ಒಟ್ಟು 2985 ಕಡೆಗಳಲ್ಲಿ , 113 ದಾಸರು , 1991 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪವಮಾನವರದ ವಿಠಲ | ಇವನ ನೀಸಲಹೋ ಪ ಭವದೊಳಗೆ ಸಂತಪ್ತ | ತವಪಾದ ಶರಣನ ಅ.ಪ. ರಾಶಿಪುಣ್ಯವು ಫಲಿಸೆ | ದಾಸದೀಕ್ಷೆಗೆ ಒಲಿದುಆಶಿಸಲು ತೈಜಸನು | ಭಾಸುರಾಂಕಿತಕೇಸೂಸಿ ತನ್ನನುಗ್ರಹದ | ಭಾಷೆ ಅಸ್ತ್ವೆಂದೆನುತಲೇಸಾಗಿ ಪೇಳಲುಪ | ದೇಶಿಸಿಹೆ ಹರಿಯೇ 1 ಕರ್ಮ | ಸಂಚಿತಾದಿಗಳು 2 ತತ್ವರೊಲಿಮೆಯ ಕೊಡಿಸು | ತತ್ವಾರ್ಥಸ್ಪುರಿಸಿವಗೆಮೃತ್ಯುವೆನೆ ಗೆಲುವಂಥ | ಪಥವನ್ನೆ ತೋರಿಕರ್ತತಾನಲ್ಲೆಂಬ | ಉತ್ಕøಷ್ಟ ಮತಿಯಿತ್ತುಎತ್ತು ಭವದಿಂ ಹರಿಯೇ | ಉತ್ತಮೋತ್ತಮನೆ 3 ಸರ್ವತ್ರ ಸರ್ವದಾ | ಶರ್ವನೊಡೆಯನೆದೇವಸರ್ವಮಂಗಳ ನಿನ್ನ | ನಾಮಸುಧೆಯನ್ನುದರ್ವಿಜೀವಿಗೆ ಉಣಿಸಿ | ಭವಕಡಲ ಪ್ಲವನೆನಿಸೊಸರ್ವಾಂತರಾತ್ಮಕನೆ | ಉದ್ದರಿಸೊ ಇವನಾ 4 ಜೀವ ಅಸ್ವಾತಂತ್ರ | ದೇವ ನಿಜಸ್ವಾತಂತ್ರಜೀವ ಜಡರುಗಳೆಲ್ಲ | ದೇವರಾಧಿನಾಈ ವಿಧದ ಸುಜ್ಞಾನ | ಆವಾಗಲೂ ಕೊಟ್ಟುದೇವಗುರು ಗೋವಿಂದ | ವಿಠಲ ಪೊರೆ ಇವನಾ 5
--------------
ಗುರುಗೋವಿಂದವಿಠಲರು
ಪವಮಾನವಿಠಲ | ಕಾಪಾಡೊ ಇವನಾ ಪ ಭುವಿ ಭವ್ಯ ಮರುತಮತ | ದೀಕ್ಷೆಯುಳ್ಳವನಾ ಅ.ಪ. ಭಾವಿಮಾರುತರ ದಿವ್ಯ | ಪಾದಗಳನಾಶ್ರಯಿಸಿದೇವ ಗುಹ್ಯವು ಎಂಬ | ಆಖ್ಯಾನ ಪಠಿಸೀಭಾವಭಕ್ತಿಯಲಿಂದ | ಪೂರಿತನು ತಾನಾಗಿಧಾವಿಸಿ ಬಂದಿಹನೊ | ಎನ್ನ ಬಳಿಗಾಗಿ1 ಗುರುವನುಗ್ರಹ ಪಡೆದು | ಗುರುದತ್ತ ಅಂಕಿತವನೆರವಿನಾ ಸಾಧನವ | ವಿರಚಿಸಲು ಮಾರ್ಗಅರಿಯದಲೆ ಪ್ರಾರ್ಥಿಸುವ | ಕರುಣಪಯೋನಿಧಿಯೇಪೊರೆಯ ಬೇಕಿವನ ಪರಿಯ | ಮರುತಾಂತರಾತ್ಮ 2 ತರತಮಜ್ಞಾನವನು | ಹರಿಗುರು ಸದ್ಭಕ್ತಿಪರಿಪರಿಯಲಿಂ ವೃದ್ಧಿ | ಗೈಸಿವಗೆ ಹರಿಯೇಗುರು ಕರುಣ ಕವಚದಿಂ | ಹರಿಯ ಸರ್ವೊತ್ತಮತೆಅರಿವಾಗಲಿವಗೆಂದು | ಪ್ರಾರ್ಥಿಸುವೆ ಹರಿಯೆ 3 ಮೂರ್ತಿ | ಕೃತಿರಮಣ ದೇವ 4 ಮಧ್ವ ರಮಣನೆ ದೇವ | ಹೃದ್ಯ ಹರಿ ನಿನಕಾಂಬಹೃದ್ಯ ಸಾಧನ ಗೈಸಿ | ಉದ್ದರಿಸೊ ಇದನಾಶುದ್ಧ ಮೂರುತಿ ಗುರು | ಗೋವಿಂದ ವಿಠಲನೆಬುದ್ಧಿಯಲಿ ನೀನಿಂತು | ಶುದ್ಧ ಮತಿ ಈಯೋ 5
--------------
ಗುರುಗೋವಿಂದವಿಠಲರು
ಪಶುಗಳ ಒಡನಾಡಿ ಪಾಮರನು ನಾನಾದೆ ಪಶುಪತಿಯೆ ನೀ ಬೇಗ ಬಾರೈ ಪ ಎಸೆವ ಆ ಸಮಯನುಣ್ಣಲೋಸುವನೊ ನಾನಿನ್ನು ಶಿಶು ಹಾದು ನಿಜ ಸುಖವು ತೋರೈ ಅ.ಪ ಕಚ್ಚಿ ಕೈಬಾಯಿ ನಿಮ್ಮಿಚ್ಚೆಯಾಗಿರುತಿಹುದೂ ಸಚ್ಚಿದಾನಂದಾತ್ಮ ನೋಡೈ ಉಚ್ಚರಿಸುವಾದಿ ವ್ಯಾಸಚ್ಚರಿತ ನಾಮವನೂ ಅಚ್ಚಳಿಯದಿರದಂತೆ ನೋಡೈ 1 ತೃಷೆಯ ನೀಗಿಸಲಿಂತಾ ಹೊಸಪರಿಯ ಬಿನ್ನಹುವು ಹಸುವಿಗಾಧಾರವನು ತೋರೈ ಪುಸಿಯದಿರು ನೀನಿದಕೆ ಬಿಸನಾಡದಿರುಯೆನ್ನಾ ನೊಸಲ ತಿಲಕವೆ ವೋಡಿಬಾರೈ 2
--------------
ಚನ್ನಪಟ್ಟಣದ ಅಹೋಬಲದಾಸರು
ಪಾಂಡು ರಂಗ ವಿಠಲ | ಪೊರೆಯ ಬೇಕಿವಳ ಪ ಕುಂಡಲಿಯ ಶಯ್ಯ ಬ್ರ | ಹ್ಮಾಂಡದೊಡಿಯಾ ಅ.ಪ. ಹಸುಳೆ ತನ ಸ್ವಾಪದಲಿ | ಎಸೆವ ನಂಜುಡೇಶದರ್ಶನಾಕಾಂಕ್ಷಿಸುತ | ನುಸುಳಿ ಗುಡಿ ಪೊಗಲೂಅಸಮ ಗುರು ಸುಧೀಂದ್ರ | ಶಿಷ್ಯರನು ತಾ ತೋರಿಎಸೆವ ಸದ್ಗತಿಗೆ ಗುರು | ದರ್ಶನವೆ ಪಥವೆಂದೇ 1 ಲೀಲೆಯೊಳ್ ತೈಜಸನು | ಮಾಲೆಧರ ದಂಪತಿಯಶೀಲ ರೂಪವ ತಾಳಿ | ಬಾಲಕಿಯ ಬಯ್ದೂ |ಏಳಲನ ಮಾಡದಲೆ | ಶೀಲ ಗುರು ಬಳಿ ಪೋಗಿಬಾಲಕಿಯು ಪರಮಾನ್ನ | ಮೆಲುವಂತೆ ಮಾಡ್ಡಾ 2 ಗುರು ಹಿರಿಯರಾ ಸೇವೆ | ಹರಿಯಲ್ಲಿ ಸದ್ಭಕುತಿವರಜ್ಞಾನ ಪಾಲಿಸುತ | ಮೆರೆಸೊ ಈ ಶಿಶುವವರ ಪ್ರದಯಕನಾಗಿ | ಸರುವ ಸದ್ಧಭಿಲಾಷೆಗರೆನು ಹರ್ಷವನೀಯೋ | ಮರುತಾಂತರಾತ್ಮಾ 3 ಕಲಿಹೆಚ್ಚದಾ ಯುಗವು | ಸತಿಮಂತ್ರ ತಂತ್ರಗಳುಫಲಿಸಲಾರವು ಹರಿಯೆ | ಜಲಜನಾಭಾಚೆಲುವ ತವನಾಮ ಸ್ಮøತಿ | ಘಳಿಗೆ ಬಿಡದಲೆ ಕೊಟ್ಟುಒಲಿಯೊ ಕಾರುಣ್ಯನಿಧಿ | ಬಾಲ ಗೋಪಾಲ4 ಪಾವನದ ಅಂಕಿತವ | ಓದಿ ಸೂಚಿಸಿದಂತೆತಾವಕಳಿಗಿತ್ತಿಹೆನು | ಶ್ರೀ ವರನೆ ಹರಿಯೇ |ದೇವ ದೇವೇಶಗುರು | ಗೋವಿಂದ ವಿಠ್ಠಲನೆನೀ ವೊಲಿದು ದಾಸತ್ವ | ಭಾವ ಸಿದ್ಧಿಪುದೋ 5
--------------
ಗುರುಗೋವಿಂದವಿಠಲರು
ಪಾಂಡುರಂಗ ಹರಿ ವಿಠಲ | ಕಾಪಾಡೊ ಇವನಾ ಪ ತೊಂಡ ವತ್ಸಲ ನೆಂಬ | ಬಿರಿದುಳ್ಳೊ ದೇವಾ ಅ.ಪ. ದಾಸವತ್ಯರ ಕರುಣ | ಲೇಸಾಗಿ ಪಡೆದಿಹಗೆಆಸುಪ್ತಿಪತಿ ಸೂಚ್ಯ | ಮೀಸಲುಪದೇಶದಾಸದೀಕ್ಷಾರೂಪ | ಆಶೆಯುಳ್ಳವಗಿತ್ತುಆಶಿಷವನಿತ್ತಿಹೆನೊ | ಹೃಷೀ ಕಪನ ಮೂರ್ತೇ 1 ಪಾದ ಮಹಿಮಾನುಭವಸಾಧಿಸೊ ಇವನಲ್ಲಿ | ಶ್ರೀ ದ ಶ್ರೀ ಹರಿಯೇ 2 ಊರ್ಮ ಷಟ್ಕಳವಕಳೆಯೆ | ಕರ್ಮನಿಷ್ಕಾಮಕದಿಪೇರ್ಮೆಯಲ್ಲಾ ಚರಿಪ | ಸನ್ಮಮನವ ನೀಯೋನಿರ್ಮಲಾತ್ಮನೆ ದೇವ | ಹಮ್ರ್ಯ ಗಹ್ವರದಲ್ಲಿಪರ್ಮ ನಿನ್ನಯರೂಪ | ತೋರಿಸೋ ಹರಿಯೇ 3 ಭವ | ಅಂಬುಧಿಯ ಕಳೆಯೋ 4 ಕೈವಲ್ಯಪ್ರದ ಹರಿಯೆ | ಭಾವುಕರ ಪರಿಪಾಲನೋವಿಲ್ಲದಾ ಸ್ಥಳಕೆ | ಬಯ್ವದೋ ಇದನಾಈ ವಿಧದ ಭಿನ್ನಪವ | ಸಲಿಸೆಂದು ಪ್ರಾರ್ಥಿಸುವೆಧೀವರನೆ ಹರಿಯೆ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಪಾಥೇಯವ ಕಟ್ಟಿರೊ ವೈಕುಂಠಕೆ ಪಯಣ ಸ-ಮ್ಮತವಾದರೆ ಪ. ಮಾತಾಪಿತರುಯೆಂಬೊ ಭಕ್ತಿಚಿತ್ರಾನ್ನವಪಾರ್ಥಸೂತನ ಪಾದಪದ್ಮಪತ್ರವ ಹಾಸಿ ಅ.ಪ. ಹರಿಭಕ್ತಿಹರಿಗೋಲಿಂದ ಮೆಲ್ಲನೆ ನೀವುವಿರಜಾನದಿಯ ದಾಟಿರೊಕರಜಾಗ್ರಗಳಿಂದ ಹಿರಣ್ಯಕನನು ಸೀಳಿದಪರವಾಸುದೇವನ ದರುಶನವಾಹೋದಯ್ಯ 1 ಪ್ರಳಯದ್ಹಾವಳಿಯಿಲ್ಲವೊ ಪೇಳುವುದೇನುಚಳಿ ಮಳೆ ಬಿಸಿಲಿಲ್ಲವೊಬೆಳಸು ಬಿತ್ತಿಲ್ಲದ ಬೇಕಾದ ಸಂಪತ್ತುನಳಿನನಾಭನ ಪುರದೊಳಗೆ ನೆಲಸಿಹುದಯ್ಯ 2 ಶುದ್ಧ ಸಾತ್ವಿಕ ಪುರವು ತಾಮಸರಿಗೆ[ಪೊದ್ದಲಳವಲ್ಲವೊ]ಅಧ್ಯಾತ್ಮ ಅರ್ಜುನಗೆ ನಿರ್ಧಾರ ಪೇಳಿದತದ್ಧಾಮ ಪರಮಂ ಮಮವೆಂಬೊ ಪುರವೊ 3 ಕೂಗಳತೆಗೆ ಕೊಂಚವೊ ಹರಿಯ ಪುರನಾಗರಾಜನ ಸಾಕ್ಷಿಯೊನಾಗಶಯನನಲ್ಲಿ ನಮ್ಮ ಕಂಡರೆಹೋಗಬೇಡಿರೆಂದು ಹುಟ್ಟ ತಡೆವನೊ 4 ಬರವೆಂಬ ಮಾತಿಲ್ಲವೊ ಒಂದುಕಾಸುತೆರಿಗೆಯ ಕೊಡಬ್ಯಾಡಿರೊಪರಮಕರುಣಿ ಹಯವದನ ವೈಕುಂಠದಿಸರುವಮಾನ್ಯವನಿತ್ತು ಶರಣರ ಪೊರೆವನು 5
--------------
ವಾದಿರಾಜ
ಪಾದ ಧ್ರುವ ಸಕಲಾತ್ಮನೆಂದು ಶ್ರುತಿ ಪ್ರಕಟಿಸಿ ಪೇಳುತಿದೆ ವಿಕಟಿತಗೊಂಬುದೇನು ಕಾಕ ಬುದ್ಧಿಂದ 1 ಚೆನ್ನಾಗಿ ಸಾರುತಿದೆ ನಾನ್ಯ:ಪಂಥವೆಂಬ ಮಂತ್ರ ಭಿನ್ನವಿಲ್ಲದೆ ನೋಡು ನಿನ್ನೊಳಗೀಗ 2 ಸರ್ಕನೆ ಮಾಡಿಕೊಂಬುದು ಆರ್ತಿ ಉಳ್ಳವರ ಸಂಗತಿ ಬ್ಯಾಗ ತರ್ಕಿಸಬ್ಯಾಡಿತರ ಕೂಡ ಮರ್ಕಟ ಬುದ್ಧಿಂದ 3 ಇಡಿದು ತುಂಬಿಹ್ಯ ವಸ್ತು ಪಡಕೋ ಗುರುಕೃಪೆಯಿಂದ ಎಡಬಲ ನೋಡದೆ ಈಗ ಕೂಡು ನೀ ಬ್ಯಾಗೆ 4 ಪಾದ ಭೇದಿಸೊ ನೀ ಬ್ರಹ್ಮಬೋಧ ಸಾಧುಸದ್ಗೈಸುವದಾ ಸದ್ವಸ್ತುದ 5 ಎಲ್ಲಾರೊಳಿಹ ನಮ್ಮ ಫುಲ್ಲಲೋಚನ ಶ್ರೀಕೃಷ್ಣ ಸುಲಭವಾಗಿಹ ಬಲ್ಲವರಿಗೆ 6 ಬಾಹ್ಯಾಂತ್ರ ಪರಿಪೂರ್ಣ ಮಹಿಪತಿ ಗುರುನಿಧಾನ ಇಹಪರಾನಂದ ಘನ ಸಾಯೋಜ್ಯ ಘನ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾದ ಒಮ್ಮಿಗಾದರು ನೆನೆದು ಕರ್ಮ ಪೋಪುವುದು ಎಂತೊ ಇಮ್ಮನಾವಾಗುವುದು ವ್ಯಾಮೋಹ ಸಂಗತಿಗೆ ಕಮ್ಮಗೋಲನ ಬದುಕೀಲಿ ರಂಗಾ ಪ ಹಾಳ ಹರಟಿಗೆ ಮನಾ ಹೇಳಿಸಿಕೊಳದೆವು ಬ್ಬಾಳುತನದಿಂದ ಕುಳಿತು ಕೇಳುವುದು ಕಿವಿಗೊಟ್ಟು ಅವರ ಕಿಂಕರನಾಗಿ ಹೇಳು ಇನ್ನೊಮ್ಮೆ ಎನುತಾ ಲಾಲಿಸಿ ಗತಿ ತಪ್ಪದಂತೆ ಜೋಡಿಸಿ ಮಾತು ಪೇಳುವೆನು ಕೈತಿರುವುತಾ ಶ್ರೀಲೋಲ ನಿನ್ನ ಕೀರ್ತನೆಗೆಯಿಲ್ಲದೊಂದು ಕೀಳು ವಾರ್ತೆಯ ತಾಹದೊ ಮನಸು1 ಧರೆಯನಾಳುವವನ ಸಮ್ಮುಖದಲ್ಲಿ ನಿಂದು ಕರವೆರಡು ನೊಸಲಿಗೆ ಚಾಚಿ ಕರುಣಿಸುವದೆಂದು ಮೊಗವೆತ್ತಿ ಪೊಗಳುವೆ ನಿನಗೆ ಸರಿ ಮಿಗಿಲು ಯಿಲ್ಲವೆಂದೂ ಮರಿಯದಲೆ ಸಲಹುವದು ಮಹಾತ್ಮನಹುದೆಂದು ಹರಿ ನಿಮ್ಮಯ ನಾಮವೆ ನೆನೆವೆ ನಾನೆನ್ನಲು ಮರಪು ಬಂದೊದಗಿಹದೊ ರಂಗಾ2 ಹಸಿವೆ ತೃಷೆಯಿಂದ ಉಳ್ಳವರ ಮನೆಗಳ ಕಾಯಿದು ಬಿಸಿಲು ಬೆಳದಿಂಗಳೆನ್ನದೆ ದೆಸೆಗೆಟ್ಟು ಚಾಲ್ವರಿದು ವಿಷವನುಂಡವನಂತೆ ಕುಸಿದು ಕನಿಷ್ಠನಾಗಿ ರೆಸೆದು ಹದಿನಾರು ಪಲ್ಲುಗಳು ಅವರ ಕೊರಳ ಹಿಸುಕಿ ಹಿಂಸೆಗಳ ಬಿಡಿಸಿ ಹಸನಾಗಿ ನಿನ್ನ ನಾಮಾಮೃತವನುಣದೆ ನಾ ಮುಸುರೆ ಎಂಜಲು ಸವಿದೆನೊ ರಂಗಾ 3 ಹೊನ್ನು ಹಣದ ಆಸೆಗೆ ಹಲಬರನ ಅನುಸರಿಸಿ ಅನ್ನಿಗರ ಕೊಂಡಾಡುತ ಎನ್ನಯ್ಯ ಎನ್ನೊಡಿಯ ಎನ್ನ ಸಾಕುವ ತಾತ ಎನ್ನ ಕುಲ ಉದ್ಧಾರಕಾ ನಾಕ ಬಗೆಯಿಂದ ಮರಿಯದಲೆ ಕುನ್ನಿಯಂತೆ ಕಾಯಿದೆನೊ ಪನ್ನಂಗ ಶಯನನೆ ನಿನ್ನ ಮಹಿಮೆಗಳನ್ನು ಅನ್ನದಲೆ ನರಕಿಕ್ಕಿಳಿದೇ ಸ್ವಾಮಿ 4 ಒಂದು ದಿನವಾದರೂ ಸಂತೋಷದಿಂದಲಿ ಜಿಹ್ವೆ ಇಂದಿರಾರಮಣ ಶರಣಾಗತವತ್ಸಲ ಕಂದರ್ಪನಯ್ಯ ಕಮಲಬಾಂಧವ ಕುಲಾಗ್ರಣಿ ಎಂದು ಸ್ಮರಿಸದೆ ಘೋರ ಅಂಧ ಕೂಪದಿ ಹೊರಳಿದೆ ಮಂದಮತಿಗೊಂದು ಗತಿಯಿಲ್ಲ ವಿಜಯವಿಠ್ಠಲ ತಂದೆ ನೀನೆ ಕಾವುದೋ ಹರಿಯೆ 5
--------------
ವಿಜಯದಾಸ
ಪಾದ ತೋರೆಂದು ಪಗುರುಸರ್ವಭೌಮರ ಅಖಂಡ ಸೇವೆಯ ಮಾಡಿವರಸುಮಂತ್ರಾಲಯದಿ ವಾಸಮಾಡಿಸುರಪನಾಲಯವು ಮಂತ್ರಾಲಯವು ಎಂಬಂತೆಹರಿದಾಸರಾಶಯವ ನಿಜಮಾಡಿ ತೋರಿಸಿದ 1ಉಡುಪಿಯೊಳು ಗುರುಸಾರ್ವಭೌಮರ ವೃಂದಾವನವಚತುರತನದಿಂದ ಪ್ರತಿಷ್ಠಾಪನೆಯ ಮಾಡಿಭರತಖಂಡದ ತೀರ್ಥಕ್ಷೇತ್ರಗಳ ಸಂಚರಿಸಿಭಕುತರಿಗೆ ಶ್ರೀ ಮಠದ ಮ'ಮೆ ತೋರಿದ ಗುರು2ಶ್ರೀ ಸ'ುೀರ ಸಮಯ ಸಂವರ್ಧಿನಿ ಸಭೆಯಸಂಸ್ಥಾಪನೆಯ ಮಾಡಿ ಪಂಡಿತರಿಗೆಭೂರಿ ಸಂಭಾವನೆ ಮೃಷ್ಟಾನ್ನ ಭೋಜನದಿತ್ಟುಗೊಳಿಸುತ ದೇಶ ದಿಗ್ವಿಜಯ ಮಾಡಿದ 3ಶ್ರೀ ಮಠದ ಕೀರ್ತಿಯನು ಶಿಖರಕ್ಕೆ ಮುಟ್ಟಿಸಿಸ್ವರ್ಣಮಂಟಪರಚಿಸಿ ವೈಭವವ ಬೆಳೆಸಿಶ್ರೀಮೂಲರಾಮ ದಿಗ್ವಿಜಯ ಜಯರಾಮರನುಭಕ್ತಿುಂದ ಪೂಜಿಸಿದ ಭಾಗ್ಯಶಾಲಿ 4ಗುರುಸಾರ್ವಭೌಮರಿಗೆ ಪರಮ ಪ್ರೀತಿಯ ಕಂದವರಮಧ್ವಮತ ಸುಧಾಂಬುಧಿಗೆ ಚಂದ್ರಪರಮಾತ್ಮ ಭೂಪತಿ'ಠ್ಠಲನ ಪೂಜಿಸುವಪರಮ ಪ್ರಶಾಂತ ಧೀರೆಂದ್ರ ಸನ್ನಿಧಿವಾಸ 5
--------------
ಭೂಪತಿ ವಿಠಲರು
ಪಾದ ಸೇವೆಯಿಂದಲಿ ಸುಖಿಸೋಳೊ ಲಕ್ಷ್ಮೀಲೋಲ ಪಾಡಿ ತೂಗುವಳೊ ಮೋಹದಲಿ ಯಶೋದ ಯೋಗಿ ಜನರು ಕೊಂಡಾಡಲ್ವಿನೋದ 1 ಜಲಧಿ ಭೂದೇವಿ ಪ್ರಜ್ವಲಿಸುವ ಆಲದೆಲೆಯು ತಾನಾಗಿ ನಿದ್ರೆಹಸಿವು ಬಿಟ್ಟು ನಿರುತದಿ ಆತನ- ಲ್ಲಿದ್ದಳಂಭ್ರಣಿ ಸ್ತೋತ್ರದಲಿ ಭೂದೇವಿ 2 ವಟದ ಎಲೆಯ ಮೇಲೆ ವಟುವಾಗಿ ಮಲಗಿ ಉಂ- ಗುಟವ ಬಾಯೊಳಗಿಟ್ಟು ಮುದದಿ ಚಪ್ಪರಿಸೆ ಕಟುತರದಲಿ ನಾಲ್ಕು ವೇದವ ತೋರುತ ಪಟುತರದಲಿ ಯೋಗನಿದ್ರೆ ಮಾಡಿದನು 3 ಹದಿನಾಲ್ಕು ಲೋಕ ತನ್ನುದರದಲ್ಲಿಡುವ ಪದುಮಾಕ್ಷ ಶ್ರೀಕೃಷ್ಣ ಪರಮಾತ್ಮ ಲಾಲಿ ಅಜಭವಸುರರೆಲ್ಲ ಭಜನೆಯ ಗೈವರು ಮುದದಿ ಶಯನವ ಮಾಡೊ ಮಧು ಮುರಾಂತಕನೆ 4 ಕಡಲಶಯನ ಹರಿ(ಯ) ತೊಟ್ಟಿಲೊಳಿಟ್ಟು ಬಿಡದೆ ನಾರಿಯರೆಲ್ಲ ಪಾಡಿ ತೂಗುವರು ಪೊಡವಿಗೊಡೆಯ ನಿನ್ನ ನಾಮ ಕೊಂಡಾಡಲು ಬಿಡದೆ ಭಕ್ತರ ಕಾಯೊ ಭೀಮೇಶಕೃಷ್ಣ 5
--------------
ಹರಪನಹಳ್ಳಿಭೀಮವ್ವ
ಪಾದ ಪದುಮವ ನಿತ್ಯದಿ | ಭಜಿಸುವರ ಸತ್ಯಲೋಕೇಶನ ಪೆತ್ತ ಪರಮಾತ್ಮನು | ನಿತ್ಯದಿ ಕರಪಿಡಿವ ತಿಳಿ ಮಾನವಾ ಪ ರವಿಸನ್ನಿಭಾಂಗರು | ಭುವಿ ದಿವಿಜೇಂದ್ರರು | ಕವಿಗಣ ಸನ್ನುತರು | ಭವದೂರರು | ಭುವನದೋಳ್ ಧೃಡಚಿತ್ತದವರಾಗಿ | ತಪದಲ್ಲಿ ಧ್ರುವನಂತೆ ತೋರುವರು ಮಹಾತ್ಮರು1 ಭುಜಗಾಧಿಪನಯಂತೆ ಯೋಗ ಸುಸಾಧಕರು ಭುಜಗ ಭೂಷಣನಂತೆ ವಿಜಯಾನಂದದಿ | ದಿಗ್ವಿಜಯ ಶಾಲಿಗಳಿವರು 2 ನೇಮಪೂರ್ವಕವಾಗಿ | ನಿತ್ಯದಲ್ಲಿ ಶಾಮಸುಂದರ ಸೀತಾ ರಾಮನರ್ಚಿಸುತಲಿ | ಭೂಮಿಯೋಳು ಮೆರೆದಿಹರು ಸುಧೀರರು 3
--------------
ಶಾಮಸುಂದರ ವಿಠಲ
ಪಾಪ ಕರ್ಮವ ಮಾಡಬ್ಯಾಡಾ ನರಕಕೂಪದೊಳಗೆ ಬಿದ್ದು ಹೊರಳಾಡಬ್ಯಾಡಕಾಕಪುರುಷರ ಸಂಗ ಕೇಡಾ ನಮ್ಮಶ್ರೀಪತಿಯ ಸ್ಮರಣೆ ಮಾಡದೆ ಬಿಡಬ್ಯಾಡಾ 6 ವಿಹೀತ ಕರ್ಮಗಳನ್ನು ಮಾಡೋ ನೀನುಅಹಿತಲ್ಪನೊಲಿಸಿ ಸದ್ಗತಿಯನ್ನು ಬೇಡೊಅಹಿತ ವಿಷಯ ಸುಖ ದೂಡೋ ಲೋಕ ದಹಿತನ ಸೇವೆಗೆಯುತಲಿ ಕೊಂಡಾಡೊ 7 ಸತ್ಯವಚನದಿಂದ ಬಾಳೊ ಬಲುಭಕ್ತಿಪೂರ್ವಕದಿ ಸಚ್ಛಾಸ್ತ್ರ ಕೇಳೊಚಿತ್ತದಿ ಶಾಂತಿಯ ತಾಳೊ ದುಷ್ಟ_ರುಕ್ತಿ ಕೇಳದೆ ನಿನ್ನ ಕಿವಿ ಮುಚ್ಚಿಕೊಳ್ಳೊ 8 ಪಂಚಭೇದ ಪ್ರಪಂಚವು ನಿಜವೆನ್ನೊ ಮೂಢಾ 9 ಜೀವೇಶಾರೊಂದೆಂಬೊ ಹೊಲಿಯಾ ಪರಿಭಾವಿಸೂ ದ್ವಾಸುಪರ್ಣವೆಂಬೊ ಶ್ರುತಿಯಾಕಾವನಯ್ಯನೆ ಜಗದೊಡೆಯಾ ನಮ್ಮಜೀವಾತ್ಮ ಭೃತ್ಯನೊ ಖರಿಯಾ 10 ಅದ್ವೈತರೊಡನಾಟ ಬ್ಯಾಡ ನಮ್ಮಮಧ್ವಮತದ ಪದ್ಧತಿ ಬಿಡಬ್ಯಾಡಾಖದ್ಯೋತಸುತಗಂಜಬ್ಯಾಡಾ ನೀನುಪೊಂದು ಐಹೊಳಿಯ ವೆಂಕಟನಂಘ್ರಿಗಾಢಾ 11
--------------
ಐಹೊಳೆ ವೆಂಕಟೇಶ
ಪಾಪಾತ್ಮ ನಾನಲ್ಲ ಪಾಪವೆನದಿನಿತಿಲ್ಲ ಪ ಶ್ರೀಪತಿಯೆ ನಿನಗೆ ನೀನೇ ಮಾಡಿಕೊಂಡೆ ಅ ವರದನು ಕರದಲಿ ಉಷ್ಣಜಲ ಮೃತ್ತಿಕೆಯತರಲು ಕೈ ಸುಟ್ಟಾಗ ಪಣೆಯ ಠೊಣೆದು ಬೈದೆಮರಳಿ ನಾಚಿಕೆ ಇರದೆ ಚರಣಕೆ ಪಾವುಗೆ ತಂ-ದಿರಿಸಿದಪರಾಧ ಎನ್ನದೊ ನಿನ್ನದೊ ದೇವ 1 ಬಂದ ಭೃಗು ಮುನಿ ಎದೆಯನೊದೆಯೆ ಆತಗೆ ಪಾಪಅಂದು ಮೂದಲಿಸಿ ಬೈದವರಿಗೆ ದೋಷನಿಂದುದೇ ಹಣೆಯೊಳಗೆಸೆಯೆ ಭೀಷ್ಮಂಗಘವುಹೊಂದಿದಾ ಪಾಂಡವರಿಗೆ ಕುಂದು ಬಂದಿತೆ ದೇವ2 ಕುರುಡನಿಗೆ ದಾರಿಯನು ತೋರದೆ ಆತಗೆ ಮುನಿದುದರಿಗೆ ನೂಕಿದಡೆ ಅವನು ಏನು ಮಾಡುವನುಶಿರಕೆ ತಪ್ಪಾಗಿ ಗುರಿಯಿಡಲದು ಸರಳ ತಪ್ಪೆಅರಸನಾಳ ಕೊಂದಡೆ ಆರೇನು ಮಾಡುವರು 3 ಕುಣಿಸಿದರೆ ಆಡುವುದು ಬೊಂಬೆ ಸೂತ್ರಮುಖದಿಇನಿತುಂಟೆ ಕಪಟನಾಟಕ ಸೂತ್ರಧಾರಿಇನಿತಾಡಿಸಿದರಾಡುವೆ ಪಾಪ ಪುಣ್ಯಂಗಳಿಂದಎಣಿಕೆಗಾನಲ್ಲ ನೀನಲ್ಲದಿಲ್ಲ 4 ತಂದೆತಾಯಿಗಳು ತಮ್ಮ ಕಂದಗೆ ಸರ್ಪಮುಖದಿಂದ ಕಚ್ಚಿಸಲು ಆ ತಪ್ಪು ಕಂದನದೆಮುಂದರಿಯದಜ್ಞಾನಿಯೆಂದು ಕ್ಷಮಿಸೆಲ್ಲವನು ತಂದೆ ವೇಲಾಪುರದ ಆದಿಕೇಶವನೆ5
--------------
ಕನಕದಾಸ
ಪಾಪಾತ್ಮನಾನಲ್ಲ ಪಾಪವೆನಗಿನಿತಿಲ್ಲ ಶ್ರೀಪತಿಯೆ ನಿನಗೆ ನೀನೇ ಮಾಡಿಕೊಂಡೆ ಪ ಅಂದು ಭೃಗುಮುನಿಯೆದೆಯಲೊದೆಯಲವನಿಗೆ ಪಾಪ ಬಂದುದೇ ಮೂದಲಿಸಿ ಬೈದವನಿಗಾ ದೋಷವು ನಿಂದುದೇ ಹಣೆಯೊಡೆಯಲೆಸೆದ ಭೀಷ್ಮಂಗಘವು ಹೊಂದೀತೆ ಪಾಂಡವರ್ಗೆ ಕುಂದು ಬಂದೀತೆ ದೇವಾ 1 ವರದನಾಕಾರದೊಳಗುಷ್ಣಜಲ ಮೃತ್ತಿಕೆಯ ತರಲು ಕೈಸುಡಲು ಹಣೆಯನು ಟೊಣದು ಬೈದೇ ಮರಳಿ ನಾಚಿಕೆಯಿಲ್ಲದೆ ಚರಣಕ್ಕೆ ಪಾವುಗೆಯ ನಿರಿಸಿದಪರಾಧ ನಿನ್ನದೋ ಯೆನ್ನದೋ ದೇವಾ 2 ಕುರುಡನಿಗೆ ದಾರಿಯನು ತೋರುವಾಪ್ತನು ಮುಳಿದು ಜರಿದು ನೂಕಿದೊಡಾತನೇನ ಮಾಡುವನೂ ಗುರಿಯನಿಡುವವನು ತಪ್ಪೆಸೆಯೆ ಸರಳಿನದೇನು ಅರಸಾಳಕೊಂದಡವನೇನು ಮಾಡುವನೂ 3 ಕುಣಿಸಿದಂತಾಡುವುದು ಬೊಂಬೆಯು ಸ್ವತಂತ್ರವದ ಕಿನಿತುಂಟೆ ಕಪಟನಾಟಕ ಸೂತ್ರಧಾರೀ ಎನಿತಾಡಿಸಿದೊಡಾಡುವೆನು ಪಾಪಪುಣ್ಯವೆಂ ಬೆಣಿಕೆಗಾನಲ್ಲ ನೀನಲ್ಲದೆಲೆ ದೇವಾ4 ತಂದೆ ತಾಯ್ಗಳು ತಮ್ಮ ಕಂದನನು ಸರ್ಪಮುಖ ದಿಂದ ಕಚ್ಚಿಸಲು ತರಳನಲಿ ತಪ್ಪೇನೂ ಮುಂದರಿಯದಜ್ಞಾನಿಯೆಂದು ನೀಕ್ಷಮಿಸಿಕೋ ತಂದೆ ವೈಕುಂಠ ವೇಲಾಪುರಾಧೀಶಾ 5
--------------
ಬೇಲೂರು ವೈಕುಂಠದಾಸರು
ಪಾಪೋಸು ಹೋದುವಲ್ಲಾ ಪ ಅಪಾರ ಜನ್ಮದಿಂದ ಆರ್ಜನ ಮಾಡಿದ ಅ.ಪ. ಉರುಗಾದ್ರಿಯಲ್ಲಿ ಸ್ವಾಮಿ ಪುಷ್ಕರಣಿ ಮೊದಲಾದಪರಿಪರಿ ತೀರ್ಥ ಸ್ನಾನಗಳ ಮಾಡಿಹರಿದಾಸರ ಕೂಡ ಶ್ರೀನಿವಾಸ ಮೂರ್ತಿದರುಶನದಲಿ ಮೈಮರೆತು ಇದ್ದೆನು ಎನ್ನ 1 ಪರಮ ಭಾಗವತರು ಹರಿಕಥೆ ಹೇಳಲುಪರಮ ಹರ್ಷದಿಂದ ಕೇಳುತಿದ್ದೆಪರಮ ಪಾಪಿಷ್ಠರ ಪಾಲಾಗಿ ಹೋದಾವುಪರಮಾತ್ಮನ ಚಿತ್ತಕೆ ಬಂದಿತೀಗೆನ್ನ 2 ಮಾಯಿ ಒಲಿದು ಎನಗೆ ಕೊಂಡು ಕೊಟ್ಟಿದ್ದಳುದಾಯಿಗಾರರು ನೋಡಿ ಸಹಿಸಲಿಲ್ಲಾಮಾಯಾರಮಣ ನಮ್ಮ ಮೋಹನ್ನ ವಿಠಲನ್ನಮಾಯದಿಂದಲಿ ಮಟ್ಟವಾಯಿತು ಎನ್ನ 3
--------------
ಮೋಹನದಾಸರು