ಒಟ್ಟು 1122 ಕಡೆಗಳಲ್ಲಿ , 101 ದಾಸರು , 1027 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪವಮಾನ ರಾಯಾ ಪಾವನ ಕಾಯಾ | ಕಾಯೋದಿವಿಷತ್ಪೂಜಿತ ಕವಿಜನ ಗೇಯ ಪಭಕ್ತವತ್ಸಲ ದೇವ ರವಿತೇಜ | ಸರ್ವೋ-ದ್ರಕ್ತ ಪ್ರಣತ ಜನ ಸುರಭೂಜ||ಶಕ್ತ ಲೋಕೈಕ ಅನಂತಜ |ಭುಕ್ತಿಮುಕ್ತಿದ ದಿತಿಜಾಹಿ ದ್ವಿಜರಾಜ1ದುರಿತಾಂಬುಧಿ ಘಾಗಜ ಕಾಳೀಶ | ಸರ್ವಸುರವಂದ್ಯ ಪದಕಂಜ ನಿರ್ದೋಷಾ ||ಪುರರಿಪುಪಿತ ಪಯೋಧರ ಭಾಸ | ಸಾರೆ-ಗರೆದು ಪೂರ್ತಿಸೊ ಯನ್ನ ಅಭಿಲಾಷಾ 2ಪೌಲಸ್ತ್ಯಾನುಜ ಮಾಠ ರಜ ರಕ್ಷ | ಶ್ರೀ ಗೋ-ಪಾಲನವನೆನೀಸುವದುಪೇಕ್ಷ ||ನೀಲೇಶ ತ(?)ಮಾಡದೆ ತಾ ರಕ್ಷ | ವಂದ್ಯಕಾಲಿಗೆರಗುವೆ ದುರ್ಜನ ಶಿಕ್ಷ3ಮಧುಸಖ ಪಾಲಾನುಜ ಪಾದಾರವಿಂದ |ಮಧುಕರ ದಂಡ ಮೇಖಲ ಧಾರ ||ವಿದುರಾಗ್ರಜ ನಂದನ ಸಂಸಾರಾರಣ್ಯ |ಸುಧನಂಜಯ ವೃಕೋದರ ಸಮೀರ4ಕುಟಿಲರಹಿತ ಋಜುಗಣಾಧೀಶ | ಶ್ರೀ ಧೂ-ರ್ಜಟಿವಂದ್ಯ ಭಕ್ತಿಯಿಂ ಪ್ರಾಣೇಶ ||ವಿಠಲನ್ನ ಭಜಿಸುತ್ತ ಸದ್ಭಾಷ್ಯವನ್ನು |ಪಠನೆ ಮಾಡಿಸೊ ದಯದಿಂದ ನಿಶಾ 5
--------------
ಪ್ರಾಣೇಶದಾಸರು
ಪಾಲಿಸೈ ಪರಮೇಶ್ವರ | ಕ-|ಪಾಲ ಲೋಚನ ಶಂಕರಾ ||ನೀಲಕಂಧರಶಶಿಧರಾ ತ್ರಿ-|ಶೂಲಪಾಣಿ ಮಹೇಶ್ವರ 1ದಂಡಧರ ಶಿರಖಂಡನಾ | ಬ್ರ -|ಹ್ಮಾಂಡಪತಿ ಪಂಚತುಂಡನಾ ||ಖಂಡ ಪರಶುಪ್ರಚಂಡನಾ | ಈಗ |ಕಂಡೆ ನಾ ರುಂಡಮಾಲನಾ 2ಉರಗಕುಂಡಲಧಾರನೇ |ಭವ|ದುರಿತಘೋರವಿಹಾರನೇ ||ಶರಧಿಸಮ ಗಂಭೀರನೇ | ನಿನ -|ಗೆರಗುವೆನು ಪರಮೇಶನೇ 3ದೂತನಾಥ ತ್ರಿಲೋಚನಾ | ಪುರು - |ಹೂತವಂದ್ಯಾ ಸುಖ್ಯಾತನಾ ||ಆರ್ತರಕ್ಷಕ ದೇವನಾ | ಬಲು |ಪ್ರೀತಿಯೊಳು ನಂಬಿರ್ದೆನಾ 4ಚಂದ್ರಕೋಟಿ ಪ್ರಕಾಶನೇ | ಪೂ -|ರ್ಣೇಂದು ಮುಖಿ ಗಿರಿಜೇಶನೆ ||ಅಂಧಕಾಸುರ ನಾಶನೇ | ಗೋ- |ವಿಂದ ದಾಸನಪೋಷನೇ ||ಪಾಲಿಸೈ| | 5
--------------
ಗೋವಿಂದದಾಸ
ಪಾಲಿಸೊಲಿದು ಲಕ್ಷ್ಮೀಲೋಲ ವೆಂಕಟಪತಿಪಾಲಾಬ್ಧಿಶಯನ ಕೃಪಾಳು ಪರೇಶ ಪ.ಆಲಸ್ಯವಜ್ಞಾನಜಾಲ ಪರಿಹರಿಸುನೀಲನೀರದನಿಭ ಕಾಲನಿಯಾಮಕ ಅ.ಪ.ಪ್ರೇರಕ ಪ್ರೇರ್ಯನು ಮೂರು ವಿಧ ಜೀವರಾ-ಧಾರಾಧೇಯಾಪಾರ ಮಹಿಮನೆಸಾರಭೋಕ್ತ್ರವೆಯೆನ್ನಘೋರದುರಿತಭಯದೂರಮಾಡುತ ಭಕ್ತಿ ಸಾರವನೀಯುತ 1ಪಾಪಾತ್ಮಕರೊಳು ಭೂಪಾಲಕನು ನಾಕಾಪಾಡೆನ್ನನು ಗೋಪಾಲ ವಿಠಲಶ್ರೀಪದದಾಸ್ಯವ ನೀಪಾಲಿಸುಭವತಾಪಪ್ರಭಂಜನ ಹೇ ಪರಮಾತ್ಮನೆ 2ಶ್ರೇಷ್ಠರ ಸಂಗವ ಕೊಟ್ಟೆನ್ನ ರಕ್ಷಿಸುಕಷ್ಟಪಟ್ಟೆನು ಬಹಳ ಸೃಷ್ಟಿಗೊಡೆಯನೆಮುಷ್ಟಿಕಾರಿಯೆ ಎನ್ನಿಷ್ಟ ಬಾಂಧವ ನೀನೆಕೃಷ್ಣಗೋವಿಂದನೆ ಬೆಟ್ಟದೊಡೆಯಹರಿ3ಆಶೆಗೆ ಸಿಕ್ಕಿ ಹರಿದಾಸನೆಂದೆನಿಸಿದೆದೋಷಸಮುದ್ರದೊಳೀಜಾಡುವೆನುಕೇಶವ ತವಪದ ದಾಸಜನರ ಸಹವಾಸವಕೊಡು ಮಹಾಶೇಷಪರಿಯಂಕನೆ4ಛತ್ರಪುರೈಕಛತ್ರಾಧಿಪ ನಿನ್ನಪ್ರಾರ್ಥಿಸುವೆನು ಪರಮಾರ್ಥಹೃದಯದಿಕರ್ತಲಕ್ಷ್ಮೀನಾರಾಯಣ ಗುಣನಿಧಿ ಶ್ರೀವತ್ಸವಕ್ಷಸ್ಥಲ ಕೌಸ್ತುಭಾಭರಣನೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪಾಹಿಸರಸ್ವತಿ ಸುಗಾಯಿತ್ರಿ ಶ್ರೀ ಸಾವಿತ್ರಿ |ಮಹಾ ದುರಿತಾದ್ರಿಪವಿ ದೀನ ಸುರಧರಿಜೇ ಪಶಿಷ್ಟಜನರ ಪಾಲಿಪಳೆ ದುಷ್ಟ ಜನ ದೂರಳೇ |ಸೃಷ್ಟಿಪತಿ ಸೇವೆಯೊಳಗಿಟ್ಟುದುರುಳ|ಬಟ್ಟೆಹಿಡಿಸದಲೆ ದಯವಿಟ್ಟು ಪಿಡಿವದು ಕೈಯ |ಕಷ್ಟ ನಾಶನ ಮಾಡೆ ಕೊಟ್ಟು ಸುಖ ಪೂಜ್ಯೆ 1ಮದನಸತಿಕೋಟ ಲಾವಣ್ಯೆ ಗುಣಸಂಪನ್ನೆ |ಸುದತೀ ವೃಂದ ಶಿರೋಮಣಿ ಕರುಣಾರ್ಣವೆ ||ಮಧು ಜಿತ್ಪ್ರಿಯನ ರಾಣಿ, ವಾಣೀ ವೀಣಾಪಾಣಿ |ಹೃದಯದೊಳು ಕಮಲನಾಭನ ನಿರುತ ತೋರೇ 2ಈಶಾದಿ ಸುಮನಸಾರ್ಚಿತಪಾದಸರಸೀರುಹೆ |ಲೇಶೀತರಾನಂದೆ ಸುಗುಣೆ ಶ್ರೀ ಪ್ರಾ-ಣೇಶ ವಿಠಲನ ಕೊಂಡಾಡುವರೊಳಗೆ ಸ್ನೇಹ |ಹ್ರಾಸವಾಗದೆ ಈಯೆ ಇಭರಾಜ ಗಮನೆ 3
--------------
ಪ್ರಾಣೇಶದಾಸರು
ಪೂರ್ಣಿಮೆಯ ದಿನ(ಗರುಡ ದೇವರನ್ನು ಕುರಿತು)ರಂಭೆ : ಮಂದಗಮನೆ ಪೇಳಿದಂದವನೆಲ್ಲ ಸಾ-ನಂದದಿ ತಿಳಿದೆನೆ ಬಾಲೆಇಂದಿದು ಪೊಸತು ಮತ್ತೊಂದುವಾಹನವೇರಿಮಂದರಧರಬಹನ್ಯಾರೆ1ಅಕ್ಕ ನೀ ಕೇಳಲೆ ರಕ್ಕಸವೈರಿಯಪಕ್ಕದ ಮೇಲೇರಿಸುತಅಕ್ಕರದಿಂದ ಕಾಲಿಕ್ಕಿ ಬರುವನೀತಹಕ್ಕಿಯಂತಿಹನೆಲೆ ಜಾಣೆ 2ಘೋರನಾಸಿಕದ ಮಹೋರಗ ಭೂಷಣಧಾರಿವನ್ಯಾರೆಂದು ಪೇಳೆಮಾರಜನಕಗೆ ವಾಹನನಾಗುವನೀತಕಾರಣವೇನೆಂದು ಪೇಳೆ 3ಊರ್ವಶಿ : ಈತನೆ ಮಹಾತಿಬಲ ಕಾಣೆ ಶ್ರೀವಿಷ್ಣುವಿಂಗೆಕೇತನನಾದ ಪುನೀತನೆಲೆ ಜಾಣೆಭೀತಿರಹಿತವಿಖ್ಯಾತಿ ಸರ್ಪಾ-ರಾತಿ ಸೂರ್ಯಾನ್ವಯನ ಬಲಗಳಚೇರಿಸಿದ ನಿಷ್ಕಾತುರನಹರಿಪ್ರೀತ ವಿನತಾ ಜಾತ ಕಾಣಲೆ 4ಗಂಡುಗಲಿ ಮಾರ್ತಾಂಡತೇಜಮಖಂಡಬಲನಿವನು ಮಾತೆಯಲಂಡಲೆಯ ಪರಿಖಂಡನಾರ್ಥದಿಚಂಡವಿಕ್ರಮನು ನೇಮವಗೊಂಡು ಬಳಿಕಾಖಂಡಲಾದ್ಯರತಂಡವೆಲ್ಲವನು ಕೋಪದಿಗಿಂಡುಗೆದರಿಯಜಾಂಡವೆಲ್ಲವನಂಡಲೆದು ಕರದಂಡನಾಭನಕಂಡು ಮೆಚ್ಚಿಸಿ ಅಮೃತಕುಂಭವಕೊಂಡುಬಂದವನಂಡಜಾಧಿಪ 5ವಾರಿಜಾಸನೆ ವಾಸುದೇವನುಭೂರಿವೈಭವದಿ ಗರುಡನನೇರಿ ಪೂರ್ಣಮಿವಾರದಲಿ ಸಾಕಾರವನುದಯದಿ ತೋರುತಸ್ವಾರಿ ಬರುತ ಶೃಂಗಾರಮೂರುತಿ ಭೇರಿಗಳರವದಿಸನಕಸ-ನಾರದಾದಿಮುನೀಂದ್ರವಂದಿತಚಾರುಚರಣವ ತೋರಿ ಭಕ್ತರಘೋರದುರಿತವ ಸೊರೆಗೊಳ್ಳಲುಶ್ರೀರಮಾಧವ ಮಾರಜನಕನು 6
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪೊರೆದಯದಿ ಮಾಧವಾ ಕರುಣದಿ ಶ್ರೀಕೇಶವಾ ಪಉರಗವಿಷ್ಟರ ಸುರಶ್ರೇಷ್ಠ ಸುಧಾಕರ ದುರಿತಹರಾ ಅ.ಪಕರುಣಾಕರ ಸರಸಿಜಾಕ್ಷದಾಮೋದರಸುರತಟಿನೀ ತಾತನೆ ಕರುಣದಿ ಶ್ರೀನಾಥನೇತರಳಪ್ರಹ್ಲಾದನ ಪೊರೆದ ನರಸಿಂಹನೇಸ್ಮರಿಸುವೆನೇ ನರವರನೆ ಗರುಡಗಮನ ಶಂಭುಪ್ರಿಯ 1ಮಂದರೋದ್ಧಾರನೆಸಿಂಧುಗಂಭೀರನೇನಂದನಂದನ ಮುಖಚಂದ್ರ ಪ್ರಕಾಶನೇವಂದಿಪೆನೇ ಸುಂದರನೇಸಿಂzsÀುಶಯನ ಗೋವಿಂದನೇ 2
--------------
ಗೋವಿಂದದಾಸ
ಪೊರೆಯೊ ಶಂಕರಾ | ಕರುಣಾ ಸಾಗರ |ದುರಿತಸಂಹರ | ಶಿವೆ ಮನೋಹರ ಪಕರಿಚರ್ಮಾಂಬರ |ಪೊರೆದಿಗಂಬರ ||ಗರಳಕಂಧರ | ಚಂದ್ರಶೇಖರ 1ನಿಟಿಲನೇತ್ರನೆ | ಜಟಾಧಾರನೆ |ನಟ ಮಹೇಶನೇ | ಸ್ಮರಿಪೆ ನಿನ್ನನೆ 2ವೃಷಭವಾಹನಾ | ಭಸ್ಮಲೇಪನ |ಪಶುಪತೀಶನಾ | ನುತಿಸೋ ಅನುದಿನ3ಉರಗಕುಂಡಲ|ನರರುಂಡಮಾಲ |ಕರದೊಳ್ ತ್ರಿಶೂಲ | ಕೈಲಾಸ ಗಿರಿಪಾಲ 4ಅಂಧಕಗಜಾಸುರ | ರೆಂದೆಂಬ ದುರುಳರ |ಹೊಂದಿಸಿ ತ್ರಿಪುರರ | ಜಗದಿ ಮೆರೆದನೀಶ್ವರ5ದೇವ ದೇವೇಶನಾ | ಸೇವಿಸುತಿರೆ ಮನ |ಕಾಯ್ವನನುದಿನ | ಗೋವಿಂದದಾಸನ 6
--------------
ಗೋವಿಂದದಾಸ
ಪೋಗಿ ಬರುವೆನು ಎನ್ನ ಮನೆಗೆ ಜಗದೀಶಭಾಗವತಪ್ರಿಯ ಭಾಗೀರಥೀಜನಕ ಪ.ವರುಷವರುಷಕೆ ನಿನ್ನ ದರುಶನವನಿತ್ತೆನ್ನಕರುಣಿಸೈ ಶೇಷಾದ್ರಿವರ ಶ್ರೀನಿವಾಸದುರಿತಕೋಟಿಗಳ ಸಂಹರಿಸಿ ನಿನ್ನಯ ಕರುಣಾವರಪ್ರಸಾದವನೀಯೊ ಜನ ಮೆಚ್ಚುವಂತೆ1ಜಯ ಹೊಂದಿಸುತ ಮನದ ಭಯವೆಲ್ಲ ಪರಿಹರಿಸಿನಿಯಮತಿಯೀಯೊ ನೀರಜನಾಭನೆದಯಮಾಡೊ ತವ ಪಾದಸೇವೆಯನ್ನಿತ್ತೆನಗೆಪ್ರಿಯನಾಗು ಶ್ರೀಹರಿಯೆ ಭಯನಿವಾರಣನೆ 2ನೀನೆ ಗತಿಯೆನಗೆ ಶ್ರೀನಿವಾಸನೆ ಭಕ್ತಾಧೀನನೀನೆಂಬ ಬಿರುದುಂಟಾದಡೆಮಾನಿಸೈ ಶ್ರೀಲಕ್ಷ್ಮೀನಾರಾಯಣನೆ ನಿನ್ನಧ್ಯಾನ ಸೌಭಾಗ್ಯಗಳನಿತ್ತೆನ್ನ ಸಲಹೊ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಪ್ರಹ್ಲಾದ ವರದ ಭಯಗಜಕೆ ಸಿಂಹಪರಮಆಹ್ಲಾದಪದವಿತ್ತು ಪೊರೆಯೊ ನರಸಿಂಹÀ ಪ.ಹಿಂದೆ ಹಿರಣ್ಯಕನುದರದಲಿ ಜನಿಸಿ ಪ್ರಹ್ಲಾದನೊಂದವನ ಬಾಧೆಯಲಿ ಮರಳಿ ಮರಳಿಇಂದಿರೇಶ ಸಲಹೆನಲು ಗಡಾ ಸ್ತಂಭದಲೊದಗಿಬಂದವನುರವ ಬಗಿದು ರುಧಿರವನು ಸವಿದೆ 1ಅಸುರ ಕೆಡೆದದ ಕಂಡು ಅತಿ ಹರುಷದಿಂದ ತ್ರಿದಶರಂಬರದಿ ಪೂಮಳೆಗರೆಯಲುಶಿಶುವೇಕ ಮಾನಸದಿ ಮರೆಹೊಕ್ಕು ಪೊಗಳುತಿರೆಬಿಸಜಾಕ್ಷ ಕರುಣದಿಂದವನ ಸಲಹಿದೆಯಾಗಿ 2ಹಲವು ಯೋನಿಗಳಲ್ಲಿ ತಿರುಗಿ ಬಳಲಿದೆನಯ್ಯನಳಿನಾಕ್ಷ ನಿಮ್ಮ ಗುರುತವ ಕಾಣದೆಇಳೆಯಲ್ಲಿ ದ್ವಿಜನಾಗಿ ಪುಟ್ಟಿ ತವ ಪದವಿಡಿದೆಗೆಲಿಸು ಭವದುರಿತವ ಪ್ರಸನ್ವೆಂಕಟ ನೃಸಿಂಹ 3
--------------
ಪ್ರಸನ್ನವೆಂಕಟದಾಸರು
ಬಂದದೆಲ್ಲವೊ ಬರಲಿ - ಗೋ -ವಿಂದನ ದಯೆ ನಮಗಿರಲಿ ಪಮಂದರಧರ ಗೋವಿಂದ ಮುಕುಂದನಸಂದರುಶನ ನಮಗೊಂದೇ ಸಾಲದೆ ? ಅ.ಪಆರು ಅರಿಯದಿರಲೆನ್ನ - ಮುರಾರಿಯು ವರದ ಪ್ರಸನ್ನತೋರುವ ದುರಿತದ ಬೆನ್ನ -ಭವಹಾರಿ ಕೃಪಾಂಬುಧಿ ಚೆನ್ನ ||ಶ್ರೀರಮಣನ ಶ್ರೀಚರಣ ಸೇವಕರಿಗೆಘೋರಯಮನು ಶರಣಾಗತನಲ್ಲವೆ ? 1ಅರಗಿನ ಮನೆಯೊಳಗಂದು ಪಾಂಡುವರನು ಕೊಲಬೇಕೆಂದುದುರುಳ ಕುರುಪ ಕಪಟದಲಿ ಹಾಕಿರುತಿರೆ ಆ ಕ್ಷಣದಲಿ ||ಹರಿಕೃಪೆಯವರಲ್ಲಿದ್ದ ಕಾರಣದುರಿತವೆಲ್ಲ ಬಯಲಾದುದಲ್ಲವೆ ? 2ಸಿಂಗನ ಪೆಗಲೇರಿದಗೆ - ಕರಿಭಂಗವೇಕೆ ಮತ್ತವಗೆ |ರಂಗನ ದಯವುಳ್ಳವಗೆ - ಭವಭಂಗದ ಭೀತಿಯ ಹಂಗೆ ||ವiಂಗಳ ಮಹಿಮ ಶ್ರೀಪುರಂದರ ವಿಠಲನಹಿಂಗದ ದಯೆವೊಂದಿದ್ದರೆ ಸಾಲದೆ ? 3
--------------
ಪುರಂದರದಾಸರು
ಬಂದನು ಸರದಾರ ಸರದಾರಅಂಧಕರಿಪು ಸುಕುಮಾರ ಪ.ಶರಣಾಗತಜನಸುರಮಂದಾರ ದುರಿತಾರಣ್ಯಕುಠಾರಸುರನರಾದಿತ್ರೈಲೋಕೋದ್ಧಾರ ಗಿರಿಜಾಂಕಾಲಂಕಾರ 1ವಲ್ಲೀದೇವಿಮನೋಹಾರ ಒಲ್ಲದಜನಕತಿದೂರಬಲ್ಲವವೇದವೇದಾಂತದಸಾರಖುಲ್ಲದನುಜ ಸಂಹಾರ2ಸುಕ್ಷೇತ್ರಪಾವಂಜಾಖ್ಯಪುರವರ ಸುಜ್ಞಾನನಿಧಿ ಗಂಭೀರಲಕ್ಷ್ಮೀನಾರಾಯಣನಕಿಂಕರರಕ್ಷಿಸು ನಮಿತಕುಬೇರ3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಬಂದಿದೆ ದುರಿತಘಸಂಗ ಶ್ರೀರಂಗಮಂದಮತಿಯೆಂದುಪೇಕ್ಷಿಸದುಳುಹೊ ಪ.ಒಲ್ಲೆನೆಂದರೆ ಬಿಡದೀ ಮನ ತಿಳಿದತ್ತೆಕ್ಷುಲ್ಲ ವೃತ್ತಿಯ ಸೇರಿ ಬಿಡಲೊಲ್ಲದುಕಲ್ಲುಗೊಂಡಿದೆ ಪುಣ್ಯಮಾರ್ಗಕ್ಕೆ ಇದರೊಳುಫುಲ್ಲನಾಭನೆ ಆವ ತೆರದಿಂದ ಸಲಹೊ 1ಕೆಂಡವ ಕೊಂಡು ಮಂಡೆಯ ಬಾಚುತಿದೆಪರಹೆಂಡಿರು ವಿತ್ತದಾಸೆಗೆ ತೊಡಕಿಕಂಡರೆ ಸೊಗಸದು ಭಕುತಿ ವೈರಾಗ್ಯವಪುಂಡರೀಕಾಕ್ಷನೆಗತಿನೀನೆ ಬಲ್ಲೆ2ಮೆಲ್ಲ ಮೆಲ್ಲನೆ ದುಷ್ಕರ್ಮವ ಸಾಧಿಸಿಬಲ್ಲಿದಜವನವರ ಬರಮಾಡಿದೆವಲ್ಲಭಪ್ರಸನ್ವೆಂಕಟ ಕೃಷ್ಣನಿಲ್ಲಿಸು ನಿನ್ನ ನಾಮವ ನಾಲಿಗೆಯಲಿ 3
--------------
ಪ್ರಸನ್ನವೆಂಕಟದಾಸರು
ಬದುಕಿದೆನು ಬದುಕಿದೆನು ಭವದುರಿತ ಹಿಂಗಿತುಪದುಮನಾಭನ ಪಾದದೊಲಿಮೆ ಎನಗಾಯಿತು ಪಹರಿಯ ತೀರ್ಥ ಪ್ರಸಾದವು ಎನಗೆ ದೊರೆಕಿತು |ಹರಿಕಥಾಮೃತವೆನ್ನ ಕಿವಿಗೊದಗಿತು ||ಹರಿದಾಸರುಗಳೆನ್ನ ಬಂಧು ಬಳಗವಾದರು |ಹರಿಯ ಶ್ರೀ ಮುದ್ರೆಯೆನಗೆ ಆಭರಣವಾಯ್ತು 1ಮುಕ್ತರಾದರು ಎನ್ನ ನೂರೊಂದು ಕುಲದವರು |ಮುಕ್ತಿ ಮಾರ್ಗಕೆ ಯೋಗ್ಯ ನಾನಾದೆನು ||ಸುಕೃತಿದೇಹಕ್ಕೆನ್ನ ಮನವು ತಾನೆಳಸಿತ್ತು |ಅಕಳಂಕ ಹರಿನಾಮ ದಿವ್ಯಕೊದಗಿತ್ತು 2ಇಂದೆನ್ನ ಸಂತತಿಗೆ ಸಕಲ ಸಂಪದವಾಯ್ತು |ಮುಂದೆನ್ನ ಜನ್ನ ಸಾಫಲ್ಯವಾಯ್ತು ||ತಂದೆ ಶ್ರೀಹರಿಪುರಂದರವಿಠಲ ರಾಯನೇ |ಬಂದೆನ್ನ ಹೃದಯದೊಳು ನೆಲೆಯಾಗಿ ನಿಂತ 3
--------------
ಪುರಂದರದಾಸರು
ಬಾ ಬಾರೋ ಬೇಗ ಬಾರೋ ಶಿವಶಂಕರ ಪಬಾರೋ ಶಿವಶಂಕರಾ ಬಾರೋ ಶಶಿಶೇಖರಾಅ.ಪಘೋರದುರಿತಪಾರಶುಭಾಕಾರ ದಯಾಸಾಗರದಯಾಸಾಗರ ಶೂರ ಗಿರಿಜೇಶ್ವರಾ 1ನೀಲಲೋಹಿತಾಲಿಸೆಂದು ಬಾಲನಾ ವಾಗ್ವೊಲವನುಬಾಲನಾ ವಾಗ್ವೊಲವನೂ ಕಾಲನೆಮ್ಮನೆಳೆವನೂ ಬಾ ಬಾ 2ರಜತಗಿರಿವಾಸ ಜಗದೀಶ ಗೋವಿಂದದಾಸನಾಈಶ ಗೋವಿಂದದಾಸನಾ ಪೋಷ ಫಣೀಂದು ಪಣಾ 3
--------------
ಗೋವಿಂದದಾಸ
ಬಾರದೇತಕೋ ತವದಯ ಭಗವತಿಭಾರ್ಗವಿದೇವೀಪಘೋರದುರಿತಪರಿಹಾರಿಣಿ ಭಕ್ತೋದ್ಧಾರಿಣಿ ಭಾಗ್ಯ ವಿಹಾರಿಣಿ ಜನನೀ 1ವಂದಿಪೆ ಪಾದದ್ವಂಧ್ವ ಸರೋಜವಇಂದಿರೆಹರಿಯುರಮಂದಿರ ವಾಸಿನಿ2ನಾರಿಶಿರೋಮಣಿ ನಂಬಿದೆ ನಿನ್ನನುನಾರಾಯಣೀ ಭವನಾಶಿನಿ ಶಾರ್ಙಣಿ 3ದಾರಿದ್ರ್ಯಾಪಹ ಧನಧಾನ್ಯಪ್ರದಕ್ಷೀರಾರ್ಣವ ಸುತೇ ಶ್ರೀಮಹಾಲಕ್ಷ್ಮೀ 4ಹೇಮಗಿರೀಶ್ವರಿ ಭಾಮಾ | ತುಲಸೀರಾಮದಾಸನುತ ಸುಕ್ಷೇಮವು ನಿನ್ನದು 5
--------------
ತುಳಸೀರಾಮದಾಸರು