ಒಟ್ಟು 151 ಕಡೆಗಳಲ್ಲಿ , 50 ದಾಸರು , 132 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ವೆಂಕಟಾಚಲ ನಿವಾಸ ನಿನ್ನ ಸೇವಾನುಸೇವಕರ ದಾಸಾ ಎನಿಸಿ ಜೀವಿಸುವ ನರಗೆ ಆಯಾಸಾ ಯಾಕೆ ಶ್ರೀವರನೆ ಕೊಡು ಎಮಗೆ ಲೇಸಾ 1 ಕಂಸಾರಿ ಪ್ರಭು ನಿನ್ನ ದಿವ್ಯ ನಾಮ ಒದಗಲು ಜಿಹ್ವೆಗೆನ್ನಾ ದೋಷ ಸೀಮೆಗಾಣದಿದ್ದರೆನ್ನ ಸ್ವಾಮಿ ನೀ ಮರೆಯಲಾಗದು ಸುಪ್ರಸನ್ನ 2 ನೀಚ ಯೋನಿಗಳಲ್ಲಿ ಬಂದೆ ಇನ್ನು ನಾಚಿಕಿಲ್ಲವೊ ಎನಗೆ ತಂದೆ ನೀನೆ ಮೋಚಕನು ಬಿನ್ನಪ ವಿದೆಂದೆ ಸವ್ಯ ಸಾಚಿಸಖ ಕೈಪಿಡಿಯೋ ತಂದೆ 3 ನಾನೊಬ್ಬನೇ ನಿನಗೆ ಭಾರವಾದೆ ನೇನೊ ಸಂತತ ನಿರ್ವಿಕಾರ ಎನ್ನ ಹೀನತ್ವ ನೋಡಲ್ಕಪಾರ ಚಕ್ರ ಪಾಣಿ ಮಾಡಿದಿರೆನ್ನ ದೂರ 4 ಕಂಡ ಕಂಡವರಿಗಾಲ್ಪರಿದು ಬೇಡಿ ಬೆಂಡಾದೆ ನಿನ್ನಂಘ್ರಿ ಮರೆದು ದಿಟ ತೊಂಡವತ್ಸಲನೆಂಬ ಬಿರುದು ಕಾಯೊ ಪುಂಡರೀಕಾಕ್ಷ ನೀನರಿದು 5 ಈ ಸಮಯದೊಳೆನ್ನ ತಪ್ಪ ನೋಡಿ ನೀ ಸಡಿಲ ಬೇಡುವರೇನಪ್ಪ ನಿನ್ನ ದಾಸರ್ಪೆಸರ್‍ಗೊಳಲು ಬಪ್ಪಾ ದೋಷ ನಾಶವಾಗೋದು ತಿಮ್ಮಪ್ಪ 6 ಕಾಮಾದಿಗಳ ಕಾಟದಿಂದ ನಿನ್ನ ನಾ ಮರೆದೆ ಸಚ್ಚಿದಾನಂದ ಎನ್ನ ಈ ಮಹಾ ದೋಷಗಳ ವೃಂದ ನೋಡದೆ ನೀ ಮನ್ನಿಸೆನ್ನ ಮುಕುಂದ 7 ನೀ ಪಿಡಿದವÀರ ಸಹಸ್ರಾರ ಸುಜನ ಪಾಪಾಟವಿಗೆ ಸುಕುಠಾರಾ ಜಗ ದ್ವ್ಯಾಪಕನೆ ಎನ್ನ ಸಂಸಾರ ಘೋರ ಕೊಪದಿಂದೆತ್ತಯ್ಯ ಧೀರ 8 ಸಿಂಧೂರ ರಾಜ ಪರಿಪಾಲ ಕೋಟಿ ಕಂದರ್ಪ ಲಾವಣ್ಯ ಶೀಲ ಧರ್ಮ ಮಂದಾರ ಭೂಜಾಲಪಾಲ ಯೋಗಿ ಸಂದೋಹ ಹೃತ್ಕುಮುದ ಶೀಲಾ 9 ಶಿವನ ವೈರಿಯ ಕೊಂದ ಶಕ್ತ ಪುಣ್ಯ ಶ್ರವಣ ಕೀರ್ತನ ನಿನ್ನ ಭಕ್ತಾ ಜನರ ಭವದೊಳಗೆ ದಣಿಸುವುದು ಯುಕ್ತವೇನೊ ಭುವನ ಪಾವನ ನಿತ್ಯಮುಕ್ತ 10 ಶ್ರೀಕರ ಶ್ರೀಮದಾನಂತ ನಿಖಿಳ ಲೋಕೈಕನಾಥ ನಿನ್ನಂಥ ಸಖರ ನಾ ಕಾಣೆನೆಲ್ಲಿಯೂ ಮಹಂತಾ ಎನ್ನ ನೀ ಕಾಯೋ ಕಂಡ್ಯ ಭೂಕಾಂತಾ 11 ಕರ್ಮ ಚಿತ್ರತ್ವಗ್ರಸನ ಕಾಯ ಕರಣ ಮನಹಂಕಾರ ಘ್ರಾಣಾ ಬುದ್ದಿ ಚರಣ ಪಾಯೂಪಸ್ಥ ನಯನಜಾತ ಉರುಪಾಪ ಕ್ಷಮಿಸು ಶ್ರೀ ರಮಣಾ 12 ಅನಿಮಿತ್ತ ಬಂಧು ನೀಯೆನ್ನ ಬಿಡುವು ದನುಚಿತವೋ ಲೋಕಪಾವನ್ನ ಚರಿತ ಮನ ವಚನ ಕಾಯದಲಿ ನಿನ್ನ ಪಾದ ವನಜ ನಂಬಿದೆ ಸುಪ್ರಸನ್ನಾ 13 ನೀನಲ್ಲದೆನಗೆ ಗತಿಯಿಲ್ಲ ಪವ ಮಾನವಂದಿತ ಕೇಳೋ ಸೊಲ್ಲ ಎನ್ನ ಜ್ಞಾನೇಚ್ಛೆ ಕ್ರಿಯಂಗಳೆಲ್ಲಾ ನಿನ್ನ ಧೀನವಲ್ಲವೆ ಲಕ್ಷ್ಮೀನಲ್ಲಾ 14 ಪ್ರಾಚೀನ ಕರ್ಮಾಂಧ ಕೂಪದೊಳಗೆ ಯೋಚಿಸುವ ನರರ ಸಂತಾಪ ನಿನಗೆ ಗೋಚರಿಸದೇನೋ ಬಹುರೂಪ ವೆಂಕ ಟಾಚಲನಿಲಯ ಪಾಹಿ ಶ್ರೀಪಾ 15 ಯಾಕೆ ದಯ ಬಾರದೆನ್ನಲ್ಲಿ ನರಕ ನಾಕ ನರಕ ಭೂ ಲೋಕಂಗಳಲ್ಲಿ ಚರಿಸಿ ನಾ ಕಷ್ಟಪಟ್ಟ ಬಗ್ಗೆ ನೀ ಬಲ್ಲಿ ವೀತ ಶೋಕ ಕೊಡು ಭಕುತಿ ನಿನ್ನಲ್ಲಿ 16 ಬನ್ನ ಬಡಿಸುವರೇನೋ ಬಿಡದೆ ನಾನು ಮುನ್ನ ಮಾಡಿದ ಪಾಪ ಕೆಡದೆ ನೀ ಪ್ರ ಪನ್ನ ವತ್ಸಲನೆಂದು ನುಡಿದೆ 17 ತಾಪತ್ರಯಗಳಿಂದ ನೊಂದೆ ಮಹಾ ಪಾಪಿಷ್ಠರಲ್ಲನ್ನ ತಿಂದೆ ಇನ್ನು ಆಪರೇತೇಶ್ವರನ ಮುಂದೆ ಪೋಗಿ ನಾ ಪೇಕೊಳಲೇನು ತಂದೆ 18 ದೇಹ ಸಂಬಂಧಿಗಳ ಸಹಿತವಾಗಿ ನಾ ಹೊಂದಿದೆನು ಲೋಕಮೋಹಿತ ಎನ್ನ ಮೋಹಿಪ್ರದು ನಿನ್ನಗೇನು ವಿಹಿತ ಹೃದಯ ಬಾಹಿರಂತರದಿ ಸನ್ನಿಹಿತ 19 ಪೋಗುತಿದೆ ದಿವಸ ಕಮಲಾಕ್ಷ ಪರಮ ಅಪರೋಕ್ಷ ಎನಗೆ ಹೇಗಾಗುವುದೊ ಸುರಾಧ್ಯಕ್ಷ ದುರಿತ ನೀನು ಕಾಮಿತ ಕಲ್ಪವೃಕ್ಷ 20 ಗತಿಯಾರು ನಿನ್ನುಳಿದು ದೇವ ರಮಾ ಸಂಜೀವ ಎನ್ನ ಸತಿಸುತರ ಅನುದಿನದಿ ಕಾವ ಭಾರ ಸತತ ನಿನ್ನದು ಮಹಾನುಭಾವ 21 ದೊಡ್ಡವರ ಕಾಯ್ವುದೇನರಿದು ಪರಮ ದಡ್ಡರನು ಕಾಯ್ವದೇ ಬಿರುದು ಎನ್ನ ಗುಡ್ಡದಂತಹ ಪಾಪ ತರಿದು ಕಾಯೋ ವಡ್ಡಿ ನಾಯಕ ಸಾರೆಗರದೊ 22 ಜ್ಞಾನಿಗಳು ನೀಚರಲಿ ಕರುಣಾ ಮಾಡ ರೇನೋ ಬಿಡುವರೇ ರಥಚರಣ ಪಾಣಿ ಭಾನು ಚಂಡರವಿಕಿರಣ ಬಿಡದೆ ತಾನಿಪ್ಪನೆ ರಮಾರಮಣ23 ಆಡಲ್ಯಾತಕೆ ಬಹಳ ಮಾತಾ ಪರರ ಬೇಡಲಾರೆನೋ ಜಗತ್ರಾತಾ ಹೀಗೆ ಮಾಡುವರೇ ಕೆಳೆನ್ನ ಮಾತ ನೀನೆ ನೀಡೆನಗೆ ಪುರುಷಾರ್ಥ ದಾತಾ 24 ಬೇಡಲೇತಕೆ ಬಹಳ ಮಾತಾ ಎನ್ನ ಕೇಡು ನಿನ್ನದಲ್ಲೇ ಬಲಿದೌತ ಪಾದ ಬೇಡಿಕೊಂಬುವೆ ನಾನನಾಥ ದೂರ ನೋಡಲಾಗದು ಪಾರ್ಥಸೂತ 25 ನಿತ್ಯ ಬಿಡದೆ ಶಾರದೇಶನ ನುತಿಪ ಭಕ್ತ ಜನರ ಪಾರ ಸಂತೈಸುವುದು ಮಿಥ್ಯವಲ್ಲ ಶ್ರೀರಮಣ ಸಾಕ್ಷಿದಕೆ ಸತ್ಯಾ 26 ಪರಿಯಂತ ಶಯನ ಪ್ರಣತಾರ್ತಿ ಹರನೆಂಬೊ ಅಂಕಾ ಕೇಳಿ ಮಣಿದ ನಿನ್ನಂಘ್ರಿಗೆ ಶಶಾಂಕಾ ಭಾಸ ದಣಿಸಲಾಗದು ನಿಷ್ಕಳಂಕಾ27 ಕಾರ್ತವೀರ್ಯಾಜುನನ ಕೊಂದ ಭವ್ಯ ಕೀರ್ತಿ ನಿನ್ನಾನಂದ ವೃಂದ ಸತತ ಕೀರ್ತಿಸುವ ನರರ ಬಹುಕುಂದ ನೋಡ ದಾರ್ತನ್ನ ಪೊರೆಯೊ ಗೋವಿಂದ 28 ದಯದಿಂದ ನೋಡೆನ್ನ ಹರಿಯೆ ಜಗ ನ್ಮಯನೆ ಜ್ಞಾನಾನಂದ ವೃಂದ ಸಿರಿಯೆ ಮನಾ ಭಯದೂರರಿನ್ನೊಬ್ಬರರಿಯೇ 29 ನರಸಿಂಹ ನಿನ್ನುಳಿದು ಜಗವ ಕಾಯ್ವ ಪರಮೋಷ್ಠಿ ರಾಯನು ನಗುವ ನಿತ್ಯ ನಿರಯಾಂಧ ರೂಪದೊಳು ಹುಗಿವಾ 30 ದಾಸ ದಾಸರ ದಾಸನೆಂದು ಬಿಡದೆ ನೀ ಸಲಹೋ ಎನ್ನನೆಂದೆಂದೊ ನಿನ್ನ ನಾ ಸೇವಿಸುವೆ ಕೃಪಾಸಿಂಧು ಎಮ್ಮನು ದಾಸಿಸದÀನಿಮಿತ್ತ ಬಂಧೂ 31 ಎಂದೆಂದು ನೀ ಬಡವನಲ್ಲ ನಿನ್ನ ಮಂದಿರದೊಳಗೆ ಬಲ್ಯಲ್ಲಾ ಚಿದಾ ನಂದ ನೀ ಭಕ್ತ ವತ್ಸಲ್ಲಾ 32 ಕಾಮಿತಪ್ರದನೆಂಬ ಬಿರಿದು ಕೇಳಿ ನಾ ಮುದದಿ ಬಂದೆನೋ ಅರಿದು ಎನ್ನ ತಾಮಸ ಮತಿಗಳೆಲ್ಲ ತರಿದು ಮಮ ಸ್ವಾಮಿ ನೋಡೆನ್ನ ಕಣ್ದೆರದು33 ಹಿತವರೊಳು ನಿನಗಧಿಕರಾದ ತ್ರಿದಶ ತತಿಗಳೊಳು ಕಾಣೆನೋ ಪ್ರಮೋದ ನೀನೆ ಗತಿಯೆಂದು ನಂಬಿದೆ ವಿವಾದವ್ಯಾಕೊ ಪತಿತಪಾವನ ತೀರ್ಥಪಾದ 34 ಮಡದಿ ಮಕ್ಕಳು ತಂದೆ ತಾಯಿ ಎನ್ನ ಒಡಹುಟ್ಟಿದವರ ನೀ ಕಾಯಿ ಲೋಕ ದೊಡೆಯ ನೀನಲ್ಲದಿನ್ನಾರೈ ಎನ್ನ ನುಡಿ ಲಾಲಿಸೋ ಶೇಷಶಾಯಿ 35 ಅನುಬಂಧ ಜನರಿಂದ ಬಪ್ಪ ಕ್ಲೇಶ ವನುಭವಿಸಲಾರೆ ಎನ್ನಪ್ಪ ಉದಾ ಸೀನ ಮಾಡಿ ದಯಮಾಡದಿಪ್ಪರೇನೋ ಘನ ಮಹಿಮ ಫಣಿರಾಜತಲ್ಪ 36 ಹದಿನಾಲ್ಕು ಲೋಕಂಗಳನಾಳ್ವ ಬ್ರಹ್ಮ ಮೊದಲಾದವರು ನಿನ್ನ ಚಲ್ವನಖದ ವಿಧಿಸಲಾಪೆನೆ ನಿನ್ನ ಸಲ್ವಾ 37 ಧನ ಧಾನ್ಯ ಪಶು ಪತ್ನಿ ಗೇಹ ಜನನೀ ಜಾಮಾತ ಸಖ ನೇಹ ಅನುಜ ತನುಜಾಪ್ತವರ್ಗದಿಂದಾಹ ಸೌಖ್ಯ ನಿನಗರ್ಪಿಸಿದೆ ಎನ್ನ ದೇಹಾ 38 ನೀನಿತ್ತ ಸಂಸಾರದೊಳಗೆ ಸಿಲುಕಿ ನಾನೊಂದೆ ಕರೆ ನಿನ್ನ ಬಳಿಗೆ ಚರಣ ಧ್ಯಾನ ದೊರಕಲು ಭವದಿ ಮುಳುಗೆ ನಿನ್ನ ಕಾಣದಿರಲಾರೆನರ ಘಳಿಗೆ 39 ಸಲುಗೆ ಬಿನ್ನಪವ ನೀ ಕೇಳೋ ಎನ್ನ ಬಲು ದುರುಳತನವ ನೀ ತಾಳೋ ನೀನೆ ನೆಲೆಯಲ್ಲದೆನಗಾರು ಪೇಳೋ ಎನ್ನ ಕುಲದೈವ ಬಹುಕಾಲ ಬಾಳೋ40 ಸಾಂದೀಪ ನಂದನನ ತಂದ ನಂದ ಭವ ವೃಂದ ಕಳೆದು ಎಂದೆಂದು ಕುಂದದಾನಂದವೀಯೋ ಇಂದಿರಾರಮಣ ಗೋವಿಂದ41 ತೈಜಸ ಪ್ರಾಜ್ಞ ತುರಿಯಾ ಎನ್ನ ದುಸ್ವಭಾವವ ನೋಡಿ ಪೊರೆಯದಿಹರೆ ನಿಸ್ಪøಹ ನಾನಿನ್ನಂಘ್ರಿ ಮೊರೆಯ ಪೊಕ್ಕೆ ಅಸ್ವತಂತ್ರನ ಕಾಯೋ ಪಿರಿಯಾ42 ಇಹಪರದಿ ಸೌಖ್ಯ ಪ್ರದಾತ ನೀನೆ ಅಹುದೋ ಲೋಕೈಕ ವಿಖ್ಯಾತ ಮಹಾ ಮಹಿಮ ಗುಣಕರ್ಮ ಸಂಜಾತ ದೋಷ ದಹಿಸು ಸಂಸಾರಾಬ್ದಿ ಪೋತಾ 43 ಲೋಕಬಾಂಧವನೆಂಬ ಖ್ಯಾತಿಯನ್ನು ನಾ ಕೇಳಿದೆನು ಖಳಾರಾತಿ ಮನೋ ಶೋಕ ಮೋಹಾಜ್ಞಾನ ಭೀತಿ ಬಿಡಿಸು ಶ್ರೀ ಕರಾರ್ಚಿತ ಸ್ವಯಂ ಜ್ಯೋತಿ44 ಒಂದು ಗೇಣೊಡಲನ್ನಕಾಗಿ ಅಲ್ಪ ಮಂದಭಾಗ್ಯರ ಮನೆಗೆ ಪೋಗಿ ದೈನ್ಯ ದಿಂದ ಸತ್ಕರ್ಮಗಳ ನೀಗಿ ಕಂದಿ ಕುಂದಿದೆನೋ ಸಲಹೋ ಲೇಸಾಗಿ45 ಪಾತಕರೊಳಗಧಿಕ ನಾನಯ್ಯ ಜಗ ತ್ಪಾತಕವ ಕಳೆವ ಮಹಾರಾಯ ನಿನ್ನ ದೂತನಲ್ಲವೆ ಜೀಯ ಜಗ ನ್ನಾಥ ವಿಠ್ಠಲ ಪಿಡಿಯೋ ಕೈಯಾ 46
--------------
ಜಗನ್ನಾಥದಾಸರು
ಶ್ರೀನಿವಾಸ ಸುಜನೋದ್ಧಾರ ಏನು ತಾತ್ಸಾರ ನಾನು ನಿನ್ನ ದಾಸನೆಂದು ಮಾನವರು ನುಡಿದ ಮೇಲೆ ಪ. ಪುಟ್ಟಿದಾಕ್ಷಣಾದಿಯಾಗಿ ದುಷ್ಟಸಂಗಕೊಳಗಾಗಿ ನಷ್ಟಪ್ರಜ್ಞೆಯಿಂದ ಬಹು ಕಷ್ಟಿಯಾದೆನು ಕೃಷ್ಣ ಶಬ್ದ ವಾಚ್ಯಪರಮೇಷ್ಠಿ ಜನಕ ನಿನ್ನ ಮನ ಮುಟ್ಟಿ ಭಜಿಸದೆ ಬಯಲೆಷ್ಟವ ಬಯಸುವೆನಲ್ಲೊ 1 ದಾನಧರ್ಮ ಜಪತಪ ಮೌನ ಮೊದಲಾದ ಸ- ತ್ಸಾಧನ ಹೀನನಾದರು ನಿನ್ನಾನುರಾಗದಿ ಮನಮುಟ್ಟಿ ಕ್ಞಣವಾದರು ಧ್ಯಾನಿಸಲು ಸಕಲವಂದ್ಯ ಮುನಿಗಮ್ಯ ಪದವನೀವಾತನು ನೀನೆಂದೊಂದೆ ತಿಳಿದೆ 2 ಮನವಚನ ಕಾಯಕಾದನುದಿನ ಕೃತವಾದ ಘನ ಪಾಪಂಗಳಿಗೆ ನಾ ಕೊನೆಗಾಣೆನು ದನುಜಾರಿ ರಾಮ ಅನಿಮಿತ್ತಬಂಧು ಎಂಬ ಘನತೆ ತೋರಿಸಿ ನಿನ್ನ ತನಯನೆಂದೆಂನ ಸಲಹೊ 3 ವೀರವೇದೋದ್ಧಾರ ವರಮಂದರಧರ ನರ ಹರಿಕುಬ್ಜಾಕಾರ ಪೃಥ್ವೀಭಾರವಾರಕ ವಾರುಧಿ ಬಂಧಕಯದು ವೀರ ತ್ರಿಪುರ ಸ್ಮರ ಹರನಿಂದ ತರಿಸಿದ ತುರಗವೇರಿದ ಧೀರ 4 ಮಂದಮತಿಯಾದ ಎನ್ನ ಬಂಧುವಾಗಿ ಕೈಯ ಪಿಡಿದು ಮುಂದು ಗಾಣಿಸುವೆನೆಂದು ಹಿಂದೆ ರಕ್ಷಿಸಿ ಇಂದು ಎನ್ನ ಕುಂದನೆಣಿಸಿ ತಂದೆ ನೀನುಪೇಕ್ಷಿಸಲು ಮುಂದೆ ಕಾಯ್ವರಾರೊ ಕರುಣಾಸಿಂಧು ಅನಿಮಿತ್ತ ಬಂಧು 5 ಮಾನಗೇಡಿನಿಂದ ದ್ವೇಷಿ ಮಾನವಾಧಮರ ಮುಂದೆ ಶ್ವಾನಕಿಂತ ಕಡೆಯಾಗಿನ್ನೇನು ಮಾಡಲೊ ನೀನೆ ಗತಿಯೆಂಬ ಮನೋಧ್ಯಾನದಿಂದ ಬಂದೆ ನಿಂದು ಕಾನನದ ಶಿಶುವಿದೆಂದು ಮಾನಿಸಿ ರಕ್ಷಿಸೊ ತಂದೆ 6 ಘಾಸಿಗೊಳಿಸುತೀ ಆಶಾಪಾಶದಿಂದ ಎನ್ನ ಬಿಡಿಸಿ ದಾಸರ ದಾಸ್ಯವನಿತ್ತು ಪೋಷಿಸೆನ್ನುತ ಮೀಸಲಾಗಿಹೆನು ಶ್ರೀನಿವಾಸ ಬೇಗ ಸಲಹೊ ಬಂದು 7
--------------
ತುಪಾಕಿ ವೆಂಕಟರಮಣಾಚಾರ್ಯ
ಶ್ರೀನಿವಾಸ-ಶ್ರೀನಿವಾಸ-ಶ್ರೀನಿವಾಸ ಪ ಶ್ರೀನಿವಾಸ ನಾನಿಹೆ ನಿನ್ನ ದಾಸ-ನಿನ್ನ ದಾಸ ನಿನ್ನದಾಸ ಅ.ಪ. ಈಶ, ತರಿಯುವೆ ಕ್ಲೇಶಾ ಕೊಡುಲೇಶ, ಕೊಡುಲೇಶ ಜೀಯ, ಸಡಗರ ದೈವ ಬಡವನು ನಾನು ಕೊಡುವುದು ಏನು, ಅಡಿಗಳನೀಡು, ಇಡುವೆನು ಮೌಳಿ, ಇಡುವೆನು ಮೌಳಿ ಘನಸುಖದಾತ, ಚಿನ್ಮಯಗಾತ್ರ, ವನರುಹ ನೇತ್ರ, ಅನಿಲನಸೂತ್ರ ಅನುದಿನ ತನುಮನನಾಥ ತನುಮನನಾಥ ಕುಂದುಗಳಳಿದು, ಕಂದನ ಸಲಹೋ ಕಂದನ ಸಲಹೋ 1 ವೇದವ್ಯಾಸ, ವಾದಾಗಾರ, ಬೋಧಿಸಿವಿದ್ಯೆ ಸಾಧನೆಗೈಸೋ ವೇಧನ ತಂದೆ ವೇಧನತಂದೆ ಸೋದರ ಪ್ರಜೆಗಳು ದೈತ್ಯರ, ಖೇದವನೀಡ್ಡೆ ಖೇದವನೀಡ್ದೆ ಧೀರವರಾಹ, ಯಾಗಶರೀರ, ಬಹುಗಂಭೀರ ಶೃತಿಗಳಸಾರ ಸಾರ ಸಾರಕೆ ಸಾರ ಕಂಭದಿಬಂದೆ ಕಂದನ ಪೊರೆದೆ ಕಂದನ ಪೊರೆದೆ 2 ಬಲಿಯೆಡೆನಿಂದ ಬೇಡುವೆನೆಂದ ಬೇಡುವೆನೆಂದ ಮೂರಡಿಯಿಂದ ಬೆಳೆಯುತ ಬಂದ ಬೆಳೆಯುತ ಬಂದ ಭೂಮಿಯು ಮುಗಿಯೆ ಶಿರವನ್ನೀಯೆ, ಭಕ್ತನಕಾಯೆ, ಬಾಗಿಲಕಾಯ್ದೆ, ಬಾಗಿಲಕಾಯ್ದೆ ವಿಪ್ರರ ಪೊರೆದ, ವರಸಮರಿಲ್ಲ ವರಸಮರಿಲ್ಲ ಭಾರ್ಗವರಾಮ, ಋಷಿಗಣಸ್ತೋಮ, ದೈತ್ಯವಿರಾಮ, ಸತ್‍ಜನಪ್ರೇಮ, ಮಂಗಳ ನಾಮ ಮಂಗಳನಾಮ 3 ತಾರಕನಾಮ, ಕಲಿಗಿವ ಭೀಮ, ದಶರಥರಾಮ, ಸೀತಾರಾಮ ಜಯಜಯರಾಮ ಜಯಜಯರಾಮ ಲಕ್ಷ್ಮಣನಣ್ಣ, ಸಗುಣಸಂಪನ್ನ, ಜಗಕಿವ ಅನ್ನ, ಬಿಡಬಿಡಬೆನ್ನ ಪ್ರಾಣನೆ ಅನ್ನ, ಕೇವಲನಣ್ಣ, ರವಿಶಶಿಕಣ್ಣ, ಸಿದ್ಧವಿದಣ್ಣ ಆಗಿಸಿ ಯಾಗ, ಸಾಗುತ ಬಂದ ಸಾಗುತ ಬಂದ ಕೊಂದನು ಖಳರ, ಮುಂದಕೆ ನಡೆದ 4 ಮುಟ್ಟಿ, ಕಳ್ಳನ ಮೆಟ್ಟಿ ರಾಜ್ಯವಕೊಟ್ಟ ಜಗಜ್ಜಟ್ಟಿಜಗಜ್ಜಟ್ಟಿ ನಿಜಮುನಿಇವನೆ, ನಿಜವಿಧಿ ಇವನೆ, ಸರ್ವೇಶ, ಸರ್ವೇಶ ಬೆಣ್ಣೆಯ ತಿಂದ ಪೋರನು ಎನಿಸಿ, ಚೋರನು ಎನಿಸಿ ಎನಿಸಿ, ಕ್ರೂರನು ಎನಿಸಿ, ನಾರೇರ ವರಿಸಿ, ಭೂರಿದನೆನಿಸಿ, ಲೀಲೆಯ ತೋರ್ದ 5 ಊರಿಗೆ ಬಂದೆ, ಜರೆಸುತ ಬಂದು, ಬಹುಮಡಿನೊಂದು, ಮರಳಿಯು ಬಂದು ಕದನಕೆ ನಿಂದ, ಬಲುಭಂಢ, ಬಲುಭಂಢ ರಾತ್ರಿಯಲೊಂದು ಸಾಗಿಸಿ ಬಂದು, ವೊಕ್ಕೂ, ತಾಮುಕುಂದ ತಾಮುಕುಂದ, ಸೂತ, ಜಗವಿಖ್ಯಾತ ಕೊಲ್ಲಿಸಿದಾತ ಸರ್ವಸಮರ್ಥ, ಸರ್ವಸಮರ್ಥ ಕಾಲದಿ ಭೇದ ಇಲ್ಲವು ಎಂದು ವಿಭುಶರಣೆಂಬೆ, ವಿಭುಶರಣೆಂಬೆ 6 ವೇದಸುವೃಂದ, ತ್ರಿಪುರರಕೊಂದ, ಬಲ್ಲ, ಎಲ್ಲವ ಬಲ್ಲ ನಿತ್ಯವಿದೆಲ್ಲ, ತಿಳಿದವರಿಲ್ಲ, ಸಾರಿಸಾಕಲ್ಯ ಜಗವನೆಲ್ಲ, ಬಿಗಿದಿಹನಲ್ಲ, ನಾಮದಿನಲ್ಲ, ನಾಮದಿನಲ್ಲ, ಆದಿಯು ಇಲ್ಲ, ಮಧ್ಯವು ಇಲ್ಲ, ಕೊನೆತಾನಿಲ್ಲ, ಖೇದವು ಇಲ್ಲ, ಮೋದವೆ ಎಲ್ಲ, ಭಗನಿಹನಲ್ಲ ಅಪಜಯವಿಲ್ಲ, ಶ್ರೀಗಿವನಲ್ಲ, ಅಪ್ರತಿಮಲ್ಲ, ಪ್ರಕೃತಿಯು ಅಲ್ಲ, ಸ್ವಾಮಿಯು ಇಲ್ಲ, ತಾನೇ ಎಲ್ಲ ಪ್ರೇರಿಪನೆಲ್ಲ, ಭಿನ್ನನು ನಲ್ಲ, ಸರ್ವೋತ್ಕøಷ್ಠ 7 ಕುಜನರ ಮುರಿಯೆ, ಎನಿಸಿ, ಧರ್ಮವನುಳುಹಿ, ಭಕ್ತರಿಗೊಲಿದು, ಪೊರೆವುದು ಸತ್ಯ, ಪೊರೆವುದು ಸತ್ಯ, ಸತ್ಯರ ಸತ್ಯ, ಸಂತರ ಮಿತ್ರ, ಪರಮ ಪವಿತ್ರ, ಲೋಕವಿಚಿತ್ರ ಸುಖಚಾರಿತ್ರ, ಮಂಗಳಗಾತ್ರ, ನಿಖಿಳಸುಭರ್ತ, ಭಕ್ತರ ಭೃತ್ಯ ನತ ಜನಪಾಲ, ವೇದಗಳೆಲ್ಲ, ಶಬ್ದಗಳೆಲ್ಲ, ಘೋಷಗಳೆಲ್ಲ ನಾಮಗಳೆಲ್ಲ, ಇವನನೆ ಎಲ್ಲ, ಪೊಗಳುವವಲ್ಲ, ಮುಕ್ತರಿಗೆಲ್ಲ, ಪ್ರಕೃತಿಯ ಸತ್ತಾ, ಸಕಲವ ನೀತ, ನೀಡುವ ದಾತ, ಸರ್ವಸುವ್ಯಾಪ್ತ, ಸರ್ವಸ್ವತಂತ್ರ8 ವೇದವ್ಯಾಸ, ಬದರೀನಿವಾಸ, ವೇದಸ ಪೀಠ, ಸಾಧಿಸುವಂತ್ಯ ಮೋದಕವೀಂದ್ರ, ಮಧ್ವನಪೋಷ, ಆದರವೀಯೊ ಪಾದಗಳಲ್ಲಿ ವೇದಗಳಳಿಯೆ, ವಿಧಿ ಮುಖಸುರರು, ಪಿಡಿದರು ಪಾದ ಮಾಧವ ನೀನು ಮೇದಿನಿಗಿತ್ತೆ ಸೂತ್ರ ಗೈದ ಮಹೇಶ, ವೇದಕುಮಿಗಿಲು, ಭಾರತಕರ್ತ, ಭಾರತ ಕರ್ತ ಛಂದದಸುಕಾಯ ಕುಡಿಸೈ ಜೀಯ ಹರಿಸುತಮಾಯ, ಹರಿಸುತಮಾಯ, ಹರಿಸುತಮಾಯ 9 ಶ್ರೀ ಇಹವಕ್ಷ, ಜ್ಞಾನಸುಪಕ್ಷ, ಸರ್ವಾಧ್ಯಕ್ಷ, ದಿವಿಜರಪಕ್ಷ ಬೃಹತೀಭಕ್ಷ, ತಾನಿರಪೇಕ್ಷ, ಆಶ್ರಿತರಕ್ಷ, ಕರುಣ ಕಟಾಕ್ಷ, ಕರುಣಿಸು ರಕ್ಷ, ನೀಜಗರಕ್ಷ, ಅಜಗರ ಶೈಯ್ಯ, ಮನ್ಮಥನಯ್ಯ ಭವಬಿಡಿಸಯ್ಯ, ಭಯಹರಿಸಯ್ಯ ದಯಮಾಡಯ್ಯ ಶರಣುಪರೇಶ ಇಚ್ಛೆ ಅನೀಶಾ, ಕಳೆಕಳೆ ಆಶಾ, ಕಡಿಕಡಿಪಾಶಾ, ನಾಬಡದಾಸ, ತೈಜಸ ಶರಣು, ಪ್ರಾಜ್ಞನೆ ಶರಣು, ತುರ್ಯನೆ ಶರಣು, ಕಪಿಲನೆ ಶರಣು ಶರಣು ಅನಂತ, ಶರಣು ಅನಂತ 10 ವೆಂಕಟರಮಣ, ಕಿಂಕರನಾನು, ಸಂಕಟಹರಿನೊ ಶಂಕರತಾತ ತಿದ್ದೊ, ಪಂಕಜನಯನ ದಡ್ಡನು ನಾನು ಭಕ್ತಿಗಡ್ಡೆಗೆಸೇರಿಸು ಪ್ರಾಣನ ಆಣೆ ರಾಜರ ಆಣೆ ಜಯಮುನಿ ಆಣೆ, ಗುರುಗಳ ಆಣೆ, ಉರಗಾದ್ರಿವಾಸ, ಪದ್ಮಜಳೀಶ, ಹರಿಸುತ ದೋಷ, ಚರಣದಿವಾಸ, ನಿರುತಲೀಯೊ, ಕರುಣವ ಸುರಿಸಿ, ಮರುತನ ಮತದ ಅರುಹುತಲೆನಗೆ, ಸಂತತ ವೆಂಬೆ, ಸಂತತವೆಂಬೆ, ಸಂತತವೆಂಬೆ ನಂದದಿ ಪಠಿಸೆ ನಂದವು ಶಾಶ್ವತ, ಜಯಮುನಿಹೃಸ್ಥ, ಮಧ್ಯರಮೇಶ ಶ್ರೀಕೃಷ್ಣವಿಠಲ ವಲಿಯುವ ಸಿದ್ಧ, ವಲಿಯುವ ಸಿದ್ಧ 11
--------------
ಕೃಷ್ಣವಿಠಲದಾಸರು
ಸಣ್ಣವರುದ್ದುಸಕಾಗಿ ಬಿನ್ನಯಿಸುವೆನು ನಾನುಎನ್ನ ಆಳುವ ದೊರೆಯೆ ನಿನ್ನ ಸ್ವಾತಂತ್ರ್ಯ ಸಂಕಲ್ಪಅರಿತವರಲ್ಲ ಚೆನ್ನಾಗಿ ಸಾಕಬೇಕು ಹರಿಯೆ ಪ. ಸಾಧುಸಂಗಗಳಿಲ್ಲ ಓದಿ ಕೇಳಿದರಲ್ಲಭೇದಅಭೇದಗಳ ಅರಿದುಯಿಲ್ಲಕ್ರೋಧ ಬಿಟ್ಟವರಲ್ಲ ಸಾಧುಗಳು ಯೋಗ್ಯತೆಲಿಹಾದಿ ಏನೀಜೀವರುಗಳಿಗೆ ಹೇ ಸ್ವಾಮಿ 1 ವಸ್ತ್ರದ ಮೂಲವು ಹತ್ತಿಯ ಕಾಳಹುದುಬಿತ್ತಿ ಬೆಳೆಸಿ ಅದರ ವ್ಯಕ್ತಿ ಮಾಡಿವಿಸ್ತರಿಸಿ ನೋಡಿಸಿದರೆ ಪಟ್ಟುವು ಆಗುವುದುವಸ್ತುಗಳ ವ್ಯಕುತಿ ನಿನ್ನಿಂದಾಗಬೇಕು 2 ಮಾಡಲರಿಯರು ತುತಿಯ ನೋಡಲರಿಯರು ನಿನ್ನಬೇಡಲರಿಯರು ತಮ್ಮ ಹಿತದ ಕಾಮಮಾಡುವರು ನಿನ್ನವರ ಮಮತೆಯಾದರು ಮನಸು-ಗೊಡು ಈಪರಿ ಜೀವಗಳಿಗೆ ಗತಿಯೇನೊ 3 ನಿನ್ನಿಂದ ಸೃಷ್ಟಿಯಾದ ಜೀವರುಗಳಿಗಿನ್ನುಇನ್ನು ಮೂರು ಬಗೆಯ ಭಕುತರೊಳಗೆಎನ್ನಿಂದ ಉತ್ತಮ ಮಧ್ಯಮಾಧಮರುಗಳುಇನ್ನಾವ ಇವರ ವಿವೇಕ ನೀ ಬಲ್ಲೆ 4 ಎನಗಿಂದುತ್ತಮರು ಎನಗೆ ಪ್ರಾರ್ಥಿಸುವರುಎನಗೆಂದವರಲೆನಗೆ ಹಿತ ಪೇಳ್ವರುಘನ ಅವರ ಮಧ್ಯಸ್ಥರನು ಹುಡುಕ ತಿಳಿಯದುಅನುವರಿತು ಅವರವರ ಗತಿಗೆ ಅನುಕೂಲನಾಗು 5 ನೀತವನು ನೀ ಬಲ್ಲೆ ಅವರವರ ಸಾಧನವುಯಾತಕೆ ಅವರಗೊಡವೆ ನಿನಗೆ ಎಂಬ್ಯನೀತವಾಗಿದೆ ನೋಡೊ ಪರಸ್ಪರ ಜೀವರಿಗೆಪ್ರಾರ್ಥನೆಯು ಎಂಬುವುದು ಮಾತು ಪುಸಿಯಲ್ಲ 6 ನಿನ್ನವರು ಆಗಿ ಪಾಡನುಬಡುತ ಇಪ್ಪುವರಕಣ್ಣಲಿಕಂಡು ನಾ ಬಿಡುವನಲ್ಲಮನ್ನಿಸು ನಿನ್ನ ಚಿತ್ತ ಮನ್ನಿಸದಲೆ ಪೋಗುಎನ್ನ ಸ್ವಭಾವವಿದೆ ಗೋಪಾಲವಿಠಲ 7
--------------
ಗೋಪಾಲದಾಸರು
ಸತ್ರಾಜಿತ ಕುಮಾರಿ ಗೃಹಕೆ ಪಕ್ಷಿವಾಹನ ತನ್ನ ಅಚ್ಛದ ಸತಿಯ ಕಾರಣನೆಲ್ಲೂ ಭಾಮೆ ಇಚ್ಛೆಯಿಂದಲಿ ಬಂದನಿಲ್ಲೆ 1 ಮಚ್ಛಲೋಚನೆ ನಗುತ ಅಚ್ಚಮುತ್ತಿನ ದ್ವಾರ್ಯ ಮುಚ್ಚುಕದವ ತೆಗೆಯದೆ ಭಾಮೆ ಅಚ್ಚುತನ ಕೂಡ ವಿನಯದಿ 2 ಮದಗಜಗಮನೆ ಕೇಳೆ ಗಜವರದನು ನಾನೆ ಕದವ ತೆಗೆಯೆ ಕಮಲಾಕ್ಷಿ ಭಾಮೆ ಮುದದಿ ನೋಡೆನ್ನ ನಿರೀಕ್ಷೆ 3 ಗಜವರದನೆ ಗಜವ ವಧೆ ಮಾಡಿದವನು ನಿನ್ನ ನೆಲೆಯ ಬಲ್ಲವರು ನಾವಲ್ಲ ಕೃಷ್ಣ ಕದವ ತೆಗೆಯೋರ್ಯಾರಿಲ್ಲ4 ಉದಕÀದೊಳು ಮುಣುಗಿ ಬ್ಯಾಗ ಮದಕದಿಂದ್ಹಯನ ಕೊಂದು ತವಕದಿ ವೇದವ ತಂದೆ ನಾನು ಭಾಮೆ ಮತ್ಸ್ಯ ನಾನೆ 5 ಹೊಳೆವೊ ಮತ್ಸ್ಯನಾದರೆ ಶರಧಿ ಹುಡುಕುತ ಹೋಗೊ ನಿನಗಾವಾಸಸ್ಥಾನಯಿದಲ್ಲ ಕೃಷ್ಣ ಜಲವೆನ್ನ ಮನೆಯೊಳಗಿಲ್ಲ 6 ಅಂಬುಧಿ ಮಥಿಸಿ ಅಮೃತ ತಂದು ಸುರರಿಗಿಟ್ಟು ಮಂದರವ ಬೆನ್ನಲಿ ತಾಳಿದೆನೆ ಭಾಮೆ ಸುಂದರ ಕೂರ್ಮನು ನಾನೆ 7 ಸುರರಸುರರ ಯುದ್ಧ ಬಿಟ್ಟು ಮೋಹಿನ್ಯಾಗಲ್ಲಿ ನಡೆ ನಾ ಸ್ತ್ರೀರೂಪ ನೋಡೋಳಲ್ಲ ಕೃಷ್ಣ ಛಲದಿಂದ್ವಂಚಿಸು ಹೋಗವರನೆಲ್ಲ 8 ಮಣ್ಣು ಕೆದರುತಲ್ಹೋಗ್ಹಿ- ರಣ್ಯಾಕ್ಷನ್ನ ಸೀಳಿ ಮನ್ನಿಸ್ಯವನಿಯ ತಂದೆ ನಾನೆ ಭಾಮೆ ವರಾಹ ನಾ ಬಂದೀನೆ 9 ವರಾಹ ನೀನಾದರೆ ಗರಿಗಂಹರವ ಸೇರೊ ಮನೆಗೆ ಬರುವೋದುಚಿತಲ್ಲ ಕೃಷ್ಣ ಮೆಲುವ ಬೇರೆನ್ನ ಮನೆಯೊಳಿಲ್ಲ 10 ತರಳ ಕರೆಯಲು ಕಂಬ ಒಡೆದಸುರನ ಒಡಲ ಕಡು ಕೋಪವನ್ನು ತಾಳಿದನೆ ಭಾಮೆ ವರಲಕ್ಷ್ಮೀನರಸಿಂಹ ನಾನೆ 11 ಕರುಳಾಧಾರಕ ಕೇಳೊ ಕರಾಳವದನಕ್ಕಂಜುವೆನು ಕಡುಕೋಪ ಎನ್ನೊಳು ತರವಲ್ಲ ಕೃಷ್ಣ ತರಳರಂಜುವರು ಲಕ್ಷ್ಮೀನಲ್ಲ 12 ಅಂಜೋದ್ಯಾತಕೆ ಚಿಕ್ಕ ಕÀಂದ ವಟುವು ಚೆಲ್ವ ಸುಂದರ ವಾಮನನು ನೋಡೆ ಭಾಮೆ ಬಂದೆನ್ನ ಗುಣವ ಕೊಂಡಾಡೆ 13 ಕಪಟ ರೂಪದಿ ದಾನ ತ್ರಿಪಾದ ಭೂಮಿ ಬೇಡಿದ ವಿಪರೀತ ಮಾಯವ ಕಂಡವಳಲ್ಲ ಕೃಷ್ಣ ಅಪರ್ಮಿತ ಗುಣ ಬಲಿ ಬಲ್ಲ 14 ಸರಸಿಜಮುಖಿ ಕೇಳೆ ನಿರುತ ಜಪತಪಾಚರಿಸಿ ಪರಶುರಾಮನು ನಾ ಬಂದೆನೆ ಭಾಮೆ ಶರಥ ಮಾಡದಿರೆನ್ನೊಳು ನೀನೆ 15 ನಿರುತ ನಿಷ್ಠೆಯ ಬಲ್ಲೆ ಗುರುತು ಮಾತೆಯ ಕೊಂದೆ ಸರಸವಾಡುವೋಳು ನಾನಲ್ಲ ಕೃಷ್ಣ ಶರಥÀ ಕ್ಷತ್ರಿಯರಲ್ಲಿದು ಹೋಗೆಲ್ಲ 16 ಎರಡೈದು ಶಿರಗಳ ಕಡಿದು ಜಾನಕಿದೇವಿ ಒಡಗೊಂಡಯೋಧ್ಯವನಾಳಿದೆನೆ ಭಾಮೆ ಪೊಡವಿಗೊಡೆಯ ರಾಮ ನಾನೆ 17 ಅಡವಿ ಅರಣ್ಯ ತಿರುಗಿ ಮಡದಿಗಪನಿಂದ್ಯವ ಕಟ್ಟಿ ಅಡವಿಗಟ್ಟ್ಯಂತಃಕರಣವಿಲ್ಲ ಕೃಷ್ಣ ಬಿಡು ನಿನ್ನ ಸುಳ್ಳು ವಚನವಿದೆಲ್ಲ 18 ಯದುವಂಶದೊಳು ಜನಿಸಿ ವಧೆಮಾಡಿ ದೈತ್ಯರ ನಿರ್ಭಯದಿಂದ ಬೆಳೆದೆನೆ ಭಾಮೆ ಮಧು ಮುರಾಂತಕÀ ಕೃಷ್ಣ ನಾನೆ 19 ಕಲಹ ಮಾಡುತ ಕಾಲ- ಯಮನಿಂದಲೋಡಿ ಬಂದು ನಿರ್ಭಯದಿಂದ ಬೆಳೆಯಲು ನಿಂದೆಲ್ಲ ಕೃಷ್ಣ ಮಲಗಿದ ಮುಚುಕುಂದ ಬಲ್ಲ 20 ನಿಗಮ ನಿಂದ್ಯವ ಮಾಡಿ ಬಗೆಯಿಂದ ತ್ರಿಪುರರ ಚೆದುರೆಯರನು ಒಲಿಸಿದೆನೆ ಭಾಮೆ ಸುಗುಣ ಶರೀರ ಬೌದ್ಧ ನಾನೆ 21 ತ್ರಿಪುರ ಸತಿಯರನೆಲ್ಲ ವಶಮಾಡಿದಂಥ ಶೂರ ವಸನರಹಿತಾಗಿ ತಿರುಗೋದÀಲ್ಲ ಕೃಷ್ಣ ಶಶಿಮುಖಿಯರು ನಗುವರೆಲ್ಲ 22 ಚೆಲುವ ತುರುಗನೇರಿ ಹೊಳೆವೋ ಕತ್ತಿಯ ಶೂರ ಖಳರ ಮರ್ದನ ಮಾಡುವೆನೆ ಭಾಮೆ ಥಳಥಳಿಸುವ ಕಲ್ಕ್ಯ ನಾನೆ23 ಕಲಿಯ ಸಂಹಾರ ಕೇಳೊ ನಿನ್ನ ಕತ್ತಿಗಂಜುವರ್ಯಾರೊ ಕಟಿಪಿಟ್ಯೆನ್ನೊಳು ತರವಲ್ಲ ಕೃಷ್ಣ ಕಲಿಗಳೆನ್ನರಮನೆಯೊಳಿಲ್ಲ 24 ಜಾಂಬವಂತನ್ನ ಗೆದ್ದು ತಂದೆ <
--------------
ಹರಪನಹಳ್ಳಿಭೀಮವ್ವ
ಸಂಪ್ರದಾಯದ ಹಾಡುಗಳು ಆರತಿ ಬೆಳಗಿದೆನೆ ಗುರುವಿಗೆಆರತಿ ಬೆಳಗಿದೆನೆಆರಾರು ಬೆಳಗೇ ಬೆಳಗದಂಥಾಆರತಿ ಬೆಳಗಿದೆನೆ ಪ ಹೃದಯ ತಳಿಗೆಯಲಿ ನಾನೀಗಭಾವದಾರತಿ ಮಾಡಿವಿದವಿದ ಬುದ್ಧಿಯ ಬತ್ತಿಯ ಮಾಡಿನಿರ್ಮಲಾಜ್ಯ ಹೊಯ್ದು 1 ಜ್ಞಾನ ಜ್ಯೋತಿಯನೆ ಮುಟ್ಟಿಸಿಚಿತ್ತದಿಂ ಪಿಡಿದುನಾನೇ ನಾನೇ ನಾನೆಂದಾರತಿ ಬೆಳಗಿದೆನೇ 2 ಬಲುಶಶಿ ಸೂರ್ಯರ ಶತಕೋಟಿಪ್ರಭೆಯನೆ ಮೀರ್ದುಥಳಥಳ ಥಳಥಳ ಹೊಳೆಯುತನಾನೇ ಆರತಿ ಬೆಳಗಿದೆನೆ 3 ಎತ್ತೆತ್ತ ನೋಡೆ ಪ್ರಭೆ ತಾಮೊತ್ತ ಮೊತ್ತವಿದೆ ಕೋಚಿತ್ತದಿಂದಲಿ ಚಿಜ್ಯೋತಿಯ ಪ್ರಭೆನಿತ್ಯದಿ ಬೆಳಗಿದೆನೆ 4 ಅನಂತಾನಂತವ ಮುಚ್ಚಿಹುದುಅನಂತಾನಂತವನುಅನಂತ ಚಿದಾನಂದ ಗುರು ತಾನೆ ಎಂದಾರತಿ ಬೆಳಗಿದನೆ 5
--------------
ಚಿದಾನಂದ ಅವಧೂತರು
ಸರಸ್ವತಿ ಸ್ತುತಿ ಅಂಬ ಬ್ರಹ್ಮಾಣಿ ನಿನ್ನ ನಂಬಿದೆನು ವಾಣಿ ವದ- ನಾಂಬುಜದಿನೀನಿಂಬುಗೊಂಡು ಪರಾಂಬರಿಸು ಜನನೀ ಪ. ಶೋಕಭಯದೂರೆ ಭಕ್ತಾನೀಕಮಂದಾರೆ ಜಗ- ದೇಕನಾಥೆ ಪಿನಾಕಿಮುಖ್ಯ ದಿವೌಕಸಾಧರೆ 1 ಶಾರದೆ ವರದೆ ಶ್ರುತಿಸಾರೆ ಸುಗುಣನಿಧೇ ಮಮ- ಕಾರ ಮೋಹವಿಕಾರಭಿದೆ ಜಂಭಾರಿವಿನುತಪದೆ 2 ಮಂಗಲಪ್ರದೆ ಸಾರಂಗನೇತ್ರೆ ಬುಧೆ ಕನ- ಕಾಂಗಿ ಸದಯಾಪಾಂಗಿ ಹಂಸತುರಂಗಿ ಸರ್ವವಿದೆ 3 ಪುಸ್ತಕಪಾಣಿ ನಮಸ್ತೇ ಕಲ್ಯಾಣಿ ಪರ- ವಸ್ತುವಿನ ಗುಣವಿಸ್ತರೈಕಪ್ರಶಸ್ತಫಣಿವೇಣಿ 4 ಪ್ರೀಯೆ ಶ್ರೀ ಲಕ್ಷ್ಮೀನಾರಾಯಣೀಪ್ರೇಮಿ ನಿಧಿ- ಜಾಯೆ ಚತುರೋಪಾಯೆ ಪಾವನಕಾಯೆ ನಿಷ್ಕಾಮಿ 5
--------------
ತುಪಾಕಿ ವೆಂಕಟರಮಣಾಚಾರ್ಯ
ಸರಸ್ವತಿ ಸ್ತುತಿ ಅಂಬ ಬ್ರಹ್ಮಾಣಿ ನಿನ್ನ ನಂಬಿದೆನು ವಾಣಿ ವದ- ನಾಂಬುಜದಿನೀನಿಂಬುಗೊಂಡು ಪರಾಂಬರಿಸು ಜನನೀ ಪ. ಶೋಕಭಯದೂರೆ ಭಕ್ತಾನೀಕಮಂದಾರೆ ಜಗ- ದೇಕನಾಥೆ ಪಿನಾಕಿಮುಖ್ಯ ದಿವೌಕಸಾಧರೆ 1 ಶಾರದೆ ವರದೆ ಶ್ರುತಿಸಾರೆ ಸುಗುಣನಿಧೇ ಮಮ- ಕಾರ ಮೋಹವಿಕಾರಭಿದೆ ಜಂಭಾರಿವಿನುತಪದೆ 2 ಮಂಗಲಪ್ರದೆ ಸಾರಂಗನೇತ್ರೆ ಬುಧೆ ಕನ - ಕಾಂಗಿ ಸದಯಾಪಾಂಗಿ ಹಂಸತುರಂಗಿ ಸರ್ವವಿದೆ 3 ಪುಸ್ತಕಪಾಣಿ ನಮಸ್ತೇ ಕಲ್ಯಾಣಿ ಪರ- ವಸ್ತುವಿನ ಗುಣವಿಸ್ತರೈಕಪ್ರಶಸ್ತಫಣಿವೇಣಿ 4 ಪ್ರೀಯೆ ಶ್ರೀ ಲಕ್ಷ್ಮೀನಾರಾಯಣೀಪ್ರೇಮಿ ನಿಧಿ- ಜಾಯೆ ಚತುರೋಪಾಯೆ ಪಾವನಕಾಯೆ ನಿಷ್ಕಾಮಿ5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸಾರ್ಥಕಾಗುವುದು ರವಿಮಾರ್ಗ ಅ ನರ್ಥ ಊಹಿಸುವುದು ಶಶಿಮಾರ್ಗ ಪ ತೀರ್ಥಪಾದನಾಧೀನವಿದೆನ್ನದೆ ಕರ್ತನಾವೆನುತ ಕೆಲರು ಕೆಡುತಿಹರು ಅ.ಪ ದೇವರುಪೂಜೆಯ ಮಾಡುವರ ಸ- ದ್ಭಾವ ಭಕುತಿಯಿಂದ ಪೂಜೆಪುದು ನೋವಿದು ಪೂಜೆಗೆ ಕೂಲಿ ಎಂದು ದುರ್ ಭಾವದಿಂದ ದುಷ್ಟರು ತಾವ್ ಕೆಡುವರು 1 ಮೇಲಾಸಕ್ತಿಯು ಸಜ್ಜನಕೆ ಶ್ರೀ- ಲೋಲನುಭಯರೊಳಗೆ ನಿಂತು ತ- ತ್ಕಾಲ ಪ್ರೇರಿಸಿ ಎರಡುಗತಿ ಕೊಡಿಸುವ 2 ಬದಲಿಗೆ ಬದಲೇ ಶಶಿಮಾರ್ಗ ಸ- ಮ್ಮುದ ನಿಷ್ಕಾಮವು ರವಿಮಾರ್ಗ ಪದುಮೆಯರಸ ಗುರುರಾಮವಿಠಲ ದ್ವಿ ವಿಧರಿಗೆ ಮುಕ್ತಿಯು ಸಂಸಾರ ಕೊಡುವ 3
--------------
ಗುರುರಾಮವಿಠಲ
ಸಾವಧಾನವಾಗಿ ನೋಡೋ ಸ್ವಾಮಿ ಸದ್ಗುರು ಶ್ರೀಪಾದ ಬೋಧ ಧ್ರುವ ತಿರುಗಿ ನೋಡೋ ನಿನ್ನ ನೀನು ಅರಿತು ಸ್ವಾನುಭವದಿಂದ ಕರಗಿ ಮನ ನೋಡಿ ನಿಜದೋರುತದೆ ಬ್ರಹ್ಮಾನಂದ ಸೆರಗವಿಡಿದು ಸೇರು ಬ್ಯಾಗೆ ಗುರುಕರುಣ ಕೃಪೆಯಿಂದ ಪರಮ ಸುಪಥವಿದೆ ವರಮುನಿಗಳಾನಂದ 1 ಹಚ್ಚಿ ನಿಜಧ್ಯಾಸವಂದು ಕಚ್ಚಿಕೊಂಡಿರೋ ಸುಹಾಸ ಮುಚ್ಚಿಕೊಂಡು ಮುಕ್ತಿ ಮಾರ್ಗ ನೆಚ್ಚಿರೋ ನಿಜಪ್ರಕಾಶ ಹುಚ್ಚುಗೊಂಡು ಹರಿಯ ರೂಪ ಅಚ್ಚರಿಸೋ ನಿರಾಶ ಎಚ್ಚತ್ತು ನಿನ್ನೊಳಗೆ ಬೆರೆಯೋ ಘನಸಮರಸ 2 ಸಾವಧಾನವೆಂದು ಶ್ರುತಿ ಸಾರುತದೆ ತಾ ಪೂರ್ಣ ಸುವಿದ್ಯ ಸುಖವಿದು ಸಾಧಿಸು ಅನುದಿನ ಪಾವನ್ನಗೈಸುದಿದೆ ಮಹಿಪತಿ ಜೀವಪ್ರಾಣ ಭಾವ ಬಲಿದು ನೋಡಲಿಕೆ ದೋರುತದೊ ನಿಧಾನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಿರಿಯು ಬರುವ ಸೊಬಗ ನೋಡಿರೆ ಭರದಿ ಬನ್ನಿರೆ ಶಿರವಬಾಗಿ ಚರಣಕೆರಗಿ ವರವಬೇಡಿರೆ ಪ. ಕಾಲೊಳಂದಿಗೆ ಗೆಜ್ಜೆ ಪಿಲ್ಲಿ ಘಲಿರುಘಲಿರೆನೆ ಬಾಲೆಯರ ಬಳಿಗೆ ಬರುವಳೊಲಿದಳೆಂಬೆನೇ 1 ಮಾತೆಗೆನಿತೋ ಪ್ರೀತಿಯೆಮ್ಮೊಳಗೈತಂದಳೀದಿನಂ ಪೂತುದರರೆ ಪೂರ್ವಪುಣ್ಯ ತರವಿದೆಂಬೆನಾಂ 2 ಪರಮಪುರುಷ ಶೇಷಶೈಲವರದನರಸಿಯಿಂ- ದರರೆ ಒಲಿದಳೆಮಗೆ ಧರೆಯೊಳರಿದುದಿನ್ನದೇನ್ 3
--------------
ನಂಜನಗೂಡು ತಿರುಮಲಾಂಬಾ
ಸುಳ್ಳು ಸುಳ್ಳು ಸುಳ್ಳು ಪೊಳ್ಳು ಜಗ ತಿಳಿಯಲೆ ಮಳ್ಳು ಮರುಳು ಪ ಸುಳ್ಳು ಬಂಗಾಲಿ ಕಂಡು ಮಳ್ಳಾಗ ಬೇಡೆಲೆ ಲೊಳ್ಳಟ್ಟಿಯಿದೆಲ್ಲ ಅ.ಪ ಕಾಜಿನ ಬುರುಡೆಯೊಳ್ ತೇಜಿಪದೀಪಕ್ಕೆ ಸೋಜಿಗಗಂಡು ಮತಿಮಾಜುವುದರಲವ ಮೋಜಿನ ಆಟಕ್ಕೆ 1 ನಾಶವಾಗುವುದೊಂದೇ ತಾಸು ತೋರೆಲ್ಲನು ಈಷಣ ಸಂಸಾರದಾಸೆಗೆ ಸಿಗದಿರು ಮೋಸವಿದೆಲ್ಲವು 2 ಮೋಹದಾಕಾರಕ್ಕೆ ಮೋಹಿಸಿ ಕೆಡದೆ ನೀ ಮೋಹಿಸಿ ಸ್ಥಿರಸುಖದೇಹವ ನೀಡೆಲೊ ಮಹ ಶ್ರೀರಾಮನೆ 3
--------------
ರಾಮದಾಸರು
ಸೋಹಮೆಂದು ಸುಖಿಸು ವಿಗತ ಮೋಹದಿಂದ ಸಂತತಂದೇಹ ದೇಹದೊಳಗೆ ತೋರ್ಪನೀ ಹಿತಾತ್ಮನೀತ ಪರಮ ಪಘನದ ರತುನಮಂಟಪವನು ಶುನಕವೇರಿ ತನ್ನ ನೆಳಲಕನಲಿ ನೋಡಿ ಗಳಹಿ ತಾನಿದೆಂಬುದರಿಯದೆಮನದೊಳನ್ನವೆಂದು ಭ್ರಮಿಸಿ ಮತ್ತೆ ಕಡಿಯಲದರೊಳೊಡದು*ನೆನೆವ ತನ್ನ ರಕುತವನ್ನು ಸವಿವ ರೀತಿಯಲಿವಿನುತ ಜೀವ ತನ್ನ ಛಾಯೆಯನು ಸಮಸ್ತರೊಳಗೆ ನೋಡಿನೆನೆದಿದನ್ಯವೆನುತ ಭ್ರಾಂತನಾಗಿ ಮಾಯೆುಂದನುಭವಿಸುವೆನಿದನಿದೊಲ್ಲೆನೆನುತ ಭೇದ ಬುದ್ಧಿುಂದಮನುಮಥಾಗ್ನಿುಂದ ಬೆಂದು ಮನದಲಿದ್ದ ಕಾರಣಂ 1ನರರು ಗಜವ ಪಿಡಿಯೆ ಕಪ್ಪ ಕೊರವುತದರ ನಡುವೆ ತಿಟ್ಟನಿರಿಸಿ ಕಣ್ಣಿಯಲ್ಲಿ ಕಟ್ಟಿಯದರ ಸುತ್ತಲೂನೆರಹಿ ಕಾಷ್ಠ ಮೃತ್ತುಗಳನು ನಿಜದಪ್ಪಿರಮಾಡೆ ಭ್ರಮಿಸಿಕರಿಣಿಗಾಗಿ ಬಂದು ಗಜವು ಮರೆದು ಬಿದ್ದ ರೀತಿುಂದುರೆ ವಿರಿಂಚಿ ಕೂಪ ಸಾಮ್ಯವಾದ ನರಶರೀರಮಂಮರೆಸಲದರ ಮೇಲೆ ಚರ್ಮವೆನಿಪ ಮಾಯೆುಂದ ನರರುಮರೆತು ತಾವಿದೆನ್ನುತದರಲಿದ್ದ ಕಾರಣಂ 2ಮರೆದು ತನ್ನ ತಾಣವನ್ನು ಮೆರೆದುಲಂಘಿಸುತಲಿ ಭೇಕವಿರಲು ಹೊಂಚಿ ಪಿಡಿದು ಪಾವು ಪಿರಿದು ದೇಹಮಂನೆರೆದು ನುಂಗಲಾರದಿರುತಲಿರಲು ಭೇಕ ತನ್ನ ಹಸಿವಿಗಿರದೆ ಬಾಯ ತೆಗೆದು ನೊಣನನರಸಿ ಪಿಡಿವ ರೀತಿುಂನರರು ತಮ್ಮ ಕಾಲಸರ್ಪ ಉರುಬಲದನು ಮರೆತು ಭೋಗಪರತೆುಂದ ಕಾಮರೋಷ ವಿರಸರಾಗುತಿರಲು ನೀನರಿದನಿತ್ಯವೆಲ್ಲವೆಂದು ಮೆರೆದು ಗೋಪಾಲಾರ್ಯ ಪದವನೆರೆದು* ಭಕತಿುಂದ ನೋಡಿ ಪಾಡಿ ಹರುಷದಿಂದ ನೀ 3
--------------
ಗೋಪಾಲಾರ್ಯರು
ಸ್ಮರಿಸೊ ಹರಿನಾಮ ಏ ಮನುಜಾ ಸ್ಮರಿಸೋ ಹರಿನಾಮ ನಿರವಧಿ ಸುಖಧಾಮ ಪರಮ ಪುರುಷಗಿದು ಪರಿಪೂರ್ಣ ಪ್ರೇಮ ಪ. ತರಳ ಪ್ರಹ್ಲಾದನ ಪೊರದು ಪಾಂಚಾಲಿಗೆ ತ್ವರಿತದೊಳಕ್ಷಯವಿತ್ತು ಸರಸಿಯೊಳಗೆ ಕರಿರಾಜನ ಸಲಹಿದ ನರ ಕಂಠೀರವ ಕರುಣಿಸುವನು ಬೇಗ 1 ಹಲವು ಜನ್ಮಗಳಲ್ಲಿ ಗಳಿಸಿದ ದುಷ್ಕøತ ಗಳನೆಲ್ಲ ನಿರ್ಮೂಲಗೊಳಿಸುವುದು ಜಲಜ ಸಂಭವ ಮಾಳ್ಪ ಕೆಲಸದಿ ಸಿಲುಕದೇ ನೆಲೆಗೊಂಡು ಸೌಖ್ಯವ ಸಲಿಸಬೇಕಾದರೆ 2 ಕಲಿಕೃತ ಕಲ್ಮಷ ಬಲೆಯಿಂದ ಮೋಚನ- ಗೊಳಿಸಲು ಹರಿನಾಮವಲ್ಲದಿನ್ನು ಚಲಿತ ಚಿತ್ತದ ಕರ್ಮಬಲದಿಂದಲಾಹದೆ ನಳಿನನಾಭನೇ ನೀ ಬೆಂಬಲನಾಗು ತನಗೆಂದು 3 ಉದಯಾರಂಭಿಸಿ ಮತ್ತೊಂದು ದಯ ಪರ್ಯಂತ ವಿಧಿವಿಹಿತಗಳೆಲ್ಲ ಸದರವೇನೊ ಪದುಮನಾಭನ ನಾಮ ಒದಗಿದರದು ಪೂರ್ಣ- ವದರಿಂದ ಸರ್ವರ ಹೃದಯ ನೀ ಮರೆಯದೆ 4 ಸಂಚಿತಾಗಾಮಿಗಳಂಚುವಂ ದಿತಿಜರ ಸಂಚಯಕನುದಿನ ಸ್ಮರಿಸುವರ ಕಿಂತಿತಾರಬ್ದ ಪ್ರಪಂಚವ ತ್ವರಿತದಿ ಮಿಂಚಿನಂದದಿ ತೋರಿ ಪರಿಹಾರಗೊಳಿಪರೇ 5 ಕರುಣಾಭಿಮಾನಿಗಳರಿತು ಮಾಡಿಸುತಿಹ ನಿರತ ಕೃತ್ಯಗಳೊಂದು ಮೀರದಲೆ ಹರಿಯಾಜ್ಞೆ ಇದು ಯೆಂದು ಚರಿಸುತಲನುದಿನ ಪರಮೋತ್ತಮ ಕಾರ್ಯಧುರವಿದೆ ತನಗೆಂದು 6 ನಾಗ ಗಿರೀಂದ್ರನ ನೆನೆದರೆ ಇಹಪರ ಭೋಗ ಸಾಮ್ರಾಜ್ಯವು ಸ್ಥಿರವಾಹುದು ವಾಗೀಶನ ಪರಮಾಗಮ ಸಿದ್ಧಾಂತ- ವಾಗಿಹದಿದೆಯೆಂದು ನೀ ಗುರುತವನಿಟ್ಟು 7
--------------
ತುಪಾಕಿ ವೆಂಕಟರಮಣಾಚಾರ್ಯ
ಸ್ವಾಮಿ ನೀನೇ ತಂದೆ ನೀನೇ ಯೆನ್ನಯ ಬಂಧು ಪ್ರೇಮದಿಂದಲಿ ಯೆನ್ನ ಸಲಹಯ್ಯ ಬಂದೇ ಪ ಐದು ಹುಲಿಗಳು ಬಂದು ಗಾರುಮಾಡುತಲೆನ್ನ ಕೈದಿನಲ್ಲಿಟ್ಟಿಹವು ಬಿಡಿಸಯ್ಯ ಹರಿಯೇ ಕೈದಿನಲ್ಲಿಟ್ಟೆನ್ನ ಕೆಲಸಕ್ಕೆ ಎಳತಂದು ಬÁಧೆಯ ಕೊಡುತಿಹವು ಬಿಡಿಸಯ್ಯ ಹರಿಯೇ 1 ಭವವೆಂಬ ಮೃಗರಾಜ ಬಗೆಯುತ್ತ ದೇಹದ ಜವದಿಂದ ತಿನ್ನುವಾ ಬಿಡಿಸಯ್ಯ ಹರಿಯೇ ಅವನಿಯೊಳು ಹುಟ್ಟು ಸಾವೆಂಬ ಗಜನಕ್ರಗಳು ತಿವಿದೆನ್ನ ಹೆಳೆಯುದರು ಬಿಡಿಸಯ್ಯ ಹರಿಯೇ 2 ಆರು ವೈರಿಗಳೆÀನ್ನ ಕಾಯವನು ಪಿಡಿದೊಯ್ದು ಯೆರಿಸೀ ಸುಡುತಿಹರು ಬಿಡಿಸಯ್ಯ ಹರಿಯೇ ಮಾರಿ ವಶಮಾಡುವದು ಬಿಡಿಸಯ್ಯ ಹರಿಯೇ 3 ಅನ್ಯರನು ಕಾಣೆ ನಾದೇವ ನಿನ್ನುಳಿದೀಗ ನೀನೆನ್ನ ಅಪರಾಧ ಕ್ಷಮಿಸೋ ಮರೆಹÉೂಕ್ಕೇ ಗಮನ ಶ್ರೀ ಚನ್ನಕೇಶವನೆ ಸನ್ನುತದಾಸನನು ಬಾಲನೆಂತೆಣಿಸೋ 4
--------------
ಕರ್ಕಿ ಕೇಶವದಾಸ