ಒಟ್ಟು 7928 ಕಡೆಗಳಲ್ಲಿ , 135 ದಾಸರು , 4955 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣದಿ ಕಾಯೊ ಗೋಪಾಲಾಚರಣವ ಸ್ಮರಿಸುವೆ ಶರಣರ ಪಾಲಾ ಪ ಹರಣ ಹೋಗದ ಮುನ್ನ | ಹರಿ ನಿನ್ನ ಹಂಬಲನ್ನಕರುಣಿಸಿ ಕಾವುದೆನ್ನ | ಕರುಣ ನಿಧಿಯೆ ಘನ್ನಮೊರೆಯಿಡುವೆನು ನಿನ್ನ | ಚರಣ ಸರೋಜವನ್ನಶಿರದೊಳಗಿರಿಸೆನ್ನ | ಪರಮ ಪಾವನ್ನ 1 ಮರುತನ ಮತದಲ್ಲಿ | ಕರೆ ತಂದು ಎನ್ನನುತರತಮ ಜ್ಞಾನವ | ಅರುಹುವುದೊಳಿತಲ್ಲೆ |ಹರಿಯೆ ಸರ್ವೋತ್ತಮ | ಮರುತ ಜೀವೋತ್ತಮಹರ ವೈಷ್ಣವೋತ್ತಮ | ವರ ಜ್ಞಾನ ಪಾಲಿಸಿ 2 ಪನ್ನಗಾಚಲವಾಸ | ಪ್ರಸನ್ನರಘನಾಶನಿನ್ನ ನಾಮವ ಅನಿಶ | ಎನ್ನಿಂದ ನುಡಿಸೀಶ |ಅನ್ನಂತ ಗುಣ ಗುರು | ಗೋವಿಂದ ವಿಠಲನೆಎನ್ನ ಬಿನ್ನಪ ಸಲಿಸು | ಮನ್ನಿಸಿ ಕುಂದುಗಳ 3
--------------
ಗುರುಗೋವಿಂದವಿಠಲರು
ಕರುಣದಿ ಕಾಯೊ-ಕರುಣದಿ ಕಾಯೊ ಕಮಲನಯನ ಯನ್ನ ಪ ಪರಮಪುರುಷ ಹರೆ ಸರಸಿಜನಾಭನೆ ಅ.ಪ. ಧ್ಯಾನಿಸುವೆನು ಈಗ 1 ನಿನ್ನನು ನೆನೆವೆ 2 ಎಂದು ಮುಗಿಲು ಮುಟ್ಟುತಲಿದೆ 3 ಸಂಗತ ಶ್ರಮವನ್ನು ಭಂಗವಗೈವ ಭುಜಂಗ ಗಿರಿಯವಾಸ 4 ಲೀಲೆಯಿಂದಲಿ ವ್ಯಾಘ್ರ ಶೈಲದಲ್ಲಿರುವ ಶ್ರೀ ಲೋಲವರದವಿಠಲ 5
--------------
ಸರಗೂರು ವೆಂಕಟವರದಾರ್ಯರು
ಕರುಣದಿ ಕಾಯೋ ಎನ್ನ ಕಾರುಣ್ಯನಿಧಿ ಕರುಣದಿ ಕಾಯೋ ಎನ್ನ ಪ ಚರಣಸೇವಕಭಯಹರಣ ಶ್ರೀ ಕೌಸ್ತುಭಾಭರಣ ಸೌಖ್ಯವಿ ತರಣ ನಿನ್ನಯ ಚರಣಯುಗಳವ ಶರಣುಹೊಕ್ಕೆನು ಅ.ಪ ಕರ್ಮತಂತ್ರವನುಳಿದು ಕಾಮಿಸಿ ಮ£ವ ನಿರ್ಮಲತ್ವವ ತೊರೆದು ಹಮ್ಮಿನಿಂದಲೆ ಭಕ್ತಿಯುಮ್ಮಳಿಸದೆ ಕಾಮವು ಹೊಮ್ಮುತಿದೆ ಪರಬೊಮ್ಮ ಮೂರುತಿ 1 ಸ್ನಾನ ಮೌನವ ತೊರೆದು ಸಂಧ್ಯಾದ್ಯನುಷ್ಠಾನ ನೇಮವ ಮರೆದು ಮಾನಸಪೂಜಾ ವಿಧಾನವನರಿಯದೆ ದೀನಜನಸುರಧೇನು ಭಕ್ತರಮಾನನಿಧಿಯಹ ಶ್ರೀನಿವಾಸನೆ2 ಶರಣಜನಾವನನೆ ಶಕ್ರಾದಿ ನಿರ್ಜರಕುಲಪಾಲಕನೆ ಪುರಹರ ಸನ್ನುತ ಚರಿತಪೂರಿತ ದುರಿತ ಸದ್ಗುಣ ಭರಿತ ಪುಲಿಗಿರಿ ವರದ ವಿಠಲ 3
--------------
ವೆಂಕಟವರದಾರ್ಯರು
ಕರುಣದಿ ಕಾಯೋ ಗೋವಿಂದಾ ಯಂವ ದುರಿತಗಳಿಂದ ನೀನೀಗೊ ಮುಕುಂದ ಪ ಹರಿಸೇವೆ ಮಾಡುತ್ತ ಬಂದೆ ಮುಂದೆ ಚಿರ ಸಾಯುಜ್ಯವನ್ನು ನೀಡೋ ಶರಣಂದೆ ಅ.ಪ. ಲಕ್ಷಯೆಂಬತನಾಲ್ಕು ಜನ್ಮಯೆತ್ತಿ ಭಕ್ಷಿಸಿ ಬಂದೆನು ಕೋಟಿ ದುಃಖಗಳಾ 1 ಸಾಕ್ಷಿಯಾಗಿರುವಂಥ ಜೀವಾತ್ಮನನು ಲಕ್ಷಕೆ ತಂದೆ ಮನುಜ ಜನ್ಮದಲೀ 2 ಪಾಪ ಪುಣ್ಯಕೆ ಕರ್ತೃವಾಗಿ ಭವದಿ ಕೂಪದಿ ನಿಂದೆನು ಬೋಕ್ತøವು ಆಗೀ 3 ಪಾಪವ ಕ್ಷಮಿಸೋ ಸರ್ವಾತ್ಮಯಂನ ತಾಪವ ನೀಗುತ್ತ ಜನ್ಮ ಪರಿಪರಿಸೋ4 ಜನ್ಮ ತಾಳಲಾರೆ ಹರಿಯೇ ತಾಳಿ ಜನ್ಮದಿ ಹರಿಪಾದ ನಾ ಬಿಡಲಾರೆ 5 ಸನ್ನುತವರ ದೂರ್ವಾಪುರದ ನಂಮ ಚನ್ನಕೇಶವನೇ ಭಕ್ತಿಯನು ನೀ ಕೊಡೆಲೋ6
--------------
ಕರ್ಕಿ ಕೇಶವದಾಸ
ಕರುಣದಿ ಕಾಯೋಯನ್ನ ಕಾರುಣ್ಯನಿಧಿ ಕರುಣದಿ ಕಾಯೊಎನ್ನ ಪ ಚರಣ ಸೇವಕ ಭಯಹರಣ ಶ್ರೀಕೌಸ್ತುಭಾಭರಣ ಸೌಖ್ಯವಿತರಣ ನಿನ್ನಯ ಚರಣ ಯುಗಳವ ಶರಣುಹೊಕ್ಕೆನು ಅ.ಪ. ಕರ್ಮತಂತ್ರವನುಳಿದು ಕಾಮಿಸಿ ಮನ ನಿರ್ಮಲತ್ವವ ತೊರೆದು ಹಮ್ಮಿನಿಂದಲೆ ಭಕ್ತಿಯುಮ್ಮಳಿಸದೆ ಬಲು ನಿರ್ಮಲತ್ವವನಳಿದು ಪರ ಬೊಮ್ಮ ಮೂರುತಿ1 ಸ್ನಾನ ಮೌನವ ತೊರೆದು ಸಂಧ್ಯಾದ್ಯನುಷ್ಠಾನನೇಮವ ಮರೆದು ಮಾನಸ ಪೂಜಾ ವಿಧಾನ ವನರಿಯದೆ ದೀನಜನ ಸುರಧೇನು ಭಕ್ತರ ಮಾನನಿಧಿಯಹ ಶ್ರೀನಿವಾಸನೆ 2 ಶರಣಜನಾವನನೆ ಶಕ್ರಾದಿನಿ-ರ್ಜರಕುಲ ಪಾಲಕನೆ ಪುರಹರ ಸನ್ನುತ ಚರಿತದೂರಿತ ದುರಿತಸದ್ಗುಣ ಭರಿತ ಪುಲಿಗಿರಿ ವರದ ವಿಠಲ 3
--------------
ಸರಗೂರು ವೆಂಕಟವರದಾರ್ಯರು
ಕರುಣದಿ ಕೊಡು ವರವಾ ಗುರು ಮಹಾದೇವ ಪ ನಿರುತ ಸ್ಮರಿಸುವ ಶರಣ ಸಂಜೀವಾ ಅನುದಿನ | ಹರಿಕುಮಾರನ ಗರ್ವವನದಾವಾನಲ ಮಹಾನುಭಾವ ಅ.ಪ ಸ್ಪಟಿಕ ಸನ್ನಿಭ ಧವಳ ಶುಭಗಾತ್ರ ಕಟಕ ವಂಚಕ ಯಕ್ಷಪತಿ ಮಿತ್ರ ನಿಗಮ ಹಯ ಧೂರ್ಜಟಿಯ ಸುಚರಿತ್ರ ಹೇ ನಿಟಲ ನೇತ್ರ 1 ಅದ್ರಿವೈರಿಯತನಯನೊಡನೆ ಯುದ್ಧಗೈದಾತ ಭದ್ರದಾಯಕ ರುದ್ರದೇವ ಪ್ರಸಿದ್ಧ ಮುನಿ ನಮಿತ ಶ್ರೋದ್ರು ನೀಧರ ದದ್ದಲಾಪುರ ಸದ್ಮಸುಖದಾತ ಹೇ ಸದ್ಯೋಜಾತ 2 ಶಾಮಸುಂದರ ಸ್ವಾಮಿ ಪ್ರಿಯ ಸಖ ಸೋಮಶೇಖರನೆ ಪ್ರೇಮದಿಂದಲಿ ರಕ್ಷಿಸೆನ್ನನು ಭೂಮಿಶ್ಯಂದನನೆ ಕಾಮಿತ ಪ್ರದ ವಾಮದೇವನೆ ಹೇಮಾತಿಧವನೆ ನಿಸ್ಸೀಮ ಮಹಿಮನೆ 3
--------------
ಶಾಮಸುಂದರ ವಿಠಲ
ಕರುಣದಿ ಪೊರೆಯೆ ಭಾರತಿ ಸತಿ ಪ ಪರಮ ಮಂಗಾಳೆ ನಿನ್ನ ಚರಣ ಕಮಲಾವ ಮರೆಯ ಹೊಕ್ಕೆನು ಕಣ್ಣ ತೆರೆದು ನೋಡೌ ತಾಯೆ 1 ಸರುವದ ದುರಿತದಿ ಚರಿಸಿದವನೆಂದು ತರಳನಾದೆನ್ನನು ಜರಿದು ನೂಕುವರೆ 2 ದುರಿತದೂರ ಗುಣಪೂರ್ಣ ಸಿರಿ ರಂಗೇಶವಿಠಲನೆ ಸರಿಯೆಂಬ ಮತಿಯನ್ನು ಸ್ಥಿರವಾಗಿ ಕೊಟ್ಟೆನ್ನ 3
--------------
ರಂಗೇಶವಿಠಲದಾಸರು
ಕರುಣದಿ ಬಂದು ನಿನ್ನ ಚರಣ ಕಮಲವೆನ್ನ ಶಿರದ ಮೇಲಿಟ್ಟು ನೀ ಪೊರಿಯೊ ಕೃಪಾರಸ ಸುರಿಯೋ ಗರುಡಧ್ವಜ ನೀನು ಸ್ಮರಮಣ ನಿನ್ನ ಭಕುತರ ಸುರಧೇನೆಂದು ಕರೆವರು ನಿನ್ನನು ಪ ಸರಸಿಯೊಳ್ಕರಿರಾಜ ಭರದಿಂದ ತನ್ನವುದ್ಧರಿಸೆಂದು ಮೊರೆಯಿಡೆ ಪೊರೆದೆಯಲ್ಲೊ ಶಿರಿಯೊಳುನುಡಿಯದೋ ಶರಣಾಗತರನ್ನು ಪೊರೆವೆನೆಂಬ ನಿಜ ಬಿರಿದನು ಮೆರಿಸಿದಿ1 ಆಗಮವಂದಿತ ನಾಗಭೂಷಣ ತಾತ ಮೇಘವಾಹನ ಸುತನ ಬ್ಯಾಗ ರಕ್ಷಿಸಿದಿ ಜಾಗುಮಾಡದೆ ಎನ್ನ- ದಾಗಲು ರಕ್ಷಿಸೆಂದು ಬಾಗಿ ಬೇಡುವೆನು 2 ಕಾವನು ನೀನಲ್ಲದೆ ಯಾವ ದೇವರನು ನಾ ಆವಲ್ಯು ಕಾಣೆನು ಭಾವಜಜನಕನೆ ಶ್ರೀವಾಸುದೇವನ ಗೋವೃಂದ ರಕ್ಷಕನೆ ಪತಿ ಶ್ರೀವತ್ಸಾಂಕಿತನೆ 3
--------------
ಸಿರಿವತ್ಸಾಂಕಿತರು
ಕರುಣದಿ ರಕ್ಷಿಸು ಎನ್ನನು ಪುಲಿ ಗಿರಿಲೋಲ ನಂಬಿದೆ ನಿನ್ನನು ಪ ಕರುಣದಿ ರಕ್ಷಿಸು ಚರಣಸೇವಕಭಯ ಚರಣಯುಗಳದಿ ಶರಣು ಹೊಕ್ಕೆನು ಅ.ಪ ಗತಿ ತಾಳ ಲಯ ಬಂಧ ತಿಳಿಯದ ಶ್ರುತಿಗಳ ಮಹಿಮೆಯ ಕೇಳದ ಶ್ರುತಿಗೋಚರ ನಿಮ್ಮ ಸ್ತುತಿಯ ಅನುಭವವಿತ್ತು ಪತಿತಪಾವನ ಪುಲಿಗಿರೀಶನೆ ಪತಿತನುದ್ಧರಿಪಂತೆ ಗತಿವಿಹೀನಗೆ ಪಥವ ತೋರಿಸಿ ಸದ್ಗತಿಯ ಪಾಲಿಸುವಂತೆ ಪತಿತನೆನ್ನನು ಭವಜಲಧಿ ಮಧ್ಯದಿ 1 ಗುರುದ್ರೋಣ ಕೃಪರ ಮುಂದಡೆಯಲ್ಲಿ ದುರುಳ ದುಶ್ಯಾಸನನ ಕೈಯಲ್ಲಿ ಪರಮಾತ್ಮ ಪರಿಪೂರ್ಣ ಕರುಣಾಳು ನಿನ್ನನೇ ಮರೆಹೊಕ್ಕೆ ಪೊರೆಯೆಂದು ಮೊರೆಯಿಡಲಾಕ್ಷಣ ಶರಣಜನ ಸಂಸಾರ ಶ್ರೀಹರಿ 2 ನರಳಿ ಸಾವಿರವರುಷ ಜಲದೊಳು ಸ್ಮರಣೆ ಮಾಡುತ ದೃಢಮನದೊಳು ಕರಿ ಮೊರೆಯಿಡಲಾ ಕರುಣದಿಂ ಮೊರೆ ಕೇಳಿ ಗರುಡನ ಪೆಗಲೇರಿ ಸಾರಿ ಕರಿಯಪೊರೆದಾ ವರದವಿಠಲ 3
--------------
ವೆಂಕಟವರದಾರ್ಯರು
ಕರುಣದಿ ರಕ್ಷಿಸುಯನ್ನನು-ಪುಲಿಗಿರಿ ಲೋಲ ನಂಬಿದೆ ನಿನ್ನನು ಕರುಣದಿ ರಕ್ಷಿಸು ಚರಣಸೇವಕ ಭಯಹರಣ ಸೌಖ್ಯವಿತರಣ ನಿನ್ನಯಚರಣ ಯುಗಳದಿ ಶರಣು ಹೊಕ್ಕೆನುಪ ಯತಿಗಣ ನೇಮವನರಿಯದ-ಸ್ವರ-ಗತಿತಾಳ- ಲಯಬಂಧ ತಿಳಿಯದ ಮಹಿಮೆಯ ಕೇಳದ ಶೃತಿಗೋಚರ ನಿಮ್ಮಸ್ತುತಿಯು ಅನುಭವವಿತ್ತು ಪತಿತ ಪಾವನ ಪುಲಿಗಿರೀಶನೆ ಪತಿತನುದ್ಧರಿಪಂತೆ ಗತಿಮತಿಗಳೇನೇನು ಅರಿಯದಪತಿತನೆನ್ನನು ಭವಜಲಧಿ ಮಧ್ಯದಿ 1 ಕೃಪರಮುಂದೆಡೆಯಲ್ಲಿ ದುರುಳದುಶ್ಯಾಸನನ ಕೈಯಲ್ಲಿ ಪಡಿಸಲೆಂದೆನುತಲುಜ್ಜುಗಿಸಲು ಪೊರೆಯೆಂದು ಮೊರೆಯಿಡಲಾಕ್ಷಣ ಸಂಸಾರ ಶ್ರೀಹರಿ ||ಕರು|| 2 ವರುಷ ಜಲದೊಳು ಪರಾತ್ಮರ ಪುಲಿಗಿರಿ ಕರಿ ಮೊರೆಯಿಡಲಾಗಬೇಗ ಕರುಣದಿಂ ಮೊರೆಕೇಳಿ ಗರುಡನ ಪೆಗಲೇರಿಸಾರಿ ಕರದ ಚಕ್ರದಿ ಸೀಳಿ ನಕ್ರನ ಕರಿಯ ಪೊರೆದಾ ವರದ ವಿಠಲ 3
--------------
ಸರಗೂರು ವೆಂಕಟವರದಾರ್ಯರು
ಕರುಣದಿಂದ ಕಾಯೊ ಎನ್ನನು ಉರಗಾದ್ರಿವಾಸ ವಿಠ್ಠಲ ದೇವ ಪ ತಂದೆ ವೆಂಕಟೇಶ ವಿಠ್ಠಲ ಬಂದು ಎನ್ನ ಹೃದಯದಲ್ಲಿ ನಿಂದು ನಾಮ ನುಡಿಸಿ ಪೇಳ್ವ ಚಂದ ಮನಕೆ ತಂದು ಕೊಡುತ 1 ವಾಸುದೇವ ನಿನ್ನ ಮಹಿಮೆ ತೋಷದಿಂದ ಭಜಿಸುವುದಕೆ ದೋಷಗುಣಗಳನ್ನೆ ಕಳೆದು- ಲ್ಲಾಸ ಮನಕೆ ಒದಗುವಂತೆ 2 ಮಂದಮತಿಗಳಾದ ಜನಕೆ ಮುಂದೆ ಗತಿಯ ಪಥವ ತೋರಿ ಬಂಧನಂಗಳನ್ನೆ ತರಿದು ತಂದೆ ಕಾಯೊ ಇಂದಿರೇಶ 3 ಬೊಕ್ಕಸದ ದ್ರವ್ಯ ಜನರು ವೆಚ್ಚಮಾಡುತಿರುಹ ತೆರದಿ ಮೆಚ್ಚಿ ಬಂದ ಜನರ ಮನದ ಇಚ್ಛೆ ಪೂರ್ತಿಗೊಳಿಸಿ ಪೊರೆದೆ 4 ಅಂತರಂಗದೊಳಗೆ ನಿನ್ನ ಚಿಂತೆ ಮರೆಯದಂತೆ ಕೊಟ್ಟು ಅಂತರಾತ್ಮ ಕಮಲನಾಭ ಸಂತೈಸಿ ಕಾಯೊ5 ಟ ಟ ಅಸ್ವತಂತ್ರ ಜೀವಾಂತರ್ಗತ ಶ್ರಿ ಭಾರತೀರಮಣ ಮುಖ್ಯ ಪ್ರಾಣಾಂತರ್ಗತ ಶ್ರೀ ಉರಗಾದ್ರಿವಾಸ ವಿಠ್ಠಲಾಭಿನ್ನ ಶ್ರಿ ಗುರುವಾಸುದೇವ ವಿಠ್ಠಲಾ ಭಿನ್ನ ಶ್ರೀ ತಂದೆ ವೆಂಕಟೇಶ ವಿಠ್ಠಲಾತ್ಮಕ ಶ್ರೀ ಕಮಲನಾಭ ವಿಠ್ಠಲಾಯ:ನಮ: ಟ ಶ್ರೀ ಕಮಲನಾಭ ವಿಠ್ಠಲ ದಾಸರಾದ ಜೀವೂಬಾಯಿ ಅವರು ರಚಿಸಿದ ಮೊತ್ತ ಮೊದಲ ಹಾಡು.
--------------
ನಿಡಗುರುಕಿ ಜೀವೂಬಾಯಿ
ಕರುಣದಿಂದಲಿ ಪ್ರಕಾಶ ದೇವನ ಪ ಹೇಮ ಮುಕುಟ- ಮಾಣಿಕ್ಯಯುಕ್ತವಾಗಿರೆ ಇರುವ ಶಂಖಚಕ್ರವು ಮುತ್ತಿನಹಾರ ಮೋಹನನೆ ಮತ್ತೆ ಅಂದಿಗೆ ಗೆಜ್ಜೆಯುಕ್ತದಿ ವಸ್ತುಗಳು ಅಕೋ ಭೂಷಣವು ಪ್ರತಿರೂಪ-----ಭಾವನಾ 1 ದಿವಿಜ ಪೋಷಕನಾದ ಶ್ರೀಹರಿ ಜ್ಞಾನಿಗಳ ಬಿಡದಿನ್ನು ಸಲಹುವಾ---- ನ ವಾಧಿಪನೊಳಾದನು ? ಗಾನಲೋಲನಾಗಿ ಕನಸು ಮನಸಿನಲ್ಲಿ ಕರುಣರಸದಲ್ಲಿ ಸಾನುರಾಗದಿ ನಾಟ್ಯವಾಡುತ ಸಾರಿ ಸಾರಿಗೆ ಬಂದ ಕೃಷ್ಣನ 2 ಕಟಿ ಸುದರ್ಶನ----ಡುವಣಿ ಬಂದು ಎನ್ನ ಹೃದಯ ಪರಿ ಪರಿಯಿಂದ ತೋರುವ ನಿರುತ ದೃಷ್ಟಿಯಿಂದ ನಾನು 3
--------------
ಹೆನ್ನೆರಂಗದಾಸರು
ಕರುಣದೆನ್ನ ಕರಪಿಡಿ ಕಾಯೋ ಪ ಸಿರಿನಾರಾಯಣ ಶರಣೆಂಬೆ ಅ.ಪ ಮೇಲ್ ಮೇಲ್ ಗುಣಗಾನವ ಮಾಡೆ ಬಾಲ್ಯಮೊದಲು ಮುದಿತನ ದೊಳಗುಂ ಸೌ ಶೀಲ್ಯ ಸ್ತುತಿಪೆ ಶುಕನುಡಿಯಂತೆ 1 ದಶರೂಪಗಳಂ ಧರಿಸುತ ಮರೆಸಲು ವಿಶ್ವವ್ಯಾಪಕಗುರು ತರವೇ ಕೃಷ್ಣನಾಮನಾವೆಯೊಳು ಬಹೇ 2 ವೈನತೇಯನನೊಡಗೊಂಡು ಬಹೆ ನಿನ್ನ ಸೆರಗ ಪಿಡಿಯುತ ಬರುವೆ3 ಸುಮನಸ ಪೂಜಿತ ನಮಿಸುವೆ ನಾಂ ಭ್ರಮೆಗಳ ಬಿಡಿಸುತ ಭವಭಯ ಹರ¸ ಕಮಲನಯನ ಹೆಜ್ಜಾಜೀಶ 4
--------------
ಶಾಮಶರ್ಮರು
ಕರುಣದೊಳೆನ್ನನು ನೀ ಪ ಪಡೆದ|ಜಗದೀಶ್ವರಿಯೆ ಅ ಪ ಧರಣಿಯ ಭಾರವನು|| ಶ್ರೀ| ಸರ್ವೇಶ್ವರಿಯೆ 1 ನಂಬಿಹೆ ಶಂಕರಿಯೆ || ಇಂಬುಗೊಡುತ ನೀ| ಬೆಂಬಿಡದೆನ್ನನು 2 ಪಂಕಜಮುಖಿ ಶ್ರೀ| ಶಂಕರಿ ಶುಭಕರಿ| ಕಿಂಕರಪಾಲಿನಿಯೆ || ಬಿಂಕದ ದಾನವ| ಸಂಕುಲವಳಿಸಿದ| ಶಂಖಚಕ್ರಾಂಕಿತೆ | ಶ್ರೀ ದುರ್ಗಾಂಬಿಕೆ 3
--------------
ವೆಂಕಟ್‍ರಾವ್
ಕರುಣವ ಬೀರು ಚೆನ್ನ ಕಾಯಬೇಕೋ ಎನ್ನಮರೆತಿರೆ ಕಾವರ ಕಾಣೆಪ. ಸೊಪನ ಜಾಗರದಲ್ಲಿ ನಿನ್ನ ಧ್ಯಾನವೆ ಬಂದುತೃಪ್ತನಾಗಿ ನಾನು ಜೀವಿಸುವೆಕಪಟದ ನುಡಿಯಲ್ಲ ನೀನೆ ಬಲ್ಲೆವಿಪತ್ತುಗಳನೆ ಬಿಡಿಸಯ್ಯ 1 ಕಡಲಮಗಳ ಗಂಡ ಕಾಮಧೇನು ನೀ ಕಂಡ್ಯಾಬಡವ ನಿನ್ನಡಿಗೆ ಪೊಡಮಡುವೆಒಡಲ ಬಳಿಯ ನೆಳಲಂತೆ ಬಿಡದೆ ನಿನ್ನದೃಢವಾಗಿ ನಾನು ಕೂಡುವೆನು 2 ತಂಡ ತಂಡದ ವ್ಯಾಧಿಯ ಉಂಡು ಉಂಡು ಬಳಲಿದೆಕಂಡ ಕಂಡವರ ಬೇಡಿ ನೊಂದೆಹಿಂಡುಹಿಂಡುಗಟ್ಟಿ ಬಂದ ಚಂಡ ದಂಡಧರನವರುತುಂಡು ತುಂಡು ಮಾಡಿ ಕಾಡುವರು 3 ಘೋರತರ ವ್ಯಾಧಿಗಳ ತೋರಿ ತೋರಿ ನರಕದಿಮುರಹರನುಣಿಸದೆ ಬಿಡನುಮೀರಿ ಮೀರಿ ಬಹ ಮೃತ್ಯು ಆರನಂಜಿಸುವುದುಭಾರಿ ಭಾರಿ ಗಳಿಸಿದ ಪಾಪ 4 ಹರಿ ನಿನ್ನ ಚರಣದ ಸ್ಮರಣೆ ಒಂದಿರೆ ಸಾಕುಮರಣಗಿರಣಕಂಜೆನಯ್ಯಶರಣಜನರು ನಿನ್ನ ಪ್ರಾಣಕ್ಕೆ ಸರಿಯೆಂಬೆಸಿರಿರಮಣನೆ ಸಲಹೆನ್ನ 5 ಶರಧಿಯೊಳಾಡುವ ಮಂದರಧರ ವರಾಹನೆಹಿರಣ್ಯಾಕ್ಷವೈರಿ ವಾಮನನೆಪರಶುರಾಮನೆ ರಘುರಾಮ ಕೃಷ್ಣ ಬೌದ್ಧನೆಧುರದಿ ಕಲ್ಕಿಯಾಗಿ ಮೆರೆದೆ 6 ಕರಕರ ಮತತತ್ವವ ಒರದೊರೆದು ಪೇಳುವೆಥÀರಥರದ ಹಿರಿಯರನೆಲ್ಲಮಿರಿ ಮಿರಿ ಮಿಂಚುತಿಹ ಮುರಹರನ ಭಜಿಸದೆಹರಿಹರಿಯೆಂದು ಪೇಳೆನೊಮ್ಮೆ 7 ಮನೆಮನೆವಾರ್ತೆಗೆ ಧನಂಗಳ ಗಳಿಸಿದೆಚಿನಿಚಿನಿಯಂಬರಕೆ ಮರುಳಾಹೆಮನೆಮನೆ ಮಹಿಮೆಯ ಕಾಣೆ ಕಾಣೆ ಕೆರೆಗಳನೆನೆನೆನೆದಾಡುತ್ತ ನಾ ಭಜಿಸಿ 8 ತನು ಜೀರ್ಣವಾಯಿತು ಕರಣ ಎನ್ನಿಚ್ಛೆಯೊಳಿಲ್ಲಮನವೆನ್ನ ಮಾತು ಕೇಳದಯ್ಯಇನಿತು ಸಂಕಟದವ ಇನ್ನು ನಾನೆಂತರ್ಚಿಪೆವನಜನಾಭನೆ ಹಯವದನ9
--------------
ವಾದಿರಾಜ