ಒಟ್ಟು 1626 ಕಡೆಗಳಲ್ಲಿ , 110 ದಾಸರು , 1282 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಾಧನಕ್ಕೆ ಬಗೆಗಾಣೆನೆನ್ನಬಹುದೆ ಸಾದರದಿ ಗುರುಕರುಣ ತಾ ಪಡೆದ ಬಳಿಕ ಪ ಕಂಡಕಂಡದ್ದೆಲ್ಲ ಕಮಲನಾಭನ ಮೂರ್ತಿ ಉಂಡು ಉಟ್ಟದ್ದೆಲ್ಲ ವಿಷ್ಣು ಪೂಜೆ ತಂಡತಂಡದ ವಾರ್ತೆ ವಾರಿಜಾಕ್ಷನ ಕೀರ್ತಿ ಹಿಂಡು ಮಾತುಗಳೆಲ್ಲ ಹರಿಯ ನಾಮ 1 ವಾಗತ್ಯಪಡುವದೆ ವಿಧಿನಿಷೇಧಾರಚರಣೆ ರೋಗಾನುಭವವೆಲ್ಲ ಉಗ್ರತಪವು ಆಗದವರಾಡಿಕೊಂಬುವುದೆ ಆರ್ಶೀವಾದ ಬೀಗುರುಪಚಾರವೇ ಭೂತದಯವು 2 ಮೈಮರೆತು ಮಲಗುವುದೆ ಧರಣಿ ನಮಸ್ಕಾರ ಕೈಮೀರಿ ಹೋದದ್ದೆ ಕೃಷ್ಣಾರ್ಪಣ ಮೈ ಮನೋವೃತ್ತಿಗಳೆ ವಿಷಯದಲಿ ವೈರಾಗ್ಯ ಹೋಯ್ಯಾಲಿತನವೆಲ್ಲ ಹರಿಯ ವಿಹಾರ 3 ಹಿಡಿದ ಹಟ ಪೂರೈಸಲದು ಹರಿಯ ಸಂಕಲ್ಪ ನಡೆದಾಡುವೋದೆಲ್ಲ ತೀರ್ಥಯಾತ್ರೆ ಬಡತನವು ಬರಲದೇ ಭಗವದ್ಭಜನೆಯೋಗ ಸಡಗರದಲ್ಲಿಪ್ಪುದೆ ಶ್ರೀಶನಾಜ್ಞಾ 4 ಬುದ್ಧಿಸಾಲದೆ ಸುಮ್ಮನಿರುವುದೇ ಸಮ್ಮತವು ಯದೃಚ್ಛಾಲಾಭವೇ ಸುಖವುಯೆನಲು ಮಧ್ವಾಂತರ್ಗತ ಶ್ರೀ ವಿಜಯವಿಠ್ಠಲರೇಯ ಹೃದ್ಗತಾರ್ಥವ ತಿಳಿದು ಒಪ್ಪಿಸಿಕೊಳನೆ 5
--------------
ವಿಜಯದಾಸ
ಸಾಧನದ ಚಿಂತೆ ಎನಗ್ಯಾಕೊ ದೇವ ಮಾಧವನೆ ನಿನ್ನ ನಾಮ ಧರಿಸಿಕೊಂಡಿರುವವಗೆ ಪ ನಿನ್ನ ಚಿತ್ತಕೆ ಬಂದ ಅನುಭವವೆ ಸಾಧನವೊ ಅನ್ಯಥಾ ಬೇಕಿಲ್ಲ ದೋಷರಹಿತ ಎನ್ನ ಮನ ತನು ಕರಣತ್ರಯಗಳನು ನೀ ಮಾಳ್ಪೆ ಅನ್ಯಸಾಧನವ್ಯಾಕೊ ಪಾವನ್ನ ಸಚ್ಚರಿತ 1 ನಡೆವುದೇ ಯಾತ್ರೆಗಳು ನುಡಿವುದೇ ಸ್ತೋತ್ರಗಳು ಬಿಡದೆ ನೋಡುವುದೆಲ್ಲ ನಿನ್ನ ಮೂರ್ತಿ ಒಡನೆ ಕೇಳುವ ಶಬ್ದ ನಿನ್ನ ಮಂಗಳ ಕೀರ್ತಿ ಪಡುವ ಭೋಗಗಳೆಲ್ಲ ನಿನ್ನ ಉಪಚಾರ 2 ಪಾಪ ತೊಳೆವುದಕಿನ್ನು ದುಃಖ ಪ್ರಾಯಶ್ಚಿತ್ತ ತಾಪ ಯೋಚನೆಗಳೆಲ್ಲ ತಪಸು ವಿಭುವೆ ಗೋಪ ಚೂಡಾರತ್ನ ಜಯೇಶವಿಠಲ ಈ ಪಾತ್ರದೊಳಗಿದ್ದು ನೀ ಮಾಳ್ಪ ಸಾಧನವೊ 3
--------------
ಜಯೇಶವಿಠಲ
ಸಾಧುರ ಸಂಗವ ಮಾಡೋ ಪ್ರಾಣಿ | ಸಾಧುರ ಸಂಗಾ ಮಾಡಲು ಯೋಗಾ | ಸಾಧಿಸಿ ಬಾಹುದು ನೋಡೋ ಪ್ರಾಣಿ ಪ ಅತಿ ಬಳಲಿಸುವ ತಾಪತ್ರಯದೊಳಗ | ಮತಿಗಾಣದೆ ನೋಯ ಬ್ಯಾಡೋ ಪ್ರಾಣೀ | ಮತಿಯುತನಾಗಿ ಭವಖೋರೆ ದಾಟುವ | ಪಥವಾನರಿತು ಬ್ಯಾಗ ಕೂಡೋ ಪ್ರಾಣೀ 1 ಕ್ಷೀರ ನೀರ ವಿಭೇದವ ಮಾಡುವ ಮುಕ್ತಾ | ಹಾರನ ಗುಣ ಭರಣೀ ಮಾಡೋ ಪ್ರಾಣೀ | ಚಾರು ವಿವೇಕದಿ ಸೇವಿಸಿ ಸಾರಾವ | ಸಾರಾ ತ್ಯಜಿಸಿ ನಲಿದಾಡೋ ಪ್ರಾಣಿ 2 ಪರಿ ಜನದಲಿ ಮನವನು ಸಂಸಾರಲಿಡೋ ಪ್ರಾಣೀ ತನುಧನ ಬೆರಿಯದೆ ಮಹಿಪತಿಸುತ ಪ್ರಭು ವಿನ ಸ್ತುತಿ ಸ್ತವನವ ಪಾಡೋ ಪ್ರಾಣೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಾಧುಸಂಗ ಶೀಘ್ರಕೂಡಿಸೊ ಪ ಎಷ್ಟು ದಿನ ಕಷ್ಟಪಡುವದೋಈ ಭವದೊಳು ಈಸಲಾರೆನಯ್ಯ ಹರಿಯೇ ಇಷ್ಟು ದಿನ ಇದ್ದಂತೆ ಇರಲಾರೆನೆಂದು ಕರವ ಮುಟ್ಟಿ ಮುಗಿದು ಬೇಡಿಕೊಂಬೆ ಮುರಾರಿ ಕೃಷ್ಣ ನೀನೇ ಕಾಯೋ 1 ಹರಿಹರರು ಸಮಾನರೆನ್ನದಾ ಈ ಸಜ್ಜನರಾ- ಸಂಗದಿಂದ ಹೀನಾ ನಾನಾದೆ ಇನ್ನುಮ್ಯಾಲೆ ಇಲ್ಲವಯ್ಯ ಸೃಷ್ಟಿಗಧಿಕ ಶ್ರೀನಿವಾಸಾ ಇನ್ನು ನಿನ್ನ ಸ್ಮರಣೆಯಿಂದ ಇರುವೆನಯ್ಯ ಮುಕುಂದ 2 ಪೃಥ್ವಿಯಲ್ಲಿ ಪುಟ್ಟಿದಾ ಮೊದಲು ನಿನ್ನಾ ವೃತ್ತಾಂತ ಒಂದು ದಿನ ಮಾಡಲಿಲ್ಲವೋ ಎಂದು ಎನ್ನ ಮ್ಯಾಲೆ ಕ್ರೂರದೃಷ್ಟಿಯಿಂದಾ ನೋಡಾದೀರು ವಾಸುದೇವ ವೈಕುಂಠವಾಸ ಲಕ್ಷುಮಿ ರಮಣ3 ನಿತ್ಯದಲ್ಲಿ ವಿಪ್ರರಾ ವೃಂದಾದೊಳಗೆ ನಾ ಆ- ಸಕ್ತನಾಗಿ ಇರುವೆ ಮುಕುಂದಾ ಎಂಥ ಪಾಪಿ ಎಂದು ಉದಾಸೀನಮಾಡಿ ನೋಡಬೇಡ ನಿನ್ನ ಕಂದಾನೆಂದು ತಿಳಿದು ಪಾಲಿಸಯ್ಯ ನಾರಾಯಣ 4 ಹನುಮ ಭೀಮ ಮಧ್ವೇಶಾರಿಂದಾ ಸೇವಿತ ಪ್ರಿಯಾ ಶಾಂತಮೂರ್ತಿ ಶಾಮವರ್ಣನೇ ಶ್ರೀದವಿಠಲೇಶಾ ನಿನ್ನಾ ದಾಸನೆಂದು ಪಾಲಿಸೆನ್ನ ಸಾರಿ ಬೇಡಿಕೊಂಬೆನಯ್ಯ ರಾಮಚಂದ್ರ ರಾವಣಾಚಾರಿ5
--------------
ಶ್ರೀದವಿಠಲರು
ಸಾಂಬ ಶಿವ ಶರಣರಿಗೊಂದು ಶರಣಾರ್ಥಿ ಪ ನರಲೋಕದೊಳಗೆ ಸಂಚಾರವ ಮಾಡುವ ಪರಮಾತ್ಮ ಪರಿಪೂರ್ಣ ಎಲ್ಲ ಜೀವದೊಳೆಂದು ಅರಿತಂಥವನಿಗೊಂದು ಶರಣಾರ್ಥಿ ಮರೆಹೊಕ್ಕ ದೀನರನು ರಕ್ಷಿಪ ಪುಣ್ಯ ಪುರು ಪುರುಷ ಪ್ರಯತ್ನದಿಂದುದ್ಯೋಗವನು ಮಾಳ್ಪ ಸರಿವಂಥವರಿಗೊಂದು ಶರಣಾರ್ಥಿ 1 ಧಾರಣಿಯೊಳು ಪೆಸರೊಡೆದು ರಂಜಿಸುವಂಥ ಕಾರುಣಿಕರಿಗೊಂದು ಶರಣಾರ್ಥಿ ದವರಿಗೊಂದು ಶರಣಾರ್ಥಿ ನಿತ್ಯ ಕರ್ಮವ ರಚಿಸುವ ಚಾರು ಶೀಲರಿಗೊಂದು ಶರಣಾರ್ಥಿ ಸ್ಸಾರ ಮಾಡಿದಗೊಂದು ಶರಣಾರ್ಥಿ 2 ಕೆರೆಭಾವಿ ದೇವಾಲಯಗಳ ಕಟ್ಟಿಸಿ ದೇವರುತ್ಸವವನು ಬರಿಸುವಗೆ ದ್ಧರಿಸಿ ಭುಂಜಿಪಗೊಂದು ಶರಣಾರ್ಥಿ ಪರದಾರ ಪರದ್ರವ್ಯ ಪರದ್ರೋಹವಿಲ್ಲದ ಮಹಾ ಪುರುಷರಿಗೊಂದು ಶರಣಾರ್ಥಿ ಹರಿಹರರೊಳಗೆ ಭೇದವ ಮಾಡಿ ನಡೆಯದ ದುರಿತ ದೂರರಿಗೊಂದು ಶರಣಾರ್ಥಿ 3 ಸತ್ತು ಹುಟ್ಟುವ ಭವಶರಧಿಯ ಗೆಲುವಂಥ ಉತ್ತಮರಿಗೊಂದು ಶರಣಾರ್ಥಿ ನಿತ್ಯ ಸಾಲಿಗ್ರಾಮಂಗಳನು ಪೂಜಿಸಿ ಹರಿ ತೀರ್ಥಗೊಂಬನಿಗೊಂದು ಶರಣಾರ್ಥಿ ಕೃತ್ತಿ ವಾಸನ ಆಗಮೋಕ್ತದಿ ಪೂಜಿಪ ಭಕ್ತಿವಂತರಿಗೊಂದು ಶರಣಾರ್ಥಿ ತತ್ವ ವಿಚಾರ ವೇದಾಂತದ ಅರ್ಥವ ಯಾ ವತ್ತರಿದವಗೊಂದು ಶರಣಾರ್ಥಿ 4 ಅರವಟ್ಟಿಗೆಯನು ಚೈತ್ರದೊಳಿಕ್ಕಿ ಜನರಿಗೆ ನೀರೆರಸಿದವರಿಗೊಂದು ಶರಣಾರ್ಥಿ ಸಿರಿ ತುಳಸಿಯನ್ನು ನೇಮದಲಿ ಪೂಜಿಸುವಂಥ ಹರಿ ಶರಣರಿಗೊಂದು ಶರಣಾರ್ಥಿ ತರಣಿಯೆ ತ್ರಿಗುಣಾತ್ಮಕನೆಂದು ಹೃದಯದೊಳರಿ ದೆರಗುವಗೊಂದು ಶರಣಾರ್ಥಿ ಮರುಸುತನ ಕೋಣೆ ವಾಸ ಲಕ್ಷ್ಮೀಶನ ಚರಣ ಪಂಕಜಕೊಂದು ಶರಣಾರ್ಥಿ 5
--------------
ಕವಿ ಪರಮದೇವದಾಸರು
ಸಾಮಜಾದ್ರಿ ನಿವಾಸ | ಮಮ ಹೃದಯ | ಸದ್ದಾಮದಲಿ ಆವಾಸ |ಸೌಮನಸ್ಯವ ಕಾಮಿಸುವೆ ಮನಕೀಶ | ನಾ ನಿಮ್ಮ ದಾಸಾ ಪ ಶ್ರೀ ಮನೋಹರನಂಘ್ರಿ ಕಮಲವ | ಯಾಮ ಯಾಮಕೆ ಭಜಿಸಿ ಹಿಗ್ಗುವ ಆಮಹಾತ್ಮರ ಚರಣ ರಜವನು | ಕಾಮಿಸುವೆ ಕರುಣಾಳು ಗುರುವರ ಅ.ಪ. ಘಾಸಿ ಪಡುತಲಿ ಬಂದ | ಪಾಪಾತ್ಮಯೆನ್ನಯಕ್ಲೇಶ ಹರಿಸಲು ಛಂದ | ಅಂಕಿತವನುಪದೇಷಿಸಿದೆ ನೀ ನಲವಿಂದ | ಕರುಣಾಳು ನಿನ್ನಯದಾಸ ಜನಗಳ ವೃಂದ | ಸೇವೆ ಕೊಡು ಆನಂದ || ವಿಷಯ ದಾಸೆಯ ಹರಿಸೊ ಗುರುವರ | ಬಿಸುರುಹಾಂಬಕನಂಘ್ರಿ ಕಮಲವ ಒಸೆದು ಸ್ಮರಿಸುವ ಮತಿಯನಿತ್ತು | ಎಸೆವ ಹರಿಯಪರೋಕ್ಷ ಪಾಲಿಸೊ 1 ವತ್ಸರ ಸುವಿಕ್ರಮವರ ನವಮಿ ಮಧ್ಯದಿನಂದೂ | ನಿಶ್ಚಯಿಸಿ ಮನದಲಿನರನಟನೆ ಉಪರಮಿಪೆನೆಂದೂ | ತನುವ ತ್ಯಜಿಸಿದೆ ಅಂದೂ ||ಸಾರ ಭಕುತರು ಸೇವೆ ಗೈಯಲು | ಕರಿಗಿರೀಯಲಿ ಒಂದು ಅಂಶದಿವರವ ಪಾಲಿಪುದಕ್ಕೆ ನೆಲೆಸಿದೆ | ಧೀರ ಕರುಣಾಪಾರ ಗುರುವೇ 2 ಚಾರು ಚರಣವ ತೋರು ಗುರುವೇ 3
--------------
ಗುರುಗೋವಿಂದವಿಠಲರು
ಸಾಮಧಾನವು ಸಾಮಧಾನ ಪವಮಾನ ಶ್ರೀಮನ್ಮಹಾಸುಗುಣಧಾಮ ಸುತ್ರಾಣ ಪ. ಲೋಕ ಮುಳುಗುವದು ನೀನೀ ಕೆಲಸಮಂಗೈಯೆ ಸಾಕುವವರ್ಯಾರು ಜಗದೇಕವೀರ ಶ್ರೀಕಾಂತಸುಪ್ರೀತ ಶೋಕಮೋಹವಿಧೂತ ಪರಾಕು ಮುಖ್ಯಪ್ರಾಣ 1 ಜಗಕೆ ನೀನಾಧರ ಜನ್ಮ ಮೃತಿಭಯದೂರ ಚಾಗಮಾಗಮವಿಚಾರ ನಿತ್ಯಶೂರ ಸುಗುಣನಿಧಿ ಲಕ್ಷುಮಿನಾರಾಯಣನ ಕಿಂಕರನೆ ಮಗುಚಬೇಡೈ ಧರೆಯ ಮುಗಿವೆ ನಾ ಕೈಯ2
--------------
ತುಪಾಕಿ ವೆಂಕಟರಮಣಾಚಾರ್ಯ
ಸಾರ ಸರ್ವಸ್ವವನುತಿಳಿಯಾದ ಭಾಷೆಯಲಿ ತಿಳಿಸಿದ ಸಮರ್ಥನಿಗೆ 1ಪಾಂಡಿತ್ಯ ಮದದಿ ಸ್ವೋತ್ತವರ ದ್ರೋಹವಮಾಡಿತತ್ಫಲವನುಂಡು ಮನಗಂಡು ಬೆಂದುಬೆಂಡಾಗಿಬಂದು ಶರಣೆಂದು ಪಾದಕೆಬೀಳೆ'ಜಯ ಗೋಪಾಲ ದಾಸರು ಅನುಗ್ರ'ಸಿದರು 2ಸದ್ಭಕ್ತ ಸುಜ್ಞಾನ ವೈರಾಗ್ಯ ಆಯುಷ್ಯದಯಪಾಲಿಸಿದು ದಾಸ ದ್ವಯರಿಗೆವೈರಾಗ್ಯ ಒಡಮೂಡಿ ಪಾಂಡಿತ್ಯ ಮದ ಓಡಿಹರಿದಾಸ ದಿಕ್ಷೆಯನು ಪಡೆದಾಗ ಶ್ರೀನಿವಾಸಚಾರ್ಯ ಹರಿದಾಸ ನಾದ 3ಗುರು ಆಜ್ಞೆ ಕೊಡಲು ಪಂಢರಿಗೆ ಹೋದರು ಅಲ್ಲಿರುಕ್ಮಿಣಿ ಪಾಂಡುರಂಗನ ಔತಣಚಂದ್ರಭಾಗಿಯಲಿ 'ಜಗನ್ನಾಥ'ಠಲ'ನೆಂಬ ಅಂಕಿತವು ದೊರಕಿತು ಸ್ನಾನಕಾಲದಲಿ 4ನಿತ್ಯ ಹರಿನಾಮ ಸಂಕೀರ್ತನವು ಹಗಲಿರಳು ನಿತ್ಯನೂತನ ಪದ ಸುಳಾದಿಗಳ ಸುಗ್ಗಿನಿತ್ಯ ಸದ್ಭಕತರಿಗೆ ಪಾಠ ಪ್ರವಚನಭಕ್ತರಾಧೀನ ಭೂಪತಿ'ಠ್ಠಲನು ಕುಣಿದ 5
--------------
ಭೂಪತಿ ವಿಠಲರು
ಸಾರಸದಳ ನಯನೆ-ಸಲಹೆಮ್ಮನು ತೋರುವ ಜಗದಯನೆ ಪ ಶರಧಿ ಸುಕುಮಾರಿಣಿ ಹರಿ ಸಹ ಚಾರಿಣಿ ಭುವನ ವಿದಾರಿಣಿ ರುಕ್ಮಿಣಿ ಅ.ಪ. ಮಂದಹಾಸ ವಿಜಿತೇಂದು ಕಿರಣಿ ಗಜ ಮಂದಗಮನೆ ಸಂಕ್ರಂದನ ವಂದಿತೆ 1 ನೀರಜಸಮಪಾಣಿ ನೀ ಲಾಲಿಸು ಕೀರಮಧುರ ವಾಣಿ ತಾರಹಾರ ಶೃಂಗಾರತರಂಗಿಣಿ- ಮಾರಜನನಿ ಕಂಸಾರಿಯ ರಾಣಿ 2 ನೀಲಭುಜಗವೇಣಿ-ನೀನೇಗತಿ ಪಾಲಿಸು ಕಲ್ಯಾಣಿ ಬಾಲೆ ವರದ ವಿಠಲ ರಮಣಿ 3
--------------
ಸರಗೂರು ವೆಂಕಟವರದಾರ್ಯರು
ಸಾರಸನಯನ ನಮೋ ನಮೋ ಪ ನಾರಾಯಣ ಗೋವಿಂದ ನಮೋ ಅ.ಪ. ದೀನ ಜನಾವನ ದಾನವ ಮಥನ ಶ್ರೀ ನಿಕೇತನ ಕೌಸ್ತುಭಾಭರಣ 1 ದಾಮೋದರ ದುರಿತಾರಿ ಪರಾತ್ಪರ ಹೇಮಾಂಬರಧರ ವನಮಾಲಾಧರ 2 ಸಾರಸಾಪ್ತನು ಸಾರುತಿಹನು ತವ ಸಾರಸಪಾದದ ಚಾರುದರುಶನಕೆ 3 ಮಾರ್ತಾಂಡನ ಬಲು ಚಂಡಕಿರಣವೆಮ್ಮ ನೇತ್ರಪಟುತ್ವ ಕುಂದಿಸುವುದು ಕೇಳ್ 4 ತರಣಿ ಪ್ರಕಾಶದಿ ತಪಿಸುತಿಹೆವು ನಾವ್ ಪೊರೆವುದೆಮ್ಮನು ಕರಿಗಿರೀಶನೆ 5
--------------
ವರಾವಾಣಿರಾಮರಾಯದಾಸರು
ಸಾರಸಭವ ಮೋಹಿತೆ ದೇವಿ ಜಗನ್ಮಾತೆ ಪ ಚಾರುಕೀರ್ತಿ ಪರಿಶೋಭಿತೆ ಲಾವಣ್ಯಾಂಬರಭೂಷಿತೆ ಅ.ಪ ಸುರನುತೆ ಶಾರದೆ ಬುಧಗಣಸೇವಿತೆ ಮಯೂರರಂಜಿತೆ ವರ ಮಾಂಗಿರಿವರ ಭಾವಿತೆ ಪಾಹಿಮಾಂ ಲೋಕವಂದಿತೆ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸಾರಸಾಕ್ಷಿ ಬಾ ಬಾ ಬೇಗ ಸಾರಿ ನೀಂಪ. ಸಾರಸಾಕ್ಷಿ ಬೇಗ ಚಾರುಪೀಠಕೀಗ ಅ.ಪ. ಭೇರಿ ತಮ್ಮಟಾದಿ ಭಾರಿವಾದ್ಯಂಗಳೂ ಭೊರ್ಗರೆಯುತಿರಲು ನೀರೆ ನೀ ಭರದೊಳು 1 ಭಾರ್ಗವಿ ಕಲ್ಯಾಣಿ ದೇವದೇವನರಾಣಿ ಶ್ರೀಮತೀ ಪದ್ಮಿನಿ2 ಕ್ಷೀರವಾರಿಧಿಜಾತೆ ಮಾರವೈರಿವಿನುತೆ ವಾರಿಜಾಸನ ಮಾತೆ ಸಾರಿ ಬಾ ಪ್ರಖ್ಯಾತೆ 3 ಶೇಷಶೈಲನಿಲಯೆ ವಾಸವಾದಿಗೇಯೆ ವಾಸುದೇವಜಾಯೆ ವಸುಮತೀ ತನಯೆ 4
--------------
ನಂಜನಗೂಡು ತಿರುಮಲಾಂಬಾ
ಸಾರಿ ಭಜಿಸಿರೋ | ವಿಜಯ ಗುರುಗಳೆಂಬರಾ ಪ ಚಾರು | ಚರಣ ತೊರ್ಪರಾ ಅ.ಪ. ಸತ್ರಯಾಗದೀ ಗಂಗೆ | ಕ್ಷೇತ್ರ ತೀರದಿಭ್ರಾತೃವರ್ಗವೂ ಅವರ ತುತಿಸಿ ಕಳುಹಲೂ 1 ಗಿರಿಜೆ ರಮಣನಾ ಪುರವ | ಸಾರಿ ಬೇಗನೇಮಾರ ಕೇಳಿಯಾ ನೋಡಿ | ಗಿರಿಯ ತ್ಯಜಿಸಿದಾ 2 ಚತುರವದನನಾ ದಿವ್ಯ | ಸತ್ಯಲೋಕವಾಚತುರ ಸೇರುತಾ ಅವನ | ಸ್ತುತಿಯ ಮಾಡಿದ 3 ವೇದ ಪಠಿಸುತಾ | ಬಧಿರನಂತಿರೇವದಗಿ ಸಾಗಿದಾ | ನಾರ್ದ ದೂತನೂ4 ಹರಿಯೆ ಕಾಣುವೆ ಎಂದು | ತ್ವರದಿ ಬಂದನೂಹರಿಯ ಮಾಯವಾ ಜಗದಿ | ಯಾರು ಅರಿವರು 5 ನಿದ್ರೆ ಬಂದವಾ | ನಂತೆ ಮಲಗಿಹಾಭದ್ರ ಮೂರ್ತಿಯಾ ತಾನು ಕಾಲಿಲೊದ್ದನು 6 ಪಾದ ಒತ್ತುತಾಮೋದ ಬಡಿಸಿದಾ ತಾನು | ಸಾಧು ಮುನಿಯನು 7 ಹರಿಯೆ ಪರನೆಲ್ಲಾ | ಹರಿಯ ಸರ್ವಜ್ಞಾಹರಿಗಿನ್ನಿಲ್ಲವೋ | ಸಮರು ಅಧಿಕರವಾ 8 ಎಂದು ಸ್ಥಾಪಿಸೀ | ತಾನು ಬಂದು ನಿಂತನುಛಂದದಿಂದಲಿ ಯಜ್ಞ | ಸಾಂಗಗೈಸಿದಾ 9 ಪದಸುಳ್ಹಾದಿಯಾ | ರಚಿಸಿ ಮೋದದಿಂದಲೀವೇದ ಸಾರವಾ | ಜನಕೆ ಬೋಧಿಸೀರುವಾ 10 ಪವನನಯ್ಯನಾ ಗುರು | ಗೋವಿಂದ ವಿಠಲನಾಸ್ತವನ ಮಾಡುತ ತಾನು | ಭವವ ಕಳದನಾ 11
--------------
ಗುರುಗೋವಿಂದವಿಠಲರು
ಸಾರಿ ಭಜಿಸಿರೋ ಟೀಕಾಚಾರ್ಯರಂಘ್ರಿಯಾ ಪ ಘೋರ ಪಾತಕಾಂಬುಧಿಯ ದೂರ ಮಾಳ್ಪರ ಅ.ಪ ಮೋದತೀರ್ಥರ ಮತವ ಸಾಧಿಸುವರ | ಪಾದ ಸೇವ್ಯರ ದುರ್ಬೋಧ ಕಳೆವರ 1 ಭಾಷ್ಯತತ್ವ ಸುವಿಶೇಷ ಮಾಳ್ಪರ | ದೋಷ ದೂರರ ವಾಸವಾದಿ ರೂಪರ2 ಶ್ಯಾಮಸುಂದರ ಹರಿಗೆ ಪ್ರೇಮಪೂರ್ಣರÀ | ನೇಮನಿತ್ಯದ ನಿಷ್ಕಾಮನಾ ವರ 3 ಮೋಕ್ಷದಾತರ ಅಕ್ಷೋಭ್ಯತೀರ್ಥರ ಅ- | ಶಿಕ್ಷಿತಾದರ ಅಪೇಕ್ಷ ರಹಿತರ 4 ಅಂಘ್ರಿ ಭಜನೆ ಮಾಳ್ಪರ | ಕುಜನ ಭಂಜರ ದಿಗ್ವಿಜಯ ರಾಯರ5
--------------
ವಿಜಯದಾಸ
ಸಾರಿರೊ ಡಂಗುರವ ನಮ್ಮ ಪ ಭಾರತಿರಮಣ ವಾಯುವೆ ಜಗದ್ಗುರುವೆಂದು ಅ.ಪ ಭೋರಿಡುತಲಿಪ್ಪ ಸಮುದ್ರವ ಲಂಘಿಸಿಧಾರುಣಿಸುತೆಯ ದುಃಖವ ಕಳೆದುಚೋರರಾವಣ ವನವನಲಗಾಹುತಿಯಿತ್ತುಶ್ರೀರಾಮಗೆರಗಿದಾತನೆ ಪ್ರಸಿದ್ಧನೆಂದು 1 ಕುಶಲದಿ ಕುಂತಿಗೆ ಮಗನಾಗಿ ಭೀಮನೆ-ನಿಸಿ ಆ ಕೌರವ ಕಪಟದಲಿ ಕೊಟ್ಟವಿಷದ ಕಜ್ಹಾಯವ ತಿಂದು ಜೀರ್ಣಿಸಿಕೊಂಡಅಸಮ ಬಲಾಢ್ಯ ಮೂರುತಿಯೆ ಬದ್ಧವೆಂದು 2 ಕಲಿಯುಗದÀಲಿ ಮಧ್ಯಗೇಹಾಭಿಧಾನದತುಳುವ ಬ್ರಾಹ್ಮಣನಲಿ ಅವತರಿಸಿಒಲಿದು ಶ್ರೀ ಅಚ್ಯುತಪ್ರೇಕ್ಷಾಚಾರ್ಯರಿಂ-ದಲಿ ಆಶ್ರಮಗೊಂಡ ಪೂರ್ಣಪ್ರಜ್ಞನೆಂದು 3 ಕಾಲ ಪ್ರಳಯದ ಸಿಡಿಲು ಬಂದೆರಗಿದಂತೆಕಾಲಿಂದ ತುಳಿದವನಸುವಗೊಂಡನು ಎಂದನು 4 ಬಳಿಕ ಇಪ್ಪತ್ತೊಂದು ದುರ್ಭಾಷ್ಯಂಗಳಹಳಿದು ವೇದಾಂತ ಶಾಸ್ತ್ರಂಗಳಲಿಉಳುಹಿ ವೈಷ್ಣವ ಮತವವನಿಯೊಳಗೆ ನಮ್ಮಸಲಹುವ ಮಧ್ವೇಶ ಕೃಷ್ಣ ಪ್ರಿಯನೆಂದು5
--------------
ವ್ಯಾಸರಾಯರು