ಒಟ್ಟು 114 ಕಡೆಗಳಲ್ಲಿ , 37 ದಾಸರು , 107 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಹರಿ ಮೂಜಗದೊಳು ನೀನು ತೇಜವುಳ್ಳವನಾಗಿ ಪ ಕಾಲದಿ ನಿನ್ನಯ ಮೇಲಿಹ ನಿರ್ಮಾಲ್ಯ ಮಾಲೆಯನೆಲ್ಲ ವಿಸರ್ಜಿಸಿ ತೊಳೆದು ನೀಲಮಾಣಿಕ ವಜ್ರಮಯವಾದ ಪೀಠದ ಮೇಲೆ ವಾಲಗವಾಗಿ ಲೀಲೆಯ ತೋರುತ1 ಮೊದಲು ಸಂಕಲ್ಪಿಸಿ ತುಳಸಿ ಶ್ರೀಗಂಧದಿ ಉದಕ ಶುದ್ಧವ ಮಾಡಿ ಅದರೊಳು ಬಳಿಕ ವಿಧಿಸಿಯೆ ಮತ್ತೇಳು ನದಿಯನುಚ್ಚರಿಸಲು ಒದಗಿ ಬಾರೆಲೊ ಕರಚರಣ ಮಜ್ಜನಕೀಗ 2 ಮಾನಸದಘ್ರ್ಯವು ಆಚಮನಗಳು ನಾನಾ ಪಂಚಾಮೃತ ಫಲವಭಿಷೇಕವು ಗಾನ ಸೂಕ್ತಗಳಿಂದ ಮಧುಪರ್ಕಾದಿಗಳು 3 ವಸ್ತ್ರವಾಭರಣವು ಯಜ್ಞಸೂತ್ರವ ತೊಡಿಸಿ ಚಿತ್ರವಾಗಿಹ ಗಂಧ ಅಕ್ಷತೆವಿಡಿಸಿ ಪತ್ರಪುಷ್ಪವು ಶ್ರೀತುಳಸಿ ಮಾಲೆಗಳಿಂದ ಸ್ತೋತ್ರವು ಸಾಹಸ್ರನಾಮಗಳಾಯಿತು 4 ಧೂಪಮಾಧ್ರೂಪಯ ದೀಪದ ದರುಶನವು ಆದಷ್ಟು ಸರ್ವೋಪಚಾರಗಳು ಕದಳಿ ನಾರಿಕೇಳÀವು ಪರಿ ನೈವೇದ್ಯ ದಯಾಪರಮೂರ್ತಿ 5 ಆಗರದೊಳು ಬೆಳೆದ ನಾಗವಲ್ಲಿಯ ದಳ ಪೂಗಿಯಫಲ ಸಹ ನಾಗಶಯನಗಿಟ್ಟು ಬೇಗದಿ ಮಂಗಳ ಪದಗಳ ಹೇಳಿ ಲೇ ಸಾಗಿ ಎತ್ತುವ ಅಮೋಘದಾರತಿಗಳ 6 ಮಾಡಿದ ಪೂಜೆಯ ನೋಡಿ ಕರುಣದಿಂದ ಬೇಡಿದಿಷ್ಟವನೀಯೊ ರೂಢಿಯ ಒಡೆಯ ಪಾಡಿ ಪೊಗಳುವೆ ನಿನ್ನ ಪಂಥ ಬೇಡೆನ್ನೊಳು ಅನುದಿನ ವರಾಹ ತಿಮ್ಮಪ್ಪ 7
--------------
ವರಹತಿಮ್ಮಪ್ಪ
ಷಟ್ಪದಿ ಕೂಟವಾಳುವ ಶ್ರೇಷ್ಠ ಶಾರದೆ | ಕೈಟ ಭಾರಿಯ ಭಕ್ತಿ ವೃಕ್ಷವ| ನಾಟಿ ಹೃದಯದಿ ಬೆಳಸೆ ಶುಭಗುಣ ಖಣಿಯೆ ಮಂಗಳೆಯೆ 1 ಪೋಲ್ವ ಮೂಢನ | ಭಾರ ನಿನ್ನದೆ ದೀನ ವತ್ಸಲೆ ಯೆ| ಶುಭಮರ್ಮ ಕಳಿಸುತ | ಶ್ರೀನಿವಾಸನ ಭಕ್ತಿ ಜ್ಞಾನವಿರಕ್ತಿ ಕೊಡಿಸಮ್ಮ 2 ವೇಣಿ ವೀಣೆಯ | ಗಾನ ನುಡಿಸುವ ಜಾಣೆ ವಿಧಿಮನ ಹಾರಿ ಕೋಮಲೆಯೆ | ಶೂನ್ಯ ಮೂರು ರೂಪಳೆ | ಸಾನುರಾಗದಿ ವಲಿದು ಹರಿಪಥ ಸಿಗಿಸಿ ಪೊರೆಯಮ್ಮ 3 ರಮ್ಯರೂಪಗಳಿಂದ ನಾ ನಾ | ರಮ್ಯಸೃಷ್ಟಿಗಳಿಗನುವಾಗುತ ಹರಿಯ ಸೇವಿಸಿದೆ | ನುಡಿಸಿ ಕರಿಸುವಿ | ಯಮ್ಮ ಜಗದಿ ಸರಸ್ವತೀಯಂತೆಂದು ವಿಪಮಾತೆ 4 ಮಾಯ್ಗಳ ಗೆಲ್ವ ಬಗೆ ತೋರು | ಮಾತೆ ಯೆನಿಸಿಹೆ ವಿಕಟ ಜಗದವತಾರ ವರ್ಜಿತೆ ಶರಣು ಶ್ರೀ ಸೊಸೆಯೆ 5 ಕೃತಿ ಸುತೆಸು | ಮಧ್ವಶಾಸ್ತ್ರದಲಿ ಮನದಕು| ಬುದ್ದಿಗಳ ಕಡಿಸಿ ಪ್ರಸಿದ್ಧಿಯ ನೀಡಿ ಸಾಕಮ್ಮ | ಪದ್ಮನಾಭನ ವೇದ ಸಮ್ಮತಿ | ಯಿಂದ ಪಾಡುತ ಭಾಗ್ಯವಾಹುದೆ | ಎಂದಿಗಾದರು ನೀನೆ ಮನದಲಿ ನಿಂತು ನುಡಿಸದಲೆ 6 ವಿನೋದ ಗೊಷ್ಠಿಯ | ಹಾದಿ ಹಿಡಿದವಿವೇಕಿ ನಾನಲೆ ಕೇಳು ವಿಪತಾಯೆ | ಮಾಧವನು ಸಿಗನಮ್ಮ | ಆದರದಿ ಸಾರಿದೆನು ಕವಿಜನಗೇಯೆ ವಿಧಿಜಾಯೆ 7 ನೀರಜ ರುದ್ರರ ಬಿಂಬೆ ಭಕ್ತರ | ಸ್ತಂಭೆ ಶಾಂಭವಿ ವಂದ್ಯೆ ನಿತ್ಯದಿ | ಉಂಬೆ ಸುಖಗಳನೂ | ಸಾರ ಕೈಗೊಡಿಸಮ್ಮ ಸಮೀರ ಗ್ಹೇಳುತಲಿ 8 ಭೃತ್ಯ ನಿತ್ಯ ಭಕ್ತಳೆ | ವಿತ್ತ ವನಿತಾ ವ್ಯಾಧಿ ಹರಿಸುತ ಚಿತ್ತ ಶುದ್ಧಿಯನು | ಸಪ್ತ ಶಿವಗಳ ಮರ್ಮ ಬೇಗನೆ ವತ್ತಿ ಮಿಥ್ಯಾಜ್ಞಾನ ತಿಮಿರವ ಭಕ್ತಿ ಭಾಸ್ಕರಳೆ 9 ಸುಖಗಳನುಂಬೆ ಭುಜಿವಿದಿ| ತಳಿಹೆ ಪತಿತೆರದ್ವಿಶತ ಕಲ್ಪಗಳಲ್ಲಿ ಸಾಧನೆಯು | ಶಾಪವ ಶ್ಯಾಮಲಾಶಚಿ | ಗಳಿಗೆ ದ್ರೌಪತಿ ಇಂದ್ರ ಸೇನಾಕಾಳಿ ಚಂದ್ರಾಖ್ಯೆ 10 ನಿಂತು ಶಶಿಯಿಲ್| ಭೂತ ಗುಪಚಯವಿತ್ತು ಸೃಷ್ಠಿಯ ಕಾರ್ಯಗನುವಾಹೆ | ಪತಿ ನಿನಗಹುದಮ್ಮ ಕೊರತೆಯು | ಯಾತರಿಂದಲು ಯಾವಕಾಲುಕು ಇಲ್ಲರಯಿ ನಿನಗೆ 11 ಕವಚ ತೊಡಿಸುತ | ಶ್ರೀನಿವಾಸನಭಕ್ತನಿಚಯಕ್ಕೆ ಕೈಮುಗಿದು ಆನತಾಮರಧೇನು ಮುಖ್ಯ | ಪ್ರಾಣಮಂದಿರನಾದಶುಭಗುಣ ಪೂರ್ಣಪೂರ್ಣಾನಂದ ತದ್ವನ ಬಾದರಾಯಣಗೆ 12 ದೈನ್ಯ ದಿಂದಸಮರ್ಪಿಸುತ ಪವಮಾನರಾಯನ ಕರುಣವೆಲ್ಲೆಡೆ ಅನ್ಯ ವಿಷಯವ ಬೇಡದಂದದಿ ಮಾಡುತಲಿಯನ್ನ | ಜ್ಞಾನ ಭಕ್ತಿ ವಿರಕ್ತಿ ಸಂಪದ | ನೀನೆ ನೀಡುತ ಸಲಹೆ ಕೃತಿಸುತೆ | ನೀನೆ ಸಾಸರಿ ನಮಿಪೆ ಬೃಹತೀಖ್ಯಾತ ಭಾರತಿಯೆ 13 ಸೇರಿ ತಾಂಡವ ಮಾಡಿ ಪಾದ ಪಂಕಜವ ಸೂರಿ ಸಮ್ಮತ ವೇದ ಗಾನದಿ | ಸಾರಿ ಸಾರಿಸೆ ಸೇರು ವದನದಿ | ನೀರ ಜಾಕ್ಷನ ಸೊಸೆಯೆ ಶುಚಿಶತಿ ನಮಿಪೆ ಭೂಯಿಷ್ಠ 14
--------------
ಕೃಷ್ಣವಿಠಲದಾಸರು
ಸಂಗವಿತ್ತು ಸಲಹೋ ರಾಯಾ ಸುಖ ಸಂಗಿಗಳಾ ಪ ಸದಾಶಿವ ಶರಣರ ಕರುಣ ಕವಚ ತೊಡಿಸಿ ಜೀಯಾ ಅ.ಪ. ನೀಲಕಂಧರಧರ ರುಂಡಮಾಲೆ ಕುಂಡಾಲ ಚರ್ಮ ಪೆತ್ತವನಪ್ರೀಯಾಮುಗಿದೆನೋ ಕರಮುಗಿದು ಕಳೆಯೊ ತಾಪತ್ರಯ 1 ಮದ್ದು ಹಾಕಿ ಮಣಿಸೋ ಮತ್ತೆ ಮಧ್ವಚಾಲನ ಪಾಲಿಸೋ ತವ ಶುದ್ಧಮತದೊಳಗಾಡಿಸೋ ಗುರುಮಧ್ವರಾಜ ತವದಾಸನೆನಿಸೊ2 ಶತ ಪತ್ರಾರಿಯ ಥಂಪನ ಸುತನೋ ಮತ್ತೆ ಶತ್ರಾನುಜನೆನಿಸುವನೊಪಾಶುಧರಿಪಾಗ್ರಜನೊ ಮತ್ತೆ ಪಶುವೇರುವನ ತಂದೆವರದಗೋಪಾಲ ವಿಠ್ಠಲನ ಭಜಿಸುವನೋ 3
--------------
ತಂದೆವರದಗೋಪಾಲವಿಠಲರು
ಸನ್ನುತ ವಿಠಲ | ಇವನ ಪೊರೆಯೋ ಪ ಅವಿಕಾರಿ ಆದ್ಯ ನಿರ | ವದ್ಯ ಎಲೊ ಹರಿಯೆ ಅ.ಪ. ತೈಜಸನೆ ನೀನಾಗಿ | ಮಾಜದಲ್ಯುಪದೇಶಯೋಜಿಸುವೆನೆಂದೆನುತ | ಪೇಳ್ದುದಕ್ಕಾಗೀಆರ್ಜವದ ಮನದಲ್ಲಿ | ಪ್ರಾರ್ಥಿಸಲು ಸ್ವಪ್ನದಲಿಯೋಚಿಸಿಹೆ ಅಂಕಿತವ | ಹೇ ನೈಜಮೂರ್ತೇ 1 ಚಿಣ್ಣನಿರುವನು ಇವನು | ಕಣ್ಣೆಗೆವೆಯಂದದಲಿಇನ್ನೀವನ ಕಾಯುವುದು | ಬನ್ನಬಡಿಸದಲೇಅನ್ನ ಆರೋಗ್ಯಕ್ಕೆ | ನಿನ್ನನೆ ಮೊರೆಯಿಡಲಿಅನ್ಯ ಹಂಬಲ ನೀಗೊ | ಪನ್ನಂಗ ಶಯನಾ 2 ತೊಡರು ಬರಲಿ | ಬಿಡದೆ ನಿನ್ನಂಘ್ರಿಯನುಧೃಡಭಕ್ತಿಯಿಂ ಸ್ಮರಿಪ | ಮುದ ಮನವ ನೀಯೋ |ಎಡಬಲದಿ ನೀನಾಗಿ | ಬಿಡದೆ ಬೆಂಬಲ ವಿರಲುಕಡು ಭವಾರ್ಣವವೆಲ್ಲ | ಅಡಿಯ ಪರಿಮಿತಿಯೋ 3 ಸಿರಿ ವಾಯು ಮೊದಲಾದಸುರರೆಲ್ಲ ಹರಿಯ ಕಿಂಕರರೆಂಬ ಮತಿಯಿತ್ತುಪೊರೆವುದಿವನನ ಎಂದು | ಹರಿಯೆ ಭಿನ್ನವಿಪೆ 4 ನಾಮ ಸ್ಮರಣೆ ಯೆಂಬ | ವಜ್ರಕವಚವ ತೊಡಿಸಿಈ ಮಹಾ ಕಲಿಯುಗದಿ | ಸಾಧನವ ಗೈಸೋಶ್ರೀ ಮನೋಹರ ಗುರು | ಗೋವಿಂದ ವಿಠಲಯ್ಯಈ ಮಹತ್ತುಪಕಾರ | ನಾ ಮರೆಯನಯ್ಯ 5
--------------
ಗುರುಗೋವಿಂದವಿಠಲರು
ಸನ್ನುತ ಪಾದ ಭಕುತಿಯ ಬಿತ್ತಿ 1ದೇಹವೆ ನಾನೆಂಬ ದೈನ್ಯವ ಬಿಡಿಸಿಸಾಹಸದಲಿ ಸಕಲ ಸಾಧನವ ತೊಡಿಸಿಮೋಹ ಮತ್ಸರವೆಂಬ ಮೋಸವ ಕೆಡಿಸಿಸೋಹಮೆಂಬರಿವಿನಲ್ಲಿ ಸೊಗಸಾಗಿ ನಡೆಸಿ 2ಕಾಲಕರ್ಮಂಗಳ ಮೂಲವ ಕಿತ್ತು ಗೋಪಾಲಾರ್ಯ ನಿಜಸುಖ ಶೀಲವನಿತ್ತುಮೇಲಾದ ಮುಕುತಿಯ ಕೀಲಕಳೆದೆತ್ತುಶ್ರೀಲಕ್ಷ್ಮಿಯರಸನೆ ಚಿತ್ತವನಿತ್ತು 3
--------------
ಗೋಪಾಲಾರ್ಯರು
ಸಂಪ್ರದಾಯದ ಕೀರ್ತನೆಗಳು ಬಜಬೆಣ್ಣೆನಿಡುವೆನು ಬಾ ರಂಗ ಮೋಹನಾಂಗ ಕೃಷ್ಣಾ ಪ. ಬಜ ಬೆಣ್ಣೆನಿಡುವೆನು ನಿಜರೂಪ ತೋರಿಸೊ ಭುಜಗ ಶಯನ ದೇವಾ ಅ.ಪ. ಮೀಸಲಳಿದ್ಹಾಲು ಕಾಸಿದ ಮೊಸರನ್ನ ಸೋಸಿಲಿ ಕಡೆದ ಬೆಣ್ಣೆ ವಾಸುದೇವನೆ ನಾ 1 ಅಸುರ ಪೂತÀನಿಯ ವಿಷದ ಮೊಲೆಯನುಂಡು ಕಸುವಿಸಿಯಾಗಿಹ ಹಸುಳೆ ನಿನ ಬಾಯೊಳು 2 ಉಡುಗೆ ತೊಡುಗೆ ತೊಡಿಸಿ ಕಡಗ ಕಂಕಣ ಕೈಗೆ ವಡೆಯ ಶ್ರೀ ಶ್ರೀನಿವಾಸ ಸಡಗರÀದಲಿ ನಾ 3
--------------
ಸರಸ್ವತಿ ಬಾಯಿ
ಹಯಾಸ್ಯ ವಿಠಲ ಸಲಹೊ |ಶುದ್ಧ ಭಕ್ತನ ಪೊರೆಯೆ ಭಿನ್ನವಿಪೆ ಸತತ ಪ ಮಧ್ವವಿಜಯದಿ ಸದ್ಬುದ್ಧಿ ಪ್ರದನೀನೆನಿಸಿಮಧ್ವಗುರು ಸತ್ಕರುಣ ಕವಚವನೆ ತೊಡಿಸೀ |ಸಿದ್ಧಾಂತ ಜ್ಞಾನದಲಿ ಶುದ್ಧ ಬುದ್ಧಿಯ ನಿತ್ತುಉದ್ಧರಿಸ ಬೇಕಿವನ ಉದ್ಧವನ ಪ್ರಿಯನೇ 1 ಪಾದ ಭವ ಹರಿಸೋ 2 ಗುಣರೂಪ ಕ್ರಿಯ ನಿನ್ನ ಧ್ಯಾನುಪಾಸಾನೆ ಇತ್ತುತನುಸದನ ಹೃದ್ಗಹದಿ ಕಾಣಿಸೀ ಕೊಳುತಾ |ಘನವೆನಿಪ ಸಂಚಿತಾಗಾಮಿಗಳ ಪರಿಹರಿಸಿಅಣುಗನನ ಸಲಹೆಂಬ ಪ್ರಾರ್ಥನೆಯ ಸಲಿಸೋ3 ಕ್ಲೇಶ ನಿಸ್ಸಂಶಯದಿ ಕಳೆಯುತಿಹಕಂಸಾರಿ ತವಪಾದ ಪಾಂಸು ಭಜಿಪನಿಗೇ |ವಂಶ ಉದ್ಧರಿಸಿ ಸಂತೈಸು ಶ್ರೀ ಹರಿಯೆಅಂಶುಮಾಲೀಕುಲಜ ಶ್ರೀರಾಮಚಂದ್ರಾ 4 ದೀಕ್ಷೆದಾಸತ್ವದಲಿ ಕಾಂಕ್ಷಿತಗೆ ತೈಜಸನುಈಕ್ಷಿಸುತ ಕರುಣಾಕಟಾಕ್ಷದಲಿ ಪೇಳೇ |ಸಾಕ್ಷಿ ಮೂರುತಿ ಗುರು | ಗೋವಿಂದ ವಿಠಲ - ಅಪೇಕ್ಷೆ ಪೂರ್ತಿಸಿಹೆ | ಋೂಕ್ಷ ಸನ್ನುತನೇ 5
--------------
ಗುರುಗೋವಿಂದವಿಠಲರು
ಹರಿದಾಸನ ಮಾಡಿಕೊಂಬುವಿಯ ಎನ್ನ ಪ ಪರಮಕರುಣಾಶರಧಿ ಭಕ್ತ ಪ್ರಸನ್ನ ಅ.ಪ. ಪಾಡುವ ಶೈಲಿ ತಿಳಿಸಿ ನೋಡಿ ಕುಣಿದು ಕುಣಿಯುವ 1 ದುರುಳ ಸುಖಕೆ ದಾರಿಯ ತಿಳಿಸೀ ಪಥ ಸಾಗಿಸಿ ಬಿಡದೇ 2 ಕಜ್ಜಿಗಳನು ನಿರುತ ದಿರಿಸಿ ಕಾಯುತ ಲೀಗ 3 ಕರುಣ ಕವಚವ ತೊಡಿಸಿ ಬಾಧೆ ತಟ್ಟದ್ಹಾಂಗೆ 4 ಸಿರಿ ಶ್ರೀಕೃಷ್ಣವಿಠಲ ಪರಮೋ- ಚರಿಸಿ ನಲಿವಂಥ 5
--------------
ಕೃಷ್ಣವಿಠಲದಾಸರು
ಏನಯ್ಯ ನಿನ್ನ ಸಂಗದಪರಿ - |ಮಾನಿನಿಯ ಮರುಳು ಮಾಡಿ ನೋಡಿದವಗೆ ಪಶಿರವ ತೂಗುವಳು, ಚಿತ್ರದ ಪ್ರತಿಮೆಯಂತಿಹಳು |ಕರವ ಗಲ್ಲದೊಳಿಟ್ಟು ಕಡುಸುಯ್ವಳು ||ಇರು ಇರುತಲೊಮ್ಮೊಮ್ಮೆ ಎದುರೆದ್ದು ನೋಡುವಳು |ಬರವ ಕಾಣದೆ ಕಂದಿ ಕುಂದಿ ಬಡವಾದಳೈ 1ಕಂಬನಿಯ ತುಂಬುವಳು ಕರೆವಳು ಪೆಸಗೊರ್ಂಡು |ಹಂಬಲಿಸುವಳು ಕಂಡ ಕಾಂತೆಯರೊಳು ||ಬೆಂಬಿಡದೆ ಜಡೆ ಮುಡಿಯೆ ತೊಡಿಗೆ ಬೀಸಾಡುವಳು |ಬಿಂಬವರಿತು ಪೊಗುಳುವಳು ನಿನ್ನ ಗುಣಗಣವ 2ಇನಿತರೊಳೇನಹುದೊ, ನಿನ್ನ ಮೇಲಣ ಸ್ನೇಹ |ಘನತಾಪದಿಂದ ಗೋಚರವಾಗಿದೆ ||`ಅನುತಾಪದಿಂದ ಸಲೆ ಬಳಲಿದ ಮಾನಿನಿಯ |ವನಜಾಕ್ಷಪುರಂದರ ವಿಠಲ ಬಂದು ಸಂತಯಿಸೊ3
--------------
ಪುರಂದರದಾಸರು
ಗೋಪಿಯ ಭಾಗ್ಯವಿದು |ಆ ಪರಮಾತ್ಮನ ಅಪ್ಪಿ ಮುದ್ದಿಡುವುದು ಪಅಂಬೆಗಾಲಿಡು ಹರಿಕುಣಿದಾಡೈ ತೋ-|ಳಂಬಲಿ ತಾ ಹೊಂಗುಬ್ಬಿಯನು ||ಅಂಬುಜನಾಭ ನೀನಾನೆಯನಾಡೆಂದು |ಸಂಭ್ರಮದಿಂದ ಮುದ್ದಾಡುವಳೊ 1ನಿತ್ಯನಿರ್ಮಲನಿಗೆ ನೀರನೆರೆದು ತಂದು |ಎತ್ತಿ ತೊಡೆಯೊಳಿಟ್ಟು ಮುದ್ದಿಸುತಾ ||ಸತ್ಯಲೋಕವನಾಳುವ ವಿಧಿಜನಕನ |ಪುತ್ರನೆಂದರಿತು ತಕ್ಕೈಸುವಳೊ 2ಪಾಲುಗಡಲು ಮನೆಯಾಗಿ ಮೂಲೋಕವ |ಪಾಲಿಸುತಿಪ್ಪ ನಾರಾಯಣನ ||ಕಾಲಮೇಲೆ ಮಲಗಿಸಿ ಬಟ್ಟಲ ತುಂಬ |ಹಾಲು ಕುಡಿಸಿ ಸಂತೈಸುವಳೊ 3ಹರಿನಿತ್ಯತೃಪ್ತನೆಂದರಿಯದೆ ಹೊನ್ನಿನ |ಹರಿವಾಣದೊಳಗೆ ಮೃಷ್ಟಾನ್ನವನು ||ನೊರೆಹಾಲು ಘೃತ-ಸಕ್ಕರೆ ಕೂಡಿಸಿ ಕರೆ-|ಕರೆದು ಉಣಿಸಿ ತೃಪ್ತಿ ಬಡಿಸುವಳೊ 4ಅಂಗಜಪಿತನಿಗೆ ಮೋಹದಿಂದ ಹೊಸ |ಅಂಗಿಯ ತೊಡಿಸಿ ಟೊಪ್ಪಿಗೆ ಇರಿಸಿ ||ಬಂಗಾರದರಳೆಲೆ ಬಿಂದುಲಿಗಳನಿಟ್ಟು |ಸಿಂಗರವನು ಮಾಡಿ ನೋಡುವಳೊ 5
--------------
ಪುರಂದರದಾಸರು
ದಾಸನ ಮಾಡಿಕೊ ಎನ್ನ - ದಿವ್ಯಸಾಸಿರ ನಾಮದ ವೆಂಕಟಭೂಪರನ್ನ ಪಭವಭಯ ದುಃಖವ ಬಿಡಿಸೋ- ನಿನ್ನಕರುಣವಿದ್ಯೆಯನೆನ್ನ ಅಂಗಕ್ಕೆ ತೊಡಿಸೋ ||ಆವಾಗಲೂ ನಿನ ನಾಮ ನುಡಿಸೋ - ನಿನ್ನಚರಣಕಮಲದಲ್ಲಿ ಆರಡಿಯೆನಿಸೊ1ಗಂಗೆಯ ಪಡೆದಂಥಪಾದವರಶೃಂಗಾರ ಲಕ್ಷ್ಮಿ ಸ್ಮರಿಸುವಂಥಪಾದ||ಬಂಗಾರ ರಂಜಿತಪಾದ-ಹರಿಮಂಗಳ ಸದ್ಗತಿಗೆ ಚಂದಿರನಾದ 2ಸೆರಗೊಡ್ಡಿ ನಾ ಬೇಡಿಕೊಂಬೆ - ನಿನ್ನಹರವಾಣದೆಂಜಲ ನಾನು ಉಂಡೇನೆಂದೆ ||ಬಿರುದು ನಿನ್ನದುಹುಸಿಮಾಡದೆ - ನಮ್ಮಪುರಂದರವಿಠಲ ದಯಮಾಡೊ ತಂದೆ3
--------------
ಪುರಂದರದಾಸರು
ದಾಸನ ಮಾಡಿಕೋ ಎನ್ನ - ಇಷ್ಟುಗಾಸಿಮಾಡುವುದೇಕೆ ದಯದಿ ಸಂಪನ್ನಪದುರುಳಬುದ್ದಿಗಳೆಲ್ಲ ಬಿಡಿಸೋ - ನಿನ್ನಕರಣ ಕವಚವೆನ್ನ ಹರಣಕ್ಕೆ ತೊಡಿಸೋ ||ಚರಣದ ಸೇವೆಯ ಕೊಡಿಸೋ - ಅಭಯ-ಕರಮೇಲಿನಕುಸುಮಶಿರದ ಮೇಲಿರಿಸೋ1ದೃಢಭಕ್ತಿಯಿಂದ ನಾ ಬೇಡಿ - ನಿನ್ನಅಡಿಯೊಳೆರಗುವೆನಯ್ಯಅನುದಿನಪಾಡಿ ||ಕಡೆಗಣ್ಣೊಳೇಕೆನ್ನ ನೋಡಿ ಬಿಡುವೆಕೊಡು ನಿನ್ನಪರಭಕ್ತಿಮನ ಮಡಿ ಮಾಡಿ2ಮೊರೆಹೊಕ್ಕವರಕಾವಬಿರುದು ನೀನುಕರುಣದಿ ರಕ್ಷಣೆ ಮಾಡೆನ್ನ ಪೊರೆದು ||ದುರಿತರಾಶಿಗಳೆಲ್ಲ ತರೆದು ಒಡೆಯಪುರಂದರವಿಠಲನೆ ಹರುಷದಿ ಕರೆದು 3
--------------
ಪುರಂದರದಾಸರು
ನಾರದ ಕೊರವಂಜಿ1ಜಯ ಜಯ ಜಯ ಜಯ ಜಯ ಜಯ ಪ.ಶ್ರೀ ರಮಾರಮಣ ಜಯ ಶ್ರೀಕರ ಗುಣಾಬ್ಧಿ ಜಯಶ್ರೀ ರುಕ್ಮಿಣೀಶ ಜಯ ಶ್ರೀ ಶ್ರೀನಿವಾಸ ಜಯನೀರಚರಕಮಠಕಿಟಿನೃಹರಿವಟುಭೃಗುಜ ರಘುವೀರ ಯದುಪತೆಬುದ್ಧಕಲ್ಕಿ ಸ್ವರೂಪಾ ಜಯ ಜಯ1ಶ್ರೀ ಮತ್ಕಪಿಲ ಋಷಭ ಯಜÕದತ್ತ ಕಂಸ್ತುಘ್ನ ?ಕೌಮಾರ ವ್ಯಾಸ ಹಯಗ್ರೀವ ಶ್ರೀಮದ್ದಜಿತ ಜಯಸ್ವಾಮಿ ಮಹಿದಾಸ ತಾಪಸ ಉರುಕ್ರಮಶೂಲಿವ್ಯಾಮೋಹ ಧನ್ವಂತರೆ ಹಂಸ ಶುಕ್ಲಾ ಜಯ ಜಯ 2ಆನಂದ ಜ್ಞಾನ ಬಲಮಯ ಚಿತ್‍ಸ್ವರೂಪ ಜಯಅನಂತ ಮಹಿಮ ವೈರಾಜ ಪುರುಷೋತ್ತಮ ಜಯಅನಂತ ಬ್ರಹ್ಮ ರುದ್ರೇಂದ್ರಾದಿಸೇವ್ಯಜಯಅನಂತ ಜೀವಗ ಪ್ರಸನ್ವೆಂಕಟ ಕೃಷ್ಣಾ ಜಯ ಜಯ 32ಶರಣು ಮಂಗಳ ದೇವತೇವರಶರಣುಚಿತ್ಸುಖಸಾಗರಶರಣುಅಗಣಿತಗುಣಶುಭಾಕರಶÀರಣು ವೆಂಕಟ ಮಂದಿರ 4ದುರುಳದೈತ್ಯರು ಸೊಕ್ಕಿ ವರದಲಿಧರೆಗೆ ಕಂಬನಿ ತರಿಸಲುತ್ವರದಿ ಸುರರಿಗೆ ಮೊರೆಯನಿಟ್ಟಳುಧರಿಸಲಾರೆನು ಎನುತಲಿ 5ಸರಸಿಜೋದ್ಭವಭವಪುರುಹೂತರರಿದು ಚಿಂತಿಸಿ ಮನದಲಿವರಪಯೋನಿಧಿಗೈದಿ ಸ್ತುತಿಸಲುಕರುಣದಲಿ ಅವತರಿಸಿದೆ 6ಬಂದು ಧರ್ಮದ ವೃಂದ ರಕ್ಷಿಪೆನೆಂದು ದೀಕ್ಷೆಯವಿಡಿದು ನೀಅಂದಗೆಡಿಸುತ ದನುಜನಿಕರವಹೊಂದಿ ದ್ವಾರಕ ನಗರವ 7ಇಂದಿರೆಯು ನಿನ್ನಿಚ್ಛೆಯನುಸರದಿಂದ ಕ್ರೀಡಿಪಳನುದಿನÀಮಂದಜನರಿಗೆ ಮೋಹಿಸುತನರರಂದದಲಿ ತೋರಿದೆ ಹರೆ 8ದೇವಋಷಿ ನಾರದನು ಶ್ರೀಪದಸೇವೆಗÉೂೀಸುಗ ಕೊರವಿಯಭಾವದಲಿ ಜಗದಂಬೆ ರುಕ್ಮಿಣಿದೇವಿಯಳ ಬಳಿಗೈದು ತಾ 9ದೇವ ನಿನ್ನಯ ಬರವ ಬೆಸಸಿದಕೋವಿದತೆಯನು ಪೇಳುವೆಶ್ರೀವರ ಪ್ರಸನ್ವೆಂಕಟ ಕೃಷ್ಣಪಾವನ ಮತಿಯ ಕರುಣಿಸೊ 103ಶ್ರೀ ರಂಭೆ ಭೀಷ್ಮಕನಭೂರಿಪುಣ್ಯದ ಗರ್ಭವಾರಿಧಿಯಲ್ಲಿ ಜನಿಸಿನಾರಿ ರುಕ್ಮಿಣಿಯೆಂಬ ಚಾರುನಾಮದಿಕಳೆಯೇರಿ ಬೆಳೆದಳಂದವ್ವೆ 11ಜನನಿಜನಕರೆಲ್ಲ ತನುಜೆಯ ಹರಿಯಂಘ್ರಿವನಜಕೆ ಕೊಡಬೇಕೆನ್ನೆನೆನೆದು ತಾನೊಂದು ರುಕ್ಮನು ದಮಘೋಷನತನುಜಗೆ ತಂಗಿಯನು 12ಕೈಗೂಡಿಸುವೆನೆಂಬ ವೈಭವದಲ್ಲಿರೆವೈಮನಸದೊಳು ಕನ್ಯೆಯುಸುಯ್ಗರಿಯುತ ಮುರವೈರಿ ಪ್ರಸನ್ವೆಂಕಟಕೃಷ್ಣಯ್ಯನೊಳ್ ಮನವಿಟ್ಟಿರೆ 134ದನುಜಮಥನÀ ಹರಿಸೇವೆ ಇದೆಂದುಅನಿಮಿಷಮುನಿ ಧರೆಗಿಳಿದು ತಾ ಬಂದುವನಿತೆ ಕೊರವಂಜಿಯ ವೇಷವÀ ಧರಿಸಿಜನಪ ಭೀಷ್ಮಕನೋಪವನದಲ್ಲಿ ನೆಲಸಿ 14ಹಲವು ಕೊರವಿಯರ ಕೂಡಿ ಸಿಂಗರದಿಬೆಲೆ ಇಲ್ಲದುಡಿಗೆ ತೊಡಿಗೆ ಇಟ್ಟು ಮುದದಿಇಳೆಯ ಜನರು ಮೋಹಿಸುವಪರಿಇಹಳುಕೆಳದೇರ ಗಡಣದಲಿ ಚೆಲುವೆ ಒಪ್ಪಿದಳು 15ಮಂಜುಗಾವಿಯ ಸೀರೆ ನಿರಿತೆಗೆದುಟ್ಟುಕೆಂಜೆಡೆ ಬಿಟ್ಟೋರೆದುರುಬಿನ ಕಟ್ಟುಪಂಜಿನೋಲೆಯ ಮೂಗುತಿಯ ಬಲಿದಿಟ್ಟು ಗುಲಗಂಜಿ ಹೊಂದಾಳೆ ಸರಗಳಳವಟ್ಟು 16ಕಂಚುಕಪುಟ ಬಿಗುಪೇರಿದ ಕಟ್ಟುಚಂಚಲನೇತ್ರಕಂಜನ ಕಾವಲಿಟ್ಟುಮಿಂಚುವಾಭರಣಿಟ್ಟು ಪ್ರಸನ್ವೆಂಕಟ ಕೃಷ್ಣನಂ ಚಿಂತಿಸಿ ಜಯ ಜಯಯೆಂದಳುಕೊರವಿ175ಅಡಿಗಡಿಗೆ ಝಣ ಝಣರೆಂದು ನಡೆತಂದು ನಡೆತಂದುಮಡದಿ ರಾಜಬೀದಿಯಲಿನಿಂದು18ಮೃಡಗಹಿತನ ಪಟ್ಟದಾನೆ ಮಂದಗಮನೆ ಮಂದಗಮನೆಕಡುಮೌನಿ ಜನರ ಮೋಹಿನೆ 19ಚಪಲ ನೋಟಕೆ ನಾಗರಿಕರು ನೋಟಕರು ನೋಟಕರುಲಿಪಿಯ ಚಿತ್ರದೊಲು ನಿಂತಿಹರು 20ನಿಪುಣೆಕೊರವಿಶ್ರೀಪ್ರಸನ್ವೆಂಕಟ ಕೃಷ್ಣನ್ನ ಕೃಷ್ಣನ್ನಶ್ರೀಪ್ರÀ್ರಸಾದವ ಬೇಡುತಿದ್ದಳಣ್ಣ 216ಬೆಡಗಿನ ಗಮನದಿ ಎಡಬಲಕೊಲಿದುಕಡಗ ಶಂಖದ ಬಳೆ ನುಡಿಸುತ ನಡೆದುಅಡಿಗೊಮ್ಮೆ ತಿರುಮಲ ಒಡೆಯನ ನೆನೆದು ತಕ್ಕಡ ಧಿಗಿಧಿಮಿಕೆಂದುಜಡಿದುತಾಳ್ವಿಡಿದು22ತಿಗುರಿದ ಗಂಧ ಸೆಳ್ಳುಗುರಿನ ನಾಮಮೃಗಮದದ ಬೊಟ್ಟಿನ ನಗೆಮೊಗದ ಪ್ರೇಮಮಗುವನುಡಿಯಲೆತ್ತಿ ಜಗಚ್ಚರಿಯಮ್ಮಹೆಗಲ ರನ್ನದ ಬುಟ್ಟಿ ಮುಳ್ಳುವಿಡಿದಮ್ಮ 23ನಗರದ ಜನದ ಕಣ್ಣಿಗೆ ಕೌತುಕೆನಿಸಿಬಗೆ ಬಗೆ ಒಗಟು ಮಾತುಗಳನುಚ್ಚರಿಸಿನಗರಾಧಿಪತಿಯ ಮನೆಯಕೇಳಿನಡೆದುಮಿಗೆ ಪ್ರಸನ್ವೆಂಕಟ ಕೃಷ್ಣಗೆ ಕೈಮುಗಿದು 247ಬ್ರಾಹ್ಮರ ಕೇರಿಗೆ ಬಂದಳಾಕೊರವಿಪರಬ್ರಹ್ಮನ ಗುರುತ ಕೇಳುತ್ತನಮ್ಮಮ್ಮ ನಮ್ಮವ್ವೆ ನಮ್ಮಜ್ಜಿ ನೀಡೆಂದುಸನ್ಮಾನದಾಲಯವ ಪೊಗುತಾ 25ಇಂತಪ್ಪ ಸೊಬಗುಳ್ಳ ಕೊರವಿಯನು ಕಂಡುನೃಪನಂತಃಪುರದ ಸತಿಯರೈದಿಕಂತುವಿನ ಜನನಿಗೆ ಕರವೆರಡು ಮುಗಿದು ಏಕಾಂತ ಪೇಳಿದರು ಚೆನ್ನಾಗಿ 26ಓರ್ವ ಕಾಲಜ್ಞಾನ ಪೇಳ್ವ ಕೊರವಮ್ಮ ನಮ್ಮೂರ್ವಳಗೆ ತಿರುಗುತಿಹಳಮ್ಮಸರ್ವೇಶ ಪ್ರಸನ್ವೆಂಕಟ ಕೃಷ್ಣನಾಗಮದನಿರ್ವಚನ ಕರೆಸಿ ಕೇಳಮ್ಮ 278ಬಂದಳು ನೃಪನರಮನೆಗೆ ತಾನಿಂದಲ್ಲಿ ನಿಲ್ಲದೆ ಕಿಲಿಕಿಲಿ ನಗುತಾ ಕುಲು ಕುಲು ನಗುತಾ ಪ.ಬಂದ್ಹೇಳಿದ ನುಡಿಗೇಳ್ದು ಪೂರ್ಣೇಂದುವದನೆ ಮುದತಾಳ್ದುಮಂದಿರಕೆ ಕರೆಸಿದಳು ನಲವಿಂದಲಿ ಬಲು ಬೆಡಗಿನ ಕೊರವಂಜಿ 28ತಳಪಿನ ಮುತ್ತಿನ ಕಟ್ಟುಶುಭತಿಲಕದ ಹಚ್ಚೆಯ ಬಟ್ಟುಅಲುಗುವ ಮೂಗುತಿಯಬಲೆ ಸಲೆಬಳುಕುತ ಬಡನಡುವಿನ ಚಪಲೆ 29ಬಟುಗಲ್ಲದ ಮಕರಿಕಾಪತ್ರ ಪವಳದುಟಿ ದಾಡಿಮರದಗೋತ್ರವಿಟಮೃಗಸ್ಮರಶರ ನೇತ್ರ ಕೊರಳ್ದಟಿಸುವಮಣಿಮುತ್ತಿನ್ಹಾರಗಳೊಲಪಲಿ30ಇಟ್ಟೆಡೆ ಮೊಲೆಯ ಪಟ್ಟಿಕೆಯು ಶ್ರೋಣಿಮುಟ್ಟುವ ಮುಡಿಯ ಮಾಲಿಕೆಯುಬಿಟ್ಟ ಮುಂಜೆರಗಮಲಿಕೆಯು ಕಣ್ಣಿಟ್ಟ ಮೃಗಕೆ ಭ್ರೂಸ್ಮರಕಾರ್ಮುಕೆಯು 31ತೆಳ್ವೋದರದ ತ್ರಿವಳಿಯ ಜಗುಳಿಬೀಳ್ವ ಮಣಿಮುಕ್ತಾವಳಿಯಸಲ್ಲಲಿತ ಸಂಪಿಗೆ ಕಳೆಯ ಗೆಲ್ವಚೆಲ್ವೆಕೊರವಿಪುರವೀಥಿಯ ಬಳಿಯ32ಕಿಣಿ ಕಿಣಿ ರವದ ಕಿಂಕಿಣಿಯುಝಣ ಝಣತ್ಕಾರಿಪಂದುಗೆ ಮಣಿಯುಕಣಿ ಕಣಿ ಒಯ್ಯೆಂಬೊಕ್ಕಣಿಯು ಕುಚಕುಣಿ ಕುಣಿಸಿ ನಟಿಪ ನಡೆವಾಂಗನೆಯು 33ಸಿಂಗನ ಉಡಿಯಲ್ಲಿಕಟ್ಟಿಉತ್ಸಂಗದೊಳೊಲಪಿನ ದಿಟ್ಟಿರಂಗ ಶ್ರೀ ಪ್ರಸನ್ವೆಂಕಟ ಕೃಷ್ಣಾಂಗನೆಯನು ಕಾಂಬುವೆನೆಂಬ ತವಕದಿ 349ವಚನಪದುಮನಾಭನ ರಾಣಿ ರಾಣಿವಾಸದಲಿಯದುಕುಲೇಂದ್ರನ ಚರಣೋಚ್ಚಾರಣೆಯಲ್ಲಿರಲುಒದಗಿ ಬಂದಳುಕೊರವಿಕರೆಯುತ್ತ ತಾನುಚದುರ ಪ್ರಸನ್ವೆಂಕಟ ಕೃಷ್ಣನರಸಿಯನು 3510ಎಲ್ಲಿಹಳೆಲ್ಲ್ಲಿಹಳಾ ರಾಯನ ಮಗಳೆಲ್ಲಿಹಳೆ ನೀಡೆಯವ್ವನಲ್ಲೆ ಬಾ ನಲ್ಲೆ ಬಾ ನಲ್ಲೆ ಬಾ ರುಕ್ಮಿಣಿನಲ್ಲೆ ಬಾರೆ ಮುಂದಕವ್ವ 36ಬಲ್ಲೆ ನಾ ಬಲ್ಲೆ ನಿನ್ನಯ ಮನದೆಣಿಕೆಯಸೊಲ್ಲುವೆನೆ ನೀಡೆಯವ್ವನಿಲ್ಲದು ನಿಲ್ಲದಕ್ಕಿಯು ನಿನ್ನದ್ಹಸಿತ ಕೈಒಳ್ಳೆ ಕಜ್ಜಾಯ ನೀಡೆಯವ್ವ 37ಕೆಟ್ಟೋಗರಕೆ ಚಿತ್ತವಿಟ್ಟ ಕೊರವಿಯಲ್ಲಮೃಷ್ಟಾನ್ನವ ನೀಡೆಯವ್ವಶ್ರೇಷ್ಠಾದ ಶಾವಿಗೆ ಬಟ್ಟುವಿ ಪಾಯಸಹೊಟ್ಟೆ ತುಂಬ ನೀಡೆಯವ್ವ 38ಅಟ್ಟಿಟ್ಟ ಪಂಚವಿಧ ಭಕ್ಷ್ಯ ಎನಗಿಂದುಇಷ್ಟ ಕಾಣೆ ನೀಡೆಯವ್ವಇಷ್ಟುಣಲಿಕ್ಕೆನ್ನತುಷ್ಟಿಬಡಿಸಿ ಸತ್ಯಗೋಷ್ಠಿಕೇಳೆ ನೀಡೆಯವ್ವ39ಮನ್ನಣೆ ಇಲ್ಲದ ಮನೆಯ ಹೊಗುವಳಲ್ಲಕನ್ನೆ ಬಾರೆ ಮುಂದಕವ್ವಮುನ್ನ ರಕ್ಕಸನೊಯ್ದ ಮಡದಿಗೆ ಒಳಿತವನೆಲ್ಲ ಹೇಳಿದ್ದೆನವ್ವ 40ನಿನ್ನ ಪ್ರಾಣದ ಪ್ರಿಯನೊಬ್ಬನೆ ಪರದೈವಕನ್ನೆ ಕೇಳಜಕಾಮರವ್ವಕಣ್ಣಾರ ಕಾಂಬೆ ನಿನ್ನಣ್ಣನಪಾಟುಪ್ರಸನ್ನವೆಂಕಟ ಕೃಷ್ಣನಿಂದವ್ವ 4111ಚೂರ್ಣಿಕೆಈ ವಾಕ್ಯವಂಕೇಳಿತೀವಿ ತೋಷವ ತಾಳಿದೇವಿ ರುಕ್ಮಿಣಿಯಕ್ಕ ಪಾವನ ಹಾಸಂಗಿಯಿಕ್ಕಿಆವಲ್ಲಿಂ ಬಂದ್ಯವ್ವ ದೇವಲೋಕದ ಕೊರವೆಈ ಒಳ್ಳೆ ಮೆಚ್ಚು ಮಾತು ಆವಾಗನುಭವೆಂ ಮಾತೆಹೀಗೆಂದಾಸನ ಕೊಟ್ಟು ಬಾಗಿಲೊಳು ಕಾವಲಿಟ್ಟುಬೇಗ ಪ್ರಸನ್ವೆಂಕಟ ಕೃಷ್ಣನಾಗಮವ ಮನದಿ ಕೇಳ್ದಳವ್ವೆ 4212ಕುಳ್ಳಿರೆ ಕುಳ್ಳಿರೆ ಕುಳ್ಳಿರೆ ಕೊರವಂಜಿಫುಲ್ಲಬಾಣನಾನೆ ಕುಳ್ಳಿರೆಸೊಲ್ಲಮ್ಮ ಸೊಲ್ಲಮ್ಮ ಹಲವು ಮಾತಿನ ಜಾಣೆಎಲ್ಲ ಬಯಕೆಯನೆಲ್ಲ ಸೊಲ್ಲಮ್ಮ ಕೊರವಂಜಿ 43ಆದರದಾ ಮಾತ ಕೇಳುತ ಕುಳಿತಳುಯಾದವರರಸ ಮುಕುಂದನಕೋದಂಡಪಾಣಿ ತಿರುವೆಂಗಳ ಮೂರ್ತಿಯಪಾದಕೆ ಮಾಡಿದಳೊಂದನೆ ಕೊರವಂಜಿ 44ಮಣಿಮಯ ಬುಟ್ಟಿಯ ಎಡದಲಿಟ್ಟುಕೊಂಡುವನಿತೆ ಪದ್ಮಾಸನವಿಟ್ಟಳುಮಿನುಗುವ ಎಳೆನಗೆಯಣುಗನ್ನ ಮಲಗಿಸಿವನಿತೆ ರುಕ್ಮಿಣಿಯನ್ನು ಕರೆದಳು ಕೊರವಂಜಿ 45ಜಾಣೆ ಬಾರೆ ಸುಗುಜಾಣೆ ಬಾರೆ ನಾರಿಮಾಣಿಕಳೆಕಟ್ಟಾಣಿಬಾರೆವಾಣಿಪತಿಪಿತ ಪ್ರಸನ್ವೆಂಕಟ ಕೃಷ್ಣನರಾಣಿ ಬಾರೆಸುಪ್ಪಾಣಿಬಾರೆ ಕಲ್ಯಾಣಿ ಬಾರೆ ಫಣಿವೇಣಿ ಬಾರೆಶುಭಶ್ರೋಣಿ ಬಾರೆ ಎಂದು ಕರೆದಳು ಕೊರವಂಜಿ 4613ವಚನಅಮ್ಮ ರುಕ್ಮಿಣಿಯಮ್ಮ ಉಮ್ಮ್ಮಯವಟ್ಟುಮುಮ್ಮೊರದ ರತುನ ಮುತ್ತಿನ ಕಾಣಿಕಿಟ್ಟುಪರಬೊಮ್ಮಪ್ರಸನ್ವೆಂಕಟಕೃಷ್ಣನ ಅಡಿಗಳನಮ್ಮಿಸುತ ಮನೋರಥವÀ ಮನದಿ ಬೆಸಗೊಳ್ಳಲು 47ಉಂಡ ಊಟ ಕಂಡ ಕನಸು ಪುಂಡರೀಕಾಂಬಕಿಯೆತಂಡ ತಂಡದ ವಾರುತೆಗಳ ಪೇಳುವೆನು ಸಖಿಯೆಹಿಂಡುದೈವದಗಂಡಪ್ರಸನ್ವೆಂಕಟ ಕೃಷ್ಣನ ಕಣ್ಣಾರಕಂಡು ಸಾರುವಕೊರವಿಎಳ್ಳನಿತು ಸಟೆಯರಿಯೆ4815ಚೂರ್ಣಿಕೆಕಾಸಿನಾಸೆಯವಳು ನಾನಲ್ಲಭಾಷೆ ಹುಸಿದರೆ ಬಿರುದು ಬಿಸುಡುವೆನೆಲ್ಲಭಾಷೆ ಪಾಲಕರು ನಮ್ಮ ಸಿದ್ಧರೆಲ್ಲ ಲೇಸುಲೇಸೆಂದುಕೇಸಕ್ಕಿತಿಮ್ಮಯ್ಯನ ಬೆತ್ತವ ಮುಟ್ಟೆಲೆ ದುಂಡೆಎನ್ನ ಮನದ ದೈವ ಎನ್ನಕ್ಕ ಕೇಳೆಯವ್ವತಿರುಮಲೆ ತಿರುವೆಂಗಳಯ್ಯವರಅಹೋಬಲ ನರಸಿಂಗಯ್ಯಹರಿಕಂಚಿ ವರದರಾಜಯ್ಯಶಿರಿ ರಂಗದ ರಂಗರಾಯಯ್ಯಬದರಿಯ ನರನಾರಾಯಣಯ್ಯಪುಂಡರೀಕವರದ ಪಂಢರಿರಾಯ ಎಮ್ಮಉಡುಪ ಕುಲಜ ಮನ್ನಾರು ಕೃಷ್ಣಮ್ಮಒಡ್ಡಿಜಗನ್ನಾಥ ಅಲ್ಲಾಳನಾಥಯದುಗಿರಿನಾಥ ಶಿರಿಮುಷ್ಣನಾಥಕೃತಪುರದ ವೀರ ನಾರಾಯಣಕೊಲ್ಲಾಪುರದ ಕನ್ನೆ ವೇಲಾಪುರದ ಚೆನ್ನಅನಂತಶಯನ ಜನಾರ್ದನ್ನಅನವರತಪರಸನ್ನ ವೆಂಕಟ ಕೃಷ್ಣನ ಕನ್ನೆಇಂತಪ್ಪಾನೇಕ ದೈವ ಏಕವೆಂದು ಏಕಾನೇಕವೆಂದುನಂಬಿಪ್ಪೆನೆ ಕೇಳೆಯವ್ವ 4916ಇಂತಿಪ್ಪ ಎನ್ನ ಮನೆಯ ದೈವ ಅವರಂತವ ಬೊಮ್ಮರರಿಯರವ್ವ ವಿಶ್ರಾಂತಿಲಿ ಕೊಂಡಾಡುವೆನವ್ವ ನಾನುಕಂತುವಿನಣ್ಣನ ಮಗಳವ್ವ 50ಇಪ್ಪಲ್ಲಿಪ್ಪಕೊರವಿನಾನಲ್ಲ ಹೋಗಿಬಪ್ಪೆ ಹದಿನಾಲ್ಕು ಲೋಕಕೆಲ್ಲಛಪ್ಪನ್ನದೇಶಗಳ ಸುದ್ದೀನೆಲ್ಲಕೇಳಿಬಪ್ಪುವ ಕಜ್ಜವ ಕೃಷ್ಣ ಬಲ್ಲ 51ಆವಾವ ದೇಶದ ಸುದ್ದಿ ಕೇಳವ್ವ ನಿನ್ನಭಾವದ ಬಯಕೆಯನೆಲ್ಲ ಕೇಳವ್ವಶ್ರೀವರ ಪ್ರಸನ್ನವೆಂಕಟಾದ್ರಿ ಕೃಷ್ಣ ದ್ವಾರಕಿಂದಾವಾಗ ಬಪ್ಪನೆಂದು ಕೇಳವ್ವ 5217ಚೂರ್ಣಿಕೆಓಯಮ್ಮ ನಿನ್ನವರುಗಳು ಆ ಬಲಮಗು ಮದನಕಾಮಬುಡುಕ್ಕಾನೆ ಪರತಾನು ಚಿಂತಿಶೆ ಮಾಣಮ್ಮನಾ ತಿರುಕ್ಕಿ ವಂದ ದೇಶ ಐವತ್ತಾರು ಶೊಲ್ಲರೆಅಂಗ ವಂಗ ಕಳಿಂಗ ಕಾಂಬೋಜ ಭೋಟಕರ್ನಾಟಕ ಘೋಟ ಮಹಾಘೋಟಜಿನ್ನ ಮಹಾಜಿನ್ನ ಜೊನ್ನಗಕಾಶ್ಮೀರ ತುರುಷ್ಕಮಾಗಧಬಂಗಾಳ ಗೌಳ ಮಾಳವ ಮಲೆಯಾಳನೇಪಾಳ ಗೌಡ ಗುರ್ಜರ ಕೊಂಕಣದರ್ದುರಬರ್ಬರ ಸೌರಾಷ್ಟ್ರ ಮಹಾರಾಷ್ಟ್ರಸಂಬರ ಮುಂಗಿಳ ಘೋಟ ಮುಖಏಕಪಾದ ಸೌಳ ಸಂಸಾಳಕಆನರ್ತ ಹಮ್ಮೀರ ಕೊಮ್ಮೀರಮತ್ಸ್ಯಪಾಂಚಾಲರಾಜಶೇಖರ ವರಶೇಖರ ಯುಗಂಧರ ಮಧ್ಯದೇಶಲಂಬಕರ್ಣ ಸ್ತ್ರೀರಾಜ್ಯ ಆಂಧ್ರ ದ್ರವಿಡಅರವ ಕನ್ನಡ ತುಳುವ ತುಳಾಂಡಜಾಳೇಂದ್ರ ಕೈಕೇಯ ಕೌಸಲ ಕಂಚಿಕನೋಜ ಸವ್ವೀರಸಿಂಧುಕೇರಳವೈದರ್ಭ ದೇಶದೊಳ್ಕುಂಡಿನಾಪುರದೊಳ್ ನಿನ್ನಂ ಕಂಡುಮನದಂಡಲಿಕೆಗೆ ಸಾಗಿತ್ತೆನೆಲೆ ದುಂಡೆ 5318ಈ ನಾಡ ಚರಿಸಿ ನಿನ್ನರಸುತ ಬಂದೆನೆಜಾಣೆ ಬಂಗಾರವ್ವ ಕೈ ತೋರೆ 54ನಿನ್ನ ಕಾಣುತ ಹಸಿವೆ ನೀರಡಿಕೆಲ್ಲ ಹೋಯಿತುಜಾಣೆ ಬಂಗಾರವ್ವ ಕೈ ತೋರೆ 55ಸಂಧಾನಕ್ಹಾರುವನಟ್ಟಿದ್ದೆ ಮೊದಲಹುದೇನೆ ಮಂಗಳದೇವಿ ಕೈ ತೋರೆ 56ನೀ ಬರೆದೊಕ್ಕಣೆ ಯದುರಾಯನರಿತಾನುಸೌಭಾಗ್ಯವಂತೆ ಕೈ ತೋರೆ 57ರಥವನೇರಿಕೊಂಡು ಬರಹ ನೋಡಿಕೊಳ್ವಜಾಣೆ ಬಂಗಾರವ್ವ ಕೈ ತೋರೆ 58ಧ್ಯಾನದ ಕಳವಳ ಮುಸುಡುಗಂಟಿನ ಚಿಂತೆಮಾಣು ಮಂಗಳದೇವಿ ಕೈತೋರೆ 59ತ್ರಿಭುವನೇಶ ಪ್ರಸನ್ನವೆಂಕಟ ಕೃಷ್ಣತಾ ಬಹನೆಲೆ ದುಂಡಿ ಕೈ ತೋರೆ 6019ಚೂರ್ಣಿಕೆಎಲೆಲೆ ಎಳೆವೆಂಗಳೆ ಎಲೆ ಹುಲ್ಲೆಗಂಗಳೆಮಹಾಭೂಷಣದ ಮಾರುವೇಣಿ ಮಡದಿಯರಸುಪ್ಪಾಣಿಕೀರವಾಣಿ ಕಿಸಲಯಪಾಣಿಕಂಧಿಜ ಬಿಂಬವದನೆ ಕುಲಿಶಮಣಿರದನೆಮದನಕಾರ್ಮುಕೋಪಮ ಭ್ರೂಲತೆಯಳೆ ಮಹಾಲಕುಮಿಯಳೆಅರುಣವಿಧ್ರುಮಾಧರೆ ಅಬ್ಜಜಾ ಕಂಧರೆಅರ್ಧಚಂದ್ರನ ಪೋಲ್ವಡಿ ಪಣೆಯಳೆ ಅನಘ್ರ್ಯ ಚೂಡಾಮಣಿಯಳೆಸಿಂಧೂರಸೀಮಂತಿನಿಯೆಸಿರಿತಿಲಕದ ಶೋಭಿನಿಯೆನುಣ್ಗದಪುನಾಸಿಕಮಣಿಯಳೆ ನೂತನೊಜ್ರದೋಲೆಯಳೆನಿಷ್ಕ ಕಂಠಾಭರಣೆಯಳೆ ನಿತ್ಯಮಂಗಳ ಸೂತ್ರಿಯಳೆನಿಡುಜಾಲಕ ಮಾಲೆಯಳೆಬುಗುಡಿ ಚಳತುಂಬು ಕೊಪ್ಪಿನ ಕಿವಿಯಳೆಬಾವಲಿ ನಾಗೋತ್ರ ಪೊಂಬರಳೆಲೆ ಲಲಿತ ಬಾಹುಲತೆಯಳೆಲಸತ್ವನಜಕೋರಕ ಸ್ತನಿಯಳೆಕಡು ತೆಳ್ವೋದರಿ ನಿಮ್ನ ನಾಭಿಯಳೆಕಂಠೀರವಕಟಿಯಳೆ ಕರಭೋರು ಯುಗಳೆಯಳೆಅಪರಂಜಿಕಂಚುಕಾಂಬರ ಉತ್ತರೀಯಳೆಅಮೂಲ್ಯ ಕಾಂಚಿದಾಮಾಂಕಿತಳೆಬಟುಗನ್ನಡಿ ಜಾನುದ್ವಯಳೆ ಬ್ಞಣ ಪಂಚಕನ ಬತ್ತಳಿಕೆ ಜಂಘೆಯಳೆಕೋಮಲತರಾಂಘ್ರಿ ಸರಸಿಜಯುಗಳೆನೀಲಪಚ್ಚ ಪದ್ಮರಾಗ ಹೀರ ಮುತ್ತಿನ ಪೆಂಡೆಯಳೆಕಾಲಂದಿಗೆ ಮೆಂಟಿಕೆ ವೀರಮುದ್ರೆ ಕಿರಿ ಪಿಲ್ಲಿಯಳೆಮಣಿಮಯಾಂಗುಲ್ಯದ ವಲಯಾಭರಣೆ ಮದಗಜಗಮನೆಪ್ರತಿಯಿಲ್ಲದ ರನ್ನದ ಬೊಂಬೆ ಪರಬೊಮ್ಮನ ಪಟ್ಟದ ರಂಭೆಬಾಬಾ ತಾತಾ ಎಂದು ವಾಮಕರವಬೇಡಲಿತ್ತಳಾ ರುಕ್ಮಿಣಿ ತಾಯಿ 6120ಜಗದ ನಾರಿಯರ ಕೈಗಳ ಕಂಡೆನವ್ವಮೃಗಮದಗಂಧಿ ನಿನ್ಹೋಲ್ವರಿಲ್ಲವ್ವ 62ಯುಗಯುಗಾಂತರ ದೇಶ ದೇಶದಲ್ಲವ್ವಅಗಲ್ಯಾಟವಿಲ್ಲ ನಿನ್ನರಸ ನಿನಗವ್ವ 63ಸವತೇರು ಬಹಳುಂಟು ನೆಂಟರ ಜಾಣೆ ಎಲೆ ಬೀಗರ ಸುಗುಣೆಯುವತಿ ಪ್ರಸನ್ವೆಂಕಟ ಕೃಷ್ಣ ನಿನ್ನ ಪ್ರಾಣ 6421ಕಣಿ ಕೇಳೆ ಕಣಿ ಕೇಳೆ ಕಣಿ ಕೇಳೆ ಚೆಲ್ವೆಕಣಿ ಕೇಳೆ ನಿನ್ನ ಮನದಾ ಮಾತ್ಹೇಳ್ವೆಎಣಿಕೆಗೊಳ್ಳದಿರಮ್ಮಇಂದುನಾಳೆಂದುಗುಣನಿಧಿ ಗೋಪಾಲ ಬಹ ದಯಾಸಿಂಧು 65ತ್ರುಟಿಯುಗವಾಗಿದೆ ನಿನಗೀಗ ಮುಗ್ಧೆಕುಟಿಲಮಾಗಧಸಾಲ್ವ ನೆನೆವ ದುರ್ಬುದ್ಧೆಘಟಿಸದೆಂದಿಗೆ ಖಳರ ಮನೋರಥ ಸಿದ್ಧೆದಿಟವೆನ್ನವಾಕುಸುರಲೋಕ ಪ್ರಸಿದ್ಧೆ66ಹಿಂದೊಮ್ಮೆ ಖಳರು ಗೋವಿಂದ ಬಂದಾಗಮಂದಮತಿಯಲಿ ಮನ್ನಿಸದಿರಲಾಗಇಂದ್ರ ಸಿಂಹಾಸನವ ಹರಿಗೆ ಕಳುಹಿಸಿದವೃಂದ ದೈತ್ಯರಿಗೆಲ್ಲ ಭಯವ ಸೂಚಿಸಿದ 67ಜಂಭಾರಿಕುಲಿಶಕಂಜುತ ಪೋಕರೆಲ್ಲಥಂಬಿಸಿದರು ವಾಗಾಡಂಬರವೆಲ್ಲಅಂಬುಜಾಕ್ಷಗೆ ನಿನ್ನತಾತಪೂಜಿಸಿದಅಂಬುಜನಾಭ ತನ್ನೊಳುವಿಶ್ವತೋರ್ದ68ಅದನೆಲ್ಲ ಬಲ್ಲ್ಯವ್ವ ಹರಿಯ ನಿಜನಲ್ಲೆಬೆದರಿದೊಲ್ಲೋರ್ವ ನಿನ್ನ ಮಾಯವ ಬಲ್ಲೆಪದುಮಜ ಭವರ ಹೃದಯಾಬ್ಜ ನಿಯಂತ್ರೆಉದಧೀಶನಾಜÕದಿ ಸರ್ವಸ್ವತಂತ್ರೆ 69ಕೇಳಮ್ಮ ನಿನ್ನ ಹೆತ್ತವರಿಗೆ ನಿನ್ನಮೇಲೆ ಹಂಬಲ ಬಹಳ ಪಾಪಿ ನಿಮ್ಮಣ್ಣಆಲೋಚನೆಯಿಲ್ಲದೆ ನಿಶ್ಚೈಸಿದ್ದಾನೆ ಶಿಶುಪಾಲಗೆ ನಿನ್ನ ಕೊಡುತೇನಂತೈದಾನೆ 70ಆಗಲ್ಯಾಕವನಿಂದಲೀಕಜ್ಜ ಬುರ್ರಾಬೇಗ ಭೀಷ್ಮಕನಂತರ ಬಲ್ಲ ಶ್ರೀಧರ್ರಾಸಾಗರಶಯನ ತಾ ಸಮಯಕೈತರುವನೇಗಿಲಧರನು ಕೃಷ್ಣನ ಕೂಡ ಬರುವ 71ಆ ಗೌರಿ ಮೌನಿಯೆಂಬುವಳ ಪೂಜೆಯಲಿಯೋಗವಾಗಿದ್ರ್ದಾ ಕಾಪುರುಷ ಸಭೆಯಲ್ಲಿಮೇಘಮುಸುಕಿರ್ದ ಚಂದಿರನಂತೆ ನಿನ್ನಯೋಗೇಶ ಪ್ರಸನ್ವೆಂಕಟ ಕೃಷ್ಣ ನೊಯ್ವ ಚೆನ್ನ 7222ಇನಿತೆಲ್ಲ ಕೊರವಂಜಿಕರವಪಿಡಿದು ಹೇಳಿಕ್ಷಣ ಕ್ಷಣಕೊಡೆಯನ ಹೊಗಳಿನೆನಪಿಗೆ ಬೆಸಗೊಂಬೆ ಕಾಲಜ್ಞಾನದ ವಾರ್ತೆಎನಗೆ ತಿಮ್ಮಯ್ಯ ಹೇಳೆಂದು 73ಶ್ರೀ ರುಕ್ಮಿಣಿಯ ಮನದುಲ್ಲಾಸವನೆಲ್ಲಪೂರೈಸುವೆನೆಂಬ ನುಡಿಯತೋರು ಎನ್ನಯ ನಾಲಿಗೆಯಿಂದಲುಸುರುವೆವೀರ ದ್ರಾವಿಡ ವೆಂಕಟಯ್ಯ 74ಶರಣ್ಯೆಲೆ ಸತ್ಯನೆ ಶರಣ್ಯೆಲೆ ನಿತ್ಯನೆಶರಣು ಶರಣು ನಿತ್ಯಮುಕ್ತಶರಣು ಪರೇಶನೆ ಶರಣು ಅವಿನಾಶನೆಶರಣು ಪ್ರಸನ್ವೆಂಕಟ ಕೃಷ್ಣ 7523ವಚನಓ ರುಕ್ಮಿಣಿ ತಾಯಾರೆಉನ್ನ ಮನಸಿಲೆ ನಿನೈಚ್ಚ ಕಾರ್ಯಂ ಕೈಕ್ಕೂಡಿನಾಲ್ಎನಕ್ಕೆ ಎನ್ನ ಸಂತೋಷಂ ಪಣ್ಣಿರಾಯ್ಓಯಮ್ಮ ಉನ್ ಪ್ರಾಣನಾಯಗನ್ ಶ್ರೀಕೃಷ್ಣನ್ ವಂದುಪೊಟ್ಟಣೆ ಕೈ ಪಿಡಿಚ್ಚಿ ಕಲ್ಯಾಣಂ ಪಣ್ಣಿಕೊಳ್ಳರಾಂಇಂದ ವಾರ್ತೆ ತಪ್ಪಿನಾಲ್ ನಾಂ ಕೊರ್ತಿಯೇ ಅಲ್ಲೆಉನ್ ತಮಯನ್ ರುಗ್ಮಂ ವೇಕ್ಕತ್ತೆ ಕೊಲ್ಲರಂ ವರಾನುಓಯಮ್ಮ ಇಂದ ವಾರ್ತೆಯೈ ಪಣ್ಣಿಕೋ ಅª, À್ಮು 7624ಮದ್ಯಪಾನಿತಾಮಸಯವನನ ಕೊಲಿಸಿದನೆನಿದ್ರೆಗೈವ ರಾಯನಿಂದಲಿಸದ್ದಿಲ್ಲದೆ ಮಧುರೆ ಜನರ ಸಾಗರದಮಧ್ಯ ದ್ವಾರಕೆಯಲ್ಲಿಟ್ಟನೆ 77ಯವನ ಸೈನ್ಯಜಲಧಿಬತ್ತಿಸಿ ಸಾಲ್ವಾದ್ಯರಹವಣಮುರಿದು ನಿಜರ ಹೊರೆವನು ನಿನ್ನವಿವಹ ಮಾಳ್ಪೆನೆಂಬ ಮಾಗಧನು ಚೈದ್ಯ ತನ್ನಕುವರನೆಂದು ಮಾನವಿಡಿದಿಹ 78ಇನಿತರೊಳು ರಂಗರಾಯನು ಮೋಹರದಿಮಣಿರಥವನೇರಿ ಬಹನುವನಿತೆ ನಿನ್ನಂದಣವ ನೋಡುತ ಜಿಗಿವನಲ್ಲಿಂದ ಘನತರ ಮೃಗೇಂದ್ರನಂದದಿ 79ನರಿಯ ಹಿಂಡಿನೊಳಗಿನಾನೆಯ ಒಯ್ವ ತೆರದಿಹರಿನಿನ್ನಪ್ಪಿಕೊಂಡುಹಾರುವಗರುಡನಮೃತ ಕಲಶವ ಸುರರ ಗೆದ್ದುಹರುಷದಿಂದೊಯ್ಯುವಂತೆ ಒಯ್ವನು 80ಸರಸಿಯಾಬ್ಜ ಹಂಸ ಒಯ್ವವೋಲ್ ಪರಮಪುರುಷತ್ವ, ರಿಯ ತನ್ನ ರಥಕೆ ಒಯ್ವನೆಬರಿಯ ದುಗುಡವ್ಯಾಕೆ ಬಾಲಕಿಪ್ರಸನ್ವೆಂಕಟ ಕೃಷ್ಣ ನಿನ್ನ ಮೆಚ್ಚುಗಾರನೆ 81ಬಂದನೆಂಬ ನುಡಿಯು ಬರುತಿದೆಜವದಿಕೃಷ್ಣಬಹನೆಂಬ ನುಡಿಯು ಬರುತಿದೆ 8225ಚೂರ್ಣಿಕೆನೀಡೆಯವ್ವ ಎನ್ನ ಮನೆ ಗಂಡನ ಕಾಟ ಘನ್ನವವ್ವಕ್ಷಣಕೈದು ನಡೆಯವನವ್ವಒಮ್ಮಾನ ತಿರಿತಂದರೆ ಇಮ್ಮಾನ ಬೇಡುವನವ್ವಚೆಂಬಣ್ಣ ಕರಿಬಿಳಿಯಬಟ್ಟೆನಮ್ಮತ್ತೆಗಳವ್ವಆರು ಮಂದಿ ಗಂಡನ ಗೆಳೆಯರವ್ವಏಳು ಪದರು ಮೂರು ತ್ಯಾಪೆ ಗುಡಲುಂಟವ್ವಎಪ್ಪತ್ತೆರಡು ಸಾವಿರ ನುಲಿಯ ಸಿಂಬಿಗಳವ್ವಗುಡಲೊಳು ಮೂರು ಒಲೆಯುಂಟವ್ವಗುಡಲು ಬಿದ್ದರೆ ನುಲಿಗೆ ಮಾರ್ಯೆವ್ವಒಂಬತ್ತು ಗುದ್ದಿನೊಳಗೆ ಹತ್ತು ಹೆಗ್ಗಣದೋಡ್ಯಾಟವವ್ವಕೊರವನ ಕೈಯಿಚ್ಛೆ ಮೂರು ನಾಯಿಗಳವ್ವಎಣಿಕಿಲ್ಲದ ಕುತ್ತಗಳುಂಟವ್ವಕೊಬ್ಬಿನ ಸವತೇರೆಂಟು ಮಂದಿ ಕೊರವಗೆ ಮಚ್ಚೂಡುವರವ್ವಸಂಸಾರದಲೆಳ್ಳನಿತು ಸುಖವಿಲ್ಲವ್ವಅತ್ತೆಗಳಾಟ ಗಂಡನ ಬ್ಯಾಟ ಸವತಿಯರ ಕಾಟನೆರೆಹೊರೆಯವರ ನೋಟ ಮನೆಯ ಮಾಟಗತರಸದೂಟಕಂಜಿ ನಡುನಡುಗಿಮೂರೂರ ಹಾದಿ ಮೆಟ್ಟಿ ಬಂದುಆರೂರರಸಿನ ಮೊರೆ ಹೊಕ್ಕೆನೆಯವ್ವವಿದರ್ಭದೇಶದ ಕುಂಡಿನಾಪುರದೊಳು ನಿನ್ನ ಗುರುತಕೇಳಿಉಪವನದ ಪ್ರದ್ಯೋತನಾಳ್ವ ಎರಡು ಬಾವಿಯ ಮ್ಯಾಗಣಹೂವಿನ ತೋಟದ ನಡುವೆ ಬುತ್ತಿಯನುಂಡು ನಿನ್ನ ಕಂಡುಕುಂತಳಾಪುರದಲ್ಲಿ ಕುಳಿತುಂಬಬ್ರಹ್ಮಾನಂದದವರ ಭಾಗ್ಯವ ಬೇಡ ಬಂದೆನೆ ಅವ್ವಅಸುವಿಗೆ ಹಾಲನೆರೆಯವ್ವಶಿಶುವಿಗೆನವನೀತನೀಡೆಯವ್ವಬಂಗಾರೆವ್ವ ಸಿಂಗಾರೆವ್ವ ಸೋರ್ಮುಡಿಯವ್ವಮಲ್ಲಿಗೆದುರುಬು ಸಂಪಿಗೆದುರುಬುಪಚ್ಚೆ ಮರುಗ ಮುಡಿವಾಳ ಶಾವಂತಿಗೆ ತುರಬಿನವ್ವಪ್ರಸನ್ವೆಂಕಟಕೃಷ್ಣನ ತೋಳ್ತಲೆಗಿಂಬಿನವ್ವ ನೀಡೆಯವ್ವ 8326ವಚನಇಂತಾಧ್ಯಾತ್ಮವಂ ಪೇಳಿಕಂತುವಿನಯ್ಯನ ಕಾಂತೆಯಂ ಸಂತಸಪಡಿಸಿಅಂತರಂಗದಿ ಚಿಂತಾಯಕನಂ ನೆನೆನೆನೆದುಭ್ರಾಂತಿ ಪರವಶಾದಂತೆ ಕೆಂಜೆಡೆಯಂ ತೂಗಿ ತೂಗಿಅಂತದತ್ಯಂತ ತೂಳಂತುಂಬಿಇಂತೆಂದಳಾ ಕೊರವಂಜಿ 8427ಬರುತಾನೆ ಜಾಣೆ ಬರುತಾನೆಬರುತಾನೆ ಚೆಲ್ವೆ ಬರುತಾನೆ 85ಹಿಂಡುಭಂಡರೆಲ್ಲ ಕೂಡಿ ನಿನ್ನ ಮುಚ್ಚಲು ಎತ್ತಿಕೊಂಡು ಒಯ್ವ ಜಾಣ ಬರುತಾನೆಪುಂಡರೀಕಸುರಗಿ ಖಡ್ಗ ಭಿಂಡಿವಾಲ ನುಗ್ಗುಮಾಡಿದಂಡಿಸುವ ಜಾಣ ಬರುತಾನೆ 86ಕುಂಡಿನಾಪುರದಿ ನೆರೆದ ಕೊಂಡಿ ಕುಹಕರ ತಲೆಯಚಂಡನಾಡ್ವ ಜಾಣ ಬರುತಾನೆಮಂಡೆಯಲ್ಲಿ ಪಚ್ಚಚೂಡವಿಟ್ಟು ರುಕ್ಮನಭಿಮಾನಕೊಂಡೇನೆಂಬ ಜಾಣ ಬರುತಾನೆ 87ತಂಡ ತಂಡದಲ್ಲಿ ನಿನ್ನಯ್ಯನ ಸದ್ವಾಸನನ್ನಉಂಡೇನೆಂಬ ಜಾಣ ಬರುತಾನೆಲೆಂಡದಾನವಾರಿ ಪ್ರಸನ್ನವೆಂಕಟಕೃಷ್ಣ ಬೊಮ್ಮಾಂಡಪತಿ ಜಾಣ ಬರುತಾನೆ 8828ಚೆನ್ನೆ ಕೊರವಂಜಿ ಮಾತು ಶ್ರೀಕನ್ಯೆಕೇಳಿನಲಿವಾಂತುಮನ್ನಿಸಿ ಗುಣವ ಕೊಂಡಾಡಿ ಮುಕ್ತಿರನ್ನಗಾಣಿಕೆಯನು ನೀಡಿ 89ಎಲೆ ಸತ್ಯಲೋಕದ ಕೊರವೆ ನೀಬಲು ಸತ್ಯ ನುಡಿದೆ ನಾನರಿವೆಛಲದಂಕ ದೇವರದೇವ ಈಖಳರೊಳು ಒಯ್ವುದರಿದವ್ವ 90ಹರಿರಥವೇರಿ ಬಾಹೋಣ ಕಾಪುರುಷರ ಮತ ಕೆಡಿಸೋಣಗುರುಪ್ರಸನ್ವೆಂಕಟ ಕೃಷ್ಣ ಬಂದುಹೊರೆವುದುಂಟೇನವ್ವ ರಮಣಿ 9129ನಂಬಲೇನೆ ನಿನ್ನ ಮಾತು ಕೆಳದಿ ಕೊರವಮ್ಮ ನಮ್ಮಂಬುಜಾಕ್ಷ ಬಾಹನೇನೆ ದೇವಿ ಕೊರವಮ್ಮ 92ಉಡಿಯ ಕಂದನಾಣೆ ಇಡುವೆ ನಂಬೆ ರುಕ್ಮಿಣಿ ನಾನುಡಿವ ನಾಮದಾಣೆ ಇಡುವೆ ನಂಬು ರುಕ್ಮಿಣಿ 93ಎಡದ ತೋಳು ತೊಡೆಕಂಗಳುಹಾರಲೊಳಿತೇನೆ ಚಿಲಿಪಿಲಿನುಡಿವಶಕುನಎಡದ ಗೌಳಿಯ ನುಡಿಯು ಒಳಿತೇನೆ94ಕಡಲಶಯನ ನಿನ್ನ ಪ್ರಾಣದೊಡೆಯ ಬಪ್ಪನೌ ಎನ್ನಪಡೆದನಯ್ಯ ಪ್ರಸನ್ನವೆಂಕಟಕೃಷ್ಣ ತಪ್ಪನೌ 9530ನಿನ್ನಗಂಡಬೆಣ್ಣೆಗಳ್ಳ ಕನ್ನೆಗೊಲ್ಲತಿಯರ ನಲ್ಲಕಣ್ಣೆವೆ ಸನ್ನೆಗಾರ ನಂದಗೋಪ ಕುಮಾರ 96ಚಿನ್ನತನದಿ ದಶಲಕ್ಷ ಚಿನ್ನರ ಪಡೆದನು ದಕ್ಷಪೊನ್ನ ಕೊಳಲನೂದಿ ಮೂಜಗವ ಮೋಹಿಸುವ 97ಉನ್ಮತ್ತಮಾತುಳನ್ನ ತುಳಿದ ತನ್ನ ಪೆತ್ತವರೆಡರ್ಗಳೆದಮನ್ನಿಸಿ ಪಾಂಡವರÀ ಪೊರೆದ ಚಿನ್ಮಯ ಸುಖದ 98ಪೆಣ್ಗಳ್ ಹದಿನಾರುಸಾವಿರದ ನೂರೆಂಟನಾಳ್ವ ಚದುರನಿನ್ನ ಪ್ರಾಣ ಪ್ರಿಯ ಬಂದ ಪ್ರಸನ್ನವೆಂಕಟ ಕೃಷ್ಣ ಮುಕುಂದ 9931ನುಡಿ ನುಡಿಯೆಲೆ ಬಡನಡುವಿನ ಮಡದಿ ನಿನ್ನುಡಿಗುಚಿತವಕೊಡುವೆನಡಿವಿಡಿವೆ ಮನವಿಡುವನೆ ಕಡಲೊಡೆಯ ಕೈವಿಡಿವನೆ ಎನ್ನ ಕಡೆಯ ನೋಡಿ ನುಡಿವನೆ ಸವಿನುಡಿಯಕಡು ಬಲಿಭುಜ ಗಡಣಂಗಳ ನಡುವ್ಹಂಸನಪಡಿಮಿಡುಕುವೆನುಡಿ ಬೇಗೆಂದು ಪಡೆಗೂಡಿ ಹಲಿಯೊಡನಾಗಮ ನುಡಿಯೇ ನಿನ್ನುಡಿಗಮೃತವ ಪಡೆಯೇ ಮತ್ತೀಜಡಜಡಿ ಲೋಕೊಡೆಯೆ ಪ್ರಸನ್ನವೆಂಕಟ ಕೃಷ್ಣರಾಯನನುಡಿಯೆಲೆ ನುಡಿನುಡಿಯೆ ನುಡಿನುಡಿಯೆ 10032ಹರಿಬರುತಾನೆ ಗುರುತು ಗಂಟ ಕಟ್ಟೆಪಕೇಳೆ ನರಸಿಂಗನಂಗನೆಯನೊಯಿದು ಕೆಟ್ಟನರಿಗಳಾಳಬಲ್ಲವೇನೆ ನಲಿದು ನೀನುದುರುಳರಿಗೆ ದಕ್ಕಬಲ್ಲ್ಯೇನಮ್ಮ ನಿನ್ನಾಚರಣೆಯೆಲ್ಲ ಜಗದ್ವಿಡಂಬನಮ್ಮ 101ನನ್ನ ತರಳನಾಣೆ ಸಟೆಯನಾಡೆನಮ್ಮ ನಾನೊರೆದವಾಕುಸಾಕ್ಷಿ ಬರುತಾವಮ್ಮ ಮ್ಯಾಲರಕೆಯುಳ್ಳ ತಾಯಿಯಾದರೆ ನೀ ನನ್ನಕರೆಸಿ ಕೇಳೆ ನಿನ್ನ ಮನೆಗೆ ಜಾಣೆ 102ನಿನ್ನ ಹೆಸರ ತಕ್ಕ ಊಟವ ನೀಡೀಗ ನಾಹಸಿದೆನೆಂದು ಉಂಡುಕೊರವಿಬೇಗಪ್ರಸನ್ನವೆಂಕಟ ಕೃಷ್ಣನ ರಾಣಿಗೆÉ ಹಾರೈಸಿದಳು ಬಸುರು ಬುಡುಕೆಂದು 10333ಚಕ್ಕನೆ ನಿಂತಳು ಕೊರವ್ಯಮ್ಮ ಕಂಡುಫಕ್ಕನೆ ನಿಂತಳು ರುಕ್ಮಿಣಮ್ಮ ಪ್ರಾಣದಕ್ಕರ ಬಿಡಲಾರೆ ನಿನ್ನ ಗೆಳತಿ ಪ್ರೇಮಉಕ್ಕುತಿದೆ ನೀ ಹೋಗುವುದೊಳಿತೆ ಎನಲು ನಕ್ಕು 104ಶ್ರೀ ಗೋಪಾಲ ಬಾಹನಕ ನಿಲ್ಲೆ ವಿಯೋಗ ತಾಳಲಾರೆ ನೀ ಬಲ್ಲೆಹೀಗೆನೆÀ್ನ ಬೇಡಿಕೊಂಡಳು ಮರುಳೆ ನೆನೆದಾಗೆ ಬಹೆನೆಂದ್ಹೇಳಿ ತೆರಳೆ ಅನುರಾಗದಿಂದ 105ಆವ ಪರಿಂದಾರೆ ಹರಿಸೇವೆ ಮಾಡಿದೇವಋಷಿ ನಿಜಾನಂದ ತೀವಿಶ್ರೀವರ ಪ್ರಸನ್ವೆಂಕಟ ಕೃಷ್ಣನ ಮಹತೇವಿಡಿದು ಹೊಗಳುತ ಮುನಿರನ್ನ ರಾಮೆಯಾಜÕದಿ 10634ಸುರಋಷಿಪೇಳ್ದ ಒಕ್ಕಣೆಯಹರುಷದಿ ಕೇಳ್ದ ರುಕ್ಮಿಣಿಯಅರಸ ಪ್ರಸನ್ನವೆಂಕಟ ಕೃಷ್ಣನಿರುತದಿ ಜಯ ನಮಗೀವ 107ಜಯ ಜಯ ಚಿನ್ಮಯಮೂರ್ತಿಜಯ ಜಗನ್ಮಯ ಸ್ವಚ್ಛಕೀರ್ತಿಜಯ ಜಯ ಪ್ರಸನ್ವೆಂಕಟ ಕೃಷ್ಣಜಯಮೂರ್ತಿನಿನಗೆ ಶರಣು108
--------------
ಪ್ರಸನ್ನವೆಂಕಟದಾಸರು
ಬಹಳ ಸಂತೋಷಿ ಭಕ್ತರು ಬಹಳ ಸಂತೋಷಿಬಹಳ ಸಂತೋಷಿ ಬಗಳ ಬಹಳ ಸಂತೋಷಿಪಕಾಂತಿಯೆಂಬ ಸತಿಯು ದೊರಕಲಿ ಬಹಳ ಸಂತೋಷಿಕಾಂತಿ ಎಂಬ ಕುಲಕುಡಿಬೆಳೆಯಲಿ ಬಹಳ ಸಂತೋಷಿ1ಕ್ಷಮೆಯು ಎಂಬ ಕ್ಷೇಮವು ಬೆಳೆಯಲಿ ಬಹಳ ಸಂತೋಷಿದಮೆಯು ಎಂಬ ದನಕರು ಹೆಚ್ಚಲಿ ಬಹಳ ಸಂತೋಷಿ2ಆತ್ಮ ಸಂತೋಷದಾ ಅಂಗಡಿ ನಡೆಯಲಿ ಬಹಳ ಸಂತೋಷಿಸ್ವಾತ್ಮಾನುಸುಖ ಸಾಮ್ರಾಜ್ಯ ದೊರೆಯಲಿ ಬಹಳ ಸಂತೋಷಿ3ಭೂತ ದಯೆಯ ಅಂಗಿಯ ತೊಡಿರಿ ಬಹಳ ಸಂತೋಷಿಖ್ಯಾತಿ ಎಂಬ ಕುಪ್ಪಸ ಹಾಕಿರಿ ಬಹಳ ಸಂತೋಷಿ4ಸೂಸಲಿ ಚಿದಾನಂದ ಕೃಪೆಯಿಂದಿಗೆ ಬಹಳ ಸಂತೋಷಿವಾಸವಮಾಡಲಿ ನಮ್ಮಲ್ಲಿ ಬಗಳೆ ಬಹಳ ಸಂತೋಷಿ5
--------------
ಚಿದಾನಂದ ಅವಧೂತರು
ಮಗನೆಂದಾಡಿಸುವಳು | ಮೊಗ ನೋಡಿ ನಗುವಳು ಪಜಗದುದ್ಧಾರನ ಮೊಗ ಮೊಗದೊಳಿರಿಸಿಕೊಂಡು ಅ.ಪಕಾಲಲಂದುಗೆ ಗೆಜ್ಜೆ ತೋಳ ಮಣಿಯು ದಂಡೆಫಾಲದ ಅರಳೆಲೆಯು ಕುಣಿಯೆನೀಲದುಡುಗೆಯಿಟ್ಟ ಬಾಲನೆ ಬಾರೆಂದುಪಾಲುಣಿಸುವ ಪುಣ್ಯವೆಂತು ಪಡೆದಳಯ್ಯ 1ಬಣ್ಣದ ಸರಗಳಿಡೆ ರನ್ನದ ನೇವಳಹೊನ್ನ ಘಂಟೆಯು ಘಣ ಘಣರೆನಲುಪನ್ನಗಶಯನನೆ ಕುಣಿಯೊಮ್ಮೆ ಕುಣಿಯೆಂದುಕುಣಿಸಿ ನಗುವ ಪುಣ್ಯವೆಂತು ಪಡೆದಳಯ್ಯ 2ಕುಕ್ಷಿಯೊಳೀರೇಳು ಜಗವನು ಸಲಹುವರಕ್ಷಿಪರುಂಟೆ ತ್ರೈಜಗದೊಳಗೆಪಕ್ಷಿವಾಹನ ನೀನು ಅಂಜಬೇಡೆನುತಲಿರಕ್ಷೆಯಿಡುವ ಪುಣ್ಯವೆಂತು ಪಡೆದಳಯ್ಯ 3ಶಂಕ ಚಕ್ರಗದಾ ಪದುಮಧಾರಕನಪಂಕಜಮಿತ್ರಶತಕೋಟಿ ತೇಜನನುಸಂಖ್ಯೆಯಿಲ್ಲದ ಆಭರಣಗಳ ತೊಡಿಸಿ ಅಲಂಕರಿಸುವ ಪುಣ್ಯವೆಂತು ಪಡೆದಳಯ್ಯ 4ಸಾಗರಶಯನು ಭೋಗೀಶನ ಮೇಲೆಯೋಗನಿದ್ದೆಯೊಳಿಪ್ಪ ದೇವನನುಆಗಮನಿಗಮಗಳರಸ ಕಾಣದ ವಸ್ತುತೂಗಿ ಪಾಡುವ ಪುಣ್ಯವೆಂತು ಪಡೆದಳಯ್ಯ 5ಪನ್ನಗಶಯನ ಉನ್ನಂತ ಮಹಿಮನಸನ್ನುತಭಕುತರ ಸಲಹುವನಪನ್ನಗಾರಿವಾಹನದೇವರ ದೇವಚೆನ್ನಕೇಶವನ ಪಡೆದಳಯ್ಯಾ * 6
--------------
ಪುರಂದರದಾಸರು