ಒಟ್ಟು 39871 ಕಡೆಗಳಲ್ಲಿ , 136 ದಾಸರು , 11580 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರವಮುಗಿವೇ ಕಮಲನಯನಕರುಣದಿಂದಲಿ ಪಾಲಿಸೊಕರಿವರದ ಶ್ರೀ ಕಮಲನಾಭಕರೆದು ಎನ್ನನು ಮನ್ನಿಸೊ 1ಸ್ಮರಿಸಲರಿಯೇ ಸಿರಿಯ ರಮಣಪರಮಪಾವನ ಪಾದವಾಸ್ಮರನಜನಕಶರಧಿಶಯನಇರಿಸು ಎನ್ನೊಳು ಮೋಹವಾ 2ಬಂಧು ಬಳಗ ಭಾಗ್ಯ ಭೋಗ್ಯ-ದಿಂದ ಸುಖವ ಕಾಣೆನೇದಂದಶೋಕ ಶಮನನೇ ಗೊೀವಿಂದದಾಸನ ಪ್ರಾಣನೇ 3
--------------
ಗೋವಿಂದದಾಸ
ಕರವೊಡ್ಡಿ ಬೇಡುವೆನು ಕಮಲದಳನೇತ್ರಕರುಣದಲಿ ಸಲಹೆನ್ನ ಕಾಮಹರ ಮಿತ್ರ ಪಕಾಯದಲಿ ಬಲವಿಲ್ಲ ಕಂಗಳಿಗೆ ಸುಖವಿಲ್ಲಕೈಯ್ಯೊಳಗೆ ಹಣವಿಲ್ಲ ಬಾಯಬಲವಿಲ್ಲಕಾಯವಿದು ನೀನಿಟ್ಟ ಮಾಯಪಾಶಕೆ ಸಿಕ್ಕಿಹೇಯವಾದುದು ಸಲಹೋ ಹೇ ಲಕ್ಷ್ಮೀರಮಣ 1ಕಾಲನಾಳುಗಳೆಮ್ಮ ಕಾಲಕೈಗಳಕಟ್ಟಿಕಾಲದಂಡದಿ ಬಡಿದು ಕಾಲನೆಡೆಗೈದೂಕಾಲಮೇಘದ ತೆರದಿ ಕಾಲನಂತೆ ಘರ್ಜಿಸುವಕಾಲದಲಿ ಕಾಯ್ವವರ ಕಾಣೆ ನಾಳಿನಲೀ 2ಕರಿರಾಜನನು ಕಾಯ್ದೆ ಕಂಬದಲಿ ಮೈತೋರ್ದೆಖರ ದೂಷಣ ನಿನ್ನ ಕರದಿ ಶಿರ ವರಿದೀಕರುಣದಿಂದಲಿ ದ್ರೌಪದಿಯ ಸೆರಗಿಗಕ್ಷಯವಿತ್ತೆಕರವಿಡಿದು ಸಲಹೆನ್ನ ಕಲುಶ ಸಂಹಾರಾ 3ಕಂದನಪರಾಧವನು ತಂದೆ ಕ್ಷಮಿಸುವ ತೆರದಿಕಂದುಕುಂದುಗಳೆನ್ನೊಳಿರಲು ನೀ ಕ್ಷಮಿಸಿಕಂದನಂದದಿ ನೋಡಿಕಂದರ್ಪಜನಕನೆಚಂದದಲಿ ಸಲಹೊ ಗೋವಿಂದದಾಸನನೂ 4
--------------
ಗೋವಿಂದದಾಸ
ಕರುಣಾಕರ ನಿನ್ನ | ಕರವೊಡ್ಡಿ ಬೇಡುವೆ ||ಕರುಣಿಸು ವರವನ್ನು | ಖರ ಸಂಹಾರ 1ಕರಿರಾಜನು ನಿನ್ನ | ಕರಗುತ ಭಜಿಸಲು ||ಖಗವಾಹನನಾಗಿ | ಕರುಣದೀ ಪೊರೆದೆ 2ಕಡುದಾರಿದ್ರನು | ಕಷ್ಟದಿ ಸ್ಮರಿಸಲು ||ಕರುಣದಿ ಸುಧಾಮಗೆ | ಕರೆದಿತ್ತೆ ವರವ 3ಕಾಲನ ದೂತರು | ಕಾಡುವ ವೇಳ್ಯದಿ ||ಕಂದನ ಕರೆಯೆಗೋ | ವಿಂದನೆ ಪೊರದೇ 4
--------------
ಗೋವಿಂದದಾಸ
ಕರುಣಾಕರ ನೀನೆಂಬುವುದೆತಕೊ |ಭರವಸೆ ಇಲ್ಲೆನಗೆ ಪಕರಿಧ್ರುವಬಲಿಪಾಂಚಾಲಿ ಅಹಲ್ಯೆಯ |ಪೊರೆದವ ಭವದಲಿ ನೀನಂತೆ ||ಅರಿತು ವಿಚಾರಿಸಿ ನೋಡಲಿದೆಲ್ಲವು |ಪರಿಪರಿ ಕಂತೆಗಳಂತಿದೆ ಕೃಷ್ಣ 1ಕರುಣಾಕರ ನೀನಾದರೆ ಈಗಲೆ |ಕರಪಿಡಿದೆನ್ನನು ನೀ ಕಾಯೊ ||ಸರಸಿಜಾಕ್ಷನೇ ಅರಸು ನೀನಾದರೆ |ದುರಿತಗಳೆನ್ನನು ಪೀಡಿಪುದುಂಟೆ 2ಮರಣ ಕಾಲದಲಿ ಅಜಮಿಳಗೊಲಿದೆಯೊ |ಗರುಡಧ್ವಜನೆಂಬ ಬಿರುದಿನಿಂದ ||ವರಬಿರುದುಗಳ್ನಿನಗುಳಿಯಬೇಕಾದರೆ |ತ್ವರಿತದಿ ಕಾಯೋ ಪುರಂದರವಿಠಲ 5
--------------
ಪುರಂದರದಾಸರು
ಕರುಣಾದಿ ಪೊರಿ ಎನ್ನ ಗುರುವೇ ಪಶರಣು ಪೊಕ್ಕೆನೊಚರಣಕಮಲಕೆಕರುಣಿಸೆನ್ನನು ಕರುಣಸಾಗರ ಅ.ಪತಾಪತ್ರಯದಿ ಬಹುಬೆಂದೇಭವ-ಪಾಪಮೋಚಕ ನಿಷ್ಪಾಪಿ - ಜನರ ಪಾಲಕಾಪಾಡೊ ನೀ ಎನ್ನಅಪಾರಮಹಿಮನೆದ್ವಾಪರದಿ ಯದುವರನು ಸಾಂ -ಭೂಪ ಬಕನಳಿದು ಸಲಹಿದ -ನಾಪರಿಯಲಿ ಎನ್ನಸಲಹೋ 1ಕಾಮಿತ - ಫಲದ ನೀನೆಂದೂ ಬಲು -ಸ್ವಾಮಿ ನೀ ಗುರುಸಾರ್ವಭೌಮ ನಿನ್ನಂಘ್ರಿಯುಗ -ತಾಮರಸವ ಮನೋ - ಧಾಮಾದಿ ನಿಲಿಸೆಂದೆಆಮಹದ್ಭಯ ಕಳದ ತೆರದಿ 2ತಾತನಿನ್ನನು ಬಾಧೆ ಬಡಿಸೇ ಶಿರಿ-ದಾತಗುರುಜಗನ್ನಾಥ ವಿಠಲನತಿಮಾತು ಲಾಲಿಸಿ ಕಾಯೋ ಯತಿಕುಲ -ಭೀತಿಯನು ಸದೆದು ಪಾಲಿಸ -ನಾಥರಕ್ಷಕನಲ್ಲೆ ಗುರುವರ 3
--------------
ಗುರುಜಗನ್ನಾಥದಾಸರು
ಕರುಣಾಂಬುಧಿ ಪಾಲಿಸೊಶರಣಾಗತರರಸ ಮುರಾರಿ ಪ.ಹಿಂದೆ ಕ್ಲೇಶವನುಂಡು ಬಳಲಿ ನಾ ನೊಂದೆಮುಂದೆ ಕತ್ತಲೆ ಕವಿದಿದ್ಯಲ್ಲೊ ತಂದೆ 1ಒಡೆಯನಿದ್ದೊಡಲಿನ ಚಿಂತೆ ಎನಗ್ಯಾಕೆಪಡಿಯಾಸೆಲಿನ್ನೊಬ್ಬರೊಲಿಸಲ್ಯಾಕೆ 2ಜನಕಜನನಿಆಪ್ತಧನ ಧಾನ್ಯ ನೀನೆಅನುಮಾನ ಬಿಡಿಸುವ ಅನುಕೂಲದವನೆ 3ಪೋಕರ ಮುಂದೆÀಡಹಿದರಾರಕುಂದುಜೋಕೆ ಬಿರುದುದಾತಆನತ ಬಂಧು4ನಾಭಿಸುರಭಿಕಾಣದರಸುವ ಮೃಗದಂಥಈ ಭ್ರಾಂತಿ ಕಳೆಯೊ ಪ್ರಸನ್ವೆಂಕಟೇಶ 5
--------------
ಪ್ರಸನ್ನವೆಂಕಟದಾಸರು
ಕರುಣಾಸಾಗರನ ನೋಡಿರೈ ಪತರುಣಾಕರ್Àನಿಭ ಸುಪರಣವಾಹನಗುಣ-ವರಣನ ಮಾಡುವ ಕರ್ಣಹೀನಾಂಶನ ಅ.ಪನಾನಾವಿಧದ ಫಲ ದಾನಮಾಡುವ ಸುರ -ಧೇನುನಿನಗೆ ಸೋತು ಪೋಯಿತಯ್ಯಾಮಾನನಿಧಿಯೆ ಎನ್ನ ನೀನೆ ಕಾ -ನಾನಯ್ಯ ಇದಕೇನುಪಾಯಾದೀನ- ಜನ-ಮಂದಾರ- ಶಾಶ್ವತದಾನಿ ನಿನಪದಧ್ಯಾನ ಮಾಡಿಸೋ 1ಸೇವಕ - ಜನರನ್ನ ಕಾವೋನೀತನು ಎಂಬೊನೀನಿರಲುನಿತ್ಯಆವ ಭಯ ಎನಗೇನು ಇಲ್ಲಾಈ ವಿಧದಿ ಮಹಿಮವ ತೋರಿ ಮೆರೆವ 2ಪಾತಕವನಕುಲ - ವೀತಿಹೋತ್ರನು ಎನಿಸೀದಾತಗುರುಜಗನ್ನಾಥ ವಿಠಲಗತಿಜಾತರೂಪಸುಶಯ್ಯತನಯದೂತನಾದವಗೇನು ಭಯ ನಿ -ರ್ಭೀತನಾಗಿದ್ದೆಲ್ಲ ಕಾರ್ಯವ -ನೀತೆರದಿ ತಾ ಮಾಡುತಿರುವಾ 3
--------------
ಗುರುಜಗನ್ನಾಥದಾಸರು
ಕರುಣಿ ಖಗವರೂಥ ಪಗತರೋಗಜರಾಮರಣಾ 1ಚನಗಿರಿವಾಸ ಎನ್ನಾ 2ಅನ್ನಿಗ ನಾನಲ್ಲ ಶ್ರೀಗುರು ಜ -ಗನ್ನಾಥ ವಿಠಲಾ 3
--------------
ಗುರುಜಗನ್ನಾಥದಾಸರು
ಕರುಣಿಸಬಾರದೆ ಕಂಜನಾಭನೆ ಕೈಯ ಮುಗಿವೆನಯ್ಯಾ ಪ.ವರಫಣಿಗಿರಿ ಸುಸ್ಥಿರಮಂದಿರ ಶ್ರೀಗುರುಜನಾರ್ದನಾಮರಗಣ ಪಾಲಕಅ.ಪ.ಅಪರಾಧಗಳಾಲೋಚಿಸುವರೆ ಸರೀ-ಸೃಪರಾಜನಿಗಳವೆಕೃಪೆಯಿಂದಲಿ ಸಂರಕ್ಷಿಸದಿದ್ದರೀ-ಯಪಕೀರ್ತಿಯು ಶ್ರೀಹರಿ ನಿನಗಲ್ಲವೆ 1ಕನಕಪುರಂದರಮುಖ್ಯ ದಾಸರಂತೆಗುಣವೆನಗಿನಿತಿಲ್ಲಜನರ ವಿಡಂಬನಕೆ ದಾಸನಾದರೂಘನಕೃಪಾರ್ಣವನೆ ಕನಕಾಂಬರಧರ2ಲಕ್ಷ ಮಾತ್ಯಾತಕೆ ಲಕ್ಷ್ಮೀನಾರಾಯಣರಕ್ಷಾಮಣಿ ನೀನೆಪಕ್ಷೀಂದ್ರವಾಹನ ಪಾಪವಿಮೋಚನತ್ರ್ಯಕ್ಷಮಿತ್ರನೆನ್ನಕ್ಷಿಗೋಚರನಾಗಿ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಕರುಣಿಸಿ ಕೇಳು ಕಂದನ ಮಾತನುಗರುಡವಾಹನಗಂಗಾಜನಕಶ್ರೀಹರಿಯೇಪಇತ್ತ ಬಾ ಎಂಬರಿಲ್ಲ ಇರವ ಕೇಳುವರಿಲ್ಲಹತ್ತಿರ ಕುಳ್ಳಿರಿಸಿ ಆದರಿಪರಿಲ್ಲ ||ತತ್ತರ ಪಡುತಿಹೆ ತಾವರೆಲೆಯ ನೀರಂತೆಹತ್ತು ನೂರು ನಾಮವ ಪೊತ್ತ ಶ್ರೀ ಹರಿಯೇ 1ಇಂದಿಗಶನವಿಲ್ಲ ನಿಂದಿರೆ ನೆರಳಿಲ್ಲಒಂದೆ ಸುತ್ತಿಗೆ ತುಂಡು ಅರಿವೆಯಿಲ್ಲ ||ಬೆಂದೊಡಲಿಗೆ ಒಬ್ಬರಯ್ಯೋ ಎಂಬುವರಿಲ್ಲಬಿಂದು ಮಾತ್ರದ ಸುಖಕಾಣಿನಾ ಹರಿಯೇ2ಎಲ್ಲಿದ್ದರೆನಗೊಂದು ನೆಲೆಯಿಲ್ಲ ಶ್ರೀಹರಿಅಲ್ಲ ತಿಂದಿಲಿಯಂತೆ ಬಳಲುವೆನೊ ||ಘುಲ್ಲಲೋಚನ ಪೂರ್ಣ ದಯದಿ ಸಲಹೊ ಎನ್ನಸಲ್ಲದ ನಾಣ್ಯವ ಮಾಡುವರೆ ಹರಿಯೇ 3ನಖಶಿಖ ಪರ್ಯಂತ ನಾನಾ ಹಿಂಸೆಯ ಪಟ್ಟೆಸುಖವೆಂಬುದನು ಕಾಣೆ ಸ್ವಪ್ನದಲುಮುಖವರಿಯದ ರಾಜ್ಯಕ್ಕೆನ್ನನು ಎಳತಂದುಕಕಮಕ ಮಾಡುವುದುಚಿತವೆ ಹರಿಯೇ 4ಇಷ್ಟುದಿವಸ ನಿನ್ನನೆನೆಯದ ಕಾರಣಕಷ್ಟ ಪಟ್ಟೆನು ಸ್ವಾಮಿ ಕಾಯೊ ಎನ್ನ ||ಮುಟ್ಟಿ ಭಜಿಸಲಿಲ್ಲ ಮುರವೈರಿ ನೀ ದಯವಿಟ್ಟು ಸಲಹೊ ಶ್ರೀಪುರಂದರವಿಠಲ5
--------------
ಪುರಂದರದಾಸರು
ಕರುಣಿಸಿ ಬಾರೆಲೆ ತಾಯೆ ಮಾಧವನಾವ್ಯಾಕೃತನಕರೆತಾರೆ ನೀರೆ ಬೇಕಾದವಳನಿನಿತುವಿರಹವಾರಿಧಿಯಲ್ಲಿ ನೂಕಿ ಓಡಿರುವನಲ್ಲೆ ಸಲೆ ಪ.ಬಿಸಜಕುಟ್ಮಳಕುಚವಸೋಂಕಿಮುದದಿ ಪಿಡಿದುಶಶಿಮೊಗದಿ ಮೋಹವನಿಡುವ ನುಡಿವಎಸೆವ ಕೊನೆವಲ್ಲಲಳುಕಿಸಿ ಎನ್ನಅಧರಪೀಯೂಷವನೊಲಿದೊಲಿದು ಸವಿದಕೋವಿದಪೊಸಮದಕರಿಯ ಸೊಂಡಿಲ ತೋಳಲಮರ್ದಪ್ಪಿಮಿಸುನಿಪುತ್ಥಳಿಯ ತೆರದಿ ಮೆರೆದಅಸಿಯ ಮಾಣಿಕಳೆ ಕೇಳಸುರಹರನಾಳಿದನೀಅಸುತೊರೆವೆ ತಾನಪಕಾರೆ ನೀರೆ1ಎಂಟೆರೆಡು ಕಳೆದೋರಿ ಸವಿದೋರಿ ಸುಖಬೀರಿ ಸಲೆಕಂಠಮಾಲೆಯ ಕೊಟ್ಟನೆ ನೆಟ್ಟನೆಎಂಟೆರಡವಸ್ಥೆಗಳ ಮೇಳಿಗೆಯ ಕ್ಷಣಲವಕೆವೆಂಠಣಿಸಿ ಅಮೃತವೆರೆದ ನೆರೆದಕಂಟಕಿಯು ದಾವಳೊ ಹರಿಯನೊಯ್ದಳಕದಿಂಗಂಟಿಕ್ಕಿದಳೊ ಬಿಡದೆ ಮಡದೆಉಂಟು ಮಾಡಿದನಲಾಮಂದಮುಗ್ಥೆಗೆ ಅಸಿಕಕಂಟಕಬಲೆಯ ಕಾಣೆ ಜಾಣೆ 2ಸರಸವಾತಿನ ಜಾಣ್ಮೆಯೆಂತುಸುರುವೆನಬಲೆಹರಣಳಿಯದೆಂದು ಪೇಳೆ ಕೇಳೆನಿರುತವನ ಕಿರುವೆರಳ ಸೌಂದರ್ಯಮಂ ನೆನೆಯುತಿರುವೆ ಪುಸಿಯಲ್ಲ ಕಾಣೆ ಪ್ರಾಣೆಕರುಣಿ ಬಲುನೊಂದರೆಂದದು ತನಗೆಕುಂದುಮರೆಯದಿನಿತೆಲ್ಲ ಒರೆಯೆ ಚತುರೆಯೆಭರದಲೊಮ್ಮದೊಮ್ಮೆ ಬಂದು ಪ್ರಸನ್ನವೆಂಕಟಗಿರಿಯರಸನೆಂದನಕ್ಕ ರಸಿಕ 3
--------------
ಪ್ರಸನ್ನವೆಂಕಟದಾಸರು
ಕರುಣಿಸೆನಗೆ ಶಂಭೋ ಕರುಣಿಸಯ್ಯಾಶರಣಾರಂದದಿ ನಿನ್ನ ಮನದಿರವರಿಯೆನುಕರವಜೋಡಿಸಿ ದೇವಾ ಚರಣಕೊಂದಿಪೆನು ಪಕ್ಷೋಣಿಯೊಳ್ ಮಾರ್ಕಾಂಡೆಯಂತೆ ಪೂಜಿಸಲಾರೆಮೀನಾಕ್ಷಿಯಂತೆ ಕಾದಿ ಪರಿಸಲಾನರಿಯೇಬಾಣಾಸುರನಂತೆ ತಪಗೈಯ್ಯಲಾರೆ ನಾನುರಾವಣನಂತೆ ಸಾಮಗಾನವನರಿಯೇ 1ಶಿರದಿ ಚಂದಿರನಂತೆ ಶೋಭಿಸಲಾರೆ ಭಕ್ತಿಸ್ಥಿರವರಿಯೆನು ಭೀಮಸೇನನಂತೆಉರಗನಂದದಿ ಕೊರಳಾಭರಣವಾಗಿರಲಾರೆಗಿರಿಜೆಯಂದದಿ ನೆರೆದು ಮುದ್ದಿಸಲರಿಯೆ 2ಮಂದಾಕಿನಿಯಂತೆ ಜಡೆಯಾಲಂಕರಿಸೆನುನಂದೀಶನಂತೆ ಪೊತ್ತು ತಿರುಗಾಡಲರಿಯೆಇಂದ್ರನಂದನನಂತೆ ಭರದಿ ಮೆಚ್ಚಿಸಲಾರೆಬಂದೆನ್ನ ಸಲಹೋ ಗೋವಿಂದನ ಸಖನೆ 3
--------------
ಗೋವಿಂದದಾಸ
ಕರುಣಿಸೊ ಕರುಣಾಸಾಗರ ನರಹರಿಯೆ ನಿನ್ನಚರಣದಾಚರಣೆಗೆಚ್ಚರಾದರನು ಪ.ಮನ ಮಲಿನವ ತೊಳೆದನುದಿನ ದೃಢದೊಳುಜ್ಞಾನ ಭಕ್ತಿ ವಿರಕ್ತಿಯ ಘನಾಸಕ್ತಿಯಮನಗಂಡು ಮುದವಂತರೆನಿಸಿ ನಾಮಾಮೃತಉಣಬಲ್ಲ ಪೂತಾಂಗ ಮಾನಿಸರ ಸಂಗ 1ಸಭ್ಯರ ದೂಷಣ ಕೇಳುಬ್ಬಸ ಶ್ರವಣಕೆಇಬ್ಬರ ಕಲಹದಿ ಶಬ್ದಗುಂದಿಅಬ್ಜನಾಭನ ಬಿರುದುಬ್ಬುಬ್ಬಿ ಸುಖವೇರಿಕೊಬ್ಬಿ ಕುಣಿವ ಶಂಲಬ್ಧರೂಳಿಗವ 2ವೃಂದಾವನದಲಿ ಮುಕುಂದನಾಲಯದಮುಂದಾ ದಿಗಿದಿಗಿತ ವಾದ್ಯವಂದನಿಂದತಂದೆ ಪ್ರಸನ್ನವೆಂಕಟೇಂದ್ರ ನಿನ್ನ ಮುದ್ರಾಂಕಹೊಂದುವ ಜನುಮವ ಆನಂದಮುನಿಮತವ 3
--------------
ಪ್ರಸನ್ನವೆಂಕಟದಾಸರು
ಕರುಣಿಸೋ ರಂಗಾ ಕರುಣಿಸೋ ಪಇರುಳು ಹಗಲು ನಿನ್ನ ಸ್ಮರಣೆ ಮರೆಯದಂತೆ ಅ.ಪರುಕುಮಾಂಗದನಂತೆ ವ್ರತವನಾನರಿಯೆನುಶುಕಮುನಿಯಂತೆ ಸ್ತುತಿಸಲರಿಯೆ ||ಬಕವೈರಿಯಂತೆ ಧ್ಯಾನವ ಮಾಡಲರಿಯೆ ದೇವಕಿಯಂತೆ ಮುದ್ದಿಸಲರಿಯೆನು ರಂಗಾ 1ಗರುಡನಂತೆ ಪೊತ್ತು ತಿರುಗಲರಿಯೆ ನಾನುಕರಿರಾಜನಂತೆ ಕರೆಯಲರಿಯೆ ||ಮರಕಪಿಯಂತೆ ಸೇವೆಯ ಮಾಡಲರಿಯೆನುಸಿರಿಯಂತೆ ನಿನ್ನ ಮೆಚ್ಚಿಸಲರಿಯೆ ರಂಗಾ 2ಬಲಿಯಂತೆ ದಾನವ ಕೊಡಲರಿಯೆನು ಭಕ್ತಿಛಲವನರಿಯೆ ಪ್ರಹ್ಲಾದನಂತೆ ||ಒಲಿಸಲರಿಯೆ ಅರ್ಜುನನಂತೆ ಸಖನಾಗಿಸಲಹೋ ದೇವರದೇವಪುರಂದರವಿಠಲ3
--------------
ಪುರಂದರದಾಸರು
ಕರ್ಮಬಂಧನ ಛೇದನ - ಶ್ರೀ - |ರಾಮನ ನಾಮವ ನೆನೆ ಮನವೆ ಪ.ಅರ್ಚಿಸಲರಿಯೆನು ಪೂಜಿಸಲರಿಯೆನು |ಮೆಚ್ಚಿಸಲರಿಯೆನೆಂದೆನ ಬೇಡ ||ಅಚ್ಯುತಾನಂತ ಗೋವಿಂದನ ನಾಮವ |ಇಚ್ಛೆ ಬಂದಾಗಲೆ ನೆನೆ ಮನವೆ 1ಸ್ನಾನವನರಿಯೆನು ಧ್ಯಾನವನರಿಯೆನು |ಏನನು ಅರಿಯೆನೆಂದೆನಬೇಡ ||ಜಾನಕಿರಮಣನ ದಶರಥನಂದನ |ದಾನವನಾಶನ ನೆನೆ ಮನವೆ 2ಮಂತ್ರವನರಿಯೆನು ತಂತ್ರವನರಿಯೆನು |ಎಂತು ಅರಿಯೆನೆಂದೆನಬೇಡ ||ಸಂತತಾನಂತ ಗೋವಿಂದನ ನಾಮವ |ಅಂತರಂಗದೊಳು ನೆನೆ ಮನವೆ 3ಜಪವ ನಾನರಿಯೆನು ತಪವ ನಾನರಿಯೆನು |ಉಪವಾಸವರಿಯೆನೆಂದೆನಬೇಡ ||ಅಪರಿಮಿತ ಗುಣಗಳ ಅನಂತಮಹಿಮನ |ಕೃಪೆಯ ಸಮುದ್ರನ ನೆನೆ ಮನವೆ 4ಕಲಿಯುಗದೊಳು ಹರಿನಾಮವ ನೆನೆದರೆ |ಕುಲಕೋಟಿಗಳುದ್ಧರಿಸುವುವು ||ಸುಲಲಿತ ಭಕ್ತಿಗೆ ಸುಲಭನೆಂದೆನಿಸುವ |ಜಲರುಹನಾಭನ ನೆನೆ ಮನವೆ 5ತಾಪತ್ರಯಗಳ ತಪ್ಪಿಸಿ ಸುಜನರ |ಪಾಪಗಳೆಲ್ಲವ ಪರಿಹರಿಸುವುದು ||ಶ್ರೀಪತಿ ಸದಮಲಧ್ಯಾನಗೋಚರನ |ಗೋಪೀನಾಥನ ನೆನೆ ಮನವೆ 6ವರದ ವೀರನಾರಾಯಣ ಸ್ವಾಮಿಯು |ಪರಮಪಾವನನು ಹಿತನಾಗಿ ||ಹರಿಯದ ಇಹಪರ ಕೊಡುವ ಸುಖಂಗಳ |ಪುರಂದರವಿಠಲನ ನೆನೆ ಮನವೆ 7
--------------
ಪುರಂದರದಾಸರು