ಒಟ್ಟು 56123 ಕಡೆಗಳಲ್ಲಿ , 139 ದಾಸರು , 12212 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿ ಗೋರಸ ಕುಡಿವುದು ನೋಡಿರೋ |ಪರಿ ಪರಿಯ ಸಂಭ್ರಮ ಮಾಡಿರೋ ಪ ಕಾರಣ ಒರಳಲಿ ವೃತ್ತಿಗುಣದಿ ತಾ |ಇದ್ದು ಯಶೋದೆಯು ಕಟ್ಟಿರಿಸಿ ||ಸ್ತನವನುಣಿಸುತಿರಲು ನಿಜಕರ್ಮದ |ಬಲದಿ ಬಿಡಿಸಿಕೊಂಡಾಡುತಲಿ 1 ನಾ ನಾ ಎನುತಾಡುವಾ ಗೋಪಾಲರ |ನೆರೆಸುವರಂತೆ ಕುಣಿವುತಲಿ ||ನಾನಾ ದ್ವಾರಗಳಿಂದ ಧುಮುಕಿ |ಮುಚ್ಚಿದ ಮಡಿಕೆಗಳ ನೋಡುತಲಿ 2 ರಾಗ ಪೀಠದಲಿ ಮೋಹದ ಹೆಗಲಲಿ |ನಿಲ್ಲಲು ನೆಲವು ನಿಲುಕುತಿರಲು ||ಯೋಗ ರುಕ್ಮ ಘಟಿಯನಾ ಛೇದಿಸಿ |ವಿರತಿ ಗೊಲ್ಲತಿಗತಿ ಕಾಡುತಲಿ 3
--------------
ರುಕ್ಮಾಂಗದರು
ಹರಿ ಗೋವಿಂದ ಮುಕುಂದ ಮನುವಂದ್ಯ ಮಾಧವ ಹರ ಅಜನುತ ಪರಮಾನಂದ ಪ ದೇವ ಗಿರಿಧರ ಸುರನರ ಮುರಹರ ಪರತರ ಶರಧಿಜಾ ವರ ನರಹರಿ ಕೇಶವ ಸ್ಮರಿಪರ ಸುರತರು ಪರಮಪ್ರಕಾಶನೆ ಪುರಹರವರಸುಖ ಸುರೇಶ 1 ಈಶ ಮುನಿಕುಲ ವಸುಕಾಲ ತನುಶೀಲ ವನಮಾಲ ಜನಕಜೆಪತಿ ಭಕ್ತರಾನಂದ ವನಜಾಕ್ಷ ದಿನಕರ ಘನಪ್ರಭೆತನುಶೋಭ ವಿನಮಿತ ಸನಕಾದಿಸಾನಂದ 2 ಜಗದೀಶ ಅಘಪೋಷ ಮೃಗನಾಶ ಲಕುಮೀಶ ಖಗಗಮನ ದಶಶತನಾಮ ಬಗೆಬಗೆ ಪೊಗಳುವ ನಿಗಮ ಆಗಮನುತ ಶ್ರೀರಾಮ 3
--------------
ರಾಮದಾಸರು
ಹರಿ ಗೋವಿಂದ ವಿಠಲ | ಪೊರೆಯ ಬೇಕಿವಳಾ ಪ ನಿರುತ ಹರಿ ಗುರುದಾಸ್ಯ | ಅರ್ಥಿಸುತ್ತಿಹಳಾ ಅ.ಪ. ಸುಪ್ತೀಶತೋರ್ದಪರಿ | ಪ್ರಾಪ್ತಿ ಪ್ರಾಣನ ವಶವುಕ್ಲಪ್ತವಾಯ್ತಿವಳೀಗೆ | ಮುಕ್ತಿ ಸಾಧನಕೆ |ಎತ್ತ ನೋಡಿದರತ್ತ | ಆಪ್ತಮುಖ್ಯ ಪ್ರಾಣಪೊತ್ತಿಹನು ಸರ್ವತ್ರ | ವ್ಯಾಪ್ತಿ ಮೂರುತಿಯೇ 1 ಭವ ಹಾರೀ 2 ಭುವನ ಪಾವನ ನಿನ್ನ | ಸ್ತವನ ವೈಭವ ಕೇಳೆಸರ್ವದಾ ಸರ್ವತ್ರ | ಶ್ರವಣ ಸುಖದಲ್ಲೀನಿರ್ವಿಕಾರದ ತಿರಗಲೀಕೆಯ ಮನಸುಸರ್ವಾಂತರಾತ್ಮಕನೆ | ಸಾರ್ವಭೌಮ 3 ತಾಪ ಭಯಅಧ್ಯಕ್ಷ ಶ್ರೀಹರಿಯೆ ನೀನಾಗಿ ಕಳೆದೂ |ಮಧ್ವಾಂತರಾತ್ಮಕನ | ಹೃದ್ಗುಹದಿ ತೋರೆಂದುಬುದ್ಧಿ ಪೂರ್ವಕ ಬೇಡ್ವೆ | ಪದ್ಮನಾಭಾ 4 ಸಾಧನದ ಜೀವಿಗಳ | ಸಾಧನದ ಪ್ರತಿಭಂಧಸಾದರದಿ ವಾರಿಸುತ | ಮೋದಮನ ನೀಯೋ |ಮೋದಮುನಿ ವಂದ್ಯ ಗುರು | ಗೋವಿಂದ ವಿಠಲನೆನೀದಯದಿ ಪೊರೆ ಇವಳ | ಪ್ರಹ್ಲಾದ ವರದಾ 5
--------------
ಗುರುಗೋವಿಂದವಿಠಲರು
ಹರಿ ದಯಮಾಡೊ ಕರುಣದಿ ನೋಡೊ ತರಳನ್ನ ಮನ್ನಿಸಿ ಅಭಯವ ನೀಡೊ ಪ ನೆರೆನಂಬಿ ನಿನ್ನ ಮರೆಹೊಕ್ಕೆ ಕರುಣಾ ಭರಣನೆ ನಿಮ್ಮಯ ತೆರೆ ಕೃಪಾನಯನ1 ಹೆಜ್ಜೆ ಹೆಜ್ಜೆಗೆ ಘೋರ ಸಜ್ಜಿಲ್ಲ ಸಂಸಾರ ಸಜ್ಜನಸಂಪದನೆ ನಿರ್ಜರೇಶನೆ ಬಾರೊ2 ಮಾಯಾಮೋಹವ ಬಿಡಿಸಿ ಕಾಯೊ ಶ್ರೀರಾಮ 3
--------------
ರಾಮದಾಸರು
ಹರಿ ನಂಬಿದವರಿಗೆ ಸರಿಯೆ ಜಗದೊಳು ಹರಿದಾಸಾದವಗೆ ಸಕಲ ಮಾನ್ಯವಗೆ ಧ್ರುವ ಹರಿ ಜ್ಞಾನವುಳ್ಳವಗೆ ದಣಿವಿಕೆಲ್ಲಿಹದವಗೆ ಹರಿಧ್ಯಾನ ಉಳ್ಳವಗೆ ತಾಂ ದುರಿತವೆಲ್ಲಿಹದವಗೆ 1 ಹರಿನಾಮ ಉಳ್ಳವಿಗೆ ನಾಸ್ತಿಕವೆಲ್ಲಿಹದವಗೆ ಹರಿ ದಯುಳ್ಳವಗೆ ದನ್ಯವೆಲ್ಲಿಹದವಗೆ 2 ಹರಿಯ ಭಾವಿಕರಿಗೆ ಭವವುಂಟೆ ಅವಗೆ ಹರಿ ಭಕ್ತಿಯುಳ್ಳವಗೆ ತಾ ಭಯ ವೆಲ್ಲಿಹದವಗೆ 3 ಹರಿದಾಸರದಾಸಾದ ಮಹಿಪತಿಗೆ ಸರಿಯುಂಟೆ ಪೂರ್ವಪುಣ್ಯದ ಫಲಶ್ರುತಿಗೆ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿ ನಾರಾಯಣ ಹರಿ ನಾರಾಯಣ ನಾಮಂ ಜಯ ಪ. ನಾರಾಯಣ ನಾರದಪ್ರಿಯ ನಾರಾಯಣ ನರಕಾಂತಕನಾರಾಯಣ ನಳಿನೋದರಾ ಅ.ಪ. [ಸುರಸಂಚಯ]ಸುಖಕಾರಣ ದಿತಿಜಾಂತಕ ದೀನಶರಣಮರುತಪ್ರಿಯ ಪಾಂಡವಪ್ರಿಯ ಪರಿಪೂರ್ಣ ಪರಮ ಜಯ1 ಅಘಕುಲವನದಾವಾನಳ ಅತಿಸದ್ಗುಣಗಣ ನಿರ್ಮಲತ್ರಿಗುಣಾತೀತ [ತ್ರಿದಶೇಶ್ವರ]ವಂದಿತ ಜಯ2 ಅತಿಮೋಹನಚರಿತ ನಮೊ ಅತಿಸದ್ಗುಣ ಭರಿತ ನಮೊಹತರಿಪುಪೂರ್ಣಂ ಜಯ ಗತಕಲ್ಮಷ ಹಯವದನ 3
--------------
ವಾದಿರಾಜ
ಹರಿ ನಿನ್ನ ದಾಸರ ಸೇವೆಯ ಕರುಣಿಸೆನಗೆ ಸುರಪತಿಯ ನಾನೊಲ್ಲೆನೈ ಪ ಸ್ಮರನ ಹಾವಳಿ ಬಿಡಿಸಿ ಗುರುಭಕ್ತಿಯನು ಕೊಟ್ಟು ನಿರುತವು ನಿನ್ನ ನಾ ಸ್ಮರಿಸುವಂದದಿ ಮಾಡು ಅ.ಪ ಎಷ್ಟು ಸ್ಥಿರ ಮಾಡಿದಾಗ್ಯು ಎನ್ನ ಮನ ಬಟ್ಟ ಕುಚೆಯರ ಬಲೆಗೆ ಸಿಲುಕುತಲಿ ಬಿಟ್ಟು ನಿನ್ನಯ ಧ್ಯಾನ ಕೆಟ್ಟುಪೋಗುತಲಿದೆ ದಿಟ್ಟ ನಿನ್ನ ಮಗನ ಬಲುಹಿನ್ನೆಷ್ಟೆಂದು ಪೇಳಲೊ 1 ಕುಸುಮಗಂಧಿಯರ ಓರೆನೋಟವೆಂಬ ಮಸೆದ ಕಣೆಯ ತಾನು ಪೂಡುತಲಿ ಎಸೆ ಮೋಹತಿಗೆ ನಾ ಸೈರಿಸಲಾರೆನೋ ಬಿಸಜನಾಭನೆ ನಿನ್ನ ಸುತಗೆ ಪೇಳೋ ಬುದ್ಧಿ 2 ಅಂಗನೆಯರ ಸವಿ ನುಡಿಗಳಿಗೆ ನಾ ಮರುಗಿ ಭೃಂಗದಂತವರ ಬಲೆಗೆ ಬೀಳದಂತೆ ಸಂಗ ಸುಜನರಲ್ಲಿ ಇತ್ತು ಕಾಯೊ ದೇವ ಅಂಗಜಪಿತ ಶ್ರೀ ರಂಗೇಶವಿಠಲನೇ 3
--------------
ರಂಗೇಶವಿಠಲದಾಸರು
ಹರಿ ನಿನ್ನ ನಾಮದ | ಸ್ಮರಣೆಯ ನಾನು || ನಿರುತವು ಮಾಡುವೆ | ಪೊರೆಯೆನ್ನ ನೀನು ಪ ಶರಣರ ಪೊರೆವ| ಪರಮ ಪಾವನನು | ಕರುಣಾಳು ನಿನ್ನಯ | ಶರಣನಾಗಿಹೆನುಅ.ಪ ಕರಿರಾಜಗಿತ್ತೆ ನೀ | ವರ ಮುಕ್ತಿಪಥವ || ತರಳನಿಗೊಲಿದಿತ್ತೆ | ವರಧ್ರುವಪದವ 1 ಹರಿಯನು ತೋರೆಂದು | ಗರ್ಜಿಸಿ ಜರೆದ|| ದುರುಳನ ಬಗಿಯುತ್ತ| ತರಳನಿಗೊಲಿದ 2 ಕಾಮಿತಾರ್ಥವನಿತ್ತೆ| ಪ್ರೇಮದೊಳನಿಶ 3 ಮರಣದ ಸಮಯದಿ | ಕರೆದಜಾಮಿಳಗೆ|| ಪರಮಪದವನಿತ್ತು | ಕರುಣದಿ ಪೊರೆದ 4 ಅರಿತಾದರು ಮನ| ಕ್ಕರಿಯದೆ ಗೈದ || ದುರಿತಂಗಳಿರೆ ಪರಿ| ಹರಿಸೆಂದು ಸತತ 5 ನೀನಲ್ಲದೆನ್ನನು | ಪೊರೆಯುವರಿಲ್ಲ || ನಿನ್ನ ಸೇವೆಯ ಮಾಡ | ಲರಿಯೆ ನಾನಲ್ಲ6 ಇಹಪರಸುಖವಿತ್ತು | ಮುಕ್ತಿಯನೀವ || ಮಹಿಮನೆಂದರಿತಿಹೆ | ಭಕ್ತಸಂಜೀವ 7
--------------
ವೆಂಕಟ್‍ರಾವ್
ಹರಿ ನಿನ್ನ ಭಕುತಿಗುನ್ಮತ ಬಿಡಬೇಕು ಗುರು ಹೇಳುವ ಮಾತು ಕೈಗೂಡಬೇಕು ಧ್ರುವ ಕಾಮೋನ್ಮತ್ತಗೆಲ್ಲಿಹದೊ ನಿಜಭಕ್ತಿ ನೇಮ ಉಂಟೆ ಪರಾಮರಿಸುವ ಶಕ್ತಿ ಕೋಮಲತಿಯರ ಕಂಡು ಕಳವಳಾದ್ಯುಕ್ತಿ ಪಾಮರಗಳಿಗೆಲ್ಲಿಹ್ಯದೊ ವಿರಕ್ತಿ 1 ಧನೋನ್ಮತ್ತಗೆಲ್ಲಿಹುದೊ ನಿಜಧ್ಯಾನ ಕಾಣನೆಂದಿಗೆ ಕಣ್ದೆರದು ತಾ ಖೂನ ಹೆಣ್ಣು ಹೊನ್ನಿನ ಮ್ಯಾಲೆ ಇಟ್ಟಿಹ ಜೀವ ಪ್ರಾಣ ಹೀನ ಮನುಜರಿಗೆಲ್ಲಿಹುದೊ ಸುಜ್ಞಾನ 2 ಉನ್ಮತ ಹೋದರೆ ಸನ್ಮತದಿಂದ ತನ್ಯಯಾಗುವರು ಸದ್ಘನ ಕೃಪೆಯಿಂದ ಉನ್ಮನಾಗುವಂತೆ ನೋಡೋ ಮುಕುಂದ ಚಿಣ್ಣ ಮಹಿಪತಿಗೆ ಸದ್ಬೋಧ ಆನಂದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹರಿ ನಿನ್ನ ರೋಮ ಕೂಪದಲಿ ಜೀವಿಪಸರಸಿಜ ಭವಾಂಡ ಕೋಟಿಯಲಿ ಪ ತುರುಗಿಪ್ಪ ಬ್ರಹ್ಮರುದ್ರಾದಿ ಜೀವರುಗಳುಹರಿ ನಿನ್ನ ಮಹಿಮೆಯ ಪೇರ್ಮೆಯ ಬಲ್ಲರೆ ಅ.ಪ. ಅತ್ತಿಯ ಮರದಿಂದುದುರುವ ಫಲಂಗಳಮೊತ್ತದಲಿರುತಿಪ್ಪ ಮಶಕಂಗಳುಕತ್ತೆಯ ಬಳಗಗಳೆಲ್ಲವು ಕೂಡಿಕೊಂಡುಅತ್ತಿಯ ತರುವಿನಾದ್ಯಂತವ ಬಲ್ಲವÉ 1 ಐವತ್ತು ಕೋಟಿ ಯೋಜನ ವಿಸ್ತರವಾದಭೂವಲಯದ ತಮ್ಮ ಗೂಡಿನಲಿಆವಾಸವಾಗಿಪ್ಪ ಕ್ಷುದ್ರ ಪಿಪೀಲಿಕಜೀವರು ಧರಣಿಯ ಮೇರೆಯ ಬಲ್ಲರೆ 2 ನೊರಜು ಮೊದಲಾಗಿ ಗರುಡ ಪರಿಯಂತಪರಿಪರಿ ಜಾತಿಯ ಪಕ್ಷಿಗಳು ತೆರದಲಿ ಹಾರುವರಲ್ಲದೆ ಗಗನದ ಪರಿಣಾಮವೆಂತೆಂದು ಬಲ್ಲವೆ ಶ್ರೀ ಕೃಷ್ಣ3
--------------
ವ್ಯಾಸರಾಯರು
ಹರಿ ನಿಮ್ಮ ಪದಕಮಲ ನಿರುತ ಧ್ಯಾನದಿ ಎನಗೆದೊರಕಿತೀ ಗುರುಸೇವೆ ಹರಿಯೆ ಪ ಮೂರ್ತಿ ನೀನಾಗಿಕರೆಯ ಸೇರಿಸಿದೆ ಶ್ರೀಹರಿಯೆಅ ಭವ ಬಂಧನವ ಬಿಡಿಸಿಹದನಕ್ಕೆ ನಿಲ್ಲಿಸಿದೆ ಹರಿಯೆ 1 ದೊರೆತನವ ಬಿಡಿಸಿ ಸುಸ್ಥಿರ ಮಾರ್ಗ ತೋರಿಸಿದೆನರಮಾತ್ರದವನೆನದೆ ಹರಿಯೆಗರುವದೊಳಗಿಹನೆಂದು ಅರಿತು ತವದಾಸರಿಗೆಇರದೆ ಅಡಿಯಾಗಿಸಿದೆ ಹರಿಯೆ 2 ಕನಕ ದಳದಲಿ ಬಂದು ಕಲೆತನೆಂದರೆ ಫೌಜುಕನುಕುಮನುಕಾಗುವುದು ಹರಿಯೆಮೊನೆಗಾರತನವೆಂಬ ಶನಿ ಬಿಡಿಸಿ ತವಪಾದವನಜವನು ಸೇರಿಸಿದೆ ಹರಿಯೆ 3 ಮನದೊಳಗೆ ಎರಡಿಲ್ಲ ಮದದಾನೆ ಮೇಲ್ಕಡಿವಮನವ ಹಿಮ್ಮೆಟ್ಟಿಸಿದೆ ಹರಿಯೆಘನವು ತಾಮಸಾಹಂಕಾರ ದುರ್ಮತಿ ದುರಿತಕನಜವನು ಕಿತ್ತೆಸೆದೆ ಹರಿಯೆ4 ಮದರೂಪು ಬಿಡಿಸಿ ಸನ್ಮುದ ರೂಪು ಧರಿಸೆಂದುಹೃದಯದೊಳು ನೀ ನಿಂತೆ ಹರಿಯೆಇದು ರಹಸ್ಯವು ಎಂದು ಹಿತವ ಬೋಧಿಸಿ ಎನಗೆಬದುಕಿಸಿದೆ ಬದುಕಿದೆನು ಹರಿಯೆ5 ದುರದಲ್ಲಿ ನಾಲ್ಕು ದಿಕ್ಕಲಿ ಹೊಕ್ಕು ಹೊಳೆವಂಥಬಿರುದು ಬಿಂಕವ ಕಳೆದೆ ಹರಿಯೆಪರಬಲವ ಕಂಡರೆ ಉರಿದು ಬೆಂಕಿಯಹ ಮನವಸೆರೆ ಹಾಕಿ ನಿಲ್ಲಿಸಿದೆ ಹರಿಯೆ6 ಪರಮ ಮೂರ್ಖನು ನಾನು ವರ ವೀರ ವೈಷ್ಣವರಚರಣವನು ಸೇರಿಸಿದೆ ಹರಿಯೆಕರೆ ಕಳಿಸಿ ಎನ್ನಲ್ಲಿ ಅಳವಿಲ್ಲದಿಹ ನಾಮಸ್ಮರಣೆ ಜಿಹ್ವೆಗೆ ಬರೆದೆ ಹರಿಯೆ 7 ಸ್ವಾರಿ ಹೊರಡಲು ಛತ್ರ ಭೇರಿ ನಿಸ್ಸಾಳಗಳುಭೋರೆಂಬ ಭೋಂಕಾಳೆ ಹರಿಯೆಧೀರ ರಾಹುತರಾಣ್ಯ ಭಾರಿ ಪರಿವಾರದಹಂ-ಕಾರ ಭಾರವ ತೊರೆದೆ ಹರಿಯೆ8 ಪಾದ ಹರಿಯೆಆರಿಗಂಜೆನು ನಾನು ಅಧಿಕಪುರಿ ಕಾಗಿನೆಲೆಸಿರಿಯಾದಿಕೇಶವ ದೊರೆಯೆ 9
--------------
ಕನಕದಾಸ
ಹರಿ ನಿಮ್ಮ ಮಹಿಮೆ ಅರಿಯರಾರಾರು ನರ ಮನುಜರ ಪಾಡೇ ಸುರಮುನಿಗಳೆ ನಿನ್ನರಸಿ ಕೊಂಡಾಡಲು ದೊರೆಯದಿರುವಿ ಘನ ಪರತರಮಹಿಮ ಪ ದುಷ್ಟರ ಶಿಕ್ಷಿಸಿ ಶಿಷ್ಟರ ಪೊರೆಯುತ ಸೃಷ್ಟಿಗೊಳಿಸುತಿರುವಿ ಇಷ್ಟಭಕುತರ ಕಷ್ಟ ನಿವಾರಿಸಿ ಇಷ್ಟಪೂರೈಸುತಿರುವಿ ನಿಷ್ಠೆಯಿಂದ ಮನಮುಟ್ಟಿಭಜಿಪರನು ಬಿಟ್ಟಗಲದೆ ದೃಷ್ಟಿಯಿಂ ನೋಡುವಿ 1 ಲಾಷೆಯ ನೀಡುತಲಿ ಘಾಸಿ ಮಾಡದೆ ದೋಷರಾಶಿಯ ಕಳೆಯುತಲಿ ಪೋಷಿಸಿ ತ್ರಿಜಗದೀಶನೆ ಈ ಭವ ಪಾದವ ಖಂಡಿಸಿ ವಾಸುಕಿಶಯನ 2 ಮನಸಿಜಾರಿಯಂ ಘನಸಂಕಟದಿಂದ ಕನಿಕರದಿಂ ಕಾಯ್ದಿ ದನುಜಕುಲವನು ಹಣಿದು ಸುರರಿಗೆ ಘನಸೌಖ್ಯವನ್ನಿತ್ತಿ ತನುಮನ ಧನದಿಂ ನೆನೆಯುವ ಭಕುತರ ನೆನವಿಗೆ ಸಿಲುಕದಿ ಚಿನುಮಯ ರಾಮ 3
--------------
ರಾಮದಾಸರು
ಹರಿ ನೀ ನೋಡದಿರೆ ಬಾಳಬಹುದೆ ಪ ಸರುವ ಮೂಲನೆ ದೇವ ಪರಮಪಾವನ ಮಹಿಮ ಅ.ಪ. ಜ್ಞಾನಮಯ ವಿಜ್ಞಾನ ಮಾನಿಗಳ ಹೆದ್ದೈವ ದಿವಿಜ ಪ್ರಾಣಾಧಾರಿ ದೀನ ಬಾಂಧವ ಹೃದಯ ವನಜ ಮಂದಿರ ಪೂರ್ಣಾ ನಿನೊಹಿಸಿ ಮದ್ಧರ್ಮ ಕಾಣಿಸೊ ಕರುಣಾಬ್ಧಿ 1 ಘೋರ ಕಲಿಮಲ ವ್ಯಾಪ್ತಿ ಮೀರಿಹುದು ಸಜ್ಜನರ ಶ್ರೀರಮಣ ಶ್ರುತಿಧರ್ಮ ಜಗವೆಲ್ಲಿದೆಯಯ್ಯ ಭಾರಕರ್ತನೆ ನಿನ್ನ ಆರಾಧಿಸದೆ ಜನರು ಸ್ವಾರಾಧ್ಯರಾಗಿಹರು ಗತಿಯೇನೊ ಸುಜನಕೆ 2 ಕಾಲ ಸರ್ವಾತ್ಮ ಮರುದಾತ್ಮ ಜಯೇಶವಿಠಲ ಗಮನ ಗೀರ್ವಾಣ ಮುನಿ ವಂದ್ಯ ಶೌರಿ ರುಜುಮನವ ಕೊಡೆನಗೆ 3
--------------
ಜಯೇಶವಿಠಲ
ಹರಿ ನೀನೆವೆ ಸರ್ವ ಚೇತನ ಧೃತಿಯ ಸಕಲವೇ | ಧರಿಯೊಳು ನಾನೆಂಬುವ ಗುಣವೇ ವರಶೃತಿ ನೇಹನಾ ನಾಸ್ತಿಯಂದು | ಸಾರುವದಿದಕನು ಮಾನವೇ ಪ ಬಯಲೊಳು ಪುಟ್ಟದ ಪರಿಪರಿನಾದದ | ಹೊಯಿಲಿನ ಮಂಜುಳ ಶಬ್ದವಾ | ಬಯಲದಿ ಕೇಳಿತಲ್ಲಿನವ ಹೊಂದುವಾ | ಬಯಲಾಧಾರ ನೀನಲ್ಲವೇ 1 ಸೃಷ್ಟಿಯೊಳಗ ಕಮನೀಯ ಲಾವಣ್ಯದು | ತ್ಕøಷ್ಟತರ ಮೋಹನ ರೂಪವಾ | ದೃಷ್ಟಿಲಿ ಕಾಣುತ ಸುಖದೋಳಗಾಗುವ | ದೃಷ್ಟಸ್ವ ತೇಜ ನೀನಲ್ಲವೆ 2 ಕಮಲ ಪಾರಿಜಾತ ಮಲ್ಲಿಗೆ ಮಕ | ರಂಗದೊಳಗ ಸುಳಿದಾಡುತ | ಮಂದ ಮಾರುತ ಬಂದು ಸೋಕಲು ನಲಿವಾ | ಸುಂದರ ರೂಪನು ನೀನಲ್ಲವೆ 3 ರಸಭರಿತ ಬೇರೆ ಬೇರೆ ದೋರುತಲಿಹಾ | ಅಸಮತೆರೆದ ಪದರ್ಥವನು | ರಸನಾದಿ ಕೊಂಡು ಸವಿಗೆ ತಲೆದೂಗುವಾ | ಕುಶಲ ಭೋಕ್ತನುನೀನಲ್ಲವೇ 4 ಚೆನ್ನಾಗಿ ಕಸ್ತೂರಿ ಪುಳಕವ ಕೂಡಿಸಿ | ಪನ್ನೀರವನು ಮೇಲೆದಳಿದು | ಉನ್ನತ ಚಂದನ ಲೇಪಿಸೆ ಸುವಾ | ಸನೆ ಕೊಂಬುವ ನೀನಲ್ಲವೇ 5 ಅಷ್ಟದಳ ಕಮಲದಳ ಗದ್ದುಗಿಯೊಳು ನಿಂದು | ಅಷ್ಟಮ ಸ್ಥಳಗಳ ಮುಟ್ಟಿಸಿ | ನೆಟ್ಟಿನೆ ಮುಖದೊಳು ಸವಿಸವಿ ಮಾತವ | ಸ್ಪಷ್ಟದಿ ನುಡಿಪ ನೀನಲ್ಲವೇ 6 ಭಜಕನ ಮಾಡಿ ಸೌಮ್ಯತನದಿ ಕರದಿಂದ | ರಜತಮ ವಿರಹಿತ ದಾನವನಾ | ದ್ವಿಜರಿಗೆ ಕುಡಿಸಿ ಅದರಶ್ರಯ ಕೊಂಬುವ | ನಿಜಶಯ ಕರ್ತನು ನೀನಲ್ಲವೇ 7 ಪವನಭ್ರವ ನಡೆಸುವಪರಿಚರಣದಿ | ಜವದಿ ಸುಕೇತ್ರ ಯಾತ್ರೆಯಾ | ಬವರದಿ ಮಾಡಿ ಪುಣ್ಯ ಅರ್ಪಿಸಿ ಕೊಂಬಾ | ಭುವನ ಪಾವನ ನೀನಲ್ಲವೇ 8 ರಸನುಂಡು ಕಬ್ಬ ಹಿಪ್ಪಿಯುಗುಳುವಂತೆ | ಅಸಮತೆ ರಚಿಸಿ ಸರ್ವಾಂಗರ | ರಸವಿತ್ತು ಮಲವಘ ಮುಖದಿಂದ ಪವನದಿ | ಬಿಡಸುವನು ನೀನಲ್ಲವೇ 9 ಅಂಗನೆಯರ ಧೃಡಾಲಿಂಗನವನು ಮನ| ದಿಂಗಿತದಂದದಿ ಗೈಯ್ಯಲು | ಅಂಗಸಂಗದ ಲೋದಗುವ ಭೋಗಿಪ | ಅಂಗಜ ಜನಕ ನೀನಲ್ಲವೇ 10 ಯಂತ್ರವಾಹಕ ನಂದದಿ ಜಗನಿರ್ಮಿಸಿ | ಚಿತ್ರ ವಿಚಿತ್ರವ ದೋರುವಾ | ಅಂತ್ರ ಬಾಹ್ಯವ್ಯಾಪಕ ಮಹಿಪತಿ ಸುತ ಪ್ರಭು | ಸೂತ್ರಧಾರಿ ನೀನಲ್ಲವೆ 11
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಹರಿ ಪರದೈವ ಚತುರ್ದಶ ಲೋಕಕೆ | ಉರಗನ ಮುಂಡಿಕೆ ತುಳುಕಿ ಪೇಳುವೆ ನಾನು ಪ ಮುನಿಗಳೆಲ್ಲ ನೆರೆದು ಸದ್ವರವ ಮಾಡುತಲಿ | ಮನ ಬಂದ ಹಾಗೆ ಅರ್ಪಿಸುತಿರಲು | ಮುನಿ ನಾರದನು ಕೇಳೆ ಭೃಗು ಮುನಿಯನು ಕಳುಹಿ | ವನಜನಾಭನೆ ದೈವವೆಂದು ನಿರ್ಣೈಸಿದರು1 ದುರ್ವಾಸ ಮುನಿಪಗೆ ಚಕ್ರ ಎಡೆಗೊಂಡಿರಲು | ಅಜ ಗಿರೀಶಾ || ಗೀರ್ವಾಣರಾದ್ಯರು ಪರಿಹರಿಲಾರದಿರೆ | ಸರ್ವೋತ್ತಮನೆ ಒಬ್ಬ ಹರಿಯೆಂದು ಸಾರಿದರು 2 ಕರಿ ಬಾಧೆಯನು ಬಡುತಲಿ | ಕಾವವಾತನೆ ದೈವ ಎಂದು ಕೂಗೆ || ನಾವು ತಾವು ಎಂದು ಎಲ್ಲರು ಸುಮ್ಮನಿರೆ | ತಾವ ಕಾಕ್ಷನೆ ಕಾಯ್ದಾ ಪರದೇವತೆ ಎಂದು 3 ಹÀಯಮುಖನು ವೇದಗಳು ಕದ್ದೌಯೆ ಸಕಲರು | ಭಯಬಿದ್ದು ನಿತ್ರಾಣರಾಗಿರಲು || ಜಯದೇವಿ ರಮಣನು ವೇದವನು ತಂದು ಜಗ | ತ್ರಯಕೆ ಒಡೆಯನೆನೆಸಿಕೊಂಡ ಪರನೆಂದು 4 ಮೊದಲು ನಿರ್ಣಯವಾಗಿ ಇರಲಿಕ್ಕೆ ಮಂದಮತಿ | ಮದಡ ಮನುಜರೆಲ್ಲ ನೆಲೆಗಾಣದೆ || ಮದನ ಪಿತ ವಿಜಯವಿಠ್ಠಲನ ಒಲಿಸಿಕೊಳ್ಳದೆ | ಮದ ಗರ್ವದಲಿ ನುಡಿದು ನರಕದಲ್ಲಿ ಬೀಳುವರೂ5
--------------
ವಿಜಯದಾಸ