ಒಟ್ಟು 2364 ಕಡೆಗಳಲ್ಲಿ , 111 ದಾಸರು , 1793 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನ ಬಲಿಯದನಕ ಅನುಕೂಲಾಗದನುಭವ ಧ್ರುವ ಮನವೇ ಮರೆಯ ಮಾಡೇದೆ ನೆನವಿಗೆ ತಾಂ ತಂದು ತೋರದೆ ಹೆಣ್ಣ ಹೊನ್ನದಾಶೆ ಹಚ್ಚ್ಯಾದೆ ಘನತನಗರಸದೆ 1 ಹುಚ್ಚಮಾಡಿಬಿಟ್ಟದೆ ಎಚ್ಚರ ಎಡಿಯಗೊಡದೆ ಕಚ್ಚಿ ವಿಷಯಕೆ ಬಿದ್ದದೆ ಬೆಚ್ಚಿ ಬೆದರದೆ 2 ಮನಸಿಗೆ ಮನಸಿನಿಂದ ಅನುಭವವಾಗಬೇಕಾನಂದ ಘನ ಗುರುವಿನ ಕೃಪೆಯಿಂದ ಮನ ಬಲಿವುದು ಚೆಂದ 3 ಮನೋನ್ಮನವಾಗಿ ತಾ ಘನ ಬೆರೆದು ಸ್ವಹಿತ ಙÁ್ಞನಕಿದೇ ತಾ ಸನ್ಮತ ಮುನಿಜನರ ಸುಪಥ 4 ಮನಬಲಿದು ನೀ ನೋಡೋ ಘನಸುಖ ಮಹಿಪತಿಗೊಡೊ ಅನುಭವಾಮೃತ ಸೂರ್ಯಾಡೊ ಅನುಮಾನೀಡ್ಯಾಡೊ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನಗೊಂಡವರಲ್ಲಿ ಘನಗೊಳ್ಳಿ ಜ್ಞಾನಾಗಮ್ಯದ ಧ್ರುವ ಮುನಿಜನರಾರಾಧಿಸುವ ನಿಧಾನ ಅನಿಮಿಷದಲಿ ನೋಡುವ ತ್ರಾಣ ಉನ್ಮನಲಿಹ ಧನ 1 ಜಾಣನೇ ಮಾಡಿಕೊಂಬನು ಪರೀಕ್ಷೆ ಸ್ವಾನುಭವದಲಿ ಪ್ರತ್ಯಕ್ಷ ಅನುದಿನದಲಿಹುದ ದಕ್ಷ ಘನಗುರು ಕಟಾಕ್ಷ 2 ಮಹಿಪತಿಸ್ವಾಮಿಯು ಪರಬ್ರಹ್ಮ ಖೂನಮಾಡವಗಿದು ಸಂಭ್ರಮ ಅನಂದೋಬ್ರಹ್ಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನದಿಂದಲಿ ಮನನೋಡಿ ಮನವರಿತು ಘನ ಕೂಡಿ ಧ್ರುವ ಮನಸಿನಿಂದ ತಾ ನೋಡುವ ಖೂನ ಮನ ಮರೆಯಲದೆ ನಿಧಾನ ಮನವರಿಯದೆ ಇಹುದ್ಯಾತರ ಜ್ಞಾನ ಮನವೇ ಸ್ವಹಿತ ಕಾರಣ 1 ಮನದ ಕೊನಿಯಲಿದೆ ಘನಸುಖದಾಟ ಅನುದಿನ ನೋಡುದು ನೀಟ ಸ್ವಾನುಭವದಲಿದು ನೋಡುವ ನೋಟ ಮುನಿಜನರ ಸುಖದೂಟ 2 ಮನೋನ್ಮನದೊಳಗದೆ ಘನಸ್ಫೂರ್ತಿ ಙÁ್ಞನಕಿದೆ ಮನೆ ವಾರ್ತಿ ಮನದೊಳಗಿಹ್ಯ ಮಹಿಪತಿ ಗುರುಮೂರ್ತಿ ಮನಕಾಗಿಹ ತಾಂ ಸಾರ್ಥಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನದೊಳಗಿರು ಹರಿಯೆ ಮೂರ್ಲೋಕ ದೊರೆಯೆ ಪ. ಮನೆದೊಳಿ(?)ಗಿರು ಬಹು ಜನರು ಪೇಳುವ ದೂರು ಎಣಿಸಲು ಶಕ್ತನಾರು ಮುಖಾಬ್ಜ ತೋರು ಅ.ಪ. ಮೂರ್ತಿ ನೀನು ಪ್ರಾಕೃತ ಗುಣಸರ್ಗದಿ ಬರುವುದೇನು ಸರ್ಗರಕ್ಷಣ ಪಾಪವರ್ಗವೆಲ್ಲವನು ನಿಸರ್ಗ ಮೀರದೆ ಮಾಳ್ಪ ದುರ್ಗಮದ್ಭುತಕರ್ಮ ದೀರ್ಘದರ್ಶಿ ಮುನಿವರ್ಗಕೊಲಿದು ನಿಜ ಮಾರ್ಗ ತೋರ್ಪ ಶ್ರೀ ಭಾರ್ಗವೀ ರಮಣಾ 1 ಜಲದೊಳಗಾಡಿದನು ಬೇರನು ಕಿತ್ತಿ ಖಳರನು ಸೀಳಿದನು ನೆಲನನಳೆದು ತಾಯಿ ತಲೆಯ ತರಿದು ನಿಜಲಲನೆಗೋಸುಗ ದೈತ್ಯ ಕುಲವ ಸಂಹರಿಸಿದ ಶಿಲೆಯನು ರಕ್ಷಿಸಿ ಕಳವಳಿಸಿದ ಕಪಿ ತಿಲಕನ ಸ್ನೇಹವ ಬಳಸಿದನೆಂಬುದು 2 ಬಾಗಿಲ ಮುಚ್ಚಿದರೆ ಗೋಡೆಯ ಹಾರಿ ಹೋಗಿ ಮನೆಯ ಒಳಗೆ ಬಾಗಿಲ ಮರೆಯಲಿ ಬಾಗಿನೋಡುತ ಮೆಲ್ಲಗಾಗಿ ಬೆಣ್ಣೆಯ ಮೆದ್ದು ಸಾಗಿ ಬರುತಲಿರೆ ನಾಗವೇಣಿಯರು ಹಿಡಿಯಲು ನೀವಿಯ ನೀಗಿ ಪುರುಷರನು ಕೂಗಿದನೆಂಬರು3 ತೊಟ್ಟಿಲೊಳಗೆ ಮಲಗಿ ನಿದ್ರೆಯಗೈವ ಪುಟ್ಟ ಶಿಶುಗಳನೆಲ್ಲ ತಟ್ಟಿ ಎಬ್ಬಿಸಿ ಕಣ್ಣಾಕಟ್ಟಿ ವಸ್ತ್ರದಿ ತಾನೆ ಚಿಟ್ಟನೆ ಚೀರಿ ಒ- ತ್ತಟ್ಟು ಎಲ್ಲರು ಕೂಡಿ ಕಟ್ಟಿದ ಕರುಗಳ ಬಿಟ್ಟ ಮೊಲೆಗೆ ಒಳ- ಗಿಟ್ಟ ಹಾಲು ಮೊಸರೊಟ್ಟಿಲಿ ಸವಿವುದೆ 4 ವಿದ್ಯೆಯ ಕಲಿಯೆಂದರೆ ಅಮ್ಮಯ್ಯ ಎನಗೆ ನಿದ್ದೆ ಬರುವುದೆಂಬುವಿ ಹೊದ್ದಿಸಿ ತಟ್ಟಿದರೆದ್ದು ಓಡುವಿ ಗೋಪೆರಿದ್ದ ಠಾವಿಗೆ ನಾನಾ ಬದ್ಧವನು ಸುರುವಿ ಸಿದ್ಧವಾಗಿ ಕಾದಿರೆ ಕೈಗೆ ಸಿಕ್ಕದೆ ಉದ್ಧವ ಗೃಹದೊಳು ಬೌದ್ಧನಂತಿರುವಿ 5 ಕುದುರೆಯ ಹತ್ತಿದರೆ ಯಾರಾದರೂ ಕದನವ ಮಾಡಲಿಹರೆ ಹೃದಯ ಮಂಟಪದಿ ನೀ ಸದರವಾಡುತಲಿರೆ ಮದನ ಜನನಿವರ ಮದಮತ್ಸರಗಳ ಒದೆದು ತೀವ್ರದಲಿ ಪದಯುಗ ಪಾಲಿಸುವುದಯ್ಯ ಗಿರೀಶ 6
--------------
ತುಪಾಕಿ ವೆಂಕಟರಮಣಾಚಾರ್ಯ
ಮನವು ಕರಗದೇನೋ ಸಿರಿಹರಿ ಮುನಿಸದೇಕೆ ಪೇಳೋ ಪ ತನು ಮನ ಧನಗಳ ನಿನಗೊಪ್ಪಿಸುತ್ತಲಿ ಮುನಿವರರೊಲು ನಿನ್ನ ನೆನೆಯಲಿಲ್ಲವುಯೆಂದು ಅ.ಪ ಬಾಲತನದೆ ನಿನ್ನ ನೆನೆಯದೆ ಕಾಲಕಳೆದೆ ಯೌವನದೊಳು ಲೋಲುಪನಾದೆನ್ನ ಕಾಲದೂತರು ಬಂದು ನೂಲಿಂದಚಿಳೆದರೂ 1 ಜಗವು ಚಿರವೆಂದು ಸತತವು ಬಗೆದು ಭ್ರಾಂತನಾದೆನ ಅಗಣಿತ ನೀಲಮಣಿ | ಖಗಪತಿವಾಹನ [ಪೊರೆಯಲಿನ್ನು] 2 ಗಂಗಾಧರ ರಂಗಾ ನೀನೆನ್ನಂತರಂಗದೆ ನಿಲಲಿನ್ನು3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮನವೆ ಪೇಳುವೆ ಪ ಅಂತರಂಗದಲಿ ಚಿಂತಿಪರಘಶುಲಧ್ವಾಂತ ದಿವಾಕರನಾ ಶ್ರೀವರನಾ ಅ.ಪ ಎಂತು ಸುಕೃತವೂ ಸಿರಿಕಾಂತನುಯನ್ನೊಳು ನಿಂತಿರುವನು ಎನುತ ಪರ್ವತ ಸಂತೋಷದಲಿರುವಂತೆ ತೋರುವದು ಸು- ಕಾಂತ ಶಿಖರದಿಂದ ಛಂದ 1 ವರಶಿಲೆಯೊಳಿರುವ ಹರಿಯ ಶೇವಿಸಲು ಹರುಷದಿ ಸುರನಿಕರ ಭಾಸುರ ತರುಲತೆರೂಪದಿ ಇರುತಿಹರೆನ್ನುತ ಮೆರೆವನು ಗಿರಿರಾಜಾ ಸುತೇಜಾ2 ಗಿರಿನಾಥಾ ತೋರುತ ಅರಳಿದ ಪೂವಿನ ಪರಿಮಳ ಬೀರುವ ಸುರಚಿರ ತರುವ್ರಾತಾ ಶೋಭಿತ3 ಪವನ ಶೇವಿತನು ಭುವನೋದರ ತಾ ದಿವಿಜರಿಂದ ಸಹಿತ ಸೇವಿತ ಅವನಿಧರನು ಮಾಧವನ ತೆರದಿ ತೋ ರು ವೆನೆಂಬುಗರ್ವಾದಿಂದಿರುವ 4 ಸಿದ್ಧಚಾರಣ ತಪೋವೃದ್ಧರಿದೇ ಸ್ಥಳ ಸಿದ್ಧಿದಾಯಕವೆಂದೂ ಬಂದೂ ಪದ್ಮಾಕ್ಷನ ಪದಪದ್ಮವ ಧ್ಯಾನಿಸು- ತಿದ್ದರು ಗುಹೆಗಳಲಿ ಪೂರ್ವದಲಿ5 ಮುನಿ ಮಾರ್ಕಾಂಡೇಯನು ಬಹುದಿನದಲಿ ಘನ ತಪವಾಚರಿಸಿ ಸೇವಿಸಿ ವನಜನಾಭನ ಪದವನಜ ಮಧುಪ ನೆಂ ದೆನಿಸುತಲಿರೆ ಗುಹದಿ ತಪೋನಿಧಿ6 ಗಿರಿಯ ಬಲದಿ ಅಹೋಬಲ ನರಸಿಂಹನ ದರ್ಶನವನು ಕೊಳುತ ನಿರುತ ಇರುತಿರಲೊಂದಿನ ಬರಲಾಷಾಢದ ಹರಿವಾಸರ ವೃತವಾ ಚರಿಸುವ 7 ದ್ವಾದಶಿ ಸಾಧನೆ ಬರಲು ಪ್ರತಿದಿನದಿ ಶ್ರೀದನ ದರ್ಶನದಾ ನೇಮದ ಸಾಧನೆ ವಿಷಯದಿ ಯೋಚಿಸುತಿರೆ ಹರಿ ಮೋದದಿ ಮುನಿಗೊಲಿದಾ ಸೂಚಿಸಿದಾ 8 ಅರುಣೋದಯದಲಿ ಸುರಗಂಗೆಯು ತಾ ವರ ಪುಷ್ಕರಣಿಯೊಳು ಬರುವಳು ತರುರೂಪದಿ ನಾ ಬರುವೆನು ಬಿಡದಿರು ಮರುದಿನದಾ ಚರಣೆ ಪಾರಣೆ9 ಎಂತು ಕರುಣವೊ ನಿರಂತರ ಭಜಿಪರ ಚಿಂತಿತ ಫಲವೀವ ಕೇಶವ ಇಂತು ಹರಿಯ ಗುಣ ಚಿಂತಿಸುತಿರಲು ನಿ ಶಾಂತದಿ ಸರೋವರದಿ ವೇಗದಿ10 ಭಾಗೀರಥಿ ಜಲದಾಗಮ ವೀಕ್ಷಿಸಿ ರಾಗದಿ ವಂದಿಸಿದ ತುತಿಸಿದ ಯೋಗಿವರನುತ ಸ್ನಾನವಮಾಡಿ ಬರುವಾಗಲೆ ಧ್ಯಾನಿಸಿದ ಹರಿಪದ11 ಆ ತರುವಾಯದಿ ಪಾರಿಜಾತ ತರು ವ್ರಾತವ ನೋಡಿದನು ವಂದಿಸಿದನು ಈತನೆ ನರಮೃಗನಾಥನೆನುತ ಮುನಿ ಪ್ರಾತ:ಪಾರಣವ ಮಾಡಿದ ಜವ12 ಮೀಸಲು ಮನದಲಿ ಶೇಷಶಯನಗಾ- ವಾಸಗಿರಿಯ ಸೇವಾ ಮಾಡುವ ಭೂಸುರ ಗಣದಭಿಲಾಷೆಗಳನು ಪೂರೈಸಿ ಪೊರೆವನೀತಾ ಪ್ರಖ್ಯಾತಾ 13 ಶ್ರೀಯುತ ಮಾರ್ಕಾಂಡೇಯರ ಚರಿತೆಯ ಗಾಯನ ಫಲವಿದನು ಪೇಳುವೆನು ಶ್ರೇಯಸ್ಸಾದನ ಕಾಯದಿ ಬಲದೀ- ಮಾನವ 14 ಸುರತರು ಕಾರ್ಪರ ಶಿರಿ ನರಸಿಂಹನೆ ಈತ ಎನ್ನುತ ನಿರುತ ಅನಂತನ ಗಿರಿಯ ಮಹಿಮೆಯನು ಸ್ಮರಿಸುವ ನರಧನ್ಯಾ ಸನ್ಮಾನ್ಯ 15
--------------
ಕಾರ್ಪರ ನರಹರಿದಾಸರು
ಮನವೆ ಮಾನ್ಯನ ಮನ್ನಿಸು ಶ್ರೀವ್ಯಾಸ ಮುನಿಗೆ ಒಲಿದಿಹ ವಾಯು ನಾ ಪ ಪ್ರತಿ ಸಂಚರ ಕಾಲದಿ ಅವಿಲೀನ ಮತಿಯುಳ್ಳ ದೇವನಿವನು ಸುತ ಜಯಾದೇವಿಗೀತ ತನ್ನ ಸರಿ ಚತುರಾಸ್ಯ ದೇಹದೊಳಿಹ 1 ಚತುರವಿಂಶತಿ ತತ್ವಕೆ ಅಭಿಮಾನಿ ಮತಿಯುಳ್ಳ ಸೂತ್ರನಾಮ ಹರಿರೂಪ ಮಿತಿ ಇಲ್ಲದಲೆ ಕಾಂಬನೊ 2 ಯತಿಯಾಗಿ ಬಂದು ಹರಿಯ ಕಾರ್ಯಗಳ ಕೃತಿಸಿ ತಾ ನಿಂದು ವ್ಯಾಸ ವ್ರತಿಯಿಂದ ಮಾಡಿಸಿದ ಈತಗೆ ಪತಿ ವಾಸುದೇವವಿಠಲ3
--------------
ವ್ಯಾಸತತ್ವಜ್ಞದಾಸರು
ಮನವೇ ಚಿಂತಿಸು ಹರಿ ಮುರಾರಿಯ ಪ ಮಾಯಾ ಮನುಜಾಕಾರವ ತಾಳ್ದ ಸನಕಾದಿ ಸನ್ಮುನಿವಿನುತಪದ ವನಜಾತಯುಗಳನನು ಅ.ಪ ಪುರುಹೂತರಿಗೆ ತಾತನ ರತಿದೇವಿ ಸರಸಿಜಾಸನನಿಗೆ ಕರುಣಿಸಿವೇದವÀ ತರಳಗಭಯವನಿತ್ತು ತರಿದು ನೃಪರನು ದುರುಳರಾವಣ ಹರಣ ನೀಲಾಂಬರ ಯದುವರ ತುರಗವಾಹನ 1 ಸುಗುಣ ಗಣಾರ್ಣವನ ಸಜ್ಜನರಿಗೆ ಸುಗತಿಯಪಾಲಿಪನ ಸುರಪಾಲನ ನಿಗಮಚೋರನಕೊಂದು ಮೃಗನರವ ರೂಪವ ತಾಳಿ ಜಗವನಳೆದನ ಭೃಗುಜ ಶಾಖಾ ಮೃಗವ ವಧಿಸಿ ಹಲನೇಗಿಲನು ಪಿಡಿ ನಿಗಮನುತ ಕಲಿಯುಗದ ವೈರಿಯ 2 ಒಲಿದು ಪೂಜೆಯ ಕೊಂಬನ ಕುಂಭಜಶಾಪ ಕಲುಷವ ಕಳೆದವನ ವ್ಯಾಘ್ರಾಚಲದಲಿ ನಿಂತು ಭಕ್ತರ ಸಲಹುವ ಕಾರುಣ್ಯನಿಲಯ ಸಜ್ಜನಮನೋ ನಿಲಯ ಶ್ರೀನಿವಾಸನ ಜಲಜನೇತ್ರನ ಜಲಜಗಾತ್ರನ ವಿಲಸಿತಾಂಬುಜ ಮಾಲ ಭಕ್ತರಿ ಗೊಲಿವ ಶ್ರೀ ವರದಾರ್ಯವಿಠಲನ 3
--------------
ವೆಂಕಟವರದಾರ್ಯರು
ಮನಸಿಜಜಾತ ತಾತಮೋಹಿನಿಭಾಮಿನೀ ಶ್ರೀಮಣಿ ಪ ವನಜಾಸನೆ ಘನಸುಗುಣೀ | ಮುನಿಮಾನಸ ತೋಷಿಣಿ ಅ.ಪ ನರೋತ್ತುಂಗ ಪ್ರಮೋದಿನೇ | ಚಿನ್ಮಯೆ ಸುಮಭಾವನೆ ದರಹಾಸ ಸುಮಾನಿನೆ ಭಾಗ್ಯಾಲಂಕಾರೆ ಪಂಕಜಾಸನೇ 1 ವರ ಸುಖಾಭ್ಯಂಜನೇ ಮೋಹನೇ ಮಣಿಗಣರದನೇ | ಗಜಗಮನೇ ಭೃಂಗ ಚತುರೆ ನಿರುತ ನಿರಂಜನಿ ಕೋಮಲೇ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮನಸಿನ ಮಲಿನವ ಮನಸೀಜನೈಯನೆ ಹನನ ವೈದಿಸದಿರೆ ಬದುಕುವ ದೆಂತೊ ಪ ವನಜ ಸಂಭವ ಜನಕ ತನುಮನ ಪ್ರೇರಕ ಮಾನವ ನಾನು ಶರಣುಹೊಕ್ಕೆನೈಯ ಅ.ಪ ಸ್ನಾನ ಸಂಧ್ಯಾನುಷ್ಠಾನ ವೇನು ಗೈದವನಲ್ಲ ಹೀನ ಸ್ತ್ರೀಯರ ಧ್ಯಾನ ಘಳಿಗೆ ಬಿಟ್ಟವನಲ್ಲ ಧಾನ ಧರ್ಮಗಳೊಂದು ಮಾಡಿಕೊಂಡವನಲ್ಲ ಗಾನದಿಂದಲಿ ಹರಿನಾಮವಾದರು ಪಾಡಲಿಲ್ಲ ದೀನಜನಮಂದಾರ ಕರುಣೋದಾರ ಮಹಿಮನೆ ಮಾನಮತ್ತವಮಾನ ನಿನ್ನಾಧೀನ ವಲ್ಲವೆ ತನುಮನೇಂದ್ರಿಯ ನಾಥ ನಾಯಕ ನೀನೇ ಆಗಿರೆ ಎನ್ನ ದೇನಿದೆಬರಿದೆ ದೂರದೆ ಸಾನುರಾಗದಿ 1 ನೋಡಬಾರದ ನೋಟ ನೋಡಿ ಆಯಿತು ಜೀಯ ಮಾಡಬಾರದ ಬಯಕೆ ಮಾಡಿದ್ದಾಯಿತು ಸ್ವಾಮಿ ಕೂಡಬಾರದ ಕೂಟ ಕೂಡಿದ್ದಾಯಿತು ತಂದೆ ಈಡುಕಾಣೆನು ನನ್ನ ಕೇಡು ಕರ್ಮಕೆ ಇಂದು ಗಾಡಿಕಾರ ನಿಗೂಢ ಹೃದಯಗ ಬೇಡಿ ಕೊಂಬೆನು ಪ್ರೌಡ ಭಕ್ತರಗಾಢ ಪ್ರೇಮದಿ ಕೂಡಿಸುತ ತಿಳಿ ಗೇಡಿಯೆನಿಸದೆ ವೇದ ಸಮ್ಮತ ಗಾನ ಜೋಡಿಸಿ ಹಾಡಿ ಹಾಡಿಸೆ ಭಾಢ ಮಹಿಮೆ ವಿಶೇಷ ನಿನ್ನದು 2 ಮುಂದು ಮಾಡುತ ಹಿಂದೆ ಇಂದು ಕಂದನಲ್ಲವೆ ನಾನು ಎಂದೆಂದು ನಿನಗೆ ಇಂದಿರೇಶನೆ ನಿನ್ನಮೀರಿಕರ್ಮವಮಾಡೆ ಎಂದಿಗಾದರು ಸಾಧ್ಯವಾಹುದೆ ನನಗೆ ತಂದೆ ಜಯಮುನಿವಾಯು ಹೃದಯಗ ನಂದಮಯ ಶ್ರೀ ಕೃಷ್ಣವಿಠಲ ನಿಖಿಳ ವಿಶ್ವಕೆ ಕುಂದುಮಯ ಅಭಿಮಾನ ಮನಸಿಗೆ ತಂದಿಡದೆಯೆಂದೆಂದು ಸಲಹುತ ಕುಂದು ಗೈದವನೆಂದು ನುಡಿಯದೆ ಪಥ 3
--------------
ಕೃಷ್ಣವಿಠಲದಾಸರು
ಮನುಜಾವತಾರ ಶ್ರೀ ರಾಮನೆಂಬುದು ನಿಜವೆಮುನಿಮನಕೆ ನಿಲುಕದವನುಅನುಪಮನು ನಿಜಜನರನುದ್ಧರಿಸಬೇಕೆಂದುತನುವಿಡಿದು ತೋರಿಸಿದನು ತಾನು ಪದಶರಥಗೆ ಸುತನೆಂಬುದದು ವರವನಿತ್ತುದಕೆಸಸಿನೆ ಬಿಡೆ ಮುಕ್ತಿ ಪಥಕೆಎಸೆದು ವನದೊಳು ಹೊಳೆದುದದು ಮುನಿಗಳೆಲ್ಲರಿಗೆವಶವಾದನೆಂಬ ನೆವಕೆಶಶಿಮುಖಿಯನಗಲಿದುದು ನಿಜ ಭಕ್ತ ರಾವಣನಅಸುರ ಜನ್ಮದ ಭಂಗಕೆಕುಸುಮಶರ ವಶನಾದ ವಾಲಿ ವಧೆಯವನಘವನಶಿಸಿ ನಿಜವೀವದಕ್ಕೆ ನಿಲುಕೆ1ಸುಗ್ರೀವ ಮೊದಲಾದ ವಾನರರ ನೆರಹಿದುದುಸ್ವರ್ಗದವರವರಾಗಲುದುರ್ಗತಿಸ್ಥ ಕಬಂಧ ಮೊದಲಾದವರ ಶಾಪನುಗ್ಗುನುಸಿಯಾಗುತಿರಲುದುರ್ಗರೂಪದ ಮೋಕ್ಷ ಭಜಕರಿಗೆ ವಶವೆಂದುಮಾರ್ಗ ಸೇತುವ ತೋರಲುನುಗ್ಗಿ ಲಂಕಾದ್ವೀಪದೊತ್ತಿನಲಿ ನಿಂದು ಅಪವರ್ಗಧಸಿಗೆಯ ಮಾಡಲು ಕೊಡಲು 2ಕರುಣರಸವೇ ಬಾಣವೆಣಿಸೆ ಪುಷ್ಪಸಮಾನದುರಿತ ಮಾರ್ಜನ ಪಾವನಧರಣಿಯೊಳಗಿರಲೇಕೆ ಪುರವರಕೆ ಬಾಯೆಂದುಕರೆವ ಪರಿಯವರ ಗಾನಧುರದಿ ಸಾಕ್ಷಾತ್ಕಾರಿಪ ಛಲವಿಡಿದ ರಾವಣನುನೆರೆ ತನ್ನ ತಿಳಿದ ಜಾಣತಿರುಪತಿಯ ವೆಂಕಟನು ಸಕಲರಿಗೆ ಮುಕ್ತಿಯನುಕರುಣದಿಂ ಕರೆದಿತ್ತನು ತಾನು 3 ಓಂ ವತ್ಸ ವಾಟೀಚರಾಯ ನಮಃ
--------------
ತಿಮ್ಮಪ್ಪದಾಸರು
ಮನೆಯೊಳಗಾಡೋ ನೆನೆವರ ನೋಡೋ ಪ ಮುನಿÀಸಬೇಡವೋ ಎನ್ನ ಮಾನಸವೆಂದೆಂಬ ಅ.ಪ ನಸುನಗೆಯನು ತೋರಿ ನುಸುಳಿ ಪೋಗುವೆಯೇಕೆ ಬಿಸಿಬಿಸಿ ಪಾಲನಿತ್ತು ಬೀಸಿ ಬೀಸಿ ತೂಗುವೆನು 1 ಬಡಮುನಿಗಳು ನಿನ್ನ ಪಿಡಿದೆಳೆಯೆ ಚಿಣ್ಣ ನುಡಿಯಿದು ಸಟೆಯೆನಬೇಡ ಕದ್ದೋಡಬೇಡ 2 ಎನ್ನದೆಂಬುದೆಲ್ಲ ನಿನ್ನದೋ ಮಾಂಗಿರೀಶ ನಿನ್ನ ನಾಮದ ನೆಲೆ ಎನ್ನದೆನ್ನಿಸೋ ರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮನ್ನಿಸಯ್ಯ ಮದನಜನಯ್ಯ ಘನ ಮುನ್ನೀರಶಯ್ಯ ಸ್ವಾಮಿ ಹಯವದನರಾಯಾ ಪ ಬಾರಿಬಾರಿಗೂ ಈತನ ಮಂದಿರದಲಿ ನಿನ್ನ ಚೆನ್ನಿಗ ರೂಪವ ತೋರೋ ನಿನ್ನ ಕರುಣದಿ ಅ.ಪ. ಈಶಾ ಭವಪಾಶಾ ಎಂಬೋ ಬೀಸಿದ ಬಲೆಯೊಳು ಗಾಸಿಗೆರೆದೆನೂ ರಂಗಾ ಕೃಪಾರಿಣ ವಾಸಿ ಪಂಥಗಳು ವಾಸುದೇವನೆ ಲೇಸ ಮಾರ್ಗವ ಕಾಣೆ ನಿನ್ನಾಣೆ ದಾಶರಥಿಯೇ ನಿನ್ನ ದಾಸರ ಕೂಡಿ ಸಂತೋಷಪಡುವ ಸಿರಿಯೆನಗಿತ್ತು ಸಲೆ ಮೀಸಲವ ಮಾಡೋ ದೇವರ ದಯಾಳೊ1 ಪಂಚಭೂತಗಳಲಿ ಪಂಚಾಗ್ನಿಗಳಲಿ ಪಂಚದ್ವಿಗುಣ ಪಂಚರಲಿ ಮತ್ತೆ ಪಂಚಪ್ರಾಣದಲಿ ಪಂಚವಿಂಶತಿ ಮಾರ್ಗ ತೋರೋ ಶ್ರೀಕಾಂತಾ ಪಂಚ ಹಿಡಿಸಿ ಪಂಚೊಂದೋಡಿಸಿ ಪಂಚನಾಲಕು ಭಕ್ತಿ ಕೊಂಚವಾಗದ ಹಾಗೆ ಸಂಚಿತಾಗಮಾ ಮುಂಚೆ ಓಡಿಸೋ ಶ್ರೀವತ್ಸಲಾಂಛನನೇ2 ಶ್ರೀನಿವಾಸನೇ ನಿನ್ನ ಧ್ಯಾನಮಾತ್ರದಿ ಬರುವೋ ಬಿಗನು ಅಘನಾಶÀನವೆಂದೊ ನಾನಿಂದೂ ಬೆಂಬಿದ್ದ ಅಬಲನ ಮನ್ನಿಸೋದಲ್ಲದೆ ಹೀಗೆ ಮುನಿಸೋರೇನೋ ಶ್ರೀಹರೆ ನಿನ್ನ ಸನ್ನಿಧಿಗೊಪ್ಪಿಸಿದೆನೊ ಮನ ಬಂದುದು ಮಾಡೊ ಘನತೆ ನಿನ್ನದು ದೇವಾ ದೀನ ದಯಾನಿಧೆ ಉರಗಾದ್ರಿವಾಸಾ 3
--------------
ಮಹಾನಿಥಿವಿಠಲ
ಮನ್ನಿಸೆನ್ನ ಮಧುಸೂದನ ಪ. ಮದನನಯ್ಯ ಮೋಹನಕಾಯಉನ್ನತಗುಣನಿಲಯ ಉಡುಪಿನ ಕೃಷ್ಣರಾಯ ಅ.ಪ. ಶ್ರುತಿಗಳ ತಂದೆ ಮುನ್ನ ಸುರಮುನಿಗಳ ಮನ-ಕತಿ ಹರುಷವ ಕೊಟ್ಟೆ ಅಗಣಿತಗುಣರನ್ನಯತಿಗಳ ಪಾಲಿಸಿದೆ ಮುಂದುವರಿವದಿತಿಜರ ಸೋಲಿಸಿದೆ ಈ ಮಹಿಯೊಳುಮತಿವಂತರ ಪೊರೆದೆ ಮಹಿಮೆಯಿಂದ ಮೆರೆದೆ1 ಅಚ್ಚಹಾರಶೋಭಿತ ಕಂಠ ಆಶ್ರಿತರಿಗೆ ನೀ ನಂಟಮೆಚ್ಚಿದ ಪಾರ್ಥನ ಮಿತ್ರನೆನಿಸಿದೆ ಸುಚರಿತ್ರಮೆಚ್ಚಿದ ನಿನ್ನಯ[ಭಕ್ತÀ್ತ]ವೈಕುಂಠದಮುಚ್ಚಳ ತೆಗೆಸಲು ಶಕ್ತ ಅಚ್ಚುತ ನಿನ್ನಅರ್ಚಿಸಿದವ ಕೃತಾರ್ಥ ಅವನೆ ಸರ್ವಸಮರ್ಥ2 ಎಂದೆಂದು ನಿನ್ನವರೊಳು ಎನ್ನ ಕೂಡಿಸೊ ಕೃಪಾಳುವಂದ್ಯ ಗರುಡನ ಸ್ಕಂಧವೇರಿ ಬಹ ಗೋವಿಂದತಂದೆ ನೀನೆ ತಾಯಿ ನೀನೆ ಹಯವದನಬಂಧು ನೀನೆ ಬಳಗ ನೀನೆ ಮತ್ತದರಿಂದಕುಂದುಮಾಡುವುದು ಬಿಡೋ ಕಂಡು ಕರುಣವ ಮಾಡೋ 3
--------------
ವಾದಿರಾಜ
ಮನ್ನಿಸೆನ್ನ ಮನ್ಮಥಜನಕ ಮಧು ಸೂ-ದನ್ನ ಮಂದರೋದ್ಧಾರ ನಿನ್ನ ನಂಬಿದೆ ನಿರಂತರದಿ ನೀನಿಹಪರದಲಿ ಕಾಯಯ್ಯ ಅ ಖಗ ತುರಂಗ ಜಗದಂತÀರಂಗವಿಧಿ ಕುರಂಗಧರ ನಮಿತ ಸಾರಂಗಪರಿಪಾಲ ಸುಗುಣಜಾಲ ಲಕುಮಿಲೋಲಕೃಪಾರಸತರಾಂಗಿತಾಪಾಂಗ ದುರಿತಭಂಗಧsÀೃತರಥಾಂಗ ಶುಭಾಂಗ 1 ಕಾರುಣ್ಯನಿಧಿ ಶರಣ್ಯವತ್ಸಲ ಲೋಕಶರಣ್ಯ ದೇವವರಣ್ಯ ಘನಶ್ಯಾಮ ಚರಣ ಕಮಲಕ್ಕೆ ಶರಣು ಹೊಕ್ಕೆ ತಾಮಸವ್ಯಾಕೆಸಲಹೊ ಶ್ರೀಧರ ಯದುವೀರ ದುರಿತದೂರವೇದಸಾರ ಗಂಭೀರ 2 ಸನಂದನಾದಿ ಮುನಿಪ್ರಿಯ ಸಚ್ಚಿದಾನಂದನಂದತನಯ ಏನೆಂದು ಪೇಳ್ವೆ ನಿನ್ನ ಮಾಯಾಮರೆಯಲರಿಯೆ ಯುಧಿಷ್ಠಿರ ಧನಂಜಯಸಹಾಯ ಶ್ರೀಕೃಷ್ಣರಾಯ ಸಹೃದಯಗೇಯ ನಮೋ ನಮೋ ಜೀಯ3
--------------
ವ್ಯಾಸರಾಯರು