ಒಟ್ಟು 444 ಕಡೆಗಳಲ್ಲಿ , 69 ದಾಸರು , 409 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವಚನದಲಿ ನಂಬನು ನರಭಾವ ಅವರೊಳು ಕಾಂಬನು ಕರಣ ತ್ರಯದಲಿ ಶುಂಭನು ಗುರು ಭಕ್ತ ನೆನಿಸದರೇನು ಮಾ 1 ಸರ್ವರೊಳು ಹರಿ ನೋಡದೇ ಗರ್ವದ ಗುಣಗಳೀಸಾಡದೆ ನಿಜ | ದರ್ವಿನೊಳು ಮನ ಕೂಡದೇ | ಭಾಗವತರೆನಿಸಿದರೇನು ಮಾ 2 ವಾಸನಿಯ ಬಲ ಕಡಿಯಾ ದೇವೆ | ಆಸೆಯಲಿ ಮನ ಜಡಿಯದೆ ನಿಜ | ದ್ಯಾಸದಂಡವ ಪಿಡಿಯದೆ ಸ | ನ್ಯಾಸಿಯೆನಿಸಿದರೇನು ಮಾ 3 ನುಡಿಯ ಬೀರುತ ಸಂತರಾಜನ | ರೊಡನೆ ಹಾಕುತ ಸಿಂತರಾ ತಮ್ಮ | ನಡತಿ ನೋಡಲು ಭ್ರಾಂತರಾ ತಾ | ಸಂತ ನೆನಿಸಿದರೇನು ಮಾ 4 ತಂದೆ ಮಹಿಪತಿ ಪಾದವಾ ಬೆರೆ | ಭವ | ಬಂಧ ಮಾಡದೇ ವಾತಾ | ಬಂದ ಜನಮಕಿದೇನು ಮಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗುರುವಿನಾ ಬಲಗೊಂಬೆ | ಪರಗತಿ ಪಡಕೊಂಬೆ | ಸಿರಿಯಾ | ಧರಿಯಾ | ಧೊರಿಯಾ | ಚರಿಯಾ | ಸಾರಿ ಬೀರಿ ತಾರಿಸುವ ಪಾರಾವಾರ ಮಹಿಮನಾ ಪ ಶುಭ ಚರಣಕೆರಗಿ | ಕೆಡ ಗುಣಗಳ ನೀಗಿ | ಇಡುವಾ | ತುಡುವಾ | ಮುಡುವಾ | ಕುಡುವಾ | ನುಡಿ ನುಡಿಗಳಲ್ಲಿ ಬಿಡದೇ ಅಡಿಗಡಿಗೆ ನೆನೆವುತಾ 1 ಹರಿಯಲ್ಲರೊಳಗಿರಿಸೀ | ಹಮ್ಮಮತೆಯನೆ ಬಿಡಿಸಿ | ದೋರಿ ದೋರಿ ಅರಿವೈರಿ ಬೇರೆ ತೋರಿಸಿದನಾ 2 ಮೂರ್ತಿ | ಆರವಾ | ಮುರವಾ | ಘನದಿರುವ್ಹಾ ಪರವಲಿಟ್ಟನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಗೋಪಾಲಕೃಷ್ಣ ಬಾರೊ ಗೋವಿಂದ ಗೋಪಾಲಕೃಷ್ಣ ಬಾರೊ ಪ. ಮಾಧವ ಗೋಪಿಯ ಕಂದ ಬಾರೊ ಅ.ಪ. ನವನೀತ ಚೋರ ಸುಂದರ ಮೂರುತಿ ಬಾ ಕೃಷ್ಣ ಸುಂದರ ಚಂದನ ಗಂಧ ಲೇಪಿತಾನಂದ ಅಂದದಿ ಮೋಹಾಕಾರ ಮುಕುಂದ 1 ಮುರಳೀಧರನೆ ಮುರಮರ್ಧನನೆ ಚಂದ್ರವಂಶನೆ ಬಾ ಕೃಷ್ಣ ಹರುಷವ ಬೀರಿ ಚರಣವ ತೋರಿ ವರಗೆಜ್ಜೆ ನಾದದೊಳು ಸುಂದರ 2 ಚಂದಿರ ಸದೃಶಾನಂದನೆ ಬಾ ಬಾ ಕುಂದರದನೆ ಬಾ ಶ್ರೀಕೃಷ್ಣ ಅಂದದ ಪದುಮಿಣಿವಲ್ಲಭ ಶ್ರೀ ಶಾ ಶ್ರೀ ಶ್ರೀನಿವಾಸನೆ ಬಾ ಗೋವಿಂದಾ 3
--------------
ಸರಸ್ವತಿ ಬಾಯಿ
ಗೋಪಾಲದಾಸರು ಕರದಾಗ ಬಾರದೇ ವೈದುಗ ಬಂದು ಬೋಧಿಸಿ ಮಾರ್ಗವ ತೋರಿಸಿ ಹೃದಯದಿ ಪಾದನಿಲ್ಲಿಸಿ ಮಂದನ ಪೋಷಿಸಿ ಭಂಗವ ಬಿಡಿಸುತಾ ಮಂಗಳ ಮೂರುತಿ ನಿನ್ನ ಮಹಿಮೆಗೆಣೆಗಾಣೆ ಧವಳ ಗುಣವಂತ ತಂದೆವರದಗೋಪಾಲವಿಠಲರೇಯನ ದಾಸನೆಂದೆನಿಸದೆಯನ್ನ 1 ವೈರಿ ಬನ್ನ ಭವ ಬನ್ನ ಪಡುತಿರೆ ಕಣ್ಣು ಕಾಣದೆ ಕರುಣವ ಬೀರುತ ಪಾಣಿಯ ಪಿಡಿದು ವೀಣಾವನಿತ್ತು ಗಾನವ ಪೇಳಿ ಗುಣವಂತನೆಂದೆನಿಸಿದೇ ಎನ್ನ ಅಣ್ಣಾ ಅಣ್ಣಾ ಭಾಗಣ್ಣ ಗಜಮುಖ ರೂಪದಿ ಬಂದು ಪಾಲಿಸಿದೈನಿನ್ನಾ ಕರುಣಾರಸಕೆಣೆಯುಂಟೆ ಯೆಣೆಯುಂಟೆ ನಿನ್ನ ದೇನಿಪರೊಳಗಿಟ್ಟುಶಿರಿಯರಮಣ ತಂದೆವರದಗೋಪಾಲನ ತೋರೋ 2 ನೂರಾರು ಸಾವಿರ ನಾರಿಯರೊಡಗೂಡಿ ಬೆಡಗು ಮಾಡೆ ನಾರಿಯಾಗಿ ನಿನ್ನಡಿಗಳ ಪೂಜಿಸಿ ಗರುಡನಂತೆ ನನ್ನ ಹೆಗಲೀನ ಕೂಡಿಸಿಕೊಂಡುತಿರುಗುವೆ ನೀತಿ ಕಪಿಯಂತೆ ನಿನ್ನ ಕಪ್ಪಾದಿ ವಲಿಸುವೆ ಕಮತವ ಮಾಡಿಸಿ ಮರ್ಮವ ಘಾಡಿಸಿ ಶರ್ಮವ ಗೂಡಿಸಿ ಚರ್ಮವ ತೊಡಿಸಿ ಕರ್ಮವ ಕೆಡಿಸಿಮೃಡನೊಡೆಯ ವಂದಿತ ತಂದೆವರದಗೋಪಾಲವಿಠಲನಡಿಗಳ ಧೇನಿಸುವಂತೆ ಮಾಡೋ 3 ಅಂಬರ ಭೋಜನೆ ಕಂಬುಕಂಧರನಿಂದ ಡಿಂಗರಪಾಲಿಪ ಡಿಂಬದಿ ಪೊಳೆಯುವಅಂಬಾರಮಣಸುತ ಭೀಮಾಂತರ್ಯಾಮಿ ತಂದೆವರದಗೋಪಾಲ ವಿಠಲನ ನಿಜ ಕೊಂಡಾ 4 ನಿಗಮ ನಿಧಿ ಕೃಷ್ಣಾಂತರ್ಯಾಮಿ ಲಕುಮಿ ಅರಸತಂದೆವರದಗೋಪಾಲವಿಠಲನ ವಾರಿಜದಲ್ಲಿ ತೋರೋ 5 ಜತೆ :ಆವಾಗ ಬಂದು ನೀ ಕಾವದಿರೇ ಸೇವಕನಾಗಲ್ಯಾಕೋ ಭಾವಜಪಿತ ತಂದೆವರದಗೋಪಾಲವಿಠಲರೇಯನ ದೂತ
--------------
ತಂದೆವರದಗೋಪಾಲವಿಠಲರು
ಗೋಪಿ ಇವನು ನಿನ್ನಾ ಪ ಜಗವ ನಿರ್ಮಿಸಿ ಪಾಲಿಸಿ ಅಳಿಸುವ ಅಗಣಿತ ಸುಗುಣಾ ಭರಣನೆ ಇವನು ಅ.ಪ ಬೆಣ್ಣೆಯ ಕದ್ದನು ಸಣ್ಣವನಿಹ ಬಹು ಚಿಣ್ಣರ ಕೂಡುತ ಗೋಗಣ ಕಾಯುವ ಮನ್ಮನ ಪುಥ್ಥಳಿ ಕಳಿಸುವದಾಗದು ಎನ್ನುವ ನುಡಿಗಳ ಬದಿಗಿಡು ತಾಯಿ ಉಣ್ಣುತ ಉಣ್ಣುತ ಮೊಲೆಯನು ಕೊಂದಿಹ ಉನ್ನತ ರಕ್ಕಸಿ ಪೂತಣಿಯನ್ನಿವ ಮಣ್ಣನು ಕಂಡರು ಕಂಸನದೂತರು ಪೂರ್ಣಾನಂದನು ಸರಿ ಇವನಮ್ಮ 1 ಜಾರ ಚೋರ ಸುಕುಮಾರನು ಸುಂದರ ನಾರೇರ ವಲಿಸಿ ಸೇರಿದ ನಿಶಿಯಲಿ ಪೋರನೆಂಬ ಮನ ದೂರವಗೈದುಗ ಭೀರ ಮಹಿಮ ಜಗ ಸಾರನೆಂದರಿಯೆ ಭಾರಿಗಿರಿಯನೆತ್ತಿ ಊರಿಗೆ ಊರನು ಸೇರಿಸಿ ಪೊರೆದಿಹಪಾರಮಹಿಮ ಜಂ ಭಾರಿದರ್ಪಹರ ಪೋರನೆ ಬಿಡುಬಿಡು ನಿಗಮ ಸಂಚಾರನೆ ಖರೆಯೆ 2 ಕಾಲ್ಗಳು ಸೋಕಲು ಶಕಟನು ಬಿದ್ದನು ಶೀಳುತ ಕೊಕ್ಕನು ಬಕನಂ ಕೊಂದನು ಕಾಳಿಯ ತುಳಿಯುತ ಗರ್ವವ ನಿಳಿಸಿದ ಲೀಲಾಜಾಲದಿ ಜ್ವಾಲೆಯ ನುಂಗಿದ ಬಾಲರು ಕೇಳಲು ಆಲಯತೋರಿದ ಪಾಲಿಸಿ ವರುಣನ ತಂದೆಯ ಕಂದನ ಲೋಲನೆ ಸರಿ ಜಗಮೂಲನು ಕೇಳೆ 3 ನೀರಜ ನಾಭಗೆ ಗೊಲ್ಲತಿಯ ಗಣ ಬೀರಲ್ ಸಾಧ್ಯವೆ ಮೋಹವ ನೆಂದಿಗು ಶ್ರೀರತಿದಾಯಕ ಕೊಳ್ಳುವನೇ ರತಿ ಭವ ತಾರಕ ಶುಭ ಶೃಂಗಾರ ಪೂರ್ಣ ಪರಿವಾರದಭೀಷ್ಠವ ಖರೆ ಭೂರಿದಯಾಮಯ ನಾರಾಯಣನಿವ ದೋಷ ವಿದೂರ 4 ಮೆಲ್ಲಗೆ ಬಾಯೊಳು ಎಲ್ಲವ ತೋರಿದ ಮಲ್ಲನು ಸರ್ವರ ವಲ್ಲಭ ಸಿದ್ಧವು ಗೊಲ್ಲನ ವೇಷದಿ ಇಲ್ಲಿಹನಮ್ಮ ಇಲ್ಲವೆ ಸಮರಿವಗೆಲ್ಲಿಯ ಸತ್ಯ ಮಲ್ಲರ ಮರ್ದಿಸಿ ಕೊಲ್ಲುತ ಕಂಸನ ನಿಲ್ಲಿಸಿ ಧರ್ಮವ ಕಾಯುವ ನಮ್ಮ ಬಲ್ಲಿದ “ಶ್ರೀಕೃಷ್ಣವಿಠಲ” ಬೇಗನೆ ನಿಲ್ಲಿಸಿ ಕೊಳ್ಳದೆ ಕಳುಹೇ ತಾಯಿ 5
--------------
ಕೃಷ್ಣವಿಠಲದಾಸರು
ಘನನಂದನ ರಾಮಚಂದ್ರ ಪ ತಂದೆ ತಾಯಿ ಬಂಧು ನೀನು ಸಂದ ಯೆನ್ನ ಮಿತ್ರನೀನು ಕಂದನಿಗಾನಂದ ಬೀರಿ ಅಂದವಾದ ಪಾದತೋರು1 ಸ್ವಾಮಿ ನಿನ್ನ ನಾಮವನ್ನು ನೇಮದಿಂದ ಧ್ಯಾನಿಪೆನ್ನ ಪ್ರೇಮದಿಂದ ಕ್ಷೇಮ ಕೊಟ್ಟು ಸಾಮಗಾನಗೈಸು ವಿಷ್ಣು 2 ಅಗ್ರಹಾರಪಾಲಾಧೀಶ ಅಗ್ರಪೂಜೆಗೊಂಬ ಶ್ರೀಶ ಸುಗ್ರೀವನ್ನ ಪೊರೆದ ಉಗ್ರದೈತ್ಯನಾಶ ಹೆಜ್ಜಾಜೀಶ 3
--------------
ಶಾಮಶರ್ಮರು
ಚಾರು ಚರಣವ ಸಾರಿದೆ ಶರಣ ಮಂದಾರ ಕರುಣವ ಬೀರಿ ಭವವನಧಿ ತಾರಿಸು ತವಕದಿ ಸೂರಿ ಸುಧೀಂದ್ರ ಕುಮಾರ ಉದಾರ ಪ ಪಾದ ವನರುಹ ಧ್ಯಾನ ಪ್ರಣವನ ಸ್ತವನ ಅರ್ಚನೆ ಮಾಳ್ಪ ನಾನಾ ಜನರ ವಾಂಛಿತವೀವಗುಣ ಪೂರ್ಣ ಜ್ಞಾನ ಧನಪ ಪಾಲಿಸೆನಗೀಕ್ಷಣ ನಿನ್ನಾಧೀನ ಮನುಜನ ನೀ ಪ್ರತಿದಿನದಿ ದಣಿಸುವುದು ಘನವೆ ಗುರುವೆ ಪಾವನತರ ಚರಿತ 1 ಪಾದ ಕೀಲಾಲಜ ಮಧುಪಾ ಬಾಲಕನ ಬಿನ್ನಪವ ಲಾಲಿಸೋ ಮುನಿಪ ತಾಳಲಾರೆನೊ ತಾಪತ್ರಯದ ಸಂತಾಪ ಕೇಳೋವಿಮಲಜ್ಞಾನ ಶೀಲ ಸ್ವರೂಪ ಭೂಲಲನಾಧವ ಕೋಲನಂದನಾ ಕೂಲಗವರ ಮಂತ್ರಾಲಯ ನಿಲಯ 2 ಕಲಿಕಲ್ಮಷವಿದೂರ ಕುಜನ ಕುಠರಾ ನಳಿನಾಕ್ಷ ವಿಮಲ ಶ್ರೀ ತುಲಸಿಯ ಹಾರ ಗಳ ಸುಶೋಭಿತ ಕಮಂಡಲ ದಂಡಧರಾ ಜಲಧಿ ವಿಹಾರಾ ಸುಲಲಿತ ಕರುಣಾಂಬುಧಿಯೆ ಜಗನ್ನಾಥ ವಿ ಠಲನೊಲಿಮೆಯ ಪಡೆದಿಳೆಯೊಳು ಮೆರೆದಾ 3
--------------
ಜಗನ್ನಾಥದಾಸರು
ಚೆನ್ನಕೇಶವದೇವರಾಯಇನ್ನು ಸುಖಿಪೆನೆಂತೆನಗೆ ಅನ್ಯಥಾ ಗತಿಯಿಲ್ಲ ಪ. ಅನುದಿನ ಸಂದಣಿಸೆ 1 ಉಡುವಾಸೆ ನುಡಿವಾಸೆ ಬೇಡುವಾಸೆ ಕೊಡುವಾಸೆಒಡಲ ತುಂಬಬೇಕೆಂಬ ಆಸೆಕೊಡದವನ ಬಡಿದು ಜಡಿವಾಸೆ ಬಿಡದಿರಲು 2 ಹಯವದನನೆ ದೇವ ನಿನ್ನ ನೆನೆಯದಿದ್ದೀಮನಕೆಭಯವೆಲ್ಲಿಹುದು ಜಗನ್ನಾಥ ನಿನ್ನದಯವನೆ ಬೀರಿ ನಿರ್ದಯನನ್ನುದ್ಧರಿಸೊ 3
--------------
ವಾದಿರಾಜ
ಚೇತರಿಸಾಲೊಲ್ಲೆಯಾ ಮನಪಾತಕ ನಿದ್ರೆ ಭರದಿಂ ಪ ಮಲಮಯ ಕಾಯದಾ ಹೊಲಸು ಹಸಿವಿತ್ರಿಷಿ ಛಲಮದ ರÉೂೀಗಗಳಾ ಮಲಗುವರೆ ಮಹನೀಯರ ತೆರದಿ 1 ದಾರಾತನು ಬಲಹೀರುತ ಮಾಯವ ಬೀರುತಲಾತ್ಮಜರು ದಾರಿದ್ರ್ಯದ ದಾವಾನಳ ಸುಡುತಿರೆ ನಾರದರೋಲ್ ನಿಶ್ಚಿಂತನಾಗಿ 2 ಶಿರಿಗೋವಿಂದ ವಿಠಲ ಮೊರೆ ಪೊಕ್ಕರೆ ಪೊರೆಯುವನೆಂದು ಅಭಯಾ ವರಭುಜಗಳು ನಾಭಾಯತ್ತಿನಿಂದಿರಲು ಸುರ ಅರಿಗಳ ತೆರೆ ಹೊರಳೂರಗದಾ 3
--------------
ಅಸ್ಕಿಹಾಳ ಗೋವಿಂದ
ಛಳಿಸದಿರು ಚಂಡಿ ತನುವೆ ನೀನುಒಳಗಾಗದೊರಟುತನವೆ ತರವೆ ಪಗರ್ಭವಾಸವಗಳಿಸಿದೆ ಹಾಗೆ ನೀನರ್ಭಕತ್ವದಲಾಡಿದೆ ಬಿಡದೆನಿರ್ಭಯದಿ ನೀ ಬದುಕಿದೆ ಭೋಗದಲಿದುರ್ಭಗರ ದಾರಿಗೊಲಿದೆ ನಲಿದೆ 1ಕಾಮಾಂಧಕಾರಕೆಳೆದೆ ನನ್ನ ನಿಷ್ಕಾಮದಲಿ ನಿಲಿಲೀಸದೆ ಕಳದೆನೇಮಕ್ಕೆ ನೀನಲಸಿದೆ ಶೀತೋಷ್ಣಭೀಮಕ್ಕೆ ನೀ ಬೆದರಿದೆ ಬರಿದೆ 2ಕಾಲಗಳ ಬಹು ಕಳಸಿದೆ ವ್ಯರ್ಥದಲಿಶ್ರೀಲೋಲನನುಸರಿಸದೇ ಹೋದೆಮೂಲವನೆವರೆ ಮಾಡಿದೆ ದೋಷಗಳಕೀಲುಗಳಿಗಳಿಕಾಲ್ನೀಡಿದೆ ಜಡಿದೆ 3ಮನವೀಗ ಮಾಡಿತಿನಿತಾ ನಾನಿದಕೆಮನೆ ಮಾತ್ರವಾಗೆ ಮಾತನಿಡುತಾತನುವಿನಲಿ ತಪ್ಪಿಡಿಯುತಾ ಯಾಕೆ ನೀನೆನುವೆಯನೆ ನೀನೆ ಚಿತ್ತವ್ರಾತಾ 4ಮನ ನೀನೆ ನೀನೆ ಮನವೂ ಕ್ರಿಯೆಯಮನ ಮಾಡೆ ಮೂಡ್ದೆತನುವೂ ಘನವೂನೆನೆಯಲೆರಡಿಲ್ಲ ನೀವು ಏಕತ್ವವೆನುತೆಂದೆನಿರೆ ಬಂಧವೂ ದಿಟವೂ 5ಕಾರಣವೆ ಮನವಾದರೆ ಅದರೊಡನೆಹೋರುವೆನು ನಾನು ಹೆದರೆನದರೆತೋರೆ ನೀ ಮುಂದೆ ಬೇರೆ ಬಂಧನವೂಬೀರಿತಿದು ನೀ ಕಯ್ಯಾರೆ ತಾರೆ 6ನೀ ಬಾರದಿರುವೆಯಲ್ಲ ುೀಮಾತನಾ ಬಾಯಲೆನ್ನೆನಲ್ಲಾ ಸೊಲ್ಲಾಆ ಬಗೆಯ ಮೂಡಿತಿಲ್ಲ ಇದಿರಾಗಿನೀ ಬಂದು ನಿಲಲು ಸಲ್ಲಾ ಹೊಲ್ಲಾ 7ನನಗುಂಟು ಮನಸಿಗುಂಟು ವ್ಯವಹಾರನಿನಗಾಗಬಾರದಂಟೂ ನಂಟುಜನಿಸಿಬರೆ ಬಂತುಗಂಟು ಆವರಣವೆನಗಾುತು ಪದರವೆಂಟೂ ಬಂಟೂ 8ಅನುಮಾನವಿಲ್ಲವಿಸಿದಕೆ ಪ್ರತ್ಯಕ್ಷವನುಭವಿಸಿ ಪೇಳ್ದೆನದಕೆ ಅಳುಕೆಜಿನುಗದಿರು ಮುಂದೆ ಜೋಕೆ ಹರಿಯಂಘಿü್ರಯನುಸರಿಸದಂದವೇಕೆ ಬೇಕೆ 9ಹರಿಪಾದಪದ್ಮವನ್ನು ನಾನುಬೆರೆವೆ ನೀ ಬಳಲಿಕೆಯನೂ ುನ್ನೂತರಬೇಡ ತಥ್ಯವನ್ನು ಪಡೆವದಕೆಬರೆ ಮುಂದೆ ಬಹುಮಿತ್ರನೂ ನೀನು 10ಶರೀರವಿರೆ ಶ್ರಮವು ನಿನಗೆ ಜನ್ಮಗಳಧರಿಸುತ್ತ ದಣಿವು ನಿನಗೆ ಹೀಗೆಸರಿಯಾಯ್ತು ದುಃಖ ನಮಗೆ ಇದಕಂಡುಇರುವ ಬಗೆ ವಿಶ್ವದೊಳಗೆ ಹೇಗೆ 11ಅದರಿಂದ ನೀನು ನಾನು ಒಂದಾಗಿಹುದುಗಲಾದಿಯನೀಶನೂ ತಾನುಪದವಿಯನು ಪಾಲಿಸುವನು ಬಳಿಕಲಿನ್ನುದುಸುವಕಷ್ಟಗಳನೂ ಕೊಡನೂ 12ಬರುವದಾನಂದ ನಮಗೆ ತಿರುಪತಿಯವರದ ವೆಂಕಟರಮಣಗೆ ಎರಗೆಭರಿತಾತ್ಮಗಾವು ಹೊರಗೆ ಹೀಗೆ ನಾವಿರಲುಂಟು ದೇವನೊಳಗೆ ಸಲುಗೆ 13ಕಂ||ಛಂದಾನುವೃತ್ತಿ ಮೂರ್ಖರಿಗೆಂದಾಡಿದ ನುಡಿಯು ಸತ್ಯವಾುತೀ ದೇಹವುಮುಂದೊರದೆ ಪೇಳಲುತ್ತರನೀಂದೊಡಬಡಿಸುತ್ತ ಕೇಳಿಕೊಳುತಿಹದೊಲವಿಂ
--------------
ತಿಮ್ಮಪ್ಪದಾಸರು
ಜನನಿ ಪಾಲಿಸೆ ಶುಭಾಂಗಿ ಸಲೆ ದಯದಿ ವಲಿಸುತಲಿ ಪಾಲಾಬ್ಧಿ ಬಾಲೆ ಶೀಲೆ ಪ ವಾರಿಜಾರೊ ಸಹೋದರಿಯೆ | ಮೂರು ಭುವನೋದ್ಧಾರಿ ಚಾರುಗಾತ್ರಿ ಶ್ರೀರಮಣಿ | ದೂರ ನೋಡದಿ ಬಾರೆ ಮನೆಗೆ 1 ದಾತೆ ಖ್ಯಾತೆ ಮಾತೆ | ಸುಜನೋಪಕಾರಿ ಪಾವನಿ ಪ್ರೀತೆ ಸದಯೆ 2 ಸ್ತೋಮವಂದಿತೆ ತ್ರಿಗುಣಮಾನಿ ಭಾಮೆ ಭಾಗ್ಯದಾಯಕಿಯೆ ಪ್ರೇಮವಾರಧಿ ಬೀರು ದಯವ 3
--------------
ಶಾಮಸುಂದರ ವಿಠಲ
ಜಯ ಜಯ ಮಂಗಳಜಯ ಮಂಗಳ ಸುಂದರಿ ಶಾಂಭವಿಗೆ ಪ ಕಮಲ ಮುಖಿಯಳೆಹೊಳೆವ ಮುತ್ತಿನ ವಾಲೆಯಳೇನಳಿನ ಮುಖಿಯರ ನಡುವೆ ಕುಳಿತುಥಳ ಥಳ ಹೊಳೆಯುವಳೇಒಳಹೊರಗೆ ತನ್ನ ಪ್ರಭೆಯನು ತೋರಿನೋಡಿ ಓಲಾಡಿ ತಾ ನಗುವವಳೇ 1 ಪಂಚರತ್ನದಾ ಪದಕವನಿಟ್ಟು ಪದ್ಮಾಸನದಲ್ಲಿ ಕುಳಿತಿಹಳೇಮಿಂಚುವ ಮೂಗುತಿ ಮೂಗಲಿ ಹೊಳೆಯುತಮಿಗಿಲಾದಾಭರಣವ ಧರಿಸಿಹಳೇಅಂಚು ರಂಗಿನ ಸೀರೆಯನುಟ್ಟುಅನಂತ ರೂಪವ ತೋರಿಹಳೇಅಂಚೆ ನಡೆಯಲಿ ನಡೆಯುತ ನಲಿಯುತಸದಾ ಮತ್ತಳಾಗಿರುವವಳೇ2 ರತ್ನದ ಉಡಿದಾರ ಚಿನ್ನದ ಚಿಂತಾಕಹೊನ್ನಿನ ಡಾಬನು ತೊಟ್ಟಿಹಳೇಎಡೆ ಎಡೆಗೆ ತಾ ಧರಿಸಿಹಳೇಸಣ್ಣ ಬಣ್ಣದ ಕುಪ್ಪಸ ತೊಟ್ಟುಮುಗುಳ್ನಗೆ ಬೀರುತ ಕುಳಿತಿಹಳೇಧನುರ್ಬಾಣ ಪಾಶವ ಕೈಯಲಿ ಅಂಕುಶಆಯುಧ ಪಿಡಿದಿಹಳೇ 3 ದುಂಡು ಕೈಯವಳೇ ಸುಂದರ ಕಾಯಳೇಚಂಡ ಮುಂಡ ಸಂಹಾರಕಳೇಮಾಂಡಲಿಕಳೇ ಮಹದ್ಭೂತಳೇಮಹಾಯೋಗಿ ವಿಲಾಸಳೇದಂಡಿ ಕಿರೀಟಳೇ ದಂಡೆಯ ಮುಡಿದಿಹಗೊಂಡೆಯಂದೊಲಿದಾ ಜಡೆಯವಳೇಹಿಂಡು ಹಿಂಡಾದ ದೈತ್ಯರನೆಲ್ಲರ ಖಂಡಿಸಿದೇವಿ ತಾ ಕೊಂದಿಹಳೇ 4 ಆದಿರಹಿತಳೇ ಅಧ್ವಯ ರೂಪಳೇಅನಂತ ಕೋಟಿ ಪ್ರಭಾರೂಪಳೆಶುದ್ಧ ಬುದ್ಧಳೇ ನಿತ್ಯಮುಕ್ತಳೇಚಿದಾನಂದ ರೂಪಳೇಸದ್ಯೋಜಾತಳೇ ಸರ್ವಾತೀತಳೆಸಿದ್ಧ ಪರ್ವತ ಬಗಳೇಶುದ್ಧಾದ್ವೈತಳೆ ಸುಷುಮ್ನನಾಳಳೆಸೂಕ್ಷ್ಮವೆನಿಸುವಳೇ 5
--------------
ಚಿದಾನಂದ ಅವಧೂತರು
ಜಯ ಜಯಾ ದೇವ ದೇವಾ ಮಾರ್ತಾಂಡ ಭೈರವಾ ದಯದಿಂದ ಪಾಲಸೆನ್ನಾ ಭಕ್ತರನುದಿನಕಾವಾ ಪ ಶರಣರ ಮೊರೆಯ ಕೇಳಿ | ಶಿವ ಅವತಾರವ ತಾಳಿ ಭವರೂಪಮಣಿಮಲ್ಲನಾ | ಮರ್ಧಿಸಿದೆ ತನುಶೀಳಿ 1 ವಿವೇಕಹಯವನೇರಿ | ಭೋಧನಾಸ್ತ್ರವನು ದೋರಿ ಅವಗುಣ ಬಲಮುರಿದೇ | ಜಗಕಭಯವ ಬೀರಿ 2 ಮ್ಯಾಲಕರದಿಂದ ಉಘೇ | ಯನ್ನಲು ಕೂಗಿ 3 ಘನಗುರು ಮಹಿಮಪತಿ | ಸುತ ಪ್ರಭು ಮಾಪತಿ ಮನದೊಳು ಜ್ಞಾನ ದೀಪಾ | ದಿಂದಬೆಳಗುವೆ ಆರತಿ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯಜಯವೆನ್ನಿರಯ್ಯ ಜ್ಯೋತಿರ್ಮಯಗೆ ಜಯಜಯವೆನ್ನಿರೊ ಜಯಜಯವೆನ್ನಿರೊ ಧ್ರುವ ಕಂಗಳದೆರಸಿ ಅಂತರಂಗದೋರಿದವಗೆ ಮುಂಗಡÀಲೆ ಇದ್ದು ಸುಸಂಗದೋರಿದವಗೆ ಹಿಂಗಿಸೆನ್ನ ಭವಭಯ ಭಂಗಮಾಡಿದವಗೆ ಮಂಗಳಾತ್ಮಕನ ಸಂಗಸುಖ ಬೀರಿದವಗೆ 1 ಆರು ಅರಿಯದ ವಸ್ತು ಸಾರಿದೋರಿದವಗೆ ಶಿರದಲಿ ಕರವಿಟ್ಟು ಕರುಣಿಸಿದವಗೆ ಮೂರುಗುಣಕೆ ಮೀರಿದ ತಾರಕ ಗುರುವಿಗೆ ಸಾರವಾಡದಲಿ ನಿಂದು ಪಾರದೋರಿದವಗೆ 2 ಸೋಹ್ಯ ಸೊನ್ನೆಯದೋರಿಸಿನ್ನು ಸಾಹ್ಯ ಮಾಡಿದವಗೆ ಗುಹ್ಯ ಗುರುತ ತೋರಿದ ಗುರುಮೂರ್ತಿಗೆ ಕೈಪಿಡಿದು ಮಹಿಪತಿಗೆ ದಯಮಾಡಿದವಗೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯದೇವ ಜಯದೇವ ಜಯರಾಮಲಿಂಗಾ ಜಯಜಯವೆಂದು ಬೆಳಗುವೆ ಆರತಿ ಸುರತುಂಗಾ ಪ ಸ್ವಾನಂದದ ನಿಜಕಾಶೀಪುರದಿಂದ ಅತ್ಯರಳಿ ನಾನಾಸ್ಥಳಗಳ ನೋಡುತ ಬಂದು ನೀತೀರ್ಥದಲಿ ದೀನೋದ್ದಾರ ಕಾಪಾಪನಾಶನಿ ಹರಿಸುತಲಿ ಖೂನವ ತೋರಿದೆ ಓಂಕಾರೇಶ್ವರನೆನಿಸುತಲಿ 1 ಕಾಲ ಕೆರಾಘವಸುಖದರುಕ್ಷಣಲೆಂದು ತಳಿಯೊಳುಖ್ಯಾತಿಗೆ ಬಂದು ರಾಮೇಶ್ವರನೆಂದು ನಲಿದರುಗಿರಿಜಾನಂದಿಸರ್ವದೇವರು ಬಂದು ಸಲುಹುವೆ ಭಕ್ಷರಿಗಿಷ್ಟಾರ್ಥವ ನೀಡುತಲಿಂದು 2 ನಿನ್ನಯ ಮಹಿಮೆಯ ಹೊಗಳಲು ಮನುಜರಿಗಳವಲ್ಲಾ ಮುನ್ನಾಭರಣವ ಆಗಿಹಶಶಿನೇತಾಬಲ್ಲಾ ಎನ್ನೊಳು ಬೀರುತರಕ್ಷಿಸುಘನ ತಾರಕನೊಲ್ಲಾ ಸನ್ನುತ ಮಹಿಪತಿ ನರದನ ಪ್ರಭು ಪಾರ್ವತಿನಲ್ಲಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು