ಒಟ್ಟು 194 ಕಡೆಗಳಲ್ಲಿ , 61 ದಾಸರು , 188 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಹಾಮಾಯೆ ಗೌರಿ ಮಾಹೇಶ್ವರಿಪ. ವiಹಾದೇವಮನೋಹಾರಿ ಶಂಕರಿ ಮಹಾಪಾಪಧ್ವಂಸಕಾರಿ ಶ್ರೀಕರಿ ಮಾಂ ಪಾಹಿ ಪಾಹಿ ಶೌರಿಸೋದರಿಅ.ಪ. ಕಾಮಕೋಟಿಸುಂದರಿ ಶುಭಕರಿ ಕರಿಕುಂಭಪಯೋಧರಿ ಕಾಮಿತಪ್ರದೆ ಕಂಬುಕಂಧರಿ ಹೇಮಾಲಂಕಾರಿ ಹೈಮವತಿ ಕುವರಿ1 ಭಾನುಕೋಟಿಭಾಸ್ಕರಿ ಭವಹರಿ ಭಜಕಾಮೃತಲಹರಿ ಸ್ಥಾಣುವಲ್ಲಭೆ ದನುಜಸಂಹಾರಿ ಜ್ಞಾನಾಗೋಚರಿ ಜಗತ್ರಯೇಶ್ವರಿ2 ಪೂರ್ವದೇವಭೀಕರಿ ಭ್ರಾಮರಿ ಪುಳಿನಾಖ್ಯ ಪುರೇಶ್ವರಿ ಸರ್ವಲಕ್ಷ್ಮೀನಾರಾಯಣೇಶ್ವರಿ ಸರ್ವಸಹಚರಿ ಶಶಾಂಕಶೇಖರಿ3
--------------
ತುಪಾಕಿ ವೆಂಕಟರಮಣಾಚಾರ್ಯ
ಮಹಾಲಕ್ಷ್ಮಿ ಇಂದಿರೇ ಪಾಲಿಸು ಕಮಲಮಂದಿರೆ ಪ ಇಂದಿರೆ ಇಂದುನಿಭಾಸ್ಯೆ - ಗುಣ - ವೃಂದ ಶೋಭಿತೆ ಶುಭಗಾತ್ರೆ - ಆಹಾ ಇಂದು ಶೇಖರಸುರವಂದಿತಪಾದ ದ್ವಂದಾರವಿಂದಳೆ ಮಂದಸ್ಮಿತಾನನೆ ಅ.ಪ ಅರುಣದಿಂದೊಪ್ಪುವ ಚರಣ ಯುಗಳಾ - ಭರಣ ಭೂಷಿತ ಯೋಗಿಶರಣಾ ನಿಜ ಶರಣರ್ಗೆ ರನ್ನದರ್ಪಣಾಭವ - ಅರಣತಾರಣಕಾರಣ - ಆಹಾ ಶರಣು ಪೊಕ್ಕೆನು ದೇವಿ ಚರಣಕಮಲಯುಗ ವರಣಿಸಲಳವಲ್ಲ ಕರುಣಿಸು ನೀ ಎನ್ನ 1 ಶ್ರುತಿನುತವಿತತಸÀಚ್ಚರಿಯೆ ಸದಾ- ನತÀರ ಸಂತೈಪೊದಾಶ್ಚರಿಯೆ ನಿನ್ನ ಸ್ತುತಿಸಿದವಗೆ ಮಹಾ ಶಿರಿಯೆ ಮತ್ತೆ ನಿರಯ ಅಹಾ ಸತತ ನಿನ್ನಲಿ ಮನೋರತಿನಿತ್ತು ಶೋಕದ ವ್ರತತಿ ಖಂಡಿಸಿ ಸುಖತತಿಯ ಪಾಲಿಸು ದೇವೀ 2 ಜಗಕೆ ಸೃಷ್ಟಿಸ್ಥಿತಿನಾಶಕಾರಿ ಬಗೆ ಬಗೆ ಭವನದಲ್ಲಿ ಕ್ಲೇಶ-ಹರಸಿ ಸುಗಮದಿಂದ ಪರಿತೋಷ-ಬಡಿಸಿ ನಗಿಸುವಿ ಎನ್ನಭಿಲಾಷಾ ಅಹಾ ನಗೆಮುಖದಲಿ ಗುರು ಜಗನ್ನಾಥ ವಿಠಲನ್ನ ನಿತ್ಯ ಸೊಗಸಾಗಿ ಇರುತಿಪ್ಪಿ 3
--------------
ಗುರುಜಗನ್ನಾಥದಾಸರು
ಮಾಂ ಪಾಲಯಾಶು ಗಂಗಾಧರ ಚಂದ್ರಶೇಖರ ಗೌರೀವರ ಪ ನೀಲಾಂಬರ ಕೇಶಪಾಶಹರ ಶಿವಶಂಕರ ಕರುಣಾಕರ ಅ.ಪ ಚರ್ಮಾಂಬರ ಪರಮೇಶ್ವರಾ ದಾನವೇಶ್ವರಕುಲಕುಠಾರ ಧೀರ ದಿವಿಜೋಪಕಾರ ಶರಚಾಪಧರ ಮನಸಿಜಸಂಹಾರ ಮಾಂಗಿರೀ ವಿಹಾರಾ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾತನಾಡಿಸೋ ತಮ್ಮ ಮೃದÀುವಚನದಿ ಪ ಈತನನು ನೀನೀಗ ಸ್ನೇಹಭಾವದಲಿ ಅ.ಪ. ಕಪಿರಾಜ ಸುಗ್ರೀವ ಸಚಿವ ಶೇಖರನೀತ ವಿಪುಲಮತಿ ಸಂಯುತನು ವ್ಯವಹಾರ ಚತುರ ಅಪಶಬ್ದವಿನಿತಾದರಿಲ್ಲವೀತನ ಮುಖದಿ ಸುಪವಿತ್ರದಾಕಾರ ಶೋಭಿತ ಸುಲಕ್ಷಣನು 1 ನಾಲ್ಕು ವೇದಾಧ್ಯಯನ ಮಾಡಿದವನಲ್ಲದೊಡೆ ನಾಲಿಗೆಯೊಳೀರೀತಿ ನುಡಿಯಲಳವೆ ವ್ಯಾಕರಣ ಶಾಸ್ತ್ರದಲಿ ಪಾಂಡಿತ್ಯದಿವಗಿನ್ನು ವಾಕು ಈ ಪರಿಬಹುದೇ 2 ಮುಖನೇತ್ರ ಭ್ರೂಮುಖ್ಯ ಅಂಗಚೇಷ್ಟೆಗಳಿಲ್ಲ ಸುಖ ಮಧ್ಯಸ್ಥಾಯಿಯಲಿ-ಮಾತುಮಿತವು ಅಕಳಂಕ ಶ್ರೀ ಕರಿಗಿರೀಶನ ಪದಕಿಂಕರನು ಸಕಲಲಕ್ಷಣಯುಕ್ತನಿವನತುಳ ಶಕ್ತ 3
--------------
ವರಾವಾಣಿರಾಮರಾಯದಾಸರು
ಮಾಯಾ ನೋಡಮ್ಮ ಶ್ರೀಯರಸ ನೀಲಮೇಘ ಛಾಯ ಕೃಷ್ಣರಾಯ ತನ್ನ ಪ. ಕಾಶೀಶ ಮೃತ್ಯುಂಜಯಾಯಿ ವಿಷವಲ ಭಂಜನಾದಿಗಳೀತನಿಗಂಜಿ ಕೊಂಬುವರು ಮಂಜುಳಾತ್ಮ ನಿಜಕರಕಂಜದಿಂದ ಪಾದವೆತ್ತಿ ನಿರಂಜನ ತಾ ಲೀಲೆಯಿಂದ 1 ಪುಟಿತಹಾಟಕ ಮಣಿಘಟಿತ ಕಂಕಣಾಂಗದ ಕಟಿಸೂತ್ರಗಳನಿಟ್ಟು ನಟನಂದದೀ ವಟಪತ್ರಶಾಯಿವೋಷ್ಠಪುಟದಿ ಪಾದವನಿಕ್ಕಿ ಕಟಬಾಯೊಳಮೃತವಾ ಸ್ಫುಟವಾಗಿ ಸುರಿಸುತ 2 ಲಿಂಗದೇಹಭಂಗತಾಗಿನಂಗವನ್ನು ದೂರಗೈಸಿ ತುಂಗಮತಿವಂತ ಋಷ್ಯ ಶೃಂಗಾದಿಗಳು ನಿತ್ಯ ಮಂಗಳ ದೇವಿಯರ ಗಂಗೆಯ ಪಡೆದು ಶಿವಂಗ ಶುದ್ಧಿಗೈಸಿ 3 ಗೋಪಿ ಗೃಹ ಕರ್ಮರತಳಾಗಿರಲು ಒಮ್ಮನದಿಂದ ಅಮ್ಮರ ಗಣಾರಾಧಿತ ಕ್ಷಮೆಯನಳದ ಪಾದ ಸುಮ್ಮಗೆ ಕರದೊಳೆತ್ತಿ ಖಮ್ಮಗಿಹದೆಂದು ತನ್ನ 4 ಕರಪಲ್ಲವಾಧೃತ ಲೋಕವಂದ್ಯರೂಪ ಫಣಿ- ಶೇಖರಾದ್ರಿವಾಸ ಭಕ್ತನಾಕ ಭೂರುಹ ನೀಕರಿಸಿ ದುರಿತವ ಸೋಕದಂತೆ ನಮ್ಮನೀಗ ಸಾಕುವ ಪರಮ ಕರುಣಾಕರ ಶ್ರೀ ಕೃಷ್ಣ ತನ್ನ 5
--------------
ತುಪಾಕಿ ವೆಂಕಟರಮಣಾಚಾರ್ಯ
ಮಾರ ಕೋಟಿ ಸುಂದರ ಪ ಸೋಮಶೇಖರಾದಿ ಸುರ ಸ್ತೋಮನುತ ನಾಮ ಅ.ಪ ಸಾಯಕ ಶ್ರೀದಾಯಕ ನಿರ್ಮಾಯ ರಘುರಾಯ 1 ಅಪ್ರಾಕೃತ ಶರೀರ ಗೋ ವಿಪ್ರಜನ ಪಾಲ ನಿನ್ನ ಸುಪ್ರಭಾವ ಪೊಗಳಲು ಸರ್ಪಾಧಿಪಗಳವೇ 2 ದೇವ ಗುರುರಾಮ ವಿಠಲಾ ವನಜನೇತ್ರ ನೂತ- ನಾವರಣ ಪುರಿವಾಸ ಕಾವುದೆಮ್ಮನು ಸರ್ವೇಶಾ 3
--------------
ಗುರುರಾಮವಿಠಲ
ಮಾರಮಣಾ ಹರಿ ಗೋವಿಂದಾ ಬಾರೋ ಕೊಂಡಾಡಿ ಪಡೆವೆನಾನಂದ ಪ ನಾರದಾದಿ ಮುನಿ ಬೃಂದಾನಂದ ಬಾರೋ ಭಕ್ತಕುಮುದೇಂದು ಮುಕುಂದಾ ಅ.ಪ ನಾನಾ ಜನುಮಗಳೊಳಗುದಿಸಿದೆವಯ್ಯ ಏನೆಂದು ಪೇಳಲಿ ನಿನಗೆ ಜೀಯ ನೀನೆನಗಿತ್ತಾ ತನುಗಳನಳೆಯಲು ಏನಪೇಳಲೈ ಭೂಮಿಗೆ ನಾಲ್ಮಡಿ ಸಾನುರಾಗದಿ ಜನನಿಯಿತ್ತಾ ಘೃತ ಪಾನಕ್ಷೀರ ವಾರಿಧಿಗಿಮ್ಮಡಿಯೋಳ್ ಬಾ 1 ನೋಡಿ | ಮನಕರಗದೆ ರುಕುಮಿಣಿ ರಮಣಾ ಮೃಡ ವಂದಿತ ಸರಸಿಜ ಚರಣಾ ಪಾಡೀ ಕೊಂಡಾಡುತಿರ ದೇಕೆ ನಿಷ್ಕರುಣಾ ಬೇಡಿದರ್ಗೆ ಕೈನೀಡುತೆ ದಾನವ ಮಾಡಲಿಲ್ಲವದರಿಂದ ದರಿದ್ರತೆ ಪೀಡಿಸವೈ ನಾ [ಮಾಡಿದ] ಪಾತಕವಾರ್ಜಿಸಿ ಜನುಮಂಗಳ ಪಡೆದೆನೊ ಬಾ 2 ಸುನಾಮ ನಮಿಸುವೆ ಸುಗುಣ ವಿರಾಮ ಸನ್ನುತ ವರಮಾಧವ ಕೋಮಲಾಂಗ ಸೋಮಶೇಖರಾಧಿಪ ಸುಮಚರಣವ ನೋಳ್ಪೆನೋ ಬಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾವಿನಕೆರೆ 5 ಪವಮಾನಾತ್ಮಜ ಚರಣಂ ಭವಸಾಗರ ಭಯ ಹರಣಂ ಪ ಶಿವಹರಿ ಸಂಶಯ ಪರಿಹರಣಂ ಭುವನೇಶ್ವರ ತವಶರಣಂ ಅ.ಪ ರಾಮಮಂತ್ರ ಮಾಲಾಭರಣಂ ಸೋಮಶೇಖರಾನಂದ ಗುಣಂ ಕಾಮರೂಪಿದಾನವ ಹರಣಂ ಸಾರಸ ಚರಣಂ 1 ಮಂಗಳ ಚರಿತಂ ಭವರಹಿತಂ ಸಂಗರಧೀರಂ ಗುಣಭರಿತಂ ಪಿಂಗಲಾಕ್ಷ ಕೋವಿದ ಹನುಮಂತಂ ಮಾಂಗಿರಿ ನಿಲಯ ಹನುಮಂತಂ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಚಿತವಾದ ಕೀರ್ತನೆಗಳು ಕರುಣದಿ ಪಾಲಿಸೆನ್ನನು | ಶ್ರೀಕಾಂತಾ ಪ ನಂದಸನಕ ಪಾಲಕ | ನೀಲಾಳಕಾ | ನಂದಗೋಪನ ಬಾಲಕಾ | ಸಿಂಧುರ ಮುಖವರ ಸಿಂಧುರ ನತಪದ | ಭವ ಸಿಂಧು ತರಿಸುತಾ 1 ರಾಜಶೇಖರ ಪೂಜಿತಾ | ವಿರಾಜಿತಾ | ರಾಜೀವ ಪದರೀಜಿತಾ | ರಜ ರಾಜ ದ್ವಿಜ ರಾಜಗಮನ ಹರಿ | ರಾಜತಲ್ಪ ಉಡುರಾಜ ಕುಲಮಣಿ 2 ಗಿರಿಧರ ಸುತ ರಕ್ಷಣ | ಕರುಣೀಕ್ಷಣಾ | ಗಿರಿಕರ ಸುವಿ ಚಕ್ಷಣಾ | ಗಿರಿಧರಜಾಪತಿ ಗಿರಿಸಮೃತತುರಗ | ಗಿರಿಮಂದಿರ ಕೃತ ಗಿರಿಪುಜಸಖಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ರಾಜರ ನೋಡಿದಿರಾ _ ಗುರು _ ರಾಜರ ನೊಡಿದಿರಾ ಪ ರಾಜರ ನೊಡಿ _ ಭಕುತಿಯ ಮಾಡಿ ಗೋಜನ ಕರುಣಕೆ _ ಭಾಜನ ರಾದೀರಾ ಅ.ಪ. ತುಂಗ ಮಹಿಮರು _ ನರ - ಸಿಂಗ ಭಕ್ತರು ಭಂಗರಹಿತರು _ ಸುರ _ ಸಂಘ ಮಾನಿತರು 1 ಯೋಗಿ ವರ್ಯರು _ ಬಹು _ ತ್ಯಾಗಶೀಲರು ಭವ _ ರೋಗ ವೈದ್ಯರು 2 ತಂತ್ರ ಮಲ್ಲರು _ ಬಹು _ ಗ್ರಂಥಕರ್ತೃಗಳು ಮಂತ್ರ ಸಿದ್ಧರು _ ಮ _ ಹಂತ ಮಠದವರು 3 ಶಾಂತ ಮೂರ್ತಿಗಳು _ ವೇ _ ದಾಂತ ಬಲ್ಲವರು ದಾಂತ ಶೇಖರರು _ ಏ _ ಕಾಂತ ಭಕ್ತರು 4 ರಾಘವೇಂದ್ರರು _ ಇವರೆ _ ವ್ಯಾಸರಾಜರು ಭಾಗ್ಯವಂತರು _ ಪ್ರ _ ಹ್ಲಾದರಾಜರು 5 ದೂಡು ಸಂಶಯಾ ನೀ _ ಮಾಡು ಭಕುತಿಯಾ ಬೇಡು ಬಯಕೆಯಾ ಪೋ _ ಗಾಡು ದುಃಖವಾ 6 ಸೃಷ್ಠಿ ನಾಯಕಾ _ ಶ್ರೀ _ ಕೃಷ್ಣವಿಠಲನ ಶ್ರೇಷ್ಠ ಭಕ್ತರೂ _ ಸಂ-ತುಷ್ಠಿ ನೀಡುವರು 7
--------------
ಕೃಷ್ಣವಿಠಲದಾಸರು
ರಾಮ ರಾಮ ರಾಮ ಎಂದು ಸ್ಮರಿಸೊ ನೀ ಮನಾ ಪ್ರೇಮದಿಂದ ಜಾನಕಿಪತಿಯ ಅನುದಿನಾ ಪ ಇಂದು ಶೇಖರ ವಂದ್ಯ ಗೋವಿಂದ ದೇವನಾ ಮಂದರಾದ್ರಿ ಗಿರಿಯನೆತ್ತಿದ ಮಹಾಮಹಿಮನ ಕಂದ ಕೂಗಲು ಕಂಬದಿ ಬಂದ ಕರುಣಾ ಸಾಗರನ ಚಂದದಿಂದ ಚಲನೆಯಿಲ್ಲದೆ ಚೆಲುವ ಕೃಷ್ಣನಾ 1 ಕುಲಸತಿಯ ಕುಚದಲ್ಲಿಟ್ಟ ಕೋಮಲಾಂಗನ ಒಲಿದು ಧ್ರುವಗೆ ಪಟ್ಟವನಿತ್ತ ವಾರಿಜನಾಭಾನಾ ಜಲದಿ ಬಂಧಿಸಿ ದೈತ್ಯರನ ಛೇದಿಸಿದಾತನಾ ಸುಲಭದಿಂದ ಹೃದಯದಲ್ಲಿ ಸ್ತುತಿಸೊ ನೀ ಇನ್ನಾ 2 ಸಿಂಧುಶಯನ ಶ್ರೀನಿವಾಸ ಸಕಲಕರ್ತನಾ ನಂದದಿಂದ ಹೆನ್ನ ವಿಠ್ಠಲ ಇಂದಿರೇಶನ ಪಾದ ದ್ವಂದ್ವ ಭಜಿಸಿ ಹರುಷದಿ ಮನಾ ಕುಂದುಯಿಲ್ಲದೆ ಕಾಯ್ವ ಭಾನುಕೋಟಿ ತೇಜನಾ 3
--------------
ಹೆನ್ನೆರಂಗದಾಸರು
ರಾಮ ಶ್ರೀ ರಘುನಂದನ ಶರಣು ಸಾರ್ವ- ಭೌಮ ಭೂಸುರವಂದ್ಯ ಸೋಮಶೇಖರಮಿತ್ರ ಕಾಮಿತ ಫಲದಾತ್ರ ಸನ್ನುತ ಸೀತಾ ಪ. ಕ್ರೂರ ದಾನವ ಸಂಹಾರ ಕೌಸಲ್ಯಾಕುಮಾರ ಭೂ- ಭಾರಹರ ಭಜಕÀಜನೋದ್ಧಾರ ವೇದಾಂತಸಾರ ಚಾರುವದನ ಮಣಿಹಾರ ಕುಂಡಲಧರ ವೀರರಾಘವ ವಿಶ್ವಾಧಾರ ಕರುಣಿಸು ಸೀತಾ 1 ಪಾಪರಹಿತ ಪಾವನ ಚರಿತ ಅಹಲ್ಯಾ ಹರಣ ದಿವ್ಯರೂಪ ರಮಾರಮಣ ತಾಪ ವಿಚ್ಛೇದನ ತಾಮಸ ಗುಣಹರಣ ದ- ಯಾಪರ ಬ್ರಹ್ಮಸ್ವರೂಪ ಮೂರುತಿ ಸೀತಾ 2 ಮಾಧವ ಪುಣ್ಯಚರಿತ ಕರುಣಾಪಾಂಗ ಹೆಳವನಕಟ್ಟೆ ರಂಗಯ್ಯ ಸದಾನಂದ ಸುಮತೀಂದ್ರ ಹೃದಯ ಪಂಕಜಭೃಂಗ ಕದನ ವಿಕ್ರಮ ಬಾಹು ಕೋದಂಡಧೃತ ಸೀತಾ 3
--------------
ಹೆಳವನಕಟ್ಟೆ ಗಿರಿಯಮ್ಮ
ರಾಮರಾಮೆನ್ನಿರೋ ಮುಖ್ಯ ತಾ ಕಾರಣ ನೇಮದಿಂದಾಯಿತು ಅಹಲ್ಯೋದ್ದರಣ ರೋಮರೋಮಕೆ ತಾ ಪ್ರೇಮ ಬಾಹಗುಣ ನಾಮಸ್ಮರಿಸಿ ದಶರಥಾತ್ಮಜನ 1 ಒಮ್ಮೆ ಸ್ಮರಿಸಿರೊ ರಾಮರಾಮೆಂದು ತಾ ಸುಮ್ಮನೆ ಬಾಹುದು ಸಾರದ ಅಮೃತ ಸಂಜೀವ ತಾ ಝಮ್ಮನೆ ಹಾದಿಮಾಡಿತು ಸಮುದ್ರ ತಾ 2 ರಾಮರಾಮೆನ್ನಲು ಸಾಮರಾಜ್ಯಹುದು ನೇಮದಿಂದೆನ್ನಿರೊ ಶ್ರಮ ನೀಗೋಗುದು ನಾಮ ಕೊಂಡಾಡಲು ರಾಮನಂತಾಹುದು ಸುಮ್ಮನೆಯಾದರೆ ತಾಮಸ ಬಾಹುದು 3 ರಾಮರಾಮೆಂದರೆ ಬ್ರಹ್ಮರಾಕ್ಷಸ ತಾ ಸುಮ್ಮನೆ ಒಡಿಹೋಗುದು ತಾತ್ಕಾಲತಾ ನಾಮ ಸೇವಿಸಲು ಸುಮ್ಮಲ್ಹೊಳೆದು ತಾ ಝಮ್ಮನೆ ಬಾಹುದು ಭಾಗ್ಯ ಕೈಕೊಟ್ಟು ತಾ 4 ರಾಮನಾಮವೆ ತಾ ಪಾಪಕೆ ತಾ ನಾಮ ತೇಲಿಸಿತು ನೀರೊಳು ಪರ್ವತ ನೇಮದಿಂದಾದರ ಭಕ್ತರರಹುತಾ ಸೀಮಿ ಕೈಕೊಟ್ಟಿತು ಭಕ್ತಗೆ ಶಾಶ್ವತ 5 ನಾಮವೆ ಕಪಿಕುಲವ ತಾರಿಸಿತು ಸೋಮಶೇಖರಗೆ ತಾನೆ ಪ್ರಿಯಾಯಿತು ಗ್ರಾಮನಂದಿಯಲಿ ನೇಮಪೂರಿಸಿತು ರೋಮರೋಮೆಲ್ಲ ಭರತಗ ಸುಖವಾಯಿತು 6 ಸ್ವಾಮಿ ಶ್ರೀರಾಮನಾಮ ಸುಅಮೃತ ಕಾಮಪೂರಿಸುವ ಕಾಮಧೇನುವೆ ತಾ ನೇಮದಿಂದಾಗುವ ಮಹಿಪತಿಗಿಂತ ರಾಮರಾಜ್ಯವೆ ಎನ್ನೊಳಗಾಗೆದ ತಾ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ರಾಮಾ ರಾಮಾ ಎಂಬ ನಾಮ ಜಿಹ್ವೆಯೊಳಿರುವನೇಮವನೆ ಸ್ಥಿರನಿಜವ ಮಾಡೋ ರಾಮರಾಮ ದಶರಥರಾಮ ಪಟ್ಟಾಭಿರಾಮ ರಘುರಾಮ ಸೀತಾರಾಮ ರಾಮ(ರಾಮ) ಪ ಬಾಲತನವೆಂಬುದೆಂತು ಲೀಲೆಯಿಂದಲಿ ಸಂತು ಮೇಲೆ ಯೌವನವು ಬಂತೋ ರಾಮಲೋಲಲೋಚನೆಯರ ವಿಶಾಲರತಿಸುಖದೊಳಗೆ ವೋಲಾಡುತಿದ್ದೆನಲ್ಲೋ ರಾಮಕಾಳು ಜರೆ ಮುಸುಕಿ ಕೈಕಾಲು ಕಸದಿಂ ಮುರುಪಿ ನಾಲಿಗೆಯ ಧೃತಿ ತಪ್ಪಿತೋ ರಾಮಕಾಲನವರಿಗೆ ಕರುಣವಿಲ್ಲ ನೀ ಕೈಬಿಟ್ಟ ಮೇಲೆ ರಕ್ಷಿಸುವರಿಲ್ಲಾ ರಾಮ 1 ಹೆತ್ತ ತಾಯಿ ಮೊಲೆವಾಲನುಂಡುದಕೆ ಪಡಿಗೆಟ್ಟೆ ಸಪ್ತಶರನಿಧಿ ಸಾಲದೋ ರಾಮಸತ್ತು ಹುಟ್ಟಿದ ದೇಹದಸ್ಥಿಗುಪಮಿಸೆ ಮೇರುಮಸ್ತಕಕ್ಕತ್ಯಧಿಕವೋ ರಾಮಚಿತ್ರಗುಪ್ತರು ಕರ್ಮಗಳನು ಬರೆಬರೆದು ಬೇಸತ್ತು ಬೆಂಡಾದರಲ್ಲೋ ರಾಮಅತ್ಯಂತ ಕರುಣರಸವೆನ್ನ ಮೇಲೆ ನಿನಗಿರ್ದರೆ ಮುಕ್ತಿಯನು ಕೊಟ್ಟು ಸಲಹೋ ರಾಮ2 ತಂದೆ ತಾಯ್ಗಳು ನೀನೆ ಬಂಧುವರ್ಗವು ನೀನೆ ಮುಂದೆ ರಕ್ಷಿಪನು ನೀನೆ ರಾಮಮುಂದುಗಾಣದೆ ಬಹು ಮದಾಂಧತನದಲಿನಡೆದು ಮಂದಮತಿಯಾಗಿದ್ದೆನೋ ರಾಮಮುಂದಾದರೂ ತಂದೆ ತಾಯಿಯ ಜಠರದಿ ಬಾರದಂದವನು ಮಾಡಿ ಸಲಹೋ ರಾಮಚಂದ್ರಶೇಖರ ಕೆಳದಿ ರಾಮೇಶ್ವರನು ನೀನೆ ಎಂದು ನಾನಿಂದು ತಿಳಿದೆ ರಾಮ 3
--------------
ಕೆಳದಿ ವೆಂಕಣ್ಣ ಕವಿ
ರಾಮಾನಾಮಾಮೃತಪಾನಸುಖಧಾಮನು ಮುಖ್ಯಪ್ರಾಣ ಸೋಮಶೇಖರಮುಖ್ಯಾಮರಸಂಕುಲಸ್ವಾಮಿ ಮಹಾಸುತ್ರಾಣ 1 ಯಾವತ್ಕಾಲ ಕಳೇವರದೊಳನಿಲ ತಾವದ್ಧರಿಸನ್ನಿಧಾನ ದೇವಬ್ರಹ್ಮ ಸುಜನಾವಳಿಸುಖದ ಮಹಾಪ್ರಭು ಪವಮಾನ 2 ಲಕ್ಷ್ಮಣಪ್ರಾಣದಾತಾರ ನಿಭೃತಮೋಕ್ಷಹೃದಯ ಪರಿಪೂರ್ಣ ಲಕ್ಷ್ಮೀನಾರಾಯಣಾಂಘ್ರಿಭಕ್ತಿದಕ್ಷ ಲೋಕೈಕಧುರೀಣ 3
--------------
ತುಪಾಕಿ ವೆಂಕಟರಮಣಾಚಾರ್ಯ