ಒಟ್ಟು 2882 ಕಡೆಗಳಲ್ಲಿ , 122 ದಾಸರು , 2152 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪವಮಾನ ಪಾಲಿಸೆನ್ನ ಸದ್ಗುಣಘನ್ನ ಪ ಪವಮಾನ ಪೊರಿಯೆನ್ನ ಕವಿಭಿರೀಡಿತ ನಿನ್ನ ಸ್ತವನಗೈಯುವ ಮಾನವರೊಳಧಮ ನಾನು ಪವಮಾನ ಪಾಲಿಸೆನ್ನ ಅ.ಪ ಪತಿ ಶಿವ ಮುಖ ದಿತಿಜಾರಿತತಿನುತ ಶ್ರುತಿ ಪ್ರತಿಪಾದ್ಯ ಆ ನತ ಬಂಧು ತತ್ವಾಧಿ ಪತಿಗಳೊಳುತ್ತಮ ಪ್ರಥಮಾಂಗ ಹರಿ ಪ್ರೀಯ ದ್ವಿತಿಯುಗದಲಿ ಕಪಿ - ನೀರಜ ಪತಿಯಪಾದದ್ವಯ ಅತಿಹಿತದಲಿ ಸೇವಿಸಿ ಲವಣಾರ್ಣವ ಶತಯೋಜನವ ಲಂಘಿಸಿ ರಾಕ್ಷಸಕುಲ ಹತಗೈಸಿ ಪುರದಹಿಸಿ ದೇವಿಯ ಸುವಾರುತಿಯ ತಿಳಿಸಿ ಭಾವಿದ್ರುಹಿಣನೆಂದೆನಿಸಿ 1 ಕುರುಕುಲದಲಿ ಕುಂತಿ ತರುಳನೆನಿಸೆ ಯುಧಿ ಷ್ಟರನನುಜ ವೃಕೋದರ ನಾಮದಲಿಯವ ತರಿಸಿ ಬಕಾದಿ ದುಷ್ಟರ ಶಿಕ್ಷೆಯನು ಗೈಸಿ ಹರಿಇಚ್ಛೆಯಲಿ ವನಚರಿಸಿ ಕೀಚಕನ ಸಂ ಹರಿಸಿ ದುಶ್ಯಾಸÀನಾದ್ಯರನೆಲ್ಲರಣದೊಳು ದುರುಳದುರ್ಯೋಧನನಸಾನುಜಗಣ ತ್ವರಿತಗೈಸಿ ಹನನ ವಿಜಯನಾಗಿ ಪೊರೆದೆ ಧರ್ಮಾರ್ಜುನನ ತ್ರಿಭುವನದಿ ಸರಿಗಾಣೆ ದ್ವಿಜರಿಪು ಪದುಪಂಚಾನನ 2 ಮಣಿಮಂತ ಮೊದಲಾದದನುಜರು ಹರಿದ್ವೇಷ - ವನು ಮಾಡಲೋಸುಗವನಿಯೊಳುದ್ಭವಿಸಿ ನಿ - ರ್ಗುಣರೂಪ ಕ್ರೀಯ ಬ್ರಹ್ಮನೆನುತ ಹರಿಯತಾ ನೆನಿಪ ದುರ್ಮತವನ್ನು ಘನವಾಗಿ ಪ್ರಬಲಿಸಿ ದನುಜಾರಿಯಾಙÁ್ಞದಿ ಮುನಿಮಧ್ಯ ಸತಿಯಲ್ಲಿ ಮುನಿಮಧ್ವನೆಂದೆನಿಸಿ ಜನಿಸಿ ಕುಮತವನು ಶಾಸ್ತ್ರದಿ ಖಂಡಿಸಿ ಹರಿಯೆ ಪರನೆನಿಪ ಮತವಸ್ಥಾಪಿಸಿ ಮೆರೆದೆ ಈ ಧಾರುಣಿಯೊಳು ವರದೇಶ ವಿಠಲನ ವಲಿಸೆ 3
--------------
ವರದೇಶವಿಠಲ
ಪವಮಾನ ಪಾವನ ಚರಿತ ಪದ್ಮ ಭವನ ಪದಾರ್ಹನೆ ನಿರುತ ಅಹ ಪ ಶ್ರವಣಾದಿ ಭಕುತಿ ಜ್ಞಾನವಿತ್ತು ಸಲಹೊ ಮೂ ರವತಾರಾತ್ಮಕ ತತ್ವ ದಿವಿಜನಿಯಾಮಕ ಅ.ಪ. ಪ್ರಾಣೋಪಾನ ವ್ಯಾನೋದಾನ ಹೇ ಸ ಮಾನ ರೂಪಕನೆ ವಿಜ್ಞಾನ ತತ್ವ ಗೀರ್ವಾಣ ಅಹ ಸೇನಾಧಿಪತಿ ನಿನ್ನ ಜ್ಞಾನಸಾರದಲಿಪ್ಪ ಮಾನವರನು ಕಾಯೋ ಮೌನಿ ಧ್ಯಾನಗಮ್ಯ 1 ನಾಗಕೂರ್ಮ ದೇವದತ್ತ ಕೃಕಳ ಯೋಗಿವರಿಯ ಮುಕ್ತಾಮುಕ್ತ ಕ್ಲುಪ್ತ ಭೋಗಗಳೀವ ಸುಶಕ್ತಾ ತಲೆ ಬಾಗಿ ಬೇಡುವೆ ಸರ್ವೋದ್ರ್ರಿಕ್ತ ಅಹ ಜಾಗುಮಾಡದೆ ನಿಜ ಭಾಗವತರೊಳಿಡೊ ಮೈಗಣ್ಣಪದನಾಳ್ದ 2 ಮೂರುಕೋಟಿ ರೂಪಧರನೆ ಲೋಕ ಧಾರಕ ಲಾವಣ್ಯಕರನೆ ಸರ್ವ ಪ್ರೇರಕ ಭಾರತಿವರನೆ ತ್ರಿಪು ರಾರಿಗೆ ವಜ್ರಪಂಜರನೆ ಆಹ ನೀರಜ ಜಾಂಡದಿ ಮೂರೇಳು ಸಾವಿರ ದಾರು ನೂರು ಜಪ ಬೇರೆ ಬೇರೆ ಮಾಳ್ಪ 3 ಆಖಣಾಶ್ಮ ಸಮಚರಣ ಪದ್ಮ ಲೇಖರ ಮಸ್ತಕಾಭರಣ ಕಲ್ಪ ಶಾಖೆಯಂತೆ ಅತಿಕರುಣಾದಿಂದ ಈ ಖಂಡದೊಳು ಮಿಥ್ಯಾವರಣ ಆಹಾ ನೀ ಖಂಡಿಸಿದಿ ದಂಡ ಮೇಖಲ ಭೂಷಣ ಆಖುವಾಹನಪಿತ ಆಖಂಡಲರ್ಚಿತ 4 ಶ್ರೀವಲ್ಲಭಗೆ ಪ್ರತಿಬಿಂಬನಾಗಿ ಜೀವವೇದ ಕಾಲಸ್ತಂಭಗತ ಆವಾಗ ಹರಿರೂಪ ಕಾಂಬ ಶಕ್ತ ನೀ ಒಬ್ಬನಹುದೋ ನಾನೆಂಬೆ ಆಹಾ ವಿಭವ ಜಗ ನಿತ್ಯ 5 ದಕ್ಷಿಣಾಕ್ಷಿಗತ ವತ್ಸಾ ರೂಪಿ ದಕ್ಷನಹುದೋ ಪರಮೋಚ್ಚಾ ಚಾರು ತ್ರ್ಯಕ್ಷಾದಿ ಸುರರೊಳಧ್ಯಕ್ಷಾ ಸರ್ವಾ ಪೇಕ್ಷರಹಿತನೆ ಸ್ವೇಚ್ಛಾ ಆಹಾ ಮೋಕ್ಷಾದಿ ದ್ವಾತ್ರಿಂಶ ಲಕ್ಷಣ ಪುರುಷ ನಿ ರೀಕ್ಷಿಸಿ ಕರುಣದಿ ರಕ್ಷಿಸೋ ಎನ್ನನು 6 ಮೂಲೇಶನಂಘ್ರಿ ಸರೋಜ ಭೃಂಗ ಏಳೇಳು ಲೋಕಾಧಿರಾಜಾ ಇಪ್ಪ ತ್ತೇಳು ರೂಪನೆ ರವಿತೇಜಾ ಲೋಕ ಪಾಲಕರಾಳ್ವ ಮಹೋಜಾ ಆಹಾ ಕಾಳಿರಮಣ ನಿನ್ನ ಕಾಲಿಗೆರಗುವೆ ಕೃ ಪಾಳು ಭಕ್ತಿ ಜ್ಞಾನವಾಲಯ ಕರುಣಿಸು 7 ಅಧಿಭೂತ ಅಧ್ಯಾತ್ಮಗತನೇ ವಿಮಲ ಅಧಿದೈವರೊಳು ಪ್ರವಿತತನೆ ಕಲಿ ವದನದಿ ನಿಲಿಸೋ ಮಾರುತನೆ ಆಹಾ ಬದರಿಕಾಶ್ರಮದೊಳು ಹದಿನಾರು ಸಾವಿರ ಸನ್ನುತ 8 ಮಾತರಿಶ್ವ ಮಹಾಮಹಿಮ ಸರ್ವ ಚೇತನ ಹೃದ್ಗತ ಹನುಮ ಭೀಮ ಭೂತಳದೊಳು ಮಧ್ವ ನಾಮಾದಿಂದ ಜಾತನಾಗಿ ಜಿತಕಾಮಾ ಆಹಾ ಆ ತಿಪ್ಪಣ್ಣಾದಿ ವಿಖ್ಯಾತ ಮಾಯ್ಗಿಳ ಗೆದ್ದ ಸೀತಾರಮಣ ಜಗನ್ನಾಥ ವಿಠ್ಠಲ ದೂತ 9
--------------
ಜಗನ್ನಾಥದಾಸರು
ಪವಮಾನ-ಪಾವನಾ ಜಗಜ್ಜೀವನ ಪ ಶಿವ ಖಗಪತಿ ಅಹಿಸುರ ವಂದಿತಪದ ಅ.ಪ ಸೇವಾ ಕೃಷ್ಣ ಸಾಧನಾ ಕಾವಕರುಣಿ ಕಿಂಪುರುಷ ಖಂಡಾಧಿಪ ಕಾವಳದೊಳು ನಿನ್ನವರನು ಕಾಯ್ದೆ ಭೂವಳಯದೊಳವಿದ್ಯೆಯನಳಿಸಿದ ಸದ್ವರ್ತನು ನೀನೆನ್ನನುದ್ಧರಿಸಯ್ಯ 1 ಶರಧಿ ಹಾರಿದೆ | ಕೌರವ ಕಲಿಯಾ ನೀ ಗದೆಯಿಂ ಛೇದಿಸಿದೆ ಧಾರುಣಿಯೊಳು ಯತಿಪುಂಗವನೆಂದೆನಿಸಿದೆ ನಿರುತದಿ ರಾಮರ ಕಾರ್ಯವ ಸಾಧಿಸಿ ವಿರಥರ ಮಾಡಿದೆ ಅತಿರಥರುಗಳ ಹರಿಸರ್ವೋತ್ತಮ ತರತÀಮ ಸತ್ತತ್ವಗ ಳರುಹಿದ ಸದ್ವರ್ತನು ನೀನೆ 2 ರಾಮಪದಕುಮುದಸೋಮ ಭೀಮಾ ರಿಪುಕುಲ ಧೂಮ ನಿಸ್ಸೀಮ ಶ್ರೀಮದಾನಂದಮುನಿ ಸಾರ್ವಭೌಮ ಭೂಮಿಜೆ ಕುರುಹ ಶ್ರೀರಾಮರಿಗರ್ಪಿಸಿ ಅ ಮಹ ಬಕ ಕೀಚಕರ ಸಂಹರಿಸಿ ತಾಮಸ ಗ್ರಂಥವನಳಿಸಿ ಜನಕೆ ಸದ್ಬೋಧೆ ಇತ್ತ ಗುರು ಪೂರ್ಣಬೋಧನೆ 3 ದ್ರೋಣಾಚಲವ ತಂದ ಪ್ರಾಣ ಎಣೆಯುಂಟೆ ಬಲದೊಳು ನೀನೆ ನಿಸ್ಸೀಮ ಕಾಣೆನೊ ಜಗದಿ ಪರಮಹಂಸರ ಪ್ರಾಣ ಪ್ರಾಣಿಗಳೊಳಗೆ ಮುಖ್ಯಪ್ರಾಣನೆಂದೆನಿಸಿದೆ ಕ್ಷೋಣಿಯೊಳು ಕುರುಸೇನೆ ಸಂಹರಿಸಿ ಕ್ಷೀಣವಾಗುತಲಿಹ ಸುಜನರ ಮನಸ ತ್ರಾಣ ಮಾಡಿ ಸತ್ಪ್ರಮಾಣಗಳಿತ್ತೆ4 ಋಜುಪುಂಗವ ದೇವಾ ಹನುಮಾ ಗಜಪುರಾಗ್ರಣಿ ಕೌರವನಿಗೆ ನೀ ಕಾಲಯಮ ಕುಲಿಶ ನಿಸ್ಸೀಮ ಅಜಪದ ಪಡೆದಿ ಶ್ರೀ ಆಂಜನೇಯನೆ ವಿಜಯಸಾರಥಿನೊಲಿಸಿ ಪೂಜಿಸಿ ಸೃಜಿಸಿ ಮರೆದೆ ಸಚ್ಛಾಸ್ತ್ರದಿಂದ ಈ ಚತುರ್ದಶಭುವನಾಚಾರ್ಯನೆನಿಸಿದೆ 5 ಖೂಳ ಅಕ್ಷಕುವರನ ಹರಿಸೆ ಖಳರ ಕಾಳೋರಗ ಬಾಧೆ ಲೆಕ್ಕಿಸದೆ ಖಳ ಭೂದೈತ್ಯರ ಬಾಧೆ ಹರಿಸಿದೆ ಬಾಲತನದಲಿ ಭಾನುಮಂಡಲ ಹಾರಿದೆ ಲೋಲತನದಿ ಸತಿಗೆ ಪೂವಿತ್ತೆ ಶೀಲಮೂರುತಿ ಮಾಯ ಜಾಲ ಹರಿಸಿ ಜಗಖ್ಯಾತನಾದೆ ಯತಿದಶಪ್ರಮತಿಯೆ 6 ಮಾರುತಿ ಧೀಮಂತಮೂರುತಿ ಭಾರತದಿ ಭೂಭಾರನಿಳುಹಿದ ಖ್ಯಾತಿ ಸಾರ ಶ್ರೀ ಬಾದರಾಯಣಗೆ ಅತಿಪ್ರೀತಿ ಅರಿಪುರ ವೈಶ್ವಾನರನಿಗರ್ಪಿಸಿ ವಾರಣಪುರದೊಳು ಅತಿರಥನೆನಿಸಿ ದುರ್ವಾದಿಮತ್ತಗಜಸಿಂಹನಾಗಿ ನೀ ನಿವ್ರ್ಯಾಜÀದ ಭಕ್ತಿಯ ಹರಿಗರ್ಪಿಸಿದೆಯೊ 7 ಹನುಮಾ ಭೀಮಾ ಆನಂದ ಮುನಿಪಾ ಆ ವಾನರಾಧಿಪಾ ಗಜಪುರಾಧಿಪ ಯತಿಪಾ ಧ್ಯಾನನಿರತ ರಾಮಪದದಿ ಮಾನಸದಲ್ಲಿ ಯದುಪತಿಯ ಪೂಜಿಸಿ ದೀನಜನರುದ್ಧಾರಮಾಡಿ ಸದ್ಬೋಧೆ ಯನಿತ್ತ ಮಧ್ವಮುನಿಯೆ 8 ರಾಮಾಲಿಂಗನ ಮಾಡಿದಾ ರೋಮ ರೋಮಕೆ ಕೋಟಿಲಿಂಗವ ಸೃಜಿಸಿದಾ ಶ್ರೀಮಧ್ಯಗೇಹಾರ್ಯಸೂನುವೆಂದೆನಿಸಿದಾ ಆ ಮಹಾರ್ಣವ ಲಂಘಿಸಿದಾ ಧೀರಾ ಭೀಮಭಯಂಕರ ದ್ರೌಪದೀಪ್ರಿಯಕರ ಈ ಮಹಿಮೆಯೊಳಾರೆಣೆಯೋ ನಿನಗೆ ನಿ ಸ್ಸೀಮನಹುದೋ ಯತಿಸಾರ್ವಭೌಮನೆ 9 ಸುರಜೇಷ್ಠಾನಸ್ತ್ರ ಮಾನಿಸಿದಾ| ಜರೆಯನ ಸೀಳಿ ನಿರಪರ ಸೆರೆಯ ಬಿಡಿಸಿದಾ ಧರೆಯೊಳ್ ಸುರಶ್ರೇಷ್ಠನೆಂದೆನಿಸಿದಾ ಭರದೊಳು ಭರತೆಗೆ ಕುಶಲವ ತಿಳಿಸಿ ಕರುಳಮತಿಯಿಂ ಸತಿಯ ಸಂತೈಸಿ ದುರುಳ ಭಾಷ್ಯಂಗಳ ತತ್ತ್ವವನಳಿಸಿದಾ ಪರಮದಯಾಂಬುನಿಧಿ ಶ್ರೀಮದಾನಂದ 10 ರಕ್ಷಕ ನೀನೆ ಸಜೀವ ಲಾಕ್ಷ್ಯಾಗಾರದ ಬಾಧೆÉಯಿಂ ರಕ್ಷಿಸಿ ಮೆರೆದಯ್ಯ ಈ ಕ್ಷಿತಿಯೊಳು ದೈತ್ಯ ಶಿಕ್ಷಕನೆನಿಸಿದೆ ತಕ್ಷಣ ಸಿಂಹಿಕೆ ಕುಕ್ಷಿಯ ಸೀಳ್ದೆ ಭಿಕ್ಷೆಯಿಂದ ನಿನ್ನವರನು ಕಾಯ್ದೆ ದಕ್ಷನಹುದೊ ನೀನಚ್ಯುತ ಪ್ರೇಕ್ಷರಿಂ ದೀಕ್ಷೆಯ ವಹಿಸಿ ಸತ್ಸಿಕ್ಷಕನಾದ್ಯೊ 11 ನೀ ರಂಜಿಸಿ ಮೆರೆದೆಯೊ ಗುರು ಮಧ್ವಾರ್ಯ ಧೀರ ಕೇಸರಿಕುವರ ಪುರುಷಾಮೃಗವ ಸಾಧಿಸಿ ತಂದ ಶೂರ ಈ ಧರಾವಲಯದಿ ತೋರಿದೆ ತತ್ವಸಾರ ತೋರಿ ಭಕ್ತಿ ಶ್ರೀರಾಮರ ಪದದಿ ಕಂ ಸಾರಿಯ ಸೇವಿಸಿ ಭಾರವನಿಳುಹಿದೆ ಸಾರಿದೆ ಹರಿಸರ್ವೋತ್ತಮ ತರತಮಭೇದವನರುಹಿದ ಪರಮದಯಾಳೊ12 ಅಂಜನೆ ಕುವರಾ ಧೀರಾ ಕುಂಜರಪುರದ ಅರಿಗಳಂಜಿಸಿದ ಶೂರ ಧರಣಿ ದುರ್ಮದಾಂಧರ ದುರ್ವಾದ ಪಂಕಜೋದ್ಭವನ ಪದವ ಪಡೆವೆ ನೀ ಅಂಜದೆ ಗದೆಯಿಂ ಕೊಂದೆ ಕುರುಪನ ಮಂಜುಳವಾಣಿಯ ಜಗಕೆ ಇತ್ತು ನೀ ರಂಜಿಸಿ ಮರೆದೆಯೊ ಗುರುಮಧ್ವಾರ್ಯ 13 ರೋಚಕ ನಾಮಕನೆನಿಸಿ ಪು ರೋಚನನ ಕಾರ್ಯವನೆಲ್ಲಾ ಕೆಡಿಸಿ ಪಾಜಕ ಕ್ಷೇತ್ರ ಪವಿತ್ರ ಮಾಡಿದೀ ಖೇಚರಮಾರ್ಗದಿ ನೆಗಹಿ ನಿ ಶಾಚರರೆÉಲ್ಲರ ಸದೆದೆ ಗದೆಯಿಂ ಸೂಚಿತ ಗ್ರಂಥ ವಿರಚಿಸಿ ಜಗಕೆ ನೀ ಗೋಚರಿಸಿದೆಯೊ ತ್ರಿಜಗಾಚಾರ್ಯ 14 ರಣದೊಳು ಘುಣಿವಿರೂಪಾನೆತ್ತಿದೆ ಬಾಣಸಿಗನೆನಿಸಿ ಮತ್ಸ್ಯದೇಶವ ಸೇರ್ದೆ ಕ್ಷೋಣಿಯೊಳು ಗುಣವಾರಿಧಿ ಎನಿಸಿದೆ ಗಣನೆ ಇಲ್ಲದೆ ಗಿರಿಯನೆಗಹಿದೆ ಹಣಿದೆ ಹಿಡಿಂಬಾಸುರನ ಸೀಳಿದೆ ಮಣಿಮಂತಾದಿ ದುರಾತ್ಮರಿಗೆ ನೀನಂತಕನೆನಿಸಿದೆ ಶಾಂತಮೂರುತಿಯೆ15 ವಿಜಯರಥಕೆ ನೀ ಕೇತುನಾಥ ವಿಜಯಸಾರಥಿಯಾ ದೂತ ವಿಜಯದಶಮಿಯೊಳ್ ಜನಿತ ಸೋಜಿಗ ತೋರಿ ಸಂಜೀವನ ತಂದೆ ಆ ಜಗಜಟ್ಟಿಗಳೆಲ್ಲರ ಸದೆದೆ ಈ ಜಗದೊಳು ಸರಿಗಾಣೆ ಜಗದೊ ಳು ಜಗದ್ಗುರುವಹುದೋ ನೀ ಗುರುಪೀಳಿಗೆಗೆ16 ಮಂಗಳಮೂರುತಿ ಮಾರುತಿ ಸೌಗಂಧಿಕ ನೆವದಿ ಮರುತನೊಳ್ ನೀ ಸೆಣೆಸಿದಿ ಶೃಂಗಾರ ಗೋಪಿನಂದನನ ಸ್ಥಾಪಿಸಿದೆ ಭಂಗಿಸಿ ವನವನು ಉಂಗುರವನು ತಂದೆ ಸಂಗರ ಹನುಮನೊಳ್ ನೀಡಿ ಮೋಹ ತೋರ್ದೆ ಅಂಗಜಪಿತನ ಇಂಗಿತವರಿತು ಭಂಗಿಸಿದೆಯೊ ದುಶ್ಯಾಸ್ತ್ರಂಗಳನು 17 ಕೇಸರಿ ಕ್ಷೇತ್ರ ಜನಿತಾಭೂಸು ರ ಸುತನ ಭೀತಿಯ ನೀ ಬಿಡಿಸಿದೆ ವಸುಮತಿಯೊಳು ಸುರಶ್ರೇಷ್ಠನೆಂದೆನಿಸಿದೆ ಕೋಸಲನಗರಾಧೀಶನ ಪ್ರೀಯ ವಾಸುದೇವಗರ್ಪಿಸಿದೆ ಅಧ್ವರ್ಯ ಶ್ರೀಶನಾಜ್ಞೆಯ ತಾ ಶಿರದಿ ಧರಿಸಿ ಪ್ರ ಕಾಶ ಮಾಡ್ದೆ ಸರ್ವಮೂಲಗ್ರಂಥವ 18 ಶ್ವಾಸನಿಯಾಮಕನೆನಿಸಿದೆ ಪ್ರ ಯಾಸವಿಲ್ಲದೆ ವನವಾಸಂಚರಿಸಿದೆ ಶ್ರೀ ವ್ಯಾಸರಿಗೆ ಅತಿಮೋದವ ಪಡಿಸಿದೆ ಶ್ರೀಶನಾಜ್ಞೆಯಲ್ಲಿ ಕೀಶನಾಗಿ ನಿಂದು ನಿಶಾಚರರೆÉಲ್ಲರ ಸದೆದೆ ಗದೆಯಿಂದ ಶ್ರೀಶನೆ ಸರ್ವೋತ್ತಮನೆಂಬ ಸತ್ಸಿದ್ಧಾಂತವ ತೋರಿದ ಸದ್ಗುಣಪೂರ್ಣ 19 ಸರ್ವಜೀವರ ತ್ರಾಣ ಪ್ರಾಣ ಗರ್ವಿಸಿದವರೊಳು ನೀ ಗರ್ವ ಹರಣ ಸರ್ವಜ್ಞಾಚಾರ್ಯ ಗುರುವರೇಣ್ಯ ಪೂರ್ವದೇವರ ಗರ್ವವನಿಳುಹಿ ಸರ್ವ ಕೌರವರ ಪಡೆಯನು ಸವರಿದೆ ಉರ್ವಿಯೊಳು ಜನಿಸಿದ ದುರ್ಮದಾಂಧರ ಗರ್ವಹರಣಮಾಡಿ ಕರುಣವ ತೋರಿದೆ 20 ಶ್ರೀರಾಮನೇಕಾಂತ ಭಕ್ತ ಶೌರಿಯ ಆಜ್ಞೆಯಿಂ ಸರ್ವಕಾರ್ಯಸಕ್ತ ಧಾರುಣಿಯೊಳು ಸಚ್ಛಾಸ್ತ್ರಕರ್ತ ಹಾರಿದೆ ಶರಧಿಯ ಅಣುಮಹದ್ರೂಪದಿ ತೋರಿದೆ ಶಕ್ತಿಯ ಗಿರಿ ತರುತೃಣವತ್ ಸಾರಿದೆ ಧರಣಿಯ ಸುರಜನುಮದಿ ನೀ ಬೀರಿದೆ ಸುಜನಕೆ ತತ್ವಾಮೃತವ 21 ಕಾಶಿ ಕಂಚುಕವ ಧರಿಸಿದೆ ಕಾಶ್ಯಪಿಯೊಳು ಕಾವಿಶಾಟಿಯ ಧರಿಸಿದೆ ಕೀಶತನದಿ ಹರಿಕಾರ್ಯವ ಸಾಧಿಸಿ ಜಗ ದೀಶಕುಲದೊಳು ಜನಿಸಿ ಮೆರೆದೆ ವೇದ ವ್ಯಾಸ ಪದಕಮಲ ಮಧುಪ ಜಗಖ್ಯಾತನಾ ದ ಶ್ರೀ ಮಧ್ವಸೂರ್ಯನೆ 22 ಸುಗ್ರೀವಗಭಯ ಕೊಡಿಸಿದಾ ಮ ಹೋಗ್ರರಾದ ದ್ವೇಷಿಗಳ ಸವರಿದಾ ಸ ಮಗ್ರ ಸಿದ್ಧಾಂತ ರಚಿಸಿದಾ ವಿಗ್ರಹದೊಳು ಧಾತಾಸ್ತ್ರವ ಮಾನಿಸಿ ಅಗ್ರಹರಿಪುಕುಲ ಕಾಲನೆಂದೆನಿಸಿ ಉಗ್ರವಾದಿಗಳ ದುರಾಗ್ರಹ ವಿಗ್ರಹ ಶೀಘ್ರದಿ ಮಾಡಿ ಅನುಗ್ರಹವಿತ್ತೇ23 ಸೋಮಕುಲದೊಳು ನೀನೆ ಅತಿ ಬಲವಂತ ಈ ಮಹಿಯೊಳು ರೌಪ್ಯಪೀಠದಿ ಜನಿತ ರಾಮಾಂಗನೆಯ ಪ್ರೇಮದ ದೂತ ಸೋಮಶೇಖರನ ಕೇದಾರಕಟ್ಟಿದ ಸ್ವಾಮಿಗೆ ಪ್ರಕೃತಿಯ ಮಾಯವ ಪೇಳ್ವ ಕೇಸರಿ ಎನಿಸಿದೆ 24 ಮಾರ್ಜಾಲರೂಪವ ಧರಿಸಿದೆ ನೀ ನರ್ಜುನಾಗ್ರಜಾದಿಗಳ ಪೊರೆದೇ ನೀ ಸರ್ಜಿಸಿ ತೋರ್ದೆ ಸತ್ಸತ್ವಗಳೆಲ್ಲ ಘರ್ಜಿಸಿ ಅರ್ಜುನನ ರಥದಲಿ ನೆಲೆಸಿದೆ ಮೂರ್ಜಗಜಟ್ಟಿಗಳೆಲ್ಲರ ಸದೆದೆ ವರ್ಜಿಸಿ ಅರಿಷಡ್ವರ್ಗಗಳೆಲ್ಲವ ದುರ್ಜಯವಾದಕೆ ಘರ್ಜನೆ ಮಾಡಿದೆ 25 ವಾಯುಕುವರ ಅಸುವರ ಕಾಯಜನಯ್ಯನ ಅತಿಪ್ರೀಯಾ ಶೂರಾ ಜೀಯಾ ನೀನಿತ್ತೆ ಸದ್ಗ್ರಂಥವಿಸ್ತಾರಾ ಕಾಯಕಭಕುತಿ ಶ್ರೀರಾಮರಿಗರ್ಪಿಸಿ ಮಾನಸದಲಿ ಯದುಪತಿಯ ಪೂಜಿಸಿ ಮಾಯಮತವ ನಿರಾಕರಿಸಿ ವಾಚದಿ ಶ್ರೀಯರಸನ ಮೆಚ್ಚಿಸಿದೆ ಯತೀಂದ್ರ 26 ವಾತಜಾತ ಹನುಮಂತ ಖ್ಯಾತ ದ್ವಾಪರದಿ ದ್ರೌಪದೀಕಾಂತ ಭೂತಳದೊಳು ಯತಿನಾಥ ಅತಿಶಾಂತ ಧತಾಜನಕ ಶ್ರೀ ವೇಂಕಟೇಶನ ಪ್ರೀತಿಪಾತ್ರ ಶ್ರೀಕೃಷ್ಣನಂಘ್ರಿಗೆ ಖ್ಯಾತನಾದೆ ಸೂತ್ರಾರ್ಥಪೇಳಿ ಕೃಪಾಪಾತ್ರನಾದೆ ಶ್ರೀ ಬಾದರಾಯಣಗೆ27
--------------
ಉರಗಾದ್ರಿವಾಸವಿಠಲದಾಸರು
ಪವಮಾನಸದಾ ಸಲಹೈ | ಪ್ರೇಮಾಂಬುಧಿಯೆ ದಾತ ಪ ಹರಿಕುಲೇಶ ಸಿರಿವರನ | ಚರಣಧ್ಯಾನಗೈಯದಲೆ ಕೊನೆಗೆ ತೋರೋ ಎನಗೆ 1 ನಾನೆಂಬೋ ಗರ್ವದಲಿ | ಶ್ರೀನಾಥನ ಪದ ಪೊಂದದೆ ಹೀನತನದಿ ಕಾಲಕಳೆದೆ | ಮಾಣದೆ ನೋಡಿಂದಿನಾ ದಿನದಿ 2 ಶ್ರೀ ಶಾಮಸುಂದರನ ದಾಸಾಗ್ರಣಿ | ಪವಿಸಮಾಂಗ ಶ್ವಾಸದೊಡೆಯೆ ಕೊರವಿಯ | ಪೋಷಿಸು ಗುರು ನಾವಂದಿಪೆ 3
--------------
ಶಾಮಸುಂದರ ವಿಠಲ
ಪವಮಾನಾ ಮದ್ಗುರವೆ ಪವಮಾನಾ ಪ ಪರಾಕು | ನಾನು | ವಾಕು || ಆಹಾ | ತವಕದಿಂದಲಿ ಸಂಭವಿಸುವ ಮತಿಯಿತ್ತು | ಭವದಿಂದ ಕಡೆಗಿತ್ತು ಅ.ಪ. ಆಶ್ರಿತಜನ ಕಲ್ಪವೃಕ್ಷಾ | ನಿನ್ನ | ಆಶೆಮಾಡಿದೆ ಬಲು ದೀಕ್ಷಾ | ಗುಣರಾಶಿವಿರಾಗ ಪ್ರತ್ಯಕ್ಷ | ವಾಗಿ | ದಾಸತ್ವ ಕೊಡು ಬಲುದೀಕ್ಷಾ || ಆಹಾ || ಏಸು ಜನ್ಮಗಳಿಂದ | ದೋಷವ ಕಳೆದು ಸಂ | ಕರ್ಣ | ಭೂಷಣ ಕೃಪೆ ಮಾಡೊ 1 ಜ್ಞಾನ ಪ್ರಾಣೋತ್ತಮ ರೂಪ | ನಿನ್ನ | ನಾನು ನಂಬಿದೆನೊ ಪ್ರತಾಪ | ಸುರ | ಧೇನು ಭಕ್ತರಿಗೆ ಸಮೀಪ | ಜಗ | ತ್ರಾಣ ಕಪಿಕುಲ ದೀಪ || ಆಹಾ || ಆನಾದಿಯಲಿ ಬಂದು | ಙÁ್ಞನವ ನೋಡಿಸಿ | ಮಾನಸದಲಿ ಭೇದ | ವನ್ನು ಕರುಣಿಸು ನಿತ್ಯಾ 2 ಹರಿದಾಸರೊಳು ಅಗ್ರಣಿಯೆ | ನೋಡು | ಸುರರೊಳು ನಿನಗಾರು ಯೆಣೆಯಾ | ಚಿಂತಿ | ಪರಿಗೆ ಆವಾವಾ ಹೊಣೆಯೇ | ಆಹಾ | ಕರವ ಮುಗಿವೆ ಸಂ | ತೈಸು ಸ್ವಧÀರ್ಮವ | ಮೊರೆ ಹೊಕ್ಕವರ ವಿ | ಸ್ತರವಾಗಿ ಪ್ರತಿದಿನ 3 ತತ್ವೇಶ ಜನರೆಲ್ಲ ನೆರೆದು | ಅಹಂ | ಮತಿಯಲ್ಲಿ ಸತ್ಕರ್ಮ ಮರೆದು | ನಿನ್ನ | ನುತಿಸದೆ ಅತಿಶಯ ಜರೆದು | ತಮ್ಮ | ಗತಿಯೆಲ್ಲ ಅಲ್ಲಲ್ಲೆ ಮರೆದು || ಆಹಾ || ಚತುರಾನನ ಶ್ರೀ | ಪತಿನೋಡುತಲಿರೆ | ಪ್ರತಿಕಕ್ಷಿಯಲ್ಲಿ ಸಂ | ತತಿಯೆನಿಸಿಕೊಂಡೇ 4 ಇಂದ್ರಿಯಂಗಳ ನಿಯಾಮಕನೇ | ಗುಣ | ನಿರ್ಜರ ನಾಯಕನೆ | ಪಾಪ | ಸಿಂಧು ಬತ್ತಿಪ ಪಾವಕನೆ | ನಿಜ | ಬಂಧು ಸಂಶ್ರಿತ ತಾರಕನೇ ||ಆಹಾ || ಇಂದು ಮಹಾದಯ | ಕರ | ತಂದು ಉದ್ದರಿಸಿದ | ಇಂದ್ರಪ್ರಸ್ತನೇ 5 ವಾಕು | ದೇವ | ಯೆನ್ನ ಕುತ್ಸಿತ ಮನ ನೂಕು | ಮುನ್ನೆ | ಘನ್ನ ಭಕುತಿಯ ನೀಡಬೇಕು | ಇಂತು | ಪುಣ್ಯಮಾಡಿಸಿ ಬಿಡದೆ ಸಾಕು ||ಆಹಾ || ಕಣ್ಣುಕಾಣದೆ ಘೋರಾ | ರಣ್ಯದಿ ಬಿದ್ದಿಹೆ | ಬನ್ನ ಬಡಿಸುವದು | ನಿನ್ನ ಧರ್ಮವಲ್ಲಾ 6 ಎಣೆಗಾಣೆನೊ ನಿನ್ನ ಪ್ರೇಮ | ಅನು | ಗುಣ್ಯವಾಗಲಿ ನಿಸ್ಸೀಮ | ಸುಪ್ರ | ಧಾಮ | ಗುಣ | ಪೂರ್ಣ ಮಧ್ವ ಹನುಮ ಭೀಮ ||ಆಹಾ|| ಪನ್ನಂಗಾರಿ ವಾ | ಹನ್ನ ವಿಜಯವಿಠ್ಠ | ಲನ್ನ ಮೂರುತಿಯನ್ನು |ನಿನ್ನೊಳು ತೋರಿಸೋ7
--------------
ವಿಜಯದಾಸ
ಪಶುಪತಿ ಶಂಭೋ |ಅಸುಪತಿಯನೆ ತೋರೋ || ಕರುಣವ ನೀ ಬೀರೋ ಪ ಮನಸೀನ ಒಡೆಯನೆ | ಕನಸು ಮನಸಿನಲಿಅನಘ ಹರಿಯ ಪದ | ನೆನೆವ ಮತಿಯನಿತ್ತುಎಣಿಸು ಭಕ್ತನೆಂದು || ಬೇಡುವೆ ಇನಿತೆಂದು ಅ.ಪ. ಮಾಹಿತಾಂಘ್ರಿಯ | ವಾಹಕನ ಸಮಮೋಹಶಾಸ್ತ್ರ ಪ್ರ | ವಾಹ ರಚಿಸುತ ||ದ್ರೋಹಿಗಳ ಬಲು | ಮೋಹ ಪಡಿಸುತಶ್ರೀ ಹರಿಯ ಸಖ | ಪಾಹಿ ಸುಖಪ್ರದ1 ಕಟಿ ಸೂತ್ರ | ಒಪ್ಪೊತವ ಸುತ ||ಸರ್ಪಾರಿ ಸಮಪದ | ಕಪ್ಪೊಗೊರಳ ಹರತಪ್ಪೊಗಳನು ಎಲ್ಲ | ಒಪ್ಪಿಕೊಳ್ಳಯ್ಯ 2 ಕರ್ಪರ | ಮೈಲಿ ಭಸ್ಮವು |ಶೂಲ ಪಾಣಿಯೆ | ಶೈಲಜಾಪತೆ ||ಕಾಲಕಾಲಕೆ | ಕಾಲನಾಮನಶೀಲ ಸ್ಮøತಿಯನು | ಪಾಲಿಪುದು ಹರ 3 ವಾಸ ಮಶಣವು | ಕೇಶ ವ್ಯೋಮವುಹೇ ಸದಾಶಿವ | ನೀ ಸಲಹೊ ಎನ್ನ ||ಮೀಸಲದ ಮನ | ಕಾಶಿಸುವೆ ಹರಹೇ ಸದಾಗತಿ ಕೂಸು ನೀ ನಲ್ಲೆ 4 ದೇವ ವರ ಶಿವ | ಮಾವ ವೈರಿಯಹಾವ ಭಾವಕೆ | ಓದಿ ಮೋಹಿಸುತ ||ಧಾವಿಸಲು ಹರಿ | ತೀವ್ರ ಕಾಯ್ದನುಗೋವಳನು ಗುರು | ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಪಾಂಡುರಂಗನ ಈಕ್ಷಿಸುವ ಸುಖವೇ ಸಾಕೂ ಅಪಾರ ಮಹಿಮ ಅನಂತಾನಂತ ರೂಪನಾ ಪ ನಖ ನಾಲ್ಬೆರಳು ಎರಡು ಜಾನು ಜಂಘೀ ಕಟಿ ನಾಭಿ ಉದರ ಉರುತರ ಕಂಠಾ ಕದಪು ಕರ್ಣ ನಯನಾ ನೊಸಲು ಶಿರ ಜಗವ ವ್ಯಾಪಿಸಿದ ರಕ್ಕಸ ಹರನಾ1 ಮಣಿ ಕುಂಡಲ ತಿಲಕ ಸರಿಗೆ ಕೌಸ್ತಭ ಕಮಲ ತುಲಸಿಹಾರ ಮುತ್ತಿನಸರ ಪ ದಕ ಅಂಗದ ಕಂಕಣ ಮುದ್ರೆ ಕಟಿಸೂತ್ರ ಸುಖದಂದಿಗೆ ಪೆಂಡೆಗೆಜ್ಜೆ ಸುಕುಮಾರನಾ 2 ಶ್ರುತಿ ತತಿಗೆ ದೂರ ಉನ್ನತ ಲೀಲ ಸಾಕಾರ ಅಪ್ರಾಕೃತ ಶರೀರ ಯತಿಗಳ ಮನೋಹರ ಮತಿಗೆ ಅಗೋಚರ ಸಿರಿ ಪತಿ ವಿಜಯವಿಠ್ಠಲನಾ 3
--------------
ವಿಜಯದಾಸ
ಪಾತಕಗೆ ಪರತರದ ಗುರುಬೋಧವ್ಯಾಕೆ ಸೂತಕವ ಬಿಡದವಗೆ ಪರತತ್ವವ್ಯಾಕೆ ಪ ಮಾತುತಪ್ಪಿ ನಡೆಯುವಗೆ ನೀತಿ ವಚನಗಳ್ಯಾಕೆ ಜಾತಿಲ್ಲದವನಿಗೆ ಜ್ಯೋತಿಷ್ಯವ್ಯಾಕೆ ಭೂತಬಡಿದವನಿಗೆ ಭೀತಿಯು ಯಾತಕ್ಕೆ ಆತುರಗೆ ಯಾತಕ್ಕೆ ಕೀರ್ತಿ ಅಪಕೀರ್ತಿ 1 ಮಂಗನಿಗೆ ಮಾಲ್ಯಾಕೆ ಅಂಗನೆಗಧಿಕವ್ಯಾಕೆ ಮುಂಗಾಲಿಲ್ಲದವಳಿಗೆ ಶೃಂಗಾರವ್ಯಾಕೆ ಬಂಗಾರದೊಡವ್ಯಾಕೆ ಕಾಡಡವಿನಿವಾಸಗೆ ಕಂಗಳಿಲ್ಲದವನಿಗೆ ಕರಕನ್ನಡ್ಯಾಕೆ 2 ಪತಿಗಂಜದವಳಿಗೆ ವ್ರತನೇಮಗಳು ಯಾಕೆ ಸತಿಗಂಜಿ ನಡೆಯುವಗೆ ಶಸ್ತ್ರಾಯುಧ್ಯಾಕೆ ಸುತರಿಲ್ಲದವನಿಗೆ ಅತಿಭಾಗ್ಯ ಯಾತಕ್ಕೆ ಮತಿಯಿಲ್ಲದವಗ್ಹರಿಕಥೆಕೀರ್ತನ್ಯಾಕೆ 3 ಮಾನಹೀನನಿಗೆ ಬೇರೆ ಮರಣಬರಲೇಕೆ ಅ ಜ್ಞಾನಿಗ್ಯಾತಕ್ಕೆ ಜಾಣಜನಸಂಗ ಗೋಣೆಹೊರುವವಗ್ಯಾಕೆ ವಾಹನದ ಗೋಷ್ಠಿಯು ಬಾಣ ಬತ್ತಳಿಕ್ಯಾಕೆ ಕರವಿಲ್ಲದವಗೆ 4 ಪರನಿಂದೆ ಮಾಳ್ಪನಿಗೆ ಶರಣತ್ವ ಯಾತಕ್ಕೆ ಕರುಣವಿಲ್ಲದವನಿಗೆ ಗುರುಸೇವೆ ಯಾಕೆ ಧರೆಗಧಿಕ ಶ್ರೀರಾಮಚರಣಸ್ಮರಣಿಲ್ಲದ ಪರಮಪಾಪಿಗೆ ಶಿಷ್ಟನರಜನ್ಮವ್ಯಾಕೆ 5
--------------
ರಾಮದಾಸರು
ಪಾದ | ನಿತ್ಯದಿ ಭಜಿಸುವ ಭೃತ್ಯನೆ ಬಲು ಧನ್ಯನೋ ಪ ಭೃತ್ಯ ಜನಕೊತ್ತೊತ್ತಿ ಪೇಳುವ ಅ.ಪ. ಮುನಿಕುಲ ಸನ್ಮಾನ್ಯ ಸತ್ಯಜ್ಞಾನರ ಕರಜಮಾನ ಮೇಯ ಜ್ಞಾನ ನಿಪುಣಾಹೀನ ಮಾಯ್ಗಳ ಗೋಣ ಮುರಿಸು | ಸ್ವಾನುಭಾವದಿ ಬ್ರಹ್ಮ ಸತ್ಯಜ್ಞಾನ ಆನಂದನೆನುತಲಿ | ಆನುಪೂರ್ವ ವೇದಾರ್ಥ ಪೇಳ್ದ 1 ಈ ಮಹಿಯೊಳು ಭರತ | ಭೂಮಿಯೊಳಖಿಳ ಸುಸೀಮೆಯ ಚರಿಸುತಲೀ ||ನೇಮದಿಂದಲಿ ವಾದ ಭಿಕ್ಷೆಯ | ಪ್ರೇಮದಿಂದಲಿ ಬಯಸಿ ಬರುತಗ್ರಾಮ ಗ್ರಾಮದ ಭ್ರಾಮಕ ಜನ | ಸ್ತೋಮವ ನಿಸ್ತೇಜ ಗೈಸಿದ 2 ಪರಮ ಹಂಸೋತ್ತಮ | ಪರವಾದಿ ಗಜಸಿಂಹಗರುವ ರಹಿತ ಸಾರ್ವಭೌಮಾ ||ವರ ಸುವತ್ಸರ ಚಿತ್ರ ಭಾನುವು | ಚೈತ್ರ ಶುಕ್ಷದಿ ಅಷ್ಟಮೀ ದಿನಸಿರಿ ಗುರು ಗೋವಿಂದ ವಿಠಲನ | ಚರಣ ಸರಸಿಜ ಸೇರಿ ಮೆರೆದ 3
--------------
ಗುರುಗೋವಿಂದವಿಠಲರು
ಪಾದ ಒಮ್ಮಿಗಾದರು ನೆನೆದು ಕರ್ಮ ಪೋಪುವುದು ಎಂತೊ ಇಮ್ಮನಾವಾಗುವುದು ವ್ಯಾಮೋಹ ಸಂಗತಿಗೆ ಕಮ್ಮಗೋಲನ ಬದುಕೀಲಿ ರಂಗಾ ಪ ಹಾಳ ಹರಟಿಗೆ ಮನಾ ಹೇಳಿಸಿಕೊಳದೆವು ಬ್ಬಾಳುತನದಿಂದ ಕುಳಿತು ಕೇಳುವುದು ಕಿವಿಗೊಟ್ಟು ಅವರ ಕಿಂಕರನಾಗಿ ಹೇಳು ಇನ್ನೊಮ್ಮೆ ಎನುತಾ ಲಾಲಿಸಿ ಗತಿ ತಪ್ಪದಂತೆ ಜೋಡಿಸಿ ಮಾತು ಪೇಳುವೆನು ಕೈತಿರುವುತಾ ಶ್ರೀಲೋಲ ನಿನ್ನ ಕೀರ್ತನೆಗೆಯಿಲ್ಲದೊಂದು ಕೀಳು ವಾರ್ತೆಯ ತಾಹದೊ ಮನಸು1 ಧರೆಯನಾಳುವವನ ಸಮ್ಮುಖದಲ್ಲಿ ನಿಂದು ಕರವೆರಡು ನೊಸಲಿಗೆ ಚಾಚಿ ಕರುಣಿಸುವದೆಂದು ಮೊಗವೆತ್ತಿ ಪೊಗಳುವೆ ನಿನಗೆ ಸರಿ ಮಿಗಿಲು ಯಿಲ್ಲವೆಂದೂ ಮರಿಯದಲೆ ಸಲಹುವದು ಮಹಾತ್ಮನಹುದೆಂದು ಹರಿ ನಿಮ್ಮಯ ನಾಮವೆ ನೆನೆವೆ ನಾನೆನ್ನಲು ಮರಪು ಬಂದೊದಗಿಹದೊ ರಂಗಾ2 ಹಸಿವೆ ತೃಷೆಯಿಂದ ಉಳ್ಳವರ ಮನೆಗಳ ಕಾಯಿದು ಬಿಸಿಲು ಬೆಳದಿಂಗಳೆನ್ನದೆ ದೆಸೆಗೆಟ್ಟು ಚಾಲ್ವರಿದು ವಿಷವನುಂಡವನಂತೆ ಕುಸಿದು ಕನಿಷ್ಠನಾಗಿ ರೆಸೆದು ಹದಿನಾರು ಪಲ್ಲುಗಳು ಅವರ ಕೊರಳ ಹಿಸುಕಿ ಹಿಂಸೆಗಳ ಬಿಡಿಸಿ ಹಸನಾಗಿ ನಿನ್ನ ನಾಮಾಮೃತವನುಣದೆ ನಾ ಮುಸುರೆ ಎಂಜಲು ಸವಿದೆನೊ ರಂಗಾ 3 ಹೊನ್ನು ಹಣದ ಆಸೆಗೆ ಹಲಬರನ ಅನುಸರಿಸಿ ಅನ್ನಿಗರ ಕೊಂಡಾಡುತ ಎನ್ನಯ್ಯ ಎನ್ನೊಡಿಯ ಎನ್ನ ಸಾಕುವ ತಾತ ಎನ್ನ ಕುಲ ಉದ್ಧಾರಕಾ ನಾಕ ಬಗೆಯಿಂದ ಮರಿಯದಲೆ ಕುನ್ನಿಯಂತೆ ಕಾಯಿದೆನೊ ಪನ್ನಂಗ ಶಯನನೆ ನಿನ್ನ ಮಹಿಮೆಗಳನ್ನು ಅನ್ನದಲೆ ನರಕಿಕ್ಕಿಳಿದೇ ಸ್ವಾಮಿ 4 ಒಂದು ದಿನವಾದರೂ ಸಂತೋಷದಿಂದಲಿ ಜಿಹ್ವೆ ಇಂದಿರಾರಮಣ ಶರಣಾಗತವತ್ಸಲ ಕಂದರ್ಪನಯ್ಯ ಕಮಲಬಾಂಧವ ಕುಲಾಗ್ರಣಿ ಎಂದು ಸ್ಮರಿಸದೆ ಘೋರ ಅಂಧ ಕೂಪದಿ ಹೊರಳಿದೆ ಮಂದಮತಿಗೊಂದು ಗತಿಯಿಲ್ಲ ವಿಜಯವಿಠ್ಠಲ ತಂದೆ ನೀನೆ ಕಾವುದೋ ಹರಿಯೆ 5
--------------
ವಿಜಯದಾಸ
ಪಾದ ಸಲಹವೆ ಬಿಡಲಾರೆ ಕಲಿತ ಕಲ್ಮಶವನ್ನು ಸುಲಭಾದಿ ಓಡಿಸು ಪ ಅಂದು ಆ ಕರಿರಾಜ ಸರಸಿಲಿವಂದಿಸಿದಾ ಪಾದ ಪಾದ 1 ನಾರಿಯು ನಿನ್ನ ನೆನದಾ ಮಾತ್ರದಿ ಶೀರಿಯ ಮಾಳೇಗರದಾ ಪಾದ 2 ಕಮಲನಾಭ ನೀನು ದೇವರ ದೇವ ಸುಮನಸರೊಡೆಯನು ಅಮಿತ ಮಹಿಮೆ ತೋರಿ ಭ್ರಮೆಯ ಹರಿಸು 3 ಆರು ವೈರಿಗಳು ಮಿತಿಮೀರಿರುವರು ಕೇಳು ನೀರಜಾಕ್ಷಯನ್ನನಾರು ಕಾಯುವರೊ ಧೀರ ನೀನೇ ಪೇಳು 4 ಪೊರೆಯದೆ ಬಿಡದಿರು ಶಿರಿನುತಚರಣವನ್ನು ತೋರು ನರಸಖ ನಿನ್ನಯ ಕರುಣವ ಬೀರು 5
--------------
ಸಿರಿವತ್ಸಾಂಕಿತರು
ಪಾದ ಸೇವೆಯೊಳಿರುವಂತೆ ಕಾವುದೆನ್ನಯ ಮನ ಪಾವನ ಮೂರುತಿ ಹರಿಯೇ ಪ ಒಲವಿನ ಸಂಸಾರ ಸ್ಥಿರವೆಂದು ನಂಬುತ್ತ ಬರಿದೆ ಪೋಗದೆ ನಿಜದರಿಪಿನೋಳ್ ನಿಲಿಸೆನ್ನಾ ಹರಿಯೇ 1 ಎಂದು ಕುಂದದ ನಿತ್ಯಾನಂದವಾಗಿಹ ನಿಜ ಛಂದದೊಳಿರುವತ್ಯಾನಂದದೊಳ್ ನಿಲಿಸೆನ್ನಾ ಹರಿಯೇ 2 ಮರೆಯವೆ ಇರುವಂತೆ ಎರಕವಾಗಿಸೆನ್ನಾ ಹರಿಯೇ 3 ಆ ಸ್ವಪ್ರಕಾಶದಿ ಸೂಸದೆ ನಿಲುವಂತೆ ಭಾಸುರ ಘನಸುಖವಾಸದೊಳ್ ನಿಲಿಸೆನ್ನಾ ಹರಿಯೇ 4 ಭಾವಭಾವನೆಯಲ್ಲಿ ತೀವಿ ನಾರಾಯಣಾ ಪಾವನ ಗುರುಮೂರ್ತಿ ಸೇವೆ ಶಾಂತಿಯನೀಯೋ ಹರಿಯೇ 5
--------------
ಶಾಂತಿಬಾಯಿ
ಪಾದ ಮಾನಸಾನಂದಿಸೋ ಶತ ಭಾನುತೇಜನೇ ಪ ಹನ ಚಿತ್ರಭಾನು ದನುಜಾರಿ ಹರಿ ಅ.ಪ ಮಾಡುವೆನಯ್ಯ ಇಂದುವದನಾ ಶ್ರೀ ಪುಲಿಗಿರಿ ಮಂದಿರ ಮಂದರಧರ 1 ದುಷ್ಟಮನುಜರ ಕೂಡಿ ಭ್ರಷ್ಟನಾದೆನು ಇಷ್ಟಫಲ ದಾಯಕ ತ್ರಿವಿಷ್ಟಪಾಧಿಪಾನುಭವ್ಯ ಅಷ್ಟಸಿದ್ಧಿಪ್ರದ ನಿನ್ನ ಗಟ್ಟಿಯಾಗಿ ನಂಬಿದೆನು 2 ಉರಿಹಸ್ತ ಬೇಡಲು ಲೋಕಮೋಹಿನಿಯ ರೂಪು ಸ್ವೀಕರಿಸಿ ಶಿವನಕಾಯ್ದೆ 3 ಕೀರ್ತಿ ನೋಡಿಸೋ ನಿನ್ನಯಮೂರ್ತಿ ಬೇಡಿಸದಿರು ನಿನ್ನ ನಾಡಿನೊಳಗಾಡಿಸೋ ಮುರಾರಿಹರಿ4 ಶುಭ ವೇಷವಿಪುಲ ದುರಿತಗಣ ಶೋಷಣ ಶ್ರೀವರದವಿಠಲ 5
--------------
ಸರಗೂರು ವೆಂಕಟವರದಾರ್ಯರು
ಪಾದುಕೆಗಳ ಭಾಗ್ಯಶ್ರೀಗುರುವು ಶ್ರೀರಂಗಪಟ್ಟಣಕಾಗಿ ಬಿಜಯಂಗೈದು ಮಠದಲಿಯೋಗಪೀಠದಲಿರ್ದ ಸಮಯದಿ 'ಪ್ರಕುಲ ಬಂದುಆಗ ಚಾತುರ್ಮಾಸ್ಯ ಒದಗಿರಲಾಗಿ ಪ್ರಾರ್ಥನೆಗೈದ ಕಾರಣರಾಗರ'ತನು ವಾಸುದೇವನು ನೆಲಸಿದನು ದಯದಿ 1ತೀರಿ ವ್ರತವನು 'ಶ್ವರೂಪದ ದಾರಿಯಲಿ ಸಂಚರಿಸಿ ಪುನರಪಿಮಾರಹರನಾಲಯದ ಮುಂದಣ ಮಠಕೆ ಬಂದಿರುತಾಸಾರಿ ಸಾಯಂಕಾಲದಲಿ ಕಾವೇರಿಯಲಿ ಸ್ನಾನವನು ಮಾಡಿಯೆನಾರೆಯಣನಾಮವನು ಸ್ಮರಿಸುತ ಬಹುದ ನಾಂ ಕಂಡೆಂ 2ಕಂಡ ಬಳಿಯಲೆ ಭಕ್ತಿಭಾವದಿ ದಂಡದಂತಾನೆರಗೆ ಕೃಪೆುಂಮಂಡೆಯೆತ್ತೇಳಾರು ನೀನೆಂದಾಗ ಮಂದಲಿಸಿಪುಂಡಾರೀಕಾಂಬಕನ ದಾಸನೆ ಗಂಡುಗಲಿಯಾಗಿಹೆಯ ಕ್ಷೇಮವೆಕಂಡೆ'ಂದಿಗೆ ಬಹುದಿವಸಕೆಂದಾಗ ನುಡಿಯುತಿರೆ 3ಆ ಬಳಿಯ ಮನೆುರಲು ಮಾಳಿಗೆ ಶೋಭಿಸುತ ಬೆಳುದಿಂಗಳಿಗೆ ಬಲುಗಾಬರಿಯ ಸಂದಣಿ ಮಹಾನವ'ುಯ ಮಹೋತ್ಸವದಾಕಾಬರಿದ ಮೇಲಿದ್ದ 'ಪ್ರನು ತಾ ಭುಜಿಸಿ ತಾಂಬೂಲಶೇಷವತೂಬಿರಿಯೆ ಮುಕ್ಕುಳಿಸಿ ಗುರುಶಿರದೊಳಗೆ ಬಿದ್ದುದದು4ಹರಹರಾಗುರುಕೃಪೆಯೆಕೋಪವುಬರಬಹುದುನಿನಗೆನುತನುಡಿಯಲು ಗುರುವು ಕಂಡಾ ಬಳಿಯ ಕೇಶವಮೂರ್ತಿಯೆಂಬವನುಅರಿಯದಾದೈ ಮೇಲೆ ಕುಳಿತೀ ಬರುವ ಯತಿಗಳ ನ್ಯಾಯವೇಯೆಂದರುಹಲಾ ದ್ವಿಜಬೆದರಿ ಧುಂ'ುಕ್ಕಿದನು ಭೂತಳಕೆ 5ತಪ್ಪಿದೆನು ದಮ್ಮೈಯ ಗರ್ವವನೊಪ್ಪಿಕೊಳಬೇಕೆನಗೆ ಗತಿಯೇನಪ್ಪುದೋ ಕಂಗಾಣದಾದೆನು ವಾಸುದೇವಾರ್ಯಾತಪ್ಪಿದೆನು ತಪ್ಪಿದೆನು ತಪ್ಪಿದೆ ತಪ್ಪಿದೆನು ತಪ್ಪಿದೆನೆನುತ್ತಲಿಧೊಪ್ಪನಡಗೆಡ'ದರ ತನುವನು ನೋಡ್ದ ಗುರುವರನು 6ತಂದೆ ಬಾ ಯನ್ನಯ್ಯ ಬೆದರದಿರೆಂದಭಯವನು ಕೊಡುತ ಕರುಣಾಸಿಂಧು ವಾಗಮೃತದಲಿ ನೆನಸಿದ ಪರಿಯನೇನೆಂಬೆಕಂದನಪ್ಪನು ಸುಗುಣವಂತನು ಮುಂದಣೀ ದಿವಸಕ್ಕೆ ನಿನಗೆನುತೆಂದು ಮತ್ತವರಾಡಿದುಕ್ತಿಯನೆಂತು ಬಣ್ಣಿಪೆನು 7ಸಹಜ ತಂಬುಲ ಶಿರದ ಮೇಲಕೆ ಬಹುದು ಗುರುಕೃಪೆ ರೂಪವೆತ್ತೀ''ತ ಪ್ರಾಯಶ್ಚಿತ್ತಗೈದುರು 'ರತಿಯನು ಕಲಿಸಿಸಹಜ ಸುಖಸಂ'ತ್ಪದ' ತಾ ಬಹುದುನೊದಗಿಸಿತಾಗಿ ಮುಂದೀಬಹು ಜನರ ಗ್ಠೋಯನು ಬಿಡಿಸಿದುದೆಂದರುತ್ತರವಾ 8ಇರುವುದನುಚಿತ ಜನಸಮೂಹದಿ ಬರುವುದನುಚಿತ ಬರದ ಮಾರ್ಗದಿಕರದು ಮನ್ನಿಸಿ ಜನರ ಕ್ಷೇಮವ ಕೇಳ್ವುದನುಚಿತವುಅರಿಕೆದಟ್ಟಿತು ಮನಕೆ ಗುರು ತಾನುರುಹು ಸಂನ್ಯಾಸವನು ಥೂಯೆಂದಿರದೆ ಮೋರೆಯ ಮೇಲೆ ತಾನುಗುಳಿದನು ಸಿದ್ಧ'ದೂ 9ಪ್ರೇಷೆ ತಾ ಜ್ಞಾನಕ್ಕೆ ಮಾತೃವು ಪ್ರೇಷೆಯೇ ಜ್ಞಾನಕ್ಕೆ ತಂದೆಯುಪ್ರೇಷೆ ಭವಸಾಗರವ ದಾಂಟಿಪ ನಾವೆ ಸುಖಕರವೂಪ್ರೇಷೆ ಸರ್ವೋತ್ಕರುಷವಪ್ಪುದು ಪ್ರೇಷೆಯನ್ನುಚ್ಚರಿಸಿ ಮತ್ತಭಿಲಾಷೆುಂ ಜನಸಂಗಗೈಯ್ಯಲ್ಕಾಯ್ತೆ ನಿಗ್ರಹವೂ 10ಭಲರೆ ಗುರುವರ ಧನ್ಯನಾದೆನು ಮರೆತೆ ತಪ್ಪಿದೆ ಮುಂದೆ ಜನರೊಳಗಿರೆನು ಗುಹೆಯನು ಪೊಕ್ಕು ಮೌನವ್ರತ ಸಮಾಧಿಯಲಿುರುವವೋಲ್ ವೈರಾಗ್ಯವನು ನೀ ಕುರುಣಿಸಿದೆಯೆಂದೆನುತ ನಗುತಲಿಹರುಷದಿಂ ಕಾವೇರಿಗೈತಂದನು ಗುರೂತ್ತಮನು11ಸಾ'ರದ ಸಂಖ್ಯೆಯಲಿ ಮೃತ್ತಿಕೆ ುೀವುದಕ್ಕೆನ್ನುವನು ನೇ'ುಸಿಭಾ'ಸುತ ಪ್ರಣವವನು ಸ್ನಾನವ ಮಾಡಿ ನಿಯಮದಲಿಭಾವವಳಿಸಿ ಕಮಂಡಲವ ಜಲಕೀವ ಸಮಯದಲುಗುಳ್ದ 'ಪ್ರನಭಾವದಲಿ ನಡುಗದಿರು ಸುತನಹನೆಂದ ಗುರುವರನು 12ಏನನೆನ್ನುವೆನಾ ದ್ವಿಜನು ಸುತ 'ೀನನತಿ ಯತ್ನಗಳ ಮಾಡುತಭಾನು'ಂಗೆರಗುತ್ತಲಿದ್ದನು ಪುತ್ರಕಾಮುಕನುಏನು ಕೃಪೆಯೋ ತಿಂಗಳೆರಡಕೆ ಮಾನಿನಿಯು ತಾ ಗರ್ಭದಾಳಿಯೆಸೂನುವನು ತಾ ಪಡೆದಳೀ ಗುರು ಪೇಳ್ದ ದಿವಸದಲಿ 13'ುಂದು ಕಾವೇರಿಯಲಿ ಗುರುವರ ಬಂದು ಮಠಕಾಕ್ಷಣವೆ 'ಪ್ರರಸಂದಣಿಯ ನೆರೆ ಕಳು'ಯೆನಗಪ್ಪಣೆಯ ಕೊಡಲಾಗಿಬಂದು ಮನೆಯೊಳಗಿದ್ದು ರಾತ್ರಿಯು ಸಂದ ಬಳಿಕಾನೈದಿ ನದಿಯೊಳು'ುಂದು ಗುರವರಗೆರಗಲೈದಿಯೆ ಕಾಣೆ ನಾನಲ್ಲಿ 14ಸ್ನಾನಕೈದಿದರೇನೊ ಬಂದರೆ ಕಾಣುವೆನು ನ'ುಸುವೆನುಯೆಂದೇನಾನು ನೋಡಿದೆ ಬಾರದಿರೆ ಮಧ್ಯಾಹ್ನ ಪರಿಯಂತಭಾನು'ಂಗಘ್ರ್ಯವನು ಕೊಟ್ಟು ಮಹಾನುಭಾವರ ನೆನನೆನದು ದುಂಮಾನದಿಂದಿರುತಿದ್ದೆ ಸಾಯಂಕಾಲ ಪರಿಯಂತ 15ಇರುಳಿಗೂ ಬರದಿರಲು ಪಾದುಕೆುರಲು ಪೂಜಿಸಿ ನ'ುಸಿಯಗಲಿದಪರಮ ತಾಪದಿ ಕುದಿದು ರೋದನಗೈದೆ ಪಂಬಲಿಸಿಗುರುವರನೆ ನಿನ್ನಂಘ್ರಿಕಮಲದ ದರುಶನವು ಮರೆಯಾಯ್ತೆ ದೀನನಕರೆದು ಮನ್ನಿಸಿ ಕಾಯ್ದೆಯಲ್ಲೈ ವಾಸುದೇವಾರ್ಯಾ 16ಏನು ಗತಿ ಮುಂದೆನಗೆ ಮಾರ್ಗವದೇನನುಗ್ರ'ಸಿಪ್ಪ ಮಂತ್ರ 'ದೇನು ಜಪಿಸುವ ಮಾನವೆಂತಿದರರ್ಥವೇನಹುದುನಾನರಿಯದವನೆಂಬುದನು ನೀ ಜ್ಞಾನದ್ಟೃಯೊಳರಿದು ರಕ್ಷಿಸುದೀನನನು ಕೈ'ಡಿದು ಬಿಡುವರೆ ವಾಸುದೇವಾರ್ಯಾ 17ಭವಸಮುದ್ರದಿ ಮುಳುಗುತೇಳುತ ಲವಚಿ ತೆಗೆವರ ಕಾಣದಳಲುತಕ'ದು ತಮ ಕಂಗಾಣದಿರೆ ನೀನಾಗಿ ದಯತೋರಿಭವಭವಾಂತರದುರಿತಗಳ ಪರಿಭ'ಸಿಯಭಯವನಿತ್ತು ಸಲ'ದದಿ'ಜವಂದ್ಯನೆಯಗಲಿದೈ ಶ್ರೀ ವಾಸುದೇವಾರ್ಯಾ 18ಅರಿಯೆ ಹೃತ್ಕಮಲದಲಿ ಭಾ'ಪ ಪರಿಯನಿದಿರಿಟ್ಟಿರಲು ನೀ ಶುಭಕರದ ಮೂರುತಿಯಾಗಿ ಗ್ರಂಥಾರ್ಥಗಳ ಶೋಧಿಸಿಯೆಅರಿಯಬೇಕೆಂಬಿಚ್ಛೆ ಬರಲಿಲ್ಲುರುವ ನಿನ್ನಯ ವಾಗಮೃತ ರಸಸುರಿಯೆ ತಾನೇ ಪಾನಗೈಯುತ ಮತ್ತನಾಗಿದ್ದೆ 19ಜೀ'ಸುವೆ ನಾನೆಂತು ಧರೆಯೊಳು ಪಾವನದ ಮೂರುತಿಯ ಕಾಣದೆಭಾವದಲಿ ಸುಖಗೊಳಿಪ ವಾಕ್ಸುಧೆಯರತ ಕಾರಣದಿಂದೇವ ಮರೆಯಪರಾಧ'ದ್ದರು ಕಾವ ಕರುಣೆಗೆ ಕೋಪವೇ ಸಂಜೀವ ನೀ ಭುವನಕ್ಕೆ ತೋರೈ ವಾಸುದೇವಾರ್ಯಾ 20ಮೊರೆುಡುತಲೀ ರೀತಿುಂದಿರುತಿರಲು ಪಾದುಕೆಗಳಿಗೆ ನ'ುಸುತಬರಲು ಪಲ್ಲವ ಬಾಯ್ಗೆ ಗುರುಕೃಪೆುಂದ ತಾನಾಗಿತಿರುಪತಿಯ ವೆಂಕಟನೆ ಮೂರ್ತಿಯ ಧರಿಸಿ ಯತಿವರನೆನಿಸಿದುದನಾಹರುಷದಿಂ ಪಾಡಿದೆನು ಕೀರ್ತನ ನೆವದಿ ಮೈಮರೆದೂ 21
--------------
ತಿಮ್ಮಪ್ಪದಾಸರು
ಪಾಪೇಂದ್ರಿಯಗಳಿಗೆರಗಿ ಪರಹಿತಾರ್ಥವ ಮರೆದು ವ್ಯಾಪಾರ ವಿಷಯಂಗಳಲ್ಲಿರೆ ಯಮನೊಯ್ದು ಕೋಪಾಟೋಪದಲಿಂದ ದಂಡಿಸಿ ತಮಸಿನ ಕೂಪದಲ್ಲಿ ಹಾಕದಲೆ ಬಿಡುವನೆ ಮರುಳೆ ಪ ಉಡಿಗೆ ತೊಡಿಗೆ ಇಡಲು ಮಡದಿಯಳ ಮುಖ ನೋಡಿ ಕಡು ಹಿಗ್ಗಿ ಹುಗ್ಗಿ ಪಡಗದಂತೆ ಹಿರ್ರನೆ ಪಿಡಿದು ಗಲ್ಲವ ಮುಟ್ಟಿ ಮುಡಿಗೆ ಮುಡಿವಾಳವನು ತಡಿಯದಲೆ ಮುಡಿಸುತ್ತಲಿ ಕಕ್ಕಸ ಕುಚ ವಡನೊಡನೆ ನೋಡಿ ಸುಖಬಡುತಾ ಬಿಡದೆ ಕಾಳ್ಯಾಡುವುದು ಸುಡುಸುಡು ಮಾಡಿದರಿನ್ನಾವ ಗತಿ ಮರುಳೇ 1 ನೆಂಟರು ಮನೆಗೆ ಬರಲು ವಂಟಿಯಂತೆ ಮೊಗವ ಸೊಂಟ ಮಾಡಿಕೊಂಡು ಕಂಠವನು ತರ್ಕೈಸಿ ಕುಂಟವಾರ್ತೆಯ ಕೇಳಿ ಬಂಟನು ನಾನೆಂದು ತೊಂಟತನ ಬಗೆ ತೋರುತಾ ಉಂಟಾದ ಗೋಧಿಯ ಸೊಂಟೆ ಬೆಲ್ಲನು ತಂದು ಹೆಂಟಿಯಂತೆ ಹದಿನೆಂಟು ಕಡುಬನೆ ಕೊರಿಸಿ ವಂಟಿಲಿ ಕುಳಿತು ಸುಂಡಿಗೆಯನ್ನು ಚಾಚುತ್ತಾ ಎಂಟು ಮಡಿಸದೆ ವಾರ್ತಿ ಪೇಳುತಲಿ ಮರುಳೇ 2 ಇಂದು ನಮ್ಮನೆ ಪ್ರಸ್ತÀವೆಂದು ಆರಾದರೂ ಬಂದು ಪೇಳಲು ಊರ ಹಂದಿಯಂತೆ ಕಾಯಿದು ಒಂದು ಕಾಳು ತಿನದೆ ಸಂದಿಗೊಂದಿ ಸುತ್ತಿ ಸಂಧ್ಯಾಕಾಲ ವಾನರಾಗುತ್ತ ಚಂದದಿಂದ್ಯುಕ್ತಿಯೊಳು ದ್ವಂದ್ವದಲಿ ಕುಳಿತಿವರು ತಂದೆ ತಾಯಿ ಕಡೆ ಬಂಧುಬಳಗವೆಂದೂ ಒಂದಿಷ್ಟು ಕಡಿಮೆ ತಿನ್ನದೆ ಪರರ ಒಡವೆಯನು ತಿಂದು ಡರ್ರನೆ ತೇಗಿ ನಸುವ ನಗುವ ಮರುಳೇ3 ನಾಡಾಡಿ ಚಾಡಿ ಮಾತಾಡಬೇಕಾದರೆ ಖೋಡಿ ನಾಲಿಗೆ ದೊಡತಾಗಿ ಬಾಹಿನೀ ನಿಡಿ ಲಟಲಟವೆನುತಾ ಕೋಡಗದಂತೆ ಕುಳಿತು ಹೇಡಿ ಪರನಿಂದೆಗಳಿಗೆ ಬಾಡದಲೆ ಬತ್ತದಲೆ ಮಾಡಿದ ಮಹಾಪುಣ್ಯ ಕಾಡಿಗೊಪ್ಪಿಸಿ ಕೊಟ್ಟ ಮೂಢ ಗಾರ್ಧಬನಂತೆ ಓಡಾಡಿ ಬಳಲಿ ನಾಡಾಡಿ ಸುದ್ದಿಗಳಿಗೆ ಬಿಡಿ ಬಿಡಿಂದಾ ತಿರುಗುವಾ ಹೀನ ಮರುಳೇ 4 ಸಂಸಾರವೆಂಬಾ ಸಾರಾ ಸಾಗರ ಮಧ್ಯ ಹಿಂಸನಾಗದೆ ಬಿಟ್ಟು ಇದರಂತೆ ಭಕುತಿ ಮರು ದಂಶ ಗುರು ಮಧ್ವಮುನಿರನ್ನನಾ ಶ್ರೀ ಚರಣ ಸಂಶಯವಿಲ್ಲದಲೆ ನಂಬಿ ಸಂಸಾರ ಉತ್ತರಿಸು ಸಂದೇಹ ಇದಕಿಲ್ಲ ಕಂಸಾಸುರನ ಪ್ರಾಣಹರ ಎನ್ನ ಮನಸ್ಸಾ ಹಂಸ ಶ್ರೀ ವಿಜಯವಿಠ್ಠಲನ್ನ ಪಾದದಾ ಪಾಂಶವೊ ಮಾಡಿ ಗತಿಯಲಿ ಬಾಳು ಮರುಳೇ5
--------------
ವಿಜಯದಾಸ