ಒಟ್ಟು 1068 ಕಡೆಗಳಲ್ಲಿ , 98 ದಾಸರು , 875 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ನೀಚಮನಸಿಗೆ ಮಾಡಲಿನ್ನೇನು ಥೂ ನಾಚಿಕಿಲ್ಲದಕೆ ಉಪಾಯವೇನು ಪ ಹರಿಚರಣ ಸ್ಮರಿಸುವುದು ಹರಿದಾಟ ಮರಿವಲ್ಲದು ಪಿರಿದುನುಡಿಯಾಡುವುದು ಕಿರಿಗುಣವ ಬಿಡದು ಪರಲೋಕ ಬಯಸುವುದು ನಿರುತದಿಂ ನಡಿವಲ್ಲದು ಶರಣರೊಡನೆನದಿಹ್ಯದು ಪರನಿಂದೆ ಬಿಡದು 1 ಜ್ಞಾನನುಡಿ ಪೇಳುವುದು ನಾನೆಂಬುದಳಿವಲ್ಲದು ಧ್ಯಾನದೊಳಗಿರುತಿಹ್ಯದು ಶ್ವಾನಕಲ್ಪನ್ಹಿಂಗದು ದಾನಗುಣ ಬೋಧಿಪುದು ಜೀನತ್ವ ತೊರಿವಲ್ಲದು ಆನಂದ ಬೇಡುವುದು ಹೀನಭ್ರ್ರಾಂತಿ ಬಿಡದು 2 ಸಾದುಪಥದಾಡುವುದು ಭೇದ ಕಡಿವಲ್ಲದು ವೇದಾಂತ ಕೇಳುವುದು ಸಾಧನಕೆ ಒಲ್ಲದು ಪಾದಭಕ್ತಿ ಬೇಡುವುದು ಕ್ರೋಧ ತೊಡಿವಲ್ಲದು 3 ನಾಮಭಜನೆ ಮಾಡುವುದು ತಾಮಸವ ತುಳಿವಲ್ಲದು ಸ್ವಾಮಿಯೊಲುಮೆ ಕೋರುವುದು ಪಾರತ್ವ ಬಿಡದು ಕಾಮಿತೊಲ್ಲೆನೆನ್ನುವುದು ಭಾಮೆ ಭೂಮಿಪ್ರೇಮ ಬಿಡದು ಕ್ಷೇಮ ಸದಾ ಬೇಡುವುದು ನೇಮನಿತ್ಯ ಒಲ್ಲದು 4 ಶಾಸನವ ಪೇಳುವುದು ತಾಸು ಸ್ಥಿರ ನಿಲ್ಲದು ನಾಶಜಗವೆನುತಿಹ್ಯದು ಕಾಸು ಒಲ್ಲೆನ್ನದು ದೋಷನಾಶನ ಜಗದೀಶ ಶ್ರೀರಾಮನಡಿ ದಾಸನಾನೆಂಬುವುದು ವಾಸನೆಯ ಬಿಡದು 5
--------------
ರಾಮದಾಸರು
ಈಡಾಡಿದ್ಯಾ ಪಾಪಂಗಳ ಆಹಾ ಪ ಮನಸಿಲಿ ನೋಡಿದ್ಯಾ ಯತಿಗಳನ್ನ ನಾಡಿನೊಳಗೆ ಈಡಿಲ್ಲದಿಹ ಈ ಗುರುಗಳಾ ಅ.ಪ. ಹೊದ್ದ ಕಾವಿಶಾಠಿಯಲ್ಲಿ ಶ್ರೀ ಮುದ್ರೆ ಹಚ್ಚಿದ ದೇಹಕಾಂತಿಯು ಆಹಾ ತಿದ್ದಿದ ಅಂಗಾರದ ನಡುವೆ ಅಕ್ಷತೆಯು ಎದ್ದು ಬರುವಂಥ ಈ ಮುದ್ದು ಗುರುಗಳಾ 1 ನಿಂತ ಎದುರಲ್ಲಿ ಮುಖ್ಯಪ್ರಾಣಾ ಬೇಡಿ- ದಂಥ ವರಗಳ ಕೊಡುವ ಜಾಣಾ ಆಹಾ ಜಗದಂತರದೊಳಗೆ ಪ್ರವೀಣಾ ಸೀತಾ- ಕಾಂತರೊಳಗೆ ಅತಿಪ್ರಾಣಾ2 ಮಂತ್ರಾಲಯದಲ್ಲಿರುವ ಮುದ್ದು ಬೃಂದಾವನದ ನೋಟ ನಮ್ಮಲಿದ್ದ ಪಾಪಗಳೆಲ್ಲ ಓಟಾ ಅಲ್ಲಿ ವಿದ್ವಾಂಸರ ಜಗ್ಯಾಟ ಆಹಾ ಮುದ್ದುವಾಹನನೆ ನೀನು ನರಸಿಂಹವಿಠ್ಠಲ ದೂತ ದಾರಿದ್ರ್ಯಗಳೆಲ್ಲವ ಪರಿಹರಿಸುವಂಥಾ 3
--------------
ನರಸಿಂಹವಿಠಲರು
ಈತನೇನೆ ಮುಖ್ಯ ಪ್ರಾಣದೇವರು ಪ. ಖ್ಯಾತಿಯ ಪಡೆದ ರಾಮ ದೂತನು ಅ.ಪ. ಅಂಜನೆಯ ಕುಮಾರ ರಾಕ್ಷಸರ ಸಂಹಾರ ಸಂಜೀವನವ ತಂದ ಧೀರ ಸಾಗರವ ದಾಟಿದ 1 ಕುಂತಿಯಾ ಕಂದ ಕೀಚಕನ ಕೊಂದ ಸತಿಗೆ ಕುಸುಮವಾ ತಂದೆ ಲೋಕದೊಳಗೆ ಆನಂದ 2 ಮದ್ಯಗೇಹನಲಿ ಜನಿಸಿ ಪ್ರಖ್ಯಾತನೆನಿಸಿ ಕಾಳೀಮರ್ಧನಕೃಷ್ಣನಲಿ ಮನಸಿಟ್ಟ ಯತಿಯೆ 3
--------------
ಕಳಸದ ಸುಂದರಮ್ಮ
ಉ. ತತ್ವ ವಿವೇಚನೆ ಹರಿಯಾದರೇನು ತಾ ಹರನಾದರೇನು ಮೂರ್ತಿ ದೊರಕಿ ಫಲವೇನು ಪ ಪಿತನೊಳಗೆ ಸೇರದಿಹ ಸುತನಿಂದ ಫಲವೇನು ಸತಿ ಇದ್ದರೇನು ಮತಿಹೀನ ಗುರು ತಾನು ಜೊತೆಯಾಗಿ ಇದ್ದರೇನು ಮತ ಮೀರಿ ನಡೆವಾತ ಯತಿಯಾದರೇನು 1 ಸಾಯವಿಲ್ಲದ ನ್ಯಾಯ ಸತ್ಯವಾದರೆ ಏನು ಬಾಯಸವಿಯಿಲ್ಲದ ರಸಾಯನದಲೇನು ಕಾಯ ಕುಂದಿದ ಮೇಲೆ ಜೀವದಾಶೆಯದೇನು ಮಾಯವಾದಿಯ ಮಾತು ಮತ್ತೆ ದೃಢವೇನು 2 ಋಣವ ಮಾಡಿದ ತಾತ ಗುಣವಂತನಾದರೇನು ಭಣಿತೆ ತಪ್ಪಿದ ತಾಯಿ ರಕ್ಷಿಣಿಯು ಆದರೇನು ಎಣಿಕೆ ಬಾರದ ಮನುಜ ಕರಣಿಕನಾದರೇನು ಫಣಿರಾಜನೊತ್ತಿನೊಳು ಹಣವಿದ್ದರೇನು 3 ವಿಪ್ರ ವೇದ ಓದಿದರೇನು ಮಾದಿಗನು ತಾ ಮಡಿಯನುಟ್ಟರೇನು ಬೂದಿಮುಚ್ಚಿದೆ ಕೆಂಡವಾದ ಸೋದರವೇನು ಸಾಧಿಸುವ ಊರೊಳಗೆ ಆದ ಫಲವೇನು 4 ಹರಿಯನರ್ಚಿಸದಿರ್ದ ಕರವಿರ್ದು ಫಲವೇನು ಹರಿಯ ಸ್ಮರಣೆಯ ಮಾಡದರಿಯದವನೇನು ಸಿರಿಯು ನಿಲ್ಲದ ಗೃಹದ ಪರಿಯ ಸೌಖ್ಯವದೇನು ಮರೆಯಾದ ಮನುಜನೊಳು ವ್ಯವಹಾರವೇನು 5 ವಾರಿಯಿಲ್ಲದ ಊರ ಸೇರಿರ್ದು ಫಲವೇನು ಚೋರನೊಡನೇ ದಾರಿ ನಡೆವುದೇನು ಬೇರು ಇಲ್ಲದ ವೃಕ್ಷ ಏರಿ ನೋಡುವುದೇನು ಮಾರಿ ಮನೆಯೊಳಗಿರಲು ಸಾಕಾರವೇನು 6 ಲಕ್ಷಣದ ಮೂರ್ತಿಯಿರಲಕ್ಷಯವ ತೋರುವುದು ಪಕ್ಷಿವಾಹನ ಲಕ್ಷ್ಮ್ಯಪೇಕ್ಷೆಯಾಗಿಹರು ಲಕ್ಷಣವಿರಹಿತ ನರ ಪ್ರದಕ್ಷಿಣದಿ ಬಳಲಿದರು ಭಿಕ್ಷುಕನೇ ಸರಿಯಾತನೀಕ್ಷಿಸರು ಜನರು 7 ಬುದ್ದಿವಂತರ ಕೈಯ ಶುದ್ಧವಾದೆರಕದಲಿ ತಿದ್ದಿರ್ದ ಮೂರ್ತಿಯನು ಕದ್ದುಕೊಂಡು ಹೊದ್ದಿ ಬಲವಂತನೊಳು ಬದ್ದವಾಗಿರುತಿರ್ದು ಎದ್ದು ಹೋಗದ ಸ್ಥಳದಿ ಮುದ್ದನಾಗಿಹುದು 8 ಕಾಮಿತಾರ್ಥನೀವ ಸೀಮೆಯಲಿ ಕೌರವನು ರಾಮರಾಜ್ಯದಿ ಬೇಡಿಕೊಳಲು ಕೊಡುತಿಹನು ಪ್ರೇಮದೊಳು ವರಾಹತಿಮ್ಮಪ್ಪ ಮನದಣಿಯೆ ಸೌಮನಸ್ಯವೀವ ಬರಿದೆ ಬಳಲದಿರು 9
--------------
ವರಹತಿಮ್ಮಪ್ಪ
ಉ. ಲಕ್ಷ್ಮೀದೇವಿ ಅಂಬಾಬಾಯೇ ನಂಬಿದೆ ಬಾ ಜನನೀ ಪ ಕೋಮಲಾಂಗಿಯೇ ಕಾಮಿತದಾಯಕೆಕರುಣಾವಾರಿಧಿಯೇ ತಾಯೇ 1 ಸಾರಸಾಕ್ಷಳೇ ತೋರಿಸು ಹರಿಯನ್ನುಪೋಷಿಸೆನ್ನ ಮನಸು ತಾಯೇ 2 ಇಂದಿರೇಶನಂಕವಿಹಾರಿಣೀಸುಂದರಾಂಗ ಸುಭಗೇ ತಾಯೇ 3
--------------
ಇಂದಿರೇಶರು
ಉಗಾಭೋಗ ಮಾಡಿದೆ ಯಾಕೆ ಫಲಗಳ ಮೆದ್ದೆಯಾಕೆ ಒಕ್ಕುಡಿತೆ ಪಾಲ ಕುಡಿದೆಯಾಕೆ ಅವಲ ಮೆದ್ದೆಯಾಕೆ ಕುರೂಪಿ ಕುಬುಜೆಗೆ ಮನಸೋತೆಯಾಕೆ ಅಖಿಲಾಂಡಕೋಟಿ ಬ್ರಹ್ಮಾಂಡನಾಯಕನಾದವ ಪಾಂಡವರೋಲೆಕಾರನಾದೆಯಾಕೆ ನಿನಗಾಗಿ ನೀನು ಬವಣೆಪಡಲಿಲ್ಲವೊ ದೇವ ನಿನ್ನ ಭಕುತರ ಪೊರೆಯಲೋಸುಗವೆಂಬುದ ನಾ ಬಲ್ಲೆ ನಿನ್ನ ದಯಕೆಣೆಯುಂಟೆ ಎನ್ನಪ್ಪ ರಂಗೇಶವಿಠಲ
--------------
ರಂಗೇಶವಿಠಲದಾಸರು
ಉಗಾಭೋಗ ವೈಕುಂಠಗಿರಿಯ ವಾಸ ಲೋಕೈಕನಾಥ ಶ್ರೀಶ ಏಕಮನಸು ನಿನ್ನ ಪಾದಧ್ಯಾನದಿ ಕೊಡು ನಾ ಕೇಳಲಿನ್ನೇನು ನಾಕ ಜನರ ನಾಥ ಬೇಕೊ ನಿನ್ನ ಭಕ್ತರ ಏಕಾಂತ ಸಹವಾಸ ನೀ ಕರುಣಿಸು ಇದನಾ- ನೇಕ ಜನ್ಮಗಳಲ್ಲಿ ಶ್ರೀಕಳತ್ರ ಶ್ರೀಶ ಗೋಪಾಲಕೃಷ್ಣವಿಠಲ
--------------
ಅಂಬಾಬಾಯಿ
ಉಡುಪಿನಕೃಷ್ಣ ಸಕಲ ಜಗದೀಶಬಿಡದೆನ್ನ ಸಲಹೋ ಮಧ್ವಹೃದಯ ವಾಸ 1 ದಮನ 2 ತ್ರಿಕರಣ ಪರಿಯ ತ್ರಿವಿಧತಾಪ ಶಮನಸುಕುಮಾರರೂಪ ಮೋಹನ ರಮಾರಮಣ 3 ಎಸೆವ ಕಿರುಡೊಳ್ಳಿನ ಶುಭಾಕಾರ ಗಂಡಪಸುಳೆಯ ಭಾವದಿ ಮೆರೆವ ಪ್ರಚಂಡ 4 ಶಶಿಸಮವದನ ಕುಂಡಲಶೋಭಿಗಂಡಅಸುರಸಂಹಾರ ದೋರ್ಧೃತ ಪಾಶದಂಡ5 ಶ್ರುತಿಯರು ಸೇವೆಯರು ಬಿಡದೆ ಬಣ್ಣಿಸುವರುಪ್ರತಿಯಿಲ್ಲದದುಭುತ ಮಹಿಮನು ದಾವ 6 ಯತಿಕುಲಸೇವ್ಯ ಹಯವದನ ದೇವಪತಿಕರಿಸೊ ನಮ್ಮ ಭವವನದಾವ 7
--------------
ವಾದಿರಾಜ
ಉತ್ಥಾನ ದ್ವಾದಶಿಯ ದಿವಸ (ಕಾರ್ತೀಕ ಶುದ್ಧ ದ್ವಾದಶಿಯ ಉತ್ಸವ) ರಂಭೆ ಮಾನಿನೀ ಈತನಾರೆಂದೆನೆಗೆ ಪೇಳೆ ಮಾನಿನೀ ಪ. ಮಾನಿನೀಮಣಿ ಈತನ್ಯಾರೆ ಕರು ಣಾನಿಧಿಯಂತಿಹ ನೀರೆ ಹಾ ಹಾ ಭಾನುಸಹಸ್ರ ಸಮಾನಭಾಷಿತ ಮ- ಹಾನುಭಾವನು ಸುಪ್ರವೀಣನಾಗಿಹ ಕಾಣೆ 1 ಭಯಭಕ್ತಿಯಿಂದಾಶ್ರಿತರು ಕಾಣಿ- ಕೆಯನಿತ್ತು ನುತಿಸಿ ಪಾಡಿದರು ನಿರಾ- ಮಯ ನೀನೇ ಗತಿಯೆಂದೆಲ್ಲವರು ಹಾ ಹಾ ಭಯನಿವಾರಣ ಜಯ ಜಯವೆಂದು ನುತಿಸೆ ನಿ- ರ್ಭಯ ಹಸ್ತ ತೋರುತ ದಯಮಾಡಿ ಪೊರಟನೆ2 ಭೂರಿ ವಿಪ್ರರ ವೇದ ಘೋಷದಿಂದ ಸ್ವಾರಿಗೆ ಪೊರಟ ವಿಲಾಸ ಕೌಸ್ತು- ಚಾರುಕಿರೀಟಕೇಯೂರಪದಕಮುಕ್ತಾ ಹಾರಾಲಂಕಾರ ಶೃಂಗಾರನಾಗಿರುವನು3 ಸೀಗುರಿ ಛತ್ರ ಚಾಮರದ ಸಮ ವಾಗಿ ನಿಂದಿರುವ ತೋರಣದ ರಾಜ ಭೋಗ ನಿಶಾನಿಯ ಬಿರುದ ಹಾ ಹಾ ಮಾಗಧ ಸೂತ ಮುಖ್ಯಾದಿ ಪಾಠಕರ ಸ- ರಾಗ ಕೈವಾರದಿ ಸಾಗಿ ಬರುವ ಕಾಣೆ4 ಮುಂದಣದಲಿ ಶೋಭಿಸುವ ಜನ ಸಂದಣಿಗಳ ಮಧ್ಯೆ ಮೆರೆವ ತಾರಾ ವೃಂದೇಂದುವಂತೆ ಕಾಣಿಸುವ ಹಾಹಾ ಕುಂದಣ ಖಚಿತವಾದಂದಣವೇರಿ ಸಾ- ನಂದದಿ ಬರುವನು ಮಂದಹಾಸವ ಬೀರಿ5 ತಾಳ ಮೃದಂಗದ ರವದಿ ಶ್ರುತಿ ವಾಲಗ ಭೇರಿ ರಭಸದಿ ಜನ ಜಾಲ ಕೂಡಿರುವ ಮೋಹರದಿ ಹಾಹಾ ಸಾಲು ಸಾಲಾಗಿ ಬೊಂಬಾಳ ದೀವಟಿಗೆ ಹಿ- ಲಾಲು ಪ್ರಕಾಶದಿ ಲೋಲನಾಗಿಹ ಕಾಣೆ 6 ಊರ್ವಶಿ:ಈತನೆ ಭಾಗ್ಯನಿಧಿ ನೋಡೆ ನೀ ಮುದದಿಪ. ಈತನೆ ಈರೇಳು ಲೋಕದ ದಾತ ನಾರಾಯಣ ಮಹಾ ಪುರು- ವಿನುತ ನಿ- ರ್ಭೀತ ನಿರ್ಗುಣ ಚೇತನಾತ್ಮಕಅ.ಪ. ಮಂದರ ಪೊತ್ತ ಭೂನಿತಂಬಿನಿಯ ಪ್ರೀತ ಮಾನವಮೃಗಾಧಿಪ ತ್ರಿವಿಕ್ರಮ ದಾನಶಾಲಿ ದಶಾನನಾರಿ ನ- ವೀನ ವೇಣುವಿನೋದ ದೃಢ ನಿ- ರ್ವಾಣ ಪ್ರವುಢ ದಯಾನಿಧಿ ಸಖಿ 1 ವಾರಿಜಾಸವಾನವಂದಿತ ಶ್ರೀಪಾದಯುಗ್ಮವ ತೋರಿಕೊಂಬುವ ಸಂತತ ಕೇರಿಕೇರಿಯ ಮನೆಗಳಲಿ ದಿ- ವ್ಯಾರತಿಯ ಶೃಂಗಾರ ಭಕ್ತರ- ನಾರತದಿ ಉದ್ಧಾರಗೈಯಲು ಸ್ವಾರಿ ಪೊರಟನು ಮಾರಜನಕನು 2 ಮುಗುದೆ ನೀ ನೋಡಿದನು ಕಾಣಿಕೆಯ ಕ- ಪ್ಪಗಳ ಕೊಳ್ಳುವನು ತಾನು ಬಗೆಬಗೆಯ ಕಟ್ಟೆಯೊಳು ಮಂಡಿಸಿ ಮಿಗಿಲು ಶರಣಾಗತರ ಮನಸಿನ ಬಗೆಯನೆಲ್ಲವ ಸಲ್ಲಿಸಿ ಕರುಣಾ ಳುಗಳ ದೇವನು ಕರುಣಿಸುವ ನೋಡೆ3 ರಂಭೆ :ದೃಢವಾಯಿತೆಲೆ ನಿನ್ನ ನುಡಿಯು ಸುರ ಗಡಣ ಓಲಗಕೆ ಇಮ್ಮಡಿಯು ಜನ- ರೊಡಗೂಡಿ ಬರುತಿಹ ನಡೆಯು ಹಾ ಹಾ ಮೃಡ ಸರೋಜ ಸುರಗಡಣ ವಂದಿತ ಕ್ಷೀರ ಕಡಲ ಶಯನ ಜಗದೊಡೆಯನಹುದು ಕಾಣೆ1 ಮದಗಜಗಮನೆ ನೀ ಪೇಳೆ ದೇವ ಸದನವ ಪೊರಡುವ ಮೊದಲೇ ಚಂದ- ನದ ಪಲ್ಲಂಕಿಯ ತಂದು ಮ್ಯಾಲೆ ಹಾ ಹಾ ಮುದದಿಂದ ಬಾಲಕರೊದಗಿ ಸಂತೋಷದಿ ಚದುರತನದಿ ಪೋಗುವನು ಪೇಳೆಲೆ ನೀರೆ2 ಊರ್ವಶಿ: ನಾರೀಮಣಿ ನೀ ಕೇಳೆ ಚಕ್ರೋತ್ಸವ ಶ್ರೀರಮಾಧವನ ಲೀಲೆ ಘೋರ ದೈತ್ಯಕುಠಾರ ಲಕ್ಷ್ಮೀ ನಾರಾಯಣನ ಬಲಕರ ಸರೋಜದಿ ಸೇರಿ ಕುಳಿತ ಗಂಭೀರ ದಿನಪನ ಭೂರಿತೇಜದಿ ಮೆರೆವುದದು ತಿಳಿ1 ದೊರೆಯು ಬರುವನು ಎಂದು ಎಲ್ಲರಿಗೆ ಗೋ- ಚರಿಸುವನೊಲಿದು ಇಂದು ತರ ತರದ ಆರತಿಗಳನು ನೀವ್ ಧರಿಸಿ ನಿಂದಿರಿಯೆಂದು ಜನರಿಗೆ- ಚ್ಚರಿಗೆಗೋಸುಗ ಮನದ ಭಯವಪ- ಹರಿಸಿ ಬೇಗದಿ ಪೊರಟು ಬಂದುದು ರಂಭೆ :ಸರಸಿಜನಯನೆ ನೀ ಪೇಳೆ ಸೂರ್ಯ ಕಿರಣದಂತಿಹುದೆಲೆ ಬಾಲೆ ಸುತ್ತಿ ಗೆರಕವಾಗಿಹುದು ಸುಶೀಲೆ ಆಹಾ ಹರಿಯ ವೈಕುಂಠ ನಗರದಂತೆ ಜ್ಯೋತಿ ವಿ- ಸ್ತರವಾಗಿ ಸುತ್ತಿನೊಳ್ ಮೆರೆವುದಿದೇನೆಲೆ 1 ಊರ್ವಶಿ:ಸಾದರದಲಿ ನೀ ಕೇಳೆ ಕಾರ್ತಿಕ ಶುದ್ಧ ದ್ವಾದಶಿಯೊಳಗೆ ಬಾಲೆ ಮಾಧವನ ಪ್ರೀತ್ಯರ್ಥವಾಗಿ ಶು- ಭೋದಯದಿ ಸಾಲಾಗಿ ದೀಪಾ ರಾಧನೆಯ ಉತ್ಸಹದ ಮಹಿಮೆಯ ಸಾದರದಿ ನೀ ನೋಡೆ ಸುಮನದಿ1 ನಿಗಮಾಗಮದ ಘೋಷದಿ ಸಾನಂದ ಸು- ತ್ತುಗಳ ಬರುವ ಮೋದದಿ ಬಗೆ ಬಗೆಯ ನರ್ತನ ಸಂಗೀತಾ ದಿಗಳ ಲೋಲೋಪ್ತಿಯ ಮನೋಹರ ದುಗುಮಿಗೆಯ ಪಲ್ಲಂಕಿಯೊಳು ಕಿರು2 ನಗೆಯ ಸೂಸುತ ನಗಧರನು ಬಹ ಚಪಲಾಕ್ಷಿ ಕೇಳೆ ಈ ವಸಂತ ಮಂ- ಟಪದಿ ಮಂಡಿಸಿದ ಬೇಗ ಅಪರಿಮಿತ ಸಂಗೀತ ಗಾನ ಲೋ- ಲುಪನು ಭಕ್ತರ ಮೇಲೆ ಕರುಣದಿ ಕೃಪೆಯ ಬೀರಿ ನಿರುಪಮ ಮಂಗಲ ಉಪಯಿತನು ತಾನೆನಿಸಿ ಮೆರೆವನು3 ಪಂಕಜಮುಖಿ ನೀ ಕೇಳೆ ಇದೆಲ್ಲವು ವೆಂಕಟೇಶ್ವರನ ಲೀಲೆ ಶಂಕರಾಪ್ತನು ಸಕಲ ಭಕ್ತಾ ಕರ ಚ ಕ್ರಾಂಕಿತನು ವೃಂದಾವನದಿ ನಿ ಶ್ಯಂಕದಿಂ ಪೂಜೆಯಗೊಂಡನು4 ಕಂತುಜನಕನಾಮೇಲೆ ಸಾದರದಿ ಗೃ- ಹಾಂತರಗೈದ ಬಾಲೆ ಚಿಂತಿತಾರ್ಥವನೀವ ಲಕ್ಷ್ಮೀ ಕಾಂತ ನಾರಾಯಣನು ಭಕುತರ ತಿಂಥಿಣಿಗೆ ಪ್ರಸಾದವಿತ್ತೇ- ಕಾಂತ ಸೇವೆಗೆ ನಿಂತ ಮಾಧವ5
--------------
ತುಪಾಕಿ ವೆಂಕಟರಮಣಾಚಾರ್ಯ
ಉದ್ಧರಿಸೆನ್ನ ಶುದ್ಧ ಮಧ್ವಮತದ ಧೊರೆಯೆ ಬಿದ್ದು ಪೇಳುವೆ ಪ ಮಾನವ ಜನ್ಮವ ವಹಿಸಿ ಸಾನುರಾಗದಿ ನಿನ್ನ ಭಜಿಸಿ ಮಾನ್ಯನೆನಿಸಿದೇ 1 ಎಷ್ಟು ಕಷ್ಟ ಬರಲಿ ಇನ್ನು ದುಷ್ಟ ಮನಸು ಕಳೆದು ಮುನ್ನಾ ಸೃಷ್ಟಿಕರ್ತಾ ಭೃತ್ಯಘನ್ನ ತುಷ್ಟಿನೀಡ್ವುದೈ2 ಸ್ಮರಿಸಿ ನರಸಿಂಹವಿಠಲನ ಭರದಿ ನಿನಗೆ ಮರೆ ಇಡುವೆನಾಗಿ ದುರುಳ ನರರ ಸಂಗತಿಯನು ಮರಿಸಿ ಪೊರೆವುದೈ 3
--------------
ನರಸಿಂಹವಿಠಲರು
ಉದ್ಧರಿಸೆನ್ನಯ್ಯ ಮುದ್ದು ಶ್ರೀಹರಿಯೆ ಬಿದ್ದು ಬೇಡುವೆ ನಿಮ್ಮ ಪಾದಪದ್ಮದೊಳು ಪ ಬದ್ಧಗುಣ ಬಚ್ಚಿಟ್ಟು ಶುದ್ಧ ಮನದವನಂತೆ ಸುದ್ದಿ ಹೇಳುತ ಸತತ ಕದ್ದು ತಿನ್ನುವ ಎನ್ನ ಬದ್ಧ ಮನಸಿನ ಡೊಂಕ ತಿದ್ದು ಬೇಗದೊಳು 1 ನಂಬಿಗುಳ್ಳವನಂತೆ ಹೇಳುವ ಪರರ ಅಂಬುಜಾಕ್ಷಯರೊಲುಮೆ ಹಂಬಲವ ಮನದಿ ತುಂಬಿಕೊಂಡಿಹ್ಯ ಎನ್ನಡೊಂಕ ಶಂಭುವಿನುತನೆ ತಿದ್ದಿ ಇಂಬುಗೊಡು ಜವದಿ 2 ಸಫಲಮಾನಿಸನಂತೆ ಜಪಮಾತುಗಳಾಡಿ ಕಪಟತ್ವದಿಂದಿತರ ಅಪಹರಿಸುವ ಕುಪಿತ ಮನಸಿನ ಡೊಂಕ ಅಪರೂಪತಿದ್ದಿ ನುತ ಸುಫಲದಾಯಕ ಹರಿ ಕೃಪೆಮಾಡು ಜವದಿ 3 ಹಸುತೃಷಳಿದವನಂತೆ ವಸುಧೆಜನರಿಗೆ ತೋರಿ ಬಸವಳಿದು ಬಾಯಾರಿ ದೆಸೆಗೆಟ್ಟು ಪರರ ಅಶನ ಬೇಡುಂಬ ಪುಸಿಯ ಮನಸಿನ ಡೊಂಕ ಹಸನಾಗಿ ತಿದ್ದಿ ಲಕುಮೀಶ ಒಲಿ ದಯದಿ 4 ಪಾಮರಮನದ ದುಷ್ಕಾಮಿತಗಳನೆಲ್ಲ ಕ್ಷೇಮದಿಂ ಕಡೆಹಾಯ್ಸಿ ಸ್ವಾಮಿಯೇ ನಿಮ್ಮ ನಾಮಧ್ಯಾನದ ನಿತ್ಯನೇಮವನು ಪಾಲಿಸಿ ಪ್ರೇಮದ್ಹಿಡಿಕರ ಶ್ರೀರಾಮಪ್ರಭುತಂದೆ 5
--------------
ರಾಮದಾಸರು
ಉಮಾ ಹಿಮಗಿರಿ ಸಮಸ್ತ ಸಮಾನ ಸುಗುಣವಂದ್ಯೆ ಪ ಕಮಲಾಕ್ಷನÀ ಭಗಿನಿಯೆನ್ನಮಲನ ಮಾಡಿ ವಿಮ¯ ಮನಸು ಶಮದಮಗಳ ನೀಡಮ್ಮ ಅ.ಪ. ತ್ರಿಪುರ ಸುಂದರಿ ನಿನ್ನ ಅಪಾರ ರೂಪಕೆ ತ್ರಿಪುರಾರಿ ಮರುಳಾದನಮ್ಮ ಶಫರಾಕ್ಷಿ ಕೇಳೆನ್ನ ಬಿನ್ನಪವನು ಮನ ಚಪಲಾಕೆರಗದಂತೆ ಕೃಪೆ ಮಾಡಬೇಕಮ್ಮ 1 ಜಪವ ನಾನರಿಯೆನು ತಪವ ನಾನರಿಯೆನು ಎ ನ್ನಪರ ಬುದ್ಧಿಯ ಬಿಡಿಸಮ್ಮ ಕೃಪಣ ವತ್ಸಲೆ ಎನ್ನ ಕುಪಥಾವ ತಪ್ಪಿಸಿ ಅಪವರ್ಗ ಸೇರುವ ಸುಪಥವ ತೋರಮ್ಮ 2 ಅಪ್ಪ ರಂಗೇಶವಿಠಲ ಒಪ್ಪುವ ರೀತಿಲಿ ತಪ್ಪದೆ ಮತಿ ಪ್ರೇರಿಸಮ್ಮ ತಪ್ಪು ಒಪ್ಪುಗಳೆಲ್ಲ ಸರ್ಪಶಯನಗೆಅರ್ಪಿಸಿ ಎನ್ನ ನಿರ್ಲಿಪ್ತನ ಮಾಡಿಸಮ್ಮ 3
--------------
ರಂಗೇಶವಿಠಲದಾಸರು
ಊರ್ವಶಿ : ಬಂದ ಕಾಣೆ ಗೋವಿಂದ ಕ್ಷೀರ- ಸಿಂಧುಶಯನ ವನದಿಂದ ಇಂದಿರೇಶ ಮುದದಿಂದ ಮೌನಿಮುನಿ- ವೃಂದದಿಂದ ಸ್ತುತಿವಂದನೆಗೊಳ್ಳುತ1 ಏಸು ಲೋಭಿಯೊ ತಿಮ್ಮಶೆಟ್ಟಿ ಒಂದು ಕಾಸಿಗೆ ಮಾರುವ ರೊಟ್ಟಿ ದಾಸರ ಕೂಡಿ ಜಗಜಟ್ಟಿ ಬಹು ದೇಶವ ತಿರುಗುವ ಶೆಟ್ಟಿ ದೂಷಣಾರಿ ಪಾದಾಶ್ರಿತಜನರಭಿ- ಲಾಷೆ ಸಲಿಸಿ ಇಲ್ಲಿ ತೋಷದಿ ನಿಂತವ2 ದೊಡ್ಡವನೈ ಮಹಾರಾಯ ಹಳೆ ದುಡ್ಡಿಗೆ ನೀಡುವ ಕೈಯ ಅಡ್ಡಿಗೈದರೆ ಬಿಡನಯ್ಯ ಇವ ಬಡ್ಡಿಕೇಳುವ ತಿಮ್ಮಯ್ಯ ದಡ್ಡುಕೇಸಕ್ಕಿಯ ಮಡ್ಡಿಪ್ರಸಾದವ ಗುಡ್ಡೆಯ ಮೇಲಿದ್ದು ದುಡ್ಡಿಗೆ ಕೊಡುವವ3 ತಿರುಪತಿಗೆ ಪ್ರತಿಯಾಗಿ ಪಡು ತಿರುಪತಿಯೆಂದಿಹ ಯೋಗಿ ಮೆರಸುವನೈ ಸ್ಥಿರವಾಗಿ ಶ್ರೀ ವರ ವೆಂಕಟ ಲೇಸಾಗಿ ಶರಣರು ಏನೆಂದು ಸಂತೋಷಿಪ ಕರುಣಾಕರ ಚಪ್ಪರ ಶ್ರೀನಿವಾಸನು4 ಈ ಪರಿಯಲಿ ಒಲಿದಿಪ್ಪಾ ಬಹು ಕಾಪಟ್ಯರಿಗೆ ತಾನೊಪ್ಪನಮ್ಮ ಗೋಪಾಲಕ ಜಗದಪ್ಪ ಶ್ರೀಪರಮಾತ್ಮ ನಾನಾಪರಿ ವಿಭವದಿ ಗೋಪುರದಲಿ ತಾ ವ್ಯಾಪಿಸಿ ನಿಂದನು5 ರಂಭೆ : ನಾರೀವರ್ಯಾರಮ್ಮ ನೋಡಲು ಸಾರಹೃದಯರಮ್ಮ ತೋರಣಛತ್ರಚಾಮರ ಬಿರುದುಗಳಿಂದ ಭೂರಿ ವಿಭವದಿಂದ ಸಾರಿಬರುವರಮ್ಮ1 ಕರದಿ ಕಲಶವಿಹುದು ಶಾಲಿನ ನಿರಿ ಮುಂದಿರುತಿಹುದು ಬೆರಳಿನೊಳುಂಗುರು ವರ ದ್ವಾದಶನಾಮ ಧರಿಸಿ ಸಮಂತ್ರೋಚ್ಚರಿಸುತ ಬರುವರು2 ಮಂದಿಗಳೊಡ್ಡಿನಲಿ ಬರುವರು ಮಂದಸ್ಮಿತದಲಿ ಚಂದದಿ ಜನಗಳ ಸಂದಣಿ ಮಧ್ಯದಿ ಇಂದಿರೆಯರಸನ ಧ್ಯಾನದಿ ಬರುವರು3 ಹಿಂಗದೆ ಬರುತಿಲ್ಲಿ ಮನಸಿನ ಇಂಗಿತವರಿತಿಲ್ಲಿ ಬಂಗಾರದ ಭೂಷಣಸಮುದಾಯದಿ ಅಂಗಜಪಿತನಿಗೆ ಶೃಂಗಾರಗೈವರು4 ವಿಪ್ರೋತ್ತಮರ ಗುಣ- ಕೆಂತು ಸೈರಣೆಯಾಂತು ನಾನಿರಲಿ ಚಿಂತಿತಾರ್ಥವನೀವ ಲಕ್ಷ್ಮೀ- ಸಂತಸದಿ ಪೂಜಾದಿ ಸತತಿ- ಯಾಂತಕೊಂಡಿಹೇಕಾಂತಭಕ್ತರು1 ಕೀರ್ತಿಯನು ಧರಿಸಿ ಮ- ತಾವೆಂದು ಧರ್ಮವನು ಪಾಲಿಸಿ ಸಿಂಧುಶಯನನ ಚಾರುಚರಣ- ದ್ವಂದ್ವಕಾನತರಾಗಿ ಲೋಕದಿ ವಂದ್ಯರೆನಿಸಿಯಾನಂದ ಪರರಿವ- ರೆಂದು ಶ್ರೀಗೋವಿಂದ ನಡೆಸುವ2 ವೇದಶಾಸ್ತ್ರಪುರಾಣತರ್ಕವನೋದಿ ಬಲ್ಲವರು ವಿಪ್ರರಿ ಗಾದಿ ಗೌಡಸಾರಸ್ವತ ಋಗ್ವೇದಿ ಬ್ರಾಹ್ಮಣರು ಇವರಲಿ ವಾದಗೈವ ಕುವಾದಿಗಳ ಮನ- ಭೇದಿಸುತ ನಿಜವಾದ ಮಾರ್ಗವ ಸಾಧುಗಳಿಂದ ದೃಢವಾದ ಮಾತಿದು3 ಮೇಗರೆಡಂಭಮಾತಲ್ಲ ಧನಿಯ ಕು- ಗೊಂಬರೆ ಎಲ್ಲ ಸಂತಸ ಸಂಭ್ರಮದಿ ವೇದ್ಯಾಂಬುನಿಧಿಯಲಿ ತುಂಬಿರುವರೀ ಕುಂಭಿನಿಯೊಳು ಜ- ಸಂಬಡುವುದು ವಾಸಿಷ್ಠಗೋತ್ರಜ- ರೆಂಬ ವಿಪ್ರಕದಂಬಪೂಜ್ಯರು4 ರಂಭೆ : ಬಾಲೇ ನೀ ಪೇಳಿ ದಿನದ ಲೀಲೆಯೇನೆಂದೆನಗೆ ಆಲಯದೊಳಿದ್ದ ಜನಜಾಲವಿಂದೀ ನೆಲೆಗೆ1 ಮೇಳವಿಸುತ್ತ ಕೂಡಿರುವರು ಪೇಳೆಲೆ ಸುಶೀಲೆ ಮಹಾಲೀಲೆ2 ಕೇಳುವೆನರಿದಾಲಸ್ಯವ ತಾಳಬೇಡ ಸಖಿಯೇ ಲೀಲೆಯ ನಾನರಿಯೆ3 ಫಾಲೇಂದು ಕುಂದದ ವರ್ಣಕೋಲು ಚಾಮರಗಳ ನಲುಗಿಸಿಕೊಂಡು ಬಗ್ಗಿ ಪೇಳುವರು ಸ್ತೋತ್ರಗಳು4 ಚಂಡವೈಶ್ವಾನರನ ತೇಜಾಖಂಡದಿಂದೋರಂತೆ ಮಂಡಲೈದರೊಳಗೆ ಪ್ರಭೆಗೊಂಡಿಹುದು ಕಾಂತೆ5 ಪಾದುಕೆಯ ಮುಂದೆಯಿರಿಸಿ ಮೋದದಿಂದಿಕ್ಕೆಲದಿ ಆದಿನಾರಾಯಣ ಮದುಸೂದನನೆ ಮುದದಿ6 ಕಾದುಕೊಳ್ಳೆನುತ ಸ್ತುತಿಸಿ ಪಾದಕೆರಗುವರು ನಾದಿನಿ ಕೇಳಿದರ ಪರಿಯನೀ ದಯದಿಂದುಸುರು7 ಊರ್ವಶಿ :ಭಾವೇ ನೀ ಕೇಳೆ ಇದನು ತ್ರೈಲೋಕ್ಯ- ದೇವನಾಗಮನವೆಲ್ಲನೂ ದೀವಟಿಗೆ ಸೇವೆಯೆಂದು ಪೇಳುವರು ಭಾವುಕರು ಮನದೊಳಂದು1 ಸಾಯನವನು ಸುರಿದು ಸಾವಿರ ಸಾಲದು ಶ್ರೀಯರಸನ ಮಹಿಮೆಯರಿವದಾರಿಗಳವಲ್ಲ3 ದೈತ್ಯವಿನಾಶನ ಜಯಜಯ ಜಾಹ್ನವಿತಾತ ಜಯಜಯ ಜಗದಾತ ಆಶ್ರಿತ ಸುರಭೂಜ ತೋರುತ ಒಲಿದು4 * * * ವಾರೀಜನೇತ್ರೆ ಕಳ್ ಭೂರಿವಿಭವವನ್ನು ನೋಡೆ ತಂಗಿ ಭಕ್ತ- ರೋರಂತೆ ಬಂದು ಕರೆಯುವಾನಂದವ ನೋಡೆ ತಂಗಿ1 ಭಾವದಿ ನೀ ದಯಮಾಡೆಂದು ಪೇಳ್ದರು ನೋಡೆ ತಂಗಿ 2 ದೇವಕಾರುಣ್ಯ ಸುಭಾವದಿ ಶರಣರ್ಗೆ ನೋಡೆ ತಂಗಿ ಪ್ರತಿ- ಭಾವವ ತೋರಿ ಗೋಪುರ ಸೇವೆಗೊಂಡರು ನೋಡೆ ತಂಗಿ3 ಪಲ್ಲಂಕಿಯಲಿ ಭಕ್ತಸುಲಭವೇರುವನು ನೋಡೆ ತಂಗಿ ರಥ- ದಲ್ಲಿ ತಾನೇರುತ್ತ ಮೆಲ್ಲನೆ ಬರುವನು ನೋಡೆ ತಂಗಿ4 ಭೇರಿನಗಾರಿಮೃದಂಗೊಂದು ಕಡೆಯಲ್ಲಿ ನೋಡೆ ತಂಗಿ ರಥ ಮೌರಿ ಪಟಿಹ ತಂಬಟೆಯೊಂದು ಕಡೆಯಲ್ಲಿ ನೋಡೆ ತಂಗಿ5 ಸಾಲಿನೊಳೆಸೆವ ಬೊಂಬಾಳ ಹಿಲಾಲುವ ನೋಡೆ ತಂಗಿ ಜನ- ಜಾಲಗಳೆಲ್ಲರು ಮೇಳವಿಸಿರುವರು ನೋಡೆ ತಂಗಿ6 ಪಟ್ಟದರಸನಾಗಮವನ್ನು ಕಾಣುತ ನೋಡೆ ತಂಗಿ ತಮ್ಮ- ಪಟ್ಟವನು ಶೃಂಗರಿಸಿದರೇನೆಂಬೆ ನೋಡೆ ತಂಗಿ7 ಕಟ್ಟಿದ ಗೂಡುದೀಪದ ಚಮತ್ಕಾರ ನೋಡೆ ತಂಗಿ ಹೇಮ- ಬೆಟ್ಟವ ಇಳೆಗೆ ತಂದೊಟ್ಟಿಹರೆಂಬಂತೆ ನೋಡೆ ತಂಗಿ8 ನಿತ್ಯ ರರ್ತಿಯ ಸಲಿಸಿ ಪ್ರವರ್ತಕನಾದನು ನೋಡೆ ತಂಗಿ9 ಕಾಣಿಕೆಯಾರತಿಗಳನೆಲ್ಲ ಕೊಳ್ಳುತ ನೋಡೆ ತಂಗಿ ಬಂದ ಶ್ರೀನಿವಾಸನು ಭಕ್ತರ ಒಡನಾಡುತ್ತ ನೋಡೆ ತಂಗಿ10 ನೋಡೆ ತಂಗಿ ನಮ್ಮ ದೇವರು ಬಂದರೆಂದುರುತರ ತೋಷದಿ ನೋಡೆ ತಂಗಿ11 ಜೋಡಿಸಿ ಕೈಗಳ ಭಯದಿ ಬಗ್ಗಿ ನೋಡೆ ತಂಗಿ ದಯ- ಮಾಡೆಂದು ಹರಿಯನ್ನು ಬೇಡಿಕೊಂಡೊಯ್ದರು ನೋಡೆ ತಂಗಿ12
--------------
ತುಪಾಕಿ ವೆಂಕಟರಮಣಾಚಾರ್ಯ
ಋಣವ ಮಾಡಿದ ಪಾಪ ರುಜುವಾಗಲೀಸದುಹಣ ಹೊನ್ನಕೊಡೆ ಪುಣ್ಯಹೃದಯರು ಒಲಿದು ಪನಿತ್ಯ ಕರ್ಮವು ತಾನೆ ನಿಂತಿತು ಸೂತಕಸುತ್ತಿಕೊಂಡಿರೆ ಮನಸಿಗೆ ತೀರುವನಕಾ 1ರಾಮಾಯಣ ಪಾರಾಯಣ ನಿಂತಿತೂುೀ ಮಹಾಚಿಂತೆ ತಾನಿದಿರಿಡೆ ಬಲಿತೂ 2ಧನವ ಸಂಗ್ರ'ಸಲು ತಿರಿದುಕೊಂಬವನಲ್ಲಕಣುಗೆಡಿಸಲು ಬಂದ ಕಪಟ'ದಲ್ಲ 3ಪರಲೋಕ ಹಾನಿಯ ಭಯದಿಂದ ಬಂದೆನುಕರ'ಡಿದೆನ್ನನು ಕಾಯಬೇಕಿನ್ನೂ 4ನಿಷ್ಕøತಿುಲ್ಲದ ನೀಚ ಪಾತಕ'ದು'ಷ ಸಹಸ್ರದಿಂ ನಾಶವಾಗುವದು 5ುೀ ದುಃಖವಭಿಮಾನದಿಂ ಬಂದುದಿದನೀಗಬೀದಿಯೊಳರಸುವೆ ಬಿಡುವಂತೆ ಬೇಗ 6ದುಡ್ಡು ದುಗ್ಗಾಣಿಯಾದರು ಸಾಕು ಬೇಗದಿಅಡ್ಡಿಯ ಮಾಡದಪ್ಪಣೆಗೊಡಿ ದಯದಿ 7ಬೇಳುವೆಯನು ಮಾಡಿ ಬೆದರಿಸುವವನಲ್ಲಶ್ರೀಲಕ್ಷ್ಮೀಪತಿ ಬಲ್ಲ ಸದ್ಗುರು ಬಲ್ಲ8ಕಾಶಿಗೆ ಹೋಗಬೇಕಾಗಿದೆ ುೀ ಕೊಳೆನಾಶವಾಗದೆ ಗಂಗೆ ನನಗೆ ತೋರುವಳೆ 9ನೀಕರಿಸುವರಿಂದ ನಿರ್ವೇದ ದೊರಕಿತು ಹಾಳಾದುದುುೀ ಕಲುಷವದೆಂದಿಗಳಿವದೊ ತೊಳದು 10ಚಿಕ್ಕನಾಗಪುರದಿ ವಾಸುದೇವಾರ್ಯಗುರುಪಕ್ಕನಪ್ಪಣೆಯ ಕೊಟ್ಟ ಕಾರಣ ಬಂದೆ 11
--------------
ತಿಮ್ಮಪ್ಪದಾಸರು
ಎಂಟು ದಿನವಾಯಿತಲ್ಲೊ ಭಕ್ತ ನೆಂಟನ್ಯಾಕೆ ತಡವು ಮನೆಗೆ ಕರೆಸಯ್ಯ ಕರುಣವಿರಿಸಯ್ಯ ಪ. ಆವಲ್ಲಿ ಪೋದರು ನಿನ್ನ ಸೇವೆ ಮಾಳ್ಪ ಸುಖಕೆ ಸರಿಯಾ ಪಡೆಯದೆ ಎಲ್ಲೂ ತಡೆಯದೆ ಶ್ರೀವಲ್ಲಭ ನಿನ್ನ ಕಾಂ¨ ಭಾವನೆಯಿಂದೆನ್ನ ಮನಸು ತಿರುಗಿತು ಬಹಳ ಕರಗಿತು 1 ಯೋಗಿವರದ ನಿನ್ನ ಮೂರ್ತಿ ಬೇಗದಿಂದ ನೋಳ್ಪೆನೆಂದು ಯೋಚಿಸಿ ಮುಂದೆ ಸೂಚಿಸಿ ನಾಗೂರ ಪಟ್ಟಣವ ಬಿಟ್ಟು ಸಾಗಿ ಬರುವ ಸಮಯದಲ್ಲಿ ಆಶೆಯಾ ಪಾಶ ಸೂಸಿತು 2 ದೋಷಿಯೆಂದು ಗ್ರಹಿಸದೆ ಸ- ರ್ವಾಸೆ ಪೂರಿಸಖಿಳ ಜಗದೀಶನೆ ವೆಂಕಟೇಶನೆ ಶ್ರೀಶ ನಿನ್ನ ಕಡೆಗೆ ಕರೆಸಿ ನಿತ್ಯ ಸೇವೆ ಕೊಳ್ಳಯ್ಯ ಖಜ್ಜಬಿಲ್ಲಯ್ಯ 3
--------------
ತುಪಾಕಿ ವೆಂಕಟರಮಣಾಚಾರ್ಯ