ಒಟ್ಟು 347 ಕಡೆಗಳಲ್ಲಿ , 69 ದಾಸರು , 326 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವಿನ ಧರ್ಮ ಕೋರಾಣ್ಯದ ಭಿಕ್ಷಅರಿತು ನೀಡಲು ಮೋಕ್ಷ ಪ ಮರೆತು ಬಿಟ್ಟರೆ ಕಪಾಳ ಮೋಕ್ಷಯಮನಲ್ಲಾಹೋದು ಶಿಕ್ಷ ಅ.ಪ. ಖಂಡುಗ ಜೀವವ ಕೈಲ್ಹಿಡಕೊಂಡುಮಂಡೆ ಬಾಗಿ ನಿಮ್ಮಂಗಳದೊಳಗೆಅಂಡಲೆಯಲು ಮೋರೆ ಹಿಂಡಿ-ಕೊಂಡರೆ ಯಮ ದಂಡನೆ ತಪ್ಪದೋ 1 ಜಂಗಮರು ಜಗತ್ಪಾವನರುಲಿಂಗಾಂಗಿಗಳು ನಿಸ್ಸಂಗಿಗಳುಹಿಂಗದೆ ಸೀತಾಂಗನೆ ಭರ್ತನ ಪದಉಂಗುಟ ತೊಳೆದು ಅಗ್ಗಣಿ ಧರಿಸಿರೋ 2 ಐವತ್ತಾರು ದೇಶದ ಒಳಗೆ ಇಪ್ಪತ್ತೊಂದುಸಾವಿರದಾರ್ನೂರುಕೈವಲ್ಯ ಸಾಧನ ನಮಗಿರಲು ಭಯ-ವೆತ್ತಣದೋ ಮೋಹನ್ನ ವಿಠ್ಠಲ 3
--------------
ಮೋಹನದಾಸರು
ಗೋಪಗೋವಿಂದ ವಿಠಲ | ನೀ ಪಾಲಿಸಿವಳಾ |ಸ್ವಾಪಜಾಗ್ರತ್ಸುಪ್ತಿ ಸರ್ವ ಕಾಲದಲೀ ಪ ಪತಿಸುತರು ಭಾಂದವರು | ಹಿತದಿಂದ ಸೇವಿಸುತಕೃತಿಸರ್ವ ನಿನಸೇವೆ | ಮತಿ ನೀಡೊ ಹರಿಯೇ |ಅತುಳ ವೈಭವ ತೋರಿ | ಕೃತಕಾರ್ಯಳೆಂದೆನಿಸುಕ್ಷಿತಿರಮಣ ನಿನಗಿದುವೆ ಪ್ರಾರ್ಥಿಸುವೆ ದೊರೆಯೇ 1 ಮೋದಮುನಿ ಮತ ದೀಕ್ಷೆ | ಸಾದರದಿ ಕೊಟ್ಟೈದುಭೇದಗಳ ತಿಳಿಸುತ್ತ | ಕಾದುಕೊ ಇವಳಾನೀದಯದಲಂಕಿತವ | ಓದಿಸಿಹೆ ತೈಜಸನೆಸಾದಿಸುವೆ ಅದನೀಗ | ಹೇ ದಯಾವರನೇ 2 ಸಂಚಿತ ಕಳೆವ | ಧರ್ಮ ನಿನ್ನದೊ ಸ್ವಾಮಿಭರ್ಮ ಗರ್ಭನ ಪಿತನೆ | ಕರ್ಮನಾಮಕನೇ ನಿರ್ಮಮತೆ ಮನದಿ ನಿ | ಷ್ಕಾಮ ಕರ್ಮದಲಿವಳಪೇರ್ಮೆಯಲ್ಲಿರಿಸೆಂದು | ಸ್ವಾಮಿ ಪ್ರಾರ್ಥಿಸುವೇ 3 ಸರ್ವಜ್ಞ ಸರ್ವೇಶ | ಸರ್ವದಾ ತವನಾಮಸರ್ವತ್ರ ಸ್ಮøತಿಯಿತ್ತು | ಸರ್ವಾಂತರಾತ್ಮದುರ್ವಿಭಾವ್ಯನೆ ದೇವ | ದರ್ವಿ ಜೀವಿಯ ಕಾವಸರ್ವ ಕರ್ತೃವು ನೀನೆ | ಶರ್ವ ಸನ್ನುತನೇ 4 ಸೃಷ್ಟಿಕರ್ತನೆ ದೇವ | ಕಷ್ಟಗಳ ಪರಿಹರಿಸಿಶಿಷ್ಟಳ್ಹøತ್ಕಂಜದಲಿ | ಇಷ್ಟ ಪ್ರದನಾಗೀಇಷ್ಟ ಮೂರ್ತಿಯ ಕೋರಿ | ಹೃಷ್ಟಳನ ಮಾಡೆಂದುಕೃಷ್ಣ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 5
--------------
ಗುರುಗೋವಿಂದವಿಠಲರು
ಗೋಪಾಲ ಪಾಲಿಸೊ ನಿನ್ನ ಪಾದಸೇವಕನಿವನೆಂದು ನೀ ಭಾವಿಸಿ ಗೋಪಾಲ ಪಾಲಿಸೊ ಪ ನಾರಿಜನರುಟ್ಟ ಸೀರೆ ಸೆಳೆದು ತಾ ಭಾರಿ ಮರವನ್ನೇರಿ ವಿನೋದವ ತೋರಿದ ಸುರರಿಪು ವೈರಿಯೇ ಎನ್ನಯ ಕೋರಿಕೆ ನಡಸಲಿನ್ಯಾರಿಗೆ ಬೇಡಲೊ 1 ತುಂಗಫಣಿಫಣ ಶೃಂಗದೊಳು ಚರ ಣಂಗಳ ಕುಣಿಸು ಭುಜಂಗಮವರನಿಗೆ ಭಂಗಪಡಿಸಿ ಕೃಪಾಪಾಂಗದಿ ಸಲಹಿದ ಮಂಗಳಮಹಿಮ ರಥಾಂಗಧರ ಬಾಲ 2 ಬಂಧು ಬಳಗ ನೀನೆಂದು ತಿಳಿದು ಮ ತ್ತೊಂದನೆಣಿಸದೆ ಇಂದಿರಾರಮಣನೆ ಎಂದೆಂದಿಗೂ ಸಲಹೆಂದು ನಾ ಬೇಡುವೆ ಸಿರಿ 3 ಖಿನ್ನ ನಿಜ ಜನರನ್ನು ಸಲಹುವ ಪನ್ನಗಶಯನ ಪ್ರಸನ್ನ ಹೃದಯನಾಗಿ ಎನ್ನ ಮನೋರಥವ ಪೂರೈಸುವ ರನ್ಯರು ಯಾರಯ್ಯ ಚಿನ್ಮಯ ಮೂರುತಿ 4 ಕಾಮಜನಕನೆ ನಾಮಗಿರಿ ಸಿರಿ ಸ್ವಾಮಿ ನೃಸಿಂಹನೆ ಕಾಮಿತ ಕೊಡುವಂಥ ಕಾಮಧೇನು ಚಿಂತಾಮಣಿ ಎನ್ನಯೋಗ ಕ್ಷೇಮವು ನಿನ್ನದಯ್ಯ ಸೋಮಕುಲಾಧಿಪ 5
--------------
ವಿದ್ಯಾರತ್ನಾಕರತೀರ್ಥರು
ಗೋಪಿ ದಾನವ ಕೋರುವಿ ಎಂಥಾ ಕೂಸಮ್ಮ ಶ್ರೀ- ಕಾಂತ ಸುಜನಮಾನಸಂತರಂಗದಿ ನಿತ್ಯ ನಿಂತು ನಲಿವ ಕೃಷ್ಣ ಪ. ಕ್ಷೀರ ವಾರಿಧಿಯಲ್ಲಿದ್ದನಾದರು ಬೆಣ್ಣೆ ಕ್ಷೀರವ ಕದ್ದು ಮೆದ್ದ ತೋರುವ ತತ್ವ ಶುದ್ಧ ಆದರು ಬಹು ಕ್ರೂರ ರಕ್ಕಸರ ಗೆದ್ದ ನೀರಜಾಲಯ ರಮಣ ಗೋಕುಲ ನಾರಿಯರ ಮೇಲ್ ಬಿದ್ದು ರಮಿಸಿದ ವಾರಿಜಾಸನ ವಂದ್ಯ ಸುರವರ ವೈರಿ ಶಕಟನ ಕಾಲಲೊದ್ದ 1 ಸಂಸಾರಾರ್ಣವ ತಾರಕನಾದರು ಪಾಂಡು- ವಂಶ ರಕ್ಷಣಕಾರಕ ಹಂಸಾದ್ಯ ಸುರಮಾರಕನಾದರು ನಾನಾ ಹಿಂಸಾದೋಷ ನಿವಾರಕ ಕಂಸಮರ್ದನ ವೈನತೇಯ ಶು- ಪಾದ ಕಮಲ ತಿ- ಲಾಂಶ ದೋಷರಹಿತ ಗೋಪಾ- ಲಾಂಶವೇರಿ ವಿನೋದಗೊಳುತಿಹ 2 ಶುದ್ಧ ಪೂರ್ಣಾನಂದ ಸುಜನಾರ್ತಿವಾರÀ ನಿ- ಷಿದ್ಧ ಕಲುಷದೂರಾ ಕ್ರುದ್ಧ ಖಳವಿದಾರ ಕಿಂಕರ ಪರಿಚರ ಸಿದ್ಧಾಂತ ಶ್ರುತಿ ಶೇಖರಾ ಬುದ್ಧ ರೂಪದಿ ಭೂತಪತಿಗೆ ಸ- ಮೃದ್ಧಿ ಜಯಪಾಲಿಸಿ ಸುರೋತ್ತಮ ಸಿದ್ಧವಂದಿತ ಶೇಷಗಿರಿಯೊಳ- ಗಿದ್ದು ದಾಸರನುದ್ಧರಿಸುತಿಹ 3
--------------
ತುಪಾಕಿ ವೆಂಕಟರಮಣಾಚಾರ್ಯ
ಚಂದಿರರಾಮನ ರಾಣಿ ಸೀತೆಯ ಮುಖ ದಂದಕೆ ಸೋತು ಲಜ್ಜೆಯಿಂದ ರಾತ್ರಿಚರನಾದ ಪ ಭಾರತಿ ಮೊದಲಾದ ಸತಿಯರಕ್ಷಿ ಕುಮುದ ಕೋರಿಕೆ ಬಿರಿಯೆ ರಾಜಿತ ಚಕೋರ ಪಾರವಾರವೆಂಬ ಸುರನಿಕರ ನಲಿಯೆ ವಾರಿಜಮುಖಿಯ ಆನಂದ ಶರಧಿಯುಕ್ಕೆ 1 ನೊಸಲಲೊಪ್ಪುವ ಕಸ್ತೂರಿತಿಲಕ ಕಲಂಕ ಹೊಸ ಮುತ್ತಿನೋಲೆ ವರಹಾರದ ಕುಸುಮ ತಾರೆಗಳಾಗೆ ಆ ಕಿರಣ ಲೋಕಂಗಳು ನಸುನಗು ಬೆಳದಿಂಗಳಾಗೆ ನಗೆಗೀಡಾಯಿತೆಂದು 2 ನಂದ ಮೂರುತಿ ವಿಜಯೀಂದ್ರಸ್ವಾಮಿ ರಾಮ ಚಂದ್ರ ಸೀತೆಯ ಮುಖದೊಳು ಮುಖವ ಸಂದಿಸೆ ಉಪರಾಗದಿ ಪೋಲ್ವ ಈಶ್ವರ ಹಾರ ಮಂದಾಕಿನಿ ಯಮುನ ಎಂದಾಗ ಅವರು ಮೀಯೆ3
--------------
ವಿಜಯೀಂದ್ರತೀರ್ಥರು
ಚಂದಿರವದನೆಯ ತವ ಸನ್ನಿಧಿಗೂ ವಂದಿಪೆ ನಿನ್ನ ಪಾದಾಂಬುಜಗಳಿಗೂ ಪ ಬೇಡುವೆ ಗೋವಿಂದನ ರಾಣಿ [ಕಲ್ಯಾಣಿ] ಅ.ಪ ನನ್ನ ಕರೆಗೆ ಓ ಎನ್ನುವರಿಲ್ಲ ನನ್ನಲ್ಲಿ ಕನಿಕರ ತೋರುವರಿಲ್ಲ ಪನ್ನಗಶಯನ ತಾ ಎನ್ನ ನೋಡುತೆ ಕಣ್ಣ ಸನ್ನೆಯ ಮಾಡಿ ಹೋಗೆನ್ನುವನಮ್ಮಾ 1 ಅಪ್ಪನು ನಿನ್ನ ಮಾತೊಪ್ಪುವನಮ್ಮ ತಪ್ಪನು ಮನ್ನಿಸಲೊಪ್ಪುವನಮ್ಮಾ ತಪ್ಪು ನೆಪ್ಪುಗಳ ನಾನೊ[ಪ್ಪುವೆ ಬೇ]ಗ ನೀ ನಪ್ಪಣೆಗೊಡಿಸು ರಂಗಪ್ಪನನೊಲಿಸು2 ಶೌರಿಯ ಕೃಪೆಯವತಾರೆ ನೀನೆಂಬುದ ನಾರದನೆಲ್ಲೆಡೆ ಸಾರುತಲಿಹನು ಮಾರಜನಕ ಮಾಂಗಿರಿರಂಗನು ನಿನ್ನ ಕೋರಿಕೆಗನುಮತಿ ತೋರುವನಮ್ಮಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಚಂದ್ರನ ನೋಡಿರೈ ಸುಶೀಲೇಂದ್ರ ಪಾಡಿರೈ ಸುಜನ ಮಂದಾರ | ಮಾಘ ವಿರೋಧಿ ಸುಮ ತಪಯೋಗಿ ಪ ಯತಿ ಕುಲವರ್ಯ ಸುವೃತೀಂದ್ರ ಕರಾಂಬುಜ | ಜಾತ ಜಿತ ಮನೋಜಾತ || ಪೃಥ್ವಿ ಸುರಾರ್ಚಿತ ಪತಿತ ಮತಾರಣ್ಯಜಾತ ವೇದಸನೀತ ನಳಿನ ಷಟ್ಚರಣ ಅತಿಶಯ ವಿಭವದಿ ಜಗದಿ ಮೆರೆದರವಿತೇಜ ಕುಜನ ಸರೋಜ1 ವರದುಕೂಲದಿ ಪರಿಶೋಭಿಪರಿತ್ತಿಗ್ರಾಮ ಕೃತ ನಿಜಧಾಮ ಪೂರ್ಣಸುಪ್ರೇಮ ಪಡೆದಸನ್ಮಹಿಮ || ಪರಿಮಳ ಸುಧಾನ್ಯಾಯಾಮೃತ ತತ್ವದಸಾರವರೀತ ಗಂಭೀರ ಧರಣಿ ಸುರಾಗ್ರಣಿ ಸುವೃತೀಂದ್ರ ಹೃಕುಮದ ಸುಮನ ಶರತದ 2 ಅಕ್ಷಯ ವತ್ಸರಾಷಾಢ ಸುನೀತ ತಿಥಿ ತ್ರಯದಲಿ | ಲಕ್ಷ್ಯವಿಟ್ಟು ಲಯ ಚಿಂತನೆ ಗೈದ್ಹರುಷದಲಿ ಸುಸ್ವಾಂತದಲಿ || ತ್ರ್ಯಕ್ಷವಿನುತ ಶಾಮಸುಂದರನಂಘ್ರಿ ಧ್ಯಾನಿಸುತಕ್ಷೋಣಿತ್ಯಜಿಸುತ ಚಕೋರ 3
--------------
ಶಾಮಸುಂದರ ವಿಠಲ
ಚಾರು ಕೋರಿ ಸ್ಮರಿಸುವೆನು ಹರಿಯೆ ಪ ಕಾರುಣ್ಯ ಸಾಗರ | ಪರಮಕೃಪಾಕರ | ಸಾರಸುಗುಣ ಗಂ | ಭೀರ ರಮಾವರ|| ಠಾರ ಭುವನೋ | ದ್ಧಾರ ದೀನೋ | ದ್ಧಾರ ಹತ್ತವ | ತಾರ ಶ್ರೀಹರಿ1 ಚಂದದಿ ಪೂಜಿಸಿ ದೇವ || ಕಂದರ್ಪನಯ್ಯನೆ | ಮಂಧರಧರನೆ ಮು | ಕುಂದ ಗೋವಿಂದ | ಬೃಂದಾರಕ ವಂದ್ಯ || ನಂದಕಂದನೆ | ಸಿಂಧುಶಯನನೆ | ಹರಣ ಜಗದಾ | ನಂದಮೂರುತಿ | ವೆಂಕಟೇಶನೆ 2
--------------
ವೆಂಕಟ್‍ರಾವ್
ಜಯ ಜಯ ನಿಮಗೆ ಜಯವಣ್ಣ ಭಯವಿಲ್ಲೀನುಡಿ ಕೇಳ್ ಚಿಣ್ಣ ಪ ಶ್ರೀ ಮನೋಹರನ ಲೀಲೆಯಿದು ಸು ಕ್ಷೇಮವಹುದು ಸತ್ಪುರುಷರಿಗೆ1 ಈ ಜಗತ್ತನೂ ಈಶ್ವರನೂ ತಾ ರಾಜನಾಗಿ ಕಾಪಾಡುವನು 2 ಕುರುಡರು ತಾವ್ ಕೆಡುವರು ಕೊನೆಗೆ 3 ಇದರೊಳುಂಟು ಬಹುವಿಧ ಭೇದ ವದರುತಿಪ್ಪದು ಸಕಲವೇದ4 ಅಂತ್ಯವಿಲ್ಲದಿಹ ಕಾರಣದಿ ಅ ನಂತ್ಯವೆಂದು ಪೇಳ್ವರು ಭರದಿ 5 ಮನುಜ ಜನ್ಮ ಬಹುದುರ್ಲಭವು ಮನನಶೀಲರಿಗಹುದು ಶುಭವು 6 ಮರೆಯಬೇಡಿ ಜನರೆ ನೀವು ಅರಿತು ಅರಿಯದವರಿಗೆ ನೋವು 7 ಕತ್ತಲೆ ಕೊನೆಯಿಲ್ಲದ ಘೋರ 8 ವುಳಿಯದು ನಿಮಗದು ಕೇಳ್ ಜನರೆ 6 ಧರ್ಮವೆಂಬ ಮೂಟೆಯ ಕಟ್ಟೆ ಬಟ್ಟೆ 10 ಗುರುವಾಜ್ಞೆಯ ಮೀರುವುದು ಸಲ್ಲ ಈ ದುರುಳತನ ನಿಮಗೆ ಸರಿಯಲ್ಲ 11 ನಾನೇ ಶ್ರೇಷ್ಠನೆಂಬುವ ಮಾತು ಶಾನೆ ವಡಕು ಗಡಿಗೆಯು ತೂತು 12 ಹಿಂದಿನವರ ಕಷ್ಟವ ನೋಡಿ ಮುಂದಕೆ ಸತ್ ಸಾಧನೆ ಮಾಡಿ 13 ಮೂರು ಕರಣ ಶುದ್ಧಿಯು ಬೇಕು ಧೀರ ಜನರಿಗಿಷ್ಟೇ ಸಾಕು 14 ಜನರ ನೋಡಿ ನಡೆಯಲಿಬೇಡಿ ಕೊನೆಗೆ ನಿಮಗೆ ಕಾಲಿಗೆ ಬೇಡಿ 15 ಹೆಚ್ಚಪೇಕ್ಷಿಸೆ ಬರುವುದಿಲ್ಲ ಮೆಚ್ಚನು ನಿಮಗೆ ಸಿರಿಯನಲ್ಲ 16 ನಿರ್ಮಲ ಮಾರ್ಗ ಹುಡುಕಿದಿರಾ 17 ಜ್ಞಾನರತ್ನ ಸಂಪಾದನೆಯು ಹೀನ ಜನರಿಗಾಗದು ಕೊನೆಯು 18 ದುರಾಸೆಯಲಿ ಕೆಡುವರು ಕೆಲರು ನರಾಧಮರು ಎಂದೆನಿಸುವರು 19 ಪರಿಯಂತ ತಂ ತಮ್ಮಟ್ಟಿಗಿಹುದು ಅಂತ 20 ಗೂಡಿನ ಮೇಲೆ ದುರಭಿಮಾನ ಮಾಡಿ ಮಾಡಿ ಕೆಡುತಿಹರು ಜನ 21 ಯೀಗೂಡಿಗೆವೊಂದಾಧಾರ ಯೋಗಿಗಳರಿವರಿದರಸಾರ 22 ವರ ರಸಗಳು ನಾಲ್ಕು ತೊಗರು 23 ಹಂಚೇಳರಿಂ ಮಾಡಿಹದೇವ 24 ಘಟಿಸಿರುವುದು ಪತ್ತಲೆಯಿದರೊಳ್ 25 ಮರನಿದೆಂದು ಶಾಸ್ತ್ರದ ಮೂಲ ಅರಿಯದೆ ನಾನೆಂಬೆನು ಬಾಲ 26 ಪಕ್ಷಿಗಳೆರಡೀ ಮರದಲ್ಲಿ ಸಾಕ್ಷಿ ಒಂದು ಒಂದಕೆ ಅಲ್ಲಿ 27 ಮರದ ಪಣ್ಣು ತಿಂಬುವದೊಂದು ನಿರುತವು ನೋಡುತಿರುವದೊಂದು 28 ದ್ವಾಸುಪರ್ಣ ಶೃತಿ ಇದರರ್ಥ ದಾಸನಾಗದಿರುವನು ವ್ಯರ್ಥ 29 ಅಧ್ಯಾತ್ಮ ವಿದ್ಯದಲಿ ತೋರುವುದೇ 30 ಜೀವನಾಮ ಆತ್ಮನಿಗುಂಟು ದೇವತಾನು ತಬ್ಬಿದ ಗಂಟು 31 ಅಭೇದ ಶೃತಿಗಳೇನಕ ವಿಧ ಸ್ವಭಾವದಿರುನಡೆ ತೋರುವದ32 ಸುರರುತ್ತಮರು ನರರಾನಿತ್ಯ ಸುರೇತರರು ನೀಚರು ಸತ್ಯ 33 ನೂರು ವರುಷ ಬದುಕುವರೆಂದು ಮೀರಿ ಮನದಿ ಯೋಚಿಸಿ ಮುಂದು 34 ಬಹು ಧನಾರ್ಜನೆಯ ವೂಹೆಯಲಿ 35 ಮೊದಲು ಅನ್ನಕಿಲ್ಲೆಂದು ಮತಿ ವಿಧ ವಿಧ ವಸ್ತ್ರಗಳಲಿ ಪ್ರೀತಿ 36 ನಾಬಡವನು ಎಂದಗಲಿರುಳು 37 ತನಗೆ ಬೇಕಂತ ಚಿಂತೆಯೊಳು 38 ಇತರರ ನೋಡಿ ತನಗಪೇಕ್ಷೆ ಗತಿ ಇಲ್ಲದೆ ಇರುವುದೆ ಶಿಕ್ಷೆ 39 ತಾವ್ ಸಮಂಜಸದಿ ಪೇಳಿದರು 40 ಪ್ರವೃತ್ತಿ ಮಾರ್ಗದ ಸಂಪತ್ತು ಭವಾಂಬುಧಿ ಸುಳಿಯು ವಿಪತ್ತು 41 ಫಲವ ಕೋರಿ ಕರ್ಮವ ಮಾಡಿ ಹಲವು ಯೋನಿಗಳೊಳೋಡಾಡಿ42 ಮರಳಿ ಮರಳಿ ಜನನ ಮರಣದೆ ದರಿಯ ಕಾಂಬ ಬಗೆ ದಾರಿಯದೆ 43 ಇದುವೆ ದೊಡ್ಡ ಸಂಸೃತಿ ವೃಕ್ಷ ತುದಿ ಮೊದಲಿಗು ದೊರಕದು ಮೋಕ್ಷ 44 ಇನ್ನು ಅಕ್ಕ ತಂಗಿಯು ಮೊದಲು 45 ಸತಿ ಸುತರು ಬಳಗಗಳು 46 ಇವರು ತನ್ನವರಿತರರಲ್ಲ ಭವ ಜಲಧಿಯ ಜಂತುಗಳೆಲ್ಲ 47 ಕೊಡದಿದ್ದರೆ ಕೋಪವು ಬಹಳ 48 ವಿತ್ತವಿರಲು ಬಂಧುಗಳೆಲ್ಲ ಹತ್ತಿ ಇವನ ಬಾಧಿಪರೆಲ್ಲ 49 ಸುಳ್ಳುಹೇಳಿದರೆ ಬಹುನಂಬಿಕೆ 50 ಹಿತೋಪದೇಶದಿ ಬಹುಕೋಪ ಪತಿತ ಜನರಿಗೆ ಇದು ಪಾಪ 51 ಒಬ್ಬ ದೈವಲೋಕಕೆ ಸತ್ಯ ಹಬ್ಬವವನ ಭಜಿಪುದಗತ್ಯ 52 ಕಾಮುಕರಿಗೆ ಕಡೆಗೂ ದುಃಖ ನೇಮವದಕೆ ಮೂಲವುರೊಕ್ಕ 53 ಸ್ಪøಹದಿಂದಲೆ ಕೋಪವು ಬಹುದು ವಿಹಿತವೆಂದು ನಗುವನೆ ಸಾಧು 54 ಲೋಭದಿಂದ ಮೂಲಕೆ ನಾಶ ಸ್ವಾಭಾವ್ಯದಿ ದುರ್ಜನಕಾಶಾ 55 ರಾಶಿ ಧನವ ಕೊಳ್ಳೆಯು ಕೊಡುವ 56 ದಾನಕೆಂದರಿಲ್ಲವು ಕಾಸು ದಂಡಕೊಡುವುದಕೆ ಬಹುಲೇಸು 57 ನಷ್ಟವಾದರೂ ಮನಕಿಷ್ಟ ದುಷ್ಟಾತ್ಮರು ಪಡುವರು ಕಷ್ಟ 58 ಆರ್ಯರುಕ್ತಿ ಕೇಳುವುದಿಲ್ಲ ಕಾರ್ಯದಲಿ ವಿಘಾತವೆ ಎಲ್ಲ 59 ಧನವಿದ್ದರು ಸೌಖ್ಯವು ಕಾಣೆ ಘನದುರಾಸೆ ಕುಜನರಿಗೆ ಆಣೆ 60 ಭೂಮಿ ಉಂಟು ತನಗೆಂಬುವರು ನೇಮದಿ ದಂಡವ ತೆರುತಿಹರು 61 ಮಳೆಬೆಳೆಯನು ನಿಂದಿಪರು ಕೆಲರು ಖಳರು ಸುಮನಸರ ದೂಷಿಪರು62 ಮೊದಲು ತುದಿಯಲಿ ದುರಭಿಮಾನ 63 ವ್ಯಾಪಾರದಿ ಧನ ಕಳಕೊಂಡು ಕೋಪ ವ್ಯಾಜ್ಯಕೆಳೆವದೆ ಫಂಡು 64 ಬಲುಧನವ ಕೂಡಿಸುತಲಿ ಮುಂದು 65 ಮುಖದಾಕ್ಷಿಣ್ಯದಿ ಮಾತಾಡಿ ವಿಕಲರನರ ಸ್ನೇಹದಿ ಕೂಡಿ66 ದೊಡ್ಡದಾಗಿ ಮನೆಯನು ಕಟ್ಟಿ ದುಷ್ಟತನದಿ ವಾದಿಸಿ ಬಿಟ್ಟಿ 67 ಕೂಲಿಯವರ ಹೊಟ್ಟೆಗೆ ಕೊಡದೆ ಲೋಲನಾಗಿ ವಂಚನೆ ಬಿಡದೆ 68 ಸಂಸಾರವಿದೆ ಸ್ಥಿರವೆಂದು ಹಿಂಸೆಪಡುತಲಿ ಸದಾನೊಂದು 69 ಚತುರ ಶೀತಿ ಲಕ್ಷಯೋನಿಗಳೊಳ್ ಮತಿಹೀನರಾಗಿ ಜನಿಸುತಲೂ 70 ಭದ್ರವು ತಮಗೆಂದು ಪ್ರಾಣಿಗಳು 71 ಇದಕ್ಕಾಗಿ ಪರಾಧೀನದಲಿ ಪದೇ ಪದೆಗೆ ತಾವು ನೋಯುತಲಿ 72 ಮನುಜ ಜನ್ಮ ಬರುವುದೆ ಕಷ್ಟ ಮಾನಿತನಾದವನೆ ಅತಿ ಶ್ರೇಷ್ಠ 73 ಭೋಧಿಸುವಾತನೆ ಶುಭತಮನು 74 ಸುಜನರಿಲ್ಲವವರದೆ ಪಂಥ 75 ಕರ್ಮಾರ್ಥ ಶೃತಿ ಗಹನದಲಿ ನಿರ್ಮಲರಾಗದೆ ಚಿಂತೆಯಲಿ&ಟಿbsಠಿ
--------------
ಗುರುರಾಮವಿಠಲ
ಜಯ ಜಯ ಭೀಮಸೇನ ಪ. ಜಯ ಭೀಮಸೇನ ದುರ್ಜಯ ಪರಾಕ್ರಮ ಧೀರಾದಯಾಪಯೋನಿಧಿಯೆ ನಿರ್ಭಯ ವೈಷ್ಣವಾಗ್ರಣಿಅ.ಪ. ಅಂಬ ಪಾವಕ ದೀನೋದ್ಧಾರಿ1 ವೃಕೋದರ ವಿಷ್ಣುಸೇವಕ ವಿಜ್ಞಾನಾಂಬುಧಿಬಕಮದಧ್ವಂಸಿ ಜಟಾಸುರಾಂತಕ ಹಿಡಿಂ-ಬಕಾಸುರಗರ್ವಪರ್ವತ ಪವಿಧರ ಹಿಡಿಂಬಕಿ ಚಿತ್ತಕುಮುದಕೋರಕ ಪೂರ್ಣೋಡುಪರಾಜಅಕಳಂಕ ಧನುರಾಗಮಾಚಾರ್ಯ ನಿಪುಣ ಕೀ-ಚಕ ಬಲ ನಿರ್ಮೂಲನ ದ್ರೋಣಾದಿ ಸೈ-ನ್ಯ ಕುಮನ ಅಸುಹರಣ ಧಾರ್ತರಾಷ್ಟ್ರನಿಕರವಾರಣ ವಿದಾರಣ ಪಂಚವದನಾ 2 ಮಣಿಮಯರಥವೇರಿ ಫಣಿಕೇತನನನುಜನುನೆಣನು ದುರ್ಗುಣನು ಮಾರ್ಗಣಗಣದಿಂದಲಿರಣಾಂಗಣದಿ ನಿನ್ನ ಸೆಣಸಲಾಕ್ಷಣ ನೋಡಿತೃಣಮಾಡಿ ಗದೆಯಿಂದ ಹಣಿದು ಹಣೆಯ ಮೆಟ್ಟಿಪಣದಿ ನುಡಿದವರ ರಣವ ತಿದ್ದಿ ಅತ್ಯು-ಲ್ಬಣದಿಂದವಗೆ ಲಂಘಿಸಿ ವಕ್ಷದಿ ರಕ್ತಕೊಣನ ಶಸ್ತ್ರದಿ ನಿರ್ಮಿಸಿ ಕದಡಿಗೂಡಿರಣದೊಳೊಪ್ಪಿದ್ಯೊ ನಿನಗೆಣೆಯಿಲ್ಲವೆನಿಸಿ 3 ಮದ್ದಾನೆ ರೂಪ ಧರಿಸಿ ಮಾಯದಲಿ ಬಂದಾರುದ್ರಾನ ಯುದ್ಧದಿ ಗೆದ್ದುವೋಡಿಸಲಾಗಕೃದ್ಧನಾಗಿ ವ್ಯಾಘ್ರಸಿಂಹರೂಪದಿ ಬರೆಗುದ್ದಿ ಕೆಡಹಿ ವೇಗಕೆ ದಾರಿ ಕಟ್ಟಿದೆಯಿದ್ಧರೆಯೊಳು ನಿಮಗೆಣೆಯಾರು ಮಹಾಬಲಿಮದ್ರಾಧಿಪತಿಯ ಅಂಬರಕಟ್ಟಿ ರಾಜಸೂ-ಯಾಧ್ವರದಲಿ ಮಾಗಧನ ಸಂಹರಿಸಿದತಿಶುದ್ಧ ಸ್ವಭಾವ ಶೂರ ಸತತ ಸಾಧ್ಯಸಿದ್ಧೇಶನಿಲ ಕುಮಾರ ನಮಿಪೆಯೆನ್ನಉದ್ಧರಿಸುವುದಯ್ಯ ಶುದ್ಧ ಮನೋಹರ 4 ಸೂತ್ರ ಅಮಿತ ರೂಪ ಸದ್ಗುಣಗಣಧಾಮ ವೀರಪ್ರತಾಪ ಭಕುತಿ ಜ್ಞಾನಕಾಮಿತಾರ್ಥಗಳಿತ್ತು ಪೊರೆಯಯ್ಯ ಅಸುವ 5
--------------
ಗೋಪಾಲದಾಸರು
ಜುೀಂದ್ರಾಜುೀಂದ್ರಾಸುಜನ ಭಜಕಮನ ಚಕೋರಚಂದ್ರಾ ಪಶೈವಾದ್ವೈತದಪ್ಪಯ್ಯ ದೀಕ್ಷಿತರ ಸದ್ದು ಅಡಗಿಸಿದ'ದ್ಯಾ - ಸಮುದ್ರು 1ಎಮ್ಮೆ ಬಸವನ ಹೆಮ್ಮೆ ಮುರಿದುಆ ಕುಂಭೇಶ್ವರನನು ಒಲಿಸಿದ ಧೀರಾ 2ವ್ಯಾಸ ಮುನಿಕುವರ 'ಷ್ಣುತೀರ್ಥ ನೀಕೃಷ್ರ್ಣಾರ್ಪಣವೆಂದರು ಶ್ರೀಮಠಕೆ 3ರಾಶಿ ರಾಶಿ ಗ್ರಂಥಗಳ 'ರಚಿಸಿದದೇಶಕಾರ್ಯ 'ದ್ವಾಂಸರ ಪ್ರೀಯಾ 4ಮೂಲ ವೇಣುಗೋಪಾಲಕೃಷ್ಣ ನಿನ್ನಮೂಲರಾಮನ ಸೇವೆಗೆ ಕಳಿಸಿದ 5ಸರ್ವಕಲೆಗಳಲಿ ಪರಿಪೂರ್ಣನು ನೀ ಸರ್ವಶಾಸ್ತ್ರ ಸಂಪನ್ನ ಪ್ರಸನ್ನ 6ಶೈವಾದ್ವೈತರ ಗೆದ್ದು ಓಡಿಸಿಕಾವೇರಿತಟ ಪಾವನ ಮಾಡಿದಿ 7ಮಧ್ವ-ಮತಾಬ್ಧಿಗೆ ಪೂರ್ಣ ಸುಚಂದ್ರಾವಾದಿತಿ'ುರಮಾರ್ತಂಡ ಪ್ರಚಂಡಾ 8ತಾಪತ್ರಯ ಪರಿಹರಿಸಿ ಕೈಪಿಡಿಯೋಭೂಪತಿ'ಠ್ಠಲನ ಭಕ್ತಿವರ್ಯಾ 9ಶ್ರೀ ರಾಘವೇಂದ್ರರ ಸ್ತುತಿಪರ ಕೀರ್ತನೆಗಳು
--------------
ಭೂಪತಿ ವಿಠಲರು
ಜೈ ತಿರುಪತಿ ವೆಂಕಟರಮಣ ಕಿಂಕರಜನ ಮಹ ಸಂಕಟಹರ ಜೈ ಪ ಶಂಖಚಕ್ರಧರ ಮಂಕುದಾನವಹರ ಪಂಕಜಪಾಣಿಯಕಳಂಕ ಮಹಿಮ ಜೈ 1 ಸೃಷ್ಟಿಮೇಲೆ ಪ್ರತಿಷ್ಠನಾಗಿ ಮಹ ಬೆಟ್ಟವ ಭೂವೈಕುಂಠವೆನಿಸಿದಿ ಜೈ 2 ತಪ್ಪದೆ ಭಕುತರಿಂ ಕಪ್ಪಗೊಳ್ಳುತ ನೀ ಅಪ್ಪಿಕೊಂಡಿರಿವೀ ಅಪ್ಪ ತಿಮ್ಮಪ್ಪ ಜೈ 3 ಕೋಟಿ ಕೋಟಿ ಮಹತ್ವ ಸಾಟಿಗಾಣದೆ ತೋರಿ ಆಟವಾಡುವಿ ಜಗನಾಟಗಾರನೆ ಜೈ 4 ಕಪ್ಪು ವರ್ಣದಿಂದೊಪ್ಪುವಿ ಸಿರಿಯಿಂ ದಪ್ಪಿಕೋ ದಯದೆನ್ನಪ್ಪ ಮುರಾರಿ ಜೈ 5 ಬೇಡಿದ ವರಗಳ ನೀಡಿದೆ ದಯದಿ ಹರಿ ಗಾಢಮಹಿಮೆ ಇಹ್ಯನಾಡಿಗರುಹಿದಿ ಜೈ 6 ಕೋರಿದವರ ಮನಸಾರ ವರವನೀಡಿ ಧಾರುಣಿಯಾಳಿದ್ಯಪಾರ ಮಹಿಮ ಜೈ 7 ಲಕ್ಷ್ಮೀಸಮೇತನಾಗಿ ಲಕ್ಷ್ಯದಿಂ ಮೂಲೋಕ ಕುಕ್ಷಿಯೋಳ್ ಧರಿಸಿ ನೀ ರಕ್ಷಿಸಿದೆ ಜೈ 8 ಭಕ್ತವತ್ಸಲ ನಿನ್ನ ಭಕ್ತನೆನಿಸಿ ಎನಗೆ ಕರ್ತು ಶ್ರೀರಾಮ ಜೈ 9
--------------
ರಾಮದಾಸರು
ತತ್ವ ಚಿಂತನೆ ಮಾಡು ಮನುಜಾ ವ್ಯರ್ಥಕಾಲವು ಕಳೆಯದೆ ಪ ಮೂರುಬಾರಿಗೆ ಸಾರಿದೆ ಅ.ಪ ಮನೆಯು ಉರಿಯುವಾಗ ಭಾವಿ- ಯನು ತೆಗೆವ ನರನಂದದಿ ಕೊನೆಗೆ ಯಮನವರೆಳೆವ ಕಾಲದಿ ಕೋರಿದರೆ ಸುಖ ಬಾರದು 1 ಈಷಣತ್ರಯದಾಸೆಯಿಂದಲಿ ಮೋಸಹೋಗದೆ ಸಂತತ ರೋಷದೋಷಕೆ ಕಾರಣವು ಸಂ- ತೋಷದಿಂದರು ನಲಿಯುತ 2 ಎಲ್ಲಿ ನೋಡಿದರಲ್ಲಿ ಹರಿಯನು ಸೊಲ್ಲು ಸೊಲ್ಲಿಗೆ ತುತಿಸುತ ವೆಲ್ಲ ಕಳೆ ದೃಢವಾಗುತ 3 ನಾನು ನನ್ನದು ಎಂಬುವ ದುರಭಿ- ಮಾನ ನಿನಗೆ ಬೇಡೆಲೊ ಸ್ವಾನುಭವಕಿದು ಹಾನಿ ತರುವದು ನೀನೆ ನಿನ್ನೊಳು ನೋಡೆಲೊ4 ನೇಮಗಳನು ಪರಿಸುತ 5
--------------
ಗುರುರಾಮವಿಠಲ
ತದಿಗೆಯ ದಿವಸ (ಶೇಷ ದೇವರನ್ನು ಕುರಿತು) ರಂಭೆ : ನಾರೀಮಣೀ ನೀ ಕೇಳೆ ಈತ- ನ್ಯಾರೆಂಬುದನೆನಗೆ ಪೇಳೆ ಕ್ರೂರತನದಿ ತಾ ತೋರುವನೀಗ ಮ- ಹೋರಗನೆನ್ನುತ ಕೋರಿಕೆ ಬರುವದು1 ಒಂದೆರಡು ಶಿರವಲ್ಲ ಬಹು ಹೊಂದಿಹವು ಸಟೆಯಲ್ಲ ಕಂಧರದಲಿ ಕಪ್ಪಂದದಿ ತೋರ್ಪವು ಚಂದಿರಮುಖಿ ಯಾರೆಂದೆನಗರುಹೆಲೆ 2 ಊರ್ವಶಿ : ಕೋಮಲಗಾತ್ರೆ ಮಹಾಮಹಿಮನು ಇವನ- ಸಾಮಾನ್ಯನೆ ಕಾಣೆ ಭೂಮಿಯ ಪೊತ್ತ ನಿರಾಮಯನಾದ ಸುಧೀಮನಿವನು ಜಾಣೆ 1 ವಾಸುದೇವಗೆ ಈತ ಹಾಸಿಗೆಯವ ನಿ- ರ್ದೋಷನಿವನು ಜಾಣೆ ಸಾಸಿರಮುಖದ ವಿಲಾಸನಾಗಿಹ ಮಹಾ- ಶೇಷನಿವನು ಕಾಣೆ 2 ಅದರಿಂದಲಿ ಕೇಳ್ ತದಿಗೆಯ ದಿವಸದಿ ಮಧುಸೂದನನಿವನ ಅಧಿಕಾನಂದದಿ ಒದಗಿಸಿ ಬರುವನು ಇದೆಯಿಂದಿನ ಹದನ 3 ಎಂದಿನಂತೆ ಪುರಂದರವಂದ್ಯ ಮು ಕುಂದ ಸಾನಂದದಲಿ ಅಂದಣವೇರಿ ಗೋವಿಂದ ಬರುವನೊಲ- ವಿಂದತಿ ಚಂದದಲಿ4 ಕಂಟಕಗಳು ಎಲ್ಲುಂಟೆಂಬಂತೆ ನೃಪ- ಕಂಠೀರವಗೈದ ಘಂಟಾನಾದದಿ ಮಂಟಪದೊಳು ವೈ- ಕುಂಠನು ಮಂಡಿಸಿದಾ 5 ಕಾಂತಾಮಣಿ ಕೇಳಿಂತೀಪರಿ ಶ್ರೀ- ಕಾಂತ ನತತಂಡ ಸಂತವಿಸುತ ಮಹಾಂತಮಹಿಮನೇ- ಕಾಂತಸೇವೆಯಗೊಂಡ 6 * * * ಪರಶಿವನನ್ನು ಕುರಿತು ರಂಭೆ :ಯಾರಮ್ಮಾ ಮಹಾವೀರನಂತಿರುವನು ಯಾರಮ್ಮಾ ಇವನ್ಯಾವ ಶೂರ ಯಾವ ಊರಿಂದ ಬಂದ ಪ್ರವೀರ ಆಹಾ ಮಾರಜನಕನ ವಿಸ್ತಾರಪೂಜೆಯ ವೇಳ್ಯ ಧೀರನಂದದಿ ತಾ ವಿಚಾರ ಮಾಡುವನೀತ1 ಕರದಿ ತ್ರಿಶೂಲವ ಧರಿಸಿ ಮತ್ತೆ ವರ ಕೃಷ್ಣಾಜಿನವನುಕರಿಸಿ ಹರಿ ಚರಣಸನ್ನಿಧಿಗೆ ಸತ್ಕರಿಸಿ ಆಹಾ ಜರಿಯ ದುಕೂಲವ ನಿರಿದುಟ್ಟುಕೊಂಡು ವಿ- ಸ್ತರವಾದ ತೋಷದಿ ಮೆರದು ನಲಿವ ಕಾಣೆ 2 ಊರ್ವಶಿ : ಈತನೀಗ ಕಾಲಭೈರವ ಕೇಳೆಲೆಗೆ ನೀರ ಪ. ಈತನೀಗ ಪೂರ್ವದೊಳಗೆ ಭೂತನಾಥ ಸೇವೆಯೊಲಿದ ಓತು ವಿಷ್ಣುಭಕ್ತಿಯಿಂದ ಪೂತನಾದ ಪುಣ್ಯಪುರುಷಅ.ಪ. ತೀರವಾಯ್ತು ವೇಣು ತಾ ವಿ- ಉದಾರತನದಿ ರಾಮೇಶ್ವರಕೆ ಸಾರಗ್ರಹಿತ ಮುಕ್ತಿ ಪಥವನು ಕರುಣದಿಂದ ತೋರಿಸುವನು ವಿಷ್ಣುವೆಂದೆನುತ ಗಿರಿಯ ಪದಾರವಿಂದಸೇವೆಗೈದು ನಲಿವ ಚಾರುಚರಿತ 1 ಬರುವ ಕಾಲದಲ್ಲಿ ಚರಣವನ್ನು ಬಿಡದೆ ಯಿಲ್ಲಿರುವನೈ ಮಹಾತ್ಮನೀತ ಸ್ಫುರಿತತೇಜೋಮೂರ್ತಿ ಈತನು ಲೋಕದೊಳಗೆ ಚರಿಸುವ ತ್ರಿಕಾಲಪ್ರಜ್ಞನು ಇವನ ಗುಣವ- ಮಹತ್‍ಕಾರಣೀಕ ಕರುಣವುಳ್ಳ ವಿಷ್ಣುಭಕ್ತ 2 ಪ್ರಧಾನಿಯೆಂದು ನಡೆಸಿಕೊಡುವ ತೋಷಪಟ್ಟು ಇರುವ ಕಾಣಿಕೆಗಳ ತರಿಸಿ ಇರಿಸುವ ಬೇತಾಳಪ್ರೇತ ನಾನಾ ಉಪದ್ರವಗಳ ಬಿಡಿಸುವ ಧನಿಯ ಆಜ್ಞೆ ಬಂದು ಪೇಳಿ ಜನರ ಕ್ಷೋಣಿಯೊಳಗೆ ಕೀರ್ತಿಪಟ್ಟ 3
--------------
ತುಪಾಕಿ ವೆಂಕಟರಮಣಾಚಾರ್ಯ
ತಾನಸÉ ತಾನಾದೆನ್ನ ಸ್ವಾಮಿ ಭಾನುಕೋಟಿ ಅಂತರ್ಯಾಮಿ ಧ್ರುವ ಕಾಣಬರುತಾದೆ ನೋಡಿ ಙÁ್ಞನವಂದಭ್ಯಾಸ ಮಾಡಿ ಭಾನು ಭವದಲಿ ಕೂಡಿ ನಾನು ನೀನೆಂಬುದೀಡ್ಯಾಡಿ 1 ತಿರುಗಿ ನೋಡು ದೋರುತಾನೆ ಅರುವಿನೊಳು ನಿಂತಾನೆ ಸಾರಸುಖ ಬೀರುತಾನೆ ಕೋರಿ ತಾರ್ಕಣ್ಯಾಗ್ಯಾನೆ 2 ಧ್ಯಾನ ಮೌನಾಗ್ಯಾನೆ ತಾನೆ ಜ್ಞಾನಗುರು ದೋರುತಾನೆ ದೀನ ಮಹಿಪತಿಗೆ ತಾನೆ ಖೂನ ಪರಿಪೂರ್ಣಾಗ್ಯಾನೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು