ಒಟ್ಟು 153 ಕಡೆಗಳಲ್ಲಿ , 44 ದಾಸರು , 146 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾಧಕರೊಳು ಬದ್ಧನು | ಮಧುಸೂದನ ಭಕ್ತಿಗೆ ದೃಢವಿಲ್ಲದವನು ಪ ಧರೆಯೊಳು ನೋಡಲು ಕೊಳಲುಂಟು ಕೊಡಲುಂಟು | ಹರಿಪರದೈವೆಂದು ಹೇಳುವನು | ದುರಿತವು ಬಂದಡೆ ನೀಚದೈವಂಗಳಿ | ಗೆರಗಿ ಕೊಂಡಾಡುವ ಸಂದೇಹಿ ಆತ್ಮಾ 1 ನಾನಾ ಶಾಸ್ತ್ರವನೋದಿ ಕಾಂಚನದಾಶೆಗೆ | ನೃಪರ ವಾಲ್ಗೈಸುವನು | ಈ ನಿಖಿಳದ ವೃತ ಜಪ ತಪವನು ಮಾಡೀ | ನಾನೆಂಬ ಹಮ್ಮಿಲಿ ಪರರನು ಹಳಿವಾ 2 ವಾಸುದೇವ ಸರ್ವಯಂಬುವ ದೇವರ | ದಾಸರ-ಸೂಯದಿ ಬಾಳುವನು | ಲೇಸಾಗಿ ಗುರುವರ ಮಹಿಪತಿಸ್ವಾಮಿಯ | ಧ್ಯಾಸವಿಲ್ಲದೆ ವಣಡಂಬದಲ್ಲಿಹನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬೆಳಗಾಗಲೆದ್ದೆ ನಾನೀಗ ಜಾಗ್ರದಲಿಮಲಗಿದ್ದು ನಿದ್ರೆ ತಿಳಿವನಕ ರಾತ್ರೆಯಲಿ ಪಬ್ರಹ್ಮ ತಾನೆಂದೆಂಬ ಭಾನು ಬಳಿಕಸ್ತ'ುಸೆಹಮ್ಮೆಂಬ ಸಂಜೆಗತ್ತಲೆಯಡರಲುಉಮ್ಮಳಿಪ 'ಷಯ ರೂಪದ ಮಾಯೆ ನಡು'ರುಳುಜುಮ್ಮೆನುತ ಮೈಮರೆದ 'ದ್ಯೆಯಲಿ ಮುಳುಗಿ 1ಕೃಷ್ಣಪಕ್ಷದ ಕಡೆಯ ದಿವಸ ನಡುರಾತ್ರಿಯಲಿದಟ್ಟ'ಪ ಮೇಘಮಂಡಲದ ತೆರದಿಇಟ್ಟೆಡೆಯ ಕಾಮದಲಿ ಮನಮುಳುಗಿ ಮತ್ತಲ್ಲಿಮುಟ್ಟಿ ಕರ್ಮವ ಮಾಡಲದು ಕಣ್ಣುಮುಚ್ಚಿರಲು2ಸತ್ಯ ಜಗವೆಂದೆಂಬ ವರುಷ ಋತು ದಾಟಿದುದುನಿತ್ಯವಲ್ಲದ ಮಾಯೆ ನಿಶಿ ತೆಗೆದುದುಪ್ರತ್ಯಗಾತ್ಮಜ್ಯೋತಿ ಸೂರ್ಯತಾನುದಿಸಿದನುಮುತ್ತೆರದಹಂಕಾರ ನಿದ್ರೆ ಲಯವಾಯ್ತು 3ಗುರು'ನಂಘ್ರಿಗೆ ನ'ುಸಿದರುಣ ತಾನುದಿಸುತಿರೆಗುರುತರದ ಮೋಹಾಂಧಕಾರ ಬಳಿಕಹರಿದು ಬೆಳಕಾವರಿಸಿ ಗುರು'ನುಪದೇಶರ'ಸ್ಫುರಿಸಿ ಸರ್ವತ್ರ ತಾ ನಿಬಿಡವಾಗಿರಲು 4ತಿರುಪತಿಯ ವೆಂಕಟನ ಚರಣಕಮಲವನೊಮ್ಮೆಕರಣದೊಳಗಪ್ಪಿ ಕನಸಿನ ಕಡೆಯಲಿಹರಿದುಹೋುತು ಕನಸು ಸ್ಥಿರತೆನಿಂತಿತು ನಿಜವುಮರಳಿ ಕನಸನು ಕಾಣದಂತಾುತೀಗ 5
--------------
ತಿಮ್ಮಪ್ಪದಾಸರು
ಬೆಳಗಾಗಲೆದ್ದೆ ನಾನೀಗ ಜಾಗ್ರದಲಿಮಲಗಿದ್ದು ನಿದ್ರೆ ತಿಳಿವನಕ ರಾತ್ರೆಯಲಿಪಬ್ರಹ್ಮ ತಾನೆಂದೆಂಬ ಭಾನು ಬಳಿಕಸ್ತ'ುಸೆಹಮ್ಮೆಂಬ ಸಂಜೆಗತ್ತಲೆಯಡರಲುಉಮ್ಮಳಿಪ 'ಷಯ ರೂಪದ ಮಾಯೆ ನಡು'ರುಳುಜುಮ್ಮೆನುತ ಮೈಮರೆದ 'ದ್ಯೆಯಲಿ ಮುಳುಗಿ1ಕೃಷ್ಣಪಕ್ಷದ ಕಡೆಯ ದಿವಸ ನಡುರಾತ್ರಿಯಲಿದಟ್ಟ'ಪ ಮೇಘಮಂಡಲದ ತೆರದಿಇಟ್ಟೆಡೆಯ ಕಾಮದಲಿ ಮನಮುಳುಗಿ ಮತ್ತಲ್ಲಿಮುಟ್ಟಿ ಕರ್ಮವ ಮಾಡಲದು ಕಣ್ಣುಮುಚ್ಚಿರಲು2ಸತ್ಯ ಜಗವೆಂದೆಂಬ ವರುಷ ಋತು ದಾಟಿದುದುನಿತ್ಯವಲ್ಲದ ಮಾಯೆ ನಿಶಿ ತೆಗೆದುದುಪ್ರತ್ಯಗಾತ್ಮಜ್ಯೋತಿ ಸೂರ್ಯತಾನುದಿಸಿದನುಮುತ್ತೆರದಹಂಕಾರ ನಿದ್ರೆ ಲಯವಾಯ್ತು3ಗುರು'ನಂಘ್ರಿಗೆ ನ'ುಸಿದರುಣ ತಾನುದಿಸುತಿರೆಗುರುತರದ ಮೋಹಾಂಧಕಾರ ಬಳಿಕಹರಿದು ಬೆಳಕಾವರಿಸಿ ಗುರು'ನುಪದೇಶರ'ಸ್ಫುರಿಸಿ ಸರ್ವತ್ರ ತಾ ನಿಬಿಡವಾಗಿರಲು4ತಿರುಪತಿಯ ವೆಂಕಟನ ಚರಣಕಮಲವನೊಮ್ಮೆಕರಣದೊಳಗಪ್ಪಿ ಕನಸಿನ ಕಡೆಯಲಿಹರಿದುಹೋುತು ಕನಸು ಸ್ಥಿರತೆನಿಂತಿತು ನಿಜವುಮರಳಿ ಕನಸನು ಕಾಣದಂತಾುತೀಗ5
--------------
ತಿಮ್ಮಪ್ಪದಾಸರು
ಬೆಳಗಿನ ಝಾವದಿ ಬಾರೊ ಹರಿಯೆ, ನಿನ್ನ ಪ ಚರಣ ತೊಳೆದು ಜಲಪಾನ ಮಾಡುವೆನೊಅ.ಪ. ನೀರೊಳು ನಿನ್ನನು ಕಾಂಬೆ ಗಿರಿ ಭಾರಪೊತ್ತರೆ ನಗುವಳೊ ನಿನ್ನ ರಂಭೆ ಮೋರೆ ತಗ್ಗಿಸಿದರೇನೆಂಬೆ ಅಲ್ಲಿ ನಾರಸಿಂಹನಾಗಿ ಪೂಜೆಯ ಗೊಂಬೆ 1 ಬಲಿಯದಾನವ ಬೇಡಿದ್ದೆಲ್ಲ ನೀ ಛಲದಿ ಕ್ಷತ್ರಿಯರ ಸಂಹಾರ ಮಾಡೆದ್ಯಲ್ಲ ಛಲವಂತ ನಿನಗೆದುರಿಲ್ಲ ನೀ ನೊಲಿದ್ಹನುಮನಿಗೆ ಅಜಪದವನಿತ್ಯೆಲ್ಲ 2 ರುಕ್ಮಿಣೀಶಗೆ ಸಮರಿಲ್ಲ ಕೃಷ್ಣ ಬಿಮ್ಮನೆ ತ್ರಿಪುರ ಸತಿಯರಪ್ಪಿದ್ಯೆಲ್ಲ ಬ್ರಹ್ಮಾದಿಗಳು ಸಮರಲ್ಲ ಬಲು ಹಮ್ಮಿಲಿ ಹಯವೇರಿ ವಿಜಯವಿಠ್ಠಲ 3
--------------
ವಿಜಯದಾಸ
ಬೊಮ್ಮಗೆ ಶರಣಿಂಬೆವಮ್ಮ ನಮ್ಮ ಗುರು ಎಂದುಹಮ್ಮಿನ ಸುಭದ್ರಾ ದೇವಿಗೆ ದಮ್ಮಯ್ಯ ಎನಲೆಂದು ಪ. ವಾಚಾಭಿಮಾನಿ ನಿಜ ಬುದ್ಧಿ ಸೂಚಿಸು ನಮಗೆಂದುನಾಚಿಸಿ ದ್ರೌಪತಿಯ ಆಣೆ ಅಚೆ-ಲಿಟ್ಟೆವೆಂದು1 ಮಂದ ಜಾಸನ ಜಗಕೆ ನೀವು ತಂದೆ ಹೌದೆಂದುನಿಂದಿಸಿ ಸುಭದ್ರೆ ಪಂಥ ಹಿಂದಕ್ಕೆ ಹಾಕೆವೆಂದು2 ಸರಸಿಜಾಸನ ರಾಮೇಶನ ಅರಸಿಯರ ಗೆಲಿಸೆಂದುಸರಸದಿ ಸುಭದ್ರಾ ಪಂಥ ಬಿರುಸು ಮಾಡೆವೆಂದು 3
--------------
ಗಲಗಲಿಅವ್ವನವರು
ಬೋಧ ನಡತೆಯಲಿ ಕತ್ತೆಯಾದೆ ಪ ನೀರಲಿ ನೆರಳನೆ ನೋಡುವೆ ಹಣೆಗೆ ಗಂಧವ ತೀಡುವೆಹಾರ ತುರಾಯ್ಗಳ ಸೂಡುವೆ ಮೋರೆಯನೆತ್ತೆತ್ತ ಮಾಡುವೆ1 ಜಾರೆಯರೊಡನೆ ಬೆರೆವೆ ಕಿಸಿ ಕಿಸಿ ಹಲ್ಲನೆ ಕಿರಿವೆಬಾರದ ಪದವ ಒದರುವೆ ಹಮ್ಮಿನಿಂದೆಲ್ಲೆಲ್ಲಿ ಮೆರೆವೆ2 ಬಿಡುವೆನು ಗುರುಪಾದವೆಂಬೆ ಬೇಡಿತಿಯ ಕೂಡುವೆನೆಂಬೆಸುಡುವೆನು ಕಪನಿಯನೆಂಬೆ ಲಿಂಗವ ಕಟ್ಟಿರಿ ಎಂಬೆ 3 ವಿಧ ವಿಧ ವೇಷವ ಧರಿಸಿ ಬಹು ಜಾತಿಯಲಿ ಕೈ ಬೆರಳಿರಿಚಿದಾನಂದ ನೀ ಮೆರೆಸಿ ಬಾಳುವೆ ದೊಡ್ಡವನೆನಿಸಿ 4
--------------
ಚಿದಾನಂದ ಅವಧೂತರು
ಬೋಧ ಬಂದನು ಮಾ | ಪ್ರಪಂಚ ಗೆಲುವವ ನಾರೆಲಮಾ ನಮ್ಮ | ಪತಿ - ಭಕ್ತರು ಕಾಣಿಲಮಾ ಪ ಎನಗಾರು ಇದಿರಿಲ್ಲ ಸ್ವರಾಜ್ಯದೊಳಗಿಂದು | ನೀನಾರೋ ಪರದೇಶಿ ಹೇಳಲಮಾ | ನಾನೆಂಬ ಹಮ್ಮಿನ ಬಿರುದನ ಬಿಡಿಸುವ | ನಾನೆಂಬ ಹಮ್ಮಿನ ಬಿರುದವ ಬಿಡುಸುವ | ಜ್ಞಾನ ಶಸ್ತ್ರಧಾರಿ ಬೋದನುಮಾ 1 ಸರಸಿದ ಭವರುದ್ರ ಇಂದ್ರರ ಬಗೆಯದ | ನೆರೆ ಕಾಮ ಗೆಲುವವ ರಾರೆಲಮಾ | ಭಾಗವತ ಶುಕ ಹನುಮಂತನು ಮೆರೆವ ಭೀಷ್ಟ ದೇವ ನಲ್ಲೇನುಮಾ 2 ವೈಕುಂಠದೊಳು ಸನಕಾದಿಕರೊಳು ಹೊಕ್ಕ | ಆ ಕೋಪ ಕಾನುವ ನಾರೆಲಮಾ | ಸಾಕಿ ಬೆಳೆಸಿದ ಶಾಂತಿಯ ನೆಲೆಯಿಂದ | ಪ್ರಖ್ಯಾತ ಕದರಿಯು ಕೇಳಲಮಾ 3 ಧರಿಯಿತ್ತ ರಾಮಗ ಸ್ಥಳ ವಿಲ್ಲೆಂದರು ಬ್ರಾ | ಹ್ಮರು ಲೋಭಗೆದ್ದ ವನಾರೆಲಮಾ | ಮರುಳ ಕೇಳು ಧನ ತೃಣ ಸಮ ಬಗೆದರು | ಕರ್ಣ ರಲ್ಲೇನು ಮಾ 4 ಬೆಟ್ಟದಿ ಉಡಿಹಾಕಿ ಕೊಳ್ಳಲು ಹೋದನ | ಶಿಷ್ಯ ಮೋಹನ ಗೆಲುವ ನಾರೆಲ ಮಾ | ಮುಟ್ಟಿ ಬೇಡಲುಳಿವ ಮಹನ ತಂದಿಟ್ಟನು | ಸೃಷ್ಟಿ ಮನುಜ ಚಿಲ್ಹಾಳಲ್ಲೇನು ಮಾ 5 ಭ್ರಗು ಮುನಿದಕ್ಷನು ಕಾರ್ತೃ-ವೀರ್ಯಾದಿಯ | ಬಗೆಯದ್ದ ಮದ-ವಳಿ ದಾರೆಲ ಮಾ | ಜಗ ಹೊಡೆತನವಿದ್ದು ಬಾಗಿ ನಡೆದ ನಮ್ಮ | ಸುಗುಣ ಜನಕರಾಯ ನಲ್ಲೇನು ಮಾ 6 ಹುಚ್ಚಾದ ವಶಿಷ್ಟನೊಳು ವಿಶ್ವಾಮಿತ್ರನು | ಮತ್ಸರಿಲ್ಲದವ ನಾರೆಲ ಮಾ | ಎಚ್ಚರಿಸಿದ ಸುಯೋಧನಗ ವಿಜಯತನ | ಸಚ್ಚರಿತ ಧರ್ಮ ನಿಲ್ಲೇನು ಮಾ 7 ಬಗೆ ಬಗೆ ವಿಷಯ ದುಪಾಯಗಳೆನಗುಂಟು | ನಿಗದಿಯ ನಡೆನುಡಿ ಕೇಳೆಲ ಮಾ | ಭಗವದ್ಭಾವ ಸರ್ವ ಭೂತದಿ ನೋಡಲು | ವಿಗುಣವೆ ಸದ್ಗುಣ ಭಾಸುದ ಮಾ 8 ನಿನ್ನ ಬಲವ ಕಂಡೆ ಶರಣವ ಹೊಕ್ಕೆನು | ಬೋಧ ಕೇಳೆಲ ಮಾ | ಸನ್ನುತ ಮಹಿಪತಿ ಸುತ ಪ್ರಭು ನೆಲೆದೋರಿ ಮನ್ನಿಸಿ ಹೊರೆವನು ಬಾರೆಲಮಾ 9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬ್ರಹ್ಮಕೊರವಂಜಿ ಸುರರು ಕಿನ್ನರರು ಸ್ಮರಣೆ ಮಾಡುವ ಪಾದ ಕುರುಪತಿಯ ಗರ್ವವನು ಪರಿಹರಿಸುವ ಪಾದ ಪರಮ ಯೋಗಿಗಳ ಹೃತ್ಕಮಲದಲ್ಲಿಹ ಪಾದ ಪಾದ ಪದ್ಮವನು ನೆನೆವೆ ನಾನು 1 ದಾನವಾರಿಯ ಚೆಲ್ವ ಜಾನು ಜಂಘೆಗಳೆಸೆವ ಮೀನ ಖಂಡಗಳ ಪೆರ್ದೊಡೆಯ ಸೊಬಗಿನ ಭಾನುಕೋಟಿ ಪ್ರಕಾಶದಂತೆ ವರಕಾಂತಿಯಲಿ ಆನಂದದಿಂದಲಿ ಮೆರೆವ ಮೂರುತಿಯ ನೆನೆವೆÀ ನಾನು 2 ಮಿಸುನಿ ಒಡ್ಯಾಣ ಕಾಂಚಿಯದಾಮ ತೆಳ್ವಸುರ ಬಿಸಜನಾಭನ ಬಾಹುಪುರಿಯ ಸೊಬಗಿನ ಎಸೆವ ಗದೆ ಶಂಕಚಕ್ರವು ಪದ್ಮಕರದಿ ಶೋ ಭಿಸುತಿರುವ ಕಂಬುಕಂಧರದ ಮೂರುತಿಯ ನೆನೆವೆ ನಾನು 3 ಕದಪು ಕಂಗಳು ಎಸೆಯೆ ಕರ್ಣಕುಂಡಲದ ಸಂಪಿಗೆಯ ನಾಸಿಕದ ರನ್ನ ತುಟಿ ಝಗಝಗಿಸೆ ಕುಡಿಹುಬ್ಬುಗಳು ಎಳೆಯ ಮನ್ಮಥನ ಚಾಪದಂತೆಸೆವ ಮೂರುತಿಯ ನೆನೆವೆÀ ನಾನು 4 ಅರೆದಿಂಗಳಂತೆಸೆವ ನೊಸಲ ಕಸ್ತೂರಿತಿಲಕ ಹೊಳೆÀವ ಕಿರೀಟ ಮಸ್ತಕದಿ ಢಾಳಿಸುವ ಅಲಸದೀರೇಳ್ಜಗವ ಕರುಣದಲಿ ರಕ್ಷಿಸುವ ಹೆಳವನಕಟ್ಟೆ ಶ್ರೀ ವೆಂಕಟೇಶ್ವರನ ನೆನೆವೆ ನಾನು 5 ಕಂಸಾಸುರನಿಟ್ಟ ಸೆರೆಯ ಮನೆಯೊಳು ಕಷ್ಟಪಡುತಲಿ ದೇವಕಿನಿ- ಮಿಷ ಯುಗವಾಗಿ ಕಳೆಯುತಿದ್ದಳು ನಿತ್ಯಾನಂದನ ನೆನೆಯುತಾ ಕಂಸರಿಪು ನಾರಾಯಣನು ಜನಿಸುವನೆಂದು ಅರುಹುವೆನೆನುತಲಿ ಧರಿಸಿದ ಆದನೆ ಕೊರವಿ 6 ಮಲ್ಲಿಗೆಯ ವನಮಾಲೆಯ ಚಂದ್ರಗಾವಿಯನುಟ್ಟು ಪಣೆಯೊಳು ತಿದ್ದಿತಿಲಕವನಿಟ್ಟನು ಗಂಧ ಕಸ್ತೂರಿ ಪರಿಮಳವನು ಲೇಪಿಸಿ ಸರ್ವಾಂಗದಿ ಭಾಸ್ಕರನಂದದಿ ಆದನೆ ಕೊರವಿ 7 ಗುಂಜಿಯ ದಂಡೆಯು ತೋಳಭಾಪುರಿ ಗಲ್ಲಕೊತ್ತಿದ ವೀಳ್ಯವು ಮಂಜಾಡಿಯಸರ ಹವಳ ಸರ ಹತ್ತೆಸರವಾ ಕೊರಳಲಿ ಹೊಳೆಯಲು ಅಂಜನವನಿಟ್ಟು ಅಲರಗಣ್ಣಿಗೆ ಅತಿಹರುಷದಿಂದ ಬೇಗದಿ ಆದನೆ ಕೊರವಿ 8 ಮುತ್ತು ಮಾಣಿಕ ಹೊನ್ನಗೂಡೆಯ ಪಿಡಿದು ಉತ್ತಮ ಶಿಶುವ ಬೆನ್ನಲಿ ಕಟ್ಟಿ ಚಿತ್ತದೊಳಗೆ ನರಹರಿ ಶರಣೆನುತ ಸತ್ಯಲೋಕದಿಂದಿಳಿದಳೆ ಕೊರವಿ 9 ಮಧುರಾ ಪಟ್ಟಣಕಾಗಿ ಬಂದಳೆ ಕೊರವಿ ಹದಿನಾರು ಬಾಗಿಲ ದಾಟಿ ನಡೆದಳು ಮದಗಜದಂತೆ ಮೆಲ್ಲಡಿಗಳನಿಡುತ ಬೆದರದೆ ಕೇರಿಕೇರಿಯಲಿ ಸ್ವರಗೈದು 10 ಮನೆಮನೆ ಬಾಗಿಲಗಳ ಮುಂದೆ ನಿಂತು ವನದ ಕೋಗಿಲೆಯಂತೆ ಯವ್ವಾ ಯವ್ವಾ ಎನುತ ವಿನಯದಿ ಸ್ವರಗೈವ ಕೊರವಿಯ ಕಂಡು ವನಿತೆ ದೇವಕಿ ಸನ್ನೆಮಾಡಿ ಕರೆದಳು 11 ಸನ್ನೆಮಾಡಿ ಕರದರೆ ಚೆನ್ನಕೊರವಂಜಿ ಬಂದು ಎನ್ನವ್ವ ಎನ್ನಕ್ಕ ಎನ್ನ ತಂದೆಯ ಹೆತ್ತವ್ವ ನಿನ್ನ ಮನದಾಯತವ ಹೇಳೇನು ಬಾರವ್ವ ಎನ್ನ ಕೂಸಿಗೆ ಒಂದಿಷ್ಟನ್ನವನಿಕ್ಕವ್ವ ಸೊಲ್ಲಕೇಳೆ ಸೊಲ್ಲಕೇಳೆ ಸಿರಿವಂತೆ ಬಾರೆ 12 ಮಲೆಯಾಳ ಕೊಂಕಣದೇಶ ಮಹಾರಾಷ್ಟ್ರ ಗುಜ್ಜರದೇಶ ಚೆಲುವ ಕಾಶ್ಮೀರ ಕಳಿಂಗ ಕರ್ನಾಟಕದೇಶ ತುಳುವ ತಿಲುಗ ದೇಶವನ್ನು ತಿರುಗಿ ಸೊಲ್ಲ ಹೇಳಿ ಬಂದೆ ಒಲುಮೆಯ ಕೊರವಂಜಿ ನಾನಲ್ಲವೆಯಮ್ಮ ಸೊಲ್ಲ ಕೇಳೆ ಸೊಲ್ಲ ಕೇಳೆ ಸಿರಿವಂತೆ ಬಾರೆ13 ಛಪ್ಪನ್ನ ದೇಶವನೆಲ್ಲ ಸುತ್ತಿ ಸೊಲ್ಲ ಹೇಳಿಬಂದೆ ತಪ್ಪ ಹೇಳುವ ಕೊರವಿ ನಾನಲ್ಲವೆಯಮ್ಮ ಕರ್ಪೂರ ವೀಳ್ಯವ ತಾರೆ ಕಾಂತೆ ನಿನ್ನ ಕೈಯ ತೋರೆ ಸೊಲ್ಲಕೇಳೆ ಸೊಲ್ಲಕೇಳೆ ಸಿರಿವಂತೆ ಬಾರೆ 14 ವಚನ :ಇತ್ತಿತ್ತ ಬಾರವ್ವ ವಿವರಿಸಿ ಹೇಳೇನು ಮುತ್ತಿನ ಮುಡಿಯವ್ವ ಮುದ್ದುಮುಖವ ತೋರೆ ಮತ್ತಗಜಗಮನೆ ಮಂದಹಾಸವದನೆ ರತ್ನದ ಸೆಳೆಗೋಲ ಪಿಡಿಯೆ ರಾಜೀವನೇತ್ರೆ ನಿನ್ನ ಚಿತ್ತದೊಳಗಣ ಮಾತ ಛಂದವಾಗಿ ಹೇಳ್ವೆನು ಕೇಳೆ ಅಮ್ಮಯ್ಯ ಬರಿಯ ಡಂಬಕದ ಕೊರವಿ ನಾನಲ್ಲ ಅರುಹುವೆನು ಮುಂದಣ ಕಥಾಂತ್ರವೆಲ್ಲವ ಮೊರದ ತುಂಬ ಮುತ್ತು ತಾರೆ ಮಾನಿನಿರನ್ನಳೆ ಕುರುಹ ಹೇಳೇನು ಇಲ್ಲಿ ಕುಳ್ಳಿರು ಬಾರೆಯವ್ವ15 ಎಂದ ಮಾತ ಕೇಳಿ ಹರುಷದಿಂದ ದೇವಕಿ ಮಿಂದು ಮಡಿಯನುಟ್ಟು ಕಾಂತೆ ಬಂದು ಕುಳಿತಳು ಇಂದುಮುಖಿಯು ಮೊರನ ತುಂಬ ಮುತ್ತನಿಟ್ಟಳು ತಂದು ಕೈಯತುಂಬ ಹೊನ್ನ ಕಾಣಿಕಿಟ್ಟಳು 16 ಗುಣಿಸಿ ಮುತ್ತಿನ ಅಕ್ಷತೆಯಿಟ್ಟು ಗುಪಿತದಿಂದಲಿ ನೆನೆದಳು ಮನದಭೀಷ್ಟವೀವ ಕೃಷ್ಣನ ಜನಿಸಿದೆನು ಮಧುರಾಪುರದ ಅರಸನುದರದಿ ಎನ್ನ ಸೋದರನೆಂಬ ಪಾಪಿ ಸೆರೆಯೊಳಿಟ್ಟನು17 ಎನ್ನ ಸುತನು ತನ್ನ ಕೊಲುವನೆಂಬ ಮಾತಿಗೆ ಎನ್ನ ಅಗ್ರಜ ಎನ್ನ ಮೇಲೆ ಖಡ್ಗವೆತ್ತಲು ಎನ್ನ ಪತಿಯು ಎನ್ನ ಮೇಲಣ ಮಮತೆಯಿಂದಲಿ ತನ್ನ ಸುತರ ಕೊಡುವೆನೆಂದು ಕೊಲೆಯನುಳುಹಿದ18 ಒಡನೆ ಹುಟ್ಟಿದ ಅಣ್ಣ ಎನಗೆ ವೈರಿಯಾದನು ಪಡೆದ ಪಡೆದ ಸುತರನರೆಯಲಪ್ಪಳಿಸಿದನು ಒಡೆಯ ಕೃಷ್ಣಸಲಹೊ ಎಂದು ಸ್ತುತಿಸಿ ದೇವಕಿ ಗಡಣದಿಂದ ಕೊರವಿ ತಾನು ಹೇಳ ಕುಳಿತಳು 19 ವಚನ :ತಿರುಪತಿ ತಿಮ್ಮಪ್ಪ ಚಳ್ಳಪಿಳ್ಳೆರಾಯ ಸುರಪುರವಾಸ ಲಕ್ಷ್ಮೀವರ ಕರುಣವಾಗು ವಂದನೆ ಸೊಲ್ಲ ಚಂದಾಗಿ ಹೇಳೇನು ಕೇಳೆಯಮ್ಮಯ್ಯಾ ಉರ್ಬಿಯೊಳತಿ ದಿಟ್ಟನಮ್ಮ ನಿಮ್ಮ ಮಗನು ಗರ್ಭದೊಳಿಹನು ಕಾಣಮ್ಮ ಕೊಬ್ಬಿದ ಕಂಸನ ಹಮ್ಮ ಮುರಿದು ನಿಮ್ಮ ನಿರ್ಬಂಧ ಬಿಡಿಸುವನಮ್ಮ 20 ಎಂಟನೆ ಗರ್ಭವಿದಮ್ಮ ನಿಮ್ಮುದರದಿ ಅಂಟಿಹ ಮಗನು ಕಾಣಮ್ಮ ಗಂಟಲ ಮುರಿವ ಕಾಣಮ್ಮ 21 ನಿಷ್ಕರುಣಿ ನಿಮ್ಮಣ್ಣನಮ್ಮ ನೀ ಪಡೆದಂಥ ಮಕ್ಕಳ ಕೊಲ್ಲುವ ಕಾಣಮ್ಮ ಚಕ್ರಧರನ ಕೈಯೊಳಮ್ಮ ಈ ಕಂಸನು ಸಿಕ್ಕುವುದು ತಡವಿಲ್ಲವಮ್ಮ 22 ವಚನ : ಈ ಮಾತು ಪುಸಿಯಲ್ಲ ಸ್ವಾಮಿಯ ಕರುಣ ಉಂಟು ಕೈಗೂಡಿತು ಕೇಳೆಯಮ್ಮಯ್ಯಾ ಕೈಯ ತೋರೆ ಕೈಯ ತೋರೆ ಕೈಯ ತೋರೆ ಅಮ್ಮಯ್ಯ ಕೈಯ ತೋರೆ ನಿನ್ನ ಮನದ ಕುರುಹ ಹೇಳುವೆ ಸೈಯೆನಿಸಿಕೊಂಬೆ ನಿನಗೆ ಸುಖವಾಕ್ಯವನು ಹೇಳಿ ಭಯ ಬೇಡವೇ ಅಮ್ಮಯ್ಯ ನಿನಗೆ ಭಾಷೆಯ ಕೊಡುವೆ 23 ಸಟೆಯ ಮಾತುಗಳಾಡಿ ಸೆಳೆದುಕೊಂಡು ಹೋಗಿ ಹೊಟ್ಟೆಯ ಹೊರೆವ ಕೊರವಿ ನಾನಲ್ಲವಮ್ಮ ನೆಟ್ಟನೆ ಸದಾಶಿವನ ತಟ್ಟಿ ಬಂದ ಕೊರವಿಯ ಮಾತ ದಿಟ್ಟವೆಂದು ಸೆರಗ ಗಂಟಿಕ್ಕಿಕೊಳ್ಳಮ್ಮ 24 ಅಂಗನೆ ನಿನ್ನ ಮನದ ಆಯಿತವ ಹೇಳೇನು ಮಾನಿನಿ ರನ್ನೆ ಬಂಗಾರದ ಕೈಯ ತೋರೆ ಬೊಗಸೆಗಂಗಳ ನೀರೆ ಹಿಂಗುವದು ನಿನ್ನ ಕಷ್ಟ ಹುಸಿಯಲ್ಲವಮ್ಮ 25 ವಚನ :ಚಂದ್ರವದನೆಯ ಚೆಲ್ವ ವಾಮಹಸ್ತವ ಚಂದದಿಂದಲಿ ಕೊರವಿ ವಿವರಿಸಿ ಹೇಳಿದಳು ಹಿಂದಣ ಕಷ್ಟವೆಲ್ಲ ಪರಿಹಾರವಾಯಿತು ಶುಭ ಶ್ರಾವಣ ಬಹುಳಾಷ್ಟಮಿ ರಾತ್ರೆಯ ನಡುವಿರುಳು ರೋಹಿಣಿ ನಕ್ಷತ್ರದಲ್ಲಿ ನಿಮ್ಮುದರದಿ ಕೃಷ್ಣ ಜನಿಸುವನು ಕಾಣೆ ಕೇಳಮ್ಮಯ್ಯ 26 ಪಂಕಜ ಪೀತಾಂಬರ ಅ- ಲಂಕಾರ ಮೂರುತಿಯಾಗಿ ಪುಟ್ಟುವ ಕೃಷ್ಣ ಶಂಕೆಯಗೊಳದಿರೆ ಕೇಳಮ್ಮಯ್ಯ 27 ಅಮ್ಮಾ ನಿಮ್ಮುದರದಿ ಬ್ರಹ್ಮನಪಿತ ಬಂದು ನಿಮ್ಮ ನಿರ್ಬಂಧವ ಬಿಡಿಸುವನು ಕಾಣೆ ಉಮ್ಮಯಗೊಳಬೇಡವೆ ಕೇಳಮ್ಮಯ್ಯ 28 ಆದಿಮೂರುತಿ ನಿಮ್ಮುದರದೊಳವತರಿಸಿ ಮೇದಿನಿ ಭಾರವನಿಳುಹಲು ಕಂಸನ ಭೇದಿಸುವನು ಕಾಣೆ ಕೇಳುಮ್ಮಯ್ಯ 29 ಏಳು ಮಕ್ಕಳ ಕಂಸ ಅರೆಯಲಪ್ಪಳಿಸಿದನೆ ಚಳ್ಳೆ ಬೀಜದಂತೆ ನುಣಿಚಿ ತಪ್ಪಿಸಿಕೊಂಬ ಕಳ್ಳಮಗನು ಪುಟ್ಟುವ ಕೇಳಮ್ಮಯ್ಯ 30 ವಚನ : ಇಂಥಾ ಮಗನು ನಿಮ್ಮುದರದಿ ಜನಿಸಲು ಕಾಂತ ವಸುದೇವರು ಗೋಕುಲಕೆ ಒಯ್ಯಲು ಸಂತೋಷದಿಂದಲ್ಲಿ ಬೆಳೆವನೆ ಕೃಷ್ಣ ಕೇಳಮ್ಮಯ್ಯ ಗೋಕುಲದೊಳಗೆ ಶ್ರೀ ಕೃಷ್ಣನನಿಟ್ಟು ದುರ್ಗೆಯ ಈ ಕಡೆಗೆ ಕೊಂಡುಬಹ ನಿಮ್ಮ ಪತಿಯು ಕಾಕು ಕಂಸಾಸುರನು ಆಕೆಯ ಪಿಡಿಯೆ ಗಗ- ನಾಕೆ ಹಾರಿ ಹೋಗುವಳು ಮಾಯಾಕಾರಿಯು 31 ಕ್ರೂರ ರಕ್ಕಸ ಎನ್ನ ಕೊಲ್ಲುವದೇತಕೋ ನಿನ್ನ ವೈರಿ ಕೃಷ್ಣ ಹೋಗಿ ಗೋಕುಲದೊಳಗೆ ಧೀರನಾಗಿ ಬೆಳೆದು ಸಂಹಾರವ ಮಾಡುವನೆಂದು ಸಾರಿ ಹಾರಿ ಹೋಗುವಳಂಬರಕೆ ದುರ್ಗಿ 32 ನಂದನ ಗೋಕುಲದಿ ಆನಂದದಿ ಬೆಳೆದಾನು ಕೃಷ್ಣ ಸಂದೇಹ ಬೇಡವವ್ವ ನಿಮ್ಮ ಮನದೊಳಗೆ ಬಂದು ಮz
--------------
ಹೆಳವನಕಟ್ಟೆ ಗಿರಿಯಮ್ಮ
ಭಕ್ತಿ ಭಾವಗಳು ಸ್ವಲ್ಪಮಾತ್ರವಿಲ್ಲವಾಯಿತು ಪ ಗುರುಗಳಿವರು ಹಿರಿಯರಿವರು ಶರಣರೆಂದು ತಾರತಮ್ಯದಿ ರವನರಿತು ಅರಿಯದಂತೆ ಸಿರಿಯ ಮದದಲಿ ಶುನಕ ನಂಕೆನೋಡಿ ಮರಳುತಿಹರು ಏನನೆಂಬೆ ನೆಲವ ನೋಡದೆ 1 ನಿಟ್ಟಿಸದೆ ಸಾದುಗಳನು ಪ್ರಾಯ ಮದದ ಹಮ್ಮಿನಿಂದ ಭ್ರಷ್ಟ ಜನರು ಪುಣ್ಯ ಪಾಪಗಳನು ತಿಳಿಯದೆ ಅಷ್ಟದಿಕ್ಕು ತಮ್ಮದೆಂದು ಸರ್ವಗಿರಿಯನೇರಿ ತಾವೆ ಶ್ರೇಷ್ಠರೆಂದು ತಮ್ಮ ತಾವೆ ಕೊಂದು ಕೊಂಬರೋ 2 ನೂತನದಾಭರಣ ವಸ್ತ್ರ ಜಾತಿಯನ್ನು ಉಟ್ಟು ಕೊಟ್ಟು ಪ್ರೀತಿಯಿಂದ ತಮ್ಮ ತಾವೆ ನೋಡಿ ಹಿಗ್ಗುತಾ ಧಾತು ತಪ್ಪಿ ನಡೆವ ಜನರ ವಾತಸುತನ ಕೋಣೆಲಕ್ಷ್ಮೀ ನಾಥ ಬಲ್ಲ ನಮಗೆ ಅವರ ಮಾತಿನ್ನೇತಕೋ 3
--------------
ಕವಿ ಪರಮದೇವದಾಸರು
ಭವ ಬಂಧನ-ದೊಳಗವರೆಂದಿಗೂ ಸಿಗರು ಪ ಪದ್ಮ ಪತ್ರದಂತೆ ಅಲಿಪ್ತ ಇಲ್ಲಿರುವರು | ನಮ್ಹಾಂಗತೋರರು ಜಗದೊಳಗ ಹಮ್ಮುನಳಿದು ಬೇಗ | ಶರಣು ಹೊಕ್ಕವರಿಗೆ ಸುಮ್ಮನೆ ಚನ್ನಾಗಿ ದಯ ಮಾಡುವರು1 ಎಳ್ಳಿನೊಳಗೆ ಎಣ್ಣೆ ಇಂತಿಹರಂಥ ಬಲ್ಲವರಿವರು ಭುವನದಲ್ಲಿ | ಬಲಸ್ತನದ ಬಡಿವಾರವ ಮಿಗಿವಲ್ಲೆ ಸ್ವಾನಂದ ಸುಖದಿಂದ ಲೋಲ್ಯಾಡುವರು 2 ಏನನರಿಯದೆ ಮರುಳರಂತೆ ಜಗದೊಳು |ತನುವಿನ ಹಂಬಲ ಹರಿದಿಹರು |ಅನುದಿನದಲ್ಲಿ ಜ್ಞಾನಬೋಧನ ಪ್ರಿಯರುಚಿನುಮಯ ರೂಪದಲಿ ಎಲ್ಲ ಬೆರೆದ ದೊರೆಯರು 3
--------------
ಜ್ಞಾನಬೋದಕರು
ಭವ ಮುಖ್ಯ ಸುರಗಣ ಮುನಿನಿಕರ ಸಿದ್ಧ ಪರಿವಾರವು 1 ಸರಿತು ಪ್ರವಾಹದಂತೆ ವಾಗ್ವೈಖರಿಯಿಂದ ನಿರುತ ತೃಪ್ತಿಪಡಿಸಲಾರರು ಇನ್ನು 2 ಉರು ಉಗ್ರಜಾತಿ ಅಸುರ ಕುಲದಿ ಪುಟ್ಟಿದ ನಾನು ನೆರೆ ತುತಿಸಿ ತೃಪ್ತಿಪಡಿಸಲಾಪೆನೆ ನಿನ್ನ 3 ಆದೊಡೆ ಕುಲ ರೂಪ ವಯಸ್ಸು ವಿದ್ಯೆಗೆ ನೀನು ಮೋದಪಡುವನಲ್ಲ ಭಕ್ತಿಯೊಂದಕೆ ನಲಿವೆ 4 ಕರಿರಾಜನೇ ಸಾಕ್ಷಿ ಕರುಣಾಮಯನೇ ನಿನ ಗಿರುವುದೇ ವೈಷಮ್ಯ ? ಭಕ್ತಗೆ ವಶ ನೀನು 5 ಅರವಿಂದನಾಭ ನಿನ್ನ ಚರಣಾರವಿಂದವನು ನಿರುತ ಭಜಿಸುವ ಉತ್ತಮನೆನಿಸುವ 6 ಸರುವ ಸ್ವತಂತ್ರ ಪೂರ್ಣಕಾಮ ನಿನ್ನನು ನಾವು ಹಿರಿದಾಗಿ ಆರಾಧಿಸಿ ತೃಪ್ತಿಪಡಿಸುವುದೇನೊ 7 ನಾವು ಮಾಡುವ ಕರ್ಮಸಾಧನದಿಂದ ನಿನಗೆ ಯಾವ ಫಲವೂ ಇಲ್ಲ ! ಫಲವೆಲ್ಲ ನಮಗಯ್ಯಾ 8 ಬಿಂಬವನಲಂಕರಿಸೆ ಕನ್ನಡಿಯೊಳಗೆ ಪ್ರತಿ ಬಿಂಬಕೆ ಅಲಂಕಾರ ಕಾಣುವ ಪರಿಯಲಿ 9 ತರಳನ ಮೊರೆಯನು ಲಾಲಿಸಿ ಪಾಲಿಸೊ 10 ನಮ್ಮ ಸಾಧನೆಗಾಗಿ ನಿನ್ನ ಆರಾಧಿಪೆವು ಬೊಮ್ಮನಯ್ಯನೆ ನಿನ್ನ ಆನುಗ್ರಹದಿಂದಲಿ 11 ಬ್ರಹ್ಮಾದಿ ಸುರರೆಲ್ಲ ನಿನ್ನ ಸೇವಕರಯ್ಯಾ ಹಮ್ಮು ಮತ್ಯಾತಕಯ್ಯಾ ನಮ್ಮಂಥವರಿಗೆಲ್ಲ 12 ನಿನ್ನ ಕೋಪಕೆ ಅಂಜಿ ನಡುಗದವರುಂಟೆ ಮನ್ನಿಸಿ ಕೋಪವ ಉಪಶಮ ಮಾಡೋ ಸ್ವಾಮಿ 13 ನಿನ್ನ ಈ ಉಗ್ರರೂಪ ಧ್ಯಾನವು ಜನರಿಗೆ ಘನ ಭಯವ ಕಳೆಯೆ ಸಾಧನವಾಗಲಿ 14 ದಿಗಿಲು ಪುಟ್ಟಿಸುವಂಥ ಈ ನಿನ್ನ ಮುಖ ಜಿಹ್ವೆ ಭೃಕುಟಿ ಕರಾಳ ದಂಷ್ಟ್ರ 15 ಕೊರಳಲ್ಲಿ ಧರಿಸಿಹ ಕರುಳ ಮಾಲಿಕೆ ರಕ್ತ ಬೆರದ ಕೇಸರ ಮತ್ತೆ ನಿಗುರಿದ ಕರ್ಣಗಳು 16 ಲೋಕ ಭಯಂಕರವಾಗಿವೆ ಆಂದೊಡೆ ಶ್ರೀಕರ ನಿನ್ನ ಕೃಪೆಯಲಿ ನಾನವಕೆ 17 ಅಂಜುವನಲ್ಲ ಕೇಳು ಕಂಜನಾಭನೆಯಿನ್ನು ಅಂಜುವೆನೊಂದಕೆ ಸಂಸಾರ ಚಕ್ರಕೆ 18 ತೊಳಲಿಸÀುವುದು ಜನ ದುಃಖದಿ ಸಂಸಾರ ಬಲು ಪರಿಯಲಿ ಅದು ದುಃಖದಿ ಸಾಗರ 19 ಇಷ್ಟವಾದದ್ದು ಕೊಡದೆ ಇಷ್ಟವಿಲ್ಲದ್ದುಣಿಸಿ ಭವ 20 ಸಂಸಾರ ಸಾಗರ ದಾಟಿಸೋ ಮಹಾಮಹಿಮ ಸಂಶಯವಿಲ್ಲದೆ ಸೇರಿಸೋ ನಿನ್ನ ಬಳಿ 21 ಕರುಣಾಸಾಗರ ನಮ್ಮ ಕರಿಗಿರೀಶನೆ ಸ್ವಾಮಿ ತರಳನ ಮೊರೆಯನು ಲಾಲಿಸಿ ಪಾಲಿಸೊ 22 ( ಪ್ರಹ್ಲಾದ ನರಹರಿಯನ್ನು ಸ್ತುತಿಸಿದ್ದು )
--------------
ವರಾವಾಣಿರಾಮರಾಯದಾಸರು
ಭಾಗವತರ ಭಾಗ್ಯನಿಧಿಯೆ ಭೋಗಿಶಯನ ಭೋ ಶ್ರೀರಾಮ ಪ ವೇದಾಗಮಕೆ ಸಿಲುಕದಂಥ ನಾದಬ್ರಹ್ಮಾಯೋಧ್ಯ ರಾಮ ಸಾಧುಜನಸಂಪ್ರೀತ ಭವರೋಗ್ವೈದ್ಯ ಸಾಧನ ಸಾಧ್ಯ ರಾಮ 1 ಬೋಧ ರಾಮ ಮಹದಾದಿ ರಾಮ 2 ಕಂಟಕ ದೂರ ರಾಮ ಪರಕೆಪರಮ ಪರಮಪುರುಷ ಸರುವ ಜಗದಾಧಾರ ರಾಮ 3 ಹತ್ತು ಅವತಾರೆತ್ತಿ ಭೂಭಾರ್ಹೊತ್ತು ಇಳುಹಿದ ಸತ್ಯ ರಾಮ ಜಗತ್ಕರ್ಮ ರಾಮ 4 ದಾಸಜನರಭಿಲಾಷೆಯನು ಪೂರೈಸಲೋಸುಗ ಈಶ ರಾಮ ಶೇಷಾಚಲನಿವಾಸನಾದ ದಾಸಗಣ ಸಂತೋಷ ರಾಮ 5 ಅಸಮ ಪಾದಕುಸುಮಗಳನಿಟ್ಟೊಸುಧೆ ವೈಕುಂಠೆನಿಸಿ ರಾಮ ಜನರಿಂಗೊಸೆದು ರಾಮ6 ಬ್ರಹ್ಮಾದಿಗಳ ಹಮ್ಮನಳಿದ ಕರ್ಮಚರ ಪರಬ್ರಹ್ಮ ರಾಮ ಸುಖಧಾಮ ರಾಮ 7 ದಾತ ರಾಮ ಗುರುನಾಥ ರಾಮ 8 ತತ್ವದರ್ಥ ಉತ್ತರಿಸೆನ್ನ ಕಟ್ಟುಮಾಡೊ ಶಿಷ್ಟರಾಮ ಮೂರ್ತಿ ರಾಮ 9 ಹುಟ್ಟಿಬರುವ ಕಷ್ಟದ್ಹಾದಿ ಕಟ್ಟುಮಾಡೊ ಶಿಷ್ಟರಾಮ ನಿಷ್ಠೆಯಿಂ ನಿಮ್ಮ ಮುಟ್ಟಿ ಭಜಿಪ ಪಟ್ಟಗಟ್ಟೆಲೊ ದಿಟ್ಟ ರಾಮ 10 ದಾಸಜನರ ವಾಸದಿರಿಸೊ ಕೇಶವ ಜಗದೀಶ ರಾಮ ದೋಷರಾಶಿ ನಾಶಗೈದು ಪೋಷಿಸೆನ್ನನನುಮೇಷ ರಾಮ 11 ವೇದ ವಿದ್ಯದ್ಹಾದಿಸಾಧನ ಭೋಧಿಸೆನಗ್ವಿನೋದ ರಾಮ ಪಾದಭಕ್ತಿ ಮೋದದಿತ್ತು ಭವಬಾಧೆಯಳಿ ಸುಖಸ್ವಾದ ರಾಮ 12 ಕಳಿ ಮಮಜೀವ ರಾಮ ಬಿಡಿಸೆನ್ನಯ ರಾಮ 13 ಮತ್ತೆ ಮತ್ತೆ ಪೃಥ್ವಿ ಮೇಲೆ ಸತ್ತು ಹುಟ್ಟಿ ಬೇಸತ್ತೆ ರಾಮ ಕರ್ತು ನಿನ್ನ ಗುರ್ತು ಅರಿಯದನರ್ಥವಾದೆನಾತ್ಮ ರಾಮ 14 ಆಸೆಯೆಂಬ ಪಾಶದಿಂದ ಘಾಸಿಯಾದೆ ಭವನಾಶ ರಾಮ ದೋಷದೂರೆನ್ನ ಕ್ಲೇಶಗಳನು ನಾಶಿಸೈ ದಯಭೂಷ ರಾಮ 15 ಅರಿದು ಅರಿದು ಉರಿವದೀಪದೆರಗುವ ಹುಳದಿರವು ರಾಮ ಸಿರಿಯ ರಾಮ 16 ಮರೆದು ನಾನು ಧರೆಗೆ ಬಿದ್ದು ದುರಿತದೊಳಗೆ ಬೆರೆದೆ ರಾಮ ಪೊರೆಯೊ ರಾಮ 17 ಕರುಣಿಸುತ ತಂದೆ ರಾಮ ಬಯಲ್ಹರಿಸು ರಾಮ 18 ಮಾನ ಅಭಿಮಾನ ನಿನ್ನದು ಧ್ಯಾನಿಪರ ಸುರಧೇನು ರಾಮ ಜ್ಞಾನವಿತ್ತು ಮಾನದಿಂದ ನೀನೆ ಪೊರೆ ಜಗತ್ರಾಣ ರಾಮ 19 ಭಿನ್ನವಿಲ್ಲದೆ ನಿನ್ನ ನಂಬಿ ಧನ್ಯನಾದೆನಿನ್ನು ರಾಮ ಎನ್ನ ಮನಸಿಗಿನ್ನು ಸಂತಸವನ್ನು ಕೊಡು ಪಾವನ್ನ ರಾಮ 20 ಭೃತ್ಯನ ಮಹ ಚಿತ್ತಭ್ರಮೆ ಮುರಿದೊತ್ತಿ ಕರಪಿಡಿದೆತ್ತು ರಾಮ ಭಕ್ತಿಯುಕ್ತಿ ಮುಕ್ತಿ ಸುಖವನಿತ್ತು ಪೊರೆ ಗುರುದತ್ತ ರಾಮ 21 ನಿಖಿಲವ್ಯಾಪಕ ಅಖಿಲರಕ್ಷಕ ಸಕಲಬಲ ನೀನೇಕ ರಾಮ ಮುಕುತಿಸಂಪದ ಸಿದ್ಧಿ ನೀನೆ ಭಕುತಪ್ರಿಯ ಲೋಕೈಕ ರಾಮ 22 ಭಿನ್ನವಿಲ್ಲದೆ ನಿನ್ನ ನಾಮವನ್ನು ಪೊಗಳುವರಿನ್ನು ರಾಮ ಮಾನ್ಯರಾಗನನ್ಯ ಸುಖಸಂಪನ್ನರೆನಿಪನನ್ಯ ರಾಮ 23 ಉದಯದೆದ್ದು ಪದುಳದೀನಾಮ ಓದಿಕೇಳಲು ಸದಾ ರಾಮ ಸದಯ ರಾಮ 24 ನಿತ್ಯ ಭಕ್ತಿಯಿಂ ಬರೆಯುತ್ತ ಪಠಿಸಲು ಕರ್ತುರಾಮ ಮುಕ್ತಿಯೆಂಬ ಸಂಪತ್ತನಿತ್ತು ಬಿಡದ್ಹತ್ತಿರಿರುವನು ಸತ್ಯ ರಾಮ 25
--------------
ರಾಮದಾಸರು
ಭಿಕ್ಷಾಂ ದೇಹಿಮೇ ಸ್ವಾಮಿನ್ ಕುಕ್ಷಿಯು ತುಂಬುವ ತೆರದಲಿ ಭಕ್ತಿಯ ಪ ಭಿಕ್ಷೆಯ ಬೇಡಲು ಶಿಕ್ಷಿತನಲ್ಲವೊ ಕುಕ್ಷಿಯು ಬರಿದಾಗಿಹುದು ಭಕ್ತಿಯ ಅ.ಪ ಆರುಮಂದಿ ಶತ್ರುಗಳಿರುವರು ಬಲು ಕ್ರೂರರಿವರು ಎನ್ನನು ಬಿಡರೊ ದೂರ ಕಳುಹಲಾಹಾರವು ಸಾಲದು ಶಮ ದಮ 1 ನಮ್ಮವರಿರುವರು ಹತ್ತುಮಂದಿಗಳು ಸುಮ್ಮನಿರರು ಒಂದರಘಳಿಗೆ ಸಮ್ಮತಿಗೊಡದಿರೆ ಬಳಲಿಸುವರು ಇವ ರ್ಹಮ್ಮನು ಮುರಿಯುವೆ ವಿಷಯ ವಿರಕ್ತಿಯ 2 ಕತ್ತಲೆಯಲಿ ಬಂದಿರುವೆನು ಹೊಟ್ಟೆಯು ಹತ್ತಿ ಹೋಯಿತೊ ಹಸಿವಿನಲಿ ಎತ್ತ ಸುತ್ತಿದರೂ ತುತ್ತನು ಕಾಣೆನೊ ಭಕ್ತ ಪ್ರಸನ್ನ ದಯಾಜಲನಿಧೇ ಜ್ಞಾನ 3
--------------
ವಿದ್ಯಾಪ್ರಸನ್ನತೀರ್ಥರು
ಭಿಕ್ಷುಕನ ನಿಜ ಸುಖವು ಲಕ್ಷಕಗದೆಲ್ಲಿಹುದು | ಮೋಕ್ಷದಾ ಮಾರ್ಗವು ಅವಗಿಲ್ಲವು ಪ ಅಕ್ಷಯ ಧನವುಂಟು | ಕುಕ್ಷಿಯೊಳಗುಂಟು ವಾ ಭಿಕ್ಷಾನ್ನವೂ | ಶಿಕ್ಷೆ ಮಾಡಲು ಉಂಟು | ದೀಕ್ಷೆ ಕೊಡಲೂ ಉಂಟು | ರಕ್ಷಿಸುವದುಂಟು ವಾ ಸದ್ಭಕ್ತರಾ1 ಆನಂದ ಧನಿಯುಂಟು | ಸ್ವಾನಂದ ಸುಖವುಂಟು |ಧ್ಯಾನವೇ ಉಂಟು ಶ್ರೀಸದ್ಗುರುವಿನ | ಮೌನದಾ ಮನೆಯುಂಟು | ಜ್ಞಾನದಾ ಪ್ರಭು ಉಂಟು | ಮನ್ನಣೀಯುಂಟು ಸಾಧು ಸಜ್ಜನರ 2 ತಿತೀಕ್ಷೆ ಸೊಸೆಯುಂಟು | ಭಕ್ತಿಭಾವನು ಉಂಟು | ಕೀರ್ತಿ ಬರಲುಂಟು ಈ ತ್ರೈಲೋಕ್ಯದಿ 3 ಶಮದಮಾ ಸಖರುಂಟು | ಪ್ರೇಮ ದಾಸಿಯು ಉಂಟು | ಹಮ್ಮುಹಂಕಾರವೆಂಬಳಿಯರುಂಟು | ನಾಮದಾ ಬಲವುಂಟು | ನಮನ ಸರ್ವರಿಗುಂಟು | ಚಿನ್ಮಯಾನಂದವೈಕ್ಯದಲುಂಟು 4 ಭಿಕ್ಷೆ ಬೇಡಲುಂಟು 5
--------------
ಭೀಮಾಶಂಕರ
ಮಂಗಳನಾದ ಕೇಳುವತನಕ ಮನಸು ನಿಲ್ಲುವುದೇಸಂಗಹರನು ಆಗದತನಕ ಸಾಕ್ಷಿಯಾಗುವುದೇ ಪ ಭಾಮಿನಿಯನ್ನು ತ್ಯೆಜಿಸದತನಕ ಭಕ್ತನಾಗಲಹುದೇಕಾಮವನ್ನು ಕಡಿಯದತನಕ ಕರುಣಿಯಾಗಲಹುದೆ 1 ಪರ ತಾನಾಗುವುದೇನೀನು ನಾನೆಂಬುದ ನೀಗದತನಕ ನಿಜವದು ತಾನಹುದೇ 2 ಹಮ್ಮು ಕೋಶ ಕಳೆಯುವತನಕ ಹಂಸನಾಗಬಹುದೇಬ್ರಹ್ಮ ಚಿದಾನಂದನಾಗದತನಕ ಭ್ರಮೆ ತಾ ತೊಲಗುವುದೇ 3
--------------
ಚಿದಾನಂದ ಅವಧೂತರು