ಒಟ್ಟು 385 ಕಡೆಗಳಲ್ಲಿ , 76 ದಾಸರು , 341 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯ ಮಂಗಳಂ ಮಹಾ ಶುಭಮಂಗಳಂ ಶ್ರೀಯಕರಾನಂದ ಘನಚಿನ್ಮೂರ್ತಿಗೆ ಪ ಅನಿಮಿಷಾಕ್ಷಗ ಧರಮಹೀಗ ಸಂಭೋದ್ಬವಗ ಮುನಿಪಟು ಕ್ಷತ್ರಿ ಕುಲಸಂಹಾರಗ ಇನಕುಲೋದ್ಭವ ವಾಸುದೇವಶ್ರೀ ಬೌದ್ಧಗ ಘನತರದ ತುರಗ ಹರರಾವುತಂಗೆ 1 ಮರಮತ್ಸ್ಯ ಶ್ರೀಕಮಠ ಹಿರಣ್ಯಕ್ಷಮರ್ಧನಗೆ ಕೊರಳೊನಮೂಲಿ ವಾಮನದೇವಗೆ ಧರಿ ಭೂಸುರಗಿತ್ತು ಧಾಶರಥಿ ಶ್ರೀ ಹರಿಗೆ ಸಿರಿದಿಂಗಬರ ಕಲ್ಕಿ ಯವತಾರಗೆ 2 ಕೂರ್ಮ ವರಾಹನರಸಿಂಹಗೆ ಅಗವೈರಿಯನುಜ ಪರಶುರಾಮಗ ರುಘುನಾಥ ಕೃಷ್ಣ ಬೌದ್ದೇಶಕಲಿನಾಶಗ ಜಗದ್ಗುರು ಮಹಿಪತಿ ಸುತಪ್ರಿಯಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯದೇವ ಜಯದೇವ ಜಯಗುರು ಮಹೇಶಾ ಭಯವನಿವಾರಿಸಿ ಶ್ರಯಕುಡು ನೋಡದೆ ಗುಣದೋಷಾ ಪ ಶಿವಶಿವಶಿವಶಿವಯೆಂದು ನೆನಿಯಲು ದೃಡವಾಗಿ ಅವನಿಲಿಹಿಂಗುದು ಪೂರ್ವದ ದುಷ್ಕøತಗತವಾಗಿ ಭವಭವ ಭವಭವಯನಲಾಮ್ಯಾಲನಿಶ್ಚಲನಾಗಿ ಜವದಲಿ ಹರಿವುದುದುರ್ಧರ ಭವಭಯಭಯಾಗಿ 1 ಅನನ್ಯ ಭಾವದಿಹೊಕ್ಕು ಶರಣವ ನಿಮ್ಮಡಿಗೆ ತನುಮನಧನವನು ಅರ್ಪಿಸಿ ವಂಚನೆ ನಿಲದ್ಹಾಗೆ ಅನುದಿನ ಮಾಡಿಲು ಧ್ಯಾನಾಸ್ವರೂಪಹೃದಯದೊಳಗೆ ಘನ ತರದಿಹನಿಜಸ್ಥಾನವು ಸುಲಬಾಗುವದೀಗೆ2 ನಿನ್ನಾ ಮಹಿಮೆಯುತಿಳಿಯದು ನಿಗಮಕ ಶ್ರೀಗುರವೇ ಇನ್ನು ಅಂತಿಂತೆಂಬುದು ನರಗುರಿಗಳಿಗಳವೇ ಎನ್ನಾನಯನದಿನೋಡಿ ಸುಮ್ಮನು ಸುರದಿರುವೇ ಭಿನ್ನವಿಲ್ಲದೆ ಸಲಹು ಮಹಿಪತಿ ಸುತಪ್ರಭುವೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಲಧಿ | ನಿಮ್ಮ ಮೊರೆಹೊಕ್ಕವರ ಕಾಯ್ದು ಪೊರೆಯುವಿರಿ ದಯದಿ ಪ. ಅರಿಯರು ಜಗದೊಳಗೆ ನರರು ನಿವಿ್ಮೂ ಮಹಿಮೆ ಕರಕರೆಪಡುತಿಹರು ಭವದೊಳಗೆ ಪರಮ ನಮ್ರತೆಯಿಂದ ಚರಣಕೆರಗಲು ಬಂದು ಉರುತರದ ಕಾರುಣ್ಯದಿಂದ ಪೊರೆಯುವಿರಿ 1 ಇಲ್ಲವೊ ಆಸೆ ಆಡಂಬರದ ದ್ರೌವ್ಯದಲಿ ಎಲ್ಲೆಲ್ಲಿ ನೊಡಲು ತತ್ವಬೋಧೆ ಉಲ್ಲಾಸದಿಂದ ಸಜ್ಜನರಿಗರುಹುತ ಮೋದ ಎಲ್ಲೆ ಕಾಣಿಸದಂಥ ಆನಂದವೀವ ಗುರು 2 ತಂದೆ ಮುದ್ದುಮೋಹನವಿಠ್ಠಲನೆಂದೆಂಬ ಬಹು ಚಂದದ ಅಂಕಿತದಿ ಜಗದಿ ಉದಿಸಿ ಮಂದರಿಗೆ ಸುಜ್ಞಾನ ತಂದು ರಕ್ಷಿಸುವಂಥ ಒಂದೊಂದು ಮಹಿಮೆಗಳ ಪೇಳಲೆನ್ನೊಶವೆ 2 ಅನಾದಿಯಿಂದಲಿ ಹೀನ ದೆಸೆಯೊಳಗಿದ್ದು ನಾನಾ ಜನ್ಮದಿ ಬಂದು ಕರ್ಮದಲಿ ತೊಳಲಿ ದೀನತ್ವವೈದುವ ಮಾನವನ ಕರುಣಿಸಿ ಸಾನುರಾಗದಿ ಹರಿಯ ಪದಕೆ ಸೇರಿಸುವಂಥ 3 ಸೃಷ್ಟಿ ಸ್ಥಿತಿ ಲಯಗಳಿಗೆ ಕರ್ತ ಹರಿ ಎಂತೆಂದು ಶ್ರೇಷ್ಠ ಕನಿಷ್ಠದ ಅರ್ಥ ತತ್ವ ತಿಳಿಸಿ ಕಷ್ಟ ಬಿಡಿಸುವ ಜಗತ್ಕರ್ತ ಒಬ್ಬನೆ ಹರಿಯು ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲನೆನುವ 5
--------------
ಅಂಬಾಬಾಯಿ
ಜಾತಿಭ್ರಷ್ಟ ಹೊಲೆಮಾದಿಗರಿವರಲ್ಲವೇನೋ ನೀತಿಬಾಹಿರರಾಗಿ ಆಚರಿಸುವವರು ಪ ಪನ್ನಂಗಶಯನ ಉನ್ನತ ಕತೆ ಕೀರ್ತ ನ್ಯನ್ನು ಕೇಳೆನೆ ಮುಖವನ್ನು ಹಿಂತಿರುವಿ ಭಿನ್ನ ಬೇಸರಿಲ್ಲದೆ ಅನ್ಯಜನ ಸುದ್ದಿಯೊಳು ಕುನ್ನಿಯಂದದಿ ದಿನಗಳನ್ನು ಕಳೆವವರು 1 ಆಲಯದ ಸತಿಯಳ ತಾಳದೆ ತುಸುತಪ್ಪು ತಾಳಿಯನ್ಹರಕೊಂಡು ದಾಳೀಯ ಹೊಡೆದು ಮೇಲುಜಾತಿಲಿ ಹುಟ್ಟಿ ಕೀಳು ಸೂಳೇರಿಗೊಲಿದು ಹೇಳಿದತೆರ ಕುಣಿದು ಬೀಳುಗಳೆವವರು 2 ಸದ್ಧರ್ಮಕಾರ್ಯಕ್ಕೆ ಇದ್ದುದ ಸಲ್ಲಿಸೆನಲು ಕದ್ದು ತಂದುಕೊಡುವೆವೆಂದಬದ್ಧ ನುಡಿಯುವವರು ಬದ್ಧ್ದ........ಬಂದು ಒದ್ದು ಕೂಡ್ರಿಸಲಾಗ ಸದ್ದಿಲ್ಲದೆ ತಂದು ಬೇಡಿದ್ದು ಕೊಡುವವರು 3 ಜ್ಞಾನಿಗಳು ಬಂದರೆ ಗೋಣೆತ್ತಿನೋಡದೆ ಹೀನಜನರಿಗೆ ಬಹುಮಾನ ಕೊಡುವವರು ಧ್ಯಾನ ದಾಸರ ತರದಿ ಜ್ಞಾನದ ಮಾತ್ಹೇಳಿ ಗೇಣ್ಹೊಟ್ಟಿಗೆ ಪರರ ಗೋಣು ಮುರಿವವರು 4 ತಾಸಿನ ಮೋಜೆಂಬ ನಾಶನ ಜಗಮಾಯ ಮೋಸನರಿಯದೆ ಯಮಪಾಶದೊಳು ಬಿದ್ದು ದಾಸಜನಪ್ರಿಯ ಜಗದೀಶ ಶ್ರೀರಾಮನ ಧ್ಯಾಸಮುರಿದು ದು:ಸ್ಸಹವಾಸದಿರುವವರು 5
--------------
ರಾಮದಾಸರು
ತಂಗಿ ಮೊಸರ ಸುತ್ತ ಚೆಲ್ಲಿದ ಮುದ್ದುರಂಗ ಬೆಣ್ಣೆಯ ಮೆದ್ದ ಬಲ್ಲಿದ ಪ. ಪುಟ್ಟ್ಟಿದಾಗಲೆ ಮೂಲರೂಪವ ತೋರಿಅಟ್ಟಿದ ಸುಜನರ ತಾಪವಕೊಟ್ಟ ನಮಗೆ ಜ್ಞಾನದೀಪವ ಕೃಷ್ಣತೊಟ್ಟ ದುರ್ಜನರೊಳು ಕೋಪವ1 ಯಶೋದೆಯ ಮೊಲೆವಾಲನುಂಬಾಗ ನಸುಬಿಸಿನೀರನೆ ಎರೆಸಿಕೊಂಡಾಗಶಿಶುವು ಪೂತಣಿಯ ಕೊಂದಿತೆಂಬಾಗ ರ-ಕ್ಕಸರಿಗೆ ಇವ ಬಲುದಿಮ್ಮಿಗ 2 ಇಂದಿರೆಯನು ಬಿಗಿದಪ್ಪಿದ ಸಖವೃಂದಾರಕರೊಳಗೊಪ್ಪಿದಕಂದರ ಕಲ್ಲಿಂದ ಜಪ್ಪಿದ ತಾಯಿಹಿಂದಟ್ಟಿ ಬರಲೋಡಿ ತಪ್ಪಿದ3 ಪುಟ್ಟ ಕೃಷ್ಣನ ಕಟ್ಟಬೇಕೆಂದು ತಂ-ದೊಟ್ಟಿ ಹಗ್ಗಗಳ ತಂದುಬೆಟ್ಟವಾಗಿರಲು ದುರ್ಜನರ ಕೊಂದು ಈಗಗಟ್ಟಿಮಾಡಿದಳಿವ ಹರಿಯೆಂದು4 ಒರಳನೆಳೆದ ಬಲುಮತ್ತಿಯ ದೊಡ್ಡಮರನ ಕಿತ್ತಿದ ನೋಡಿವನರ್ಥಿಯತರಳಾಕ್ಷಿ ಕೃಷ್ಣನ ನೆತ್ತಿಯ ಬೆಣ್ಣೆಸುರಿಯೆ ಪಾಡಿದಳವನ ಕೀರ್ತಿಯ5 ಗಗನಕೆ ಏರಿ ವಾತನ ಕೊಂದ ನೀರೊ-ಳಗೆ ಪೊಕ್ಕು ತಂದೆಯ ಕರೆತಂದಖಗನಂತೆ ಕಡಹದಮರದಿಂದ ಹಾರಿವಿಗಡ ಸರ್ಪನ ಹೆಡೆಯೇರಿ ನಿಂದ6 ತುಳಿದಹಿತಲೆಯನು ಬಿಚ್ಚಿದನಾಗಲಲನೆಯರುಕ್ತಿಗೆ ಮೆಚ್ಚಿದ ಅಲರು ಮಳೆಯ ಸುರಿಯ ಹಚ್ಚಿದ ಕೃಷ್ಣಖಳರಳಕೆಗಳ ಕೊಚ್ಚಿದ 7 ನಂದನ ರಾಣಿಗೆ ಮೆಚ್ಚಿದ ತಾಯಚಂದದ ಕೈಗಳಿಂದುಚ್ಚಿದಇಂದೆನ್ನ ಮನೆಯೊಳು ಸಚ್ಚಿದಾ-ನಂದ ಹಿಡಿಯೆ ಕೈಯ್ಯ ಕಚ್ಚಿದ 8 ಕಣ್ಣೊಳು ಪಾಲನುಗುಳಿ ಪೋದ ಈಚಿಣ್ಣಗೆ ನೋಡಿದೆ ವಿನೋದಮಣ್ಣಮೆದ್ದಖಿಳವ ತೋರಿದ ಕೃಷ್ಣಸಣ್ಣ ಬಾಯನು ಮುಚ್ಚಿ ಮಗುವಾದ 9 ಕುಸುಮವೆತ್ತ ಖಡುಗ ವೆತ್ತ ಈಹಸುಗೂಸು ಎತ್ತ ಪರ್ವತವೆತ್ತಹಸಿವು ತೃಷೆಯ ಬಿಟ್ಟು ಗಿರಿಯ ಪೊತ್ತ ಈಶಶಿಮುಖಿ ಜನಕಿವನು ಸುಖವಿತ್ತ10 ಮೂರು ಲೋಕವಾಳುವ ಸಖಿಯರ ಗಂಡ ನೀಲ-ವರ್ಣನು ತೊಂಡರತೊಂಡ ಬಾಲಕನೀತಸರ್ವೇಶ ಕಂಡಾ ಇವಕೀಳೆಂದವ ಜಗದಲಿ ಭಂಡ 11 ಅರಳೆಲೆ ಮಾಗಾಯಿ ಮುಂಗೈಯ್ಯಲಿಟ್ಟುಸರಭಂಗಿ ಕೂಡಿ ತ್ರಿಭಂಗಿಯವರವೇಣುವನು ತನ್ನಂಗೈಯಲಿಟ್ಟ-ಧರದಲ್ಲೂದಿದ ನಮ್ಮ ರಂಗಯ್ಯ12 ಪಶುಪಕ್ಷ್ಷಿಗಳು ತರತರದಲ್ಲಿಎಸೆವ ಗೀತವ ಕೇಳಿ ವನದಲ್ಲಿಹಸುಳೆಯ ನೆನೆಯುತ್ತ ಮನದಲ್ಲಿ ಪರ-ವಶವಾದುವು ಆಕ್ಷಣದಲ್ಲಿ13 ಕೊಳಲೂದಿ ಸುರರನ್ನು ಸೋಲಿಸಿದ ರಾಗಕಲೆಗಳಿಂದೆಲ್ಲವ ಒಲಿಸಿದಇಳೆಯೊಳು ಗೀತವ ಕಲಿಸಿದ ಇಂತುಒಲಿದು ವಿಠಲ ನಮ್ಮ ಪಾಲಿಸಿದ14 ತÀರುಲತೆಗಳು ಪುಳಕಿತವಾಗೆ ಈಚರ ಪ್ರಾಣಿಗಳೆಲ್ಲ ಸ್ಥಿರವಾಗೆಹರಿಯ ವೇಣುನಾದ ಹೊಸಬಗೆ ಅತಿಹರುಷವ ನೋಡಲೈದಿದೆವೀಗ 15 ಚೆಲ್ಲಿದ ಕೈಯಿಂದಮಲ ನೀರ ನಮ್ಮೆಲ್ಲರ ನೀರಿಗಂಜನು ಧೀರನಲ್ಲ ನಾವಂದ ಮಾತನು ಮೀರನಿವಸುಲಭನೊಮ್ಮೆ ಮೊಗವ ತೋರ 16 ಪಾಲನೊಲೆಯೊಳಿಟ್ಟು ಪೋದೆವು ಈಕಾಲಭೂಷಣ ಕೈಗಾದವುಬಾಲರ ಕೆಲರು ಮರೆತು ಪೋದೆವು ಗೋ-ಪಾಲ ಸಂಗಕ್ಕೆ ಮರುಳಾದೆವು 17 ಉಂಬುವರಿಗೆ ಬಡಿಸಲಿಲ್ಲ ಪತಿಎಂಬುವನಾಜ್ಞೆಯೊಳಗೆ ನಿಲ್ಲದೆನಂಬಿದೆವು ನಾವು ಹರಿಯಲ್ಲದೆ ಅನ್ಯರೆಂಬುದು ಭಕ್ತ ವರ್ಗಕೆ ಸಲ್ಲದೆ18 ಧೇನು ಮಾತ್ರದಿಂದ ಫಲವೇನು ಕಾಮ-ಧೇನು ಶ್ರೀಕೃಷ್ಣನ್ನ ಕರೆದೆನುಮಾನಿನಿ ಮೊದಲು ಕರೆವಧೇನು ಬಿಟ್ಟುಜಾಣೆ ಸೇರಿದಳು ಕೃಷ್ಣನ ಪದವನು 19 ಶಿಶುವ ಬಿಟ್ಟೊಬ್ಬಳು ನಿಜಕನ್ಯೆತನದೆಸೆಯ ತೋರಿಸಬಂದಳಚ್ಚುತನ್ನಎಸೆವ ಶ್ರೀಪತಿ ತನ್ನ ರಮಣನು ಎಂದುಸುಟಳು ಮೊದಲಾಳ್ದ ಗಂಡನ 20 ಲಲನೆ ಕಣ್ಣಂಜನವಬಿಟ್ಟಳು ಜ್ಞಾನಚೆಲುವನಂಜನಕೊಡಂಬಟ್ಟಳುಒಲೆಯಪಾಲಗ್ನಿಗೆ ಕೊಟ್ಟಳು ಕೃಷ್ಣ-ಗೊಲಿದಧರ ಮನವಿಟ್ಟಳು21 ಇಂತು ತೊರೆದು ವಿಷಯಂಗಳ ಆ ಶ್ರೀ -ಕಾಂತನೆ ಕಾವ ಜಗಂಗಳಚಿಂತೆಯ ತೊರೆದೆವು ಮಂಗಳ ಲಕ್ಷ್ಮೀ -ಕಾಂತನೆ ಕಾಯೊ ಜಗಂಗಳ 22 ಕೇಶಿಯೆಂಬ ದೈತ್ಯನ ಕೊಂದ ಖಳನಾಶದಲಿ ಸದಾ ಮುಕುಂದಆ ಸಮಯದಲಿ ಅಕ್ರೂರ ಬಂದ ಅವಂಗೆಲೇಸÀಪಾಲಿಸಿ ಕೃಷ್ಣ ನಡೆತಂದ 23 ಮಧುರೆಯಲಿ ಮಲ್ಲರ ಸೋಲಿಸಿದ ತನ-ಗಿದಿರಾದ ಕಂಸÀನನೊರೆಸಿದಕದನಕೋಲಾಹನೆನಿಸಿದ ನಮ್ಮಮದನಶರಕೆ ಗುರಿಮಾಡಿದ24 ಎಲ್ಲ ದೇವರನಿವ ಮೀರಿದ ಸಖಿಬಲ್ಲವರಿಷ್ಟವ ಬೀರಿದಕಲ್ಲಕಂಬದಿ ಬಂದು ತೋರಿದ ಖಳರೆÉಲ್ಲಿದ್ದರಲ್ಲಿಗೆ ಹಾರಿದ 25 ದಯದಿಂದ ಸಖನಮಗಾದವ ಚೆಲ್ವಹಯವದನ್ನ ಕೃಪೆಯಾದವನಯದಿ ಜಲವ ಪೊಕ್ಕು ಪೋದವ ವೈ-ರಿಯ ಕೊಂದು ವೇದವ ಕಾಯ್ದವ 26
--------------
ವಾದಿರಾಜ
ತಂದೆ ಮುದ್ದುಮೋಹನ ದಾಸರಾಯರ ಪದವ ಪೊಂದಿದವರಿಗೆ ಕಷ್ಟವೆ ಪ. ಬಂಧನವ ಪರಿಹರಿಸಿ ಸಿಂಧುಶಯನನ ಮೂರ್ತಿ ತಂದು ತೋರುವರು ಮನದಿ | ಮುದದಿ ಅ.ಪ. ಅತಿಶಯದ ತಪದಿಂದ ಪತಿತ ಪಾವನನಂಘ್ರಿ ಮತಿವಂತರಾಗಿ ಭಜಿಸಿ ಪೃಥುವಿಯೊಳಗವತರಿಸಿ ಯತನವಿಲ್ಲದೆ ಕರ್ಮ ಪಥವನ್ನೆ ಕೊನೆಗಾಣಿಸಿ ಪತಿತರಿಗೆ ಅಂಕಿತವ ಹಿತದಿಂದ ಬೋಧಿಸಿ ಅತಿ ಅದ್ಭುತವ ತೋರಿಸಿ ಸುತರಂತೆ ಶಿಷ್ಯರನು ಹಿತದಿಂದನುಗ್ರಹಿಸಿ ಗತಿಯ ಮಾರ್ಗವ ತೋರ್ವರು | ಇವರು 1 ದೇವತೆಗಳೊಡೆಯರು ಪಾವಮಾನಿಗೆ ಪ್ರಿಯರು ಭೂವಲಯದೊಳು ಮೆರೆವರು ಆವಕಾಲದಲಿ ಸುಖಾನಂದಭೋಗಿಗಳು ಪಾವನ ಸುಚರಿತ್ರರು ದೇವ ನರಹರಿ ಕರುಣ ಪೂರ್ಣವಾಗಿ ಪಡೆದು ಭಾವಶುದ್ಧಿಯಲಿಪ್ಪರು ಈ ವಿಧದ ಇವರ ಚರ್ಯೆಯನರಿಯುವರನರಿಯೆ ಕಾವ ಭಕ್ತರ ಕರುಣಿಯ | ದೊರೆಯ 2 `ತ' ಎನಲು ತಪಸಿಯಹ `ದೇ' ಎನಲು ದೇಹ ಶುದ್ಧಿ `ಮು' ಎನಲು ಮುಕ್ತನಾಗ್ವ `ದು' ಎನ್ನಲು ದುರ್ಜನರು ದೂರವಾಗಿರುತಿಹರು `ಮೋ' ಎನಲು ಮೋಕ್ಷದಾರಿ `ಹ' ಎನಲು ಹರಿಬಂದು `ನ' ಎನಲು ನರ್ತಿಸುವ `ದಾ' ಎನಲು ದಾರಿದ್ರನಾಶ `ಸ' ಎನಲು ಸತ್ವಗುಣಿ `ರಾಯ' ಎನೆ ಪದವಾಳ್ವ `ರು' ಎನಲು ಋಜುಮಾರ್ಗಿಯು | ಸುಖಿಯು 3 ಈ ರೀತಿಯಿಂ ತಂದೆ ಮುದ್ದುಮೋಹನದಾಸ ರಾ - ಯರೆಂತೆಂದು ಜಪಿಸೆ ಪಾರುಗಾಣಿಸಿ ಭವದ ಬಂಧನವ ಬಿಡಿಸುವರು ದೇವಾಂಶ ಸಂಭೂತರು ಕಾರುಣ್ಯ ನಿಧಿಗಳು ತೋರುವರು ಹರಿಮಾರ್ಗ ಸಾರಿ ಭಜಿಪರಿಗೆ ಸತತ ನಾರಸಿಂಹನ ಚರಣ ಸೇರಿಸಿ ಹೃದಯದಲಿ ಸೂರೆಗೊಂಡಿಹರು ಮುಕ್ತಿ | ಸುಕೀರ್ತಿ 4 ಅಪಾರ ಅದ್ಭುತದ ಕರ್ಮಗಳ ನಡೆಸಿಹರು ಪಾಪಿ ಜನಗಳ ಪೊರೆವರು ರೂಪ ರೂಪಾಂತರದಿ ತೋರ್ಪರು ಸುಜನರಿಗೆ ಶ್ರೀಪತಿಯ ವರ ಭಕ್ತರು ಕೋಪತಾಪಗಳಿಂದ ನಿರ್ಲೇಪರಾಗಿಹರು ತಾಪತ್ರಯಗಳ ಕಡಿವರು ಗೋಪಾಲಕೃಷ್ಣವಿಠ್ಠಲನ ಪದಧ್ಯಾನವನು ಗೋಪ್ಯದಿಂದಲಿ ಇತ್ತರು | ಇವರು5
--------------
ಅಂಬಾಬಾಯಿ
ತಪ್ಪುಗಳೊಪ್ಪುವೆ ಎನ್ನಲಿ ತಿಮ್ಮಪ್ಪ ನೀ ಕ್ಷಮಿಸಿ ರಕ್ಷಿಸು ಕರುಣದಲಿ ಪ. ಬುದ್ಧಿ ಹೀನನಾಗಿ ಎದ್ದು ಹಾಸಿಕೆಯಿಂದ ಮೇಧ್ಯವಸ್ತುಗಳೆಲ್ಲ ತಂದು ತಿಂದು ಮಧ್ಯಾನದಲಿ ನಿದ್ರೆ ಗೈದು ಮೋಹದಲಿ ನಿ- ಸತಿ ಸಂಗ ಗೈದಿಹೆನು 1 ಗುರು ಹಿರಿಯರ ಕೆಟ್ಟ ಗರುವದಿಂದ ನೀ ಕರಿಸಿ ಲೋಭದೊಳತಿಥಿಗಳ ಬಿಟ್ಟು ಪರ ಧನವನು ನಾನಾ ತರದಿಂದ ಕೊಂಡು ಶ್ರೀ ವರ ನೀನೆ ಗತಿಯೆಂದು ಸ್ಮರಿಸಿಕೊಂಡಿಹೆನು 2 ಇಂಥಾನಂತಾನಂತ ಪಾತಕಿಗಳ ರಮಾ ಕಾಂತ ನೀ ಕ್ಷಮಿಸಲು ಶಕ್ತನೆಂದು ಚಿಂತಿಸಿ ನುಡಿದೆನು ಲಾಲಿಸಿ ಕಾಯೊ ದು- ರಂತ ಮಹಿಮ ವೆಂಕಟೇಶ ನೀ ದಯದಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ತಪ್ಪೆಣಿಸುವರೇನೋ | ತಾಮರದಳಾಕ್ಷ ಅಪ್ಪ ನೀ ಒಪ್ಪಿದರೆ ತಪ್ಪೆಲ್ಲಿ ಇಹುದೋ ಪ ಅಕ್ಕರದ ಅಜಮಿಳನು ಅಕ್ಕನಾಮಗ ನೇನೋ ಚಿಕ್ಕ ಧೃವನಾ ತಾಯಿ ಚಿಕ್ಕಮ್ಮನೇನೋ ರಕ್ಕಸಾ ಸುತ ನಿನಗೆ ರೊಕ್ಕ ಕೊಟ್ಟನೊ ಎನೋ ಇಕ್ಕಿ ನೀ ಭವದೊಳಗೆ ಹೀಂಗೆ ನೋಡುವರೇನೋ 1 ಅಂತ್ಯಜಳ ಕೂಡಿ | ಅನಂತ ಕರ್ಮವ ಮಾಡಿ ಅಂತರದಿ ನಿನ್ನೊಮ್ಮೆ ನೆನೆದನೇ ನೋ ಅಂಥ ಶೊಬಚನ ಮಗಳ ಕಾಂತನೆಂದೆನಿಸಿದೀ ಕಂತು ಪಿತನೇ ನಿನ್ನ ಕರುಣವಿದ್ದರೆ ಸಾಕೊ 2 ನಾಮಾಡಿದಪರಾಧ ನೀಕ್ಷಮಿಸದಿದ್ದರೆ ಯಾರು ಪೊರೆವರೊ ಎನ್ನ ವಾರಿಜಾಕ್ಷ ಧೀರ ನರಸಿಂಹ ವಿಠಲ ನಿನ್ನಾಧೀನಳಾದೆನೋ ಇನ್ನೇನು ಮಾಡಿದರು ಮಾಡೋ ನೀನು 3
--------------
ಓರಬಾಯಿ ಲಕ್ಷ್ಮೀದೇವಮ್ಮ
ತಾಯಿತಂದೆಯರಿಗೆ ನಮನ (ವಾರ್ಧಕ ಷಟ್ಪದಿ) ಆನಮಿಪೆ ಮಾತೆ ಪಿತರರ್ಗೆ ಪ ಆನಮಿಸಿ ಈರ್ವರಿಗೆ | ಜ್ಞಾನ ಸಾಧನ ದೇಹದಾನ ಮಾಡ್ದದಕವರ | ಧೇನಿಸುತ ಪದವನಜಗಾನ ಮಾಡುವೆ ವಂಶದ ಅಕ್ಷೀಣ ವಾರ್ತೆಗಳ ಕೇಳ ಬಯಸುವರಾಲಿಸಿ ಅ.ಪ. ವಿಸ್ತರದ ಕೀರ್ತಿಯುತ | ಚಿತ್ತೂರು ಕೃಷ್ಣಾಖ್ಯರಿತ್ತ ಮಹಿ ಶೂರೊಳಗೆ | ನೆಲೆಸುತ್ತ ತಮ ಧರ್ಮಪತ್ನಿಯಲಿ ಚತುರ ಕುವ | ರರ ಪಡೆದು ಚತುರರಂಗೆಅಯ್ಯುತಿರೆ ವಿಧಿವಶದಲಿ |ಪೆತ್ತ ಪಿತ ಪರಪುರಕಡರೆ ಮಾತೆ ಕಡೆ ಕುವರಗೆತ್ತಣದು ವಿದ್ಯೆ ಎಂ | ದೆನ್ನಿಸದೆ ಸಲಹುತ್ತಉತ್ತಮರು ಬಕ್ಷಿತಿರು | ಮಲರ ವಂಶೋದ್ಭೂತ ಸುಬ್ಬರಾಯರ ಕುವರಿಯ 1 ಕಾಲ ಕಳೆಯುತಿರಲು 2 ಪತಿ ವಿಯೋಗವು ಆಯ್ತುಮಾರಿ ಕೋಪದ್ರವದಿ | ಮಾರಿ ಕಣಿವೆಲಿ ಪ್ರಥಮ ಅಪಮೃತ್ಯು ಸಂಭವಿಸಲು |ತಾರುಣ್ಯ ಉರುತರ | ವ್ಯಸನದಿಂ ನೂಕುತ್ತಪೋರನಭಿವೃದ್ಧಿಗಿ | ನ್ನೇನುಗತಿ ಎಂದೆನುತನಾರಾಯಣ ಸ್ಮರಣೆ | ಪರಿಪರಿಯಗೈಯ್ಸುತ್ತ ನಿಟ್ಟುಸಿರ ಬಿಡುತ್ತಿದ್ದಳು 3 ನಾಲ್ಕಾರು ವರುಷಗಳು | ದಾಯಾದ್ಯರೊಳು ದುಡಿದುನಾಲ್ಕೆಂಟು ಕಡುಕ್ರೂರ | ವಾಕ್ಕುಗಳ ಸಹಿಸುತ್ತಪ್ರಾಕ್ಕು ಕರ್ಮದ ಫಲವ | ಮುಕ್ಕಲೇಬೇಕೆಂಬ ವಾಕ್ಕುಗಳ ಮನ್ನಿಸುತಲಿ ||ನೂಕುತಿರೆ ಕೆಲಕಾಲ | ತೋಕಗಾಯ್ತುಪನಯನಕಾಕು ಮಾತುಗಳಾಡಿ | ನೂಕಲೂ ಗೃಹದಿಂದಆ ಕುಮಾರ ಧೃವನ | ನೂಕಿದಾಪರಿಯಾಯ್ತು ಎಂದೆನುತ ಹೊರ ಹೊರಡಲು 4 ಭವ ತರಣ | ಧವಣೆಯಲಿ ಕುವರಂಗೆ ವೈವಾಹ ತಾವಿರಚಿಸಿ 5 ಭಾಗವತ ವತ್ಸರ ವಸಿತ ದ್ವಿತಿಯ ತೃತಿಯ ತಿಥಿ ಹರಿ ಸ್ಮøತಿಲಿತನು ವಪ್ಪಿಸಿದಳು 6 ಭಾರತೀಶ ಪ್ರಿಯಗಭಿನ್ನಾತ್ಮನಮೊ ಗುರು ಗೋವಿಂದ ವಿಠ್ಠಲನ ದಾಸ ದಾಸಿಯರಿಗೇ ನಮೊ ಎಂಬೆನು 7
--------------
ಗುರುಗೋವಿಂದವಿಠಲರು
ತಿಳೀಮನವೇ ತಿಳೀಮನವೇ ತಿಳೀಮನವೇ ತಿಳಿ ಸಂಪೂರ್ಣ ಸುಖತಾಣಾ ತಿಳಿ ಸಂಪೂರ್ಣ ಸುಖತಾಣಾ ಸಾವಿನ ಬಾಧೆಯ ನೀಗುವಿ ನಿಜವಾಗೀ ಸಾವಿನ ಬಾಧಾ ಭಾವಾತೀತನ ನೀ ತಿಳೀಮನವೇ ಪ ನೋಡು ನೀನೇ ಆತ್ಮಸ್ವರೂಪಾ ಪೇಳಿದ ಗುರುಭೂಪಾ ಪೇಳ್ದೆ ಗುರುಭೂಪಾ ದೂಡು ದೇಹಾದಿಗಳ ತಾಪಾ ನೋಡುನಿಜರೂಪಾ ನೀ ನುಡಿಮನಗಳಿಗೂ ಕಡೆಯಾಗಿರುವ ಅಡಗಿದ ಗೂಢವಿದು ತಿಳೀಮನವೇ 1 ಕರ್ಮ ಪಾಶಕೆ ಕಠಾರಿಯಿದು ಜ್ಞಾನಾ ಮರ್ಮವಿದು ಘನಶಾಂತಿಯಾ ಸ್ಥಾನಾ ಧರ್ಮಾಧರ್ಮವ ಮೀರಿಹ ತಾಣ ದುರ್ಮತಿಯಾ ಬಿಡು ಜಾಣಾ ಘೋರತರದ ಸಂಸಾರದ ನಾಶಾ ಪೂರಣಗೊಂಬುದು ಆಶಾ ಪರಾಶಾಂತಿಗಿನ್ನೊಂದನು ಕಾಣೆ ಗುರುಶಂಕರನಾಣೇ ಗುರುಶಂಕರನಾಣೇ ತಿಳೀಮನವೇ 2
--------------
ಶಂಕರಭಟ್ಟ ಅಗ್ನಿಹೋತ್ರಿ
ತುಳಸಿಯ ಸೇವಿಸಿ ಪ ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆ ಗಾತರದ ಮಲವಳಿದು ಮಾತೆ ಯೆಂಬನಿತರೊಳು ಮಾಡುವಳು ಯಾತಕನುಮಾನವಯ್ಯ ಅ.ಪ. ಸುಧೆಗಡಲ ಮಥಿಸುವ ಸಮಯದಲಿ ವೈದ್ಯನಾಗಿ | ಪದುವನಾಭನು ತಾನು ಉದುಭವಿಸಿ ಬರಲಂದು | ಉದಕವುತ್ಸಹದಿಂದಲದೆ ತುಳಸಿ ನಾಮನಾಗೆ || ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು | ಒದಗಿ ಸುಜನರು ತಮ್ಮ ಸದನದಲಿ ನಿತ್ಯ ತಿಳಿದು ವೃಂದಾವನ ರಚಿಸಿದರೈಯ1 ಮೂಲದಲಿ ಸರ್ವ ತೀರ್ಥಗಳುಂಟು ತನ್ಮದ್ಯೆ | ಕಾಲ ಮೀರದೆ ಸರ್ವ ನದನದಿಗಳಮರಗಣ | ಮೂರತಿಯು ವಾಲಯವಾಗಿಪ್ಪುದು || ಮೂರ್ಲೋಕಗಳ ಧರ್ಮ ವ್ರತಕೆ ಮಿಗಿಲೆನಿಸುವುದು | ನೀಲಮೇಘಶ್ಯಾಮಗರ್ಪಿಸಿದ ತುಳಸಿ ನಿ | ಧರಿಸಿದ ಮನುಜ ಕಾಲನಾಳಿಗೆ ಶೂಲನೊ2 ಉದಯದೊಳಗೆದ್ದು ನೀರೆರೆದು ಮಜ್ಜನಗೈದು | ತುದಿ ಬೆರಳಿನಿಂದ ಮೃತ್ತಿಕೆಯ ಫಣಿಯೊಳಗಿಟ್ಟು | ತದನಂತರದಲಿ ಭಜನೆ || ವದನದೊಳು ಗೈಯೆ ಧರೆಯೊಳಗಿದ್ದ ಸರ್ವವದ | ನದಿಗಳಿಗೆ ನೂರ್ಮಡಿ ಯಾತ್ರೆ ಮಾಡಿದ ಫಲ | ಜನ್ಮಗಳಘವ ತುದಿ ಮೊದಲು ದಹಿಪುದಯ್ಯ3 ಆವವನ ಮನೆಯಲ್ಲಿ ತುಳಸಿ ಸಾಲಿಗ್ರಾಮ | ಆವವನ ಮನೆಯಲ್ಲಿ ಹರಿದಾಸರಾ ಕೂಟ | ಪಾವಮಾನಿಯ ಮತದೊಳು || ಆವವನು ಕಾಂತ್ರಯವ ಕಳೆವ ನಾವಲ್ಲಿ | ವಾಸುದೇವ ಮುನಿ ದೇವಾದಿಗಣ ಸಹಿತ | ಭಾವಿಸಿರಿ ಭಾವಙ್ಞರು 4 ಕಂಡರೆ ದುರಿತಕ್ಕೆ ಕೆಂಡವನು ಬೀರುವುದು | ಕೊಂಡಾಡಿದರೆ ಪುಣ್ಯವ ಪರಿಮಿತವುಂಟು ಮೈ-| ಜನನವಿಲ್ಲ ಸಲೆ ದಂಡ ವಿಟ್ಟವ ಮುಕ್ತನೊ || ಚಂಡಾಲ ಕೇರಿಯೊಳು ಇರಲು ಹೀನಯವಲ್ಲ | ಪಾಂಡುರಂಗ ಕ್ಷೇತ್ರ ಸರಿಮಿಗಿಲು ಎನಿಸುವುದು | ಯೋಗ್ಯ ಫಲ ಕಂಡವರಿಗುಂಟೆ ಅಯ್ಯ5 ಚಿತ್ತ ಶುದ್ದನು ಆಗಿ ಮುಂಝಾನೆಯೊಳು ತುಳಸಿ | ಸ್ತೋತ್ರವನೆ ಮಾಡುತ್ತ ದಿವ್ಯಾವಾಗಿಹ ತ್ರಿದೊಳ | ತುಂಬಿ ವಿತ್ತಾದಿಯಲಿ ತಾರದೆ || ಮತ್ತೆ ವಸ್ತ್ರದಿ ಹಸ್ತ ಶಿಲೆಯರ್ಕ ಏರಂಡ | ಪತ್ರದಲಿ ತಾರದಲೆ ಭೂಮಿಯೊಳಗಿಡದೆ ಪೂ - | ತರಬೇಕು ಹೊತ್ತು ಮೀರಿಸಲಾಗದೊ6 ಕವಿ ಮಂಗಳವಾರ ವೈಥೃತಿ ವ್ಯತೀಪಾತ ರವಿ ಶಶಿಯ ಸಂಗಮ ಪರ್ವಣಿ ಪುಣ್ಯಕಾಲ ಇವುಗಳಲಿ ತೆಗೆಯಾದಿರಿ ನವವಸನ ಪೊದ್ದು ಊಟವ ಮಾಡಿ ತಾಂಬೂಲ- ಸವಿಯುತ್ತ ಮುಟ್ಟದಿರಿ ಯುವತಿ ಶೂದ್ರರಿಂ ತರಿ ಕೊಂಡಾಡುತಿರಿ ದಿವಸಗಳೊಳಯ್ಯ 7 ದಳವಿದ್ದರೇ ವಳಿತು ಇಲ್ಲದಿದ್ದರೆ ಕಾಷ್ಟ ಎಲೆ ಮೃತ್ತಿಕೆಗಳಿಂದ ಪೂಜೆ ಮಾಡಲಿಬಹುದು ತೊಳೆ ತೊಳೆದು ಏರಿಸಲಿಬಹುದು ತುಳಸಿ ಒಣಗಿದ್ದರೂ ಲೇಶದೋಷಗಳಲ್ಲಿ ತುಳಸಿ ವಿರಹಿತವಾದ ಪೂಜೆಯದು ಸಲ್ಲದು ಮಾಡಿ ಜಲಜಾಕ್ಷನರ್ಚಿಸಿರೈಯ್ಯ 8 ಸದನ ಹೊಲೆಮಾದಿಗರ ಸದನ ತುಳಸಿ ಇಲ್ಲದ ಬೀದಿ ನರಕಕೆಳಸುವ ಹಾದಿ ವ್ಯರ್ಥ ತುಳಸಿ ಬಲು ಪ್ರಾಧಾನ್ಯವೊ ತುಳಸಿ ಮಿಶ್ರಿತವಾದ ನೈವೇದ್ಯ ಗತಿಸಾದ್ಯ ತುಳಸಿ ಧರಿಸಿದ ದೇಹ ಪರಮ ಸಾರ್ಥಕವಯ್ಯ ನೆಲೆಯ ನಾ ಕಾಣೆನಯ್ಯ9 ಸತಿ ಪ್ರಹ್ಲಾದ ನಾರದ ವಿಭೀಷಣನು ಧ್ರುವ ಅಂಬರೀಷ ಶಶಿಬಿಂದು ರುಕ್ಮಾಂಗದನು ವಿವರವನು ತಿಳಿದರ್ಚಿಸಿ ತವಕದಿಂ ತಂತಮ್ಮ ಘನ ಪದವನೈದಿದರು ಭುವನದೊಳಗುಳ್ಳ ನಿರ್ಮಲ ಜನರು ಭಜಿಸಿದರು ನೀಗಿ ಭವದೊರರಾದರೈಯ 10 ಉದಯಕಾಲದೊಳೆದ್ದು ಆವನಾದರು ತನ್ನ ಹೃದಯ ನಿರ್ಮಲನಾಗಿ ಭಕುತಿಪೂರ್ವಕದಿಂದ ಸ್ತೋತ್ರಮಾಡಿದ ಕ್ಷಣಕೆ ಮದ ಗರ್ವ ಪರಿಹಾರವೊ ಇದೆ ತುಳಸಿ ಸೇವಿಸಲು ಪೂರ್ವದ ಕಾವೇರಿ ನದಿಯ ತೀರದಲೊಬ್ಬ ಭೂಸುರ ಪದಕೆÉ ವ್ಯೋವ ಸಿರಿ ಪ್ರಿಯಳಾದ ಮದನತೇಜಳ ಭಜಿಸಿರೈದು 11
--------------
ವಿಜಯದಾಸ
ತೇಲಿದೆ ಅಯ್ಯಾ ತೇಲಿದೆ ಪ ತೇಲಿಬಾರದಂಥ ಸುಳಿಯ ಮಡುವುಮುಳುಗಿ ನೀಲಶಾಮನ ಪಾದಕಮಲಕರುಣದಿಂದ ಅ.ಪ ಪಾರಾವಾರಿಲ್ಲದ ಮಡುವು ಕಾಲು ಜಾರಿ ಬಿದ್ದಿದ್ದೆ ತಪ್ಪಿದಡವು ಬಲು ಮೇರೆದಪ್ಪಿದ ತೆರೆ ಸೆಳವು ಉಲಿ ದ್ಹಾರಿಬರುವ ಜಲಚರವು ಆಹ ಮೀರಿದಂಧಕಾರ ನೀರಿನ ಸುಳಿಯೊಳು ಘೋರಬಡುತಲಿರ್ದೆ ಮುಳುಮುಳುಗೇಳುತ 1 ತಂಡತಂಡದಿ ಒದಗುವ ಬಲು ಗಂಡಸುಳಿಯು ತಿರುಗುವ ಒಳ ಗೊಂಡ ಮತ್ಸ್ಯಮಕರಿಭಯವ ಆಹ ಕಂಡು ಕಾಣದೆ ಬಿದ್ದು ಗುಂಡಿಗೊಡೆದು ನಾನು ಬೆಂಡಾದೆ ಕಂಗೆಟ್ಟು ಮುಳುಮುಳುಗೇಳುತ 2 ಹಿಂದಕ್ಕೆ ಏನಾದದ್ದಾಯ್ತು ಶ್ರೀಶ ಮುಂದೆ ಎನ್ನಗೆ ಇಂಥ ಹೊತ್ತು ಈಶ ಎಂದೆಂದು ತರದಿರು ಮತ್ತು ಕೇಶ ಕಂದನ ಸನ್ಮಾರ್ಗಕ್ಹೊತ್ತು ಆಹ ಸಿಂಧುಶಯನ ಎನ್ನ ತಂದೆ ಶ್ರೀರಾಮ ನಿನ್ನ ಬಂಧುರಂಘ್ರಿಯ ಕೃಪೆಯಿಂದ ನಾ ಉಳಕೊಂಡೆ 3
--------------
ರಾಮದಾಸರು
ದಯದಿ ಎಮ್ಮನು ಸಲಹ ಬೇಕಯ್ಯ | ಮಳಖೇಡ ನಿಲಯ ದಯದಿ ಎಮ್ಮನು ಸಲಹ ಬೇಕಯ್ಯ ಪ ದಯದಿ ಎಮ್ಮನು ಸಲಹ ಬೇಕೈ | ವಿಯದಧಿಪ ಸದ್ದಂಶ ಸಂಭವ ಭಯ ವಿದೂರನ ತೋರು ಎನುತಲಿ | ಜಯ ಮುನೀಂದ್ರನೆ ಬೇಡ್ವೆ ನಿನ್ನನು ಅ.ಪ. `ಇಂದ್ರಸ್ಯನು ವೀರ್ಯಾಣ’ ಎಂದೆನುತ | ಇತ್ಯಾದಿಋಕ್ಕುಗಳಿಂದ ಬಹುತೆರೆ ನೀನು ಪ್ರತಿಪಾದ್ಯ ||ಅಂದು ಮೇಘದ ಜಲವು ಬೀಳದೆ | ಬಂಧಗೈದಹಿನಾಮ ದೈತ್ಯನಕೊಂದು ಉದ್ಧರಿಸಿರುವ ಪರಿಯಲಿ | ಮುಂದೆ ದುರ್ವಾದಿಗಳ ಖಂಡಿಪೆ 1 ವಾಲಿಯಂದದಿ ದೃಷ್ಟಿಮಾತ್ರದಲಿ | ಶತೃಗತಬಲಲೀಲೆಯಿಂದಪಹರಿಪೆ ನಿಮಿಷದಲಿ ||ಕಾಲ ತ್ರೇತೆಯಲಂದು ದುಷ್ಟರ | ವಾಲಿರೂಪದಿ ವಾರಿಸಿದ ಪರಿಕಾಲ ದ್ವಾಪರದಲ್ಲಿ ಪ್ರಾರ್ಥನೆ | ಲೀಲೆ ರೂಪಿಯು ಕೃಷ್ಣಸೇವಕ 2 ದೃಷ್ಟಿ ಮಾತ್ರದಿ ಕರ್ಣಗತ ಬಲವ | ಅಪಹರಿಸಿ ನೀನುಕ್ಲಿಷ್ಟ ಯುದ್ಧದಿ ಗಳಿಸಿ ನೀ ಜಯವ ||ಶ್ರೇಷ್ಠ ಕರ್ಣನ ಅಸುವ ಕೊಳ್ಳುತ | ಸುಷ್ಠು ಅರಿಬಲ ನಾಶಮಾಡುತಭ್ರಷ್ಟ ಕೌರವನೀಗೆ ದುಃಖದ | ಕೃಷ್ಣಗರ್ಪಿಸಿ ಕೈಯ್ಯ ಮುಗಿದೆಯೊ 3 ಕಾಲ ಕಲಿಯುಗದಲ್ಲಿ ಬಲ ಭೀಮ | ಮಧ್ವಾಭಿಧಾನದಿಮೂಲ ಮೂವತ್ತೇಳು ಸೂನಾಮ ||ಭಾಳ ಗ್ರಂಥಗಳನ್ನೆರಚಿಸೀ | ಕಾಲಟಿಜಕೃತಮಾಯಿ ಮತವನುಲೀಲೆಯಿಂದಲಿ ಖಂಡಿಸುತ್ತ | ಪಾಲಿಸುತ್ತಿರೆ ಸುಜನರನ್ನು 4 `ವೃಷಾಯ ಮಾಣೆಂಬ` ಋಕ್ಕಿನಲಿ ದೇವ ಇಂದ್ರಗೆವೃಷಭದಾಕೃತಿ ಪೇಳಿಹುದು ಅಲ್ಲಿ ||ವೃಷಭ ನೀನಾಗಂತೆ ಕಲಿಯಲಿ | ಎಸೆವ ಶ್ರೀ ಮನ್ಮಧ್ವ ಗ್ರಂಥದಹಸಿಬೆ ಚೀಲವ ಹೊತ್ತು ತಿರುಗುತ | ಅಸುಪತಿಯ ಸೇವಿಸಿದ ಮಹಿಮ5 ಅಗಸ್ತ್ಯ ಮುನಿ ಸಕಲ ತೀರ್ಥಗಳ | ಸಂಗ್ರಹಿಸಿ ಕರದಿಸಾಗಿ ಗಿರ್ಯಾನಂತ ಕಮಂಡೂಲ ||ವೇಗ ಕೆಳಗಿಟ್ಟಾಚಮನ ಅಲ್ಪ | ಕಾಗಿ ಸ್ವಲ್ಪವುದೂರ ಪೋಗಲುಕಾಗೆ ರೂಪದಿ ಬಂದು ಇಂದ್ರನು | ವೇಗ ಉರುಳಿಸೆ ಜಲವು ಹರಿಯಿತು 6 ದೆವರಾಜನು ಕಾಣಿಸಿ ಕೊಳಲು | ಮುನಿಯು ಆಕ್ಷಣದೇವ ಕಾರ್ಯದ ಭಾವ ತಿಳಿಯಲು ||ಓವಿ ತತ್ಕಾಗಿಣಿಯ ನಾಮದಿ | ಭೂವಲಯದೊಳ್ಬಾತಿಸಲಿ ಎನೆತೀವರಾಶೀರ್ವಾದ ದಿಂದಲಿ | ಪಾವನವು ತತ್ ಕ್ಷೇತ್ರ ವಾಯಿತು 7 ಪಾಂಡು ಮಧ್ಯಮನಾದ ಅರ್ಜುನನು | ಇಲ್ಯುದಿಸಿ ಪೊತ್ತಧೋಂಡು ರಘುನಾಥ ಪೆಸರನ್ನು || ಗೊಂಡು ನಾಯಕ ತನವ ಅಶ್ವಕೆ | ಅಂಡಲೆದು ಬರುತಿಲ್ಲಿ ಬಿಸಿಲಲಿ ಉಂಡು ಉಂಬುದ ಜಲವ ಪಶುಪರಿ | ಕಂಡು ಮುನಿ ಅಕ್ಷೋಭ್ಯ ಬೆಸಸಿದ 8 ಸ್ವಪ್ನ ಸೂಚಿಸಿದಂತೆ ಮುನಿಶ್ರೇಷ್ಠ | ನೀರ್ಗುಡಿದವ ನರೆ ಬಪ್ಪುವನು ತಮ ಪೀಠಕೆನ್ನುತ್ತ || ಸ್ವಲ್ಪ ಹಾಸ್ಯದಿ ಪಶುವು ಪೂರ್ವದಿ | ಒಪ್ಪುವೆಯಾ ನೀನೆನ್ನ ಸಾದಿಗೆ ನೆಪ್ಪು ಬಂದುದು ವೃಷಭ ಜನ್ಮದಿ | ಕೃಪ್ಪೆಗೈದಿಹ ಮಧ್ವರನುಗ್ರಹ 9 ಸಾದಿ ಭೂಪನು ಕಳುಹಿ ತನ್ನ ಸೈನ್ಯ | ಅಕ್ಷೋಭ್ಯ ಮುನಿಪರ ಪಾದಕೆರಗುತ ಆಶ್ರಮವು ತುರ್ಯ ||ಮೋದದಿಂದ್ಯಾಚಿಸಲು ಮುನಿವರ | ಆದಿಯಿಂದಲಿ ಬಂದ ಪೀಠಕೆಸಾದರದಿ ಪಟ್ಟಾಭಿಷಕ್ತನ ಗೈದು ಆಶೀರ್ವಾದ ಮಾಡಿದ 10 ಸುತನು ತುರ್ಯಾಶ್ರಮವ ಪೊತ್ತುದನ | ಕೇಳುತ್ತ ತಂದೆಅತುಳ ಕೋಪದಿ ನಿಂದಿಸಿದ ಮುನಿವರನ |ಸುತನ ಗೃಹ ಕೆಳತಂದು ಪತ್ನಿಯ | ಜೊತೆಯಲಿಡೆ ಏಕಾಂತ ಗೃಹದಲಿಅತುಳ ಸರ್ಪಾ ಕೃತಿಯ ಕಾಣುತ | ಭೀತಿಯಲಿ ಚೀರಿದಳು ಕನ್ಯೆಯು11 ಸೋಜಿಗದ ತನಯನ್ನ ಕೊಳ್ಳುತ್ತ | ಮುನಿವರರ ಬಳಿಗೆ ಯೋಜಿಸೀದನು ಕ್ಷಮೆಯ ಬೇಡುತ್ತ ||ಆರ್ಜವದ ಮುನಿ ಕ್ಷಮಿಸಿ ತಂದೆಯ | ಮಾಜದಲೆ ತಮ್ಮ ಶಿಷ್ಯಭೂಪಗೆಯೋಜಿಸಿದರನ್ವರ್ಥನಾಮವ | ಶ್ರೀ ಜಯಾಭಿಧ ತೀರ್ಥರೆನ್ನುತ 12 ಪರ ಕರಿ ಹರ್ಯಕ್ಷರಾದಿರಿ 13 ಮಧ್ವಭಾಷ್ಯಕೆ ಟೀಕೆ ರಚಿಸುತ್ತ | ಯರಗೋಳ ಗುಹೆಯಲಿಶುದ್ಧ ಭಾವದಿ ಇರಲು ಮದಮತ್ತ ||ವಿದ್ಯ ಅರಣ್ಯಭಿಧ ನೋಡೀ | ಮಧ್ವಕೃತ ಸನ್ಮಾನ ಲಕ್ಷಣಬುದ್ಧಿಗೇ ನಿಲುಕದಲೆ ಟೀಕೆಯ | ಪದ್ಧತಿಯ ಕಂಢರ್ಷಪಟ್ಟನು 14 ಮಾಧ್ವಭಾಷ್ಯವ ನೇರಿಸಿ ಗಜವ | ತಟ್ಟೀಕೆ ಅಂತೆಯೆಅದ್ಧುರೀಯಲಿ ಗೈದು ಉತ್ಸವವ ||ವಿದ್ಯವನ ಮುನಿಪೋತ್ತುಮನು ಬಹು | ಶುದ್ಧಭಾವದಿ ಗೈದು ಸಂತಸಬುದ್ಧಿಯಲಿ ಪರಿವಾರ ಸಹಿತದಿ | ಸದ್ದುಯಿಲ್ಲದೆ ಪೋದನಂದಿನ 15 ಹತ್ತೆರಡು ಮತ್ತೊಂದು ಕುಭಾಷ್ಯ | ವಿಸ್ತರದಿ ಖಂಡಿಸೆಕೃತ್ಯವೂ ಮಧ್ವಕೃತವನುವ್ಯಾಖ್ಯಾ ||ಮತ್ತಿದಕೆ ಸೂಧಾಖ್ಯ ಟೀಕವ | ವಿಸ್ತøತವು ನಿಮ್ಮಿಂದ ಜಯಮುನಿಮೊತ್ತದಿಂಧ್ಹತ್ತೆಂಟು ಗ್ರಂಥಕೆ | ಕೃತ್ಯವಾಯಿತು ನಿಮ್ಮ ಟೀಕೆಯು16 ಪಾದ ಪಾದ ತೋರ್ವುದು ||
--------------
ಗುರುಗೋವಿಂದವಿಠಲರು
ದಯಮಾಡೊ ದಯಮಾಡೋಪಯಸಾಗರದೊಡೆಯನೆ ಶ್ರೀಕೃಷ್ಣಾ ಪ ಬನ್ನಬಿಡಿಸುವರ್ಭಕನ ದುರಿತವಘನ್ನ ಮಹಿಮ ನೀಜವದಿಂ ತರದು 1 ನೀ ಪೊರಿಯದೆ ಜರಿದರೆ ಕಾಯ್ವರನಾ |ಈ ಪೊಡವಿಯೊಳೆಲ್ಲೆಲಿ ಕಾಣೇ 2 ಶೇಷಗಿರಿ ನಿಲಯ ಬಿನ್ನಪ ಲಾಲಿಸೋ |ಶ್ರೀಶ ಪ್ರಾಣೇಶ ವಿಠಲ ದಯಾಳೋ 3
--------------
ಶ್ರೀಶಪ್ರಾಣೇಶವಿಠಲರು
ದಶಾವತಾರ ಭವ ದೀನಾತ್ಮ ಜನಗಳಿಗೆ ಜ್ಞಾನಾರ್ಥವಾಗಿ ನದಿಯೋಳ್‍ಸ್ನಾನಾರ್ಥ ಮುಣಗಿರುವ ಶೋಣೀತ ಸತ್ಯವೃತ ಪಾಣೀಲಿ ಬಂದು ಭರದೀಮಾನವರಂತೆ ಮೃದು ವಾಣೀಲಿ ತನಗೆ ಭೂಸ್ಥಾನವಾಬೇಡಿ ಬೆಳೆದೂಪಾನೀಯ ಪಾತ್ರಸ್ವ ವಿಷಾಣಾದಿ ಧರಿಸಿ ರವಿ ಸೂನುನ ಮಾಡಿಹನು 1 ವೃಂದಾರಕಾರು ಬಲ ವೃಂದಾವ ಕೂಡಿ ಗಿರಿಯಿಂದಾಲೆ ಕ್ಷೀರಧಿಯನೂವಂದಾಗಿ ಮಥಿಸುತಿರೆ ಸಿಂಧೂವಿನೋಳ್ ಜರಿದು ಪೊಂದೀತು ತತ್ತಳವನೂಮಂದಾತ್ಮರಾದುಭಯ ಮಂದೀಯ ನೋಡಿ ಬೆನ್ನಿಂದಾಲೆಯೆತ್ತಿ ಸುಧೆಯಾತಂದ್ಯೋರು ರೂಪನಮರಿಂದ್ರಾರಿಗಿತ್ತು ದಿತಿಜೇಂದ್ರಾರಮೋಹಿಸಿದನು 2 ಕ್ಷೋಣೀಶ ಕ್ಷೋಣೀಯನೆತ್ತಿ ಪಥಿ ದಾನಾವತಡಿಯುತಿರಲೂನಾಸವಾತ್ಮನವನ್ಹಾನೀಯ ಮಾಡಿ ನಿಜ ಸೂನೂಗೆಒಪ್ಪಿಸಿದನುಣೇಶ ಜಾತ ನಿಜಮಾನಿನೀ ಸಹಿತ ಸಂಸ್ಥಾನಾದಿ ಕೂತುಸುಖದೀತಾನವರಾನ ಪಡಿಸಿದಾನಂದ ಭೋಗಿಸಲು ತಾ ನೋಡಿಮೋದಿಸಿದನು 3 ಶುಭ ಭರಾತೀಯ ತತ್ಸುತಗೆ ಪ್ರೀತೀಲಿಪಾಲಿಸಿದನೂ 4 ದುಷ್ಟಾತ್ಮರಿಂದ ಬಹು ದುಷ್ಟಾತ್ಮರಾಗಿ ಸುರರಿಷ್ಟಾವ ಸ್ವರ್ಗ ಸುಖವಾಬಿಟ್ಟಾವನಲ್ಲ ನಿಜ ಪೊಟ್ಟೀಯಗೋಸುಗದಿ ಕಷ್ಟಾದಿಸಂಚರಿಸಲೂದೃಷ್ಟಿಂದ ಕಂಡದಿತಿ ತುಷ್ಟೀಸುತಿರಲವಳ ಪೊಟ್ಟೀಯೊಳವತರಿಸಲೂಪುಟ್ಟಾತ್ಮ ಬಲಿಗೆ ಸುತಲಿಷ್ಟಾವ ನೀಡಿ ಸುರರಿಷ್ಟಾವಪಾಲಿಸಿದನೂ 5 ಭೂತೇಶನೊಬ್ಬ ತನ ತಾತಾನ ಕೊಂದುನವ ಮಾತೇಯನಪಹರಿಸಲೂಭೀತೀಲಿ ತಾಯಿಯುರ ಘಾತಕ್ಕ ಸದೃಶ ಭುವಿ ಧಾತ್ರೀಶದುಷ್ಕಲವನೂಘಾತೀಶಿ ಪೂರ್ವಜರ ಪ್ರೀತೀಯ ಪಡೆದು ಮುನಿ ಪೋತಾನ ರಕ್ಷಿಸುತಲೇಪಾಥೋದಿ ತಟದಿ ರಘುನಾಥೇಷ್ಟದಾತ ನಿಜ ಶಾಪಾವಭೋಗಿಸುವನೂ6 ತಾಪ ರಘುನಾಥಾನುನೋಡಿ ವಿಥಿಲಾಜಾತಾಸಮೇತ ಸಹಜಾತಾನ ಕೂಡಿ ವನಜಾತಾದಿಸಂಚರಿಸುತಾಘಾತೀಸಿ ರಾಕ್ಷಸರ ಪ್ರಿಯನಿತ್ತು ಮುನಿಪಾತ್ಮರಿಗೆಲ್ಲ ಪುರದೀಸೀತಾಸಮೇತ ಕಪಿ ಪೋತಾನ ಕೂಡಿ ನಿಜ ಭೂತಿಯಭೋಗಿಸಿದನು 7 ಕಾರಾಳಯಾದಿ ನಿಜ ನಾರೀಯ ಕೂಡುತಲೆಶೂರಾತ್ಮಜಾತನಿರಲೂನಾರಾಯಣಾತ್ಮತನು ತೋರೀಸಿ ಬಾಲವಪುಗೋರಾಜನಾಲಯದಲೀಶೀರೀಯ ಕೂಡಿ ಸುರವೈರಿಗಳಳಿದು ನದಿ ತೀರಾದಿಕೊಳಲನೂದಿನಾರೇರಿಗೆಲ್ಲ ನಿಜ ಜಾರಾಟ ಸೌಖ್ಯವನು ತೋರೀಸಿತೋಷಿಸಿದನು 8 ವೃಷ್ಣೀಯ ಮಧುರೆಯಲಿ ಪುಟ್ಟೂತ ಗಾರ್ಗಸುತನಟ್ಟೂಳಿಗಾಗಿಜಲದೀಪಟ್ಟಣ ನಿರ್ಮಿಸುತಲಿಷ್ಟಾಪ್ತ ಜನರುಗಳ ನಿಟ್ಟಲ್ಲೆ ಪಾಲಿಸಿದನುಸೃಷ್ಟೀಶಮಕ್ಕಳನು ಮುಟ್ಟೂತ ಕರದಿ ತದಭಿಷ್ಟಾರ್ಥಗಳನುಸುರಿದೂತೃಷ್ಣೇಶ ಪಾಂಡವರ ಕಷ್ಟಾವ ಕಳಿದು ಗಜಪಟ್ಟಣವಸಾಧಿಸಿದನು 9 ಪಾರ್ಥಾರ ಶಾಲೆಯೊಳು ಪೂತಾತ್ಮರಿಂದ ಹರಿ ಭೂತೀಶುಕೇಳಿ ಮನದೀಪ್ರಾತಃ ಸಮಾರಭಿಸಿ ರಾತ್ರೀಯತನಕ ಹರಿ ಮೂರ್ತೀಯಪೂಜಿಸುತಿಹಾದೈತ್ಯಾರ ನೋಡಿ ಸುರನಾಥರ ಜಯಿಸಿ ಜಿನ ಪೋತಾತ್ಮ ಮಲಗಿ ತೊಡಿಯೋಳ್‍ಶಾಸ್ತ್ರಾವ ಬೋಧಿಶ್ಚವರಾತ್ಮಾವ ಕೆಡಿಸಿ ಸುರವೈತಾವತೋಷಿಸಿದನೂ10 ಶುಭ ಸತಿ ಮಿಷ್ಟಾತ್ಮಹಯವ ಮಾಡಿಅಷ್ಟಾಷ್ಟ ಖಡ್ಗವನು ಮುಷ್ಟೀಲಿ ಪಿಡಿದು ಬಹು ಶಿಟ್ಟೀಲಿಸುತ್ಲೆ ಚರಿಸೀವಿಪ್ಲವಾತ್ಮಕ ಕಲ್ಕಿ ಖಳರ್ಹೊಟ್ಟೀಯವಡೆದು ಶುಭಪಾಲಿಸಿದನು11 ವೆಂಕಟನಾಥ ಭವಪರಿಕವ ಹರಿಸೂತ ಕಿಂಕರನಾಗಿರುವೆನೂಶಂಬಾಸುರೋದರಜ ಶಂಖಾವಪಿಡಿದು ಮುಖ ಪಂಕೇಜದಿಂದೂದುತಾಹುಂಕಾರ ಮಾಡುತಲೆ ಕಿಂಕಿರನೆಂದು ಭುವಿ ಸಂಕರ್ಷಣದಿಸುರರೂಶಂಕೀತರಾಗುತ ಭಯಂಕಾರವೆಂದು ಮಹಾತಂಕಾದಿಸಂಸ್ಮರಿಪರೂ 12 ದಂಷ್ಟ್ರೇಶ ಬ್ರಹ್ಮಾನಾಸಿ ಪುಟ್ಟೂತವಾರಿನಿಧಿ ಮೆಟ್ಟೂತಘರ್ಘವಿಸಲೂದೃಷ್ಟೀಲಿ ನೋಡಿ ಕಿವಿಗೊಟ್ಟಾಲಿಸೂತ ನಿಜಪೊಟ್ಟೀಯರಾಂತರದಲೀಯಷ್ಟೇನೊ ಸನ್ನಾವಿದು ಪುಟ್ಟೂತಲ್ಹಂದಿ ಮರಿಬೆಟ್ಟೇಶದಂತಿರುವದೂಧಿಷ್ಟ್ಯಾದಿ ಕೂತು ಪರಮೇಷ್ಠೀಯ ಮಹಿಮೆಯನು ತುಷ್ಟಿಸಿ ಪಾಡುತಿಹನು 13 ತರೂನ ಮೂಲದಿ ಕೂತು ಬೋರೆಯಾ ಹರಿಯ ಶಾಸ್ತ್ರವ ಪೇಳೆ ಮುನಿಪನ ಸ್ವರವ ಸ್ಮರಿಸಿರಿ ಮನುಜರೇ ಭವದರವು ಪೋಗುವದು 14 ಚಿಕ್ಕ ಹುಡುಗೆಯು ತನ್ನಾಗತ ಚಕ್ರದಲಿ ಬ್ರಹ್ಮಾಂಡ ಕಟಹವ ಟೊಕ್ಕ ವೆನಿಸುತ ಜೀವ ಸಂಸ್ಕಾರ ಮುಕ್ಕು ಮಾಡುವಳು ಮೋಘ ಸೌಖ್ಯ ನೀಡುವಳು 15 ಧ್ವಾನ ಮಾಡಲುಧರ್ಮರಾಜಗೆಮಾನವಾದಿಗಳೆಲ್ಲ ಮುಖಭವ ಶೋಣಿತಾಗುವದು 16 ತತ್ವ ದಿವಿಜರು ನಮ್ಮ ದೇಹದಿ ನಿತ್ಯದಲಿ ಹರಿಸ್ಮರಿಸಿ ತುತಿಸುತಸತ್ವ ದಿವಿಜರಿಗೆತ್ತುವೆನು ಕರವಾ17 ದುರಿತ ಹರಿಸುವನೂ 18 ಯಲ್ಲಿ ಬ್ರಹ್ಮಾಂಡದಲಿ ಶಿರಿ ವರವಲ್ಲಭವ ಸಂಸ್ಮರಿಸಿ ಹಿಗ್ಗುವಫುಲ್ಲನಾಭನ ಭಕ್ತರನು ಮನದಲ್ಲಿ ಸ್ಮರಿಸುವೆನೂ 19 ಶ್ರೀಶಾನು ಭಕ್ತಜನದಾಶೀಯ ಪೂರೈಸಲು ಕೂಸಾಗಿದೇವಕಿಸುತಾಯೇಷಾದಿಗಳ ದಿಶುಭರಾಶೀಲಿ ಪುಟ್ಟುತವನೀಶಾರ ವಂಶಬೆಳೆಸಿ 20 ದೋಷಾತ್ಮಾ ದೈತ್ಯಕುಲ ಘಾಶೀಶಿ ಭೂದೇವಿ ಕ್ಲೇಶಾವನೆಲ್ಲಕಳೆದೂ ದಾಶೀಜ ನಾಗಿ ನಿಜ ಕೋಶಾದಿ ಮೋಕ್ಷಾ ಪದಮೀರೇಶ ತೋರಿಸಿದನು ಇಂದಿರೇಶನ ಸಾಧಿಸಿದನು 21 ನಾರದರ್ಷಿಯ ಕರುಣದಲಿ ಶನಿವಾರ ಮಾಡೀದ ಪರಮತುತಿಯನುಭೂರಿ ಪಠಿಸಲು ಇಂದಿರೇಶನುದಾರ ನೋಡುವನು 22
--------------
ಇಂದಿರೇಶರು