ಒಟ್ಟು 2158 ಕಡೆಗಳಲ್ಲಿ , 105 ದಾಸರು , 1685 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೂರ್ಖ ಬಲ್ಲನೆ ಸತ್ಯಸುಜ್ಞಾನಿ ನಡೆಯ ತಾರ್ಕಿ ಬಲ್ಲನೆ ಪರಸಾಧನದ ಬಗೆಯ ಪ ಕತ್ತೆ ಬಲ್ಲುದೆ ಹೊತ್ತ ಮುತ್ತುರತ್ನದ ಬೆಲೆಯ ತೊತ್ತು ಬಲ್ಲುದೆ ಮಹ ಉತ್ತಮರ ನಡೆಯ ಮಿಥ್ಯ ಬಲ್ಲನೆ ಶರಣಸತ್ಸುಜನರ ನೆಲೆಯ ಮೃತ್ಯು ಬಲ್ಲುದೆ ಹೊತ್ತು ಗೊತ್ತಿನ ಪರಿಯ 1 ಸೂಶೆಬಲ್ಲಳೆ ಸತಿಯ ಶೀಲವ್ರತನೇಮಗಳ ಕೋಳಿ ಬಲ್ಲುದೆ ಮರಿಗೆ ಮೊಲೆಹಾಲುಣಿಸಿ ಸಲಹೋದ ಕೇಳಬಲ್ಲನೆ ಕಿವುಡ ಆಲಿಸಿ ಏಕಾಂತವನು ಹೇಳಬಲ್ಲನೆ ಮೂಕ ಕೇಳಿ ಹರಿಚರಿತ 2 ಭ್ರಷ್ಟಬಲ್ಲನೆ ಸುಗುಣ ಶಿಷ್ಟ ಸಂತರ ಸಂಗ ದುಷ್ಟಬಲ್ಲನೆ ಪರರ ಕಷ್ಟನಷ್ಟಗಳ ಹುಟ್ಟುಗುರುಡ ಬಲ್ಲನೆ ಮುಂದಿಟ್ಟ ಗಂಟಿನ ವಿವರ ಕೆಟ್ಟಭವಿಬಲ್ಲನೆ ತತ್ತ್ವಕಟ್ಟಳೆಯ ಗುಟ್ಟು 3 ಕುರಿಯು ಬಲ್ಲುದೆ ತನ್ನ ಕೊರಲು ಕೊಯ್ಯವರೆಂದು ಮರುಳ ಬಲ್ಲನೆ ದೊರೆತ ನರಜನುಮ ಸಮಯ ನರಕದ ಹುಳ ಬಲ್ಲುದೆ ಕಾಳೋರಗನ ಹರಿದಾಟ ತಿರುಕ ಬಲ್ಲನೆ ಅರಸರ ಮನೆಯ ಸುದ್ದಿ 4 ಕಾಮಿಗಳು ಬಲ್ಲರೆ ನೇಮನಿತ್ಯದ ನಿಜವ ತಾಮಸರು ಬಲ್ಲರೆ ಸಾಮ ದಾನ ಗುಣವ ಪಾಮರರು ಬಲ್ಲರೆ ಭೂಮಿಯೊಳಧಿಕ ಮಮ ಸ್ವಾಮಿ ಶ್ರೀರಾಮನ ನಾಮಮಹಾತ್ಮೆಯನು 5
--------------
ರಾಮದಾಸರು
ಮೂರ್ತಿ ಪ ಲೋಕದ ಜನರಘವನು ತೊಳೆಯಲಿಕೆ ತ್ರೈ ಲೋಕ ದೊಡೆಯ ಚದಂಬರನಾಗಿ ಭೂಕಾಂತೆಯೊಳಗೆ ಮೂರ್ತಿ ದಯಾಪರ ಮೂರುತಿ 1 ಮಾಡಿಕೊಂಡ ಪಾಪದ ರಾಶಿಯು ದಿನ ದಿನ ಉರಿಗೊಂಡು ಸುಟ್ಟುದು ಮರೆಹೊಕ್ಕೆನೀಗಳು ಪಾದ ಪುಂಡರೀಕವನು ಚಿದಂಬರಮೂರ್ತಿ 2 ಹೊನ್ನು ಹಣವ ಚಿನ್ನ ಚಿಗುರು ಬೇಡುವನಲ್ಲ ಪಾದ ಪದ್ಮದ ಸ್ಮರಣೆಯನು ಸಂಪೂರ್ಣವಾಗಿರುವ ನಿತ್ಯ ಸುಖಾರ್ಣವಾನಂದ ಚಿದಂಬರಮೂರ್ತಿ 3 ಬೇಡುವೆನೊಂದು ವರವ ಕೊಡುವರೆ ಈ ಗೂಡಿರುವತನಕ ಕೃಪೆಮಾಡಿ ಸಲಹೋ ಎನ್ನ ನೋಡಿ ಬಡವನ ಚಿದಂಬರಮೂರ್ತಿ 4 ಪ್ರಾಕುನುಡಿದ ಪುಣ್ಯದಿಂದ ನಿಮ್ಮಯಪಾದ ಸೇರೆ ನಾ ಕೃತ ಕೃತ್ಯನಾದೆ ನಿಂದಿನ ಜನ್ಮ ಸಾರ್ಥಕ ವಾಯ್ತು ಪರಾಕೆ ಚಿದಂಬರ ನೀ ಕರುಣಿಸೋ ಎನಗಭಯವಿತ್ತು 5
--------------
ಕವಿ ಪರಮದೇವದಾಸರು
ಮೂರ್ತಿ ಚಿನ್ಮಯಾತ್ಮಕ ರೂಪ ಸಂತತದಿ ನೆನೆವವರ ಸಲಹೊ ಕರುಣಿ ಪ. ತುಂಬಿ ಇರುತಿಹುದು ಎಂತು ನಿನ್ನಾಟ ಪೇಳ್ ನಿಗಮವೇದ್ಯ ಚಿಂತೆ ಎನಗೊಂದಿಲ್ಲ ಅಂತರಂಗದಿ ನೆಲೆಸಿ ಸಂತತದಿ ನಿನ ಧ್ಯಾನ ನೀಡೆಂಬೆನೊ 1 ದೇಶಾಧಿಪತಿಗಳಿಗೆ ಕೋಶ ತುಂಬದ ಚಿಂತೆ ದೇಶ ತಿರುಗುವನಿಗೆ ಹಣದ ಚಿಂತೆ ದೇಶಸ್ಥನಾದವಗೆ ರಾಜಭಟರಾ ಚಿಂತೆ ಕಾಶಿಯಲ್ಲಿರುವವಗೆ ಮನೆಯ ಚಿಂತೆ 2 ಜಾರಿಣಿಗೆ ವಿಟನೊಬ್ಬ ಬಾರದಿರುವ ಚಿಂತೆ ಚೋರನಿಗೆ ರವಿ ಮುಳುಗದಿರುವ ಚಿಂತೆ ಮಾರನಿಗೆ ಯೋಗಿಗಳ ಹೃದಯ ಭೇದಿಪ ಚಿಂತೆ ಪತಿ ಒಲುಮೆ ಪಡೆವ ಚಿಂತೆ 3 ಕರ್ಮತತ್ಪರರಿಗೆ ಹರಿಮರ್ಮವರಿಯದ ಚಿಂತೆ ಧರ್ಮಪುರುಷಗೆ ಕಲಿಬಾಧೆಯ ಚಿಂತೆ ವೇದಶಾಸ್ತ್ರಜ್ಞನಿಗೆ ವಾದಿಯ ಭಯ ಚಿಂತೆ ಹಾದಿ ನಡೆವಗೆ ದುಷ್ಟ ಜನರ ಚಿಂತೆ 4 ಸಾಧು ಸಜ್ಜನರಿಗೆ ಬಾಧೆ ಕೊಡುವರ ಚಿಂತೆ ಹಾದಿ ತಪ್ಪಿದ ಪಾಪಿಗೆ ಯಮನ ಚಿಂತೆ ವಾಣಿಜ್ಯತನದವಗೆ ಹಣವು ಗಳಿಸುವ ಚಿಂತೆ ಮಾನವಂತರಿಗೂನ ನುಡಿಯ ಚಿಂತೆ 5 ಇಂತೆಲ್ಲರಾ ಚಿಂತೆ ಇರಲಿ ಕೇಳ್ ಹರಿಯೆ ಚಿಂತೆ ಬಿಡಿಸೆನಗೆ ನೀನೊಲಿದು ದೊರೆಯೆ ಚಿಂತನೆಗೆ ಸಿಗದಿಹುದು ನಿನಗೆ ಸರಿಯೆ ಚಿಂತಿಪರಿಗೊಲಿವಂಥ ಸಿರಿಕಾಂತ ಹರಿಯೆ6 ಶಾಂತ ಮೂರುತಿ ಪರಮ ಕರುಣಾಳುವೆನ್ನುತಲಿ ಎಂತೆಂತೂ ಸಜ್ಜನರು ಸ್ತುತಿಪುದನು ಕೇಳುತಲಿ ಇಂತು ನಿನ ಪದವನಾನ್ಹಾರೈಸಿ ಬಂದರೂ ನಿಂತರೂ ಎದುರಲ್ಲಿ ನೀನೊಲಿಯಲಿಲ್ಲ 7 ಕರಮುಗಿದು ಎರಗಿದರೂ ಶಿರಬಾಗಿ ನಮಿಸಿದರೂ ಚರಣದಲಿ ತನುಮನ ಒಪ್ಪಿಸಿದರೂ ಕರಗಲಿಲವು ಮನಸು ಕರುಣಪುಟ್ಟಲು ಕಾಣೆ ಭರವಸೆಯು ನಿನ್ನಲ್ಲಿ ಮೂಡಲಿಲ್ಲ 8 ಶಿರದಿ ಕರವಿಡಲಿಲ್ಲ ತೊರೆದೆಯೊ ಜರಿದೆಯೊ ವರಭಕ್ತಿ ಸಾಲದೊ ಗುರುವಿಕೆಯೊ ದೊರೆತನವೊ ಅರಹೊಟ್ಟೆ ಜೀವಿಸುತ ಅರಿಯದೆ ಮತ್ತೊಂದು ಇರುಳು ಹಗಲಾಲ್ಪರಿವ ತೆರವು ತೋರದೊ ಮನಕೆ 9 ಸರಿಯಲ್ಲ ಸರಿಯಲ್ಲ ಕರುಣಾಳುವೆಂಬುವೋ ಬಿರುದುಳಿವ ತೆರವಿಲ್ಲ ಬಿಂಕಪಟ್ಟರೆ ಈಗ ಕರೆದು ಮನ್ನಿಸೊ ಪಾಂಡುರಂಗವಿಠ್ಠಲ ದೇವ ವರ ಪುಂಡಲೀಕಗೆ ಒಲಿದದ್ದು ನಿಜವಾಗೆ 10 ಪರಿಪರಿಯ ಭಕ್ತರನು ಪೊರೆದದ್ದು ನಿಜವಾಗೆ ಹರಿದಾಸ ಸಂತತಿಗೆ ಮನೆದೈವ ನಿಜವಾಗೆ ಸರಿಯಿಲ್ಲದಾ ದೈವ ನೀನೆಂದು ನಿಜವಾಗೆ ಹೊರವೊಳಗೆ ಒಂದಾಗಿ ಕರಪಿಡಿದು ಸಲಹಿನ್ನು 11 ಗುರುಕೊಟ್ಟ ವರಬಲದಿ ಶರಣು ಪೊಂದಿದೆ ನಿನಗೆ ಚರಣದಲಿ ಬಿದ್ದಿರುವೆ ಪರಮ ಪುರುಷನೆ ದೇವ ಸ್ಮರಪಿತನೆ ಗೋಪಾಲಕೃಷ್ಣವಿಠ್ಠಲ ನಿನ್ನ ಸ್ಮರಣೆ ಮಾಡಿದ ಮೇಲೆ ಭವದ ಭಯ ಉಂಟೆ 12
--------------
ಅಂಬಾಬಾಯಿ
ಮೂರ್ತಿ ನೀ ಕರುಣಿಸೊ ಪ್ರಭುವೇ ಪ ಎಲ್ಲೆಲ್ಲಿ ನೋಡಲಲ್ಲಿಲ್ಲಿ ನಿಮ್ಮಯ ಕೀರ್ತಿಯನು ಮೊರೆಹೊಕ್ಕ ಸುಜನರ ಪೊರೆವರೆಂಬ ಬಿರುದು ಕೇಳಿ ತ್ವರಿತದಿಂದಲಿ ಬಂದೆನೋ ಭರದೀ ಹಾರೈಸು ಕರುಣಾ ಶರಧೀ 1 ಇಷ್ಟಾರ್ಥಗಳನಿತ್ತು ಸಲಹಿದೆ ತುಪ್ಪರಾಗುತಲವರ ಕಷ್ಟಗಳನೇ ಕಳೆದೆ ಉದ್ಧರಿಸಿದೆ ಅಷ್ಟ ಸೌಭಾಗ್ಯವ ಕೊಟ್ಟು ರಕ್ಷಿಸಿದೇ - ಕೈಬಿಡದೇ 2 ಅಡಿಗಳಿಗೆರಗುತಲಿ ನುಡಿ ನುಡಿಗೆ ತುತಿಸಲಿ ಬಿಡದೆ ನಿನ್ನನು ಕೊಂಡಾಡುತಲಿ ತಡಮಾಡದೆ ಯಡರುಗಳ ಪರಿಹರಿಸಿದೆ ನಿಮ್ಮ ಮಹಿಮೆಗೆ ಸರಿಗಾಣೆ ಭೂಮಂಡಲದೊಳಗೇ ಪ್ರಭವೇ 3
--------------
ರಾಧಾಬಾಯಿ
ಮೂಲ ಕಾರಣ ವಿಠಲ | ಪಾಲಿಸಿವಳಾ ಪ ಲೀಲಾ ಮನೋರೂಪ | ಬಾಲಗೋಪಾಲಾ ಅ.ಪ. ಕರ್ಮಕರ್ಮಗಳ | ಮರ್ಮಗಳ ತಿಳಿಸುತ್ತಕರ್ಮ ನಾಮಕ ಕಾಯೊ | ಪೇರ್ಮೆಯಲಿ ಇವಳಾದುರ್ಮತಧ್ವಾಂತಾಕ | ಸಮೀರ ಮತ ತಿಳಿಸಿನಿರ್ಮಲಾತ್ಮನೆ ಸಲಹೊ | ಭರ್ಮ ಗರ್ಭಾತ್ಮ 1 ಸುಖ ದುಃಖ ದ್ವಂದಗಳು | ಸಕಲಕ್ಕು ಶ್ರೀ ಹರಿಯೆಮುಖ್ಯ ಕಾರುಣಾನೆಂಬ | ಸುಖತೀರ್ಥ ಭಾವಾ |ಕಕುಲಾತಿಯಿಲ್ಲದೆ | ತ್ರೈಕರಣ ಪೂರ್ವಕದಿನಿಖಿಲಾತ್ಮ ಕೃತವೆಂಬ | ಯುಕುತಿಯನೆ ತಿಳಿಸೋ 2 ಪತಿಸುತರು ಹಿತರಲ್ಲಿ | ವ್ಯಾಪ್ತನಾಗಿಹ ಹರಿಯಹಿತದಿಂದ ಸೇವೆಯಲಿ | ಕೃತಕೃತ್ಯಳೆನಿಸಿಮತಿಮತಾಂವರರಂಘ್ರಿ | ಶತಪತ್ರ ನಮಿಪ ಸ-ನ್ಮತಿಯನ್ನೆ ಪಾಲಿಸೋ | ಕೃತಿರಮಣದೇವ 3 ಗಜ ಪಂಚಾಸ್ಯ | ಪರಿಹರಿಸಿ ಇವಳ ಘವಸರ್ವದ ಪೊರೆಯಲ್ಕೆ | ಹರಿಯೆ ಬಿನ್ನವಿಪೇ 4 ಸೃಷ್ಟಿ ಸ್ಥಿತಿ ಸಂಹಾರ | ಅಪ್ಟ ಕರ್ತೃತ್ವಗಳಸುಷ್ಠು ಚಿಂತನೆಯಲ್ಲಿ | ನೆಟ್ಟ ಮನವಿರಿಸೀಕೃಷ್ಣ ಗುರು ಗೋವಿಂದ | ವಿಠಲನೇ ಗತಿಯೆಂಬಶ್ರೇಷ್ಠ ಮತಿಯಲಿ ಭವದ | ಕಟ್ಟನೇ ಬಿಡಿಸೋ5
--------------
ಗುರುಗೋವಿಂದವಿಠಲರು
ಮೂಲನಾರಾಯಣ ವಟಪತ್ರಶಾಯಿ ಕಾಲಕಾಲಕೆ ವೊದಗಿ ನೀಯೆನ್ನ ಕಾಯೋ ಪ. ಎಂದೆಂದಿಗೂ ಎನಗೆ ತಂದೆ ನೀ ದೇವಾ ಯಿಂದೆನ್ನ ಕರಪಿಡಿಯೋ ಬಿಂದುಮಾಧವಾ ಅ.ಪ. ಸ್ವಚ್ಛ ಮನವಮಾಡು ಮತ್ಸರೂಪಕನೆ ತುಚ್ಛ ಮನಕೊಂದ ವಿಶ್ವವ್ಯಾಪಕನೆ 1 ಮುಂದೆನ್ನ ಉದ್ಧರಿಸು ಮಂಧರೋದ್ದರನೆ ಇಂದ್ರಾದಿ ಸುರರಿಂದ ವಂದ್ಯಾಸುರವರನೆ 2 ಹಿರಣ್ಯಾಕ್ಷನ ತರಿದಂಥ ಧೀರ ಭರಧಿ ವೇದವ ತಂದ ಮಹಿಮೆ ಅಪಾರ 3 ತರಳ ಪ್ರಹ್ಲಾದನ ತಲೆಗಾಯ್ದ ರೂಪ ಸರಳ ಮತಿಯನಿತ್ತು ಪಾಲಿಸು ಶ್ರೀಶ 4 ಬಲಿಯ ಸಿಕ್ಕನು ಮುರಿದೆ ಪ್ರಬು ನಿನ್ನ ಕೀರ್ತಿ ಯೊಳ ಎನ್ನ ಮನವಿಡು ವಾಮನಮೂರ್ತಿ 5 ಕ್ಷತ್ರಿಯ ಕುಂಭವ ಸವರಿದ ರಾಮ ಶತಷಟ್ಯಂದರ ಬಡಿದ ದಿವ್ಯ ನಾಮ 6 ದಾನವ ಕುಲಕುಟಾರ ಶ್ರೀ ರಾಮ ಮಾನಾಭಿಮಾನವು ನಿನ್ನದೋ ರಮ 7 ಮಲ್ಲರ ಗೆದ್ದಂಥ ದೂಕುಳ ವೈರಿ ಗೊಲ್ಲಬಾಲಕರ ಕೂಡಾಡಿದ ಶೌರಿ ಶೌರಿ 8 ತ್ರಿಪುರರ ಸ್ತ್ರೀಯರ ವ್ರತ ಕೆಡಿಸಿದ ಜಾಣ ಉಪಗಮನ ವೀಯೋ ವಿಶ್ವೇಶ ಸುಜ್ಞಾನ 9 ಕಲಿಮುಖದೈತ್ಯರ ಅಳಿಯುವ ಕಲ್ಕಿ ಸಲಹೋ ಬಳಲುವೆ ನಾನು ಭವದಿಂ ಶಿಲ್ಕಿ10 ಗುರು ಕಾಳೀಮರ್ಧನಕೃಷ್ಣ ಯಾವಾಗ್ಯು ಶರಣುಜನರಪಾಲ ಏನು ಬಂದಾಗ್ಯು 11
--------------
ಕಳಸದ ಸುಂದರಮ್ಮ
ಮೃಗಮೋಹಿನಿಯೊಡನೇಕೋ ಪಂಥ ಪ ಕಾಂತ ಸಿರಿಕಾಂತ ಸುರನಗರಾಧಿಪ ಅ- ನಂತ ಗುಣವಂತ ದೇವಾ ಎನ್ನ ಸಲಹೊ ಅ.ಪ ಸುಲಲಿತ ಲತಾಂಗಿ ನಿನ್ನೊಲುಮೆಯಲ್ಲಿ ನೆರೆಹೊಂಗಿ- ಸಲೆ ಮನವ ಮಾಡಿ| ನಿನ್ನಗಲಿ ಬಾಯಾರಿ ಬಲು ವಿರಹದಾಸರಿನ ಬೇಸರಿನಲ್ಲಿ ಯಿಂ_ ತಳಿದವಳ ಕಾಯೊ ಸಿರಿಧಾಮ ಗುಣಧಾಮ 1 ಕಳಕಳಿಪ ನೋಟ ಕಾತರಿಪ ವಿರಹದ ಹೂಟ ಅಳಲು ಮನ ಅಳಿನಿದ್ರೆ ನಿನಗಾಲಯ ಮುದ್ರೆ ಅಳಿದುಳಿಸು ಲಜ್ಜೆಗೇಡುಗಳ ಪಾಡುಗಳ ಇಂ- ತುಳಿದವಳ ಕಾಯೊ ಸಿರಿಧಾಮ ಗುಣಧಾಮ 2 ಮೂರಾರವಸ್ಥೆಗಳ ನೀರಿಕಡೆಯನವಸ್ಥೆ ಮಾತಿರುವಳೆ ಬಾಲೆ ನಿನಗೆದ್ದ ಮೇಲೆ ನಾರಿಯೆಡೆಗೈದರಲೆಗಲಿಪ್ಪಿ ಬಿಗಿದಪ್ಪಿ ಸೊಗಸೇ ತೋರಿಸಿದನಮರ ಪುರಿಪಾಲ ಸಿರಿಲೋಲ 3
--------------
ಕವಿ ಲಕ್ಷ್ಮೀಶ
ಮೃತ್ಯುವಿಗೆ ಶ್ರೀನರಕೇಸರೀ ||ಅ|| ಭೃತ್ಯನ್ನ ಪಾಲಿಪುದು ಅತಿಶಯವೆ ನಿನಗೆ ಅ.ಪ. ಮೋದ ಪಡಿಸುತಲವನಬಾಧೆ ಪಡಿಸದೆ ಮನದಿ | ಐದಿಸೋ ಮನೆಗೆ 1 ಸರ್ವ ಪ್ರೇರಕನೆಂದು | ಸರ್ವ ವಿಧ ಬೇಡುವೆನೊಪರ್ವ ಕಾಲದಿ ಕೈಯ್ಯ | ಬಿಡದೆ ಸಲಹೋ |ಶರ್ವಾದಿ ಸುರವಂದ್ಯ | ಸರ್ವಜ್ಞ ಶ್ರೀ ಹರಿಯೆದುರ್ವಿಭಾವ್ಯನೆ ದೇವ | ದರ್ವಿ ಜೀವನ ಕಾಯೋ 2 ಅತಿ ದಯಾ ಪರನೆಂದು | ಮತಿಯಿಂದ ಮೊರೆಯಿಡುವೆಹಿತದಿಂದ ಸಲಹುವುದು | ಪ್ರತಿ ರಹಿತ ದೇವಾ |ಗತಿ ಗೋತ್ರನಾದ ಗುರು | ಗೋವಿಂದ ವಿಠ್ಠಲನೆಯತನ ನಮ್ಮದು ಕಾಣೆ | ನೀನಾಗಿ ಪೊರೆಯೋ 3
--------------
ಗುರುಗೋವಿಂದವಿಠಲರು
ಮೈಸೂರು ವೈಕುಂಠದಾಸರಿಂದಧರಣಿಕಧಿಕವಾದ ಗುರುರಂಗಸ್ವಾ'ುಯೆಚರಣಕಮಲಕೆ ನಮೊ ನಮೊಭರತಪುರೀಯೊಳೂ ತುಲಸೀರಾಮರಸ್ಥಿರಪಡಿಸಿದ ಗುರು ನಮೊ ನಮೊವೇದಾಂತಗಳ ಭೇದವ ತಿಳಿದೂ ಆದಿಯ ತೋರಿಸಿದೆ ನಮೊ ನಮೊಸಾಧೂಜನಗಳ ಸೇವೆಯೊಳಿರಿಸಿಸ್ವಾಧೀನ ಮಾಡಿಕೊಂಡೆ ನಮೊ ನಮೊಬೋಧಾಮೃತವೆಂವ ನಾದವತುಂಬಿಶೋಧನೆ ಮಾಡಿಕೊಂಡೆ ನಮೊ ನಮೊರಾಧಾರುಕ್ಮಿಣಿರಮಣನ ಸೇವೆಯಹೃದಯದೊಳಿರಿಸಿದೆ ನಮೊ ನಮೊಪೂರ್ವಜನ್ಮದ ಸುಕೃತಫಲದಿ ನಿಂಮ್ಮ[ವರ]ದಾಸನಾದೆನೊ ನಮೊ ನಮೊಪರ್ವತಾಕಾರದಿ ಪಾ¥ವ ಮಾಡಿದೆನೂಪರಿಹರಿಸೆನ್ನನು ನಮೊ ನಮೊರಾಮಕೃಷ್ಣೋತ್ಸವ ನಾಮಧ್ಯಾನವ ನೇಮದಿಪಾಡುವೆ ನಮೊ ನಮೊಸೋಮಸುಂದರಾ ಜಗದಭಿರಾಮನೇಪ್ರೇಮದಿಸಲಹೈ ನಮೊ ನಮೊದೀನದಯಾಪರದಾಸಜನೊತ್ತಮಧ್ಯಾನದೊಳಿರಿಸೆನ್ನ ನಮೊ ನಮೊಸ್ವಾನುಭಾವದೀ ದಾನವ ಬೇಡುವೆದೀನನ ಸಲಹೈ ನಮೊ ನಮೊವರಗುರುಪಾದಕೆ ವಂದಿಪೆ ನಿರತವೂವೈದಿಕೋತ್ತಮನೆ ನಮೊ ನಮೊಪರಮಪುರುಷನೆ ಪತಿತೋದ್ಧಾರನೇವರರಾಮದಾಸಪಾಲ ನಮೊನಮೊ
--------------
ಮಳಿಗೆ ರಂಗಸ್ವಾಮಿದಾಸರು
ಮೊರೆಯ ಲಾಲಿಸಬೇಕು ಮರುಗಿ ದಮ್ಮಯ್ಯಾವರದ ಸದ್ಗುರುರಾಯ ವಾಸುದೇವಾರ್ಯ ಪ *ಜನನೀಯ ಜಠರಾದಿ ಜಪಿಸಿದ ಸ್ಥಿತಿಯಾನೆನೆಯಾದೆ ಮರೆತಂಥ ನೀಚಾ ನಾನಯ್ಯಾಸನಿಹವನ ಸೇರಾದೆ ಸುಜ್ಞಾನರಡಿಯಾಕಣುಗೆಟ್ಟು ದಾರಿಯಕಾಣೆ ಗುರುರಾಯಾ 1ಕಾಮಾದಿ ರಿಪುಗಾಳ ಕೂಟದಿ ನಿಂದುಪ್ರೇಮಪಾಶದ ಕಟ್ಟು ಬಿಗಿಯಾಗಿ ಬಂದುಭೀಮಸಂಸಾರದಿ ಬಿದ್ದನಿವನೆಂದುನೀ ಮನಕೆಚ್ಚರ'ತ್ತು ಸೆಳಕೊಂಡು 2ಕೊಳಚೆಯೊಳಿಪ್ಪಾ ಸೂಕರ ವಾಸನೆಯುತೊಲಗಿ ಪೋಗಲಿಯೆಂದು ತೋರ್ಪುದೆ ಮತಿಯುಹೊಲೆದೇಹ ನಾನೆಂಬ ಹಳೆಯ ಸಂಗತಿಯುಬಲಿತಿದೆ ನೀನಿದ ಬಿಡಿಸಿ ಸನ್ಮತಿಯ 3ಸಾಲವ ತಂದು ಸ' ಸ'ಯಾಗಿ ತಿಂದೂಬಾಳುತಿರೇ ಕೊಟ್ಟವ ಬಡ್ಡಿ ಬೇಕೆಂದುಕೇಳಿ ಬಾಧಿಸಲೇತಕೆ ಕಡಗೈದೆನೆಂದುಆಲೋಚಿಪಂತೆಚ್ಚರಾುತೆನಗಿಂದು 4ಬರುವುದು ಸುಖವೆಂದು ಬಲುಯತ್ನಗೈದುಸೊರಗಿದೆನಲ್ಲದೆ ಸುಖಗಾಣೆ ನೊಂದುಕರಣಕೆಚ್ಚರವೊ ಕರುಣಿಸಲ್ಪ'ದುಕರಪಿಡಿದುಳುಹೆಂದು ಕೂಗಿದೆನಿಂದು 5ುೀ ದಯಾರಸಕೆ ನಾನೀವೆನೇನುವನುಪಾದಪದ್ಮವ ನಂಬಿ ಪಾಲಿಸೆಂಬುವನುಆದರಿಸುತ ಭಕ್ತಿಯಾನಂದವನ್ನುವೇದವೇದ್ಯನೆ ಕೊಟ್ಟು ಸಲಹು ನೀನಿನ್ನು 6ಪುಟ್ಟಿದಂದಿನಿಂದಾ ಮಡಿ ಮಡಿಯಾಗಿ ದುಡಿದುಘಟ್ಟಿಗತನವನು ಗಳಿಸಬೇಕೆಂದುಹೊಟ್ಟೆ ಹೊರಕರೊಳಾಡಿ ಹುಸಿಯನೆ ನುಡಿದುಕೆಟ್ಟು ಸುಖಗಾಣದೆ ಕೂಗಿದೆನಿಂದು 7ಸಾಕಾುತಯ್ಯಾ ಸಂಸಾರ ಕೋಟಲೆಯುನಾ ಕಾಣೆ ಸುಖವನು ನಿ'ುಷವಾದರೆಯುನೀಕರಿಸುವರಿಂದ ನಿರ್ವೇದ ಗತಿಯುಸೋಕಲು ನಿನ್ನೊಳು ಸಿಕ್ಕಿತು ಮತಿಯು 8ಧರೆಯೊಳಜ್ಞರ ನೋಡಿ ದಯದಿಂದ ಮುದದಿನರದೇಹದಾಳಿ ಚಿಕನಾಗಪುರವರದಿಒರೆದು ವೇದಾಂತರ್ಥವನು 'ಸ್ತರದಿ 1ಉದ್ಧರಿಸಿದೆ1 ವಾಸುದೇವಾರ್ಯ ಸುಖ ಪಥದಿ 9(ಈ) ಸಾಮಾಜಿಕ ಕೃತಿಗಳು
--------------
ವೆಂಕಟದಾಸರು
ಮೊರೆಹೊಕ್ಕೆ ಹರಿ ನಿಮ್ಮ ಚರಣಕಮಲವ ನಾನುಮರೆಯದೆ ಸಲಹೆನ್ನ ವರದಾ ಪಕರಿ ಧ್ರುವ ಪ್ರಹ್ಲಾದ ವಿಭೀಷಣರ ರಕ್ಷಿಸಿದೆಪರಂದೇವಿ ವಲ್ಲಭನೆ ವರದಾ ಅ ಎಂಬತ್ತು ನಾಲ್ಕು ಲಕ್ಷ ಜೀವರಾಶಿ ಯೋನಿಯೊಳುಹಂಬಲಿಸಿ ನಾ ಬಂದೆ ವರದಾಅಂಬುಜೋದ್ಭವನ ಬರೆಹವ ಮೀರಲಾರದೆ ನರಬೊಂಬೆ ಗರ್ಭದೊಳಿದ್ದೆ ವರದಾ 1 ತುಂಬಿದ್ದ ಕೀವು ಮಲಮೂತ್ರ ರಕ್ತದಿಂ ಹೊರಳುವಸಂಭ್ರಮದೊಳಿದ್ದೆ ನಾ ವರದಾಒಂಬತ್ತು ಮಾಸವು ಕಳೆದು ಗುಂಡಿಯೊಳಿಳಿದು ಈಕುಂಭಿನಿಗೆ ನಾ ಬಂದೆ ವರದಾ 2 ನಸುನುಡಿಯನು ಕಲಿತು ನಸುನಗೆಗಳ ನಕ್ಕು ಈ ಕುಶಲದಾಟವ ಕಲಿತೆ ವರದಾಎಸೆವ ಯೌವನ ಬಂದು ಶಶಿಮುಖಿಯರೊಳು ಕಾಮತೃಷೆಗೆ ನಾನೊಳಗಾದೆ ವರದಾ 3 ನುಸುಳಿಸುವ ಚಾಂಡಾಲ ಗುಣವನೆಣಿಸದೆ ಕಾಮವಶನಾಗಿ ನಾನಿದ್ದೆ ವರದಾಉಸುರಲೆನ್ನಳವಲ್ಲ ಬೆಸನಿತ್ತು ಸಲಹೆನ್ನಬಿಸರುಹಾಕ್ಷನೆ ಕಂಚಿ ವರದಾ 4 ಗುರು ಹಿರಿಯರ ಕಂಡು ಸರಿಸಮಾನದಿ ನಾನುಬೆರೆದುಕೊಂಡಿದ್ದೆನೋ ವರದಾನರರ ಕೊಂಡಾಡಿ ನಾಲಗೆಯೊಣಗಿ ಅತಿಯಾಗಿನರನರಳಿ ಬೆಂಡಾದೆ ವರದಾ 5 ಕಾಸಿಗಾಸೆಯ ಪಟ್ಟು ಸಹಸ್ರ ಲಕ್ಷದ ಪುಸಿಯಬೇಸರಿಸದೆ ಬೊಗಳಿದೆ ವರದಾವಿಶೇಷ ನಿಮ್ಮಂಘ್ರಿಯ ನಂಬಲಾರದೆ ಕೆಟ್ಟದೋಷಕನು ನಾನಾದೆ ವರದಾ 6 ಪಂಚೇಂದ್ರಿಯಗಳೊಳಗೆ ಸಂಚರಿಸುವೀ ಮನವುಕೊಂಚ ಗುಣಕೆಳೆಯುತಿದೆ ವರದಾಪಂಚತ್ರಿಂಶತ್ಕೋಟಿ ಭೂಮಂಡಲದೊಳೆನ್ನಂಥಪಂಚಪಾತಕನುಂಟೆ ವರದಾ 7 ಮುಂಚೆ ಶ್ರೀ ಹರಿಯೆ ನಿಮ್ಮ ವರಧ್ಯಾನ ಮಾಡುವರಪಂಚೆಯಲ್ಲಿರಿಸೆನ್ನ ವರದಾಪಂಚಬಾಣನ ಪಡೆದ ನೆಲೆಯಾದಿ ಕೇಶವ ಈ ಪ್ರಪಂಚವನು ಬಿಡಿಸೆನ್ನ ವರದಾ 8
--------------
ಕನಕದಾಸ
ಮೋದ ವಿಠಲ | ಪೊರೆ ಇವಳಾ ಪ ದಾನವಾಂತಕ ಕೃಷ್ಣ | ದೀನರುದ್ಧಾರೀ ಅ.ಪ. ದುರಿತಗಳ ಅಟ್ಟಳಿಯ | ಪರಿಹರಿಸಿ ಸಲಹಯ್ಯಕರುಣಾಳು ನರಹರಿಯೆ | ಮರು ತಂತರಾತ್ಮಶರಣಜನ ವತ್ಸಲನೆ | ಅರಿಗಳನೆ ಪರಿಹರಿಸಿಪೊರೆಯ ಬೇಕೀ ಶಿಶುವೆ | ಕಾರುಣ್ಯ ನಿಧಿಯೇ 1 ಪತಿ ಪ್ರಿಯ ಹರಿಯೆಹದ್ದುವಾಹನದೇವ | ಮಧ್ವಾಂತರಾತ್ಮ 2 ಭಾವಶುದ್ದದಿ ನಾಮ | ಓವಿಭಜಿಸುವಂಥಭಾವಭಕ್ತಿಯನಿತ್ತು | ಕಾಯೊ ಶ್ರೀ ಹರಿಯೇಶ್ರೀ ವರನೆ ಸರ್ವತ್ರ | ತವಸ್ಮರಣೆ ಇತ್ತಿವಳನೀವೊಲಿಯ ಬೇಕಯ್ಯ | ದೇವ ಹಯವದನಾ 3 ಬೋಧ ಮೋದ ಮೋದ ನರಹರಿಯೇ 4 ಭಾರ ನಿನದಿಹುದಯ್ಯಗುರ್ವಂತರಾತ್ಮ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಮೋಹನ ಕೃಷ್ಣವಿಠಲ | ಸಲಹ ಬೇಕಿವಳಾ ಪ ದೇಹ ಮಮತೆಯ ಕಳೆದು | ವೈರಾಗ್ಯವಿತ್ತೂ ಅ.ಪ. ವನಧಿ ಉತ್ತರಿಪ | ನವಪೋತ ಹರಿಯಾ |ಸ್ತವನ ಗೈಯುವ ಭಕ್ತಿ | ಪ್ರವಹ ಕೊಟ್ಟಿವಳಿಗೆಹವಣಿಸೋ ಸಾಧನವ | ಶ್ರೀವರನೆ ಕೃಷ್ಣಾ 1 ಭಾರತೀ ಪತಿಯಾದ | ಮಾರುತದ ಮತದಲ್ಲಿಸಾರತತ್ವವ ತಿಳಿಸಿ | ತೋರೋ ಸುಜ್ಞಾನ |ಮಾರುತಾಂತಾರ್ಗತನೆ | ಧೀರ ಸುಜನರ ಸಂಘಸಾರುವಂತೆಸಗೊ ಹರಿ | ಕಾರುಣ್ಯ ಮೂರ್ತೇ 2 ಪತಿಸುತರು ಹಿತರಲ್ಲಿ | ವ್ಯಾಪ್ತ ಶ್ರೀ ಹರಿಯೆಂಬಗುಪ್ತ ಮಹಿಮೆಯ ತಿಳಿದು | ಸೇವೆ ಸಲ್ಲಿಸುತಾ |ಅತಿಶಯದ ಆನಂದ | ಗತಿಯ ಸೇರುವ ಹವಣೆಕೃತಿಪತಿಯ ತೋರೆಂದು | ಪ್ರಾರ್ಥಿಸುವೆ ಹರಿಯೇ 3 ಗುರುಕರುಣವಿಲ್ಲದಲೆ | ಹರಿಯೊಲಿಯನೆಂದೆಂಬವರತತ್ವ ಸಾರವನೆ | ಕರುಣಿಸುತ ಹರಿಯೇ |ಹರಿಗುರು ಸೇವೆಯನು | ಕರಣತ್ರಯದಲಿ ಮಾಳ್ದವರಮತಿಯ ಪಾಲಿಸುತ | ಪೊರೆಯ ಬೇಕಿವಳಾ 4 ಸೃಷ್ಠಿ ಸ್ಥಿತಿ ಲಯ ಕರ್ತ | ವಿಷ್ಣು ಲೀಲಾಮೃತವಸುಷ್ಟುಸಂತತ ಸವಿವ | ಶ್ರೇಷ್ಠ ಸಾಧನವಾಕೊಟ್ಟು ಪಾಲಿಪುದೆಂಬ | ಇಷ್ಟವನೆ ಸಲಿಸೆಂದುಕೃಷ್ಣ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 5
--------------
ಗುರುಗೋವಿಂದವಿಠಲರು
ಮೋಹನಾರ್ಯನೆ ಯೆನ್ನಾ | ಪೀಡಿಸುವ ಭವಮೋಹಕಳೆವುದು ಮುನ್ನಾ | ಹರಿಯಂಘ್ರಿ ಭಜನೆಯಈಹ ಕೊಡುವುದು ಇನ್ನಾ | ಭೂಸುರವರೇಣ್ಯಾ ಪ ದೇಹ ಮಮತೆಯ ದಾಶೆಯಲಿ ಸುಖ | ವಾಹಿನಿಗಳನುಭವಿಸೆ ಬಲುದುರ್‍ದೇಹ ಪೋಷಣೆಗೈದು ಹರಿಪದ | ಈಹಿಸದೆ ಬಲುನೊಂದೆ ಭವದಲಿ ಅ.ಪ. ಜಯದಲುದಿಸುತಲಂದೂ | ತಾರುಣ್ಯವನುನಿರ್‍ಭಯದಿ ಕಳೆದಿಹೆ ಬಂಧೂ | ವಿದ್ವೇಷದೊಳಗ್ಹರಿಹಯನನುಜ ವರ್ತಿಗಳಂದೂ | ಸಲಹಿದರು ಎನ್ನಯ ಭಯ ನಿವಾರಿಸುತಂದೂ | ಕಾರುಣ್ಯ ಸಿಂಧೂ ||ಹಯಮುಖನ ಪದ ಸತ್ಸರೋಜಗಳ್ | ದ್ವಯಭಜಿಪ ಮನವಿರದೆ ವಿಷಯದಹುಯಿಲಿನಲಿ ಬೆಂಡಾಗಿ ತಾಪದ | ತ್ರಯದಿ ಬಲು ಬಳಲಿರುವೆನಯ್ಯ |ಜಯದ ಸಂವತ್ಸರವು ಮರಳಿ | ಬಯಲು ಆಗದ ಮುನ್ನ ಹರಿಪದದ್ವಯಗಳನು ಕಾಂಬಂಥ ಹದನವ | ದಯದಿ ತೋರುತ ಸಲಹೊ ಬಂಧು 1 ಕಾಮಮದ ಮಾತ್ಸರ್ಯಾ | ಅರಿಗಳನಮನನೇಮನಿಷ್ಟಯ ಚರ್ಯಾ | ಕುಂದಿಸುತ ವಿಷಯಸ್ತೋಮ ಕಳೆಯುವರಯ್ಯ | ಈ ಪರಿಯ ಪರಿಭವಸೀಮೆ ಮೀರುವ ಚರ್ಯಾ | ಪರಿಹರಿಸೊ ಜೀಯ ||ಭ್ರಾಮಕತ್ರಯ ಮಾರಿಗೆನ್ನ ಸು | ಹೋಮಿಸುವ ದುರುಳನನು ಸದೆವತಾಮರಸಭವ ಪದಕೆ ಬರುತಿಹ | ಆ ಮಹಾ ಮಾರುತ ನೊಳಿರುವ |ರಾಮ ಚಂದ್ರ ಪದಾರವಿಂದವ |ಕಾಮಿಸುತ ತನ್ಮಹಿಮೆಗಳ ಸನ್‍ನಾಮ ಕೀರ್ತನೆಗೈದು ಮೋದಿಪ | ಪ್ರೇಮಮನವಿತ್ತೆನ್ನ ಸಲಹೋ 2 ನೀರೊಳಾಡುತ ಬಂದಾ | ಬೆನ್ನಿನಲಿ ಬಹುಭಾರ ಪೊತ್ತುದೆ ಛಂದಾ | ಅವನಿಯನು ತನಕೋರೆದಾಡೆಗಳಿಂದಾ | ತರಳನನು ಬಹುಘೋರರೂಪದಲಿಂದಾ | ಸಲಹಿದುದೆ ಛಂದಾ ||ಮೂರು ಪಾದವ ಬೇಡಿ ಬಲಿಯನು | ಭಾರಿ ಕೊಡಲಿಯ ಪೆತ್ತು ಪೆಗಲೋಳು |ಘೋರ ಅಟವಿಯ ತಿರುಗಿ ತಿರುಗಿ | ನಾರೆರೊಲುಮೆಗೆ ಸಿಲ್ಕಿ ತ್ರಿಪುರದನಾರಿಯರ ವ್ರತಗೆಡಿಸಿ ಹಯವನು | ಏರ್ದ ಗುರುಗೋವಿಂದ ವಿಠ್ಠಲಕಾರಣನು ಜಗಕೆಂಬ ಮತಿಯನು | ಧೀರಗುರು ಮೋಹನ್ನ ಕರುಣಿಸು 3
--------------
ಗುರುಗೋವಿಂದವಿಠಲರು
ಯಜ್ಞೋಪವೀತವೀವೆನೊ ನಿನಗೆ ಸ್ವಾಮಿ ಪ ಯಜ್ಞಪುರಷ ಮುನಿ ಯಜ್ಞಪಾಲಕನಿಗೆ ಅ.ಪ ಅಜ್ಞ್ಯಮನೋರಥನು ನಾನು | ಕಿಂ ಚಿಜ್ಞನೆಂದಿಗು ನಿನ್ನ ಪೊಂದಿದೆನು ಸುಜ್ಞಾನವೆಂಬುದು ಸ್ವಪ್ನದೊಳರಿಯೆ | ಸ ರ್ವಜ್ಞ ನಿನ್ನವನೆಂದು ವಿಜ್ಞಾನ ಪಾಲಿಸು 1 ಸಾಧು ಜನಪ್ರಿಯ ಸರೋಜಾಕ್ಷ ಪೂರ್ಣ ಬೊಧಾಮೃತ ಮಯದಿವಿಜ ಪಕ್ಷಾ ಕಾದುಕೊಂಡಿರುವೆ ಅನಾದಿಯಿಂದಲಿ ನಮ್ಮ ನಿ- ರಾದರಣೆ ಮಾಡದೆ ನೀ ದಯದಿಂದ ಸಲಹೊ 2 ಮುಕುತಿದಾಯಕ ದೇವಾಧಿದೇವಾ ನಿಜ ಭಕುತ ಜನರಿಗೆ ನೀನೇ ಸಂಜೀವಾ | ಆ ಯುಕುತ ಮಾತುಗಳಿದಲ್ಲ ವೇದಾಂತ ರಹಸ್ಯ ಸಕಲಾಧಾರನೆ ಶ್ರೀ ಗುರುರಾಮವಿಠಲ 3
--------------
ಗುರುರಾಮವಿಠಲ