ಒಟ್ಟು 1764 ಕಡೆಗಳಲ್ಲಿ , 105 ದಾಸರು , 1296 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೃಂದಾವನದಿ ನಿಂದಿಹನ್ಯಾರೆ ಗೋವಿಂದನಲ್ಲದೆ ಚಂದಿರವದನೆ ನೋಡುವ ಬಾರೆ ಪ. ಕೋಟಿಸೂರ್ಯ ಪ್ರಕಾಶ ಕಿರೀಟದ ಬೆಳಕಿದು ಹಾಟಕಾಂಬರಧರನ ನೋಟದಿ ಸುಖಿಸೆ ಕೋಟಲೆ ಸಂಸಾರ ದಾಟಿ ಪೋಗಿ ಕೃಷ್ಣ ನಾಟ ನೋಡಿ ಮನ ಕವಾಟವ ಬಿಚ್ಚೆ ಪೂರ್ಣ ನೋಟದಿ ನೋಡುವ 1 ರಂಗನಾ ಕೊಳಲ ಬೆಳದಿಂಗಳ ಸೊಗವಿಲೆ ಮ್ಮಂಗವ ಅಂಗಜನೈಯ್ಯಗೀಯುತೆ ಕಂಗಳಿಗ್ಹಬ್ಬವೆ ರಂಗನ ನೋಡುತೆ ಗಂಗಾಜನಕನ ವಲಿಸಲು ನಮಗೆ ಹಿಂಗದ ಮುಕುತಿಯ ರಂಗಗೊಡುವ ಬಾರೆ 2 ಜಯ ಜಗದೀಶನ ಜಯ ರಮಕಾಂತನ ಜಯ ಕರ್ಮನೀಯನ ಜಯ ಶ್ರೀ ಶ್ರೀನಿವಾಸನ ಜಯ ಯದು ತಿಲಕನ ಜಯ ಕೂಡಾಡುವ ಜಯಪ್ರದನಾಗುತೆ ಜಗದಿ ಪೊರೆವ ಬಾರೆ 3
--------------
ಸರಸ್ವತಿ ಬಾಯಿ
ವೆಂಕಟಾಚಲ ನಿಲಯ ಪಿಡಿಯೆನ್ನ ಕೈಯ ಪಂಕಜಾಲಯ ಸುಪ್ರೀಯ ಪ ಅಹಿ ಕಂಕಣನುತ ಪದ- ಪಂಕಜ ತೋರೊ ಮೀನಾಂಕನ ಜನಕ ಅ.ಪ. ಪತಿತ ಪಾವನ ಮೋಹನ, ಪಾಲಿಸೊ ಎನ್ನ ಸತತ ಬಿಡದೆ ನೋಡೆನ್ನ ಹಿತರಹಿತರಾದವರನ್ನ ಪೊರೆದಳಿದೆ ಘನ್ನ ನತಜನರಿಗೆ ಪ್ರಸನ್ನ ದಿತಿಸುತ ತತಿಸಂಗತಿಯಲಿ ಮಥಿಸಲು ವನಧಿಯ ಅತಿ ಸಮ್ಮತಿಯಲಿ ಚತುರ ಧರಿಸಿ ಪರ್ವತ ಸುರತತಿಗ- ಮೃತ ವುಣಿಸಿದ ಶಾಶ್ವತಗತಿನಾಥ 1 ಸತಿಯ ಕಾಯಿದ ವಿನೋದ ಸಾಮಜವರದ ಚತುರದಶ ಲೋಕಾಧಿನಾಥ ಗತಿ ನೀನೆ ಮಹಾಪ್ರಸಾದ ಪರಮಮೋದ ಅತಿಶಯದಿ ಪೊಳೆವ ಪಾದ ಶತಪತ್ರವು ಹೃದ್ಗತವಾಗಲಿ ಉ- ನ್ನತ ಮಹಿಮನೆ ಕೀರುತಿವಂತನೆ ಅ- ಪ್ರತಿಭಾರತಮಲ್ಲ ಮೂರವತಾರಗೆ ಅತಿಪ್ರಿಯನೆನಿಪ ಮೂರತಿ ಚತುರದೇವ 2 ಸ್ಥಿತ ಮನ ಮಾಡೋ ಭವಭಂಗ ಸಂಗ ನಿಸ್ಸಂಗ ಚ್ಯುತಿ ದೂರ ಶೌರೀ ಕಾಳಿಂಗ- ದುರಿತ ಮಾತಂಗ-ಮರಿಗೆ ಸಿಂಗ ತುತಿಪೆ ಕರುಣಾಂತರಂಗ ಕ್ಷಿತಿಯೊಳಗಹಿ ಪರ್ವತನಿವಾಸನೆ ಖರೆಗೊಳಿಸುವ ದುರ್ಮತಿಯನು ತೊಲಗಿಸಿ ತ್ವತು ಪಾದದಲಿಡು ಮತಿಯಲ್ಲದೆ ತಿರು - ಪತಿ ವಿಜಯವಿಠ್ಠಲ ಇತರವನರಿಯೆ 3
--------------
ವಿಜಯದಾಸ
ವೆಂಕಟೇಶಾಯ ನಮೊ ವಿಜಯವಿಠ್ಠಲನೆ ನಮೊ | ಪಶುಪತಿ ಗುರು ನಮಿತ ಪಾದಾ | ಪಂಕಜವ ಪೊಗುಳವೆನು ಪರಿಪಾಲಿಸೆನ್ನ | ಕಿಂಕರನ ಕಿಂಕರರಿಗೆ ಕಿಂಕರನೆಂದೆನಿಸೊ ಪ ಕಾರ್ಯವಾಕಾರ್ಯವನು ತಿಳಿಯಲೊಲ್ಲದ ಕಾಮಾ | ತೂರ್ಯದಲಿ ಪಾಪಗಳೆ ರಚಿಸಿ | ಬೆಂಬಿಡದದೆ ಬಲು | ಧೈರ್ಯವಂತನು ನೀನಾಗಿ | ಧೈರ್ಯವಾಗಿದ್ದಾಗ ಜಡಜೀವ ಜಂತುಗಳು | ವೀರ್ಯದಲಿ ಪೊಕ್ಕು ದುಃಖಾತಿಶಯದಲಿ | ದುರ್ಯೋನಿ ಮುಖದಿಂದ ಜನನ ಜನಿತನಾದೆ | ಮರ್ಯಾದೆಗಳು ಇಲ್ಲದೆ ಹರಿಯೇ 1 ಕ್ಷಿತಿಯೊಳಗೆ ಬಂದು ಕಾಮ ಕ್ರೋಧ ಸಂಮೋಹ ಶ್ರುತಿ ವಿಭ್ರಮ ಬುಧ್ಧಿನಾಶ ರಾಗದ್ವೇಷ | ಪಥದಲಿ ವಿಷಯೇಂದ್ರಿಗಳು ಆತ್ಮವಶವಾಗಿ ಹಿತದ ಪ್ರಸಾದದಿಂದ | ಗತಿ ಅದರಿಂದ ಈ ಸಂಖ್ಯೆಯಿಂದಲಿ | ಹತವಾಗಿ ಪೋಗಿ ಮರಳೆ ದೇಹವನು | ತೆತ್ತು ಗತಿ ಪುಣ್ಯವಂತನೈದೆ 2 ಇಂದಿಗಾ ಇವನ ಮನೆ ತಂದೆ ತಾಯಿಯ ದಿವಸ | ಇಂದಿಗಾ ಇವನ ಮನೆ ಹತ್ತ ಹತ್ತನೆ ದಿವಸ | ಹವ್ಯ ಕವ್ಯ ಜಾವಳ | ಇಂದಿಗಾ ಮದುವೆ ಮುಂಜಿ | ಇಂದು ನಿಮ್ಮನೆ ಪ್ರಸ್ತವೆಂದು ಕೇಳುತಾ ಪೋಗಿ | ಬಂದವರನನ್ನುಸರಿಸೆ ಬಾಗಿಲಾ ಮುಂದೆ ಕುಳಿತು | ನೊಂದೆ | ಬಂದೆನೊ ಕೊನೆಯಲಿ 3 ಆರಾದರೂ ಬಂದು ಕಾಸು ಕೊಡದಿದ್ದರೆ | ದೂರುವೆನೊ ನೂರಾರು ಕೇರಿ ಕೇರಿಯ ತಿರಗಿ | ಸಾರೆ ಅವರಲ್ಲಿದ್ದ ಅವಗುಣಂಗಳ ಎತ್ತೆ | ಬೀರುವೆನು ಬೀದಿಯೊಳಗೆ | ವಾರಣದಿಂದಲಿ ಕರೆದು ಆವನಾದರು ಬಂದು | ಶಾರೆ ಭತ್ತವ ಕೊಡಲು ಕೊಂಡಾಡುವೆ ಕುಲ ಉ | ಪೋರ ಬುದ್ಧಿಗಳ ಬಿಡದೆ4 ಪರವಣಿ ಪುಣ್ಯಕಾಲಾ ದಿವಸ ಬಂದರೆ ತಿಳಿದು | ಪರಮಾರ್ಥವೆಂದರಿದು ಉತ್ತಮರ ಬಾ ಎಂದು | ಕರೆದು ತುತ್ತನ್ನ ಮೇಲೊಂದು ದಕ್ಷಿಣೆ ಕಾಸು | ಹರುಷದಿಂದಲಿ ಕೊಡದಲೆ ಪರರ ಹಳಿಯುತ್ತ ಏನೇನು | ಇಟ್ಟುಕೊಂಡು ಮನಿಗೆ ಬಂದು | ಪರರರಿಯದಂತೆ ಮಂಚದ ಕೆಳಗೆ ಹೂಳಿ ಈ | ಪರಿಯಿಂದ ದಿನ ಹಾಕಿದೆ5 ತೊತ್ತು ಓರ್ವೆಯಲ್ಲಿ ಈ ಹೊತ್ತು ಪೋಗಾಡಿಸಿದೆ | ಉತ್ತಮರ ಬಳಿಯಲಿ ಕುಳಿತು ಸತ್ಕಥೆಗೆ ಕಿವಿ ಇತ್ತು ಕೇಳದಲೆ ಕೆಲಸಾರೆ ಬೇಸರಿಕೆಯಲಿ | ಅತ್ತಲಿತ್ತಲು ವ್ಯರ್ಥ ಸುತ್ತಿ ಸುಮ್ಮನೆ ಸುದ್ದಿ ಬರಿಗಂಟುಸಟೆ | ಮಾತು ಎತ್ತುವನೊ ಅನ್ನಿಗರನ ನ | ಎಣಿಕೆ ಮಾಡದಲೆ | ಉನ್ಮತ್ತದಲಿ ಕೆಟ್ಟೆನಯ್ಯಾ6 ಪರಿಯಂತ | ವೇದೆನೆ ಬಟ್ಟೆನೊ ದುಷ್ಟ ಹಾದಿಯಲಿ ಸಿಗಬಿದ್ದು | ಈ ದುರಾಚಾರಗಳ ಗಣನೆ ಮಾಡದೆ ಇನ್ನು | ಕಾದುಕೊ ಕಮಲನಾಭಾ | ಹೋದಪರಾಧಗಳ ನೋಡದಲೆ ದಯದಿಂದ | ಆದರಿಸಿ ನಿನ್ನ ದಾಸರ ಸಂಗತಿಯನಿತ್ತು | ಪಾದವನು ಕಾಣಿಸಯ್ಯಾ7
--------------
ವಿಜಯದಾಸ
ವೇಳೆಗೊದಗಯ್ಯ | ವೇಳೆ ಬಂದು ಒದಗಿದೆ | ಪರಿಹರಿಸೊ ನೀ ಪ ಬಳಗುಳ್ಳಿಭಕುತರು ಬಳಲು ತಿರುವದ ಕಂಡು |ಕಳವಳಿಕೆಯಿಲ್ಲದೆ ಕಳೆವರೆ ಕಾಲವ 1 ಮಳಲು ಹಸಿಯನಗಲಿದಂತೆ ದಾಸರಿಗತಿಶಯವ |ದಣಿಸಿದರೆ ಬಳಿಕಾರುಳಿಸುವರೊ ? 2 ಹಲವ ಹೆತ್ತ ತಾಯಿ ಮೊಲೆ ಹಾಲನುಣಿಸದೆ |ನೆಲೆಯ ದೋರಿ ನಿನ್ನಲಿ ನಿಲಿಸಯ್ಯ ರುಕ್ಮನ 3
--------------
ರುಕ್ಮಾಂಗದರು
ವೈಷ್ಣವನಾರೆಂದು ದೃಷ್ಟಿಸಿ ಸೃಷ್ಟಿಯೊಳು ವಿಷ್ಣುನರಿತವನೆ ವೈಷ್ಣವನು| 1 ಭಕ್ತಿರಸದೊಳು ಮುಣುಗಿ ಭಕ್ತಿಗೈದುವ ಗತಿಯ ಯುಕ್ತಿ ತಿಳಿದವನೆ ವೈಷ್ಣವನು 2 ಹರಿ ಪರಂದೈವೆಂದು ಹರಿಯ ಕೊಂಡಾಡುತಲಿ ಹರಿಯ ನೆನೆಯುವನೆ ವೈಷ್ಣವನು 3 ಹರಿ:ಓಂ ತತ್ಸದಿತಿಯೆಂಬ ಹರಿವಾಕ್ಯವನು ಅರಿತವನೆ ಪರಮ ವೈಷ್ಣವನು 4 ಹರಿಧ್ಯಾನ ನೆಲೆಗೊಂಡು ಹರಿನಾಮ ಬಲಗೊಂಡು ಹರಿಯ ಸ್ಮರಿಸುವವನೆ ವೈಷ್ಣವನು 5 ಪರದೆ ಇಲ್ಲದೆ ಪಾರ ಬ್ರಹ್ಮಸ್ವರೂಪನು ಗುರುತ ಕಂಡವನೇ ಪರಮ ವೈಷ್ಣವನು6 ಗುರುಕೃಪೆಯಿಂದ ಪರಗತಿ ಸಾಧನವು ಮುಟ್ಟಿ ಅರಿತು ಬೆರೆದನೆ ಪರಮ ವೈಷ್ಣವನು 7 ಮೂಲ ಮೂರುತಿಗ್ಯಾಗಿ ಮೇಲಗಿರಿಯನೇರುವ ಕೀಲ ತಿಳಿದವನೆ ವೈಷ್ಣವನು 8 ಉಂಟಾಗಿ ಇರುಳ್ಹಗಲಿ ಗಂಟ್ಹಾಕಿ ಹರಿಪಾದ ಬಂಟನಾದವನೆ ವೈಷ್ಣವನು 9 ಕಂಟಕ ನೀಗಿ ಮೂರು ಬಲೆಯನು ದಾಟಿ ಮೀರಿ ನಿಂದವನೇ ವೈಷ್ಣವನು 10 ಆಶಿಯನೆ ಜರಿದು ನಿರಾಶೆಯನು ಬಲಿದು ಹರಿದಾಸನಾದವನೆ ವೈಷ್ಣವನು 11 ದ್ವಾದಶನಾದವನು ಸಾಧಿಸಿ ಕೇಳುತಲಿ ಭೇದಿಸಿದವನೆ ವೈಷ್ಣವನು 11 ಅನುದಿನ ಘನಸುಖವು ಅನುಭವಿಸುವನೆ ವೈಷ್ಣವನು 12 ವಿಷ್ಣುಭಕ್ತಿಯ ಸುಖವು ಮುಟ್ಟಿ ಮುದ್ರಿಸಿ ಪುಷ್ಟವಾಗಿದೋರುವನೆ ವೈಷ್ಣವನು 13 ವಿಷ್ಣುಮೂರ್ತಿಯ ಧ್ಯಾನ ದೃಷ್ಟಾಂತ ಮಹಿಪತಿಗೆ ಕೊಟ್ಟಾ ಗುರು ಪರಮ ವೈಷ್ಣವನು 14
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವ್ಯರ್ಥ ಹೋರಾಟವಲ್ಲದೆ ಇದು ನಿಜವಲ್ಲಾ ಕರ್ತೃ ಶ್ರೀಹರಿ ಮಾಡಿದರ್ಥವೆ ಸರಿ ಅಲ್ಲದೆ ಪ ಪುರಾಕೃತ ಸಂಚಿತಾರ್ಥ ಪುಣ್ಯ ಪಾಪಗಳಿಂದ ಪರಿ ಅನುಭವ ಬಡುತಾ ಇನ್ನೂ ಇರುವೆಯಲ್ಲದೆ ಘಣಿಯಲಿ ವಿರಂಚಿ ಬರೆದ ಭಂಗ ಬಡುತಲಿಷ್ಟು 1 ಎಂದೆಂದೂ ನಿನ್ನ ಹಿಂದೆ ಒಂದೂ ಬರುವುದಿಲ್ಲ ಮುಂದುಗಾಣದೆ ಇನ್ನು ಮೋಹಕೆ ಸಿಲುಕಿ ನಂದೆಂದು ಪರಿಯಿಂದ ಘಳಿಸಿದ ದ್ರವ್ಯದ ಬಿಂದಿಗೆ ದಾರೋ ನೀದಾರೋ ಪಾಮರ ಮೂಢಾ 2 ನನ್ನ ಹೆಂಡತಿ ಮಕ್ಕಳು ನನ್ನ ಮನೆ ಬಾಗಿಲು ನನ್ನ----ಯು ವೃತ್ತಿ ನನ್ನದೆಂದೂ ನಿತ್ಯ ಒಂದಾಡುವೆ ನೀದಾರೋ ಮೂಢಾ 3 ತಂದೆ ತಾಯಿಯ ಗರ್ಭದಿಂದ ಪುಟ್ಟಿರುವಂದೇ ತಂದೆಲ್ಲೊ ತಾಯೆಲ್ಲೊ ತಾನೆಲ್ಲೊ ಮರುಳೆ ಹಿಂದೆ ಆದವರ ಚರ್ಯವ ವಿವರಿಸಿ ನೋಡಿನೋಡಿ ಕುಂದು ಇಲ್ಲದೆ ಮುಕ್ಕುಂದನ ಸ್ಮರಿಸು ಗಾಢಾ 4 ಮಾಯಾ ಪ್ರಪಂಚದೋಳ್ ಮಗ್ನನಾಗಿ ಇನ್ನು ಕಾಯಾ ಅಸ್ಥಿರವೆಂದು ಕಾಣೋ----- ಶ್ರೀಯರಸ 'ಹೆನ್ನ ವಿಠ್ಠಲ’ರಾಯನ ಕರ್ಮ ಧ್ಯಾನವು ಬಿಟ್ಟು 5
--------------
ಹೆನ್ನೆರಂಗದಾಸರು
ವ್ಯರ್ಥದಲಿ ತೋರುವನೆ ತ್ರೈಲೋಕ್ಯಕರ್ತ ಭಕ್ತನಾದರೆ ಪರಮ ಮುಕ್ತಿ ಸೇರುವುದು ಪ ಉತ್ತಾನ ಭೂಪತಿಯ ಪುತ್ರನಂತಿರಬೇಕು ಸತ್ಯವೊಂದಿರಬೇಕು ಹರಿಶ್ಚಂದ್ರನಂತೆ ಭಕ್ತಿರಸವಿರಬೇಕು ಪ್ರಹ್ಲಾದನಂತೆ ಹಸ್ತವಿರಬೇಕು ಶ್ರೀರಾಮ ಭಕ್ತನಂತೆ 1 ವ್ರತವ ಮಾಡಲು ಬೇಕು ಅಂಬರೀಶನ ಪರಿಯ ಪಥವ ನಡೆಯಲು ಬೇಕು ವಿಹಗನಂತೆ ಶತಮುಖವ ರಚಿಸಿದರೆ ಪುರುಹೂತನಂತಿಹನು ಯತಿಯಾಗಬೇಕು ಗುರುಮಧ್ವಪತಿಯಂತೆ 2 ಗೀತಸೇವನೆ ಬೇಕು ನಾರದರ ತೆರನಂತೆ ಪ್ರೀತನಾಗಲು ಬೇಕು ಪಾರ್ಥನಂತೆ ನೀತಿಶಾಸ್ತ್ರವು ಬೇಕು ಶುಕಶೌನಕರಂತೆ ಖ್ಯಾತಿಯಿರಬೇಕು ರವಿಜಾತನಂತೆ 3 ಶುದ್ದನಾಗಿರಬೇಕು ಉದ್ಧವನ ತೆರನಂತೆ ಬದ್ಧನಾಗಿರಬೇಕು ಅಕ್ರೂರನಂತೆ ಹೊದ್ದಿಕೊಂಡಿರಬೇಕು ಫಣಿರಾಜನಂದದಲಿ ಮುದ್ದಾಗಿಯಿರಬೇಕು ಆ ವಿದುರನಂತೆ 4 ವೇದವೋದಲು ಬೇಕು ವ್ಯಾಸಮುನಿಯಂದದಲಿ ಆದರಿಸಬೇಕು ತಾ ಧರ್ಮನಂದದಲಿ ಪಾದಪೂಜೆಯು ಬೇಕು ಲಂಕಾಧಿಪತಿಯಂತೆ ಭೇದ ನೋಡಲು ಬೇಕು ವಸಿಷ್ಠನಂತೆ 5 ಸ್ಮøತಿಯ ನೋಡಲು ಬೇಕು ಪಾರಾಶರಂದದಲಿ ಮಿತಿಯಿರಲು ಬೇಕು ಆ ಭೀಷ್ಮನಂದದಲಿ ಜೊತೆಯಾಗಿಯಿರಬೇಕು ಪುಂಡರೀಕನ ತೆರದಿ ವ್ರತವಿರಲು ಬೇಕು ರುಕುಮಾಂಗನಂದದಲಿ 6 ದಾನ ಮಾಡಲು ಬೇಕು ಬಲಿಯ ಪ್ರೌಢಿಕೆಯಿಂದ ಧ್ಯಾನವಿರಬೇಕು ಋಷಿ ಗಾಗ್ರ್ಯನಂದದಲಿ ಪ್ರಾಣ ಸಂದೇಹದೊಳು ಕರಿರಾಜನಂದದಲಿ ಕಾಣಬೇಕಾ ಹರಿಯ ಅಜಮಿಳನ ತೆರದಿ 7 ಜಪಗಳನು ತಪಗಳನು ದಾನಧರ್ಮಂಗಳನು ಅಪರೂಪವಾಗಿರ್ದ ಪೂಜೆಗಳನು ಉಪವಾಸವನು ಮಾಡಿ ವ್ರತ ನೇಮ ನಿಷ್ಠೆಗಳ ಕಪಟವಿಲ್ಲದೆ ರಚಿಸಿ ಕಂಡರೈ ನಿನ್ನ 8 ಇವರಂತೆ ನೋಡುವರೆ ಸ್ಥಿರವಿಲ್ಲ ಬುದ್ಧಿಗಳು ಇವರ ದಾಸರ ದಾಸ ದಾಸ ನಾನು ನಿತ್ಯ ಮನದೊಳಗೆ ನಿಲುವಂತೆ ಭಾವಿಸೈ ಕೋನೇರಿ ವರಾಹತಿಮ್ಮಪ್ಪ 9
--------------
ವರಹತಿಮ್ಮಪ್ಪ
ವ್ಯರ್ಥವಾಯಿತೆನ್ನಿ ಜನ್ಮ ಸ್ವಾರ್ಥವಿಲ್ಲದೆ ಪರ ಕೃತ್ತಿ ವಾಸನ ಪೂಜೆಯನ್ನು ಮಾಡದೆ ಪ ಹಿಂದೆ ಜನನಿ ಗರ್ಭವಾಸದಿಂದ ಹೊರಟು ಬಂದ ಮೇಲೆ ಕೊಂದು ದಿವಸನಾನು ನಿಷ್ಠೆಯಿಂದ ಲಿರ್ದು ಆಗಮೋಕ್ತ ದಿಂದ ಶಿವಗೆ ಜಲದಿ ರುದ್ರದಿಂದ ಜಳಕ ಗೈದು ಶ್ರೀ ಗಂಧ ಪುಷ್ಪ ಪತ್ರೆಯಿಂದ ಪೂಜೆಯನ್ನು ಮಾಡದೆ 1 ಪುಣ್ಯನದಿಯು ಪುಣ್ಯಕ್ಷೇತ್ರ ಪುಣ್ಯ ಭೂಮಿಯಲ್ಲಿ ವಾಸ ಪುಣ್ಯಕಥೆಯು ಪುಣ್ಯತೀರ್ಥ ಸ್ನಾನವಿಲ್ಲದೆ ಪುಣ್ಯ ಮೂರ್ತಿಯಲ್ಲಿ ಧ್ಯಾನ ಪುಣ್ಯಪುರುಷರೊಡನೆ ಸಂಗ ಪುಣ್ಯ ಕಾಲದಲ್ಲಿ ಶಿವನ ಪೂಜೆಯನ್ನು ಮಾಡದೆ 2 ಮಂಡೆ ಜುಟ್ಟ ಸೂತ್ರವನ್ನು ಖಂಡಿಸಿರ್ದುಯತಿಎನುತ್ತ ದಂಡವನ್ನು ಧರಿಸಿ ಪೀತ ಕೌಶೇಯ ವಸನವನ್ನು ಪೊದ್ದು ಮೊಂಡತನದಿ ಸಕಲ ವಿಷಯ ಭೋಗವನು ಭೋಗಿಸುತ್ತ ಮಂಡೆ ಬೋಳನಾದರೇನು ಮನವ ಬÉೂೀಳಮಾಡದೆ 3 ಕಾಮಾರಿಯನ್ನು ಆಗಮೋಕ್ತದಿಂದ ಪೂಜೆಯನ್ನು ಮಾಡಿ ಘೋರಪಾತಕಂಗಳನು ಸುಟ್ಟುಸೂರೆಮಾಡದೆ 4 ಬೆಟ್ಟದೊಳಗನಂತ ವ್ಯಕ್ಷ ಹುಟ್ಟಿಮಡಿದ ವೊಲು ಜನ್ಮ ನಷ್ಟ ವಾಯ್ತು ವಿಧಿಯು ಬರೆದಿಟ್ಟ ದುರ್ಲಿಖಿತವೆಲ್ಲ ತುಟ್ಟಿಸಿತ್ತು ತಿಳಿದು ಶಿವನ ಮುಟ್ಟಿ ಪೂಜಿಸಾದರಿನ್ನು ಕೆಟ್ಟು ಹೋಗ ಬೇಡ ಲಕ್ಷ್ಮೀಪತಿಯ ಸ್ಮರಣೆಮಾಡದೆ 5
--------------
ಕವಿ ಪರಮದೇವದಾಸರು
ವ್ಯಾಪಾರ ಉದ್ಯೋಗವನು ಮಾಡುವೆ | ಭೂಪಾಶದೊಳಗೆ ಎಲ್ಲರಿಗೆ ಬಲ್ಲಿದನಾಗಿ ಪ ಮುರಾರಿ ನಾಮವೆಂಬೊ ಮುಂಡಾಸವನೆ ಸುತ್ತಿ | ಅರವಿಂದನಾಭವೆಂಬೊ ಅಂಗಿಯ ತೊಟ್ಟು || ನರಹರಿನಾಮವೆಂಬೊ ನಡುಕಟ್ಟನೆ ಸುತ್ತಿ | ಕರುಣಾಸಾಗರನೆಂಬೊ ಕಠಾರಿಯನು ಸಿಕ್ಕಿಸಿ 1 ಕಮಲನಾಭವೆಂಬೊ ಕಮಲದಾನಿ ಪಿಡಿದು | ತಿಮಿರದೋಷವೆಂಬೊ ಪಾಯಿಪೋಸು ಮೆಟ್ಟಿ || ಶಮೆದಮೆಯೆಂಬೊ ಪರಿಚಾರಕರ ಒಡಗೊಂಡು ಗಮಿಸಿದ್ದೆನೊ ಹರಿದಾಸರಿದ್ದ ಚಾವಡಿಗೆ 2 ಪೋಗಿ ನಮಸ್ಕಾರವೆಂದು ತಲೆಬಾಗಿ ನಿಲ್ಲಲು | ಭಾಗವತರು ಕರೆದು ಇಂಬನಿತ್ತು || ಯೋಗಕ್ಷೇಮವೆಲ್ಲ ವಿಚಾರಿಸಿ ಪ್ರೀತಿಯಲಿ | ಈಗಳೆ ಕುಳಿತ ಅಚ್ಯುತನ ತೋರಿದರು 3 ಕಂಡು ಕರವನು ಮುಗಿಯೆ ಕರುಣಾಸಾಗರನೆಂಬೊ | ಮಂಡಲಾಧಿಪನು ಕರೆದು ಮನ್ನಿಸಿ || ಗಂಡುಗಲಿಯಾಗೆಂದು ಸಂಚುಗಾರಿಕೆ ತುಲಸಿ | ದಂಡೆ ಕೊರಳಿಗೆ ಹಾಕಿ ದಾಸರೊಳಗಿರಿಸಿದನು 4 ಘನವಾದ ಉದ್ಯೋಗ ದೊರಕಿತು ನನಗಿನ್ನು | ಅನುಮಾನವಿಲ್ಲವು ಎಂದೆಂದಿಗೂ || ದಿನದಿನಕೆ ಹರಿನಾಮವೆಂಬೊ ಲೆಖ್ಖ-| ವನು ಬರೆದು ತ್ರಿಲೋಕದರಸನಿಗೆ ಒಪ್ಪಿಸಿದೆ || 5 ಬರೆದು ಲೆಖ್ಖವ ನೋಡಿ ದಯಾಪಯೋವಾರಿಧಿ | ಹರುಷದಿಂದಲಿ ಎನಗೆ ಸಂಬಳಕ್ಕೆ || ಬರೆಸಿ ಕೊಟ್ಟನು ಸನದು ಕೇಶವಾದಿಯಂಬೊ | ವರಹಗಳು ಎಂದಿಗಾದರು ಅಳಿವಿಲ್ಲದೆ || 6 ಈಸು ದಿನ ಉದ್ಯೋಗ ಹೀನನಾಗಿ ನೊಂದೆ | ದಾಸರಾ ದಯದಿಂದ ದೊರೆಕಿತಿಂದು || ಸಂಚಿತ ಕರ್ಮ ಓಡಿಸಿ |ಶ್ರೀಶ ವಿಜಯವಿಠ್ಠಲನಲ್ಲಿ ಬಾಳಿದೆನೊ || 7
--------------
ವಿಜಯದಾಸ
ವ್ಯಾಸರಾಯರ ಸೇವೆ ಲೇಸಾಗಿ ಮಾಡಲು ದಾಸನೆಂದೆನಿಸಿಕೊಂಬ ಪ ಸಾಸಿರನಾಮದ ವಾಸುದೇವನ ಭಕ್ತ ಕಾಷಾಯ ವಸ್ತ್ರಧರಅ.ಪ ತಾ ಸಹಗಮನದಿ ಪತಿಸಹ ಪೋಗುವ ಆ ಸ್ತ್ರೀಯು ಬ್ರಹ್ಮಣ್ಯತೀರ್ಥರಲ್ಲಿಗೆ ಪೋಗೆ ಶ್ರೀಶ ಬದರಿಯಲ್ಲಿ ಪೇಳಿದ ಮಹಿಮೆಯ ಆ ಸುಮಹಿಮ ಪ್ರಹ್ಲಾದನ್ನ ಸ್ಮರಿಸುತ್ತ ಮೋಸ ಬರುವುದೆಂದಾಲೋಚನೆ ಇಲ್ಲದೆ ಸತಿ ವಂದಿಸೆ ಸುಮಂಗಲ್ಯವನಿತ್ತು ಆ ಸಮಯದಿ ಮಂತ್ರಾಘ್ರ್ಯಾವನೆ ಕೊಂಡು ತಾ ಸುಮ್ಮಾನದಿ ಬನ್ನೂರಿಗೆ ಪೋಗ್ಯತಿ ಯಾ ಸತಿಪತಿಯ ಪ್ರಾಣವನುಳಿಹಿ ರನ್ನ ತಾ ಸಮೀಪದಿ ಮಠದಲ್ಲಿ ವಾಸಮಾಡಿಸಿ ಕುಸುಮಾಕ್ಷತೆ ಫಲ ಮಂತ್ರಿಸಿ ಆಕೆಗೆ ಕೊಟ್ಟು ಆ ಸುಮಂಗಲಿಯಲ್ಲಿ ಪ್ರಹ್ಲಾದ ಪುಟ್ಟಿದ ಆ ಸಮಯದಿ ಚಿನ್ನದ ಹರಿವಾಣದಲಿ ಶಿಶು ತಾನು ಬಿಡದೆ ಕಣ್ವ ನದಿಯಲ್ಲೀ ಶಿಷ್ಯರಿಗೆ ತೊಳಸಿ ತಂದು ಮಠಕೆ ಆಗ ವಾಸುದೇವನಭಿಷೇಕ ಕ್ಷೀರವನ್ನು ಆ ಸುರಭಿಯ ಕರೆದಭಿಷೇಕÀವನೆ ಕೊಂಡ ಲೇಸಿನಿಂದಲಿ ಮೊಲೆಯುಂಡು ಬೆಳೆದನು ವಾಸವನುತ ದೇವೇಶನ ಪಾಡುತ ವಾಸವಾದರು ಮಳೂರಿನಲಿ1 ಆ ಶಂಕುಕÀರ್ಣನೇ ಶೇಷಾವೇಶದಲ್ಲಿ ಶ್ರೀಶನ ಕÀಂಭದಿ ತೋರಿಸಿದಾತನೆ ತಾ ಸುಮ್ಮಾನದಿ ನರಸಿಂಹನ ಪೂಜೆಗೆ ತಾಸು ಬಿಡದೆ ಆಸೆ ತೀರಿಸಿದಾತನೆ ಈಸು ಮಹಿಮೆಗೆ ವ್ಯಾಸ ನಾಮಕರಣವು ಆ ಸುಮನೋಯತಿ ಆಶೀರ್ವಾದವಮಾಡೆ ತಾ ಸುಮ್ಮನಿರದಲೆ ಕೃಷ್ಣನ್ನ ಸ್ಮರಿಸುತ್ತ ಈ ಶಿಶುಬೆಳೆಯೆ ಆಭರಣದಿ ಶೋಭಿತ ವೀ ಸುಮತಿಯ ಮಂಗುರುಳಿಗೆ ಮುತ್ತಿನ ಗೊಂಡೆ ಆ ಸುಮನೋಹರಗಳೆಲೆ ಮಾಗಾಯಿ ಭೂಸುರ ನಿಕರವ ಮೋಹಿಪ ಬಗೆವಂಟಿ ಭೂಸುರ ಕರ್ಣಕೆ ಚಳತುಂಬು ಬಾವಲಿ ನಾಸಿಕಛಂದವು ಪದ್ಮವಿಕಸಿತ ಮುಖನೇತ್ರ ಸೂರ್ಯ ಕಾಂತಿಯ ಮುಖ ಫಣೆ ತಿಲಕನ ನೃ ಕೇಸರಿ ಪ್ರಾಯಗೆ ಹಾರಪದಕÀವಿಟ್ಟು ಆ ಸುಕರಗಳಲಿ ಉಂಗುರ ಪೊಳೆಯುತ ಆ ಸುಕಾಂತಿಯ ಕಡಗ ಸರಪಳಿ ವಂಕಿಯೂ ಲೇಸು ವಡ್ಯಾಣವ ನಡುವಿಗೆ ಧರಿಸಿ ಆ ಸಣ್ಣ ಪಾದಕ್ಕೆ ಗೆಜ್ಜೆ ಕಾಲ್ಗಡಗವು ಈ ಶಿಶುವಿನ ಹರಿ ಆಡಿಸುವಾ 2 ವರ್ಷವೈದಕೆ ಚೌಲ ಅಕ್ಷರಾಭ್ಯಾಸ ವತ್ಸರ ಉಪನಯನ ಮಾಡಿ ಧೀರಗೆ ಸಪ್ತ ವರ್ಷಕೆ ತುರ್ಯಾಶ್ರಮ ಕಾರುಣ್ಯದಿಂದ ಶ್ರೀಪಾದರಾಯರಲ್ಲಿ ಅರುಹಿಸಲು ವೇದಶಾಸ್ತ್ರ ನಿಗಮಪಾಠ ಸಾರವ ತರ್ಕತಾಂಡವ ಚಂದ್ರಿಕೆಯ ಮಾಡಿ ಸೂರಿಶಿಷ್ಯ ವಾದಿರಾಜನ್ನ ಪಡೆದೆಯೋ ಶೂರಕೇಸರಿಯಂತೆ ವಾದಿದಿಗ್ಗಜಗಳ ಧಾರಿಣಿಯಲ್ಲಿ ತಲೆ ಎತ್ತದಂತೆ ಮಾಡಿ ನೂರೆಂಟು ಮಂದಿ ಶೂರವಾದಿಗಳಿಂದ ವಾರಿಧಿ ಕಟ್ಟಿ ಮಾರುತಿಯನು ಪ್ರತಿಷ್ಠೆಯ ತಾಮಾಡಿ ಶ್ರೀ ರುಕ್ಮಿಣಿಪತಿ ಗೋಪಾಲ ಕೃಷ್ಣನ ಸಾರಸಾಕ್ಷನ ಸೇವೆ ಅನುದಿನವು ಮಾಡಿ ಪುರಂದರ ದಾಸರಿಗಂಕಿತಾ ಪಾರ ಕುಹುಯೋಗವ ನೂಕಿ ಭೂಷತಿಯನು ಕಾಯ್ದ ಪಾರ ಮಹಿಮೆ ಫಾಲ್ಗುಣ ಬಹುಳ ಚೌತಿಯು ಶ್ರೀ ರಮಣನ ಪುರಿಯಾತ್ರೆಗೆ ರಥವೇರಿ ತೋರಿದ ವರದ ವಿಜಯವಿಠ್ಠಲನಾ ಪಾ ಸೇರೀದರಿವರು ಆನಂದದಿ * 3 * ಈ ಕೀರ್ತನೆ ವರದ ವಿಜಯವಿಠಲಾಂಕಿತದಲ್ಲಿ ದಾವಣಗೆರೆಶ್ರೀನಿವಾಸದಾಸಕೃತ ವ್ಯಾಸರಾಜ ಚರಿತೆಯಲ್ಲಿ ಉಪಲಬ್ಧವಿದೆ.
--------------
ವಿಜಯದಾಸ
ವ್ರತವನಲ್ಲದೆ ಅನುವ್ರತ ಮಾಡಬಹುದೇಶತಮುಖ ಸ್ಥಿತನಾದ ದಿವಿಜಪತಿಯ ಪ ದಾನಶೀಲನೆನಿಸಿ ವಿಬುಧರಿಗೆ ಮೃಷ್ಟಾನ್ನಪಾನಗಳುಂಬೋ ಪಂಕ್ತಿಯಲ್ಲಿ ||ದೀನನೊಬ್ಬನು ಬರಲು ದೋಷಿಯಾದವನೆಂದು ಆನನವ ತಿರುಹುವನೇ ಅವನಿಯೊಳಗೇ 1 ಅನ್ನ ಕಾರಣವಾದ ಪರ್ಜನ್ಯದಿಂದಲಿ ಸಕಲಜನರನು ಪರಿತೋಷ ಬಡಿಸಿ ಕೃಪದಿ ||ಚೆನ್ನಿಗನೆ ಈ ಅಲ್ಪ ಪ್ರಾದೇಶಸ್ಥಿತರನ್ನುಬನ್ನ ಬಡಿಸುವರೇನೊ ಘನ್ನ ಮಹಿಮಾ 2 ಭಕ್ತವತ್ಸಲನೆಂಬೊ ಬಿರುದು ನಿನಗೆ ಉಂಟೆಸಖತನದಿ ಬಿನ್ನೈಪೆ ಸಾರ್ವಭೌಮ ||ಭಕುತ ಸುರಧೇನು ಗುರು ವಿಜಯ ವಿಠಲರೇಯಉಕುತಿ ಲಾಲಿಸಿ ವೃಷ್ಟಿಗರಿವುದು ಕರುಣದಲಿ 3
--------------
ಗುರುವಿಜಯವಿಠ್ಠಲರು
ಶಂಕರ ದೇವನಾಲಂಕಾರ ಶಯನ ಶಂಖ ನೃಪನ ಪಾಲಾ ಶಂಖಾದಿ ಸೂದನ ಶಂಕೆಯಿಲ್ಲದೆ ತಾಯಿ ಸಂಕಲೆ ಕಡಿದ ಶಶಾಂಕಕೋಟಿ ಪ್ರಭಾವ ಸಂಕರುಷಣ ದೇವ ಶಂಖಾರಿಧರನೆ 1 ಕಂಬದಿ ಬಂದಚ್ಯುತನೆ ಗೊಲ್ಲರ ಸಲಹಿದ ಗೋವರ್ಧನಧರ ಪುಲ್ಲ ಲೋಚನನೆ2 ಅಖಿಳ ಅಸುರರ ಶಕುತಿಯ ಅಪಹರಿಸಿದ ಅದಿತಿ ರುಕ್ಮಿಣಿಯೊಡನೆ ವಿಹಾರ ಸಕಲ ಸುರರೊಡೆಯ ಸಾಮಗಾಯನಲೋಲ ಶಕುಜನಕನೆ3 ಶಾಮಲ ಶರೀರ ವರ್ಣ ವಿನುತ ರೋಮ ರೋಮ ಕೂಪದಿ ಆನಂದ ಭರಿತ ದಾಮೋದರ ವಿಶ್ವದಾನಿಗಳರಸನೇ ಸಾಮಜವರದ 4 ಸನ್ನುತ ಚರಣ ಅನಿರುದ್ಧ ದೇವನೆ ಅಸುರ ಸಂಹರಣಾ ಕನಕಗರ್ಭಾದಿ ಸುರಕಟಕ ಪಾಲಕನೆ ವನಜ ಜಾಂಡವ ಪೆತ್ತ ವೈಕುಂಠ ಪುರಾಧೀಶ 5 ಫಣಿ ಫಣ ಮರ್ದನ ಪ್ರಣವ ಪ್ರತಿಪಾದ್ಯ ಪ್ರ ಸನ್ನವದನಾ ರಣರಂಗ ಭೀಮಾ ಭಕುತ ಜನ ಮೋದನಾ ಅಣು ಸ್ಥೂಲದಲಿ ಗಮನ 6 ಶ್ವೇತವಾಹನನ ಸಮರದಿ ಕಾಯಿದಾ ಅಖಿಳ ಜೀವ ಭೇದಾ ದರ ಪರಮ ಸುಮೋದಾ ಭೀತಿರಹಿತ ಕಲ್ಪಭೂಜನೆನಿಪ ಜಗನ್ನಾಥವಿಠ್ಠಲನೆ 7
--------------
ಜಗನ್ನಾಥದಾಸರು
ಶರಣಾಗತ ರಕ್ಷಾಮಣಿಯೆ ಶ್ರೀ ಹರಿಯೆ ಪ ಶರಣಾಗತ ಜನ ವರ ರಕ್ಷಾಮಣಿಯೆಂಬ ಬಿರುದಿನಿಂದಲಿ ಮೆರೆವ ಕರುಣಾ ಭರಣ ಕಾಮಿತ ವರಪ್ರದಾಯಕ ಅ.ಪ. ಜನನ ಮರಣ ರಹಿತ ಜಗದ ಜನ್ಮಾದಿ ಕರ್ತ ಜನುಮ ಜನುಮದಲ್ಲಿ ಜಗದ ಜೀವರಿಗೆಲ್ಲಾ ಅನಿಮಿತ್ತ ಬಂಧುವೆಂದು ನಿನ್ನಯ ಪಾದ ವನಜಗಳನು ನಾವಿಂದು ನಂಬಿಹೆವಿನ್ನು ವನಜನಾಭನೇ ನೀ ಬಂದು ಕಾಯಬೇಕೆಂದು ತನುಮನಂಗಳ ನಿನಗೆ ಒಪ್ಪಿಸಿ ಅನುನಯದಿ ಶಿರ ಮಣಿದು ಬೇಡುವೆ ಅನಘ ಅನುಪಮ ಗುಣಗಣಾಂಬುಧಿ ಅನಿಮಿಷೋತ್ತಮ ಅಪ್ರಮೇಯನೆ 1 ಕಾಮಜನಕ ಪೂರ್ಣಕಾಮ ಆಶ್ರಿತ ಜನ ಕಾಮಧೇನುವೆ ಕೋಟಿ ಕಾಮಲಾವಣ್ಯನೆ ಶ್ರೀ ಮನೋಹರ ಗಂಭೀರ ಸುರುಚಿರ ಘನ ಸನ್ನುತ ಮಹಿಮ ಸಾಮಜನರ ಉದ್ಧಾರ ಭಕ್ತ ಮಂದಾರ ಸಾಮಗಾನ ಪ್ರೇಮ ಜಗದಭಿ ರಾಮ ರಾಕ್ಷಸ ಭೀಮ ಮಂಗಳ ನಾಮ ಸುರಮುನಿ ಸ್ತೋಮ ಸನ್ನುತ ಸ್ವಾಮಿದೇವ ಲಲಾಮ ನಮೊ ನಮೊ 2 ಮಾಧವ ಅರ ವಿಂದಲೋಚನ ಪೂರ್ಣಾನಂದ ಸ್ವರೂಪನೆ ಎಂದೆಂದು ನೀನಲ್ಲದೆ ಗತಿ ಎಮಗಿಲ್ಲ ವೆಂದು ನಿನ್ನನು ಬಿಡದೆ ಕರಿಗಿರೀಶನೆ ತಂದೆ ಯೆಮ್ಮಯ ಕುಂದುಗಳ ನೀ ನೊಂದನೆಣಿಸದೆ ಬಂದು ಸಲಹುವು ಇಂದು ಕರುಣಾ ಸಿಂಧು ನತಜನ ಬಂಧು ನರಹರಿ3
--------------
ವರಾವಾಣಿರಾಮರಾಯದಾಸರು
ಶರಣಾಗ್ರಣಿ ರಾಮ ಚರಣಾಂಬುಜ ಬಿಡೆ ನಳಿನ ಷಟ್ ಚರಣ ಬಿಡ ಬಲ್ಲದೆ ಪ ಹನುಮನ ಭಜನೆಂಬ ಘನವಾರಿ ಪೂರಿತ ಮನ ಸರೋವರ ಅಯನವಾಗಿಪ್ಪಾ ಜನಕಸುತೆ ಹಂಸಿ ಮನಸಾಪ ಹಾರಿ ದಿನಕರನ್ವಯದಿಂದ ವಿನುತವಾಗಿಪ್ಪ 1 ಅಮರರೋತ್ತಮರೆಂಬ ಭ್ರಮರರಾ ರವಗಳ ಸಮಯೋಚಿತ ಸಾಮಭಿ ಸೇವಿತ ವಿಮಲಾತಮದಿಂದ ಸಾಂದ್ರ ಶಮಲಾತಿ ದೂರ ಪಾದ 2 ಶಿಲೆಯ ಬಾಲೆಯ ಮಾಡಿ ಮಲವಳಿದು ಮುನಿ ಕುಲವಗೆಡಿಸಿ ಸತ್ಕುಲನೆನಿಸಿದೆ ಜಲಧಿಯೊಳಗೆ ಸೇತು ನಿಲಿಸಿ ಸಜ್ಜನರಿಗೆ ನೆಲೆ ವಾಸುದೇವವಿಠಲದೇವ ಪಾದಪದುಮ3
--------------
ವ್ಯಾಸತತ್ವಜ್ಞದಾಸರು
ಶರಣು ಶರಣುಶರಣು ದಶರಥ ರಾಮದೂತಗೆ ಪ ಶರಣು ಕುರುಕುಲಾಧೀಶಗೆಶರಣು ವೈಷ್ಣವ ಮತ ವಿಲಾಸಗೆಶರಣು ಮುಖ್ಯಪ್ರಾಣಗೆ ಅ ವಾರಿಧಿಯನು ವೇಗದಿ ದಾಟಿ ವನವ ಕಿತ್ತಿದಾತಗೆಮೇರೆಯಿಲ್ಲದೆ ಅಸುರರ ಸಂಹರಿಸಿದ ರಣಶೂರಗೆವಾರಿಜಾಕ್ಷಿ ಸೀತಾದೇವಿಗೆ ವರದ ಮುದ್ರಿಕೆಯನಿತ್ತಗೆಧೀರತನದಲಿ ಅಕ್ಷಕುಮಾರನ ಪ್ರಾಣವನು ಕೊಂಡಗೆ 1 ರಾಜಸೂಯವ ರಚಿಸಬೇಕೆಂದು ರಾಜರ ಸೀಳಿದಾತಗೆರಾಜಮುಖಿಯಳ ರಕ್ಷಿಸಿ ಮೃಗರಾಜಗೆ ಒಲಿದಾತಗೆತ್ರಿಜಗವಂದಿತ ದೇವಗೆ ಸಜ್ಜನಪ್ರಿಯ ಎನಿಪಗೆರಾಜ ಧರ್ಮಗೆ ಅನುಜನಾದಗೆ ರಾಜಪೂಜಿತ ರಾಜಗೆ2 ಧಾರಿಣಿಯೊಳು ದುರ್ವಾದಿ ದೈತ್ಯರ ಗಂಟಲಗಾಣವಾದಗೆಮೂರೇಳು ಮತವನೆಲ್ಲ ಮುರಿದ ಧೀರ ಮಧ್ವರಾಯಗೆಸಾರ ತತ್ತ್ವಗಳನೆಲ್ಲ ಶೋಧಿಸಿ ಸೂರೆ ಮಾಡಿದಾತಗೆಊರ್ವಿಯೊಳು ವರ ದೇವತಾದಿಕೇಶವ ದೊರೆ ದಾಸಗೆ 3
--------------
ಕನಕದಾಸ