ಒಟ್ಟು 1713 ಕಡೆಗಳಲ್ಲಿ , 107 ದಾಸರು , 1282 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರ್ಪಶಯನನೆಂಬೊ ದಿವ್ಯಕಲ್ಪತರು ಸೇರಿದ ದರ್ಪವೆಷ್ಷನಿಮ್ಮಿಬ್ಬರ ಧಿಮಾಕುಭಾಳೆ ನಾರಿ ಪ. ನಿರತ ದಾಸಿ ನಾನೆಂಬೋದು ಸರಸಿಜಾಕ್ಷತಾನೆ ಬಲ್ಲಅರಸು ಅರಸನ ಹುಡುಕುತಅರಸು ಅರಸರನ ಹುಡುಕುತಲೆ ಹೋಗುವದುಸರಸ ತೋರುವುದೆ ಐವರಿಗೆ ಕೇಳನಾರಿ1 ಒಬ್ಬ ರುಕ್ಮಿಣಿ ನಿನ್ನ ಮುಂದೆ ಗುಬ್ಬಿಕಾಗೆ ಹಿಂಡುಕಬ್ಬೆಕ್ಕು ಕೋಳಿ ನೆರೆದಾವಕಬ್ಬೆಕ್ಕು ಕೋಳಿ ನೆರೆದಾವ ಶ್ರೀಕೃಷ್ಣತಬ್ಬಿಬ್ಬುಕೊಂಡು ನಗುತಾನ ಕೇಳ ನಾರಿ 2 ಅತ್ತಿಗೆ ನಿನ್ನ ಮೈಗೆ ಹತ್ಯಾವ ರುದ್ರಾಕ್ಷಿನೆತ್ತಿಯ ಮ್ಯಾ¯ ಜಡದಾವ ನೆತ್ತಿಯ ಮ್ಯಾ¯ ಜಡದಾವ ಅತ್ತಿಗೆ ನಿನ್ನಹತ್ತಿಲಿದ್ದವರು ನಗುತಾರೆ ಕೇಳನಾರಿ3 ಜಾಣೆ ನಿನ್ನಂಥವಳ ಕಾಣೆ ನಾ ಜಗದೊಳುಕೋಣನ ಹೊಡೆವ ಕೌಶಲ್ಯಕೋಣನ ಹೊಡೆವೊÀ ಕೌಶಲ್ಯಕ್ಕೆ ಬೆರಗಾಗಿಸುರನಾರಿಯರು ಬಹಳೆ ನಗುತಾರೆ ಕೇಳ ನಾರಿ4 ನಿತ್ಯ ಪ್ರಕಾಶನ ಉತ್ತಮೋತ್ತಮ ಗುಣವಅತ್ಯಂತ ನೋಡಿ ಸುಖಿಸದೆಅತ್ಯಂತ ನೋಡಿ ಸುಖಿಸದೆ ಎಲೆಭಾವೆಕತ್ತಲೆಗೈದ ಬಗಿಹೇಳ ಕೇಳನಾರಿ5 ಕತ್ತಲೆಂಬುದು ನಿನ್ನ ಸುತ್ತುಮುತ್ತಲಾಗಿರೆಎತ್ತನೋಡಿದರು ಜನರಿಲ್ಲಎತ್ತನೋಡಿದರು ಜನರಿಲ್ಲ ಅವರೊಳು ಚಿತ್ತ ಸ್ವಾಸ್ಥ್ಯದ ಬಗಿ ಹೇಳ ಕೇಳನಾರಿ6 ಹರಿ ಬಲು ಪ್ರೀತಿಯಿಂದ ಉರದೊಳು ಸ್ಥಳಕೊಟ್ಟಇರಬಾರದೇನೆ ವಿನಯದಿಇರಬಾರದೇನೆ ವಿನಯದಿ ಜಗಳಾಡಿಉರಿಯ ಹೊಗುವರೆ ಉನ್ಮತ್ತೆ ಕೇಳನಾರಿ 7 ಮೂಡಲಗಿರಿಪತಿಗೆ ಜೋಡೆಂದು ನೀವಿಬ್ಬರುಮಾಡಿ ಸಹವಾಸ ಎಡಬಲಮಾಡಿ ಸಹವಾಸ ಎಡಬಲ ಹಿಡಿದಿರಿ ನೋಡಿದವರೆಲ್ಲ ನಗುವಂತೆ ಕೇಳನಾರಿ8 ಕರಿ ಮಣಿಯು ಹೋಲುವುದೆಹರಿಯ ಚಲ್ವಿಕೆಗೆ ಹವಣಿಸಿಹರಿಯ ಚಲ್ವಿಕೆಗೆ ಹವಣಿಸಿ ರಾಮೇಶಗೆಸರಿಯಾಗುವೆ ಏನೆ ಬಿಡು ಬಿಡು ಕೇಳ ನಾರಿ 9
--------------
ಗಲಗಲಿಅವ್ವನವರು
ಸರ್ವಾಂತರ್ಯಾಮಿ ನೀ ಸಲಹೋ ಎನ್ನ ಪ ದುರ್ವಾರ್ತೆ ಕೇಳಿ ಮನ ಬರಿದೆ ಚಿಂತಿಸುತಿದೆ ಅ ಕಾಲ ಕರ್ಮ ಪ್ರಕೃತಿಯು ಸ್ವ ಭಾವಗಳನನುಸರಿಸಿ ಸುಖದುಃಖವಾ ಈವ ದೊರೆ ನೀನಲ್ಲದಿನ್ನುಂಟೆ ಜಗಕೆ ಮ ದಾತ 1 ಸತ್ಯ ಸಂಕಲ್ಪ ನೀನೆಂದೆಂದಿಗೂ ಸರಿ ಭೃತ್ಯವತ್ಸಲನೆಂಬ ಬಿರುದಲ್ಲವೇ ದತ್ತರೂಪನೆ ನಿನ್ನ ಸ್ಮರಣೆ ಮಾತ್ರದಲಿ ಅಪ ಮೃತ್ಯು ಪರಿಹರವಾಹುದು ಸಂದೇಹವಿಲ್ಲಿದಕೆ 2 ಮಾಪತಿ ಎನ್ನ ವಿಜ್ಞಾಪನೆ ಕೈಕೊಂಡು ಪಾಪಿಜನರಿಂದ ಬಂದಾಪತ್ತನು ನೀ ಪರಿಹರಿಸಿ ಸಲಹೋ ದ್ರೌಪದಿ ವರದ 3
--------------
ಜಗನ್ನಾಥದಾಸರು
ಸರ್ವಾಂತರ್ಯಾಮಿ ಸರ್ವೇಶ ಬಾರೊ ಸರ್ವಸ್ವತಂತ್ರನೆ ಸರ್ವಭಯನಾಶ ಪ ಸರ್ವತಂತ್ರನೆ ಸರ್ವವೇದದಿ ಸರ್ವತತ್ತ್ವದಿ ಸರ್ವಸಾಕ್ಷಿ ನೀ ಸರ್ವವ್ಯಾಪಕ ಸರ್ವದೇವರ ಸಾರ್ವಭೌಮ ಅ.ಪ ಜಡಬೊಂಬೆ ನಾಟಕರಚಿಸಿ ಎಡಬಿಡದೆ ಕುಣಿಸ್ಯಾಡುವಿ ಕಡುಮೋಹಗೊಳಿಸಿ ಕಡುಗೌಪ್ಯದದರೊಳು ನೆಲೆಸಿ ನೀನೆ ಅಗಣಿತ ಕಲ್ಪನೆವೆರಸಿ ಜಡಕೆ ಜಡವಾದ ತೊಡರಿನಾಟದ ಕೆಡಕು ತಪ್ಪಿಸಿ ಪಿಡಿದು ಎನ್ನನು ಒಡೆಯ ನಿನ್ನಡಿ ಭಕ್ತರಾವಾಸ ದಿಡು ಎಂದೆರಗುವೆ ಪಾಲಿಸಭಯ 1 ನಾನಾವಿಧದ ಸೃಷ್ಟಿಗಳ ಸೃಜಿಸಿ ಪೋಣಿಸಿ ಮಾಡಿಟ್ಟ ಭವವೆಂಬ ಮಾಲೆ ಏಳು ಮೋಹವ ತುಂಬಿದೆಲ ಪುಸಿ ಕಾಣದಂತೊಗೆದಿ ಮಹಾಮಾಯದ ಜಾಲ ನಾನು ನೀನೆಂಬ ಜಾಣರೆಲ್ಲ ಬಿದ್ದು ಏನುಕಾಣದೆ ತ್ರಾಣಗೆಟ್ಟರು ಹೀನಮತಿ ನಾನೇನು ಬಲ್ಲೆನು ನೀನೆ ಸಲಹೆನ್ನ ದೀನರಕ್ಷಕ 2 ಪಾವನ ಪರಮಪ್ರಕಾಶ ದೇವ ಭಾವಜನಯ್ಯ ನಿಜಭಾವಿಗಳರಸ ಕೇವಲಸುಗುಣಾಂತರ್ವಾಸ ನಿನ್ನ ಸೇವಕನೆನಿಸೆನ್ನ ಕಾಯೊ ನುತಪೋಷ ಜೀವಜೀವರಜೀವ ಚೈತ್ಯನದೇವ ದೇವರ ದೇವ ನಂಬಿದೆ ಜಾವ ಜಾವಕೆ ಒದಗುತಿಹ್ಯ ಮಹ ನೋವು ಗೆಲಿಸೆನ್ನಯ್ಯ ಶ್ರೀರಾಮ 3
--------------
ರಾಮದಾಸರು
ಸರ್ವಾಂತರ್ಯಾಮಿ ಸಲಹೊ ಎನ್ನ ಸರ್ವಕಾಲದಲಿ ಭಕ್ತರ ಅಂತರಂಗದಿ ನಲಿವೆ ಪ ಭಕ್ತರನು ತೋಷಿಸಲು ಹತ್ತವತಾರದಿ ಯುಕ್ತಿಯಲಿ ಖಳರ ವಧಿಸಿದೆಯಲ್ಲವೆ ಭಕ್ತವತ್ಸಲನೆಂಬೊ ಬಿರುದು ಹೊತ್ತಿಹೆ ದೇವ ಭಕ್ತರಾಧೀನ ನಾನೆಂದು ನಿನ್ನ ಭಕ್ತರೊಳು ನಲಿವೆ 1 ಅಂತ್ಯದೊಳು ಅಜಮಿಳನ ಅಂತರಂಗದಿ ಪೊಕ್ಕು ಸಂತ ಆತ್ಮಜನ ಸಾರಗನೆಂದು ನುಡಿಶಿ ನಿನ್ನ ಸ್ವಂತ ಲೋಕಕೆ ಕಳಿಸಿ ಅಜಭವಾದಿಗಳಿಂದ ಅ ತ್ಯಂತ ಹೆಚ್ಚಿನ ಸ್ತುತ್ಯನಾದೆ ಗೋವಿಂದ 2 ಆವಾವ ಕಾಲದೊಳು ಆವಪರಿ ಕಷ್ಟದೊಳು ಕಾವ ನಿನ್ನಯ ನಾಮ ಮರೆಯದಂತೆ ದೇವ ಶ್ರೀ ಶ್ರೀನಿವಾಸ ಝಾಮಝಾಮದಿ ನುಡಿಸೊ ಶ್ರೀವರ ನೀನಲ್ಲದೆ ಮತ್ತಾರಿಹರೊ ದೇವ 3
--------------
ಸರಸ್ವತಿ ಬಾಯಿ
ಸಲಹು ನಂದಕುಮಾರ ಸಲಹು ಗೋಪೀತನಯ ಸಲಹು ವಸುದೇವನಿಗೆ ಪುತ್ರನೆನಿಸಿದನೆಸಲಹು ದೇವಕಿ ಜಠರದಲಿ ಬಂದನೆನಿಸಿದನೆಸಲಹು ಶ್ರೀ ರಾಮ ಶ್ರೀಕೃಷ್ಣ ಜಯ ಕೃಷ್ಣ ಸಲಹು ಸಲಹೂ ಪನಂದನೆನೆ ಸಕಲ ಸಂಪತ್ತ ಸೂಚಿಸುತಿಹುದುಚಂದದಿಂದಣಿಮಾದಿ ಸಿದ್ಧಿುರಲಾಗಿಬಂದವಿದ್ಯೆಯು ಮುಚ್ಚಲಾ ಶಕ್ತಿ ಕುತ್ಸಿತವುಹಿಂದುಗಳೆವದರಿಂದ ನಂದನಕುಮಾರ 1ಜ್ಞಾನಶಕ್ತಿಯು ತಾನು ಗುಪ್ತವಾಗಿರಲಾಗಿಧ್ಯಾನಿಸುವ ಭಕ್ತರಿಗೆ ವಿಸ್ತರಿಸಿ ಕೊಡಲುನೀನು ಗೋಪೀತನಯನೆಂಬ ನಾಮವ ತಾಳ್ದೆದೀನರಕ್ಷಾಮಣಿಯೆ ಜ್ಞಾನದಾಯಕನೆ 2ವಸುವೆನಲು ಪರಿಶುದ್ಧವಾದ ಕರಣದ ಪೆಸರುಎಸೆದು ನೀನಿರಲಲ್ಲಿ ದೇವನೆನಿಸುವದುಅಸಮ ತೇಜದಿ ಪುರುಷನೆನಿಸಿ ಸಲಹಲು ಜಗವವಸುದೇವಪುತ್ರನೆನಿಸಿತು ನಿನ್ನ ನಾಮ 3ದೇವಕಿಯು ನಿನ್ನ ಬಗೆ ಮಾಯೆ ಬ್ರಹ್ಮಾಂಡಗಳಭಾವಿಸಲು ನೀನದನು ಕುಕ್ಷಿಯೊಳಗಿರಿಸಿಸಾವಧಾನದಿ ಸಕಲದೊಳು ಸತ್ಯನಾಗಿರಲುದೇವಕಿಯ ಜಠರದಲಿ ಬಂದನೆನಿಸಿದನೆ 4ನಿತ್ಯದಲಿ ಯೋಗಿಗಳು ನಿನ್ನಲ್ಲಿ ರಮಿಸುತಿರೆಪ್ರತ್ಯಕ್ಪ್ರಕಾಶದಲಿ ಜಡಪದಾರ್ಥಗಳುಅತ್ಯಂತ ರಮಣೀಯವಾಗಿಯದರೊಳು ಜನರುನಿತ್ಯ ರಮಿಸಲು ರಾಮನೆನಿಪ ಶ್ರೀ ಹರಿಯೆ 5ಮೂರು ವರ್ಣದ ನಾಮ ಮುನಿವಂದ್ಯ ನಿನಗಿರಲುಸಾರುವುದು ಸದ್ರೂಪನೆಂದೆರಡು ವರ್ಣಮೂರನೆಯ ವರ್ಣವಾನಂದಮಯನೆನ್ನುತಿದೆಈ ರೀತಿಯಲಿ ನೀನು ಕೃಷ್ಣನೆನಿಸಿದನೆ 6ಪರಮಾತ್ಮ ನೀನಾಗಿ ಪರಿಪರಿಯ ರೂಪಿನಲಿಸುರಮುನೀಶ್ವರ ಭಾವ್ಯ ಚರಿತನೆಂದೆನಿಸಿತಿರುಪತಿಯ ವಾಸವನು ಸ್ಥಿರವಾಗಿ ನಿರ್ಧರಿಸಿುರುವ ವೆಂಕಟರಮಣ ಕರುಣರಸಪೂರ್ಣ 7ಓಂ ಯಶೋದಾವತ್ಸಲಾಯ ನಮಃ
--------------
ತಿಮ್ಮಪ್ಪದಾಸರು
ಸಂಸಾರ ಸಾಗರವನುತ್ತರಿಸುವಡೆಕಂಸಾರಿ ನಾಮವೊಂದೇ ಸಾಕು ಮರುಳೆ ಪ ಯತಿಯಾಗಬೇಡ ನೀ ವೈರಾಗ್ಯವನೆ ಪಿಡಿದುಸತತ ವ್ರತವ ಮಾಡುವೆನೆಂಬ ಹಮ್ಮು ಬೇಡಶ್ರುತಿಸ್ಮøತಿಯರಿತು ನಡೆವೆನೆಂಬ ಚೇಷ್ಟೆಯು ಬೇಡರತಿಪತಿಪಿತನ ನಾಮವೊಂದೆ ಸಾಕು ಮರುಳೆ 1 ತನುವ ದಂಡಿಸಿ ತುದಿಯ ಕೋಡುಗಲ್ಲಿನ ಮೇಲೆವನಿತೆಯನು ಬಿಟ್ಟು ತಪವಿರಲು ಬೇಡಅನುದಿನವು ನೀರೊಳಗೆ ಮುಳುಗಿ ನಡುಗಲು ಬೇಡವನಜನಾಭನ ನಾಮ ನೆನೆ ಕಂಡ್ಯ ಮರುಳೆ 2 ತೀರ್ಥಯಾತ್ರೆಯ ಮಾಡಿ ಬಹುವಿಧದಲಿ ಬಳಲಿ ಕೃ-ತಾರ್ಥನಾದೆನೆಂಬುವ ಹೆಮ್ಮೆ ಬೇಡಪಾರ್ಥಸಾರಥಿ ಕಾಗಿನೆಲೆಯಾದಿಕೇಶವನಕೀರ್ತನೆಯ ಮಾಡಿ ಮುಕುತಿಯ ಹೊಂದು ಮರುಳೆ 3 * ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ದೊರೆತಿದೆ.
--------------
ಕನಕದಾಸ
ಸಹಿಸಲಾರೆನೊ ವ್ಯಥೆಯ ಪವಮಾನ ವಂದಿತನೆ ಪ. ಅಹೋರಾತ್ರಿಲಿ ಮನ ಕಳವಳ ಪಡುವದೊ ಆಹಾರ ನಿದ್ರೆಗಳು ತೊಲಗಿ ಪೋದವು ದೇವಾ ಸಹಿತಾಗಿ ತಾಯಿಯ ಸರ್ವಬಾಂಧವರೆಲ್ಲಾ ಸ ನ್ನಿಹಿತರಾಗಿ ಎನ್ನ ಬಳಗ ಇದ್ದರೂ ಕೂಡ ಅ ಸಹ್ಯವಾದ ದುಃಖ ದೂರಾಗಲಿಲ್ಲವೊ ಆಹಾ ಇರಲಾರೆ ಇರಲಾರೆ ಭಕ್ತ ಜನರ ಬಿಟ್ಟು ಮಹಿದಾಸ ಮೂರ್ತಿಯ ನಿನ್ನ ಭಕ್ತರ ಪಾದ ಸಹವಾಸ ಸುಧೆಯ ಸುರಿಸಿ ಬಲುಪರಿ ಅಹಿಭೂಷಣ ತಾತ ಕಾಳಿಮರ್ಧನಕೃಷ್ಣಾ 1 ಕರ್ಮ ಅಡ್ಡಬಂದು ಎನ್ನ ಘಾಸಿ ಮಾಡುತಲಿದೆ ಅರಿಯದಾದೆನೊ ದೇವಾ ಬ್ಯಾಸರವಾಗಿದೆ ಜನ್ಮವು ಮಹಿಯೊಳು ಸಾಸುವೆ ಮಾತ್ರವು ಸ್ವತಂತ್ರವಿಲ್ಲದಿಹ ದೋಷಿಜೀವನ ತಾನೇನು ಮಾಡಬಲ್ಲ ಸಾಸಿರನಾಮಗುರು ಕಾಳೀಮರ್ಧನಕೃಷ್ಣ2 ಜಲದ ಮಧ್ಯದಿ ಇರುವ ಮೀನವನು ಕಾವ ಮಳಲಿನೊಳಗೆ ತೆಗೆದು ಬಿಸುಟಿದಂತಾಯಿತು ಹೊಳೆಯ ಈಜುವೆನೆಂದು ಬಲು ಹೆಮ್ಮೆಯಿಂದಲಿ ಸೆಳೆವಿಗೆ ಸಿಕ್ಕು ಬಿದ್ದ ಮನುಜನ ತೆರನಾಯ್ತು ಬಲವಾಗಿ ಘಾಯವ ಪೊಂದಿದ ಸ್ಥಾನದಲ್ಲಿ ಸಲೆ ಕಾದ ಆಯಸ ಸೆಳೆಯನೆಳೆದಂತಾಯ್ತು ಅಳಲನು ನಿನಗಲ್ಲದೆ ಇನ್ನಾರಿಗೆ ಪೇಳಲೋ ಕೊಳಲಧರನೆ ಗುರು ಕಾಳಿಮರ್ಧನಕೃಷ್ಣಾ 3 ನಿನ್ನ ಭಕ್ತರಾ ಮಾತು ಯನಗದು ಮನ್ನಣೆ ನಿನ್ನ ಭಕ್ತರ ಕಥಾಶ್ರವಣ ಯನ್ನ ಕರಣಾಭರಣ ನಿನ್ನ ಭಕ್ತರ ಸಮೂಹ ಎನ್ನಯ ಕಣ್ಬೆಳಕು ನಿನ್ನ ಭಕ್ತರ ಪಾದದೂಳಿಯೆ ಶಿರೋಭೂಷಣವೆನೆಗೆ ನಿನ್ನ ಭಕ್ತರ ಆಶೀರ್ವಾದವೇ ಸರ್ವ ಬಲವೈ ಇನ್ನು ಈ ಬುದ್ಧಿಯು ಎಂದಿಗೂ ಕೆಡೆದಂತೆ ಚೆನ್ನಾಗಿ ರಕ್ಷಿಸೊ ಗುರು ಕಾಳಿಮರ್ಧನಕೃಷ್ಣಾ 4 ಪರಾಧೀನನೆಂದು ಪರಿಪರಿಯಿಂದಲಿ ಕೊರಗಿಸುವುದು ನಿನಗೆ ಎಂದಿಗೂ ಸರಿ ಅಲ್ಲ ಪರಾಧೀನನು ಅಹುದು ಪರತಂತ್ರನಾನಹುದು ಸರ್ವತಂತ್ರ ಸ್ವತಂತ್ರ ನೀನೆಂಬುದು ಸಿದ್ಧ ಶರಣಾಕರ ಆದರಿಷ್ಟು ಮಾತ್ರ ಕೇಳೋ ಸತಿ ತನ್ನಧೀನಳೆಂದು ಶಿರಶಿಡಿಯುವ ಊರಿ ಬಿಸಿಲಿನೊಳು ನಿಲ್ದಪನೆ ಸರಿಬಂದಿದ್ದು ಮಾಡೋ ಇದರ ಮೇಲಿನ್ನು ದೇವಾ ಉರಗಶಯನ ಗುರು ಕಾಳೀಮರ್ಧನಕೃಷ್ಣಾ 5 ನೀನು ನುಡಿಸಿದಂತೆ ನುಡಿದು ನುಡಿವೆನಯ್ಯ ನಿನ್ನ ಚಿತ್ತವು ಗುರು ಕಾಳೀಮರ್ಧನಕೃಷ್ಣಾ
--------------
ಕಳಸದ ಸುಂದರಮ್ಮ
ಸಾಕು ಬಿಡು ಭಾವೆ ಸಾಕು ಬಿಡು ನಿನ್ನ ಹೋಕೆ ಮಾತುಗಳೆಷ್ಟುಸಾಕು ಬಿಡು ಪ ಮದಗಜಗಮನೆ ನೀ ಒದೆವೋದ್ಯಾತಕೆ ಕಲಿತೆಬದಿಯಲಿದ್ದವರು ಇದಕೆ ನಗರೇನೆ ಸಖಿಯೆ ಬದಿಯಲಿದ್ದವರು ನಗರೇನೆ ನಿನ್ನ ಬುದ್ದಿಅದ್ಬುತವಾಗಿ ಈಗ ಬೆಳೆದಿದೆ ಸಖಿಯೆ1 ಸುದತಿ ಸುಭದ್ರಾಗೆ ಕದನ ಕಠೋರಿ ಸರಿಯೇನ ಸಖಿಯೆ2 ಎತ್ತಿ ಒಯ್ದವ ನಿನ್ನ ಅತ್ಯಂತ ಸುಖಿಸಿದ ಲತ್ತಿತಿಂದೊಬ್ಬ ಬಳಲುವಲತ್ತಿತಿಂದೊಬ್ಬ ಬಳಲುವ ನಿನ್ನ ನಡತೆವಿಸ್ತಾರವಾಗಿ ಈಗ ತಿಳಿಸಿದೆ ಸಖಿಯೆ3 ತಾಯಿ ಮಕ್ಕಳೊಳು ನ್ಯಾಯವನಿಕ್ಕುವಿಮಾಯಗಾರುತಿಯೆ ಬಲು ಮೂದೇವಿಮಾಯಗಾರುತಿಯೆ ಬಲು ಮೂದೇವಿ ನಿನಕಂಡುಬಾಯಿ ಬಿಡುತಾರೆ ಜನರೆಲ್ಲ ಸಖಿಯೆ4 ಖ್ಯಾತ ರಾಮೇಶ ಈಗ ಈ ಮಾತೆಲ್ಲಿ ಕಲಿತೆಂದ ಚಾತುರ್ಯದಲ್ಲಿ ಚಪಲನೆಚಾತುರ್ಯದಲ್ಲಿ ಚಪಲ ಚನ್ನಿಗನೆಂಬೊಪಾರ್ಥನು ನಿನಗೆ ಗುರುವೇನ ಸಖಿಯೆ 5
--------------
ಗಲಗಲಿಅವ್ವನವರು
ಸಾಕು ಸಾಕು ಬಿಡು ಬಡಿವಾರಾ ನಮ್ಮ ಶ್ರೀಕರ ದಾಸರ ಬಿಡಲಾರಾ ಪ. ಚಂಚಲಾಕ್ಷಿಯೊಳ್ ಚದುರತೆ ತೋರುತ ಮಂಚದ ಮೇಲ್ಕುಳ್ಳಿರಲಂದು ಮಿಂಚಿದ ಮೊರೆ ಕೇಳಿ ಮದಗಜನನು ಕಾಯ್ದ ಪಂಚ ಬಾಣ ಪಿತ ವಂಚಿಸನೆಂದಿಗು 1 ಶಂಭುಮುನಿಯು ಕೋಪಾಡಂಬರವನು ತೋರಿ ಅಂಬರೀಷಗೆ ಶಾಪವ ಕೊಡಲು ನಂಬಿದ ಭಕ್ತ ಕುಟುಂಬಿ ಸುದರ್ಶನ ನೆಂಬಾಯುಧದಿಂದ ಸಂಬಾಳಿಸಿದನು 2 ಎಲ್ಲ ವೇದಶಿರಗಳಲಿ ನೋಡೆ ಸಿರಿ- ನಲ್ಲ ವೆಂಕಟಗಿರಿವರ ಹರಿಗೆ ಎಲ್ಲವು ಸರಿಮಿಗಿಲಿಲ್ಲದೆ ತೋರುವ ಖುಲ್ಲ ದೈವಗಣವಿಲ್ಲೆ ಸೇರುವವು 3
--------------
ತುಪಾಕಿ ವೆಂಕಟರಮಣಾಚಾರ್ಯ
ಸಾಕೆಲೊ ಶ್ರೀರಂಗನಾಥ ಲೋಕದಾಟವೂ ಪ ಬೇಕು ನಿನ್ನಪಾದ ಭಜನೆಯೇಕದಾಟವೂ ಅ.ಪ ಕಾಕು ಮನುಜರೊಡನೆಯೆನ್ನಾ ನೂಕಲ್ಯಾತಕೋ ನೀ ನೇಕನಾಥನೆಂಬೊ ಬಿರುದು ಬೇಕು ಮಾಡಿಕೊಳ್ಳೊ 1 ಅಂಧಕಾರವಾಧೀತಲ್ಲೋ ಚೆಂದವೇನೆಲೊ ನಾ ನೊಂದೆನಲ್ಲೋ ಬಂದು ಕಾಯೊ ಇಂದಿರಾಪತಿ2 ಆರುಗಿರಿಯ ದಳದ ತುದಿಯೊಳಿರುವೊ ಶ್ರೀಗುರು ದಾರಿ ತೋರೋ ತುಲಶೀರಾಮ ದಾಸದಾಸನೂ 3
--------------
ಚನ್ನಪಟ್ಟಣದ ಅಹೋಬಲದಾಸರು
ಸಾಗಿ ಬಾರಯ್ಯ ನೀ | ಬಾಗಿ ನಮಿಸುವೇಯೋಗಿಗಳರಸನೇ ಶ್ರೀನಿವಾಸ ಪ ಭೋಗಿಶಯನನೆ ನಿನ್ನ ಭಾಗವತರು ಬಂದುಜಾಗು ಮಾಡದೆ ನಿನ್ನ ಬಾಗಿಲೊಳು ನಿಂತಿಹರೋ ಅ.ಪ. ಇಂದಿರೇ ರಮಣಗೋವಿಂದ ನೀನೇ ಗತಿಯೆಂದು ಭಜಿಸುತಿರಲುಆನÀಂದದಿಂದತÀಂದೆಯ ಬಾಧೆಗೆ ತಂದು ತೋರಲು ಸ್ತಂಭ ತಂದೆ ತಾಡನೆಯ ಮಾಡಲುಬಂದೆಯಾ ಪರಿಪರಿ ವಿಧ ಭಯದಿಂದವೋಡಲು ಬಂದು ಅಸುರನ್ನಆರ್ಭಟಿಸಿ ಕೆಡಹುತಛಂದದಲಿ ಬಗೆಯುತಸುರನ್ನ ಕೊರಳೊಳು ಮಾಲೆ ಅಂದು ಧರಿಸಿದ ಅಧಿಕ ಸಂಪನ್ನಪ್ರಳಯಾಗ್ನಿಯಂತಿರೆ ನಿನ್ನ ಸ್ತುತಿಸಲು ಅರಿಗೊಸೆದಿನ್ನು ಅನುತಿರಲುನಿನ್ನಯಮುಂದೆ ಭಜಿಸುತ ಕಂಡು ಬರಲಾನಂದದಿಂದಲಿ ಚಂದದಿ ಸಲಹಿದಾನಂದದಲಿ ಮಂದರೋದ್ಧರ ಎನ್ನ ಸಲಹೋ 1 ಮೃಗ ಬೇಡಲು ಬಾಣ ಎಸೆಯಲು ಅದು ಲಕ್ಷ್ಮಣಾಯೆಂದು ಕೂಗಲುಮತ್ತಾತ ಪೋಗಲು ಇತ್ತ ರಾವಣನು ಕರೆದೊಯ್ಯೆ ಸತಿಯಳ ವಾತಸುತ ತಾನೆನಿಸೇ ನೀ ಮುನ್ನಾ ಅವ ಪೋಗೆ ಉಂಗುರ ಖ್ಯಾತಿಯಿಂದಲಿನೀಡಲದಕಿನ್ನು ತನುಮನದ-ಲತಿ ಭೋಗದಿ ಶಿಖೆಯ ಶಿರೋಮಣಿಯನ್ನೆ ಕೊಡಲನುಗ್ರಹದಲಿಛಾತಿಯಿಂದಲಿ ಅವಗೆ ವಿಧಾತ ಪದವಿಯ ಪಾಲಿಸಿದೆ ಜಗನ್ನಾಥಇಂದ್ರಾದ್ಯಮರ ವಂದಿತ ವೀತಭಯ ಜಗನ್ನಾಥ ಸಲಹೋ2 ಮಂಗಳಾಂಗನೆ ನಿನ್ನ ಸುಖವ ಕೊಟ್ಟು ಅಂಗನೆಯರಬಾಧೆಬಿಡಿಸೊ ಇಂದುಅಂಗನೇಯರು ಬಂದು ಭಂಗಪಡಿಸಲದಕೆ ಪೋಗುತಾ ಮಾರನ್ನಬಾಧೆಯ ಕಳೆಯುತಾಪರಿಪರಿಯ ಸುಖಗಳ ಸಂಗಡಿಲ್ಲದೇ ನೀಡಿಯೊ ಮಲ್ಲಮರ್ದನನೇ ಎನುತಿರೆಬೇಗದಿಂದಲಿ ಓಡಿಪೋದೆಲ್ಲೊ ಭಕ್ತರನು ಸಲಹುವೆನೆಂಬೋಬಿರುದು ನಿನಗೆ ಉಂಟಲ್ಲಾಅನುತಿರಲು ನಿನ್ನಯ ಎನ್ನ ಮನ ಉತ್ತಂಗಸುತಸತ್ಸಂಗ-ವೀವುದು ವಿಹಿತ ದೇವನೇತುರಂಗನಾಥನೇ ರಂಗವಿಠಲನೆ ದೇವ ದೇವರ ದೇವ ಸಲಹೋ3
--------------
ಶ್ರೀಪಾದರಾಜರು
ಸಾಧಿಸಿ ನೋಡಿ ನಿಜ ಖೂನ ಸದ್ಗುರು ಕೃಪೆಯಿಂದ ಸ್ವಸುಖದ ನಿಧಾನ ಧ್ರುವ ಸಹಜಾವಸ್ಥೆಗೆ ಬಂದು ನೋಡಿ ಸಹಜ ಸದ್ವಸ್ತು ಬಾಹುದು ತಾನೆ ಕೈಗೂಡಿ ದೇಹ ದಂಡನೆಂಬುದು ಬ್ಯಾಡಿ ಸಾಹ್ಯಮಾಡುವ ಗುರುಸೇವೆ ಪೂರ್ಣಮಾಡಿ 1 ಸಾಧನವೆಂಬುದೆ ಸಾಕ್ಷೇಪ ಭೇದಿಸಿ ನೋಡಲಿಕ್ಕಿದುವೆ ವಸ್ತು ತಾಂ ಸಮೀಪ ಆದಿ ಅನಾದಿ ಸ್ವರೂಪ ಸಾಧಿಸಿದವನೆ ತಾ ಮೂರುಲೋಕ ಆಪ 2 ಎಲ್ಲಕ್ಕೆ ಮೇಲು ಗುರುಭಕ್ತಿ ಅಲ್ಲೆಸಲ್ಲದು ಮತ್ತೆ ಮುಂದೆ ಬೇಕೆಂಬ ಉಕ್ತಿ ಇಲ್ಲೆ ತಿಳಿಕೋ ನೀ ಮಹಿಪತಿ ಸುಲಭದಿಂದ ಸಾಧಿಸಿಕೊಂಡು ನಿಜಯುಕ್ತಿ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಮವೇದವ ಶ್ರುತಿಗೊಳಿಪೆ ಪೂರ್ಣಕಾಮನೆ ಪರಮೇಶ ನೀ ವೇದರೂಪಿಸ್ವರವೆತ್ತಿ ಕರೆವದು ಸಾಮ ಅಗ್ನಿಬರಬೇಕು ಅಧ್ವರಕೆಂಬುದು ನೇಮಬರುವನಗ್ನಿಯು ದೇವಸ್ತೋಮ ಬಂದುಬರುಹಿಯಲಿಹನೆಂಬ ಬಿರಿದು ನಿಃಸೀಮ 1ತರತರದಲಿ ವೇದಗಳನೂ ನೀನುಸುರಿಯೆ ಸಹಾಯವ ಮಾಡಿ ಯಜ್ಞವನುಧ್ಧರಿಸಿದೆ ಧರ್ಮವರ್ಧನನು ಮೂರುಬೆರಸಲು ನಿಗಮವು ಮುಖ್ಯವೆಂದಿದನು 2ಮೂರು ಶ್ರುತಿಗಳೇಕದಲ್ಲಿ ಕ್ರತುವಪೂರಿತವನು ಮಾಡಿ ಕಾಲಕಟ್ಟಲೆಯಲಿಸೇರಿಸಿ ತಿರುಪತಿಯಲ್ಲಿ ನೀನೆತೋರಿದೆ ವೆಂಕಟಗಿರಿವರದಲ್ಲಿ 3ಓಂ ತ್ರಿಭಂಗಿನೇ ನಮಃ
--------------
ತಿಮ್ಮಪ್ಪದಾಸರು
ಸಾರ ಬಂದೆ ಪ ಚಕ್ರಧರ ಧುರಧೀರ ನಾರಸಿಂಹ ನಾನು ಬಂದೆ ನಾನು ಬಂದೆ ಅ ಕಲ್ಲೊಳು ವಿಷಯ ಪುಟ್ಟಿಸಿದನಾ ಶುಭವಲ್ಲದ ದಿವಸದೊಳಿರಾ ನೋಡಿಇಲ್ಲದ ಬಯಲ ನಿಂದೆಯ ಪೊತ್ತು ಶುಕಾಮಲ್ಲರೊಡನೆ ಕಾದಿ ಮಲೆತ ಸಾಲ್ವರ ಕೊಂದುಮಡದಿಗೆ ರತ್ನ ತಂದುದರಿಂದ 1 ಮಡದಿಯ ಮನೆಯ ಅರ್ಭಕನಾಗಿ ಬಲುಗಡಿಯ ದಾನವನ ಕೊಂದನ ಸೂನುಬಡನಡುವಿನ ಠಾವಿಗೆ ಸಿಲ್ಕಿ ಸುಖಪಡದಿರೆ ರಾಯನಾ ಹಿಡಿದು ತೋಳು ಕಟ್ಟಿದುದರಿಂದ 2 ಮೂಲ ವೃಕ್ಷದಾಲಾರ ಮುಂದೆಯ ದಾನವರಿರ್ದಾಲಯ ದಹಿಪನೆಂಬುದಯ್ಯನಬಲಮಾಡಿ ಬಲಗೆ ಇಂದುರುಹಿದೆ ಕಾಗಿನೆಲೆಯಾದಿ ಕೇಶವ ಖಳನ ಗರ್ಭವಿಚ್ಛನ್ನಪ್ರಹ್ಲಾದಗೆ ಪ್ರಸನ್ನವಾದುದರಿಂದ 3
--------------
ಕನಕದಾಸ
ಸಾರ ಸರ್ವಸ್ವವನುತಿಳಿಯಾದ ಭಾಷೆಯಲಿ ತಿಳಿಸಿದ ಸಮರ್ಥನಿಗೆ 1ಪಾಂಡಿತ್ಯ ಮದದಿ ಸ್ವೋತ್ತವರ ದ್ರೋಹವಮಾಡಿತತ್ಫಲವನುಂಡು ಮನಗಂಡು ಬೆಂದುಬೆಂಡಾಗಿಬಂದು ಶರಣೆಂದು ಪಾದಕೆಬೀಳೆ'ಜಯ ಗೋಪಾಲ ದಾಸರು ಅನುಗ್ರ'ಸಿದರು 2ಸದ್ಭಕ್ತ ಸುಜ್ಞಾನ ವೈರಾಗ್ಯ ಆಯುಷ್ಯದಯಪಾಲಿಸಿದು ದಾಸ ದ್ವಯರಿಗೆವೈರಾಗ್ಯ ಒಡಮೂಡಿ ಪಾಂಡಿತ್ಯ ಮದ ಓಡಿಹರಿದಾಸ ದಿಕ್ಷೆಯನು ಪಡೆದಾಗ ಶ್ರೀನಿವಾಸಚಾರ್ಯ ಹರಿದಾಸ ನಾದ 3ಗುರು ಆಜ್ಞೆ ಕೊಡಲು ಪಂಢರಿಗೆ ಹೋದರು ಅಲ್ಲಿರುಕ್ಮಿಣಿ ಪಾಂಡುರಂಗನ ಔತಣಚಂದ್ರಭಾಗಿಯಲಿ 'ಜಗನ್ನಾಥ'ಠಲ'ನೆಂಬ ಅಂಕಿತವು ದೊರಕಿತು ಸ್ನಾನಕಾಲದಲಿ 4ನಿತ್ಯ ಹರಿನಾಮ ಸಂಕೀರ್ತನವು ಹಗಲಿರಳು ನಿತ್ಯನೂತನ ಪದ ಸುಳಾದಿಗಳ ಸುಗ್ಗಿನಿತ್ಯ ಸದ್ಭಕತರಿಗೆ ಪಾಠ ಪ್ರವಚನಭಕ್ತರಾಧೀನ ಭೂಪತಿ'ಠ್ಠಲನು ಕುಣಿದ 5
--------------
ಭೂಪತಿ ವಿಠಲರು