ಒಟ್ಟು 8857 ಕಡೆಗಳಲ್ಲಿ , 132 ದಾಸರು , 5049 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಮವೈರಿಜಾಯೆ ಪಾಹಿ ಕೋಮಲಾಂಗಿಯೇ ಶಿವೆ ಪ ಹೇಮಕನಕ ದಾಮಭೂಷೆ ಕಾಮಿನೀಪ್ರಿಯೆ ಶಿವೆ ಅ.ಪ. ಅಷ್ಟಬಾಹು ಶೋಭಿತಾಂಗಿ ದುಷ್ಟನಾಶಿನಿ ಶಿವೆ ಅಷ್ಟಮೂರ್ತಿ ವಾಮರೂಪೆ ಇಷ್ಟದಾಯಕಿ ಶಿವೆ1 ಬಾಲಚಂದ್ರ ಭಾಸಮಾನ ಫಾಲಶೋಭಿತೆ ಶಿವೆ ನೀಲವೇಣಿ ವಿಮಲವಾಣಿ ಕಾಲರೂಪಿಣಿ ಶಿವೆ 2 ಚಕ್ರರಾಜ ಮಧ್ಯವರ್ತಿ ಶಕ್ತಿಕಾರಿಣಿ ಶಿವೆ ವಕ್ರಕೇಶಿ ಮುಖ್ಯದನುಜ ಶಕ್ತಿಹಾರಿಣಿ ಶಿವೆ3 ಕರುಣಿಸಿಂದು ವರವ ದೇವಿ ಚರಣಕೊಂದಿಪೆ ಶಿವೆ ಸುರನರಾದಿ ಗೀಯಮಾನ ಪಾದಪಲ್ಲವೆ ಶಿವೆ 4 ನಾಗವೇಣಿ ಧೇನುನಗರ ಸರ್ವಮಂಗಳ ಶಿವೆ ಭೋಗ ಭಾಗ್ಯ ಸುಖಗಳಿತ್ತು ಪೊರೆಯೆ ಪಾರ್ವತಿ ಶಿವೆ 5
--------------
ಬೇಟೆರಾಯ ದೀಕ್ಷಿತರು
ಕಾಮಾನ ಜನನಿಯೆ ಸೋಮಾನ ಸೋದರಿ ಸಾಮಾಜ ವರದನ ಪ್ರೇಮವ ಕೊಡಿಸಮ್ಮ ಪ ನೇಮಾದಿಂದಲಿ ಹರಿ ನಾಮಾವ ನುಡಿಸುತ ತಾಮಾಸ ಓಡುವಂತೆ ನೀಮಾಡಬೇಕಮ್ಮ ಅ.ಪ ನಿತ್ಯ ತೃಪ್ತಳೆನಿನ್ನ ನಿತ್ಯದಿ ಬೇಡಿಕೊಂಬೆ ಭೃತ್ಯರೊಳಗೆ ಎನ್ನ ಎತ್ತಿ ಸೇರಿಸೆ ತಾಯೆ || ಮತ್ತನಾಗದೆ ಭವದಿ ಉತ್ತುಮನೆನಿಸುತ ಆತ್ಮದಿ ಹರಿ ತೋರಿ ಕೃತಕೃತ್ಯನೆನಿಸಮ್ಮ 1 ದೇಶಕಾಲದಿನೀನು ಶ್ರೀಶಗೆ ಸಮಳಮ್ಮ ನಾಶಮಾಡುತ ದೋಷ ದಾಸಾನು ಎನಿಸಮ್ಮ || ಶ್ವಾಸಾಶೇಷರನೆಲ್ಲ ಲೇಸಾಗಿ ಆಳುವಳೆ ವಾಸುದೇವನಲ್ಲಿ ಆಸೇಯ ನೀಡಮ್ಮ 2 ಶೃತಿಯಲ್ಲಿ ನೀನಿದ್ದು ಸ್ತುತಿಸೀ ಶ್ರೀಹರಿಯನ್ನ ಮತ್ತೆಸೃಜಿಸುವಂತೆ ಎತ್ತಿಗಾನವ ಮಾಳ್ವೆ || ಎತ್ತ ನೋಡಲು ಬಲು ಕತ್ತಲೆಕಣಿ ತಾಯೆ ಸತ್ಯವ ಬಿಡದಂತೆ ಹತ್ತೀಸೆ ಹರಿದಾರಿ3 ಹರಿಯಂತೆ ಅವತಾರ ನಿರುತನೀ ಮಾಡುತ ಪರಿ ರೂಪದಿಂದ ಪರಿಚರಿಯ ನೀಮಾಳ್ವೆ || ಸರ್ವೇಶ ಹರಿಯಿಂದ ಸರ್ವಕಾಲದಿ ಕೂಡಿ ಸರ್ವಕಾರ್ಯವ ಮಾಳ್ವೆ ಸರಿಯಾರೆ ನಿನಗಮ್ಮಾ 4 ಅಕ್ಷರ ರೂಪಳೆ ಈಕ್ಷಿಸುಕರುಣದಿಂದ ತ್ರ್ಯಕ್ಷೇಶ ವಿಧಿಮಾತೆ ಅಕ್ಷರನರ್ಧಾಂಗಿ || ಕುಕ್ಷೀಲಿ ಬ್ರಹ್ಮಾಂಡ ಲಕ್ಷ್ಯವಿಲ್ಲದೆ ಪಡೆದಿ ಅಕ್ಷಯ ಮಾಡಿ ಜ್ಞಾನ ಮೋಕ್ಷಾವ ಕೊಡಿಸಮ್ಮಾ5 ವಿಕಾರ ಶೂನ್ಯಳೆ ಪ್ರಕೃತಿಗೆ ಮಾನಿಯೆ ನೀಕಾರ್ಯ ಕಾರಣಕ್ಕೆ ಮುಖ್ಯ ಹೇತುವೆ ತಾಯೆ || ಪ್ರಕೃತಿ ಬಂಧವ ಬಿಡಿಸಿ ಸಾಕಾರ ಮೂರುತಿ ಲೋಕನಾಯಕ ಹರಿಯ ಏಕಾಂತದಲಿ ತೋರೆ6 ತ್ರಿಗುಣ ಕಾರ್ಯಗಳೆಲ್ಲ ಸುಗುಣಿ ನೀ ಮಾಡುತ ನಿತ್ಯ ಪೊಗಳಿ ಹಿಗ್ಗುವೆ ಮಾತೆ || ಜಗವೆಲ್ಲ ಕುಣಿಸುತ ನಗುತಲೀಲೆಯಿಂದ ನಿಗಮಾದಿಗಳ ಮೀರಿ ಬಗೆ ಬಗೆ ಲೀಲೆ ಕಾಂಬೆ 7 ನಿತ್ಯಾ ಮುಕ್ತಳು ನೀನು ಪ್ರೀತಿಲಿ ನಮಿಪೆನೆ ಮಾತುಲಾಲಿಸಿ ಎನ್ನ ನಿತ್ಯದಿ ಸಲಹೆಮ್ಮ || ಹೆತ್ತ ತಾಯಿಯು ನೀನು ಎತ್ತಿ ಪೊರೆಯದಿರೆ ಎತ್ತ ಪೋಗಲಿ ನಾನು ಉತ್ತುಮರಮೆ ಹೇಳೆ 8 ಸಾಗರನ ಮಗಳೆ ಆಗಮರೂಪಳೆ ಹೋಗೀಸುಲಿಂಗವ ಸಾಗಿಸಿಗುಣಕಾರ್ಯ || ಭಾಗ್ಯ ಸ್ವರೂಪಳೆ ಬಾಗಿ ನಮಿಸುವೆ ಆಗು ಮಾಡಿಸು ಹರಿ ಗೀತೆಗಳೆನ್ನಿಂದ 9 ಮರುತ ದೇವನ ಪಿತನ ಉರದಲಿ ವಾಸಿಪಳೆ ಹರಿಗುರು ಚರಣದಿ ನಿರುತ ಭಕ್ತಿಯ ಕೊಟ್ಟು || ವಾರಿಜನಾಭನಲ್ಲಿ ಧಾರೆ ಧಾರೆಯ ಭಕ್ತಿ ಸಾರಸ ದಳನಯನೇ 10 ಮಾತು ಮಾತಿಗೆ ನಮ್ಮ ಖ್ಯಾತಾಜಯತೀರ್ಥ ನವನೀತ ಧರಿಸೀಹ || ಶ್ರೀ ತಾಂಡವ ಕೃಷ್ಣ ವಿಠಲರಾಯನ ಸ್ಮರಣೆ ಆತ್ಮಾದೊಳಗೆ ನಿಂತು ಖ್ಯಾತೀಲಿನಡಿಸಮ್ಮಾ 11
--------------
ಕೃಷ್ಣವಿಠಲದಾಸರು
ಕಾಮಿತ ಪ್ರದಾಯಕಧರ ಸೋಮ ಪ ಪೂಜಿಸಿದ ನಿನ್ನ ಗಡ ರಘುರಾಮ ನೀ ಜಪ ಮಾಡುವೆ ಅವನ ದಿವ್ಯನಾಮ1 ಸಾಧು ಶಿರೋಮಣಿ ಸರ್ವೇಶ ಮೋದದಾಯಕ ಕೈಲಾಸವಾಸ 2 ಕೈರಾತವೇಷ ದಿವ್ಯಪ್ರಭಾವ 3 ಚರ್ಮಧಾರಿಯೆ ಷಟ್ಕರ್ಮನಿರತರು ನಿರ್ಮಲರರಿವರು ನಿನ್ನ ಚಿದ್ವಿಲಾಸ 4 ಸಂಕರ್ಷಣಮೂರ್ತಿ ನೀ ಸಚ್ಚರಿತ್ರ ಪಂಕಜಾಕ್ಷ ಗುರುರಾಮ ವಿಠಲ ಮಿತ್ರ 5
--------------
ಗುರುರಾಮವಿಠಲ
ಕಾಮಿನೀಮಣಿ ರಾಮಭಾಮಿನಿ ಪ ಸೋಮಬಿಂಬ ವದನೆಯೆ ಸೀತೆಯೆ ಅ.ಪ. ಪಾವಮಾನಿ ಮನೋವಾರಿಜಾಶ್ರಿತೆ ದೇವತಾವಳೀ ದೇವಸನ್ನುತೆ ದೇವಬೃಂದ ವಂದಿತೆ ಸನ್ನುತೆ 1 ಭಕ್ತವತ್ಸಲೆಯೆ ಶಕ್ತಿರೂಪೆಯೆ ಮಾರ್ಗವಿಶದೆಯೆ ಮಾತೆಯೆ 2 ವರಧೇನುಪುರಿ ಪರಮೇಶ್ವರಿ ವರದಾಯಿನಿ ವರಲೋಕಪಾಲೆ ಕರುಣಾಕರೆ ವರರಾಮ ಜಾಯೆ ಪರಿಪಾಲಿತಾಶ್ರಿತೆ ಸುರನುತೆ 3
--------------
ಬೇಟೆರಾಯ ದೀಕ್ಷಿತರು
ಕಾಯ ಪ ದಾನವಾರಣ್ಯಪಾವಕ ವೀತಶೋಕ ಅ.ಪ. ಆನತೇಷ್ಟ ಪ್ರದಾಯಕ ನಮಿಸುವೆನು ಸದಾ ಮೈನಾಕಿಧರ ಬಿಂಬ ಸುರಮುನಿಕದಂಬ ಧ್ಯಾನಗಮ್ಯನೆ ಭಕ್ತರಾಪತ್ತು ಕಳೆ ಶಕ್ತಾ ನೀನೆ ಗತಿಯೆಂಬೆ ಮುನಿಮನ ವನಜ ತುಂಬೆ 1 ಶ್ರವಣ ಮಂಗಳನಾಮಧೇಯ ನಿರ್ಜಿತಕಾಮ ಸವನ ದ್ವಿತಿಯರೂಪ ವಿಗತಕೋಪ ಸ್ವವಶ ಸ್ವಾತಂತ್ರ್ಯ ವಿಖನಸ ಪೂಜ್ಯವಜ್ರನಖ ಪವಿ ದಂಷ್ಟ್ರದರ್ಶ ಭಾರ್ಗವಿರಮಣಗಶನಾ 2 ಆದಿದೇವಾನಂತ ಮಹಿಮನೇ ನಿಶ್ಚಿಂತಾ ಕಾದುಕೋ ನಿನ್ನವರ ವಿಬುಧ ಪ್ರವರಾ ಮೋದಮಯ ಶ್ರೀ ಜಗನ್ನಾಥವಿಠಲರೇಯ ವೈದಿಕವ ನುಡಿಸು ಲೌಕಿಕ ಮಾರ್ಗವ ಬಿಡಿಸು 3
--------------
ಜಗನ್ನಾಥದಾಸರು
ಕಾಯ || ಕಾಯ ಪ ಅಣುರೂಪದಿಂದಿದ್ದು ಕ್ಷಣದೊಳಗದ್ಭುತ ರೂಪವ ಧರಿಸಿ ಬಲಿಯ ಬಂಧಿಸಿದೆ | ರಣ ಶಬ್ದವಿಲ್ಲದೆ ಸರ್ವ ಸಾಮ್ರಾಜ್ಯವ ನಗ್ರಜಗಿತ್ತಿಹ ಕಾರ್ಯವಾಶ್ಚರ್ಯ 1 ವಾದಿರಾಜರಿಗೆ ನೀ ಒಲಿದು ಶ್ರೀ ಸೋದೆಯೊಳ್ ನಿಂತಿದ್ದ ತೆರವತಿ ಚೋದ್ಯವಾಗಿಹುದು | ಕದನವಾಗಿಲ್ಲ ಭೂಭುಜರಲ್ಲಿ ಒಲಿದುದು ಹರಿಭಕ್ತರ್ಗತಿ ತೋರ್ಪ ಕಾರ್ಯ 2 ರಾಜ್ಯದೊಳಗತಿ ಮಾನ್ಯ ವಾದಿರಾಜರ ಭಾಗ್ಯ ದೇವಾಧಿದೇವ ಶ್ರೀ ತ್ರಿವಿಕ್ರಮರಾಯ 3
--------------
ವಿಶ್ವೇಂದ್ರತೀರ್ಥ
ಕಾಯ ಬಲು ಹೇಯವೊ | ಸಾಕು ಸಾಕು ಸಂಸಾರ ನೆಚ್ಚದಿರು ಎಚ್ಚರಿಕೆ ಪ ಊಧ್ರ್ವಾಧೋ ಭಾಗದಿಂದ ಕೂಡಿದಾ ರಕ್ತಶುಕ್ಲ | ಅರ್ಧರ್ಧ ಪ್ರವೇಸಿಯಾಗಿ | ವರ್ಧನಾಗಿ ಮಾಂಸ ಪಿಂಡಿಕೆಯಲಿ ಬೆಳೆದು | ಅರ್ಧವದೊಳಗೆ ಬಳುಲುವುದೇನೊ ಮಹಾ ಕಠೀಣಾ 1 ಸನ್ನಿರೋಧವಾದ ಪ್ರಾದೇಶದಲಿ ನೀನು | ಬನ್ನ ಬಡುವದು ಜನಕೆ ಅರಿಯನಲ್ಲಾ | ಮುನ್ನೆ ಇಂದ್ರನಿಗಾಗಿ ವರವಿತ್ತ ಸಂಪತ್ತು | ಇನ್ನು ನಿನ್ನ ಸುತ್ತ ಬಂದದೆ ತಿಳಿದುಕೋ 2 ವಾತ ಶೈತ್ಯಜ್ವರ ಕೆಮ್ಮು | ಸಪುತ ಧಾತುಗಳಿಂದ ಬರುವ ರೋಗ | ಕ್ಲೇಶ ಮೋಹಗಳೊಡನೆ | ಮಾಯಾ 3 ಕಾಮ ಮದ ಗರ್ವದಲಿ ಪುಂಜನಾಗಿ ದುರಳ ನಿ | ಜ ಮಗಳ ಕೂಡ ಬೆರದಾಡಿ ಬೆರೆದು | ರೋಮರೋಮ ವಿಷಯ ಪೂರ್ತಿಯಾಗಿ ಚರಿಸಿ | ಪಾಮರನಾಗಿ ಬಳಲದಿರು ಬಹು ಜೋಕೆ 4 ಸತಿ ಸುತರು ಮಿಕ್ಕಾದ ಬಂಧುಗಳು ನೆರೆನೆರೆದು | ಪ್ರತಿದಿವಸದಲಿ ಅಟ್ಟುವುದು ನೋಡು| ಮತಿ ಚಂಚಲವಾಗಿ ಸತ್ಕರ್ಮ ವೃತ್ತಿಗೆ | ಪ್ರತಿಕೂಲವಾಗುವದು ಪ್ರೀತಿಯಾಗದು ಮುಂದೆ 5 ಎಂತು ನೋಡಲು ವಿಷಯ ಅನುಭವಿಸಿದರು ಅದರ | ಅಂತು ಕಂಡವರಾರು ವಲ್ಲೆನೆಂದು | ಭ್ರಾಂತಿಯಿಂದಲಿ ತಿರುಗಿ ಬಯಲಾಗೋದಲ್ಲದೆ | ಚಿಂತೆ ಇಷ್ಟಷ್ಟು ಏನೆಂದು ಪೇಳಲಿ 6 ಯಲೋ ಮನವೆ ಸಾರಿ ಪೇಳಿದೆನು ಚನ್ನಾಗಿ ನೀ | ನೆಲೆ ಮಾಡಿಕೋ ಜ್ಞಾನ ಭಕುತಿ ವಿತ್ತಾ | ಸುಲಭ ದೇವರ ದೇವ ವಿಜಯವಿಠ್ಠಲರೇಯ | ಕೆಲಕಾಲ ನೆನೆದು ಸುಖಿಯಾಗು ಸುಜನರಾ ಕೇಳು 7
--------------
ವಿಜಯದಾಸ
ಕಾಯ ಬೇಕಿವಳಭಯ ಕೃತು ಭಯನಾಶ | ದಯದೋರೊ ಶ್ರೀಶ ಪ ವಾದೀಭ ಮೃಗರಾಜ | ವಾದಿರಾಜರ ದಯದಿಸಾಧನಕೆ ಹೆದ್ದಾರಿ | ನೀ ದಯದಿ ತೋರೀಮೋದ ತೀರ್ಥರ ಸಮಯ | ಧ್ಹಾದಿಯಲಿ ನಡೆವಂತೆಹೇ ದಯಾಂಬುಧಿ ಚೆನ್ನ | ಆದರಿಸೋ ಘನ್ನ 1 ಚಂದ್ರ ಸಮ ಸಂಕಾಶ | ಸಂಧಿಸಲು ಸ್ವಪ್ನದಲಿಇಂದು ಭಾಗ ನಿವಾಸ | ಸಂದರ್ಶನಿತ್ತೂ ಕಂದಿದ್ದ ಕನ್ಯೆಗೇ | ನಂದ ದಾಯಕನಾಗಿಸುಂದರನೆ ನರರೂಪಿ | ಸಂಧಿಸಿದೆ ಭಾಗ್ಯ 2 ಚಂದ್ರ ವದನೆಯು ಲಕುಮಿ | ಮಂದಿರಕೆ ಬರುತಲ್ಲೆನಿಂದಿರಲು ಸೌಭಾಗ್ಯ | ಸಂಧಿಸದೆ ಇಹುದೇಇಂದಿರಾರಾಧವಪದ | ಮಂದಸ್ಮಿತಾನನನೆಮಂದಿಯೊಳಗೀ ಶಿಶುವ | ಛಂದಾಗಿ ಸಲಹೋ 3 ಹರಿಗುರು ಸದ್ಭಕ್ತಿ | ಪರತತ್ವ ಸುಜ್ಞಾನ ಕರುಣಿಸುತ್ತ ಸಂತೈಸು | ಸುರ ವರೇಣ್ಯಾ |ಮರುತಾಂತರಾತ್ಮ ನಿ | ನ್ಹೊರತು ಅನ್ಯರ ಕಾಣೆಪರಿ ಹರಿಸೊ ಪ್ರಾಚೀನ | ಕರ್ಮಾಂಧ ಕೂಪಾ 4 ಭಾವಜ್ಞ ನೀನಾಗಿ | ಭಾವದೊಳು ಮೈದೋರೊಗೋವಿದಾಂ ಪತಿಯೆ ಗುರು | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಕಾಯ ಪಾದ ಪದುಮ ದಾಸ್ಯವನಿತ್ತು ಪ ಕಂಸಾರಿ ತವ ಪಾದಪಾಲಿಸುವನೆ ಶಿರದೊಳಗಸಂಶಯದಿ ಧರಿಸೀ |ವಿಂಶತಿಯ ಮತ್ತೊಂದು ಭಾಷ್ಯ ದೂಷಕ ಮರು-ತ್ತಂಶ ಸಂಭೂತ ಶ್ರೀ ಮಧ್ವ ಮತದವನಾ 1 ಆವ ಭವರೋಗ ಹ | ಭಾವ ಕ್ರಿಯ ದ್ರವ್ಯಾಖ್ಯಅದ್ವೈತ ತ್ರಯಗಳನು ಸಂಧಾನವಿತ್ತೂ |ದೇವ ದತ್ತದಿ ತೃಪ್ತಿ ಭಾವವನೆ ನೀನಿತ್ತುಭಾವದಲಿ ತವರೂಪ ಓವಿ ತೋರುವುದೂ 2 ಆಗಮಸುವೇದ್ಯ ಭವರೋಗ ವೈದ್ಯನೆ ದೇವನಾಗಾರಿ ವಾಹನನೆ | ಯೋಗಿಧ್ಯೇಯಾಆಗು ಹೋಗುಗಳೆರಡು | ನೀನಿತ್ತುದೆಂಬಂಥಜಾಗ್ರತೆಯ ನೀನಿತ್ತು ಕಾಪಾಡು ಹರಿಯೇ 3 ಕುಡುತೆ ಪಾಲನು ಭಕ್ತ ಕೊಡಲದನು ಕುಡಿಯುತ್ತಕಡಲಂತೆ ಹಾಯಿಸಿದೆ ಬಡವರಾಧಾರೀ |ಧೃಡಭಕ್ತಿ ಸುಜ್ಞಾನ ವೈರಾಗ್ಯ ಭಾಗ್ಯಗಳಕಡು ಕರಣಿ ನೀನಿತ್ತು ಕಡೆಹಾಯ್ಸು ಭವವಾ 4 ಸರ್ವಜ್ಞ ಸರ್ವೇಶ ಸರ್ವಾಂತರಾತ್ಮಕನೆದರ್ವಿಜೀವನ ಕಾಯೊ ದುರ್ವಿಭಾವ್ಯಾ |ಗುರ್ವಂತರಾತ್ಮ ಮತ್ಪ್ರಾರ್ಥನೆಯ ಸಲಿಸಯ್ಯಶರ್ವವಂದ್ಯನೆ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಕಾಯಬೇಕೆಲೋ ರಂಗಾ ಎನ್ನಾ | ನೀ ಕಾಯಬೇಕೆಲೋ ರಂಗಾ | ತೋಯಜಾಕ್ಷ ದಯಾನಿಧಿ ತರಣೋ | ಪಾಯದೋರೋ ಶುಭಾಂಗಾ ಪ ದುರಿತ ಸಮೂಹವ ಬಂದು | ಶಣಸುತ | ಹರಿದಂಜಿಸುತಿವೆಯಿಂದು | ನರಹರಿ ನಿನ್ನ ನಾಮದ ಘನಗರ್ಜನೆಯ |ಕೊಡು | ಮರಳು ಮಾನವನಿವನೆಂದು 1 ಕುಂದನಾರಿಸಿಯೆಲ್ಲಾ ನೋಡಲು | ಒಂದೆರಡೆನಲಿಕ್ಕಿಲ್ಲಾ | ಮಂದಮತಿ ಅವಗುಣ ರಾಶಿ ಪತಿತರ | ವೃಂದದೊಳೆನ್ನಧಿಕಲಾ2 ಕೊಂಬು ನೀಚನವಾದರೆ ಬಿರದಾ | ಡಂಬರ ನೀಚನಲ್ಲಾ | ಇಂಬುದೋರೆಲೆ ನಿನ್ನ ದಾಸರ ದಾಸ | ಎಂಬದೆನ್ನಧಿಕಾರವಿಲ್ಲಾ 3 ಬಿನ್ನಹವೆನ್ನ ಮುರಾರಿ | ಪಾಲಿಸಿ | ನಿನ್ನ ಚರಣವ ದೋರಿ | ಧನ್ಯಗೈಸೆಲೋ ಗುರುವರ ಮಹಿಪತಿ ಚಿನ್ನನೊಡಿಯ ಸಹಕಾರಿ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯಯ್ಯ ರಘುನಾಥ ಧೀನಜನೋದ್ದಾರಿ ಪ ಕೇವಲ ಪತಿತ ಪಾಮರ ನಾನು ಕೇವಲ ಪಾವನ ಮೂರುತಿ ನೀನು ಕೇವಲ ಘನ ಅಪರಾಧಿಯು ನಾನು ದೇವನೀ ಕರುಣಾ ಸಾಗರ 1 ಭಾವ ಭಕ್ತಿಯ ಕೀಲವ ನರಿಯೇ ವಿವೇಕ ಮತಿ ನೀ ನೀಡುವ ಧೊರೆಯೇ ಆವಾಗ ವಿಷಯಾ ಸಕ್ತನು ಹರಿಯೇ ಕಾದ ದೈವನು ನೀನೈ 2 ನತ ನಾದೇ ತರಳನ ಕುಂದಾಲಿಸದಿರು ತಂದೇ ಗುರು ಮಹಿಪತಿ ಪ್ರಭು ನಮೋಯಂದೇ ಶರಣಾಗತ ಸಹಕಾರೀ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯಯ್ಯ ರಘುರಾಮ ದೀನಜನೋದ್ದಾರಿ ರಘುರಾಮ ಧ್ರುವ ಕೈವಲ್ಯಾವನ ಮೂರುತಿ ನೀನು ಕೇವಲ ಘನ ಅಪರಾಧಿಯುನಾನು ದೇವನೆ ಕರುಣಾಸಾಗರ ನೀನು 1 ಭಾವ ಭಕುತಿಕೀಲವ ನಾನರಿಯೆ ವಿವೇಕಾಮೃತ ನೀಡುವ ದೊರೆಯೆ ಅವಾಗ ವಿಷಯಾಸಕ್ತನು ಹರಿಯೆ ಕಾವ ದೈವ ನೀನೆ ಶ್ರೀ ಹರಿಯೆ 2 ಚರಣವೆ ಗತಿಯೆಂದಾತನ ತಂದೆ ತರಳನ ಕುಂದನಾರಿಸದಿರು ತಂದೆ ತರಳ ಮಹಿಪತಿ ಪ್ರಭು ನಮೋ ಎಂದೆ ಶರಣ ರಕ್ಷಕ ನೀನಿಹುದೆಂದೆ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯವಿದು ನಿತ್ಯವೆಂದು ನೆಚ್ಚಬೇಡ ಮಾಯಾಕಾರ್ಯನಾಗಿ ಮೆರೆವುದಿದು ತಿಳಿದುನೋಡಾಕಾಯವಳಿವ ಮುನ್ನ ಹರಿಯ ಕೃಪೆಯ ಜೋಡ ತೋಡುನಾಯಬಾಯತುತ್ತ ನಂಬಿ ಬೆರೆಯ ಬೇಡ ಪಮಾತಾಪಿತೃರೇತಸ್ಸಿಂದ ಪತನವಾಗಿ ಪಂಚಭೂತಕಾರ್ಯದಿಂದ ಸ್ಥೂಲಾಕಾರವಾಗಿರೇತಸ್ಸು ರಕ್ತಗಳಾರು ಕೋಶವಾಗಿ ಕರ್ಮಜಾತಕಾಯ ಹೀಗೆ ತೋರುತಿಪ್ಪುದಾಗಿ 1ಹುಟ್ಟಿ ಬೆಳೆದು ನಲಿದು ಮುಪ್ಪಿನಿಂದ ಕ್ಷೈಸಿ ಕಡೆಗೆನಷ್ಡವಾಗಿ ಹೋಗಿ ಮಣ್ಣಿನೊಳಗೆ ಬೆರಸಿಇಷ್ಟೂ ಪರಿಯೊಳಾರು ವಿಕಾರವ ತೋರಿಸಿ ವಂದಿಷ್ಟೂ ಫಲವಿಲ್ಲದಂತೆ ುದಕೆ ಭ್ರಮಿಸಿ 2ಕಾಲಕರ್ಮ ಪಂಚಭೂತ ಮಿಳಿತವಾಗಿ ಇದಕೆಮೂಲವಾದ ಕರ್ಮವೆ ಪ್ರಧಾನವಾಗಿಢಾಳಿಸುವಾತ್ಮನ ತೇಜಾಧಾರವಾಗಿ ಕರ್ಮತೇಲಲಾಗಿ ದೀಪದಂತೆ ಪೋಪುದಾಗಿ 3ಬತ್ತಿಯನ್ನು ಎಣ್ಣೆಮುಗಿವ ಸಮಯಕಾಗಿ ಎಣ್ಣೆಯೂಮತ್ತೆ ತಂದು ತುಂಬೆ ದೀಪ ಪೋಗದಾಗಿಇತ್ತೆರದ ಕರ್ಮದಿಂದ ಚಕ್ರವಾಗಿ ಜನ್ಮಮೃತ್ಯುಗಳೀ ದೇಹಕ್ಕವಧಿುಲ್ಲವಾಗಿ 4ತೈಲಮಿಶ್ರವರ್ತಿಯಗ್ನಿ ಸಮ್ಮೇಳದಿಂದಾ ದೀಪಬಾಳಿಬೆಳಗುವುದು ತೈಲದಾಧಾರದಿಂದಾತೈಲಮುಗಿಯೆ ದೀಪ ಕೆಟ್ಟು ಹೋಹ ಛಂದದಂತೆಕೇಳು ದೇಹವೀಪರಿಯೊಳಿಹುದರಿಂದಾ 5ಹುಟ್ಟಿದಲ್ಲಿ ಸೂತಕವು ಹೊಂದಿದಲ್ಲಿ ಸೂತಕವುಮುಟ್ಟಿವಸ್ತುಗಳುಚ್ಚಿಷ್ಟಂಗಳಹವೂನಟ್ಟನಡುವೆ ಬಂದದೆಂದು ಶಿಷ್ಟರಿದ ಮನ್ನಿಸರುನಷ್ಟವಾಗಿ ಕಡೆಗೆ ತಾನು ಹೋಹ ದೇಹವೂ 6ತಾನು ಬಂದ ಬಗೆಯು ತನಗೆ ತಿಳಿಯದಿದ್ದರೂ ನಿನ್ನಸೂನು ಬಂದ ಬಗೆಯ ನೋಡಿ ತಿಳಿದುಕೊಂಡಾರುಹೀನನಾದ ಕಾಯವಭಿಮಾನಿಸದಿರು ಮುಂದೆಶ್ರೀನಾಥನ ಪದವ ಭಜಿಸಿ ಸುಖದಿಂದಿರುತಿರು 7ಮನವೆ ಮಿಥ್ಯದೇಹದಭಿಮಾನವೇತಕೆ ಬಹುಜನುಮ ಜನುಮದಲ್ಲಿ ದುಃಖದಗೆ ನೂಕೆಕೊನೆಗೂ ಹೀಗೆ ಬಂಧವನ್ನು ಕೊಡುವದಕ್ಕೆ ಮಚ್ಚಿಜಿನುಗುವಿರಿಕೆಯೇನು ಇನ್ನೂ ಬಿಡದೆ ಬಯಕೆ 8ಘೋರರೂಪಾಪಾರಸಂಸಾರಾಂಬುಧಿಯನ್ನೂಮೀರಲೇರು ವೆಂಕಟೇಶನಾಮನಾವೆಯನ್ನುಧೀರಗುರು ವಾಸುದೇವರಂಘ್ರಿಯನ್ನು ಬೇಗಸಾರುವ ವಿವೇಕತನವಂದು ಚೆನ್ನೂ 9ಕಂ|| ಜೀವನು ವಿರತಿಯ ಸಾಧಿಪಭಾವಧಿ ಮನದೊಡನೆ ಕಾಯವ ನೆಚ್ಚದಿರೆನ್ನುತಕೈವಲ್ಯದ ಪಥವ ಪೇಳಲುಜೀವನೊಳಾಡಿದುದು ಕಾಯವಚ್ಚರಿಯೆನ್ನಲೂ
--------------
ತಿಮ್ಮಪ್ಪದಾಸರು
ಕಾಯಿ ಕಾಯಯ್ಯಾ | ಅನಾಥ ಬಂಧೋ ಪ ಶರಣರ ದುರಿತಪಹರಣ ಸುಪಾವನ | ಚರಣನೆ ಕೌಸ್ತುಭಾಭರಣ ಹೇಮಾಂಬರಾ | ತರಣಿ ಶತ | ಕಿರಣ ವಿರಾಜಿತ ಕರುಣಾ ಸಿಂಧೋ 1 ವಾರಣಭಯ ನಿವಾರಣ ಸುರಜನ | ತಾರಣ ದೈತ್ಯ ವಿದಾರಣ ಸೃಷ್ಟಿಯೆ | ಕಾರಣ ಚಿತ್ಸುಖ ಪೂರಣ ಮುನಿಜನ | ಪ್ರೇರಣ ಫಣಿಮದ ಹಾರಣ ಧೀರಾ2 ಚಕೋರ ಸು | ಚಂದಿರ ಸ್ಮರಚಿತ ಸುಂದರ ಸದ್ಗುಣ | ಮಂದಿರ ವಿಧಿಹರ ವಂದ್ಯ ಮುಕಂದನೇ | ತಂದೆ ಮಹಿಪತಿ ನಂದನ ಪ್ರಾಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕಾಯೆ ದುರ್ಗಾಂಭ್ರಣಿಯೆ | ಕಾಯೆ ಶ್ರೀ ರುಕ್ಮಿಣಿಯೆ ಶುಭ ಕಾಯೆ ದಯದಿ ಹರಿ ವಿಧಿ ಕಾಯಜ ತಾಯೆ ಪ ಮಾಕುಮತಿ ಶ್ರೀಕರಳೆ | ಪೋತನ ನುಡಿ ಕೇಳೆ ಭೀಕರಳೆನಿಸುತ | ವ್ಯಾಕುಲಗೊಳಿಸದೆ ನೀಕರುಣಿಸು ರತ್ನಾಕರನ ಮಗಳೆ 1 ಸೀತೆ ಸಾರಸನಯನೆ | ಶೀತಾಂಶುವಿನ ಭಗಿನಿ ಮಾತೆ ನಮಿಪೆ ತವ | ಘಾತಕ ವ್ರಾತದ ಭೀತೆಯ ತೋರದೆ | ಪ್ರೀತಿಯಿಂದೊಲಿದು 2 ಲಕ್ಷ್ಮಿಕೃತಿ ಶಾಂತಿ ಅಕ್ಷರಳೆ ಜಯವಂತಿ ಈಕ್ಷಣ ಕರುಣಕವಾಕ್ಷದಿಂದೀಕ್ಷಿಸು ಪೇಕ್ಷವ ಮಾಡದೆ ಮೋಕ್ಷದಾಯಕಳೆ3 ವಟದೆಲೆಯೊಳು ಮಲಗಿರುವ | ವಟುರೂಪಿ ಪತಿಪದವ ಪಠಿಸುತಬ್ಜಸೀಕರ | ಪುಟದಿ ನಮಿಸುವಂಥ ಕುಟಿಲರಹಿತೆ ಶತ | ತಟಿತ ಸನ್ನಿಭಳೆ4 ಭಾಮೆ ಶ್ರೀ ಭೂಸುತೆಯೆ | ಶಾಮಸುಂದರ ಸತಿಯೆ ನಾ ಮೊರೆ ಹೊಕ್ಕೆನು | ಪ್ರೇಮದಿಂದಲಿ |ಸು ಕ್ಷೇಮಗರೆದು ಮಮಧಾಮದಿ ನೆಲಸೆ 5
--------------
ಶಾಮಸುಂದರ ವಿಠಲ