ಒಟ್ಟು 268 ಕಡೆಗಳಲ್ಲಿ , 35 ದಾಸರು , 108 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತುರುಕರು ಕರೆದರೆ ಉಣಬಹುದಣ್ಣ |ತುರುಕರು ಕರೆದರೆ ಉಣಬಹುದು .......... ಪ.ಕರ ಕರೆ ಚಂಚಲ ಮಾಡದಿರಣ್ಣ |ತುರುಕರು ಕರೆದರೆ ಉಣಬಹುದು ಅಪತುರುಕರುವಿಂದ ಮುಟ್ಟು ಮುಡಚಟ್ಟು ಹೋಹುದು |ತುರುಕರುವಿಂದ ಹೋಹದು ಎಂಜಲವು ||ತುರುಕರು ಕಂಡರೆಸರಕನೆ ಏಳಬೇಕು |ತುರುಕರುವಿನ ಮಂತ್ರ ಜಪಿಸಬೇಕಣ್ಣ.............. 1ತುರುಕರುವಿಂದ ಸ್ವರ್ಗ ಸ್ವಾಧೀನವಾಹುದು |ತುರುಕರುವಿಂದ ನರಕ ದೂರಪ್ಪುದು ||ತುರುಕರು ಕೂದಲ ತುರುಬಿಗೆ ಸುತ್ತಿಕೊಂಡು |ಗರತಿಯರೆಲ್ಲ ಮುತ್ತೈದೆಯರಣ್ಣ.......... 2ತುರುಕರುವಿನ ನೀರೆರಕೊಂಡ ನಮ್ಮ ದೇವ |ಉರವಕೊಂಡ ನೀರೆಲ್ಲ ಸನಕಾದಿಗೆ ||ಬೆರಕೆಯ ಮಾಡಿದ ಪುರಂದರವಿಠಲ |ಅರಿಕೆಯ ಮಾಡಿದ ಹರಿದಾಸರಿಗೆಲ್ಲ......... 3
--------------
ಪುರಂದರದಾಸರು
ನಗಲುಬಹುದು ನಗಲುಬಹುದುನಗು ನಗು ರಂಗಯ್ಯಜಗದ ಮಾತು ಅ‌ಘದ ಧಾತುಬಗೆಯನರಿತು ಮುಗಳುನಗೆಯ ಪ.ಒರೆದು ಒರೆದು ಭಾರತದರ್ಥಅರಿದುಅರಿದುವರಭಾಗವತಪರಿಯ ಪರಿಯ ಪುರಾಣಶ್ರ್ರುತಿಯಪಾರಾಯಣ ಮಾಡಿ ಕುರುಡಬಧಿರನರರ ತೆರದಿಅರಹುಮರಹುಬೆರೆತು ಬೆರೆತು ತರತಮಿಲ್ಲದೆಹರಿಹರಜರು ಬೇರೆಬೇರಿಲ್ಲೆಂಬಪರಮಪಾತಕರಿರವ ನೋಡಿ 1ಮಕ್ಕಳ ಮಡದೇರಕ್ಕರ ಬಡಿಸಿರೊಕ್ಕದ ಮದದಿ ಸೊಕ್ಕಿ ಸಜ್ಜನರಲೆಕ್ಕಿಸದವಗೆ ರಕ್ಕಸರಂತೆನಿಕ್ಕರ ನುಡಿದು ಕಕ್ಕಸದಿಂದಪುಕ್ಕಟೆ ಪುಣ್ಯದ ಲೆಕ್ಕವ ಕಳೆದುಘಕ್ಕನೆ ಜವನೋರಿಕ್ಕಿದ ಬಲೆಗೆಸಿಕ್ಕಿ ಬಳಲುತ ನರ್ಕವನುಂಬಮೂರ್ಖರ ತಾಮಸಮುಖ್ಯರ ನೋಡಿ 2ಸುಂದೋಪಸುಂದ ಜಲಂಧರ ಕೀಚಕಕಂದರದಶಕ ಸೈಂಧವ ಜಟಾದ್ಯರಂದು ಪರಸ್ತ್ರೀಯ ಸೌಂದರ್ಯಕ್ಕೆ ಮತಿಗುಂದಿ ಲಯವಾದರೆಂದುಕೇಳಿಇಂದುಮುಖಿಯರ ಚಂದಕೆ ಹುಚ್ಚಿಟ್ಟುಕಂದರ್ಪವಿಶಿಖವೃಂದ ವಶಾಗಿ ನೂರೊಂದುಕುಲ ಯಮಮಂದಿರ ಹೊಂದಿಪಮಂದರಮದೋನ್ಮತ್ತಾಂಧರ ನೋಡಿ3ಸುರರ ಸಂಪದ ಪರಮಪದಕೆಕಾರಣವಾಗಿರೆ ಸುರೇತರರೆಲ್ಲಇರುಳೆ ಹಗಲೆ ಸೈರಿಸಲಾರದೆಒರಗಿಹೋದ ವಿವರಕೇಳಿದುರುಳಕೌರವರ್ವರ ಪಾಂಡವರಸಿರಿತಮ್ಮದೆಂದ್ಹುರಿದು ಹೋಗಿರೆಪರರ ದ್ರವ್ಯಕ್ಕೆ ಮರುಗಿ ಬಯಸಿನರರು ಕೆಡುವ ಪರಿಯ ನೋಡಿ 4ಪ್ರತಿದಿನ ನಿನ್ನ ಪ್ರತಿಮ ಪೂಜೆ ಸದ್ವ್ರತವ ಮಾಡಿ ಸತ್ಕಥೆಯ ಶ್ರೀಮಧ್ವಮತ ಮಹಿಮೆಯನತಿಕ್ರಮಿಸಿ ಕುತ್ಸಿತವೆನಿಸುವ ಪಥದಲಿಪತಿತರಾಗಿ ಸದ್ಗತಿಯ ಕಾಣದಚತುರ ಪರಿಯ ಅಮಿತ ಭಕ್ಷಕರಸ್ಥಿತಿಯರಿತು ಮಾನಾಥ ಪ್ರಸನ್ವೆಂಕಟಪತಿಯೆ ನೀ ಮಂದಸ್ಮಿತದಲಿ 5
--------------
ಪ್ರಸನ್ನವೆಂಕಟದಾಸರು
ಪ್ರಜೋತ್ಪತ್ತಿ ಸಂವತ್ಸರ ಸ್ತೋತ್ರ148ರಾಜ ರಾಜೇಶ್ವರಗೆ ರಾಜರಾಜೇಶ್ವರಿ ಪತಿಗೆರಾಜೀವಭವಪಿತಗೆ ಶರಣು ನಮೋ ಶ್ರೀಪದ್ಮನಾಭನಿಗೆಪಪ್ರಭವಾದಿ ಷಷ್ಠಿ ಸಂವತ್ಸರದಿ ಪ್ರಾಬಲ್ಯ ಪೆಚ್ಚಿವುದು ಈ ವರುಷಸುಪ್ರಜೋತ್ಪತ್ತಿ sಸಾಧು ಕ್ಷೇಮಕರ ಯೋಜನೆಗಳಿಗೆ ಸುಸಂಸ್ಕøತರುಪ್ರಾರಂಭಿಸುವುದಕೆ ಅನುಕೂಲ ಅಧಿಕಾರವರ್ಗವುಈ ರೀತಿ ತಿಳಿವುದು 1ಸಂವತ್ಸರ ರಾಜ ಸೂರ್ಯ ಮಂತ್ರಿಯೂ ಸಹ ತಂದತರ್ಯಾಮಿಸೂರಿಪ್ರಾಪ್ಯಘೃಣಿಯುಸರ್ವವಿಧದಲ್ಲು ದಯೆ ಪಾಲಿಸುವನವನಾಯಕರೊಳು ಸಹ ಇದ್ದುಸರ್ವೇಶ ಶ್ರೀಪ ಪದ್ಮನಾಭನು ಸ್ಮರಿಸುವವರ ಸುರಧೇನುವು 2ಸುಖಪೂರ್ಣ ಚಿನ್ಮಯನು ನಿತ್ಯತೃಪ್ತನುಪಜÕನ್ಯನೊಳುಇದ್ದು ಮಳೆಗರೆವಶ್ರೀಹರಿ ಅರ್ಕವಿಧು ಗ್ರಹನಕ್ಷತ್ರಗಳೊಳ್ಇದ್ದು ಜ್ಯೋತಿಹರಿಬೆಳಕುಕೊಡುವ ಮಕ್ಕಳು ಮೊಮ್ಮಕ್ಕಳು ಸುಖವೀವ ಶ್ರೀರಮೇಶನುವೇದನಾಯಕಿ ಎಂಬ ಉಮೆಯರಸನ ಸಂಗಮೇಶ್ವರೊಳಿದ್ದು 3ಸರ್ವವಾಂಛಿತವೀವ ಸರ್ವಸ್ಥ ಲಕ್ಷ್ಮೀರಮಣ ಸರ್ವೋತ್ತಮನುಸರ್ವಕಲ್ಯಾಣ ಸುಗುಣಾರ್ಣವನು ನಿದÉರ್ೂೀಷನುವಾಂಛಿüಸುವವರು ಪರವಿತ್ತಸ್ಥೇಯಪರನಿಂದಾ ವ್ಯಭಿಚಾರರೇತಸ್ಸÀ್ಸಂಗಮ ತ್ಯಜಿಸಲೇಬೇಕು 4ಬಾಲ ಮತ್ತು ಪ್ರೌಢ ವಿದ್ಯಾರ್ಥಿಗಳಿಗೆ ದೈವಭಕ್ತಿಮತ್ತು ಸಾಧುನೀತಿಗಳಪಾಠಗಳ ಬೋಧಿಸುವುದು ಅಧಿಕಾರವರ್ಗದವರು ಮಾಡಲೇಬೇಕುಇಳೆಯಲ್ಲಿ ಪ್ರಜಾಕ್ಷೇಮ ಅಭಿವೃದ್ಧಿ ಆಗಲಿಕ್ಕೆ ಇದುಉಪಾಯ ಹರಿದಯದಿ 5ವಸುಂಧರೆಯಲ್ಲಿ ಇನ್ನು ಬೆಳೆಯುವುದು ಪ್ರಜಾ ಉಪಯೋಗಆಗಿ ಮಿಕ್ಕದ್ದೇ ಪರದೇಶಕೆ ಕೊಡಬಹುದುಆಸುರೀ ಸಂಪತ್ತು ಬೆಳಸದೆ ದೈವಿ ಸಂಪತ್ತೇ ಗುರಿಯಾಗಿ ಸರ್ವರುತಮ್ಮ ತಮ್ಮ ಸಮಯಗಳ ನೀತಿಗಳ ಆಚರಿಸಲುರಾಷ್ಟ್ರ ಲೋಕಗಳಿಗೆ ಲಾಭ 6ಎನ್ನ ಮಾತುಗಳಲ್ಲ ಇವು ಕ್ಷೇಮಕರ ಪ್ರಜೋತ್ಪತ್ತಿಸ್ವಾಮಿಶ್ರೀಪದ್ಮನಾಭ ಶ್ರೀನಿವಾಸ ನುಡಿಸಿದವುಎನ್ನನ್ನು ಎನ್ನವರನ್ನು ಸರ್ವಲೋಕಜನರನ್ನುರಕ್ಷಿಸಲಿ ಶ್ರೀಹರಿ ಸರ್ವದಾ 7
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀ ವಾಮನಪ್ರಥಮ ಅಧ್ಯಾಯಶ್ರೀ ವಾಮನಪ್ರಾದುರ್ಭಾವಸಾರಭೂಮಾದಿ ಗುಣನಿಧಿಯೇಅನಘಮಂಗಳರೂಪವಾಮನ ಸುಸೌಂದರ್ಯಸಾರ ಲಕ್ಷ್ಮೀಶಬ್ರಹ್ಮೇಶ ಮುಖವಂದ್ಯ ಶರಣು ಸೌಭಾಗ್ಯದನೆಬ್ರಹ್ಮಾಂಡ ಬಹಿರಂತವ್ರ್ಯಾಪ್ತ ಸರ್ವೇಶ ಪಉದಿತಭಾಸ್ಕರ ನಿಭ ಸ್ವಕಾಂತಿಯಲಿ ಜ್ವಲಿಸುತಿಸುದರ್ಶನ ಗದಾ ಜ್ಞಾನಪ್ರದ ದರಾಹಸ್ತಪದುಮೆ ಸಹ ಅಜುವಿಷ್ಣು ಮಂತವ್ಯ ಸರ್ವಸ್ಥಶೃತಿವೇದ್ಯ ಅಜಸೇವ್ಯಪ್ರಣವಪ್ರತಿಪಾದ್ಯ1ಸರ್ವ ಸೃಷ್ಟಿ ಸ್ಥಿತಿ ಲಯ ನಿಯಮನ ಜ್ಞಾನಆವೃತಿ ಬಂಧ ಮೋಕ್ಷಕೆ ಮುಖ್ಯಕರ್ತಸುವರ್ಣಾಂಡವ ಪಡೆದು ವ್ಯಾಪಿಸಿ ಅದರೊಳುಅವತಾರಗಳ ಮಾಡಿ ಸಜ್ಜನರ ಕಾಯುವಿ 2ವೇದೋದ್ಧರಮತ್ಸ್ಯಸತ್ಯವ್ರತನಿಗೆ ಒಲಿದಿಮಂದರವ ಪಾಲ್ಗಡಲಲಿ ಪೊತ್ತಕೂರ್ಮಇಂದಿರಾಪತಿ ಅಜಿತ ಮೋಹಿನಿ ಧನ್ವಂತರಿದೈತ್ಯಹರ ಭೂಮಿ ಉದ್ಧರ ಭೂವರಾಹ 3ಪಾಪಘ್ನ ಪ್ರಹ್ಲಾದ ರಕ್ಷಕ ನೃಸಿಂಹನೇವಿಷ್ಟ ವಾಮನ ತ್ರಿವೃತ್ ಗೋಪಬಾಲಸುಪವಿತ್ರ ಜಮದಗ್ನಿಸುತ ಪರುಶುರಾಮಪ್ರಭಂಜನಸೇವ್ಯಶ್ರೀರಾಮಚಂದ್ರ4ಅಜ್ಞಾನ ಹೃತ್ತಿಮಿರಸೂರ್ಯವೇದವ್ಯಾಸನಿಜಭಕ್ತಜನ ಪಾಂಡವಪ್ರಿಯ ಕೃಷ್ಣದುರ್ಜನ ವಿಮೋಹಕ ಸುರಸುಬೋಧಕ ಬುಧ್ಧಸುಜನವಂದ್ಯನೆ ಧರ್ಮಸ್ಥಾಪಕನೆÀ ಕಲ್ಕಿ 5ಷಡ್ರೂಪ ಹಯವದನ ಮಹಿದಾಸ ತಾಪಸಕ್ಷಿಪ್ರವಸುಪ್ರದ ಶ್ರೀಕರ ಯಜÕ್ಯ ಕಪಿಲಅತ್ರಿಸುತ ವೃಷಭಾದಿ ಅನಂತಸುಖ ಚಿದ್ರೂಪಅಪ್ರತಿ ಮಹೈಶ್ವರ್ಯ ಪೂರ್ಣ ಏಕಾತ್ಮ 6ನಿವ್ರ್ಯಾಜ ಭಕ್ತಾಗ್ರಣಿಯು ಪ್ರಹ್ಲಾದನುಆ ಆರ್ಯನ ಸುತ ವಿರೋಚನನೆಂಬುವನುಆ ದೈತ್ಯನ ಪುತ್ರ ಬಲಿಮಹಾರಾಜನುಆಧಿಕ್ಯ ಹೊಂದಿದನು ಬಲಪೌರುಷದಲಿ 7ದೈತ್ಯೇಯ ಬಲಿರಾಜ ಬಲಉನ್ನಾಹದಿಂಜಗತ್ರಯವ ತನ್ನ ವಶ ಮಾಡಿಕೊಂಡಇಂದ್ರಾದಿಗಳು ಐಶ್ವರ್ಯ ಶ್ರೀಯಶಸ್ಥಾನವಿದುರರಾಗಲು ದೇವಮಾತೆ ಯೋಚಿಸಿದಳು 8ಸರ್ವಭೂತ ಗುಹಾವಾಸವಾಸುದೇವಜಗದ್ಗುರುಸರ್ವ ಜಗತ್ಪತಿ ಕೇಶವನಿಗೆ ಪ್ರಿಯವಾದಪಯೋವ್ರತವ ಭಕ್ತಿಯಿಂದಲಿ ಮಾಡುವುದೆಂದುದೇವಮಾತೆಗೆಪತಿಕಶ್ಯಪ ಪೇಳಿದನು9ಆದಿವರಾಹನೇ ಮಹಾಪುರುಷ ಸರ್ವ -ಭೂತ ನಿವಾಸನೇವಾಸುದೇವಸದಾ ಸರ್ವ ಸಚ್ಛಕ್ತಿ ಪರಿಪೂರ್ಣ ಸರ್ವವಿದ್ಯಾಧಿಪತಿ ಶುಭಮಂಗಳ ಸ್ವರೂಪ 10ಸರ್ವ ಜಗಜ್ಜ£್ಮ್ಞದಿಕರ್ತನೇ ಜಗದೀಶಸರ್ವ ಜಗತ್ರಾಣ ಚೇಷ್ಟಕ ನಿಯಾಮಕನೇವಿಶ್ವತೋ ಮುಖ ಆದಿದೇವ ನಿನಗೆ ನಮೋಶ್ರೀವರ ನಾರಾಯಣ ನರಹರೇ ಸ್ವಾಮಿ 11ಮರಗದ ಶ್ಯಾಮ ಅನಿರುದ್ಧ ಪ್ರದ್ಯುಮ್ನಸಿರಿಕಾಂತ ಸರ್ವೇಶ ಕೇಶವ ನಮಸ್ತೆಪುರುಟಾಂಬರಧಾರಿ ಸುರವರೇಣ್ಯನೇ ನಮೋಸರ್ವ ವರದನೇ ಶ್ರೀದ ಕರುಣಾಂಬುನಿಧಿಯೇ 12ಅದಿತಿ ದೇವಿಯು ಪಯೋವ್ರತವ ಮಾಡಿದಳುವಿಧಿಪೂರ್ವಕ ಭಕ್ತಿ ಶ್ರಧ್ಧೆಯಿಂದಆದಿ ಪೂರುಷ ಭಗವಂತ ಶಂಖ ಚಕ್ರಗದಾಧರನೇ ಅದಿತಿಗೆ ಪ್ರತ್ಯಕ್ಷನಾದಿ 13ಕಣ್ಣೆದುರಿಗೆ ನಿಂತ ನಿನ್ನ ನೋಡಿ ಅದಿತಿಆನಂದ ಬಾಷ್ಪವ ಸುರಿಸುತ್ತ ದೀರ್ಘಪ್ರಣಾಮವ ಮಾಡಿದಳು ಗದ್ಗದ ಕಂಠದಿಂನಿನ್ನ ಸ್ತುತಿಸಿದಳು ಆ ದೇವಮಾತೆ 14ತೀರ್ಥಪಾದನೇ ತೀರ್ಥಶ್ರವ ಶ್ರವಣ ಮಂಗಳನಾಮಧೇಯನೇ ಯಜÉÕೀಶ ಯಜÕಪುರುಷಅಚ್ಯುತನೇ ರಕ್ಷಿಸುವಿ ಪ್ರಪನ್ನಪಾಲಕ ನಮೋಶ್ರೀದ ಶ್ರೀಪತೇ ವಿಷ್ಣೋ ಧೀನನಾಥ 15ಅಖಂಡೈಕ ಸಾರಾತ್ಮ ವಿಶ್ವವ್ಯಾಪಕವಿಶ್ವಅಕಳಂಕ ಸರ್ವೋರು ಸಚ್ಚಕ್ತಿಪೂರ್ಣಏಕಾತ್ಮ ಸರ್ವಜÕ ಸುಖಜ್ಞಾನಪ್ರದ ಭೂಮನ್ನಿಖಿಳಗುಣ ಐಶ್ವರ್ಯಪೂರ್ಣ ಹರೇ ಶ್ರೀಶ 16ಅದಿತಿಯ ವ್ರತಾಚರಣೆ ಮೆಚ್ಚಿ ಕಮಲಾಕ್ಷ ನೀಅದಿತಿಯ ಸುತನೆನಿಸಿ ಭವಿಸುವಿ ಎಂದಿಮುದದಿ ಈ ರಹಸ್ಯವ ಪತಿಗೆ ಪೇಳ್ದಳು ಅದಿತಿಆ ದಂಪತಿ ಕೂಡಿ ನಿರೀಕ್ಷಿಸಿದರು ನಿನ್ನ 17ಜಗನ್ನಿವಾಸನೆ ನೀನು ದೇವಮಾತೆಯೊಳುಝಗಝಗಿಸಿಪೊಳೆದಿಯೋ ಉರು ಮಹಾತೇಜಪೊಗಳಲಳವೇ ನಿನ್ನ ಲೀಲಾವತಾರಗಳಅಗಣಿತಮಹಿಮೆಗಳ ದೇವ ದೇವೇಶ18ಸನಾತನನೇ ಅನಘನೇ ಅಜನೇ ಭಗವಂತನೇನೀನು ಅದಿತಿಯಲಿ ಅವತರಿಪುದರಿತುವನರುಹಾಸನ ಹಿರಣ್ಯಗರ್ಭನು ಬಂದುಶ್ರೀನಿಧಿಯೇ ಶ್ರೀಶ ನಿನ್ನನ್ನು ಸ್ತುತಿಸಿದನು 19ಜಯೋರುಗಾಯ ಭಗವನ್ ಉರುಕ್ರಮ ನಮೋಸ್ತುತೇತೋಯಜಾಸನ ಹೀಗೆ ಇನ್ನೂ ಬಹುವಿಧದಿ ಸ್ತುತಿಸಿದತೋಯಜಾಕ್ಷಶಿಪಿವಿಷ್ಟ ವಿಷ್ಣು ಸರ್ವೋತ್ತಮಅಚ್ಯುತಾನಂತೋರು ಶಕ್ತಿಮಯ ನಿನ್ನ 20ಪದುಮಭವ ಸನ್ನುತನೇಆನಂದಮಯನೀನುಪ್ರಾದುರ್ಭವಿಸಿದಿ ಅದಿತಿ ದೇವಮಾತೆಯಲಿಚತುರ್ಭುಜವು ಶಂಖಗದಾಅಬ್ಜಚಕ್ರಪೀತ ಕೆಂಪು ವಸನವನ್ನ ಧರಿಸಿದ್ದಿ 21ಅನುಪಮ ಸುಸೌಂದರ್ಯ ಚಾರ್ವಾಂಗ ಕಾಂತಿಯುನಳಿನಾಯತೇಕ್ಷಣ ಮಕರಕುಂಡಲವುಆನಂದ ಸುಪ್ರಚುರ ವದನಾರವಿಂದವುಏನೆಂಬೆ ಗಂಭೀರವಕ್ಷ ಶ್ರೀವಕ್ಷ 22ವನಮಾಲೆ ಸುಸ್ಫುರತ್ ಕಿರೀಟಾಂಗದಾದಿಗಳುವನಜಾಸನಾಶ್ರಿತ ಕೌಸ್ತುಭಮಣಿಯುಸುನೂಪುರ ತೊಟ್ಟ ಶುಭಮಂಗಳಪಾದನಿನ್ನ ಪ್ರಾದುರ್ಭಾವ ವರ್ಣಿಸಲು ಅರಿಯೆ 23ಸೌರಶ್ರಾವಣಸಿಂಹ ಚಾಂದ್ರ ಭಾದ್ರಪದನೀ ಪ್ರಾದುರ್ಭವಿಸಿದ್ದು ಸಿತಶ್ರಾವಣದ್ವಾದಶಿಚಿತ್ರ ವಾದ್ಯಗಳ ಘೋಷ ಸಿದ್ಧಿ ವಿದ್ಯಾಧರರುಸುರಗಾಯಕರುಗಳ ಗಾಯನ ನೃತ್ಯ 24ಜಯ ಜಯತು ಜಯ ಜಯ ವಾಮನ ವಟುರೂಪಜಯ ಜಯತು ಶಾಶ್ವತ ಸರ್ವಸ್ಥ ವಿಷ್ಣೋಜಯ ಜಯತು ಸರ್ವ ಜಗಜ್ಜನ್ಮಾದಿಕರ್ತಜಯ ಜಯಪರಮಪೂರ್ಣೈಶ್ವರ್ಯ ಜಯತು25ಸುಂದರವಟುವಾಮನ ನಿನ್ನ ನೋಡಿಮಂದಜಾಸನಮಹಾ ಋಷಿವರ್ಯರು ಬಹುಆನಂದಭರಿತರು ಆಗಿ ಸಂಸ್ಕಾರಅಂದದಿ ಚರಿಸಿದರು ವೈದೀಕ ರೀತಿಯಲಿ 26ಬ್ರಹ್ಮಾದಿದೇವರು ಮಹಾಋಷಿಗಳುಪರ-ಬ್ರಹ್ಮ ವಾಮನ ನಿನಗೆ ಉಪನಯನರೂಪಮಹಾಪೂಜೆ ಚರಿಸಿದರು ಮುದಭಕ್ತಿಯಿಂದಲಿಮಹಾರ್ಹನೇ ನಿನಗಿದು ಅವತಾರ ಲೀಲ 27ದೇವವರೇಣ್ಯ ಬ್ರಹ್ಮಣ್ಯದೇವನೇ ನಿನಗೆದೇವತಾವೃಂದವು ನೆರದಿದ್ದ ಮುನಿಗಳುಸಾವಿತ್ರೀಂ ಸವಿತಾ ಭ್ರವೀತ್ ಬೃಹಸ್ಪತಿ ಬ್ರಹ್ಮಸೂತ್ರಂಈ ವಿಧದಿ ಮುದಮನದಿ ಅರ್ಪಿಸಿದರು 28ಕಮಂಡಲ ವೇದಗರ್ಭನು, ಕೃಷ್ಣಾಜಿನಭೂಮಿ, ದಂಡ, ಸೋಮ,ಕುಶಸಪ್ತ ಋಷಿಗಳುಸುಮೇಖಳ ಕಶ್ಯಪ,ಕೌಪೀನಅದಿತಿಯುಉಮಾ ಭಗವತಿಬಿಕ್ಷಾಪಾತ್ರೆ ವಿತ್ತಪನು 29ಈ ರೀತಿ ಮೇಖಳಸೂತ್ರಆಚ್ಛಾದನಛತ್ರ ಕೃಷ್ಣಾಜಿನ ಕಮಂಡಲು ದಂಡಪಾತ್ರೆ ಅಕ್ಷಮಾಲಾದಿ ವಸ್ತುಗಳು ದರ್ಭೆಪರಿಪರಿ ದೇವತೆಗಳು ಅರ್ಪಿಸಿದರು 30ಮಹಾಪೂರುಷ ಶಿಪಿವಿಷ್ಟ ವಾಮನ ವಿಷ್ಣೋಮಹಾದುರ್ಗ ಭೂ ಶ್ರೀಶ ನಿನ್ನ ಉಪನಯನಮಹೋತ್ಸವದ ವೈಭವವು ಹೋಮ ಪೂಜಾದಿಗಳುಮಹಿಯಲ್ಲಿ ಅಸದೃಶವು ಸರ್ವಕಾಲದಲು 31ಸೂತ್ರಮೇಖಳಕೌಪೀನಆಚ್ಛಾದನಛತ್ರಮಾಲಾ ಕಮಂಡಲು ದಂಡಹಸ್ತಚಂದ್ರಾರ್ಕ ಕೋಟ್ಯಮಿತ ಜ್ಯೋತಿರ್ಮಯ ವಟುರೂಪಶ್ರೀರಮಣಪದ್ಮಭವರುದ್ರಾದಿವಂದ್ಯ32ಮಧ್ವಸ್ಥ ಪರ್ವಸ್ಥ ಮತ್‍ಸ್ಥ ವಿಧಿತಾತಜ್ಯೋತಿರ್ಮಯ ತ್ರಿವೃನ್ನಾಮ ವಾಮನ ಮಂತವ್ಯಮೋದಮಯ ಶ್ರೀಯುಕ್ ಪ್ರಸನ್ನ ಶ್ರೀನಿವಾಸಮುದಜ್ಞಾನಧನ ಆಯುರ್ಭಾಗ್ಯದನೇ ಶರಣು 33-ಇತಿ ಪ್ರಥಮಾಧ್ಯಾಯ ಸಂಪೂರ್ಣಂ -ದ್ವಿತೀಯ ಅಧ್ಯಾಯದಾನಪ್ರಕರಣಸಾರಭೂಮಾದಿ ಗುಣನಿಧಿಯೇಅನಘಮಂಗಳರೂಪವಾಮನ ಸುಸೌಂದರ್ಯಸಾರ ಲಕ್ಷ್ಮೀಶಬ್ರಹ್ಮೇಶ ಮುಖವಂದ್ಯ ಶರಣು ಸೌಭಾಗ್ಯದನೆಬ್ರಹ್ಮಾಂಡ ಬಹಿರಂತವ್ರ್ಯಾಪ್ತ ಸರ್ವೇಶ ಪಸರಸಿಜೋದ್ಭವ ಸುರವೃಂದ ಮಹಾಋಷಿಗಳುಮರೀಚಿಸುತ ಮೊದಲಾದ ಸುಧೀಗಳು ನಿನಗೆಚರಿಸಿದ ಉಪನಯನ ರೂಪಮಹೋತ್ಸವವಸ್ವೀಕರಿಸಿ ಜ್ವಲಿಸಿದಿ ಬ್ರಹ್ಮಣ್ಯದೇವ 1ನೋಡಿದ ಮಾತ್ರದಲೆಸುಜನವಿಶ್ವಾಸಿಗಳುಮಾಡಿದ ಪಾಪ ಪರಿಹರಿಪ ನರ್ಮದೆಯದಡ ಉತ್ತರದಲಿ ಯಜÕ ಶಾಲೆಕಟ್ಟಿದೊಡ್ಡಕ್ರತುಮಾಡುತ್ತಿದ್ದನು ಬಲಿರಾಜ2ಮೌಂಜಿಮೇಖಳ ಸೂತ್ರದಿಂದ ಬೆಳಗುತ್ತಸಜಲ ಕಮಂಡಲು ಸುದಂಡ ಛತ್ರಪ್ರಜ್ವಲಿಪ ಚಿನ್ಮಯ ಜಟಿಲ ವಾಮನವಿಪ್ರಯಜÕ ಶಾಲೆಯೊಳು ಪ್ರವೇಶ ಮಾಡಿದಿಯೋ 3ಜ್ವಲಿಸುವ ಸ್ವಕಾಂತಿಯುಕ್ಮಾಯಾಮಾಣವಕಬಾಲ ಸುಂದರ ಬ್ರಹ್ಮಚಾರಿಹರಿನಿನ್ನಬಲಿರಾಜ ಆಚಾರ್ಯ ಶುಕ್ರಾದಿಗಳು ನೋಡಿಬಲುಹರುಷದಲಿ ಎದ್ದು ಸ್ವಾಗತಮಾಡಿದರು 4ಭಗವಂತ ವಾಮನ ನಿನ್ನ ಪಾದದಿಬಲಿಬಾಗಿ ನಮಿಸಿ ಸ್ವಾಗತಂ ತೇ ನಮಸ್ತುಭ್ಯಂಹೀಗೆಂದು ತನ್ನ ಪಿತೃಗಳು ತೃಪ್ತರಾದರುತನ್ನ ಕುಲ ಪಾವಿತವಾಯ್ತೆಂದು ಪೇಳ್ದ 5ವನಜಜಾಂಡದ ಒಡೆಯ ರಾಜರಾಜೇಶ್ವರನೇನಿನ್ನ ಮುಂದೆಕರಮುಗಿದು ಬಲಿರಾಜಧೇನುಕಾಂಚನ ಗ್ರಾಮವಿಪ್ರಕನ್ಯಾದಿಗಳುಏನು ನೀ ವಾಂಛಿಸಿದರೂ ಕೊಳ್ಳಬಹುದೆಂದ 6ಸುಗಮಸುಹೃತ್ ಧರ್ಮಯುಕ್ ಈ ಮಾತಲ್ಲಿಭಗವಂತ ನೀ ಪ್ರೀತನಾದದ್ದು ಪ್ರಕಟಿಸಿಲೋಕದಲಿ ಪ್ರಖ್ಯಾತ ಬಲಿಯ ಕುಲಕೀರ್ತಿಯಪೊಗಳಿದಿಯೋ ಬ್ರಾಹ್ಮಣ ಮಹೇಜ್ಯ ಪರಮೇಶ 7ಆಕಾಶದಲಿ ಆಹ್ಲಾದಕರ ಉಡುಪನುಪ್ರಕಾಶಿಸುವಂತೆ ಪ್ರಹ್ಲಾದನ ಯಶಸ್ಸುಉತ್ಕøಷ್ಟವಾದದ್ದು ವ್ಯಾಪಿಸಿ ಜಗತ್ತಲ್ಲಿಪ್ರಕಾಶಿಸುತೆ ಆ ಕುಲೋತ್ಪನ್ನನು ಬಲಿಯು 8ಮಹಾ ಗದಾಯುಧದಾರಿ ದಿಗ್ವಿಜಯ ಶೂರನುಆ ಹಿರಣ್ಯಾಕ್ಷನ ಅಣ್ಣನು ಆದಪ್ರಹ್ಲಾದಪಿತ ಹಿರಣ್ಯಕಶಿಪು ವೀರನುಮಹೀಯಲ್ಲಿ ಖ್ಯಾತವು ಈ ದೈತ್ಯ ಕುಲವು 9ಆ ಜಗತ್ ಪ್ರಖ್ಯಾತ ಪ್ರದ್ಲಾದನಸುತದ್ವಿಜವತ್ಸಲ ತನ್ನ ಆಯುಷ್ಯವದ್ವಿಜವೇಷದಿ ಬಂದ ಸುರರಿಗೆ ಕೊಟ್ಟಿದ್ದುಮೂರ್ಜಗ ಅರಿವುದುಬಲಿಆ ಕುಲೀನ10ಇಂಥ ಕುಲದಲಿ ಬಂದ ಪ್ರಹ್ಲಾದ ಪೌತ್ರಈ ಧರ್ಮವಂತಬಲಿಎಂದು ನೀ ಪೇಳಿಪದಾನಿ ತ್ರೀಣಿ ದೈತ್ಯೇಂದ್ರ ಸಂಹಿತಾನಿಪದಾಮಮ ಎಂದು ಭೂಮಿ ಯಾಚಿಸಿದಿ 11ನಳಿನಜಾಂಡದ ದೊರೆಹರಿನಿನ್ನ ಮಾಯೆಯಿಂಬಾಲಿಶಮತಿಯೇ ಮೂರಡಿ ಯಾಕೆ ಕೇಳುತಿ ಎಂದಬಲಿಯು ತನ್ನಲಿ ಕೊಂಡವ ಪೂರ್ಣನಾಗುವಮತ್ತೆಲ್ಲೂ ಪುನರ್ಯಾಚಿಸನು ಎಂದು ಪೇಳಿದನು 12ಕರ್ಮಜ ದೇವತಾ ಕಕ್ಷದವ ಬಲಿರಾಜಕರ್ಮನಿಮಿತ್ತದಿ ಸಂಸಾರ ಸುಳಿಯಊರ್ಮಿಗಳಿಗೊಳಗಾದ ಭಕ್ತನಲಿ ಕರುಣಿಸಿದಿಧರ್ಮನೀತಿ ಪೇಳಿದಿ ಶ್ರೀಶ ಮುಕುಂದ 13ಇಂದ್ರಿಯ ಅಭಿಲಾಷೆ ಜಯಿಸದವನ ಆಶೆಗೆಮಿತಿಯಿಲ್ಲ ಬೆಳೆಯುವುದು ಮೇಲು ಮೇಲುಯದೃಚ್ಛಾಲಾಭ ಸಂತುಷ್ಟ ವಿಪ್ರನತೇಜಸ್ಸುವರ್ಧಿಸುವುದು ಮತ್ತು ಸುಖವೀವುದೆಂದಿ 14ಈ ರೀತಿ ಬಲಿರಾಜನಿಗೆ ಇನ್ನೂ ಪೇಳಿಮೂರಡಿ ಮಾತ್ರವೇ ಕೊಳ್ಳುವಿ ಎನಲುಧಾರೆ ಎರೆದು ಕೊಡಲು ಬಲಿಯು ನಿಶ್ಚೈಸಲುಅರಿತು ಶಿಷ್ಯನ ಎಚ್ಚರಿಸಿದ ಶುಕ್ರ 15ವೇದ ವೇದಾಂತಕೋವಿದಶುಕ್ರಾಚಾರ್ಯರುಬುದ್ಧಿ ವಿದ್ಯಾ ನಿಪುಣರು ಕುಶಲ ಕವಿವರರುದೈತ್ಯರಿಗೆ ಕುಲಗುರು ಶ್ರೀದ ಶ್ರೀಹರಿ ನಿನ್ನಭಕ್ತವರ್ಯರು ಎಂದು ನಮಿಪೆ ಸಂತೈಸು 16ಶಿಷ್ಯ ವೈರೋಚನನಿಗೆ ಪೇಳಿದನು ಶುಕ್ರಶ್ರೀಶ ಭಗವಂತನು ವಿಷ್ಣು ಅವ್ಯಯನೆಕಶ್ಯಪ ಅದಿತಿಯಲಿ ಭವಿಸಿ ದೇವತೆಗಳಕಾರ್ಯಸಾಧನಕಾಗಿ ಬಂದಿರುವ ಎಂದ 17ಮತ್ತು ಪೇಳಿದ ಈ ದಾನ ಕೊಡುವುದರಿಂದದೈತ್ಯರಿಗೆ ಅಕ್ಷೇಮ ಬಲಿಯ ಶ್ರೀ ಸ್ಥಾನ ಯಶಸ್ಸುಮೊದಲಾದ ಸರ್ವವೂ ಪೋಗುವವು ಸ್ವರ್ಗ ಸಂ -ಪತ್ತು ಅಧಿಪತ್ಯವ ಶಕ್ರನಿಗೆ ಕೊಡುವ 18ಇಂಥಾಮಾಯಾಮಾಣವಕಹರಿವಾಮನನುಪಾದಎರಡಲಿಧರೆದಿವಿ ಅಳೆದು ಮೂರ-ನೇದನುಬಲಿಕೊಡಲು ಆಗದೆ ನರಕ ಪೋಗು-ವದು ತಪ್ಪಿಸೆ ದಾನ ಕೊಡಬೇಡ ಎಂದ 19ಇನ್ನೂ ಬಹು ವಿಧದಲಿ ದಾನ ಬಗೆ ಶುಕ್ರತನ್ನ ಶಿಷ್ಯನಿಗೆ ಬೋಧಿಸಿದರೂ ಸಹಮನ ಸೋಲದೆ ಬಲಿರಾಜ ಧಾರೆ ಎರೆದುದಾನವ ಕೊಡುವೆನು ಎಂದ ವಿನಯದಲಿ 20ಗುರುಗಳ ಮಾತಲ್ಲಿ ಅನಾದರವ ತೋರಿಸಿದಆ ರಾಜನಿಗೆ ಶಾಪ ಇತ್ತರು ಶುಕ್ರರುಸಿರಿಸ್ಥಾನಾದಿಗಳು ನÀಷ್ಟವಾಗುವದೆಂದುಗುರು ಶಪಿಸಿದರೂ ಬಲಿಯ ಮನ ಚಲಿಸಲಿಲ್ಲ 21ಪ್ರತ್ಯಗಾತ್ಮನೇ ಈಶ ಸರ್ವಪ್ರೇರಕ ಸ್ವಾಮಿಭೃತ್ಯವತ್ಸಲ ನೀನು ಬಲಿಯ ಉತ್ಕಷ್ಟಭಕ್ತಿ ಶ್ರದ್ಧೆ ಸತ್ಯ ಧರ್ಮ ತೋರ್ಪಡಿಸಿದಿಅಂತಃ ಪ್ರೇರಕನಾಗಿಬಲಿಶುಕ್ರರಲ್ಲಿ22ಒಳ್ಳೇ ಮೌಕ್ತಿಕ ಆಭರಣ ಮಾಲಾಧರಳುಶೀಲೆ ಪತ್ನಿ ವಿದ್ಯಾವಳಿ ದೇವಿ ಸಹಿತಬಲಿಸ್ವರ್ಣ ಕಲಶ ಜಲದಿಂದ ನಿನ್ನನಳಿನಪದಯುಗವ ಅವನಿಜಿಸಿದ ಮುದದಿ23ಅಚಲಿತ ಭಕ್ತಿಮಾನ್ ಈ ಮಹಾನ್ ಬಲಿರಾಜಅರ್ಚಿಸಿ ಉದಕದಿಂದಲಿ ಧಾರೆ ಎರೆದುಅಚ್ಯುತನೇ ಶ್ರೀಯಃಪತೇ ವಾಮನ ನಿನಗೆ ನೀಇಚ್ಚೈಸಿದ ದಾನ ಹರುಷದಿ ಕೊಟ್ಟ 24ಮುದಾನ್ವಿತರಾದ ದೇವಗಣ ಗಂಧರ್ವವಿದ್ಯಾದರ ಸಿದ್ಧ ಚಾರಣ ಕಿನ್ನರಾದಿಗಳುದೈತ್ಯೇಂದ್ರಬಲಿಕರ್ತೃಕದಾನ ಆರ್ಜವವಉದ್ಗಾಯನ ಮಾಡಿ ಪುಷ್ಪಮಳೆ ಕರೆದರು 25ಬಲಿನಿನ್ನ ಜಗತ್ಪಾವನ ಪಾದೋದಕವತಲೆಯಲಿ ತಾ ಧರಿಸಿ ಕೊಟ್ಟ ಮೂರಡಿದಾನಮಾಲೋಲ ಸರ್ವೇಶ ವಿಶ್ವರೂಪನೇ ವಿಷ್ಣುಲೀಲೆಯಿಂದಲಿ ಕೈ ನೀಡಿ ವಾಮನ ಸ್ವೀಕರಿಸಿದಿ 26ಮಧ್ವಸ್ಥ ಸರ್ವಸ್ಥ ಮತ್‍ಸ್ಥ ವಿಧಿತಾತಜ್ಯೋತಿರ್ಮಯ ತ್ರಿವೃನ್ನಾಮ ವಾಮನ ಮಂತವ್ಯಮೋದಮಯ ಶ್ರೀಯುಕ್ ಪ್ರಸನ್ನ ಶ್ರೀನಿವಾಸಮುದಜ್ಞಾನಧನ ಆಯುರ್ಭಾಗ್ಯದನೇ ಶರಣು 27-ಇತಿದ್ವಿತೀಯಅಧ್ಯಾಯ ಸಂಪೂರ್ಣಂ-ತೃತೀಯ ಆಧ್ಯಾಯಶ್ರೀ ತ್ರಿವಿಕ್ರಮವಿಜಯಸಾರಭೂಮಾದಿ ಗುಣನಿಧಿಯೇಅನಘಮಂಗಳರೂಪವಾಮನ ಸುಸೌಂದರ್ಯಸಾರ ಲಕ್ಷ್ಮೀಶಬ್ರಹ್ಮೇಶ ಮುಖವಂದ್ಯ ಶರಣು ಸೌಭಾಗ್ಯದನೆಬ್ರಹ್ಮಾಂಡ ಬಹಿರಂತವ್ರ್ಯಾಪ್ತ ಸರ್ವೇಶ ಪಕಿಂಪುರುಷಕಿನ್ನರಚಾರಣ ಗಂಧರ್ವಾದಿಸುಪರ್ವಾಣ ಗಾಯಕರ ಗೀತೆ ವಾದ್ಯಗಳುಶುಭಘೋಷ ಮಾಡುತಿರೆ ಬಲಿರಾಯ ದಾನವಅರ್ಪಿಸಿ ಕೃತಕೃತ್ಯದಿ ನೋಡಿದ ನಿನ್ನ 1ಉರು ಗುಣಾರ್ಣವ ಮಹೈಶ್ವರ್ಯ ನಿಜಸಚ್ಛಕ್ತಿಹರಿವಾಮನ ನೀನು ವರ್ಧಿಸಿ ಅದ್ಭುತದಿಸುಬೃಹತ್ ವಿಶ್ವರೂಪವ ಕಾಣಿಸಿ ನಿಂತಿನೀರುರುಹ ಜಾಂಡಾಂತರ್ ಬಹಿವ್ರ್ಯಾಪ್ತ ವಿಷ್ಣೋ 2ದೋಷದೂರ ನಿನ್ನ ಒಂದು ರೂಪದಿ ಉಂಟುದೋಷವಿಲ್ಲದ ಪೂರ್ಣ ಅಭಿನ್ನ ಅನಂತನಿನ್ನೀಶಶಕ್ತಿಯಿಂ ಎಲ್ಲವ ಅಡಗಿಸಿಅಕ್ಷೋಭ್ಯ ನೀ ಪ್ರಕಟ ಮಾಡುವಿ ಆಗಾಗ 3ಉತ್ತಮ ಮಹಾಮಹಿಮ ನಿನ್ನ ಈ ರೂಪದಿಭೂ ದಿವಿ ದಿಕ್ ಸರ್ವ ಅಧೋಧ್ರ್ವ ಲೋಕಸುತಪಸ್ವಿ ಮುನಿಗಳು ದೇವನರತ್ರಿರ್ಯಗ್ ಸರ್ವಪ್ರತಿಷ್ಠತವಾಗಿರುವುದು ಕಂಡನು ಬಲಿಯು 4ಈ ಮಹಾವಿಭೂತಿ ರೂಪದಿ ಕಂಡ ತನ್ನಆ ಮಹಾಕ್ರತು ಋತ್ವಿಕ್ಕುಗಳಾಚಾರ್ಯಆ ಮುಖದಿ ನೆರೆದಿದ್ದ ಸದಸ್ಯರನ್ನು ಕಂಡತನ್ಮಾತ್ರ ಭೂತೇಂದ್ರಿಯ ಜೀವಯುಕ್ತ 5ಅನಘಾಂಘ್ರಿ ಪದಯುಗದಿ ಜಲಮೇಘ ಅಧಸ್ ಭೂಮಿಕಣುಕಾಲು ಜಾನೂಲಿ ಮಹಾದ್ರಿ ಪಕ್ಷಿಗಳುಘನಉರುದ್ವಯದಿ ಮಾರುತಅಂಬುಕಣಗಳುವರ್ಣಜಾಲ ಮಿಂಚು ಗುಹ್ಯದಲಿ ಸಂಧ್ಯಾ 6ಜಘನದಲಿ ದೈತ್ಯರ ಗುಂಪುಗಳುಹೊಕ್ಕುಳಲಿನಭಕುಕ್ಷಿಯಲಿ ಸಪ್ತಸಿಂಧುನಕ್ಷತ್ರ ಜ್ಯೋತಿರ್ಮಯಮಾಲಾ ಉರದಲಿಅಕಳಂಕ ಹೃದಯದಲಿ ಧರ್ಮ 7ಸ್ತನದಲಿ ಸತ್ಯವು ಮನಸ್ಸಲಿ ಚಂದ್ರನುಅನುಪಮ ವಕ್ಷದಲಿ ಶ್ರೀ ಪದ್ಮಹಸ್ತಕಂಠದಲಿ ಸುಸ್ವರ ಶಬ್ದ ಸಾಮಾದಿಗಳುಕರ್ಣದಲಿ ದಿಕ್‍ಭುಜದಿ ಇಂದ್ರಾದಿಸುರರು 8ನಾಸಿಕ್ಕದಲಿ ಶ್ವಾಸವಾಯು ಕಣ್ಣಲಿಸೂರ್ಯಶಿರಸ್ಸಲಿ ಮೇಘವು ವದನದಲಿ ªಹ್ನಿರಸನದಿ ಜಲೇಶನು ವಾಣಿಯಲಿ ವೇದಗಳುನಿಷೇಧವಿಧಿಶಾಸನ ಹುಬ್ಬು ಎರಡಲ್ಲೂ9ರೆಪ್ಪೆಯಲಿ ಅಹೋರಾತ್ರಿ ಕ್ರಮಣದಲಿ ಯಜÕವುಸುಪುಷ್ಟದಿ ಅಧರ್ಮ ಸ್ಪರ್ಶದಿ ಕಾಮಲೋಭವು ಅದsÀರದಿ ಮಾಯೆಯು ಹಾಸದಲಿಕೋಪ ಲಲಾಟದಲಿಅಂಬುರೇತಸಲಿ10ಮೃತ್ಯು ಛಾಯೆಯಲ್ಲಿ ಓಷಧಿ ರೋಮದಲಿನದಿಗಳು ನಾಡಿಯಲಿ ಕಲ್ಲು ನಖದಲಿಇಂದ್ರಿಯಗಳಲ್ಲಿ ದೇವಗಣ ಋಷಿ ಸಮೂಹವುಬುದ್ಧಿಯಲ್ಲಿಅಜಗಾತ್ರದಲಿ ಚರಾಚರವು11ಉರುಕ್ರಮ ವಿಶ್ವಮೂರ್ತಿ ವಾಮನ ವಿಭೋಪರಮಪೂರುಷ ನೀನೀರೂಪತೋರಿಸಲುನೆರೆದಿದ್ದ ಅಸುರರು ವಿಸ್ಮಯದಿ ನೋಡುತ್ತಬೆರಗಾಗಿ ನಿಂತರು ಏನೂ ತೋರದಲೆ 12ಸುದರ್ಶನ ಚಕ್ರ ಪಾಂಚಜನ್ಯವು ಶಂಖಕೌಮೋದಕೀ ಗದಾಶಾಙ್ರ್ಗ ಮಹಾಧನುಸ್ಸುಬತ್ತಳಿಕೆಗಳುಅಕ್ಷಯಸಾಯಕವುಕತ್ತಿಖೇಟಕಮುಖ್ಯ ವಿಷ್ಣು ಆಯುಧಗಳು13ಅಸಹ್ಯ ತೇಜೋಯುತ ಚಕ್ರ ಮೊದಲಾದಈಶ ನಿನ್ನಯ ಆಯುಧಗಳು ಇರಲುಪಾಶ್ರ್ವದಿ ನಿಂತಿದ್ದರು ಆನಂದಾದಿಪಾರ್ಷದರು ಸಹ ಲೋಕಪಾಲಕರು ಎಲ್ಲಾ 14ಸ್ಫುರದ್ ಕಿರೀಟಾಂಗದ ಮೀನ ಕುಂಡಲವುಉರದಿ ಶ್ರೀವತ್ಸ ರತ್ನೋಜ್ವಲ ಮೇಖಳಾದಿಗಳುಪೀತಾಂಬರ ಮಾಲೆ ಧರಿಸಿ ಪ್ರಜ್ವಲಿಸಿದಿಉರುಕ್ರಮ ಹರೇ ಶ್ರೀಶ ಭಗವಂತ ವಿಷ್ಣೋ 15ರಾಜರಾಜೇಶ್ವರ ತ್ರಿವಿಕ್ರಮ ನಿನ್ನೊಂದುರಾಜೀವಪಾದದಿಂದಕ್ಷಿತಿಸರ್ವ ಅಳೆದಿಭುಜ ಶರೀರದಿ ಆಕ್ರಮಿಸಿದಿನಭದಿಕ್ಕುಹೇ ಜಗದೀಶನೇ ನಮೋ ನಮೋ ಶರಣು 16ದ್ವಿತೀಯಪಾದದಿ ನೀನು ದ್ಯುಲೋಕ ಸ್ವರ್ಗಾದಿಸತ್ಯ ಲೋಕೋ¥ರಿ ವ್ಯಾಪಿಸಿ ನಿಲ್ಲಲುತೃತೀಯ ಪಾದಕೆ ಸ್ಥಳ ಅಣ್ವತಿ ಇಲ್ಲವುಎಂದರಿತ ಆ ಮಹಾಬಲಿ ದಾನಶೂರ 17ತ್ರಿವಿಷ್ಟಪ ಮಹರ್ಜನೋ ತಪ ಸತ್ಯಲೋಕಗಳತ್ರಿವಿಕ್ರಮ ನಿನ್ನಯ ಪಾದವು ವ್ಯಾಪಿಸಿತೀವ್ರ ಸರಸಿಜಜಾಂಡಕಟಾಹಭೇದಿಸೆ ಬ್ರಹ್ಮಅವನಿಜಸಲಾ ಪಾದದಿಂ ಗಂಗೆ ಪಡೆದಿ 18ಸತ್ಯಲೋಕವು ನಿನ್ನನಖಕಾಂತಿಯಿಂದಜ್ಯೋತಿಯಲಿ ಮುಳುಗಲು ಬ್ರಹ್ಮದೇವಎದ್ದು ಬಂದು ಪಿತ ನಿನ್ನ ಪಾದವ ಕಂಡುಅತಿ ಮುದದಿ ಪೂಜಿಸಿದ ಪರಿವಾರ ಸಹಿತ 19ಬ್ರಹ್ಮಸಹ ವಂದಿಸಿದರು ನಿನ್ನ ಮರೀಜಾದಿಮಹಂತರು ಸನಕಾದಿಯೋಗಿಗಳು ಸರ್ವಮಹಾಪುರಾಣ ಸಂಹಿತ ವೇದ ವೇದಾಂಗದಿಮಹಾಸದಾಗಮ ದೇವತಾ ಸಮೂಹ 20ಕಮಂಡಲದಿ ಜಲ ಪೂರೈಸಿಹರಿನಿನ್ನಕಮಲಪಾದಕೆ ಆಘ್ರ್ಯಪಾದ್ಯಾದಿ ಪೂಜೆನೇಮದಿ ಅತಿಮುದ ಭಕ್ತಿಯಿಂದಲಿ ಜೀವೋ -ತ್ತಮ ಬ್ರಹ್ಮ ಮಾಡಿದನು ನಿಜ ಪುಣ್ಯಶ್ಲೋಕ 21ತ್ರಿವಿಕ್ರಮನೇ ನಿನ್ನಯ ಪಾದತೀರ್ಥವೇ ಗಂಗಾಪವಿತ್ರತಮವೆಂದು ತ್ರಿಲೋಕದಲಿ ಪ್ರಸಿದ್ಧದೇವ ದೇವೋತ್ತಮನೇ ಅದ್ಭುತ ಮಹಾಮಹಿಮಪೂರ್ವವೋಲ್ ನಿಂತಿ ವಾಮನ ರೂಪದಲಿ 22ಕಮಲಾಸನಾದಿಗಳು ಲೋಕಪಾಲಕರೆಲ್ಲತಮ್ಮ ತಮ್ಮ ಅನುಚರ ಸುರರ ಸಮೇತನರ್ಮದಾ ತೀರಸ್ಥ ಬಲಿಯಕ್ರತುಶಾಲೆಯಲಿವಾಮನನೆ ನಿನ್ನ ಬಳಿ ಬಂದು ತುಂಬಿದರು 23ಜಯ ಜಯ ಜಯತು ಅನಂತ ಮಹಿಮನೆ ನಿನ್ನತೋಯಜೋದ್ಭವ ಮೊದಲಾಗಿ ಸುರವರರುಅಘ್ರ್ಯಪಾದ್ಯ ಗಂಧ ಧೂಪ ದೀಪಮಾಲಾನೃತ್ಯಗಾಯನದಿ ಪೂಜಿಸಿದರು ಮುದದಿ 24ಆನಂದ ಉಕ್ಕುವ ಭಕ್ತಿಯಿಂದಲಿ ನಿನ್ನಅನಂತ ಮಹಾತ್ಮ್ಯ ಕೊಂಡಾಡಿ ಸುತ್ತಿಸಿಸುಧ್ವನಿಯಲಿ ಜಯಘೋಷ ಮಾಡಿದರುದುಂದುಭಿಭೇರಿಶಂಖಗಳ ಬಾರಿಸುತ25ಬ್ರಹ್ಮದೇವನ ಸುತ ಜಾಂಬವಂತನು ಆಗಮಹಾಭೇರಿ ಶಬ್ದಿಸಿ ದಿಕ್ಕು ವಿದಿಕ್ಕುಮಹಾರ್ಹ ವಾಮನ ನಿನ್ನ ವೈಭವ ಕೊಂಡಾಡಿದ್ದುಮಹೋತ್ಸವ ಎಂದರು ಮುದದಿ ಸಜ್ಜನರು 26ಸಜ್ಜನರು ಸುರರೆಲ್ಲಾನಂದ ಭರಿತರು ಆಗೆದುರ್ಜನ ದೈತ್ಯರು ನಿಂದಿಸಿ ವಾಮನನುದ್ವಿಜರೂಪಿ ಮಾಯಾವಿ ವಿಷ್ಣು ಸುರಕ್ಷಪಕ್ಷನುವಂಚಕನು ಎನ್ನುತ್ತ ಅರ್ಭಟಮಾಡಿದರು 27ಸತ್ಯಧರ್ಮನುಬಲಿತಡೆದರೂ ಮೀರಿದೈತ್ಯರು ಅಚ್ಯುತನ ಕೊಲ್ಲಲು ಬಾರೆಜಯವಿಜಯವಿಷಕ್ಸೇನಾದಿಸುರರುದೈತ್ಯರಲಿ ಬಹು ಜನರ ಕೊಂದುಹಾಕಿದರು 28ನಂದ ಸುನಂದಜಯವಿಜಯಬಲಪ್ರಬಲಪತತ್ರಿಪಕುಮುದಕುಮುದಾಕ್ಷ ಜಯಂತಶೃತದೇವ ಪುಷ್ಪದಂತ ವಿಷಕ್ಸೇನಸಾತ್ವತಾದಿ ಸರ್ವರ ಶೌರ್ಯ ಏನೆಂಬೆ 29ವಿಪ್ರಚಿತ್‍ಯಾದಿ ದೈತ್ಯರಿಗೆ ಪೇಳಿದಬಲಿಪ್ರಭು ಭಗವಂತನ ಇಚ್ಛಾನುಸಾರವೇಲಭಿಸುವುದು ಸರ್ವವು ಜಯವು ಅಪಜಯವುಲಭಿಸಲು ಜಯ ಈಗಕಾಲಅಲ್ಲವೆಂದು30ಸಾತ್ವಿಕ ಧರ್ಮವಾನ್ಬಲಿಇನ್ನೂ ಬೋಧಿಸಲುಯುದ್ಧದಲಿ ತಾಡಿತ ದೈತ್ಯರು ಪಾತಾಳಯೈದಿದರು ಬೇಗನೆ ಏನೆಂದು ವರ್ಣಿಸುವೆಸದ್ಧರ್ಮ ಸುಜ್ಞÕನಿ ಭಕ್ತಬಲಿಗುಣವ31ಪದುಮಜಾಂಡದ ಪ್ರಭುವೇ ನಿನ್ನಾಜÉÕಯಿಂ ಗರುಡಬಂಧಿಸಿದ ವರುಣ ಪಾಶದಲಿ ಬಲಿಯಬಂಧಿಸಲು ಮಹಾಧ್ವನಿ ಹಾಹಾಕಾರವುಎದ್ದಿತು ದಿಕ್ಕು ವಿದಿಕ್ಕು ಸರ್ವತ್ರ 32ಬ್ರಷ್ಟ ಶ್ರೀ ಸ್ಥಿರಪ್ರಜÕ ಮಹಾಯಶಸ್ವಿ ಬಲಿಯವಿಷ್ಣು ಪ್ರಭವಿಷ್ಣು ವಾಮನ ನೀ ಕೇಳ್ದಿಅಷ್ಟು ಸ್ಥಳಗಳು ಎರಡು ಪಾದದಲಿ ಅಡಗಿದವುಕೊಟ್ಟು ಪೂರೈಸು ಮೂರನೇಪಾದಎಂದು33ಹೇಳಿದಂತೆ ಕೊಡದಿದ್ದರೆ ನಿರಯದಲಿಬೀಳ ಬೇಕೆಂಬುವುದು ಗುರುಗಳೊಪ್ಪುವರುಹೇಳಿದಂತೆ ಕೊಡು ಮೂರನೇಪಾದಸ್ಥಳಇಲ್ಲದಿದ್ದರೆ ನರಕ ಹೋಗು ಎಂದಿ ಬಲಿಗೆ 34ಪದಂ ತೃತೀಯಂ ಕುರು ಸೀಷ್ರ್ಣ ಮೇ ನಿಜಂಎಂದು ಪೇಳುತಬಲಿವರುಣಪಾಶಬಂಧಕೂ ನಿರಯಕೂ ಶೋಕದಿ ಅಂಜುವನಲ್ಲಸಾಧುಸತ್ಯದ ಕೊರತೆಗೇವೆ ಅಂಜುವೆನೆಂದ 35ನೈವಾರ್ಥ ಕೃಛ್‍ರಾಧ್ ಭವತೋ ವಿನಿಗ್ರಹಾದ ಸಾಧು ವಾದಾದ್ ಭೃಷ ಮೃದ್ವಿಜೇಯಥಾಎನ್ನುತಬಲಿಮತ್ತು ತನ್ನ ಕುಲಹಿರಿಯರುನಿನ್ನೊಲಿಸಿಕೊಂಡ ವಿಧ ಸ್ಮರಿಸಿ ಪೇಳಿದನು 36ಉತ್ತಮ ಶ್ಲೋಕ ಹರೇ ಪರಮಗುರು ನಿನ್ನಭಕ್ತವರ್ಯನು ಸಾಧು ಪ್ರಿಯ ಸತ್ಯಧರ್ಮಪ್ರಹ್ಲಾದ ಸರ್ವ ಐಹಿಕ ವಸ್ತು ಸಂಸೃತಿಹೇತುಎಂದು ನಿನ್ನ ಪದ್ಮಾಂಘ್ರಿಯಲ್ಲೇ ರತನಾದ37ಇನ್ನೂ ಬಹುವಾಗಿಬಲಿಭಕ್ತಿಯಿಂ ಮಾತಾಡೆಶ್ರೀನಿಧಿ ನಿನ್ನ ಪ್ರಿಯ ಪ್ರೇಮಿ ಪ್ರಹ್ಲಾದಪೂರ್ಣೇಂದು ಉದಿಸಿದಂದದಿ ಬಂದು ನಿಂತನುಹೊನ್ನು ವಸನಾಬ್ಜಾಕ್ಷ ಸುಂದರ ವಿಗ್ರಹನು 38ಬಂಧಿತಬಲಿಪಿತಾಮಹ ಪ್ರಹ್ಲಾದನಿಗೆಮೂಧ್ರ್ನಾ ನಮಿಸಿದನು ನೇತ್ರಾಂಬು ತುಳಕೆಪದ್ಮಜ ಸುನಂದೇಶನಂದಾದ್ಯುಪಾಸಿತಇಂದಿರೇಶನೆ ನಿನಗೆ ನಮಿಸಿದ ಪ್ರಹ್ಲಾದ 39ಮೋದಬಾಷ್ಪದಿ ನಮಿಸಿ ಪೇಳಿದನು ನೀಬಲಿಗೆಇಂದ್ರಪದ ಕೊಟ್ಟಿದ್ದಿ ಕೊಂಡೀಗ ಅದನ್ನೇಘಾತಕ ಮೋಹಕ ಶ್ರೀ ಕಳೆದು ಅನುಗ್ರಹ ಮಾಡಿದಿಎಂದು ನಮಿಸಿದ ಜಗದೀಶ್ವರನೇ ನಿನಗೆ 40ನಾರಾಯಣಅಖಿಳಲೋಕ ಸಾಕ್ಷಿಯೇ ನಿನಗೆಈ ರೀತಿ ಪ್ರಹ್ಲಾದ ಪೇಳಿದ ತರುವಾಯವಾರುಣದಿ ತನ್ನಪತಿಕಟ್ಟಿಲ್ಪಟ್ಟಿದ್ದು ಕಂಡುಕರಮುಗಿದು ನಮಿಸಿದಳು ನಿನಗೆಬಲಿಜಾಯಾ41ಇಂದ್ರಸೇನ ಎಂಬ ಮತ್ತೊಂದು ಹೆಸರುಂಟುಬಂಧಿತ ಬಲಿರಾಜನಿಗೆ ತತ್ಪತ್ನಿವಿಂದ್ಯಾವಳಿ ದೇವಿ ಭಯ ಭಕ್ತಿಯಿಂದಉಪೇಂದ್ರ ನಿನಗೆ ಬಿನ್ನೈಸಿದಳು ನಮಿಸಿ 42ಆನಂದಮಯಪೂರ್ಣಕಾಮ ಪ್ರಭು ನೀನುವನರುಹಭವಾಂಡವ ಕ್ರೀಡಾರ್ಥ ಪಡೆದಿಅನನ್ಯಾಧೀನ ಸ್ವತಂತ್ರ ಸರ್ವೇಶನುನೀನೇವೆ ಸರ್ವಕರ್ತನು ಅನ್ಯರಲ್ಲ 43ನೀನೇವೇ ಬ್ರಹ್ಮಾಂಡ ದೊರೆಕರ್ತಆಗಿರಲುಅನ್ಯರಿಗೆ ಕರ್ತೃತ್ವ ಸ್ವಾಮಿತ್ವವಿಲ್ಲತಾನು ದೊರೆ ಕೊಂಡಿಹೆ ಕೊಟ್ಟಿಹೆ ಬಿಟ್ಟಿಹೆ ಎಂಬಹೀನ ಅಹಂಕಾರ ಮಾತು ಅಸಂಗತವು 44ದೇವ ದೇವನೇ ನಿನ್ನ ನಾಭಿಜ ಬಿನ್ನೈಸಿದಅವಿಕ್ಲವ ಮನದಿಂದ ಸರ್ವಸ್ಥ ನಿನಗೆನಿವೇದಿಸಿದಬಲಿರಕ್ಷಣಾರ್ಹನಾಗಿಹನುಸರ್ವಸ್ವಾಮಿಯೇ ಭೂತಭಾವನಭೂತೇಶ45ಮಂದನಾದರು ಅರ್ಪಿಸೆ ನಿನ್ನ ಪದಯುಗದಿಭಕ್ತಿಯಿಂ ದೂರ್ವಾಂಕುರ ಸಲೀಲವಾದರೂಉತ್ತಮ ಸೌಭಾಗ್ಯಗತಿ ಈವಿ ಅಂಥವಗೆಂದುಖ್ಯಾತ ಮೂರ್ಜಗದಿ ಕೊಂಡಾಡುತಿಹರೆಂದು 46ಪದ್ಮಜಗೆ ನೀ ಪೇಳ್ದಿ ಈಬಲಿಮಹಾರಾಜಅತಿ ಕಷ್ಟಕೊಳಗಾದ ಶತ್ರು ಪೀಡಿತನುಶಪ್ತನಾಗಿ ಸ್ಥಾನ ಕಳಕೊಂಡರೂ ಸಹಸತ್ಯವಾಕ್ ತ್ಯಜಿಸದ ಸದ್ಧರ್ಮವಂತ 47ಸುವ್ರತ ಈ ಬಲಿಗೆ ಅಮರರಿಗೂ ದುಷ್ಪ್ಮಾಪ್ಯಸಾವರ್ಣಿ ಮನು ಕಲ್ಪದಿ ಇಂದ್ರ ಪದವಈವಿ ನೀ ಎಂದು ಅವ ಆ ಕಾಲದವರೆಗಿರಲಿವಿಶ್ವಕರ್ಮ ನಿರ್ಮಿತ ಸುತಲಿದಿ ಎಂದಿ 48ಆಧಿ ವ್ಯಾಧಿ ಶ್ರಮ ಉಪದ್ರವಗಳಿಲ್ಲ -ದಂಥ ಸುತಲದಲಿ ಸುಖದಿಂದಿರಲಿಎಂದು ನೀ ಬ್ರಹ್ಮನಿಗೆ ಪೇಳಿ ಬಲಿಯನು ನೋಡಿಇಂದ್ರಸೇನ ಮಹಾರಾಜ ಭದ್ರಮಸ್ತುತೆ ಎಂದಿ 49ಸುತಲದಲಿ ಪರಿವಾರ ಸ್ವಜನರಿಂದೊಡಗೂಡಿಭದ್ರದಿ ಸೌಭಾಗ್ಯದಿ ವಾಸಮಾಡುದೈತ್ಯಶತ್ರುಗಳು ಕಾಟಕೊಟ್ಟರೆಅವರಕತ್ತರಿಸುವುದು ಸುದರ್ಶನವು ಎಂದಿ 50ಸದಾ ಸನ್ನಿಹಿತನಾಗಿದ್ದು ರಕ್ಷಿಸುವಿಸದಾ ನಿನ್ನ ದರ್ಶನ ಮಾಡಬಹುದುದೈತ್ಯರ ಸಂಗದಿಂ ಅಸುರಭಾವ ಬಂದರೆ ನಿನ್ನಸುದರ್ಶನದಿ ಅದು ಪೋಪುದು ಎಂದಿ 51ಮಹೈಶ್ವರ್ಯಪೂರ್ಣಹರಿನಿನ್ನ ಮಾತುಕೇಳಿಮಹಾನುಭಾವನು ಸಾಧುಪ್ರಿಯ ಬಲಿರಾಯಮಹಾನಂದ ಬಾಷ್ಪವ ಸುರಿಸುತ್ತ ಸ್ತುತಿಸಿದಮಹಾಕೃಪಾಂಬುಧೇ ಭಕ್ತವತ್ಸಲ ನಿನ್ನ 52ಅನತೇಷ್ಟಪ್ರದ ಪ್ರಪನ್ನಪಾಲಕ ವಿಭೋತನಗೆ ಪೂರ್ವದಿ ಲೋಕಪಾಲಕರ್ಗೆ ಸಿಕ್ಕದಅನುಗ್ರಹ ಮಾಡಿರುವಿ ಅಸುರನು ತಾನುಎನ್ನುವದು ಎಣಿಸದೆÀ ಕೃಪೆ ಮಾಡಿದಿ ಎಂದ 53ಕೃತಜÕ ಭಕ್ತನುಬಲಿಹರಿನಿನಗೆ ನಮಿಸಿದನುಪದುಮಭವಗೂ ಸದಾಶಿವಗೂ ನಮಿಸಿದನುಬಂಧಿಸಿದ ವರುಣಪಾಶವು ಬಿಟ್ಟು ಹೋಯಿತುಹೇ ದಯಾನಿಧೇ ನಿನ್ನ ಕರುಣದಿಂದಲ್ಲೆ 54ಈ ರೀತಿ ಹರಿವಾಮನ ನೀನು ಕ್ರೀಡಿಸಿದಿಶಕ್ತನಿಗೆ ಸ್ವರ್ಗಾಧಿಪತ್ಯ ಪುನರಿತ್ತಿಸುರಮಾತೆ ಅದಿತಿಗೆ ಪಯೋವ್ರತ ಫಲವಿತ್ತಿಸರ್ವಜಗತ್ತಿಗೆ ಸುಕ್ಷೇಮಒದಗಿಸಿದಿ 55ಸಿರಿಧರಾಪತಿ ವಿಷ್ಣು ಶಿಪಿವಿಷ್ಣು ವಾಮನಹರಿನಿನಗೆ ಮೂರಡಿ ಸ್ಥಳ ದಾನ ಕೊಟ್ಟುಮೂರನೇಪಾದತನ್ನ ಶಿರ ಮೇಲೆ ಇಡು ಎಂದಧೀರ ಬಲಿಗೆ ಭಾವಿ ಇಂದ್ರಪದವಿತ್ತಿ 56ಇನ್ನಾರಿಗೂ ಈ ಸಮಯದಿ ಸಿಕ್ಕದನಿನ್ನಯ ಮಹವಿಶೇಷ ಪ್ರಸಾದ ಕೊಟ್ಟಿರುವಿವನಜಭವ ಶಿವ ವಂದ್ಯಹರಿನೀನು ರಕ್ಷಕನುನೀನೆಲ್ಲಿ ನಾವು ಅಸುರರು ಎಲ್ಲಿ ಸ್ವಾಮಿ 57ಜಗತ್ ಸೃಷ್ಟ್ಯಾದಿಗಳ ಲೀಲೇಯಿಂದಲಿ ಮಾಳ್ಪಿಸರ್ವಗ ಸಮ ಅವಿಕ್ರಯ ವಿವಿಧಫಲದಹೀಗೆ ಇನ್ನೂ ಬಹು ತತ್ವನಿಬಿಡ ಸ್ತೋತ್ರಉಕ್ಕುವ ಭಕ್ತಿಯಲಿ ಮಾಡಿದ ಪ್ರಹ್ಲಾದ 58ವತ್ಸಪ್ರಹ್ಲಾದ ಭದ್ರಂತೇ ಎನ್ನುತಸುತಲಕೆಬಲಿಸಹ ಪೋಗಿ ಸುಖಿಸುವುದುಗದಾಪಾಣಿ ನಿನ್ನನ್ನುನಿತ್ಯನೋಡಿ ಮಹಾ-ನಂದ ಹೊಂದಿಕರ್ಮಕಳೆಎಂದು ಪೇಳ್ದಿ59ಸಾಧುಪ್ರಿಯ ಪ್ರಖ್ಯಾತ ಪ್ರಹ್ಲಾದ ಬಲಿರಾಜಪ್ರದಕ್ಷಿಣಿ ನಮಸ್ಕಾರ ಭಕ್ತಿಯಿಂ ಮಾಡಿಆದಿ ಪೂರಷ ನಿನ್ನ ಅನುಜÉÕೀಯ ಕೊಂಡುಪೋದರು ಸುತಲಕ್ಕೆ ಮಹಾಬಿಲ ದ್ವಾರ 60ಮಧ್ಯದಲೆ ತಡೆಯಾದ ಬಲಿಯಜÕ ಪೂರೈಸೆಯಜÉÕೀಶ ಯಜÕ ಪೂರುಷ ಭೂಮ ನೀನುಆಜÉÕ ಮಾಡಲು ಶುಕ್ರಾಚಾರ್ಯ ಬ್ರಾಹ್ಮಣರೊಡೆಯಜÕ ಕರ್ಮವ ಸಾಂಗ ಪೂರ್ಣ ಮಾಡಿದರು 60ಬ್ರಹ್ಮ ಶಿವ ದಕ್ಷ ಮನು ಬೃಗ್ ವಾಂಗೀರಾದಿಗಳುಕುಮಾರ ದೇವರ್ಷಿಗಳು ಪಿತೃ ಭೂಮಿಪ ಸರ್ವರುವಾಮನನೇ ಲೋಕೈಕಪತಿಪಾಲಕನೆನುತ ನಿನಗೆನಮಿಸಿ ತೋಷಿಸಿದನು ಅದಿತಿ ಕಶ್ಯಪರು 62ಸರ್ವಲೋಕಂಗಳಿಗೂ ಸರ್ವವೇದಂಗಳಿಗೂಸರ್ವದೇವತೆಗಳಿಗೂ ಧರ್ಮ ಯಶಸ್‍ಸಿರಿಗೂಸರ್ವಸುವ್ರತಗಳಿಗೂ ಸ್ವರ್ಗಾಪವರ್ಗಕ್ಕೂಸರ್ವವಿಭೂತಿಪತಿಮಂಗಳ ಉಪೇಂದ್ರ63ಪದುಮಜನು ಅನುಮೋದಿಸಿ ಇಂದ್ರ ಬೇಡಲುನೀ ದೇವಯಾನದಿ ಇಂದ್ರ ಸಹ ಕುಳಿತುತ್ರಿದಿವ ಸೇರಿದಿ ಇಂದ್ರೇಂದ್ರ ಉಪೇಂದ್ರ ಆ -ನಂದಮಯ ಜಗದೀಶ ಶ್ರೀಪತೇ ಭೂಮನ್ 64ಅದಿತಿ ದೇವಿಯ ಹೊಗಳಿ ವಿಷ್ಣು ವಾಮನ ನಿನ್ನಅದ್ಭುತ ಮಹಿಮೆ ಕೊಂಡಾಡಿ ಕೀರ್ತಿಸುತಪದುಮಭವ ಶಂಕರ ಭೃಗ್‍ವಾದಿಮುನಿಪಿತೃ ಸಿದ್ಧರು ಸ್ವಸ್ವಸ್ಥಾನಯೈದಿದರು 65ವಾಮನನು ವಿಶ್ವರೂಪ ಪ್ರಕಟಿಸಿ ದಾನವಸ್ತುಭೂಮಿ ದಿವಿಯ ಈರಡಿಗಳ ವ್ಯಾಪಿಸಿದ್ದುನೇಮಿ ವಿಪ್ರಚಿತ್ತಿ ಪೇಳಿದ ಮಾಯಾಜಾಲವು ಅಲ್ಲವಿಷಮ ವಸ್ತುವ ದೋಷ ಕಿಂಚಿತ್ತೂ ಅಲ್ಲ 66ಪ್ರಾಥಮಿಕವಾಗಿ ಶ್ರೀ ವಿಷ್ಣುರೂಪಒಂದೊಂದಲೂಅನಂತರೂಪಗಳು ಸುಖಜ್ಞಾನಾದಿ ಪೂರ್ಣವಾಗಿಶಶ್ವದೇಕ ಪ್ರಕಾರವಾಗಿ ಇಹುದೆಂದು ಶಾಸ್ತ್ರ ಸಾರುತಿವÉಸ್ವತಃ ಅವ್ಯಕ್ತಹರಿಪ್ರಕಟಿಸುವ ಸ್ವೇಚ್ಛೆಯಿಂ ಆಗಾಗ67ಅಣೋರಣಿಯಾನ್ ಮಹತೋ ಮಹೀಯಾನ್ತನ್ನ ವಾಮನ ರೂಪದಲ್ಲೇ ತನ್ನ ವಿಶ್ವರೂಪತಾನೇ ವ್ಯಕ್ತ ಮಾಡಿದನು ವಿಷ್ಣು ವ್ಯಾಪನಶೀಲಗುಣರೂಪ ಅಭಿನ್ನ ಅವ್ಯಯನು 68ಮತ್ತೂ ಬಲಿರಾಜನಿಗೆ ಶ್ರುಕ್ರಾಚಾರ್ಯರುಮೊದಲೇವೇ ಹೇಳಿದರು ವಾಮನನು ವಿಷ್ಣು ಅವ್ಯಯನುಇಂದ್ರನಿಗೆ ಪುನಃ ರಾಜ್ಯ ಕೊಡಲಿಕ್ಕೆ ದಾನಕೇಳಿಕ್ಷಿತಿದಿವಿ ಸರ್ವವ ಎರಡು ಪಾದದಿಂ ಅಳೆವನೆಂದು69ಈ ರೀತಿ ಬಲಿರಾಜ ದಾನಕೊಡುವ ಪೂರ್ವದಲೆಹರಿವ್ಯಾಪನಶೀಲ ವಿಷ್ಣುವೇವೇ ವಾಮನನೆಂದುಅರಿತೇವೇಶಕ್ರಸಾಧಕ ದಾನ ಕೊಟ್ಟಿಹನುಮುಚ್ಚುಮರೆ ವಿಷಯ ವಂಚನೆಗೆ ಸಿಲುಕಲಿಲ್ಲ 70ಮೋಸಕ್ಕೆ ಒಳಗಾಗಿ ಅಲ್ಲ ಮನಸಾ ತಿಳಿದೇಅಸುರರಿಪು ವಿಷ್ಣುಗೆ ಬಲಿರಾಜ ತಾನೇಈಶಾರ್ಪಣಜಗತ್ರಯದಾನ ಕೊಟ್ಟಿಹನುಎಂದು ಹೇಳಿ ಕೀರ್ತಿಸಿದರು ದೇವಗಾಯಕರು 71ಕಿನ್ನರಕಿಂಪುರುಷಗಂಧರ್ವರು ಕೊಂಡಾಡಿದರುಮನಸ್ವಿನಾನೇನ ಕೃತಂ ಸುದುಷ್ಕರಂವಿದ್ವಾನ್ ಅದಾದ್ ಯದ್ರಿಪವೇ ಜಗತ್ರಯಂಏಕೋನ ವಿಂಶತ್ ಅಧ್ಯಾಯ ಶ್ಲೋಕ ಇಪ್ಪತ್ತು 72ಬಲಿರಾಜನು ರಾಣಿ ವಿಂದ್ಯಾವಳಿಯುಅಲ್ಲಿ ಬಂದ ಪ್ರಹ್ಲಾದ ಮಹಾರಾಜನುಪ್ರಲಂಭನ ವೈಷಮ್ಯ ವಾಮನ ಮಾಡಲಿಲ್ಲಬಲಿಗೆ ಮಹಾ ಅನುಗ್ರಹ ಮಾಡಿದಿ ಎಂದು ತಿಳಿದಿಹರು 73ಶಿಪಿವಿಷ್ಟ ವಾಮನ ತ್ರಿವಿಕ್ರಮನೆ ನಿನ್ನಸುಪವಿತ್ರ ಚರಿತೆ ಇದುಕೇಳಿಪಠಿಸುವರ್ಗೆಪಾಪ ಪರಿಹಾರವುಶುಭಮಂಗಳವಿತ್ತುಸೌಭಾಗ್ಯಪ್ರದ ಶ್ರೀಶ ಸದ್ಗತಿ ಈವಿ 74ಮಧ್ವಸ್ಥ ಸರ್ವಸ್ಥ ಮತ್‍ಸ್ಥವಿಧಿತಾತಜ್ಯೋತಿರ್ಮಯ ತ್ರಿವೃನ್ನಾಮ ವಾಮನ ಮಂತವ್ಯಮೋದಮಯ ಶ್ರೀಯುಕ್ ಪ್ರಸನ್ನ ಶ್ರೀನಿವಾಸಮುದಜ್ಞಾನಧನ ಆಯುರ್ಭಾಗ್ಯದನೇ ಶರಣು 75- ಇತಿ ತೃತೀಯ ಅಧ್ಯಾಯ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಪ್ರಸನ್ನ ಶ್ರೀಪಾದರಾಜರ ಅಣು ಚರಿತೆ103ಪ್ರಥಮ ಕೀರ್ತನೆಶ್ರೀ ಪಾದರಾಜಗುರು ಸಾರ್ವಭೌಮರಪಾದನಾಪೊಂದಿ ಶರಣಾದೆ ಎಮ್ಮ ಪಾಲಿಪರುಶ್ರೀಪ ನರಹರಿಶಿಂಶುಮಾರಹಯಮುಖರಾಮಗೋಪಿವಲ್ಲಭ ರಂಗ ಒಲಿದಿಹಮಹಂತಪಶ್ರೀ ಹಂಸ ಲಕ್ಷ್ಮೀಶನಾಭಿಭವಸನಕಾದಿಮಹಂತದೂರ್ವಾಸಾದಿಗಳಗುರುಪರಂಪರೆಯಮಹಾಪುರುಷೋತ್ತಮ ದಾಸ ಶ್ರೀ ಮಧ್ವವನ -ರುಹಪಾದಗಳಲಿನಾ ಶರಣು ಶರಣಾದೆ1ಕಲಿಯುಗದಿ ಸಜ್ಜನರು ದುರ್ಜನರ ದುಸ್ತರ್ಕಕಲುಷವಾದಗಳಲ್ಲಿ ಮನಸೋತು ಪೋಗೆಳಾಳುಕನ ಪರಮಪ್ರಸಾದ ಹೊಂದುವ ಜ್ಞಾನಇಳೆಯಲಿ ಮಧ್ವ ಬೋಧಿಸಿದ ಅವತರಿಸಿ 2ಭಾರತೀಪತಿ ವಾಯು ಭಾವಿ ಬ್ರಹ್ಮನೇ ಮಧ್ವಹರಿಆಜÉÕಯಲಿ ಸುಜನರನುದ್ದರಿಸೆ ಜನಿಸಿಪರಮಸತ್ತತ್ವವಾದ ಅರುಪಿ ಬದರಿಗೆತೆರಳಿದನು ತತ್‍ಪೂರ್ವ ಶಿಷ್ಯರ ನೇಮಿಸಿದ್ದ 3ವೈದಿಕ ಸದಾಗಮದಿ ಬೋಧಿತ ತಾತ್ವಿಕದ್ವೈತ ಸಿದ್ಧಾಂತದ ಆದಿಗುರು ಮಧ್ವಬದರಿಗೆ ತೆರಳಲು ಶ್ರೀಪದ್ಮನಾಭ-ತೀರ್ಥರಾರೋಹಿಸಿದರು ಮಧ್ವಮಠ ಪೀಠ 4ಈ ಆದಿಮಠಗುರುಪರಂಪರೆಯು ನರಹರಿತೀರ್ಥ ಮಾಧವತೀರ್ಥ ಅಕ್ಷೋಭ್ಯ ತೀರ್ಥಮಾಧ್ವಗ್ರಂಥಗಳಿಗೆ ಟೀಕೆಯ ಬರೆದಿರುವಜಗತ್‍ಪ್ರಖ್ಯಾತ ಜಯತೀರ್ಥ ಸಾಧು ಮುನಿವರ್ಯ 5ವಿದ್ಯಾಧಿರಾಜರು ಜಯತೀರ್ಥಜಾತರುವರ್ಧಿಸಿದರು ಈ ಆದಿ ಮಠವನ್ನಆದಿಮಠ ಭಿನ್ನಾಂಶ ಮಠಗಳುಪಂಕಜನಾಭಮಾಧವಾಕ್ಷೋಭ್ಯರಿಂ ಪುಟ್ಟಿ ಇಹುದು 6ಪದುಮನಾಭಾದಿ ಈ ಸರ್ವ ಗುರುಗಳಿಗೆ ನಾಆದರದಿ ಶರಣಾದೆ ಸಂತೈಪರೆಮ್ಮಪದುಮನಾಭರು ತಾವೇ ಸ್ಥಾಪಿಸಿದ ಮಠದಲ್ಲಿಮೊದಲನೇಯವರು ಶ್ರೀ ಲಕ್ಷ್ಮೀಧರರು 7ಶ್ರೀ ಲಕ್ಷ್ಮೀಧರ ತೀರ್ಥ ಸೂರಿಗಳ ವಂಶಜರುಮಾಲೋಲ ಶ್ರೀರಂಗನಾಥನ ಪ್ರಿಯಶೀಲ ಯತಿವರ ಸ್ವರ್ಣವರ್ಣತೀರ್ಥರುಅವರಜಲಜಕರಜಾತ ಶ್ರೀಪಾದರಾಜಾರ್ಯ 8ಶ್ರೀಲಕ್ಷ್ಮೀಧರ ತೀರ್ಥ ಮೊದಲಾದ ಸರ್ವರಕಾಲಿಗೆ ಎರಗುವೆ ಕರುಣಾಶಾಲಿಗಳುಶ್ರೀ ಲಕ್ಷ್ಮೀನಾರಾಯಣಾರ್ಯರ ಪ್ರಭಾವವುಬಲ್ಲನೆ ನಾನು ವರ್ಣಿಸಲು ಘನತರವು 9ಯತಿರಾಜರಿವರ ಮಹಿಮೆ ಬಹು ಬಹು ಬಹಳವೇದ್ಯ ಎನಗೆ ಅತಿ ಸ್ವಲ್ಪವೇವೇಅದರಲ್ಲೂ ಬಿಟ್ಟಿದ್ದು ಇಲ್ಲಿ ಪೇಳಿಹುದುಅತಿಕಿಂಚಿತ್ ಅಣುಮಾತ್ರ ಸುಜನರು ಆಲಿಪುದು 10ಕನ್ನಡ ಪ್ರದೇಶದಲಿ ಮಹಿಸೂರು ರಾಜ್ಯದಲಿಚೆನ್ನಪಟ್ಟಣಕೆರಡು ಕ್ರೋಶದೊಳಗೇವೇಸಣ್ಣ ಗ್ರಾಮವು ಅಬ್ಬೂರು ಎಂಬುದುಂಟುಕಣ್ವತೀರ್ಥಾಭಿಧ ಪುಣ್ಯನದೀತೀರ 11ವಿದ್ಯಾಧಿರಾಜರ ಕರಕಮಲೋತ್ಪನ್ನರುವೇದ ವೇದಾಂತ ಕೋವಿದರುಗಳು ಈರ್ವರುವಿದ್ಯಾಧಿರಾಜ ಈರ್ವರಲಿ ಪೂರ್ವಜರುವಾದಿಗಜ ಸಿಂಹ ರಾಜೇಂದ್ರ ಯತಿವರರು 12ರಾಜೇಂದ್ರ ತೀರ್ಥಜ ಜಯಧ್ವಜರಹಸ್ತಕಂಜಸಂಜಾತ ಪುರುಷೋತ್ತಮ ತೀರ್ಥರುರಾಜರಾಜೇಶ್ವರ ಪಟ್ಟಾಭಿರಾಮನ್ನಪೂಜಿಸುತ ಇದ್ದರು ಅಬ್ಬೂರಿನಲ್ಲಿ 13ಪುರುಷೋತ್ತಮಾರ್ಯರ ಮಹಿಮೆ ನರರಿಂದಅರಿವುದಕೆಸಾಕಲ್ಯಶಕ್ಯವು ಅಲ್ಲಶಿರಿವರನ ಪೂರ್ಣಾನುಗ್ರಹಕೆ ಪೂರ್ಣಪಾತ್ರರಾಗಿಹ ಈ ಕರುಣಿಗೆ ಶರಣು 14ಘೃಣಿಸೂರ್ಯಆದಿತ್ಯ ತೇಜಸ್ಸಲಿ ಬೆಳಗುವವಿನಯ ಸಂಪನ್ನ ಸುಬುದ್ಧಿಮಾನ್ ಬಾಲನ್ನತನ್ನ ಬಳಿ ಕರೆತರಿಸಿ ಬ್ರಹ್ಮಣ್ಯ ತೀರ್ಥಾಖ್ಯಅನಘನಾಮವನಿತ್ತುಪ್ರಣವಉಪದೇಶಿಸಿದರು15ವಾಜಿವಕ್ತ್ರನು ನರಸಿಂಹ ವಿಠಲನುಯಜÕವರಾಹಶ್ರೀರಾಮ ಯದುಪತಿಯಪೂಜಿಸುವ ಬಗ್ಗೆ ಮತ್ತೂಬ್ರಹ್ಮ ವಿದ್ಯಾ ಮಧ್ವಸಚ್ಛಾಸ್ತ್ರ ಬೋಧಿಸುತ್ತಿಹರು ಬ್ರಹ್ಮಣ್ಯರ್ಗೆ 16ಪುರುಷೋತ್ತಮರನ್ನ ಕಾಣಲು ಅಬ್ಬೂರನ್ನಕುರಿತು ಬರುತಿಹರು ಸ್ವರ್ಣವರ್ಣತೀರ್ಥರು ಆಗ ಸಾಯಂಕಾಲ ಇನ್ನೆಷ್ಟುದೂರವೋ ಎಂದು ಶಂಕಿಸಿದರು ಮನದಿ 17ಮಾರ್ಗದಲಿ ದನಗಳ ಮೇಸುವ ಬಾಲಕರೊಳುಅಕಳಂಕ ವರ್ಚಸ್ವಿ ಹುಡುಗ ಓರ್ವನ್ನತಾ ಕಂಡು ಪಲ್ಲಕ್ಕಿ ನಿಲ್ಲಿಸಿ ಕೇಳಿದರುಶ್ರೀಗಳು ಗ್ರಾಮಕ್ಕೆ ದೂರ ಎಷ್ಟೆಂದು 18ಅಹಸ್ಪ್ರಾಂತ ಗಗನಸ್ಥಸೂರ್ಯನ್ನ ನೋಡಿಬಹು ಸಣ್ಣ ವಯಸ್ಸಿನ ಎನ್ನನ್ನು ನೋಡಿಅಹಂಮಾಎಂದು ಕೂಗೋ ಧೇನುಗಳ ನೋಡಿಬಹು ಸಮೀಪವು ಗ್ರಾಮ ಎಂದು ಸೂಚಿಸಿದ 19ಕುಶಾಗ್ರ ಬುದ್ಧಿಯ ಸೂಕ್ಷ್ಮತ್ವವ ನೋಡಿಆ ಸ್ವಾಮಿಗಳಿಗೇ ಈ ಹುಡುಗ ಯಾರೆಂದುಭಾಸವಾಗಿ ಲೋಕರೀತಿಯಲಿ ಕೇಳಿದರುಹೆಸರು ಏನು ಯಾರ ಮಗ ಮನೆ ಎಲ್ಲಿ 20ನಮಿಸಿ ಸ್ವಾಮಿಗಳಿಗೆ ಕರಮುಗಿದು ಪೇಳಿದಅಮ್ಮಗಿರಿಯಮ್ಮನು ತಂದೆಯು ಶೇಷಗಿರಿಲಕ್ಷ್ಮೀನಾರಾಯಣಾಭಿದನು ತಾನೆಂದುಸಮೀಪಸ್ಥ ಹೊಲದಲ್ಲಿ ಮನೆಯ ತೋರಿಸಿದ 21ಕ್ರಮದಿ ಬರೆ ಓದುವಿದ್ಯೆಕಲಿಯದಿದ್ದರೂಸೂಕ್ಮ ಬುದ್ಧಿ ದೇಹಕಾಂತಿ ಮುಖ ವರ್ಚಸ್ಸಸುಮಹಾ ಪೂರ್ವಸಾಧನದಿ ಎಂದರಿತರುಈ ಮಹಾ ಸೂರಿವರ್ಯರು ಶ್ರೀಸ್ವಾಮಿಗಳು 22ಅಬ್ಬೂರು ಸೇರಿ ಪುರುಷೋತ್ತಮರ ಕೈಯಿಂದಉಪಚಾರಗಳನ್ನು ಕೊಂಡು ಬಾಲತಪೋನಿಧಿ ಬ್ರಹ್ಮಣ್ಯರ ಕಂಡು ಅವರಂತೆಒಬ್ಬ ಬಾಲನು ತಮಗೂ ಬೇಕೆಂದರು 23ತಥಾಸ್ತು ಎನ್ನುತಲಿ ಪುರುಷೋತ್ತಮರತಂದೆ ತಾಯಿಗಳನ್ನು ಕರೆತರಿಸಿ ಬೇಗಮುದದಿ ಮಾಡಿದರು ಲಕ್ಷ್ಮೀನಾರಾಯಣಗೆವೇದಾಧಿಕಾರ ಬರುವಂಥ ಉಪನಯನ 24ಬಹ್ಮೋಪದೇಶಾದಿ ಮಂತ್ರೋಪದೇಶಗಳುವಿಹಿತ ರೀತಿಯಲ್ಲಿ ಆದ ತರುವಾಯಬ್ರಹ್ಮಚಾರಿ ಆ ಬಾಲಕನಿಗೆ ಸಂನ್ಯಾಸಮಹಾಪ್ರಣವಉಪದೇಶ ಕೊಟ್ಟರು ಗುರುವು25ಗುರುಸ್ವರ್ಣವರ್ಣ ತೀರ್ಥರು ವಾತ್ಸಲ್ಯವಎರೆಯುತ್ತ ಲಕ್ಷ್ಮೀನಾರಾಯಣ ತೀರ್ಥಆಶ್ರಮೋಚಿತ ನಾಮ ಕೊಟ್ಟು ಬಾಲನ್ನಸೇರಿಸಿಕೊಂಡರು ತಮ್ಮ ಪರಂಪರೇಲಿ 26ಹಿಂದೆ ಶೇಷಗಿರಿಯಪ್ಪ ಗಿರಿಯಮ್ಮ ದಂಪತಿಯಕಂದನು ದನ ಮೇಸೋ ಲಕ್ಷ್ಮೀನಾರಾಯಣಇಂದುಲಕ್ಷ್ಮೀನಾರಾಯಣ ತೀರ್ಥರಾಗಿವೇದಾಂತ ಸಾಮ್ರ್ರಾಜ್ಯ ಯುವರಾಜನಾದ 27ವಿದ್ಯಾಧಿ ರಾಜ ರಾಜೇಂದ್ರ ಜಯಧ್ವಜ ಪುರು -ಷೋತ್ತಮ ಬ್ರಹ್ಮಣ್ಯರಿಗೆ ನಮೋ ಲಕ್ಷ್ಮೀಧರಾದಿ ಗುರುಗಳಿಗೂ ಸುವರ್ಣವರ್ಣರಿಗೂಸದಾ ನಮೋ ಲಕ್ಷ್ಮಿನಾರಾಯಣ ತೀರ್ಥರಿಗೂ 28ರಾಜೀವಭವಪಿತ ರಾಜರಾಜೇಶ್ವರನುರಾಜೀವಾಲಯ ಪತಿಯ ಪ್ರಸನ್ನ ಶ್ರೀನಿವಾಸಪ್ರಜ್ವಲಿಸುತಿಹ ಮಧ್ವರಾಜ ಸಹ ಶ್ರೀಪಾದರಾಜರೊಳು ಇವರಲ್ಲಿ ಶರಣು ಶರನಾದೆ 29 ಪ-ಪ್ರಥಮ ಕೀರ್ತನೆ ಸಂಪೂರ್ಣಂ-ದ್ವಿತೀಯಕೀರ್ತನೆಶ್ರೀ ಪಾದರಾಜಗುರು ಸಾರ್ವಭೌಮರಪಾದನಾಪÉÇಂದಿ ಶರಣಾದೆ ಎಮ್ಮ ಪಾಲಿಪರುಶ್ರೀಪ ನರಹರಿಶಿಂಶುಮಾರಹಯಮುಖರಾಮಗೋಪೀವಲ್ಲಭ ರಂಗ ಒಲಿದಿಹಮಹಂತಪಸ್ವರ್ಣವರ್ಣರೂ ಲಕ್ಷ್ಮೀನಾರಾಯಣರಿಗೆಆಮ್ನಾಯನಿಗಮಾಂತ ವಿದ್ಯೆಗಳ ಕಲಿಸೆಘನಮಹಾಪಾಂಡಿತ್ಯ ಪ್ರೌಢಿಮೆಯನು ಹೊಂದಿಸಣ್ಣ ಯತಿ ಪ್ರಖ್ಯಾತರಾದರು ಜಗದಿ 1ವಿಭುದೇಂದ್ರ ರಘುನಾಥ ಮೊದಲಾದ ಯತಿವರರುಈ ಬಾಲಯತಿಯ ಪಾಂಡಿತ್ಯ ಪ್ರಭಾವವಬಹು ಬಹು ಶ್ಲಾಘಿಸಿ ರಘುನಾಥರಿವರಿನ್ನ'ಶ್ರೀಪಾದ ರಾಜರು&ಡಿsquo; ಎಂದು ವರ್ಣಿಸಿದರು 2ಅಂದಿನಾರಭ್ಯ ಈ ಲಕ್ಷ್ಮೀ ನಾರಾಯಣರಮಂದಿಗಳು ವಿದ್ವಜ್ಜನರು ಸಜ್ಜನರು'ಆನಂದ ಉತ್ಸಾಹದಿ ಶ್ರೀಪಾದರಾಜ&ಡಿsquo;ರೆಂದು ಕರೆಯುವುದು ಅದ್ಯಾಪಿ ಕಾಣುತಿದೆ 3ರಂಗಕ್ಷೇತ್ರಕೆ ಬಂದು ಶ್ರೀ ಪಾದರಾಜ ಸಹರಂಗನಾಥನ್ನ ಕಂಡು ಸ್ಥಾಪಿಸಿ ಮಠವಭಂಗವಿಲ್ಲದೇ ಪೂಜಾ ಪ್ರವಚನವ ಗೈಯುತ್ತತುಂಗಯತಿ ಸ್ವರ್ಣವರ್ಣರು ಕುಳಿತರಲ್ಲೇ 4ವರುಷಗಳು ಜರಗಿತು ಶ್ರೀಪಾದರಾಜರುಊರು ಊರಿಗೆ ದಿಗ್ವಿಜಯವ ಮಾಡುತ್ತಪರಪಕ್ಷ ಕುಮತಗಳ ಛೇದಿಸಿ ಸತ್ತತ್ವಆರುಪಿದರು ಯೋಗ್ಯಾಧಿಕಾರಿಗಳಿಗೆ 5ಮುಳಬಾಗಿಲು ಎಂದು ಆಧುನಿಕರು ಕರೆವಂಥಒಳ್ಳೇ ಕ್ಷೇತ್ರಕ್ಕೆ ಬಂದು ಮಠದಲ್ಲಿ ಇರುತ್ತಬಾಲಕರು ವೃದ್ಧರು ಯತಿಗಳಿಗೂ ಸದ್ವಿದ್ಯಾಕಲಿಸುತ್ತಿದ್ದರು ತಾವೇ ಪಾಠ ಹೇಳುತ್ತಾ 6ಮುಳಬಾಗಿಲು ಕ್ಷೇತ್ರದಲ್ಲಿ ಹನುಮಂತಶ್ರೀ ಲಕ್ಷ್ಮೀಪತಿಯನ್ನು ಸೇವಿಸುತ ಇಹನುಬಾಲೇಂದು ಶೇಖರನು ಗಿರಿಜಾ ಸಮೇತಶೈಲ ತೋಟಗದ್ದೆ ಅಟವಿಗಳು ಇಹವು 7ಊರಿಗೆ ಕ್ರೋಶ ಮಾತ್ರದಿ ಇರುವ ಸ್ಥಳದಲಿವರಮಧ್ವಸಿದ್ಧಾಂತ ಜಯ ಶಿಲಾ ಲಿಖಿತಇರುವುದು ಅದ್ಯಾಪಿ ಕಾಣ ಬಹುದು ಅಲ್ಲೇಭಾರಿತರ ವಾದವು ನಡೆಯಿತು ಹಿಂದೆ 8ಶ್ವೇತಕೇತು ಉದ್ದಾಲಕರ ಸಂವಾದತತ್ವಮಸಿ ವಾಕ್ಯವೇ ವಾದ ವಿಷಯವಾದಿಸಿದರು ವಿದ್ಯಾರಣ್ಯ ಅಕ್ಷೋಭ್ಯರುವೇದಾಂತ ದೇಶಿಕರ ಮಧ್ಯಸ್ಥ ತೀರ್ಮಾನ 9ಛಾಂದೋಗ್ಯ ಉಪನಿಷತ್ತಲಿರುವ ವಾಕ್ಯಸ ಆತ್ಮಾ ತತ್ವಮಸಿ ಎಂಬುವಂಥಾದ್ದುಭೇದ ಬೋಧಕವೋ ಅಭೇದ ಬೋಧಕವೋಎಂದು ವಾದವು ಆ ಈರ್ವರಲ್ಲಿ 10ಆತ್ಮ ಶಬ್ದಿತ ನಿಯಾಮಕಗೂ ನಿಯಮ್ಯ ಜೀವನಿಗೂಭೇದವೇ ಬೋಧಿಸುವುದು ಆ ವಾಕ್ಯವೆಂದುಸಿದ್ಧಾಂತ ಅಕ್ಷೋಭ್ಯರು ಸ್ಥಾಪಿಸಿದರುಸೋತಿತು ವಿದ್ಯಾರಣ್ಯರ ಐಕ್ಯವಾದ 11ಮಧ್ಯಸ್ಥರಾಗಿದ್ದ ವೇದಾಂತ ದೇಶಿಕರುವಿದ್ಯಾರಣ್ಯ ಎಂಬುವ ಮಹಾರಣ್ಯವತತ್ವಮಸಿ ಅಸಿಯಿಂದ ಅಕ್ಷೋಭ್ಯರುಛೇದಿಸಿದರೆಂದು ಬರೆದಿಹರು ತಮ್ಮ ಗ್ರಂಥದಲಿ 12ಶ್ರೀಪಾದರಾಜರ ಮಠವು ಆ ಸ್ಥಳಕೆಸಮೀಪವೇ ಅಲ್ಲುಂಟು ನರಸಿಂಹ ತೀರ್ಥಸುಪವಿತ್ರತ್ರ್ಯೆ ಲೋಕ್ಯಪಾವನೆಗಂಗಾಸುಪ್ರಸನ್ನಳು ಇಲ್ಲಿ ತೋರಿಹಳು ಸ್ಮರಿಸೇ 13ದಿಗ್ವಿಜಯ ಕ್ರಮದಲ್ಲಿ ಕಾಶೀ ಪಂಢರೀಪುರಮುಖ್ಯ ಕ್ಷೇತ್ರಗಳಿಗೆ ಪೋಗಿ ಅಲ್ಲಲ್ಲಿಭಗವಂತ ಶ್ರೀಪತಿಯ ಒಲಿಸಿಕೊಳ್ಳುವಮಾರ್ಗಭಾಗವತಧರ್ಮ ಸಚ್ಛಾಸ್ತ್ರ ಬೋಧಿಸಿದರು14ಅಲ್ಲಲ್ಲಿ ವಾದಿಸಿದುರ್ವಾದಿಕುಮತಿಗಳಸುಳ್ಳು ಸೊಲ್ಲುಗಳನ್ನು ಬಳ್ಳಿಗಳ ತೆರದಿಸೀಳಿ ಛೇದಿಸಿ ಸ್ಥಾಪಿಸಿದರು ಮಧ್ವಮತಶೀಲತ್ವ ಔನ್ನತ್ಯ ವೇದ ಸನ್ನತಿಯ 15ಅಬ್ಬೂರಲ್ಲಿ ಶ್ರೀ ಸ್ವರ್ಣವರ್ಣ ತೀರ್ಥರುಶ್ರೀ ಪುರುಷೋತ್ತಮ ತೀರ್ಥರ ಕೈಯಿಂದಸುಪ್ರೌಢ ಪಾಂಡಿತ್ಯ ಹೊಂದಿ ಪೀಠವ ಏರಿಪರಿಪಾಲಿಸುತ್ತಿದ್ದರು ಯತಿ ಧರ್ಮ 16ಮಹಾಮಹಿಮ ಶ್ರೀ ಪರುಷೋತ್ತಮರು ತಮ್ಮಯಗುಹೆಯೊಳು ಕುಳಿತರು ಏಕಾಗ್ರ ಚಿತ್ತದಲಿಮಹಾರ್ಹ ಕೇಶವನ ಆರಾಧಿಸುತಿಹರುಬಾಹ್ಯ ಜನರ ಸಂಪರ್ಕವಿಲ್ಲದಲೇ 17ಬ್ರಹ್ಮಣ್ಯ ತೀರ್ಥರು ಉದಾರ ಕರುಣಿಗಳುಬ್ರಾಹ್ಮಣ ಶ್ರೇಷ್ಠನ್ನ ಬದುಕಿಸಿ ಅವನಗೃಹಿಣಿಗೆ ಮಾಂಗಲ್ಯ ಭಾಗ್ಯ ವರ್ಧಿಸಿಮಹಾತ್ಮ ಪುತ್ರನ ಹಡೆಯೆವರನೀಡಿದರು18ತಮಗೆ ಆ ಮಗುವನ್ನು ಕೊಡಬೇಕು ಎಂದುಬ್ರಹ್ಮಣ್ಯರು ಪೇಳಿದ್ದ ಅನುಸರಿಸಿಆ ಮಗುವ ದಂಪತಿಗಳ್ ನೀಡೆ ಶಿಶುವುಶ್ರೀ ಮಠದಿ ಬೆಳೆಯಿತು ಗುರುಗಳ ಪಾಲನದಿ 19ಶ್ರೀ ಹರಿಗೆ ಅಭಿಷೀಕ್ತ ಹಾಲುಂಡು ಶಿಶು ಬೆಳೆದುಶ್ರೀಹರಿನೈವೇದ್ಯದಿಂ ವರ್ಧಿಸಿ ಬಾಲವಿಹಿತ ವಯಸ್ಸಲ್ಲೇವೇ ಉಪನಯನವು ಆಗಿಬ್ರಹ್ಮಣ್ಯರ ಕರದಿ ಲಭಿಸಿತು ಸಂನ್ಯಾಸ 20ಸರ್ವೋತ್ತಮ ಇಜ್ಯಪೂಜ್ಯ ಹರಿಸಾರಾತ್ಮಸರ್ವೇಶ ಶ್ರೀವ್ಯಾಸ ಶ್ರೀಶನ ನಾಮವ್ಯಾಸತೀರ್ಥರು ಎಂದು ಈ ಬಾಲಯತಿವರಗೆಆಶ್ರಮ ನಾಮವಿತ್ತರು ಬ್ರಹ್ಮಣ್ಯರು 21ಪ್ರಣವಾದಿ ಮಂತ್ರಗಳ ತಾವೇವೇ ಬೋಧಿಸಿಘನಬ್ರಹ್ಮ ವಿದ್ಯಾದಿ ಸಚ್ಛಾಸ್ತ್ರ ಕಲಿಯೆಸಣ್ಣ ಯತಿವರ ಶ್ರೀ ಪಾದರಾಜರಲಿಬ್ರಹ್ಮಣ್ಯತೀರ್ಥರು ಕಳುಹಿಸಿದರು 22ಶ್ರೀ ಪಾದರಾಜರು ವ್ಯಾಸರಾಯರಿಗೆಸುಪ್ರೀತಿಯಲಿ ಸರ್ವ ವಿದ್ಯೆಗಳ ಕಲಿಸಿತಾಪೋದಕಡೆ ದಿಗ್ವಿಜಯದಿ ಕರದ್ಹೋಗಿಈ ಬಾಲ ಯತಿಗಳ ಪ್ರಭಾವ ಹರಡಿದರು 23ಶ್ರೀಪಾದರಾಜರು ಸ್ವಭಾವದಿ ಕೃಪಾಳುಗಳುಈ ಪುಣ್ಯ ಶ್ಲೋಕ ಶ್ರೀಗಳ ಮಹಿಮೆ ಏನೆಂಬೆಸರ್ಪಬಾಧೆಯು ವ್ಯಾಸರಾಜರಿಗೆ ಸೋಕದೆಕಾಪಾಡಿಹರು ಆ ಆಹಿಯ ಹೋಗೆಂದು 24ಶಂಖತೀರ್ಥದ ಮಹಿಮೆ ಶ್ರೀಪಾದರಾಜರುಶಂಕೆಇಲ್ಲದೇ ತೋರ್ಪಡಿಸಿಹರು ಜಗಕೆಮಂಕುತನದಲಿ ಬ್ರಹ್ಮಹತ್ಯೆ ಮಾಡಿದವನಕಳಂಕ ಕಳೆದರು ಶಂಖತೀರ್ಥ ಪ್ರೋಕ್ಷಣದಿ 25ಸಂದೇಹಪರಿಹರಿಸೆ ಮಠದಿ ಜನತಿಳಿವುದಕೆತಂದಿಟ್ಟ ಕಪ್ಪುವಸ್ತ್ರದ ಮೇಲೆ ಶಂಖತೀರ್ಥ ಪ್ರೋಕ್ಷಿಸಿ ಶುಭ್ರ ಬಿಳಿಯಾಗಿ ಮಾಡಿದರುಸದಾ ಶರಣು ಇವರಿಗೂ ಶಂಖತೀರ್ಥಕ್ಕೂ 26ಕಂಜಭವಪಿತ ಪಾಂಡುರÀಂಗನು ಶ್ರೀಪಾದರಾಜರಿಗೆ ತಾನೇ ಒಲಿದದ್ದೇ ಕ್ಷೇತ್ರದಮಂಜೂಷದಲಿ ಭಾಮಾ ರುಕ್ಮಿಣೀ ಸಮೇತರಾಜೀವೇಕ್ಷಣ ರಂಗವಿಠಲನು ಒಲಿದಿಹನು 27ಸಾಳುವ ನರಸಿಂಹಾದಿ ರಾಜರು ಪ್ರಮುಖರುಪಾಳೆಯಗಾರರು ಮಂಡಲೇಶ್ವರರುಕೇಳಿಈ ಗುರುಗಳ ಪ್ರಭಾವ ನೋಡಿಕಾಲಿಗೆ ಎರಗಿಹರು ಬಹುಭಕ್ತಿಯಿಂದ 28ಮುಳಬಾಗಿಲು ಮಠಕೆ ಐವತ್ತು ಕ್ರೋಶದೊಳುಸಾಳುವ ನರಸಿಂಹ ರಾಜನ ಅರಮನೆಯುಎಲ್ಲ ಕಾರ್ಯಗಳನ್ನು ಶ್ರೀಪಾದರಾಜರಲಿತಿಳಕೊಂಡುಅವರಆಜÉÕಯಿಂದ ಆಳಿದನು29ಚಂದ್ರಗಿರಿ ಎಂಬುವ ಪಟ್ಟಣದಿ ಆ ರಾಜಮಂದಿರವು ವೇಂಕಟಾಚಲಕೆ ಸಮೀಪಚಂದ್ರಸೋದರಿ ರಮಣ ವೇಂಕಟೇಶನ ಪೂಜೆನಿಂತು ಹೋಗದೆ ಏರ್ಪಾಡು ಮಾಡೆಂದ 30ಗುರುಸಾರ್ವಭೌಮರು ಶ್ರೀಪಾದರಾಜರುಆ ರಾಜನ ಬಿನ್ನಹವನ್ನು ಲಾಲಿಸಿತ್ವರಿತದಿ ಶ್ರೀ ವ್ಯಾಸರಾಜರ ಕಳುಹಿಸಿತಿರುಪತಿ ವೇಂಕಟನ ಪೂಜೆಗೈಸಿದರು 31ರಾಜನ ಪ್ರಾರ್ಥನೆಗೆ ಒಪ್ಪಿ ಶ್ರೀಪಾದರಾಜರು ಅರಮನೆಗೆ ಪೋಗಲು ಅಲ್ಲಿಗಜತುರಗವಿಪ್ರಜನ ಪೂರ್ಣಕುಂಭಾದಿ ಸಹರಾಜನು ಸ್ವಾಗತವ ನೀಡಿದನು ಮುದದಿ 32ವೇದ ಘೋಷಗಳೇನು ಮಂಗಳದ್ವನಿ ಏನುವಾದ್ಯಮೇಳಗಳ ಸುಸ್ವರವು ಏನುಬೀದಿಯಲಿ ತೋರಣ ಪುಷ್ಪ ಮಂಟಪವೇನುಆದರದಿ ಸ್ವಾಗತದ ವೈಭವ ಏನೆಂಬೆ 33ಸಾಳುವ ನರಸಿಂಹನು ತನ್ನ ಸಿಂಹಾಸನದಲ್ಲಿ ಶ್ರೀ ಶ್ರೀ ಪಾದರಾಜರನ್ನಕುಳ್ಳಿರಿಸಿ ಕನಕಾಭೀಷೇಕವ ಮಾಡಿದ್ದನ್ನಅಳವೇ ವರ್ಣಿಸಲಿಕ್ಕೆ ನೋಡಲಾನಂದ 34ಶಿರಿ ರಮಣ ಶಿಂಶುಮಾರನ ಪಾದದಲಿ ಸ್ಥಿರಆಶ್ರಿತರು ಆದುದರಿಂದ ಧರೆಯಲ್ಲಿಹರಿಸಮರ್ಪಿತ ಸರ್ವ ಭೋಗ್ಯಭಾಗ್ಯಂಗಳುಅರಣ್ಯದಲ್ಲಿದ್ದರೂ ಜನರಿಗೆ ದೊರೆಯುವವು 35ರಾಜೀವಭವಪಿತ ರಾಜರಾಜೇಶ್ವರನುರಾಜೀವಾಲಯ ಪತಿಯ ಪ್ರಸನ್ನ ಶ್ರೀನಿವಾಸಪ್ರಜ್ವಲಿಸುತಿಹ ಮಧ್ವರಾಜ ಸಹ ಶ್ರೀಪಾದರಾಜರೊಳು ಇವರಲ್ಲಿ ಶರಣು ಶರನಾದೆ 36ತೃತೀಯ ಕೀರ್ತನೆಶ್ರೀ ಪಾದರಾಜಗುರು ಸಾರ್ವಭೌಮರಪಾದನಾಪÉÇಂದಿ ಶರಣಾದೆ ಎಮ್ಮ ಪಾಲಿಪರುಶ್ರೀಪ ನರಹರಿಶಿಂಶುಮಾರಹಯಮುಖರಾಮಗೋಪಿವಲ್ಲಭ ರಂಗ ಒಲಿದಿಹಮಹಂತಪದೀನ ದಯಾಳು ಶ್ರೀ ಪಾದರಾಜರುಜನರು ಭಾಗೀರಥೀಯಾತ್ರೆ ಮಾಡಲಿಕೆಹಣವು ತ್ರಾಣವು ಸಾಲದು ಎಂದು ಅರಿತುಜಾಹ್ನವಿಯ ತರಿಸಿದರು ನೃಸಿಂಹ ತೀರ್ಥದಲಿ 1ಶ್ರೀಮಧ್ವಿಷ್ಣಂಘ್ರಿನಿಷ್ಠಾಃ ಅತಿ ಗುಣಗುರುತಮಶ್ರೀಮದಾನಂದ ತೀರ್ಥಃ ಎಂದು ಸಂಸ್ತುತ್ಯಶ್ರೀಮಧ್ವಾಚಾರ್ಯರ ಪ್ರಿಯತಮರು ಕರೆದಲ್ಲಿಅಮರ ತಟಿನೀ ಬಂದದ್ದೇನು ಆಶ್ವರ್ಯ 2ಶ್ರೀ ಮಧ್ವಿಷ್ಣಂಘ್ರಿ ಸಂಭೂತೆಯು ತನ್ನಯವಿಮಲ ತೀರ್ಥವ ನರಸಿಂಹ ತೀರ್ಥದಲಿಧಿಮು ಧಿಮು ಎಂದು ಪ್ರವಹಿಸಲು ಜನಸರ್ವರೂಸಮ್ಮುದದಿ ಪೂಜಿಸಿದರು ವಿಹಿತ ರೀತಿಯಲಿ 3ಹಿಂದೆ ಇಂದ್ರನು ತನ್ನಯ ವಜ್ರದಿಂದಅದ್ರಿಗಳ ಪಕ್ಷಿಗಳ ಕಡೆದ ತೆರದಿಇಂದುಶ್ರೀಪಾದರಾಜರು ಕುಮತ ಹೀರಿ ಪಕ್ಷಗಳಛೇದಿಸಿದರು ತಮ್ಮ ವಾಗ್ವಜ್ರದಿಂದ 4ಆನಂದ ತೀರ್ಥರ ನಿಜಾನಂದಪ್ರದ ಶಾಸ್ತ್ರಬಂದು ಬೇಡಿದ ಭಾಗ್ಯ ಅಧಿಕಾರಿಗಳಿಗೆಕುಂದುಕೊರತೆ ಏನೂ ಇಲ್ಲದೆ ಬೋಧಿಸಿಇಂದಿರೇಶನ ಪ್ರಸಾದವ ಒದಗಿಸಿಹರು 5ಚಂದ್ರಿಕಾ ನ್ಯಾಯಾಮೃತ ತರ್ಕತಾಂಡವಮೊದಲಾದ ಗ್ರಂಥಗಳ ರಚಿಸಿದ ಪ್ರಖ್ಯಾತವಾದಿಗಳಕೇಸರಿವ್ಯಾಸಮುನಿ ಮುಖ್ಯಮೇದಿನಿಸುರರಿಗೆ ವಿದ್ಯಾ ಕಲಿಸಿಹರು6ಶ್ರೀರಂಗ ವಿಠಲ ರುಕ್ಮಿಣೀ ಸತ್ಯಭಾಮಾತೋರಿ ತಾವೇ ತಮ್ಮ ಪ್ರತೀಕಗಳೊಳಗೆ ನಿಂತುಸೂರಿವರ ಶ್ರೀಪಾದರಾಜರ ಕೈಯಿಂದಭರದಿ ಪೂಜಾ ಸ್ತೋತ್ರ ಕೀರ್ತನೆ ಕೊಂಡಿಹರು 7ಅನುಪಮ ಅನುತ್ತಮ ಗುಣಗಣಾರ್ಣವ ರಮಾ -ನಾಥನು ಜಗಜ್ಜನ್ಮಾದ್ಯಖಿಲೈಕ ಕರ್ತಾವಿಷ್ಣು ಸರ್ವೇಶ್ವರ ಸ್ವತಂತ್ರಅನಘಮಹಿಮಾಕನ್ನಡ ನುಡಿಯಲಿ ಸಹಸ್ರಾರು ಹಾಡಿಹರು 8ಪ್ರತಿಒಂದು ಪದ ವಾಕ್ಯ ನುಡಿ ಪದ್ಯ ಕೀರ್ತನೆಯುಇಂದಿರಾಪತಿಯಲ್ಲಿ ನಿಶ್ಚಲ ಭಕ್ತಿಬಂಧಮೋಚಕ ಜ್ಞಾನ ಸಾಧನವಾಗಿರುವವುಆದರದಿ ಪಠಿಸೆ ಇಹಪರ ಸುಖಪ್ರದವು 9'ಸ್ಮರಿಸಿದವರನುಕಾವನಮ್ಮ ಸೂರ್ಯಾನೇಕ ಪ್ರಭಾವಸುರಮುನಿಗಳ ಸಂಜೀವ ಶ್ರೀ ವೆಂಕಟೇಶ ನಮ್ಮಪೊರೆವ&ಡಿsquo; ಎಂದಾರಂಭಿಸುವ ಕೀರ್ತನೆ ಪಠಿಸೆಸುಶ್ರವಣವು ಮಾಳ್ಪರ ಭಾಗ್ಯವೇ ಭಾಗ್ಯ 10ಶ್ರೀಪಾದರಾಜರು ಶಿರಿ ವೇಂಕಟೇಶನತಾಪೋಗಿ ಕಂಡು ಧ್ಯಾನದಿ ಸದಾ ನೋಡಿಸೌಭಾಗ್ಯ ಪ್ರದ ಈ ಕೀರ್ತನೆ ಹಾಡಿಹರುಸುಪುಣ್ಯ ಭಾಗಿಗಳೇ ಪಠಿಸಿ ಕೇಳುವರು 11ಭಕ್ತಿಯಿಂದ ಪಠಿಸುವ ಕೇಳುವ ಸಜ್ಜನರುಓದಿ ಕೇಳಿದ್ದು ಕೃಷ್ಣಗರ್ಪಿಸಲುಬದಿಯಲ್ಲೇ ತಾನಿದ್ದು ಯೋಗಕ್ಷೇಮವ ವಹಿಪಶ್ರೀದ ವೇಂಕಟ ಜನಾರ್ದನ ಕೃಷ್ಣ ಶ್ರೀಶ 12ಧನ ಧಾನ್ಯ ಆರೋಗ್ಯ ಆಯುಷ್ಯ ಕೀರ್ತಿಯಘನವಿಘ್ನಕಷ್ಟ ಪರಿಹಾರ ಜಯ ಎಲ್ಲೂಜ್ಞಾನ ಉದ್ಭಕ್ತಿ ಸಂತೋಷಹರಿಅಪರೋಕ್ಷಸಾಧನವು ಇವರ ಈ ಕೀರ್ತನೆ ಪಠನ 13ಜಯ ಜಯ ಜಗತ್ರಾಣ ಜಗದೊಳಗೆಸುತ್ರಾಣಅಖಿಲಗುಣಸದ್ದಾಮ ಶ್ರೀ ಮಧ್ವನಾಮಾಜಯಾಸಂಕರುಷಣ ಸಂಭೂತ ಮುಖ್ಯ-ವಾಯು ಹನುಮ ಭೀಮ ಮಧ್ವನ ಸ್ತೋತ್ರ 14ಈ ಮಧ್ವನಾಮಾಖ್ಯ ಸ್ತವರಾಜವನ್ನುನಮ್ಮ ಶ್ರೀಪಾದ ರಾಜಾರ್ಯ ರಚಿಸಿನಮಗೆಲ್ಲರಿಗಿತ್ತು ನಮಗೆ ಸೌಭಾಗ್ಯವಪ್ರೇಮದಿಂದಲಿ ಒದಗಿಸಿಹರು ಕರುಣಾಬ್ಧಿ 15ಸ್ಮರಿಸಲಾಕ್ಷಣ ಕಾಯ್ವಪುರಂದರದಾಸಾರ್ಯರಪರಂಪರೆ ವಿಜಯಾರ್ಯ ಗೋಪಾಲದಾಸಾರ್ಯಸೂರಿಗೋಪಾಲಾರ್ಯ ಶಿಷ್ಯರು ಜಗನ್ನಾಥದಾಸರಾಯರು ಫಲಶ್ರುತಿ ಬರೆದಿಹರು 16ವರಮಧ್ವ ನಾಮಕ್ಕೆ ಬರೆದಿರುವ ಫಲಶ್ರುತಿಯಭರದಿ ಪಠಿಸುವವರು ಶ್ರೀ ಮಧ್ವನಾಮಉತ್ಕøಷ್ಟ ಮಹಾತ್ಮ್ಯ ಉಳ್ಳದ್ದೆಂದರಿವರುಬರುವುದು ಅನುಭವಕೆ ಮಧ್ವನಾಮ ಓದಿ 17ಶ್ರೀ ಲಕ್ಷ್ಮೀನಾರಾಯಣ ರಾಮ ಹಯಶೀರ್ಷಭೈಷ್ಮೀ ಸತ್ಯಾಯುತ ರಂಗ ವಿಠಲಶ್ರೀ ಮದಾಚಾರ್ಯ ಪೂಜಿತ ಗೋಪೀನಾಥನ್ನಸಮ್ಮುದದಿ ಪೂಜಿಸುವ ಯೋಗಿವರ ಆರ್ಯ 18ಗಂಗೆ ಪ್ರತಕ್ಷ ತೋರಲು ಬಾಗಿನ ಕೊಟ್ಟುಜಗ ಜನ್ಮದ್ಯಖಿಳ ಕರ್ತನ್ನ ಪೂಜಿಸುತ್ತಜಗದೇಕ ಗುರುಮಧ್ವ ಸಚ್ಚಾಸ್ತ್ರ ಭೋದಿಸಿಝಗಿ ಝಗಿಪ ತೇಜಸ್ಸಲಿ ಹೊಂದಿದರುಸಮಾಧಿ19ಶಾಲಿಶಕ ಹದಿನಾಲ್ಕುನೂರೆಂಟನೆ ವರುಷಶುಕ್ಲ ಚತುರ್ದಶಿ ಜೇಷ್ಠ ಮಾಸದಲ್ಲಿಶೀಲತಮ ಭಾವದಲಿ ಳಾಳುಕನ ಧ್ಯಾನಿಸುತಕುಳಿತರು ಸಮಾಧಿಯಲಿ ಹರಿಪುರಯೈದಿದರು 20ಶಿಂಶುಮಾರಪುರವನ್ನಯೈದಿತಾ ಮತ್ತೊಂದುಅಂಶದಲಿ ಸುಪವಿತ್ರ ವೃಂದಾವನದಿ ಭಾಸಿಸುತ ಇರುತಿಹರುಬ್ರಹ್ಮ ವಿದ್ಯಾಲಯ - ಶ್ರೀಶಪ್ರಿಯನರಸಿಂಹ ತೀರ್ಥ ಮಂದಿರದಿ 21ದರ್ಶನವು ಪಾಪಹರ ಪ್ರದಕ್ಷಿಣೆ ಹರಿಯಾತ್ರೆವಿಶ್ವಾಸದಿಂದ ನಮಸ್ಕಾರ ಸರ್ವೇಷ್ಟಐಶ್ವರ್ಯ ಜ್ಞಾನಾದಿ ಫಲಪ್ರದವು ಯೋಗ್ಯರಿಗೆಸಂಸ್ಮರಿಸಲು ಸರ್ವ ಸಿದ್ಧಿದಾಯಕವು 22ಸಿಂಧೂರಅಜಮಿಳ ಸುಧಾಮ ಪ್ರಹ್ಲಾದಾದಿಭಕ್ತರ ಪರಿಪಾಲಕರನು ಶ್ರೀರಮಾಪತಿಯಸದಾ ಒಲಿಸಿಕೊಂಡಿಹಮಹಂತಗುರುವರಶ್ರೀಪಾದರಾಜರೇ ನಮೋ ನಮೋಪಾಹಿ23ರಾಜೀವಭವಪಿತ ರಾಜರಾಜೇಶ್ವರನುರಾಜೀವಾಲಯ ಪತಿಯು ಪ್ರಸನ್ನ ಶ್ರೀನಿವಾಸಪ್ರಜ್ವಲಿಸುತಿಹ ಮಧ್ವರಾಜ ಸಹ ಶ್ರೀಪಾದರಾಜರೊಳು ಇವರಲ್ಲಿ ಶರಣು ಶರನಾದೆ 24|| ಇತಿ ಶ್ರೀ ಪಾದರಾಜರ ಅಣು ಚರಿತೆ ಸಂಪೂರ್ಣಂ||
--------------
ಪ್ರಸನ್ನ ಶ್ರೀನಿವಾಸದಾಸರು
ಬಲ್ಲಿದಗುರುಗಳಿಗೆಎಲ್ಲ ಹಿರಿಯರಿಗೆ ಎರಗಿಬಲ್ಲಷ್ಟು ತತ್ವ ರಚಿಸಿದೆಕೋಲಬಲ್ಲಷ್ಟು ತತ್ವ ರಚಿಸಿದೆಲಕ್ಷ್ಮಿವಲ್ಲಭನಿದಕೆ ಒಲಿಯಲಿಕೋಲ1ಪತಿಗಳ ದಯದಿ ಮಾತುಪತಿರಚಿಸಿದಶ್ರೀಪತಿ ಗುಣನಿಧಿ ಕವನವಕೋಲಶ್ರೀಪತಿ ಗುಣನಿಧಿ ಕವನವು ವಿಸ್ತರಕೆಮಧ್ವ ಮತದ ಜನತಿದ್ದಿ ಕೊಡಬಹುದುಕೋಲ2ರಾಮಕೃಷ್ಣ ದೈವರು ಪ್ರೇಮದ ನುಡಿಗಳುನೇಮ ನಿಷ್ಠೆಯಲೆ ಶ್ರವಣವೆಕೋಲನೇಮ ನಿಷ್ಠಯಲಿ ಶ್ರವಣವ ಮಾಡಲುನಮ್ಮ ಕಾಮನ ಪಿತನುಕೈಹಿಡಿವಕೋಲ3ಮುದ್ದುರಂಗನ ಕಥೆಬುದ್ಧಿ ಸಾಲದೆ ಅಪದ್ಧವೆ ಇರಲಿಅತಿದಯದಿಕೋಲಅಪದ್ಧವೆ ಇರಲಿ ಅತಿದಯದಿ ಪಾಂಡುರಂಗವಿದ್ವಜ್ಜನ ವಂದ್ಯ ಕೈಕೊಳ್ಳೊಕೋಲ4ಅರಸಿ ರುಕ್ಮಿಣಿ ಭಾವೆಗೆಸರಸಲ್ಲಾಡಿದ ಮಾತುಹರುಷ ಮನದಿಂದ ಶ್ರವಣವೆಕೋಲಹರುಷ ಮನದಿಂದಶ್ರವಣ ಮಾಡಲುನಮ್ಮ ನರಸಿಂಹನಿದಕೆ ಒಲಿವನುಕೋಲ5ಹರದಿರುಕ್ಮಿಣಿ ಭಾಮೆತಿರುಗಿಸಿದ ಮುಯ್ಯವಆದರದಿಂದ ಕೇಳಿದವರಿಗೆಕೋಲಆದರದಿಂದ ಕೇಳಿದವರಿಗೆ ಶ್ರೀಕೃಷ್ಣಪರಮಪದವಿಯನೆ ಕೊಡುವನುಕೋಲ6ಮಚ್ಛ ನೇತ್ರಿಯರು ತಂದಅಚ್ಛಾದ ಮುಯ್ಯವಸ್ವಚ್ಛಮನದಿಂದ ಶ್ರವಣವÀಕೋಲಸ್ವಚ್ಛಮನದಿಂದ ಶ್ರವಣವ ಮಾಡಲುನಮ್ಮ ಅಚ್ಯುತನಿದಕೆ ಒಲಿವನುಕೋಲ7ಮಂದಗಮನೆಯರು ತಂದಚಂದದ ಮುಯ್ಯವಆನಂದ ಮನದಿಂದ ಶ್ರವಣವಕೋಲಆನಂದ ಮನದಿಂದ ಶ್ರವಣವ ಮಾಡಲುನಮ್ಮ ಅನಂತ ನಿದಕೆ ಒಲಿವನುಕೋಲ8ಕಾಂತೆ ರುಕ್ಮಿಣಿ ಭಾಮೆಗೆಪಂಥಲಾಡಿದ ಮಾತುಸಂತೋಷದಿಂದ ಶ್ರವಣವಕೋಲಸಂತೋಷದಿಂದ ಶ್ರವಣವ ಮಾಡಲು ಭಾಗ್ಯಸಂತಾನ ಕೊಡುವ ರಮಿ ಅರಸುಕೋಲ9
--------------
ಗಲಗಲಿಅವ್ವನವರು
ಬುತ್ತಿಯ ಕಟ್ಟೊ - ಮನುಜಾ ||ಬುತ್ತಿಯ ಕಟ್ಟೊ ಪ.ಬುತ್ತಿಯನ್ನು ಕಟ್ಟಿದರೆ |ಎತ್ತಲಾದರುಣ್ಣಬಹುದು ಅಪಧರ್ಮವೆಂಬ ಮಡಿಕೆಯಲ್ಲಿ |ನಿರ್ಮಲ ಗಂಗೆಯನುತುಂಬಿ ||ಸುಮ್ಮಾನದಿಂದಲಿ ಬೇಗ |ಒಮ್ಮನಕ್ಕಿಯ ಅನ್ನಬಾಗಿ 1ಅರಿವು ಎಂಬ ಅರಿವೆಯ ಹಾಸಿ |ಗರಿಮೆ ಹಾಲ - ಮೊಸರ ತಳಿದು ||ಪರಮವೈರಾಗ್ಯದಿಂದ |ಸಿರಿಹರಿಗರ್ಪಿತವೆಂದು 2ಕರ್ತು ಪುರಂದರವಿಠಲನ |ತತ್ತ್ವವೆಂಬ ಬುತ್ತಿಯನ್ನು ||ಹತ್ತಿರ ತಂದಿಟ್ಟುಕೊಂಡು |ನಿತ್ಯವುಂಡು ತೃಪ್ತಿಪಡೆಯೊ 3
--------------
ಪುರಂದರದಾಸರು
ಮಂತ್ರ ದೊರಕಿತು ನಾಮ ಮಂತ್ರ ದೊರಕಿತು |ಯಂತ್ರವಾಹಕನಾರಾಯಣನಪಅಂತರಂಗದಿ ಜಪಿಸುವಂಥ ಅ.ಪಆಶೆಯಲ್ಲಿ ಬೀಳಲಿಲ್ಲ ಕ್ಲೇಶಪಟ್ಟು ಬಳಲಲಿಲ್ಲ |ವಾಸುದೇವಕೃಷ್ಣನೆಂಬ ಶಾಶ್ವತದೀ ದಿವ್ಯ ನಾಮ1ಅರ್ಥ ವೆಚ್ಚವಾಗಲಿಲ್ಲ, ಕಷ್ಟಪಟ್ಟು ಬಳಲಲಿಲ್ಲ |ಭಕ್ತಿಯಿಂದ ಭಜಿಸಿ ಮಹಾಮುಕ್ತಿ ಪದವಸೇರುವಂಥ 2ಹೊದ್ದಿದ ಪಾಪವೆಲ್ಲ ಕಳೆದು, ಉದ್ಧಾರವಾಯಿತು -ಕುಲಕೋಟಿಯು |ಮುದ್ದು ಕೃಷ್ಣನ ದಿವ್ಯನಾಮ ವಜ್ರಕವಚ ಹೃದಯದಲ್ಲಿ 3ಹಾಸಬಹುದು ಹೊದೆಯಬಹುದು, ಸೂಸಿಒಡಲ ತುಂಬಬಹುದು |ದಾಸರನ್ನು ಬಿಡೆದೆ ಪೊರೆವ ಶ್ರೀಶನೆಂಬ ದಿವ್ಯ ನಾಮ 4ಒಂದುಬಾರಿಸ್ತುತಿಸಿದರೆ ಒಂದು ಕೋಟಿ ಜಪದಫಲವು |ಇಂದಿರೇಶ ಶ್ರೀಪುರಂದರವಿಠಲನೆಂಬ ದಿವ್ಯನಾಮ5
--------------
ಪುರಂದರದಾಸರು
ಮಾವನ ಮನೆಯೊಳಗೆ ಕೋವಿದರಿರಬಹುದೆ ? ಪ.ಹಾವ ಹಿಡಿಯಲು ಬಹುದುಹರಣ ನೀಡಲು ಬಹುದು |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಬೇವ ಕಿಚ್ಚನು ಹಿಡಿದು ನುಂಗಬಹುದು ||ಭಾವೆಯ ತಂದ ಮನೆಯಲಿ ಜೀವಿಪುದಕಿಂತಸಾವುದೇ ಲೇಸು ಅಭಿಮಾನಿಗಳಿಗೆ 1ಪರರ ಸೇರಲುಬಹುದು ಪತಿತರಲ್ಲಿರಬಹುದು |ಕೊರಳ ಘಾತಕರಲ್ಲಿ ಸೆರಗೊಡ್ಡಬಹುದು ||ತರುಣಿಯ ತಂದೆಯ ಮನೆಯವಾಸಕ್ಕಿಂತ |ತರುಗಿರಿಗುಹೆಗಳಲಿ ಇದ್ದು ಜೀವಿಸಬಹುದು 2ಮಾವ - ಅತ್ತೆಯ ನೊಂದು ಅತ್ತಿಗೆಯು ತಾ ಜರೆದು |ಹೇವವನಿಕ್ಕಿ ಚೂರ್ಣವ ಮಾಡಲು ||ಆವಾಗ ನೋಡಿದರೂ ಎನಗೆ ಹಿತರಿಲ್ಲೆಂದುಮಾವ ಹೊರಗಾಡುವನು ಚಿಕ್ಕ ನುಡಿಗಳನು 3ಒಂದೊಂದು ತೆಂಗಳೂಳು ಬಹುಮಾನ ನಡತೆಗಳು |ಒಂದೆರಡು ತಿಂಗಳೊಳಗೆ ಹಿತವಾದವು ||ಒಂದೊಂದಭದ್ರ ನುಡಿ ಒಳಗೊಳಗೆ ಹುಟ್ಟಿದುವು |ಸಂದೇಹವೇಕೆ ಸಂಸಾರಿಗೂ 4ಈ ಪರಿಯಲುಂಬಂಥ ಅಳಿಯ ಭೋಜನದಿಂದ |ಗೋಪಾಳ ಲೇಸು ಅಭಿಮಾನಿಗಳಿಗೆ ||ಶ್ರೀಪತಿ ನಮ್ಮ ಪುರಂದರವಿಠಲನಈಪರಿಭಜಿಸಿ ಸುಖಿಯಾಗೊ ಮನವೆ* 5
--------------
ಪುರಂದರದಾಸರು
ಮೋರೆಯ ಕಾಂತಿಗೆ ಹಚ್ಚಿರೋ ಕಿಚ್ಚಾಮರುಳಾಗುತಿರುತಿಹನವ ಹುಚ್ಚಾಪಯೋನಿಯ ಮುಖ ನೋಡೆ ಎಲ್ಲಕೆಹೇಸಿಕೆತಾನೆ ರಕ್ತವ ನಿತ್ಯತವಿಸುತಿಹುದುಏನೇನು ಶುಚಿಯಲ್ಲ ಇಂತು ವಿವೇಕವಿಲ್ಲಏನು ಕಾರಣ ಮೋಹ ಪಡುವರೋ1ನರಕಾಣುವ ಪೂರಿತವದು ಭಗವದುಭರದಿ ದುರ್ಗಂಧವಾಸನೆಬಹುದುಸರಸಿಜೋದ್ಭವನಾಗಲಿ ಶಿವನೆ ತಾನಾದರಾಗಲಿಮರುಳೆ ಪುನಃ ಜನ್ಮಕೆ ತಾರದೆ ಬಿಡುವುದೇ2ಚಕ್ರಿ ಖಂಡವು ಆಸ್ತಿ ಚದುರಸ್ತಿರೊಪಾಗಿಕರ್ಮವೆಂಬುದಕೆ ಸ್ಥಾನವಾಗಿಹುದುನಿರ್ಮಳ ಚಿದಾನಂದ ವಸ್ತುವ ತಿಳಿಗೊಡದಧರ್ಮದಾ ಪಥದಲ್ಲಿ ಕೆಡಹುತಿಹುದು3
--------------
ಚಿದಾನಂದ ಅವಧೂತರು
ರಾಮ ನಾಮಾಮೃತವ ಕೊಂಬವರೆಲ್ಲ |ಪ್ರೇಮದಿಂದಚ್ಯುತ ಪೇಟೆಗೆ ಬನ್ನಿರೆ ಪಒಮ್ಮನವೆರಸಿ ಬನ್ನಿ |ನಿಮ್ಮ ಮನಕೆ ಬಂದಂತಳೆದು ಕೊಳ್ಳಿ ||ರಾಮಟಿಂಕೆಯ ಸಲಿಸಿ ಶ್ರೀ ಕೃಷ್ಣನೆಂಬ |ಧರ್ಮದ ಸಂತೆ ನೆರೆದಿದೆ ಬನ್ನಿ 1ಉಂಟು ನಾಲ್ಕು ಕುದುರೆಗಳು |ಎಂಟಾನೆಯ ಬಿರುಬಲೆಯಲ್ಲಿ ಕಟ್ಟಬಹುದು ||ಸಾಲವರ್ಣದ ಪಟ್ಟಿಯು ಏಳಿರೆ |ಏಳುಲೋಕವು ಬಲ್ಲದು 2ಬೆಲೆಯಿಲ್ಲದ ಮುತ್ತುಂಟು |ಏಳೇಳ್ಪುಟಿಯ ಹೊಳೆವಪರಂಜಿಯ ಚಿನ್ನವುಂಟು ||ಥಳಥಳಿಸುವ ನೀಲಿಯ ಕೊಂಬುವರೆಲ್ಲ |ನಳಿನನಾಭನ ಸನ್ನಿಧಿಗೆ ಬನ್ನಿ 3ಎರಡು ಕಾಶಿಯಲಳೆವ ಕೊಳಗವು |ಪಿರಿದುದೊಂದು ಕಿರಿದೊಂದು ಉಂಟಲ್ಲಿಗೆ ||ಗರಳವವೊರಿಸಲು ರತ್ನವು |ಮರುತಾಶ್ರಯನ ಸನ್ನಿಧಿಗೆ 4ಆರಂಗಡಿಯ ಸುಟ್ಟು |ಸೂರೆಮಾಡಿ ಏಳು ಎಂಟು ಹಟ್ಟಕೊರವನೊ...ದುದು ||ಸಾರಿಸಿ ನವವಿಧ ಶುಚಿಯ ಹೇಳಿದ |ಸರ್ವಾತ್ಮಗೆ ಸೌದೆಯ 5ಸುಂಕಿಗರೈವರಿಗೆ ಹರುಷದಿಂದ |ಪಂಕಜನಾಭನ ಚೀಲ ತೋರಿ ||ಶಂಕೆಯಿಲ್ಲದೆ ನಡೆವ ಅವರನೆಲ್ಲ |ವಂಚಿಸಿ ಎದೆಯ ಟೊಣೆದು ಹೋಗುವಾ 6
--------------
ಪುರಂದರದಾಸರು
ಲಗ್ಗೆಯ ಚೆಂಡನಾಡಿರಿ ಲಕ್ಷಣವಂತರುಲಕ್ಷಿಸಿ ಬ್ರಹ್ಯವ ನೋಡುವರುಲಗ್ಗೆಯೊಡ್ಡಲು ಬಹುದುರ್ಗುಣರವರಲಾಗಗಳ ಹೊಯ್ಯಂದದಲಿಡಿರಿಪಸಪ್ತಾವರಣದ ಲಗ್ಗೆಯ ಬಿಲ್ಲೆಯುಒಂದರ ಮೇಲೊಂದಿರಲುದೀಪ್ತವೆನಿಸಿ ಸಚ್ಚಿತ್ತಿನ ಚೆಂಡೊಳುಬೀಳಿಸಿ ಬಿಲ್ಲೆಯನು1ಲಗ್ಗೆಯು ಬೀಳಲು ಓಡಿಯೆ ಹೋಗಿಬಗ್ಗಿ ಬಗ್ಗಿ ತಾ ಬರುತಿರಲುಬಗ್ಗುತ ಬಲು ಸನಿಹಕೆ ಬರಲುಹೊರಳಾಡುವ ತೆರದಲಿ ಹೊಡೆದೋಡಿಸಿರಿ2ನಿರ್ಮಲಾಕಾಶದ ಬಲುಬಯಲಿನೊಳುನಿಂತಿಹ ಬಿಲ್ಲೆಗಳನೇ ಕೆಡಿಸಿನಿರ್ಮಲ ಚಿದಾನಂದ ಆತ್ಮ ತಾನಾಗಿಆಡಿರಿ ನಿತ್ಯದಿ ಲಗ್ಗೆಯನು3
--------------
ಚಿದಾನಂದ ಅವಧೂತರು
ಶ್ರೀ ನರಹರಿ ತೀರ್ಥವಿಜಯ99ಪ್ರಥಮ ಕೀರ್ತನೆಯೋಗಾನಂದ ನರಹರಿ ರಾಮಪ್ರಿಯತಮರುಯೋಗಿವರ ನರಹರಿತೀರ್ಥರಪಾದಯುಗ್ಮವನರುಹದಿ ನಾ ಶರಣಾದೆ ಸಂತತಅಗಲದೇ ಎನ್ನ ಬದಿ ಇದ್ದು ರಕ್ಷಿಪರು ಪಅಶೇಷ ಗುಣಗಣಾಧಾರ ವಿಭು ಶ್ರೀ ರಮಣಹಂಸ ನಾಮಕ ಪರಮಾತ್ಮನಿಗೆ ನಮಿಪೆಹಂಸ ಬೋಧಿತ ವಿಧಿಗೆ ತತ್ ಶಿಷ್ಯ ಸನಕಾದಿವಂಶಜ ಗುರುಗಳು ಸರ್ವರಿಗು ನಮಿಪೆ 1ಅಚ್ಯುತಪ್ರೇಕ್ಷಾಖ್ಯ ಪುರುಷೋತ್ತಮಾರ್ಯಕರತೋಯಜೋತ್ಪನ್ನ ಆನಂದ ತೀರ್ಥರಿಗೆಕಾಯವಾಙÕನದಿಂದ ಶರಣಾದೆ ಸಂತತತೋಯಜಭವಾಂಡದ ಸಜ್ಜನೋದ್ಧಾರ2ಶ್ರೀವರ ವೇದವ್ಯಾಸನವತಾರಕನುಸರಿಸಿಭಾವಿ ಬ್ರಹ್ಮನು ಮುಖ್ಯ ವಾಯುದೇವದೇವೀಜಯಾಸಂಕರ್ಷಣಾತ್ಮಜನು ಈಭುವಿಯಲ್ಲಿ ತೋರಿಹ ಆನಂದ ತೀರ್ಥ 3ಮಾಲೋಲ ಶ್ರೀ ರಾಮಕೃಷ್ಣ ಪ್ರೀತಿಗಾಗಿಯೇಬಲ ಕಾರ್ಯ ಮಾಡಿದ ಹನುಮಂತ ಭೀಮಕಲಿಯುಗದಿ ಈ ಭೀಮ ಅವತಾರ ಮಾಡಿಹನುಕಲಿಮಲಾಪಹ ಜಗದ್ಗುರು ಮಧ್ವನಾಗಿ4ಶ್ರೀ ಮಧ್ವ ಅನಂತ ತೀರ್ಥಕರ ಅಬ್ಜಜರುಪದ್ಮನಾಭನೃಹರಿ ಮಾಧವಾಕ್ಷೋಭ್ಯಈ ಮಹಾ ಗುರುಗಳು ಸರ್ವರಿಗು ಆ ನಮಿಪೆಸುಮನಸಶ್ರೇಷ್ಠರು ಮಹಿಯಲ್ಲಿ ಪುಟ್ಟಿಹರು5ಶ್ರೀ ಮಹಾ ಪುರುಷೋತ್ತಮದಾಸರೆಂದೆನಿಪಶ್ರೀ ಮಧ್ವ ಮುನಿಗಳ ಶಿಷ್ಯ ಸಂತತಿಗೂಸುಮಹಿಮ ಹರಿದಾಸವರ್ಯರು ಸರ್ವರಿಗುಸನ್ಮನದಿ ಆ ನಮಿಪೆ ಸಂತೈಪರೆಮ್ಮ 6ಆ ಸೇತು ಹಿಮಗಿರಿ ಬದರಿಕಾಶ್ರಮಕ್ಷೇತ್ರವಸುಧೆಯ ಸಮಸ್ತಕಡೆ ಪೋಗಿ ಅಲ್ಲಲ್ಲಿದುಸ್ತರ್ಕ ದುರ್ಮತ ಅಟವಿಗಳ ಛೇದಿಸಿದಶಪ್ರಮತಿ ಮಧ್ವಮುನಿ ಒಲಿದರು ಸುಜನರ್ಗೆ 7ಈ ರೀತಿ ದಿಗ್ವಿಜಯ ಮಾರ್ಗದಲಿ ಮಧ್ವರಾಯರ ಸಂಗಡ ವಾದಕ್ಕೆ ನಿಂತು |ಭಾರಿಪಂಡಿತರತ್ನಶೋಭನ ಭಟ್ಟನುಶರಣಾಗಿ ಮಧ್ವರಾಯರ ಶಿಷ್ಯನಾದ 8ಶೋಭನ ಭಟ್ಟಾಖ್ಯ ಈಗುಣಗ್ರಾಹಿಯುಶುಭಪ್ರದೆ ಲೋಕಪಾವನಿವೃದ್ಧ ಗಂಗೆಎಂಬುವ ಗೋದಾವರೀ ತೀರದಲಿ ಮಧ್ವಅಬ್ಜಹಸ್ತದಿಕೊಂಡ ತುರ್ಯಾಶ್ರಮ 9ಸತ್ತತ್ವವಾದದ ಸೊಬಗನ್ನ ಮಧ್ವವದನಾಂಬುಜದಿಂದಕೇಳಿಸುಪವಿತ್ರಪದ್ಮನಾಭತೀರ್ಥಾಖ್ಯ ನಾಮವ ಹೊಂದಿದಮುದದಿಂದ ಈ ಮಹಾತ್ಮನು ಶೋಭನನು 10ಕಳಿಂಗ ರಾಜನ ಮಂತ್ರಿಯ ಕುಮಾರನುಶೀಲತಮ ಹರಿಭಕ್ತಸ್ವಾಮಿ ಶಾಸ್ತ್ರಿಬಾಲ ವಯಸ್ಸಲ್ಲೇವೆ ಸಿರಿತನದಾಮೋಹಾದಿಲೀಲಾವಿನೋದ ಚಟುವಟಿಕೆ ತೊರೆದವನು 11ವಿಧಿಯುಕ್ತ ಉಪನಯನ ಶಾಸ್ತ್ರಾಭ್ಯಾಸವವೇದ ವೇದಾಂತವಿದ್ಯೆಸರ್ವ ಹೊಂದಿಗೋದಾವರಿ ಕ್ಷೇತ್ರ ಎಲ್ಲೆಲ್ಲೂ ಈತನುವಿದ್ವಚ್ಛಿರೋಮಣಿ ಎಂದೆನಿಸಿಕೊಂಡ 12ರಾಮ ಮಹೇಂದ್ರಪುರಪ್ರಾಂತ್ಯಸ್ಥವಾದಿಗಜಸಿಂಹ ಶೋಭನ ಭಟ್ಟನು ಈಗತ್ರಿಜಗದ್ಗುರು ಮಧ್ವರಿಂ ಅನುಗ್ರಹವಕೊಂಡದ್ದುನಿಜ ಹರುಷದಿ ಕೇಳಿದ ಶ್ಯಾಮ ಶಾಸ್ತ್ರಿ 13ಹಿತಕರ ಈಸುದ್ದಿ ಕೇಳಲಿಕ್ಕೇವೆಕಾದಿದ್ದ ಶ್ರೀಮಂತ ಈ ಶ್ಯಾಮ ಶಾಸ್ತ್ರಿಬಂದು ಶ್ರೀಮಧ್ವರಲಿ ಕರಮುಗಿದು ಸನ್ನಮಿಸಿಒದಗಿ ಪಾಲಿಸಿ ಸೇವೆ ಕೊಳ್ಳಬೇಕೆಂದ 14ಉತ್ತಮ ದೇವಾಂಶನು ನಿಜ ಸಹಜ ಭಕ್ತಿಮಾನ್ಸುದೃಢ ಜ್ಞಾನಿಯು ಋಜುಮಾರ್ಗ ಚರಿಪಕ್ಷಿತಿಯಲ್ಲಿ ಜನಿಸಿಹ ವೈರಾಗ್ಯನಿಧಿ ಇವಹೊಂದಿದ ತುರ್ಯಾಶ್ರಮ ಮಧ್ವ ಮುನಿದಯದಿ 15ನರಹರಿ ತೀರ್ಥಾಖ್ಯ ಶುಭತಮನಾಮವಶಾಸ್ತ್ರಿಗೆ ಇತ್ತರು ಆನಂದ ಮುನಿಯುಹರಿಸೇವಾ ಕಾರ್ಯಸಿದ್ಯರ್ಥ ಆದೇಶದಲೆಇರುವುದು ಎಂದರು ಸರ್ವಜÕ ಮುನಿಯು 16ಸಾಮ್ರಾಜ್ಯ ಅಧಿಪತ್ಯ ಕಳಿಂಗ ದೇಶದಲಿಚರಿಸುವ ಕಾಲವು ಬರಲಿಕ್ಕೆ ಇದೆಯುಶ್ರೀರಾಮ ಸೀತಾ ಮೂರ್ತಿಗಳ ಅಲ್ಲಿಂದತರಲಿಕ್ಕೆ ಇರಬೇಕು ಅಲ್ಲಿಯೇ ಎಂದರು 17ಗಜಪತಿ ರಾಜನ ಅರಮನೆಯಲ್ಲಿರಾಜೀವೇಕ್ಷಣ ಮೂಲರಾಮನು ಸೀತಾರಾಜಭಂಡಾರದಲ್ಲಿ ಮಂಜೂಷದಲಿರಾಜಿಸುತ ಇಹರುಮೂರ್ತಿರೂಪದಲಿ18ಕಳಿಂಗದೇಶಾಧಿಪ ಗಜಪತಿಯ ವಂಶದಲಿಬಾಲರಾಜನು ಅವನ ಪ್ರತಿನಿಧಿಯಾಗಿಆಳುವುದು ರಾಜ್ಯವ ಎಂದು ಆಚಾರ್ಯರುಪೇಳಿದರು ನರಹರಿ ತೀರ್ಥ ಆರ್ಯರಿಗೆ 19ಬಾಲರಾಜನು ಯುವಕನಾಗಿ ರಾಜ್ಯವನ್ನುಆಳುವ ಯೋಗ್ಯತೆ ಹೊಂದಿದ ಮೇಲೆಅಲ್ಲಿಂದ ರಾಮ ಸೀತಾ ಮೂರ್ತಿರಾಜನ್ನಕೇಳಿತರಬೇಕು ಎಂದರು ಲೋಕ ಗುರುವು 20ಗೋದಾವರಿ ಕ್ಷೇತ್ರದೇಶ ಸುತ್ತು ಮುತ್ತುಸಾಧುಜನ ಉದ್ಧಾರ ಬೋಧಕ್ಕೆಪದ್ಮನಾಭತೀರ್ಥರ ತತ್ಕಾಲ ನಿಲ್ಲಿರಿಸಿಬಂದರು ಉಡುಪಿಗೆ ಪೂರ್ಣ ಪ್ರಮತಿಗಳು 21ಶ್ರೀ ಮಧ್ವಾಚಾರ್ಯರು ಅರುಹಿದ ಪ್ರಕಾರದಲೇಸಮಯ ಒದಗಿತು ರಾಣಿ ಬಿನ್ನೈಸಿದಳುಸ್ವಾಮಿ ತಾವೇ ರಾಜ್ಯ ಆಳಬೇಕೆಂದಳುಸಮ್ಮತಿಸಿದರು ಶ್ರೀ ನರಹರಿ ಮುನಿಯು 22ಮಂತ್ರಿಪದವಿಪರಂಪರೆ ಪ್ರಾಪ್ತವಾಗಿತಂದೆ ವಹಿಸಿದ್ದರುಅವರಮುಖದಿಂದಹಿಂದೆ ಪೂರ್ವಾಶ್ರಮದಿ ರಾಜ್ಯ ಆಡಳಿತದರೀತಿಯ ಅರಿತವರು ಈ ಹೊಸಯತಿಯು 23ನರಹರಿ ತೀರ್ಥರ ರಾಜ್ಯ ಆಡಳಿತದಲಿಪರಿಪರಿ ರಾಜತಂತ್ರಗಳ ಕೌಶಲ್ಯಸರಿಯಾದ ಧಾರ್ಮಿಕ ರಾಜನೀತಿಯ ದುಷ್ಟಶತ್ರು ನಿಗ್ರಹ ಶಿಷ್ಟಪಾಲನಏನೆಂಬೆ24ದಂಡೆತ್ತಿ ಆಗಾಗ ಬರುತಿದ್ದ ಶಬರಾದಿತುಂಟ ಶತ್ರುಗಳನ್ನ ಜಯಿಸಿ ರಾಜ್ಯವನ್ನಕಂಟಕದುರ್ಮತಿಗಳಿಂದ ಕಾಪಾಡಿದರುಎಂಟು ದಿಕ್ಕಲು ಹಬ್ಬಿತಿವರ ಕೀರ್ತಿ 25ಆಶ್ರಮೋಚಿತನಿತ್ಯಜಪಪೂಜ ಕಾರ್ಯಗಳುಶಿಷ್ಯ ಸಜ್ಜನರಿಗೆ ಉಪದೇಶಾನುಗ್ರಹಲೇಶವೂ ಕೊರತೆ ಇಲ್ಲದೆ ಮುದದಿಈಶನ ಪ್ರೀತಿಗೆ ರಾಜಕಾರ್ಯಗಳ ಮಾಡಿದರು 26ವಾಗೀಶಪಿತ ಶ್ರೀ ಪ್ರಸನ್ನ ಶ್ರೀನಿವಾಸಯೋಗಾನಂದ ನರಹರಿ ಮೂಲ ರಾಮನಿಗೆ ಪ್ರಿಯತಮರು ನರಹರಿ ತೀರ್ಥರಲ್ಲಿಬಾಗಿ ಶರಣಾದೆ ನಾ ಸದಾ ಪೊರೆವರೆನ್ನ 27- ಇತಿ ಶ್ರೀ ಪ್ರಸನ್ನ ನರಹರಿತೀರ್ಥವಿಜಯಪ್ರಥಮೋದ್ಯಾಯಃ -ದ್ವಿತೀಯಕೀರ್ತನೆಯೋಗಾನಂದ ನರಹರಿ ರಾಮಪ್ರಿಯತಮರುಯೋಗಿವರ ನರಹರಿತೀರ್ಥರಪಾದಯುಗ್ಮವನರುಹದಿ ನಾ ಶರಣಾದೆ ಸಂತತಅಗಲದೇ ಎನ್ನ ಬದಿ ಇದ್ದು ರಕ್ಷಿಪರು ಪಶ್ರೀಕೂರ್ಮಕ್ಷೇತ್ರದಲಿ ಕೂರ್ಮೇಶ್ವರಾಲಯದಿಯೋಗಾನಂದ ನರಸಿಂಹಗೆ ಗುಡಿಯಯೋಗಿವರ ನರಹರಿತೀರ್ಥರು ಕಟ್ಟಿಸಿಯೋಗಾನಂದ ನರಸಿಂಹನ ಸ್ಥಾಪಿಸಿದರು 1ಯುಕ್ತ ಕಾಲದಿ ರಾಜನಿಗೆ ರಾಜ್ಯ ಒಪ್ಪಿಸಲುಕೃತಜÕ ಮನದಿಂದ ಆ ಯುವಕರಾಜಇತ್ತನು ಸನ್ನಮಿಸಿ ನರಹರಿತೀರ್ಥರಿಗೆಸೀತಾರಾಮ ವಿಗ್ರಹದ ಮಂಜೂಷ 2ನರಹರಿತೀರ್ಥರು ಶ್ರೀಮದಾಚಾರ್ಯರಲಿನೇರವಾಗಿ ಪೋಗಿ ಸಮರ್ಪಿಸಲು ಆಗಶ್ರೀರಾಮ ಸೀತಾದೇವಿಯ ಮಧ್ವಮುನಿಕ್ಷೀರಾದಿ ಪಂಚಾಮೃತದಿ ಪೂಜಿಸಿದರು 3ಶ್ರೀರಾಮಸೀತಾ ಪ್ರತಿಮೆಗಳೊಳು ಹರಿರಮಾಆರಾಧನಾರ್ಚನೆ ಮೂರು ತಿಂಗಳು ಹದಿ -ನಾರುದಿನ ತಾಮಾಡಿ ಪದ್ಮನಾಭತೀರ್ಥರುತರುವಾಯ ಪೂಜಿಸಲು ಆಜೆÕ ಮಾಡಿದರು 4ಮೂರನೇಬಾರಿ ಬದರಿಗೆ ಆಚಾರ್ಯರುತೆರಳಲು ಪದ್ಮನಾಭರು ತಾವು ಪೂಜೆಚರಿಸಿ ನಿಯಮನದಂತೆ ಆರು ವರ್ಷ ತರುವಾಯನರಹರಿತೀರ್ಥರಿಗೆ ಇತ್ತರು ಮೂರ್ತಿಗಳ 5ಈ ಮೂರ್ತಿಗಳೊಳ್ ಇರುವ ಸೀತಾರಾಮಾರ್ಚನೆಬ್ರಹ್ಮದೇವರು ಮಾಡಿ ಸೂರ್ಯವಂಶಭೂಮಿಪಾಲಕ ಕೈಯಿಂದ ಪೂಜೆಯ ಕೊಂಡುಕ್ರಮದಿ ದಶರಥರಾಜ ಕರಕೆ ಲಭಿಸಿದವು 6ಶ್ರೀ ರಾಮಚಂದ್ರ ಪ್ರಾದುರ್ಭಾವಕು ಮೊದಲೇದಶರಥ ಆರಾಧಿಸಿದ ತರುವಾಯಶ್ರೀ ರಾಮತಾನೇ ಸ್ವಯಂ ಪೂಜೆ ಮಾಡಿದನುಶಿರಿಸೀತ ತಾ ಕೊಂಡಳು ಪೂಜೆಗಾಗಿ 7ರಾಮಚಂದ್ರನು ಸೇವೆ ಸಾಕ್ಷಾತ್ ಮಾಡುವಸೌಮಿತ್ರಿ ಆ ಮೂರ್ತಿಗಳನ್ನು ತಾನುಸಮ್ಮುದದಿ ತನ್ನ ಅರಮನೆಯಲ್ಲಿಟ್ಟುಕೊಂಡುನೇಮದಿ ಪೂಜಿಸುತ್ತಿದ್ದನು ಬಹುಕಾಲ 8ದ್ವಿಜನರ ಶ್ರೇಷ್ಠನು ರಾಮನಲಿ ಬಹುಭಕ್ತಿನಿಜಭಾವದಲಿ ಮಾಳ್ಪಅನುದಿನಅವನುರಾಜೀವೇಕ್ಷಣ ರಾಮನನ್ನು ತಾ ನೋಡದಲೆಭೋಜನ ಮಾಡಲಾರನು ಅಂಥಭಕ್ತ 9ವಿಪ್ರವರ ಅವಾತ ವೃದ್ಧಾಪ್ಯದಲಿಅರಮನೆ ದರ್ಬಾರ ಮಂಟಪಕೆ ಬಂದಶ್ರೀರಾಮಚಂದ್ರನು ರಾಜಕಾರ್ಯೋದ್ದೇಶಹೊರಗೆ ಹೋಗಿದ್ದನು ಏಳುದಿನ ಹೀಗೆ 10ಏಳು ದಿನವೂ ಆ ವಿಪ್ರೋತ್ತಮ ಊಟಕೊಳ್ಳದೇ ದೇಹಬಲ ಬಹು ಬಹುಕುಗ್ಗಿಮೆಲ್ಲನೆ ಎಂಟನೆ ದಿನ ಬಂದುಕುಳಿತಿದ್ದ ಶ್ರೀ ರಾಮಚಂದ್ರ ಸಭೆಯಲ್ಲಿ 11ಕಣ್ಣಿಗೆ ಏಳುದಿನ ಕಾಣದ ಶ್ರೀರಾಮಆನಂದಮಯಶ್ರೀನಿಧಿಯ ಕಂಡಲ್ಲೇಬ್ರಾಹ್ಮಣನು ಆನಂದ್ರೋದೇಕವು ಉಕ್ಕಿಸನ್ನಮಿಸುವಲ್ಲೇಯೇ ಬಿದ್ದನು ಕೆಳಗೆ 12ಏಳುದಿನ ಉಪವಾಸದಿಂದಲೇ ತನುವಿನಬಲಹೀನತೆ ಹೊಂದಿ ಆ ಬ್ರಾಹ್ಮಣ ಬೀಳೆ ಕೆಳಗೆಕನಕಆಸನದಿಂದಲಿ ರಾಮಇಳಿದುಬಂದು ಆಶ್ವಾಸಿಸಿದ ವಿಪ್ರನÀನ್ನ 13ವಿಪ್ರಶ್ರೇಷ್ಠನ ನಿವ್ರ್ಯಾಜ ಭಕ್ತಿಯ ಮೆಚ್ಚಿಕರುಣಾಬ್ಧಿ ಭಕ್ತವತ್ಸಲ ರಾಮಚಂದ್ರಕ್ಷಿಪ್ರದಲೆ ಲಕ್ಷ್ಮಣನ ಕಡೆಯಿಂದ ಪ್ರತಿಮೆಗಳತರಿಸಿಕೊಟ್ಟನು ಆ ದ್ವಿಜಶ್ರೇಷ್ಠನಿಗೆ 14ಅನುದಿನವೃದ್ಧ ದೆಶೆಯಲ್ಲಿ ಬರಬೇಡವುಅನಾಯಾಸದಿ ತನ್ನ ಪ್ರತಿಮೆಯಲ್ಲಿಕಾಣಬಹುದು ಎಂದು ಶ್ರೀರಾಮ ಪೇಳಿದನುಆನಂದದಿಕೊಂಡಬ್ರಾಹ್ಮಣ ಮೂರ್ತಿಗಳ15ಪ್ರತಿನಿತ್ಯ ವಿಧಿಪೂರ್ವಕ ಅರ್ಚಿಸಿದವಿಪ್ರಯುಕ್ತ ಕಾಲದಿ ತನು ಬಿಡುವ ಸಮಯದಲಿವಾಯುಸುತ ಹನುಮನ ಕೈಯಲ್ಲಿ ಅರ್ಪಿಸಿದಸೀತಾರಾಮ ಪ್ರತಿಮೆಗಳ ಭಕ್ತಿಯಲಿ 16ಸಮಸ್ತ ಜೀವರುಮಾಳ್ಪ ಭಕ್ತಿಗೆ ಅಧಿಕಸುಮಹಾಭಕ್ತಿಯ ಮಾಳ್ಪ ಹನುಮಂತಈ ಮೂರ್ತಿಗಳ ತಾಕೊಂಡು ಮುದದಲಿ ಕುಣಿದಸಮ್ಮುದದಿ ಅರ್ಚಿಸಿದ ಸೀತಾರಾಮನ್ನ 17ಸೌಗಂಧಿಕಾಪುಷ್ಪತರಲು ಭೀಮನು ಪೋಗಿಮಾರ್ಗದಲಿ ತನ್ನಯ ಪ್ರಥಮಾವತಾರಸಾಕೇತರಾಮಪ್ರಿಯತಮ ಅಂಜನಾಸುತನಸಂಗಡವಾದಿಸಿದ ಲೋಕರೀತಿಯಲ್ಲಿ 18ನರಾಧಮರ ಮೋಹಿಸುವ ಸಜ್ಜನರ ಮೋದಿಸುವಚರ್ಯಸಂವಾದ ತೋರಿಸಿ ರೂಪದ್ವಯದಿತರುವಾಯು ಹನುಮನು ಭೀಮನಿಗೆ ಕೊಟ್ಟನುಶ್ರೀರಾಮಸೀತಾ ಮೂಲಪ್ರತಿಮೆಗಳ 19ಭೀಮಸೇನನು ಆನಂದದಿ ಅರ್ಚಿಸಿದಸುಮನೋಹರ ರಾಮಸೀತಾದೇವಿಯನ್ನಈ ಮಹಾಹರಿಭಕ್ತ ಪಾಂಡವರ ವಂಶದಿಕ್ಷೇಮಕ ರಾಜನು ಕಡೆಯಾಗಿ ಬಂದ 20ಮೂಲರಾಮಸೀತೆಯ ಮುದದಿಂದ ಪೂಜಿಸಿದಶೀಲಭಾವದಲಿ ಆ ಕ್ಷೇಮಕಾಂತಮೂಲ ವಿಗ್ರಹಗಳು ತರುವಾಯ ಲಭಿಸಿದವುಕಳಿಂಗ ದೇಶಾಧಿಪ ಭಕ್ತನ ಕೈಯಲ್ಲಿ 21ಆಗಿನಕಾಲದಲ್ಲಿಪೀತಾಪುರವಿಜಯನಗರಎಂಬುವ ಪಟ್ಟಣದ ಮತ್ತುಜಗನ್ನಾಥಕ್ಷೇತ್ರ ದಕ್ಷಿಣ ಕಳಿಂಗಾಧಿಪರುಭಕುತಿ ಬೆಳೆಸಿದರು ಶ್ರೀರಾಮನಲ್ಲಿ 22ಆಗಾಗ ಹಸ್ತಿನಾಪುರ ಪೋಗುತಿದ್ದರುಗಂಗಾದಿಸ್ನಾನ ಕ್ಷೇತ್ರಾಟನ ಮಾಡಿಭಕ್ತಿಯಿಂ ಶ್ರೀರಾಮಚರಿತೆ ಕೇಳುವವರಲ್ಲಿವಿಗ್ರಹಗಳು ಲಭಿಸಿದವು ರಾಮನ ಕೃಪದಿ 23ಕಳಿಂಗದೇಶಾಧಿಪ ಗಜಪತಿ ರಾಜನುಬಲುಶ್ರದ್ಧೆ ಭಕ್ತಿಯಲಿ ಆರಾಧಿಸಿಕಾಲದೀರ್ಘದಿ ಸಂತತಿ ಪೂಜಿಸದಲೆಕೀಲುಹಾಕಿ ರಕ್ಷಿಸಿದರು ಬೊಕ್ಕಸದಿ 24ಹಿಂದೆ ತಾ ಭೀಮಾವತಾರದಲಿ ಪೂಜಿಸಿದ್ದುಎಂದು ಆನಂದಮುನಿಇಂದುವಿಗ್ರಹಗಳಹೊಂದಲು ನರಹರಿ ತೀರ್ಥರ ಕಳಿಂಗದಿನಿಂದಿರಿಸಿ ತರಿಸಿಕೊಂಡರು ಮೂರ್ತಿಗಳನು 25ಶ್ರೀಮದಾಚಾರ್ಯರು ಆರ್ಚಿಸಿ ತರುವಾಯಪದ್ಮನಾಭತೀರ್ಥರು ಆರುವರ್ಷಗಳು ಆರಾಧಿಸಿ ನರಹರಿ ತೀರ್ಥರು ಒಂಭತ್ತು ವರ್ಷಗಳುಮುದದಿಂ ಪೂಜಿಸಿದರು ಮೂಲ ರಾಮನ್ನ 26ಒಂಭತ್ತು ವರ್ಷಗಳು ಒಂದು ತಿಂಗಳು ದಿನಇಪ್ಪತ್ತ ಮೂರು ಈಕಾಲಸಂಸ್ಥಾನಶ್ರೀಪನಿಗೆ ಪ್ರಿಯತರದಿ ಆಡಳಿತ ಮಾಡಿಶ್ರೀಪನ್ನ ಧ್ಯಾನಿಸುತ ಹರಿಪುರ ಐದಿದರು 27ಶಾಲಿಶಕ ಹನ್ನೊಂದು ನೂರು ಮೂವತ್ತಾರುಶೀಲತಮ ಶ್ರೀಮುಖ ಪುಷ್ಯ ಕೃಷ್ಣಏಳನೇ ದಿನದಲ್ಲಿ ಹರಿಪುರ ಯೈದಿದರುಮಾಲೋಲ ಪ್ರಿಯತಮ ನರಹರಿ ತೀರ್ಥರು 28ಮತ್ತೊಂದು ಅಂಶದಲಿ ವೃಂದಾವನದಲಿವೃತತಿಜನಾಭ ತೀರ್ಥರ ಸಮೀಪಉತ್ತುಂಗಮಹಿಮ ತುಂಗಾನದಿ ಚಕ್ರತೀರ್ಥದಹತ್ತಿರ ಕುಳಿತಿಹರು ಸ್ಮರಿಸೆ ರಕ್ಷಿಪರು 29ಶ್ರೀರಾಮನರಹರಿ ಶ್ರೀ ಶ್ರೀನಿವಾಸನುನೇರಲ್ಲಿ ಪ್ರಸನ್ನನಾಗಿ ಈಗ ಈ ನುಡಿಗಳ್ಬರೆಸಿಹನು ಸಜ್ಜನರು ಓದಲು ಕೇಳಲುಗುರುಗಳಂತರ್ಯಾಮಿ ವಾಂಛಿತಗಳೀವ 30ಅರಸಿಕರಿಗೂ ಅಧಮ ಮಂದರಿಗು ಈವಿಜಯಬರೆಯಲಿಕು ಕೇಳಲಿಕು ಅವಕಾಶ ಕೊಡದೆಭಾರಿ ಪಂಡಿತರುಗಳೂ ಸಾಮಾನ್ಯ ಸುಜನರೂಸುಶ್ರಮಣ ಮಾಳ್ಪುದು ಹರಿಪ್ರೀತಿಗಾಗಿ 31ವಾಗೀಶಪಿತ ಶ್ರೀ ಪ್ರಸನ್ನ ಶ್ರೀನಿವಾಸಯೋಗಾನಂದ ನರಹರಿ ಮೂಲ ರಾಮನಿಗೆ ಪ್ರಿಯತಮರು ನರಹರಿ ತೀರ್ಥರಲ್ಲಿಬಾಗಿ ಶರಣಾದೆ ನಾ ಸದಾ ಪೊರೆವರೆನ್ನ 32ಶ್ರೀ ನರಹರಿತೀರ್ಥವಿಜಯಸಂಪೂರ್ಣಂ|| ಶ್ರೀ ಕೃಷ್ಣಾರ್ಪಣಮಸ್ತು ||
--------------
ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಶುಕ್ಲನಾಮ ಸಂವತ್ಸರ ಸ್ತೋತ್ರ147ಶುಕ್ಲ ಸಂವತ್ಸರದ ಮುಖ್ಯ ಸ್ವಾಮಿಯು ಸುಖಪೂರ್ಣ ಶೋಕಾದಿದೋಷ ದೂರ ಶ್ರೀ ಉಪೇಂದ್ರನಿಗೆ ಆನಮಿಸುವೇ ಪ.ದೇವಗುರುಬೃಹಸ್ಪತಿ ದೇವೇಂದ್ರ ಮೊದಲಾದ ಸರ್ವ ದೇವ ವಿಧಶಿವ ವಿಧಸೇವ್ಯಶ್ರೀ ಲಕ್ಷ್ಮೀಶ ಸರ್ವೇಶನು ತಾನೆಈ ವರುಷರಾಜ ಶುಕ್ರನೊಳು ಮತ್ತು ವರುಷನಿತ್ಯನಾಯಕರುಸಚಿವ ಸೇನಾ ಸಸ್ಯ ರಸ ನಿರಸಾಧಿ ಪತಿಗಳೊಳಾಗಿರುವ 1ಇದ್ದು ಶೃತಿಗಳ ನಡೆಸಿ ಲೋಕ ಜನರಿಂದ ವಿಹಿತಾ ವಿಹಿತಸಾಧನ ಗೈಸಿ ಸಜ್ಜನರಿಗೆ ಕಷ್ಟ ಬಾರದೇ ಕಾಯುವಸಾಧು ಸಾಧನ ಮಾಳ್ಪದಕೆ ಅನುಕೂಲ ಶುಕ್ಲ ಸಂವತ್ಸರಸಂತಾಪ ಸಿಡಿಲು ಗಾಳಿ ಔಷ್ಣವ ಜಯಿಸಬಹುದು ಹರಿದಯದಿ 2ಚೌರ್ಯ ಅಸತ್ಯ ನಿಂದಾ ನಿಷ್ಠುರ ದುಷ್ಟ ತನಾದಿಗಳುಸಂತ್ಯಜಿಸಿಪತಿತಾಯಿ ತಂದೆಗುರುಸೇವಾಹರಿಪೂಜೆಕಾಯವಾಙ್ಮನದಿಂದ ಮಾಳ್ಪರಿಗೆ ಮಧ್ವಹುದಬ್ಜಗನುತೋಯಜಾಸನ ಪಿತ ಪ್ರಸನ್ನ ಶ್ರೀನಿವಾಸ ಒಲಿದು ಸಂರಕ್ಷಿಸುವನು 3| ಶ್ರೀ ಕೃಷ್ಣಾರ್ಪಣಮಸ್ತು |
--------------
ಪ್ರಸನ್ನ ಶ್ರೀನಿವಾಸದಾಸರು
ಸತ್ಕರ್ಮವೆಂಬುದು ಸಾಧನವಲ್ಲದಲೆಸತ್ಕರ್ಮವೀಗ ಶುದ್ಧಬ್ರಹ್ಮವಲ್ಲವುಸತ್ಕರ್ಮ ಭಕ್ತಿಭಾವ ಸುಗುಣವಾದ ಮಾರ್ಗವುಸತ್ಕರ್ಮತ್ಯಾಗ ನಿಶ್ಯಬ್ದ ವಸ್ತುಪಗಾರುಡಿಯನರಿವೆನೆಂದು ಮಹೋರಗನ ಮೇಳವೇಆರು ನಂಬಲು ಬಹುದು ವಿಕಾರ ಮನವನುನಾರಿ ಪುತ್ರರೊಳಗೆ ಕೂಡಿ ನಾನು ಮುಕ್ತನು ಎನಲುಸೇರುವುದು ಎಂತು ಪೂರ್ಣ ಬ್ರಹ್ಮ1ಬ್ರಹ್ಮನರಿದು ಸಂಸಾರವಮಾಡುಈಗ ಎಂಬನುಬ್ರಹ್ಮಘಾತನು ಅವನು ಮಿಥ್ಯವಲ್ಲವುನಿಮ್ಮ ಮನಕೆ ತಿಳಿದು ನೋಡಿ ನಿಶ್ಚಿತದ ಮಾತ ಪೇಳ್ವೆಸುಮ್ಮನೆ ಬಿಡಲಿಬೇಕುಸತಿಸುತರನು2ವಾಸನಾಕ್ಷಯವು ವಸ್ತು ಎಂಬ ಮಾತು ದಿಟವದಿರಲುವಾಸನಾಕ್ಷಯವು ಎಂತು ಸಂಸಾರದಿಗೋಪನಾರಬೇಡವೆನಲು ನಾರುವುದು ಬಿಡುವುದೇಕಾಸ ವೀಸಿಯಲ್ಲದಲೆ ನಿಶ್ಚಯಿಲ್ಲವು3ಸಾಕ್ಷಿ ತಿಳಿದ ಬಳಿಕ ಸಂಸಾರವನೀಗ ತ್ಯಜಿಸಿದೆಅಕ್ಕಿನೀರುವಗ್ಗಿದಂತೆ ಆಗಬಾರದುರಕ್ಷಕನು ಇಲ್ಲದಲೆ ಸಂಸಾರವ ಬ್ರಹ್ಮವೆನಲುಭಕ್ಷಣಹುದುಬ್ರಹ್ಮಜ್ಞಾನಬಿಡುವುದಿಲ್ಲವು4ಸಂಸಾರದಿಮುಕ್ತನಾನು ಎನಲುತಿಲಾಂಶ ಮಾತ್ರ ಅನ್ನವಾಸನ ಅಂಟದಿಹುದೇಸಂಸಾರವ ತ್ಯಜಿಸಿದರೆ ಸಾಧ್ಯವಹುದು ವಸ್ತುಹಂಸಪರಮ ಚಿದಾನಂದ ತಾನೆಯಾಹನು5
--------------
ಚಿದಾನಂದ ಅವಧೂತರು