ಒಟ್ಟು 135 ಕಡೆಗಳಲ್ಲಿ , 45 ದಾಸರು , 129 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಕ್ಷಿಸೋ ಶ್ರೀಶ ಶ್ರೀ ಶ್ರೀನಿವಾಸ ಅಕ್ಷಯ ಗುಣಪೂರ್ಣ ಪಕ್ಷಿವಾಹನ ದೇವ ಅಕ್ಷರೇಶಾತ್ಮಕ ಮೋಕ್ಷ ದಾತನೆ ಹರಿ ಪ ರಕ್ಷಿಸೀಕ್ಷಣ ಲಕ್ಷ್ಮೀರಮಣ ಈಕ್ಷಿಸೀಗಲೆ ರಕ್ಷಿಸೆಮ್ಮನು ಕುಕ್ಷಿಯೊಳು ಜಗ ರಕ್ಷಿಸುವ ಹರಿ ಸೂಕ್ಷ್ಮ ಸ್ಥೂಲದೊಳಿರುವ ದೇವ ಅ.ಪ ಇಂದಿರೆರಮಣ ಗಜೇಂದ್ರವರದ ಹರಿ ಮಂದಹಾಸದಿ ಭಕ್ತವೃಂದವ ಪಾಲಿಪ ನಂದಕಂದನೆ ಬಂದು ರಕ್ಷಿಸು ಇಂದಿರಾ ಭೂದೇವಿ ರಮಣನೆ ಸುಂದರಾಂಗನೆ ಸುಮನ ಸರ ಹೃ- ನ್ಮಂದಿರದಿ ಶೋಭಿಸುವ ದೇವ 1 ನಂದನಕಂದ ಮುಕುಂದ ಹರೇ ಕೃಷ್ಣ ಕಂದರ್ಪ ಜನಕನೆ ಕರುಣಾನಿಧೆ ಹರಿ ಮದನ ಜನಕÀ ಸುಂದರಾಂಗ ಶ್ರೀಸುಮನಸರ ಪ್ರಿಯ ಬಂಧಮೋಚಕ ಭವವಿದೂರನೆ ಸಿಂಧುಶಯನ ಸರ್ವೇಶ ಶ್ರೀಹರಿ 2 ಕನಕ ಗರ್ಭನ ಪಿತ ಕರುಣಿಸೊ ನಿನ್ನಧ್ಯಾನ ಕನಸುಮನಸಲಿ ನಿನ್ನ ಸ್ಮರಣೆ ಎನಗಿತ್ತು ಕನಲಿಕೆಯ ಕಳೆದೆಮ್ಮ ಕ್ಷಣ ಬೆಂ- ಬಿಡದೆ ಕಾಪಾಡೆನ್ನುತ ಪ್ರಾರ್ಥಿಪೆ ಕಮಲನಾಭವಿಠ್ಠಲನೆ ಕರುಣದಿಕಮಲ ಮುಖಿಯೊಡಗೂಡಿ ಹರುಷದಿ 3
--------------
ನಿಡಗುರುಕಿ ಜೀವೂಬಾಯಿ
ರಾಮ ರಮಾರಮ ರಾಮ ಶ್ರೀರಾಮ ಪ ರಾಮ ಸೀತಾರಾಮ ರಾಮ ಜಯರಾಮ ಅ.ಪ. ಶ್ರೀ ರಘುವಂಶ ಲಲಾಮನೆ ರಾಮ ತಾರಕ ಮಂಗಳ ರಾಮನೆ ರಾಮ ನೀರದ ನಿರ್ಮಲ ಶ್ಯಾಮನೆ ರಾಮ ಸಾರಸಲೋಚನ ಸೌಮ್ಯನೆ ರಾಮ 1 ಕೌಸಲ್ಯದೇವಿ ಕುಮಾರಕ ರಾಮ ಕೋಸಲ ದೇಶಾನಂದಕ ರಾಮ ಆಸುರೀ ತಾಟಕ ಶಿಕ್ಷಕ ರಾಮ ಕೌಶಿಕ ಯಜ್ಞ ಸಂರಕ್ಷಕ ರಾಮ 2 ಮುನಿಪತಿ ಶಾಪ ವಿಮೋಚಕ ರಾಮ ಕಾರ್ಮುಕ ಭಂಜಕ ರಾಮ ಜನಕ ಸುತಾನಂದ ವರ್ಧಕ ರಾಮ ಅನುಪಮ ಲೀಲಾದ್ಯೋತಕ ರಾಮ 3 ಸತ್ಯಪರಾಕ್ರಮ ಸಾತ್ವಿಕ ರಾಮ ಪಿತೃವಾಕ್ಯ ಪರಿಪಾಲಕ ರಾಮ ಉತ್ತಮ ಚರಿತಾದರ್ಶಕ ರಾಮ ಚಿತ್ರಕೂಟಾದ್ರಿ ನಿವಾಸಕ ರಾಮ 4 ಕಾಕುತ್ಥವಂಶ ಸುಧಾರಕ ರಾಮ ಲೋಕೇಶ ಲೋಕ ಮನೋಹರ ರಾಮ ಶ್ರೀಕರಾಶ್ರಿತ ಜನ ಮಂದಾರ ರಾಮ ಶ್ರೀ ಕರಿಗಿರೀಶ ಸುಂದರ ರಾಮ 5
--------------
ವರಾವಾಣಿರಾಮರಾಯದಾಸರು
ರಾಮನ ನಾಮವೆ ನಾನಾಕಾರ ಈ ನಾಮವನುಳಿದರೆ ಶೂನ್ಯಾಕಾರ ಪ ಕಾಮಿಸಿ ಭಜಿಸಿರೆ ಆನಂದಕರ ರಾಮಾ ರಾಮಾ ಜೈ ಜೈ ರಾಮಅ.ಪ ಹಾಡುವ ಭಕ್ತರ ಅನುಮತದಲ್ಲು ಬೀಡಲಿ ಮೊರೆವ ಶೀಲೆಯರಲ್ಲು ಸೂಡಿದೆ ನಿನ್ನಯ ರಾಮಾಕಾರ ರಾಮಾ ರಾಮಾ ಜೈ ಜೈ ರಾಮ 1 ಹೂ ಗಿಡ ಬಳ್ಳಿಗಳಲ್ಲೂ ರಾಮ ಖಗಮಿಗಗಳ ದನಿ ರಾಮನ ನಾಮ ರಾಗದಿ ನೋಡಿದರೆಲ್ಲೂ ರಾಮ ರಾಮಾ ರಾಮಾ ಜೈ ಜೈ ರಾಮ 2 ಪೂಜೆಯ ಹೂವಲು ರಾಮ ರಾಮ ತೇಜದ ಗಂಧದ ಪರಿಮಳ ರಾಮ ರಾಜಿಪ ದೇಗುಲವೆಲ್ಲ ರಾಮ ರಾಮಾ ರಾಮಾ ಜೈ ಜೈ ರಾಮ3 ಜಾಜಿಪುರೀಶನ ಪಾವನ ನಾವi ಸಾಜದಿ ನುತಿಸಿರೊ ರಾಮ ರಾಮ 4
--------------
ನಾರಾಯಣಶರ್ಮರು
ರಾಮಭಜೇ ತೇ ಪದಯುಗಳಂ ಸೀತಾ ಪ ರಾಮಭಜೇ ತೇ ಪದಯುಗಳಂ ರಾಮ ಸುಂದರ ಘನಶ್ಯಾಮ ರಘೂದ್ವಹ ಅ.ಪ ದಶರಥ ಹೃದಯಾನಂದಕರಂ ತ್ರಿ ದಶಗಣ ಚಿತ್ತಾಮೋದಕರಂ 1 ಪೂರಿತ ಕೌಶಿಕಜನಂ ಸಂ ತಾರಿತ ಗೌತಮ ಲಲನಾಂ 2 ಖಂಡಿತ ಶಂಕರಚಾಪಂ ಪರಿ- ದಂಡಿತ ಭಾರ್ಗವ ಕೋಪಂ 3 ಸ್ವೀಕೃತ ಜಾನಕೀಹೃದಯಂ ದೂ ರೀಕೃತ ಪಾತಕನಿಚಯಂ 4 ಪಾಲಿತ ಮಾತಾಪಿತೃ ವಚನಂ ಸಂ ಲಾಲಿತ ಮುನಿಜನ ಸ್ತುತಿರಚನಂ 5 ಭರತ ಸಮರ್ಪಿತ ನಿಜರಾಜ್ಯಂ ಮುನಿ ವರಭಾರದ್ವಾಜಾರ್ಪಿತ ಭೋಜ್ಯಂ 6 ದಂಡಕಾರಣ್ಯಂ ಪಾವನಚರಣಂ ಉ- ದ್ದಂಡ ವಿರಾಧಾ ಪಾತಕಹರಣಂ 7 ಕುಂಭಜಾರ್ಪಿತ ಶರಕೋದಂಡ ಸಂ ರಂಭ ನಿರ್ಜಿತ ರಾಕ್ಷಸದಂಡಂ 8 ಪಂಚವಟೀತಟ ಕೃತವಾಸಂ ದೃ ಗಂಚಲ ಧೃತಗಜದುಲ್ಲಾಸಂ 9 ಶೂರ್ಪನಖೀ ವಚನಾಲೋಲಂ ಸಹ ಜಾರ್ಪಿತ ವಿವಿಧಾಯುಧ ಜಾಲಂ 10 ರೂಪನಿರ್ಜಿತ ಸುಮಬಾಣಾಂಗಂ ವಿ ರೂಪಿತ ದುಷ್ಟ ಶೂರ್ಪನಖಾಂಗಂ 11 ಖರತರ ಖರದೂಷಣಕಾಲಂ ಸುರ ನರವರ ಮುನಿಗಣ ಪರಿಪಾಲಂ 12 ಮಾಯಾಮೃಗಾರ್ಪಿತ ಬಾಣವರಂ ಜ- ಟಾಯು ಸಂಪಾದಿತ ಲೋಕವರಂ13 ರಾವಣಹೃತ ನಿಜಪತ್ನೀಕಂ ಲೋ- ಕಾವನಗತ ಕೋಪೋದ್ರೇಕಂ14 ಸಾಧಿತ ಶಬರೀ ಮೋಕ್ಷಕರಂ ಕ- ಬಂಧ ಬಂಧನ ಮೋಚನ ಚತುರಂ 15 ವಾತ ತನೂಭವ ಕೃತಸ್ತೋತ್ರಂ ಪಂ ಪಾತಟ ನಿರ್ಮಿತ ಸುಕ್ಷೇತ್ರಂ 16 ಶಿಕ್ಷಿತ ಸಂಕ್ರಂದನ ತನುಜಂ ಸಂ- ರಕ್ಷಿತ ಚಂಡಕಿರಣ ತನುಜಂ 17 ಸೀತಾಲೋಕನ ಕೃತಕಾಮಂ ನಿಜ ದೂತಾಮೋದನ ಸುಪ್ರೇಮಂ 18 ನಿಜಕರ ಭೂಷಣ ದಾತಾರಂ ಧುರ ವಿಜಯ ವನಾಲಯ ಪರಿವಾರಂ 19 ಧೂತಾಹೃತ ಶುಭದೃಷ್ಟಾಂತಂ ವಿ- ಜ್ಞಾತ ನಿಜಸ್ತ್ರೀ ವೃತ್ತಾಂತಂ 20 ಭೀಷಣ ಜಲನಿಧಿ ಬಂಧಕರಂ ವಿ ಭೀಷಣ ಸಂರಕ್ಷಣ ಚತುರಂ21 ಶೋಷಿತ ರಾವಣ ಜಲಧಿಂ ಸಂ- ತೋಷಿತ ದೈವತಪರಿಧಿಂ 22 ಸೀತಾ ಸಮಾಶ್ರಿತ ವಾಮಾಂಕಂ ಪರಿ- ಪಾತಕ ನಿಜನಾಮಾಂಕಂ 23 ಸ್ವೀಕೃತ ಸಾಕೇತಾವಾಸಂ ಅಂ- ಗೀಕೃತ ಮಾನುಷವಿಲಾಸಂ 24 ವರವ್ಯಾಘ್ರ ಪ್ರಭೂಧರ ಕಲ್ಪತರುಂ ಶ್ರೀ ವರದವಿಠಲಮತಿಶಯ ರುಚಿರಂ 25
--------------
ವೆಂಕಟವರದಾರ್ಯರು
ಲಕ್ಷ್ಮೀಲೋಲ ವಿಠಲ ರಕ್ಷಿಸಲಿ ಬೇಕು ಹರಿಯೇಪಕ್ಷ್ಮಗಳು ಅಕ್ಷಿಗಳ ಅಗಲದಿಪ್ಪಂತಿವನಾ ಪ ದಾಸತ್ವ ದೀಕ್ಷೆಯಲಿ ಕಾಂಕ್ಷೆಯನು ತೋರ್ದವಗೆಮೀಸಲಿಂದಿದ್ದೆನ್ನ ಮನದಿ ತೈಜಸನೇಲೇಸು ಹರಿಕಥೆ ಸುಧೆಯ ಸಾರವನು ನೋಡೆಂದುಶ್ರೀಶತವ ಕ್ರೀಡಾ ವಿಲಾಸದಿ ಮಾರ್ಗ ತೋರೋ 1 ಕಂಕಣಾಕಾರೇಶ ಅಂಕಿತವ ನಿತ್ತಿಹೆನುಕೊಂಕುಗಳ ತಿದ್ದುತಲಿ ಕಿಂಕರನ ಸಲಹೊ |ಪಂಕಜ ಸುರರೆಲ್ಲ ಕಿಂಕರನು ನಿನಗೆಂಬಶಂಕೆ ವಿರಹಿತ ಜ್ಞಾನ ತರತಮವ ತಿಳಿಸೊ 2 ಹಿಂದಿನ ಸುಸಂಸ್ಕಾರದಿಂದಿವನ ಸಂದೋಹಬಂದುದನೆ ರಕ್ಷಿಸ್ಯಾನಂದಕರ ಮತದಲೀ |ಬಂಧು ಬಳಗವು ನೀನೆ | ತಂದೆ ತಾಯಿಯು ನೀನೆಎಂದೆಂಬ ಸುಜ್ಞಾನ ಕರುಣಿಸೈ ಹರಿಯೇ 3 ಕರ್ಮ ವೈದೀಕ ವೆನಿಸುತ್ತಕರುಣಿಸೋ ತವರೂಪ ಹೃತ್ಕಂಜದೊಳಗೇ 4 ಸರ್ವಜ್ಷ ಸರ್ವೇಶ ಸರ್ವಾಂತರಾತ್ಮಕನೆಶರ್ವವಂದ್ಯನೆ ಹರಿಯೆ ನಾಪೇಳ್ವುದೇನೋದುರ್ವಿಭಾವ್ಯನೆ ಗುರು ಗೋವಿಂದ ವಿಠ್ಠಲನೆದರ್ವಿಜೀವನು ಗೈವ ಭಿನ್ನಪವ ಸಲಿಸೋ 5
--------------
ಗುರುಗೋವಿಂದವಿಠಲರು
ವತ್ಸರ ಸಾರ್ಥಕವಾಗಲಿಪಾರ್ಥ ಸಖನ ಗುಣ ಕೀರ್ತಿಸುತಾ ಪ ಅರ್ಥಿಯಿಂದ ಹರಿಕೀರ್ತನೆ ಮಾಡಲುಆರ್ತೇಷ್ಟದ ಸಕಲಾರ್ಥವ ಕೊಡುವ ಅ.ಪ. ವತ್ಸರ ಸಾರಿತು ಹಿಂದೆಸಾರಿತು ನಮ್ಮಾಯುವು ಮುಂದೇ |ವಾರಿಜಾನಾಭನ ಸೇರಿ ಭಜಿಸಲುಸೇರಲಿಲ್ಲ ನಾವ್ ದಿನ ಒಂದೇ1 ತಂದೆ ವೆಂಕಟನ ಪ್ರೇಮದ ದಾಸರುಸಂದೇಶವನೆ ಕಳುಹಿಸದರೂಇಂದಿರೆಯರಸನ ಭಕ್ತ ವೃಂದದಿಛಂzಸÀದಿ ಭಜಿಸೆಂದರುಹಿದರೂ 2 ಇಂದಿನಿಂದಾದರು ಒಂದು ಗೂಡುತ ನಂದಕಂದನನು ಭಜಿಸುವ ಬನ್ನಿಸುಂದರ ಗುರು ಗೋವಿಂದ ವಿಠಲನದ್ವಂದ್ವ ಚರಣವನು ವಂದಿಸೆ ಬನ್ನಿ 3
--------------
ಗುರುಗೋವಿಂದವಿಠಲರು
ವಂದನೆಯು ವಂದನೆಯು ವಂದನೆಗಳು ನಂದಕುಮಾರ ಗೋವಿಂದನ ಚರಣಕೆ ಪ ವಂದನೆ ಇಂದಿನ ಬಂಧನ ನಾಶಕೆ ಮುಂದಿನ ಭವಗಳ ಮುಂದಿನ ಹರಣಕೆ ಅ.ಪ ಹುಟ್ಟು ಸಾವುಗಳ ಕಟ್ಟಳೆ ಅವನದು ಕೊಟ್ಟುದನು ಪಡೆಯುವದೃಷ್ಟ ನನ್ನದು ಬೆಟ್ಟದ ಗಾತ್ರದ ಪಾಪವು ನನ್ನದು ಇಷ್ಟನು ಕ್ಷಮಿಸುವ ದೃಷ್ಟಿ ಅವನದು 1 ಶರಣರ ಪೊರೆಯುವ ಬಲವಾತನದು ಪರಿಪರಿ ಪಾಪವ ಗಳಿಸುವುದೆನ್ನದು ಕರುಣೆಯ ತೋರುವ ಮನವಾತನದು ವರದ ಮಾಂಗಿರಿರಂಗ ನೀ ಶರಣೆಂಬುದು ನನ್ನದು2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಂದಿಸುವೆ ಗುರು ರಾಘವೇಂದ್ರಾರ್ಯರಾವೃಂದಾವನದಿ 'ೀಣೆ ನುಡಿಸುತಲಿ ಕುಳಿತವರಾ ಪನಂದಗೋಪನಕಂದ ಗೋ'ಂದ ಗೋಪಾಲಇಂದಿರಾರಮಣ ಮುಚಕುಂದವರದಾ'ಂದರ್ಪಜನಕ ಇಂದೆನಗೆ ನಿನ್ನ ಪಾದಾರ-ವೆಂದವನು ತೋರಯ್ಯ ಎಂದು ಪಾಡುತಲಿಹರ 1ನರಹರಿ ಶ್ರೀಕೃಷ್ಣ ರಾಮ ವೇದವ್ಯಾಸಮೂರೊಂದು ಮೂರ್ತಿಗಳುಪಾಸನೆಯನುಚಾರು ವೃಂದಾವನದಿ ಕುಳಿತು ಸಂತತ ಮಾಳ್ವಧೀರ ಶ್ರೀ ವೇಣುಗೋಪಾಲನನು ಕುಣಿಸುವವರ 2'ೀಣೆಯನು ನುಡಿಸುತಲಿ ಗಾಯನವ ಮಾಡುತ್ತಆನಂದ ಬಾಷ್ಪಗಳ ಉದುರಿಸುತಲಿಆನಂದಕಂದ ಭೂಪತಿ-'ಠಲನ್ನ ಸದಾಕಣ್ಮುಂದೆ ನಿಂದಿರಿಸಿಕೊಂಡ ಗುರುಗಳ ಕಂಡು 3
--------------
ಭೂಪತಿ ವಿಠಲರು
ವಾಲೆ ಬಂದಿಹುದೇ ತಂಗೀಯನ ವ್ವಾಲೆ ಬಂದಿಹುದೆ ಪ. ವಾಲೆ ಬರೆದ ಭಕ್ತ ಪಾಲ ಶೀಲ ಕರುಣಾಲ ವಾಲೆ ಅ.ಪ. ಅಂಬುರುಹೋದ್ಭವ ಅಖಿಲ ಸುರಾ ರಂಬರದಲಿ ಸ್ತುತಿಸೆ ಶಂಬರಾಸುರ ಸಂಹರನೈಯ್ಯನ ಹಡಗು ಅಂದು ಮಾರುತನಿಲ್ಲದೆ ಗೋಪಿ ಚಂದನಸಹಿತನಿಲ್ಲೇ ಮಧ್ಯದಿಂದಲೀ ಅಂದದಿ ಮುನಿಗಳ ನಿಂದು ಸ್ತುತಿಸುತಾ ನಂದದಿಂದಾನಂದಕಂದನ ಮುಂದೆ ಕರೆಯೆ ಮುನಿ ದಂದುಗ ಹರಿಸುತ ಬಂದೆನೆಂದು ಇಂಥಾ 1 ಬಂದೆನೆಂದು ತೋರನೆ ಹರಿ ನಿಂದಿರುವನೆ ಬದಿಲಿ ಇಂದುಧರನ ಆಣೆ ಎನ್ನ ಮಂದಿರದಲಿ ತೋರುತ ಬಂದ ಭಕ್ತರ ಸೇವಿಸೆಂದು ಬರೆದಿಹ ಬಂಧು ನಾನೆಂದು ತಿಳಿ ಎಂದು ಹೇಳುವತೆರ ಬರಹವ ಇಂದಿರೇಶ ತಾ ಬಂದು ನಿಂದು ಕೈ ಪಿಡಿದ ವಾಲೆ 2 ಶ್ರೀ ಶ್ರೀನಿವಾಸನ ತೋರುವೆ ವಾಸವಾಗುತ ಮನದಿ ಕ್ಲೇಶವ ಕಳೆ ಮನದಾಸೆ ಬಿಟ್ಟರೇನು ಶ್ರೀಶನಾಜ್ಞೆಯೆಂದು ಎನ್ನ ಶುಭ ಪತ್ರವ ದಾಸಳಾದ ಎನ್ನ ಮನದಾಸೆ ಪೂರೈಸುವ ವಾಲೆ ವಾಸುದೇವನ 3
--------------
ಸರಸ್ವತಿ ಬಾಯಿ
ವೇಣುನಾದ ಪ್ರಿಯ ಗೋಪಾಲಕೃಷ್ಣ ಪ. ವೇಣುನಾದ ವಿನೋದ ಮುಕುಂದಗಾನವಿನೋದ ಶೃಂಗಾರ ಗೋಪಾಲ ಅ.ಪ. ವಂದಿತಚರಣ ವಸುಧೆಯಾಭರಣಇಂದಿರಾರಮಣ ಇನಕೋಟಿತೇಜಮಂದರಧರ ಗೋವಿಂದ ಮುಕುಂದಸಿಂಧುಶಯನ ಹರಿ ಕಂದರ್ಪಜನಕ 1 ನವನೀತಚೋರ ನಂದಕುಮಾರಭುವನೈಕವೀರ ಬುದ್ಧಿವಿಸ್ತಾರರವಿಕೋಟಿತೇಜ ರಘುವಂಶರಾಜದಿವಿಜವಂದಿತ ದನುಜಾರಿ ಗೋಪಾಲ2 ಪರಮದಯಾಳು ಪಾವನಮೂರ್ತಿವರ ಕೀರ್ತಿಹಾರ ಶೃಂಗಾರಲೋಲಉರಗೇಂದ್ರಶಯನ ವರ ಹಯವದನಶರಣರಕ್ಷಕ ಪಾಹಿ ಕೋದಂಡರಾಮ 3
--------------
ವಾದಿರಾಜ
ಶೇಷ ವಂದ್ಯ ಶಿರಿನಾರಾಯಣ ವಿಠಲ ದಾಸನೆನಿಸೋ ಇವನಾ ಪ ದೋಷ ದೂರ ಸುವಿಶೇಷ ಮಹಿಮ ಬ್ರಹ್ಮೇಶ ವಂದ್ಯ ಚರಣ ಅ.ಪ. ಸಾಧಕ ಜೀವ ಸಮೂಹವ ಸೃಜಿಸುತ್ತಸಾಧನ ಬಗೆ ಬಗೆ ನಿರ್ಮಿಸುತಾ |ಭೋದಕ ವೇದ ವಿಭಾಗವ ಗೈದಾ ಅ-ಗಾಧ ಮಹಿಮ ಪೊರೆಯೊ 1 ಕಾರುಣ್ಯಾಂಬುಧಿ ತಾರತಮ್ಯ ಜ್ಞಾನಮೂರೆರಡಿಹ ಭೇದವನೆ ತಿಳಿಸೊಸಾರಾಸಾರದಿ ಸಾರತಮನು ನೀನೆಂ-ದಾರಧಿಪ ಮತಿ ತಿಳಿಸೋ 2 | ಸೇವ್ಯಸೇವಕ ಭಾವ ತಿಳಿಸುತನಿವ್ರ್ಯಲೀಕ ನೆನಿಸೊ |ಪೂಜ್ಯ ಪೂಜಕನೆ ಮಾಳ್ಪುದೆಲ್ಲ ತವಭವ್ಯ ಪೂಜೆ ಎನಿಸೋ 3 ಗುರ್ವನುಗ್ರಹವೆ ಬಲವೆಂದೆನಿಸುತಸರ್ವಕಾರ್ಯ ನಡೆಸೊ |ದುರ್ವಿಭಾವ್ಯ ಸರ್ವೋತ್ತಮ ಹರಿಸರ್ವೇಷ್ಟ ಪ್ರದ ನೆನಿಸೊ 4 ತಂದೆ ತಾಯಿಯೋಳ್ಬಂಧು ಮಿತ್ರರಲಿಸಂದುಗೊಂದು ತವವ್ಯಾಪ್ತಿ |ಛಂದದರಹಿ ಪೊರೆನಂದಕಂದ ಗುರು ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಶ್ರೀ ಮನೋಹರ ಸಲಹೋ ಎನ್ನ ಕಾಮಿತ ಫಲವಿತ್ತು ಸಾಮಜಪತಿ ಪರಿಪಾಲಕ ನಂಬಿದೆ ಪ ಅಂಡಜಗಮನ ದಶರುಂಡವೈರಿ ರಾಜೀವಾಕ್ಷ ಕುಂಡಲಿಶಯನ ಕೋದಂಡ ಪಾಣಿಯ ತೋಂಡಮಾನಗೊಲಿದ ಮಾರ್ತಂಡ ತೇಜ ಪಾದ ಪುಂಡರೀಕ ಸೇವಿಸುವ ತೋಂಡರೊಳಿಡು ಪಾಂಡವಪಕ್ಷ1 ನಾಳಿತ ಸಂಭವಪಿತ ಶೈಲಜಾವಲ್ಲಭನುತ ಭಂಜನ ವನಮಾಲಿ ಭೂಲೋಲ ಕಾಲ ಕೋಲರೂಪಿ ಕೋಮಲಾಂಗ ತಾಲ ಕೇತನನುಜ ಕೀಲಾಲಜ ಬಾಂಧವ ಬಾಲಕ ಪೋಷಕ 2 ಇಂದು ಕೋಟಿ ನಿಭ ನರಸಿಂಧುರಾರಿ ಸಿಂಧುಶಾಯಿ ದಾತ ನಂದಕ ಹಸ್ತ ನಂದಮುನಿವಂದಿತ ಸಂಕ್ರಂದನ ನಂದನವರದ ಬಂಧನ ಬಿಡಿಸೋ ಶಾಮಸುಂದರವಿಠಲ ಬಂಧುರ ಮಹಿಮ 3
--------------
ಶಾಮಸುಂದರ ವಿಠಲ
ಶ್ರೀನಿವಾಸಗಾರುತೀಯ ಮಾನುನೀಯರು ಬೆಳಗಿರೀಗ ಪ ಗಾನಲೋಲ ದೀನಪಾಲ ಆನಂದಕಂದ ಸುಂದರಾಂಗ ಅ.ಪ ಭಕ್ತಪಾಲಾಸಕ್ತÀ್ತಶೀಲಾ ಮುಕ್ತೀಶ ರಮಾಲೋಲಗೀಗ ಮುತ್ತಿನಾರುತೀಯನೆತ್ತೀರೆ ಭಕ್ತವತ್ಸಲ ದೇವಗೆ ಬೇಗ 1 ಆದಿಮೂಲನೆ ವೇದೋದ್ಧಾರನೆ ಸಾಧುವಂದ್ಯ ಗಿರಿಧರನೆ ಕಂದಗೊಲಿದಾನಂದ2 ಭೂಮಿ ಅಳಿದ ಭೂಪರ ಕೊಂದ ಭೂಮಿಜೆ ಅರಸ ಭೂಪ ಕೃಷ್ಣಾ ಭಾಪುರೆ ಬೌದ್ಧ ಭೂಪ ಕಲ್ಕಿ ಶ್ರೀಪ ಶ್ರೀಶ್ರೀನಿವಾಸನಾದ 3
--------------
ಸರಸ್ವತಿ ಬಾಯಿ
ಶ್ರೀಮಾನಿನೀವರ ನಂದಕುಮಾರ ಪ. ರಾಜರಾಜೇಶ್ವರ ರಾಜ್ಯಾಭಿಷೇಕವ ಮೂಜಗವರಿಯೇ ಸುರರಾಜನಿಂ ಕೈಗೊಂಡ 1 ಅಂದೆ ತಿಳಿದೆನು ಸಿಂಧುಶಯನ ನೀನು ಇಂದಿರೆಯೇ ಭೀಷ್ಮಕನಂದನೆಯೆ ತಾನು 2 ದೇವಾದಿದೇವ ವಸುದೇವನಂದನ ವಾಸುದೇವ ದೇವಕೀಸುತ ಭಾವಜತಾತ 3 ನರಲೀಲಾ ವೈಭವ ಧರೆಗೆಲ್ಲಾ ತೋರುವ ಮಾಧವ 4
--------------
ನಂಜನಗೂಡು ತಿರುಮಲಾಂಬಾ
ಶ್ರೀರಘುಪತೇ ನಮೋಸ್ತುತೆ ಚಾರುನೀತಿಯುಕ್ತ ಭೂಪತೇ ಪ ನೀರದಸಮಶರೀರ [ಸಮರ] ರಣ ಧೀರ ಸದಾನಂದಕರ ಭೂಮಿಜಾಪತೇ ಅ.ಪ ಲೋಕಾಭಿರಾಮ ತಾರಕನಾಮ ಧಾಮ 1 ಸಕಲಕಲಾವಿದ ಭಜಕ ಪ್ರೇಮ ಶುಕಶೌನಕ ಮುನಿಸನ್ನುತ ನಾಮ 2 ವಿಕಸಿತ ವದನಾಂಭೋರುಹಲೋಚನ [ಸಖ] ಮಾಂಗಿರೀಶ ಹನುಮಾನತ ನಾಮ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್