ಒಟ್ಟು 522 ಕಡೆಗಳಲ್ಲಿ , 86 ದಾಸರು , 453 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕತ್ತಲೆಗಂಜುವುದೇನುಮೈದುನ ನಿನ್ನ ಬತ್ತಲೆ ಮಾಡಿದನ ಚಿತ್ತ ಸ್ವಸ್ಥ್ಯವಾದ ಚಪಲಾಕ್ಷಿ ನೀ ಇಂಥಕತ್ತಲೆಗಂಜುವುದೇನ ಪ. ಪುನುಗಿನ ಪರಿಮಳ ಬಿನುಗು ಬೆಕ್ಕಿಗೆ ಉಂಟೆನಿನ್ನ ಮನದಿ ಪಾಂಡವರು ಸರಿಯೆಂದು ದ್ರೌಪತಿನಿನ್ನ ಮನದಿ ಪಾಂಡವರು ಸರಿಯೆಂದು ಕೈ ಹಿಡಿದಿಜನರೆಲ್ಲ ನಗರೆ ಜಗದೊಳು ದ್ರೌಪತಿ1 ಗಿಳಿಯಂಥ ಕಳೆಯ ಹೊಳೆಯ ಬಲ್ಲುದೆ ಗುಬ್ಬಿತಿಳಿದು ನಿನ್ನ ಗರವು ಬಿಡು ಕಂಡ್ಯಾ ದ್ರೌಪತಿತಿಳಿದು ನಿನ್ನ ಗರವು ಬಿಡು ಕಂಡ್ಯಾ ಐವರೂ ಹಳಿದುಕೈ ಹೊಯಿದು ನಗರೇನ ದ್ರೌಪತಿ2 ಆತುರವಾಗಿದ್ದ ಕೀಚಕನಿಗೆಮಾತು ಕೊಟ್ಟವನ ಮಡುಹಿದಿಮಾತು ಕೊಟ್ಟವನ ಮಡುಹಿದ ನಿನ್ನಂಥಫಾತಕಳುಂಟೆ ಜಗದೊಳು ದ್ರೌಪತಿ3 ಮಾಯಗಾರುತಿ ಪತಿಯ ದಾಯದಾಟಕೆ ಹಚ್ಚಿಕಾಯದ ಕಾಂತಿ ಅಡಗಿಸಿಕಾಯದ ಕಾಂತಿ ಅಡಗಿಸಿ ಮೆರೆಸಿದಿಯಾವ ಕಚ್ಚೆತನ ಪರಿಯಲೆ ದ್ರೌಪತಿ4 ಸೃಷ್ಟಿಕರ್ತನೆಂಬೊ ಧಿಟ್ಟ ಗಂಡನ ಒಯ್ದುಅಟ್ಟು ಹಾಕುವನ ಪರಿಯಲಿಅಟ್ಟು ಹಾಕುವನ ಪರಿಯಲಿ ಕೈಯೊಳುಹುಟ್ಟು ಕೊಟ್ಟವನ ಮೆರೆಸೀದಿ ದ್ರೌಪತಿ 5 ಕಳೆಯ ಸುರಿಯುವ ಮುದ್ದು ಎಳೆಯ ಚನ್ನಿಗಪತಿಗೆಬಳೆಯನೆ ಇಡಿಸಿ ಜನರೊಳುಬಳೆಯನೆ ಇಡಿಸಿ ಜನರೊಳು ರೂಪವ ತಿಳಿಯದಂತವನ ತಿರುಗಿಸಿ ದ್ರೌಪತಿ 6 ರಾಜಪುತ್ರನ ಒಯ್ದುತೇಜಿ ಕೆಲಸಕೆ ಇಟ್ಟಿಸೋಜಿಗವಲ್ಲ ಜನರೊಳು ಸೋಜಿಗವಲ್ಲ ಜನರೊಳು ರೂಪವಮಾಂಜುಕೊಂಡವನ ಮೆರೆಸಿದಿ ದ್ರೌಪತಿ7 ಘನ ಗಂಭೀರನ ಒಯ್ದು ದನದ ಕೆಲಸಕೆ ಇಟ್ಟಿಜನರೆಲ್ಲ ನಗರೆ ಜಗದೊಳುಜನರೆಲ್ಲ ನಗರೆ ಜಗದೊಳು ದ್ರೌಪತಿಮನಬುದ್ಧಿ ಎಂದು ಬರಬೇಕು8 ಅತಿ ಅಂತಃಕರಣಿ ಹಿತದ ಅಗ್ರಜನ ಒಯ್ದುರಥಿಕನ ಮಾಡಿ ಮೆರೆಸಿದಿ ದ್ರೌಪತಿರಥಿಕನ ಮಾಡಿ ಮೆರೆಸಿದಿ ರಾಮೇಶನ ಪತಿಗಳಭಿಮಾನ ಇರಲುಂಟೆ ದ್ರೌಪತಿ9
--------------
ಗಲಗಲಿಅವ್ವನವರು
ಕದವ ತೆಗೆಯೆ ಸುಂದರಿವಯ್ಯಾರಿ ಮುತ್ತಿನ ಪ ಕಡಲ ಶಯನನೆ ಮಡದಿ ಹರುಷದಿ ಸಡಗರದಿ ಮುಂದಡಿ ಇಡುತ ನಿನ್ನ ಒಡೆಯ ಬಂದಿಹನೆಂದು ಹರುಷದಿ ಬೆಡಗು ಮಾಡದೆ ಬಿಡಿಯ ಮುತ್ತಿನ 1 ಯಾರು ನಿನ್ನಯ ಪೆಸರ ಏನೆಂದು ತಿಳಿಯದೆ ಹೇಗೆ ತೆಗೆಯಲಿ ಕದವಾ ಘೋರ ರಾತ್ರಿಯ ವೇಳೆಯಲಿ ಬಂ- ದೀಗ ಬಾಗಿಲ ಬಡಿಯ ನಿಂದಿರೆ ನಾರಿಯರು ಏನೆಂದು ಕೇಳ್ಪರು ದ್ವಾರ ಬಿಡುಬಿಡುತಲಿ ಸಾಗು ಮುಂದಕೆ2 ತೆಗೆಯಲೊಲ್ಲೆನು ಕದವ ಸಮರಾತ್ರಿ ವೇಳದಿ ರುಕ್ಮನ ಅನುಜೆ ಕೇಳೆ ಪೃಥ್ವಿಯೊಳು ಎನ್ನನು ಚಕ್ರಿ ಎನ್ನುತ ಪೇಳ್ವರೆ ಅರ್ಥಿವಚನಗಳನ್ನು ಕೇಳುತ ಸತ್ವರದಿ ನೀ ಬಂದು ಮುಂದಕೆ ಮುತ್ತಿನ ಕದತೆಗೆದು ಬೇಗನೆ ರತ್ನ ಪೀಠದಿ ಕುಳ್ಳಿರಿಸೆ ಹೊಸ ಮುತ್ತಿನರಗಿಣಿ ಸತ್ಯವಾಣಿಯೆ3 ಕೇಳಿ ಹರ್ಷಿತನಾದೆನು ನಿನ್ನಯ ಮಾತ ಕೇಳಿ ನಗುವರು ಜನರು ಹೇಳಿ ಕೇಳುವರಿಲ್ಲ ನಿನ್ನ ಮನಸಾರ ಮಾತುಗಳಾಡಲೇತಕೆ ಕು- ಲಾಲ ಭವನವಿದಲ್ಲ ಸುಮ್ಮನೆ ಹೇಳ ಕೇಳದೆ ಹೊರಡು ಮುಂದಕೆ 4 ಹೀಗೆ ನುಡಿಯುವದೇತಕೆ ಈಗೆನ್ನ ಮಾತಿಗೆ ಬೇಗದಿ ತೆಗೆ ಕದವ ನಾಗವೇಣಿಯೆ ನಗುತ ಪೇಳುವೆ ಬೇಗದಲಿ ಇನ್ನೊಂದು ನಾಮವ ಈಗ ಧರಣಿಧರನು ಬಂದಿಹೆ ಸಾಗರನ ಸುತೆ ಸರ್ಪವೇಣಿಯೆ 5 ಧರಣೀಧರ ನೀನಾದರೆ ಈ ಧರೆಯನೆಲ್ಲವ ಸಿರದ ಮೇಲಿರಿಸುವೆಯ ಸರ್ವ ಜನರಿಗೆ ಭಯವ ಪಡಿಸುವ ಉರಗರಾಜ ನೀನೆಂದು ತಿಳಿದೆನು ಇರುತ ಸರ್ಪಗಳೊಳಗೆ ನೀ ಬಲು ಹರುಷದಿಂದಲಿ ಸಾಗುಮುಂದಕೆ6 ಹರಿಣಾಕ್ಷಿ ಕೇಳೆ ನೀನು ಎನ್ನನು ಜನರು ಹರಿಯೆಂದು ಕರಿಯುವರು ಕರೆ ಕರೆಯ ಮಾಡದಲೆ ಬೇಗನೆ ವರ ಕನಕ ಕದ ತೆಗೆದು ಸುಮ್ಮನೆ ಇರಿಸು ಸುಖ ಸಾಮ್ರಾಜ್ಯ ಪೀಠವ ಹರುಷದಿಂ ಕುಳಿತೆಲ್ಲ ಪೇಳುವೆ 7 ಕೋತಿ ನೀನಹುದಾದರೆ ಮಾತುಗಳ್ಯಾಕೆ ಜಾತಿ ಕಪಿಗಳ ಕೂಡುತ ಪ್ರೀತಿಯಿಂದಲಿ ಮನಕೆ ಬಂದೆಡೆ ನೀತೆರಳುತಲಿ ಪೋಗು ಮುಂದಕೆ ಕೋತಿಗಳ ಗುಂಪಿದಲ್ಲ ತಿಳಿಮಹ- ರೂಪವತಿಯರಿರುವ ಸ್ಥಳವಿದು 8 ಪ್ರೀತಿಸತಿಯೆ ನೀ ಕೇಳೆ ನಿನ್ನೊಳು ಬಹು ಪ್ರೀತಿಯಿಂದಲಿ ಬಂದೆನು ಶ್ರೀಶನ ನುಡಿಕೇಳಿ ರುಕ್ಮಿಣಿ ಆತುರದಿ ಬಾಗಿಲನೆ ತೆಗೆಯುತ ನಾಥ ಕಮಲನಾಭ ವಿಠ್ಠಲನಿಗೆ ತಾನಮಿಸಿ ವಂದಿಸುತ ಭಕುತಿಯಲಿ ಬಾಗಿಲು ತೆಗೆದಳಾಗ ಭಕುತಿಯಲಿ ಶ್ರೀಶಗೆ ಬಾಗಿಲು ತೆಗೆದಳಾಗ9
--------------
ನಿಡಗುರುಕಿ ಜೀವೂಬಾಯಿ
ಕದವನಿಕ್ಕಿದ ಕಾರಣೇನೆ ಮುದದಿ ಕೇಳೆ ಮೋಹನಾಂಗಿ ಸದನಕ್ಕಾಗಿ ಬಂದೆ ನಾನು ಸರಸವ್ಯಾತಕೆ ಸುಂದರಾಗಿ ಪ ಇಂದು ನಾನು ಬಂದೆ ದ್ರೌಪದಿ ಬಂದು ಬಾಗಿಲನ್ಹಾಕುವೋದು ಚೆಂದವೇನೆ ಚಂದ್ರಮುಖಿಯೆ ಬಂದು ಬಾಗಿಲು ತೆಗೆಯೆ ನೀನು 1 ಅಂಧಕಾರ ರಾತ್ರಿಯಲಿ ಬಂದವರ್ಯಾರೆಂದು ಅರಿಯೆ ನಿಂದು ಗುರುತೇನೆಂದು ಪೇಳಲು ಬಂದು ಬಾಗಿಲು ತೆಗೆವೆ ನಾನು 2 ಕಂಡರಿಯೆ ಎನ್ನ ಪರಾಕ್ರಮ ಖಾಂಡವವನವ ದಹಿಸಿದೆನೆ ಗಾಂಡೀವಾರ್ಜುನರಾಯ ನಾನು 3 ಗಾಂಡೀವಾರ್ಜುನರಾಯನಾದರೆ ದುಂಡು ಬಳೆ ಕಂಕಣಗಳಿಟ್ಟು ಗೊಂಡ್ಯ ರಾಗಟೆ ಹೆರಳಲ್ಹಾಕಿ ನೀ ಷÀಂಡರೂಪವ ಧರಿಸ್ಹೋಗೊ 4 ಕ್ಷೀರಸಾಗರದಲ್ಲೆ ತಾ ಮಂ- ದರ ಪೊತ್ತಮೃತವನೆ ತಂದ ಧೀರ ಕೂರ್ಮಗೆ ಮೈದುನಾದಂಥ ಶೂರ ಫಲ್ಗುಣರಾಯ ನಾನೆ 5 ಫಲ್ಗುಣರಾಯನಾದರೇನೊ ಸದ್ಗುಣ ಸಂಪನ್ನ ಬಿರುದು ಭದ್ರದೇವಿಯ ಕದ್ದು ತರುವಾಗ ಬುದ್ಧಿ ದಾರಲ್ಲಿಟ್ಟೆದ್ದಿರ್ಹೇಳೊ 6 ಪರಮೇಶ್ವರನ ಒಲಿಸಿಕೊಂಡು ಪಾಶುಪತಾಸ್ತ್ರ ಪಡೆದೆ ನಾನು ಪರಮ ಆಪ್ತ ವರಾಹನ ಕರುಣಕ್ಕೆ ಪಾತ್ರನಾದಂಥ ಪಾರ್ಥರಾಯನೆ 7 ಪಾಶುಪತಾಸ್ತ್ರ ಪಡೆದರೇನು ದೇಶ- ದೇಶ್ಯಾತ್ರೆತೀರ್ಥ ಚರಿಸಿ ಆಸೆ ಬಿಡದೆ ಸನ್ಯಾಸಿಯಾದಂಥ ಮೋಸಗಾರನೆ ಮನೆಗೆ ಪೋಗು 8 ಕೋಟಿ ದೈತ್ಯರ ಕೊಂದೆ ಎನ್ನಸರಿ- ಸಾಟಿಯಾರೀ ಲೋಕದೊಳಗೆ ಆ- ರ್ಭಟದವತಾರ ನಾರಸಿಂಹನೆ ನೀಟಾದಭಕ್ತ ಕಿರೀಟಿಯಲ್ಲವೆ 9 ಕೋಟಿ ದೈತ್ಯರ ಕೊಂದು ಜೂಜಿ- ನಾಟ ಸೋತ್ವನ ತೋಟ ತಿರುಗಿ ಪಾಟುಬಟ್ಟು ವಿರಾಟನಲ್ಲೆ ನಾ(ನ?)ಟರಾಟಕೆ ನಿಂತಿರ್ಯಾಕೊ 10 ಮಾತಿಗೆ ಮಾತಾಡೋರೇನೆ ಅ- ಭೂತಳವ ಬೇಡಿದ್ವಾಮನಗೆ ದೂತ ನಾ ಶ್ವೇತೂವಾಹನನೆ 11 ಶ್ವೇತೂವಾಹನ ನಿಮ್ಮ ಸತಿಗೆ ನಾಥರಿದ್ದೂ ಅನಾಥಳಂತೆ ಅ- ಜ್ಞಾತದಲ್ಲಿ ಸುದೇಷ್ಣೆ ಸೇವೆಗೆ ದೂತಿಯಾದ ಪ್ರಖ್ಯಾತಿ ದಾರದೊ 12 ಹೆತ್ತತಾಯಿ ಶಿರವನಳಿದ ಕ್ಷತ್ರೇ- ರಂತಕ ಭಾರ್ಗವಗೆ ನಿತ್ಯದಲಿ ನಿಜಸೇವಕ ಭೀ- ಭತ್ಸುರಾಯ ನಾನಲ್ಲವೇನೆ 13 ಧೀರ ಭೀಭತ್ಸುರಾಯ ನಿನ್ನ ನಾರಿಯ ಸಭೆಗೆಳೆದು ತಂದು ಸೀರೆ ಸೆಳೆವಾಗ ಶೂರರಾದರೆ ದಾರದಾರಂತೆ ನೋಡಿರ್ಯಾಕೊ 14 ಕಾಮ ಮೋಹಗಳಿಂದ ನಿನ್ನಲ್ಲೆ ಪ್ರೇಮದಿ ನಾ ಬಂದೆನೀಗ ರಾಮರಾಜÉ್ಞಗೆ ನಿಜ ಸೇವಕ- ನಾದ ವಿಜಯರಾಯ ನಾನೆ 15 ವಿಜಯರಾಯ ನೀನ್ಹೌದೊ ತೇಜಿದಿ- ಗ್ವಿಜಯಕೆನುತದರ್ಹಿಂದೆ ಪೋಗಿ ಮಗನ ಕೈಯಿಂದ ವಧೆಯು ನೀತವೆ ಮೊದಲೆ ಪರಾಜಿತನಾದಿರ್ಯಾಕೊ 16 ಶ್ರೇಷ್ಠರೊಳು ಮಹಾಶ್ರೇಷ್ಠ ನಾನೆ ಅಸ್ತ್ರವಿದ್ಯದಲ್ಲಧಿಕನೆಂದು ಕೃಷ್ಣಮೂರುತಿ ಒಲಿಸಿಕೊಂಡಂಥ ಕೃಷ್ಣೆ ನಲ್ಲನೆ ಕೃಷ್ಣೆ ಕೇಳೆ 17 ಸಾರಥಿ ಆದ್ದರಿಂದ ಹಸ್ತಿನಾವತಿ ಪಟ್ಟಣಾಳ್ವುದು ಇಷ್ಟು ದಾರ ದಯದಿಂದ್ಹೇಳೊ 18 ಅಂಗನಾಮಣಿ ನಿನ್ನ ಅಂಗ- ಸಂಗ ಬಯಸಿ ನಾ ಬಂದೆನೀಗ ಅಂಗದ್ವಸ್ತ್ರವಬಿಟ್ಟ ಬೌದ್ಧಗೆ ಸಖನು ನಾ ಸವ್ಯಸಾಚಿ ಅಲ್ಲವೆ 19 ಭುಜ ಪರಾಕ್ರಮಿ ಸವ್ಯಸಾಚಿ ನಿನ್ನೆರಡು ಕೈದಡ್ಡಿನ್ಯಾತಕೇಳೊ ದ್ವಿಜರ ಸುತರ ತಂದುಕೊಡದೆ ಮೊದಲೆ ಮಾಡಿದ ಪ್ರತಿಜ್ಞವೇನೊ 20 ಅಂಜೋನಲ್ಲ ನಾನರಿಗಳಿಗೆ ಕಲಿ- ಭಂಜನ ಕಲ್ಕ್ಯಾವತಾರಗೆ ಕಂಜಚರಣಕ್ಕೆ ವಂದಿಸುವೆ ಧ- ನಂಜಯ ನಾನಲ್ಲವೇನೆ 21 ಸೈಯೊ ನೀ ಧನಂಜಯರೇಯ ಸುರಪತಿಗೆ ಪತ್ರವನೆ ಬರೆದು ಶರದ ಪಂಜರ ಕಟ್ಟಿ ನೀ ಕುಂ- ಜರವನಿಳಿಸಿದ ಕಾರಣೇನೊ 22 ನಿನ್ನ ಸರಿ ಮಾತಾಡುವೋರ ಧನ್ಯರ ನಾ ಕಾಣೆನೆಲ್ಲು ಳನ್ನು ಕೇಳಿದಿನ್ಯಾಕೆ ತಡೆವೆ 23 ದಶ ನಾಮಗಳ ಕೇಳಿ ದ್ರೌಪದಿ <ಈಔಓಖಿ ಜಿಚಿ
--------------
ಹರಪನಹಳ್ಳಿಭೀಮವ್ವ
ಕನಸು ಕಂಡೆನು ನಾನು ಸಂತೋಷದಿ| ಕನಸು ಕಂಡೆನು ನಾನು ಅರನಿಮಿಷದೊಳು ಹರಿಯ ಮನಸಿನಲಿ ಸ್ಮರಿಸಿ ಮಹಾರೂಪವನು ಕೂಡ ಪ ವೆಂಕಟರಮಣನ ಯಾತ್ರೆಗೆ ಹೋದ್ಹಾಗೆ ಶಂಕೆ ಇಲ್ಲದೆ ಪರಶಿಜನಕ ಕಂಡ್ಹಾಗೆ ಬಿಂಕದಿಂದಲಿ ದೇವಸ್ಥಾನ ಪವಳಿಯ ಸುತ್ತ ಅಂಕುರಾರ್ಪಣ ಧ್ವಜಸ್ತಂಭದಲಿ ನಿಂತ್ಹಾಗೆ 1 ಅಡಗಿ ಶಾಲೆಯ ಅನ್ನಪೂರ್ಣೆಯನ್ನು ಕಂಡ್ಹಾಗೆ ದೃಢದಿ ಶ್ರೀನಿವಾಸ ದೇವರ ನೋಡಿದ್ಹಾಗೆ ಕಡು ಹರುಷದಲಿ ತೊಟ್ಲ ತೀರ್ಥ ಸೇವಿಸದ್ಹಾಗೆ ಸಡಗರದ ಮಧ್ಯರಂಗದಲಿ ನಿಂತ್ಹಾಗೆ 2 ಶಿರzಲ್ಲಿ ಕಿರೀಟ ಲಲಾಟ ತಿಲಕ ವಿಟ್ಟ್ಹಾಗೆ ಕೊರಳೊಳ್ ಮುತ್ತೀನಹಾರ ಪದಕ ತೋರಿದ ಹಾಗೆ ಕರದಲ್ಲಿ ಶಂಖಚಕ್ರ ಧರಿಸಿ ಕೊಂಡಿರುವ ಹಾಗೆ ಉರದಲ್ಲಿ ಶಿರಿಲಕುಮಿ ವಾಸವಿದ್ಹಾಗೆ 3 ಹೊನ್ನ ಹೊಸ್ತಿಲ ದಾಟಿ ವಳಗ್ಹೋಗಿ ನಿಂತ್ಹಾಗೆ ಚಿನ್ಮಯನ ರೂಪವನು ಚಿಂತಿಸಿದ ಹಾಗೆ ಅನ್ನ ಪ್ರಸಾದಾತಿ ರಸದÉೂೀಶಿ ಕೊಟ್ಹಾಗೆ ಪನ್ನ ಗಾದ್ರಿ ವಾಸನ ಕಣ್ಣಿಂದ ನೋಡಿದ್ಹಾಗೆ 4 ನಡುವಿನಲಿ ಒಡ್ಯಾಣ ಪೀತಾಂಬರವನುಟ್ಹಾಗೆ ಯಡಬಲದಿ ಜಯು ವಿಜಯ ನಿಂತಿರೋಹಾಗೆ ಪೊಡವಿಯೊಳ್ 'ಹೆನ್ನೆವಿಠ್ಠಲ’ ವೆಂಕಟೇಶನ್ನ ಕಡು ಹರುಷದಲಿ ಕಂಡು ಕೈಮುಗಿದು ನಿಂತ್ಹಾಗೆ 5
--------------
ಹೆನ್ನೆರಂಗದಾಸರು
ಕನ್ಯಾರೂಪವ ತಾಳಿದ ಚನ್ನಿಗ ಕೃಷ್ಣರಾಯನಾ ಪ ದಾನವರ ಮರಳು ಮಾಡಿ ಮಾಣದೆ ಸುಧೆಯನೆರೆದು ಆ ನಿರ್ಜರರ ಪಾಲಿಸಿದ ಶ್ರೀ ನಾರಾಯಣಿ ವೇಷವಾ 1 ಆರಾರು ಸಾವಿರ ಸಕಲ ಶರೀರದ ಎಡಕೆ ಇಪ್ಪ ಸಾರಸುಂದರವಾಗಿದ್ದ ನಾರಿ ರೂಪಗಳು ಇದೊ 2 ಭೂತಳದೊಳಗೆ ಜನಕೆ ಮಾತೆಯಾಗಿ ಕಾವುತಿಪ್ಪ ಜಾತರಹಿತ ವಿಜಯವಿಠ್ಠಲ ಶ್ರೀ ತರಣಿಯಾಳಿದ ಪೆಣ್ಣಿನ 3
--------------
ವಿಜಯದಾಸ
ಕರುಣದಿ ಪೊರೆಯೆನ್ನ ಪ್ರಭುವೇ ಮೂಲ ಗುರುವೆ ಪ ಪರಮ ದಯಾನ್ವಿತ ಸುರಕಲ್ಪತರುವೆ ಅ.ಪ. ಅಂಗಜಪಿತನಾಜ್ಞೆ ಹಿಂಗಾದೆ ನೀಯಾಂತು ಅಂಗನೆ ಸೀತೆಯ ಅರಸುತ್ತ ಪೋದೆಯೊ ತುಂಗವಿಕ್ರಮ ನೀನು ಮಂಗಳಾಂಗಿಯ ಕಂಡು ಶೃಂಗಾರವನವನ್ನೆ ಭಂಗಮಾಡಿದೆಯೊ 1 ಕರಿಪುರದರಸನ ವರಪುತ್ರ ನೀನಾಗಿ ಕರಿರಾಜವರದಗೆ ಭಾವನಾಗಿ ಧರಣಿ ಭಾರವೆಲ್ಲ ಹರಿಸಿದೆ ನೀನು 2 ಯತಿಯ ರೂಪವ ತಾಳಿ ಕ್ಷಿತಿಯೊಳು ಚರಿಸುತ ದಿತಿಜರ ಬಾಯ್ಗಳ ಬಡಿಯುತಲಿ ಪತಿತ ಪಾವನ ಶ್ರೀ ರಂಗೇಶವಿಠಲನೆ ಪ್ರತಿಯಿಲ್ಲವೆಂತೆಂಬ ಮತಿಯಿತ್ತದೇವ 3
--------------
ರಂಗೇಶವಿಠಲದಾಸರು
ಕರುಣಿಸಮ್ಮಾ ತಾಯೆ ಕರುಣಿಸಮ್ಮಾ ಪ. ಕರುಣಿಸಮ್ಮಾ ಭರದಿ ವರಪ್ರಸಾದವ ತ್ವರದಿ ವರ ಶಂಕರನ ಜಾಯೆ ತ್ವರಿತದಿ ಕಾಯೆ ಅ.ಪ. ಇಷ್ಟ ಮೂರುತಿ ಶಿವನ ದಿಟ್ಟ ತೊಡೆಯಲಿ ಮೆರೆವ ದಿಟ್ಟ ರೂಪವ ತೋರೆ ದಿಟ್ಟ ಸುಂದರಿಯೆ ಪಾದ ಎನ್ನ ದಿಟ್ಟತನದಲಿ ಭಜಿಪ ಇಷ್ಟಕೊಡು ಮಾತೆ 1 ಭಜಿಪರ ಮನದಾತೆ ಸುಜನರಾಪ್ತೆಯೆ ನಿನ್ನ ಭಜಿಪ ಮನವನು ಇತ್ತು ಕಾಪಾಡು ತಾಯೆ ನಿನ್ನ ಸುಜನ ಸಂಗವನಿತ್ತು ದುರ್ಜನ ಸಂಗವ ಬಿಡಿಸಿ ಪಾದ ಭಜಿಪ ಭಾಗ್ಯವ ನೀಡೆ 2 ಭಾಗ್ಯದೇವತೆ ನೀನು ಸೌಭಾಗ್ಯ ಮಾಂಗಲ್ಯದಾ ಭಾಗ್ಯವನು ಕೊಟ್ಟು ಕಾಪಾಡು ತಾಯೆ ಕಾಯೆ ಯೋಗ ಮೂರುತಿ ಶ್ರೀ ಶ್ರೀನಿವಾಸ ಸಹೋದರಿಯೆ ಅನುರಾಗದಿಂ ಹರಿಪದವ ಭಜಿಪ ಭಾಗ್ಯವನಿತ್ತು 3
--------------
ಸರಸ್ವತಿ ಬಾಯಿ
ಕರೆದುತನ್ನಿರೊ ಕನ್ನಗಾರನ ಹರಿಯ ಗು[ಣ]ಗಳ ಕದ್ದ ಹಗಲುಗನ್ನಗಾರನ ಪ. ರೂಪವಿಲ್ಲ ಗುಣ [ವಿಲ್ಲಾತನೆ] ಪರಬ್ರಹ್ಮನೆಂಬ ಪಾಪಿಗನ್ನ ಕರೆದು ಮುಖಭಂಗಿತನ್ನ ಮಾಡಿರೊ 1 ಹರಿ ಇಲ್ಲ ಗುರುಇಲ್ಲ ಹರಿಹರರು ಒಂದು ಎಂಬೊ ಶಿರಕೆ ಪಿತ್ತ ಅಡರಿದಂ[ಥ]ಮರುಳು ಮಾತುಗಾರ[ನೆ] ವೇದಶಾಸ್ತ್ರ ಹುಸಿಯೆಂದು ಸಾಧುಜನರ ಕಾಡುತಿಹನು [ಕಾದಿ]ತಮಸಿನೊಳಗೆ ಬಿದ್ದು ಕಾಣ ಹಯವದನನ್ನ 3
--------------
ವಾದಿರಾಜ
ಕಲಿರಾಯ ಬಂದಿಹನು ಕಾಣಿಕೆಯ ಪಿಡಿದು ಚೆಲುವಿನಿಂದನುಸರಿಸಿ ಕುಲವನುದ್ಧರಿಸಿ ಪ ಮೂರು ಯುಗದೊಳು ತಾನು ಸೇರಿಕೊಂಡನು ವನವ ಚೋರರಾಯರ ಸಂಗ ಬೇಡವೆನುತ ವೀರನಾಗಿಯೆ ಬಂದ ನಾಲ್ಕನೆಯ ಯುಗದೊಳಗೆ ಸಾರಿ ಬನ್ನಿರೊ ನಮ್ಮ ದೊರೆಯ ಮನ್ನಿಸಲು 1 ಮದಮುಖರ ಕಾಣುತಲೆ ಮುದದಿಂದ ಮನ್ನಿಸುತ ಕದನಕರ್ಕಶರನ್ನು ಕಾಮಿಸುವನು ಒದಗಿದನ್ಯಾಯಗಳನೊಲಿಸಿಕೊಂಬನು ತಾನು ಬೆದರಿಕೆಯು ಬೇಡ ನೀವಿದಿರುಗೊಳ ಬನ್ನಿ 2 ಸತ್ಯವೆಂಬುದನೆಲ್ಲ ಹತ್ತಿಸಿದ ಬೆಟ್ಟವನು ಮಿಥ್ಯ ನಿರ್ಮಳಕೆಲ್ಲ ಕುತ್ತಿಗೆಗೆ ಬಂತು ಒತ್ತಿಯಾಳುವ ಧರ್ಮ ಸತ್ತು ಹೋದನು ಹಿಂದೆ ಮೃತ್ಯು ಭಯ ನಮಗಿಲ್ಲ ಹತ್ತಿರಕೆ ಬನ್ನಿ 3 ತಪ್ಪಿ ಹೋಯಿತು ಶಾಸ್ತ್ರ ತಪ್ಪಾಯ್ತು ಪೌರಾಣ ಮುಪ್ಪು ಬಂದುದು ವೇದ ಕಪ್ಪಾದನಗ್ನಿ ತುಪ್ಪನ್ನ ಬೇಡವಗೆ ಇಪ್ಪ ಭಯಗಳು ಹೋಯ್ತು ಒಪ್ಪಿ ಕಾಣಿಸಿಕೊಂಡು ಸುಖಿಯಪ್ಪ ಬನ್ನಿ 4 ಸ್ನಾನವೆಂಬುದು ಯೆಲ್ಲ ಮಾನಿನಿಯ ಅಡಿಗೆಯೊಳು ಮೌನ ಜಪಗಳನೆಲ್ಲ ಕೃಷಿಕೊಂಡನು ಹಾನಿಯಾದರು ಯಜ್ಞಹೀನರಾದರು ಪಿತೃಗ ಳೇನ ಮಾಡುವರಿವರು ಅನುಮಾನ ಬೇಡೆನುತ 5 ದಯಯೆನಿಪವನು ಹೋಗಿ ಕೊಯ್ಸಿಕೊಂಡನು ಕೊರಳ ಭಯವಿಲ್ಲ ಹಿರಿಯರೂ ವ್ಯಯವ ಸೇರಿದರು ನಯನೀತಿ ಹೇಳುತಿಹ ಗುರುವಿನೊಳು ಕಣ್ಣಿಲ ್ಲ ಜಯವಾಯ್ತು ದೇಶದೊಳು ಹೊಯ್ಸಿ ಡಂಗುರುವ 6 ಶಿವನು ದುರ್ಗವ ಬಲಿದ ಜವನು ದಂಡವನಿಟ್ಟ ಬವಣೆಬಡುವನು ಕಮಲಭವನು ತನ್ನೊಳಗೆ ಹವಣನರಿಯದೆ ವಿಷ್ಣು ತವಕಿಸುವ ಮನದೊಳಗೆ ಕವಲು ಮನ ಬೇಡಿರಲು ಬಹುದು ಇವನೊಳಗೆ 7 ಪತಿಯ ಮರೆತಳು ಸತಿಯು ಸುತ ಮತಿಯ ತಪ್ಪಿದನು ಯತಿ ಸತತ ಮನದೊಳಗೆ ಖತಿಗೊಂಬನು ಚತುರವರ್ಣಾಶ್ರಮವ ಜೊತೆಯಾಗಿ ನಡೆಸುತಿಹ ಮತಿಯುತನು ದೃಢವೆಂದು ಕಾಯವನುಸರಿಸಿ8 ತಾಯಿ ತಂದೆಯ ಕೊಂದು ಜೀವ ಹಾನಿಯ ಮಾಡಿ ಬಾಯ ಹೊಯ್ದರು ಕೇಳ ಬಡವರನ್ನು ಮಾಯವಾದಿಯ ಮಾತು ಕೂಡಿಸುವ ಜೀವವನು ರಾಯರಾಯರ ಮುಂದೆ ನಡೆಸುತ್ತಲಿಹರು 9 ಆಡಿಗಾರರ ತಂದು ನಾಡ ಊಳಿಗಕಿಡುವ ನೋಡಿದನ್ಯಾಯ ಮಾತುಗಳ ಹಿಡಿತರುವನು ಕೂಡಿಸುವ ಜೀವವನು ಎಳೆನೀರು ಸಕ್ಕರೆಯು ಬೇಡಿದಿಷ್ಟಾರ್ಥದೊಳು ನೋಡಿ ನಡೆಸುವನು 10 ಕೆಟ್ಟನೀತಿಯ ಒಳಗೆಯಿಟ್ಟುಕೊಂಡರೆ ನಿಮ್ಮ ಗಟ್ಟಿಬಡಿಸುವ ದೊರೆಯು ದೃಷ್ಟಿಯಲಿ ನೋಡ ಕಷ್ಟವಿಲ್ಲದೆ ಸುಖದಿ ಹೊಟ್ಟೆಯನು ಹೊರಕೊಂಡು ಸೃಷ್ಟಿಯೊಳು ವರಪತಿಯ ಮುಟ್ಟಿ ಸೇವಿಪುದು 11 ಕಾಲದರಸಿನ ನೋಡಿ ಮೂಲ ಪಡಕೊಂಬುವರು ಆಲಸ್ಯವನು ಬಿಟ್ಟು ಸೇವಿಸುವುದು ಶಾಲು ಸಕಲಾಭರಣ ತೋಲಾಗಿ ಬರುತಿಹುದು ಜಾಲರೂಪವದಾಗಿ ಮನಕೆ ತೋರುವುದು 12 ತಾಯಿ ತಂಗಿಯರನ್ನು ಮೋಹಿಸಲು ದೊರೆರಾಯ ಬಾಯಹೊಯಿಯೆಂದೆನುತ ನೋಯನುಡಿ ಪೇಳ ಆಯವಾಗಿಹ ಪುರುಷ ಸಾಯಲಾಕ್ಷಣ ಬಂದು ಕಾಯವನು ಬಳಸುವನು ಮೋಹವನು ತೋರಿ13 ಹೀಗೆಂದು ಚರನೋರ್ವ ಕೂಗಿ ಕರೆಯಲು ಬಂದು ಅಗಲೇ ಎದ್ದು ಇದಿರಾಗಿ ಪರಿಜನವು ಬೇಗದೊಳಗನುಸರಿಸಿ ಭೋಗವನು ಕೈಕೊಂಡು ರಾಗದೊಳಗಿದ್ದರಾ ಭವಜಲದ ನಡುವೆ 14 ಹೇಡಿಗಳು ಬರಬೇಡಿ ಮೂಡ ಗುಡ್ಡೆಯ ಸೇರಿ ಕಾಡಫಲವನು ಮೆದ್ದು ಕೋಡಗಲ್ಲಿನೊಳು ಆಡುತಿಹ ವರಾಹತಿಮ್ಮಪ್ಪನ್ಹತ್ತಿರದಿ ಬೇಡಿಕೊಳ್ಳಿರೊ ಎನುತ ನೋಡಿ ನಗುತಿಹರು 15
--------------
ವರಹತಿಮ್ಮಪ್ಪ
ಕಾಕು ನಿನ್ನಮನವ ನಿಲ್ಲಿಸಿ ಅನ್ಯವನೆಲ್ಲವ ನೂಕುಅ.ಪಗುರುವಿನ ಚರಣಸೀಮೆಯಲಿ ನಿತ್ಯಪರಿಪೂರ್ಣರೂಪವಿದೆಂಬ ನೇಮದಲಿಅರಿಷಡುವರ್ಗದಂತ್ಯದಲಿ ತೋರುವರಿವೆ ತಾನೆಂಬ ಘನವಿವೇಕದಲಿ 1ಕರಣ ಜಯದ ಬಳಿಸಂದು ಸಂಸರಣ ಚಿಂತೆಯ ಬಿಟ್ಟು ಮುದದಿಂದ ನಿಂದುಅರಿಯ ಪಡುವದಲ್ಲವೆಂದು ತನ್ನಿರವೆಯಾನಂದದ ಘನಪದವೆಂದು 2ತಾಪಗಳೆಲ್ಲವ ಬಿಟ್ಟೂ ಸಾಧುಗೋಪಾಲಾರ್ಯರ ಹೃದಯದೊಳಿಟ್ಟುವ್ಯಾಪಕದಲಿ ವೃತ್ತಿ ನೆಟ್ಟೂ ುಂದೀಪರಿಯ ನಿರ್ವಿಕಲ್ಪದಲಳವಟ್ಟೂ 3
--------------
ಗೋಪಾಲಾರ್ಯರು
ಕಾಣಿಸುವೆ ನಿಜವಾಗಿ ಚನ್ನಕೇಶವನ ಪ ಸಡಗರದಿ ನಿಂತಿಹನು ವರ ದೂರ್ವಾಪುರದಲ್ಲಿ ಪೊಡವಿಯೊಳು ದಾಸರಿಗೆ ವಲಿಯಬೇಕೆಂದು ಬಿಡದೆ ನೋಡಿರಿ ಹರಿಯ ಕಾಯಕಾಂತಿಯ ನೀಗ ಕಡು ಶ್ಯಾಮ ವರ್ಣದಲಿ ಯೆಸೆಯತ್ತಲಿಹುದು 1 ಮೇಲಿನ ಬಲ ಹಸ್ತದಲ್ಲಿ ಶಂಖವ ನೋಡು ಕೆಳಗಿನ ಬಲ ಹಸ್ತದಲ್ಲಿ ಪದ್ಮವನೂ ಮೇಲಿನ ಯಡ ಹಸ್ತದಲ್ಲಿ ಚಕ್ರವ ನೋಡು ಕೆಳಗಿನ ಯಡ ಹಸ್ತದಲ್ಲಿ ಗದೆಯನ್ನೂ 2 ಸೊಂಟದಲಿ ವಡ್ಯಾಣ ಕಿರುಗೆಜ್ಜೆಗಳ ನೋಡು ಕಂಠದಲಿ ಹಲವು ವಿಧದಾಭರಣಗಳನೂ ಕೌಸ್ತುಭ ನೋಡು ಬಂಟರನು ಸಲಹುವ ಪಾದಯುಗ್ಮವನೂ 3 ಸೂರ್ಯ ಚಂದ್ರಮಂತೆ ಇಳೆಯೊಳಗೆ ರಮಣೀಯವಾಗಿ ಶೋಭಿವವು ಬಲಯಡದ ಶ್ರೋತೃಗಳ ಕುಂಡಲವ ನೋಡು 4 ಉದರ ಮಧ್ಯದೊಳಿಪ್ಪ ನಾಭಿಕಮಲವ ನೋಡು ಮದನಪಿತ ಶ್ರೀಹರಿಯ ತುಲಸಿ ಮಾಲೆಯನೂ ಸದನ ಪೀಠವನುಟ್ಟ ಪಿಂತಾಂಬರವÀ ನೋಡು ಮೃದು ಪಣೆಯೊಳಿಟ್ಟಿರುವ ಶ್ರೇಷ್ಠ ತಿಲಕವನೂ 5 ಚಿನ್ಮಯ ರೂಪವ ಮೌಕ್ತಿಕದ ಸರಗಳನು ಕಂಣಿಗೆಯುವ ಪುಷ್ಪಮಾಲೆಗಳ ನೋಡು ಸನ್ನುತನು ಭಕ್ತರನು ಪೊರೆವ ಮೂರ್ತಿಯ ಬಿಡದೆ ಮನ್ನಿಸುತ ಭಜಕರನು ಕಾವ ರಂಗನನೂ 6
--------------
ಕರ್ಕಿ ಕೇಶವದಾಸ
ಕಾಮನ ಪಿತ ಕೃಷ್ಣ ಕಾಮಿನಿಯಾದನು ಕಾಮನ ಪಿತ ಕೃಷ್ಣ ಕಾಮಿನಿ ಆಗುವೊ ಕಾರಣ ಕೇಳಿರಿ ಕಾಮಿಸಿ ಶ್ರೀಹರಿ ಆ ಮಹಾಸುರರಿಗೆ ಸುಧೆಯನ್ಹಂಚುಣಿಸಲು ಶ್ರೀ ಮಾಯಾಪತಿಯು ತಾ ಸ್ತ್ರೀಯಾದ ಚೆಲುವಿಕೆ ಪ ರುಳಿ ಲುಲ್ಲು ಗೆಜ್ಜೆ ಪೈಜಣ ಪಾಗಡವನಿಟ್ಟು ಚರಣದಿ ಕಾಲುಂಗರ ಪಿಲ್ಯ ಮೆಂಟಿಕೆ ಝಣ ಝಣ ನಾದ ಕಾಳಿಯ ಫಣ ತುಳಿದಂಥ ಖಳರ ಮರ್ದನ ದಿವ್ಯ ತರುಣಿ ತಾನಾದನು 1 ಸೆರಗು ನಿರಿಯು ಜರತಾರಿ ಪೀತಾಂಬರ ಬಿಡಿ ಮುತ್ತಿನುಡಿಗಂಟೆ ನಡುವಿನ್ವೊಡ್ಯಾಣ ಸಡಗರದಿಂದ್ವೊಪ್ಪೊ ತಾಳಿ ಪದಕವಿಟ್ಟು ಮೃಡನ ಪ್ರಿಯನು ಮುದ್ದು ಮಡದಿ ತಾನಾದನು 2 ಕಂಚುಕ ತೋಳಿನಲ್ವಂಕಿ ಬÁಜುಬಂದು ಮಿಂಚಿನಂದದಿ ನಲಿದಾಡುತ ಗೊಂಡ್ಯವು ಕಂಕಣ ತೋಡ್ಯ ವಜ್ರದ್ವಾರ್ಯ ಹರಡಿಯು ಪಂಚ ಬೆರಳಿನಲ್ಲುಂಗುರವನಿಟ್ಟು ಸೊಬಗಲಿ 3 ಚಿಂತಾಕು ಸರಿಗೆ ಚಿನ್ನದ ಗುಂಡು ಹವಳವು ಕೆಂಪು ಏಕಾವಳಿ ಮಲಕು ತಾಯಿತ ಮುತ್ತು ಮಿಂಚುವೋ ಪದಕ ಮುತ್ತಿನ ಕಟ್ಟಾಣಿಯು ಪಂಚರತ್ನದ ಹಾರ ಪರಮಾತ್ಮಗಲೆಯುತ4 ಉಂಗುರ ಕೂದಲು ಶೃಂಗಾರ ಕ್ಯಾದಿಗೆ ಚಂದ್ರ ಚೌರಿ ಜಡೆಬಂಗಾರ ರಾಗಟೆ ಮುಂದೆ ಮುತ್ತಿನದಂಡೆ ಮುಡಿಯಲ್ಲೆ ಒಪ್ಪಿದ ದುಂಡು ಮಲ್ಲಿಗೆ ದÉೂೀಷದೂರನಿಗಲೆವುತ 5 ವಾಲೆ ಬುಗುಡಿ ಬಾಳ್ಯ ಚಳತುಂಬು ಚಂದ್ರ ಮುರುವು ಚಿನ್ನದ ಕಡ್ಡಿ ಕಿವಿಯಲ್ಲಿ ಕುಂದಣ ಕುಸುರು ವಜ್ರಗಳು ಕೆಂಪ್ಹೊಳೆವಂಥ ದುಂಡು ಮುತ್ತಿನ ಮುಕುರ್ಯವ ಮೂಗಿನಲ್ಲಿಟ್ಟು 6 ಅಚ್ಚ ಮುತ್ತಿನ ದಂಡೆ ಕುಚ್ಚು ತೊಂಡಿಲುಗಳು ಹಚ್ಚೆಯ ಬೊಟ್ಟು ಕಸ್ತೂರಿ ಕುಂಕುಮನಿಟ್ಟು ಪಚ್ಚೆ ಮಾಣಿಕ್ಯದರಳೆಲೆ ಚಂದ್ರ ಸೂರ್ಯರು ನಿತ್ಯ ತೃಪ್ತನು ನೀಲವರ್ಣದಂತ್ಹೊಳೆಯುತ 7 ಆ ಮಹಾವೈಕುಂಠಪುರದರಸಾದ ಈ ಮಹಾ ರಜತ- ಪೀಠ ಪುರದಲಿ ಬಂದು ಪ್ರೇಮದಿ ನಿಂತು ನೋಡುತ ಬಂದ ಜನರಿಗೆ ಕಾಮಿತ ಫÀಲ ಮುಕ್ತಿ ಕೊಡುವ ಕಮಲಾಪತಿ 8 ಅಷ್ಟಯತಿಗಳಿಂದಲಿ ಪೂಜೆಯಗೊಂಬೊ ಲಕ್ಷ್ಮಿಯ ಪತಿಯು ಸ್ತ್ರೀರೂಪವ ಧರಿಸಿರೆ ದೃಷ್ಟಿಂದೆ ನೋಡದಿನ್ನಿರುವೋರೆ ಭೀಮೇಶ- ಕೃಷ್ಣ ನಿನ್ನ ಮನದಲ್ಲಿಟ್ಟು ಸ್ತುತಿಸುವೆನು 9
--------------
ಹರಪನಹಳ್ಳಿಭೀಮವ್ವ
ಕಾಯ || ಕಾಯ ಪ ಅಣುರೂಪದಿಂದಿದ್ದು ಕ್ಷಣದೊಳಗದ್ಭುತ ರೂಪವ ಧರಿಸಿ ಬಲಿಯ ಬಂಧಿಸಿದೆ | ರಣ ಶಬ್ದವಿಲ್ಲದೆ ಸರ್ವ ಸಾಮ್ರಾಜ್ಯವ ನಗ್ರಜಗಿತ್ತಿಹ ಕಾರ್ಯವಾಶ್ಚರ್ಯ 1 ವಾದಿರಾಜರಿಗೆ ನೀ ಒಲಿದು ಶ್ರೀ ಸೋದೆಯೊಳ್ ನಿಂತಿದ್ದ ತೆರವತಿ ಚೋದ್ಯವಾಗಿಹುದು | ಕದನವಾಗಿಲ್ಲ ಭೂಭುಜರಲ್ಲಿ ಒಲಿದುದು ಹರಿಭಕ್ತರ್ಗತಿ ತೋರ್ಪ ಕಾರ್ಯ 2 ರಾಜ್ಯದೊಳಗತಿ ಮಾನ್ಯ ವಾದಿರಾಜರ ಭಾಗ್ಯ ದೇವಾಧಿದೇವ ಶ್ರೀ ತ್ರಿವಿಕ್ರಮರಾಯ 3
--------------
ವಿಶ್ವೇಂದ್ರತೀರ್ಥ
ಕಾಯ ಬೇಕಿವಳಾ ಪ ಪದುಮನಾಭನೆ ನಿನ್ನ ಸೇವೆ ಕಾತುರಳಾ ಅ.ಪ. ಸುಕೃತ ರಾಶಿಗೇ ಫಲರೂಪದಾಸದೀಕ್ಷೆಯ ವಹಿಸೆ ಆಶಿಸುತ್ತಿಹಳೊ |ಕೇಶವನೆ ಹೃದಯಾಬ್ಜವಾಸ ತವ ಸೇವೆಯನುಲೇಸಾಗಿ ಕೊಟ್ಟು ಮನದಾಶೆ ಪೂರೈಸೋ 1 ನಯವಿನಯ ಗುಣಯುಕ್ತೆ ಕನ್ಯೆ ಬಹು ಭಕ್ತಿಯುತೆವಯಸು ಕಾರಣವಲ್ಲ ಪ್ರಿಯ ನಿನ್ನ ಭಜಿಸೆ |ದಯತೋರಿ ಈ ಶಿಶುವ ಹಯಮೊಗನೆ ಉದ್ಧರಿಸೊವಯನಗಮ್ಯನೆ ಹರಿಯೆ ಭಿನ್ನಯಿಪೆ ನಿನಗೇ 2 ಮರುತ ಮತದಲಿ ದೀಕ್ಷೆ ಹರಿಗುರೂ ಸದ್ಭಕ್ತಿನೆರೆ ಬಂಧು ಜನ ಪ್ರೇಮ ಮರಳಿ ಆಧಮರಲಿಕರುಣೆಯನು ಮಾಳ್ಪಂಥ ವರಮತಿಯ ಕರುಣಿಪುದುಗರುಡವಾಹನದೇವ ಸರ್ವಾಂತರಾತ್ಮ 3 ಘೋರಭವ ಶರನಿಧಿಗೆ ತಾರಕವು ತವನಾಮವಾರವಾರಕೆ ನುಡಿಸು ಮರುತಾಂತರಾತ್ಮತಾರತಮ್ಯ ಜ್ಞಾನ ಸಾರವನೆ ತಿಳಿಸುತ್ತತೋರೋ ತವರೂಪವನೆ ಹೃದ್ಗುಹದಿ ಹರಿಯೇ 4 ಕಾಲ ಸರ್ವಗುಣಪೂರ್ಣಸರ್ವಜ್ಞ ಹರಿ ಎನ್ನ ಭಿನ್ನಪವ ಸಲಿಸೆಂದುಸರ್ವಗುರು ಗೋವಿಂದ ವಿಠಲ ಪ್ರಾರ್ಥಿಸುವೆ 5
--------------
ಗುರುಗೋವಿಂದವಿಠಲರು
ಕಾಯ ಇಂದಿರೆ ರಮಣ ಆಗಲೂ ನೀ ಕಾಯಬೇಕೋ ಅರವಿಂದ ನಯನ ಪ. ಈಗ ಈ ಜನ್ಮದಲ್ಲಿ ಭವ ದಾಟುವಲ್ಲಿ ಅ.ಪ. ಮಾನವ ನಾನಾಗಿ ಪುಟ್ಟಿ ಕಾಲ ಕಳೆದು ದೀನನಾಗೀಗ ಇನ್ನು ನೀನೆ ಗತಿಯೋ ಎನಲು ಶ್ರೀನಾಥ ನಿನ್ನ ನಾಮ ಎನ್ನ ನಾಲಗೆಯಲಿ ನುಡಿಸಿ 1 ಮಾಯಾಪತಿಯೆ ಕೇಳೋ ಆ ಯಮಭಟರು ಎಳೆದು ನೋಯಿಸುತ್ತಿರಲು ಎನ್ನ ಬಾಯಬಿಡುತಲಿ ತೋಯಜಾಂಬಕನೆ ಎನ್ನ ಕಾಯೋ ಎಂದೆನುತ ಒದರೆ ಆ ಯಮಬಾಧೆ ಬಿಡಿಸಿ ಸಾಯದಾ ಸೌಖ್ಯವನಿತ್ತು 2 ವೈಷ್ಣವ ಜನ್ಮವ ನೀನು ಇತ್ತುದು ಪಿರಿಯದಲ್ಲೊ ವೈಷ್ಣವ ಜ್ಞಾನವ ನೀಡೊ ಸುಭಕ್ತಿ ಸಹಿತ ಕೃಷ್ಣಮೂರುತಿಯೆ ನೀನು ಅಷ್ಟದಳÀ ಪದ್ಮದಲಿ ನಿಂತು ಉಷ್ಣ ಶೀತ ದ್ವಂದ್ವ ಸಹಿಷ್ಣುತೆ ವಿರಕ್ತಿಯೊಡನೆ 3 ತ್ರಿಗುಣದಿಂದ ಬದ್ಧವಾದ ವಿಗಡದೇಹ ತೊಲಗುವಂತೆ ಬಗೆಬಗೆಯ ನಿನ್ನ ಲೀಲೆ ಅಂತರದಿ ತಿಳಿಸಿ ಜಗದಾವರಣ ತೊಲಗುವಾಗ ಬಗೆಬಗೆಯ ಲಯದ ಚಿಂತೆ ತಗಲಿ ಮನಕೆ ನಿನ್ನ ಮಹಿಮೆ ಆನಂದವಾಗುವಂತೆ 4 ಗೋಪಾಲಕೃಷ್ಣವಿಠಲ ನೀ ಪರದೈವನೆನಿಸಿ ಆಪಾದಮೌಳಿ ನಿನ್ನ ರೂಪವ ತೋರಿ ಅಪವರ್ಗದಲಿ ಎನಗೆ ಶ್ರೀಪಾದಾಸ್ಥಾನವಿತ್ತು ಈ ಪರಿಯಿಂದ ಉಭಯ ವ್ಯಾಪಾರದಲ್ಲಿ ಹರಿಯೆ 5
--------------
ಅಂಬಾಬಾಯಿ