ಒಟ್ಟು 2315 ಕಡೆಗಳಲ್ಲಿ , 118 ದಾಸರು , 1758 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂದಾನ ಬಾಧೆಗೆ ಮನಿ ಮಂದಿ ನಾವು ಸಹಿತ ಬೆಂದು ಬೇಸರ ಗೊಂಡು ಬಳಲು ತೇವು ಹರಿ ತಂದಿ ಬೇಗದಿ ಬಂದು ದಯಮಾಡಿ ಸಲಹೋ ಗೋವಿಂದಾ ಕೃಪಾಳು ಶ್ರೀ ಕರುಣಾಂಬುಧಿಯೆ ಪ ಕೃಷ್ಣಾ ರೌದ್ರಾಂತಕನ ಕ್ರೂರದೃಷ್ಟಿ ಮುಖ ಹಲಾ ತ್ಕøಷ್ಠವಾಗಿ ಎನ್ನ ಕಾಡುತಿರಲು ನಿಷ್ಠೆ ನೇಮಗಳೆಲ್ಲ ಜರಿದು ಮತಿ ಭೃಷ್ಟನಾಗಿ ಕಷ್ಟಕ್ಕೆ ಒಳಗಾದೆ ಕಡೆಹಾಯಿಸೊ ಧೊರಿಯೆ ಇಷ್ಟದಾಯಕ ನಿನ್ನಲ್ಲಿನ ಮಾಯವೆ ಆಡುದು (ಅಹುದು) ಕೃಷ್ಣಮೂರುತಿ ಬೇಗ ಕೈಹಿಡಿ ಇನ್ನಾ ಸೃಷ್ಟಿಗೊಡೆಯ ಶ್ರೀನಿವಾಸಕೇಶವ ಎನ್ನ ಕಷ್ಟವು ಪರಿಹರಿಸಿ ಕಾಯೋ ಸಂಪೂರ್ಣ 1 ಸೂರ್ಯಾನ ಪುತ್ರನ ಕಾರ್ಯಾವು ಎಮ್ಮ ಮೇಲೆ ಭಾರಿ ಕಾಣುತಲಿದೆ ಪರಮಾತ್ಮನೆ ------- ಘಟಗಳಿಗುಪದ್ರಕಾರನಾಗಿ ವ್ಯಾಧಿ ಖಂಡಿಸೋ ವೇಳೆ ಆರು ಈ ಗ್ರಹಕರ್ತರಾಗಿರಲು ದೇವರಿನ್ನು ಧಾರುಣಿಯೊಳು ಹರಿ ದನುಜಾಂತಕಾ ವಾರಿಜಾನಾಭಾ ಶ್ರೀ ವೈದೇಹಿ ಪತಿರಾಮಾ ಸಾರನೆ ಗಡ ಬಂದು ಸಲಹೋ ತಂದೆ 2 ಗರ್ಭಾದಿ ಮುದನಿಂ ಸುಖಭ್ರೂಣ ಭಯವೆಂಬ ದೆಬ್ಬಿಗೆ ತಾಳದೆ ತಲ್ಲಣಿಸುವೆ ಅರ್ಭಕ ನಾನೊಂದು ಅರಿತು ಅರಿಯೆ ದೇವ ಸಭ್ಯಾ ನೀ ನಂದ ಸರ್ವೋತ್ತುಮಾ ನಿರ್ಭಯನನು ಮಾಡಿ ನೀನೆ ರಕ್ಷಿಸದಿರೆ ದಾರು ಮನಸು----ಳಗೆ ದರ್ಭಶಯನ ರಾಮನ-----'ಹೊನ್ನ ವಿಠ್ಠಲ’ ಸಾಕಾರ ನೀ ಎನ್ನ ತ್ವರದಿ ಪೊರೆಯೊ 3
--------------
ಹೆನ್ನೆರಂಗದಾಸರು
ಮಧ್ವಮತವ ಪೊಂದದವನ ಭಕುತಿಯಾತಕೆ ಪ ಊಧ್ರ್ವಪುಂಡ್ರ ತಿದ್ದದವನ ಕರ್ಮವ್ಯಾತಕೆಅ.ಪ ದಾನವನ್ನು ಮಾಡದವನ ದ್ರವ್ಯವ್ಯಾತಕೆ | ಸ್ನಾನವನ್ನು ಮಾಡದವನ ಮೌನವ್ಯಾತಕೆ | ಮಾನಿನಿಯು ಇಲ್ಲದವನ ಬದುಕು ಯಾತಕೆ | ಧ್ಯಾನವನ್ನು ಅರಿಯದವನ ಪೂಜೆ ಯಾತಕೆ 1 ವಂಶವನ್ನುದ್ಧರಿಸದಂಥ ಮಗನು ಯಾತಕೆ | ಹಿಂಸೆಯನ್ನು ಪಡಿಸುವಂಥ ಅರಸು ಯಾತಕೆ || ಸಂಸಾರವನು ಒಲ್ಲದಂಥ ಸತಿಯು ಯಾತಕೆ | ಕಂಸಾರಿಯನು ತಿಳಿಯದಂಥ ಜ್ಞಾನವ್ಯಾತಕೆ 2 ಬಂಧು ಬಳಗ ಬಿಟ್ಟು ಉಂಬ ನೆಂಟರ್ಯಾತಕೆ | ಕಂದರನ್ನು ಮಾರುತಿಪ್ಪ ತಂದೆಯಾತಕೆ || ಬಂದ ಅತಿಥಿಗನ್ನವಿಕ್ಕದ ಸದನವ್ಯಾತಕೆ | ನಿಂದೆಗಳು ಮಾಡುತಿಹನಾಚಾರವ್ಯಾತಕೆ 3 ಗುರೂಪದೇಶವಿಲ್ಲದಂಥ ಮಂತ್ರವ್ಯಾತಕೆ | ಹಿರಿಯರನ್ನು ಸಾಕದವನ ಪುಣ್ಯವ್ಯಾತಕೆ || ಚರಿಸಿ ತೀರ್ಥಯಾತ್ರೆ ಮಾಡದ ದೇಹವ್ಯಾತಕೆ | ವರ-ಪ್ರಸಾದವೀಯದಂಥ ದೇವರ್ಯಾತಕೆ4 ಏಕಾದಶಿಯ ಮಾಡದವನ ವ್ರತವು ಯಾತಕೆ | ಏಕಮನಸು ಇಲ್ಲದವನ ನಡತೆ ಯಾತಕೆ || ಸಾಕಿದವನ ಕೊಲ್ಲುವಂಥ ಭಂಟನ್ಯಾತಕೆ | ಲೋಕವಾರ್ತೆ ಬಿಡದವನ ಜಪವು ಯಾತಕೆ 5 ಭಾಷೆ ಬದ್ಧವಿಲ್ಲದವನ ಮಾತು ಯಾತಕೆ | ಕಾಸುವೀಸÀಕೆ ಬಡಿದಾಡುವ ಅನುಜರ್ಯಾತಕೆ || ಲೇಸು ಹೊಲ್ಲೆಹ ನೋಡದಂಥ ಗೆಳೆಯನ್ಯಾತಕೆ | ಆಸೆಯನ್ನು ಬಿಡದ ಸನ್ಯಾಸವ್ಯಾತಕೆ 6 ತಪ್ತ ಮುದ್ರೆಯಿಲ್ಲದವನ ಜನ್ಮವ್ಯಾತಕೆ | ಗುಪ್ತದಲ್ಲಿ ನಡೆಯದಿಪ್ಪ ದಾಸನ್ಯಾತಕೆ || ಆಪ್ತಬಂಧು ವಿಜಯವಿಠ್ಠಲನ ಶ್ರೀ ಚರಣದಿ | ಕ್ಲುಪ್ತ ಮೀರದೆ ನಡೆದ ಮೇಲೆ ನರಕವ್ಯಾತಕೆ 7
--------------
ವಿಜಯದಾಸ
ಮಧ್ವರಾಯರ ಚರಿತೆ ಕೇಳಲು ಶುದ್ಧವಾಯಿತು ಜನತೆ ಪ ತಿದ್ದಿತೆಲ್ಲರ ನಡತೆ ಸುಲಭದಿ ಲಬ್ಧವಾಯಿತು ಘನತೆ ಅ.ಪ ಉತ್ತಮ ದಿವಿಜರ ಸತ್ಸಭೆಗಳಲಿ ನಿತ್ಯ ಪಾಡುವ ಕಥೆ ಮರ್ತ್ಯಲೋಕದ ಮದ ಮತ್ಸರ ರೋಗಕೆ ಪಥ್ಯಮಾಡುವವರಿಗೆ ಉತ್ತಮವೀ ಕಥೆ 1 ಇಲ್ಲಿಯ ಜೀವನ ಅಲ್ಲಿಗೆ ಸಾಧನ ಎಲ್ಲಿಯು ಭೇದವ ತೋರಿದರು ಕ್ಷುಲ್ಲಕ ಮತಗಳ ಬೆಲ್ಲದ ವಚನವು ಸಲ್ಲದಾಯಿತು ಬಲು ಬಲ್ಲ ಮಹಾತ್ಮ ಶ್ರೀ 2 ಹರಿ ಗುರು ಕೃಪೆಯಿದು ಮರುದಂಶರ ಮೈ ಮರೆಸುವ ಚರಿತೆಯು ಹರಿದುದು ಶ್ರವಣದೊಳ ದುರಿತವು ತೊಲಗಿತು ಪರಮ ಪ್ರಸನ್ನನ ಪರಮ ಪದದ ರುಚಿಯರಿತರು ಸುಜನರು 3
--------------
ವಿದ್ಯಾಪ್ರಸನ್ನತೀರ್ಥರು
ಮಧ್ವರಾಯರಿಗೆ ನಮೋ ನಮೋ ಪ ಮಾಯವಾದಿಗಳ ಮತವ ಸೋಲಿಸಿ ಸುಯತಿಗಳಿಗೆ ಸದ್ಗತಿ ಮಾರ್ಗವ ತೋರಿದ ಅ.ಪ ದೈತ್ಯ ರಾವಣಗೆ ಹಲವು ಭೀತಿ ತೋರಿಸಿ ಮಾತೆ ಜಾನಕಿಯಿಂದ ಖ್ಯಾತಿ ಪಡೆದ ಗುರು 1 ಮಂದ ಜರಾಸಂಧನಂಗವ ಸೀಳಿ ತಂದ ಕಪ್ಪವನ್ನು ಬಂದು ಧರ್ಮಗಿತ್ತ 2 ಕುಜನಾದಿಗಳ ನಿಜವಚನದಿ ಸೋಲಿಸಿ ವಿಜಯ ರಾಮಚಂದ್ರವಿಠಲ ಸರ್ವೋತ್ತಮನೆನಸಿದ 3
--------------
ವಿಜಯ ರಾಮಚಂದ್ರವಿಠಲ
ಮಧ್ವಾಂತರ್ಗತ ವೇದವ್ಯಾಸ ಮಮ ಹೃದ್ವನರುಹ ಸನ್ನಿವಾಸ ಪ ಸದ್ವಿದ್ಯಾ ಕೊಡು ಶ್ರೀ ಕೃಷ್ಣ ದ್ವೈಪಾಯನ ಚಿದ ಚಿದ್ವಿಲಕ್ಷಣ ತ್ವತ್ಪಾದ ದ್ವಯಾಬ್ಜವ ತೋರೊ ಅ ಬಾದರಾಯಣ ಬಹುರೂಪಾ ಸನ ಸನ್ನುತ ಧರ್ಮಯೂಪಾ ವೇದೋದ್ಧಾರ ದನಾದಿ ಕರ್ತ ಪೂರ್ಣ ಬೋಧ ಸದ್ಗುರುವರಾರಾಧಿತ ಪದಯುಗ ಮೇದಿನಿಯೊಳಾನೋರ್ವ ಪಾಮ ರಾಧಮನು ಕೈ ಪಿಡಿ ಕರುಣ ಮ ಕಾಯ ಪ್ರ ಬೋಧ ಮುದ್ರಾಭಯ ಕರಾಂಬುಜ1 ಹರಿತೋಪ ಲಾಭ ಶರೀರಾ ಪರಾ ಶರ ಮುನಿವರ ಸುಕುಮಾರ ಪರಮ ಪುರುಷಕಾರ್ತಸ್ವರಗರ್ಭ ಪ್ರಮುಖ ನಿ ರ್ಜರಗಣಮುನಿನುತ ವರಪಾದಪಂಕೇಜ ಕುರುಕುಲದಿ ಧೃತರಾಷ್ಟ್ರ ಪಾಂಡು ವಿ ದುರರ ಪಡೆದೈವರಿಗೊಲಿದು ಸಂ ಹರಿಸಿ ದುರ್ಯೋಧನನ ಭಾರತ ವಿರಚಿಸಿದ ಸುಂದರ ಕವೀಂದ್ರ 2 ಜಾತರೂಪ ಜಟಾ ಜೂಟ ಶ್ರೀ ನೀಕೇತನ ತಿಲಕ ಲಲಾಟ ಶ್ವೇತ ಶ್ರೀಯಜ್ಞೋಪ ವೀತ ಮೇಖಲ ದಂಡಾನ್ವಿತ ಕಮಂಡಲ ಭೂತಭಾವನ ಭೂತಿಕೃತ್ಸದ್ಭೂತಿದಾಯಕ ಶ್ರೀ ಜಗ ನ್ನಾಥ ವಿಠಲನೆ ನಿನ್ನ ಮಹಿಮೆಯ ನಾ ತುತಿಸಬಲ್ಲೆನೆ ಸುಖಾತ್ಮ 3
--------------
ಜಗನ್ನಾಥದಾಸರು
ಮಧ್ವಾಂತರ್ಗತ ಶ್ರೀನಿವಾಸಾ | ಕಾಯೊಸಿದ್ಧ ಮೂರುತಿ ವೆಂಕಟೇಶಾ ಪ ಇದ್ಧರೆಯೊಳು ನಿನ್ನ | ಹೊದ್ದಿದವರ ಪಾಪಬದ್ಧವಾಗದು ಅನ್ಯೋಪದ್ರವೆ ಮೊದಲಿಲ್ಲ ಅ.ಪ. ಭವ ಪರ ಕರ ಮೂರ್ತಿ ಪರಾಕು ಭವ ಸುಖನೇಕ ಪರಿಯಲಿ | ಬೇಕು ಪಾಲಿಸು ಏಕ ಭಕುತಿಯ 1 ಧರೆಗೆ ವೈಕುಂಠದ ಪರಿಯೇ | ತೋರಿಮರೆವಿ ಮಹಾತ್ಮ ಶ್ರೀಹರಿಯೇ ||ಸರಿ ನಿನಗಿದು ಹೊಸ ಪರಿಯೇ | ಭಾಗ್ಯಮರಿಯಾದ ಮರಿತಿ ನೀ ಧೊರೆಯೇ ||ಶಿರಿಯೆ ಮಂದಿರವಾಗಿ ಪರಿಪರಿ ರೂಪದಿಕರವ ಜೋಡಿಸಿ ಉಪಚರಿಯ ಮಾಡಲು ಇತ್ತಸರಸಿಜೋದ್ಭವ ಗರುಡ ನರಹರ | ಸುರಪಮುಖ ದಿವಿಜರು ಪರಾಕೆನೆಪರಮ ಪದ ಸಂಪದವಿದಲ್ಲದೆ | ಶಿರಿಯ ಭಾಗ್ಯದಿ ಪರವೆ ನಿನಗೇ 2 ಕರ್ಣ ಕುಂಡಲ ಕೌಸ್ತುಭ ಮಣಿ ಗಣ ಹಾರ ಶೃಂಗಾರ ||ಖಣಿಯೆ ಕಟಿಕರ ಕನಕಮಯ ಸುವಸನ ಕಾಂಚೀದಾಮ ಒಪ್ಪಲುಪ್ರಣತರ ಭಯಪ್ರದಕರ ಕುಂಭಿಣಿಗೆ ತೋರುವ ಅನಘ ವೆಂಕಟನೆ 3 ನಿತ್ಯ ಮೋದಾ | ವಾದಝಗ ಝಗಿಸುವ ದಿವ್ಯ ಪಾದಾ ||ಯುಗಳಾರಾಧನಿ ಪರರಾದಾ | ವರಿಗೆಅಗಣಿತ ಸುಖವೀವ ಶ್ರೀದಾ ||ಗಗನ ಭೂಮಿಪ ಗತಿಪ್ರದ ದಶರಥ ಪಂಚಮೊಗನಾದಿ ಭುವನದೊಳಣುಗ ಮೊದಲಾದ ||ಜಗದಿ ಬಹು ತಾಪಸಿಗಳ ಭಾವದಿ | ಸಿಗದೆ ಮೋಹಾದಿಗಳ ಪಾಶದಿ ಮುಗದಿ ಕರಗಳ ಪೊಗಳುವರಿಗೆ | ಬಗೆ ಬಗೆಯ ಕಾಮಗಳ ಹರಿಸಿದ 4 ಮಣಿ ದಿವಿಜ ಲ-ಲಾಮ ಭೂಡÀರ ವ್ಯಾಸ ವಿಠಲ ಯಾಮ ಯಾಮಕೆ ಎನ್ನ ಪಾಲಿಸೋ 5
--------------
ವ್ಯಾಸವಿಠ್ಠಲರು
ಮನವ ಶೋಧಿಸದೆಲೆ ಡಂಭದಿ ದಿನದಿನದಲಿ ಕರ್ಮಮಾಡೆ ತನುವಿಗೆ ಬಲು ಕ್ಲೇಶವಲ್ಲದೆ ಅನುಕೂಲವೇನು ಪ ಕಾಮಕ್ರೋಧ ಲೋಭಮೋಹ ಮದ ಮತ್ಸರಗಳನು ಬಿಡದೆ ನಾಮಗಳನು ಬಳೆದು ಮರೆದರೆ ಶ್ರೀ ರಾಮನರಿಯನೆ 1 ಈಶ ಸೇವೆಗೆಂದು ಬಹಳ ಮೋಸದಿಂದ ಧನವ ಗಳಿಸಿ ಈಶನನ್ನು ಮರೆವ ನರನನು ಜಗದೀಶನರಿಯನೆ 2 ಪರಸತಿಯರ ಸರಸಗಳಿಗೆ ಜರಿದು ಮನವ ಮರುಳು ಮಾಡೆ ಸರಳತನದಿ ದಾನ ಮಾಡಲು ನರಹರಿಯು ಅರಿಯನೆ3 ಒಡಲು ಪೊರೆಯೆ ಸಡಗರದಲಿ ಮಡಿ ಮಡಿಯೆಂದು ನುಡಿವ ಮೂಢನ ಪೊಡವೀಶನರಿಯನೆ4 ಪನ್ನಗಾರಿವಾಹನ ಪ್ರಸನ್ನವದನ ಕೃಷ್ಣಮೂರ್ತಿಯ ಉನ್ನತ ಮಹಿಮೆಗಳನರಿತಗೆ ಇನ್ನೇನು ಬೇಕು 5
--------------
ವಿದ್ಯಾಪ್ರಸನ್ನತೀರ್ಥರು
ಮನವೆ ನಿನಗೇಕಿನ್ನು ಲಜ್ಜೆದೋರದು ಬಳಿಕಕನಲಿ ನಿಂದಿಸುವೆ ಜನರನಿತರಾ ಪಘನಘೋರಮಲಜನಿತ ತನುವಿನೊಳುನೀನಿರುತಲನವರತ ತೊಳಲಬಹುದೇ ಬರಿದೆ ಅ.ಪಓದಿ ಗ್ರಂಥಗಳನು ಪಠಿಸಿಯದರರ್ಥವನುಬೋಧಿಸುವೆ ಪರರಿಗೆಲ್ಲಾ ಸೊಲ್ಲಾಸಾದರದಿ ತನ್ನಿಷ್ಠೆಯಲಿ ನಡೆಯುತನುಭವವನೀದಿನಕು ತಂದುದಿಲ್ಲವಲ್ಲಾಬೋಧೆವಡದಿಹ ಯೋಗಿಗಳ ಜರೆವ ಬಗೆಯಲ್ಲಿನೀ ದೊಡ್ಡ ಜಾಣನಲ್ಲಾ ಬಲ್ಲಸಾಧಿಸಿದ ವಿದ್ಯವನು ವಾದದಲಿ ನೀಗಾಡಿಬೀದಿಯಲಿ ನಿಂತೆಯಲ್ಲಾ ನಲ್ಲಾ 1ಧನಧಾನ್ಯ ದಾಸ ಕತಿಯೊಳಗೊಂದಿಕೊಂದಿರುವಜನರಲವಿವೇಕ ವಿಡಿದೂ ಜರಿದೂತನು ಪಾಶ ಬದ್ದದಲಿ ನರಕ ಭಾಜನರಾಗಿದಿನವ ಕಳೆಯುತ್ತಲಿಹರೂ ುವರೂಎನುತಲನುತಾಪದಲಿ ನೀ ಮತ್ತೆಯನವರತಧನಿಕರಿದ್ದೆಡೆಗೆ ಬಂದೂ ನಿಂದೂಧನವ ಕೊಡಿ ಸತ್ಪಾತ್ರನಾನೆಂದು ವೊಂದುವರೆಹಣವ ಕೈಯೊಡ್ಡಿ ಕೊಂಡೂ ಉಂಡೂ2ತೋರುವ ಜಗತ್ತಿದುವೆ ಪರಮಾತ್ಮನಿಂದಲೆತೋರುವದು ಭ್ರಮೆಗೆ ಹಲವೂ ಕೆಲವೂತೋರದಡಗದ ನಿತ್ಯ ವಸ್ತುವೆ ತಾನೆÀಂದುಧೀರತನದಿಂದಲಿರವೂ ಅರಿವೂಈ ರೀತಿಯಲಿ ತಿಳಿದು ಮುಕ್ತನಾಗದೆ ಬರಿಯಕ್ರೂರ ಬುದ್ದಿಯಲಿ ುರವೂ ಮರವೂದಾರಿಗಾಣದೆ ನಿನ್ನ ಅನುಭವವ ನೀ ಮತ್ತೆಹೊರುವುದೆ ನಿನಗೆ ಮತವೂ ದೃಢವೂ 3ಇಂದ್ರಿಯಂಗಳ ಸುಖವನೆ ಮೆಚ್ಚಿ ನೀನವರಹಿಂದುಗೊಂಡೆರಗಿ ಬಿಡದೆ ಪಡೆದೆಸಂದ ಭೋಗದ ಸವಿಯನೆನನೆನದು ಮತ್ತದನುಮುಂದು ಬೇಕೆಂದು ಹೊರೆದೆ ಬೆರೆದೆಕಂದಿ ಕಾಮಕ್ರೋಧದಗ್ನಿಯಲಿ ನೀ ಬೆಂದುಹೊಂದಿ ನೀಂ ಜನ್ಮಪಿಡಿದೆ ಮರೆದೆಹಿಂದುಗಳೆವಾತ್ಮನನು ಹಿತವೆಂದು ಮಿಥ್ಯವನುನೊಂ[ದು] ನೋಡದೆ ಬರಿದೆ 4ಚದುರ ವಿದ್ಯವ ಕಲಿತೆನೆಂಬುದೊಂದೇ ಘನತೆಸುದತಿ ಸಂಪತ್ತಿನಲ್ಲೆ ರಮತೆಒದಗಿ ಬಹಳೋದ್ಯೋಗಗಳ ಮಾಡಿ ಬಹುದಿವಸಬದುಕಿದವ ನೆಂಬುದರಲೆ ುರತೆಇದ ನಾನು ಸಂಪಾದಿಸಿದೆನೆನ್ನ ಶೌರ್ಯತೆಗೆಇದಿರಿಲ್ಲವೆಂದು ಇದಕೆ ಬೆರತೆಮುದದಿ ಗುರು ವಾಸುದೇವಾರ್ಯವೆಂಕಟರಮಣನೊಡಮೂಡದಿತರ ನಡತೆ ಜಡಕೆ 5
--------------
ತಿಮ್ಮಪ್ಪದಾಸರು
ಮನವೆ ಪೇಳುವೆ ಪ ಅಂತರಂಗದಲಿ ಚಿಂತಿಪರಘಶುಲಧ್ವಾಂತ ದಿವಾಕರನಾ ಶ್ರೀವರನಾ ಅ.ಪ ಎಂತು ಸುಕೃತವೂ ಸಿರಿಕಾಂತನುಯನ್ನೊಳು ನಿಂತಿರುವನು ಎನುತ ಪರ್ವತ ಸಂತೋಷದಲಿರುವಂತೆ ತೋರುವದು ಸು- ಕಾಂತ ಶಿಖರದಿಂದ ಛಂದ 1 ವರಶಿಲೆಯೊಳಿರುವ ಹರಿಯ ಶೇವಿಸಲು ಹರುಷದಿ ಸುರನಿಕರ ಭಾಸುರ ತರುಲತೆರೂಪದಿ ಇರುತಿಹರೆನ್ನುತ ಮೆರೆವನು ಗಿರಿರಾಜಾ ಸುತೇಜಾ2 ಗಿರಿನಾಥಾ ತೋರುತ ಅರಳಿದ ಪೂವಿನ ಪರಿಮಳ ಬೀರುವ ಸುರಚಿರ ತರುವ್ರಾತಾ ಶೋಭಿತ3 ಪವನ ಶೇವಿತನು ಭುವನೋದರ ತಾ ದಿವಿಜರಿಂದ ಸಹಿತ ಸೇವಿತ ಅವನಿಧರನು ಮಾಧವನ ತೆರದಿ ತೋ ರು ವೆನೆಂಬುಗರ್ವಾದಿಂದಿರುವ 4 ಸಿದ್ಧಚಾರಣ ತಪೋವೃದ್ಧರಿದೇ ಸ್ಥಳ ಸಿದ್ಧಿದಾಯಕವೆಂದೂ ಬಂದೂ ಪದ್ಮಾಕ್ಷನ ಪದಪದ್ಮವ ಧ್ಯಾನಿಸು- ತಿದ್ದರು ಗುಹೆಗಳಲಿ ಪೂರ್ವದಲಿ5 ಮುನಿ ಮಾರ್ಕಾಂಡೇಯನು ಬಹುದಿನದಲಿ ಘನ ತಪವಾಚರಿಸಿ ಸೇವಿಸಿ ವನಜನಾಭನ ಪದವನಜ ಮಧುಪ ನೆಂ ದೆನಿಸುತಲಿರೆ ಗುಹದಿ ತಪೋನಿಧಿ6 ಗಿರಿಯ ಬಲದಿ ಅಹೋಬಲ ನರಸಿಂಹನ ದರ್ಶನವನು ಕೊಳುತ ನಿರುತ ಇರುತಿರಲೊಂದಿನ ಬರಲಾಷಾಢದ ಹರಿವಾಸರ ವೃತವಾ ಚರಿಸುವ 7 ದ್ವಾದಶಿ ಸಾಧನೆ ಬರಲು ಪ್ರತಿದಿನದಿ ಶ್ರೀದನ ದರ್ಶನದಾ ನೇಮದ ಸಾಧನೆ ವಿಷಯದಿ ಯೋಚಿಸುತಿರೆ ಹರಿ ಮೋದದಿ ಮುನಿಗೊಲಿದಾ ಸೂಚಿಸಿದಾ 8 ಅರುಣೋದಯದಲಿ ಸುರಗಂಗೆಯು ತಾ ವರ ಪುಷ್ಕರಣಿಯೊಳು ಬರುವಳು ತರುರೂಪದಿ ನಾ ಬರುವೆನು ಬಿಡದಿರು ಮರುದಿನದಾ ಚರಣೆ ಪಾರಣೆ9 ಎಂತು ಕರುಣವೊ ನಿರಂತರ ಭಜಿಪರ ಚಿಂತಿತ ಫಲವೀವ ಕೇಶವ ಇಂತು ಹರಿಯ ಗುಣ ಚಿಂತಿಸುತಿರಲು ನಿ ಶಾಂತದಿ ಸರೋವರದಿ ವೇಗದಿ10 ಭಾಗೀರಥಿ ಜಲದಾಗಮ ವೀಕ್ಷಿಸಿ ರಾಗದಿ ವಂದಿಸಿದ ತುತಿಸಿದ ಯೋಗಿವರನುತ ಸ್ನಾನವಮಾಡಿ ಬರುವಾಗಲೆ ಧ್ಯಾನಿಸಿದ ಹರಿಪದ11 ಆ ತರುವಾಯದಿ ಪಾರಿಜಾತ ತರು ವ್ರಾತವ ನೋಡಿದನು ವಂದಿಸಿದನು ಈತನೆ ನರಮೃಗನಾಥನೆನುತ ಮುನಿ ಪ್ರಾತ:ಪಾರಣವ ಮಾಡಿದ ಜವ12 ಮೀಸಲು ಮನದಲಿ ಶೇಷಶಯನಗಾ- ವಾಸಗಿರಿಯ ಸೇವಾ ಮಾಡುವ ಭೂಸುರ ಗಣದಭಿಲಾಷೆಗಳನು ಪೂರೈಸಿ ಪೊರೆವನೀತಾ ಪ್ರಖ್ಯಾತಾ 13 ಶ್ರೀಯುತ ಮಾರ್ಕಾಂಡೇಯರ ಚರಿತೆಯ ಗಾಯನ ಫಲವಿದನು ಪೇಳುವೆನು ಶ್ರೇಯಸ್ಸಾದನ ಕಾಯದಿ ಬಲದೀ- ಮಾನವ 14 ಸುರತರು ಕಾರ್ಪರ ಶಿರಿ ನರಸಿಂಹನೆ ಈತ ಎನ್ನುತ ನಿರುತ ಅನಂತನ ಗಿರಿಯ ಮಹಿಮೆಯನು ಸ್ಮರಿಸುವ ನರಧನ್ಯಾ ಸನ್ಮಾನ್ಯ 15
--------------
ಕಾರ್ಪರ ನರಹರಿದಾಸರು
ಮನವೇ ಕೊಬ್ಬ ಬ್ಯಾಡ ಉಬ್ಬ ಬ್ಯಾಡಾ ಪ ನೆನುವಿನೊಳಿಟ್ಟು ಮಾನುಭಾವರ ಚರಣ ಕಮಲವನು ಜನುಮ ಸಾರ್ಥಕವನು ಮಾಡು ಕಂಡ್ಯಾ ಅ.ಪ ವಿದ್ಯೆ ವಶವಾದರೆ ನೀ ತಿದ್ದಿ ಕಲಿಸು ಆರ್ತರಿಗೆ | ಬುದ್ಧಿವಂತರ ಕೂಡಾ ತರ್ಕಸ್ಯಾಡ ಬೇಡಾ ನೋಡಬ್ಯಾಡಾ | ಉಧೃತ ಶಕ್ತಿಯ ಬಲದಿಂದ ಸಂತ ಸೇವೆ ಮಾಡು | ಗುದ್ದಿ ಹೆಟ್ಟಿ ಪರರ ಪೀಡಿ ಕುಡಬ್ಯಾಡಾ ಮಾಡಬ್ಯಾಡಾ | ಮುದ್ದಿ ಘನವಾದರ ಸತ್ಪಾತ್ರಕ ನಿವೇದಿಸು | ಮದ್ದು ತಿಂದು ನುಡಿವವನಂತ ಪರರ ದೋಷ ಗುಣಾ | ಬದ್ಧವಚನವ ನುಚ್ಚರಿಸದಿರು 1 ರಾಜಮುದ್ರಿಯ ನೆವದಿ ಉದರ ತುಂಬಲಾಗಿ ನೀತಿ ಬಿಟ್ಟು | ಈ ಜನರನಾ ದಂಡಿಸುವದಲ್ಲಾ ಇದುಸಲ್ಲಾ | ಆ ಜನ ಹೊಟ್ಟೆ ಹಾಕಿ ಬರೆಗೈಯ್ಯ ಹೋಗುವಂತೆ | ನೀ ಜಯಿಸಿ ಬಂದದಲ್ಲಾ ಸಂದದಲ್ಲಾ | ತ್ಯಾಜದಿಂದ ದೊಡ್ಡವ ನೀನೆಂದು ಸೆಜ್ಜಿ ತೆನೆಯಂತೆ | ಸುಜನರೊಳಗ ಗರ್ವ ಹಿಡಿಯದಿರು ಪಡೆಯದಿರು | ವಾಜಿಯಲಿ ನವಣಿ ತೆನೆಯಂತ ಬಾಗಿ ನಡೆದರೆ| ಶ್ರಿ ಜನಾರ್ಧನ ರಕ್ಷೀಸುಚ ಕಂಡ್ಯಾ 2 ಜರಿದು ಕೈಯಲ್ಲಿಂದ ಸಬಕಾರ ನೀರೊಳಗ ಬಿದ್ದ | ತೆರದಿಂದ ತಿರುಗಿ ತಿರುಗಿ ಯಾತಿಗಳನು | ಭರದಿಂದ ಕಡಿಯಲಿ ಪುಣ್ಯ ಫಲ ವಶದಿಂದ| ನರದೇಹವನು ತಾಳಿ ಬಂದಿ ನೀನು ತಿಂದಿ ನೀನು | ತ್ವರಿತ ಸುತಪ್ರಿಯ ಗುರು ಮಹಿಪತಿ ಚರಣಕ | ಮೊರೆ ಹೊಕ್ಕು ಗತಿ ಪಡೆ ಭಾವದಿಂದ ಜೀವದಿಂದ | ಧರೆಯೊಳು ಗಾಳಿಯೊಳಗಿನ ದೀಪ ತೋರುವಂತೆ | ಸ್ಥಿರವಲ್ಲಾ ಆಗಲ್ಹೋ ಈಗಲಿದು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮನವೇ ಚಿಂತಿಸು ಹರಿಯ-ಮುರಾರಿಯ ಪ ಮಾಯಾ ಯುಗಳನು-ಮನವೇ ಅ.ಪ. ಸ್ಮರವಿರಿಂಚಿನಯ ಪಿತನ-ಗೌರೀವರ-ಪುರಹೂತರಿಗೆ ತಾತನೆ ರತಿದೇವಿ-ಸರಸತಿಯರ ಮಾವನ-ಶ್ರೀರಮಣನ ಸರಸಿಜಾಸನಿಗೆ ಕರುಣೀಸುವೇದವ ಗಿರಿಯ ನೆಗೆಹಿ ವಿಶ್ವಂಭರೆಯ ದಾಡೆಯೊಳೆತ್ತಿ ತರಳಗಭಯವನಿತ್ತು ಮೂರಡಿ ಧರೆಯ ಬೇಡುತ ದುರುಳ ರಾವಣಹರಣ ನೀಲಾಂ- ಬರನ ಯದುವರ ತುರಗವಾಹನ1 ನಿಗಮಾಂತ ಗೋಚರನ-ನಿತ್ಯಾನಂದ-ಸುಗುಣಗಣಾರ್ಣವನ ಸಜ್ಜರಿಗೆ-ಸುಗತಿಯಪಾಲಿಪನ ಸುರಪಾಲನ ನಿಗಮಚೋರನ ಕೊಂದು ನಗವ ಬೆನ್ನೊಳು ಪೊತ್ತು ಜಗವನುದ್ಧರಿಸಿ ನರಮೃಗದರೂಪವ ತಾಳಿ ಜಗವ ನಳೆದನ ಭೃಗುಜ ಶಾಖಾ ಮೃಗವ ವಧಿಸಿ ಹಲ ನೇಗಿಲನು ಪಿಡಿದುಗುರು ಕೊನೆಯಿಂ ನಗುವನೆ ನೆಗಹಿದ-ನಿಗಮನುತ ಕಲಿಯುಗದ ವೈರಿಯ 2 ಪೂಜೆಯಕೊಂಬನ ಕುಂಭಜ ಶಾಪ-ಕಲುಷವ ಕಳೆದನ-ವ್ಯಾಘ್ರಾಚಲ ದಲಿನಿಂತು ಭಕ್ತರ ಸಲಹುವ ಕಾರುಣ್ಯನಿಲಯ ಸಜ್ಜನ ಮನೋನಿಲಯ ಶ್ರೀನಿವಾಸನ ಜಲಜಬಾಂಧವ ಕುಲಪವಿತ್ರನ ಜಲಜನೇತ್ರನ ಜಲಜ ಗಾತ್ರನ ವಿಲಸಿತಾಂಬುಜ ಮಾಲಭಕ್ತರಿಗೊಲಿವ ಶ್ರೀವರದಾರ್ಯ ವಿಠಲನ 3
--------------
ಸರಗೂರು ವೆಂಕಟವರದಾರ್ಯರು
ಮನವೇ ನೀ ಬರಿದೆಜನ್ಮ ವ್ಯರ್ಥಗಳೆವರೆ ಬಂಗಾರದಥಾ ಪ ಮನವೇ ನೀ ಬರಿದೇ ಜನ್ಮ ವ್ಯರ್ಥಗಳೆವರೆ ಬಂಗಾರದಂಥಾ | ಮರೆವ ದಿನಗಳ ಜರಿವರೇ ನರದೇಹವಿದು ಅ.ಪ ದೊರೆಯದಿನ್ನು ಮತ್ತ ತರುವರ ಏನಾದರೇನೀ | ಹರಿಯ ಸ್ಮರಣೆಯ ಬಿಡುವರೇ | ಅರಿವ ಪಂಥ ವಿಡಿದು ಜನ್ಮ ಮರಣ ಬಲಿಯಾ ತಪ್ಪಿಸದೇ | ತಿಗಳಿ ಹುಳುವಿನಂತೆ ಸಿಕ್ಕ ತನ್ನ ತಾ ಮರೆವರೇ 1 ಕೇಳೆಲೋ ನೀ ಪೊಡವಿಯೊಳಗಿದ್ದ ಸಾಯಸಾ | ಉದಯದಲೆದ್ದು ಬಿಡುವದೆ ಮಲಮೂತ್ರ ಕೆಲಸಾ | ಮಧ್ಯಾನ್ಹದಲಿ ವಡಲ ತುಂಬುವ ಕೆಲಸಾ | ನಿಶಿಕಾಲದಲ್ಲಿ ವಡನೆ ಮಲಗುವ ಕೆಲಸಾ | ಪಡೆದ ತಾಯಿಯವ್ವನೆಂಬ ದೃಢವನವಾ ಕಡಿಯಲು | ಕೊಡಲಿಯಂತೆ ಹುಟ್ಟಿ ಬಂದೆ ಮಡದಿ ಮಕ್ಕಳುದ್ದೇಶಾ 2 ಮನವೇ ನೀ ಹಿಂದಿನವ ಗುಣ ಜರಿದು ಸದ್ಭಾವ ಭಕು | ತಿಂದ ನಡುವಳಿ ಬಿರಿದು | ಸದ್ಗುರುವೀನ | ದ್ವಂದ್ವ ಪಾದಗಳ ವಿಡಿದು | ಅವರ ದಯ | ದಿಂದ ಗತಿ ಮುಕ್ತಿ ಪಡೆದು | ಇಂದು ಧನ್ಯನಾಗೆಲೋ ಮುಕುಂದ ನಾಮ ನೆನೆದು ನೀ | ತಂದೆ ಮಹಿಪತಿ ನಿಜನಂದನುಸುರಿದನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮನವೇ ನೀನೆಚ್ಚರಿಕೆ ಬಿಡದಿರು ಅನುದಿನವು ಹರಿಧ್ಯಾನದೊಳಗಿರು ಪ ವನಿತೆ ಧನಧಾರಿಣಿಯ ನೆಚ್ಚಿ ತನುವೆ ತಾನೆಂಬುದನುಚಿತವು ಅ.ಪ ಬರಿಯಕೈಯಲಿ ಭೂಮಿಗಳಿಸಿದೆ ದುರಿತಭಾರವ ಧರಿಸಿರ್ಪೆ ನರರೆ ಹರಿಸುವರಾರೋ ಕಾಣಿರ ಅರಿತುಕೊಂಡಿರೆ ತಿಳಿಸಿರೈ 1 ಕಾಯವಸ್ಥಿರ ಹೇಮಸಂಸ್ಕøತಿ ಮಾಯಾಪಾಶದ ಬಲೆಗೆ ಸಿಲ್ಕಿ ನಾಯಿನರಿಯಂದದಲಿ ತೊಳಲಿ ಸಾಯವರ ಕಂಡಳುವದೇಕೋ 2 ಜಾತಿಧನವಧಿಕಾರ ಖ್ಯಾತಿಗೆ ಆತುರದೊಳಭಿಮಾನ ಪಡುವೇ ಪಾತಕರೆ ಹಿಂಜರಿಯದಂತೇ ಪ್ರೀತಿಯಿಂ ಪರಪೀಡೆಗೈವೇ 3 ಪೊಡವಿಯೊಳ್ ಪೆಣ್ ಬಾಲ ವೃದ್ಧರು ಬಡವರಾರ್ತರು ಕುಂಟಕುರುಡರು ಎಡೆಯ ಜೀವಿಗಳನ್ನು ಕರುಣದಿ ಕಾಣೆಲೋ ಕಡುಜಾಣನೇ 4 ಸತ್ತಮೇಲೇನೆಂದು ಯೋಚಿಸು ಮುತ್ತಿ ಕತ್ತಿಯೊಳಿರಿವರೈ [ಮ]ತ್ತಕ್ಷಣದ ಫಲಕಾಶೆಪಡದಿರು ಸತ್ಯವಂ ಪಿಡಿ ನಿತ್ಯವೂ 5 ಯಮುನೆ ಹೊಕ್ಕರು ಯಮನು ಬಿಡನೂ ಅಮಮ ನರಕದೊಳಿಳಿಪರೈ ರಮಾರಮಣನ ಒಲುಮೆಗಾಗಿ ಶ್ರಮಿಸಿ ಪರರುಪಕಾರಿಯಾಗೋ6 ಪತಿತಪಾವನ ಜಾಜಿಕೇಶವ ನತಿಶಯದಿ ತಾ ಜಗವ ಪಾಲಿಪ ಚತುರ್ವೇದ ಶ್ರುತಿ ಪ್ರಮಾಣವ ಮತಿಯುತರು ಮೀರುವರೆ ಮರುಳೇ 7
--------------
ಶಾಮಶರ್ಮರು
ಮನೆಯ ನಿರ್ಮಲಗೈದು ಮೋದಬಡಿಸುವುದು ವನಜನಾಭನ ಭಕ್ತಿಯಂಬವಳ ಬಿರಿದು ಪ. ಬಾಯಿಮೊದಲಾದೈದು ಬಾಗಿಲುಗಳಲ್ಲಿ ವಾಯುವಂದ್ಯನ ಚರಿತ ವರ್ಣನಾದಿಗಳಾ ಛಾಯಗೊಂಬುವ ತೆರದಿ ಚಿತ್ರಕೃತ್ಯವನೂ ನಿತ್ಯ ನಲಿವುದನು 1 ಬುದ್ಧಿ ದೀಪವನು ಬಹು ಶುದ್ಧಕನು ತಾ ತದ್ದಾರಿ ಮನವ ಮೇಲುದ್ಧರಿಸಿಕೊಳುತಾ ಸಿದ್ಧಗಮ್ಯನ ಪದಕೆ ಸರಿಯಾಗಿಸುತಾ ಬದ್ಧ ಬೊಗಳುತಾ ಜನರ ಬಾಯಿ ಮುಚ್ಚಿಸುತಾ 2 ದೋಷ ದುಷ್ಕøತ ಕೆಸರ ಲೇಶವಿಡಗೊಡಳು ಆಶೆಯೆಂಬುವ ಬಲೆಯ ಕೊೈಸಿ ಬಿಸುಟುವಳು ಈಶ ಮಾನಿತ್ವಕವಕಾಶವೇನಿಡಳು ಕೇಶವನ ಕರತಂದು ಕಾವಲಿರಿಸುವಳು 3 ಇವಳಾಶ್ರಯವ ಪೊಂದಲ್ಯಾರಭಯವಿಲ್ಲ ನವರೂಪಳನ್ನುಸರಿಸಿ ನಲಿವ ಸಿರಿನಲ್ಲ ತವಕದಿಂದಲಿ ತಾನೆ ಓಡಿ ಬಂದೆಲ್ಲಾ ಯುವತಿಯರ ಕೂಡಿ ತಾ ಪಾಡುವರೆ ಬಲ್ಲಾ 4 ಕಂಜನಾಭನ ಕರುಣ ಪಂಜರದೊಳಿರಿಸಿ ಸಂಜೀವನೌಷಧವ ಸುಲಭದೋಳ್ ಕುಡಿಸಿ ಅಂಜಿಕೆಯ ಬಿಡಿಸಿ ರಿಪು ಪುಂಜವನ ಕಡಿಸಿ ಮಂಜುಳಾತ್ಮಕ ಮಾಧವನ ಮುಂದೆ ಕರಿಸಿ 5 ದಾನ ವ್ರತಾದಿಗಳನೇನ ಮಾಡಿದರು ಶ್ರೀನಿವಾಸನ ಕರುಣ ಸಾಧ್ಯವಾಗಿರದು ನೀನೆ ರಕ್ಷಕನೆಂಬ ಧ್ಯಾನದಲಿ ಮೆರದು ಜ್ಞಾನ ಭಕ್ತಿಗಳಿಂದ ನಲಿವುದೇ ಬಿರುದು 6 ಯುಕ್ತಿಯಿಂದಲಿ ನೋಡಲೆಲ್ಲ ಶಾಸ್ತ್ರದಲಿ ಭಕ್ತಿಯೋಗವ ಪೇಳ್ವವೇಕಮತ್ಯದಲಿ ಭುಕ್ತಿ ಮುಕ್ತಿಯ ಶೇಷ ಭೂಧರೇಶನಲಾ ಸಕ್ತಿಯಿರೆ ಸಕಲಾರ್ಥವೀವನುತ್ಸವದಿ 7
--------------
ತುಪಾಕಿ ವೆಂಕಟರಮಣಾಚಾರ್ಯ
ಮನೋಮಲಹರವಾಗುದು ಗುರು ಬೋಧದಿಂದ ತನ್ನ ತಾಂ ತಿಳಿಯಲು ಶುದ್ಧ ಬುಧ ಆಹಿರಿ ಧ್ರುವ ಅಂತರಂಗವು ನೋಡಿ ಜರೆವದು ಬಹಿರವಿ ಬೆರೆದು ನೋಡಿಲು ಘನವಸಂತವು ಗುರುಹಸ್ತ ಸ್ಪರ್ಶದಿಂದಲಿ ಕಲ್ಯಾಣ ಅರಿಯಲಾತ್ಮಾನುಭವ ಮುಕ್ತಿಗೆ ದಾರಿಯಯ್ಯ 1 ಸಾಧನವ ಮಾಡಿ ಸದ್ಗತಿಯಕಾಂಬೋದವು ಧನ್ಯ ಧನ್ಯವಾಹುದು ಙÁ್ಞನುಪದೇಶಲಿ ತಿಳಿಯಲಗಾಧ ಬಳಿಲಿ ಶ್ರೀಗುರುವಿನ ಸಕಲಾಭರಣ ಇದೇ ಸದ್ಗುರು ಕೃಪೆಯಯ್ಯ2 ಧ್ಯಾಯಿಸುವ ಆತ್ಮಾರಾಮ ಕ್ರಿಯವರಿದು ಪಯಸ್ವನಿ ಜಿಹ್ವದಲಿ ಗುರುಸ್ಮರಣೆಯು ನಾಟಿ ಗುರುಪಾದ ಹೃದಯದಲಿ ಸಾಳಂಗವನು ಮಾಡಿ ಪಾವನ್ನವಾದ ಮಹಿಪತಿ ಗುರುವಿನ ಪಾಡಿ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು