ಒಟ್ಟು 4196 ಕಡೆಗಳಲ್ಲಿ , 121 ದಾಸರು , 2466 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀಡೆಲೋ ಶ್ರೀರಂಗಾ ನಿನ್ನ ದಾಸರ ಸಂಗಾ ಪ ಕೂಡಿಸಿ ತವ ಚರಿತಾಮರ ಗಂಗಾ | ಮಾಡುವದು ಭವಭಂಗಾ1 ಮೂಡಲುದಯದಲಿ ಜ್ಞಾನಪತಂಗಾ | ಓಡುದು ತಮ ಅಂತರಂಗಾ 2 ಸುಗಮದಿ ಗುರುಮಹಿಪತಿ ಪ್ರಭು | ಕಂಗಳಿಗೆ ದೋರುವುದು ಸುಖದಂಗಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀನಲ್ಲದಿನ್ನಾರು ಸಲಹುವರೊ ಎನ್ನ ಪ ನಾನು ನನ್ನದು ಎಂಬ ದುರಭಿಮಾನಿಯನ್ನಅ.ಪ. ಶ್ರೀಮದಾಚಾರ್ಯರ ಪುಸ್ತಕ ಭಂಡಾರವನು ಪ್ರೇಮದಿಂ ಧರಿಸುತ ವೃಷಭನಾಗಿರ್ದು ಚರಿಸಿ ಕಾಮಪಿತನೊಲಿಮೆಯಿಂ ಮರಳಿ ಜನಿಸಿ ಗುರುಗಳ ಆ ಮಹಾಭಾಷ್ಯವರುಹಿದ ಜಯತೀರ್ಥ ಗುರುವೆ 1 ಬಾಲತನದಲಿ ಸಕಲ ಲೀಲೆಗಳ ತೊರೆದು ಕಾಲುಂಗುಟಾಗ್ರದಿ ನಿಂದು ತಪವಗೈದು ಶ್ರೀಲೋಲನ ಮೆಚ್ಚಿದಂಥ ಧೀರ ದೈವ ಭೂ- ಪಾಲನಂಶದ ಶ್ರೀಪಾದರಾಜ ಗುರುವೆ2 ಪಿತನ ಮತ ಧಿಕ್ಕರಿಸಿ ಶ್ರೀಪತಿಯೆ ಪರನೆಂಬ ಮತಿಪÉೂಂದಿ ಶಿಶುತನದಲಿ ನರಹರಿಯ ಒಲಿಸಿ ಅತಿಹಿತನಾದ ಪ್ರಹ್ಲಾದದೇವನಂಶದಿಂ ಕ್ಷಿತಿಯೊಳುದ್ಭವಿಸಿದ ವ್ಯಾಸರಾಜ ಗುರುವೆ 3 ಈ ಧರೆಯೊಳೆಸೆಯುತಿಹ ಉಡುಪಿಯೊಳು ನೆಲಸಿರ್ಪ ಯಾದವ ತೀರ್ಥಾಯ ಪದ ಸರಸಿರುಹ ಭೃಂಗ ಮೋದ ತೀರ್ಥಾರ್ಯರ ಪದಕರುಹನಾದಂಥ ಸೋದೆಯೊಳ್ರಾಜಿಸುವ ವಾದಿರಾಜ ಗುರುವೇ 4 ಕಂತುಜನಕನಿಗತ್ಯಂತ ಪ್ರಿಯನಾದ ಮತಿ ವಂತನಾ ವ್ಯಾಸಮುನಿಯೆ ನೀನಾಗಿ ಬಂದು ಸಂತಸದಲಿ ಸಾಧು ಜನರಿಷ್ಟ ಪೂರೈಸುತ ಮಂತ್ರಾಲಯದಿ ಮೆರೆವ ರಾಘವೇಂದ್ರ ಗುರುವೆ 5 ಜಲಜಭವನೂರುಭವನಂಶದಲಿ ಜನಿಸಿ ಕಲಿಯುಗದಿ ಹರಿನಾಮವೆ ಗತಿಯೆಂದು ಸಾರಿ ಹಲವು ಪದ ಸುಳಾದಿಗಳ ರಚಿಸಿ ಸಜ್ಜನರ ಕಲುಷಗಳ ಕಳೆದ ಪುರಂದರದಾಸರಾಯ 6 ಸಕಲ ಋಷಿಗಳ ಸಂಶಯವ ಪರಿಹರಿಸಿ ವೇದ ಉಕುತಿಗಳಿಂದ ಹರಿಯೆ ಪರನೆಂದು ಸ್ಥಾಪಿಸಿ ಭಕುತಿ ವೈರಾಗ್ಯನಿಧಿ ಭೃಗುಮುನಿಯೆಂದೆನಿಸಿದ ಮುಕುತಿಪಥ ತೋರಿಸಿದ ವಿಜಯದಾಸರಾಯ 7 ಸೂತ್ರ ಪುರಾಣಗಳ ರಚಿಸೆ ದಾಸತ್ವವಹಿಸಿ ಸಕಲ ಗ್ರಂಥಗಳ ಬರೆದು ಶ್ರಿಶಗರ್ಪಿಸುತ ಲೇಸು ಜಗಕೆಗೈದಂಥ ಗ ಣೇಶಾವತಾರಿ ಗೋಪಾಲದಾಸರಾಯ 8 ಸಿರಿ ರಂಗೇಶವಿಠಲನ ಕಾಂಬ ತೃಷೆಯಲಿ ಹರಿಗೆ ಹರಿಕಥಾಮೃತಸಾರ ಪಾನಗೈಯಲಿತ್ತ ನರಹರಿಯ ಕೃಪಾಪಾತ್ರ ಸಹ್ಲಾದನಂಶದ ಗುರುವರ ಶ್ರೀ ಜಗನ್ನಾಥದಾಸರಾಯ 9
--------------
ರಂಗೇಶವಿಠಲದಾಸರು
ನೀನಹುದೋ ಶ್ರೀ ಹರಿ ಮುನಿಜನರ ಸಹಕಾರಿ ಅನಾಥÀರಿಗಾಧಾರಿ ನೀನೆವೆ ಪರೋಪರಿ ಧ್ರುವ ಪತಿತ ಪಾವನ ಪೂರ್ಣ ಅತಿಶಯಾನಂದ ಸುಗುಣ ಸತತ ಸುಪಥ ನಿಧಾನ ಯತಿ ಜನರ ಭೂಷಣ1 ಬಡವರ ನೀ ಸೌಭಾಗ್ಯ ಪಡೆದವರಿಗೆ ನಿಜ ಶ್ಲಾಘ್ಯ ದೃಢ ಭಕ್ತರಿಗೆ ಯೋಗ್ಯ ಕುಡುವದೇ ಸುವೈರಾಗ್ಯ 2 ಭಾಸ್ಕರ ಕೋಟಿ ಲಾವಣ್ಯ ಭಾಸುತಿಹ್ಯ ತಾರ್ಕಣ್ಯ ದಾಸ ಮಹಿಪತಿ ಜನ್ಮ ಧನ್ಯ ಲೇಸುಗೈಸಿದಿ ನಿನ್ನ ಪುಣ್ಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನುಪೇಕ್ಷೆಯ ಮಾಡೆ ಬೇರೆ ಗತಿಯಾರೆನಗೆನಿಗಮಗೋಚರ ಮುಕುಂದ ಪ ಗಾನರಸಲೋಲ ಆಗಮಶೀಲ ಭಕ್ತಪರಿಪಾಲಸನ್ನುತ ಗೋಪಾಲ ಬಾಲ ಅ ಸಿರಿನಲ್ಲ 1 ದಿವಿಜ ಮುನಿವಂದ್ಯ ಅಭಿಮಾನಿ ಎನ್ನನೂ ಸಲಹದೆ - ಬರಿದೆ 2 ಈಶಣತ್ರಯದ ಬಯಲಾಸೆಯಲಿ ಭ್ರಮೆಗೊಂಡುಬೇಸರದಿ ಮನದಿ ನೊಂದುಹೇಸಿಗೆಯ ಸಂಸಾರ ಮಾಯಕ್ಕೆ ಸಿಲುಕಿ ನಾಘಾಸಿ ಪಡಲಾರೆನಿಂದುವಾಸುದೇವನೆ ನಿನ್ನ ಪೊಂದಿ ಬದುಕುವೆನೆಂದುಆಸೆ ಪಡುತಿಹೆನು ಇಂದುದಾಸನೆಂದೆನಿಸಿ ಡಂಗುರ ಹೊಯ್ಸಿ ಬಡದಾದಿಕೇಶವನೆ ಕರುಣಿಸಯ್ಯಾ ಬಂದು3
--------------
ಕನಕದಾಸ
ನೀನೆ ಕರುಣಿ ದೀನಪಾಲ ದಾನವಾಂತಕನಾಥಬಂಧು ಪ ಕಾಸಾರಕಿಳಿದು ಕರಿಯ ಕಾಯ್ದಿ ಹೇಸದೆ ತರುಣಿ ಮೊರೆಯ ಕೇಳ್ದಿ ಬೇಸರಿಲ್ಲದೆ ದಾಸಜನರ ಆಸೆ ಪೂರೈಸಿ ಪೊರೆದಿ ಪ್ರಭು 1 ಬಾಲಗೈದ ತಪಕೆ ಒಲಿದಿ ಮೇಲುಪದವಿ ಕರುಣಿಸಿದಿ ಕಾಲಗೆ ಕಾಲನಾಗಿ ಮೆರೆವ ಖೂಳರಕ್ಕಸನುದರ ಸೀಳ್ದಿ 2 ನಿಗಮ ತಂದಿ ಭಾರಬೆನ್ನಲಿ ಪೊತ್ತು ನಿಂದಿ ಹಾರೈಸಿ ಕರೆವ ಭಕುತ ಜನಕಾ ಧಾರ ಮಮಪ್ರಾಣೇಶ ಶ್ರೀರಾಮ 3
--------------
ರಾಮದಾಸರು
ನೀನೆ ಕೃಪಾಳು ಶ್ರೀ ಚನ್ನಕೇಶವನೇ ಜ್ಞಾನಿಗಳನ್ನು ಕಾವ ಸನಕವಂದಿತನೆ ಪ ಶರಣರ ಪೊರೆಯುವ ಪ್ರಣವ ಸ್ವರೂಪನೆ ಸ್ಮರಿಸುವ ದಾಸರ ಮರೆಯ ಬೇಡಯ್ಯ ಅ.ಪ. ದೀನರ ಸಲಹುವ ಭಕ್ರವತ್ಸಲನೇ ಮಾನಿನಿ ದ್ರೌಪದಿ ಮಾನ ಕಾಯ್ದವನೇ ಮೌನದಿಂದಲಿ ನಿಂನ ಧ್ಯಾನ ತತ್ವರನಾದೇ ಪನ್ನಗಶಯನನೇ ಸಲಹೊ ಕರುಣದಲೀ1 ಸನ್ನುತ ಹರಿ ನಿಂನ ಕೀರ್ತನೆ ಪಾಡುವೆ ಜಾನ್ಹಕಿ ರಮಣ ಶ್ರೀ ಕಾಕುತ್ಸ್ಥರಾಮಾ ಹೀನನ ಮಾತನ್ನು ನಲಿಯುತ್ತ ಕೇಳಿ ನೀ ಸಾನುರಾಗದಿ ಕಾಯಾ ಧೇನು ಪಾಲಕನೇ2 ಪಂಕಜನೇತ್ರ ಶ್ರೀ ಪರಮ ಪಾವನನೇ ಲಂಕೇಶನಿಗೆ ಯಮನಾದ ಶ್ರೀಧರನೇ ಶಂಕೆಯಿಲ್ಲದೆ ಕಾಯೊ ದೂರ್ವಾಪುರೇಶನೆ ಅಮಿತ ಸದ್ಗುಣಿಯೇ 3
--------------
ಕರ್ಕಿ ಕೇಶವದಾಸ
ನೀನೆ ಗತಿ ಮುಕುತೆನೆಗೆ ಅನಂತ ಜನುಮಗಳಲಿ ಪ ಆನೇನರಿಯೆ ಗರುಡಗಮನ ಸಿರಿಕೃಷ್ಣ ರಾಯಾ ಅ.ಪ ಅನ್ಯವಾರ್ತೆ ಅನ್ಯಸಂಗ ಅನ್ಯಜನರಾರಾಧನೆಅನ್ಯಸತಿ ಅನ್ಯಕರ್ಮ ಮೊದಲು ಸಕಲತನ್ನು ಮನ್ನ(=ತನುಮನ) ವಾಕ್ಯಗಳಿಂದ ಜರಿದೆ ನಿನ್ನವರೊಳುಎನ್ನ ಕೂಡಿಸೊ ನಿನ್ನ ಚರಣ ಭಕುತಿಯಲಿ ಶ್ರೀಶ 1 ಅಂದು ವೇದೋದ್ಭವಳ ಮೊರೆಯನು ಕೇಳಿ ಕಾಯ್ದಂತೆಮಂದ ಗಜೇಂದ್ರನಿಗೊಲಿದು ರಕ್ಷಿಸಿದ ಪರಿಯಂತೆತಂದೆತಾಯಿ ಬಂಧುಬಳಗ ಎಂದೆಂದು ನೀನೇ ದಯಾ-ಸಿಂಧು ನಿನ್ನ ದಾಸರ ದಾಸನೆಂದೆನಿಸೆನ್ನ2 ಪಾದ ಜಂಘೆ ಜಾನೂರುಕಟಿಘನ್ನ ಬಾಹು ಉದರವಕ್ಷ ಭುಜ ಕುಂತಳದಿಚನ್ನ ಕಿರೀಟ ಸರ್ವಾಲಂಕಾರದಿಂ ಶೋಭಿಸುವನಿನ್ನ ಮೂರ್ತಿಯನ್ನೆ ತೋರೊ ಭಕ್ತವತ್ಸಲ ಸಿರಿಕೃಷ್ಣ3
--------------
ವ್ಯಾಸರಾಯರು
ನೀನೆ ದಯ ಸಂಪನ್ನನೆಲೋ ದೀನನಾಥ ಜಾಹ್ನವೀ ತಾತ ಪ ವಿಮಲಹೃದಯಭಕ್ತಿ ಜನಕೆ ನಮಿಪೆ ನಿನ್ನ ಪಾದಕಮಲ ವಿಮಲಸುಖದ ಪಥದೋರೋ 1 ಕೊಟ್ಟು ಎನಗೆ ಶಿಷ್ಟಸಂಗ ಇಟ್ಟು ನಿನ್ನ ಭಜನಾನಂದ ನಿಷ್ಠೆ ಭಕುತಿ ನಿನ್ನ ಪಾದ ದಿಟ್ಟ ದಾಸನೆನಿಸಿ ಕಾಯೋ 2 ರಾಕ್ಷಸಾರಿ ಎನ್ನ ಮನದ ಪೇಕ್ಷ ಪೂರ್ತಿಮಾಡಿ ಮೆರೆವ ಮೋಕ್ಷಪುರಿಗೆ ತಲ್ಪಿಸೆನ್ನ ಮೋಕ್ಷದಾಯಕ ಶ್ರೀರಾಮ ಪ್ರಭೋ 3
--------------
ರಾಮದಾಸರು
ನೀನೆ ದಯಮಾಡಲು ನಾನುದ್ಧಾರಾಗುವೆನು ಏನೇನು ಪರಲೋಕ ನಾನರಿಯೆ ಶ್ರೀಹರಿಯೆ ಪ ಹೀನಸಂಸಾರದೊಳಗೆ ಮುಳುಗಿ ಶ್ವಾನನಂದದಿ ಕರಗಿ ಕೊರಗಿ ಜ್ಞಾನಶೂನ್ಯನಾಗಿ ಬಳಲುವೆ ಜ್ಞಾನಮೂರುತಿ ಅಭಯ ಪಾಲಿಸು ಅ.ಪ ಉದಯದಲ್ಲೇಳುತ ಸದಮಲ ತವಪಾದ ಮುದದಿಂದ ನೆನೆಯದೆ ಅಧಮತನದಿ ವಿಧವಿಧದಿ ಅಧಮಜನರ ಸುದ್ದಿ ವದನದಿಂದಾಡುತ ಮುದಿಕೋಣನಂದದಿ ಮದಮುಚ್ಚಿ ನಡೆದೆ ಎಡಬಿಡದೆ ಕುದಿದೆನನುದಿನ ಪರರ ಮನೆ ಸಂ ಪದವ ನೋಡಿ ಸಹಿಸದವರ ಸದನ ಮುರಿಯುವ ಬುದ್ಧಿ ಹುಡುಕಿದೆ ಪದುಮನಾಭಪರಾಧ ಕ್ಷಮಿಸಿ1 ಒಂದು ನಾನರಿಯದೆ ಮುಂದೆ ಭಲಾಯೆಂದು ಹಿಂದೆ ನಿಂದಿಸಿ ನಕ್ಕೆ ದ್ವಂದ್ವಕರ ಬಡಿದು ಬಲು ಜರಿದು ಹಂದ್ಯಮೇದ್ಯಕಂಡಾನಂದಿಪತೆರದನ್ಯ ಸುಂದರಿಯರ ನಯನದಿಂದ ನೋಡಿದೆ ಎವೆಯಿಕ್ಕದೆ ಇಂದಿರೇಶನೆ ನಿಮ್ಮ ಪಾದವ ಒಂದೆ ಮನದಿಂ ಭಜಿಸದೆ ಭವ ದಂದುಗದಲಿ ಬಿದ್ದು ನೊಂದವ ಕಂದನೊಳು ಕೃಪಾದೃಷ್ಟಿಯಿತ್ತು 2 ದಾಸಜನರ ಆವಾಸ ನಾ ಬಯಸದೆ ಈಷಣ ಪ್ರಪಂಚದ್ವಾಸನದಲ್ಲಿ ಬಹು ತೊಳಲಿ ಆಸೆಯೆಂಬುವ ಮಹಪಾಶದಬಲೆಯೊಳು ಘಾಸಿಯಾಗುವೆ ಸಿಲ್ಕಿ ಸೋಸಿ ನೋಡದಲೆ ಮರೆ ಮೋಸದಲಿ ದಾಸ ಬುದ್ಧಿಯಿಂದ ಮಾಡಿದ ಬಲು ದೋಷರಾಶಿಗಳೆಲ್ಲ ನಾಶಿಸಿ ಶ್ರೀಶ ಶ್ರೀರಾಮ ನಿಮ್ಮ ಪಾದ ದಾಸನಿಗೆ ನಿಜಧ್ಯಾಸ ನಿಲ್ಲಿಸು 3
--------------
ರಾಮದಾಸರು
ನೀನೆ ದಯಾನಿಧಿಯು ಶ್ರೀ ಗುರುರಾಯ ನೀನೆ ದಯಾನಿಧಿಯು ಧ್ರುವ ಕರುಣದಿ ಕುಂತಿಯ ಪುತ್ರರಿಗೆ ಒಲಿದು ಕಾಳ ನಿರ್ಮಿಸಿ ಕೌರವರಳಿದು ಉಳಿಯದೆ ಇಳೆಯೊಳು ವಂಶವ ಸವರಿದ ಶೇಷಶಯನ ಶ್ರೀ ಕೇಶವ ನೀನೆ 1 ನರಗೊಲಿದು ನರಕಾಸುರನ ಮರ್ದಿಸಿ ನಾರಗನೆಂದಜಮಿಳನ ನೀ ತಾರಿಸಿ ನಾರದಗೊಲಿದು ನಾಟ್ಯವನಾಡಿದ ನರಹರಿಯು ನಾರಾಯಣ ನೀನೆ 2 ವೇದವ ಕದ್ದೊಯಿದಸುರನ ಸೀಳಿ ಮಚ್ಛವತಾರದ ರೂಪವ ತಾಳಿ ಮಾವನ ಕೊಂದ ಮಾನ್ಯರ ಮಡುಹಿದ ಮಾಧವ ನೀನೆ 3 ಗೋಕುಲದಲಿ ಪುಟ್ಟಿ ಧರೆಯೊಳು ಬೆರಳಲಿ ಗೋವರ್ಧನ ಗಿರಿಯನೆತ್ತಿ ಗೋಕುಲ ಕಾಯ್ದಿ ಗೋಪಿಯರಿಗೊಲಿದ ಗೋಪಾಲಕೃಷ್ಣ ಗೋವಿಂದನು ನೀನೆ4 ಸೃಷ್ಟಿನೆಲ್ಲ ಬೆನ್ನಿಲಿ ತಾಳಿದ ಶೇಷನ ಸಂ ಕಷ್ಟವ ಪರಿಹರಿಸಿದ ಶಿಷ್ಟ ವಿಭೀಷಣಗೊಲಿದು ಪಟ್ಟವಗಟ್ಟವು ವಿಷ್ಣವು ನೀನೆ 5 ಮದನನೊಲಿದು ಕಾಳಿಂಗನ ತುಳಿದು ಕದನದಲಿ ಬಾಣಾಸುರನಳಿದು ಮೇದಿನಿಯೊಳು ಮರೆ ಇಲ್ಲದೆ ದೈತ್ಯರ ಮರ್ದಿಸಿದ ಮಧುಸೂದನನು ನೀನೆ 6 ತ್ರಿಪುರವನಳಿದು ತ್ರಿಗುಣವ ತಾಳಿದ ತೆತ್ತೀಸ ಕೋಟಿ ದೇವರುಗಳಿಗಾಳಿದ ಅಕ್ರೂರಗೊಲಿದು ಚರಿತ್ರವದೋರಿದ ತ್ರಿಜಗಪತಿ ತ್ರಿವಿಕ್ರಮ ನೀನೆ7 ವಾಲಿಯನಳಿದು ವಾಲ್ಮೀಕಿಗೊಲಿದು ಬಲಿಚಕ್ರನ ಮುನಿಮುಂದಲಿ ಸುಳಿದು ಬ್ರಾಹ್ಮಣನಾಗಿ ದಾನವ ಬೇಡಿದ ಮಾನ್ನವಗೊಲಿದ ಶ್ರೀ ವಾಮನ ನೀನೆ 8 ಸೃಷ್ಟಿನೆಲ್ಲ ನಿರ್ಮಿಸಿ ವಕ್ಷ ಸ್ಥಳದಲಿ ಶ್ರೀ ಮಹಾಲಕ್ಷ್ಮಿಯ ಧರಿಸಿದ ಶ್ರೀನಿಧಿ ಶ್ರೀಪತಿ ಶ್ರೀಗುರುಮೂರುತಿ ಶ್ರೀದೇವಿಗೊಲಿದಿಹ ಶ್ರೀಧರ ನೀನೆ 9 ದಾಸರ ಕ್ಲೇಶಕಿಲ್ಮಿಷಗಳ ತೊಳೆದು ಅಂಬರಿಷ ರುಕ್ಮಾಂಗದಗೊಲಿದು ಶುಕ ಶೌನಕ ಪರಾಶರ ಮುನಿಗಳಿಗೆ ಹರುಷನಿತ್ತ ಹೃಷಿಕೇಶನು ನೀನೆ 10 ಕ್ಷಿತಿಯೊಳು ದೃಢ ಪತಿವ್ರತೆಗೊಲಿದು ಯತಿ ಮುನಿಗಳಿಗಿನ್ನು ಗತಿಗಳನಿತ್ತು ಪತಿತರ ತಾರಿಸಿ ಪಾವನಗೈಸಿದ ಪರಂಜ್ಯೋತಿ ಪದ್ಮನಾಭನು ನೀನೆ 11 ದೇವಕಿಗೊಲಿದು ಸ್ಥಾಪಿಸಿ ಧರೆಯೊಳು ದ್ವಾರಕಿಯಲಿ ನಿಜ ಲೀಲೆಯು ತೋರಿದ ದುರಿತ ವಿಧ್ವಂಸನ ದೇವಕಿ ಪುತ್ರ ದಾಮೋದರ ನೀನೆ 12 ಸಿದ್ದ ಶರಣರಿಗೊಲಿದ ಸದ್ಗತಿ ಸುಖಸಾಧನ ಸಹದೇವಗದೋರಿದ ಸಂಭ್ರಮದಿ ಸುಧಾಮಗ ಒಲಿದು ಸಂತೋಷವನಿತ್ತ ಸಂಕರುಷಣ ನೀನೆ 13 ವಸುಧಿಯೊಳು ಭಸ್ಮಾಸುರನ ಮರ್ದಿಸಿ ಭಾಷೆಯನಿತ್ತು ಭಕ್ತರ ಪಾಲಿಸಿ ಋಷಿ ವೇದವ್ಯಾಸಗೊಲಿದಾತನು ವಸುದೇವಸುತ ವಾಸುದೇವನು ನೀನೆ 14 ವಿದುರುದ್ಧವ ಗರುಡಗೊಲಿದು ಭೃಗುಮುನಿ ಕಪಿಲ ಯೋಗೇಂದ್ರನ ಸಲಹಿದ ಸ್ಥಿರಪದವಿತ್ತರೊಂದು ಮಂದಿಗೆ ಪ್ರಸನ್ನವಾದ ಪ್ರದ್ಯುಮ್ನನು ನೀನೆ 15 ಸೀತಾ ಸುದ್ದಿಯ ತಂದವಗೊಲಿದು ಹತ್ತು ತಲೆಗಳ ಇದ್ದವನಳಿದು ಕದ್ದುಬೆಣ್ಣೆಯ ಮುದ್ದೆಯ ಮೆದ್ದು ಉದ್ದವಗೊಲಿದ ಅನಿರುದ್ಧನು ನೀನೆ 16 ಸೋಕಿಸಿ ಪೂತಣಿಯ ಕಾಯವು ಹೀರಿದ ಭಕ್ತ ಪುಂಡಲೀಕನ ಸಲಹಿದ ಭಕ್ತಿಗೆ ಒಲಿದು ಮುಕ್ತಿಯನಿತ್ತ ಪರಮ ಪರುಷ ಪುರುಷೋತ್ತಮನು ನೀನೆ 17 ಅಕ್ಷಯವೆಂದು ರಕ್ಷಿಸಿ ಸಭೆಯೊಳು ದ್ರೌಪದಿ ಕರುಣಕಟಾಕ್ಷದಿ ಸಲಹಿದ ಭಕ್ತವತ್ಸಲನಾಗಿ ಗಜೇಂದ್ರಗೆ ಅಧೋಕ್ಷಜ ನೀನೆ 18 ನರನಾರಿಯು ನಾಂಟೀಶರನಾಗಿ ನಖಮುಖದಲಿ ಹಿರಣ್ಯಕನ ಸೀಳಿ ಭಕ್ತಪ್ರಹ್ಲಾದಗ ಒಲಿದು ಸ್ತಂಭದಿ ಪ್ರಕಟಿಸಿದ ನರಸಿಂಹನು ನೀನೆ 19 ಅನಿಳ ಸ್ನೇಹಿತ ಅಜಗ್ನಾನಗ ಒಲಿದು ಅಹಲ್ಯಾ ಶಾಪ ವಿಮೋಚನ ಮಾಡಿದ ನೆಚ್ಚಿದ ಧ್ರುವನ ನಿಜ ಭಕ್ತಿಗೆ ಒಲಿದು ಅಚಲ ಪದವಿತ್ತುಚ್ಯುತ ನೀನೆ 20 ಜಗದೊಳು ಭಕ್ತಜನರಿಗೆ ಒಲಿದು ಜಾಹ್ನವಿ ನಿರ್ಮಿಸಿ ಜನಕನ ಸಲಹಿದ ಸಾಧು ಸಜ್ಜನ ಮುನಿ ಸಂಜೀವನ ಜಾನಕೀಪತಿ ಜನಾರ್ಧನನು ನೀನೆ 21 ಅಂಗದಗೊಲಿದಾನಂದವನಿತ್ತು ಕುಂದದೆ ಕರೆದುಪಮನ್ಯುನ ಸಲಹಿದ ದಿನಕರ ಚಂದ್ರ ಕಳಿಯಗಳಿತ್ತು ಇಂದ್ರಗೆ ಒಲಿದ ಉಪೇಂದ್ರನು ನೀನೆ 22 ಧರೆಯೊಳು ಭಕ್ತನ ಜನ್ಮವು ಹರಿಸಿ ಹರಿಶ್ಚಂದ್ರನ ಕ್ಲೇಶವು ಪರಿಹರಿಸಿದ ಸುರಮುನಿಗೊಲಿದ ಶ್ರೀ ಹರಿಯು ನೀನೆ 23 ಕಾಳಿ ಮಥನವು ಮಾಡಿ ಕರುಣದಿ ಸುರರಿಗೆ ಅಮೃತವನಿತ್ತು ಸಲಹಿದ ಕಲ್ಕ್ಯಾವತಾರದ ಲೀಲೆಯ ತೋರಿದ ಕಪಟ ನಾಟಕ ಶ್ರೀ ಕೃಷ್ಣನು ನೀನೆ 24 ಸಂಧ್ಯಾನದ ಸಾಹಾಯವನಿತ್ತು ಕಾಯದಿ ಸದ್ಗತಿ ಸಾಧನದೋರಿದ ನರಕೀಟಕ ಮಹಿಪತಿ ತಾರಕ ಗುರುಮೂರ್ತಿಯ ಪರಮ ದಯಾನಿಧಿಯು ನೀನೆ 25
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನೆ ದಯಾಶರಧಿ ತ್ರಿಜಗದಿ ಧ್ಯಾನದಾಯಕ ಮಮಪ್ರಾಣ ಜಾನಕೀ ಜೀವ ಪ ದೀನರ ಪಾಲಿಪ ಜಾಣ ಮಹಿಮ ಪ್ರಭು ಕ್ಷೋಣಿಯೋಳ್ನಿನ್ನ ಸಮಾನ ದೇವರ ಕಾಣೆ 1 ಒಲಿದು ಕಂಬದಿ ಬಂದಿ ಬಲಿಯ ಬಾಗಿಲ ಕಾಯ್ದಿ ಲಲನಾಮಣಿಗೆ ಒಲಿದು ಕುಲವನುದ್ಧರಿಸಿದಿ 2 ಕರಿಯು ಕರೆಯಲು ಬಂದಿ ತರುಣಿ ಬೆಂಬಲ ನಿಂದಿ ಚರಣದಾಸರ ಪ್ರಿಯ ಕರುಣಿ ಶ್ರೀರಾಮ 3
--------------
ರಾಮದಾಸರು
ನೀನೆ ನಿಜಗುರುವಾಗುಎನಗೆ ಮಾಧವ ಪ ಮರವೆಯೆಂಬ ಪರದೆ ಹರಿದು ಅರಿವುಯೆಂಬಾಲಯದೊಳಿರಿಸಿ ದುರಿತಪರ್ವತ ತರಿದು ಪೊರೆಯುವ ಚರಣದಾಸರ ಭಾಗ್ಯನಿಧಿಯೆ 1 ಹೀನಸಂಸಾರೆಂಬುವ ಮಹ ಕಾನನದಿ ಬಳಲಿಸದೆ ಅನುದಿನ ಧ್ಯಾನಮೃತ ಪಾನಗೈಸುವ ಧ್ಯಾನಿಪರ ಮಹಪ್ರಾಣದರಸೇ 2 ಆವಕಾಲದಿ ಬಿಡದೆ ನಿಮಿಷ ಜೀವ ಭಕುತರ ಭಾವದ್ವಾಸಿಸಿ ಜಾವ ಜಾವಕೆ ಬುದ್ಧಿ ಕಲಿಸುವ ದೇವದೇವರ ದಿವ್ಯದೇವರೆ 3 ಸಕಲಕೋಟಿಮಂತ್ರಗಳಿಗೆ ನಿಖಿಲ ನೀನೆ ಆಧಾರನಾಗಿ ಅಖಿಲರೂಪದಿ ಜಗವ ಬೆಳಗುವ ಭಕುತಿದಾಯಕ ಸುಖದ ಶರಧಿಯೆ 4 ಸಾರಿ ಭಜಕರ ಭಾರವಹಿಸಿ ಘೋರಭವಸಾಗರವ ಗೆಲಿಸಿ ಧೀರ ಶ್ರೀಗುರುರಾಮ ಪ್ರಭುವೇ 5
--------------
ರಾಮದಾಸರು
ನೀನೆ ಬಲ್ಲಿದನೋ ರಂಗಾನಿನ್ನ ದಾಸರು ಬಲ್ಲಿದರೋ ಪ ನಾನಾ ತೆರದಿ ನಿಧಾನಿಸಿ ನೋಡಲುನೀನೆ ಭಕ್ತರಾಧೀನನಾದ ಮ್ಯಾಲೆ ಅ.ಪ ಪರಮ ಪುರುಷ ಪರಬೊಮ್ಮನೆಂದೆನುತಲಿನಿರುತದಿ ಶ್ರುತಿಯು ಕೊಂಡಾಡಲು ನಿನ್ನನುನರ ಧರ್ಮಜನರ ಮನೆಯ ಒಳಗೆ ನಿಂ-ದ್ಹರುಷದಿಂದ ಕರೆದಲ್ಲಿ ಪೋದ ಮ್ಯಾಲೆ 1 ಪುರುಹೂತ ಸಹಿತ ಸುರ-ವ್ರತವು ನಿನ್ನನು ವಾಲೈಸುತಿರೆಭೂತಳದೊಳು ಸಂಪ್ರೀತಿಯಿಂದಪಾರ್ಥನ ರಥಕೆ ನೀ ಸೂತನಾದ ಮ್ಯಾಲೆ 2 ಜಲಜಭವಾಂಡದೊಡೆಯನೆಂದೆನಿಸುವಬಲು ಬಲು ದೊಡ್ಡವನಹುದಾದಡೆಒಲಿದು ಸದ್ಗತಿಯೀವೆ ಅನುದಿನದಲಿ ನೀಬಲಿಯ ಮನೆಯ ಬಾಗಿಲ ಕಾಯ್ದ ಮ್ಯಾಲೆ 3 ಧುರದೊಳು ಪಣೆಯನೆಚ್ಚೊಡೆದ ಭೀಷ್ಮನಮರಳಿಪುದೆನುತಲಿ ಚಕ್ರವ ಪಿಡಿಯಲುಹರಿ ನಿನ್ನ ಕರುಣದ ಜೋಡÀು ತೊಟ್ಟರಲವ -ನಿರವ ಕಂಡು ಸುಮ್ಮನೆ ತಿರುಗಿದ ಮ್ಯಾಲೆ 4 ತರಳನು ಕರೆಯಲು ಒಡೆದು ಕಂಬದಿ ಬಂದುನರಮೃಗ ವೇಷದಿ ಭಕುತರ ತೆತ್ತಿಗನಾದೆಕರುಣದಿ ಸಲಹೋ ಶ್ರೀರಂಗವಿಠಲ ನಿನ್ನಸ್ಮರಿಪರ ಮನದಲಿ ಸೆರೆಯ ಸಿಕ್ಕಿದ ಮ್ಯಾಲೆ 5
--------------
ಶ್ರೀಪಾದರಾಜರು
ನೀನೆ ಸದ್ಗುರುರಾಯನೆ ಪ ಹೀನನಿವನೆನಲೇನು ಕಾರಣ ಅ.ಪ ಧೀನದೊಳು ನಾನಿರುವ ದಾಸನು 1 ಎನ್ನೊಳಗೆ ನೀನೈಕ್ಯವಾಗಿಹೆ 2 ನೆನ್ನು ನೀ ನಿಜವನು ಸದಾನಂದ 3
--------------
ಸದಾನಂದರು
ನೀನೊಲಿದರೇನು ಏನಿಲ್ಲ ಹರಿಯೆ ಪ ನೀನೊಲಿಯದಿರೆ ಮಾತ್ರ ಏನೇನು ಇಲ್ಲ ಅ.ಪ. ಸಾಧನವು ಸಂಪತ್ತು ಸಾಧಿಸದೆ ದೊರೆಯುವುದುಪಾದಗಳ ಸೇವೆ ತಾ ತಾನಾಗಿ ಲಭಿಸುವುದುಖೇದ ವ್ಯಸನಗಳೆಲ್ಲ ಬಾಧಿಸದಲೋಡುವುದುಸಾಧು ಸಂಗವು ಭಕ್ತಿ ಬೋಧಿಸದೆ ಬರುವವು 1 ವಾಸುದೇವನೆ ವಿಪುಲ ಐಸಿರಿಯನೀಡುತಲೆಬೇಸರದೆ ನಿನ್ನವರ ಲೇಸಾಗಿ ಸಲಹುವೆಯೊದಾಸ ಭಕುತರು ಶೆರಗ ಹಾನಿ ಬೇಡಿದರೇನುಶೇಷಶಯನನೆ ನಿನ್ನ ಈಸು ಮಹಿಮೆಯ ತಿಳಿಯೆ 2 ಮನಸು ನಿನ್ನಡಿಗಳಲಿ ಕೊನೆತನಕ ಇರಿಸುವದುಘನಕೆಲಸ ನಿನದಯ್ಯ ಮನುಜರಿಗೆ ಸಾಧ್ಯವೇತನುಮನಗಳಿವು ನಿನ್ನವೆ ನನದೆಂಬುದೇನುಂಟುಧಣಿಯ ಗದುಗಿನ ವೀರನಾರಾಯಣನೆ ಒಲಿಯೋ 3
--------------
ವೀರನಾರಾಯಣ