ಒಟ್ಟು 2021 ಕಡೆಗಳಲ್ಲಿ , 115 ದಾಸರು , 1503 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾರಲ್ಲಿ ಪೋದರು ನೀರಾದರೂ ಕೊಡರು ಪ ದೂರ ಹೋಗೆಂಬರು ಬದಿಸೇರಲೀಸರು ಅ.ಪ ಹಸಿವು ತೃಷೆಗಳಿಂದಲಿ ವ್ಯಸನವಪಡುತಲಿ ಉಸುರುಸುರೆನುತಲಿ ಬಸವಳಿದು ಭಯದಲಿ 1 ರೋಗದಲಿ ಬಳಲುತ ಹ್ಯಾಗಿನ್ನು ಎನ್ನುತ ಕೂಗುತ್ತ ಬಾಯ್ಬಿಡುತ ಎಲ್ಲರನು ಬೇಡುತ 2 ಗುರುರಾಮವಿಠಲನ ನೆರೆ ನಂಬದಿರುವನ ಪರಿಪರಿಯಲಿ ಜನ ಬಯ್ಯುವರನುದಿನ 3
--------------
ಗುರುರಾಮವಿಠಲ
ಯಾರಿಗೆ ದಾರೋ ಗೋಡೆಗೆ ಮಣ್ಣು ಮಾರಿಯರೆಲ್ಲರು ಶ್ರೀ ಹರಿಯೇ ಪ ಸ್ಥಿತಿಯಲ್ಲ ದೇವಾ ನಿನ್ನುಳಿದು 1 ಅಂಬುಜಲೋಚನ ಪರಮ ಪುರುಷನ ಭವ ಅಂಬುಜೆರಮಣಾ ನಿನ್ನುಳಿದು 2 ನಂಬಿದ ಭಕ್ತರ ಸಲಹುವ ಹರಿಯೇ ಸಂಭ್ರಮದಾತ್ಮಗೆ ನಿನ್ನುಳಿದು3 ನರಹರಿ ಭಕ್ತಿ ಮಾಡಿದ ಧರ್ಮ ಸರಸದಿ ಪರಹಿತವನ್ನುಳಿದು 4 ಹಿಡಿಯುವೆ ಮುಕ್ತಿಯ ಮಾರ್ಗವನೀಗ ಪಡೆವೆನು ಸುಖವ ಕೇಶವನೇ5
--------------
ಕರ್ಕಿ ಕೇಶವದಾಸ
ಯಾರಿರಬಹುದೀತ ಗೆಳತೀ ಯಾರಿರಬಹುದೀತ ಪ ಯಾರೆಂದರಿಯದೆ ಪೋಗದೆ ಕೊರತೆ ಯಾರಿರಬಹುದೀತ ಅ.ಪ ಸಾವಿರ ಸಂಖ್ಯೆಯ ಗೋವಳರಿದ್ದರೂ ಯಾವನಿಗೀ ವಿಧ ಠೀವಿಯಿರುವುದೇ ಹಾವಭಾವಗಳ ನೋಡಲು ಈತನ ಗೋವಳ ವೇಷವದಾವ ಕಾರಣವೋ 1 ನಮಗೇತಕೆ ಈತನ ಗೋಜೆಂದರು ಕಮನೀಯನ ನೋಡುತ ನೋಡುತ ಬಲು ಮಮತೆಯು ಮನದಲಿ ಏರುತಲಿರುವುದು ಕಮಲನಯನೆ ನಾ ನಮಿಸುವೆ ಪೇಳೆ 2 ಸರಳನೋ ದುರುಳನೋ ಅರಿಯುವುದೆಂತೇ ಕರೆಯದೆ ಹೋದರೆ ಜರಿಯಲುಬಹುದೇ ಮುರಳಿಯ ನಾದದ ಕರೆ ಬಂದರೆ ನಾ ಬರವೆನೆಂದರು ಹೇ ಸರಸ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಯಾವ ಸಂಭ್ರಮವಿದೇ ವಾರಿಜ ವದನೆ ಶ್ರೀವೇಣುಗೋಪಾಲ ಮನೆಗೆ ಬಂದಿಹನೇ ಪ ದೇವ ದೇವನು ನಿನ್ನ ಪೂಜೆಗೊಪ್ಪಿದನೇ ಯಾವ ವಾತ್ಸಲ್ಯವ ನಿನಗೆ ತೋರಿದನೇ ಅ.ಪ ಗಾನ ನೃತ್ಯಗಳಿಂದ ಒಲಿಸಿದೆಯೇನೇ ಜೇನು ಸಕ್ಕರೆ ಬೆಣ್ಣೆಗಳನಿತ್ತೆಯೇನೇ ಸಾನುರಾಗದಿ ಪೂಜೆ ಮಾಡಿದೆಯೇನೇ ನಾನೇನಗೈದರೆ ಅವನೊಲಿಯುವನೇ1 ಪರಿಮಳ ಗಂಧಕೆ ಮೈ ತೋರುವನೇ ಕೊರಳಿಗೆ ಹಾರವ ನೀಡಲೊಪ್ಪುವನೇ ಮುರಳಿಯ ಗಾನವನೊಲಿದು ಕೇಳುವನೇ ಪರಮಪುರುಷ ಬಾರೆಂದರೆ ಬಹನೇ 2 ಕರಗಳ ಮುಗಿದರೆ ಕರುಣಿಪನೇನೇ ಚರಣಕೆ ಮಣಿದರೆ ಒಲಿಯುವನೇನೇ ಪರಿಪರಿ ಹೊಗಳಲು ನಲಿಯುವನೇನೇ ವರದ ಮಾಂಗಿರಿರಂಗ ದಯೆ ತೋರನೇನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಯುವ ಹೊಸಪರಿ ರೂಪದಿ ಪ. ಶಂಖಚಕ್ರ ನಾಮಾಂಕಿತಮಾಗಿಹ ಸಂಕರ್ಷಣ ರೂಪದಿ ಮೆರೆಯುವ 1 ರವಿಶಶಿ ಬಿಂಬಗಳ್ ಎಡಬಲದೋಳ್ ನವವಿಧದಿಂದಲಿ ಮೆರೆಯುವ 2 ನಾಡಿನೊಳೀಪರಿ ಗೂಢರೂಪದಿ ನಾಡಿನ ಭಕ್ತರು ಬೇಡಿದುದೀಯುವ 3 ಎಣಿಸಿ ಗುಣಿಸಲ್ ತಣಿಯದ ಮಹಿಮನ ಮಣಿಸುವೆನು ಶೇಷಗಿರೀವರನಿವನ 4
--------------
ನಂಜನಗೂಡು ತಿರುಮಲಾಂಬಾ
ಯೆಂದು ಪಿಡಿಯುವಿ ಕೈಯ್ಯ ಇಂದಿರೇಶ ಚಲುವ ಕೃಷ್ಣನೆ ಪ ಮುಂದೆ ಹೋಗಲು ಬಂಧಮಾಡುತ ಕುಂದು ಅಳಿಯುತ ತಂದೆ ದಯೆತೊರಿ ಅ.ಪ ಮಂದ ನಾನಯ್ಯ ಕಂದಿ ಕುಂದಿದೆ ಭವದಿ ಕೇಳಯ್ಯ ಬಂಧು ಬಳಗವು ಯಾರು ಇಲ್ಲಯ್ಯ ನಿಂದು ಮುಂದಿನ ದಾರಿ ನಡೆಸಯ್ಯ ಜೀಯಾ ಅಂದು ಸಭೆಯೊಳು ಮಂದಗಮನೆಯ ಒಂದು ನೊಡದೆ ಬಂದು ಸಲಹಿದ ಸಿಂಧು ಶಯನಾನಂದ ಮೂರುತಿ ನಂದನಂದನ ಶ್ಯಾಮಸುಂದರ ಬಂಧು ಸರ್ವರ ಬಂಧಮೋಚಕ ಮಂದರಾದ್ರಿ ಧರನೆ ಯದುಕುಲ ಚಂದ್ರ ಶೋಭಾಸಾಂದ್ರ ಕೃಷ್ಣನೆ ಬಂದು ಚಂದದಿ ಸಲಹಿ ಎನ್ನನು 1 ಬಾಲತನದಲ್ಲಿ ಲೀಲೆಗೋಷ್ಠಿಲಿ ಮೆರೆದೆ ನಾನಲ್ಲಿ ಮೇಲೆ ಯೌವನ ಒಡನೆ ಬಂತಲ್ಲಿ ಲಲನೆ ಕೇಳಿಲಿ ಮುಳುಗಿ ಹೋದೆನು ಅಲ್ಲಿ ಮೆಲ್ಲಮೆಲ್ಲನೆ ಮುಪ್ಪು ಬಂತಲ್ಲಿ ಕಾಲಕಳೆದೆನು ಪಗಡೆ ಜೂಜಿನಲಿ ಮಲ್ಲಮರ್ದನ ಮಾತುಲಾಂತಕ ಚಲ್ವಸೂಕರ ಪುಲ್ಲಲೊಚನ ಪುಲ್ಲನಾಭನೆನಲ್ಲ ಸರ್ವರ ಬಿಂಬರೂಪನೆ ಎಲ್ಲ ಕಾಲದಿ ಎಲ್ಲಮಾಡುತ ನಿಲ್ಲದೆಜಗ ಸಾರ ಶ್ರೀ ನಲ್ಲ ನಿನ್ನಯ ಎಲ್ಲ ಬಲ್ಲವರಿಲ್ಲ ಎಲ್ಲಿಯೂ ಬುದ್ಧ ಕಲ್ಕಿಯೆ ಸೊಲ್ಲು ಲಾಲಿಸಿ ಒಲಿದು ಬಂದ ನಾರಸಿಂಹನೆ ಇಲ್ಲ ಸಮರು ಅಧಿಕರೈಯ್ಯ ಪೂರ್ಣದೇವನೆ2 ಮೂರು ತಾಪವ ಹರಿಪ ಬಗೆಯೇನೋ ವೈರಿ ಆರರ ಭರದಿ ತರಿ ನೀನೂ ಮೂರು ಋಣಗಳು ಉಳಿಯೆಗತಿಯೇನು ಮೂರು ಕರ್ಮದಿ ಬಿಡಿಸಿ ಹೊರೆಯನ್ನು ಭಕ್ತಸುರಧೇನು ಸಾರಸಜ್ಜನ ಪ್ರಾಪ್ಯ ಶುಭಗುಣ ಸಾರ ಕರುಣಾ ಪೂರ್ಣವಾರಿಧಿ ಮಾರಜನಕನೇ ಋಷಭಮಹಿದಾಸ ತೋರು ಜ್ಞಾನವ ಬಾದರಾಯಣ ಮೀರಲಾರೆನು ವಿಷಯವಾಸನೆ ಭಾರತೀಶನ ಒಡೆಯ ಕೃಷ್ಣನೆ ಭಾರ ನಿನ್ನದು ಎನ್ನ ಪೊರೆವದು ಮತ್ಸ್ಯ ವಾಮನ ಧೀರ ಧೃವನಾ ಪೊರೆದ ವರದನೆ ಬೀರಿ ಭಕ್ತಿ ಜ್ಞಾನ ವೈರಾಗ್ಯ 3 ಎನ್ನ ಯೋಗ್ಯತೆ ನೋಡಿ ಫಲವೇನು ನಿನ್ನ ಘನತೆ ತೋರಿ ಪೊರೆ ನೀನು ನಿನ್ನ ದಾಸನ ಮಾಡು ಎನ್ನನ್ನು ಅನ್ಯಹಾದಿಯ ಕಾಣೆ ನಾ ನಿನ್ನು ಬೆನ್ನು ಬಿದ್ದೆನು ಇನ್ನೂಮುನ್ನೂ ಮಾಧವ ವಿಶ್ವ ತೈಜಸ ಪ್ರಾಜ್ಞತುರಿಯ ಹಂಸ ವಿಷ್ಣುವೇ ಜ್ಞಾನ ಭೋಧಕ ಸನತ್ಕುಮಾರನೇ ಮೌನಿ ದತ್ತಾತ್ರೇಯ ಹಯಮುಖ ದೀನವತ್ಸಲ ಯಜ್ಞ ಧನ್ವಂತ್ರಿ ಶ್ರೀನಿವಾಸ ರಾಮ ಕಪಿಲನೆ ಜ್ಞಾನ ನಿಧಿ ಮುನಿ ನಾರಾಯಣನೆ ನೀನೆ ಅನಿರುದ್ಧಾದಿ ರೂಪನು ಧ್ಯಾನಗೊಚರ ಶಿಂಶುಮಾರನೆ ಸಾನುಕೂಲದಿ ನೀನೆ ವಲಿಯುತ ಕರ್ಮ ಸಂಚಯ4 ಆದಪೊದ ಮಾತು ಏಕ್ಕಯ್ಯ ಮಧ್ವರಾಯರ ಪ್ರೀಯ ಶೃತಿಗೇಯ ಮೋದದಾಯಕ ಮುಂದೆ ಸಲಹೈಯ್ಯ ಪಾದಪದ್ಮದಿ ಶರಣು ಅಲ್ಲದೆ ಏನು ಮಾಡಲಿ ಜೀಯ ಅಯ್ಯ ತಿದ್ದಿ ಮನವನು ಕದ್ದು ಅಘವನು ಒದ್ದು ಲಿಂಗವ ಶುದ್ಧಜ್ಞಾನದ ಸಾಧು ಜಯಮುನಿ ವಾಯುವಂತರ ಮಾಧವ ಶ್ರೀ ಕೃಷ್ಣವಿಠಲನೆ ಪಾದ ಮಧುಪರ ವೃಂದ ಮಧ್ಯದಿ ವೇದ ಸಮ್ಮತ ಗಾನ ಸುಧೆಯನು ಶುದ್ಧಭಕ್ತಿ ಜ್ಞಾನದೊಡಗೂಡಿ ಮೆದ್ದು ಪಾಡುತ ಕುಣಿವ ಭಾಗ್ಯವ ಮುದ್ದು ಕೃಷ್ಣನೆ ನೀನೆ ಎನಗಿತ್ತು 5
--------------
ಕೃಷ್ಣವಿಠಲದಾಸರು
ಯೇನೆಲವೊ ದೈವಾ ವೈಕುಂಠನಾಥ ನೀ ನಾರಿವೇಷವನು ಧರಿಸಿದ ಬಗೆಯೇನೊ ಪ ದೈತ್ಯರು ಎರಗಿ ದೇವತತಿಗಳು ತಲ್ಲಣಿಸೆ | ಮಿತ್ರಭಾವದಲಿವರು ಕೂಡಲಿಟ್ಟು | ಇತ್ತಂಡದ ನಡುವೆ ಸುಧೆಯ ಬಡಿಸುವೆನೆಂದು | ಮಿತ್ರವೇಷವ ಧರಿಸಿ ಸುರರ ಸಲಹಿದ ಬಗೆಯ 1 ಶಿವಗೆ ವೃಕಾಸುರನು ಬೆಂಬಿಡದೆ ತನ್ನುರಿ | ಕರವ ನೀಡುವೆನೆಂದು ಬರಲಾಗಲು || ಅವನೀಶ ಭವಹರ ಕೇಶವ ನೀನೆ ಗತಿಯೆನಲು | ಯುವತಿ ವೇಷವ ಧರಿಸಿ ಶಿವನ ಸಲಹಿದ ಬಗೆಯಾ 2 ಅಂದು ಮಾಡಿದ ಚರಿತೆ ಭಕ್ತಜನರು ಬಂದು | ಒಂದೊಂದನ ನುಡಿದರನ ಲೀಲೆಂದು | ಇಂದು ಸತಿವೇಷವನು ಧರಿಸಿ ತೋರಿದಿಯೋ ಪು ರಂದರ ದಾಸರಿಗೊಲಿದೆ ವಿಜಯವಿಠಲ ಚಲುವಾ3
--------------
ವಿಜಯದಾಸ
ರಕ್ಷಿಸೋ ಶ್ರೀ ವೇದವ್ಯಾಸ | ಬದರಿನಿವಾಸ | ಆಶ್ರಿತ ಜನತೋಷ ಪ ಭೃತ್ಯ ಮತ್ಸ್ಯ | ವ್ಯಕ್ತನಾದನು ಹರಿ ಅವ್ಯಕ್ತ | ಕರೆಸಿದ ಸತ್ಯ | ವತಿಯಸುತ ಗೋಪ್ತ 1 ಕಾಲ ತಾಪ | ಬಟ್ಟರು ಜನ ಪ್ರಲಾಪ |ಶ್ರೀಪತಿ ತಾಳ್ದನು ರೂಪ | ವ್ಯಾಸ ರೂಪ | ದೋಷ ನಿರ್ಲೇಪ |ದ್ವೀಪದೊಳುದಿಸಿತೀರೂಪ | ಯಮುನಾ ಸಮೀಪ | ಪರಾಶರ ಜನೆನಿಪ 2 ಸೂತ್ರ ದಾತ | ಎನ್ನೊಳು ಪ್ರೀತ | ನಾಗು ಭಕ್ತಿ ಪ್ರದಾತ 3 ಜನಿತ | ಸಕಲ ಭಸ್ಮೀಭೂತ 4 ಭೋಗಾದಿಂ ಪ್ರಾರಬ್ಧ ಪೋಗಾಡಿದಂಥ | ಕಾರ್ಯಾಖ್ಯ ಬ್ರಹ್ಮಪ್ರಾಪ್ತ |ಯೋಗೀಜನ ಪ್ರಳಯೇಪಿ ಅಜನ ಪ್ರಾಪ್ತ | ಇತ್ಯಾದ್ಯವಸ್ಥಾದಿಯೊಳ್ಗತ |ಮಾರ್ಗಗಳು ಶೇಷ ಗರುಡಾದಿಯೋಳ್ಗತ | ಈ ಪರೀಯಿಂ ಸಮಸ್ತ |ಯೋಗೀ ಜನಂಗಳಿಗೆ ಆ ಅಜಸಮೇತ | ವಿರಜಾ ಸ್ನಾನ ಪ್ರಾಪ್ತ ||ಸ್ನಾನದಿಂದಲಿ ಲಿಂಗನಾಶ | ಮಾಡುವೆ ಶ್ರೀಶ | ಆದರವರು ನಿರ್ದೋಷ |ಅನಂತರ್ಹರಿ ಉದರ ಪ್ರವೇಶ | ಕೆಲವರು ಶ್ರೀಶ | ಆನಂದವೇ ವಪುಷ |ಜ್ಞಾನಿ ಇನ್ನಿತರರು ತದ್ದೇಶ | ದಲ್ಲಿವಾಸ | ಆನಂದಾನನುಭವ ಶ್ರೀಶ |ನಾನಾ ಪರಿಯೋಗ್ಯರ ಶ್ರೀಶ | ಪ್ರಳಯದಲ್ಲೀಶ | ಧರಿಸುವಸರ್ವೇಶ 5 ಪರಿ ಕಾರಣಂಗಳಿಂದ ನಿನ್ನ | ಇಚ್ಚಾಖ್ಯ ಆವರಣವಪಸಾರಿಸೀ |ತುಷ್ಟೀಯಿಂದಲಿ ಸ್ವಸ್ತಯೋಗ್ಯಸುಖವ | ಅಭಿವ್ಯಕ್ತಿಂಗಳಂ ಗೈಯ್ಯುವಾ |ಲಕ್ಷ್ಣ ಮುಕ್ತಿದ ಮಾಯೆ ಪತಿಯು ಆದ | ಶ್ರೀವಾಸುದೇವನ ದರ್ಶನ ||ವಾಸುದೇವನ ಕಂಡನಂತರ | ಮತಿವಂತರ | ಪೊಗಿಸುವಾಗಾರ |ಶ್ರೀಸಿತ ದ್ವೀಪಾದಿ ಆಗಾರ | ವರ ಮಂದಿರ | ವೈಕುಂಠಾಗಾರ | ಲೇಸಾಗಿ ಸ್ವಯೋಗ್ಯ ಸುಖಸಾರ | ಅತಿಪರತರ | ಅನುಭವಿಪ ವಿಸ್ತಾರ | ಆಶಾಮಾತ್ರದಿ ಸರ್ವ ಸುಖಸಾರ | ಸೃಷ್ಟ್ಯಾದಿ ಇತರ | ಇತ್ತು ತೋಷಿಪೆ ಅವರ 6 ಚಾರು ಕೌಪೀನ ಮದನ ದರ ಪೋಲ್ವಧದನ | ತುಳಸಿಯ ವನ | ಮಾಲೆಗಳ್ಹಸನ |ನಂದನಂದನ ನಿನ್ನ ಕರುಣ | ಗುಣಾಭರಣ | ತೊಡಿಸಯ್ಯ ಪ್ರಧನ 6 ಪ್ರೀಯಾ ಪ್ರೀಯ ಸರ್ವ ವಿಷಯಕೆಲ್ಲ | ನೀನೇ ಮೂಲನೆಂದು ತಿಳಿಸೋ |ಕಾಯಾ ವಾಚಕ ಮಾನಸೀಕ ಸರ್ವಾ | ಕರ್ಮಾದಿಗಳೆಲ್ಲವಾ ||ಜೀಯಾ ನಿನ್ನಯ ಚರಣಕಿತ್ತು ನಮಿಪ | ಬಿಂಬಕ್ರಿಯಾಜ್ಞಾನವಾ ||ರಾಯಾ ನೀನೆನಗಿತ್ತು ಪಾಲಿಸಯ್ಯ ಮುದದೀ | ನಿನ್ನನ್ನು ನಾ ಬೇಡುವೆ ||ತುತಿಪ ಜನರ ಸುರಧೇನು | ಕಾಮಿತವನೆ | ಕರುಣಿಪ ಕಲ್ಪದ್ರುಮನೆ |ಮತಿಗೆಟ್ಟ ಮನುಜನು ನಾನೆ | ನಿನ್ನ ಪಾದವನೆ | ನಂಬಿ ಬಂದಿಹೆ ನಾನೇ |ಹಿತದಿಂದ ನೀನೆನ್ನ ಕರವನೆ | ಪಿಡಿ ಎಂಬೆನೆ | ನಾ ಬೇಡುವೆ ನಿದನೆ |ಅತುಳ ಮಹಿಮ ಜಗದೀಶನೆ | ಮಧ್ವೇಶನೆ | ಗುರು ಗೋವಿಂದ ವಿಠಲನೆ 8
--------------
ಗುರುಗೋವಿಂದವಿಠಲರು
ರತಿಸಮಯಕೈದುತಿಹ ಸತಿರಚಿಸಿದುದ ಪೇಳ್ವೆಮತಿವಂತೆ ಅದರ ಭಾವವ ತಿಳಿದು ಪೇಳೆ ಪ ಕರಯುಗದಿ ವಜ್ರಮಯ ಕಂಕಣವ ಧರಿಸಿದಳುಅರಗಿಣಿಯ ನವಿಲ ಸೆರೆಯನು ಬಿಟ್ಟಳುಭರದಿ ಸಾಕಿ (ಸೆನಗಳ ?) ಕರೆದು ಕಳುಹಿದಳುಸರಸದಿಂ ದೀಪವನೆ ಮರೆಯೊಳಿರಿಸಿದಳು 1 ಯುವತಿ ಕೇಳ್ನಸುಗುತ ಕರ್ಣದೊಳೆ ಧರಿಸಿರ್ದಕುವಲಯವ ತೆಗೆದು ದೂರದೊಳಿಟ್ಟಳುತವೆ ಮಲ್ಲಿಕಾಮಂದಹಾಸವನೆ ಬೀರಿದಳುನವಮಣಿಹಾರವನೆ ಕೊರಳ್ಗೆ ಧರಿಸಿದಳು 2 ಭಾರ ಪಸರಿಸಲಾಗವರ ಕೆಳದಿ ರಾಮೇಶನಡಿಯ ಸ್ಮರಿಸಿದಳು 3
--------------
ಕೆಳದಿ ವೆಂಕಣ್ಣ ಕವಿ
ರತುನ ದೊರಕಿತಲ್ಲ | ಎನಗೆ ದಿವ್ಯ ರತುನ ದೊರಕಿತಲ್ಲ ಪ ರತುನ ದೊರಕಿತು ಎನ್ನ ಜನುಮ ಪ ವಿತರವಾಯಿತು ಈ ದಿನದಿ ನಾ ಯತನ ಗೈಯುತ ಬರುತಿರಲು ಪ್ರ ಯತನವಿಲ್ಲದೆ ವಿಜಯರಾಯರೆಂಬೊ ಅ.ಪ. ಪಥದಿ ನಾ ಬರುತಿರಲು ಥಳಥಳವೆಂದು ಅತಿ ಕಾಂತಿ ಝಳಪಿಸಲು ಬೆರಗಾಗುತ್ತ ಅತಿ ಚೋದ್ಯವ ಕಾಣಲು ಸೇವಿಸುತಿರೆ ಸತತ ಕರಪಿಡಿದಾದರಿಸಿ ಮನೋ ರಥವ ಪೂರೈಸುತಲಿ ದಿವ್ಯ | ಸ ನ್ಮತಿಯ ಪಾಲಿಸಿ ಮೋಕ್ಷ ಸುಪಥವ ಅತಿಶಯದಿ ತೋರುತ್ತ ಪೊರೆದ 1 ಪುತ್ಥಳಿ ಕಂಬಿಯಲ್ಲಿ ಸುಕೃತ ಮಾಲಾ ನಾನಾವಿಧ ಹವಳದಲಿ ಸೇರಿಸುತಲಿ ಪ್ರಾಣ ಪದಕವೆಂಬ ಮಾಲೆಯನು ಅನು ಮಾನವಿಲ್ಲದೆ ಕೊರಳಿಗ್ಹಾಕುತ ಗಾನದಿಂ ಕುಣಿಯುತ್ತ ಪಾಡುತ್ತ ದೀನ ಜನರುದ್ಧಾರ ಗೈಯುವ 2 ಶೋಧಿಸಿ ಗ್ರಂಥಗಳ - ಸುಳಾದಿಯ ಮೋದದಿಂದಲಿ ಬಹಳ ಕವಿತೆ ಮಾಡಿ ಸಾಧುಜನಕೆ ಸಕಾಲ ಆನಂದ ವಿತ್ತು ವಾದಿಜನರನು ಗೆದ್ದು ಬೋಧಿಸಿ ಮಾಧವ ಜಗನ್ನಾಥ ವಿಠಲನ ಪಾದ ಕಮಲಕೆ ಮಧು ಪನಂದದಿ ಸಾದರದಿ ತೋರುತ್ತ ಮೆರೆಯುವ 3
--------------
ಜಗನ್ನಾಥದಾಸರು
ರಥವಾನೇರಿದ ಶ್ರೀ ಹನುಮಂತ | ಭೀಮ ಬಲವಂತ ಪ ಗತ ಶೋಕನ ಪದ | ರತಿ ಇಚ್ಛಿಪರಿಗೆಹಿತದಿಂದಲಿ ಸದ್ | ಗತಿಯ ಕೊಡುವೆನೆಂದು ಅ.ಪ. ಪತಿ ಕರಿಸೆನ್ನಲು |ಪ್ರತಿ ಪ್ರತಿ ತತುವರು | ಗತ ವಿಭವದಲಿರೆಪ್ರತಿ ನಿನಗಿಲ್ಲೆಂದೆ | ನುತಲಿ ತೋರಿದ 1 ಗರ ಉದುಭವಿಸಲುಹಿತದಿಂದಲಿ ಜಗ | ಪತಿಯಾಣತಿಗಳ |ಪತಿ ಕರಿಸುತ ನೀ | ಪಾತ್ರಗ ಗರವನುಮತಿ ವಂತನೆ ಕುಡಿ | ದತಿಶಯ ತೋರಿದೆ 2 ಮೂರು - ಕೋಟಿಯ ರೂಪ - ಧರನೆ | ಮೂರ್ವಿಕ್ರಮ ಸೇವಕನೆಮೂರು ಲೋಕಂಗಳ ವ್ಯಾಪಕನೆ | ರಕ್ಕಸಾಂತಕನೆ ||ಆರು ಮೂರುಗಳು | ಎರಡೊಂದನೆ ದಶನೂರು ಮೇಲೆ ಆ | ರ್ನೂರ್ ಜಪಗಳ |ಮೂರು ಭೇದ ವಿಹ | ಜೀವರುಗಳಲಿವಾರ ವಾರಕೆ ನೀ | ಗೈಯ್ಯುವೆ ಗುರುವೇ 3 ವಿಶ್ವ ಕ ಕರ್ಮ ಸಮೂಹವಸಾಕ್ಷಾತ್ತಾಗಿ ತಾನೆ | ಗೈಯ್ಯುವೆನೆಂದು 4 ಆನನ ಕಮಲಕೆಭಾನುವೆನಿಸುತಲಿ | ದುಶ್ಯಾಸನನಗೋಣ ಮುರಿದುರದಿ | ಕೋಣನ ವಿರಚಿಸಿಶೋಣಿತ ಕುಡಿದಂತೆ | ಕಾಣುವೆನೆಂದು 5 ಚಕ್ರಧರ | ಅಂಬುಜ ನಯನನಬೆಂಬಿಡದಲೆ ನೀ | ಸಂಭಮ್ರದಲಿ ನಿನ |ಅಂಬಕದಲಿ ನಿನ | ಬಿಂಬನ ಕಾಣುತತ್ರ್ಯಂಬಕನಿಂ ಸಂ | ಭಾವನೆ ಗೊಳ್ಳುತ 6 ಮಾಘ ಶುದ್ಧವು ನವಮಿಯ ದಿನದಿ | ಪಾರ್ಥಿವ ವತ್ಸರದಿಸಾಗರ ಕಟ್ಟೆ ಯತಿ ಸಮ್ಮುಖದಿ | ಕುಳ್ಳಿರುತಲಿ ರಥದಿ ||ನಿಗಮಗಳಿಗೆ ಸಿಗ | ದಗಣಿತ ಗುಣಮಣಿಖಗವರ ಗುರು ಗೋ | ವಿಂದ ವಿಠ್ಠಲನ |ಸುಗುಣ ಗಣಂಗಳ | ಬಗೆ ಬಗೆಯಿಂದಲಿಪೊಗಳುವರಘಗಳ | ನೀಗುವೆನೆನ್ನುತ 7
--------------
ಗುರುಗೋವಿಂದವಿಠಲರು
ರವಿಸುತನ ಪ್ರಧಾನಿಯೆ ರಾ ಘವ ಕಾರ್ಯ ಧುರಂಧರಾಗಣಿತ ವಿಕ್ರಮಯಂ- ಮವಗುಣಗಳನೆಣಿಸದೆ ಕಾ ಯುವದೈ ನೀಂ ಪುಟಪರ್ತಿ ವೀರ ಹನುಮನೆ 1 ಮಾರುತನ ಕುಮಾರ ಪವಿ ಶ ರೀರ ಕಪಿವರಾಗ್ರಗಣ್ಯ ವರದಾಯಕ ನೀ ನಾರಾಧಕರಿಗೆ ಕೊಡು ದಿ ವ್ಯಾರೋಗ್ಯವ ಪುಟಪರ್ತಿ ವೀರ ಹನುಮನೆ 2 ವೈರಾಗ್ಯವು ಭಕ್ತಿ ಜ್ಞಾನವಂ ಪಾಲಿಸುವೈ ರಾರಿಳೆಯೊಳು ಪುಟಪರ್ತಿ ವೀರ ಹನುಮನೆ 3 ನೆರೆ ಪ್ರಾಣಗಳಿತ್ತೆ ಧೀರನೊಲಿಯುವಲೀ ತರಳನ ಜ್ವರಾದಿಗಳ ಪರಿ ಹರಿಸುತ ಪೊರೆ ಪುಟಪರ್ತಿ ವೀರ ಹನುಮನೆ 4 ರಾವಣನ ಗುದ್ದಿದಾತನೆ ಪಾವನ ಪರಮ ಪವಿತ್ರ ಕೃ ಪಾವನಧಿಯೇ ಪುಟಪರ್ತಿ ವೀರ ಹನುಮನೆ 5 ನರಿತನುದಿನ ಪಠಿಸುವರಿಗೆಯಾರೋಗ್ಯಸುವು ಸ್ಥಿರ ವೈರಾಗ್ಯಾಯುಗಳನು ಶ್ರೀ ಗುರುರಾಮ ವಿಠಲನು ಬಿಡದೆ ಕರುಣಿಸುತ್ತಿರುವಂ 6
--------------
ಗುರುರಾಮವಿಠಲ
ರಸನೆಗೆ ರಸವಿದು ತಾರಕನಾಮಾ ಅಸುವಿಗಸುವು ವಾಸುದೇವನ ನಾಮಾ ಪ ರಾವಣಾರಿಯ ನಾಮ ಭಾವದಿವ್ಯಾಮೃತ ಗೋವಳನಾಮವು ಜೀವಜೀವಾಮೃತ1 ಶಬರಿಗೊಲಿದ ನಾಮ ಅಭಯವೀಯುವ ನಾಮ ಕುಬುಜೆಗೊಲಿದ ನಾಮಾ ವಿಭವದ ನಾಮಾ 2 ಅಕ್ಷಯಪದ ನಾಮ ಪಕ್ಷಿವಾಹನ ನಾಮಾರಕ್ಷಕ ಮಾಂಗಿರಿರಂಗನ ನಾಮಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಾಗಿ ಬೆಳೆಯುವಾ ನಿರ್ಮ¯ರಾಗಿ ಬೆಳೆಯುವಾ ಪ ಸೇವಕರಾಗಿ ಬೆಳೆಯುವಾ ಭಾವುಕರಾಗಿ ಬೆಳ ಗೂವರಾಗಿಯಾದ ಮೇಲೆ ರಂಗನಪಾದವ ಪೂಜಿಪರಾಗಿ ಅ.ಪ ಪರರ ಹಳಿಯದಿರುವರಾಗಿ ಪರರಸುಖಕೆ ನಲಿವರಾಗಿ ಪರರ ಸೇವೆಗೈವರಾಗಿ ಪರಮಶಾಂತರಾಗಿ ಹಿರಿಯರೆಡೆಯ ಕಿರಿಯರಾಗಿ ಕಿರಿಯರೆಡೆಯ ಗೆಳೆಯರಾಗಿ ಹರಿಯನೆನೆವ ಮಾನಸರಾಗಿ ಪರಮಭಕ್ತಿಯಿಂದ ಜಾನಿಪರಾಗಿ1 ವಿತ್ತದಾಸೆಯ ಹಳಿವರಾಗಿ ಚಿತ್ತಪಿತ್ತವ ತೊಡೆವರಾಗಿ ನಿತ್ಯ ತೃಪ್ತರಾಗಿ ಹೊತ್ತಿಗೊದಗಿ ಬರುವರಾಗಿ ಮತ್ತು ಭ್ರಮೆಗಳಿಲ್ಲದರಾಗಿ ಪಾದಯುಗಳಕೆರಗುವರಾಗಿ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ರಾಘವೇಂದ್ರ ಗುಣಸಾಗರ ನೋಡೆನ್ನಹರಿಯ ತೋರಿನ್ನ ಪ ಮಂತ್ರಾಲಯದೊಳು ಮಂದಿರ ಮಾಡಿರುವಿ ಮನೆಮನೆಯಲ್ಲಿರುವಿಸಂತತಿ ಸಂಪತ್ತುಗಳನು ನೀ ಕೊಡುವಿಸಂತರ ರಕ್ಷಿಸುವಿತಂತ್ರ ದೀಪಿಕೆಯೆಂಬೊ ಗ್ರಂಥವರಚಿಸಿರುವಿ ಸೂತ್ರಾರ್ಥಗಳರುಹಿ 1 ಎಷ್ಟೋ ಗ್ರಂಥಗಳ ವ್ಯಾಖ್ಯಾನವ ಮಾಡಿದೇವಾರ್ಥವ ನೋಡಿಕೆಟ್ಟವಾದಿಗಳ ವಾದದಿ ಜಯಮಾಡಿಸೂರಿಗಳನು ಕೂಡಿಕುಷ್ಠಮದಾದಿ ರೋಗಗಳನು ಹರಿ ಬೇಡಿಕಳೆಯುವ ಗುರುಮೇಧಿ 2 ಒಂದು ಚರಿತೆಯ ಪೇಳಲು ನಾನರಿಯೆಇರುವೆನು ಈ ಪರಿಯೆನಂದಬಾಲನ ಪ್ರಿಯ ನೀ ಎನಗೊಲಿಯೆದುರಿತಾಬ್ಧಿಗೆ ಸರಿಯೇಇಂದಿರೇಶನ ಪದ ಸಂದರುಶನ ದೊರೆಯೆನಿನ್ನಯ ನಾ ಮರೆಯೆ 3
--------------
ಇಂದಿರೇಶರು