ಒಟ್ಟು 6414 ಕಡೆಗಳಲ್ಲಿ , 131 ದಾಸರು , 4170 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಣೇಶ ಪ್ರಾರ್ಥನೆ ಸಿಂದೂರ ವದನ ಕೊಡುವರ ಸಿಂದೂರ ವದನ ಪ ಇಂದುಧರಾತ್ಮಜ ವಂದಿಸುವೆನಾ ಅ.ಪ ಮುದಮುನಿ ಮತಾಂಬುಧಿಚಂದಿರ ಬುಧಜನ ಪ್ರಸಂಗದಿ ಭವಹರ ಮಧು ವಿರೋಧಿಯ ಕಥಾಮೃತಶ್ರವಣದಿ ಒದಗಿಸು ಮಮ ಸುಜ್ಞಾನ ಮಾನಸದಿ 1 ಭಜಕರ ಮನೋರಥ ಪೂರಕ ಸುಜನರ ಭವಾಂಬುದಿ ತಾರಕ ವಿಜಯ ಸಾರಥಿಯ ಭಜನೆಯ ಮಾಡಿಸೋ ವಾರಿಧಿ ಕುಂಭ ಸಂಭವ 2 ಗಿರಿಜೆಯ ಕುಮಾರ ಕೃಪಾಕರ ಶರಧಿಜೆ ಮನೋಹರ ಕಾರ್ಪರ ನರಮೃಗೇಂದ್ರ ಚರಣಾಂಬುಜ ಮಧುಕರ ಕರುಣೆಸೆನಗೆ ಸಿದ್ಧಿಯನು ಕಾರ್ಯದಲಿ 3
--------------
ಕಾರ್ಪರ ನರಹರಿದಾಸರು
ಗತಿ ಯಾವುದೆನಗೆ ಶ್ರೀಪತಿಯೆ ಪೇಳೊ ಪ ಪರ ಸತಿಯರನು ಬಯಸುವೆನೊ ಅ.ಪ. ಕರ ಸೂಚನೆಯ ಮಾಡಿ ತರುಣಿಯರ ತಕ್ಕೈಸಿ ಸರಸವಾಡಿ ಇರುಳು ಹಗಲು ಹೀಗೆ ದುರುಳತನದಲಿ ತಿರುಗಿ ಧರೆಯೊಳಗೆ ನಾನೊಬ್ಬ ಹರಿದಾಸನೆನಿಸಿದೆನು 1 ನಾಚಿಕಿಲ್ಲದಲೆ ಬಲು ನೀಚರಲ್ಲಿಗೆ ಪೋಗಿ ಯೂಚಿಸುವೆ ಸನ್ಮಾರ್ಗ ಯೋಚಿಸದಲೆ ಆ ಚತುರ್ದಶ ವರುಷರಾರಭ್ಯ ಈ ವಿಧದಿ ಅಚರಿಪೆನೈ ಸವ್ಯ ಸಾಚಿಸಖ ಶ್ರೀ ಕೃಷ್ಣ 2 ನಾನು ನನ್ನದು ಎಂಬ ಹೀನ ಬುದ್ಧಿಗಳಿಂದ ಜ್ಞಾನ ಶೂನ್ಯನು ಆದೆ ದೀನ ಬಂಧು ಸಾನುರಾಗದಿ ಒಲಿದು ನಾನಾ ಪ್ರಕಾರದಲಿ ನೀನೆ ಕರುಣಿಸು ಹರಿಯೆ ಜ್ಞಾನಗುಣ ಪರಿಪೂರ್ಣ 3 ಅಂಬುಜಾಕ್ಷನೆ ನಿನ್ನ ನಂಬಿ ಭಜಿಸುವರ ಪಾ ದಾಂಬುಜಕ್ಕೆರಗದಲೆ ಸಂಭ್ರಮದಲಿ ತಂಬೂರಿಯನು ಪಿಡಿದು ಡಂಭತನದಲಿ ನಾನು ಶಂಬರಾರಿಗೆ ಸಿಲುಕಿ ಬೆಂಬಿಡದೆ ಚಾಲ್ವರಿದೆ 4 ಪರಮೇಷ್ಟಿಯಾರಭ್ಯ ತ್ರಣಜೀವ ಪರ್ಯಂತ ತರತಮವ ತಿಳಿಸಿ ತರುವಾಯದಲ್ಲಿ ಗುರುಹಿರಿಯರಲಿ ಭಕುತಿ ವೈರಾಗ್ಯವನೆ ಕೊಟ್ಟು ಸಿರಿಜಗನ್ನಾಥ ವಿಠಲ ನಿರುತ ನೀ ಪೊರೆಯದಿರೆ 5
--------------
ಜಗನ್ನಾಥದಾಸರು
ಗದ್ಯ ದಂಡಕ ಅಧರ ಚುಬುಕ ದಂತಗಳ 10 ಅಗರು ಚಂದನದಮುತ್ತಿನ ಮಲುಕು ಪೆಂಡೆಯಸರ ಕೊರಳಲ್ಲಿಹತ್ತೆಗಟ್ಟಿದ ವಾಗ್ಗೊರಳು ಮುತ್ತುಗಳಮುತ್ತು ಮಾಣಿಕ ನವರತ್ನದ ಚಿಂತಾಕ-ವತ್ತಿ ಸೇರಿದ ಕಂಠಮಾಲೆ ಸರಗಳ 20 ಮಣಿ ತಾಯಿತ್ತುಮೆರೆವ ಹಮ್ಮೀರ ತಾಯಿತಿ ಕಾಂತಿಗಳಕಡಗ ಕಂಕಣ ಸುರಿಗೆ ಬಿಚ್ಚು ಬಳೆಗಳುಹಿಡಿವುಡಿಯಲ್ಲಿ ವಜ್ರದ ಥಳವುಗಳಕಡು ಮೋಹವಾದ ಮುರುಡಿಯ ಸರಪಣಿಝಡಿವ ಮುಂಗೈಯ ಮುರಾರಿ ಕವಡೆಯ30 ನೀಲ ವೈಜಯಂತಿ ಮಾಲೆ ಶೋಭಿಸುವ 40 ಕದಳಿ ನಖ ಚಂದ್ರಿಕೆಯ 50 ಕಮಲ ವಾಸವಾಗಿಪ್ಪ ಕೃಷ್ಣನಪದುಮ ಚರಣಕ್ಕೆ ನಮೊ ನಮೊ ನಮೋ ಎಂಬೆ ನಾ. 60
--------------
ವ್ಯಾಸರಾಯರು
ಗಮಿಸಿ ಜನರು ನಿಮ್ಮ ಗೃಹಗಳಿಗೆ ುೀಗರಮೆಯರಸಗೆ ನಿದ್ರೆ ರಾಜಿಪುದಾಗಿ ಪನಿಜರೂಪನಾಗಿದ್ದು ನಿಖಿಳವ ನಿರ್ಮಿಸಿರುಜುವಾಗಿ ಜೀವರ್ಗೆ ರಾಗವ ಸಲಿಸಿಭಜಿಸಲು ತನ್ನನು ಬಹು ರೂಪಗಳ ತಾಳಿಯಜನ ತೀರಲು ನಿದ್ರೆಗೈದುವನಾಗಿ 1ಸರಸಿಜೋದ್ಭವನಾಗಿ ಸ್ಟೃಸಿ ಲೋಕವಧರಿಸಿ ಸತ್ವವ ಹಾಗೆ ದೇವನು ಕಾಯ್ವಎರಗಿದವರಿಗಿಷ್ಟವೀಯುತ ಸರ್ವತ್ರಚರಿಸುವನೀ ಶ್ರಮಶಮವಾಗಲಿ 2ವರಿಸುವ ಜನರೀತಗೊಬ್ಬರಲ್ಲಮಿತವುನೆರೆದಿರೆ ವರಗಳ ನೀಡುವ ದಿಟವುವರದ ಶ್ರೀ ತಿರುಪತಿ ವೆಂಕಟಗಿರಿಪ್ರಭುವುವರಿಸಲಿ ನಿದ್ರೆಯ ಹರೆಯಲೋಲಗವು 3ಓಂ ಜಗದ್ಗುರವೇ ನಮಃ
--------------
ತಿಮ್ಮಪ್ಪದಾಸರು
ಗರುಡಧ್ವಜ ಮಾಧವತ್ವಚ್ಚರಣಾಬ್ಜಕೆ ಶರಣು ಪರಿಭವವೆಂದಿಗು ಬಾರದ ತೆರದಲಿ ಸಲಹಿನ್ನು ಪ. ಸರಸಿಜ ಸಂಭವ ಶಂಕರ ಸುರವರ ವಂದ್ಯ ಮರೆಯದಿರೆಂದಿಗು ಕಿಂಪುರುಷಗಣ ವಂದ್ಯ 1 ಅಸಿಧರ ಶಾಙ್ರ್ಞಗದಾಕರ ವರನಂದನಧಾರಿ ಅರಿಪಕ್ಷದ ಮೂಲವ ಕತ್ತರಿಸು ಸುಧಾಕಾರಿ2 ವರವಾಗೀಶ್ವರನೊಳ್ ಸತ್ಕರುಣಾಮೃತನಿಧಿಯ ನಿರುಪಾಧಿಯೊಳಿರಿಸಹಿಪತಿಗಿರಿರಾಯಧ್ವರ ಸದಯ 3
--------------
ತುಪಾಕಿ ವೆಂಕಟರಮಣಾಚಾರ್ಯ
ಗರ್ವಿಸುವದು ತರವೆ ಗರ್ವಿಸುವದು ತರವಲ್ಲ ನೀವಿದ ಕೇಳಿ ಸರ್ವೇಶನೊಪ್ಪನೀ ನಡತೆಯ ಕಂಡರೆ ಪತೊಗರಿ :ಬೆಲ್ಲವೆ ಬಾ ನಾನು ತೊಗುರಿಬೇಳೆಯು ನನಗುಲ್ಲಾಸದಿಂದೊಂದು ಯೋಚನೆ ತೋರಿತುಎಲ್ಲರು ಒಬ್ಬಟ್ಟು ಒಳ್ಳಿತೆಂದೆಂಬರುಬಲ್ಲವರಾದರೆ ವಿವರಿಸದಿರುವರೆಸಲ್ಲದ ಮಾತನಾಡಲಿಬೇಡ ಸತ್ಯವನಿಲ್ಲಿ ನನ್ನೊಳು ಪೇಳು ಮತ್ತೆ ನಾಲುವರಿರುವಲ್ಲಿ ನ್ಯಾಯವ ತಿದ್ದಿಕೊಂಬ ನಾವಿಬ್ಬರುಇಲ್ಲದ ಬಳಿಕ ಗೋಧಿಯ ದೆಸೆುಂದೇನುಸಲ್ಲದ ತುಪ್ಪವನೇನ ಮಾಡಲಿಬೇಕುಒಳ್ಳೆಯತನ ನಿನ್ನೊಳು ಇರುವುದಿದನೆಲ್ಲವನೆನಗೆ ಪೇಳು ಸಟೆಯ ಪೇಳಬಲ್ಲೆನೆ ನಾ ನಿನ್ನೊಳು ನಿಮ್ಮೊಳು ನಾನೆಬಲ್ಲಿದನಲ್ಲವೆ ಕೇಳು ನನ್ನನೆ ಯೆಲ್ಲಾಕೊಳ್ಳುವರವನಿಯೊಳು ನೀನೂ ಸ್ವಲ್ಪವಲ್ಲವೆ ನಿಜ ನಮ್ಮೊಳು ಕೋಪಿಸಬೇಡಸಲ್ಲದ ವಸ್ತುಗಳು ಗೋಧಿಯು ಎಣ್ಣೆಯಲ್ಲವೆ ನಿತ್ಯದಲ್ಲೂ ತುಪ್ಪವ ಬಿಡುಪೊಳ್ಳುನುಡಿದರೆನ್ನ ಮಾತೆಲ್ಲ ಪಾಳು 1ಬೆಲ್ಲ :ಏನೆಲೆ ತೊಗುರಿಬೇಳೆಯೆ ನನ್ನ ಸ್ವಲ್ಪವೆಂದೇನು ಕಾರಣವನು ಕಂಡು ನನ್ನೊಡನೀಗನೀನುಸುರಿದೆ ಮಾತು ಹೆಚ್ಚಿ ಬರುತಲಿದೆುೀ ನಡೆ ನಿನ್ನಯ ಶ್ರೇಷ್ಠವದೆನಿಟಷ್ಟೂನಾನಿಲ್ಲದಿರಲು ಸೀಯಾಗುವದೆಂತುರೆನೀನು ಸುಮ್ಮನೆ ಹೇಳಿಕೊಂಬೆ ತನ್ನಯ ಸ್ತುತಿತಾನೆ ಮಾಡಿಕೊಂಬ ಮನುಜಗೆ ನರಕವೆಂಬೀನಿಗದಿಯನರಿತರೆ ಪರನಿಂದೆಯನೀನೆಚ್ಚರಂಗೆಟ್ಟು ಮಾಳ್ಪೆಯ ಇನ್ನಭಿಮಾನವನೀಗ ುರುಯೆನ್ನೆಡೆಯೊಳುನೀನಿರಬೇಡ ಸಾರು ಹೆಚ್ಚುಗೆ ನಿನ್ನದೇನದನೆನಗೆ ತೋರು ದುರ್ಜನರು ತಾವೀನುಡಿ ನಿಜವೆಂಬರು ಸತ್ಪುರುಷರುಮಾನಸದಲಿ ಒಪ್ಪರು ನಿನಗೆ ಅಭಿಮಾನ ಮೊದಲು ಇದ್ದರೂ ಹಾರು ಮುಂದುಜಾಣತನವೆಯಾದರೂ ಹೆದರದಿಪ್ಪೆಹೀನಾಯವೆ ಬಂದರೂ ನಾಲುವರೆನ್ನದೀನಡೆಯೆನ್ನುವರು ಎಂಬುದನೀಗನೀನರಿಯದೆ ಬಂದೆುದು ಪಾಪ ಬೇರು 2ಗೋಧಿ :ಹೋಗಲೆ ತೊಗುರಿ ಬೆಲ್ಲಗಳಿರ ನನ್ನನುಕೂಗಿ ಬೈವಿರಿ ಗೋಧಿ ಯೋಗ್ಯದ ವಸ್ತು ತಾನಾಗದು ಎಂದು ಕೊಬ್ಬಿದ ಮಾತನಾಡುತ ನೀಗಿಕೊಂಬಿರೆ ನಿಮ್ಮ ಮಾನವ ಸದರ ನಿಮಗಾಗಿದೆ ಕೊರಗಿಪರೆ ಮಾತಿನ ಪರಿಯೇಗುವುದೆನಿಸದಿರೆ ನಿಮ್ಮನು ತೃಣಕಾಗಿ ನಾ ಕಾಣುವರೆ ಕಾಣೆನು ಮಾನಹೇಗೆ ನಿಮ್ಮೊಳು ಹೋಗೆ ಯೆನಗೆ ಸಮನಾಗಲು ನೀವು ಬಲ್ಲಿರೆ ುೀ ಯಾಳೆಗೆಹೋಗಿ ನೀವು ಕೊಬ್ಬಿದರೆ ಈಶ್ವರ ಕೃಪೆಯಾಗುವದೆಂತೆನ್ನು ಮರೆಯೊಗಲೊಲ್ಲಿರೆ 3ಎಣ್ಣೆ :ಹರಟಿಕೊಂಬಿರೆ ನೀವೆ ನಿಮ್ಮೊಳು ನನ್ನನುಜರೆಯುತಲೆಣ್ಣೆುಂದೇನೆಂದು ನಾನಿಲ್ಲದಿರಲು ನೀವೆಂತೊಂದು ಗೂಡಿ ಬಾಳುವಿರಿದನರಿಯದೆ ಮುಂಗೆಟ್ಟು ನುಡಿದರೇನಾುತೀಪರಿಯಹಂಕಾರ ಲೇಸಲ್ಲ ಹೀನಾಯವುಬರುವದು ಪರರ ನಿಂದಿಸಿ ಜೀವಿಸುವುದುತರವಲ್ಲ ಸದ್ಗತಿಗೆಟ್ಟು ಕೊನೆಗೆ ಬರದಿರದು ನರಕ ಬೆಂಕಿುಂ ಮೂರುವೇಳೆ ನೀಕೊರಗುವೆ ಬೆಲ್ಲವೆ ಕೇಳು ತೊಗುರಿಯೆ ನೀನಿರದೆ ಸಾರಿಯೊಳು ಬೇಯುವೆ ಗೋಧಿಕೊರಗುವೆ ಕಲ್ಲಿನೊಳು ಚಚ್ಚಿಸಿಕೊಂಡುಇರುವದೆ ನಿಮ್ಮವೊಲು ಕಷ್ಟವದೆಂಬದರಿುರೆ ನೀವು ನನ್ನೊಳು ುಂಥಾ ನಡೆಬರುವುದೆ ಬಹು ಕೇಳಾ ಹೀನಾಯವುಬರದಿರದೀ ಬಾಳು ಯಾತಕೆ ಸುಖಕರ ಮಾರ್ಗ ತಾ ನಿಮ್ಮೊಳು ುಲ್ಲವು ುದನರಿಯದೆ ನಿಮ್ಮಳಲು ಬಿಡದು ನನ್ನಮರೆಯೊಕ್ಕು ಬದುಕುವದಿದು ಬಹುಮೇಲೂ 4ತುಪ್ಪ :ಜಗದೊಳು ನೀವೆ ಬಲ್ಲಿದರೆಂದು ನಿಮ್ಮೊಳುನಿಗದಿಯ ಮಾಡಿಕೊಂಬಿರಿ ಗರ್ವ ಹೆಚ್ಚಿತೆಸುಗುಣವಂತರು ನೀವಾದರೀಪರಿಯಲ್ಲಿಬಗುಳಿಕೊಂಬಿರೆ ತುಪ್ಪವಂ ಬಿಡುಯೆನ್ನುತಮಿಗೆ ಸುರತತಿ ಮೊದಲಾಗಿ ನನ್ನಿಂದಲಿಸೊಗಸಾಗಿ ಕೃಪೆವಡೆವರು ನಾನಿಲ್ಲದೆಮಿಗೆ ಶುದ್ಧರಾಗುವಿರೆಂತು ಬರಿದೆ ನಿಮ್ಮನಿಗದಿಯ ಪೇಳಿಸಿಶಾನಿಗೆ ನನ್ನ ನೀವಗಲಲು ರುಚಿಕರವೆಂತು ನಾನೊಪ್ಪೆನುನಿಗಮದ ಮಾತಿದುವೆ ಸಟೆಯ ಮಾಡಿಸೊಗಸಾಗಿ ಬಾಳಿ ನೀವೆ ಅನ್ಯಾಯಗಳಗಣಿತವಾಗಿುವೆ ನನ್ನಯ ನ್ಯಾಯನಿಗದಿಯಾದರೆ ಹೋಗುವೆ ತಪ್ಪಿದರೆ ಈಜಗದೊಳಗ್ನಿಯ ಪೊಗುವೆ ನಿಮಗೆ ಆಣೆಯಗಲಿದರಿಲ್ಲಿಂದವೆ ಪೋಟಾಟವೆಜಗದೊಳುತ್ತಮ ವಸ್ತುವೆ ನಾನೆಂಬರುಬಗೆುರೆನ್ನನು ನೀವೆ ಮೊಂಡರುಯೆಂದುಖಗವಾಹನಗೆ ಪೇಳುವೆ ಚಿಕ್ಕನಾಗನಗರಕೆ ನಡೆುರಿ ನ್ಯಾಯವ ತಿದ್ದುವೆ 5ಒಟ್ಟಾಗಿ :ದೇವ ಭಕ್ತಾವನ ಪಾವನ ಚರಿತ ಸುರಾವಳಿನುತಪಾದಭಾವಜ ಜನಕ ರಮಾವಲ್ಲಭಾನಂತ ಗೋವಿಂದ ಮಾಧವನೀವರಿಯದೆ ಪೋಗಲಾವಗತಿ ನಮಗೀ ವಸುಧೆಯೊಳ್ಮುನಿಭಾವಿತ ಚರಣನೆಸಾವಧಾನದೊಳು ಪರಾಮರಿಸಿುಂತಪ್ಪದಾವಲ್ಲಿುದ್ದಡಲ್ಲಿಗೆ ತಕ್ಕ ಶಿಕ್ಷೆಯನೇ ವಿರಚಿಸಿ ಗುಣವಿದ್ದಲ್ಲಿ ರಕ್ಷಿಪುದಾವ ಪರಿಯಲಾದರು ಜಗನ್ನಾಥನೆುೀವ್ಯವಹಾರವನು ನಿಗದಿಗೈದುನೀವೊಲಿದೆಮ್ಮುವನು ರಕ್ಷಿಸಬೇಕು ದೇವಾದಿದೇವ ನೀನು ಅನಾಥರ ಕಾವಲ್ಲಿ ದಯಾವಂತನುಸುಜನಪತಿ ಭಾವಿತ ಪಾದಪದ್ಮನು ನೀನೆ ಗತಿನಾವರಿದನ್ಯರನು ಬಾಳುವೆವೆಂತುರಾವಣಾರಿಯೆ ನೀನು ಕೈಪಿಡಿ ಗತಿುವರೆದಿಕ್ಕು ನೀನು ಮಾಡಿನ್ನೇನುಭಾವಿಸೆವನ್ಯರನು ನಮ್ಮಿಂದಲಿಸೇವೆಗೊಳುವ ನೀನಿರಲು ಭಜಿಸದೆ ನಾವು 6ಬರಿದೆ ಜಗಳವಾಡಬೇಡವೀಚೆಗೆ ಬನ್ನಿಒರೆಯುವೆ ಬುದ್ಧಿಯ ಕೇಳಲಿಚ್ಛಿಸಿದರೆತರುಣನಾಗಾಖ್ಯಪುರದ ವೆಂಕಟೇಶನುಗುರುವಾಸುದೇವಾವತಾರವ ತಾಳಿಯೆಕರುಣದಿಂ ತಿಮ್ಮದಾಸನ ಬಹುದೋಷವ ಪರಿದಾಳ್ದನೆಂಬ ಬಿರುದಪೊತ್ತು ನಾನೀಗಮೆರೆಯುವೆನೀವೆಲ್ಲ ಬರಿ ಮಾತ ಮಾಡದೆಶಿರದಲಿ ಹೊತ್ತು ನನ್ನಯ ನುಡಿಗೇಳಲುಬರುವುದು ಕೀರ್ತಿ ಮೂಜಗದೊಳಗದರಿಂದನೆರೆುೀಗ ನೀವೆಲ್ಲರೂ ಒಂದಾಗಿಯೆುರಲು ಸೌಖ್ಯವದೆಂಬರು ವಿಂಗಡದಿ ನೀವಿರಲು ಜನರು ಬೈವರು ಕೂಡಲು ನನ್ನಗುರುದಯ ಬಹುದೆಲ್ಲರು ಹಿಗ್ಗುವರು ಮತ್ತರಿತು ಸಾರವ ಕೊಂಬರು ಬಹಳ ಶ್ರೇಷ್ಠರುವದರಿಯದಿದ್ದರೂ ಹೊಣೆಯ ನೀವೆನೆರೆ ನಿಮ್ಮನೀ ಜನರು ಬೈಯದ ಹಾಗೆಉರು ಶಿಕ್ಷೆಯನೆ ಮಾಳ್ಪರು ಯಾರೆಂಬಿರೆಅರಿುರಿ ಗಂಗಪ್ಪ ಹೊಣೆ ಹೋಗಿನ್ನಾದರು7
--------------
ತಿಮ್ಮಪ್ಪದಾಸರು
ಗಳಿಸಿಕೊಳ್ಳಿರೊ ಸಾಧು ಸಜ್ಜನರ ಸಂಗವ ಗಳಿಗಿಯೊಳು ದೋರಿಕೊಡುವರು ಅಂತರಂಗವ ಧ್ರುವ ಹೊಟ್ಟಿಗೆ ಮೊಟ್ಟಿಗೆ ಕಟ್ಟು ಹೋಗಬ್ಯಾಡಿರೊ ಹುಟ್ಟಿಬಂದ ಮ್ಯಾಲೆ ಹರಿನಾಮ ಘಟ್ಟಗೊಳ್ಳಿರೊ ಗುಟ್ಟಲಿದ್ದ ವಸ್ತು ನೀವು ಮುಟ್ಟಿ ಮನಗಾಣಿರೊ ಕೆಟ್ಟ ಗುಣಕಾಗಿ ಬಿದ್ದು ಸಿಟ್ಟು ಹಿಡಿಯಬ್ಯಾಡಿರೊ 1 ಹೊನ್ನಿಗೆ ಹೆಣ್ಣಿಗೆ ಬಾಯಿ ತೆರಿಯಬ್ಯಾಡಿರೊ ಕಣ್ಣಗೆಟ್ಟು ಹೋಗಿ ನೀವು ದಣ್ಣನೆ ದಣಿಯಬ್ಯಾಡಿರೊ ಹೆಣ್ಣಿಗಾಗಿ ರಾವಣೇನು ಪಡೆದುಕೊಂಡ ಕಾಣಿರೊ ಹೊನ್ನಿಗಾಗಿ ವಾಲಿ ಏನು ಸುಖವ ಪಡೆದ ನೋಡಿರೊ 2 ಉರ್ವಿಯೊಳು ಬಂದು ನೀವು ಗರ್ವಹಿಡಿಯ ಬ್ಯಾಡಿರೊ ಕೌರವೇಶ ಮಣ್ಣಿಗೆ ಗರ್ವಹಿಡಿದು ಕೆಟ್ಟ ನೋಡಿರೊ ಅರ್ವಪಥವ ಬಿಟ್ಟು ಮರ್ವಿಗ್ಹೋಗಬ್ಯಾಡಿರೊ ಸರ್ವಸಾರಾಯ ಸುಖ ಹರಿಯ ಭಕ್ತಿ ಮಾಡಿರೊ 3 ಕಾಮ ಕಳವಳಿಗಿನ್ನು ಕುಣಿದು ಕೆಡಬ್ಯಾಡಿರೊ ನೇಮದಿಂದ ಸ್ವಾಮಿ ಶ್ರೀಪಾದ ಬೆರೆದು ಕೂಡಿರೊ ನಾಮರೂಪಕವಗಿ ಬಿದ್ದು ಹಮ್ಮು ಹಿಡಿಯಬ್ಯಾಡಿರೊ ತಾಮಸೆಂಬ ದೈತ್ಯನ ಸುಟ್ಟು ಹೋಮಮಾಡಿರೊ 4 ಭವ ಬಂಧವಾದ ದುಸ್ತರ ಹೋಳಿಯಾಡಬೇಕು ಒಂದೆ ಸೀಳಿ ಮದಮತ್ಸರ ಹೇಳಿಕೊಟ್ಟ ಗುರುವಿನ ಕೊಂಡಾಡಬೇಕು ಎಚ್ಚರ ಬೋಧ ಶ್ಯಾಸ್ತರ 5 ಲೋಕವೆಲ್ಲ ಬಂದು ಹೊನ್ನ ಹೆಣ್ಣು ಮಣ್ಣಿಗಾಯಿತು ಬೇಕಾದ ವಸ್ತು ಬಿಟ್ಟು ಪೋಕುಬುದ್ಧಿಗ್ಹೋಯಿತು ಸುಖ ಸೂರೆಗೊಳ್ಳದೆ ತೇಕಿ ದಣಿದುಹೋಯಿತು ಏಕವಾಗಿ ನೋಡಲು ದೈಥಯ್ಯಗೊಟ್ಟಿತು 6 ಮಹಿಪತಿಯ ಸ್ವಾಮಿಯ ನೆನೆದು ಒಮ್ಮೆ ನೋಡಿರೊ ಇಹಪರಸುಖ ಸೂರ್ಯಾಡಿ ನಲಿದಾಡಿರೊ ಮಹಾಮಹಿಮೆದೋರುತದೆ ಮಯ್ಯ ಮರಿಯಬ್ಯಾಡಿರೊತ್ರಾಹಿತ್ರಾಹಿ ಎಂದು ಮನಗಂಡು ಕುಣಿದಾಡಿರೊ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗಳಿಸಿದೆನು ಗಳಿಸಿದೆನು ಘಳಿಗಿಯೊಳಗೆ ಗಳಿಸಿದಾಗಳಿಗೆ ಅಂತಃಕರಣದೊಳಗೆ ಧ್ರುವ ಗಳಿಸಿದೆನು ಗುರುಕರುಣ ಗಳಿಸಿದೆನು ಗುರುಚರಣ ಗಳಿಸಿದೆನು ಗುರುಸ್ಮರಣ ಚಿಂತನಿಯನು 1 ಗಳಿಸಿದೆನು ಗುರುಙÁ್ಞನ ಗಳಿಸಿದೆನು ಗುರುಮೋನ ಗಳಿಸಿದೆನು ಗುರುಙÁ್ಞನ ಧಾರಣವನು 2 ಗಳಿಸಿದೆನು ಇಳಯೊಳು ಮಹಿಪತಿ ಇಹ್ಯ ಪರದೊಳು ಸಾಯುಜ್ಯ ಸದ್ಗತಿಯ ಮುಕ್ತಿಗಳು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗಾಡಿ ಪಾಳ್ಯ ಹನುಮಾ | ತವ ಪದಬೇಡಿ ಭಜಿಪೆ ಭೀಮಾ ಪ ಈಡು ರಹಿತ ತವ | ಮಹಿಮೆಗಳನು ಕೊಂ-ಡಾಡ ಬಲ್ಲನೇ | ಪಾಮರನು ನಾಅ.ಪ. ಸತಿ ವತ್ಸರ ಪೂರ್ವದಿಹಿತಧಾಗಮನವ | ಸೂಚಿಸಿ ಸ್ವಪ್ನದಿ 1 ಸತಿ ತೈಜಸ ಪೇಳಿದನಿಜ ಭಾವವ ತಾ | ಸುಜನರಿಗ್ವೊರೆದು2 ಮಣಿ ಸಹ ವಿರಲವನೂ ||ಘನ ಸಂತಾನವು ಇರದಿರೆ ದಂಪತಿಮನವನು ಹರಿಪದ | ವನಜದಲಿರಿಸೀ 3 ಒಡಗೂಡಿ ಸೇವಕರಾ | ತರಿದನು | ಗಿಡ ಗಂಟಿಯ ವಿವರಾ ||ಅಡವಿಯೊಳೊಡ | ಮೂಡಿದ ಬರಿ ಶಿಲೆಕಂಡು ಮನದಿ ಬಯ | ಲಾಶೆಯೊಳಿರಲೂ 4 ಮಲಗಿರೆ ಮನನೊಂದೂ | ಸ್ವಪ್ನದಿ | ಬಲ ಹನುಮಂತನು ಬಂದೂ ||ಚೆಲುವ ತನ್ನಯ ರೂಪ | ತೋರಿಸಿ ಪೇಳಲುಒಲಿಸಿ ಗಂಧದಲಿ | ಲಿಖಿಸಿ ಪೂಜಿಸಿದ 5 ಮೊಗವನು ದಕ್ಷಿಣಕೆ | ತಿರುಗಿಸಿ | ನಗವನು ಮೇಲಕ್ಕೇ ||ನೆಗಹಿ ತನ್ನ ಎಡ | ಹಸ್ತದೊಳಗೆ ಬಲಭಾಗ ಕೈಯ್ಯ ತಾ | ನಿರಿಸಿಹ ಕಟಿಯಲಿ 6 ಚಾರು ಮತಿಯಲಿ 7 ಸ್ಥಿರ ಚರ ಸುವ್ಯಾಪ್ತಾ | ಮರುತ | ಶರಣ ಜನರ ಆಪ್ತಾ ||ಸುದತರು ಭಕುತರ | ಹರಕೆ ಪೂರೈಸುವೆನಿರುತ ಹರಿಯ ಪದ | ರತಿಯನೆ ಕೊಡುವುದು 8 ಕೋವಿದರರಸನ್ನಾ | ಗುರು | ಗೋವಿಂದ ವಿಠಲನ್ನಾ ||ಓವಿ ತೋರೊ ಮಮ | ಹೃದ್ವನಜದೊಳಗೆ ಪಾವಮಾನಿಯೆ ಮ | ತ್ಪ್ರಾರ್ಥನೆ ಸಲಿಸೀ 9
--------------
ಗುರುಗೋವಿಂದವಿಠಲರು
ಗಾನಕೆ ಅತಿ ಸುಲಭ ಪ ದೀನಜನಕೆ ಬಲು ಸಾನುರಾಗನಾದ ಜಾನಕಿನಾಥನ ದಿವ್ಯನಾಮವು ಅ.ಪ ತಾಳ ತಂಬೂರಿ ಮೃದಂಗಗಳಿಂದಲಿ ಪೇಳುವವರಿಗೆ ರಫುಮೌಳಿಯ ನಾಮವು 1 ಘೋರ ಕಲುಷಗಳ ಪಾರಗಾಣಿಸಿ ಮನ ಕೋರಿಕೆಗಳನೀವ ತಾರಕ ನಾಮವು 2 ತಾಪಸ ಸತಿಯಳ ಶಾಪವ ಬಿಡಿಸಿದ ಭೂಪ ದಾಶರಥಿ ದಿವ್ಯನಾಮವು 3 ಲಂಕೆಯ ಪೊಕ್ಕು ನಿಶಾಚರನೆ ಕೊಂದು ಪಂಕಜಾಕ್ಷಿ ಆತಂಕ ಕಳೆದ ನಾಮ 4 ಎನ್ನವರೆಲ್ಲರು ಬನ್ನಿರಿ ಎನ್ನುತ ತನ್ನೊಡನೊಯ್ದು ಪ್ರಸನ್ನರಾಮನ ನಾಮ 5
--------------
ವಿದ್ಯಾಪ್ರಸನ್ನತೀರ್ಥರು
ಗಿಣಿಯೆ ನಿನಗೇನು ಬೇಕದನೀವೆ ಹಯವದನ-ನೆನಿಪ ಹರಿಯನು ಕರೆತಾರೆ ಗಿಣಿಯೆಮುನಿ ವಾದಿರಾಜನಿಗೆ ವರವೀವ ದೇವನವನೆನೆವವರ ಬಿಡನೆಲೆ ಗಿಣಿಯೆ ಪ. ವೃಂದಾವನದಿ ಚಂದ್ರನಂತೆಸೆವ ಗೋವಿಂದಚಂದದಿ ನಿನ್ನ ಮಾತ ಮನ್ನಿಸುವನಂದಗೋಪಿಯ ಮುದ್ದುಕಂದನೆನಿಪ ಮುಕುಂದನ-ನಿಂದಿರುಳು ತಂದು ತೋರು ಗಿಣಿಯೆ 1 ಮೂರು ಬಣ್ಣದ ಕೊರಳ ತಿರಿಯುಳ್ಳ ಗಿಣಿ ನೀನುಮೂರು ಬಣ್ಣದ ಚಾರುನಯನಮಾರನನುಚರ ನೀನು ಮಾರನ ಜನಕನವನುಮೀರ ನಿನ್ನ ಬಿನ್ನಪವ ಗಿಣಿಯೆ 2 ಸತತ ಸಿರಿದೇವಿಯರ ಸುತನೆನಿಪ ಕಾಮನಿಗೆರಥವಾಗಿ ಮೆರೆವೆ ನೀ ಗಿಣಿಯೆಕೃತಕೃತ್ಯನಾದರೂ ಅದರಿಂದ ನಿನ್ನ ಮಾತಪ್ರತಿಪಾಲಿಸುವನೆÉಲೆ ಗಿಣಿಯೆ 3 ಎಲ್ಲರು ಭುಂಜಿಸುವ ಮೊದಲೆ ಭುಂಜಿಸುವ ನಮ್ಮಿನಿಯಬಲ್ಲಿದಾತನ ಬಿರುದ ನಿನಗಿತ್ತಚೆಲುವ ಸಸಿಗಳ ತೆನೆಯ ತಂದು ತಂದು ಮೆಲುವೆ ಗಡಸಲುವುದು ಮೋಹನದ ಗಿಣಿಯೆ 4 ಪಚ್ಚೆಯ ಬಣ್ಣದ ಗರಿಯ ಸಿರಿಯುಳ್ಳ ಗಿಣಿ ನೀನುಪಚ್ಚೆಯ ಬಣ್ಣದ ವ್ಯಾಸನವನುಎಚ್ಚರಿಸಿ ಕೊಡುತಿದೆ ನಿನ್ನ ಕಂಡರಾ ಮುನಿಯಮೆಚ್ಚಿದೆ ನಾನವನ ತಂದು ತೋರು ಗಿಣಿಯೆ 5 ಕೆಂದಾವರೆಯ ಪೋಲ್ವ ನಿನ್ನ ಚರಣ ಹರಿಯ ಪದದÀಂದವನು[ತಂದುತೋರು]ಗಿಣಿಯೆಚೆಂದದ ಅವನ ಚೆಂದುಟಿಯಂತೆ ನಿನ್ನ ಚೆಲುವ ಮುಖ ಕೆಂಪುತÀಂದು ಮುಂದಿರಿಸು ನೀ ಗಿಣಿಯೆ6 ಅವನ ವಾಹನನೆನಿಪ ಗರುಡನ ಕುಲದಲುದ್ಭವಿಸಿ-ದವ ನೀನೆಲೆ ಗಿಣಿಯೆಅವನ ಮುದ್ದು ನುಡಿಯ ಬಲ್ಲರೆ ನೀನು ಜಗದೊಳಗೆಸವಿಮಾತುಗಳ ನುಡಿವೆ ಗಿಣಿಯೆ 7 ಗಮನ ನಿನಗೆಸೊಗಸುನುಡಿಯಿಂದವನ ಪದಕೆ ಬಿನ್ನಹ ಮಾಡಿಸುಗುಣನ ಕರೆತಾರೆ ಗಿಣಿಯೆ8 ತಮ್ಮ ತಮ್ಮ ಮನೆಗಳಲ್ಲಿ ರಮೆಯರಸ ಕೃಷ್ಣನ-ನು ಮನದಲ್ಲಿ ಅರ್ಚಿಸಿ [ಪೂಜಿಸುವರು]ಸುಮುಖನೆಂದು ನಿನ್ನ ಮನೆಯ ಚಾವಡಿಯಲಿ ಇಹ-ನ ಮನ್ನಿಪರೆಲೆ ಗಿಣಿಯೆ 9 ಉರದಲ್ಲಿ ಸಿರಿವತ್ಸಯೆಂಬ ಕುರುಹುಂಟವಗೆಕರಗಳಲಿ ಶಂಖಚಕ್ರಗಳು ಕೊರಳಲ್ಲಿ ಕೌಸ್ತುಭಮಣಿಯಿಹ ಹಯವದನ ನ-ಮ್ಮರಸನೆಂದರಿತುಕೊ ಗಿಣಿಯೆ 10
--------------
ವಾದಿರಾಜ
ಗಿರಿಜಾಕಾಂತನೆ ನಿನ್ನ ಶುಭ ಚರಣವ ನಂಬಿದೆ ಮುನ್ನ ಕರವಿಡಿದೀಗಲೆ ಕಾಯಬೇಕೆನ್ನ ಪರಿಪರಿ ವರಗಳ ಕೊಡುವ ಪ್ರಸನ್ನ ಪ ಗಜ ಚರ್ಮಾಂಬರನೆ ನಿತ್ಯ ಸುಜನರ ಪಾಲಿಸುತಿಹನೆ ಅಮಿತ ಮಹಿಮನೆ ತ್ರಿಜಗೋದ್ಧಾರನೆ ಭುಜಗಭೂಷಿತನೆ 1 ನಂದಿಯನೇರಿಯೆ ಬಂದು ಎನ್ನ ಮಂದಿರದೊಳ್ ನಿಂದು ಕುಂದದಿರುವ ಆನಂದವ ಕೊಡು ಎಂದು ವಂದಿಸುವೆನು ನಾ ನಿನಗೆ ಕೃಪಾಸಿಂಧು 2ವರ ಚಿಕ್ಕನಾಗರದಿ ನಿಂದು ಗರಪುರವಾಸನೆ ದಯದಿವರದ ಶ್ರೀ ವೆಂಕಟರಮಣನ ರೂಪದಿಪೊರೆವೆ ನಾರಾಯಣದಾಸನ ಮುದದಿ 3
--------------
ನಾರಾಯಣದಾಸರು
ಗಿರಿಜೆಯ ಪ್ರೀತಿಯ ಕುವರ ಪ ಧುರ ಧೀರ ಭವದೂರ ಉದಾರ ಗಂಭೀರ ತವ ಚರಣವ ತೋರೋ ಕುಮಾರ ಅ ತಾರಕ ದೈತ್ಯನ ವಿನಾಶ ಗುಹೇಶ ಸರ್ವೇಶಾ ಜಗ-ದೀಶಾಸೇನೇಶಾ ಗುಣವಾರಿಧಿ ಚಂಪಕನಾಸಾ 1 ಶುಭ ಚರಣ - ಕಡುಕರುಣಾಕರ ಪಲ್ಲವ ರತ್ನಾಭರಣ2 ಪಾವನ ಮೂರುತಿ ಈಶ ರವಿಭಾಶಾ ಅಘನಾಶಾ ಸದ್ ದಾಸಾ ಜನಪೋಷ ವರ ಪಾವಂಜೆ ಕ್ಷೇತ್ರ ನಿವಾಸ 3
--------------
ಬೆಳ್ಳೆ ದಾಸಪ್ಪಯ್ಯ
ಗಿರಿಧರ ಗೋಪಾಲ | ಗಾನವಿಲೋಲ ಪ ವರನೀಲೋತ್ಪಲ ಶ್ಯಾಮಲ ಕೋಮಲ ಕರುಣಾಲವಾಲಾ ಗೋಪಾಲಬಾಲ ಅ.ಪ ಸಕಲ ಚರಾಚರ ಭರಿತ ಸುಖಂಕರ ಬಕಶಕಟಾಸುರನಿಕರ ಭಯಂಕರ ಶುಕಮೌನೀಶ್ವರನುತ ಕರುಣಾಕರ ಸುಕುಮಾರಾಂಗ ರಾಜಿತ ಮಾಂಗಿರಿವರ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗಿರಿರಾಜ ಚಿತ್ತವುದಾರ ಜೀಯಾ | ನಾ ನಿನ್ನ ಪಾದಕ್ಕೆರಗಿ ಯಾಚಿಸುತಲಿ ಮುಗಿವೆನು ಕೈಯಾ | ನೆರೆ ನಂಬಿದವರನುಎರವು ಮಾಡಲು ನಿನಗೊಳಿತೇನಯ್ಯಾ | ಪಿಡಿ ಬೇಗ ಕೈಯಾ ಪ ಕರುಣಿಗಳರಸನೆ ಕಾಮಿತ ಫಲದನೆ ಕರಿರಾಜನ ಭೀಕರ ಹರ ವಂಕಟ ಅ.ಪ. ಅಪಾರ ಮಹಿಮಾ ಆಪದ್ಬಂಧೂ | ಆಪನ್ನರ ಪಾಲಿಪ ವ್ಯಾಪಾರ ನಿನಗಲ್ಲದೆ ಮತ್ತೊಂದೂ | ನಾ ಕಾಣೆನೊ ಜಗದಿಭೂಪಾನೆ ಭೂಮಾ ಗುಣ ಗಣ ಸಿಂಧೂ | ಸ್ವಾಮಿಯೆ ಸಿರಿಗೆಂದೂ ||ಪಾಪದ ಪಂಕವು ಲೇಪವಾಗದಂ | ತೀ ಪರಿಪಾಲಿಸೊ ಶ್ರೀಪತಿ ಅಂಜನ 1 ತರು ಜಾತಿ ಮೃಗಪಕ್ಷಿಗಳಾಕಾರ | ಮೊದಲಾದ ರೂಪದಿಸುರರೂ ಕಿನ್ನರರೂ ತಮ್ಮ ಪರುವಾರ | ಒಡಗೂಡಿ ನಿನ್ನಾಶರಣರ ಚರಣಾರಾಧನೆಗೆ ವಿಸ್ತಾರ | ಈ ಬಗೆ ಶೃಂಗಾರಾ ||ದೊರೆತನ ಠೀವಿಗೆ ಧರಣಿ ಮಂಡಲದಿ | ಸರಿಗಾಣೆನೊ ಹೇ ತಿರುಪತಿ ವೆಂಕಟ 2 ಫಣಿ 3 ಕಲಿಯುಗದೊಳಗೀ ಪರ್ವತದಲ್ಲಿ | ಸರಿಗಾಣೆನೊ ಎಂದುನೆಲೆಸೀದೆ ನೀನೆ ಈ ಸ್ಥಳದಲ್ಲಿ | ವೈಕುಂಠಕಿಂತನೆಲೆಯಾ ವೆಗ್ಗಳವೆಂದು ನೀ ಬಲ್ಲಿ | ಅದ ಕಾರಣದಲ್ಲಿ ||ಜಲಜ ಭವಾದ್ಯರು ಒಲಿದೊಲಿಯುತ | ತಲೆದೂಗುವರೈ ಭಳಿರೆ ಕಾಂಚನ 4 ಸುವರ್ಣ ಮುಖರಿ ತೀರವಾಸ | ಆ ಬ್ರಹ್ಮೋತ್ಸವನವರಾತ್ರಿಯಲ್ಲಿ ನೋಡಲು ಶ್ರೀಶ | ಸಂ ಪದವಿಯನಿತ್ತುಕಾವನು ಕಲುಷದ ಭಯ ಬರಲೀಸ | ಶ್ರೀ ಶ್ರೀನಿವಾಸ ||ಶ್ರೀವರ ಭೂಧರ ವ್ಯಾಸವಿಠಲ* ಪ | ರಾವರೇಶ ಶ್ರೀ ದೇವನೆ ದೇವಾ 5
--------------
ವ್ಯಾಸವಿಠ್ಠಲರು