ಒಟ್ಟು 175 ಕಡೆಗಳಲ್ಲಿ , 40 ದಾಸರು , 153 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಕುಮೀಶ ನಿನಗಾರತಿ ಭಕುತಿಯಿಂದೆತ್ತುವೆ ಸಕಲರ ಸುಖಕರ ಭಕ್ತರಿಗೊಲಿಯುವ ರುಕ್ಮಿಣಿಯರಸನೆ ಪ. ರಮಾಪತಿ ನಿನ್ನನು ನಮಿಸಿ ನುತಿಸುತ್ತಿರ್ಪೆನು ಕಮಲಾಂಘ್ರಿಯ ಭ್ರಮರವೆಂದಮಲನೆ ಕೈಪಿಡಿ ರಮಣನೆ ನುಡಿ ನುಡಿ1 ಇನಕುಲಮಂಡನ ವನರುಹಲೋಚನ ಜನಕಜಾ ಸುಪ್ರೇಮನೆ ಚಿನ್ಮಯರೂಪನೆ ಮನುಮುನಿ ಸೇವ್ಯನೆ 2 ಸುರನರ ಪೂಜಿತ ಸರಸಿಜ ಭವಪಿತ ಕರುಣಾಕರ ನರಕೇಸಂ ಮರೆಹೊಕ್ಕೆನು ಪೊರೆ ವರಶೇಷಗಿರಿದೊರೆ 3
--------------
ನಂಜನಗೂಡು ತಿರುಮಲಾಂಬಾ
ಲಕ್ಷ್ಮೀಶ ಹರಿ ವಿಠಲ | ಸಲಹ ಬೇಕಿವಳಾ ಪ ಪಕ್ಷೀಂದ್ರವಹ ಹರಿಯೆ | ತ್ರ್ಯಕ್ಷಪಿತಸೇವ್ಯಾ ಅ.ಪ. ಕನ್ಯೆ ಬಹು ವಿನಯವತಿ | ಅನ್ಯಸಹವಾಸವನುಮನ್ನಿಸಳು ಎಂಬುವದೆ | ಸ್ವಪ್ನದಲಿ ಸೂಚ್ಯಪನ್ನಂಗ ಶಯನ ಹರಿ | ನನ್ನೆಯಂ ಕೈ ಪಿಡಿದುಮನ್ನಿಸೋ ತರಳೆಯನು | ಮಧ್ವಂತರಾತ್ಮ 1 ಉಚ್ಛ ನೀಚದ ಭಾವ | ಜಗವೆಲ್ಲ ತುಂಬಿಹದುಅಚ್ಯುತನೆ ಸರ್ವರೊಳು | ಉತ್ತಮನೆಂಬಾಸ್ವಚ್ಛ ಪಂಚಕ ಭೇದ | ನಿಚ್ಛ ಮನದಲಿ ಪೊಳೆದುಉಚ್ಛ ಪದವಿಗೆ ದಾರಿ | ನೀನಾಗಿ ತೋರೋ 2 ಹರಿಗುರು ಸದ್ಭಕ್ತಿ | ನಿರುತ ಹಿರಿಯರ ಸೇವೆಮರುತ ಮತ ತತ್ವದಲಿ | ಪರಮ ಅಭಿಲಾಷೇವರಸುನಾಮಮೃತವೆ | ಸರ್ವದಾ ಸವಿವಂತೆಕರುಣಿಸುತ | ಪೊರ ಗುರು | ಗೋವಿಂದ ವಿಠಲಾ3
--------------
ಗುರುಗೋವಿಂದವಿಠಲರು
ವರ ಹಳ್ಳೇರಾಯಾ ಮಾಂಪಾಲಯ ಪ ಕರ ಮುಗಿವೆನು ದುಮ್ಮದ್ರಿನಿಲಯ ಅ.ಪ ತರಣಿ ಕುಲತಿಲಕ ಸಿರಿರಾಮನ ಪದ ಸರಸಿಜ ಮಧುಕರ ಸುರಗಣ ಸೇವ್ಯಾ 1 ಸೋಮ ಕುಲಜ ಬಲರಾಮನನುಜನ ಪ್ರೇಮಪಾತ್ರ ಬಲಭೀಮನೆ ಕೃಪಯಾ2 ಸಿರಿಕೃಷ್ಣನೆ ಪರತರನೆಂದರುಹಲು ವಿರಚಿತ ಶಾಸ್ತ್ರ ಶ್ರೀ ಗುರು ಮಧ್ವಾರ್ಯ 3 ಯವನ ಕುಲದಿ ಭಜಿಸುವರಿಗೊಲಿದೆಯಾ ಅವನಿಸುರಾರ್ಚಿತ ಶ್ರೀ ಪವಮಾನತನಯಾ4 ಶರಣು ಜನಕೆ ಸುರತರುವೆಂದೆನಿಸಿದ ಸಿರಿಕಾರ್ಪರ ನÀರಹರಿಗತಿ ಪ್ರೀಯಾ 5
--------------
ಕಾರ್ಪರ ನರಹರಿದಾಸರು
ವಾದಿರಾಜ ಗುರು ಮಾನತೋಸ್ಮಿ ಸತತಂ |ಕಲ್ಯಾದಿ ದೈತ್ಯ ನಿವಾರಣ ನಿಪುಣಂ ಪ ಭವಾರ್ಣವ ತರಣಂ 1 ಹಯಮುಖ ನಿಸ್ಸøತ ಶ್ರುತಿ ಸತ್ಶ್ರ್ಯವಣಂಹಯಮುಖ ಪದ ಸದ್ವನಜ ಸುದಾಸಂ |ಹಯಮುಖ ಪ್ರೀತ್ಯೈ ವಿರಚಿತ ಶಾಸ್ತ್ರಂತ್ರಯಿ ಮುಯಿ ರಸ ಸ್ವಪ್ನಾಖ್ಯಾನಂ 2 ಗುರು ಗೋವಿಂದ ವಿಠ್ಠಲ ವರ ಭಕ್ತೇಶಂಸುರ ಮುಖ ದ್ವಿಜವರ ಸರ್ವ ಸುಸೇವ್ಯಂ |ಪರಮತ ಮದಕರಿ ಪಂಚ ಸುವಕ್ತ್ರಂಪರಿಪಾಲಯ ಮಾಂ ತವ ಭಕ್ತಣುಗಂ 3
--------------
ಗುರುಗೋವಿಂದವಿಠಲರು
ವಾರಿಜನಯನಗೆ ಜಯ ಮಂಗಳ ಶುಭ ಮಂಗಳಾ ಪ ನೀರಧಿಶಯನಗೆ ಜಯ ಮಂಗಳ ಶುಭ ಮಂಗಳಂ ಅ.ಪ ಭವ ಭಯ ಹರನಿಗೆ ಪವನಜನಮಿತಗೆ ಭುವನಸುಂದರನಿಗೆ ಜಯಮಂಗಳಂ ಕುವಲಯಶ್ಯಾಮಗೆ ನವಮಣಿಮಾಲಗೆ ದಿವಿಜಸಂಸೇವ್ಯಗೆ ಶುಭಮಂಗಳಂ1 ಕರುಣಾಜಲಧಿಗೆ ಶರಣರ ಪೊರೆವಗೆ ನರಹರಿರೂಪಗೆ ಜಯ ಮಂಗಳಂ ಪುರುಷೋತ್ತಮನಿಗೆ ದುರಿತಸಂಹಾರಗೆ ಶುಭ ಮಂಗಳಂ 2 ಗಂಗೆಯ ಜನಕಗೆ ಮಂಗಳರೂಪಗೆ ಸಂಗರಧೀರಗೆ ಶುಭಮಂಗಳಂ ತುಂಗವಿಕ್ರಮನಿಗೆ ಇಂಗಿತವರಿವಗೆ ಮಾಂಗಿರಿಯರಸಗೆ ಜಯ ಮಂಗಳಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ವಾಸುದೇವ ಹೃದಯನಮೋ ನಮೋ ನಂದಾಭ್ಯುದಯ ನಮೋ ನಮೋ ಗೋಪಿಕಾ ಪ್ರಿಯ ಪದೀನಜನಾವನಲೋಲ ದಾನವಶಿಕ್ಷಕ ಕಾಲಭಾನುಶತಾಭಜಾಲ ಶ್ರೀ ನಿಜಭೋಗವಿಶಾಲ 1ಮುರಹರ ಮುಚುಕುಂದ ಸೇವ್ಯ ಭಾವ್ಯ 2ಪರಮ ಪುರುಷ ಶ್ರೀ ರಮಣ ಶರಧಿಶಯನ ನಿರಾವರಣದುರಿತತಿಮಿರಹರಚರಣ ತಿರುಪತಿ ವೆಂಕಟರಮಣ 3ಓಂ ಇಳಾಪತಯೇ ನಮಃ
--------------
ತಿಮ್ಮಪ್ಪದಾಸರು
ವಿಕ್ರಮಾ - ಪಾಹಿ - ತ್ರಿವಿಕ್ರಮಾ ಪ ವಿಕ್ರಮ ನಮಿಪೆ ನಾ ನಿನ್ನ | ನೀನುಚಕ್ರವ ಪಿಡಿದೊಂದು ದಿನ್ನ | ಆಹನಕ್ರನುದ್ದರಿಸಿದ | ಪ್ರಕ್ರಯ ನಾನರಿತುರುಕ್ರಮ ಶರಣೆಂಬೆ | ವಕ್ರ ಮನವ ಕಳೆಅ.ಪ. ಪುಟ್ಟ ರೂಪವನೆ ತಾಳುತ್ತಾ | ಬಲಿಯಇಷ್ಟಿಯೊಳವನ ಬೇಡುತ್ತಾ | ದಾನಕೊಟ್ಟೆನೆಂದವನು ಪೇಳುತ್ತಾ | ಬರೆಶಿಷ್ಟ ಶುಕ್ರನು ಬೇಡೆನ್ನುತ್ತಾ | ಆಹಕಟ್ಟಲು ಗಿಂಡೀಯ | ದಿಟ್ಟ ಶುಕ್ರನ ಕಣ್ಣಪುಟ್ಟ ದರ್ಭೆಲಿ ಚುಚ್ಚಿ ಮೆಟ್ಟಿ ನಿಂತೆಯೊ ಬಲಿಯ 1 ಥೋರ ರೂಪದೊಳು ಅಂಬರಾ | ಹಬ್ಬಿಧಾರುಣಿ ಅಳೆದ ಗಂಭೀರ | ಮತ್ತೆಮೂರನೇದಕೆ ಬಲಿಯ ಶಿರ | ವತ್ತಿಭಾರಿ ಪಾತಾಳಕ್ಕೆ ಧೀರಾ | ಆಹಪೌರೋಚನಿಯನ್ವತ್ತಿ | ದ್ವಾರವ ಕಾಯುತ್ತತೋರಿದೆ ಕರುಣವ | ಭೋರಿ ದೈವರ ಗಂಡ3 ಪಾದ ತೊಳೆದೂ | ಬಿಡೆಬ್ರಹ್ಮಾಂಡದೊಳು ತಾನು ಬಂದೂ | ಆಹಸುಮ್ಮನಸರ ಲೋಕ | ಕ್ರಮ್ಮಿಸುತಲಿ ಬರುವಅಮ್ಮಹ ಗಂಗೆ ಪೆ | ತ್ತೆಮ್ಮನುದ್ದರಿಸಿದಾ 3 ಬಾದರಾಯಣ ಬಳಿ ಭವ್ಯಾ | ನಾಗಿಮೋದ ತೀರ್ಥರಿಂದ ಸೇವ್ಯಾ | ನೀನುವಾದಿರಾಜರಿಗೊಲಿದು ತ್ವರ್ಯಾ | ಬಂದುಸ್ವಾದಿ ಪುರದಿ ನಿಂದು ಸ್ತವ್ಯಾ | ಆಹಮೋದದಿ ನೆಲೆಸುತ್ತ | ಕಾದುಕೊಂಡಿಹೆ ನಿನ್ನಪಾದವ ಪೊಗಳೂವ | ಸಾದು ಸಂತತಿಯನ್ನ 4 ಹೀನ ಮಾನವನೆಂದು ಎನ್ನಾ | ಉದಾಸೀನ ಮಾಡುವಿಯೇನೊ ಘನ್ನ | ಕೇಳೊನೀನು ತ್ರೈಭುವದಿ ಪಾವನ್ನಾ | ನೆಂದುಗಾನದೋಳ್ ತವ ಪಾದವನ್ನಾ | ಆಹಆಗಮಿಸುತ ಬಂದ | ಮಾನವನೆನ್ನನುಧೀನನೆಂದೆನಿಸಾರೆ | ಜ್ಞಾನವ ನೀಡೆನಗೇ 5 ಪ್ರತಿ ಪ್ರತಿ ವತ್ಸರದೊಳು | ಮಾಸಹತ್ತೆರಡು ಪೂರ್ಣಿಮದೊಳು | ತವರಥದೊತ್ಸವ ಕಾರ್ಯಗಳೂ | ಬಲುಹಿತದಿ ತವ ದಾಸರುಗಳೂ | ಆಹಅತಿ ವೈಭವದಿಂದ | ವಿತರಣೆಯಿಂದಲಿಪ್ರತಿಯಿಲ್ಲವೆಂದೆನ್ನೆ | ವಿಸ್ತರಿಸುವರಯ್ಯ 6 ಪರಿ ಪೊಗಳುತ ಚೆನ್ನಾ | ಆಹಗುರು ಗೋವಿಂದ ವಿಠ್ಠಲ | ಪರಮ ಪುರುಷನೆಂದಾನರ್ತನಗೈಯುತ | ನರರೇನು ಧನ್ಯರೋ7
--------------
ಗುರುಗೋವಿಂದವಿಠಲರು
ವಿನುತ ಸಿರಿ | ರಾಮ ವಿಠಲ ಕಾಯೋ ಪ ಈ ಸತೀ ಮಣಿಯ ನೀ | ಸಲಹಬೇಕೆಂದುಶೇಷ ಸಂಜ್ಞಿತ ಹರಿಯೆ | ಪ್ರಾರ್ಥಿಸುವೆ ಧೊರೆಯೇ ಅ.ಪ. ಅಮೃತ ಕೂರ್ಮ | ರೂಪದಿಂದರುಹೀಉಪದೇಶ ನೀಡ್ವಗುರು | ರೂಪವನೆ ತೋರಿಸುತಅಪರಿಮಿತ ಕಾರುಣ್ಯ | ರೂಪನಾಗಿರುವೆ 1 ಪರಮ ಗುರು ನಿಜ ರೂಪ | ಎರಡು ಬಾರಿಯು ತೋರಿಸರಸನಾಬ್ಯಾದಿ ಹರುಷ | ಬೀರ್ದೆ ಭಯಹಾರೀಕರುಣವೆಂತುಟೊ ನಿನಗೆ | ಸುರಸಿದ್ಧ ಸಂಸೇವ್ಯಶಿರಿ ರಮಣ ಶ್ರೀರಾಮ | ಪರಮ ಪುರುಷನೆ 2 ಈ ಸತೀಮಣಿ ಬಯಕೆ | ನೀ ಸಲಿಸಿ ಲೌಕಿಕದಿಲೇಸು ಹೊಲ್ಲೆಗಳೆಂಬ | ಪಾಶಗಳ ಬಿಡಿಸೀದೋಷ ದೂರನೆ ಹರಿಯೆ | ನೀ ಸಲಹೆ ಪ್ರಾರ್ಥಿಸುವೆದಾಶರಥೆ ಪೊರೆ ಇವಳ | ಮೇಶ ಮಧ್ವೇಶಾ 3 ಮಧ್ವಮಾರ್ಗದಿ ಇಹಳು | ಶುದ್ಧ ಭಕ್ತಿಜ್ಞಾನಸಿದ್ಧಿಸುತ ಇವಳಲ್ಲಿ | ಉದ್ಧರಿಸೊ ಹರಿಯೇ |ಕೃದ್ಧ ಖಳ ಸಂಹಾರಿ | ಸದ್ಧರ್ಮ ಪಥತೋರಿಅಧ್ವಯನೆ ತವ ನಾಮ | ಶುದ್ಧ ಸುಧೆ ಉಣಿಸೋ 4 ಸರ್ವವ್ಯಾಪ್ತನೆ ದೇವ | ಪವನಾಂತರಾತ್ಮಕನೆದರ್ವಿ ಜೀವಿಯ ಕಾಯೊ | ಶರ್ವವಂದ್ಯಾ |ಸರ್ವ ಸುಂದರ ಗುರು | ಗೋವಿಂದ ವಿಠ್ಠಲನೆಈ ವಿಧದ ಬಿನ್ನಪವ | ನೀವೊಲಿದು ಸಲಿಸೋ 5
--------------
ಗುರುಗೋವಿಂದವಿಠಲರು
ವೈನತೇಯವಾಹನಾಯ ನಿತ್ಯಮಂಗಳಂ ದಾನವಾಬ್ಧಿಶೋಷಿತಾಯ ನಿತ್ಯಮಂಗಳಂ ಪ ಪಾರಿಜಾತಲೋಚನಾಯ ಭವ್ಯಮಂಗಳಂ ನಾರದಾದಿಸೇವಿತಾಯ ಭವ್ಯಮಂಗಳಂ ಅ.ಪ ಶರಣಜನಾನಂದದಾಯ ದಿವ್ಯಮಂಗಳಂ ಪರಮಕೃಪಾಪೂರಿತಾಯ ದಿವ್ಯಮಂಗಳಂ 1 ಪರಮಸುಂದರ ದ್ಯುತಿಧರಾಯ ಸರ್ವಮಂಗಳಂ ದುರಿತದೋಷ ಪರಿಹರಾಯ ಸರ್ವಮಂಗಳಂ 2 ಮೌನಿನಿಕರವಂದಿತಾಯ ನವ್ಯಮಂಗಳಂ ದೀನದಲಿತಪೋಷಣಾಯ ನವ್ಯಮಂಗಳಂ 3 ಜ್ಞಾನ [ಮೋಕ್ಷ]ದಾಯಕಾಯ ಸೇವ್ಯಮಂಗಳಂ ಮಾನಿತ ಮಾಂಗಿರಿವರಾಯ ಸೇವ್ಯಮಂಗಳಂ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಶಿವಮಂಗಳಂ ಸದಾಶಿವ ಮಂಗಳಂಮಂಗಳಂ ರಜತಾದ್ರಿ ಮುಖ್ಯನಿಲಯಾಯ ಪಹಿಮಕರಾವತಂಸಾಯ ಹಿಮರುಚಿರಕಾಯಾಯಹಿಮರೂಪಗಿರಿಚಿತ್ತ ಹಾರಕಾಯಹಿಮಹರಾಮಿತಕಾಂತಿ ಸದೃಶಾಯ ಸೌಮ್ಯಾಯಹಿಮತಾಪರಹಿತಾಯ ಹೇಮವರ್ಣಾಯ 1ವರಜಟಾಮಕುಟಾಯ ವಾರಿಯುತಕೇಶಾಯಸ್ಫುರದಿನಾನಲಸೋಮಲೋಚನಾಯಗರನೀಲಕಂಠಾಯ ಕದ್ರುಸುತ ಹಾರಾಯಪರಶು ಮೃಗ ಶೂಲಾದಿ ಪರಮಾಯುಧಾಯ2ನಾಗೋಪವೀತಾಯ ನಾಗೇಶ ವಲಯಾಯನಾಗಧವಳಾಂಗಾಯ ನಾಯಕಾಯನಾಗವಾಹನ ಮುಖ್ಯ ನಾಕಜನನಾಥಾಯನಾಗಪರ್ಯಂಕಸ್ಥ ನಿತ್ಯಮಿತ್ರಾಯ 3ಗೌರೀಧೃತಾಂಗಾಯ ಗಂಧರ್ವಸೇವ್ಯಾಯಭೂರಿ ಗುಣಬ್ರಹ್ಮಾಂಡ ಭೂತಾಯಚಾರು ಕಟಿ ಶುಭ ಜಂಘಾಯನೀರಜಾಮಲ ಪೀಠ ನಿಹಿತ ಪಾದಾಯ 4ಮೃಗಚರ್ಮವಸನಾಯ ಮಂಜುಳ ಮಯೂಖಾಯಜಗದೇಕನಾಥಾಯ ಜೀವನಾಯಸುಗಮ ತಿರುಪತಿ ನಾಮ ಸದ್ಮಾಧಿನಾಥಾಯಗಗನಧುನಿ ಗಿರಿ ವಾಸ ಗಂಗಾಧರಾಯ 5 ಓಂ ನವನೀತನವಾಹಾರಾಯ ನಮಃ
--------------
ತಿಮ್ಮಪ್ಪದಾಸರು
ಶುಭ ಶುಭ ನಿಧಿಗೆ ಪ ಮಂಗಳಾ ಗುರುವಾದಿರಾಜರಿಗೆ ಜಯಮಂಗಳಾ ಭಾವಿ ಮುಖ್ಯಪ್ರಾಣರಾಜನೀಗೆಅ.ಪ. ಮಾಯಾವಾದಿಗಳಾ ಗೆದ್ದ ಸ್ವಾದಿಪುರವಾಸಿಯಾದ ವಾದಿರಾಜಾ ಮಧ್ವಮುನಿಗೆ ಜಯಮಂಗಳಾ 1 ಭೂತರಾಜಾರಿಂದ ಸೇವ್ಯಾಭೂತ ಪತಿಗೊಲಿದ ಗುರು ಲಾತವ್ಯ ರಾಜರಿಗೆ ಜಯಮಂಗಳಾ 2 ಧವಳಗಂಗಾವಾಸಿಯಾದ ಹಯಗ್ರೀವ ತ್ರಿವಿಕ್ರಮಾ ವೇದವ್ಯಾಸರ ಪೂಜಿಪಗೆ ಜಯಮಂಗಳಾ 3 ಪತಿ ರಮಣ ಹರಿಯಾ ಪ್ರಥಮಾಂಗ ಮುಖ್ಯಪ್ರತಿಬಿಂಬಾಣೆಗುರುತಂದೆವರದಗೋಪಾಲವಿಠ್ಠಲನಾ ವೀಹಾರಕ್ಕಾ-ವಾಸನಾದ ಸುವ್ರೇತಾ ಘನದೂತಾ ಗುರುವಾದಿರಾಜಗೆ 4
--------------
ಗುರುತಂದೆವರದಗೋಪಾಲವಿಠಲರು
ಶೇಷ ವಂದ್ಯ ಶಿರಿನಾರಾಯಣ ವಿಠಲ ದಾಸನೆನಿಸೋ ಇವನಾ ಪ ದೋಷ ದೂರ ಸುವಿಶೇಷ ಮಹಿಮ ಬ್ರಹ್ಮೇಶ ವಂದ್ಯ ಚರಣ ಅ.ಪ. ಸಾಧಕ ಜೀವ ಸಮೂಹವ ಸೃಜಿಸುತ್ತಸಾಧನ ಬಗೆ ಬಗೆ ನಿರ್ಮಿಸುತಾ |ಭೋದಕ ವೇದ ವಿಭಾಗವ ಗೈದಾ ಅ-ಗಾಧ ಮಹಿಮ ಪೊರೆಯೊ 1 ಕಾರುಣ್ಯಾಂಬುಧಿ ತಾರತಮ್ಯ ಜ್ಞಾನಮೂರೆರಡಿಹ ಭೇದವನೆ ತಿಳಿಸೊಸಾರಾಸಾರದಿ ಸಾರತಮನು ನೀನೆಂ-ದಾರಧಿಪ ಮತಿ ತಿಳಿಸೋ 2 | ಸೇವ್ಯಸೇವಕ ಭಾವ ತಿಳಿಸುತನಿವ್ರ್ಯಲೀಕ ನೆನಿಸೊ |ಪೂಜ್ಯ ಪೂಜಕನೆ ಮಾಳ್ಪುದೆಲ್ಲ ತವಭವ್ಯ ಪೂಜೆ ಎನಿಸೋ 3 ಗುರ್ವನುಗ್ರಹವೆ ಬಲವೆಂದೆನಿಸುತಸರ್ವಕಾರ್ಯ ನಡೆಸೊ |ದುರ್ವಿಭಾವ್ಯ ಸರ್ವೋತ್ತಮ ಹರಿಸರ್ವೇಷ್ಟ ಪ್ರದ ನೆನಿಸೊ 4 ತಂದೆ ತಾಯಿಯೋಳ್ಬಂಧು ಮಿತ್ರರಲಿಸಂದುಗೊಂದು ತವವ್ಯಾಪ್ತಿ |ಛಂದದರಹಿ ಪೊರೆನಂದಕಂದ ಗುರು ಗೋವಿಂದ ವಿಠಲ 5
--------------
ಗುರುಗೋವಿಂದವಿಠಲರು
ಶೇಷಾಚಲನಿಲಯನಾಗಿರುತ ಭಕುತರ ಪೋಷಿಸುತಿಹನ್ಯಾರೆ ಪೇಳಮ್ಮಯ್ಯ ಪ ದೋಷರಾಸಿಗಳನು ನಾಶ ಮಾಡುತಲಿ ಶೇಷಸುರಸೇವ್ಯ ಶ್ರೀನಿವಾಸ ಕಾಣಮ್ಮ ಅ.ಪ. ಕಲಿಯುಗದೊಳು ಪ್ರಜ್ವಲಿಸುತಿರುವೀ ಗಿರಿ- ಗಿಳಿದು ಬಂದನ್ಯಾಕೆ ಪೇಳಮ್ಮಯ್ಯ ನಲಿಯುತ ಸ್ತುತಿಪ ಜನರ ಕಲುಷವ ಕಳೆಯಲು ಒಲಿದು ಬಂದ ದಯದಿಂದಲಿ ಕೇಳಮ್ಮ 1 ಸ್ವಾಮಿ ಪುಷ್ಕರಿಣಿ ತೀರದಿ ನಗುತ ನಿಂದಿಹ ಕೋಮಲಾಂಗನವನ್ಯಾರೇ ಪೇಳಮ್ಮಯ್ಯ ಕಾಮಿನಿ ಪದುಮಾವತಿ ತಾ ಮೋಹಿಸುತಲಿ ಪ್ರೇಮದಿ ವರಿಸಿದ ಭೂಮಿಪ ಕಾಣಮ್ಮ 2 ಬಂಗಾರ ನವರತ್ನ ಮಂಡಿತನಾಗಿ ವಿ ಹಂಗವೇರ್ದನ್ಯಾರೇ ಪೇಳಮ್ಮಯ್ಯಾ ಗಂಗಾಜನಕ ಪಾಂಡುರಂಗನೆನಿಪ ಆ ರಂಗೇಶವಿಠಲನೆ ಇವ ಕಾಣಮ್ಮ 3
--------------
ರಂಗೇಶವಿಠಲದಾಸರು
ಶೌರಿ ಸುರಸೇವ್ಯ ಸುಜನಾತ್ಮ ಸತ್ಯ ಆನಂದ ತವಸೇವೆ ನೀಡೆನಗೆ ಪ ಕೊಡು ಎನ್ನ ಕರ್ಣಕ್ಕೆ ದೃಢಮಾಡು ವಚಶ್ರವಣ ಬಿಡದೆನ್ನ ನಯನಕ್ಕೆ ಇಡು ನಿನ್ನ ದರ್ಶನವ ನುಡಿಸೆನ್ನ ವದನದಿಂ ಕಡು ಸತ್ಯವಚನವನು ಎಡಬಿಡದೆ ಜಿಹ್ವೆಕ್ಕೆ ನೀಡು ತವಧ್ಯಾನ 1 ಒದಗಿಸೈ ಕೈಗೆ ತವಪಾದಪದುಮ ಸೇವಾ ಹೃದಯಕ್ಕೆ ಕರುಣಿಸು ಸದಮಲ ಸುಶಾಂತಿ ಸದಯಾತ್ರ ನೀಡೆನ್ನ ಪಾದಕ್ಕೆ ಪುಣ್ಯಸ್ಥಳ ವಿಧವಿಧದಿ ಬೇಡ್ವೆ ನೀನು ದಯನಾಗೆನ್ನೊಳಗೆ 2 ಚಿತ್ತಕ್ಕೆ ಸ್ಥಿರನೀಡು ಸ್ವಸ್ಥತೆ ಕೊಡು ಮನಕೆ ಸತ್ಯರಿಗೆ ಮಣಿಸೆನ್ನ ಮಸ್ತಕವ ಸತತ ನಿತ್ಯ ಪರಿಪೂರ್ಣ ಮಮ ಕರ್ತ ಶ್ರೀರಾಮ ನಿನ್ನ ಭಕ್ತನೆಂದೆನಿಸೆನ್ನ ಮುಕ್ತಿ ಪಥಕ್ಹಚ್ಚು 3
--------------
ರಾಮದಾಸರು
ಶ್ರೀ ಕ್ರೋಧನ ನಾಮ ಸಂವತ್ಸರ ಸ್ತೋತ್ರ 157 ಕ್ರೋಧನ ಸಂವತ್ಸರ ನಿಯಾಮಕ ಸ್ವಾಮೀಶ್ರೀ ಪದುಮಾಲಯಪತಿ ನಾರಸಿಂಹನ ಪಾದ ಕೃತಿ ನಡೆಸಿ ಶರಣರ ಕಾಯ್ವ ಪ ಈ ಸಂವತ್ಸರ ರಾಜಾ ಶುಕ್ರ ಮಂತ್ರೀ ಶನಿಯು ಶನೈಶ್ಚರನೇ ಸೈನ್ಯಾರ್ಘ ಮೇಘ ಸಸ್ಯಪತಿ ರಸಪಗುರು ನಿರಸ ಸಸ್ಯಪ ಮಂಗಳ ಸುಸೌಖ್ಯ ಬಹುಕ್ಷೀರ ಧಾನ್ಯ ವೃಷ್ಟಿದ ಚಂದ್ರ 1 ಕಾಡು ಕಿಚ್ಚು ಮೊದಲಾದ ಅಗ್ನಿಭಯ ರೋಗ ಪೀಡೆ ಜನರಲ್ಲು ರಾಜರಲು ಪರಸ್ಪರ ಅಡಿಗಡಿಗೆ ಸ್ನೇಹಹಾನಿ ಸೈನ್ಯಕಲಹ ದುಷ್ಟಭಯ ಕಳೆದು ಭಕ್ತರ ಕಾಯ್ವ ಹರಿ 2 ತತ್ವದೇವರ್ಗಳು ಸಭಾರ್ಯಾ ರವಿಸೋಮರು ಶಿವಾಶಿವ ವರ ಸಮೀರ ಇವರುಗಳಿಂ ಸೇವ್ಯ ಶ್ರೀ ಶ್ರೀಯುಕ್ ಪ್ರಾಣಯಮ್ಮೊಳ್‍ಜ್ವಲಿಸಿಕಾಯ್ವ ಸರ್ವಗ ವೇಧಪಿತ ಪ್ರಸನ್ನ ಶ್ರೀನಿವಾಸ 3
--------------
ಪ್ರಸನ್ನ ಶ್ರೀನಿವಾಸದಾಸರು