ಒಟ್ಟು 3495 ಕಡೆಗಳಲ್ಲಿ , 122 ದಾಸರು , 2470 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮ ಪುರುಷ ಹರಿ ಗೋವಿಂದ - ಸಿರಿವರ ನಾರಾಯಣ ಗೋವಿಂದ ಪ ನಿಶೆವೆಸರಸುರನ ಉಸಿರ ತೊಲಗಿಸಿದೆಕುಸುಮ ಶರನ ಪಿತ ಗೋವಿಂದವಸು ಪೂರಿತ ಶ್ರುತಿ ಮಸುಳಿಸದೆ ತಂದೆಬಿಸಜ ಸಂಭವನಯ್ಯ ಗೋವಿಂದ 1 ಮಂದರ ಸಿರಿ ಗತವಾಗದ ಮುನ್ನಕ್ಷಿತಿ ಪೆತ್ತನಯ್ಯ ಗೋವಿಂದ 2 ಭೂತಳವೆರಸಿ ರಸಾತಳಕಿಳಿದಿಹಪಾತಕನ ಕಂಡೆ ಗೋವಿಂದಆತನೊಡನೆ ಕಾದಾತನ ಗೆಲಿದು ಮ-ಹೀತಳವನು ತಂದೆ ಗೋವಿಂದ 3 ದುರುಳಾಸುರನ ನಡುಗರುಳ ಮಾಲೆ ಮುಂ-ಗೊರಳೊಳು ಧರಿಸಿದೆ ಗೋವಿಂದಗರಳ ಕೊರಳನು ಬೆರಳೆತ್ತಿ ಪೊಗಳಲುತರಳಗೊಲಿದೆ ನೀ ಗೋವಿಂದ4 ವಾಮನನಾಗಿ ನಿಸ್ಸೀಮ ಬಲಿಯ ಕೈಯಭೂಮಿಯನಳೆಕೊಂಡೆ ಗೋವಿಂದತಾಮರಸ ಪದದಿ ಕನಕ ಗರ್ಭಯೋಗವ್ಯೋಮ ಗಂಗೆಯ ತಂದೆ ಗೋವಿಂದ 5 ಸುರ ಪಶುವಿಗೆ ಋಷಿಯನು ಕೊಂದನ ಬಹುಕರ ಬಲ ಮುರಿದೆಯೊ ಗೋವಿಂದತರ ಹರಿಸದೆ ವಸುಧೆಯ ಒಡೆತನ ಭೂಸುರರಿಗೆ ನೀಡಿದೆ ಗೋವಿಂದ 6 ತ್ರಿಣಯನ ತಾತ್ಪರ್ಯ ರಾವಣನ ಶಿರರಣದೊಳುರುಳಿಸಿದೆ ಗೋವಿಂದಕ್ಷಣಮೆಣಿಸದೆ ಸದ್ಗುಣವಂತ ವಿಭೀ-ಷಣಗಭಯವಿತ್ತೆ ಗೋವಿಂದ 7 ಕ್ರತು ಸಿರಿ ಭೂಭಾರೋತ್ತಾರಣ ಬಲಯುತ ಗೋವಿಂದ 8 ಕಥೆಯನು ನಿರ್ಮಿಸಿ ಪತಿವ್ರತೆಯರ ಘನವ್ರತಗಳ ಕೆಡಿಸಿದೆ ಗೋವಿಂದಜತೆಯಗಲದ ಪುರ ತ್ರಿತಯ ಗೆಲಿದು ದೇ-ವತೆಗಳ ಸಲಹಿದೆ ಗೋವಿಂದ 9 ಜಾಜಿಯ ಮರಕತ ತೇಜಿಯನೇರಿ ವಿ-ರಾಜಿಪ ರಾವುತ ಗೋವಿಂದಸೂಜಿಯ ಬೆನ್ನೊಳು ರಾಜಿಪ ತೆರದಿ ಸ-ಹಜರೊಳಡಗಿರ್ಪ ಗೋವಿಂದ 10 ಮೇದಿನಿಗೋಸುಗ ಕಾದಿ ಕಲಹದಿ ವಿ-ರೋಧಿಗಳ ಕೊಂದೆ ಗೋವಿಂದಸಾಧುಗಳಿಗೆ ಸುಖವೀಯುವ ಬಾಡದಶ್ರೀಧರ ಕೇಶವ ಗೋವಿಂದ 11
--------------
ಕನಕದಾಸ
ಪರಮ ಪುರುಷನ ಮೊದಲು ನಮಿಸುತಚರವವೈದಿದ ದೈವತಂಗಳಿಗೆರಗುವೆನು ಕ್ರಮದಿಂದ ಕೂಡುತಧರಣಿ ತಳದಲ್ಲಿ 1 ದರ್ಭ ಮುಖ ವಿಸ್ತರದಿ ಹಾಕುತಪದ್ಮ ಮೊದಲಾಸನದಿ ಪ್ರಾಂಗ್ಮುಖಇದ್ದರಗ್ರ್ಯಾಳ ಸಮ್ಮುಖ ಶ್ರದ್ಧೆ ಮಾಡುವುದು 2 ಕೂರ್ಮ ಆಸನಈಸು ಚಿಂತಿಸಬೇಕು ಎಂಬೋಭಾಷೆ ರಾಜಿಪುದು 3 ಧಾರುಣಿ ಮಂತ್ರದಲಿ ಕೂಡುತನಾರಸಿಂಹ ಸುದರ್ಶನಾಸ್ತ್ರದಿಆರು ದಿಕ್ ದಿಗ್ಬಂಧನಾಡಿಯಸೂರಿ ಮಾಡುವುದು 4 ನಾಗಭೂಷಾಜ್ಞೆಯಲಿ ಭೂತಗಳ್‍ಹೋಗಲೆಂಬುವ ಮಂತ್ರ ಪಠಿಸುತಯೋಗಿಗಳ ಪ್ರಾರ್ಥಿಸುತ ಸಂತತಯಾಗ ಮಾಡುವದು 5 ಹರಿಯ ಗುರುಗಳ ನಮನಗೋಸುಗಕರವ ಮನವನು ಶೋಧಿಸೂವುದುಎರಡು ಬೀಜಾಕ್ಷರದಿ ನಾಂಕುಎರಡು ಸ್ಥಾನದಲಿ 6 ಬ್ರಹ್ಮಹತ್ಯಾ ಮಂತ್ರದಿಂದಲಿತಮ್ಮ ವಾಮಾಂಗವನೆ ಮುಟ್ಟುತಅಧರ್ಮ ಪುರುಷನ ಚಿಂತಿಸುವುದುಕರ್ಮ ಕರ್ತೃಕನು 7 ಶೋಕ್ಷ ನಾಭಿಲಿ ಪಾಪ ಪುರುಷನನಾಶ ಹೃದಯದಿ ಭಸ್ಮ ತ್ಯಜಿಸುತಲೇಸು ವರುಣದಿ ಸುಧೆಯ ವೃಷ್ಟಿಲಿಸೂಸುವುದು ತನುವ 8 ಹೀಗೆ ನಿತ್ಯದಿ ಕಾಮಿನೀಯರುಬಾಗಿ ಪತಿಯಲೆ ಕಾರ್ಯ ಮಾಡುತನಾಗಶಯನ ನಕ್ಷರದ ತತ್ಸುಖಭೋಗ ಬಯಸುವುದು9 ನಾರಿಯರು ಗುರು ಮಂತ್ರದೀಪರಿಪೂರ್ವದಲೆ ಮಾಡುತ ಕೃಷ್ಣನಆರು ವರ್ಣವ ಪಠಿಸುತಲೆ ಗೃಹಕಾರ್ಯ ಮಾಡುವುದು 10 ರಾಮ ಮೊದಲಾದನ್ಯ ಮಂತ್ರಗಳ್‍ಕಾಮಿನೀಯರು ಜಪಿಸುತಲೆ ನಿಜಕಾಮದಿಂದಲೆ ಯೋಗ್ಯತಾವನುನೇಮದಿಂದಿರಲು 11 ತಾರತಮ್ಯವು ಪಂಚಭೇದವುಭೂರಿ ಭಕುತಿಲಿ ಭಜಿಸಿ ಕೃಷ್ಣನಆರು ವರ್ಣವು ಪಠಿಸುತಲೆ ತನ್ನು -ದ್ಧಾರ ಮಾಡುವನು12 ವಾಸು ಮಾಡುತಲೆನ್ನ ಮನದೊಳುಆಶು ಭೇದಕ ಸ್ತ್ರೀಜನಂಗಳಿಗೀಶ ಮಾಡಿದ ಇದನ ಇಂದಿ-ರೇಶಗರ್ಪಿಸುವೆ 13
--------------
ಇಂದಿರೇಶರು
ಪರಮಪರುಷನೆ ಕೃಷ್ಣ ಕಣ್ತೆರದು ನೋಡೊ ಪ ಶಿರಿ ಅರಸ ದಯಸಿಂಧು ಶ್ರಾವ್ಯಮಂಗಳ ಕೀರ್ತಿ ಅ.ಪ. ದ್ವಿಜಗಮನ ವೃಜಿನಹರ ಭುಜಗತಲ್ಪನೆ ದೇವ ಅಜತಾತ ಗಜವರದ ಕುಜ ನಿವಾರಣನೆ ಭಜನೆ ಪಾಲಿಸು ಎನ್ನ ವಿಮಲ ಮನದಲಿ ನಿಂತು ಋಜು ಪುಂಗವರ ದೈವ ನಿರ್ಜರರ ಬಾಂಧವನೆ 1 ಒದ್ದವಗೆ ಶಿಕ್ಷಿಸದೆ ಬೈದವಗೆ ಗತಿ ಇತ್ತೆ ನಿರ್ದೋಷ ಗುಣಪೂರ್ಣನೆಂದು ಶ್ರುತಿ ಸಾರುತಿದೆ ನಿದ್ದೆ ಮಾಡುವಗೊಲಿದಿ ಮುಕ್ತಿಯನಿತ್ತೆ ಯುದ್ಧದಲಿ ಶರದಿಂದ ಹೊಡೆದವಗೆ ನೀನೊಲಿದೆ 2 ಶುದ್ಧ ಆನಂದಾಬ್ಧಿ ಜಯೇಶವಿಠಲನೆ ಮಧ್ವ ಮುನಿದೈವ ಸಿದ್ಧರೊಡೆಯ ಉದ್ಧವನ ಗುರು ಸುಧಾಮ ಮಿತ್ರನೆ ಮನ ತಿದ್ದಯ್ಯ ಜ್ಞಾನ ನಿನ್ನಲ್ಲಿ ನಿಲುವಂತೆ 3
--------------
ಜಯೇಶವಿಠಲ
ಪರಮಪಾವನ ಸಂಸಾರದ ಘನ ಅ.ಪ ಕರಿಯಪಾಲನ ಕರುಣ ಕಡುಕಮಲನಯನ ಖರೆಯ ಸುಖಕೆ ತೊರಪಿಟ್ಟೆನ್ನ ಕೊರಗಿಪ್ಪ ಕಿರಿಕಿರಿಯ ತರಿದು1 ಜನಕಜಾವರ ಜನಕ ಜಗದ ಜಯ ಸುಖಕರ ಜನುಜನಮದಿ ಜನಿಸಿ ಬರುವ ಜಡರನಳಿದು ಜಯವ ನೀಡಿ 2 ಸುಜನ ಜೀವನ ಸುಖಶರಧಿ ಸುಮನರೊಂದನ ಶುಭಕೆ ಶುಭವೆನಿಸುವ ಸುಮುಕ್ತಿ ಸುದಯದಿತ್ತು ಸಲಹು ಶ್ರೀರಾಮ 3
--------------
ರಾಮದಾಸರು
ಪರಮಪಾವನ್ನನಾಮ ಭಳಿರೆ ಸಂಗರ ಭೀಮ ಸರಸಗುಣಾಭಿರಾಮ ತರಣಿವಂಶ ಲಲಾಮ ತಾರಾನಂದನ ಪ್ರೇಮ ಪರಿಪೂರ್ಣಧಾಮ ಪಟ್ಟಾಭಿರಾಮ ಪ. ಚಿಕ್ಕಪ್ರಾಯದಲಿ ಬಲುರಕ್ಕಸಿಯನು ಸೀಳಿ ತಾಕಲದೆ ಕಾಲ್ಪೆಣ್ಗೈದು ರಾಜಮೌಳಿಯ ಬಿಲ್ಲ ಗಕ್ಕನೆ ಖಂಡ್ರಿಸಿ ಕೈವಿಡಿದು ಸೊಬಗನುಕ್ಕುವ ಜಾನಕಿಯ ಧಿಕ್ಕರಿಸುತ ಪೋಗಿ ದಿತಿಯ ಕೈಕೆಯ ಮಾತು ದಕ್ಕಲೆನುತ ಪೋಗಿ ದಂಡಕಾರಣ್ಯವ ಭೂರಿ ದಾನವಹಿಂಡ ಚಕ್ಕಂದದಲಿ ಕೊಂದ ಜಾಣ ನೀನಹುದೊ 1 ಭುವನೇಶ ಶಬರಿಯ ಪೂಜೆಯ ಕೈಕೊಂಡು ಪವನಾತ್ಮಜನ ಕಂಡು ಬರಹೇಳಿ ರವಿಯ ಸೂನನ ಕಾಣಿಸಿಕೊಂಡು ತವಕದಿಂ ವಾಲಿಯ ಹವಣರಿಯದಸುವ ಕೊಂದು ಪ್ಲವಗ ಬಲವನು ಕೂಡಿ ಬಲು ಸಮುದ್ರವ ಬಂಧ- ನವ ಮಾಡಿ ಕುಂಭಕರ್ಣ ರಾವಣನ ಸಂಹಾರ ಮಾಡಿ ಲಂಕಾರಾ ಜ್ಯ ವಿಭೀಷಣಗಿತ್ತು ಅವನಿಜೆಸಹ ಪುಷ್ಪಕವನೇರಿ ನಡೆದೆ 2 ಸುರರೆಲ್ಲ ಪೂಮಳೆಗರೆಯೆ ಸುಗ್ರೀವಾದಿ ವರರಾವಣರ ಸೇನೆ ಬೈಲಾಗಿ ನೀ ನಡೆಯೆ ಶೃಂ- ಗಾರವಾದ ಸಾಕೇತಪುರಕೆ ಭರದಿ ಬಂದು ನಿರುತ ಸೌಖ್ಯದಲಿ ನಿಂದು ಸಿರನೆಲೆವಿನಯದಿ ಚಿನ್ಮಯನಾ ಗಿರಿಯ ಶುಭಕರ್ಣವೊ(?) ಸೀತಾಲಕ್ಷ್ಮಣ ಭರತಶತ್ರುಘ್ನಯಿರೆ ಹನುಮನ ಸೇವೆ ದಿವ್ಯಸಿಂಹಾಸನವೇರಿ ಧರೆ ಆಳಿದ ಪರಿಣಾಮದಿ ಹಯವದನ ರಾಮ3
--------------
ವಾದಿರಾಜ
ಪರಮಪುರುಷಪರೇಶಪಾವನಪರಮಮುನಿಜನಪಾಲನ ಶರಧಿಶಯನ ವಿಹಂಗವಾಹನ ಶಾರದಾಂಬುಜಲೋಚನ 1 ವಾಸುದೇವ ವಿರಂಚಿವಂದಿತ ವಾಸವಾದಿ ಸುರಾರ್ಚಿತ ವಾಸುಕಿಪ್ರಿಯ ಭೂಷಭಾವಿತ ವಾಸರೇಶಕುಲೋದಿತ 2 ಶರಣಜನರಘಹರಣ ಸೌಖ್ಯವಿತರಣ ಶುಭಸಾಗರ ವರದ ಪುಲಿಗಿರಿವಾಸ ವೆಂಕಟವಿಠಲ ದಯಾಕರ 3
--------------
ವೆಂಕಟವರದಾರ್ಯರು
ಪರಮಹಂಸ ಪರಿವ್ರಾಜಕ ಗುರುವರ್ಯ | ಶಿರಬಾಗುವೆ ಆರ್ಯ ಪ ಚರಣಕಮಲ ನೆರೆನಂಬಿಹೆ ನಾನಿನ್ನು | ಭಜಕರ ಸುರಧೇನು ಅ.ಪ ಪುರುಷೋತ್ತಮ ಯತಿಕರ ಸರಸಿಜ ಜಾತ | ಜಗದೊಳಗೆ ಪುನೀತ ಅರಿಷಡ್ವರ್ಗವ ದೂರಗೈದ ಧೀರ | ಶರಣರಿಗಾಧಾರ ತರಣಿ ಸದೃಶ ಸುವಿರಾಜಿತ ಶುಭಗಾತ್ರ | ಪಾವನ ಚರಿತ್ರ ನಿರುತ ನಿಮ್ಮ ಸಂಸ್ಮರಿಸುವ ನರಧನ್ಯ | ಭುವಿಯೊಳು ಸನ್ಮಾನ್ಯ 1 ವ್ಯಾಸರಾಯ ಕರಪೂಜಿತ ಶ್ರೀ ಚರಣ | ನಿಗಮಾಗಮ ನಿಪುಣ ಶ್ರೀ ಸಮೀರಮತ ಸ್ಥಾಪಕ ಧುರೀಣ | ಸುಜ್ಞಾನಿವರೇಣ್ಯ ಭೂಸಿತ ಸದ್ಗುಣ ಸುಮಲಾಭರಣ | ಶರಣ ಸಂಜೀವನ ಭಾಸುರ ಸೂರ್ಯಾಂಶಜ ಯತಿಕುಲರತ್ನ | ಭೂಸುರ ಸನ್ಮಾನ್ಯ 2 ಯೋಗಿವರ್ಯ ಕರುಣಾಕರ ಗುಣನಿಲಯ | ಶುಭನಾಮಧೇಯ ನಾಗಶಯನ ಶ್ರೀ ಕರಿಗಿರಿನಿಲಯನ್ನ | ಪೂಜಿಪ ಗುರುರನ್ನ ಶುಭ ಚರಿತ | ದೂರೀಕೃತದುರಿತ ಬಾಗಿ ದೈನ್ಯದಲಿ ಬೇಡುವೆ ತವಚರಣ | ಭಕ್ತಿಯನುದಿನ 3
--------------
ವರಾವಾಣಿರಾಮರಾಯದಾಸರು
ಪರಮೇಶ್ವರಾ ಸೋಮಶೇಖರಾ ಪ ಗಿರಿಜಾವರಾ ಕರುಣಾಕರಾ ಅ.ಪ ಆದಿಮೂಲಾ ದೇವಾದಿದೇವಾ ಶಿವ ನಾದರೂಪ ಜೀವಾದಿಜೀವ ಶಿವ ವೇದವಿದಿತ ವೇದಾಂತರೂಪ ಶಿವ ವಾದವಾಕ್ಯ ಮಹಾಹ್ಲಾದ ವೈಭವಾ 1 ಅಂಗಜಾರಿ ಚರ್ಮಾಂಬರಧಾರಿ ರಂಗನಾಥ ಮಾಂಗಿರಿ ಸಂಚಾರಿ ಪಾತಕ ಪರಿಹಾರಿ ಲಿಂಗರೂಪ ಶುಭಕಾರಕ ಶೌರಿ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಪರರ ಮನೆಗೆ ಪೋಗಿ ತಿರುಗುವೆ ಯಾತಕೆ ಸುರತರುವಿರುವದ ಅರಿಯದೆ ಮನುಜ ಪ. ವರದಿಹ ಸುರಮುನಿ ಗುರುವರ ನಾರದ ಪೊರೆವ ಹರಿ ಎಂದ ಪುರಂದರದಾಸರ ಅ.ಪ. ವರ ದಿವಕರನೇಳದ ಮುನ್ನ ಸ್ಮರಿಸುತ ಹರಿಯ ನೀನೇಳೆಂದು ಕರುಣಸಾಗರ ಹರಿಚರಣಕೆ ನಿನ್ನಯ ಹರಣವ ಬಾಗುತೆ ಪೊರೆವ ನಿನ್ನ ಜೀವವೆಂದರುಹಿದ ಮರೆತು ನೀನನುದಿನ 1 ಅಂಗನೆ ದ್ರೌಪದಿ ಗಂಗ ಸ್ನಾನಕೆ ಪೋಗೆ ರಂಗನ ಚರಣವ ಸ್ಮರಿಸುವಂಥ ಶುಕರು ಹೆಂಗಳೆಯನು ಮಾನಂಗಳ್ವಸ್ತ್ರವ ಬೇಡೆ ಮಂಗಳೆ ಕೈಯಿಂದ ರಂಗನ ಕೊಡಿಸಿರೆಂದು ಮರೆತುನೀನನುದಿನ2 ತೋರಿದ ಜಗಕೆ ಕೃಷ್ಣನೆಂಬೋ ನಾರಿ ಸೊಲ್ಲ ಕೇಳಿ ಭೋರೆಂಬೊ ಸಭೆಗೆ ತಾ ಕೋರಿದಕ್ಷಯ ಶೀರೆ ಶ್ರೀ ಶ್ರೀನಿವಾಸನು ಮರೆತು ನೀನನುದಿನ3
--------------
ಸರಸ್ವತಿ ಬಾಯಿ
ಪರಲೋಕವಿಲ್ಲೆಂಬೊ ಪರಮ ಪಾಪಿಗಳಿಗೆ ನರಲೋಕವೇ ನರಕವಣ್ಣ ಪ ಪರಲೋಕವಿಹುದೆಂದು ಗುರುಕರುಣವನು ಪಡೆದ ಕುರುಬನದ ಅರಿತನಣ್ಣ ಅ.ಪ ಈಶ ಜಡ ಜೀವರೆಂಬುವ ಭಿನ್ನ ತತ್ವಗಳು ಈಶನೊಬ್ಬನೆ ಕರ್ತನಣ್ಣ ಸಾಸಿರದಿ ಆಸೆ ಭಂಗಗಳ ಪೊಂದುತಲಿರಲು ಮೀಸೆಯನೇತಕೆ ತಿರುವಬೇಕಣ್ಣ 1 ಹರಿಯು ಪರನಲ್ಲದಿದ್ದರೆ ಸರ್ವಭುವನಗಳು ಹರಿಯಧೀನದಲಿರುವುದೇಕೆ ಹರಿಯಧೀನಲಿಲ್ಲದಿದ್ದರೀ ಜಗದೊಳಗೆ ಕೊರತೆಯೇತಕೆ ಮಂದಿಗಳಿಗೆ 2 ದೇವದತ್ತನು ಧನಿಕ ಪ್ರೇತದತ್ತನು ಬಡವ ಯಾವ ಕಾರಣ ವಿಷಮಗತಿಗೆ ಸಾವು ನೋವುಗಳ ಪ್ರತಿಕ್ಷಣಗಳಲಿ ನೋಡಿ ದೊರೆ ಭಾವವಿರುವುದು ನ್ಯಾಯವೇ 3 ಈಶನಿಲ್ಲೆಂಬುವರು ಹೇಸಲಾರರು ಪಾಪ ರಾಶಿ ರಾಶಿಯ ಗಳಿಸಲು ಆಶೆಬಡುಕರ ಜಗವ ನಾಶಮಾಡಲು ರಾಜ ಶಾಸನಕೆ ಬುಡವೆಲ್ಲಿಯಣ್ಣ 4 ಇಂದು ಇದನು ಪಡೆಯುವೆ ಮುಂದೆ ಅಧಿಕ ಧನವನು ಗಳಿಸುವೆ ಸದೆ ಬಡಿಯುವೆನು ಪರರನೆಂಬ ನುಡಿ ತಮಗುಣದ ಬೆದೆಯಲಿರುವನು ನುಡಿವನು 5 ಎಲ್ಲಿಂದ ಬಂದೆ ಹೋಗುವುದೆಲ್ಲಿಗೆಂಬುದನು ಬಲ್ಲವಗೆ ಮುಕುತಿ ಇಲ್ಲೇ ಒಳ್ಳೆ ಮನವನು ಪಡೆದು ಬಲ್ಲವರ ಸೇವೆಯಿಂ ದೆಲ್ಲವನು ತಿಳಿಯಲಳವಣ್ಣ 6 ಕಾಯವಾಚಾಮನಸದಿ ತಪವಗೈಯುತ ಶುದ್ಧ ಭಾವವನು ಗಳಿಸಿರಣ್ಣ ದೇವಗುರು ಪ್ರಾಜ್ಞ ಪೂಜನ ಲಾಭವಿದು ವಿನಯ ಭಾವಕೆ ಪ್ರಸನ್ನರಿವರು 7
--------------
ವಿದ್ಯಾಪ್ರಸನ್ನತೀರ್ಥರು
ಪರಶುರಾಮ ದೇವರು ಬೆಳಗಿರಾರುತಿಯನು ಜಲಜ ನೇತ್ರರೆ ನೀವುಛಲವ ಸಾಧಿಸಿದಂಥ ಚೆಲುವರಾಯನಿಗೆ ಪ ರೇಣುಕಾಸುತ ಕ್ಷೋಣಿಪಾಲಕರ ಕೊಂದುಕಾಮಧೇನುವಿನ ಆಶ್ರಮ ಸ್ಥಾನದಿ ತಂದಾ 1 ಹತ್ತೇಳು ಒಂದು ಅಕ್ಷೋಹಿಣೀ ಸೈನ್ಯಹತ್ಯೆ ಮಾಡುತ್ತ ರಕ್ತದ ನದಿಯನು ಸುತ್ತಹರಿಸಿದವಗೆ 2 ವಂದ್ಯ ಮಹಿಮನೆ ಇಪ್ಪತ್ತೊಂದು ಬಾರಿಲೆ ಕ್ಷಾತ್ರವೃಂದವನಳುಹಿದ ಇಂದಿರೇಶನಿಗೆ 3
--------------
ಇಂದಿರೇಶರು
ಪರಶುರಾಮಗೆ ಪರಮ ಪ್ರೀತ್ಯಾಗಲೀ ಪ ವರವೆನಿಪ ನರದೇಹದ್ಹವಿಷನರ್ಪಿಸುವೆ ಅ.ಪ. ಕಪಟ ವಿರಹಿತವೂ |ವಿಪುಲದಲಿ ಗೈದು ಸೂ | ಪಕ್ವವಾಗಿರುವಂಥ ಸುಪವಿತ್ರ ದೇಹವನೆ | ಅರ್ಪಿಸುವೆ ಹರಿಯೇ 1 ಕರ್ಮ | ಪ್ರಾಜ್ಞ ನಿನದೈಯ್ಯಾ 2 ಭಾರತೀಶ ಭವ ವಂದ್ಯ | ಪರುಶು ರಾಮಾಭಿನ್ನಪಂಕಜಾಕ್ಷ ಗುರು | ಗೋವಿಂದ ವಿಠಲ ಕೊಳ್ಳೋ3
--------------
ಗುರುಗೋವಿಂದವಿಠಲರು
ಪರಾಕು ಜೀಯ ವೆಂಕಟರಾಯ ಪರಾಕು ಸರ್ವೋದ್ವøಕ್ತ ನೀನೊಬ್ಬ ಸಾಕು ಉಕ್ತಿಯ ಕೇಳಬೇಕು ಪಾಲಿಸು ಸಾಕು ಪ. ಇಂದಿರಾವರ ದೀನ ಬಂಧು ನಿನ್ನ ಪಾದಾರ- ವಿಂದವೆ ಶರಣವೆಂದು ಹೊಂದಿದೆನಿಂದು ಮಂದ ಭಾವನೆಯ ಕುಂದು ಕ್ಷಮಿಸು ಯೆಂದು 1 ಕಾಲ ಶುಭ ಲೀಲೆಯರಸವೆಂಬ ಪಾಲ ಕುಡಿಸುತೆನ್ನನು ಪಾಲಿಸು ಪದ್ಮ ಲೋಲ ನಿನ್ನಣುಗನನ್ನು ಕೈಪಿಡಿದಿನ್ನು 2 ತಡೆಯದೆ ಸಕಲಾರ್ಥ ಕೊಡುವೆ ಶ್ರೀ ವೆಂಕಟಾದ್ರಿ ಒಡೆಯ ನೀನೊಲಿದಿರಲು ವೈರಿಗಳನ್ನು ಕೆಡವುತ ಸುಖ ಲಾಭವು ಸಿದ್ಧವಾಗಿಹವು 3
--------------
ತುಪಾಕಿ ವೆಂಕಟರಮಣಾಚಾರ್ಯ
ಪರಾಕು ಪ ಕಾಮಿತ ಫಲವೀವ ಕರುಣಾಂಬುಧಿ ಎಂದು ನಾ ಮೊರೆಹೊಕ್ಕೆನಲ್ಲೋ ರಾಮರಾಮಾ ಪ್ರಫುಲ್ಲ ಅ.ಪ. ಎಡವಿದ್ದ ಮಾತ್ರದಿ ಪೆಣ್ಣಾದ ಗೌತಮಮಡದಿಯು ನಿನ್ನವಳೇನೋಕಡುಪ್ರೀತಿಯಿಂದ ಕಾಯಿದಿ ಕರಿರಾಜನು ನಿನ್ನಒಡಲಲ್ಲಿ ಜನಿಸಿದನೇನೋನಡುಗುತ ಮಗನ ನಾರಗನೆನ್ನಲುನುಡಿ ಕೇಳಿ ಪೊರೆದೆಲ್ಲೊ ರಾಮರಾಮಾ1 ಹಿಂದ್ವೈರಿ ದೆಸೆಯಿಂದ ಬಂದ ವಿಭೀಷಣನುತಂದೆಯ ಕಡೆಯವನೇನೋಕಂದು ಕುಂದೆಣಿಸದೆ ಕಾಯಿದಿ ಘಂಟಾಕರ್ಣಾಎಂದಾ ಮಾತಿನ ಬಗೆಯೇನೋಬಂದು ಕಂಬದಿ ಶಿಶುವ ಬಾಧೆಯ ಬಿಡಿಸಿದಿ ಆಪದ್ಬಾಂಧವ ನೀನಲ್ಲೋ ರಾಮರಾಮಾ 2 ಉಲ್ಲಾಸದಿಂದ ಶಬರಿ ಉಂಡೆಂಜಲಿಗೊಡ್ಡಿದವಲ್ಲಭ ನೀನಲ್ಲವೇನೋಎಲ್ಲಿಯ ಬಲ್ಲಿದ ಪಿಡಿಯವಲಕ್ಕಿಗೆ ನೀ ಪೋಗಿವಲ್ಲ್ಯೊಡ್ಡಿದ್ದು ಮರೆತ್ಯೇನೋಎಲ್ಲಿಯ ಮಾತಿದು ಪೇಳಲಂಜುವೆ ರಂಗ ವಿ-ಠಲ ನೀನಲ್ಲೋ ರಾಮರಾಮಾ 3
--------------
ಶ್ರೀಪಾದರಾಜರು
ಪರಾಕು ಮಹಾಸ್ವಾಮಿ ಸಜ್ಜನಪ್ರೇಮಿಪ. ಕ್ಷೀರಸಾಗರಶಯನ ನಿವಾಸಾಪಾರಗುಣಗಣಾಶ್ರಯ ಚಾರು ಪದಾಬ್ಜದ್ವಯ ದನು- ಜಾರಿ ಧನಂಜಯಪ್ರಿಯ ಮದವಾರಣಕೃತನಿರ್ಭಯ ನಮ್ಮ ದೂರನು ಲಾಲಿಸು ಚಿನ್ಮಯ ಜಯ1 ದುಷ್ಟ ನಿಶಾಚರರಟ್ಟುಳಿ ಘನ ಕಂಗೆಟ್ಟುದು ಸುರಮುನಿಗಣ ಆ ಭ್ರಷ್ಟರು ಮಾಡುವ ನಿಷ್ಠುರಕೆ ಮೈಗೊಟ್ಟೆವು ಸಂಕರ್ಷಣ ನಾವಿ- ನ್ನೆಷ್ಟೆಂಬುದು ದುರ್ಗುಣವಶ ಬಿಟ್ಟೆವು ಸುರಪಟ್ಟಣ ನಮ್ಮ ಕಷ್ಟವು ಪದಕರ್ಪಣ ಪರಾಯಣ 2 ಅಂತರಂಗ ಬಹಿರಂಗ ಭ್ರಷ್ಟದನುಸಂತತಿ ಸಂತತಿ ಭಾರಿ ಬಲು ಧುರೀಣರ್ಸಂತಾಪಿಪರು ಮುರಾರಿ ನಮ್ಮ ಶೌರಿ ಜಗ- ದಂತ ವಿಹಾರಿ ನಿರಂತ ಪರಂತಪ3 ಚೆನ್ನಕೇಶವ ಚರಾಚರಾತ್ಮ ಚೈತನ್ಯರೂಪ ಶ್ರೀರಂಗ ನಮ್ಮ ಸನ್ನುತ ಶುಭಾಂಗ ಸ- ತಿಮಿರ ಪತಂಗ ಸುಪ್ರ ವಿಹಂಗ ತುರಂಗ4 ಕಾಲನಿಯಾಮಕ ಪ್ರಾಣ ನಿ ನ್ನೋಲಗ ಸೇವಕರಾಳಿಯೂಳಿಗವ ಕೇಳು ತ್ರಿಲೋಕತ್ರಾಣ ನತ ಪಾಲ ಪರೇಶ ಪುರಾಣ ಶ್ರೀಲೋಲ ವಿಗತ ಪರಿಮಾಣ ಹೃದ- ಯಾಲಯಮಣಿ ಲಕ್ಷ್ಮೀನಾರಾಯಣ 5
--------------
ತುಪಾಕಿ ವೆಂಕಟರಮಣಾಚಾರ್ಯ