ಒಟ್ಟು 7615 ಕಡೆಗಳಲ್ಲಿ , 131 ದಾಸರು , 4494 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋಪಿ ಪ ತನ್ನ ಬಳಿಗೆ ಬಾರೆನ್ನುತಲೋಡಿದ ಅ.ಪ ನೊರೆ ನೊರೆ ಹಾಲನು ಸುರಿಸುರಿದು ತನ್ನ ಕಿರು ಬೆರಳಾಡಿಸಿ ಕೊರಳನು ಕೊಂಕಿಸಿ ಪರಿ ಹಾಸ್ಯ ಕುಚೋದ್ಯವ ಮಾಡುತ ಮುರಳಿಯನೂದಿ ಬಾರೆನ್ನುತ ಬಂದನೆ1 ಬೆಣ್ಣೆಯ ಕದ್ದು ಕೈ ಸುಣ್ಣವಾಯಿತು ಎಂದು ಕಣ್ಣು ಬಾಯಿಗಳಿಂದ ಸನ್ನೆಯ ಮಾಡಿ ಹಣ್ಣನು ತಿನ್ನುವೆ ಎನ್ನುತಲೋಡಿದ ಚಿಣ್ಣನು ಮಾಂಗಿರಿರಂಗನು ನೋಡೇ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗೋಪಿ ಹಾಡಿ ದಣಿಯಳೂ ಪ ನೋಡಿ ಹಾಡಿ ಹೊಗಳಿ ಕೃಷ್ಣಗೆ ಮಾಡಿ ಮಾಡಿ ಸಿಂಗರವನು ಅ.ಪ ಮಣ್ಣತಿಂದು ಚಪ್ಪರಿಸುವ ಚಿಣ್ಣನೆಡೆಗೆ ಓಡಿಬಂದು ಸಣ್ಣಬಾಯ ಬಿಡಿಸಿ ವಿಶ್ವವ ಕಣ್ಣಿನಿಂದ ಕಂಡು ನಲಿದು 1 ವಿಕಳೆಯಸುವ ಹೀರಿ ಕುಣಿದು ಶಕಟಖಳನನೊದ್ದು ಕೊಂದು ಬಕನ ಸೀಳಿ ಫಣಿಯ ತುಳಿದ ವಿಕಸಿತಾಂಗನ ಹಾಡಿ ಹೊಗಳಿ 2 ಗಿರಿಯನೆತ್ತಿ ಬೆರಳಿನಿಂದ ಕರದಮುರಳಿನಾದದಿಂದ ಧರೆಯ ದಿವಿಯಗೈದ ಮಾಂಗಿರಿಯರಸರಂಗನಂಗವ ನೋಡಿ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗೋಪಿ ಜನಪಾಲ ಪಾವನ ತರಲೀಲ ಲಕ್ಷ್ಮೀಲೋಲ ಕಾಲನಮಿತ ಸುರಜಾಲ ಸೇವಿತ ಶೌರಿ ಪ ವಂದಿತ ಸುರಮುನಿ ವೃಂದ ಭಕುತಜನ ಬಂಧುವಾಗಿರುವ ಗೋವಿಂದ ಗೋಪಾಲದೇವ ಮಂದಹಾಸ ಬಲಿ ಬಂಧನ ಮುರಹರ ಸಿಂಧು ಶಯನ ಗೋಪಿಕಂದ ಮುಕುಂದ 1 ಕಂಸಾರಿ ಕರುಣಾಭ್ದಿ ಶೃಂಗಾರಿ ಸುಜನ ಮನೋರಥ ಸುರತರು ಹಾರ ಹೀರ ಗಂಭೀರ ವೈಯಾರ 2 ಅಂಬುಜ ಭವನುತ ಶಂಬರಾರಿಯಪಿತ ಜಂಭಾರಿ ನಮಿತ ಹೇರಂಬ ಜನಕಪ್ರೀತ ಕಂದರ ಕಮಳಾಂಬಕ ರಮಣ 3 ರಾಗಿ ಜನರ ಭವರೋಗ ಹರಣಹರಿ ನಗಧರ ಸಗರ ವಂಶೋದ್ಧಾರ ಖಗವರ ಗಮನ ಸುಗುಣ ಗಂಭೀರ 4 ದುರಿತ ಸಂಹಾರಿ ಕರದಿ ಚಕ್ರಧಾರಿ ಸುರರ ಸಿರಿ ಧುರ ಧೀರ ಚಿಪ್ಪಳಿವಾಸ ವೇಣುಗೋಪಾಲ 5
--------------
ಕವಿ ಪರಮದೇವದಾಸರು
ಗೋಪಿ ಸುಕೃತ ಪ ಸುಕೃತ 1 ಕೌಸ್ತುಭ ಸುಕೃತ 2 ಕಸ್ತೂರಿಯಿಟ್ಟು ಕಂಗಳಿಗೆ ಕಾಡಿಗೆ ಹಚ್ಚಿಮತ್ತೆ ಕದಪಿನಲಿ ಕುಂಕುಮವನೊತ್ತಿಮುತ್ತಿನಂದದೊಳಿರುವ ಬೆವರ ಸೆರಗಿನೊಳೊರೆಸಿಮುತ್ತು ತಾರೈಯೆಂದು ಮುದ್ದಾಡುವೋ ಸುಕೃತ3 ಅಸುರಕುಲ ಹರಣನಿಗೆ ಅಂಗಿಯನು ತೊಡಿಸಿ ಬಲುಕುಶಲದಿ ಪೀತಾಂಬರವನ್ನು ಉಡಿಸಿಪೊಸ ರತುನ ಬಿಗಿದ ಮಣಿಮಯದ ಮಕುಟವ ಮಂಡೆ-ಗೊಸವಿಟ್ಟು ನಲಿ ನಲಿದು ಮುದ್ದಾಡುವೊ ಸುಕೃತ4 ಶಂಖ ಚಕ್ರಾಂಕಿತಗೆ ಭುಜಕೀರ್ತಿಯನೆ ಧರಿಸ್ಯ-ಲಂಕಾರದಲಿ ತಾರೆ ಮಣಿಯ ಕಟ್ಟಿಕಂಕಣವು ಕಡಗ ಥಳಥಳಿಪ ಪವಳದಿ ರಚಿಸಿಬಿಂಕದಲಿ ತೊಟ್ಟಿಲೊಳಗಿಟ್ಟು ತೂಗುವ ಸುಕೃತ5 ಮುಂಗೈಯ ಮುರಿ ಮುತ್ತಿನುಂಗುರವು ಥಳಥಳಿಸೆರಂಗು ಮಾಣಿಕದ ಒಡ್ಯಾಣ ಹೊಳೆಯೆಕಂಗೊಳಿಸುತಿಹ ಕಾಂಚಿದಾಮವಲಂಕರಿಸಿ ಸ-ರ್ವಾಂಗದೊಳು ಗಂಧ ಪರಿಮಳವ ಸೂಸುವ ಸುಕೃತ6 ಕಡಗ ಪೊಂಗೆಜ್ಜೆ ಕನಕದ ಘಂಟೆ ಸರಪಳಿಯಬಿಡದೆ ಶ್ರೀಹರಿಯ ಚರಣದಲ್ಲಿ ಧರಿಸಿಪೊಡವಿಯನು ಅಳೆದ ಶ್ರೀಪುರುಷೋತ್ತಮನಿಗೆ ಮೆ-ಲ್ಲಡಿಯನಿಡು ಎಂದೆನುತ ನಡೆಯ ಕಲಿಸುವ ಸುಕೃತ7 ನೆಲನ ಈರಡಿಮಾಡಿ ಬಲಿಯ ಮೆಟ್ಟಿದ ಪಾದಚೆಲುವ ಚರಣದಿ ಭೂಮಿಯಳೆದ ಪಾದಶಿಲೆಯೆಡಹಿ ಬಾಲೆಯನು ಮಾಡಿದ ದಿವ್ಯವಾದಒಲಿದಿಟ್ಟು ನಡೆಯೆಂದು ನಡೆಯ ಕಲಿಸುವ ಸುಕೃತ8 ಅಂದಿಗೆ ಪಾಯ್ವಟ್ಟು ಕುಂದಣದ ಕಿರುಗೆಜ್ಜೆಸಂದಣಿಸಿ ಕಿರಿಬೆರಳೊಳುಂಗುರಗಳುಚೆಂದದ ಕಡಗ ಪಾಡಗ ಘಂಟೆ ಸರಪಣಿಯುಮಂದಗಮನನ ಪಾದಪದ್ಮಕ್ಕಿಡುವೊ ಸುಕೃತ9 ಸುಕೃತ 10 ದಿನಕರ ನಿಭಾಂಗ ಕೇಶವ ರಾಮಚಂದ್ರ ಮುನಿಸನಕಾದಿವಿನುತ ಕುಣಿದಾಡು ಎನುತತನ್ನ ಕರಗಳಲಿ ತಕ್ಕೈಸಿ ಕೃಷ್ಣನ ದಿವ್ಯಘನ್ನ ಚರಿತೆಯ ಪಾಡಿ ಪೊಗಳುವ ಸುಕೃತ11
--------------
ವ್ಯಾಸರಾಯರು
ಗೋಪಿದೇವಿ ಎಂತು ಪೇಳಲೆ ನಾನೆಂತು ತಾಳಲೆ ಪ ಶ್ರೀಪತಿ ಬಂದು ನಿಂದು ಏಕಾಂತವನ್ನ ಆಡುತಾನೆ | ಪಾಪ ಇಂಥಾದುಂಟೇನೆ ಕೇಳೆ ಲಕ್ಷ್ಮೀಕಾಂತನೀತನೆ || ಮಂಥನ ಮಾಡುವಲ್ಲಿ ಮಂಥಣಿಯ ಒಡೆದನು | ಕುಂತಳವ ಪಿಡಿದು ಎನ್ನ ಕುಳ್ಳಿರಿಸಿದಾ ಕಿರಿಬೆವರನೊರಸಿದಾ 1 ಚಿಕ್ಕಮಕ್ಕಳ ಕೂಡಿ ಚಕ್ಕನೆ ತಾ ಬಂದು ಬೇಗ | ಬೆಕ್ಕು ಕುನ್ನಿ ಮರ್ಕಟವ ತಂದನಮ್ಮಾ ಇದು ಚಂದವೇನಮ್ಮ || ಉಕ್ಕುತಿಹ ಪಾಲ್ಗೊಡಗಳ ಉರುಳಿಸಿದಾ ಸುಮ್ಮನೆ | ಚೊಕ್ಕವೇನೆ ಸುಮ್ಮನೆ ಮೊಸರ ಸುರಿದಾ ಮೀಸಲು ಮುರಿದಾ 2 ರಕ್ಕಸರ ಗಂಡ ನಮ್ಮ ರಾಜ್ಯದೊಳಗಿವಗಿನ್ನು | ತಕ್ಕ ಬುದ್ದಿಯ ಪೇಳುವರದಾರು ಮೀರಿದ ಗೋಪಗೆ || ಸಿಕ್ಕ ಪಿಡಿದೇವೆಂದರೆ ಸಿಕ್ಕನಮ್ಮ ಇವ ಗುಡಿವಡ್ಡಿ ಬೇಡವೇ | ಕಕ್ಕಸದಲಿ ಬಲು ಕಕ್ಕಲಾತಿಯಲಿ 3 ಬಿರಬಿರನೆ ತಾ ಬಂದು ಬೆದರಿ ಎನಗಂದು | ಹರವಿಯ ಹಾಲು ಕುಡಿದಾ ತಾ ಎತ್ತ ಓಡಿದನೆ || ವಾರಿಗಣ್ಣಿನಿಂದಲಿ ನೋಡಿ ಒದಗಿ ಬಳಿಗೆ ಬಂದು | ತೋರವಾದ ಕುಚಗಳ ಪಿಡಿದಾನೆ ಬಲಿದನೇನೆ 4 ಹಾರ ಪದಕವು ಹಿಡಿ ಹಿಡಿ ಎಂದು ಎನ್ನ ಕೂಡ | ಸರಸವನಾಡಲಿಕ್ಕೆ ಅರಸನೇನೆ ನಮಗೆ ಪುರುಷನೇನೆ || ಪುರುಷರು ಕಂಡರೆನ್ನ ಪರಿಪರಿ ಬಾಧಿಸ್ಯಾರು | ತರಳನ ಕರೆದ್ಹೇಳು ತಿದ್ದಿ ನೀನು ಇವಗೆ ಬುದ್ಧಿ5 ಚಂಡನಾಡುತಲಿ ಚಿಕ್ಕ ಮಿಂಡಿಯರ ಕಂಡು ತಾನು | ಚಂಡು ಅಂತ ಕುಚಗಳ ಪಿಡಿದಾನೆ ಇಂಥದುಂಟೇನೆ || ಭಂಡು ಮಾಡತಾನೆ ಭಂಡಿಯ ಗೋವಳಗಿಂದು | ದಂಡಿಸವ್ವಾ ದಂಡವನು ಕೊಡು ನೀನು 6 ಚಂಡ ಪ್ರಚಂಡನಿವನು ಗೋಪಿಕೆಯರಿಗೆಲ್ಲ | ಉದ್ದಂಡನಿವನು ತಂಡ ತಂಡದಲಿ ತುರು- || ಹಿಂಡುಗಳ ಕಾಯುವ ಗೊಲ್ಲಬಾಲಕನಮ್ಮಾ |ಪಾಂಡುರಂಗ ವಿಜಯವಿಠ್ಠಲರಾಯ ಬಲು ದಿಟ್ಟನಿವನು7
--------------
ವಿಜಯದಾಸ
ಗೋಪೀಮಾನ ರಂಜನ ಶ್ರೀಪತಿ ಕರುಣಾಳು ವ್ಯಾಪಿಸಿಕೊಂಡಿಹ ಮಾಮಕ ತಾಪವ ವೋಡಿಸು ಸುಲಭದಿ ಪ. ಸೌಂದರ್ಯಾಮೃತ ಸಾರಾನಂದಾತ್ಮಕ ದೇಹ ವೃಂದಾರಕ ಗಣ ನಯನಾ ನಂದನ ನಿಖಿಳಾತ್ಮಾತ್ರಯ ನಿತ್ಯಾವ್ಯಯ ಸತ್ಯಾವರ ಭಕ್ತಾಸ್ಪದ ಸುಮುಖ 1 ಸುಭಗಾಂಬುದನಿಭ ಗೋವರ ಋಭುಗಣನುತ ಚರಣಾ ಇಭರಾಟ್ಕøತ ಕರುಣಾಖಿಳ ವಿಭವಾಶ್ರಯ ತರುಣಿಗಣ ಶುಭ ಸಂಚಯ ಕರುಣಾ ನಿಜಭರಣಾದೃತ ಕರಣಾ 2 ಶೃಂಗಾರ ವಿಲಾಸಿನಿಜಾಪಾಂಗಾಹೃತ ಗೋಪಕತ ಸ್ವಂಗೀಕೃತ ಪ್ರೇಮಭವಾಲಿಂಗಿತ ಶುಭಮೂರ್ತಿ ಅಂಗಜಜನಕಾದ್ಭುತ ಸಾರಂಗ ಮಮತ ಶೇಷಗಿರಿ ಶೃಂಗಾಧಿಷ್ಟಿತ ಕರುಣಾಪಾಂಗವ ದಯಮಾಡೆನುತಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಗೋವರ್ಧನೋದ್ಧಾರ ಗೋಪಿಕಾಜನಜಾರ ರುಕ್ಮಿಣೀ ಮನೋಹರ ರುಕ್ಮಗರ್ವನಿವಾರ ಚಕ್ರಧರ ಶ್ರೀರಂಗ ಶ್ಯಾಮಲಾಂಗ ಪಾಂಡುಸುತ ಸನ್ಮಿತ್ರ ಮಾಂಡವ್ಯಸನ್ನುತಾ ಖಂಡಲಾರ್ಚನಪಾತೃ ನುತಚರಿತ್ರ ದ್ವಾರಕಾಪುರಿವಾಸ ಧರ್ಮರಕ್ಷಣದೀಕ್ಷ ವೈರಿಶಿಕ್ಷಣದಕ್ಷ ಶ್ರೀಕಟಾಕ್ಷ ದ್ರೌಪದೀ ಮಾನದಾ ಪಾಹಿವರದ | ತಾಪತ್ರಯ ಹರಣ ಭಕ್ತ್ಯಧೀನ | ಆಪನ್ನಿವಾರಣಾಮೋಘ ವಚನ ಭೋ ಪರಂಧಾಮ ಶ್ರೀ ಶೈಲಧಾಮ
--------------
ನಂಜನಗೂಡು ತಿರುಮಲಾಂಬಾ
ಗೋವಿಂದ ಗೋವಿಂದ ಎನ್ನಲರಿಯದೆ - ವೃಥಾನೋವಿಂದ ಭಂಗವ ಪಡುವುದುಚಿತವೆ ? ಪ ಕ್ಷೀಣ ಶಾಸ್ತ್ರಾರ್ಥವನು ಪರಿಗ್ರಹಿಸಿ ನಿಖಿಲ ಕುರಿಕೋಣಗಳ ತಲೆಚೆಂಡ ಕುಟ್ಟಿಸುತಪ್ರಾಣ ಹತ್ಯವ ಮಾಳ್ಪುದಾವ ಸತ್ಕರ್ಮ - ನಾರಾ-ಯಣನ ನಾಮಸ್ಮರಣೆ ಮಾಡು ಮನವೆ 1 ಖಂಡವನು ಕೊಯ್ದು ಕೊಡಬೇಡ ದಳ್ಳುರಿಯಗ್ನಿಕುಂಡವನು ಹೊಕ್ಕು ಹೊರಡುವುದುಚಿತವೆಭಂಡರಂದದಿ ಬತ್ತಲೆಯೆ ಬರುವುದಾವಾಟಪುಂಡರೀಕಾಕ್ಷನ ನೆನೆ ಕಂಡ್ಯ ಮನವೆ 2 ಕುಟ್ಟಿಕೊಳ್ಳದಿರಿ ಜಟ್ಟಿ ಗುಂಡಿನಲಿ, ಶಸ್ತ್ರವನುಚಿಟ್ಟಿ ಕೊಳ್ಳದಿರಿ, ಬೆನ್ನಲಿ ಸಿಡಿಯನುಕಟ್ಟಿ ತೂಗಿಸಿಕೊಳ್ಳದಿರಿ ಕರಟಕದಂತೆಗುಟ್ಟಿನಲಿ ಗೋಪಾಲಕನ ಸ್ಮರಿಸು ಮರುಳೆ 3 ತೊಗಲ ಬಿಲ್ಲೆಗಳ ಕೊರಳಲ್ಲಿ ಕಟ್ಟಿಕೊಂಡುಹಗಲಿರುಳು ಅನ್ನಪಾನಕೆ ಹೋಗದೆಮೃಗವೈರಿಯಂತೇಕೆ ಕಿಸುಕೆಲೆವ ರಂಪಾಟಜಗದಾಧಿಪತಿಯ ನಾಮ ಸ್ಮರಿಸು ಮರುಳೆ 4 ಉತ್ತಮರು ಸುರೆಯನೀಂಟುವರೆ ತರಹರಿಸಿ ಮದೋ-ನ್ಮತ್ತರಾಗಿ ಅಸಭ್ಯ ಶಬ್ದವ ನುಡಿವರೆಸತ್ತ ಹೆಣದಂತೆ ಬಿದ್ದಿಹುದಾವ ನೀತಿ ಪುರು-ಷೋತ್ತಮನ ನಾಮ ಸ್ಮರಣೆಯ ಮಾಡು ಮನವೆ 5 ವೇದೋಕ್ತ ಪೂಜೆಯಲಿ ತೃಪ್ತಿಪಟ್ಟರೆ ನೀವುಅದರಿಂದ ಫಲವೇನು ಪೇಳಿರಯ್ಯನಾದವನು ಕೇಳ್ದ ಹರಿಣದಂದದಿ ಕೆಡದೆ ಮಧುಸೂದನನ ನಾಮ ಸ್ಮರಣೆಯ ಮಾಡು ಮರುಳೆ 6 ನಿಂದಾಪವಾದ ಘಟಿಸುವುದೈಸೆ ಇದರಿಂದಮುಂದೆ ಮುಕ್ತಿಯು ನಿಮಗೆ ಸಾಧ್ಯವಹುದೆತಂದೆ ಶ್ರೀ ಕಾಗಿನೆಲೆಯಾದಿಕೇಶವ ನಾಮಒಂದೇ ವೈಕುಂಠ ಪದವನೈದಿಪುದಯ್ಯ 7
--------------
ಕನಕದಾಸ
ಗೋವಿಂದ ಗೋವಿಂದ ಗೋಕುಲಾನಂದ ದೇವೇಶ್ವರಾನಂದ ಪಾದಾರವಿಂದ ಪ ಲಾವಣ್ಯ ಪರಿಪೂರ್ಣ ಸಚ್ಚಿದಾನಂದ ಶ್ರೀವೇಣುಗೋಪಾಲ ಶೌರೇ ಮುಕುಂದ ಅ.ಪ ನೀನೇ ಗತಿ ನೀನೇ ಮತಿ ನೀನೆನ್ನ ಪ್ರೇಮಾ ನೀನೆನ್ನ ತಾಯ್ತಂದೆ ಲೋಕಾಭಿರಾಮಾ ನೀನೆನ್ನ ಕರುಣದಲಿ ಕಾಯೋ ಶ್ರೀರಾಮ 1 ಮಂಗಳಾಂಗನು ನೀನು ಕಮಲಾಯತಾಕ್ಷ ಮಂಗ ಮೂಢನು ನಾನು ಸಿರಿದೇವಿ ಪಕ್ಷ ಶೃಂಗಾರ ಪೂರ್ಣನೀ ಕಾಮ್ಯಾರ್ಥದಕ್ಷ ಮಾಂಗಿರಿಯ ರಂಗ ಭಕ್ತಾಳಿ ಸಂರಕ್ಷ2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗೋವಿಂದ ಗೋವಿಂದ ಗೋವಿಂದನೆನ್ನಲು ಪ ಏನೆಂದು ಪೇಳಲಿ ಆನಂದವನು ನಾ ಅ.ಪ ಹಸಿವು ತೋರದೆನಗೆ ತೃಷೆಯು ತೋರದೆನಗೆ ಪರಿ ನಾಮರಸವ ಸೇವಿಸುತಿರೆ 1 ದ್ವೇಷವು ತೋರದು ರೋಷವು ತೋರದು ಶೇಷಶಯನ ನಿನ್ನ ಹರುಷದಿ ಪೊಗಳಲು 2 ಭಯವು ತೊಲಗುವುದು ಜಯವು ತೋರವುದು ನಯನಗಳಲಿ ಸುಖ ಜಲವು ಸುರಿಯುವುದು 3 ಎಂದಿನ ಪುಣ್ಯವೊ ಇಂದರಿತೆನು ಗೋ- ವಿಂದನಾಮ ಮಕರಂದದ ಸವಿಯನು4 ನಿನ್ನ ಸುಕರುಣದ ಚಿನ್ಹೆ ಕಾಣಿಸಿತು ಪ್ರ ಸನ್ನನಾಗುವಿಯೆಂದು ಚೆನಾÀÀ್ನಗಿ ಅರಿತೆನು5
--------------
ವಿದ್ಯಾಪ್ರಸನ್ನತೀರ್ಥರು
ಗೋವಿಂದ ಗೋವಿಂದಾ ನಾವಾಡನಿ ನಮ್ಮಿತಿ ನೇನು ಪ ನೀವೇಮಿ ಬ್ರೋವುನನ್ನು ಗೋವಿಂದ ಅ.ಪ ಧರಿಜೂಪಧೊರ ನೀವನಿ ಸ್ಮರಿಯಿಂಚಿನಾಮನಮುನ ದ್ರುಂಚಿ ಬ್ರೋವು ಗೋವಿಂದ 1 ಕರುಣಿಂಚು ಗುರುರಂಗ ಪರಲೋಕತರವುಗಾನ ಮರುಗೈನ ಕಾಮಿಂಚಿತಿ ತರಮೇರಕಾವಕುನ್ನ 2 ಪಾಟಿಂಚ ನೀ ನಾಟಿವ್ವರು ಯೋಟವುನ ತುಲಸಿರಾಮಾ ಪೀಠಂಬುವ ಗರ್ಚೆನಗುರು ಆಟಂಕಮುನಿಲ್ಪಿಬ್ರೋವು 3
--------------
ಚನ್ನಪಟ್ಟಣದ ಅಹೋಬಲದಾಸರು
ಗೋವಿಂದ ನಿನ್ನಾನಂದದಲ್ಲಿಡೋ ಗೋವಿಂದ ಪ ಗೋವಿಂದ ಹೃದಯಾರವಿಂದದಲ್ಲಿ ಇಂದೂ ಮುಂದೂ ಚರಣಾರವಿಂದ ತೋರೊ ಅ.ಪ ಬೆಟ್ಟದ ದರುಶನ ಲಾಭವು ಕಷ್ಟ ಪಟ್ಟರು ದೊರೆಯಲಸಾಧ್ಯವು ನೋಡೆ ಸುಟ್ಟು ಹೋಗುವುದಘರಾಶಿಯು ಪಟ್ಟ ಶ್ರಮವು ಇಷ್ಟಾರ್ಥವು ದಿಟ್ಟ ಮನವ ಕೊಟ್ಟು ಅಟ್ಟುರಿಯ ಕಳೆದು ಮೆಟ್ಟು ಮೆಟ್ಟಲನೇರಿ ದಿಟ್ಟಿಪರೋ ನಿನ್ನ1 ಪದುಮಜಾಂಡ ಕೋಟಿ ನಾಯಕ ದೇವ ಶ್ರೀದ ಸೃಷ್ಟಾದ್ಯಷ್ಟ ಕರ್ತೃ ನೀನೆ ಆದ್ಯಂತ ಜಗದಾಧಾರಕ ಅಂತರಾತ್ಮಕ ವಿಶ್ವವ್ಯಾಪಕ ಆದಿಮೂಲ ಚತುಷ್ಪಾದ ಎಂದೆನಿಸಿ ತ್ರಿ- ಪಾದ ಇಳೆಯೊಳಿಟ್ಟೆ 2 ಸದಮಲಾತ್ಮಕನೇ ದೇವ ಸರ್ವದಾ ಎಲ್ಲಾ ಹದಿನಾಲ್ಕು ಲೋಕವ ಧರಿಸಿದೆ ದಿವ್ಯ ನೆಲೆಸಿದೆ ಸರ್ವರ ಹೃದಯದ ಪದುಮದಲಿ ಪೊಳೆದು ತ್ರಿಜಗವಂದಿತನಾಗಿ ಮೇದಿನಿಯೊಳು ಮೆರೆಯುತಿಹೆ 3 ಧ್ವಜವಜ್ರಾಂಕುಶಯುಕ್ತಲಾಂಛನ ದೆÉೀವ ಅಬ್ಜಭವಾರಾಧ್ಯ ಚರಣದಿವ್ಯ- ಅಬ್ಜಸಖಕೋಟಿಕಿರಣ ಪಾದಾಭರಣದಿಂದ ಕಿರಣಾ ತಾ ಝಗಝಗಿಸುತ್ತ ನೂಪುರ ಕಾಲಂದಿಗೆ ಗೆಜ್ಜೆ ಸಜ್ಜುಗೊಂಡಿಹ ಮೂರ್ಜಗದೊಡೆಯನೆ ಹರಿ 4 ತಟಿತಕೋಟಿನಿಭಸಮಕಾಯ ಕಟಿಯ ದಿವ್ಯರತ್ನಖಚಿತದಟ್ಟಿಯಾ ತೊಟ್ಟ ಪಟ್ಟೆಪೀತಾಂಬರ ಬಟ್ಟೆಯಾ ಸೊಂಟಪಟ್ಟಿಯ ಇಟ್ಟ ಪರಿಯಾ ಅಟ್ಟಹಾಸದಿ ನಿಂದ ಸೃಷ್ಟಿಗೊಡೆಯ ಮನೋ- ಭೀಷ್ಟದಾಯಕ ಬೆಟ್ಟದೊಡೆಯನೆ 5 ಕರಚತುಷ್ಟಯದಲ್ಲಿ ಮೆರಯುವಾ ಶ್ರೀ ಸು- ದರ್ಶನ ಶಂಖದಿಂದಿರುವಾ ದೀನ ಶರಣಜನರಿಗಭಯ ಹಸ್ತವಾ ಕರೆದು ನೀಡುವ ಕಾಮಿತಾರ್ಥವ ಪರಿಪರಿ ಭಾಪುರಿ ಭುಜಗಾಭರಣಾದಿಗಳ ಧರಿಸಿರುತ ಭಕ್ತಜನರಘ ಹರಿಸುವಾ6 ವಕ್ಷಸ್ಥಳದಲ್ಲಿ ಶ್ರೀವತ್ಸವೂ ಕಂಠ ದಕ್ಷಿಣದಲ್ಲಿ ತೋರ ನಕ್ಷತ್ರದಂತಿಹ ಹಾರವೂ ಕುಕ್ಷಿ ಅಂದವೂ ಮೋಕ್ಷದಾತೃವು ಅಕ್ಷರ ವಾಚ್ಯತ್ರ್ಯಕ್ಷಾದಿ ಸುರವಂದ್ಯ ಈ ಕ್ಷಿತಿಗಿಳಿದು ಪ್ರತ್ಯಕ್ಷನಾಗಿ ನಿಂದೆ 7 ಮಂದಹಾಸಮುಖ ಅರವಿಂದ ದಂತ ಚಂದಕರ್ಣಕುಂಡಲದಿಂದ ಕೆಂದುಟಿಯಿಂದ ಒಪ್ಪುವ ಚೆಂದ ಪೊಂದಿ ಮಕುಟ ಸರ್ವಾಲಂಕಾರ ಪರಿಪೂರ್u ಬಂಧ ಮೋಚನ ಹರಿ ಶ್ರೀ ವೇಂಕಟೇಶನೆ 8 ಪರಿಪರಿ ಮುಕ್ತಜೀವರುಗಳು ಇಲ್ಲಿ ಪರಿವಾರ ತರುಲತೆ ಶಿಲೆಗಳು ಇನ್ನು ವಿರಜೆ ಮೊದಲಾದ ಸರ್ವತೀರ್ಥವು ಸ್ವಾಮಿ ತೀರ್ಥವೂ ಮೋಕ್ಷದಾತೃವೂ ಭವ ಶಕ್ರಾದಿನುತಉರಗಾದ್ರಿವಾಸವಿಠಲ ಜಗದೀಶನೆ 9
--------------
ಉರಗಾದ್ರಿವಾಸವಿಠಲದಾಸರು
ಗೋವಿಂದಂ ಭಜರೇ ಮಾನಸ ಪ ದೇವ ದೇವೋತ್ತಮ ಭಾವುಕ ಫಲದಂ ಅ.ಪ ಶರಧಿ ಗಂಭೀರಂ ಪರಮೋದ್ಧಾರಂ ಪುಣ್ಯ ಶರೀರಂ ಧರಣಿಪ ಬಾಲಂ ಮುರಳೀಲೋಲಂ ಸುರರಿಪು ಕಾಲಂ ಗೋಕುಲ ಬಾಲಂ 1 ಪಾವನನಾಮಂ ಭವರಣ ಭೀಮಂ ರವಿಕುಲಸೋಮಂ ಅವನಿಜಪ್ರೇಮಂ ಕುವಲಯಶ್ಶಾಮಂ ಭುವನಾಭಿರಾಮಂ ದಿವಿಜಾನುತ ಮಾಂಗಿರಿವರ ಧಾಮಂ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಗೋವಿಂದ ವಿಠಲ ನಿನ್ನ ವಂದಿಸುವೆ ಸ್ವಾಮಿನೀ ಒಲಿದು ರಕ್ಷಿಸುವುದು ಜೀವಿ ಇವ ಬಹುಕಾಲಸಾವ ಸಾವ ನಿನ್ನ ಸೇವೆಯೊಳಗೆ ಇಟ್ಟು ಕಾವುದು ನಿರುತ ಪ. ಆವ ಈ ಯುಗದಲ್ಲಿ ನಿನ್ನ ವಿಷಯರಾಗಿಈವ ಸುಜನರು ಸ್ವಲ್ಪರು ತಾ ವ್ಯಾಪಿಸಿ ಇಹರುಅಸುರರೆ ಬಹುಳಾಗಿ ಆವದವಸ್ಥೆಗಳಲಿನೀ ವರವನು ಕಲಿಗೆ ಇತ್ತ ಕಾರಣ ಉಪಜೀವರ ವ್ಯಾಪಾರಈ ವಿಧದಲಿ ತಳೆದು ನಿನ್ನ ಹುಡುಕುತಲಿನ್ನುಜೀವಿ ಸಾತ್ವಿಕನು ಮೊರೆಯಿಡಲು ಬಿನ್ನಯಿಸಿದೆನೊ 1 ಏನು ಸಾಧನವನು ಖೂಳವನು ಕಂಡಿನ್ನುನೀನು ವಂದಿಸಿವೆಂದರೆ ಜ್ಞಾನಭಕುತಿ ಉಳ್ಳಜ್ಞಾನಿಗಳಲಿವಗೆ ನಾನು ಕಂಡೆನು ಭಕುತಿಯಕ್ಷೋಣಿಯಲಿ ಭಕುತಿ ನಿನ್ನಲಿ ಪುಟ್ಟಲಿಬಹುದುಜ್ಞಾನಿಗಳ ದುರ್ಲಭ ನೀನು ಒಲಿವುವ ಅವಗೆನಾನವರಲಿ ಭಕುತೀವೆ ನಾನಾಸಾಧನ ಫಲವಿದೆ ನೋಡಾ 2 ಪ್ರಾರ್ಥಿಸುವೆ ನಾ ನಿನ್ನ ಪ್ರೇರಣೆಯ ಅನುಸಾರಕೀರ್ತಿ ನಿನ್ನದು ಜಗದೊಳು ಪಾತ್ರ ಇವನೆಂದುನಿನ್ನ ಚಿತ್ತದಲಿ ಇತ್ತೆ ಸಾರ್ಥಕನ ಮಾಡು ಚೆಂ ಸ್ವಾ ?ಕೀರ್ತನೆಯ ಮಾಡಿಸು ನಿನ್ನ ಪರವಾಗಿ ನಿಜಸ್ಫೂರ್ತಿಸಖರಂಗ ಗೋಪಾಲವಿಠಲ ಶ್ರುತಿಶಾಸ್ತ್ರಾರ್ಥವನುಸಾರ ಪ್ರಾಪ್ತಿ ನೀನಾಗಿವಗೆ3
--------------
ಗೋಪಾಲದಾಸರು
ಗೋವಿಂದೋ ನಾರಾಯಣ ಗೋವಿಂದೋ ನಾರಾಯಣ ಪ ವೇದಗಳು ಕದ್ದೊಯ್ದು ದೈತ್ಯ ಪಯೋಧಿಯೊಳಗಿಡಲು ಮತ್ಸ್ಯ ರೂಪದೊಳಂದು ವೇದಗಳ ತಂದನಮ್ಮ 1 ಬೆಟ್ಟವು ಮುಳುಗು ಸಮಯದಿ ನಮ್ಮರಂಗ ಹುಡಿಗಟ್ಟಿ ಸುರರರಕ್ಷಿಸಿದನಮ್ಮ 2 ಮಡಿದೊಯ್ಯಲು ಕ್ರೋಡತನ ತಾಳ್ದವನ ಛೇದಿಸಿ ದವಡೆಯೊಳ- ವನಿಯನೆತ್ತಿದನಮ್ಮ 3 ಕಶ್ಯಪನ ಸಿಗಿದನಮ್ಮ ಕೀರ್ತಿಯ ಪಡೆದನಮ್ಮ 4 ದಾನವ ಬೇಡಿದನು ಬಲಿಯಕೊಂದ ನಮ್ಮ 5 ನಿತ್ಯಾತ್ಮಕನಾಗಿ ಮೆರೆದ ನಮ್ಮ 6 ವಾರಿಧಿಯನು ಬಂಧಿಸಿದನಮ್ಮ ಮೀರಿದ ರಕ್ಕಸನಗಳ ನಿಳುಹಿ ನಾರಿ ಸೀತೆಯ ತಂದನಮ್ಮ 7 ಕಂಸನನು ಕೊಂದನಮ್ಮ ಗೋವುಗಳನು ಕಾಯ್ದನಮ್ಮ 8 ಬೌದ್ಧರೂಸವತಾಳ್ದನಮ್ಮ ಕೀರ್ತಿಯ ಪಡೆದ ನಮ್ಮ 9 ತುರುಗವ ನೇರುತ ಬಂದನಮ್ಮ ಕರುಣದಿಂದಲಿ ಕಾಯ್ದನಮ್ಮ 10 ಶ್ರೀ ಕೃಷ್ಣ ಮುಕುಂದನಮ್ಮ 11
--------------
ಕವಿ ಪರಮದೇವದಾಸರು