ಒಟ್ಟು 4192 ಕಡೆಗಳಲ್ಲಿ , 129 ದಾಸರು , 2829 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನುವಿದು ನಿತ್ಯವಲ್ಲ ಮನವು ನಿಶ್ಚಲ ಅಲ್ಲ ಪ ಕನಸಿನಂತೆ ಜೀವಿತವೆಲ್ಲ ಇನಿತು ಶಾಂತಿಯ ತಾಣ ಅಲ್ಲ ಅ.ಪ ಜಲಚರಂಗಳು ವನಚರಂಗಳು ಅಲೆವ ಪಕ್ಷಿಕೀಟಕ್ರಿಮಿಗಳು ಕಲುಷ ವಿಮಲವೆಂಬುದನರಿಯವು ಮಾನವ ಜನ್ಮಕೆ 1 ಜನುಮಗಳೊಳು ಹಿರಿಯದೆನಿಪ ಮನುಜ ಜನ್ಮವನಾಂತ ಮೇಲೆ ವಿನಯ ನಯ ವಿಧೇಯತೆಯಿಂದ ವನಜನಾಭನ ನೆನೆಯದಿರ್ದೊಡೆ 2 ಭಜಿಪ ಭಕ್ತರ ಕೂಗಿಗೊಲಿದು ಗಜವ ಪಾಲಿಸಿದಂತೆ ಬಂದು ನಿಜಪದಂಗಳ ತೋರ್ಪ ಮಾಂಗಿರಿ ವಿಜಯರಂಗನ ಸನ್ನುತಿ ಗೈಯದ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ತನ್ನ ತಾ ತಿಳಿದು | ಧನ್ಯನಾಗೊ ಬಗೆ ಇದು | ಖಿನ್ನವಳಿದು ಪೂರ್ಣ ಬ್ರಹ್ಮವನ್ನು ಕಾಂಬುದು ಪ ತತ್ತ್ವ ಶಾಸ್ತ್ರವನ್ನು ಓದಿ | ಭಕ್ತಿಯಿಂದ ಮನನ ಮಾಡಿ | ಯುಕ್ತಿ ಭಾವವೆಲ್ಲ ಕಳೆದು ಮುಕ್ತನಾಗುತಾ || ನಿತ್ಯವಾದ ವಸ್ತು ತಾನೆ | ಮತ್ತೆ ಬೇರೆ ಇಲ್ಲವೆಂದು | ಸತ್ಯ ಶರಣರಡಿಯ ಪಿಡಿದು ಚಿತ್ತದಲ್ಲಿ ನಲಿವುದು 1 ಆಶೆ ಮೂರರಲ್ಲಿ ಇನ್ನು | ಬೇಸರಾಗಿ ವಿಷಯದ | ವಾಸನೆಗಳ ಜರಿದು ಪಾಶ ಕ್ಲೇಶವಳಿಯುತ || ನಾಸಿಕಾಗ್ರದಲ್ಲಿ ಮನವ | ಸೂಸದಂತೆ ನಿಲಿಸಿ ಜಗ- | ದೀಶನಾಟವನ್ನು ನೋಡಿ ನಾದ ಘೋಷ ಕೇಳ್ವುದು 2 ಹಿಂದೆ ಒಂದು ನೆನೆಸದಿನ್ನು | ಮುಂದೆ ಉಳಿದ ಕರ್ಮವನ್ನು | ಬಂದುದೆಲ್ಲ ಉಂಡು ಗೆದ್ದು ಹರುಷದಿಂದಲಿ || ತಂದೆ ಭವತಾರಕನ | ಹೊಂದಿ ಸದಾನಂದದಿಂದ | ಮುಂದೆ ಭವಕೆ ಬೀಳದಂತೆ ಛಂದದಿಂದ ನಲಿವುದು 3
--------------
ಭಾವತರಕರು
ತನ್ನ ತಾ ತಿಳಿಯುವದೆ ಜ್ಞಾನ ಮನಮುಟ್ಟು ಪೂರ್ಣ ಚೆನ್ನಾಗಿ ಸದ್ಗುರುವಿನ ಕೇಳಿರೊ ಖೂನ ಧ್ರುವ ತನು ಮನವಿಟ್ಟು ತಿಳಿವದೀ ಗುರುಗುಟ್ಟು ಧನ ದ್ರವ್ಯಾರ್ಜಿತವನಿಟ್ಟು ಕೇಳಿ ಕಿವಿಗೊಟ್ಟು ಅನುಬವದ್ಹೆಚ್ಚಿ ಮೆಟ್ಟು ಸಾಧಿಸಿ ವೈರಾಗ್ಯ ಕೊಟ್ಟು ಖೂನಮಾಡಿಕೊ ಬೇಕಿಟ್ಟು ಅನುಮಾನ ಬಿಟ್ಟು 1 ಗಿಳಿಯಾಡಿದಂತೆ ನುಡಿಯಾತಕ ಬಾಹುದು ನೋಡಿ ಹೇಳ್ಯಾಡಕೊಂಬುದೀಡ್ಯಾಡಿ ಮಾತಿನ ರೂಢಿ ಬೆಳಗಿನೊಳು ಬೆರದಾಡಿ ಘನಕ ಘನ ಕೂಡಿ 2 ನುಡಿ ನಡಿ ಒಂದಾದರೆ ವಸ್ತು ತಾನಿಹುದು ದೂರ ಬಿಡಲರಿಯದು ಹಾಂಗಾದರ ಎಂದಿಗಾರು ಒಡಗೂಡಿ ನೋಡಿದರೆ ತನ್ನೊಳು ತಾಂ ನಿಜ ಖರೆ ಸಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತನ್ನ ತಿಳಿದು ತಾನಾದಂಥ ಗುರುವಿನ ಪಾದವ ಹೊಂದುತನ್ನನರಿಯದ ಗುರುವ ಹೊಂದಬೇಡೆಂದೆಂದು ಪ ನಿನ್ನನು ದೇವನೆಂದೆನ್ನುವಗೆ ಈಗ ಶರಣು ಮಾಡೋಅನ್ಯ ದೇವರನೆಂದೆನ್ನುವನ ಹಾದಿ ಹೋಗಬೇಡೋ 1 ಕೋಟಿರವಿ ತೇಜವ ಕಣ್ಣಲಿ ನೋಡುಬೂಟಿಕ ಕಾಯಕಗಳ ದೂರಮಾಡು 2 ಸೋಹಂ ಮಂತ್ರವ ಹೇಳದವನ ಸೆರಗ ಬಿಟ್ಟು ನೀನುಊಹಿಸುವ ಬೇರೆ ಗುರುವನು ಉತ್ತಮ ಅವನು3 ವಾಸನೆ ಕಳೆದಾತಂಗೆ ಒಪ್ಪಿಸಯ್ಯ ತನುವಆಸೆ ಹಚ್ಚುವವನತ್ತ ಬಿಡಲಿ ಬೇಡ ಮನವ 4 ಚಿದಾನಂದ ಗುರುವ ಹೊಂದು ಚಿನ್ಮಾತ್ರನಹೆ ಮದಮುಖ ಗುರುವ ಹೊಂದದಿರು ತಿಳಿ ಮುಂದೆ ನೀನು ಕೆಡುವೆ 5
--------------
ಚಿದಾನಂದ ಅವಧೂತರು
ತನ್ನ ಸ್ಮರಣೆ ತಾನರಿಯದ ಮನವು ಚಿನುಮಯ ರೂಪನ ಬೆನ್ನವಿಡಿವುದುಂಟೆ ಪ ಹಾವಿನ ಹೆಜ್ಜೆಯ ಹಾವರಿವಂದದಿ ಭಾವಿಸಿಕೊಳ್ಳದೆ ತಗ್ಗು ಮುಗ್ಗುಗಳ ಗೋವಳನಿಲ್ಲದ ಗೋವಿನ ತೆರನಂತೆ ಜೀವನುಂಗುವ ವ್ಯಾಘ್ರನಗ್ರಕೆ ಸುಳಿಯಲು 1 ಕನ್ನಡಿ ಶುದ್ಧವಾಗಿಯೆ ಕಾಣದ ದೃಷ್ಟಿ ಚಿನ್ನವಾರಿಕೆಯನ್ನು ಮಾಡುವ ಪರಿಯು ನಗದ ಮನ ಮನ್ನಣೆಯಿಲ್ಲದ ಮನೆಯೊಳುಂಬರೆ ಹೇಸ2 ಹೇಳಿದ ಮಾತನು ಕೇಳಿ ಮಾನಸದೊಳು ಮೇಳವಾಗುವೆನೆಂದು ಖೂಳತನದಿ ಪೋಗಿ ಕೇಳಿದ ಉತ್ತರಕುತ್ತರ ಹರಿಸದೆ ಆಳು ಬಾವಿಯ ಹಾರಿ ಹೊಳಚುವ ತೆರನಂತೆ 3 ಕಾಗೆಯು ಗರುಡನ ಸರಿಯೆಂದು ಜೂಜಾಡಿ ಸಾಗರವನು ಹಾರಿ ನಡುವೆ ಬಿದ್ದಂದದಿ ಯೋಗಿಯ ಪರಿಯಂತೆ ತಪವೆಂದು ತನ್ನಯ ಮೂಗ ಮುಚ್ಚಲು ಭವರೋಗ ಹಾರುವುದಂತೆ 4 ಮೀಸಲಿಗೊದಗುವ ಶೇಷಗಿರೀಶನ ಆಸೆಯಗ್ರಾಸವ ಬೇಡಿಕೊಳ್ಳದ ಮನ ಸಾಸಿರ ವೆಗಡದ ಭಾಂಡದೊಳೋಗರ ಬೇಯಿಸಿ ಭುಂಜಿಪೆಯೆಂದು ಮೋಸ ಮಾಡುವದಿಂದು 5 ಚಿತ್ರಿಕ ರಚಿಸಿದ ಸೇನೆ ಸೇನೆಗಳಲ್ಲ ಪ್ರಸ್ತುತಕೊದಗುವದೆನುತಿಹ ರಾಯನ ಮುತ್ತಿಕೊಂಡಿಹ ಪರಸೇನೆಯ ಇದಿರೊಳು ಮೃತ್ಯುದೇವತೆ ಬಂದು ಮೂದಲಿಸುವಳೆಂದು6 ಮೊಸರನ್ನ ತನ್ನ ಕೈಯೊಳಗಿದ್ದಂತೆ ಹಸಿವಾದ ವೇಳ್ಯದಿ ಹಸಿಯ ಮೆಲ್ಲುವದೇಕೆ ಕುಶಲದಿ ನೆನೆಯಲು ಹಸನದಿ ಸಲುಹುವ 7
--------------
ವರಹತಿಮ್ಮಪ್ಪ
ತನ್ನನರಿಯದವ ಜ್ಞಾನದ ಮಾತಾಡಿದರೇನು ಕಣ್ಣಿಲ್ಲದವ ಕನ್ನಡಿ ಪಿಡಿದರೇನು ಧ್ರುವ ಧೈರ್ಯವಿಲ್ಲದವ ಕೈಯಲಿ ಶಸ್ತ್ರ ಹಿಡಿದರೇನು ಸ್ಥೈರ್ಯವಿಲ್ಲದವ ತಪಸ್ಯಾದರೇನು ಮರ್ಯಾದಿಲ್ಲದವ ಗುರು ಸನ್ನಿಧವಿದ್ದರೇನು ಬಂಟ ಬಲ್ಲಿದನಾದರೇನು 1 ಗಂಡ ನಿಲ್ಲದ ನಾರಿ ಸುಗುಣ್ಯುದ್ದಂಡಾದರೇನು ಷಂಡ ಸಾವಿರ ಹೆಣ್ಣು ಮದುವ್ಯಾದರೇನು ಖಂಡಿಸದೆ ಅನುಮಾನ ಪಂಡಿತನೆನಿಸಿದರೇನು ಕಂಡು ಕಾಣದ್ಹೆಳವನ ಕೊಂಡಾಡಲೇನು 2 ಭಾನುಕೋಟಿ ತೇಜನಂಘ್ರಿ ಗುರುತಲ್ಲದರಿವೇನು ಅನುಭವಿಸಿ ಕೊಳ್ಳದ ನರಜನ್ಮವೇನು ದೀನ ಮಹಿಪತಿಸ್ವಾಮಿಕಾಣದ ಕಂಗಳವೇನುಜ್ಞಾನ ಉಂಟುಮಾಡಿಕೊಳ್ಳದವನ ಬಾಳಿವೇನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತನ್ನನು ತಿಳಿದೇ ತಾನೇ ನೋಡಲಿ ಆನಂದಾನಂದಂತನ್ನನು ಕಂಡೆ ತಾನಾಗಿರುತಿರೆ ಆನಂದಾನಂದಂ ಪ ಶ್ರವಣ ಮನನ ನಿಧಿಧ್ಯಾಸನ ಸಾಧಿಸೆ ಆನಂದಾನಂದಂಶ್ರವಣ ಮನನ ನಿಧಿಧ್ಯಾಸದಿ ಬೆರೆತಿರೆ ಆನಂದಾನಂದಂ 1 ಒಳ ಹೊರ ಸಾಧಿಸೆ ತನ್ನನು ತಾನು ಆನಂದಾನಂದಂಒಳ ಹೊರಗೆಂಬುದ ಮರೆತರೆ ನಿಜದಿಂ ಆನಂದಾನಂದಂ 2 ಲಕ್ಷ್ಯವು ಕೂರಲು ತನ್ನಲಿ ನಿಜದಿಂ ಆನಂದಾನಂದಂಲಕ್ಷ್ಯವು ನಿಲ್ಲೆ ಸಾಕ್ಷಾತಿರುತಿಹ ಆನಂದಾನಂದಂ 3 ನಾದವ ಕೇಳುತ ಸುಖದಲಿ ಮಲಗಿರೆ ಆನಂದಾನಂದಂನಾದವ ಮರೆತೇ ನಾದವ ಮೀರಿರೆ ಆನಂದಾನಂದಂ 4 ಉರಿವ ಕರ್ಪೂರದಂದದಲಿರುತಿದೆ ಆನಂದಾನಂದಂಉರಿವ ಕರ್ಪೂರವು ತಾನಾಗಿದ್ದುದೆ ಆನಂದಾನಂದಂ 5 ಬ್ರಹ್ಮವೆ ತಾನೆಂದು ತನ್ನಲೆ ಕಾಣಲು ಆನಂದಾನಂದಂಬ್ರಹ್ಮವು ತಾನಾಗಿ ತನ್ಮಯನಾಗಿರೆ ಆನಂದಾನಂದಂ6 ನರನು ತನ್ನನು ಗುರುವೆಂದು ಕಾಣಲು ಆನಂದಾನಂದಂಗುರು ಚಿದಾನಂದನು ಸಹಜವಾಗಿರೆ ಆನಂದಾನಂದಂ 7
--------------
ಚಿದಾನಂದ ಅವಧೂತರು
ತನ್ನೊಳಗಿಹುದು ತನಗೆ ತಿಳಿಯದು | ತನ್ನಂಥ ಮಹಿಮಗೆತೋರುವದು | ಇನ್ನೊಬ್ಬ ಮೂಢಗೆ ತೋರಿಸೆನೆಂದರೆಸಕ್ಕರಿಯೊಳಗಿನ ಸವಿ ಇದ್ಧಾಂಗೆ | ಹಾಂಗೆ ನಿಜವಸ್ತು 1 ನೂಕದು ಪೀಕದು ದೇಹಕ್ಕೆ ತಾಕದು | ಏಕಾಗಿ ಇಹುದುಮಾತಾಡದು ಪ್ರಾಕೃತ ಜನರಿಗೆ | ಮುಸುಕು ಹಾಕಿಹುದು ಕಾಷ್ಠದ ಒಳಗಿನ ಅಗ್ನಿ ಇದ್ಧಾಂಗೆ | ಹಾಂಗೆ ನಿಜವಸ್ತು 2 ಕಣ್ಣಿಗೆ ತೋರದು ಬೈಲಾಗಿ ಹೋಗದು | ಕಣ್ಣಿಗೆ ಕಣ್ಣಾಗಿ ನಿಂತಿಹುದು | ಹೆಣ್ಣಿಗೆ ಗಂಡಿಗೆ ಕುಣಿಸ್ಯಾಡುತಿಹುದು | ಕುಸುಮದ ಒಳಗಿನ ಪರಿಮಳದ್ಹಾಂಗೆ | ಹಾಂಗೆ ನಿಜವಸ್ತು 3 ಕೆಳಗದ ಮೇಲದ ಎಡಕದ ಬಲಕದ ಹಿಂದದ ಮುಂದದ ಜಡವದ | ಒಳ ಹೊರಗೆ ತುಂಬೇದ ಬ್ರಹ್ಮಾಂಡ ಮೀರೇದ | ಚಂದ್ರನ ಒಳಗಿನ ಬೆಳದಿಂಗಳ್ಹಾಂಗ ಹಾಂಗೆ ನಿಜವಸ್ತು 4 ನರಸಿಂಹ ಸದ್ಗುರು ರಾಮನ ದಯದಿಂದ ಪರವಸ್ತು ಎನಗೆ ಪ್ರಕಟಾಯಿತೊ ಪರರ ಮುಖದಿಂದಹೇಳುವದಲ್ಲ | ಪರವಸ್ತು ತಿಳಿದಂಥ ಯೋಗಿಯೆಬಲ್ಲಾ || ಹಾಂಗೆ ನಿಜವಸ್ತು 5
--------------
ನರಸಿಂಹ
ತಪ್ಪ ಪಾಲಿಸಿಕೊಳ್ಳೊ ಜೀಯಾ ತಿಮ್ಮಪ್ಪ ವೆಂಕಟಗಿರಿರಾಯ ಪ. ಬಪ್ಪ ತನ್ನಯ ಭಕ್ತ ಜನರ ಬವಣೆಗಳ ನೊಪ್ಪನೆಂಬ ಬಿರುದಿಪ್ಪ ಭಾಸುರಕಾಯ ಅ.ಪ. ಅರವಿಂದ ಸಖನುದಯಿಸಲು ಅಜ ಗರನಂತೆ ಬೀಳುವ ತಪ್ಪು ಗುರು ಹಿರಿಯರ ಜರಿವಂಥ ತಪ್ಪು ನಿನ್ನ ಸ್ಮರಣೆಯ ಮಾಡದ ತಪ್ಪು ನಿತ್ಯ ಕರ್ಮಗಳ ಬಿಡುವ ತಪ್ಪು ಸ್ಥಿರ ಚಿತ್ತದಲಿ ನಿನ್ನ ಚರಣಾರಾಧಿಸದಂಥ 1 ಸಂಧ್ಯಾ ಕೃತ್ಯಗಳ ಕಾಲದಲಿ ಪರ ನಿಂದೆಯ ಮಾಡುವ ತಪ್ಪು ದಿವ್ಯ ಶ್ರೀ ಗಂಧ ಶ್ರೀ ತುಳಸಿ ಪುಷ್ಪಗಳ ತಾನೆ ತಂದಿರಿಸದ ಮಹಾ ತಪ್ಪು ಮಿಂದು ಮಡಿಯೊಳಿದ್ದು ಮರುಳನಾಗಿ ನಿಜ ಮಂದಗಮನೆಯಳ ಮಾತನಾಲಿಸುವಂಥ 2 ಮನ ವಚನಾದಿಗಳಿಂದ ಪರ ವನಿತೇರ ಸ್ಮರಿಸುವ ತಪ್ಪು ಪುಣ್ಯ ದಿನಗಳ ತ್ಯಜಿಸುವ ತಪ್ಪು ಪರ ಧನಾಭಿಲಾಶಿಯ ತಪ್ಪು ಕನಸಿಲಾದರು ನಿನ್ನ ನೆನೆಯದೆ ಸತಿಸುತ ತನುವೆನ್ನದೆಂಬ ಚಿಂತನೆಯಿಂದ ಬಳಲುವ 3 ನೇಮ ವ್ರತಗಳೆಲ್ಲ ಮರತು ಸೌಖ್ಯ ಕಾಮುಕನಾಗಿಹ ತಪ್ಪು ಬಹು ಪಾಮರವೃತ್ತಿಯ ತಪ್ಪು ನಿನ್ನ ದಯ ಶೋಭಿಸದಂಥ ತಪ್ಪು ಆ ಮಹಾ ಮಂತ್ರಗಳ ಜಪಿಸದ ತಪ್ಪು ಕಾಮಿನಿಯರ ಮೋಹಕ್ಕೊಳಗಾಗಿ ಬಳಲುವ 4 ನರಗುರಿಯಾದೆನ್ನ ತಪ್ಪ ನೋಡೆ ಹುರುಳು ಗಾಣುವುದುಂಟೆನಪ್ಪ ಸರ್ವ ಸ್ಥಿರ ಚರಾದಿಗಳೊಳಗಿಪ್ಪ ಲಕ್ಷ್ಮೀ ವರನಿತ್ಯ ಸತ್ಯ ಸಂಕಲ್ಪ ಪರಮ ಪಾವನ ಶ್ರೀಮದುರಗೇಂದ್ರ ಗಿರಿವಾಸ ಕರುಣದಿಂದೆನ್ನನುದ್ಧರಿಸಿ ರಕ್ಷಿಸು ಬೇಗ 5
--------------
ತುಪಾಕಿ ವೆಂಕಟರಮಣಾಚಾರ್ಯ
ತಪ್ಪಲರಿಯದು ಬರೆದ ಬ್ರಹ್ಮನಿರ್ಮತವು ಒಪ್ಪುವದು ಯತಿ ಮುನಿ ಋಷಿಯ ಸಂತತಿಯು ಧ್ರುವ ಆನಿ ಮೊದಲಿರುವೆ ಕಡೆ ಅಣುಮಾತ್ರಾಕಾರವನು ಮುನ್ನ ಬರೆದಂತೆ ತಾನಡೆಯುತಿಹಂದು ಇನ್ನು ಮುತ್ತನ್ಯ ದೈವಕ ಬಯಸಿ ಬೇಡಿದರೆ ಮುನ್ನಿಗೆ ಕೊಡಬಲ್ಲವೆ ಬಿನಗುದೈವವು 1 ಭಿನ್ನವಿಲ್ಲದೆ ತನುವಿನೊಳು ಆನಂದ ಘನ ಉನ್ನತ ಮಹಿಮ ಪರಿಪೂರ್ಣವಿರಲು ಮೂರ್ತಿ ಶ್ರೀಪಾದವನು ಅನುದಿನ ಭಜಿಸಿ ಘನ ಸುಖವ ಪಡಿಯೊ ಮನವೆ 2 ಕಕ್ಕುಲಾತಿಯ ಬಟ್ಟು ಕಂಡವರ ಕಾಲ್ಗೆರಗಿ ಫಕ್ಕಸಾರಿಯ ಧರ್ಮ ಜರಿಯ ಬ್ಯಾಡ ಸಕಲ ಸಹಕಾರ ಮಹಿಪತಿಸ್ವಾಮಿ ನಿನಗಿರಲು ಭಕುತಿ ಮುಕುತಿಯ ಉಂಟು ಮೂಢ ಜನವೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಪ್ಪು ಮಾಡಿದ್ದು ಸತ್ಯ ನಾನಪ್ಪ ಮಿಥ್ಯಲ್ಲ ತಿಮ್ಮಪ್ಪ ತಪ್ಪು ಮಾಡಿದ್ದು ಸತ್ಯ ನಾನಪ್ಪ ಪ ತಪ್ಪು ಎನ್ನದು ಗಪ್ಪು ಮಾಡಿ ಪರರೊಪ್ಪುವಂತೆ ಮಂದಿ ತಪ್ಪು ತೋರಿಸಿ ತಪ್ಪು ಒಪ್ಪಿಸುತಿಪ್ಪ ಮೃತ್ಯುಗೆ ಕಷ್ಟವಾಗ್ವುದ ತಪ್ಪಿಸೋ ತಪ್ಪ ಅ.ಪ ಪರರ ದುರ್ಗಣ ಗಿರಿಯು ಪರ್ವತಪ್ಪ ಬೆಳಸಿ ಎನ್ನಯ ಪರಮದುರ್ಗುಣ ತೃಣಕೆ ಸಮನಪ್ಪ ಮಾಡಿತೋರಿಸಿ ಜರೆದು ಬೀಳುವೆ ನರಕಗುಂಟಪ್ಪ ದುರಿತಶೇಷಪ್ಪ ಹರಿದುಕೊಳ್ಳದೆ ಮರವೆಲಿ ಮತ್ತು ಪರರ ಜರಿಯುತ ದುರಿತದಿಂದೆಮಪುರವ ಸಾಧಿಪೆ ತಿರುಗಿ ನೋಡದೆ ಅರಿವು ಕರುಣಿಸು ಶರಣರ್ಹೊನ್ನಪ್ಪ 1 ಎಷ್ಟೋ ಎಷ್ಟೋ ಪಾಪಕೋಟೆಪ್ಪಾ ಆಚರಿಸಿ ನಾನು ಕೆಟ್ಟು ಭ್ರಷ್ಟನಾದೆ ಕಲ್ಲಪ್ಪ ದುಷ್ಟತನದಿ ನಷ್ಟಮಾಡಿದೆ ಪರರ ಮಾನಪ್ಪ ಮುಷ್ಟಿದಾನಪ್ಪ ಹುಟ್ಟಿದಂದಿನಿಂದ ಕೊಟ್ಟು ಪಡಿಲಿಲ್ಲ ಶಿಷ್ಟರೊಲುಮೆಯ ನಿಷ್ಠೆಯಿಂ ನಾ ಸೃಷ್ಟಿಕರ್ತ ದೃಷ್ಟಿಲಿಂದಿನ್ನು ಹುಟ್ಟಿಸೆನ್ನಗೆ ನಿಷ್ಠ ಜ್ಞಾನಪ್ಪ 2 ಎಲ್ಲ ಪಾಪಕ್ಹೆಚ್ಚು ನಂದಪ್ಪ ಜಗದಿ ಎಲ್ಲ ಖುಲ್ಲರಿಗೆ ನಾನ್ಹಿರಿಯ ಬಾಲಪ್ಪ ಕೇಳಲೇನು ಕಳ್ಳ ಸುಳ್ಳತನದಿ ವೀರಪ್ಪ ಕಾಲಯಮನಪ್ಪ ಅಲ್ಲ ಅಹುದೆನ್ನುವುದನೆಲ್ಲ ಬಲ್ಲೆ ನೀ ಇಲ್ಲವೆನಿಪ ಸಾಧ್ಯವೆಲ್ಲಿದೆ ಎನಗೆ ಪುಲ್ಲನಯನ ಕ್ಷಮೆ ಪಾಲಿಸು ಸಿರಿಯರ ನಲ್ಲ ಶ್ರೀರಾಮ ಗೊಲ್ಲ ಕೃಷ್ಣಪ್ಪ 3
--------------
ರಾಮದಾಸರು
ತಪ್ಪೇನು ಮಾಡಿದೆನೋ ಬ್ರಹ್ಮಣ್ಯ ಗುರು ಪ ಅಪ್ಪಾ ನಿನ್ನಯ ಮನಕೊಪ್ಪದೇ ಇಪ್ಪಂಥ ಅ.ಪ ತಂದೆ ತಾಯಿಯು ನೀನೇ ಬಂಧು ಬಳಗ ನೀನೆ ಸಂದೇಹವಿಲ್ಲವೋ ಕಂದನೆಂದೆನ್ನದಂಥ1 ಒಂದೂ ತಿಳಿಯದಂಥ ಮಂದಮತಿಯು ನಾನು ಛಂದದಿಂದಲಿ ಬುದ್ಧಿ ಮುಂದೆ ಹೇಳಾದಂಥ 2 ಸಂದೇಹ ಕಳೆದಿನ್ನ ಬಂಧವಾಗಹ ಅಘ ವೃಂದ ಕ್ಷಮಿಸಿ ಬೇಗ ಮುಂದೆ ಕರೆಯದಂಥ 3 ದುರುಳರೆಲ್ಲರು ಸೇರಿ ಮರುಳುಗೊಳಿಸಿ ಎನ್ನ ಕರುಣಸಾಗರ ನಿನ್ನ ಕರುಣ ಪಡೆಯದಂಥÀ 4 ಶಾಂತ ಶ್ರೀ ನರಹರಿ ಪಂಥಾದಿಚರಿಸದೇ ಭವ ಕಾಂತಾರ ದಾಟಿಸದಂಥ 5
--------------
ಪ್ರದ್ಯುಮ್ನತೀರ್ಥರು
ತಮ್ಮ ಕೇಳಿದ್ಯಾ ಪರಬೊಮ್ಮ ನೀನಂತೊ ನಿತ್ಯ ತೃಪಿತನು ನೀನಂತಲ್ಲೊ ಕೃಷ್ಣಯ್ಯ ಸುತ್ತಿ ಬಂದೆನೆ ನಾಲಿಗಾರಿದೆ ಅಮ್ಮ ಹತ್ತು ಸಾವಿರ ಭಾನುಪ್ರಭೆಯುಳ್ಳವನಂತೊ ಕತ್ತಲೆಮನೆ ಪೋಗಲೊಬ್ಬನಂಜುವೆನೆ 1 ಪುರಾಣಪುರುಷ ನೀನಂತಲ್ಲೊ ಕೃಷ್ಣಯ್ಯ ಆರು ತಿಂಗಳು ಪೋದಾವಂದೆಲ್ಲ ಎನಗೆ ನಿರತಿಶಯ ಮಹಾ ಮಹಿಮೆ ಉಳ್ಳವನಂತೊ ಪೂರತಿ ಮನೆಯೊಳು ನಡೆಯಲಾರೆ 2 ಅಣ್ಣಾ ನೀ ಸರ್ವಜ್ಞನೆಂಬೋರೊ ಜಗವೆಲ್ಲ ಬೆಣ್ಣೆಯು ಸಿಗದಲ್ಲೆ ಪುಡುಕಿದರೆ ಸಣ್ಣವ ನೀನಲ್ಲವೆಂಬರೊ ಪಿರಿಯಾರು ಮಣ್ಣು ನಾ ಮೆದ್ದಾರೆ ಟೊಣದೆಲ್ಲವಮ್ಮ 3 ಜಗದುದರನು ನೀನಂತಲ್ಲೊ ಕೃಷ್ಣಯ್ಯ ನಗುಚಾಟಲು ಸಣ್ಣ ಪೊಟ್ಟಿ ನೋಡೆ ನಿಗಮಗಳು ನಿನ್ನ ತುತಿಯಂತೊ ಗೋವಿಂದ ನಗುವರಲ್ಲವೆ ಗೋಪ ನಾರಿಯರು 4 ಮೂಢ ದೈತ್ಯರಿಗೆಲ್ಲದಲ್ಲಣ ನೀನಂತೊ ಜಾಡ ಮೈಯನ ನೋಡಿ ಅಂಜುವೆನೆ ಬೇಡಿದ ಪುರುಷಾರ್ಥ ಕೊಡುವನು ನೀನಂತೊ ಬೇಡಿದೆ ನಮ್ಮಮ್ಮ ಅಮ್ಮೆ ಕೊಡೆಂದು 5 ಬೆಟ್ಟವ ನೀನೆತ್ತಿದಂತಲ್ಲೊ ಕೃಷ್ಣಯ್ಯ ಬಟ್ಟು ನಿನ್ನದು ನೋಡೆ ಎತ್ತಲಾರೆ ಘಟ್ಯಾಗಿ ವಿಪ್ರರು ಪೇಳೋದು ಪುಸಿ ಏನೊ ಹೊಟ್ಟಿಗೋಸುಗ ಸುಳ್ಳು ಪೇಳುವರೆ 6 ಏಸು ಲಕ್ಷ್ಮಣವಿವೆ ನೋಡಬೇಕೆಂದರೆ ಪುಸಿದ್ಯಾಕುಸರಾನು ನೋಡೆಂದನು ಪರಿ ಗೋಪಿಯ ಮೋಸಗೊಳಿಪ ಕೃಷ್ಣ ನಮ್ಮ ಸಲಹಲಿ 7
--------------
ವ್ಯಾಸತತ್ವಜ್ಞದಾಸರು
ತಮ್ಮನರಿಯದೆ ತಮ್ಮೊಳೀತೆರನಾಡುವರು |ಹಮ್ಮ ಬಿಡದೆ ಪರಬಮ್ಮನ ಜರಿಯುವರು ಪ ಒಂಬತ್ತು ಛಿದ್ರುಳ್ಳ ಕುಂಭದ ಗಾಲಿಗೆ |ಸ್ತಂಭದಂತೆ ನಿಲಿಸಿ ಸಂಭ್ರಮ ಪಡೆವರು 1 ಮುಂಡ ಬೋಳವ ಮಾಡಿ ಕಂಡಲ್ಲನ್ನವನುಂಡು |ದಂಡ ಧರಿಸಿ ಮನ ದಂಡಿಸದಿರುವರು 2 ಕದಲಿಸದೆ ಕಾಯಾ ಹದನದಿಂದಲಿರಿಸಿ |ವೇದದ ಮೊದಲೆಂದು ನಾದಕೆ ಬೆರೆವರು 3 ಓದಿ ಆಗಮಗಳನು ಭೇದಿಸಿ ತಿಳಿಯದೆ |ಮೇದಿನಿಯೊಳಗೆಲ್ಲ ವಾದಿಸಿ ಮೆರೆವರು 4 ಪಥ ಪಡೆದು ವೇಷ ಪಾಲಟ ಮಾಡಿ |ದೋಷಕಂಜದೆ ರುಕ್ಮ ಭೂಷಗೆ ಮರೆವರು 5
--------------
ರುಕ್ಮಾಂಗದರು
ತಲೆಯ ತೂಗಿ ನಗುವುದೇನೊ ಚೆಲುವ ತಿಮ್ಮರಾಯ ನೀ ತಿಳಿಸಿದಂತೆ ನುಡಿದೆನಿಂದು ಸಲುಹಬೇಕು ಜೀಯ ಪ. ಯೋಗ ಮಾಯ ಶಕ್ತಿ ತಾಳ ರಾಗ ರಚನೆಯರಿಯೆ ಲಾಘವಾದಿ ವರ್ಣಭೇದವಾಗಲಿದನು ತೊರೆಯೆ ಶ್ರೀಗುರು ಮುಖೇಡ್ಯ ನಿನ್ನಾದಾಗಲು ನಾ ಮರೆಯೆ ನಾಗಶಯನ ನಿನ್ನ ಪದಕೆ ಬಾಗಿ ನುಡಿವೆ ದೊರೆಯೆ 1 ಮಾನಸ ವಾಕ್ಕರ್ಮವೆಲ್ಲ ನೀನೆ ಮಾಳ್ಪಿಯೆಂದು ಧ್ಯಾನಿಸಿಕೊಂಡಿಹೆನು ಭಕ್ತಾದೀನ ಕರುಣಾಸಿಂಧು ಮಾನವಿಯ ನುಡಿಯೊಳಿರುವ ನಾನಾ ಥರವ ಕುಂದು ನೀನೆ ಕ್ಷಮಿಸಬೇಕು ಪದ್ಮಮಾನ ದೀನ ಬಂಧು 2 ಬುದ್ಧಿಹೀನ ಶಿಶುವು ನುಡಿವಾ ಬದ್ಧ ಮಾತಿನಿಂದ ಲೆದ್ದು ಬಂದು ಜನನಿ ತೊಡೆಯೊಳಿದ್ದು ಕೇಳುವಂದ ಸಿದ್ಧವಾಗು ಶ್ರೀನಿವಾಸ ಶುದ್ಧ ಪೂರ್ಣಾನಂದ ಗೋಪಿ ಕಂದ 3
--------------
ತುಪಾಕಿ ವೆಂಕಟರಮಣಾಚಾರ್ಯ