ಒಟ್ಟು 1301 ಕಡೆಗಳಲ್ಲಿ , 111 ದಾಸರು , 1020 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮ ರಾಮೆನ್ನಿರೊ ಸೀತಾಪತಿ ರಾಮ ರಾಮೆನ್ನಿರೊ ಪ.ಗಂಗೆಯೊಳ್ ಮುಳುಗಲ್ಯಾಕೆ ನಡೆದು ಬಲುಭಂಗವ ಪಡುವುದ್ಯಾಕೆಮಂಗಲದಾತ ನರಸಿಂಗನ ನಾಮವಹಿಂಗದೆ ನೆನೆದರಿಷ್ಟಂಗಳ ಕೊಡುವ 1ಉಪವಾಸ ಮಾಡಲ್ಯಾಕೆ ಕಪಟದೊಳುಗುಪಿತದಿ ಕುಳ್ಳಲ್ಯಾಕೆಉಪಮೆರಹಿತ ಶ್ರೀಪತಿ ಕೃಷ್ಣರಾಯನಜಪಿಸಿ ಬಂದರೆ ಜನ್ಮ ಸಫಲವಾಗುವುದಲ್ಲೋ 2ಧ್ರುವನು ಸದ್ಗತಿ ಪಡೆದ ಕರುಣದಿಂದಪವಮಾನಿಗೆ ಒಲಿದಭುವನಈರಡಿಮಾಡಿ ಬಲಿಯನ್ನು ಸಲಹಿದಬವರದೊಳಗೆ ದಾನವರನ್ನು ಮಡುಹಿದ 3ಯಾತ್ರೆಗೆ ಪೋಗಲ್ಯಾಕೋ ಕಾವಡಿ ಪೊತ್ತುತೀರ್ಥಸ್ನಾನಗಳ್ಯಾತಕೋಕರ್ತುಮಾಧವಶತಪತ್ರನಾಭನ ಸಂ-ಕೀರ್ತನಾದಿಗಳೆ ಪರತ್ರಸಾಧನವಲ್ಲೊ 4ಭೂರಿಯಾಯಾಸವ್ಯಾಕೋ ಬರಿದೆ ಸಂ-ಸಾರವ ನಂಬಲ್ಯಾಕೋಮಾರಾರಿಸಖ ಲಕ್ಷ್ಮೀನಾರಾಯಣನನ್ನುಸೇರಿ ಭಜಿಪರ ಉದ್ಧಾರಮಾಡುವ ಶ್ರೀ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ರಾಯನೆಂದರೆಗುರು- ರಾಯ ಸದ್ಗುಣಗಣxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಕಾಯಸುಜನಗೇಯ ಮಹರಾಯಾಪಮಾಯಾಮಯಭವತೋಯ ನಿಧಿಯೊಳುಕಾಯೋ ಎನ್ನನು ಅ.ಪನಿನ್ನಾ ನಂಬಿದ ಮಾನವಾ - ಭವದೀಘನ್ನಾ ಮಹಿಮಾ ಪಾ -ವನ್ನ ತವಪಾದಾಮನ್ನಾದೊಳಗೆ ನಿತ್ಯಾ - ಚನ್ನಾಗಿ ಭಜಿಸುತಧನ್ಯನೆನಿಸುವ - ಹೊನ್ನು ಹಣಗಳೂಘನ್ನ ಮಹಿಮನೇ - ನಿನ್ನ ನಂಬಿದೆಎನ್ನ ಪಾಲಿಸ - ನನ್ಯರಕ್ಷಕ 1ಅನ್ನಾ ವಸನವಿಲ್ಲದೆ - ನಿತ್ಯಾಘನ್ನಾತೆ ನಿನಗಿದ- ನನ್ಯ ಭಕ್ತನಪರ-ರನ್ನಕ್ಕೆ ಗುರಿಮಾಡಿ-ಬನ್ನಬಡಿಸಿದರೆನ್ನನಿನ್ನ ಸೇವಕ - ನಿನ್ನ ಪೂಜಕ -ನಿನ್ನ ಧ್ಯಾನವÀ - ಮನ್ನದಿಂದಾನಿನ್ನ ತ್ಯಜಿಸಿ - ಅನ್ಯ ದೈವರ - ಮನ್ನಿಸೆನೋಪಾ - ವನ್ನ ಮೂರುತಿ 2ಹೊಟ್ಟೆಗೋಸುಗ ದೇಶಾ ತಿರುಗಿ - ದೇಹಾಎಷ್ಟು ಪೇಳಲಿ ಎನ್ನ - ದುಷ್ಟ ಬುದ್ಧಿಲಿ ಜ್ಞಾನನಷ್ಟವಾಗಲಿ ಬಹು - ಭ್ರಷ್ಟಮಾರ್ಗವ ಸೇರಿದುಷ್ಟಮತಿಯಲಿ - ಶಿಷ್ಟದ್ವೇಷವಕಟ್ಟಿ - ಕಾದಿದೆ - ನಷ್ಟ ತಿಳಿಯದೆಕೆಟ್ಟು - ಪೋಗುವೆ ಥಟ್ಟನೆ ನೀ ಪೊರಿಧಿಟ್ಟಾ ಗುರುಜಗನ್ನಾಥ ವಿಠಲದೂತಾ 3
--------------
ಗುರುಜಗನ್ನಾಥದಾಸರು
ಲಹರಿಕೊಂಡಿತು ಜ್ಞಾನ ಲಹರಿಕೊಂಡಿತುಮಿಹಿರಕೋಟಿ ಚಿದಾನಂದ ಮಿಹಿರಲೋಕ ಸೇರಲಾಗಿಪನಿತ್ಯಗುರುವ ಧ್ಯಾನ ಮಾಡೆ ನಿಗಮಧರೆಗೆ ಕೈಗೆ ಕೂಡೆನಿತ್ಯಆನಂದ ತುಳುಕಾಡುವ ನಿಜಬೋಧವೆಡೆಯಾಡೆ1ಪ್ರಣವನಾದಗೀತೆ ಪಾಡೆ ಪಾಡುಪಂಥ ಸರಿದು ಆಡೆಎಣಿಸಿ ಬಾರದ ದುಃಖ ಕೇಡೆ ಏಕವೆಂಬು ಘಟ್ಟಿಮಾಡೆ2ಚಿದಾನಂದ ಗುರುವ ನೋಡೆ ಚಿತ್ತ ಮುಳುಗಿ ಮುಳುಗಿ ಆಡೆಪದಸರೋಜವನ್ನು ಕೂಡೆ ಪರಿಣಾಮವ ದೋವಿಯಾಡೆ3
--------------
ಚಿದಾನಂದ ಅವಧೂತರು
ಲಿಂಗ ಬಂದ ನೋಡೊ ಶಂಕರ ಲಿಂಗ ಬಂದ ನೋಡೊ |ಅಂಗಜನುರುಹಿದ ಮಂಗಳ ಮೂರುತಿ |ತಿಂಗಳ ಸೂಡಿದ ಕಂಗಳ ಮೂರುಳ್ಳಪ<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಸುರಗಂಗಾಧರನೂ ಪಾರ್ವತಿವರ ಪರಮೇಶ್ವರನೂ |ಪರಮಪುರುಷಪರಾತ್ಪರಪರತರ | ಸ್ಥಿರಚರವಣು ತೃಣ ಭರಿತ ಸದಾಶಿವ1ಗಜಚರ್ಮಾಂಬರನೂಪುರಹರಭುಜಗಭೂಷಹರನೂ | ಅಜಸುರ ವಂದಿತತ್ರಿಜಗವ್ಯಾಪಕ |ಸುಜನರಿಗಿತ್ತ ಸುನಿಜಪದ ಮಹಘನ2ಆರು ಚಕ್ರ ಮೀರಿ ಸಹಸ್ರಾರ ಮನೆಯನ್ನೇ ಸೇರಿ |ಸಾರಾಸಾರ ವಿಚಾರ ರಹಸ್ಯವ-ಪಾರಪರಾತ್ಪರಗುರುತರ ಶಂಕರ3
--------------
ಜಕ್ಕಪ್ಪಯ್ಯನವರು
ಲೇಸ ಪಾಲಿಸು ಜಗದೀಶನೆ ದಯದಿ |ದೋಷರಹಿತ ಪರಮೇಶನೆ ಮುದದಿ ಪದಾಸ ಜನರ ಮನದಾಸೆಯ ಸಲಿಸುವ |ಸಾಸಿರ ನಾಮ ಸರ್ವೇಶ ಶ್ರೀಶಂಕರ ಅ.ಪಕಾಮ ವ್ಯಾಮೋಹ ಮದಾಂಧಕಾರವು ಬಂದುಪ್ರೇಮದಿ ನಿನ್ನನು ಭಜಿಸಲು ಬಿಡದೂ |ಕಾಮಹರನೆ ಕಾಯೋ ಕಾಮಿತಾರ್ಥವನಿತ್ತು |ಪ್ರೇಮ ಗಿರಿಜಾರಮಣ |ಸೋಮಶೇಖರ ನಿನ್ನ ಲೇಸ ಪಾಲಿಸು 1ಫಾಲಲೋಚನಭವ|ಭಾರನಿವಾರಣ |ಶೂಲಪಾಣಿಯೆ ಮುನಿಜಾಲಸಂರಕ್ಷಣ |ಮಹಾಲಿಂಗೇಶನೆ | ಭಕ್ತಪಾಲಕನೆಂಬುವ |ಮೂಲ ಚರಿತ್ರವಕೇಳಿಬಂದೆನು ದೇವಾ 2ಹಿಂದೆ ಮಾರ್ಕಾಂಡೇಯ ಮುನಿವರ ನಿನ್ನನು |ಚಂದದಿ ಪೂಜಿಸಿ ವಲಿಸಲಾ ಯಮನೂ |ಬಂದು ಪಾಶವ ಕೊರಳ ಸಂದಿನೋಳ್ ಸೇರಿಸ- |ಲಂದು ಮೈದೋರಿ ಗೋವಿಂದಸಖ ನೀ ಕಾಯ್ದೆ 3
--------------
ಗೋವಿಂದದಾಸ
ಲೇಸಿನಮಾರ್ಗಕೇಳಿರೋ ಜನರುಈಸು ಲಾಲಿಸಿದರೆ ಲೇಸುಪಹಂದಿನಾಯಿ ತೃಣಗಳಲಿರುವ ದೇವನಅರಿದರೆ ಅದು ಲೇಸುಹಿಂದಾಗಿಹುದನು ಮುಂದಾಗುವುದನುಚಿಂತಿಸಿದರೆ ಅದು ಲೇಸು1ಕ್ರೂರ ಮನುಜರೊಡಗೂಡದೆ ಮೌನದಿಬೇರೆಯಿಹುದು ಅದು ಲೇಸುಪ್ರಾರಬ್ಧದ ದಶೆಯಿಂದಲಿ ಬಂದುದಕಳೆದುಕೊಂಡರೆ ಅದು ಲೇಸು2ಘೋರವಾದ ತಾಪತ್ರಯಗಳುಮನೆಸೇರದಿದ್ದಡೆ ಅದು ಲೇಸುಸಾರವ ತಿಳಿದು ವ್ಯವಹಾರದೊಳಿದ್ದುಧೀರನಾಗಿಹುದದು ಲೇಸು3ಪಾಪಿಯ ಕೂಡದೆ ಸುಜನರ ಕೂಡುತದೇವನ ಕಾಂಬುದೆ ಲೇಸುಕೋಪವು ಎಂದಿಗು ಸುಳಿಯದೆ ಶಾಂತಿಯುವ್ಯಾಪಿಸಿ ತಾನಿಹುದದು ಲೇಸು4ಪಾಪ ಪುಣ್ಯಗಳ ಗುರುವಿಗೆ ಅರ್ಪಿಸಿಬಾಳುವೆ ನಡೆಸುವುದದು ಲೇಸುಈಪರಿ ನಡೆಯ ನಡೆದು ಚಿದಾನಂದಭೂಪನಾಗುವುದತಿ ಲೇಸು5
--------------
ಚಿದಾನಂದ ಅವಧೂತರು
ಲೋಕನೀತಿ379ಇಂದೀಗ ಹರಿದಿನವು ಏಕಾದಶಿಯೆಂದುಶೋಭಿಪ ದಿನವುಪಚಂದಾದಿ ವಿಷ್ಣುಸಾಯುಜ್ಯ ಹೊಂದುವುದಕ್ಕೆಅಂದವಾಗಿಹ ದಿನ ಸಂದೇಹವಿಲ್ಲವುಅ.ಪಶರಧಿಮಥಿಸೆ ಸುಧೆಯೂ ಬರಲು ಕಂಡುದುರುಳರೊಯ್ಯಲೂ ಹರಿಯೂಸರ್ವರಿಗುಪವಾಸವೆಂದು ತಾನ್ ಸೆಳೆದನುವರವಿತ್ತ ಮಾಸಕ್ಕೆ ಎರಡೇಕಾದಶಿಯೆಂದೂ1ದಶಮಿ ಒಂದಶನಾಗೈದೂ ಏಕಾದಶಿ ದಿವಸುಪವಾಸವಿರ್ದುಕುಸುಮನಾಭನ ಪೂಜೆಗೈದು ತೀರ್ಥವಗೊಂಡುನಿಶೆಯೊಳ್ ಜಾಗರವಿದ್ದು ಹರಿಕಥೆ ಕೇಳ್ವುದೂ2ವೀಳ್ಯ ಭೋಜನ ಪಾನವೂ ಈ ದಿನರತಿಕೇಳಿನಿದ್ರೆಯು ವಜ್ರ್ಯವೂಖೂಳನಾದರೆ ಯಮನಾಳೊಳ್ ಪಿಡಿದೊಯ್ದುಗೋಳುಗುಡಿಸುವ ಹೇಳಲಸಾಧ್ಯವು3ಅಶನಕ್ಕೆ ಬಿಸಿ ಮಳಲು ತಿನಿಸೀ ವೀಳ್ಯವ್ಯಸನ ಪಾನಕೆ ಉಕ್ಕಂ ತರಸಿ ಬಾಯ್ಗೆರಸಿಮುಳ್ಳು ಹಾಸಿಗೆ ಮೇಲೆ ಮಲಗೆಂದು ಹೊ-ರಳಿಸಿ ಉರಿಕಂಭ ಧರಿಸೆಂಬರ್ಸತಿಪುರುಷರಿಗೆ4ಧ್ರ್ರುವ ಹರಿಶ್ಚಂದ್ರ ಪ್ರಹ್ಲಾದ ತನ್ನಭುವನಕಟ್ಟಳೆಯೊಳ್ ರುಕ್ಮಾಂಗದಭವಹರವ್ರತಗೈದು ಹರಿಪಾದ ಸೇರ್ವರುಭುವನದಿ ಸರ್ವರಿಗ್ಯೋಗ್ಯವೀ ವ್ರತವೂ5ದ್ವಾದಶಿ ವ್ರತವೆಂಬುದು ಶ್ರೇಷ್ಠವು ಬೇಗಸಾಧಿಸಿ ಪಾರಣೆಗೈವುದೂಮೇದಿನಿಯೊಳಂಬರೀಷ ನೀ ವ್ರತಗೈದೂಆದಿಮೂರುತಿ ಗೋವಿಂದನ ಪಾದಸೇರ್ದನೂ6<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>
--------------
ಗೋವಿಂದದಾಸ
ವರಕವಿಗಳಿದ್ದಲ್ಲಿ ನರಕವಿಗಳ ಕೊಂಡಾಡಬಾರದು - ಇಂಥಾಧರಣಿಯ ಕಲ್ಲಿಗೆ ಸ್ಥೀರವೆಂದು ಪೂಜೆಯಮಾಡಬಾರದು ಪ.ಆಡಿಗೋದ ಮಡಕಿಗೆ ಜೋಡಿಸಿ ಒಲೆಗುಂಡ ಹೂಡಬಾರದುಬಡತನ ಬಂದರೆ ನಂಟರ ಬಾಗಿಲ ಸೇರಬಾರದು 1ಮಡದಿಯ ನುಡಿಕೇಳಿ ಬಡವರ ಜಗಳಕೆಹೋಗಬಾರದು - ಬಹಳಬಡತನ ಬಂದವಳ ಕೈಯಿಂದ ಅಡಿಗೆಯ ಉಣ್ಣಬಾರದು 2ಪಾಪಿಗಳಿದ್ದಲ್ಲಿ ರೂಪದ ಒಡವೆಯ ತೋರಬಾರದು - ಕಡುಕೋಪಿಗಳಿದ್ದಲ್ಲಿ ಅನುಕೂಲಗೋಷ್ಠಿಮಾಡಬಾರದು3ಪರರ ನಿಂದಿಸಿ ಪರಬ್ರಹ್ಮ ರೂಪೇಂದ್ರನ ಜರೆಯಬಾರದುವರದ ಶ್ರೀ ಪುರಂದರವಿಠಲನ ಸ್ಮರಣೆಯ ಮರೆಯಬಾರದು 4
--------------
ಪುರಂದರದಾಸರು
ವಲ್ಲೀದೇವಿಯ ವಲ್ಲಭನೆಬಲ್ಲಿದಭಕ್ತರ ಸುಲ್ಲಭನೆಪ.ಸಲ್ಲಲಿತ ಪಾದಪಲ್ಲವ ಭಜಿಸುವ-ರೆಲ್ಲರ ಮನಸಿನೊಳುಲ್ಲಸನೆ ಅ.ಪ.ವೃಂದಾರಕಮುನಿವಂದಿತನೆಕಂದರ್ಪಾಮಿತಸುಂದರನೆಸ್ಕಂದನೆ ಸಚ್ಚಿದಾನಂದನೆ ಪಾರ್ವತೀ-ನಂದನ ಸದ್ಗುಣಮಂದಿರನೆ 1ತಾರಕದೈತ್ಯ ಸಂಹಾರಕನೆಸೇರಿದ ಭಕ್ತೋದ್ಧಾರಕನೆಮಾರಾರಿಯ ಸುಕುಮಾರನೆ ಧೀರನೆಚಾರುಮಯೂರ ತುರಂಗಮನೆ2ಲಕ್ಷುಮಿನಾರಾಯಣ ಪ್ರಿಯನೆರಕ್ಕಸರಿಂಗತಿದುಃಖದನೆಕುಕ್ಕುಟವಜ್ರಾಭಯಶಕ್ತಿಹಸ್ತನೆಪ್ರಖ್ಯಾತ ಪಾವಂಜಾಖ್ಯ ಪುರವರನೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವಾಣಿ ವರದೆ ಶಾರದೆನಿನ್ನ ಚರಣವ ಸೇರಿದೆ ಪ.ಎನ್ನ ನಾಲಿಗೆಯೊಳ್ನೆಲಸುಹರಿಲೀಲೆಯನ್ನು ನುಡಿಸು 1ಅತಿರೋಹಿತ ವಿಜ್ಞಾನಿವೇದವ್ಯೂ ಹಕಭಿಮಾನಿ 2ಲಕ್ಷ್ಮೀನಾರಾಯಣನ ಸೊಸೆಸರ್ವಾಧಾರ ಭಕ್ತಿವಿಲಾಸೆ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ವಾದಿರಾಜಸುರರಾಜತಾನಾದರೆxmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'ಮೇದಿನಿಯೊಳಗಿಹನ್ಯಾಕೆ ? ಪಮೇದಿನಿಸುರರಿಗೆಮೋದಕೊಡೋದಕೆಸ್ವಾದಿಯೊಳಗೆ ನಿಂತಿಹನದಕೇ ಅ.ಪಅಜನ ಪದ ತಾ ಸೇರೋದಕೆ 1ಸುರತತಿಸನ್ನುತಸರಸಿಜಭವ ಪದ-ಪರಿಪರಿ ಮಹಿಮೆಯ ತೋರಿಸಿದ 2ವೀತಭಯನು ತಾನೀತೆರ ಜಗದಿದಾತಗುರುಜಗನ್ನಾಥ ವಿಠಲಗುಣಖ್ಯಾತಿಯ ತಾಮಾಡಿದ 3
--------------
ಗುರುಜಗನ್ನಾಥದಾಸರು
ವೀರಭದ್ರೇಶ್ವರನೆ ಪಾಲಿಸು ನಮಸ್ಕಾರವ ಗೈಯುವೆನೆ ಪಫೋರ ಶರೀರನೆ ಧೀರನೆ ಶೂರನೆಕ್ರೂರ ಖಡುಗಧಾರಿತುರಗಸವಾರಿಯೆ ಅ.ಪರುದ್ರ ರೌದ್ರಾವತಾರ ಚಿತೆಯೊಳಂದುಉದ್ಭವಿಸಿದ ವೀರ-ಭದ್ರ ಶರೀರ ಕೆರಳ್ದ ಲೋಚನಾಕಾರಊಧ್ರ್ವ ದೇಶಾನ್ವಿತ ಸಮುದ್ರ ಸಾಹಸಿಯೆ 1ಮಣಿಮಯ ಭೂಷಣನೇ ತೋರುವೆಘೋರಘಣಿ ಘಣಿ ನಾದವನೇಕುಣಿಯುವ ಕೂಗುವ ಭೂತಗಣದಸಂದಣಿಸೇರಿತ್ರಿನಯನಾಜೆÕಯ ತಾಳ್ದು ಧರಣಿಗೆ ನಡೆತಂದ 2ದಕ್ಷಾಧ್ವರ ಹರನೇ ಕ್ರೋಧದಿ ಕ್ರೂರದಕ್ಷನ ಮುರಿದವನೇಸೃಷ್ಟಿ ಪಾಲಕ ಭಗನಕ್ಷಿಯ ಕೀಳಿಸಿದುಷ್ಟ ಪೊಷನದಂತ .... ಸೃಷ್ಟಿಗುರುಳಿಸಿದಾ 3ಪಾದೇಮಠದ ಪುರದೀ ನೆಲಸಿದೆ ಬಂದುಸಾಧು ಜನರ ಪೊರೆದೆಆದಿಮೂರುತಿ ಗೋವಿಂದನ ದಾಸನಆಧರಿಸೈ ಕರುಣೋದಯ ಮೂರುತಿ 4
--------------
ಗೋವಿಂದದಾಸ
ವೃಥಾಮಾಡಬೇಡ ಈ ಜನ್ಮವು ಸದಾಬರದು ಮೂಢಾ ಪಅಧೋಕ್ಷಜನ ಮೃದು ಪಾದಾರವಿಂದಗಳಯಥಾರ್ಥದಿಂ ಭಜಿಸಿ ಕೃತಾರ್ಥನಾಗದೆ 1ಸುಧಾರದನಗೃಹಪದಾರ್ಥದಾಶದಿಂಮದಾಂಧದಿಂಗುರುಬುಧಾಳಿ ಸೇರದೆ2ಪಿತಾ ಮಾತಾ ಹಿತ ಸುತಾದಿ ಬಂಧುಗಳ್ಹಿತಾರ್ಥರೆಂದು ಪರಗತೀ ನೀ ಕಾಣದೆ 3ಹರೆದುರಿತಪರಿಹರೆ ತುಲಸಿರಾಮಧೊರೆಯೆಂದು ನೀ ಮೊರೆಹೊಕ್ಕಡೆ 4
--------------
ತುಳಸೀರಾಮದಾಸರು
ವೃಂದಾವನದೊಳಾಡುವನಾರೆ - ಗೋಪ-|ಚಂದಿರವದನೆ ನೋಡುವ ಬಾರೆ ಪಅರುಣಪಲ್ಲವಪಾದಯುಗಳನೆ ದಿವ್ಯ-|ಮರುಕತ ಮಂಜುಳಾಭರಣನೆ ||ಸಿರಿವರ ಯದುಕುಲ ಸೋಮನೆ ಇಂಥ-|ಪರಿಪೂರ್ಣ ಕಾಮ ನಿಸ್ಸೀಮನೆ 1ಹಾರ-ಹೀರ ಗುಣಧಾರನೆ - ದಿವ್ಯ |ಸಾರಶರೀರ ಶೃಂಗಾರನೆ ||ಆರಿಗಾದರು ಮನೋದೂರನೆ ತನ್ನ-|ಸೇರಿದವರ ಮಾತ ವಿೂರನೆ 2ಮಕರಕುಂಡಲಕಾಂತಿ ಭರಿತನೆ - ದಿವ್ಯ |ಆಕಳಂಕರೂಪ ಲಾವಣ್ಯನೆ ||ಸಕಲರೊಳಗೆ ದೇವನೀತನೆ - ನಮ್ಮ |ಮುಕುತೀಶಪುರಂದರವಿಠಲನೆ3
--------------
ಪುರಂದರದಾಸರು
ವೆಂಕಟೇಶ ಬೇಡಿಕೊಂಬೆ ಕೃಪೆಯ ಪಾಲಿಸೋ ಬ್ರಹ್ಮ-ಶಂಕರಾದಿವಂದ್ಯ ಎನಗೆ ಮುಕ್ತಿ ತೋರಿಸೋ ಪಹುಟ್ಟು ಮೊದಲಾದಂಢ ಕಷ್ಟ ಬಿಡಿಸೋ-ನಿನ್ನಪಟ್ಟದ ರಾಣಿಗೆ ಹೇಳಿಪದವಿಕೊಡಿಸೋ ||ಇಷ್ಟ ಭಕ್ತಜನರೊಳು ಎನ್ನ ಸೇರಿಸೋ-ಈಸೃಷ್ಟಿಯೊಳು ನಿನ್ನ ದಾಸ-ದಾಸನೆನಿಸೋ 1ಅಟ್ಟು ಉಂಡು ಮಿಕ್ಕಿದ್ದೆಲ್ಲ ಎನಗೆ ಹಾಕಿಸೊ ಪೊಂ-ಬಟ್ಟಲೊಳಗಿನ ಹಾಲು ಎನಗೆ ಹೊಯ್ಯಿಸೊ ||ಗಟ್ಟಿ ಸಕ್ಕರೆ ತುಪ್ಪ ರೊಟ್ಟಿಗಳನು ಉಣ್ಣಿಸೋ-ಮುಂದೆಹುಟ್ಟಿಬಾಹಜನ್ಮಂಗಳ ಎನಗೆ ಬಿಡಿಸೋ2ಕಿಟ್ಟಿಗಟ್ಟಿದ ಕಬ್ಬಿಣಕ್ಕೆ ಪುಟವ ಹಾಕಿಸೋ-ಉತ್ಕøಷ್ಟ ಬಂಗಾರದೊಳು ಎನ್ನ ಕೂಡಿಸೋ ||ಬೊಟ್ಟಿಗೆ ಉಂಗುರವ ಮಾಡಿ ಎನ್ನ ಸೇರಿಸೋ-ಎನಗೆದಿಟ್ಟ ಪುರಂದರವಿಠಲನೆಂಬುದನೆ ಪಾಲಿಸೋ 3
--------------
ಪುರಂದರದಾಸರು