ಒಟ್ಟು 16362 ಕಡೆಗಳಲ್ಲಿ , 134 ದಾಸರು , 7361 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನನಿತ್ತಪೆ ನಿನಗೆ ಶ್ರೀನಿವಾಸ ಶ್ರೀನಿಧಿಯು ನೀನಾಗಿರಲು ಸರ್ವೇಶ ಪ. ಅನುದಿನದಿ ನಿನ್ನ ಪದ ಅನುವಿನಲಿ ಸ್ತುತಿಪೆನೆನೆ ಅನುದಿನದಿ ನಿನ್ನಾದಿಶೇಷ ಸ್ತುತಿಪ ಘನಮಹಿಮ ನಿನ್ನನರ್ಚಿಪೆನೆಂದೊಡೆ ಆ ಘನ ಮಹಾ ಶ್ರೀದೇವಿ ನಿನ್ನರ್ಚಿಸಿ ಮೆಚ್ಚಿಸಿಹಳರಿಯೆ 1 ಭಕ್ತಿರಸವನು ಭಕ್ತ ಪ್ರಹ್ಲಾದ ನಿನಗಿಂತಧಿಕ ಭಕ್ತಿಯನು ಮಾಡಲರಿಯನೋ ದೇವ ದೇವ ಯುಕ್ತಿಯಲಿ ನಿನ್ನ ಸ್ತುತಿ ಮಾಳ್ಪೆನೆಂದರೆ ನಿನ್ನ ಭಕ್ತ ನಾರದ ಮಾಳ್ಪ ಸ್ತುತಿಗಧಿಕವೇ ಕೃಷ್ಣ 2 ನಿನ್ನ ಪದ ಸೇವಿಪೆನೆನೆ ನಿನ್ನ ಭಕ್ತ ಹನುಮ ಇನ್ನು ನಿನ್ನಡಿ ಬಿಡನೊ ನಿನ್ನರಿವತನಕ ಪನ್ನಗಾದ್ರಿನಿವಾಸ ಸಂಪನÀ್ನ ಶ್ರೀ ಶ್ರೀನಿವಾಸ ನಿನ್ನ ಕೃಪೆಯನೆ ತೋರೋ ಶ್ರೀ ರಮೇಶ 3
--------------
ಸರಸ್ವತಿ ಬಾಯಿ
ಏನಯ್ಯ ಧೊರೆಯೆ-ನಿನಗಾನಂದವೆ ಧೊರೆಯೇ ಪ ನುಡಿನೀನೊಲಿದಾಲಿಪುದುಅ.ಪ. ಜಾತಿಧರ್ಮವಿಲ್ಲಾ-ಶಾಸ್ತ್ರದರೀತಿನಡತೆಯಿಲ್ಲ ಮಾತಿದುಪುಸಿಯಲ್ಲಾ-ಮಾನದ-ಭೀತಿಯುಮೊದಲಿಲ್ಲಾ ನೀತಿಯನರಿಯದ-ಕೋತಿಗಳಂದವ ಜಾತಿಯ ಜನರೊಳು ಮಾತಿನವಾಶಿಯಿಲ್ಲ 1 ದುರ್ಜನರು ಬೆರೆದು-ದೋಷವಿ ವರ್ಜಿತರನ್ನು ಜರಿದು ಲಜ್ಜೆಯನೆರೆತೊರೆದು ಗರ್ವದಿ ಗರ್ಜಿಸಿ ಮೊರೆದು ಈ ಜಗದೊಳಗಿಹ ಸಜ್ಜನರಿಗೆ ಕುಲಕಜ್ಜಳರವ ಮತಿ ಗುಜ್ಜುಗಿಸುತ್ತಿಹ 2 ಗಂಡನ ಬಿಟ್ಟಿಹರು-ಗರತಿಯ-ಕಂಡು ನಗುತ್ತಿಹರು ಮಿಂಡರ ಬೆರೆದಿಹರು-ಮೇಲತಿ-ದಿಂಡೆಯರಾಗಿಹರು ಚಂಡಿಸುತಿರ್ಪರೋ 3 ಕೇಳುಹಂದೆಯಾಳು-ಕ್ಲೇಶವ ಪೇಳಲು ಮತಿತಾಳು ಕೀಳು ಜನರ ಬಾಳು ಕಿವಿಯಲ್ಲಿ ಕೇಳಬಹುದೆ ಪೇಳು ಜನರೂಳಿಗ ಬಲುಘನ 4 ಧರೆಯೊಳಧಿಕವಾದ ಶ್ರೀ ಪುಲಿ-ಗಿರಿಯೊಳು ನೆಲೆಯಾದ ಸಿರಿವರ ನಿಜಪಾದ-ಸೇವೆಯ-ಕರುಣಿಸು ಬಹುಮೋದ ಶರಣಾಭರಣ ನಿಜ ಕರುಣವ ತೋರಿಸು ವರದ ವಿಠಲಧೊರೆ ವರದದಯಾನಿಧೆ 5
--------------
ಸರಗೂರು ವೆಂಕಟವರದಾರ್ಯರು
ಏನಾದರಾಗಲಿ ಹರಿ ನಿನ್ನ ಸ್ಮರಣೆ ಮಾತ್ರ ಒಂದಿರಲಿ ಪ ಆಚಾರಿಯೆನಲಿ ಬಹು ದು | ರಾಚಾರಿಯೆನಲಿ ಜನರೆಲ್ಲನೀಚನೆಂದೆನಲಿ ಅನದಿರಲಿ 1 ಜ್ಞಾನಿ ಎಂದೆನಲಿ ದುರ್ಮಾರ್ಗ | ನಾನೆನಲಿ ಜನರೆಲ್ಲ ಬಹು ಮಾನವಂತನೆನಲಿ ಅನದಿರಲಿ 2 ಪಾಪಿಯಾಗಿರಲಿ ಬಹು ಸಂ | ತಾಪಿಯಾಗಿರಲಿ ಜನರೆಲ್ಲಪಾಪಿಯೆಂದೆನಲಿ ಅನದಿರಲಿ 3 ರಾಗವೇ ಬರಲಿ ಬಹು ವೈ | ಭೋಗವೇ ಬರಲಿ ವಿಷಯ ನಿಯೋಗವೇ ಬರಲಿ ಬರದಿರಲಿ 4 ಒಲಿದರೆ ನೀ ವ್ಯಾಸವಿಠಲ ಜನ | ರೆಲ್ಲ ಮತ್ತ್ಹಳಿಯುತಿರಲಿ ಇರದಿರಲಿ ಏನಾದರಾಗಲಿ ಹರಿಯೆ 5
--------------
ವ್ಯಾಸವಿಠ್ಠಲರು
ಏನಾದರೇನು ಗುರುದಯ ಪಡದನಕಾ| ತಾನೊಲಿಯನು ಹರಿ ಕಾವನ ಜನಕಾ ಪ ಪರಿ ಸಾಧನದಲಿ ಬಳಲುವರೇ| ಪರಸ ಮುಟ್ಟದ ಲೋಹವಾಗುವದೇ ಕನಕಾ 1 ಪತೀತೋದ್ದರ ಗುರು ಸ್ವಸುಖದಾನಿ| ವೃತ ತಪದಿ ಸಿದ್ದಿಯ ಬಹ ಸುಖ ಕ್ಷಣಿಕಾ2 ಗುರು ಮಹಿಪತಿ ಪ್ರಭು ಜ್ಞಾನಾಂಜನಿಡದೇ| ಧರಿಯೊಳಾಹನೇ ನರ ಚಿದ್ಬನ ಧನಿಕಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನಾಯಿತೇನಾಯಿತು ಮನವೆ ನಾನೆಂಬುದೇನಾಯಿತು ಧ್ರುವ ಕರಿಯ ನುಂಗಿದ ಬೆಳವಲಣ್ಣಿನಂತಾಯಿತು 1 ಅಪ್ಪಿನೊಳುಪ್ಪು ಬೆರದಂತಾಯಿತುಮನವೆ 2 ಕಪ್ಪರವ ಸುಟ್ಟರಹಿಟ್ಟಂತಾಯಿತು 3 ಮಹಿಪತಿಯ ಮನವೆ ಕೇಳೆನ್ನಾ ಮನವೆ 4 ಎನ್ನೊಳು ಘನ ಬ್ರಹ್ಮತಾನಾಯಿತು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏನಾಯ್ತು ಹರಿಪಾದ ನೆನೆವಲ್ಲಿ ಮನವೆ ದೀನನೆ ನಿನ್ನ ಬಾಯಿಗ್ಹುಣ್ಣ್ಹುಟ್ಟಿತೇನೋ ಪ ನಿಷ್ಠೆಯಿಂ ಕೈತಾಳವಿಟ್ಟು ಉಲ್ಲಾಸದಿ ಕಷ್ಟಹರನಂಘ್ರಿ ಮನಮುಟ್ಟಿ ಪಾಡುವಲ್ಲಿ ಕೆಟ್ಟಾಸೆಯಿಂ ಪರರಲ್ಹೊಟ್ಟ್ಹೊಟ್ಟ್ಹೊಡಕೊಂಡು ಬೇಡ್ದ ಪೆಟ್ಟಿಗೆ ಕರವರೆಡು ಮುರಿದಿರುವವೇನೋ 1 ವನಜನಾಭನ ದಿವ್ಯ ವನರುಹಂಘ್ರಿಯ ಚರಿತ ಘನವಾಗಿ ಪೊಗಳುತ ಕುಣಿದಾಡವಲ್ಲಿ ಮೊಣಕಾಲು ಕೀಲ್ಮುರಿದು ನೆಲಕಿ ಬಿದ್ದಿಹ್ಯವೆ 2 ನೀಲಶಾಮನ ವಿಮಲಲೀಲೆಗಳು ಶೀಲಮನದಾಲಸಾನಂದೊಳು ಲೋಲ್ಯಾಡವಲ್ಲಿ ಹಾಳು ಸಂಸಾರದ ಗೋಳಾಟ ಕೇಳಿ ಕೇಳಿ ಶೂಲೆಯೆದ್ದೆರಡು ಕಿವಿ ಕಿವುಡಾದವೇನು 3 ಸಾಗರನಿಲಯನ ನೀಗದ ಮಹಿಮೆಗಳ ಜಾಗರದಿಂ ಪಾಡಿ ಭವರೋಗ ಗೆಲಿವಲ್ಲಿ ಸೋಗಿನ ಸೂಳೆಸುದ್ದಿ ರಾಗದ್ಹಾಡ್ಹ್ಯಾಡಿ ಭವ ಜಿಹ್ವೆ ಕಳಕೊಂಡಿದ್ಯೇನೋ 4 ದಾಸನುದಾಸರ ವಾಸದಿಗೂಡಿಯನು ಮೇಷನು ವಿಚಾರದಿಂ ಶ್ರೀಶನ ಚರಣ ಧ್ಯಾಸದೊಳಗಿರ್ದು ಯಮಪಾಶವನು ಗೆಲಿದು ದಯ ಭೂಷ ಶ್ರೀರಾಮನ ಮುಕ್ತಿ ಪಡಿವಲ್ಲಿ 5
--------------
ರಾಮದಾಸರು
ಏನಾರಿಸುವಿ ಹರಿಯೇ ಎನ್ನವಗುಣಾ ಅನಂತಾನಂತ ತಪ್ಪು ಮಾಡಿದ ಪಾಮರೊಳೇನಾ ಪ ಉದಯ ಉದ್ಯೋಗನೆನುವೆ ಮಧ್ಯಾಹ್ನಕ ಕ್ಷುಧೆ ತೃಷೆಯಲ್ಲಿ ದಣಿವೆ ಇರುಳಿಗಿನ್ನು ವದಗಿ ನಿದ್ರೆ ಯನುವೆ ಇದರೊಳು ನಿನ್ನ ನಾಮನೆನೆಯದೆ ದಿನಗಳೆದೇನಾ 1 ನಿನ್ನ ಕಥೆಯಾ ಕೇಳದೇ ಮಂಗಳಂಗುಟ ಕಣ್ಣಿನೊಳಿಟ್ಟು ನೋಡದೇ ಸರ್ವಾಂಗದಿ ಚೆನ್ನಾಗಿ ಮಾಡದೇ ಎನ್ನ ಕಾಯವು ಸತಿಸುತರಿಗೆ ಮಾರಿದೇನಾ 2 ಹರಿ ಭಕ್ತಿ ಮುದ್ರೆ ಧರಿಸೀ ಹೆಮ್ಮಿಲಿ ದುರಾಚರಣೆ ಮಾಡಿದ ಕ್ಷಮಿಸೀ ಸತ್ಸಂಗದಿ ಅರಿವಿಗೆ ಮನನೀಲಿಸೀ ಹೊರೆವದು ಗುರು ಮಹಿಪತಿಸ್ವಾಮಿ ಕರುಣಿಸಿ ಎನ್ನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನಿದು ಎಲೆ ಮನ ಏನು ಇದು ನೆನೆಸಿದರೆದೆ ಝಲ್ಲೆನುವುದು ಪ ನಾನು ಯಾರೆಂಬುವ ಖೂನವ ತಿಳಿಯದೆ ಶ್ವಾನನಂದದಿ ಕೆಟ್ಟ ಹೀನಭವಕೆ ಬಿದ್ದು ಅ.ಪ ಏತಕ ಬಂದದ್ದೀ ಜನುಮಕ್ಕೆ ತಲೆಯೆತ್ತಿ ನೋಡದೆ ಕೂತಿಮುಂದಕೆ ನೀತಿಗೇಡಿ ಮಹಪಾತಕನು ಯಮ ದೂತರು ನಿಂತಾರೊ ಎಳಿಲಿಕ್ಕೆ 1 ಬೀಳಬೇಡೋ ಮಾಯದ ಜಾಲಕ್ಕೆ ಘಳಿಲನೆ ತಿಳಿತಿಳಿ ಸುಲಭದಿ ಸಮಯವು ಬಲಿಸಿ ಹರಿಯ ಧ್ಯಾನ ಕಾಲನ ನೂಕೋ 2 ಹುಟ್ಟಿಬಂದಿ ಶಿಷ್ಟಪದ ಪಡಿಲಿಕ್ಕೆ ಮರ್ತುಬಿಟ್ಟಿ ನಿಂತಿ ಬಿಟ್ಟಗಂಟ್ಹೊರಲಿಕ್ಕೆ ಭ್ರಷ್ಟಗುಣವ ಬಿಟ್ಟು ದಿಟ್ಟರಾಮನ ಗಟ್ಟ್ಯಾಗಿ ನಂಬಿ ಮುಟ್ಟು ಮುಕ್ತಿಪದಕೆ3
--------------
ರಾಮದಾಸರು
ಏನಿದು ಕೌತುಕವೋ ವಿಠಲಾ ಏನಿದು ಕೌತುಕವೋ ಪ ಏನಿದು ಕೌತುಕ ಪಂಢರಿಯನೆ ಬಿಟ್ಟು ನೀನಿಲ್ಲಿಗೆ ಬಂದ್ಯ ವಿಠಲಾ ಅ.ಪ. ಮಿಥ್ಯಾವಾದಿಗಳು ನಿನ್ನ ಸುತ್ತುಮುತ್ತಿಕೊಂಡು ಅತ್ತು ಕರೆದು ಕೂಗುತ್ತಿರೆ ಬಹು ಬ್ಯಾಸತ್ತು ಬಂದೆಯಾ ವಿಠಲ 1 ಮಧ್ವದ್ವೇಷಿಗಳು ಮಾಡುವ ಪದ್ಧತಿಯನು ಕಂಡು ಹೃದ್ಯವಾಗದೆ ಕದ್ದ ಕಳ್ಳನಂತೆದ್ದು ಇಲ್ಲಿಗೆ ಬಂದ್ಯಾ ವಿಠಲಾ 2 ಶ್ರೀzವಿಠಲ ನಿಮ್ಮ ಸದ್ಗುಣ ವೇದಶಾಸ್ತ್ರದಲ್ಲಿ ಬಂದ್ಯಾ ವಿಠಲಾ 3
--------------
ಶ್ರೀದವಿಠಲರು
ಏನಿದು ಚಂದ ಹರಿಯೆ ಮುಕುಂದ ಪ ಒದಗಿದ ಬಾಧೆಯ ಬಿಡಿಸಲು ಬೇಡಲುತುದಿಕೆಳಸುವ ತನಕ ಹಾನಿಯ ಕಾಯ್ವುದು 1 ಕುರು ಸಭೆಯೊಳು ಮಾನವನುಳಿಸೆಂದುತರುಣಿ ಬಾಯ್ದೆರೆ ಬೇಗ ಬಾರೆಂದು 2 ಮಕರಿಯ ಹಿಡಿತವ ಬಿಡಿಸಲು ಕರಿನೃಪಮುಖವೆತ್ತಿ ಮೊರೆಯುತೆ ಜವದಿ ಪೊರೆಯುವುದು 3 ತಡಮಾಡದೆ ಶರಣರ ರಕ್ಷಿಸದೆಚಡಪಡಿಸುವುದನು ನೋಡುತಲಿರುವುದು 4 ಮೊರೆಯಿಡೆ ಭಕುತರ ಪೊರೆಯಯ್ಯ ಜವದಲಿಕರುಣಿಸು ಗದುಗಿನ ವೀರನಾರಾಯಣ 5
--------------
ವೀರನಾರಾಯಣ
ಏನಿದು ಬಯಲ ಪಾಶ ನೋಡಿದರಿಲ್ಲಿ ಏನು ಹುರುಡುಗಾಣೆನೊ ನಾನಾಜನ್ಮದಿ ಬಂದು ಹೊಂದಲಾರೆನು ನಿನ್ನ ಧ್ಯಾನವ ಕೊಡೊ ಅಭಿಮಾನದೊಡೆಯ ರಂಗ ಪ. ನೀರಬೊಬ್ಬುಳಿಯಂದದ ದೇಹವ ನೆಚ್ಚಿ ದೂರ ಹೊತ್ತೆನು ಹರಿಯೆ ಯಾರು ಎನಗೆ ಸರಿಯಿಲ್ಲೆಂಬಹಂ- ಕಾರ ಪ್ರಪಂಚದ ಬಂಧನದೊಳು ಸಿಲುಕಿ ನೊಂದೆನೊ ಸದ್ಗತಿ ತೋರೊ 1 ಬಡವರಾಧಾರಿ ಕೇಳೊ ಸಂಸಾರದ ಮಡುವಿನೊಳಗೆ ಧುಮುಕಿ ಕಡೆಹಾಯಿಸೊ ಕೈಪಿಡಿದು ಕೃಪೆಯೊಳೆನ್ನ ದಡವ ಸೆÉೀರಿಸೊ ಜಗದೊಡೆಯ ಶ್ರಿರಂಗಯ್ಯ 2 ಸುತ್ತೆಲ್ಲ ಬಂಧು ಬಳಗ ನವಮಾಸದಿ ಹೊತ್ತು ಪಡೆದ ಜನನಿ ಪುತ್ರ ಸಹೋದರರ ಘಳಿಗ್ಯಗಲಲಾರದೆ ಮತ್ತೆ ಯಮನವರೊಯ್ವಾಗ ಯಾರು ಸಂಗಡ ಇಲ್ಲ 3 ಆಸೆಯೆಂಬುದು ಬಿಡದು ಈ ಭುವನದೊಳ್ ಲೇಸುಗಾಣೆನು ಹರಿಯೆ ಭಾಷೆಯ ಕೊಡು ಮುಂದೆ ಜನುಮಬಾರದ ಹಾಗೆ ಈಶಸನ್ನುತ ಹೆಳವನಕಟ್ಟೆರಂಗಯ್ಯ 4
--------------
ಹೆಳವನಕಟ್ಟೆ ಗಿರಿಯಮ್ಮ
ಏನಿದು ಮಹದಪರಾಧ ಮಾಡಿದೆ ನಾನು ನಿನ್ನವರನೆ ನಿಂದಿಸಿದೆ ತಿಳಿಯದಭವ ದೇವ ಪ ಜ್ಞಾನವಿಡಿದಿ ನೋಡದೆ ತುಸು ಏನುಕಾಣದೆ ನಾನಾಪರಿಯಲಿ ಶ್ವಾನನಂದದಿ ಚೀರುತ್ಹಾರುತ ಹೀನವಾಚಗಳ್ವಾಚಿಸಿದೆನೋ ಅ.ಪ ತತ್ತ್ವದರ್ಥಕರಾಗಿ ಗುಪ್ತದಿಂದಿರ್ವವರ ನರ್ತುನೋಡದೆ ಅನರ್ಥವಾಡಿದೆನೋ ಪ್ರಭೋ ಮತ್ರ್ಯಗುಣಗಳ ಮರ್ತುಬಿಡದೆ ನಿರ್ತಮಾನಿಸರ ಗುರ್ತುತಿಳಿಯದೆ ಕತ್ತೆಯಂತೊದರುತ್ತ ಸತ್ಯರ ಕೃತ್ತಿಮರೆಂದೆನುತ ಜರಿದೆ 1 ಮೀನು ಜಿಹ್ವೆಯ ರುಚಿಗಾ ಗೇನು ತಿಳಿಯದೆ ಪೋಗಿ ಗಾಣ ಸೆಳೆದುನುಂಗಿ ಪ್ರಾಣಕೊಟ್ಟಂತೆ ಹರಿಯೆ ಗಾನಲೋಲನ ಮನದೊಳಿಟ್ಟು ಧ್ಯಾನಿಪ ಕೋವಿದಸುಜನರ ಖೂನವಿಲ್ಲದೆ ಮನಕೆ ಬಂದಂತೆ ಕಾಣದಂಧಕನಂತೆ ಜರಿದೆ 2 ನಿನ್ನಿಂದೆ ನಾ ಬಂದೆ ನೀನೆನ್ನ ತಂದೆ ಮುಂ ದಿನ್ನಿಂಥ ದುರ್ಮತಿಯನ್ನು ಕೊಡದಿರೊ ರಂಗ ನಿನ್ನ ದಾಸರೊಳಿಟ್ಟು ಅನುದಿನ ಭಿನ್ನವಿಲ್ಲದೆ ರಕ್ಷಿಸಯ್ಯ ನಿನ್ನ ಚರಣದಾಸರ ನಾಮ ಪನ್ನಂಗಶಾಯಿ ವರ ಶ್ರೀರಾಮ 3
--------------
ರಾಮದಾಸರು
ಏನಿದು ಸಂಸಾರ ನೋಡಿದರಿದುವೆ ಮಹಾಘೋರ ಪ ನೀರೊಳು ಕೈಬಿಟ್ಟಂತೆ ಅ.ಪ ಒಂದು ಲಾಭ ಬರಲು ನಷ್ಟ ವೆರ- ಡೊಂದಾಗುವುದಿದರೊಳ್ ಹಿಂದಿನ ಬವಣಿಯ ಮರೆತೆಲ್ಲರು ತಾವು ಮುಂದೆ ಸುಖವಪಡುವೆವೆಂದರಿತಿರುವರು 1 ತನ್ನಿಂತಾನಾಯಿತೆಂಬರು ಕುನ್ನಿಗಳರಿಯದೆಲೆ ಬನ್ನಬಡುವರೆಲ್ಲ ಬ್ರಹ್ಮರಾದರೆ ಇನ್ಯಾತಕೆ ಶೃತಿ ಸ್ಮøತಿ ಪುರಾಣಗಳು 2 ಕರುಣದಿ ಪ್ರೇರಿಸುವವನ ತಿಳಿದರೆ ಬರುವುದು ಲೆಕ್ಕಾಚಾರಕೆ ಸರ್ವವು 3
--------------
ಗುರುರಾಮವಿಠಲ
ಏನಿದೆತ್ತಣ ಬಯಕೆ ಎಲೊ ಮಂಕು ಜೀವನೀನು ಅರಿತರೆ ಪೇಳು ನಿಜವನೆನಗೆ ಪ ಎಂಟೆರಡು ಮಾರುತರು ಎಡೆಎಡೆಗೆ ಬರುತಿರಲುನಂಟರೈವರು ಕೂಡಿ ಆಕ್ರಮಿಸುತಿಹರುದಾಂಟುವುದು ಅಸದಳವೊ ಎರಡೊಂದು ಬಲೆಗಳಲಿಕಂಟಕದಿ ಬಲು ತಾಪದಿಂದ ಬಳಲುವರು 1 ಆರೆರಡು ದಂತಿಗಳು ದಾರಿಯೊಳು ನಿಂತಿಹವುಆರು ಮೂರು ತುರುಗಗಳು ದಾರಿಯನು ಕೊಡವುಮೂರೆರಡನೀಡಾಡಿ ತೋರುವುದು ಎನ್ನಾಣೆಸಾರಿ ಏನೇನಹುದು ಎಂಬುದನು ನೋಡು 2 ಪರರನು ನಿಂದಿಸದೆ ಪರಯೋಗ್ಯ ನೀನಾಗಿಪರರ ಪಾಪಗಳ ನೀ ಕಟ್ಟಿಕೊಳದೆಪರಮಾತ್ಮ ಕಾಗಿನೆಲೆಯಾದಿಕೇಶವರಾಯಪರಹಿತಕೆ ಸಖನೆಂದು ಭಜಿಸೆಲೊ ಮನುಜ 3
--------------
ಕನಕದಾಸ
ಏನಿದೇನಿದನ್ಯಾಯ ಕೇಳಲಾಗದಯ್ಯ ಧ್ಯಾನದಿಂದಾನೆಂಬ ಹೀನ ಜನರ್ವಚನ ಪ ಪರಮಪುರುಷರ ಚರಿತ ಪರಮ ಭಕ್ತಿಯಲಿಂದ ಬರೆದೋದಿಕೇಳಿದರೆ ಪರಮಪದವೆನುತ ವರವೇದ ಸ್ಮøತಿವಾಕ್ಯ ಅರಿದರಿದು ಸಚ್ಚರಿತ ಬರೀಬಾರದೆನ್ನುವ ನರಗುರಿಗಳ ವಚನ 1 ಕನಸುಮನಸಿನೊಳೊಮ್ಮೆ ಜನಕಜೆಯವರನಂಘ್ರಿ ನೆನೆವರ್ಗೆ ಭವಬಂಧವಿನಿತಿಲ್ಲವೆನುತ ಮನುಮುನಿಗಳ್ಬರೆದಿಟ್ಟ ಘನತರದ ವಚನಗಳನು ಮನನ ಮಾಡಳಿವ ಬಿನಗುಜನರ್ವಚನ 2 ಬೀಳುತೇಳುತಲೊಮ್ಮೆ ನೀಲಶ್ಯಾಮನ ದಿವ್ಯ ಮೇಲು ಮಹಿಮೆಯ ಮನದಾಲಿಸಲು ಜವನ ದಾಳಿ ಸೋಂಕದು ಎಂದು ಶೀಲದೊರೆದ್ವಚನಗಳ ಕೇಳಿ ತಿಳಿಯದ ಮಹ ಕೀಳುಜನರ್ವಚನ 3 ಹರಿನಾಮ ಕೀರ್ತನೆಯಿಂ ಜರಾಮರಣ ಕಂಟಕª À ಕಿರಿದು ಮಾಡಿ ದಾಟಿದರು ಗುರುಹಿರಿಯರೆಲ್ಲ ನಿರುತ ನಿಜ ತಿಳಿಯದೆ ಹರಿಸ್ಮರಣೆ ಸ್ಮರಿಸದೆ ಬರಿದೆ ಬ್ರಹ್ಮೆಂಬ ಮಹನರಕಿಗಳ ವಚನ 4 ಪರಮ ಶ್ರೀಗುರುರೂಪ ವರದ ಶ್ರೀರಾಮನಂ ನೆರೆನಂಬಿ ಒಲಿಸದೆ ಗುರುವಾಗಿ ಜಗದಿ ಅರಿವಿತ್ತು ಆತ್ಮನ ಕರುಹು ತೋರಿಸಿ ಪರಮ ಪರತರದ ಮೋಕ್ಷಮಂ ಕರುಣಿಸುಯೆಂತು 5
--------------
ರಾಮದಾಸರು