ಒಟ್ಟು 9381 ಕಡೆಗಳಲ್ಲಿ , 133 ದಾಸರು , 5307 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಲಿದವಳ ಬಿಡುವುದು ಧರ್ಮವಲ್ಲ | ಚಲುವ ನಿನಗಾಗಿ ನಾ ಯೇಸು ಕಾಲಕೆ ತಪವಿದ್ದೆ ಪ ತಂದೆತಾಯಿಗಳಲ್ಲಿ ಪುಟ್ಟಿದಾಕ್ಷಣದಲ್ಲಿ | ಅಂದೆ ನೇಮಿಸಿದರು ಪೆಸರನಿಟ್ಟು | ಸಂದೇಹಗೊಳದಿರು ಮೈಲಿಗೆಯವಳೆಂದು | ಬಂದ ಪ್ರಾಣವÀ ನೋಡು ಬರಿದೆ ಪೇಳುವಳಲ್ಲ 1 ಕನ್ಯಾವಸ್ಥಿಯಲಿಂದ ನಿನ ನಿನ್ನ ಧ್ಯಾನವಲ್ಲವೇ | ಅನ್ಯಪುರುಷರಾಪೇಕ್ಷೆ ಮಾಡಲಿಲ್ಲ | ಅನ್ಯಾಯವೇನು ಆಗಲಿ ಪೋಗುವರೇನೊ | ಅನ್ಯಥಾ ಈ ನುಡಿಗೆ ನಿಜಕೆ ನಿಲ್ಲುವೆ ನಾನು 2 ಮಲದಲ್ಲಿ ಮೂರುದಿನ ಪೋಗಾಗಿ ಹೋಗಿದ್ದೆ | ಬಲು ಶುಚಿಯಾದೆನೊ ಶುದ್ಧ ಜಲದಿ | ಘಳಿಗೆ ಕಡೆದರೆ ಎನ್ನ ಪ್ರಾಣನಿಲ್ಲವೊ | ಎನ್ನನಗಲಿ ಮೈ ತಪ್ಪಿಸಿ | ದೂರ ಕರೆದೊಯ್ಯೊ ಕರುಣದಲಿ 3 ನಗೆಗೇಡಿ ಮಾಡದಿರು ಜಗದೊಳಗೆ ಇಪ್ಪವಳ | ಸೊಗಸಿಗನೆ ಸರಸವಾಡುವನೆ ಬಾರೊ | ಮಗುಳೆ ಮತ್ತೊಬ್ಬರು ಮೆಚ್ಚಿದರೆ ಇದೆ ಪಾಟು | ಮಗುಳೇನು ಹೊಸ ಪರಿಯು ತೋರುವುದು ನೋಡಿದರೆ 4 ಕಂಡ ಕಾಣದ ಹಾಗೆ ಮಾತನಾಡಿದಿರೆನ್ನ | ಅಂಡೊಲಿವ ಖ್ಯಾತಿ ಎಂದಿಗೆ ತೀರದೂ | ಕುಂಡಲಿಗಿರಿವಾಸ ವಿಜಯವಿಠ್ಠಲ ವೆಂಕಟ | ಹಿಂಡು ಬಂಧುಗಳಿದ್ದರೇನು ಮಾನವನು ತೊರೆದೆ 5
--------------
ವಿಜಯದಾಸ
ಒಲಿಯುವೆ ನೀನೆಂತು ಹಲಧರಾನುಜಾ ಪ ಹೊಗಳಲು ನೀ ಮರುಳಾಗುವನಲ್ಲಾತೆಗಳಲು ನೀ ಮುನಿಯುವನಲ್ಲಾಹೊಗಳಲ್ಯೊ ತೆಗಳಲ್ಯೊ ತಿಳಿಯುವುದಿಲ್ಲಬಗೆಯನು ತೋರಲು ಹೇಳಸೊಲ್ಲ 1 ಪಂಚಪಕ್ವಾನ್ನವ ಹಂಚೇನೆಂದರೆಲಂಚಗುಳಿಯು ನೀನಲ್ಲಚಂಚಲಮನದವ ತಾನಾಗಿಹನೈಹಂಚಿಕೆಯನು ಹೇಳ್ ನಿತ್ಯತೃಪ್ತನೆ 2 ಪತಿ ನೀನಹುದೋಘನತರ ಗದುಗಿನ ವೀರನಾರಾಯಣಮನಸಿನ ಇಂಗಿತವನು ಪೇಳೆಲೊ ನೀ 3
--------------
ವೀರನಾರಾಯಣ
ಒಲ್ಲೆನವ್ವಾ ಲಕುಮಿಯ ನಲ್ಲ ಬಾರದಿದ್ದರೆತನುಹೊರೆಯನೊಲ್ಲೆನವ್ವಾ ಪ ಭಾರ ಹುವ್ವಿನಭಾರ ಸೈರಿಸಲಾರೆನೆಮಾರನಯ್ಯನು ಬಾರದಿದ್ದರೆಮಾರನಂಬಿಗೆ ಗುರಿಯ ಮಾಡಿ 1 ಎಲ್ಲ ದೇವರ ವಲ್ಲಭನೆಂದುಒಲಿದ ಮನ ನಿಲ್ಲದೆನಿಲ್ಲದೆ ರಂಗ ಪೋದ ಮಧುರೆಗೆಬಿಲ್ಲ ಹಬ್ಬದ ನೆವನ ಮಾಡಿ 2 ಮಂದಾನಿಲನ ಸಹಿಸಲಾಗದುನೊಂದೆ ಶುಕಪಿಕ ರವಗಳಿಂದಚಂದ್ರಕಿರಣದಿ ಬೆಂದೆ ಇನ್ನೀವೃಂದಾವನವೇಕನನಗಲಿ 3 ಮುನ್ನ ಆಡಿದ ಮಾತ ಮರೆತುಎನ್ನ ಮನದೊಳಗೀಡಾಡಿವನ್ನಜಾಕ್ಷನು ಬಾರ ಪುರದವನ್ನಿತೆಯರನು ಮೆಚ್ಚಿ ಪೋದ 4 ಪೊಂಗೊಳಲ ಧ್ವನಿಗೆ ಸಿಲುಕಿಭಂಗಗೆಟ್ಟೆನಂಗಜನಿಂದಲಿಪೆಂಗಳಿಗುಚಿತವಲ್ಲ ಇದುರಂಗವಿಠಲನ ತೋರದಿದ್ದಡೆ 5
--------------
ಶ್ರೀಪಾದರಾಜರು
ಒಲ್ಲೆನೀ ಕವಚ ಕುಂಡಲಗಳನ್ನು ಒಲ್ಲೆ ನಾನು ಕಿರೀಟ ಪಾದುಕೆಗಳನ್ನು ಪ ಹಗಲು ಹಾದರಗಿತ್ತಿಯಂತಿಪ್ಪ ಮನುಜನಿಗೆ ಸೊಗಸುವುದು ಸೊಗಸದೆಂಬರುಹಿಲ್ಲದೇ ಜಗದುದರ ನಿನ್ನಿಂದ ಶೋಭಿಸುವನಘ್ರ್ಯದ ವ ಸ್ತುಗಳ ಎನಗೀಯಲೇತಕೆ ಮೆಚ್ಚಿದೆಯೋ ದೇವ 1 ನೋಡಲೆವೆ ಸೀವುದಿದನಿಟ್ಟು ಕೈಕೊಂಡ ಪ್ರಾಣ ಗೂಡಿನೊಳಗಿಹುದೇ ಅಕಟಕಟ ಹರಿಯೇ ಬೇಡವೀ ಮಾಯ ಕೃಪೆಯಿಂದ ಸದ್ಭಕುತಿಯ ಜೋಡ ತೊಡಿಸಿದನೊಲ್ಲೆ ಕಾಡಬೇಡವೋ ದೇವ 2 ಶಿರಕೆ ಕರ್ಣಕೆ ಚರಣಗಳಿಗೆ ಕಥೆಯನ್ನು ಪೇ ಳ್ದೆರಗುವುದನೊಲಿದು ಕುಣಿದಾಡುವುದನು ಕುಂಡಲ ಕಿರೀಟಗಳನು ವರ ಪಾದುಕೆಗಳ ನಾನೊಲ್ಲೆ ಹರಿಯೇ 3 ನಿನ್ನ ದಾಸಾನುದಾಸ ದಾಸರ ಗುಣಾರ್ಣವದೊ ಳೆನ್ನೊಳೆಳ್ಳನಿತುಂಟೆ ಅಕಟಕಟ ಹರಿಯೇ ಬನ್ನಬಡಿಸಲು ಬೇಡ ದಕ್ಕದೀಯುಡುಗೊರೆಯು ಚುನ್ನವಾಡುವರು ಧಾತ್ರಿಯ ಮನುಜರೆಲೆ ದೇವ 4 ಇದನು ಕೊಡಬೇಕಾದಡೆಯು ಮುಕ್ತ್ಯಾಂಗನೆಯ ಮದುವೆಯನು ಮಾಡಿ ಯಾಬಳಿಕನಿತ ವೊದವಿಸುವುದುಚಿತ ಒಪ್ಪಂದವಾಗಿಹುದು ಚದುರ ವೈಕುಂಠ ವೇಲಾಪುರಾಧೀಶ 5
--------------
ಬೇಲೂರು ವೈಕುಂಠದಾಸರು
ಒಳ್ಳೇದೋ ಒಳ್ಳೇದೋ ಎಲ್ಲ ಸ್ಥಳವ ಬಿಟ್ಟು | ಇಲ್ಲಿ ಅಡಗಿದ ಬಲ್ಲಿದ ತನವೇ ಪ ಬಿಡೆ ಬಿಡೆನೊ ಎನ್ನ ಒಡಿಯ ತಿರುಮಲ ನಿನ್ನ | ಉಡಿಯ ಪೀತಾಂಬರ ಪಿಡಿದು ನಿಲಿಸಿಕೊಂಬೆ 1 ಎರವು ಮಾಡಿ ತಿರುಗಿಸಿದಿ ನೀ ಎನ್ನ ಕೊರಳಿಗೆ ನಿನ್ನ ಚರಣ ಕಟ್ಟಿಕೊಂಬೆ 2 ಅತ್ತ ಇತ್ತಲಿ ನೋಡಿನೆತ್ತ ಪೋಗಲಿ ಎನ್ನ | ಚಿತ್ತದಲಿ ನಿನ್ನ ಹತ್ತೆಗಟ್ಟಿಕೊಂಬೆ 3 ಅತ್ತಿಯ ಮಕ್ಕಳಿಗೆ ತೆತ್ತಿಗ ನೀನಾಗಿ | ವಿತ್ತವಿತ್ತದರಾದ ರಾಸಿ ಸಿರಿಯಲ್ಲಿ 4 ಇರಳು ಹಗಲು ಬಿಡದೆ ಗುರು ಪುರಂದರಗೊಲಿದೆ | ಬಿರಿದು ಏನೊ ಇಷ್ಟು ವಿಜಯವಿಠಲಾ5
--------------
ವಿಜಯದಾಸ
ಓಂ ನಮೋ ಸಕಲ ಮಂಗಲದಾಯಕ |ಘನ್ನ ಮಹಿಮ ಶ್ರೀ ಗಣನಾಯಕ |ನಿನ್ನ ಕೀರ್ತಿ ಪಾಠವ ಭಕ್ತರ |ಇನ್ನು ಮಾಡೋ ನಿರ್ವಿಘ್ನದಿ ಮುಕ್ತರ 1 ನಿರ್ಜರ ವಾಣಿ |ಬಂದು ಸನ್ಮತಿ ನೀಡುತ ಶಾರದಾ |ಇಂದು ವದನೆ ರಕ್ಷಿಸು ಶಾರದಾ 2 ನಿರ್ಜರ ರಂಜನಾ |ಕೃಪೆ ಯಲಿ ರಕ್ಷಿಸು ದೋರಿ ನಿರಂಜನಾ 3 ಸಚ್ಚಿದಾನಂದಾ ವಿಗೃಹ ಮೂರುತಿ |ಅಚ್ಯುತಾನಂತ ಮಂಗಲ ಕೀರುತಿ |ಎಚ್ಚರಿ ಸೆನಗೆ ಭಕ್ತಿಯ ಸ್ಪಾದವಾ |ನಿಚ್ಚ ರಕ್ಷಿಸು ತೋರುತ ಪಾದವಾ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಓಂಕಾರಾ ಕಾರಾ ಶಿವನೇ | ಪಾಲಯ ಮಾಂ ಪ ವೈಕಾರಿಕಾದಿ ತ್ರ್ಯಾಕಾರ ಹರನೆಸ್ವೀಕರಿಸುವುದೀ ತೋಕನ ಬಿನ್ನಪ ಅ.ಪ. ನರ್ಮದೆ ಕಾವೇರೀ ಸಂಗಮಾ | ಶೈಲವಾಸಾ |ಹಮ್ರ್ಯ ದೊಳಗೆ ಇಹ | ಬೊಮ್ಮನಯ್ಯಾ ಪದಕಮ್ಮಲ ಕಾಂಬ ಸು | ಹಮ್ಮ ನೀಯೊ ಹರ 1 ವ್ರಾತ ತುತಿಸೆ ಬಲುಪ್ರೀತಿಲಿ ತ್ರಿಪುರಾ | ರಾತಿ ಎನಿಸಿದೇ 2 ಬದರೀಯಾ ವಾಸವಾ | ನಾರಾಯಣನಾ |ಪದದ ಉದಕ | ಅಭಿಷೇಚಿಸುವೆನುಮುದದಿ ಕೊಳ್ಳೊ ಗುರು | ಗೋವಿಂದ ಪೌತ್ರಾ 3
--------------
ಗುರುಗೋವಿಂದವಿಠಲರು
ಓಡಿ ಬಾ ನಿನ್ನ ಎತ್ತಿ ಮುದ್ದಾಡುವೆ ನಾಗಶಯನ ರಂಗನೇ ಪ. ನಾಗಶಯನ ರಂಗನೆ, ನಾಗಶಯನ ರಂಗನೇ ಅ.ಪ. ಕುಣಿ ಕುಣಿಯುತ ಗೆಜ್ಜೆ ಝಣ ಝಣರೆನೆÀ್ನ ಕೃಷ್ಣಾ ಫಣಿಶಾಯಿ ನಿನ್ನ ನಾ ಕ್ಷಣದಲ್ಲಿ ಬಿಗಿದೂ 1 ಚಿನ್ನರೊಡನೆಗೂಡಿ ಮಣ್ಣನೆ ಮೆಲ್ಲದಿರೂ ಕೃಷ್ಣಾ ಅಣ್ಣಯನೊಡನಾಡೊ ಚಿನ್ನ ಗೋಪಾಲನೇ 2 ಗೋಪಿಯರೊಡನಾಡಿ ಗೋಕುಲಾಂಬುಧಿ ಚಂದ್ರ ಗೋಪಾಲಕೃಷ್ಣವಿಠಲ ಗೋವಳರೊಡೆಯ 3
--------------
ಅಂಬಾಬಾಯಿ
ಓಡಿ ಬಾರೋ ರಂಗಯ್ಯ ಓಡಿ ಬಾರೋ ಕೃಷ್ಣಯ್ಯ ಪ. ನೋಡಿ ನಿನ್ನ ಮುತ್ತನೀಡುವೆ ಹಾಡಿ ಜೋಗುಳವ ಪಾಡುವೆ ಅ.ಪ. ಮೊಸರು ಭಾಂಡ ಒಡೆದು ಬೆಣ್ಣೆ ಹಸುಳೆ ಮೆದ್ದು ಬಾಯೆಲ್ಲಾ ರಸಿಕಸಿಯಾಗಿರುವ ಮೈಗೆ ಬಿಸಿ ನೀರೆರೆವೆನೊ ರಂಗ 1 ಬಿಸಿ ದೋಸೆಯ ಕೊಡುವೆನೆ ಮೊಸರೋಗರವ ಉಣಿಸಿ ನಿನಗೆ ಹಸುರಂಗಿಯ ತೊಡಿಸುವೆ ಕೃಷ್ಣಾ 2 ಮುದ್ದು ಮುದ್ದಾದ ಪಾದ ಹೆಜ್ಜೆನಿಟ್ಟು ಬಾರೆಲೊ ಮುದ್ದೆ ಬೆಣ್ಣೆ ಹಣ್ಣು ಕೊಟ್ಟು ಮುದ್ರೆಯುಂಗುರವನಿಟ್ಟು ನೋಡುವೆ 3 ಅಣ್ಣ ಬಲರಾಮನೊಡನೆ ಚಿಣ್ಣ ಆಡಬಾರೆಲೊ ಚಿಣ್ಣಿಕೋಲು ಚಂಡು ಬುಗುರಿ ಚಿಣ್ಣ ಕೊಡುವೆನೋ ಕೃಷ್ಣಾ 4 ಶೃಂಗಾರವ ಮಾಡುವ ಶ್ರೀ ಶ್ರೀನಿವಾಸ ಬಾರೆಲೊ ಮುದ್ದು ಕಂಗಳಿಗೆ ಕಪ್ಪನ್ಹಚ್ಚಿ ರಂಗ ನಿನ್ನ ನೋಡುವೆದಣಿಯ5
--------------
ಸರಸ್ವತಿ ಬಾಯಿ
ಓಡಿಬಾ ಬಾ ರಂಗ ಆಡುಬಾ ನೀಲಾಂಗ ಪಾಡಿ ಪೊಗಳುವೆ ರಂಗ ಶ್ರೀಪಾಂಡುರಂಗ ಪ ಬೇಡುವೆನೊ ಮಾರಾಂಗ ನೋಡಿನಲಿವೆನೊರಂಗ ನೀಡು ವರಂಗಳ ರಂಗ ಶ್ರೀಕರಾಂಗ ಅ.ಪ ಬಡ ಮೌನಿಗಳು ನಿನ್ನ ಪಿಡಿಯ ಬಂದಿಹರೆನ್ನ ತೊಡೆಯ ಮೇಲಿರೋ ಚಿನ್ನ ಮುದ್ದುಮೋಹನ್ನ ಬೆಡಗ ತೋರುತೆ ಚೆನ್ನ ಚೆಲುವ ಬಾ ರನ್ನ ಒಡೆಯ ಮಾಂಗಿರಿಯ ಚೆನ್ನಿಗ ನಂಬಿಹೆನೊ ನಿನ್ನ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಓಡ್ಯಾಡುತ ನೀ ಒಲಿದೊಲಿದು ಮನೆಗೆ ಬಾರೊ ಮುಕುಂದ ನೋಡೆನ್ನನು ದಯಮಾಡದಿರುವುದೇನು ಚೆಂದ ಪ ನೀಲವರ್ಣನೆ ನೀರಜಾಕ್ಷ ನಿನ್ನಪಾರ ಗುಣವ ನಾ ಏನುವರ್ಣಿಸಲ್ಹೇಳೊ ಸಾಕ್ಷ ಇಂದಿರಾಪತಿ ನಿನ್ನ ಆಕಾರ ನೋಡುವೆ- ನೆಂದ್ಹುಟ್ಟಿತೆನಗೆ ಮಹಾಪೇಕ್ಷ 1 ಹಸ್ತಿ ವರದ ಕೇಳು ನಿನ್ನ ಚರಣಾಬ್ಜಗಳಿಗೆ ನಾ ಮಸ್ತಕ ಬಾಗುವೆ ಮುನ್ನ ತಿಳಿ ಭೃತ್ಯನೆಂದೆನ್ನ ಚಿತ್ತಕೆ ತಂದು ನೀ- ನಾಗ ಬೇಕೆನಗೆ ಪ್ರಸನ್ನ 2 ಉಟ್ಟಾಂಬರನಿರಿಜರವು ಭೂಷಣ ಹೊಸ ಪರಿಯು ವಕ್ಷಸ್ಥಳದಿ ನೋಡೋ ಸಿರಿಯು ಇಟ್ಟಿರೋ ಬಾಪುರಿಯು ಶ್ರೇಷ್ಠ ಭೀಮೇಶ- ಕೃಷ್ಣನೆ ಲೋಕನಾಳುವ ದೊರೆಯು 3
--------------
ಹರಪನಹಳ್ಳಿಭೀಮವ್ವ
ಓದಿ ಮರುಳಾದರಯ್ಯ ಬೋಧವಿಲ್ಲದೆ ಓದಿನೋಡಲದನರಿತು ಹರಿಯ ನೆನೆಯಲೊಲ್ಲದೆ ಪ. ಕರಣೇಂದ್ರಿಯ ಕಾಟಕೆ ಸಿಲುಕದ ಕರ್ಮದಾವುದು ಪರಗತಿ ವಿಚಾರವಿಲ್ಲದ ನಿಜದಾವುದು ಗುರುಚರಣ ಪರಿಚಯವಿಲ್ಲದ....ಯಾವುದು1 ಅಂತರಂಗ ಶುದ್ಧಿಯಿಲ್ಲದ ಕಂತೆಯಾವುದು ನಿತ್ಯ ಶಾಂತಿ ಶಮದಮವಿಲ್ಲದ ಭ್ರಾಂತಿ ಯಾವುದು ಸಂತತ ಸಮಾಧಾನದ ಚಿಂತೆಯಾವುದು ನಮ್ಮ ಕಪಟ ದಾವುದು 2 ಮಧ್ವಮತದ ಮಾರ್ಗವನ್ನು ಮೀರಿದಾವುದು ಶ್ರುತಿ ಸಿದ್ಧ ಹರಿಯ ಗುಣವ ಹಾಡಿಪಾಡದ್ಯಾವುದು ವೃದ್ಧರನ್ನು ಕೆಣಕಿ ಕಾಡಿ ಕೊಂಬದಾವುದು ಅದು ಸಿದ್ಧಯಮನ ಬಾಧೆಗೆ ಒಳಗಾಗುವದಾವುದು 3 ಸಾರತತ್ವ ಸುಧೆಯ ಸವಿಯ ದೂರಿದಾವುದು ಪರಿ- ವಾರ ಜನರ ಪೊರೆವರುಪಚಾರ ದಾವುದು ಸಾರಿ ತನ್ನ ಸಾಕ್ಷಿಗಿನ್ನು ಬಾರದಾವುದು ಅದು ಕೀರನಾಕ....ಯಾ ಸಂಸ್ಕಾರ ದಾವುದು 4 ಅನ್ನದ ಜೀವ ಭಿನ್ನಹರಿ ಎನ್ನದಾವುದು ದ್ವಾಸು- ಪರ್ನಪಥವ ಪಾ....ಮಾಡದಾವುದು ಧನ್ಯ ಹಯವದನ ನಾನೆನ್ನುವುದು ಅದು ಕುನ್ನಿಯಂತೆ ಹಲವು ಪರಿಯ ಕೂಗುವುದದು 5
--------------
ವಾದಿರಾಜ
ಓದು ಬೇಡ ನಿನಗೆ ಶಾಸ್ತ್ರ ಬೇಡ ಸುಶೀಲಬುದ್ಧಿಲಿ ದೃಷ್ಟಿ ನಿಲಿಸಿದರೆ ಸಾಕೋ ಪ ವೇದ ಎನ್ನಲಿ ಬೇಡ ಯಮುನೆಧುಮುಕಲಿ ಬೇಡ ಕಪ್ಪೆಯಂತೆ ನೀರಲಿ ಮುಳಗಬೇಡ ಬಾಯಿ ಬಿಗಿಯಲಿ ಬೇಡ ಮೂಗ ಹಿಡಿಯಲಿಬೇಡ ಆ ಜಾಗದಲಿ ದೃಷ್ಟಿ ನಿಲಿಸಿದರೆ ಸಾಕೋ 1 ಆಯಾಸ ಬಡಬೇಡ ಅಡವಿ ಸೇರಲಿ ಬೇಡಕಾವಿ ಕಮಂಡಲ ಧರಿಸಬೇಡಜಪವ ಎಣಿಸಲಿ ಬೇಡ ಉಪವಾಸವಿರಬೇಡಕಾಳಷ್ಟು ದೃಷ್ಟಿ ನಿಲಿಸಿದರೆ ಸಾಕೊ 2 ಎರಡೂ ಕಣ್ಣಿನಿಂದ ನೋಡಿ ನಿಂತಿರಲಾಗಿಶರೀರ ಬಯಲಾದರೂ ಅಳಿವು ತಪ್ಪುದುಅರಿವಿಗೇ ಅರಿವಾಗಿ ಅರಿವಿಗೆ ಕುರುಹಾಗಿಗುರು ಚಿದಾನಂದನ ಗುರುತು ಇಲ್ಲೆನ್ನಬೇಡ 3
--------------
ಚಿದಾನಂದ ಅವಧೂತರು
ಔಷಧದ ಬೇರೊಂದನು ನಾರದನು ತಂದ ಪೋಷಣೆಗೆ ಸಕಲರೂ ಸವಿಯಲೆಂದ ಪ ಜ್ವರಭೇದಗಳಿಗೆಲ್ಲ ನರಹರಿ ಎಂಬ ಬೇರು ಶಿರವೇಧೆ ಎಂಬುದಕೆ ಹರಿಹರಿ ಎಂಬ ಬೇರು ವಾತ ರುಜೆಗಳಿಗೆ ಸಿರಿಲೋಲನೀ ಬೇರು ಪರಿಪರಿಯ ಭವಗಳಿಗೆ ನಾರಾಯಣಾ ಎಂಬ ಬೇರು 1 ಪಿತ್ತರೋಗಂಗಳಿಗೆ ಚಿತ್ತಜನಪಿತನೆಂಬ ಪೃಥ್ವಿಯೊಳಗತ್ಯಧಮ ವಿಭಂದ ರೋಗಗಳಿ ಗರ್ಥಿಯಿಂ ಲೇಪಿಸುವ ಸತ್ವಗುಣನಿಧಿಯೆಂಬ ನಿತ್ಯಶೌರಿಯ ನಾಮ ಶಿವಬೇರು 2 ನಾರದನು ಬೇರೂರೆ ನೀರೆರೆದ ಪ್ರಹ್ಲಾದ ಧೀರಬಲಿ ಬೆಳೆಯಿಸಿದ | ನೀರ ಗಜನೆರೆದ ವೀರದಶಶಿರನನುಜನೆಚ್ಚರದೊಳಿದ ಕಾಯ್ದ ನಾರಿ ದ್ರೌಪದಿ ಶಿರದಿ ಮೊಗ್ಗಾಗಿ ಧರಿಸಿದಂಥ 3 ಅರಳಿದ ಸುಮಗಳನು ಅಕ್ರೂರ ಪೋಷಿಸಿದ ತ್ವರಿತದಿ ಕಾಯ್ಗಳನು ಶುಕದೇವ ಕಾಯ್ದ ನರರೆಲ್ಲರೀ ಫಲವ ದಿನದಿನವು ಮೆಲಲೆಂದು ವರದ ಮಾಂಗಿರಿರಂಗ ಪೇಳುತಿಹನು 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಕಂ||ಇಂದುವಿನ ವಾರದರ್ಚನೆಸಂದುದು ನಿನ್ನಡಿಗಳಿಂಗೆ ಗ್ರಹಗತಿ ಸೂಚಿಸೆಹಿಂದಣ ಕರ್ಮದ ಫಲವನುಸಂದೇಹವು ಬಿಡದು ಬಿಡಿಸು ವೆಂಕಟರಮಣನೆದುರಿತವನು ಪರಿಹರಿಸು ಸ್ಥಿರಭಕ್ತಿುರಿಸುತಿರುಪತಿಯ ಸ್ಥಿರವಾಸ ಶ್ರೀ ವೆಂಕಟೇಶ ಪಭಯವಾಗುತಿದೆ ದೇವ ಭಯಬಡಿಸುತಿರೆ ಕರ್ಮಭಯವಿಲ್ಲದಿರುವದೆಂತುಭಯನಿವಾರಕನಾಮ ಭಯತಿಮಿರ ರವಿಯಹುದುಭಯ ಹೋಗಿ ಸ್ಥಿರವಾಗಿ ಮನ ನಿಲ್ಲದಿಹುದು 1ಪರಮ ಯೋಗ್ಯನಿಗೊಂದು ಪಿರಿದಾದ ದುಃಖವಿದೆಪರಿಹರಿಸದಾವ ವಿಧದಿಕರಗಿ ಕಂದುತಲಿರಲು ಬಿರಿಸು ಕರ್ಮದ ಗತಿಯುನರಹರಿಯೆ ಮಹಿಮೆಯನು ನೆರೆ ತೋರಿಸೀಗ 2ಭಜನೆಯನು ಮಾಡಿದರೆ ಭಜನೆ ಕಾಮನೆಯಾಗಿನಿಜ ದೊರಕದೆಂಬ ಭಯವುಭಜಿಸಿ ಪಾಪವ ಕಳೆಯೆ ಭಜನೆಯದಕಾಗುವುದುಭಜನೆ ದೇಹದಿ ನಿಂದು ಭವ ತಾನು ನಿಲ್ಲುವುದು 3ಕರ್ಮಕೀ ಪರಿ ಬಲವು ಧರ್ಮವಾಗಿರೆ ಬಲಿತುಕರ್ಮವೇ ಬೆಳೆಯುತಿಹುದುಮರ್ಮವರಿತರು ಬಿಡದು ಹೆಮ್ಮೆಯದು ಬಲ್ಲವಿಕೆಧರ್ಮ ಬರುವದು ನಿನಗೆ ಕರ್ಮವಿದ ಕಡೆಗೊಳಿಸು 4ಇಚ್ಛೆುಂದಿದ ಸೃಜಿಪೆ ುಚ್ಛೆುಂ ಪರಿಹರಿಪೆಇಚ್ಛೆಯೇ ತೋರುತಿಹುದುಇಚ್ಛೈಸಿ ನಿನ್ನಡಿಯನಚ್ಯುತನೆ ಭಜಿಪರಿಗೆ 5ತುಚ್ಛವಾದೀ ಕರ್ಮ ಬಿಚ್ಚದಿಹುದೇನುಗರ್ವ ಬರುವದು ಜನಕೆ ಸರ್ವಗತನೆನಿಸಿದರೆನಿರ್ವಹಿಪೆನೆನಲು ಹೀಗೆಸರ್ವೇಶ ನೀನೊಲಿದು ಸರ್ವದೋಷವ ಕಳೆಯೆಗರ್ವವೆಡೆಗೊಳ್ಳದೈ ಪೂರ್ವದವನೆನಿಸು 6ಸೂತ್ರವನು ನಿರ್ಮಿಸಿದೆ ಸೂತ್ರ ನಿನ್ನಾಧೀನಸೂತ್ರಕ್ಕೆ ಶಕ್ತಿಯೆಂತುಯಾತಕೀ ಕರ್ಮಗತರನು ಮಾಡಿ ಜನರುಗಳ ಪಾತಕರು ಹೊರಗೆಂದು ಯಾತನೆಯ ಮಾಳ್ಪೆ 7ಮೃಷೆಯೆಂದ ಮಾತ್ರದಲಿ ಮೃಷೆಯಾಗದೀ ದುಃಖವಿಷಮವೇ ಬಳಲಿಸುವದುವಿಷವು ಮೊದಲಾಗಿ ತದ್ವಿಷಮ ಕರ್ಮದಿ ಹರವುವಿಷಮವಿದು ನಿನ್ನ ನಿಜದಲಿ ತೊಲಗದೆಂತು 8ಕರುಣಾಕರನೆ ನೀನು ಗುರುಮುಖದಿ ಕರ್ಮಗಳಬರಸೆಳೆದು ಬಯಲಮಾಡೆಮರೆವೆಯಾವರಣವಿರಬೇಕೆ ತಿರುಪತಿವಾಸವರದ ಶ್ರೀ ವಾಸುದೇವಾರ್ಯ ವೆಂಕಟರಮಣ 9ಓಂ ಪಾರ್ಥಸಾರಥಯೇ ನಮಃ
--------------
ತಿಮ್ಮಪ್ಪದಾಸರು