳ ದೂರದಿ ಬಿಟ್ಟುಶ್ರೀಹರಿದಾಸರ ದಾಸರದಾಸ ನೀನಾಗೆಂದೆ 5ಶ್ರವಣಸುಧಾಪಾನ ರುಚಿಯ ಕಂಡರೆ ನೀನುಭವದುಃಖವೆಂಬ ಬಾಡಿದಗಂಜಿಗುಡಿವೆಯಾಸು'ವೇಕತನ ತಾನು ಸುಮ್ಮನೆ ದೊರೆವದೆಅ'ವೇಕತನವ ಬಿಟ್ಟಾನಂದಬಡುಯೆಂದೆ 6ಸಾರಿಗೆ ಸಾರಿಗೆ ಸಾರಿದರೆಯು ನಿನ್ನದಾರಿಯ ಬಿಡೆಯಲ್ಲ ದುಕ್ಕ ತೊಲಗದಲ್ಲಹೊರಲಾರೆನು ನಿನ್ನ ಹತ್ತಿರೆ 'ಧಿ ನನ್ನಸೇರಿಸಿ ಪೇಳಿದೆ ಸುಖಿಯಾಗಿ ಬಾಳೆಂದು 7ಸಾರಿದೆ ಸಾರಿದೆ ಕೆಡಬೇಡ ಭವಸುಖಹಾರುವದಿದು ನಿಜವಲ್ಲ ಸನ್ಮುಕ್ತಿಗೆದಾರಿಗೊಡದು ಸತ್ಸಂಗವ ಮಾಡಿ 'ಚಾರಿಸಿ ನಿನ್ನ ನೀ ಸುಖಮಯನಾಗೆಂದೆ8ಆಶೆಯ ಬಿಡಲೊಲ್ಲೆ ಆನಂದಬಡಲೊಲ್ಲೆಪೊಸದೆ 'ಷಯದ ಪೇರಡ'ಯೊಳಗೆಮೋಸಗೈವಳು ಮೃತ್ಯುವದರಿಂದ ಶ್ರೀಹರಿದಾಸರ ಜೊತೆಯ ಬಿಟ್ಟೊರ್ವ ಪೋಗದಿರೆಂದೆ 9ಬಲ್ಲೆಯ ಬಲ್ಲೆಯ ಗುರುಪದ ಸೇವೆಗೆಬಲ್ಲೆಯ ಬಲ್ಲೆಯ ಹರಿಕಥೆಗೇಳ್ಪರೆಬಲ್ಲೆಯ ಬಲ್ಲೆಯ ಹರಿನಾಮ ಸ್ಮರಣೆಯಕೊಲ್ಲುವೆ ಸಟೆಯಲ್ಲಿ ಕೇಳು ನೀ ನೀ ಮೇಲು 10ಗುರುಕರುಣವದೆಂಬ ಘಾಳಿ ಬೀಸಲಿ ತಾಳುತರಗೆಲೆಯಂತ್ತೆತ್ತಿ ತಂದು ಜ್ಞಾನಾಗ್ನಿಯೊಳ್‍ಉರು' ನಿನ್ನಯರೂಪನಡಗಿಸದಿಪ್ಪೆನೆವರಟು ಮಂಡೆಯದೆ ನಿನ್ನೊಡನೇಕೆ ಹಾರಲಿ 11ಬರಡು ಮನದೊಳೆ ಬರಿಜಗಳ'ದೆಂದುಗುರುವಾಸುದೇವಾರ್ಯ ಗುಪಿತದಿಂ ಚಿಕನಾಗಪುರದಿ ಜ್ಞಾನಾಮೃತಪಾನ ಗೈಸಿದುದರಿಂಬೆರೆದೆನಾತನೊಳು ನೀನಿರು ಪೋಗು ಬಯಲಾಗು 12
--------------
ವೆಂಕಟದಾಸರು
ತ್ರಾಣಿ ಶ್ರೀ ಕೃಷ್ಣವೇಣಿ ಪ್ರಾಣಪತಿ ಪದಕಮಲ ಕಾಣಿಸು ಹೃದಯದಿ ತ್ರಾಣಿ ಶ್ರೀ ಕೃಷ್ಣ ವೇಣಿ ಪ ಯಮಧರ್ಮತನಯೆ ಶ್ರೀ ಕೃಷ್ಣ ಸಂಗದಿ ಜನಿಸಿ ಕಮಲ ಸಂಭವನ ಲೋಕದಲಿ ಮೆರೆದೆ ಸುಮನಸರ ನುಡಿಗೇಳಿ ಲೋಕಗಳ ದುರಿತೋಪ ಶಮನ ಗೊಳಿಸಲು ಬಂದೆ ತುಮಲ ಹರುಷದಲಿ 1 ಭೂತನಾಥನ ಜಟಾಜೂಟದಿಂದುದ್ಭವಿಸಿ ಶ್ವೇತಪಿಂಗಳ ಶೈಲಶಿಖರಕಿಳಿದೇ ಭೂತಳಕೆ ಭೂಷಣಳೆನಿಸಿ ಪೂರ್ವವನಧಿ ನಿ ಕೇತನವನೈದಿ ಸುಖಿಸಿದಿ ನಿನ್ನ ಪತಿಯೊಡನೇ 2 ಪ್ರಾಣಿಗಳು ನಿನ್ನ ಜಲಪಾನವನು ಗೈಯೆ ನಿ ತ್ರಾಣ ಸಂಹಾರ ವ್ಯಾಧಿಗೆ ಭೇಷಜಾ ಪ್ರಾಣ ಪ್ರಯಾಣ ಪಾಥೇಯವೆಂದರಿಯೆ ನಿ ರ್ವಾಣಪದವಿತ್ತು ಕಲ್ಯಾಣವಂತರ ಮಾಳ್ಪೆ 3 ಜನಪದಗಳಾಗಿ ಕಾನನವಾಗಿ ಮನ್ವಾದಿ ದಿನಗಳಲ್ಲಾಗಿ ಮತ್ತೇನಾಗಲೀ ಮನುಜ ಮಜನಗೈಯೆ ವಾಜಪೇಯಾದಿ ಮಖ ವನುಸರಿಸಿದಕೆ ಫಲವೇನು ತತ್ಪಲವೀವೆ 4 ಅರವತ್ತು ಸಹಸ್ರ ವರುಷಂಗಳಲ್ಲಿ ನಿ ರ್ಜರ ತರಂಗಿಣಿಯ ಮಜ್ಜನದ ಫಲವು ಗುರುವು ಕನ್ಯಸ್ಥನಾಗಿರಲು ಒಂದಿನ ಮಿಂದ ನರರಿಗಾ ಪುಣ್ಯಸಮನೆನಿಸಿ ತತ್ಫಲವೀವೇ 5 ಮನನಶೀಲ ಸುಯೋಗಿಗಳಿಗಾವ ಗತಿಯು ಇಹ ವನುದಿನದಿ ನಿನ್ನ ತೀರದಲಿ ಇಪ್ಪಾ ಮನುಜೋತ್ತಮರಿಗೆ ಆ ಗತಿಯಿತ್ತು ಪಾಲಿಸುವೆ ಅನುಪಮ ಸುಕಾರುಣ್ಯಕೆಣೆಗಾಣಿ ಜಗದೊಳಗೆ 6 ತಾಯೆ ಎನ್ನನುದಿನದಿ ಹೇಯ ಸಂಸಾರದೊಳ ಗಾಯಾಸ ಗೊಳಿಸದಲೆ ಕಾಯಬೇಕೊ ವಾಯುಪಿತ ಶ್ರೀ ಜಗನ್ನಾಥ ವಿಠ್ಠಲ ಹೃ ತ್ತೋಯಜದೊಳಗೆ ಕಾಂಬುಪಾಯ ಮಾರ್ಗವ ತೋರೆ 7
--------------
ಜಗನ್ನಾಥದಾಸರು
ದಂಡವ್ಯಾತಕಯ್ಯ ಹರಿ ಹರಿ ದಂಡವ್ಯಾತಕಯ್ಯ ಪ ದಂಡವ್ಯಾತಕಯ್ಯ ಪಾಂಡುಪಕ್ಷ ಮಹ ಪಾದ ಮರೆಯ ಬಿದ್ದವರಿಗೆ ಅ.ಪ ಭಾರನಿನ್ನದೆಂಬ ಭಕ್ತರ ಭಾರವಹಿಸಿಕೊಂಬ ಪಾರಕರುಣಾನಿಧಿ ಧೀರ ನಿನ್ನ ಪಾದ ಸೇರೆ ಭಜಕರಿಗೆ ಧಾರುಣಿ ಜನರ 1 ಅಜಾಮಿಳನಂತ್ಯದಿ ತವನಾಮ ನಿಜವಾದೊಂದಕ್ಷರದಿ ಮಜೆದು ಗೆಲಿದು ಕಷ್ಟ ನಿಜಪದ ಪಡೆದದ್ದು ನಿಜವನರಿತು ನಿಮ್ಮ ಭಜಿಸುವ ಜನರಿಗೆ 2 ಸಿಂಧುಶಯನನೆನಲು ಅನ್ಯರ ಬಂಧುವೆ ಕರುಣಾಳು ಮಂದರಪರ್ವತ ಮಂದಿರ ಶ್ರೀರಾಮ ಪಾದ ವಂದಿಸಿ ಸುಖಿಪರಿಗೆ 3
--------------
ರಾಮದಾಸರು
ದಾಸದಾಸ್ಯವ ದಯಮಾಡಿ ಸಲಹೋ ಕರುಣಾ ಸಮುದ್ರ ಹರಿಯೆ ಸುಳಿ ಘಾಸಿಮಾಡದ ಮುನ್ನ ಪ. ಅಂತಪಾರಗಳಿಲ್ಲವಿದಕಿನ್ನು ಪ್ರತಿ ಕ್ಷಣ ಚಿಂತನೆಯಿಂದಲಿ ಬಾಧೆಗೊಳಿಸುವುದು ಕಂತುಜನಕ ನೀನಿತ್ತದನುಂಡು ಸುಖಿಸದೆ ಭ್ರಾಂತಿ ಬಡಿಸುವದನೆಂತು ವರ್ಣಿಸಲಿನ್ನು 1 ತನ್ನಿಂದಧಿಕ ಕಷ್ಟ ಪಡುವ ಜನರ ಕಂಡು ಭಂಡಾಗಿರದಿ ಪರರ ಹೊನ್ನು ಹೆಣ್ಣುಗಳಲಿ ಕಣ್ಣಿಟ್ಟು ಹಗಲಿರು- ಳುಂಣಲೀಯದು ನಿದ್ರೆ ಕಣ್ಣಿಗೆ ಬಾರದಿನ್ನು 2 ಭವರೋಗ ವೈದ್ಯ ನೀನೆಂದು ಸಕಲ ಶ್ರುತಿ ನಿವಹವು ನಿನ್ನ ಕೊಂಡಾಡುವುದು ನವವಿಧ ಭಕುತಿ ಮಧ್ವ ತವಕದೊಳೆನಗಿತ್ತು ಭುವನ ಪಾವನ ಶೇಷಗಿರೀಶಾ ನೀ ದಯದೋರು 3
--------------
ತುಪಾಕಿ ವೆಂಕಟರಮಣಾಚಾರ್ಯ