ಒಟ್ಟು 3955 ಕಡೆಗಳಲ್ಲಿ , 115 ದಾಸರು , 2389 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀರ ತರಂಗಿಣಿ ತೀರ ನಾರಸಿಂಹ ಪ ಸಾರಿದೆನೊ ತವಪಾದ ಪಂಕಜ ತೋರು ಮನದಲಿ ತವಕದಿ ಅ ನಾರದನುತ ಚಿಚ್ಛರೀರವ ಶ್ರೀ ಭೂದು ರ್ಗಾರಮಣ ದುರಿತಾರಿ ಬ್ರಹ್ಮ ಸ ಮೀರ ಮುಖ ವಿಬುಧಾರ್ಚಿತ ಚಾರು ಚರಣಯುಗ ಕ್ಷೀರಾಬ್ಧಿ ಶಯನ ಮ ದ್ಭಾರ ನಿನ್ನದು ಮೂರು ಲೋಕದ ಸೂರಿಗಮ್ಯ ಸುಖಾತ್ಮಕ 1 ವೇದವೇದ್ಯ ಸಂಸಾರೋದಧಿ ತಾರಕ ಛೇದ ಭೇದ ವಿಷಾದವೇ ಮೊದ ಶ್ರೀದ ಶ್ರೀಶ ಅನಂತ ಆಪ್ತಕಾಮ ಬಾದರಾಯಣ ಭಕ್ತವರ ಪ್ರ ಹ್ಲಾದಪೋಷಕ ಪಾಹಿ ಮಾಂ 2 ಹೋತಹೃದ್ಯ ಜಗನ್ನಾಥವಿಠಲ ನಿನ್ನ ಮಾತು ಮಾತಿಗೆ ಸ್ಮರಿಸುತಿಹ ಸ ಚ್ಚೇತನರನು ನೀ ಸರ್ವದಾ ವೀತಶೋಕ ಭವಭೀತಿ ಬಿಡಿಸಿ ತವ ದೂತರೊಳಗಿಡು ಮಾತರಿಶ್ವಗ ಭೂತಭಾವನ ಭವ್ಯದ3
--------------
ಜಗನ್ನಾಥದಾಸರು
ನೀರಜದಳ ನೇತ್ರ ರಂಗಾ ಪುನ್ನಾಗೋತ್ತುಂಗ ಪ ಕ್ಷೀರವಾರಿಧಿ ನಿಲಯ ಶುಭಾಂಗ ಶ್ರೀರಮಾಲಿಂಗ ಅ.ಪ ವಿನುತ ಕರುಣಾ | ಪಾರ ಭಕ್ತ ವಿಹಾರ ಕಂಕಣ 1 ಸಂಸಾರಾಂಬುಧಿ ತರಣ ಶೌರೀ | ಹಂಸಗಮನನುತ ಮುರಾರಿ ಕಂಸವೈರಿ ಚಕ್ರಧಾರಿ | ಹಿಂಸೆ ಬಿಡಿಸೊ ಸೂತ್ರಧಾರಿ2 ಕರಿರಾಜವರದಾ ಸುಧಾಂಗ ತರಳ ವಾಮನಾಂಗ ಶುಭಾಂಗ ಕರುಣಾಪಾಂಗ ಮಾಂಗಿರಿರಂಗ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೀರೇ ದÉೂೀರೆ ದೋರೆ ರಂಗನಾ| ಕರೆ ತಾರೇ ಮುನಿಜನ ಸಂಗನಾ ಪ ಶರಣ ರಕ್ಷಕ ನೆಂಬೋ ಬಿರುದವ ಸಾರಲು | ಮೊರೆಯಾ ಹೊಕ್ಕೆನು ಕೇಳಿ ಬಂದುನಾ1 ಜ್ಞಾನ ಭಕುತಿಗಳ ಏನೇನರಿಯದ | ಮಾನಿನಿ ನೋಡುವರೇ ಅವಗುಣಾ 2 ಗುರುಮಹಿಪತಿ ಸುತ ಪ್ರಭು ಕರುಣಾಕರ | ನೆನದನು ಮೊರೆಕೇಳಿ ಇಂದಿನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀರೇರುಹಾನಯನ | ವಾರನಿಧಿ ನಡುಶಯನತೋರೆನಗೆ ತವ ಚರಣ | ಸುಗುಣ ಗಣ ಪೂರ್ಣ ಪ ಅಮಿತ ಕ್ಲೇಶ ಗೊಳಿಸದಂತೆನೀ ಸಲಹೋ ಎನ್ನ | ಶೇಷಾದ್ರಿ ವಾಸಾ ಪರೇಶಾ1 ಭವ | ಸಂಗದೊಳಗಿರಿಸೀಭಂಗ ಪಡಿಸುವಿ ದೊರೆಯೆ | ಶೃಂಗಾರ ನಿಧಿಯೇ |ಸಂಗ ವಿಷಯದಿ ಹರಿಸಿ ನಿ | ಸ್ಸಂಗನೆಂದೆನಿಸಿಲಿಂಗಾಂಗ ಕಳೆಯೊ ಹರಿ | ರಂಗ ಭವಹಾರಿ2 ಸಾಮಸನ್ನುತ ಚರಣ | ಭೂಮಗುಣಿ ಸುಸ್ತವನಪ್ರೇಮದಲಿ ಗೈವ ಮನ | ನೇಮವೀಯೆಲೊ ವಾಮನ |ಈ ಮಹಾ ಕಲಿಯುಗದಿ | ನಾಮ ನಿಸನ್ನದೆ ಗತಿಯೆಶ್ರೀಮಹೀ ಸೇವಿತನೆ | ರಾಮ ಗುಣಧಾಮ 3 ಭವ | ರೋಗ ವೈದ್ಯನೆ ಎನ್ನರೋಗ ಹರಿಸುವುದರಿದೆ | ಇದು ನಿನ್ನ ಬಿರುದೇ4 ನಿರವದ್ಯ ಆದ್ಯಾಅರುಹಲೇನಿಹುದಿನ್ನು | ಸರ್ವಜ್ಞ ನೀನಿನ್ನು ಒರೆವೆನೆಂಬಪರಾಧ | ಮರೆದು ಪಾಲಿಸು ಶ್ರೀಶ 5
--------------
ಗುರುಗೋವಿಂದವಿಠಲರು
ನೀಲಮೇಘಶ್ಯಾಮಾ ಬಾರೊ ನೀವೊಂದು ಮುತ್ತ ತಾರೋ ಪ. ನೀರಜಾಕ್ಷ ನಲಿದು ಬಾರೊ ನಗೆಮೊಗವನ್ನೆ ತೋರೊ ಅ.ಪ. ನಿನ್ನ ಸಮರ್ಯಾರೊ ಕೃಷ್ಣಾ ಸನ್ನುತಾಂಗ ಓಡಿ ಬಾರೋ ಬೆಣ್ಣೆಕೋಲು ಬೆಂಡು ಬುಗುರಿ ಚಿನ್ನ ರನ್ನ ಕೊಡುವೆ ಬಾರೋ 1 ಮುತ್ತಿನಂಗಿ ಕೊಡಿಸುವೇನೂ ರತ್ನತಿಲಕವಿಡುವೆ ಬಾರೋ ವತ್ತಿ ನಿನ್ನ ಬಾಯೊಳೂದೆ ರತ್ನ ಕೊಳಲ ಕೊಡುವೆ ಬಾರೋ 2 ಸ್ವರ್ಣಮಯೂರಂಗವ ತೋರೊ ನೀಲವರ್ಣಾ ಚಂದ್ರಬಿಂಬ ಬಾರೋ 3 ಭಕ್ತಿ ಸುರಧೇನುಬಾರೊ ಮುಕ್ತಿದಾತ ಶ್ರೀ ಶ್ರೀನಿವಾಸ ಮಾಧವ ಬಾರೋ 4
--------------
ಸರಸ್ವತಿ ಬಾಯಿ
ನೃತ್ಯವನವಧರಿಸು ನಿರುಪಮ ನೃತ್ಯವನವಧರಿಸು ಪ ನರ್ತನಕರ್ತುವು ನೀನೆಯಾಗಲು ಅ.ಪ ಪ್ರಥಮದಿ ಸ್ವರವುಂ ಹೊರಡಲು ತಾಳವು ಮಿಥುನದಿ ನಾಂದಿಯ ಮಾಡಲು ವಿಧಿಯಿಂ1 ಮರ್ದಳನಾದವು ಮೂಡಲು ಹಾಗೆ ಮಾನಿನಿ ನಿಲಲು 2 ರಂಗವು ರಂಜಿಸಿ ರಾಗಗಳಿಂದಲು ಮಂಗಳನಾಟ್ಯವು ಮುಂಗುಡಿಸಾಗಲು 3 ರಾಗದ ಭೇದಗಳ್ ರೂಢಿಗಳಾಗುತ ಸಾಗಲು ಲಯಗತಿಸಹಿತದಿ ಬೆಳೆದು 4 ಆಡುವ ನೃತ್ಯವರ್ನರ್ಪಿಪೆ ತಿರುಪತಿನಾಡಿನ ವೆಂಕಟನಾಥನೆ ಲಾಲಿಸು 5
--------------
ತಿಮ್ಮಪ್ಪದಾಸರು
ನೃತ್ಯವನವಧರಿಸು ಮಾಯೆಯ ನ್ಯತ್ಯವನವಧರಿಸು ಪ ಕೃತ್ಯವು ಶ್ರೀಹರಿ ಕಟ್ಟಳೆಯಾಗಲು ಅ.ಪ ಸ್ವರವೆನೆ ಪ್ರಣವದ ಸೌಮ್ಯದ ನಾದವು ಯೆರಡೊಂದೆಂದರೆ ಈಶನು ಪ್ರಕೃತಿಯು 1 ಮರ್ದಳವೆಂದರೆ ಮೊದಲ ಮಹತ್ತದು ಮಾನಿನಿ ಮಾಯೆಯೆಂದೆನಿಪಳು2 ರಂಗವು ನಿನ್ನಯ ರತಿಕರ ನೋಟವು ಸಂಗಿಸೆ ನಮ್ಮಯ ಶಿರದಲಿ ಕುಣಿವಳು 3 ಭಂಗಿಸಿ ಭಂಗಿಸಿ ಭವದಲಿ ಮೆಟ್ಟುತ ಹಿಂಗದ ರೀತಿಗೆ ಹೀಗಾಡುವಳು4 ಮುಂಗುಡಿಯೆಂದರೆ ಮೊದಲಹಂಕಾರವು ತೊಂಗುತ ಭೂತಂಗಳ ಸಾಗಿಪುದು 5 ಮೊದಲಿನ ಕೊನೆಗಳು ಮಾತ್ರೆಗಳೈದವು ವೊದಗಿದ ಭೂತಗಳೊಡಲಾಗುವವು 6 ನಡದೀ ಕೊನೆಗಳು ನೂಕುತ ಬೆಳೆಯಲು ನೆಡುವವು ವೃಕ್ಷದ ನಿಡುಬೇರುಗಳು 7 ಒಡೆದಾ ಭೂತಗಳೊಂದೊಂದೈದವು ಬಿಡದವ ಬೆರಸುತ ಬಹುವಾಗುವವು 8 ಇಂತೀ ಲೋಕಗಳೀರೇಳೆಂತಲು ನಿಂತೇ ಕುಣಿವಳು ನಿನ್ನಯ ಮಾಯೆಯು 9 ಆಗಲು ಪ್ರಾಣಿಗಳಮಿತಗಳಿವರೊಳು ಭೋಗದ ಬಯಕೆಯೆ ಬಹು ರಾಗಗಳು10 ಲಯೆಗಳು ಕ್ರಿಯೆಗಳು ಲೋಕಗಳತಿಗಳುನಿಯಿಮಿಸಿ ತಿರುಪತಿ ನಾಯಕ ನಿಂತವು11
--------------
ತಿಮ್ಮಪ್ಪದಾಸರು
ನೆನವಿರೆ ಸಾಕೆನಗೆ ಶ್ರೀಶನ ನೆನವಿರೆ ಸಾಕೆನಗೆ ಪ. ಘನದುರಿತ ಮಹೋದಯವ ನದಿಯ ದಾಟಲು ನೆನವಿರೆ ಸಾಕೆನಗೆ ಅ.ಪ. ಶ್ರೀ ಮಹೀಶ ಸಕಲಾಮರಗಣಸುತ ಕಾಮದ ಕೈರವದಳಧಾಮ ರಾಮಚಂದ್ರ ಸರ್ವಾಮಯ ಹರನಿ- ಸ್ಸೀಮಮಹಿಮ ನಿ:ಶ್ಯಾಮಲ ಮೂರ್ತಿಯ 1 ನೋಡುವ ಕರುಣ ಕಟಾಕ್ಷದಿ ಸ್ಮರಣೆಯ ಮಾಡುವ ಜನರನು ಮಮತೆಯಲಿ ಪಾಡಿ ಪೊಗಳಿ ಕುಣಿದಾಡಲು ತನ್ನನೆ ನೀಡಿ ನಿತ್ಯದಲಿ ನಲಿದಾಡುವ ಕರುಣಿಯ 2 ಮಂಗಲಮೋದತರಂಗ ಮಹೋದಧಿ ಭಂಗುರ ಭವಭಯ ಭಂಗದನ ಇಂಗಿತದಾವನ ತುಂಗ ಶೇಷಗಿರಿ ಶೃಂಗವಾಸ ಕನಕಾಂಗದ ಮಕುಟನ3
--------------
ತುಪಾಕಿ ವೆಂಕಟರಮಣಾಚಾರ್ಯ
ನೆನೆದು ನಮಿಸುವೆ ನಾನು ವಾರಂವಾರ ಪ ನೆನೆದು ನಮಿಸುವೆ ನಾನನುದಿನ ಹರಿಪದ ವನಜ ಮಧುಪರಾದ ಅನುಭವ ಶರಣರ ಅ.ಪ ಆದಿಮೂರುತಿತ್ರಯ ಮಧ್ವಮುನಿರೇಯ ಪದ್ಮನಾಭ ನರಹರಿ ಧ್ಯಾನ ಮಾಧವಾಕ್ಷೋಭ್ಯರ ಮಹಾ ಜಯತೀರ್ಥರಾ ರಾಧಕ ವಿದ್ಯಾದಿರಾಜ ಕವಿನಿಧಿ ಸಾದರ ವಾಗೀಂದ್ರ ಶಾಂತ ರಾಮಚಂದ್ರ ಸಾಧು ವಿದ್ಯಾನಿಧಿಯರ ರಘುನಾಥ ಮೇದಿನಿ ರಘುವರ್ಯರ ರಘೋತ್ತಮ ವೇದವ್ಯಾಸಾರ್ಯರ ವಾರಂವಾರ 1 ಇತ್ತ ವಿದ್ಯಾಧೀಶ ಈ ವೇದನಿಧಿ ಘೋಷ ಸತ್ಯವ್ರತರ ನಾಮ ಸತ್ಯನಿಧಿಯ ನೇಮ ಸತ್ಯನಾಥಾಖ್ಯಾತ ಸತ್ಯಾಭಿನವ ತೀರ್ಥ ಮತ್ತಿಳೆಯೊಳಗಿರ್ಪ ಮನಕೆ ಸೂಚಿಸಿ ಬಪ್ಪ ಕೃತ್ಯಮ್ ಸುಜ್ಞಾನ ಕೃಷ್ಣದ್ವೈಪಾಯನ ಇತ್ಯಧಿಕ ಸರ್ವರ ಜನದಲಿ ಅತ್ಯಧಿಕ ಮೀರ್ವರಾ ಪುರುಷಾರ್ಥ ಉತ್ತಮ ಪದಲಿರುವರಾ ವಾರಂ ವಾರ 2 ಶರಣೆಂದು ಆದ್ಯರ ಸಕಲ ಪ್ರಸಿದ್ಧರ ಶುಭ ವ್ಯಾಸರಾಯರ ವರ ಹಯಗ್ರೀವ ಜಗವರಿತ ವಾದಿರಾಜ ಪುರಂದರದಾಸ ಪುತ್ರರಾ ವರ ಮಧ್ವರಾ ನೆರೆ ತಾಳ ಪಾಕರ ನುತ ಮತಿ ಕನಕರ ಹರಿಭಕ್ತಿ ಉಲ್ಹಾಸರ ಬಂಡೆರಂಗ ನರಿತಿಹ ನಿಜದಾಸರ ಮಹಿಪತಿ ಗುರುಶರಣರ ತೋಷರ ವಾರಂ ವಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೆನೆವವಗೆ ಹರಿಯುಂಟು ನೆನೆಯದವಗೆ ಮದ ವೆಂಟು ಪ ನೆನೆವ ಮನವಿರಲುಂಟು ಮುನಿಸುತನ ನಂಟು ಅ.ಪ ನೆನೆವ ಧೃವನೂ ಗೆದ್ದ ಶುಕಮಹಾಮುನಿಗೆದ್ದ ನೆನೆವ ಹನುಮನೂ ಗೆದ್ದ ಶರಭಂಗ ಮುನಿಗೆದ್ದ ನೆನೆವ ಗಜಪತಿಗೆದ್ದ ವಾಲಿತನಯನೂ ಗೆದ್ದ ಕನಕದಾಸನು ಗೆದ್ದ ಇದು ಸರ್ವಸಿದ್ಧ 1 ಧುರದಿ ರಾವಣ ಬಿದ್ದ ವರವಿಭೀಷಣ ಗೆದ್ದ ದುರುಳ ಕಶಿಪೂ ಬಿದ್ದ ಪ್ರಹ್ಲಾದ ಶಿಶುಗೆದ್ದ ಹಿರಿಯವಾಲಿಯುಬಿದ್ದ ಸುಗ್ರೀವ ಗೆದ್ದ 2 ಸುಲಭನೊ ಮಾಂಗಿರಿಯ ರಂಗ ಜಗದಾನಂದ ಫಲವ ಕೊಟ್ಟಳಿಗೊಲಿದ ವಿಷಧರೆಯ ಸದೆದ ಬಲು ಮೆರೆದ ಕೌರವನ ಕುಲವಿನಾಶವ ಗೈದ ಚೆಲುವ ಮಾಂಗಿರಿರಂಗ ಶರಣರಿಗೆ ವರದ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೆನೆವವರ ಬಳಿಯಲಿ ನಗುವ ಮಣಿರದನ ಪ ಕುಪಿತನಾಗದೆ ಎನ್ನ ತಾಪವ ಬಿಡಿಸೋ 1 ಸ್ನಾನ ಸಂಧ್ಯೆಗಳಿಂದ ಜ್ಞಾನ ದೊರೆಯಲಿಲ್ಲ ಧ್ಯಾನಭಿಕ್ಷೆಯ ನೀಡೋ ಶ್ರೀನರಸಿಂಹ 2 ಮೂರ್ತಿ ಮಾತಂಗವರದ ನನ್ನ ಭಂಗಪಡಿಸಬೇಡ ಮಾಂಗಿರಿರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನೆನೆವೆನನುದಿನ ನೀಲನೀರದವರ್ಣನ ಗುಣರನ್ನನಮುನಿಜನಪ್ರಿಯ ಮುದ್ದು ಉಡುಪಿನ ರಂಗನ ದಯಾಪಾಂಗನ ಪ. ದೇವಕೀ ಜಠÀರೋದಯಾಂಬುಧಿಚಂದ್ರನ ಸುಖಸಾಂದ್ರನಗೋವ್ರಜಕೆ ಘನ ಯಮುನೆಯನು ದಾಟಿ ಬಂದನ ಅಲ್ಲಿ ನಿಂದನಮಾವ ಕಳುಹಿದ ಮಾಯಶಠವಿಯ ಕೊಂದನ ಚಿದಾನಂದನ ದೇವರಿಪು ದೈತ್ಯೇಂದ್ರ ಶಕಟನ ಒದ್ದನ ಶ್ರುತಿಸಿದ್ಧನ 1 ಗೋಕುಲದ ಗೋಪಿಯರ ಸಂಚಿತ್ತ ಚೋರನ ಬಹು ಧೀರನ ಅ-ನೇಕ ನಾರಿಯರ್ವಸನವನು ಕದ್ದೊಯ್ದನ ಪುರಗಾಯ್ದನನಾಕಿಯರ ನೋಯಿಪಧೇನುಕ ವತ್ಸವಿಘಾತ ವಿಖ್ಯಾತನಕಾಕುಮತಿ ಕಾಳಿಂಗನ ಫಣ ತುಳಿದನ ಆವಗೊಲಿದನ 2 ಕರ ಪಿಡಿದನ ಸುಧೆಗುಡಿದನಬಾಲ ಭಾಮೆಯರೊಡನೆ ಜಲಕ್ರೀಡೆಗಿಳಿದನ ಅಲ್ಲಿ ನಲಿದನಲೀಲೆಯಲಿ ಲಲನೆಯರಿಗಿಷ್ಟವ ಕೊಟ್ಟನ ಸಂತುಷ್ಟನ 3 ಕ್ರೂರ ಬಕ ಕೇಶಿಗಳನೆಲ್ಲ ಸೀಳ್ದನ ಸುರರಾಳ್ದನ ಅಕ್ರೂರ ಕರೆಯಲು ಹರುಷದಿಂದಲಿ ಬಂದನ ಸುರವಂದ್ಯನಸಾರಿ ಕುಬ್ಜೆಗೆ ಭೂರಿಸಂತಸವಿತ್ತನ ಅತಿಶಕ್ತನವಾರಣವ ಒದ್ದು ಕೆಡಹಿದಾಪ್ರತಿಮಲ್ಲನ ಅತಿಚೆಲ್ವನ4 ಸುಲಭದಿಂದಲಿ ಶಿವನ ಧನುವನು ಮುರಿದನ ನೆರೆಮೆರೆದನಮಲೆತÀ ಮಲ್ಲರ ಮಡುಹಿರಂಗದಿ ನಿಂತನ ಜಯವಂತನಖಳಕುಲಾಗ್ರಣಿ ಕಂಸನೆಂಬನ ಹೊಡೆದನ ಹುಡಿಗೆಡೆದನಬಲದಿ ತಾಯಿತಂದೆ ಬಂಧನ ಕಡಿದನ ಕೀರ್ತಿ ಪಡೆದನ 5 ಭುವನ ಪಟ್ಟವನುಗ್ರಸೇನಗೆ ಕೊಟ್ಟನ ಅತಿ ದಿಟ್ಟನಯುವತಿಯರಿಗುದ್ಧವನ ಕಳುಹಿದ ಜಾಣನ ಸುಪ್ರವೀಣನವಿವಿಧ ವಿದ್ಯಾ ಕಲೆಗಳನ್ನೆಲ್ಲ ಅರಿತನ ಶುಭಚರಿತನ ಜವನ ಶಿಕ್ಷಿಸಿ ದ್ವಿಜನ ಕಂದನ ತಂದನ ಆನಂದನ 6 ಕುಮತಿ ಖಳ ಮಾಗಧನ ಯುದ್ಧದಿ ಗೆದ್ದನ ಅನವದ್ಯನದ್ಯುಮಣಿಸಮ ದ್ವಾರಕೆಯ ರಚಿಸಿದುದಾರನ ಗಂಭೀರನಸುಮತಿ ಮುಚುಕುಂದನೊದ್ದ ಯವನನ ಸುಟ್ಟನ ಅತಿದಿಟ್ಟನವಿಮಲ ಸುಚರಿತ್ರಾಷ್ಟಮಹಿಷಿಯರಾಳ್ದನ ನೆರೆಬಾಳ್ದನ 7 ಮುರನರಕ ಮುಖ್ಯರನು ಚಕ್ರದಿ ತರಿದನ ಕರಿವರದನಸುರತರುವ ಸತಿಗಾಗಿ ತಂದ ಸಮರ್ಥನÀ ಜಗತ್ಕರ್ತನದುರುಳ ಶಿಶುಪಾಲಾದಿ ದೈತ್ಯ ಸಂಹಾರನ ಬಹು ಶೂರನಕುರುಕುಲಕೆ ಲಯವಿತ್ತ ಪಾಂಡವಪ್ರೀಯನ ಕವಿಗೇಯನ 8 ಸಂತತವೀ ಸಾರÀ ಕತೆಯನು ಕೇಳ್ವರ ನೆರೆ ಬಾಳ್ವರಕಂತುಪಿತ ಕಾರುಣ್ಯದಿಂದಲಿ ಹೊರೆವನು ಸುಖಗರೆವನುಇಂತು ಇಳೆಯ ಸುಜನರ ಸಲಹುವ ಕಾಂತನ ಸಿರಿವಂತನಪಂಥವುಳ್ಳ ಪ್ರಸನ್ನ ಹಯವದನ್ನನಮುನಿಮಾನ್ಯನ 9
--------------
ವಾದಿರಾಜ
ನೆಲೆಸೆನ್ನ ವದನದಿ ವಾಣಿ ಬ್ರಹ್ಮಾಣಿ ನೆಲೆಸೆನ್ನ ವದನದಿ ವಾಣಿ ಪ ಜಲಜನಾಭನ ಗುಣಗಣ ನಲಿಯುತ ಪಾಡಲು ಸುಲಲಿತವಾದಂಥ ಪದಗಳನು ನುಡಿಸುತ್ತ ಅ.ಪ. ಸದಾಶಿವಾದಿ ಸಕಲ ಸುರಗಣ ಸೇವಿತ ಪಾದ ಪಂಕಜವನ್ನು 1 ಇಂದುವದನೆ ನಿನ್ನ ಮಂದಸ್ಮಿತವೆಂಬುವ ಚಂದ್ರಕಾಂತಿಯ ಮನ್ಮನದೊಳು ಬೀರುತ 2 ಕರದಲಿ ವೀಣೆಯ ನುಡಿಸುತ ವದನದಿ ಹರುಷದಿ ರಂಗೇಶವಿಠಲನ ಪಾಡುತ 3
--------------
ರಂಗೇಶವಿಠಲದಾಸರು
ನೈವೇದ್ಯ ಸಮರ್ಪಣೆ ಸುಳಾದಿ ಸಿರಿ ದಧಿ ವರುಣಧನ್ಯ ಸುಗಂಧಿನೀ ವಾಮನ್ನರೂಪವನ್ನು ಚಿಂತಿಸು ಸೂಪಕೆ ಗರುಡ - ನೀರನ್ನ ತಿಳಿದು ಸುಂದರಿ ಶ್ರೀಧರನೆನ್ನುಪನ್ನಂಗಶಯ್ಯ ಗುರು ಗೋವಿಂದ ವಿಠಲನುಮನ್ನಿಸಿ ಕೈಗೊಂಡು ಉನ್ನತ ಪದ ಕೊಡುವ 1 ಹುಳಿ ತೊವ್ವೆಯಲಿ ಸೌಪರಣಿ ಮತ್ತೆ ಪ್ರತಾಪಓಲೈಸು ಸುಂದರೀ ಶ್ರೀಧರ ದೇವನ್ನತಿಳಿ ಪತ್ರ ಶಾಖಕೆ ಮಿತ್ರನೆಂಬಿನನಗಾಳಿ ದೇವನೆ ಸಾಧು ಅವನೊಳಗೆ ವಿದ್ಯಾಒಲಿಸು ಹೃಷಿಕೇಶ ದೇವನ್ನಫಲಶಾಖಕೆ ಶೇಷ ಶೂರಾಧಭಿನ ಸು-ಶೀಲಾದೇವಿ ಪದ್ಮನಾಭನ್ನ ತಿಳಿದುಹುಳಿ ಸೊಪ್ಪು ಗೊಜ್ಜು ಸಾರು ಇವುಗಳೊಳ್‍ಶೈಲಜೆ ಕಪಿ ಸಲಕ್ಷಣಾ ದಾಮೋದರತಿಳಿ ಅನಾಮ್ಲ ಸಪ್ಪೆ ಭಕ್ಷಗಳಲ್ಲಿ ರುದ್ರ - ಅ-ನಿಲನು ಜಗತ್ಪತಿ ಜಯಲಕ್ಷ್ಮೀ - ಇವಳಲ್ಲಿ ಶ್ರೀ ಜಯಾಪತಿಯ ಚಿಂತಿಸೆವಲಿವ ಗುರುಗೋವಿಂದ ವಿಠಲ ಆನಂದ 2 ಶರ್ಕರ ಗುಡ ಭಕ್ಷ ಇಂದ್ರನು ಮಹಾಬಲಲಕ್ಕೂಮಿಯಾ ರೂಪ ಶ್ರೀ ವಾಸುದೇವನು ಸೋ-ಪಸ್ಕರಕೆ ಗುರು ಆಕಾಶಾಶ್ರಯ ಮನೋಜವರಲೆಕ್ಕಿಸು ಕಮಲೆಯ ಪ್ರದ್ಯುಮ್ನ ದೇವನಮಿಕ್ಕ ಕಟು ದ್ರವ್ಯವು ಖಾರಕೆ ಯಮಧರ್ಮಸತ್ಕರಿಸೆ ಜಿತನ ಪದ್ಮಾನಿರುದ್ದರಸೊಕ್ಕವರರಿ ಗುರು ಗೋವಿಂದ ವಿಠಲಯ್ಯಸಿಕ್ಕಾ ಸುಳಿವ ಮುಂದೆ ಕಕ್ಕುಲಾತಿಯ ಸಲ್ಲ 3 ಅಚ್ಯುತ ದೇವನ್ನ ಚಿಂ-ತಿಸು ಉಪ್ಪು ಉಪ್ಪಿನಕಾಯಿ ನಿರಋತಿ ಚಿರಚೀವಿವಾಸುವು ಧನ್ಯಾದೇವಿ ಜನಾರ್ಧನನು ಫಲರಸವು ಫಲೋದಕ ಶೀಕರಣೀತ್ಯಾದಿರಸದೊಳ ಹಂಪ್ರಾಣ ಣ್ರಾಣನು ಆದ್ವಯರುಭಾಸಿಸುವಳು ವೃದ್ಧೀದೇವಿ ಉಪೇಂದ್ರನುದೋಷದೂರನು ಗುರು ಗೋವಿಂದ ವಿಠಲ ಪ್ರ-ಕಾಶಿಸುವನು ಬಿಡದೆ ಈಪರಿ ಗುಣಪರ್ಗೆ 4 ಸದನ ಯಜ್ಞಾದೇವಿಯರರಂಗನು ಹರಿ ರೂಪದಲ್ಲಿರುವನು ಉತ್-ತುಂಗ ಸ್ವಾದೋದಕದೊಳಗಿರುವನು ಬುಧನುಪಿಂಗ ಕಣ್ಣಿನ ಮತಿಮತನ ಸುಧಾದೇವಿಅಂಗಜನಯ್ಯ ಶ್ರೀಕೃಷ್ಣನ್ನಧೇನಿಸೆಗಂಗಾಜನಕ ಗುರು ಗೋವಿಂದ ವಿಠಲನುಮಂಗಳ ಕೊಡುವನು ಸಂದೇಹವಿಲ್ಲದೆ5 ಭೋಜನ ದ್ರವ್ಯದಿ ಯೋಚಿಸ್ಯಭಿಮಾನಿಗಳಭೋಜ್ಯ ಗುರು ಗೋವಿಂದ ವಿಠಲನೆ ಭೋಜಕ6
--------------
ಗುರುಗೋವಿಂದವಿಠಲರು
ನೊಂದು ಬಂದೆನೊ ಕಾಂತೇಶ | ಕೈಯನೆ ಪಿಡಿಯೊ ಮಂದಭಾಗ್ಯಳ ಜೀವೇಶ ಪ. ಅಂದು ಶ್ರೀ ರಾಮರ ಸಂದೇಶವನ್ನೆ ಭೂ- ನಿಂದನೆಗೆ ಅರುಹುತಲಿ ಬಹು ಆನಂದಪಡಿಸಿದ ವಾನರೇಶ ಅ.ಪ. ಶೌರಿ | ಭಕ್ತರ ಕಾಯ್ವ ದುರಿತದೂರನೆ ಉದಾರಿ ಚರಣಕ್ಕೆ ನಮಿಸುವೆ ಹರಿಗೆ ಪರಮಾಪ್ತನೆ ದುರಿತ ತರಿಯುತ ಪೊರೆಯೊ ಗುರುವರ ರಾಮಕಿಂಕರ 1 ಗುರುಕರುಣದ ಬಲದಿ | ಅರಿತೆನೊ ನಿನ್ನ ಚರಣ ನಂಬಿದೆ ಮನದಿ ಪರಿ ಭವಕ್ಲೇಶ ಪರಿಯ ಬಣ್ಣಿಸಲಾರೆ ಹರಿವರನೆ ದಯಮಾಡು ಶ್ರೀ ಹರಿ ದರುಶನವನನವರವಿತ್ತು 2 ಕಾಂತನ ಅಗಲಿರಲು | ಚಿಂತೆಯಲಿ ಭೂ ಕಾಂತೆ ವನದೊಳಗಿರಲು ಸಂತೋಷದಿಂ ರಾಮನಂತರಂಗವನರುಹಿ ಸಂತಸವಪಡಿಸುತಲವನಿಸುತೆಯ ನಿಂತೆ ರಾಮರಿಗ್ಹರುಷ ತೋರಿ 3 ದ್ರುಪದ ಸುತೆಯಳ ಕೀಚಕ | ದುರ್ಮನದಲಿ ಅಪಮಾನಪಡಿಸೆ ದುಃಖ ತಪಿಸಿ ನಿನ್ನನು ಬೇಡೆ ಆ ಪತಿವ್ರತೆ ಸತಿ ಕುಪಿತದಿಂದಲಿ ಖಳನ ಕೊಂದೆ ಅಪರಿಮಿತ ಬಲಭೀಮ ಪ್ರೇಮ 4 ಮಿಥ್ಯಾವಾದದ ಭಾಷ್ಯಕೆ | ಸುಜ್ಞಾನಿಗಳ್ ಅತ್ಯಂತ ತಪಿಸುತಿರೆ ವಾತಜನಕನಾಜ್ಞೆ ಪ್ರೀತಿಯಿಂದಲಿ ತಾಳಿ ಘಾತುಕರ ಮತ ಮುರಿದ ಮಧ್ವನೆ ಖ್ಯಾತಿ ಪಡೆದೆÀ ಸಿದ್ಧಾಂತ ಸ್ಥಾಪಿಸಿ 5 ಪ್ರಾಣಪಾನವ್ಯಾನ | ಉದಾನ ಸ ಮಾನ ಭಾರತಿ ಕಾಂತನೆ ಜ್ಞಾನಿಗಳಿಗೆ ಪ್ರೀತ ಜ್ಞಾನ ಭಕ್ತಿಪ್ರದಾತ ದೀನಜನ ಮಂದಾರ ಕಾಯೊ ದೀನಳಾಗಿಹೆ ಕೈಯ ಮುಗಿವೆ 6 ನೋಯಲಾರೆನೊ ಭವದಿ | ಬೇಗನೆ ತೋರೊ ಧ್ಯೇಯ ವಸ್ತುವ ದಯದಿ ವಾಯುನಂದನ ನಿನ್ನ ಪ್ರಿಯದಿಂ ನಂಬಿದೆ ಕಮಲ ದ- ಳಾಯತಾಕ್ಷನ ಮನದಿ ತೋರಿ7 ಹರಣ ನಿನಗೊಪ್ಪಿಸಿದೆ | ಸುರವಂದಿತ ಕರೆದು ಮನ್ನಿಸಿ ಕಾಪಾಡೊ ಸಿರಿವರನನು ಹೃತ್ಸರಸಿಜದಲಿ ತೋರೊ ಧರೆಯ ವಸ್ತುಗಳ್ ಮಮತೆ ತೊರೆಸು ಹರಿಯ ನಾಮಾಮೃತವನುಣಿಸು 8 ಈ ಪರಿಬಂದೆ ಅನಿಲ | ನಿನ್ನೊಳು ವಾಸ ಗೋಪಾಲಕೃಷ್ಣವಿಠ್ಠಲ ಶ್ರೀಪತಿ ಕೃಪೆಯಿಂದ ನೀ ಪ್ರೀತನಾಗುತ ಕೈಪಿಡಿದು ಸಂತೈಸು ಕರುಣದಿ ಭಾಪುರೇ ಕದರುಂಡಲೀಶ 9
--------------
ಅಂಬಾಬಾಯಿ