ಒಟ್ಟು 2228 ಕಡೆಗಳಲ್ಲಿ , 112 ದಾಸರು , 1537 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲೋಕನೀತಿ (ಆ) ಇರುವುದೆಲ್ಲ ಮನೆಯೊಳಗಿದ್ದರೆ ಆಡಿಗೆಗೆ ಯಾತಕ್ಕೆ ತಡವಾಗೋದು | ಪ ತರಬೇಕೇಂದು ನೂರು ತಡವೆ ನಾ ನುಡಿದರು ಅರಿಯದವರ ಪರಿತಿರುಗುತ್ತಲಿರುವದು ಅ.ಪ ಮನೆ ಮನೆಯಲಿವಂದು ಮಾನಾರ್ಧಮಾನಗಳು ಮೆಣಸಿನಪುಡಿ ಉಪ್ಪು ಅಕ್ಕಿ ಸಾಲ ದಿನ ದಿನ ಮಧ್ಯಾಹ್ನ ತಿರುಗಿದ ಮೇಲೆ ಮನೆಗೆ ಬಂದು ಹಸಿವೆನುತ ಪೇಳುವದು 1 ಎಣ್ಣೆವಗ್ಗರಣೆಯಲ್ಲದೆ ಕಾಣೆನಭಿಗಾರ ಮುನ್ನೆ ಪಿತ್ಥ ಹೆಚ್ಚಿ ತಲೆ ನೋಯ್ವುದು ನಿನ್ನೆಮೊನ್ನೆ ಹೇಳಿದುದಕೆ ಹೊಡೆಸಿಕೊಂಡೆ ದೊಣ್ಣೆಪೆಟ್ಟಿನಿಂದ ಬೆನ್ನು ಬಾತಿರುವದು 2 ವರುಷಕ್ಕಾಗುವ ಮಟ್ಟಿಗೆಲ್ಲಾ ಪದಾರ್ಥ ಶೇ- ಖರವ ಮಾಡುವುದು ಈ ಮನೆಯೊಳಿಲ್ಲಾ ಹಿರಿಯರಿಂದ ಬಂದ ಸಂಪ್ರದಾಯವಿದೇನೊ ಇಂಥಾಮನೆಯ ಸೇರಿ ಈ ಸುಖ ಪಡುವೆ 3 ಮದುವೆಯಲ್ಲಿದ್ದದ್ದು ಪ್ರಸ್ತದೊಳಗೆಯಿಲ್ಲ ಬದಲು ಸೀರೆಯು ನಾನುಟ್ಟರಿಯೆ ವಿಧಿಲಿಖಿತವು ತಪ್ಪುವುದೆಯೆಂದಿಗಾದರು ವದರಿ ಕೊಂಡರೆಯೇನು ಇದರೊಳು ಫಲವುಂಟು 4 ಜ್ಞಾನ ಶೂನ್ಯರು ಮನೆಯೊಳಿಹರೆಲ್ಲರು ಈ ನರಜನ್ಮವು ಇಷ್ಟಕ್ಕೆಸಾಕೆಂದು ಧೇನಿಸಿ ಗುರುರಾಮವಿಠಲನ ಬೇಡುವೆ 5
--------------
ಗುರುರಾಮವಿಠಲ
ಲೋಕನೀತಿಯ ಹಾಡುಗಳು ಶ್ರೀನಾಥನ ನಾಮಾಮೃತ ರುಚಿಯೆಲ್ಲ ಪರಮ ಭಕುತಗಲ್ಲದೆ ಪ ಹೀನ ಮನುಜರು ಕೇಳಿ ಹಿರ್ರನೆ ಹಿಗ್ಗಿ ಆನಂದಪಡಬಲ್ಲರೆ ಅ.ಪ. ಕ್ಷೀರ ವಾರಿಯ ಕೂಟ ಮರಾಳ ತಿಳಿವಂತೆನೀರು ಕೋಳಿಯು ಬಲ್ಲುದೆಸಾರಮೇಯನ ಬಾಲ ನಳಿಗೆಯೊಳಿಟ್ಟರೆನೇರವಾಗಬಲ್ಲದೆದಾರು ಪ್ರತಿಮೆಗೆ ಸೀರೆಯನುಡಿಸಲುನಾರಿಯಾಗಬಲ್ಲುದೆಭಾರತಿಪತಿ ಪಾದವರಿಯದ ಮನುಜನುನಾರಾಯಣನ ಬಲ್ಲನೆ1 ಉದರಕ್ಕೆ ಗ್ರಾಸವ ನಡೆಸದ ಮನುಜನುಮದುವೆ ಮಾಡಲು ಬಲ್ಲನೆಸದನಕ್ಕೆ ಜನ ಬರೆ ಕದನವ ತೆಗೆವವಬುಧರು ಎಂಬುದ ಬಲ್ಲನೆವಿಧಿಯಂತೆ ಮಸೆದು ಮತ್ಸರಿಸುವವ ನಮಗೆಹದುಳ ಹಾರೈಸುವನೆಮದವೆಗ್ಗಳಿಸಿ ಮೆರೆವ ಮನುಜ ಹರಿಪದಗಳರ್ಚಿಸಬಲ್ಲನೆ 2 ಕನ್ನಡಿಯೊಳು ರೂಪು ಹೊಳೆದಂತೆ ಹಂಚಿನೊಳ್‍ಇನ್ನು ಕಾಣಿಸಬಲ್ಲುದೆಕಣ್ಣಿಲ್ಲದವನಿಗೆ ಚಿನ್ನವ ತೋರಲುಬಣ್ಣ ಹೇಳಲು ಬಲ್ಲನೆಹೆಣ್ಣಿನ ಮೇಲಿನ ವ್ಯಾಮೋಹ ಬಿಡದವಸಂನ್ಯಾಸಿಯಾಗುವನೆಅನ್ಯ ದೈವಂಗಳ ಭಜಿಸುವ ನರಗೆ ಮೋ-ಹನ್ನ ವಿಠ್ಠಲ ಒಲಿವನೇ 3
--------------
ಮೋಹನದಾಸರು
ಲೌಕಿಕ ಏತಕ್ಕೆ ನಮಗೆ ಪ ಲೋಕೇಶ ಕೃಷ್ಣನ್ನ ಮರಿಸಿ ಕೆಡಿಸುವಂಥ ಅ.ಪ. ಸುಳ್ಳು ಹೇಳಲಿಬೇಕು ಕಳ್ಳನಾಗಲಿಬೇಕು ಮೆಲ್ಲನೆ ಸವಿಮಾತು ಆಡಿನಟಿಸಬೇಕು ಪುಲ್ಲನಾಭನ ಬಿಟ್ಟು ಹುಲ್ಲುಮಾನವನನ್ನು ಕಾಲ ಕಳಿಸುವಂಥ 1 ಗಡ್ಡ ಬೋಳಿಸಬೇಕು ದುಡ್ಡುಗಳಿಸಬೇಕು ಬಡ್ಡಿಗೆ ಕೊಡಬೇಕು ದೊಡ್ಡ ಮನೆಯ ಕಟ್ಟಿ ಅಡ್ಡಿಯಿಲ್ಲದೆ ಮೆರೆದು ದೊಡ್ಡವನಾಗಬೇಕು ಹೆಡ್ಡಮಂದಿಯಲಿರಿಸಿ ಗೊಡ್ಡು ದೇಹವ ಮಾಳ್ವ 2 ಸತಿಸುತ ಧನಗಳನೆ ಗತಿ ದೈವನೆನಬೇಕು ಹಿತದಿಂದ ದುಡಿಯುತ ಸತಿಯರಿಗಿಡಬೇಕು ಗತಿದಾಯಕ ನಮ್ಮ “ಶ್ರೀ ಕೃಷ್ಣವಿಠಲ”ನ್ನ ಶಾಸ್ತ್ರನೇತ್ರದಿ ನೋಡೆ ಪುರಸೊತ್ತು ಕೊಡದಂಥ 3
--------------
ಕೃಷ್ಣವಿಠಲದಾಸರು
ಲೌಕಿಕ ಸಂದರ್ಭದ ಹಾಡು ಯಾತಕೆ ಹೋದೆವು ದುರುಳನ ಮನೆಗೆ ಪಾತಕಿ ಇವನು ಛೇ ಛೇ ಛೇ ಪ ಏಳು ಬಿಲ್ಲಿಯ ಕೊಡಲಿಕ್ಕೆ ಬಂದ ಖೂಳನಿವನು ಈ ಮನೆಯೊಳಗೆ ತಾಳಲಾರದೆ ಬೀಸಾಟಿ ಬಂದೆನು ಶ್ರೀಲತಾಂಗಿಯ ರಮಣ ಗೋವಿಂದಾ 1 ಗುಂಡಪ್ಪನು ಯಾಗುಂಡಪ್ಪನು ರುಬು ಗುಂಡಪ್ಪನು ನಾನಿವನರಿಯೆ ಮಂಡರಂತೆ ದಿನಗಳಿವುತಲಿ ನಮ ಕಂಡು ಮಾನ್ಯ ಮಾಡದೆ ಹೋದನು 2 ಹರಿಸರ್ವೋತ್ತಮನೆಂದು ಝಾಂUಟಿ ಬಾರಿಪ ದಾಸರು ನಾವ್ ಹೌದು ವರ ಕದರುಂಡಲುಗೀಶನ ಒಡೆಯ ನಮ್ಮ ಪಾಂ- ಡುರಂಗನ ದಾಸನೆಂದು ತಿಳಿಯದಲೆ 3
--------------
ಕದರುಂಡಲಗೀಶರು
ವಂದಿಪೆ ಮುದದಿಂದಲಿ ನಾನು ವಂದಿಪೆ ಮುದ್ದು ಗಣಪಗೆ ವಂದಿಪೆ ಪ ನಂನಂದನನಾಮ ಮನದೊಳು ಆ- ನಂದದಿ ಭಜಿಸುವ ಚಂದ್ರಶೇಖರಸುತಗೆ ಅ.ಪ. ಆಕಾಶಕಭಿಮಾನಿ ಶ್ರೀಕಂಠವರಪುತ್ರ ರಾಕೇಂದುವದನ ಶ್ರೀಕಾಂತ ನಿಜಭಕ್ತ ಏಕಾಂತದಲಿ ಹರಿ ಆಕಾರತೋರಿಸಿ ನೂಕುತಭವಪಾಶ ಸಾಕು ಸಾಕು ಎಂದು 1 ವರವರದಾಯಕ ಸುರಗಣಪೂಜಿತ ವರಕರಿಮುಖವೇಷ ವರಸರ್ಪಕಟಿಸೂತ್ರ ಸಿರಿಕಾಂತಸೇವೆಗೆ ಬರುವ ವಿಘ್ನಂಗಳೆಲ್ಲ ಭರದಿಂದ ತರಿಯುತ ಕರುಣದಿ ಸಲಹೆಂದು 2 ವೇದವ್ಯಾಸರಶಿಷ್ಯ ಮೋದಕಗಳ ಪ್ರಿಯ ಮದನನಸೋದರ ಮುದವಿದ್ಯೆದಾಯಕ ಮಧ್ವಾಗಮದಲಿ ಅದ್ದುತ ಎಮ್ಮನು ಶುದ್ಧರನು ಮಾಡೋ ಸಿದ್ಧಿ ವಿನಾಯಕನೆಂದು 3 ಏಕದಂತನೆ ವರ ಆಖುವಾಹನ ಭಕ್ತರ ಶೋಕ ಹರಿಸೊ ಬೇಗ ಲೋಕ ವಂದಿತನೆ ರಕ್ತಾಂಬರ ತನು ರಕ್ತಗಂಧಪ್ರಿಯ ವಿ - ರಕ್ತಿನೀಡುತ ಹರಿಭಕ್ತನೆಂದೆನಿಸು ಎಂದು 4 ಪಾಶಾಂಕುಶ ಶಶಿದರ್ಪಭಂಜನ ಶ್ರೀಶನಾಭಿವಾಸ ವಿಶಾಲಕರ್ಣಯುತ ನಾಶಗೈಸುತವಿಷಯ ವಾಸನೆಗಳೆಲ್ಲ ವಿಶ್ವೋಪಾಸಕ ಪ್ರಭು ಶ್ವಾಸಾವೇಶಯುತನೆಂದು 5 ಚಾರುದೇಷ್ಣನೆ ನಿನ್ನ ಚರಣಕ್ಕೆ ಶರಣೆಂಬೆ ಸರಿನೀನು ಧನಪಗೆ ಗುರುಶೇಷಶತರಿಗೆ ತರಿದು ತಾಪತ್ರಯ ವರಜ್ಞಾನ ವೈರಾಗ್ಯ ಹರಿಭಕ್ತಿ ಹರಿ ಧ್ಯಾನ ನಿರುತ ಕೊಡು ಎಂದು 6 ಜಯತೀರ್ಥ ಹೃದಯದಿ ವಾಯುವಿನೊಳಿಪ್ಪ ಸಿರಿ ತಾಂಡವ ಕೃಷ್ಣವಿಠಲ ರಾಯನ ಧ್ಯಾನ ಕಾಯಾ ವಾಚಾ ಮನಸಾ ದಯಮಾಡಿ ಸಲಹೈಯ್ಯ ಜೀಯಾ ಗಣಪನೆಂದು7
--------------
ಕೃಷ್ಣವಿಠಲದಾಸರು
ವಂದಿಪೆ ಶ್ರೀಮನ್ನಾರಾಯಣಗೆ ವಂದಿಪೆ ಅಮ್ಮ ಲಕ್ಷ್ಮೀದೇವಿಗೆ ಪ ವಂದಿಪೆ ವಿಶ್ವಕ್ಸೇನರಿಗೆ ಕುಂದದಿರಲಿ ಎನ್ನ ಸನ್ಮತಿ ಎಂದು ಅ.ಪ ವಂದಿಪೆ ನಾ ಮೊದಲಾಳ್ವಾರರಿಗೆ ಅಂದದಿ ಹರಿಯ ತೋರಿಕೊಟ್ಟರಿಗೆ ಕಂದಮಿಳಲಿ ಸೊಲ್ವ ನುಡಿಗಳಿಗೆ ಪ್ರ- ಬಂಧದಿವ್ಯಗಳ ಬೆಳಗಿಸಿದವರಿಗೆ 1 ವಂದಿಪೆ ವಂದಿಪೆ ಆಚಾರ್ಯರಿಗೆ ಚಂದದಾ ಯತಿತ್ರಯರುಗಳಿಗೆ ಸುಂದರ ಶ್ರೀವೈಷ್ಣವ ತತ್ವಗಳನು ಹೊಂದಿಸಿ ಬಂಧಿಸಿ ಸ್ಥಾಪಿಸಿದವರಿಗೆ 2 ಇನ್ನು ವಂದಿಪೆ ಗುರುಪೀಠಕ್ಕೆ ಚೆನ್ನ ತಿರುನಾರಾಯಣಪುರಕೆ ಉನ್ನತ ರಂಗದಾಸಯತಿವರ್ಯಗೆ ಸನ್ನುತ ಪಿತಾನುಜ ಶಾಮದಾಸರಿಗೆ 3 ಸಾಜದಲೆನ್ನಲಿ ಅರಿವನು ಮೂಡಿಸಿ ಓಜನನಾಗಿಸೆ ಕೇಶವ ನಾಮದಿ ಆರ್ಜಿಸಿ ಉಪಾದಾನದಿ ಬಳಲಿದ ಪೂಜ್ಯಪಿತ ವೆಂಕಟರಂಗಾರ್ಯರಿಗೆ 4 ವಂದಿಪೆ ಕೊನೆ ಮೊದಲಿಲ್ಲದೆ ವಂದಿ- ಪೆಂ ದಾಸನ ಮಾಡಿದ ದೇವನಿಗೆ ತಂದೆ ಜಾಜಿಪುರಾಧೀಶನಿಗೆ ಮುದ- ದಿಂದ ಶ್ರೀ ಚೆನ್ನಕೇಶವಗೆ 5
--------------
ನಾರಾಯಣಶರ್ಮರು
ವಂದಿಸುವೆನು ನಿನ್ನ ಅರವಿಂದಲೋಚನ- ದಿಂದ ನೋಡೊ ನೀ ಎನ್ನ ವಂದಿಸುವೆ ಅರವಿಂದಲೋಚನ- ದಿಂದ ನೋಡೊ ದಯಾಸಿಂಧು ಎನಿಸುವೆ ನಂದನಂದನನಾದ ಶ್ರೀ ಮುಕುಂದ ನೀ ಮುಚು- ಕುಂದ ವರದ ವಂದಿಸುವೆನು ನಿನ್ನ ಪ ಅಂಬರೀಷನು ಏನೋ ಮುಚುಕುಂದ ಮುನಿವರ- ನೆಂದು ರಕ್ಷಿಸುವೇನೊ ದ್ವಿಜ ತಂದವಲಕ್ಕಿ ತಿಂದ ಭಿಡೆಯಗಳೇನೊ ನೀನೆ ಸುರಧೇನು ಕಂದ ಧ್ರುವಪ್ರಹ್ಲಾದ ಕರೆಯಲು ಬಂದು ಭರದಿಂದವರ ಸಲಹಿದೆ ಮಂದಮತಿ ನಾ ಮ- ತ್ತೊಂದನರಿಯದೆ ವಂದಿಸುವೆ ನಿನ್ನ 1 ಗಜನು ಅಜಮಿಳನೇನೊ ಪಾದಾಂಬುಜ ಸ್ತುತಿಸ- ಲಜಸುತನು ನಾರದನೇನೊ ನಿಜ ಭಕುತಿಯಿಂದಿರಲ್ವಿದುರ ಉದ್ಧವನೇನೊ ನದಿಯಲ್ಲಿ ನಿನ್ನ ನಿಜಸ್ವರೂಪವ ತೋರಲಿಕ್ಕೆ ನಿನ್ನ ಬಾಂಧವಕ್ರೂರನೇ ನಾ ಕೇಳು ಘನ್ನ ಮಹಿಮ ಪ್ರಸನ್ನನಾಗಲಿಕ್ವಂದಿಸುವೆನು ನಿನ್ನ 2 ಸತ್ವರೊಳು ನಾನಲ್ಲ ಅಹಲ್ಯೆ ದ್ರೌಪದಿ ಭಕ್ತಿ ಮೊದಲೆನಗಿಲ್ಲ ಪಾಂಡವರ ದುರಿತಾಪತ್ತು ಕಳೆದ್ಯೊ ನೀಯೆಲ್ಲ ಕೇಳೆನ್ನ ಸೊಲ್ಲ ಭಕ್ತಾಧೀನನೆ ಭಯನಿವಾರಣ ಇಷ್ಟು ಭವಭಯ ಬಿಡಿಸಿ ಭೀಮೇಶಕೃಷ್ಣ ನಿನ್ನದಯ- ವಿಟ್ಟುಕರುಣಿಸೊ ವಂದಿಸುವೆನು ನಿನ್ನ 3
--------------
ಹರಪನಹಳ್ಳಿಭೀಮವ್ವ
ವನವ ನೋಡೋಣು ಬಾರೇ ನೀರೆ ಅಲ್ಲಲ್ಲಿಗೆ ಸರೋವರ ವನವ ನೋಡೋಣು ಬಾರೇ ನೀರೆ ಪ. ನೀರ ಮೇಲಾಡುವ ಪಾರಿವಾಳದ ಹಿಂಡುದೂರಾಗಿ ಬೆಳೆದ ಅಡಿಕೆಯದೂರಾಗಿ ಬೆಳೆದ ಅಡಿಕೆ ತೆಂಗಿನಮರ ಶ್ರೀದೇವಿ ಅರಸನ ವನವಿದು 1 ತುಂಬಿ ತುಂಬಿ ಜqತಾ ರಂಗಯ್ಯಓಕುಳಿಯಾಡಿದ ವನವಿದು2 ಮೃಗ ಹಿಂಡು ಕಡೆಯಿಲ್ಲ 3 ತೋಟಪಟ್ಟಿಗಳಲ್ಲಿ ನೀಟಾದ ಹಂಸಗಳು ಆಟವಾಡುತ್ತಿರಲು ಹರುಷದಿಆಟವಾಡುತ್ತಿರಲು ಹರುಷದಿ ಅಲ್ಲಲ್ಲೆ ನೀಟಾಗಿ ನಲಿವ ನವಿಲು ಹಿಂಡು4 ಕಬ್ಬಿನ ತೋಟಕ್ಕೆ ಹಬ್ಬಿದ ಹಂದರ ಅಬ್ಬರದಿ ಬೆಳೆದ ಹಲಸಿನ ಅಬ್ಬರದಿ ಬೆಳೆದ ಹಲಸು ತೆಂಗಿನ ಮರ ರುಕ್ಮಿಣಿ ರಾಮೇಶನ ವನವಿದು5
--------------
ಗಲಗಲಿಅವ್ವನವರು
ವರಕವಿಗಳ ಮುಂದೆ ನರಕವಿಗಳ ವಿದ್ಯೆ ತೋರಬಾರದು - ಈಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು ಪ ಪಾಪಿಗಳಿದ್ದಲ್ಲಿ ರೂಪುಳ್ಳ ವಸ್ತುವ ತೋರಬಾರದು - ಬಹುಕೋಪಿಗಳಿದ್ದಲ್ಲಿ ಅನುಭವಗೋಷ್ಠಿಯ ಮಾಡಬಾರದು1 ಅಡಿ ಸತ್ತ ಮಡಕೆಗೆ ಜೋಡಿಸಿ ಒಲೆಗುಂಡು ಹೂಡಬಾರದು - ಬಹುಬಡತನ ಬಂದಾಗ ನೆಂಟರ ಬಾಗಿಲ ಸೇರಬಾರದು2 ಹರಿಯ ನಿಂದಿಸಿ ಹರ ಘನನೆಂದು ನರಕಕ್ಕೆ ಬೀಳಬಾರದು - ತಾಪರರನು ಬೈದು ಪಾತಕಕೆ ಮುನ್ನೊಳಗಾಗಬಾರದು 3 ಮಡದಿ ನುಡಿಯ ಕೇಳಿ ಜಗಳಕೊಬ್ಬರ ಕೂಡೆ ಹೋಗಬಾರದು - ಬಾ-ಯ್ಬಡಿಕರು ಇದ್ದಲ್ಲಿ ವಸ್ತಿ ಬಿಡಾರವ ಮಾಡಬಾರದು 4 ಮುಂದೆ ಭಲಾ ಎಂದು ಹಿಂದೆ ನಿಂದಿಪರನ್ನು ಕೂಡಬಾರದು - ನಮ್ಮತಂದೆ ಬಾಡದಾದಿಕೇಶವನ ಸ್ಮರಣೆಯ ಬಿಡಬಾರದು5
--------------
ಕನಕದಾಸ
ವರದರಾಜ ವಿಠಲ | ಪೊರೆಯ ಬೇಕಿವನಾತರಳತವದಾಸ್ಯಕ್ಕೆ | ಮೊರೆಯನಿಡುತಿಹನಾ ಪ ಜನಿತ ಜನಿತ ಸಂಸ್ಕಾರಗಳನೀನಾಗಿ ಕಳೆಯುತಲಿ ಮಾನನಿಧಿ ಸಲಹೋ 1 ತೈಜಸನೆ ಓಲೆಯಲಿ | ಯೋಜಿಸಿದ ಅಂಕಿತವಾಮಾಜದಲೆ ಇತ್ತಿಹೆನೊ | ವಾಜವರ ವದನಾಮಜಗಜ್ಜನ್ಮಾದಿ | ಬ್ರಾಜಿಷ್ಣುಕರಿವರದಓಜಸವನಿತ್ತಿವಗೆ | ನೀ ಜಯನ ಬೀರೋ 2 ಲೌಕಿಕದಿ ಅಭಿಮಾನ | ತೋಕನಿಗೆ ನೀ ಬಿಡಿಸಿಏಕಮೇವನೆ ನಿನ್ನ | ಏಕಮಾನಸದೀ |ಪ್ರಾಕೃತಸುಗೀತೆಯಲಿ | ಝೇಂಕರಿಪ ಸುಕೃಪವಮಾಕಳತ್ರನೆ ಈಯೋ | ಲೋಕೈಕ ಮೂರ್ತೇ 3 ಪತಿ | ಭೂಮಗುಣಪೂರ್ಣಸೋಮಧರ ಮಧ್ಯ ಸತ್ | ಶ್ರೀ ಮಧ್ವ ಮತದೀಕ್ಷೆಕಾಮನಕೆ ತವದಾಸ್ಯ | ಸ್ವಾಮಿ ಕರುಣಿವುದೋ 4 ಪಾವಮಾನಿಗೆ ಪ್ರೀತ | ಭಾವಜಾರಿಯ ತಾತದಾವಗ್ನಿ ಬಹು ಪೀತ | ಗೋವಗಳರತ್ರಾತಗೋವತ್ಸದನಿಗೆ ಹಸು | ಧಾವಿಸೀ ಪೊರೆವಂತೆತಾವಕನ ಪೊರೆಯೊ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ವರದೇಂದ್ರ ಯತಿ ಚಕ್ರವರ್ತಿ ನಿರಂತರ ವರಣಿಸುವೆ ನಿಮ್ಮ ಕೀರ್ತಿ ಪರಮ ಕರುಣಿ ನಿಮ್ಮ ಚರಣಕಮಲಯುಗ ಕ್ಕೆರಗಿ ಬೇಡುವೆ ವರವಾ ಎಮ್ಮನು ಪೊರೆವಾ ಪ ನತಜನಬಂಧು ನೀನೆಂದೂ | ತಿಳಿದು ನತಿಸಿದೆ ಗುಣಗಣಸಿಂಧು ಪ್ರತಿಗಾಣೆ ನಿಮಗೆ ಸುವ್ರತಿ ವರ ಪ್ರಣತ ಕಾ ಮಿತ ಕಲ್ಪತರುವೆ ನಿರ್ಜಿತಮಾರಮಾರ್ಗಣ ಕ್ಷಿತಿಪರಿಗೆ ಪ್ರತಿದಿನದಿ ಪರಮಾದ್ಭುತವೆನಿಸುವುದು ನಿಮ್ಮದಾನ ಪ್ರತತಿ ಸಾಂಪ್ರತ ಮಧುರವಚನಾ ಶಾಸ್ತ್ರ ಪ್ರವಚನಾ1 ಮರುತ ಮತಾಂಬುಧಿ ಚಂದ್ರಾ | ಚಾಮಿ ಕರವರ್ಣಸರಸ ರವೀಂದ್ರ ಪರವಾದಿತಿಮಿರ ಭಾಸ್ಕರ ವಸುಧೀಂದ್ರ ಸ ದ್ಗುರು ಕರಸಂಜಾತ ನಿರುಪಮ ನಿರ್ಭೀತಾ ಖರಮಥನ ಪದಕೋನದ ಮಧುಕರ ಕೃಪಾಕರ ಕರವ ಪಿಡಿದುದ್ಧರಿಸುವುದು ಭೂ ಸುರ ಕುಲೋತ್ತಂಸಾ ನಮೋ ಪರಮಹಂಸಾ 2 ಕಲಿತ ಸುಂದರ ಮಂದಹಾಸಾ ಹೇ ನಿ ಷ್ಕಲುಷ ಸುತತ್ವ ವಿಲಾಸಾ ಗಳಿತಾ ಘಸಂಘನಿಶ್ಚಲ ಜಗನ್ನಾಥ ವಿ ಠಲನೊಲಿಮೆಯ ಪಡೆದಿಳಿಯೊಳು ಚರಿಸುವ ಭಳಿರೆ ಪ್ರತಿಯೋಗಿಗಳೆನಿಪ ಕಂ ಕಲಭಕೇಸರಿ ನಿಮ್ಮ ದಾಸರೊಳೊಲಿದು ಪಾಲಿಪುದನವರತ ಎನ್ನ ನಂಬಿದೆನೋ ನಿನ್ನ 3
--------------
ಜಗನ್ನಾಥದಾಸರು
ವರದೇಶವಿಠಲರ ಹಾಡು ದಾಸರಾಯರ ದಿವ್ಯ ಚರಣ ಭಜಿಸಿ |ಶ್ರೀಶ ಪ್ರಾಣೇಶ ದಾಸಾರ್ಯ ಗುರುವರ್ಯ ಪ ಪಾದ ಭಜಿಪ ಸದ್ಭಕ್ತರ |ಏಸು ಜನ್ಮದ ಪಾಪರಾಶಿ ಪರಿಹರ ವೋ ||ಶ್ರೀಶನಲಿ ಸದ್ಭಕ್ತಿ ಲೇಸಾಗಿ ಪುಟ್ಟುವದು |ಲೇಶ ಸಂಶಯವಿಲ್ಲ ಆಲಸವು ಸಲ್ಲ 1 ಮರುತ ಮತ ತತ್ವಗಳ ಥೆರೆಗಳಿಂಸೂಸುತ |ಧರಣಿ ದ್ವಿಜರಿಗೆ ರಾಮನಾಮ ಮೃತ ||ನಿರುತ ಭಜಿಸಲು ಜ್ಞಾನ ವೈರಾಗ್ಯ ತರಮಣಿಯ |ಹರಿಭಕುತಿ ಧೇನುವಂ ನೀಡ್ವ ಪಾಲ್ಗಡಲೆನಿಪ 2 ಸುಜ್ಞಾನವೆಂಬಂಥ ಕಿರಣಗಳ ಪಸರಿಸುವ |ಅಜ್ಞಾನ ತಿಮಿರವನು ದೂರೋಡಿಪ |ಸೂಜ್ಞರೆಂಬುವ ತಾವರೆಗಳರಳಿಸುವಂಥ |ಅಜ್ಞ ಕುಮುದಗಳ ಬಾಡಿಸುವ ಭಾಸ್ಕರ ನೆನಿಪ 3 ನಮಿತ ಜನ ಭವತಾಪ ಕಳೆದು ಸದ್ಭಕ್ತಿಯಿಂ |ಬಮಿತ ಆಹ್ಲಾದವನು ಬೀರುವಂಥ ||ಶಮದಮಾದಿಗಳ ಚಂದ್ರಿಕೆಯಿಂದ ಶೋಭಿಸುವ |ವಿಮಲ ಹರಿಜನ ಚಕೋರಕೆ ಚಂದ್ರನೆಂದೆನಿಪ 4 ದಾಸ ಕುಲತಿಲಕ ಪ್ರಾಣೇಶರಾಯರ ಕವನ |ಶ್ರೀಶ ಕಥೆಗಳ ರಾಶಿ ಮೀಸಲಾಗಿರಲು |ಆಸು ಭಕ್ತರಿಗೆ ಸಂತೋಷಗೊಳಿಸಲು ಸರ್ವ |ದೇಶದಲಿ ಮೆರಿಸಿ ಸತ್‍ಕೀರ್ತಿಯನು ಪಡೆದಂಥ 5 ಈ ಗುರುಗಳ ಪಾದಕ್ಕೆರಗಿದ್ದ ಶಿರಧನ್ಯ |ಈ ಗುರುಗಳೀಕ್ಷಿಸಿದ ನೇತ್ರ ಧನ್ಯ ||ಈ ಗುರುಗಳ ವಾಣಿ ಕೇಳಿದ ಕಿವಿಧನ್ಯ |ಈ ಗುರುಗಳನು ಮನದಿ ನೆನೆವ ನರಧನ್ಯ 6 ರಾಗ ದ್ವೇಷಾದಿಗಳ ಗೆದ್ದು ಸದ್ಭಕ್ತಿಯಂ |ಶ್ರೀಗುರು ಪ್ರಾಣೇಶ ಭಜಕರೆನಿಪ |ನಾಗ ಪರ್ಯಂಕ ವರದೇಶ ವಿಠಲನ ಪ್ರಿಯಯೋಗಿ ವರದೇಂದ್ರ ಮುನಿಗಳ ಪಾದಭೃಂಗ 7
--------------
ಶ್ರೀಶಪ್ರಾಣೇಶವಿಠಲರು
ವರಲಕುಮಿ ಕರುಣಿಸೌ ಕರುಣಾಕರಳೆ ಎನ್ನೊಳು ಪ ಮರೆಹೊಕ್ಕ ದಾಸರ ದಾರಿದ್ರ್ಯ ಖಂಡಿಸು ಪರಮಪಾವನೆ ನಿನ್ನನರಸಿ ಬೇಡುವೆನವ್ವ 1 ಗರುವಕ್ಕೆ ಬಾರದ ಸಿರಿಯ ಕರುಣಿಸಿ ಮತ್ತೆ ಹರಿಸ್ಮರಣೆ ಸೌಭಾಗ್ಯ ವರ ಪಾಲಿಸೆನ್ನವ್ವ 2 ಕ್ಷೇಮ ಪಾಲಿಸು ತಾಯಿ ಕಾಮಿತ ಜನ ಮಹ ಪ್ರೇಮಮಂದಿರೆ ಶ್ರೀರಾಮನರ್ಧಾಂಗಿಯೆ 3
--------------
ರಾಮದಾಸರು
ವಶವಲ್ಲದೀ ಮನದ ದೆಸೆಯಿಂದೆ ನಾ ಬಲು ದೆಸೆಗೆಟ್ಟು ಬಳಲುವೆ ಕುಸುಮಾಕ್ಷ ಕಣ್ದೆರೆಯೊ ಪ ನಶಿಪ ಪ್ರಪಂಚ ಭ್ರಮಿಸಿ ಹಸಗೆಡಿಸಿ ನಿಜಧ್ಯಾನ ಪಶುವಿನಂತೆನ್ನನು ದಿಸೆದಿಸೆಗೆಳಿಪುದು ಅ.ಪ ಭುವಿಪರನೊಲಿಸರೆಲವದಿ ಭೂಮಿಯ ಪಡೆದೆ ಸವ ಜೋಡಿ ನೂಕಿತ್ತು ಜವದಿ ಕಟ್ಟುವುದು ಬುವಿಯೊಳು ಮಿಗಿಲೆನಿಸುವ ತೆರೆ ಮೇಲ್ಮಾಡಿ ಭವನ ರಚಿಸಿ ಕೋಟಿದ್ರವ್ಯಗಳಿಗಳುವುದು 1 ಮದುವ್ಯಾಗಿ ಪದ್ಮಿನಿಯ ವದನದೊಳ್ವದನಿಕ್ಕಿ ಮದನಕದನದಿ ಸುಖಿಸುವುದೊಂದು ಫ¼ಗಿ ಸದನ ಮುರಿದು ಸಂ ಪದವೆಲ್ಲ ತನ್ನಗೆ ಒದಗಿಬರಲೆನ್ನುವುದು 2 ತಡೆಯದೆ ವೈರಿಗಳ ಕಡುಕೋಪದಿಂ ತಂದು ಪಿಡಿದು ಕಂಬಕೆ ಕಟ್ಟಿ ಸುಡಿಸುವುದೊಡನೆ ಕಡುಗಲಿತನದಿಂದ ಪೊಡವಿಪರ ಸದೆಬಡಿದು ಪೊಡವಿ ಗೆಲಿದು ಒಂದೇ ಕೊಡೆಯಿಂದಾಳುವುದು 3 ಯಾತ್ರೆ ಮಾಡುವುದೊಮ್ಮೆ ಕ್ಷೇತ್ರದೊಳಗೆ ಕೂತು ನೇತ್ರಮಂ ಬಂಧಿಸಿ ಸ್ತೋತ್ರ ಮಾಡುವುದು ಮೂತ್ರದ್ವಾರದೆ ಬಂದ ಸೂತ್ರದ ಕಾಯಕ್ಕೆ ಧಾತ್ರಿ ಸೊನ್ನೆಂದೊಮ್ಮೆ ಖಾತ್ರಿ ಮಾಡುವುದು 4 ಯಾತರ್ಹಲವು ಪರಿಮಿತಿಯಿಲ್ಲದ್ಯೋಚಿಸಿ ಖತಿ ತಾಳಲಾರೆ ಅತಿಭ್ರಷ್ಟಮನದ ದುರ್ಮತಿ ನಿವಾರಿಸು ಗತಿ ನೀಡೆನಗೆ ಕೃಪೆಯಿಂ ಹಿತಭಕ್ತ ಶ್ರೀರಾಮ 5
--------------
ರಾಮದಾಸರು
ವಾಣೀ ನೀ ತೋರೆ ವಾರಿಜನಾಭನ, ಮಹಾಲಾಭನ್ನ ನಿತ್ಯ ಸುಲಭನ ಭಾನು ಸನ್ನಿಭನ ಪ ಕ್ಷೋಣೀಯೊಳಗಣ ಪ್ರಾಣಶ್ರೇಷ್ಠ - ಜಗ ತ್ರಾಣನ ತೋರಿಸೆ ಭಾನು ಸನ್ನಿಭಳೆ ಅ. ಪ. ಚೈತನ್ಯರಾಣಿ ಪುಸ್ತಕಪಾಣಿ-ಸುನೀಲವೇಣಿ ಅತ್ಯಂತ ಮಹಿಮೆ ಗುಣಗುಣಶ್ರೇಣಿ ತ್ರಿಲೋಕ ಜನನಿ ಸತ್ಯವ ತೋರುತ ನಿತ್ಯೋಪಾದಿಲಿ ಸತ್ಯ ಸಂಕಲ್ಪಳೆ ನಿತ್ಯದಿ ಪೂಜಿಪೆ ತ್ವತ್ಪಾದಾಂಬುಜವಿತ್ತು ನೀ ಸಲಹೆ1 ನಾಲಿಗೆಯಲ್ಲಿ ಬಂದು ನಿಂದು ದಯದಿಂದ ಇಂದು ಶ್ರೀಲೋಲ ಹರಿಯೆ ದೈವವೆಂದು ಕೊಂಡಾಡೆ ಮುಂದು ಕಾಲ ಹಿಂಗಿಸಿ ವಿ- ಶಾಲ ಮತಿಯ ಕೊಟ್ಟು ಆಳುಗಳೊಡನೆ ಸು- ಶೀಲ ಜ್ಞಾನವಿತ್ತು ಆಲಸ್ಯಮಾಡದೆ ಶೀಲ ಮುಕ್ತಿಗನುಕೂಲವಾಗುವುದಕ್ಕೆ2 ಜನ್ಮ ಬಂದಿದೆ ಕಡೆಗೆ ಮಾಡು ದಯದಿಂದ ನೋಡು ಘನ ಕೀರ್ತಿವಂತೆ ಅಭಯವ ನೀಡು, ನಿನಗಲ್ಲ ಈಡು ಕನಸಿಲಿ ಮನಸಿಲಿ ಮನಸಿಜನೈಯನ ನೆನೆಸುವ ಸೌಭಾಗ್ಯವನುದಿನ ಕೊಟ್ಟು ಘನಪ್ರೇರಣೆಯಿಂದ ವಿಜಯವಿಠ್ಠಲನಂಘ್ರಿ ವನಜವ ತೋರಿ ಸನ್ಮೋದವನೀಯೆ3
--------------
ವಿಜಯದಾಸ