ಒಟ್ಟು 1707 ಕಡೆಗಳಲ್ಲಿ , 105 ದಾಸರು , 1247 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ಮರಿಸುವೆನು ಗುರುರಾಯ ವರಮಂತ್ರ ಪುರಾಧಿಪ ಪೊರೆಯೊ ಎನ್ನನು ಜೀಯಾ ತವ ಮಹಿಮ ವರ್ಣಿಸ ಲರಿಯ ಮುರಹರಪ್ರೀಯಾ ಅಧ ಮಾಧಮನ ಮಮ ಪರಿಯ ನೀ ಬಲ್ಲೆಯ್ಯಾ ತೋರಯ್ಯಾ ದಯ ವರದ ಚರಿತೆಯ ಅರುಹುವದಕೆ ಪರವಾಕ್ಯರಣಿಯನು ಪಾಲಿಸಿ ನಿರುತ ಹರಿಗುರು ಚರಣದಲಿ ರತಿ ತ್ವರಿತ ಕರುಣಿಸು ರಾಘವೇಂದ್ರನೆ ಪ ಹಿಂದೆ ಕೃತಯುಗದಲಿ ಪ್ರಹ್ಲಾದ ನಾಮದಿ ತಂದೆ ಹಿರಣ್ಯಾಕ್ಷನಲಿ ಸರ್ವೋತ್ತಮನು ಹರಿ ದ್ವಂದ್ವ ಕರ್ಮವನಲಿ ಅರ್ಪಿಸಲು ಮಹದಾ ನಂದ ಪೊಂದುವರಲ್ಲಿ ಎಂದು ಪೇಳುತಿರೆ ಮಂದ ದೈತ್ಯವನಂದ ಮಾತಿಗೆ ಬಂಧನಾದಿಗ ಳಿಂದ ಶಿಕ್ಷಿಸೆ ಬಂದ ದುರಿತವನಂದು ಕಳೆದಾ ಕಂದನನು ಹರಿಪೊರೆಯೆ ದಿತಿಜನು ಒಂದೂ ತಿಳಿಯದೆ ಮಂದಿರ ಗೋವಿಂನೆಲ್ಲಿಹ ನೆಂದು ಕೇಳುತ ಮಂದರರೋದ್ಧಾರ ನಿಲ್ಲದಿಹ ಸ್ಥಳ ವಂದೂ ಇಲ್ಲವೂ ಎಂಂದು ಸಾರಿದೆ ತಂದು ತೋರಿಸು ಸ್ತಂಭದಲಿ ತವ ಇಂದಿರಾಪತಿಯೆಂದು ಗರ್ಜಿಸೆ ಕಂದನಾಡಿದ ಮಾತುಗಳನು ನಿಜ ವೆಂದು ನರಹರಿ ಪೊರೆದೆ 1 ಶ್ರೀಶನಾಜ್ಞೆಯ ವಹಿಸಿ ದ್ವಿತೀಯಾವತಾರದಿ ವ್ಯಾಸರಾಯನು ಎನಿಸಿ ಬ್ರಹ್ಮಣ್ಯರÀಲಿ ಸ ನ್ಯಾಸವನು ಸ್ವೀಕರಿಸಿ ಸರ್ವಜ್ಞ ಶಾಸ್ತ್ರಾಭ್ಯಾಸವನು ಪೂರೈಸಿ ವ್ಯಾಸತ್ರಯ ರಚಿಸಿ ದೇಶದೇಶಗಳನ್ನು ಚರಿಸುತ ಆ ಸಮಸ್ತ ಕುವಾದಿಗಳ ಮತ ನಾಶಗೊಳಿಸಿ ರ ಮೇಶ ಶ್ರೀ ವೆಂಕಟೇಶನನು ಬಹುದಿನವು ಪೋಜಿಸಿ ವಾಸಿಸುತ ಗಜರಾಮ ಪುರಧಾಧೀಶರಾಯನ ಕುಹಯೋಗವ ಪುರಂದರ ದಾಸರಿಂದೊಡಗೂಡಿ ಕೃಷ್ಣನುಪಾಸನೆಯ ಭಕ್ತಿಯಲಿ ಗೈಯುತ ವಾಸುದೇವನ ಶಿಲ್ಪ ಶಾಸ್ತ್ರದ ಶಾಸನಕೆ ಪ್ರತಿಯಾಗಿ ನಿಲ್ಲಿಸಿ ತೋಷಿಸಿದ ಸೌಭಾಗ್ಯ ವೈಭವ 2 ಪದುವ ಸಂಭವ ಜಾತ ಶ್ರೀ ರಾಘವೇಂದ್ರ ಸು ಪದವ ಪಡೆದ ಪ್ರಖ್ಯಾತ ಜಯತೀರ್ಥ ಮುನಿಕೃತ ಸುಧೆಗೆ ಪರಿಮುಳ ಗ್ರಂಧ ರಚಿಸಿ ಮೆರೆದಾತ ಬಧಿರ ಮೂಕಾಂಧ ವ್ಯಂಗ್ಯರು ವಿಧ ವಿಧಿದ ಘನರೋಗಗ್ರಸ್ತರು ಸದಯ ನೀಗತಿಯೆಂದು ಸೇವಿಸೆ ತ್ರಿದಶ ಭೂರುಹದಂತೆ ಸಲಹುವಿ ಕುಧರ ತೀರದಿ ಮೂಲ ರಘುಪತಿ ಪದವ ಪೂಜಿಸುತಲಿ ಸಜೀವದಿ ಮುದದಿ ವೃಂದಾವನ ಪ್ರವೇಶಿಸಿ ಪದುಮನಾಭ ಶ್ರೀ ಶಾಮಸುಂದರ ಮಧು ವಿರೋಧಿಯನು ಧ್ಯಾನಿಸುತ ಶಿರಿ ಸದನನು ವಲಿಸುತ್ತ ಕರುಣಾ ನಿಧಿಯು ಭಜಕರ ಪೊರೆವ ಮಹಿಮೆಯ 3
--------------
ಶಾಮಸುಂದರ ವಿಠಲ
ಸ್ಮರಿಸೊ ಮಾನವನೆ ಗುರುಚರಣ ಅಂತ: ಕರಣ ಶುದ್ಧಿಯಲಿ ಮರೆಯದೆ ಪ್ರತಿದಿನ ಪ ದುರಿತ ಘನತತಿ ಮರುತ ಶ್ರೀ ರಘುದಾಂತ ತೀರ್ಥರ ಕರಜ ಶ್ರೀ ರಘುವೀರ ತೀರ್ಥರ ಚರಣಯುಗಲವ ಹರುಷದಿಂದಲಿ ಅ.ಪ ಧರೆಯೋಳ್ ಸುಂದರ ಸುರಪುರದಿ ಜನಿಸಿ ಗುರು ವಿಠ್ಠಲಾರ್ಯರ ಚರಣಾನುಗ್ರಹದಿ ವರ ಶಬ್ದ ಶಾಸ್ತ್ರವ ತ್ವರದಿ ಕಲಿತು ತುರಿಯಾ ಶ್ರಮವನೆ ಸ್ವೀಕರಿಸಿ ಗುರುಮುಖದಿ ಮರುತ ಶಾಸ್ತ್ರವನರಿತು ಧರ್ಮದೊಳಿರುತ ವಿಷಯದಿ ವಿರತಿಯಲಿ ಅನವರತ ಪ್ರವಚನ ನಿರತ ಸದ್ಗುಣ ಭರಿತ ಪಾವನ ಚರಿತರಂಘ್ರಿಯ 1 ಹೇಮಾಲಂಕೃತ ರತ್ನನಿಚಯಯುಕ್ತ ಹೇಮ ಮಂಟಪದಿ ಸುಂದರ ಶುಭಕಾಯಾ ಶ್ರೀ ಮನೋಹರ ಕವಿಗೇಯಾ ಬ್ರಹ್ಮ ವ್ಯೋಮ ಕೇಶಾದಿ ನಿರ್ಜರಗÀಣಶೇವ್ಯಾ ಭೂಮಿ ಸುರಜನ ಸ್ತೋಮಕನುದಿನ ಕಾಮಿತಾರ್ಥವ ಗರಿವ ಸೀತಾರಾಮರಂಘ್ರಿಯ ತಾಮರಸವನು ನೇಮದಿಂದರ್ಚಿಪರ ಶುಭಪದ2 ಪರಿಶೋಭಿಸುವ ಕಾಷಾಯ ವಸ್ತ್ರ ವರನಾಮ ಮುದ್ರಾಲಂಕೃತ ತನುಸಿರಿಯ ಗುರು ಅಕ್ಷೋಭ್ಯರ ಶುಭಚರಿಯ ಗ್ರಂಥ ವಿರಚಿಸಿದರು ನವರತುನ ಮಾಲಿಕೆಯ ಧರಣಿಯೊಳು ಸಂಚರಿಸುತಲಿ ಬಲು ಕರುಣದಿಂದಲಿ ಶರಣು ಜನರಘ ಭವ ಭಯಹರಣ ಗುರುವರ ಚರಣಯುಗಲವ3 ವಿನುತ ಸಮೀರ ಕೃತ ಸಾರಶಾಸ್ತ್ರವನೆ ಬೋಧಿಸುತ ಸಜ್ಜನರ ಘೋರ ಸಂಸೃತಿ ಭಯದೂರ ಮಾಡಿ ತೋರಿ ಸನ್ಮಾರ್ಗ ದೀಪಿಕೆಯ ಸುಸಾರ ಸೇರಿದವರಘ ದೂರ ಪರಮೋದಾರ ಗುಣ ಗಂ- ಸೂರಿಜನ ಪರಿವಾರನುತ ಜಿತ- ಮಾರ ಶ್ರೀ ರಘುವೀರ ತೀರ್ಥರ 4 ಶೇಷಾಚಲದಿ ಶಿಷ್ಯಗಣದಿ ಬಂದ ಶ್ರೀ ಸತ್ಯ ಪ್ರಮೋದ ತೀರ್ಥರ ಸ್ವರ್ಣೋತ್ಸವದಿ ತೋಷಬಡಿಸುತ ನಿರ್ಭಯದಿ ಉಪನ್ಯಾಸ ಮಾಡಿದರು ವೀಶಗಮನ ಸುರೇಶ ಭಕುತರ ಸಿರಿ ನರಕೇಸರಿಗೆ ಪ್ರಿಯದಾಸ ಕೊಡಲಿವಾಸ ಕರ್ಮಂದೀಶರಂಘ್ರಿಯ 5
--------------
ಕಾರ್ಪರ ನರಹರಿದಾಸರು
ಸ್ಮರಿಸೊ ಹರಿನಾಮ ಏ ಮನುಜಾ ಸ್ಮರಿಸೋ ಹರಿನಾಮ ನಿರವಧಿ ಸುಖಧಾಮ ಪರಮ ಪುರುಷಗಿದು ಪರಿಪೂರ್ಣ ಪ್ರೇಮ ಪ. ತರಳ ಪ್ರಹ್ಲಾದನ ಪೊರದು ಪಾಂಚಾಲಿಗೆ ತ್ವರಿತದೊಳಕ್ಷಯವಿತ್ತು ಸರಸಿಯೊಳಗೆ ಕರಿರಾಜನ ಸಲಹಿದ ನರ ಕಂಠೀರವ ಕರುಣಿಸುವನು ಬೇಗ 1 ಹಲವು ಜನ್ಮಗಳಲ್ಲಿ ಗಳಿಸಿದ ದುಷ್ಕøತ ಗಳನೆಲ್ಲ ನಿರ್ಮೂಲಗೊಳಿಸುವುದು ಜಲಜ ಸಂಭವ ಮಾಳ್ಪ ಕೆಲಸದಿ ಸಿಲುಕದೇ ನೆಲೆಗೊಂಡು ಸೌಖ್ಯವ ಸಲಿಸಬೇಕಾದರೆ 2 ಕಲಿಕೃತ ಕಲ್ಮಷ ಬಲೆಯಿಂದ ಮೋಚನ- ಗೊಳಿಸಲು ಹರಿನಾಮವಲ್ಲದಿನ್ನು ಚಲಿತ ಚಿತ್ತದ ಕರ್ಮಬಲದಿಂದಲಾಹದೆ ನಳಿನನಾಭನೇ ನೀ ಬೆಂಬಲನಾಗು ತನಗೆಂದು 3 ಉದಯಾರಂಭಿಸಿ ಮತ್ತೊಂದು ದಯ ಪರ್ಯಂತ ವಿಧಿವಿಹಿತಗಳೆಲ್ಲ ಸದರವೇನೊ ಪದುಮನಾಭನ ನಾಮ ಒದಗಿದರದು ಪೂರ್ಣ- ವದರಿಂದ ಸರ್ವರ ಹೃದಯ ನೀ ಮರೆಯದೆ 4 ಸಂಚಿತಾಗಾಮಿಗಳಂಚುವಂ ದಿತಿಜರ ಸಂಚಯಕನುದಿನ ಸ್ಮರಿಸುವರ ಕಿಂತಿತಾರಬ್ದ ಪ್ರಪಂಚವ ತ್ವರಿತದಿ ಮಿಂಚಿನಂದದಿ ತೋರಿ ಪರಿಹಾರಗೊಳಿಪರೇ 5 ಕರುಣಾಭಿಮಾನಿಗಳರಿತು ಮಾಡಿಸುತಿಹ ನಿರತ ಕೃತ್ಯಗಳೊಂದು ಮೀರದಲೆ ಹರಿಯಾಜ್ಞೆ ಇದು ಯೆಂದು ಚರಿಸುತಲನುದಿನ ಪರಮೋತ್ತಮ ಕಾರ್ಯಧುರವಿದೆ ತನಗೆಂದು 6 ನಾಗ ಗಿರೀಂದ್ರನ ನೆನೆದರೆ ಇಹಪರ ಭೋಗ ಸಾಮ್ರಾಜ್ಯವು ಸ್ಥಿರವಾಹುದು ವಾಗೀಶನ ಪರಮಾಗಮ ಸಿದ್ಧಾಂತ- ವಾಗಿಹದಿದೆಯೆಂದು ನೀ ಗುರುತವನಿಟ್ಟು 7
--------------
ತುಪಾಕಿ ವೆಂಕಟರಮಣಾಚಾರ್ಯ
ಸ್ವಾ'ುಲಾಲೀ ತುಲಸೀ ರಾಮಲಾಲೀಪ್ರೇಮತುಲಸೀನಳಿನಾಕ್ಷಧಾಮ ಲಾಲೀ ಪಪ್ಲವಂಗಾಷಾಢಬಹುಳದಶಿ'ುಭಾರ್ಗ' ಲಾಲೀಭು'ಯವತಾರ ಸಾಯಂತ್ರಂ ಮೃಗಶಿರಯುತ ಲಾಲೀ 1ವೇಂಕಟಲಕ್ಷಾಂಬೋದರಪಯೋಧಿಸೋಮ ಲಾಲೀಪಂಕಜಲೋಚನ ಪ್ರಥಮಾಶ್ರಮವ್ರತನೇಮ ಲಾಲೀ 2ಸಿದ್ಧವಟಾ'ರ್ಭವ ವೈಷ್ಣವ ದೇವ ಲಾಲೀ ಇದ್ದರತುಲಸೀಕುಲಕೊಂಡಾರ್ಯಪ್ರಿಯಸುತ ಲಾಲೀ 3ಸಕಲಾಗಮ ಶಾಸ್ತ್ರಾರ್ಥಪರಿಶ್ರಮಸೇಯು ಲಾಲೀಶುಕವಾಗಝ ಸಂಶೋಭಿತ ಚರಿತ ಸತ್ಕ' ಲಾಲೀ 4ಶಮದಮಸದ್ಗುಣ ಶಾಂತಪ್ರತಿಭಸೂನೃತ ಲಾಲೀತೆಮಲಕನೆಪ್ಪುಡು ತಾರಕಮಂತ್ರುಪದೇಶಿ ಲಾಲೀ 5ಶ್ರೀಮದಹೋಬಿಲಸ್ವಾ'ುಯತೀಂದ್ರಸೇವಕ ಲಾಲೀಕೋಮಲಭಾತಕ'ಜನವಂದಿತ ಕೌಶಲ ಲಾಲೀ6ರಾಮಕೃಷ್ಣಪರಬ್ರಹ್ಮಮಹೋತ್ಸವರುಚಕೃತ ಲಾಲೀನೇಮರ'ತಮೂರ್ಖಾದಿಪತಿತೋದ್ಧಾರ ಲಾಲೀ 7ತವಗುಣಜಿತಕೇಯೂರಸತ್ವಾಭರಣ ಲಾಲೀಸುವರ್ಣಮಣಿಮಯಭೂಷಣ ಸ್ವಾರ್ಥತ್ಯಾಗ ಲಾಲೀ 8ಪುರಪುರಭಜನಾಗಾರಾ ಗಣಿತಸ್ಥಾಪಿತ ಲಾಲೀಪರಮೋದಾರಪರ ಚಿಂತನ ಕರುಣಾಕರ ಲಾಲೀ 9ಧರಮ'ಸೂರ್ಪುರವರ ಪ್ರಭುಪೂಜಿತ ಸ್ಮರಜಿತಲಾಲೀತಿರುರಾಮೋತ್ಸವ ತುಲಸೀವನಪ್ರತ್ಟಿತ ಲಾಲೀ 10ದುರಿತನಗಾಸಿನಿ ಸುಮತಮುಖ ಧಾರ್ಮಿಕಲಾಲೀಭರತಪುರಿಯರ್ಚಾವತಾರ ಭಾ'ಕ ಲಾಲೀ 11ಆಧಾರಭ್ರೂಮಧ್ಯಾಂತರ್ಬ' ವೇದ್ಯ ಲಾಲೀಖೇದಮೋದರ'ತ ಬ್ರಹ್ಮಾನಂದ ಲಾಲೀ 12ಪುತ್ತಡಿಗುರುಧರಲಕ್ಷ್ಮಿ ಸಂಪದ್ಯುಕ್ತ ಲಾಲೀಚಿತ್ತುಅಚಿತ್ತೀಶ್ವರ ತತ್ವತ್ರಯ ಶೇ ಲಾಲೀ 13ಸಿರಿಮುಳುಬಾಗಲಸನ್ನಿಧಿ ಸ್ಥಾಪನಚೇಯು ಲಾಲೀಧರರಂಗಸ್ವಾ'ುದಾಸ ಜೀವೋದ್ಧಾರಕ ಲಾಲೀ 14
--------------
ಮಳಿಗೆ ರಂಗಸ್ವಾಮಿದಾಸರು
ಸ್ವಾಮಿ ಬಂದನು ಸತ್ಯಭಾಮೆರುಕ್ಮಿಣಿಯರಿಂದ ಕಾಮಿತ ಫಲವ ಕೊಡುತಲೆ ಪ. ವಾಸುದೇವ ತಾಯಿ ದೇವಕಿದೇವಿಎಂಭತ್ತುಕೋಟಿ ಯಾದವರುಎಂಭತ್ತುಕೋಟಿ ಯಾದವರು ಬರುತಾರೆ ತೊಂಭತ್ತು ಮಹಲು ತೆರವಿರಲಿ 1 ಸರ್ಪಶಯನನ ಬದಿಯಲೊಪ್ಪುತ ಬಲರಾಮ ಛsÀಪ್ಪನ್ನ ಕೋಟಿ ದ್ವಿಜರಿಂದ ಛsÀಪ್ಪನ್ನ ಕೋಟಿ ದ್ವಿಜರಿಂದ ಬರುತಾರ ಎಪ್ಪತ್ತು ಮಹಲು ತರವಿರಲಿ 2 ಸೂರ್ಯ ಸೂರ್ಯ ಹೊಳೆವಂತೆ ಗರುಡನೇರಿಅಂಗಳಕ ಬಂದ ನರಹರಿ 3 ನಾಗಶಯನನು ಬಂದ ಬೇಗಆರುತಿ ತಾರೆ ನೂರು ಸೂರ್ಯರ ಬೆಳಕಿಲೆ ನೂರು ಸೂರ್ಯರ ಬೆಳಗೊ ಗರುಡನೇರಿಬಾಗಿಲಿಗೆ ಬಂದ ಯದುಪತಿ4 ಮದಗಜಗಮನೆ ಬ್ಯಾಗ ಕಡಲಾರತಿಯ ತಾರೆ ಚದುರೆ ನೀ ತಾರೆ ಫಲಗಳಚದುರೆ ನೀ ತಾರೆ ಫಲಗಳ ಐವರಿಗೆ ಎದುರಿಗೆ ಬಾರೆಂದು ಕರಿಯಮ್ಮ 5 ಕೃಷ್ಣರಾಯನು ಬಂದ ಬುಕ್ಕಿಟ್ಟು ಸೂರ್ಯಾಡೆಅಷ್ಟ ಸೌಭಾಗ್ಯ ಇವು ನೋಡಅಷ್ಟ ಸೌಭಾಗ್ಯ ಇವು ನೋಡ ಮಾಡಿದ್ದುಎಷ್ಟು ಸುಕೃತವು ಸ್ಮರಿಸಮ್ಮ6 ಮಾಧವ ರಾಮೇಶನ ಉಪಚರಿಸೆ7
--------------
ಗಲಗಲಿಅವ್ವನವರು
ಹಣ್ಣ ಸವಿಯ ಬಾರದೇ ಪ ಹಣ್ಣನ್ನು ತಿಂದರೆ ಕೇಶವನೊಲಿಯುವಾ ಚನ್ನಕೇಶವ ಸ್ವಾಮಿ ಬಿಡದೆ ಪಾಲಿಸುವಾ ಅ.ಪ. ಪ್ರೀತಿಯೆನ್ನುವಂಥ ಬೀಜವನ್ನೇ ಬಿತ್ತಿ ಭೂತ ದಯೆಯೆಂಬುವ ವೃಕ್ಷವ ಬೆಳೆಸೀ ಆತುರದಲ್ಲಿ ಪರೋಪಕಾರವೆಂಬ ನೀತಿಯ ನೀರನ್ನು ನೇಮದೊಳೆರೆದೂ 1 ಅನುದಿನ ದಾನಧರ್ಮಗಳ ಟೊಂಗೆಗಳೇರಿ ತನುಮನ ಧನದಿಂದ ದೈನ್ಯರ ಸಲಹಿ ಘನತರ ಸ್ವಾರ್ಥ ತ್ಯಾಗವುಯೆಂಬ ಪರ್ಣವ ನೆನೆದು ಕೃತಜ್ಞತೆ ಕುಸುಮವ ಪಡೆದೂ 2 ವರತರ ದೇವಾಂಶ ಗುಣದಿಂದ ಬೆಳೆದಿರ್ಪ ಹರಿಭಕ್ತಿಯೆನ್ನುವ ಫಲವನ್ನೇ ಕೊಯ್ದು ಸರಸದಿ ಕೀರ್ತನೆ ಭಜನೆ ಸೂತ್ರಗಳಿಂದ ಪರಮ ಭಕ್ತೀಯೆಂಬ ಹಣ್ಣನು ತಿಂದೂ 3 ಧರೆಯಲ್ಲಿ ಸಿಗುವಂಥ ಹಣ್ಣನು ಸವಿದರೆ ನಿರುತ ತೃಪ್ತಿಯು ಆಗಲಾರದು ದೇವಾ ಅಮೃತ ಹರುಷದಿ ತಿನ್ನಲು ಘನಮುಕ್ತಿ ದಿಟವು 4
--------------
ಕರ್ಕಿ ಕೇಶವದಾಸ
ಹನುಮ ಭೀಮ ಮುನಿಪ ಎನ್ನ ಮನಕೆ ಬಾರೆಲೊ | ಮನಸಿಜ ಹರ ಜನಕ ಭಾವಿ ವನಜಾಸನ ಘನ ಮಹಿಮನೆ ಪ ಜಲಧಿ ಧಾಂಟ ಇಳಿಜಾತೆಗೆ ಸಲಿಸಿ ಮೋದ ಗೊಳಿಸಿದ ಮಹ ಬಲಶಾಲಿಯೆ 1 ಕಂತು ವಿತನೇಕಾಂತ ಭಕುತ ಕುಂತಿ ಜಾತ ದಂತಿಪುರದ ಕಾಂತೆಗೆ ಕೃತಾಂತನಾದ ಶಾಂತೆನೆ ಮಹಂತರೊಡೆಯ 2 ಶಾಮಸುಂದರವಿಠಲ ಜಗಕೆ ಶರಧಿ ಭೂಮಿ ವಿಬುಧ ಸ್ತೋಮನಮಿತ ಕಾಮಿತ ಪ್ರದ 3
--------------
ಶಾಮಸುಂದರ ವಿಠಲ
ಹನುಮಂತ ನೀನೆಂಥ ಬಲವಂತ ಘನತರಕೈಲಾಸವನು ಬಾಲದೆತ್ತಿದೆ ಪ ಹದಿನಾಲ್ಕು ಲೋಕಂಗಳುದರದಿಟ್ಟವನನ್ನು ಸದಮಲಭಕ್ತಿಯಿಂ ಮುದದ್ಹೊತ್ತು ಹಾರಿದಿ 1 ಅಪರಿಮಿತ ಭುಜಬಲ ಕಪಿವರರೆಲ್ಲ ಬಿಟ್ಟು ಕೃಪಾಕರನು ನಿನಗೆ ಗುಪಿತದುಂಗುರವಿತ್ತು 2 ಸಾಗರ ಹಾರಲು ಆಗದೆ ಸರ್ವರು ನೀಗದ್ಯೋಚನೆ ಗೈಯೆ ಬೇಗ ಸಾಗರ ಜಿಗಿದಿ 3 ಲಂಕೆಯೆಲ್ಲವು ಒಂದೇ ಲಂಕಿಣ್ಯೋರ್ವಳು ಒಂದೇ ಮಂಕುಹೆಣ್ಣೆಂದು ನೀ ಶಂಕೆಯಿಂ ಸದೆದೆಯೊ 4 ದುರುಳನ ಪುರ ಪೊಕ್ಕು ಸರುವ ಭವನಗಳ ಪರಿಪರಿ ಶೋಧಿಸಿದಿ ಪರಮಪಾವನೆಯಳ 5 ಲೋಕಮಾತೆಯನು ಅಶೋಕವನದಿ ಕಂಡು ಲೋಕವೀರನ ಅಂಗುಲೀಕವನಿತ್ತಯ್ಯ6 ಕ್ಷಿತಿಜೆ ದರುಶನದಿಂದ ಮತಿವಂತನೆನಿಸಿ ನೀ ಕೃತಕೃತ್ಯನಾದಯ್ಯಾ ಸತತ ಕ್ಷಿತಿಯ ಮೇಲೆ 7 ಬಣಗು ರಕ್ಕಸಕುಲ ಕ್ಷಣದಿ ಅಳಿದು ನೀನು ವನವ ನಾಶಗೈದು ದಿನಮಣಿಯಂತೊಪ್ಪುವಿ8 ಶೂರ ಅಕ್ಷಯಕುಮಾರಾದಿಗಳ ಮಹ ಮೇರೆದಪ್ಪಿದಬಲ ಸೂರೆಗೈದಾಕ್ಷಣ9 ಮಂಕುದಶಕಂಠನ ಬಿಂಕವ ಮುರಿದಿ ಅ ಸಂಖ್ಯ ವೀರರ ಕೊಂದು ಲಂಕಾದಹನ ಗೈದಿ 10 ಅತಿಭರದಿಂ ಬಂದು ಕ್ಷಿತಿಜಪತಿ ಶ್ರೀರಾಮ ಗತಿ ಶುಭದ್ವಾಯ ಶ್ರುತಪಡಿಸಿ ಹಿತ ಪಡೆದ್ಯೊ 11
--------------
ರಾಮದಾಸರು
ಹನುಮಂತ ಬಲವಂತ ಅತಿ ದಯವಂತಾ | ಘನವಂತ ಕೀರ್ತಿವಂತ ಅತಿ ಜಯವಂತಾ || ಅನುದಿನದಲಿ ನಿನ್ನ ನೆನೆಸುವೆ ಎನ್ನ ಮನದಾಸೆ | ಯ ನೀಯೋ ದನುಜ ಕೃತಾಂತಾ ಪ ಪಾವಮಾನಿ ಸತತ ಪಾವನ್ನ ಚರಿತಾ | ಪಾವಕಾಂಬಕನುತಾ ಪ್ಲವಂಗನಾಥಾ || ದೇವ ಕರುಣಪಾಂಗಾ ಭಾವುಕತುಂಗಾ | ಗ್ರೀವಾ ಶತಶೃಂಗ ಗ್ರಾವವೆ ಭಂಗಾ || ಕಾವಾ ವರವೀವಾ ಭೋದೇವ ಸಂಭವಾ | ಸು | ಗ್ರೀವ ಸಹಾಯ ಸರ್ವ ದೇವನರಸಿ ಯತಿವರ ಹಾರಿದಾ | ಕೋವಿದಾ ಕಪಿವರ ದೇವಕಿ ತನುಜನಾ || ಮಾವನ ಮಾವನಾ | ಜೀವಕೆ ಮುನಿದನೆ | ಜೀವೇಶ ಮತವನ ಪಾವಕಾ ಜಯ ಜಯ 1 ಧರಣಿಜಾತಿಗೆ ಭದ್ರಕರವಾದ ಮುದ್ರಾದರದಿಂದ ಇತ್ತ ನಿದ್ರಾ | ಗರಳ ದುರುಳರ ವರವದ್ದಾ | ನೆರದಲ್ಲಿ ಶಲ್ಯ ಎದುರ ಬರಲಾಗಿ ಗೆದ್ದಾ | ಮರುತಾ ಸುಖ ಗುರುವೆ ಸುರತರುವೆ | ಫಲ | ನಿರ್ಜರ ಗಣದಲ್ಲಿ ಇಹ | ಪರದಲಿ ದೇವ | ಶರಧೀ ಬಾಗಿದ ಧೀರಾ | ಸೂನು ಆವಾಸ ಯೋಗಕೆ ಸಂ | ಸುರನದಿ ದಾಟಿದಾ ಪರಮಹಂಸ 2 ಕರಡಿ ವಾನರಬಲಾ ನೆರಹಿ ಮಹಾ ಪ್ರಬಲ | ಶಿರ ಹತ್ತುವುಳ್ಳವನ ಕುಲ ವರಿಸಿದಾ ಸುಬಲಾ | ಕುರುಪತಿ ನಿಜ ತಮ್ಮ ಬರಲವನ ಹಮ್ಮು | ಬೊಮ್ಮ ಪೊರೆವನೆ ನಮ್ಮ | ಮರುತಾ ಸುಖ ಭರಿತಾ ಸಂಹರಗೈಸುವ | ಸಂ | ಕರ ಗರ್ವಹರ ಸರಯು ತೀರದಲ್ಲಿದ್ದಾ | ಪುರದಲ್ಲಿ ಮೆರದನೆ | ಕರ ಕಮಲೋದ್ಭವ | ವರ ವೃಕೋದರನೆ ವಿಜಯವಿಠ್ಠಲನ |ಶರಣರ ಪಾಲಾ ಬದರಿವಾಸಾ ಯಂತ್ರೇಶಾ 3
--------------
ವಿಜಯದಾಸ
ಹನುಮಂತ ಹನುಮಂತ ಹನುಮಂತ ಪ ಜನರ ಪೊರೆಯುತ ತತುವರೊಳು ಪ್ರೇರಿತ ಅ.ಪ ಪವಮಾನ ಪವಮಾನ ಪವಮಾನ ಪವಮಾನ ಪರಮ ಪಾವನ ಅಣುಮಹದ್ಘನ ವನಧಿಲಂಘನ ವೀತಿಹೋತ್ರನ ಪಡಿಸಿತೃಪ್ತನ ರಾಮವಂದನ ಮಾಡುತ ಮನದಿ ಆನಂದ ಆನಂದ ಆನಂದ ಆನಂದದಿಂದ ತ್ವರಿಯಾ ಹಾರಿ ಶರಧಿಯಾ ಸೀತಾಕೃತಿಯಾ ಕುಶಲವಾರ್ತೆಯ ಪೇಳಲು ಜೀಯಾ ರಾಮಾಲಿಂಗನದಿಂದ ಆನಂದ ತಾ ನಿಂದಾ ತಾ ನಿಂದ ತಾ ನಿಂದ ನೆರಹಿ ಆನಂದ ರಣಮುಖಕೆಂದಾ ಮಾಡಿಸಿ ನಿಂದಾ ರಾವಣವಧೆಗೆಂದಾ 1 ತ್ರಿಜಗ ಖ್ಯಾತ ಅತಿ ಮಹಾರಥ ಯದುಪತಿ ಪ್ರೀತಾ ಸುರರ ಸೇವಿತಾ ಗರಳಭುಂಜಿತಾ ಸತಿಗೆ ಪೂವಿತ್ತ ಭುಜಬಲಯುತಾ ಧೀಮಂತಾ ಧೀಮಂತಾ ಧೀಮಂತಾ ಧೀಮಂತಾ ಭಾರತೀಕಾಂತಾ ದುರಳ ಮಣಿಮಂತಾ ಸೆಣಸಿಬರೆ ನಿಂತಾ ಹರಣ ಮಾಡಿ ಪಂಥಗೆಲಿದು ತಾ ನಿಂದಾ ಪ್ರಣಯನಾಗಿ ನಿಂತಾ ಕೀಚಕನ ಧ್ವಾಂತದೊಳು ತಾ ನೋಡಿ ತಾ ನೋಡಿ ತಾ ನೋಡಿ ತಾ ನೋಡಿ ಅವನೊಳು ಕೂಡಿ ಕೈಯ ಹಿಡಿದಾಡಿ ಕೇಳಿಯೊಳು ಕೂಡಿ ಉರದಿಶಿರ ನೆಲಕೆ ಈಡಾಡಿ ನಲಿದು ತೋರಿದಾ 2 ಆನಂದ ಆನಂದ ಆನಂದ ಆನಂದ ತಾ ನಿಂದ ಶ್ರೀಮ ದಾನಂದ ಆನಂದ ಬುಧಜನಕ್ಲೇಶದಿಹ ಮನ ನೋಡಿ ಜೀ ಸೂತ್ರ ವ್ಯಾಖ್ಯಾನ ಮಾಡಿ ಪಾವನ ವಾದಿಭಂಜನ ಬಾದರಾಯಣ ಪ್ರೀತಿಪಾತ್ರ ಏಕಾಂತ ಭಕ್ತ ತಾನಿತ್ತ ತಾನಿತ್ತ ತಾನಿತ್ತ ತಾನಿತ್ತ ಜಗಕತಿಮೋದ ಶಾಸ್ತ್ರ ತ್ರಿವಿಧ ತರತಮಭೇದ ನಿತ್ಯ ಕಾರಣ ನಿತ್ಯ ಕಾರ್ಯ ಅನಿತ್ಯ ಪ್ರಕೃತಿ ಸತ್ಯ ಸುಗುಣವೆ ನಿತ್ಯ ನಿತ್ಯ ದ್ವೈತವು ಸತ್ಯವೆಂದ ಶ್ರೀವೇಂಕಟೇಶನ ನಿಜದೂತ 3
--------------
ಉರಗಾದ್ರಿವಾಸವಿಠಲದಾಸರು
ಹನುಮನ ಮತದಲಿ ಅನುಮಾನ ಬೇಡವೊ ಮನಮುಟ್ಟಿ ಭಜಿಸಲೊ ಎಲೆ ಮನವೇ ಪ ಸನಕಾದಿ ವಂದಿತ ಮನಸಿಜ ಜನಕ ವನಜನಯನ ಹರಿಗನುಮತವಾದಂತ ಅ.ಪ ವಿಧಿ ಭವಾದಿಗಳಲ್ಲಿ ಅನುಚರರಿವನಿಗೆ ಪರತಂತ್ರರು ವಿವಿಧ ತಾರತಮ್ಯ ನಿರತ ಪೊಂದಿರುವರು ಸಕಲ ಜಗಂಗಳು ನಿಜವೆಂದು ಬೋಧಿಪ1 ಮುಕುತಿಯೆಂಬುದು ನಿಜಾನಂದದ ಅನುಭವ ಭಕುತಿಯೇ ಪಡೆಯಲು ಸಾಧನವು ಪ್ರಕೃತಿ ಸಂಯುತವಾದ ದೇಹವ ಕಳೆಯಲು ಯುಕುತಿ ಬೇರಿಲ್ಲವೆಂದು ಭರದಿ ಸಾರುವಂಥ 2 ನಯನಕೆ ಗೋಚರ ಒಣ ಊಹೆಯಿಂದಲಿ ತಿಳಿಯಲು ಹರಿಯನು ಅಳವಲ್ಲವು ನಿಗಮಗಳಿಂದಲೆ ಅರಿತ ಜ್ಞಾನಿಗೆ ಪ್ರ ಸನ್ನನಾಗುವನೆಂದು ದೃಢದಿಂದರುಹುವ 3
--------------
ವಿದ್ಯಾಪ್ರಸನ್ನತೀರ್ಥರು
ಹನುಮೇಶ ವಿಠ್ಠಲನೆ ಸಲಹ ಬೇಕಿವಳಾಗುಣಪೂರ್ಣ ನಿರ್ದೋಷ ಚಿದ್ಭವನೆ ಹರಿಯೇ ಪ ನಾಗಕಾಳೀಯ ಮದ ಭಂಜನನೆ ಶಿರಿಕೃಷ್ಣನೀಗಿ ಹೃದ್ರೋಗವನು ಆಗು ಹೋಗುಗಳಾ |ನಾಗಶಯನನೆ ನೀನೆ ಮಾಳ್ಪುದನೆ ತಿಳಿಸುತ್ತಾಭೋಗ ವಿಹ ಪರಧ್ವಂಸ ಭೋಗ ತಿಳಿಸುವುದೋ1 ಮಧ್ವ ಶಾಸ್ತ್ರಜ್ಞಾನ ಉದ್ಭೋಧ ಕೊಟ್ಟಿವಳಶುದ್ಧ ತರತಮ ಭೇದ ಪಂಚಕವ ತಿಳಿಸಿ |ಅದ್ವಿತೀಯನೆ ಭಾವ ದ್ರವ್ಯ ಕ್ರಿಯಗಳು ಎಂಬಅದ್ವೈತ ತ್ರಯಜ್ಞಾನವಿತ್ತು ಪಾಲಿಪುದು 2 ಖಗವರಧ್ವಜದೇವ ಗೋವಿಂದ ಮೂರುತಿಯೆಬಗೆಬಗೆಯ ತವಲೀಲೆ ಮಿಗಿಲು ಸ್ಮøತಿಯಿತ್ತು |ಹಗರಣದ ಸಂಸಾರ ಸಾಗರವ ದಾಟಿಸುತನಿಗಮ ವೇದ್ಯನೆ ತೋರೊ ಹೃದ್ಗುಹದಿ ಹರಿಯೇ 3 ಪತಿಸೇವೆಯಿತ್ತಿವಳ ಕೃತಕಾರ್ಯಳೆಂದೆನಿಸೊಪಿತೃ ಮಾತೃ ಬಂಧುಗಳು ಹಿತ ಜನಾಂತಸ್ಥಕೃತಿ ಪತಿಯೆ ನಿನವ್ಯಾಪ್ತಿ ಮತಿಯಿತ್ತು ಪಾಲಿಸುತಹಿತದಿ ಸಾಧನಗೈಸೊ ವಾತಾತ್ಮ ಹರಿಯೇ 4 ನಿರುತ ತವ ದಾಸತ್ವ ಅರ್ಥಿಯಲಿ ಇರುವಂಥತರಳೆಯನು ಸ್ವೀಕರಿಸಿ ದಾಸಳೆಂದೆನಿಸೊಶರಣ ಜನ ವತ್ಸಲನೆ ಕರುಣಿ ಭಿನ್ನಪ ಸಲಿಸೊಮರುತಾಂತರಾತ್ಮ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಹಂಬಲ ಮರೆವುದುಂಟೆ ಪ ಬೆಂಬಲವಾಗಿಯೆ ಇಂಬುದೋರದ ನೀನು ಡೊಂಬಿಗಾರರ ಮುಂದೆ ಕಂಬದಂದದಿ ನಿಂದೆ ಅ.ಪ ತೃಣವಾದ ಕಾಯಗಳು ಮನದೊಳಗೆ ಘನವಾಗಿ ತೋರುತಿದೆ ಗುಣವಿಲ್ಲ ಬದುಕಿನೊಳು ಅಣಿತಪ್ಪಿ ಹೋಯಿತು ಪ್ರಣವರೂಪನೆ ಕೇಳು ಕ್ಷಣ ಜೀವ ನಿಲ್ಲದು 1 ಆಯ ತಪ್ಪಿದ ಮಾತನು ಆಡುತ ಎನ್ನ ಬಾಯನು ಹೊಯ್ಪವರ ಸಾಯ ಬಡಿದು ಮುಂದೆ ನ್ಯಾಯ ತೋರದ ಹಾಗೆ ಕಾಯಬೇಕೆನ್ನ ಉಪಾಯದಿಂದಲೆ ಜೀಯ 2 ಎರವು ಮಾಡಿದ ಕಾಲದೊಳಗೆ ಸೂರೆಗೊಂಡವರನೆಲ್ಲ ವಾರಿಜಾಕ್ಷನೆ ನೀ ವಿಚಾರವ ಮಾಡದೆ ದೂರುಗಳೆಲ್ಲವ ಪಾರು ಮಾಡಿದೆ ನಿನ್ನ 3 ಹಸ್ತ ಬಲಿದ ಕಾಲದಿ ಮಸ್ತಕದೊಳು ಹಸ್ತಿಯಂದದಿ ಹೊತ್ತೆನು ಸ್ವಸ್ಥವಿಲ್ಲದ ನರನಸ್ಥಿ ಚರ್ಮದ ಮೇಲೆ ಕಷ್ಟಾಗಿ ಕರುಣವ ನಾಸ್ತಿ ಮಾಳ್ಪೆಯ ಎನ್ನ 4 ಎನ್ನ ಸರ್ವಸ್ವವನು ತಿಂದವರೀಗ ಇನ್ನೇನು ಸುಕೃತಿಗಳೊ ನಿನ್ನ ಮನಸಿಗದು ಚನ್ನವಾದರೆ ಮೇಲೆ ಇನ್ನಾರು ಕೇಳ್ವರು ವರಾಹತಿಮ್ಮಪ್ಪ ನಿನ್ನ 5
--------------
ವರಹತಿಮ್ಮಪ್ಪ
ಹಮ್ಮನಳಿದು ನಮ್ಮ ಮತವ- ನೆಮ್ಮ ಜಯಮುನೀಂದ್ರ ಕೃತಿಯ ರಮ್ಯರಸವ ಸವಿದು ಸವಿದು ನಿಮ್ಮ ದುರ್ಮತಗಳನೆ ಬಿಡಿರೊ ಪ. ಸುಖಮುನಿ ಚತುರ್ಮುಖರು ಕುಮತ ನಿಕರವ ನೋಡಿ ಮನಕೆ ತಂದು ಪಾದ ತೊಳೆಯಲು ಭಕುತಿಭರದಿ ಗಿರೀಶಮುಖ್ಯ ಸುರರು ಶಿರದ ಮೇಲೆ ಲಕುಮಿ ಆತ್ಮಕರಾಗಿ ಧರಿಸಿ ಸುಖಿಸಿದ ಕಥೆ ಸ್ಮøತಿಯೊಳಿರಲು 1 ಯೋಗಿ ಜಯಮುನೀಂದ್ರ ಕೃಪಾ- ಸಾಗರನಾಗಿ ಧರೆಗೆ ಬಂದು ಈ ಗುರುಕೃತಿಗಂಗೆಯ ಬೇಗ ತಾನು ತುತಿಸಿ ಮೈಯ ಯಾಗಗೊಳಿಸಿ ಸಹಸ್ರ ಮುಖದಿ ಭಾಗವತರೆಂಬ ಬುಧರಿಗಿತ್ತ ಭಾಗ್ಯವ ನೀವೆಲ್ಲ ನೋಡಿರೊ 2 ಶ್ರುತಿಮಯವಾದ ಬಹಳ ಬಲು ಯು ಕುತಿಯನೆ ಅಳವಡಿಸಿ ಸು- ಮಂದರ ಹೂಡಿ ಮಥಿಸಿ ಮಧ್ವಮತಾಬ್ಧಿಯ ಯತಿಶಿರೋಮಣಿ ಜಯಮುನಿ ಶ್ರೀ- ಪತಿ ಹಯವದನ್ನ ಬಲದಿ ಶ್ರುತಿಯಮೃತವ ರಚಿಸಿದ ನಮ್ಮ ಕ್ಷಿತಿಸುರರೆ ಕುಡಿದು ನೋಡಿರೋ3
--------------
ವಾದಿರಾಜ
ಹರಿ ಕೃಪೆಯಿಂದಲಿ ದೊರೆದಿತು ಯನಗೀ ಶಿರಿಕರ ತಂಬೂರಿಪ ನರಹರಿ ನಾಮ ಸ್ಮರಣೆಯಗೈಯುವಾ ನರಂಗೆ ಸಹಕಾರಿ ಅ.ಪ. ತಾಪತ್ರಯವನು ಲೊಪಗೈವ ಸುಖ ರೂಪಿನ ತಂಬೂರಿ ಶ್ರೀಪತಿ ಭಕ್ತಿನಿರೂಪಣದಿಂದಖಿಲಾಪತ್ಪರಿಹಾರಿ 1 ವಾಸುದೇವ ನಿಜದಾಸರು ಪಿಡಿಯುವ ಭಾಸುರ ತಂಬೂರಿ ವಾಸುಕಿ ಶಯನ ವಿಲಾಸದ ಕೀರ್ತಿವಿಕಾಸದ ಜಯಭೇರಿ 2 ಅಂಬುಜಭವನ ಕುಟುಂಬಿನಿಯ ಕರಾಲಂಬನ ತಂಬೂರಿ ತುಂಬುರನಾರದ ರಂಬುರುಹಾಕ್ಷನ ಹಂಬಲಿಗನುಸಾರಿ 3 ಗಂಧರ್ವರ ಕರಪೊಂದಿ ಮೆರೆವ ಬಲು ಸುಂದರ ತಂಬೂರಿ ಸುಂದರಿಯರ ನಲವಿಂದಲಿನುಡಿಸುವಾನಂದ ಸುಗುಣಧಾರಿ 4 ಶ್ರುತಿಯುತ ಮಾಗಲು ಮತಿಯುತರಿಗೆ ಸಮ್ಮತವಹತಂಬೂರಿ ಶ್ರುತಿಹೀನತೆಯಿಂದ ತಿಶಯಮಾಗದು ಕೃತಿಶತವನುಸಾರಿ 5 ಸುಕೃತ ಪರಿಪಾಕದ ತಂಬೂರಿ ಈ ಕಲಿದೋಷ ನಿರಾಕರಣೆಗೆ ಬಹು ಭೀಕರ ಮುಖಧಾರಿ 6 ಧರೆಯೊಳು ಪುಲಿಗಿರಿ ವರದ ವಿಠಲನ ಬಿರಿದಿನ ತಂಬೂರಿ ದುರಿತವೆಂಬ ಮದಕರಿಯನು ಸೀಳುವ ಹರ್ಯಕಾರಿ 7
--------------
ಸರಗೂರು ವೆಂಕಟವರದಾರ್ಯರು