ಒಟ್ಟು 140 ಕಡೆಗಳಲ್ಲಿ , 61 ದಾಸರು , 135 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮನವು ನೆಮ್ಮದಿಯಾಗಲಿ ಪ ಅನುದಿನವು ನಿನ್ನ ಮನಸಾರೆ ಪೂಜಿಸುವಂತೆ ಅ.ಪ ಬೆಟ್ಟ ಬಿಸಿಲಿನಲಿ ಬೇಯುವುದ ನೋಡುತ ಮನವು ಕೆಟ್ಟು ಹೋಗದೆ ಸತತ ಶುದ್ಧವಿರಲಿ ಹೊಟ್ಟೆ ಪಾಡಿಗೆ ಕೊರತೆ ಪಡುತಿರುವ ಜನರಲ್ಲಿ ಸಿಟ್ಟುಬಾರದೆ ಮನಕೆ ತಾಳ್ಮೆಯಿರಲಿ 1 ನೀರು ಕಡೆದರೆ ಬೆಣ್ಣೆ ಬಾರದೆನ್ನುವ ಕ್ಲೇಶ ದೂರವಾಗಲಿ ತಿರುಗಿ ಬಾರದಿರಲಿ ವೀರ ಹನುಮನು ತನ್ನ ಸಾರಸೇವೆಗೆ ಫಲವ ಕೋರಿದನೆ ಧನಕನಕ ವೈಭವಗಳ 2 ಗೋಪುರವ ತಾಂಗಿರುವೆನೆಂಬ ಗೊಂಬೆಯ ಹೆಮ್ಮೆ ಈ ಪರಿಯೆ ಮನದ ಕ್ಲೇಶವ ತಂದಿತು ಶ್ರೀ ಪತಿಯು ಮಾಡಿ ಮಾಡಿಸುವೆನೆಂಬುವಜ್ಞಾನ ಲೋಪಪೊಂದದೆ ಮನ ಪ್ರಸನ್ನವಾಗಲಿ ದೇವ 3
--------------
ವಿದ್ಯಾಪ್ರಸನ್ನತೀರ್ಥರು
ಮನೆಯ ನಿರ್ಮಲಗೈದು ಮೋದಬಡಿಸುವುದು ವನಜನಾಭನ ಭಕ್ತಿಯಂಬವಳ ಬಿರಿದು ಪ. ಬಾಯಿಮೊದಲಾದೈದು ಬಾಗಿಲುಗಳಲ್ಲಿ ವಾಯುವಂದ್ಯನ ಚರಿತ ವರ್ಣನಾದಿಗಳಾ ಛಾಯಗೊಂಬುವ ತೆರದಿ ಚಿತ್ರಕೃತ್ಯವನೂ ನಿತ್ಯ ನಲಿವುದನು 1 ಬುದ್ಧಿ ದೀಪವನು ಬಹು ಶುದ್ಧಕನು ತಾ ತದ್ದಾರಿ ಮನವ ಮೇಲುದ್ಧರಿಸಿಕೊಳುತಾ ಸಿದ್ಧಗಮ್ಯನ ಪದಕೆ ಸರಿಯಾಗಿಸುತಾ ಬದ್ಧ ಬೊಗಳುತಾ ಜನರ ಬಾಯಿ ಮುಚ್ಚಿಸುತಾ 2 ದೋಷ ದುಷ್ಕøತ ಕೆಸರ ಲೇಶವಿಡಗೊಡಳು ಆಶೆಯೆಂಬುವ ಬಲೆಯ ಕೊೈಸಿ ಬಿಸುಟುವಳು ಈಶ ಮಾನಿತ್ವಕವಕಾಶವೇನಿಡಳು ಕೇಶವನ ಕರತಂದು ಕಾವಲಿರಿಸುವಳು 3 ಇವಳಾಶ್ರಯವ ಪೊಂದಲ್ಯಾರಭಯವಿಲ್ಲ ನವರೂಪಳನ್ನುಸರಿಸಿ ನಲಿವ ಸಿರಿನಲ್ಲ ತವಕದಿಂದಲಿ ತಾನೆ ಓಡಿ ಬಂದೆಲ್ಲಾ ಯುವತಿಯರ ಕೂಡಿ ತಾ ಪಾಡುವರೆ ಬಲ್ಲಾ 4 ಕಂಜನಾಭನ ಕರುಣ ಪಂಜರದೊಳಿರಿಸಿ ಸಂಜೀವನೌಷಧವ ಸುಲಭದೋಳ್ ಕುಡಿಸಿ ಅಂಜಿಕೆಯ ಬಿಡಿಸಿ ರಿಪು ಪುಂಜವನ ಕಡಿಸಿ ಮಂಜುಳಾತ್ಮಕ ಮಾಧವನ ಮುಂದೆ ಕರಿಸಿ 5 ದಾನ ವ್ರತಾದಿಗಳನೇನ ಮಾಡಿದರು ಶ್ರೀನಿವಾಸನ ಕರುಣ ಸಾಧ್ಯವಾಗಿರದು ನೀನೆ ರಕ್ಷಕನೆಂಬ ಧ್ಯಾನದಲಿ ಮೆರದು ಜ್ಞಾನ ಭಕ್ತಿಗಳಿಂದ ನಲಿವುದೇ ಬಿರುದು 6 ಯುಕ್ತಿಯಿಂದಲಿ ನೋಡಲೆಲ್ಲ ಶಾಸ್ತ್ರದಲಿ ಭಕ್ತಿಯೋಗವ ಪೇಳ್ವವೇಕಮತ್ಯದಲಿ ಭುಕ್ತಿ ಮುಕ್ತಿಯ ಶೇಷ ಭೂಧರೇಶನಲಾ ಸಕ್ತಿಯಿರೆ ಸಕಲಾರ್ಥವೀವನುತ್ಸವದಿ 7
--------------
ತುಪಾಕಿ ವೆಂಕಟರಮಣಾಚಾರ್ಯ
ಮಾತೆ ಸರಸ್ವತಿ ಮಂಜುಳ ಮೂರುತಿ ಚೇತನಾತ್ಮಕಿ ಭಾರತಿ ಪ. ಪ್ರೀತಿಯಿಂದೀವುದು ಪೀತಾಂಬರಧರನ ಸಾತಿಶಯದ ಭಕುತಿ ಅ.ಪ. ಗುರುಹಿರಿಯರ ಕಂಡು ಬಿರುನುಡಿ ನುಡಿಸದೆ ಕರುಣಿಸೆನಗೆ ಸನ್ಮತಿ ಪರಮಪಾವನ ವೈಷ್ಣವರ ಪಾದಾಂಬುಜ ಮಧು- ಕರದಂತಿರಲಿ ಮದ್ರತಿ 1 ಮೂರ್ತಿ ತಾರೇಶನಂದದಿ ಹೃದಯಾ- ಕಾಶದೊಳು ಕಾಣುತಿ ದೂಷಣ ಕಾಮಾದಿ ಕ್ಲೇಶವ ಬಿಡಿಸುತ್ತ ಗೈಸಮ್ಮ ಹರಿಯ ಸ್ತುತಿ 2 ಮನುಜರ ರೂಪದಿ ದನುಜರು ಭೂಮಿಯೊಳ್ ಜನಿಸಿದರ್ಜಲಜನೇತ್ರಿ ಅನಘ ಲಕ್ಷುಮಿನಾರಾಯಣನ ದಾಸರಿಗೆಲ್ಲ ಜನನಿಯೆ ನೀನೆ ಗತಿ 3 ಭಾರತಿದೇವಿಯ ಸ್ತುತಿ
--------------
ತುಪಾಕಿ ವೆಂಕಟರಮಣಾಚಾರ್ಯ
ಮುಕ್ತನಲ್ಲವೇ ಭವದಿ ಮುಕ್ತನಲ್ಲವೇ ಪ ಶಕ್ತನಾದ ಹರಿಯ ಪರಮ ಭಕ್ತಿಯಿಂದ ಭಜಿಪ ನರನು ಅ.ಪ. ಮಧುವಿರೋಧಿಯಮಲ ಗುಣವ ನಲಿದು ಪಾಡುವವನು 1 ಕೇಶವಗೆ ರಮಾಬ್ಜಭವ ಸದಾಶಿವ ಶಕ್ರಾದಿ ಸುರರು ದಾಸರು ಎವೆ ಇಡುವ ಶಕ್ತಿ ಲೇಶವಿಲ್ಲವೆಂಬ ನರನು 2 ಒಂದಧಿಕ ದಶೇಂದ್ರಿಯಗಳಿಗಿಂದಿರೇಶ ವಿಷಯವ ಸಮ ಬಂಧಗೈಸಿ ವೈಷಯಿಕ ಸುಖ ತಂದು ಕೊಡುವನೆಂಬ ನರನು 3 ಈ ಪರಿಯಲಿ ತಿಳಿದು ಪುಣ್ಯ ಪಾಪಕರ್ಮ ದುಃಖಸುಖ ಜ ಯಾಪಜಯ ಮಾನಾಪಮಾನ ಶ್ರೀಪ ಕೊಡುವನೆಂಬ ನರನು 4 ವೇದ ಶಾಸ್ತ್ರಗಳಲಿ ಇಹ ವಿರೋಧವಾಕ್ಯಗಳನು ಶ್ರೀ ಪ್ರ ಮೋದ ತೀರ್ಥರುಕ್ತಿಯಿಂದ ಶೋಧಿಸುತಲಿ ಸುಖಿಪ ನರನು 5 ಕರ್ಮ ವಿಹಿತ ಅಸಜ್ಜನರು ಮಾಳ್ಪ ವಿಹಿತವಾದ ಕಾಲಕದು ಅವಿಹಿತವೆಂದು ತಿಳಿಯುವವನು6 ಸ್ವರ್ಗ ಭೂಮಿ ಕರ್ಮ ಹರಿಸುವ ಹರಿಯೆಂಬ ನರನು7 ಪರಮ ಪುರುಷಗರ್ಪಿಸುತಲಿ ಹರುಷ ಬಡುತಲಿಪ್ಪ ನರನು 8 ಈ ಶರೀರದರಸು ಶ್ರೀನಿವಾಸಾ ಮಾತೆ ಪ್ರಾಣ ಪಾರ್ವ ತೀಶರಿಹರು ಎಂದೀ ದೇಹ ಪೋಷಿಸುತಲಿ ತೋಷಿಸುವನು 9 ಪ್ರಿಯ ವಸ್ತುಗಳೊಳಗೆ ಅನ್ನಮಯನೆ ಪ್ರೀಯನೆಂದು ಅನ್ಯ ಬಯಕೆಗಳನು ಜರಿದು ಹರಿಯ ದಯವ ಬಯಸುತಿಪ್ಪ ನರನ 10 ಶತ್ರುತಾಪಕನುಳಿದು ಅನ್ಯ ಮಿತ್ರರಿಲ್ಲವೆಂದು ಅಹೋ ರಾತ್ರಿಯಲ್ಲಿ ಬಿಡದೆ ಜಗದ್ಧಾತ್ರನ ಗುಣ ತುತಿಪ ನರನು11 ಬಿಂಬನೆನಿಸಿ ಸರ್ವರ ಹೃದಯಾಂಬರದೊಳಗಿದ್ದು ಜನವಿ ಡಂಬನಾರ್ಥ ಕರ್ಮಗಳ ಆರಂಭ ಮಾಳ್ಪೆನೆಂಬ ನರನು 12 ಅಕ್ಷರೇಢ್ಯ ಬ್ರಹ್ಮ ವಾಯು ತ್ರ್ಯಕ್ಷಸುರಪ ಸುರರೊಳಗ ಧ್ಯಕ್ಷ ಸರ್ವ ಕರ್ಮಗಳಿಗೆ ಸಾಕ್ಷಿಯೆಂದು ಸ್ಮರಿಸುವವನು 13 ಅಂಬುಜ ಭವಾಂಡದೊಳು ಮಹಾಂಬರವಿಪ್ಪಂತೆ ಶ್ರೀ ನಿ ತಂಬಿನಿ ಸಹ ಸರ್ವರೊಳಗೆ ತುಂಬಿಹನೆಂದರಿತ ನರನು 14 ಅದ್ವಿತೀಯನಪೇಕ್ಷ ಭಕ್ತ ಹೃದ್ವನಜ ನಿವಾಸಿಯೆನಿಸಿ ಕದ್ದೊಯ್ದವರಘವನುಣಿಪನದ್ವಯತನೆಂಬ ನರನು 15 ಜಾಂಬವತೀರಮಣ ವಿಷಯ ಹಂಬಲವನು ಬಿಡಿಸಿ ತನ್ನ ಕಾಂಬ ಸುಖವನಿತ್ತು ನಿಜ ಕುಟುಂಬದಿಡುವನೆಂಬ ನರನು 16 ಅಣು ಮಹತ್ಪದಾರ್ಥ ವಿಲಕ್ಷಣ ವಿಶೋಕ ಜೀವರೊಡನೆ ಜನಿಸಿ ಪುಣ್ಯ ಪಾಪ ಫಲಗುಳುಣದೆ ಉಣಿಪನೆಂಬ ನರನು 17 ಕರ್ಮ ಸುದತಿಯರೊಡಗೂಡಿ ಸಮಾ ಶೂನ್ಯ ಮಾಳ್ಪನೆಂದು ಪದೇ ಪದೆಗೆ ಸ್ಮರಿಸುವವನು18 ಸ್ವಾತಿವರುಷ ವಾರಿಕಣವ ಚಾತಕ ಹಾರೈಸುವಂತೆ ಶ್ವೇತವಾಹನ ಸಖನ ಕಥೆಯ ಪ್ರೀತಿಯಿಂದ ಕೇಳ್ಪ ನರನು 19 ಲೋಕಬಂಧು ಲೋಕನಾಥ ಲೋಕಮಿತ್ರ ಲೋಕರೂಪ ಲೋಕರಂತೆ ಲೋಕದೊಳು ವಿಶೋಕ ಮಾಳ್ಪನೆಂಬ ನರನು20 ಶಾತಕುಂಭವರ್ಣ ಜಗನ್ನಾಥ ವಿಠಲನೆಂಬ ಮಹ ದ್ಭೂತ ಬಡಕರಾವು ಇವನ ಭೀತಿ ಬಿಡದು ಎಂಬನರನು 21
--------------
ಜಗನ್ನಾಥದಾಸರು
ಮೊದಲನೇ ಅಧ್ಯಾಯ ಪಾತಿವ್ರತ್ಯ ಮಹಾತ್ಮೆ ಉದಿತ ಭಾಸ್ಕರನಿಭ ಅನಂತಾರ್ಕಾಮಿತ ತೇಜ ಪದ್ಮಜಾದಿ ದೇವರ್ಗೆ ಜ್ಞಾನಬೋಧಕನು ಅನಘ ಮುದಬಲ ಜ್ಞಾನಾದಿ ಗುಣಗರ್ಣಾಣವ ಸರ್ವತ್ರ ವ್ಯಾಪ್ತ ರಕ್ಷಕ ದತ್ತಾತ್ರಯ ಶ್ರೀಶನೆ ಶರಣು ಪ ನಿರ್ದೋಷ ಗುಣಪೂರ್ಣ ವಿಷ್ಣು ಸರ್ವೋತ್ತಮ ಸ್ವತಂತ್ರ ಶ್ರೀದ ಶ್ರೀಪತಿ ಜಗಜ್ಜನ್ಮಾದಿಕರ್ತನು ಸಚ್ಛಾಶ್ರ - ದಿಂದಲೇ ವೇದ್ಯನು ಮೂರು ವಿಧ ಜೀವರಿಗೆ ಯೋಗ್ಯ ಸಾಧನಕೆ ಗತಿಯ ಮಾಡುವ ಅವತಾರ ಲೀಲಾ 1 ಸುಪುಷ್ಪಭವ ಬ್ರಹ್ಮದೇವನೋಳ್ ತತ್ ಶಬ್ದವಾಚ್ಯನು ಶ್ರೀ ಪುರುಷೋತ್ತಮನೆ ಪ್ರಜಾಸೃಷ್ಟಿ ಮಾಡಿಸುವನು ತ್ರಿಪುರಾರಿ ಭಸ್ಮಧರ ರುದ್ರನೋಳ್ ತನ್ನಾಮದಲಿ ಶ್ರೀ ಪುರುಷೋತ್ತಮನೇ ಸಂಹಾರ ಮಾಳ್ಪ ಅಂತರ್ಯಾಮಿ 2 ಉರುಜ್ಞಾನ ಸುಖ ಬಲಾದ್ಯಮಿತ ಗುಣಧಾಮನ ಕರ ಚರಣಾದ್ಯವಯವಕ್ಕೂ ಅವಗೂ ಅವನು ಧರೆಯಲ್ಲಿ ಅವತಾರ ಮಾಡುವ ರೂಪಗಳಿಗೂ ಪರಿಪೂರ್ಣವಾಗಿ ಅಭೇದ ಭೇದಲೇಶವೂ ಇಲ್ಲ 3 ದ್ವಿ ಷೋಡಶ ಶುಭಲಕ್ಷಣ ತನುವುಳ್ಳ ಬ್ರಹ್ಮಗೂ ವಿಷಕಂಠ ರುದ್ರಗೂ ಪರಸ್ಪರ ಭೇದ ಅಂತಸ್ಥ ವಿಷ್ಣುಗೂ ಇವರುಗಳಿಗೂ ಭೇದವು, ಅಂತರ್ಯಾಮಿ ವಿಷ್ಣು ಒಬ್ಬನೇ ದ್ವಿರೂಪದಲ್ಲಿ ಇವರಲ್ಲಿಹ 4 ಹತ್ತಾವತಾರ ಮತ್ಸ್ಯಾದಿರೂಪಗಳು ಮಾತ್ರವಲ್ಲ ಅನಂತರೂಪನು ಅನಂತಗುಣ ಕ್ರಿಯಾವಂತನು ಕ್ಷಿತಿಯಲ್ಲಿ ಬಲಕಾರ್ಯಕ್ಕೆ ಕೆಲವು ಅವತಾರ ಹಿತಕರ ಹಲವು ಜ್ಞಾನಬೋಧಕ್ಕೇವೇ ಕೆಲವು 5 ಧ್ಯಾತ್ಮನು ಜ್ಞಾನಕಾರ್ಯಕ್ಕಾಗಿ ಅವತರಿಸುವನು ಶ್ರೀಮಾನ್ ಹಯಗ್ರೀವ ಸನತ್ಕುಮಾರ ದತ್ತ ಕಪಿಲ ಧೀಮಾನ್ ಪರಾಶರ ವಾಸವೀಸೂನು ಐತರೇಯಾದಿ 6 ದ್ವಾಪರದಲ್ಲೇವೆ ಅಲ್ಲಲ್ಲಿ ಕಲಿವಿಷ ಹರಡಿ ತಪೋಧನರು ಗೌತಮರು ಶಪಿಸೆ ಜ್ಞಾನಕುಂದೆ ಶ್ರೀಪ ವೇದವ್ಯಾಸ ಜ್ಞಾನ ತೇಜಃಪುಂಜ ಬಂದು ತೋರಿ ಆ ಪೀಡಿಸುವ ಅಜ್ಞಾನ ತರಿದು ಸಜ್ಞಾನ ಇತ್ತ 7 ಹಿಂದೆ ಬ್ರಹ್ಮದೇವರಾಜÉ್ಞಯಿಂ ಅತ್ರಿಋಷಿವರ್ಯರು ನಿಂತರು ಋಕ್ಷಗಿರಿಯಲ್ಲಿ ಅಪತ್ಯಾಪೇಕ್ಷೆಯಿಂದ ಅದ್ಭುತ ತಪವಚರಿಸಿ ಜಗದೀಶ್ವರ ಸಮ - ಪುತ್ರ ಕೊಡೆ ಚಿಂತಿಸಿ ಹರಿಯಲ್ಲಿ ಶರಣಾದರು 8 ಹರಿ ತಾನು ತನ್ನ ಅಧಿಷ್ಟಾನರಾದ ಬ್ರಹ್ಮೇಶ್ವರ ಕರಕೊಂಡು ಋಷಿ ಮುಂದೆ ನಿಂತು ಯುಕ್ತಮಾತನ್ನಾಡಿ ಮೂರು ಮಂದಿಗಳು ತಾವು ಪುತ್ರರಾಗುವೆವು ಎಂದ ತರುವಾಯ ತಾನಿತ್ತ ವರವ ಒದಗಿಸಿದನು 9 ಭಾಗವತ ಈ ವಿಷಯ ಒಳಗೊಂಡು ಇಹುದು ಪತಿ ವೇದವ್ಯಾಸ ಸಂಕೃತ ಈ ಭೂರಾದಿ ಜಗತ್ತಿನಲ್ಲಿ ಪ್ರಖ್ಯಾತ ಪುರಾಣಂಗಳೊಳ್ ಶ್ರೀ ಭಗವಾನ್ ದತ್ತಾತ್ರಯನ ಅವತಾರವು ವೇದ್ಯ 10 ಗೀರ್ವಾಣ ಛಂದಸ್ಸು ಅಷ್ಟಿಯಲಿ ಬರೆಯುವದೆಂದು ಶ್ರೀವರನ ಹಿತಾಜÉ್ಞಯಿಂ ಪ್ರಸನ್ನ ಶ್ರೀನಿವಾಸೀಯ ಶ್ರೀವಿಷ್ಣು ಸಹಸ್ರನಾಮ ಭಾಷ್ಯ ಕನ್ನಡದಲ್ಲಿ ಅಳವಡಿಸಿದಂತೆ ಅಷ್ಟೀ ಛಂದಸ್ಸಲಿ ಈ ಗ್ರಂಥವ 11 ಈ ಗ್ರಂಥದಲಿ ಶ್ರೀಭಾಗವತವು ಮಾರ್ಕಂಡೇಯವು ಭಾಗವತರಿಗೆ ಉಪಾಸನಾ ಹೇತು ಪಂಚರಾತ್ರ ಆಗಮವು ಒಳಗೊಂಡ ವಿಷಯಗಳು ಇವೆಯು ಕಾಯ ಶುದ್ಧಿಯಿಂ ಪಠಣೀಯವು 12 ಗುರುಮಂತ್ರ ಉಪದೇಶವಿಲ್ಲದಂತಹ ಸ್ತ್ರೀ ಜನ ಶೂದ್ರರು ಬ್ರಹ್ಮಬಂಧುಗಳು ಈ ಗ್ರಂಥ ಪಠಿಸಲು ಹರಿಭಕ್ತ ಸಾಧು ವೈದಿಕ ಬ್ರಾಹ್ಮಣರ ಅಪ್ಪಣೆ ಕೋರಿ ಅವರ ಅಪ್ಪಣೆಯಿಂದ ಓದಬಹುದು 13 ಪ್ರತಿಷ್ಠಾನಪುರದಲ್ಲಿ ಕೌಶಿಕಾಹ್ವಯ ದ್ವಿಜನು ವ್ಯಾಧಿ ಪೀಡಿತನು ಕುಷ್ಠಿ ನಡಮಾಡಲು ಅಶಕ್ತ ಆತನ ಪತ್ನಿಯು ಸಾಧುಗುಣವತಿ ಬಲುಶ್ರೇಷ್ಠ ಪತಿ ಹೇಳಿದಂತೆ ನಡೆಯುವಳು 14 ಒಂದು ದಿನ ಆ ಬ್ರಾಹ್ಮಣನು ನೋಡಿದ ಬಾಗಿಲಾಚೆ ಬೀದಿಯಲಿ ಹೋಗುತ್ತಿದ್ದ ಸುಂದರಿ ವೇಶ್ಯೆಯೋರ್ವಳಲಿ ಸೋತು ಮನ ಅವಳನ್ನು ತಾನು ಹೊಂದಬೇಕೆನ್ನಲು ಸಾಧ್ವಿಸತಿ ಪತಿಯನ್ನು ಎತ್ತಿದಳು ಸೊಂಟದಲಿ 15 ರಾತ್ರಿ ಕತ್ತಲೆಮಾರ್ಗ ತಿಳಿಯದಲೆ ಪತಿಯನ್ನು ಹೊತ್ತುಕೊಂಡು ಹೋಗುವಾಗ ಪತಿಯ ಕಾಲು ತಾಕಿತು ಹಾದಿಯಲ್ಲಿ ಕಬ್ಬಿಣ ಸಲಾಕದಲ್ಲಿ ಚುಚ್ಚಿಸಿ ಇದ್ದ ಕಟಿ ಸಮೀಪ ಹಾಹಾ 16 ಅನ್ಯಾಯದಿ ಆ ರಾಜ್ಯದರಸ ಆ ಮಹಾಮುನಿಯ ಧನಚೋರನೆಂದು ಶೂಲಕ್ಕೆ ಹಾಕಿಸಿದ್ದ ಆ ಶೂಲ ಕಾಣದೇ ಕೌಶಿಕನ ಕಾಲ್ತಗಲಿ ಬಲು ನೋವಾಗಿ ಮುನಿ ಶಾಪವಿತ್ತರು ಸೂರ್ಯೋದಯಲ್ಲೇ ಸಾಯೆಂದು 17 ಹಾಹಾ ಇದು ಏನು ಮುನಿಗಳಿಗೆ ನೋವಾಯಿತಲ್ಲಾ ಮಹಾತ್ಮರ ಶಾಪ ವೀಣಾಗಲಾರದು ಮಾಂಗಲ್ಯವ ಪತಿ ಅಂತಸ್ಥ ಶ್ರೀಹರಿಯ ಸ್ಮರಿಸಿ ಆ ಪತಿವ್ರತೆ ಹೇಳಿದಳು 18 ಸೂರ್ಯೋದಯವಾಗದಿದ್ದರೆ ಶಾಪವು ಫಲಿಸದು ಸೂರ್ಯೋದಯವಾಗಬೇಡಿ ಎಂದು ಹೇಳಿದಳು ಸಾಧ್ವಿ ಆರ್ಯಧರ್ಮ ಲೋಕಕಾರ್ಯ ಸರ್ವವೂ ಸ್ತಬ್ಧವಾದವು ಎಲೆಲ್ಲೂ ಕತ್ತಲೆಯು ಭಾನು ಉದಯಿಸಲಿಲ್ಲ 19 ಇಂದ್ರಾದಿ ದೇವರ್ಗಗಳು ಬ್ರಹ್ಮನಲಿ ಮೊರೆಯಿಡಲು ಪತಿವ್ರತೆ ಮಹಾತ್ಮನೆ ಮತ್ತೊಬ್ಬ ಪತಿವ್ರತೆಯೇ ಪ್ರತಿ ಮಾಡುವಳು ಅತ್ರಿಋಷಿ ಪತ್ನಿ ಅನಸೂಯಾ ಪತಿವ್ರತಾ ರತ್ನಳಾ ಸಹಾಯ ಕೇಳೆಂದರು ವೇಧ 20 ಶಕ್ರಾದಿ ಸುರರುಗಳು ಅನಸೂಯಾದೇವಿಯಲಿ ಕೋರಿಕೆ ಮಾಡಲು ಆಕೆ ದೇವತೆಗಳ ಸಮೇತ ಧೀರ ಪತಿವ್ರತೆಯಾದ ಕೌಶಿಕಾ ಗೃಹಕೆ ಹೋಗಿ ಪರಿಚಯ ಮಾಡಿಕೊಂಡು ಕೊಂಡಾಡಿದಳಾ ಸಾಧ್ವಿಯ 21 ಮಹಾಭಾಗರು ಇಂದ್ರಾದಿಗಳಿಗೂ ಅನಸೂಯಗೂ ವಿಹಿತೋಪಚಾರ ಪೂಜಾದಿಗಳ ಮಾಡಿ ಆ ಸಾಧ್ವಿ ಮಹಾಭಾಗ್ಯ ಆಗಮನ ಎನ್ನುತ್ತ ಕಾರಣವನು ಬಹು ಹಿತದಲಿ ಕೇಳಿದಳು ತನ್ನ ಸ್ಥಿತಿ ಹೇಳಿ 22 ಸೂರ್ಯ ಉದಿಸುವದಕ್ಕೆ ಪತಿ ಬದುಕಿಸಲ್ಪಡುವನು ಎನ್ನುತೆ ಕೌಶಿಕಾ ಸಾಧ್ವಿಯು ಅನುಮೋದನೆ ಕೊಂಡು ಇನ ಉದಿಸಲಿ ಎಂದ ಅಘ್ರ್ಯ ಕೊಟ್ಟಳು ಮುದದಿ 23 ಸೂರ್ಯ ಮುನಿಶಾಪ ಫಲಿಸಿತು ಬಿದ್ದ ಕೆಳಗೆ ಕೌಶಿಕ ತತ್‍ಕ್ಷಣವೇ ಬದುಕಿ ಎದ್ದ ಪತಿವ್ರತಾ ಶಿರೋಮಣಿ ಅನಸೂಯಾ ದೇವಿ ಪ್ರಭಾವ ಪತಿವ್ರತಾ ಮಹಾತ್ಮೆ ಜ್ವಲಿಸಿತು ಲೋಕದಲ್ಲಿ 24 ಕೌಶಿಕನ್ನ ಬದುಕಿಸಿದ್ದು ಮಾತ್ರವಲ್ಲದೇ ಸರ್ವ ಕುಷ್ಠಾದಿ ರೋಗ ಪರಿಹರಿಸಿ ಯುವವಾಗಿ ಮಾಡಿ ಅಯುಷ್ಯ ಬಹುನೂರು ವರ್ಷಗಳ ಅನುಗ್ರಹಿಸಿ ತುಷ್ಠಿ ಸುಖಜೀವನ ಒದಗಿಸಿದಳ್ ಅನಸೂಯಾ 25 ಅನಸೂಯೆಯ ಪಾತಿವ್ರತ್ಯ ಮಹಾತ್ಮೆಯ ಶ್ಲಾಘಿಸಿ ಏನು ವರ ಕೇಳಿದರೂ ಕೊಡುವವೆಂದು ಸುರಪ ಆನಿಮಿಷರು ಹೇಳಲು ಪತಿವ್ರತಾ ಶಿರೋಮಣಿ ವಿಧಿ ಶಿವ ತನ್ನಲ್ಲವತರಿಸಲೆಂದಳು 26 ತಥಾಸ್ತು ಎಂದ ದೇವತೆಗಳ ವರ ಸತ್ಯಮಾಡೆ ಸುತಪಸ್ವಿ ಅತ್ರಿಗೆ ಹಂಸ ವೃಷಾರೂಡರು ಪ್ರತ್ಯಕ್ಷದಿ ಹೇಳಿದಂತೆಯೂ ಅನಸೂಯ ಅತ್ರಿಗೆ ಪುತ್ರರೆಂದುದಿಸಿದರು ಸೋಮಸ್ತ ಬ್ರಹ್ಮೇಶ ವಿಷ್ಣು 27 ಮುಖ್ಯಪ್ರಾಣಾಂತರ್ಗತನೇ ಪಂಕಜಾಸನ ಪಿತನೆ ಶ್ರೀಕರಾರ್ಚಿತ ಶ್ರೀಪ್ರಸನ್ನ ಶ್ರೀನಿವಾಸ ಕಪಿಲ ಅರ್ಕಕೋಟ್ಯಾಮಿತ ತೇಜನೇ ಬ್ರಹ್ಮಾದ್ಯಮರ ಗುರೋ ಜಗದೀಶ ದತ್ತಾತ್ರಯನಮೋ ಪ್ರಿಯತಾಂ ಶರಣು 28 ಎರಡನೇ ಅಧ್ಯಾಯ ಶ್ರೀ ದತ್ತಾತ್ರಯ ಪ್ರಾದುರ್ಭಾವ ಸಾರ ಉದಿತ ಭಾಸ್ಕರನಿಭ ಅನಂತಾರ್ಕಾಮಿತ ತೇಜ ಪದ್ಮಜಾದಿ ದೇವರ್ಗೆ ಜ್ಞಾನಭೋಧಕನು ಅನಘ ಮುದಬಲ ಜ್ಞಾನಾದಿ ಗುಣಗರ್ಣಾಣವ ಸರ್ವತ್ರ ವ್ಯಾಪ್ತ ರಕ್ಷಕ ದತ್ತಾತ್ರಯ ಶ್ರೀಶನೆ ಶರಣು ಪ ಬ್ರಹ್ಮಾವಿಷ್ಟನು ಸೋಮ ಔಷಧಿಗಳ ರಾಜನಾದ ಉನ್ಮಾದ ಚರ್ಯದಿ ಕೋಪ ಪ್ರಕಟಿಸಿ ಮೆರೆವರು ತಮ್ಮ ಶಿಷ್ಯರೊಡಗೂಡಿ ಶಿವಾವತಾರ ದೂರ್ವಾಸ ಸುಮ್ಮನಸ ಸಜ್ಜನ ಹಿತರು ದುಷ್ಟನಿಗ್ರಹರು 1 ತನ್ನನ್ನ ತಾನೇ ಸುತನಾಗಿ ದತ್ತಮಾಡಿಕೊಂಡನು ವಿಷ್ಣು ಅತ್ರಿ ದಂಪತಿಗೆ ಆದ ಕಾರಣ ಪ್ರಖ್ಯಾತೆ ಉನ್ನಾಮ ದತ್ತಾತ್ರಯ ಕ್ಷೋಣಿ ಯೋಗ್ಯಾಧಿಕಾರಿಗಳಿಂ ಘನಭಕ್ತಿಯಿಂ ಶುಚಿಯಿಂ ಜಪ್ಯ ಸ್ಮರಣೀಯಿಂ ಶ್ರೋತವ್ಯ ಜಯತು 2 ಕಲ್ಯಾಣತಮ ಪೂರ್ಣ ಅಮಲ ಗುಣಗಣ ಸಿಂಧು ಮಾಲೋಲ ಶ್ರೀವಕ್ಷ ಶ್ರೀಶನೇ ಪ್ರಾದುರ್ಭವಿಸಿದನು ಚೆಲುವ ಅನುಪಮ ಸೌಂದರ್ಯಸಾರ ಸರ್ವೋತ್ತಮ ಲೀಲಾನಂದಮಯ ಚಿನ್ಮಾತ್ರಗಾತ್ರ ಭಕ್ತೇಷ್ಟದಾತ 3 ಕಮಲಾಸನಾವಿಷ್ಟ ಸೋಮ ರುದ್ರಾವತಾರ ದೂರ್ವಾಸ ತಮ್ಮ ತಮ್ಮ ಉದ್ಯೋಗಸಾಧನಕೆ ಬೇರೆ ಬೇರೆ ಹೋಗೆ ಸುಮನೋಹರ ರೂಪ ಶ್ರೀಮನೋರಮ ದತ್ತಾತ್ರಯ ಸುಮಹಾ ಯೋಗಿಯಾದ ನಿಸ್ಸಂಗ ಯೋಗೇಶ್ವರೇಶ್ವರ 4 ಅತ್ರೇಯರು ಮೂವರು ಹೀಗೆ ಬೇರೆ ಬೇರೆಯಾಗಿಯೇ ತಮ್ಮ ತಮ್ಮ ರೂಪದಲ್ಲೇ ಇದ್ದರು ಒಂದಾಗಿ ಅಲ್ಲ ಸೋಮ ಶಿವ ದತ್ತರಿಗೆ ಬೇರೆ ಬೇರೆ ಮಂತ್ರವುಂಟು ಸೋಮ ಪಂಚ ಶಿವ ಪಂಚ ದತ್ತ ನವಅಕ್ಷರವು 5 ಪ್ರೋದ್ಯ ದಿವಾಕರ ಪೋಲ್ವ ವರ್ಣವುಳ್ಳ ಶುಭಗಾತ್ರ ಆದಿತ್ಯ ಸಹಸ್ರಾಮಿತ ಮಹೋತ್ಕøಷ್ಟ ತೇಜಃಪುಂಜ ವ್ಯಾಪ್ತ ಸರ್ವತ್ರ ಜ್ಞಾನಾಭಯಕರನು ಬ್ರಹ್ಮಾದಿ ತ್ರಿದಿವ ಸುಬೋಧಕನು ಕಪಿಲನು ದತ್ತಾತ್ರಯ 6 ಇಂಥ ಮಹಾಮಹಿಮನು ಕಪಿಲ ದತ್ತಾತ್ರಯನು ಅಧಿಕಾರಿಗಳಿಗೆ ಅಪರೋಕ್ಷಜ್ಞಾನ ಮೋಕ್ಷದಾತ ಶ್ರೋತೃ, ಮಂತ್ರ, ಧ್ಯಾತೃಗಳಿಗೆ ಕಪಿಲ ದತ್ತಾತ್ರಯ ಭಕ್ತಿ ಮೆಚ್ಚಿ ಸದಾ ಸಂರಕ್ಷಿಸಿ ಇಷ್ಟಾರ್ಥ ಕೊಡುವ 7 ಪದ್ಮ ಭವಾದ್ಯಮರರಿಂ ಧ್ಯಾತ ದತ್ತಾತ್ರಯ ಹರಿ ಮೇದಿನಿ ನರರಂತೆ ಅವತಾರ ಲೀಲೆ ಚರಿಸಿ ಅದ್ಭುತ ಯೋಗಾನುಷ್ಠಾನದಿ ಇರುತಿರೆ ಜನರು ಈತನ ಸೌಂದರ್ಯ ಯೋಗಸಾಮಥ್ರ್ಯ ಹೊಗಳಿದರು 8 ಸಹಸ್ರಾರು ಋಷಿಪುತ್ರ ಬ್ರಹ್ಮಚಾರಿಗಳು ಬಂದು ಅಹರ್ನಿಶಿ ಯೋಗೇಶ್ವರೇಶ್ವರ ದತ್ತನಾಶ್ರಮದಿ ಬಹಳುತ್ಸಾಹದಲಿ ಸುತ್ತು ಮುತ್ತು ಗುಂಪುಗೂಡಿ ಮಹಾಯೋಗಾಭ್ಯಾಸಕ್ಕೆ ಚ್ಯುತಿಯ ಕಲ್ಪಿಸಿದರು 9 ಯೋಗ್ಯರು ಸಜ್ಜನರು ಈ ಭಕ್ತ ಋಷಿಕುವರರು ಯೋಗ್ಯಸಾಧನೆ ಅವರವರ ಆಶ್ರಮದಲ್ಲಿಯೇ - ಗೈಯಲಿ ಬೇಕೆಂದು ಅವರುಗಳು ಹೋಗೋ ಉಪಾಯ ನಿಶ್ಚೈಸಿ ಮುಳುಗಿದ ದತ್ತನು ಸರೋವರದೊಳು 10 ಸುರಮಾನದಿ ಸಾವಿರವರ್ಷ ಭಗವಾನ್ ದತ್ತನು ಸರೋವರದೊಳಿದ್ದನು ಹೊರಜನಕ್ಕೆ ಕಾಣದೆ ಆ ಋಷಿಪುತ್ರರು ತೀರದಲಿ ಇಕೋ ಈಗ ನಾಳೆ ಬರುವನು ಮೇಲೆ ಎಂದು ಕಾಯುತ್ತಿದ್ದರು ದೃಢದಿ 11 ಜಲಧಿ ಉಕ್ಕಿ ಹರಿದು ಕ್ಷೋಣಿಯ ಮುಳುಗಿಸದೆ ಜಲಮಧ್ಯ ತಾನಿದ್ದು ಕಾಯುವ ವಡವಾ ಮುಖಾಗ್ನಿ ಜಲಮಧ್ಯದಿ ಈಗ ಹೊಕ್ಕಿರುವ ದತ್ತಾತ್ರಯನು ಮುಳುಗಿರುವುದು ಆಶ್ಚರ್ಯವಲ್ಲ ಈರ್ವರೂ ಏಕ 12 ಬಲುದೀರ್ಘ ದೇವವರ್ಷಗಳು ಸಾಸಿರವಾದರೇನು ಶೀಲತಮ ವರವಾಯುವು ವರುಣನು ಬುಧಾದಿ ಜಲಾಭಿಮಾನಿಗಳು ಕಿಂಕರರಾಗಿ ಇರುತಿಹರು ಜಲಶಾಯಿ ನಾರಾಯಣ ಅವತಾರ ದತ್ತನಿಗೆ 13 ಒಂದು ದಿನ ಕೆರೆನೀರು ಚಲಿಸಲು ಸಂತೋಷದಿ ಬಂದರೂ ಬಂದರೂ ಎಂದು ಕೂಗೆ ಋಷಿಕುವರರು ಇಂದಿರಾಪತಿ ದತ್ತ ಮೇಲೆದ್ದು ಬಂದ ಬದಿಯಲ್ಲಿ ಇಂದಿರಾಂಗಿ ನಾರೀಮಣಿ ಓರ್ವಳ ಆಲಿಂಗಿಸುತ 14 ಯಾರನ್ನೂ ಲೆಕ್ಕಿಸದೆ ಕಾಮವಿಲಾಸ ಕೇಳಿಯ ಆ ಸ್ತ್ರೀಯೊಡನೆ ಮಾಡುತ್ತಿದ್ದುದು ಕಂಡು ಯುವಕರು ಯೋಗಿ ಹೀಗಾದರೆ ಎನ್ನುತ ತ್ವರಿತ ತೆರಳಿದರು ಜುಗುಪ್ಸೆಯಲ್ಲಿ ತ್ಯಜಿಸಿ 15 ಆ ಪುಣ್ಯವಂತ ಋಷಿಪುತ್ರರು ತಿಳಕೊಳ್ಳಲಿಲ್ಲ ಆ ಸ್ಛುರದ್ರೂಪಿಣಿ ನಾರಿ ಸಾಕ್ಷಾತ್ ಲಕ್ಷ್ಮೀದೇವಿಯೆಂದು ವಿಪುಲ ಮನ ಹರುಷ ತೋರಿಸಿ ದತ್ತಾತ್ರಯನು ಕೈಪಿಡಿದು ಲಕ್ಷ್ಮಿಯ ಕರೆದುಹೋದ ಆಶ್ರಮಕೆ 16 ಯಾವ ತನ್ನಾಶ್ರಮದಿ ಸ್ವಾಧ್ಯಾಯ ಪ್ರವಚನಗಳ್ ದಿವ್ಯ ಯೋಗ ಅಭ್ಯಾಸ ಶಿಷ್ಯರ್ಗೆ ಶೀಕ್ಷಾದಿಗಳ್ ಯಾವಾಗಲೂ ಹಿಂದೆ ನಡೆಸುತ್ತಿದ್ದನೋ ಅಲ್ಲಿ ಈಗ ದೇವಿಯೊಡನೆ ಲೀಲಾವಿಲಾಸಗಳ ತೋರಿಸಿದ 17 ಮಂದ ಧೀಗಳು ಈ ವಿಡಂಬನೆ ಕಂಡು ಮೋದದಲಿ ಶ್ರೀದತ್ತ ಈ ರೀತಿ ಆದನಲ್ಲಾ ಎಂದು ಮಾತನಾಡೆ ಸುಧೀಗಳು ಬೃಹಸ್ಪತ್ಯಾದಿಗಳು ದತ್ತಾತ್ರಯನು ಮೋದಚಿನ್ಮಯ ನಿರ್ದೋಷ ಹರಿ ಶ್ರೀಶನೆ ಎಂದರÀು 18 ಮುಖ್ಯಪ್ರಾಣಾಂತರ್ಗತನೇ ಪಂಕಜಾಸನ ಪಿತನೆ ಶ್ರೀಕರಾರ್ಚಿತ ಶ್ರೀಪ್ರಸನ್ನ ಶ್ರೀನಿವಾಸ ಕಪಿಲ ಅರ್ಕಕೋಟ್ಯಮಿತ ತೇಜನೇ ಬ್ರಹ್ಮಾದ್ಯಮರ ಗುರೋ ಜಗದೀಶ ದತ್ತಾತ್ರಯ ನಮೋ ಪ್ರಿಯತಾಂ ಶರಣು 19 -ಇತಿ ಎರಡನೇ ಅದ್ಯಾಯ ಸಂಪೂರ್ಣಂ - ಮೂರನೇ ಅದ್ಯಾಯ ಸಂಪತ್‍ಲಕ್ಷ್ಮೀ ವೃತ್ತಾಂತ ಉದಿತ ಭಾಸ್ಕರನಿಭ ಅನಂತಾರ್ಕಾಮಿತ ತೇಜ ಪದ್ಮಜಾದಿ ದೇವರ್ಗೆ ಜ್ಞಾನಬೊಧಕನು ಅನಘ ಮುದಬಲ ಜ್ಞಾನಾದಿ ಗುಣಗರ್ಣಾಣವ ಸರ್ವತ್ರ ವ್ಯಾಪ್ತ ರಕ್ಷಕ ದತ್ತಾತ್ರಯ ಶ್ರೀಶನೆ ಶರಣು ಪ ಸುರಪ ಜಂಭಾಸುರನಿಂದ ಅಪಜಯವ ಕೊಂಡು ಸುರಗುರು ಪ್ರೇರಣೆಯಿಂ ದತ್ತಾತ್ರಯನಲಿ ಹೋಗಿ ಶರಣು ಹೊಕ್ಕು ಸೇವಗೈಯಲು ಆಗ ಅವನನ
--------------
ಪ್ರಸನ್ನ ಶ್ರೀನಿವಾಸದಾಸರು
ಮೋಸಗೊಳ್ಳದಂತೆ ಕಾಯೊ ಶ್ರೀಶ ಕರುಣಾಳೊ ಆಶಾಮಗ್ನಮನವ ಹೃಷೀಕೇಶ ನಿನ್ನ ಪದದಲ್ಲಿರಿಸು ಪ. ಹಾದಿ ಬೀದಿಯಲ್ಲಿ ತಿರುಗಿ ಬಾಧೆಗೊಂಡು ಬಳಲಿ ಕಡೆಗೆ ಬೂದಿಯ ಮೇಲೊರಗಿ ಶಾಂತವಾದ ಶ್ವಾನವದು ಕಾದುಕೊಂಡು ಬಾಗಿಲಲ್ಲಿ ಕಾದಲುದರ ತುಂಬುವುದಕೆ ಸಾದರ ಕೊಂಡನ್ಯದಿ ರಸಾಸ್ವಾದನ ಗೈವಂತಾಗಿಹುದು 1 ಕರ್ಣಧಾರರಹಿತ ನಾವೆ ಅರ್ಣವದಿ ಭ್ರಮಿಸುವಂತೆ ದುರ್ನಿವಾರ ಮನಸಿನಿಂದ ಶೀರ್ಣನಾದೆನು ಸ್ವರ್ಣಗರ್ಭಪಾಲಕನು ಪರ್ಣವರವಾಹನ ಹೃದಯಾ- ಕರ್ಣಿಕಾದರಲ್ಲಿ ನಿಂತು ನಿರ್ಣಯವ ತಿಳಿಸು ಬೇಗ 2 ಆಸೆಗೊಂಡು ದುರ್ವಿಷಯದಿ ಬೇಸರದೆ ಭ್ರಾಂತಿಯಿಂದ ದೋಷ ದುರಿತಂಗಳಿಗವಕಾಶನಾದೆನು ದಾಸನೆಂಬ ದೃಷ್ಟಿಯಿಂದ ಕ್ಲೇಶವೆಲ್ಲ ಓಡಿಸಯ್ಯ ಶೇಷಗಿರಿವರ ಶಿಖರಾವಾಸ ನೀನೆ ಶರಣ ಜೀಯಾ 3
--------------
ತುಪಾಕಿ ವೆಂಕಟರಮಣಾಚಾರ್ಯ
ಯಾತವರ ನಾನಲ್ಲವೊ ಹರಿ ಬರಿದೆ ಖ್ಯಾತಿಯನು ತಂದಿತ್ತಿಯ ಪ ಮಾತುಗಳು ನಾಲುಕಾಡಿ ಸಭೆಯೊಳಗೆ ಪ್ರೀತಿ ಬಡಿಸುವೆನೊ ನರರ ರೀತಿಯಲಿ ಶ್ರುತಿ ಸ್ಮøತಿಗಳ ಪಠಿಸಿ ಶ್ರೀ- ನಾಥ ನಿನ್ನ ತೋಷಿಸಿದೆನೆ 1 ಜಪಮಣಿಗಳನು ತಿರುಹಿಸಿ | ಲೋಕರನ ಕಪಟಗೊಳಿಸುವೆನಲ್ಲದೆ ತಪ ಮಾಡಿದೆನೆ ಮನದಲಿ | ನಿನ್ನಯ ಕೃಪೆಯು ಉದಿಸುವ ತೆರದಲಿ 2 ದಾಸ ವೇಷವ ಧರಿಸಿದೆ ಕನಕದಾ- ವಾಸನೆಯಿಂದಲ್ಲದೆ ವಾಸುದೇವವಿಠಲ ಶರಣ ತಾ ಲೇಶವರಿಯೆನು ಕರುಣಿಸೊ 3
--------------
ವ್ಯಾಸತತ್ವಜ್ಞದಾಸರು
ಯಾತ್ರಕ್ಕೆ ಬಂದಿರ್ದೆನೋ ಭುವನ ಯಾತ್ರ ಮಾಡುವೆನು ಪ ಧಾತ್ರಿ ಈರೇಳಕ್ಕೆ ಸೂತ್ರಧಾರನ ಕೃಪಾ ಪಾತ್ರನಾಗಿ ಪವಿತ್ರನಾಗುವೆನು ಅ.ಪ ದೇಶ ತಿರುಗುವೆನು ದೇಹ್ಯದ ವಾಸನೆ ತೊಡೆಯುವೆನು ಆಶಾಪಾಶ ನೀಗಿ ದೋಷರಹಿತನಾಗಿ ದಾಸಜನಕೆ ಬಾಗಿ ಸಂತೋಷ ಪಡೆಯುವೆನು 1 ಪೃಥ್ವಿ ತಿರುಗುವೆನು ಹುಡುಕಿ ಸತ್ಯರ ಕಾಂಬುವೆನು ನಿತ್ಯನಿರ್ಮಲ ಹರಿಭಕ್ತಿ ಕವಚ ತೊಟ್ಟು ಮತ್ತೆ ಸಾವ್ಹುಟ್ಟುವ ಕುತ್ತ ಗೆಲಿಯುವೆನು 2 ಕ್ಲೇಶವ ತರಿಯುವೆನು ಮಾಯ ಮೋಸವ ಗೆಲಿಯುವೆನು ದಾಸಜನರ ಪ್ರಾಣೇಶ ಶ್ರೀರಾಮನ ದಾಸನಾಗಿ ಮುಕ್ತಿ ಆಸನೇರುವೆನು 3
--------------
ರಾಮದಾಸರು
ರಾಘವೇಂದ್ರರು ಸುಂದರ ಗುರು ರಾಘವೇಂದ್ರರೆಂತೆಂಬುವೋ ಕರ್ಮಂದಿಗಳರಸನೆ ವಂದಿಸುವೆ ಪ ಸನ್ನುತ ಮಹಿಮರೆಂದು ನಾ ಬೇಡುವೆ ಅ.ಪ. ಪರಮ ಕರುಣೀ ನಿಜ ಚರಣ ಸೇವಕರನ್ನು ಉದ್ಧರಿಸುತಲನುದಿನ ಪೊರೆವನೆಂದೂಕರವ ಪಿಡಿದು ತ್ವರ ಪರಿಪರಿಯಲಿ ನಿನ್ನಾತಪೊರೆಯುವೆ ಕೈ ಪಿಡಿಯೆಂದು ಕರೆಯುವೆಧರೆಯೊಳಗೆ ನಿಮ್ಮಯ ಸರಿ ಧ್ವರೆಗಳ ಕಾಣೆ ಮ-ದ್ಗುರುವೆ ಯನ್ನಂಥ ಪಾಮರ ನರನ ಕಾಯೋದು ನಿಮಗಾಶ್ಚರ್ಯವೇವರಯೋಗಿವರ್ಯನೆ ನಿರುತ ಬೃಂದಾವನದಿ ರಾಜಿಪೊಮೆರೆವ ಮಂಗಳ ಚರಣ ತವಪದಸ್ಮರಿಪೆ ಸಂತತ ನೀಡು ತ್ವರಿತದಿಹರುಷದಲಿ ನಿರ್ಜರರ ತರುವೆ 1 ಪಾದ ಚಾರು ಭೂರಿ ಕಿಟೀತಜಧೀರ ನಿನ್ನನು ಸಾರಿದವರನು ಪಾರುಗಾಣಿಪನೆಂದು ಡಂಗುರಸಾರುತಲಿದೆಯದು ವೀರಸಲಿಸೊ 2 ಏಸೇಸು ಜನ್ಮದಿ ಕ್ಲೇಶವನನುಭವಿಸಿಘಾಸಿ ಮಾಡೆನೊ ಮನದಾಶೆಯಿಂದಾಹೇಸಿ ವಿಷಯಂಗಳು ಲೇಸುತಿಳಿದು ಮರೆಮೋಸಾದಿ ದುಷ್ಟರ ಸಹವಾಸದಿ ಸೇರಿದೆಮಂದಹಾಸಾದಿ ಸಂತೈಸು ರವಿ ಸಂಕಾಶಜನಹೃದೋಷ ಸಾಗರದಿಕಾಷಾಯವಸನ ಭೂಷಿತಾಂಗ ವ್ಯಾಸಮುನಿ ಭರದೀಗಜರಾಮಪುರದೀಶ ಮುಖರಿಗೆ ತೋಷ ನೀ ಗರದಿಈ ಸಮಯ ಸ್ತುತಿಸುವೆನುಶ್ರೀ ಸಮೀರ ಮತಾಬ್ಧಿ ಚಂದಿರಈಶಗೆದುರ ರತೀಶ ಸನ್ನುತಶ್ರೀಶ ಗುರು ಇಂದಿರೇಶನಂಘ್ರಿಗೆದಾಸ್ಯ ಭಾವ ರಹಸ್ಯ ತೋರಿದೆ 3
--------------
ಗುರುಇಂದಿರೇಶರು
ಲೇಸಾಗಿ ಭಜಿಸುವೆ ಗೋಪಾಲದಾಸರ ರಾಶಿ ದುರಿತಂಗಳಾ ಪ ವಾಸವಾ ಪಿಡಿದ ವಜ್ರವೀಗಿರಿಯಂತೆ ನಿಶ್ಶೇಷದಿ ಭೇದಿಪರೊಇವರು ಅ.ಪ. ಸತಿ ಗಿರಿವಾಸ ನಾಮಕಳಾ ಸುರುಚಿರೋದರವೆಂಬೊ ಶರನಿಧಿಯಲ್ಲಿ ಚಂದಿರನಂತೆ ಉದಿಸಿಹರೋ ಇವರು 1 ಸದಮಲಮನದಲ್ಲಿ ಪದುಮನಾಭನ ನಾಮ ಪದೋಪದಿಯಲ್ಲಿ ಬಿಡದೇ ಪದರೂಪದಲ್ಲಿ ಪೊಗಳುವೊ ಸುಜನರಿಗೆ ಮೋಹವನುಣಿಸುತಿಹರೊ ಇವರು 2 ವಿಜಯದಾಸರೇ ತಮ್ಮ ನಿಜಗುರುಗಳೂ ಎಂದು ಭಜಿಪರೋ ಭಕುತಿಯಲ್ಲಿ ದ್ವಿಜವರ್ಯ ಜನಕಿಷ್ಟ ಸೃಜಿಸೋರು ಕಲ್ಪ ಭುಜದಂತೆ ನಿರುತದಲ್ಲಿ ಇಲ್ಲಿ 3 ತೊಂಡ ಪ್ರಹ್ಲಾದ ಪ್ರಿಯನ ಮಂಡಲ ಯತಿಗಳ ಬೆಳೆಪ ಯಾತ್ರೆಗಳ ಕೈಕೊಂಡು ಸೇವಿಸುತಿಹರೊ ಇವರು 4 ಭಕುತಿ ಪ್ರಾಚುರವಾಗೆ... ಹರಿನಾಮಪ್ರಕಟಿಸಿ ಕವನದಿಂದಾ ನಿಖಿಳಾಭೀಷ್ಟವನೀವ ಲಕುಮೀಪತಿಯೇ ಎಂದು ಭಕುತಗೆ ಬೋಧಿಪರೊ ಇವರು 5 ಆವಾವ ಕ್ರಿಯೆಗಳಲ್ಲಾವಾವ ಕಾಲದಿ ತಾವದಗಿನ್ನು ಹರಿಕಾವ ಸುಜೀವರ ಈ ವಿಧವೆಂದು ತನ್ನವರಿಗುಪದೇಶಿಪಾ6 ಭವ ತೋಯದಿ ಕಡೆಗೆತ್ತುವಾ . 7 ಸುಜನ ಜನರ ಕಾಯಕ್ಲೇಶವ ಕಳೆದು ಮಾಯಾರಮಣನ ವಲಿಸುವಂಥ ದಿವ್ಯ ಉಪಾಯವ ತೋರಿಪರೊ ಇವರು 8 ಮಂದ ಮನುಜ ನಾನು ಒಂದೊಂದಿವರ ಗುಣವೃಂದ ಪೊಗಳಲೊಶವೇ ತಂದೆ-ವರದಗೋಪಾಲವಿಠ್ಠಲನ ಹೊಂದಿ ಸೇವಿಪ ಗುರುವೇ 9
--------------
ತಂದೆವರದಗೋಪಾಲವಿಠಲರು
ವರದೇಂದ್ರವಿಠಲರ ಹಾಡು ವಾಸುದೇವನ ಪುರ ಪ್ರವೇಶಿಸಿದರು |ಈಶ ಭಜಕ ಶ್ರೀಶ ಪ್ರಾಣೇಶದಾಸಾರ್ಯ ಪ ಉತ್ತಂಕ ಋಷಿಯಂತೆ ಉತ್ತಮ ಗುರುಪಾದ |ಅತ್ಯಂತ ಭಕ್ತಿಯಿಂ ಸ್ತುತಿಸಿ ಯಜಿಸಿ ||ಉತ್ತಮ ಶ್ಲೋಕ ಶ್ರೀ ಪುರುಷೋತ್ತಮನ ಗುಣವ |ನೃತ್ಯ ಗೀತದಿ ಪಾಡಿ ಮೃತ್ಯಲೋಕವ ತ್ಯಜಿಸಿ 1 ವಾಸ ವಾಸರದಲಿ ವಾಸುದೇವನ ಕಥೆಯ |ಭೂಸೂರರಿಗೆ ಪೇಳಿ ತೋಷದಿಂದ ||ವಾಸವಾದ್ಯಮರ ವಂದಿತನ ಪಾದದಿ ಭಕ್ತಿ |ಲೇಸಾಗಿ ತೋರಿ ಭವಕ್ಲೇಶವನು ಪರಿಹರಿಸಿ 2 ಅಬ್ಧನಂದನ ಭಾದ್ರಪದ ತಿಥಿ ಅಷ್ಟಮಿಯ |ಶುದ್ಧ ಭೌಮ್ಯವಾಸರದ ಉಷಃಕಾಲದಿ ||ಮುದ್ದು ಪ್ರಲ್ಹಾದನ್ನ ಪೊರೆದ ನರಹರಿರೂಪ |ಹೃದ್ಗುಹಾದಲಿ ನೋಡಿ ಹರುಷವನು ಬಡುತಲಿ 3 ದಾಸ ಕುಲ ಶ್ರೇಷ್ಠ ಗುರು ಪ್ರಾಣೇಶದಾಸರಿಂ |ಶ್ರೀಶ ಪ್ರಾಣೇಶ ವಿಠಲೆಂಬಂಕಿತಾ ||ಸೋಸಿನಿಂದಲಿ ಪಡೆದು ಶ್ರೀಶ ಮಹಿಮೆ ಉ- |ಲ್ಲಾಸದಿಂದಲಿ ಭಜಿಸಿ ಬೇಸರವನಳಿಯುತಾ 4 ಮರುತನೆ ಪರಮ ಗುರು, ಹರಿಯೆ ಪರದೇವತೆ |ಪುರಂದರರೆ ದಾಸರೆಂದರುಹಿ ಧರೆಗೆ ||ವರದೇಂದ್ರ ವಿಠಲನ ಚರಣವನು ಪೂಜಿಸಿ |ದರಣಿ ಸಾಧನವನ್ನು ತ್ವರಿತದಿಂದಲಿ ಮುಗಿಸಿ 5
--------------
ಶ್ರೀಶಪ್ರಾಣೇಶವಿಠಲರು
ವಾಲೆ ಬಂದಿಹುದೇ ತಂಗೀಯನ ವ್ವಾಲೆ ಬಂದಿಹುದೆ ಪ. ವಾಲೆ ಬರೆದ ಭಕ್ತ ಪಾಲ ಶೀಲ ಕರುಣಾಲ ವಾಲೆ ಅ.ಪ. ಅಂಬುರುಹೋದ್ಭವ ಅಖಿಲ ಸುರಾ ರಂಬರದಲಿ ಸ್ತುತಿಸೆ ಶಂಬರಾಸುರ ಸಂಹರನೈಯ್ಯನ ಹಡಗು ಅಂದು ಮಾರುತನಿಲ್ಲದೆ ಗೋಪಿ ಚಂದನಸಹಿತನಿಲ್ಲೇ ಮಧ್ಯದಿಂದಲೀ ಅಂದದಿ ಮುನಿಗಳ ನಿಂದು ಸ್ತುತಿಸುತಾ ನಂದದಿಂದಾನಂದಕಂದನ ಮುಂದೆ ಕರೆಯೆ ಮುನಿ ದಂದುಗ ಹರಿಸುತ ಬಂದೆನೆಂದು ಇಂಥಾ 1 ಬಂದೆನೆಂದು ತೋರನೆ ಹರಿ ನಿಂದಿರುವನೆ ಬದಿಲಿ ಇಂದುಧರನ ಆಣೆ ಎನ್ನ ಮಂದಿರದಲಿ ತೋರುತ ಬಂದ ಭಕ್ತರ ಸೇವಿಸೆಂದು ಬರೆದಿಹ ಬಂಧು ನಾನೆಂದು ತಿಳಿ ಎಂದು ಹೇಳುವತೆರ ಬರಹವ ಇಂದಿರೇಶ ತಾ ಬಂದು ನಿಂದು ಕೈ ಪಿಡಿದ ವಾಲೆ 2 ಶ್ರೀ ಶ್ರೀನಿವಾಸನ ತೋರುವೆ ವಾಸವಾಗುತ ಮನದಿ ಕ್ಲೇಶವ ಕಳೆ ಮನದಾಸೆ ಬಿಟ್ಟರೇನು ಶ್ರೀಶನಾಜ್ಞೆಯೆಂದು ಎನ್ನ ಶುಭ ಪತ್ರವ ದಾಸಳಾದ ಎನ್ನ ಮನದಾಸೆ ಪೂರೈಸುವ ವಾಲೆ ವಾಸುದೇವನ 3
--------------
ಸರಸ್ವತಿ ಬಾಯಿ
ವಿಜಯದಾಸರ ಭಜನೆ ಮಾಡಿರೊ |ವಿಜಯದಾಸರ ಭಜನೆ ಮಾಡಲುಅಜನ ಜನಕ ನಿಜನಿಗೊಲಿದುಕುಜನ ಸಂಗತಿ ತ್ಯಜನ ಮಾಡಿಸಿಸುಜನರ ಪಾದಾಂಬುಜದಲ್ಲಿಡುವ ಪ ಶುದ್ಧ ಮಂದರನ್ನ ಉದ್ಧಾರಾರ್ಥವಾಗಿಮಧ್ವರಾಯರ ಮತಾಬ್ಧಿಯೊಳು ಪುಟ್ಟಿಸಿದ್ಧಾಂತ ಸ್ಥಾಪಿಸಿ ಗೆದ್ದು ವಾದಿಗಳಹೆದ್ದೈವವೇ ಅನಿರುದ್ಧನು ಯೆಂದು ||ಪದ್ಧತಿಂದ ಪೇಳಿಸಿದಿ ವೈಷ್ಣವರನ್ನಶುದ್ಧಾತ್ಮರ ಮಾಳ್ಪ ಉದ್ಯೋಗದಿಂದಲಿಹದ್ದನ್ನೇರಿ ಬಪ್ಪ ಪದ್ದುಮನಾಭನ್ನಹೃದ್ದಯದೊಳಗಿಟ್ಟ ಸದ್ಗುರುರಾಯ 1 ಭೂಸುರಾಬ್ಧಿಗೆ ತಾರೇಶನಂತೊಪ್ಪುವಸಾಸಿರ ನಾಮದ ಶೇಷಗಿರಿ ಶ್ರೀ ನಿ-ವಾಸನ ಯಾತ್ರೆಯ ಲೇಸಾಗಿ ಮಾಡ್ಯೆತಿ ಸ- |ಹಾಸ ಸಂತೋಷದಿಂದಲೆ ||ವಾಸುದೇವನ ಮಾನಸದೊಳಿಟ್ಟು ದು-ರಾಶೆಯ ತೊರೆದು ಕ್ಲೇಶವ ಪಡದಲೆಮೀಸಲ ಪುಣ್ಯದ ರಾಶಿ ಘಳಿಸಿಕೇಶವನ ನಿಜ ದಾಸನೆಂದೆನಿಪ2 ಪಾದ ನಿತ್ಯ ಸಿರಿ ಮೋಹನ್ನ ವಿಠಲನೆಪರನೆಂದರುಹು ಮಾಡಿದ ಸುರ ತರುವಾದ 3
--------------
ಮೋಹನದಾಸರು
ವ್ಯಾಸರಾಯರ ಚರಣವನೆ ಸೇವಿಸಿ ಪ ವ್ಯಾಸರಾಯರ ಚರಣ ಸರಸಿಜದ ಸೇವೆ ಬಲು ಮೀಸಲ ಮನದಿ ಮಾಡೆ ಆಶೆಪಾಶೆಯ ತೊರೆದು ಕ್ಲೇಶವೆಲ್ಲವ ಹರಿಸಿ ಭಾಸಿಸುವ ಬಿಡದಲೇ ಹೃದ್ದೇಶ ಖೇಶದೊಳಗೇ ಅ.ಪ. ಬನ್ನೂರು ಪುರದಲ್ಲಿ ಮುನ್ನೋರ್ವ ಬ್ರಾಹ್ಮಣನಮನ್ನೆಯೋಳ್ಳುದಿಸಲೂ ಸ್ವರ್ಣ ಪಾತ್ರೆಲಿ ತರಿಸಿಘನ್ನ ಮಹಿಮನ ತಂದು ಬ್ರಹ್ಮಣ್ಯ ಯತಿವರರು ತಮ್ಮ ಆಶ್ರಮದಿ ಪೊರೆಯೆ ||ಉನ್ನತದ ಗುಡ್ಡದಲಿ ಗವಿಯ ಮನೆಯಾಗಿರಲು ಚಿಣ್ಣನಾ ತೊಟ್ಟಿಲಿನ ಮೇಲಿನ ಗವಾಕ್ಷದಿಂಚೆನ್ನಗೋವ್ ದಿನದಿನದಿ ಪಾಲ ಕರೆಯುತ ಚಿಣ್ಣನನು ತಾ ಬಲು ಸಲಹಿತು 1 ತಾಪಸೋತ್ತಮರಾದ ಶ್ರೀಪಾದರಾಯರ ಸ-ಮೀಪದೊಳು ಆ ಪರಮ ಶಾಸ್ತ್ರ ವ್ಯಾಸಂಗದೀಭಾಪು ಭಾಪನೆ ಮೆರೆದು ಭಕ್ತಿ ಸುಪಥವ ಪಿಡಿದು ಮೈ ಮರೆದು ಕುಣಿಯುತಿರುವ ||ಶ್ರೀಪಾದ ಮುನಿಪ ತಾ ಮುಚ್ಚಳವ ತೆರೆಯದಿಹ ಸಂಪುಟವ ತೆರೆಯುತ್ತ ಶ್ರೀ ಪತಿಯನೆ ನೋದುತಶ್ರೀಪ ಶ್ರೀ ವೇಣುಗೋಪಾಲ ಕೃಷ್ಣನ್ನ ಕಾಣುತ್ತ ಕುಣಿ ಕುಣಿದಾಡಿದ 2 ಶಾಲಿಗ್ರಾಮವ ಪಿಡಿದು ತಾಳವನೆ ಹಾಕುತ್ತಬಲುಭಕ್ತಿ ಭರದಿಂದ ಘಲ್ಲು ಘಲ್ಲನೆ ಕುಣಿಯೆಖುಲ್ಲ ಜನರಿದರ ವಳ ಮರ್ಮವನೆ ತಿಳಿಯದಲೆ ಗುಲ್ಲುಗುಲ್ಲೆಂದು ನಗಲೂ || ಬಲ್ಲಿದ ಶ್ರೀಪಾದರಾಯರಿದ ಕೇಳಿ ಕಂಗಳಲಿ ಗಂಬನಿ ಗಲ್ಲದಲಿ ಕೈಯಿಡುತ ಸೊಲ್ಲ ಕೇಳಿರಿ ಸುಜನರೆಲ್ಲರು ಶ್ರೀ ಕೃಷ್ಣ ನಮ್ಮ ವ್ಯಾಸರೋಶನಾದನು 3 ಸಾರಥಿ ಹರಿಯನಿಜ ಮತವ ಬೋಧಿಸುತ ನಿಜ ಜನರ ಪೊರೆಯುತ್ತಕುಜನ ಕುತ್ಸಿತ ಮಾಯಿಮತ ಜೈಸಿಅಜನನಯ್ಯನ ಪ್ರೀತಿ ಸಂಪಾದಿಸಿ ||ಸುಜನ ಪಾಲಕ ಕೃಷ್ಣರಾಜನಿಗೆ ಕುಹುಯೋಗಗಜಬಜಿಸಿ ಬರುತಿರ್ಪುದನು ನಿಜ ಮನದಿ ತಿಳಿದುಗಜವರದ ನಂಘ್ರಿಯನೆ ಭಜಿಸುತ್ತ ವಿಜಯ ಪುರಿ ಸಿಂಹಾಸನವನೇರ್ಧರ 4 ಪರಿ ಗ್ರಂಥ ರಚನೆಯಲಿ ಕಳೆಯೆ ಕಾಲವಕಲು ಮನದ ಜನರಿವರ ಬಲು ಪರಿಯ ಮಹಿಮೆಗಳನೂ ತಾವ್ ತಿಳಿಯಲೊಶವೆ 5 ಇಂಪುಗೊಳ್ಳುತ ಮನದಿ ತಂಪಿನಿಂದಲಿ ಮೆರೆವಪಂಪೆ ಸುಕ್ಷೇತ್ರದಲಿ ಬಾಂಬೊಳೆಯ ಜನಕನ್ನಸಂಪ್ರೀತಿಯನೆ ಪಡೆದಿರುವ ಯಂತ್ರ ಉದ್ಧಾರರನ ಸ್ಥಾಪಿಸುತಲಿ||ನೋಂಪಿನಿಂದಲಿ ಬ್ರಾಹ್ಮಲಕ್ಷ ಗುಂಪಿಗೆ ಉಣಿಸಿ |ಸಂಪುಲ್ಲ ಲೋಚನನ ಶಂಫಲಿಯ ಪುರಗನನುಸಾಂಪ್ರದಾಯಕದಿಂದ ಸಂಪ್ರೀತಿ ಬಡಿಸಿದರ ಪದ ಪಾಂಸುವನೆ ಸಾರಿರೋ 6 ಪರಿ ಪರಿಯ ಪೂಜೆಯನೆ ಗೈಯ್ಯುತಲಿ ||ಶ್ರೀಶನ ಸುಪೂಜಾ ವಿಧಾನವನೆ ಗೈಸುತ್ತದೋಷದೂರನ ಸೇವೆ ಮೀಸಲಳಿಯದ ಮನದಿ ಒಸೆದು ತಾವ್ ಗೈಯ್ಯುತ ಭಾಸಿಸುವ ಸತ್ಕೀರ್ತಿಯುತರಾಗಿ ಮೆರೆಯುತಿಹರ 7 ಪುರಂದರ ವಿಠಲ ದಾಸನೆಂದೂದಾಸ ಪೀಠದಿ ನಿಲಿಸಿ ದಾಸ ಕೂಟವ ರಚಿಸಿ ಸತ್ಪಂಥವನೆ ಸಾರಿದ ||ಆಶುಕವಿತೆಯ ರಚಿಸಿ ಪ್ರಾಕೃತ ಸುಭಾಷೆಯಲಿಕೇಶವನ ಗುಣಧಿಯಲಿ ಲೇಸಾಗಿ ಈಸುತಲಿದಾಸರೊಡನಾಡುತಲಿ ಮೀಸಲಾಗಿರಿಸಿ ತನು ಕೇಶವನ ಗುಣ ಪೊಗಳಿದ 8 ಜಯ ಜಯತು ಶುಭಕಾಯ ಜಯ ಜಯತು ವ್ಯಾಸಾರ್ಯಜಯ ಮಧ್ವಮುನಿ ಪ್ರೀಯ ಜಯ ಚಂದ್ರಿಕಾಚಾರ್ಯಜಯತು ವಿದ್ವದ್ದಾರ್ಯ ಜಯತು ಸುರಮುನಿ ಪ್ರೀಯ ಜಯ ಜಯತು ಯತಿವರ್ಯನೆ ||ಕಾಯಭವ ಪಿತ ಗುರೂ ಗೋವಿಂದ ವಿಠ್ಠಲಗೆಪ್ರೀಯ ಗುರು ವ್ಯಾಸಾರ್ಯ ಸ್ತೋತ್ರವನು ಭಾವ ಶುದ್ಧಿಯೊಳಾವ ಭಜಿಸುವನವಗೆ ಭವವನಧಿ ಉತ್ತರಿಸೆ ನಾವೆಯೆನಿಸುವುದಿದು 9
--------------
ಗುರುಗೋವಿಂದವಿಠಲರು
ಶರಣು ವಾಯು ತನುಜ ಶರಣು ಭಾಸ್ಕರÀ ತೇಜ | ಶರಣು ರಾಜಾಧಿರಾಜ | ಶರಣು ಗೋಸಹಜ | ಶರಣಾರ ಸುರಭೋಜ ಪ ಸೂತ್ರನಾಮಕ ದೇವ | ಸ್ತೋತ್ರ ಮಾಳ್ಪರ ಕಾವ | ಚಿತ್ರ ಮಹಿಮರ ಕಾವ ವಿ | ಚಿತ್ರ ಶರೀರ ಸ | ಹೇಮ | ಪಾತ್ರಿಯೊಳಗೆ ಸವಿದು ಶ್ರೀಪತಿಯ ಶತ | ಪತ್ರ ಪಾದವ ಕಾ | ಲತ್ರಯ ನೆನೆಸುವನೆ 1 ಇದೆ ಭಾಗ್ಯ ನಾನಾವದೂ ಒಲ್ಲೆ | ಆ ನಾಮದ ಸೊಲ್ಲೆ ಮೇಣು ಪಾಲಿಪುದು ಮುಖ್ಯ | ಪ್ರಾಣಪಾವನ ಲೀಲ | ದಾನವರ ಕುಲಕಾಲ | ಏನೇನು ಮಾಳ್ಪಾಧಿಷ್ಠಾನದಲಿ | ನೀನೇ ನಾನೆಲ್ಲಿ ಎಣೆಗಾಣೆ2 ವಂದಿಸುವೆ ಜಗದ್ಗುರುವೆ | ಎಂದು ನಿನ್ನನು ಕರೆವೆ | ಮುಂದೆ ಈ ಜನ್ಮವು | ಹಿಂದೆ ಮಾಡಿ ನೇಮವು | ಪೊಂದಿಸು ಮೇಲುಗತಿ | ತಂದೆ ತಾಯಿ ಮಿಕ್ಕ | ನಿತ್ಯ | ವೆಂದೆ ಬಂದೆ ಸತ್ಯ ಕುಂದದೆ ಉದ್ಧರಿಸು 3 ದಾತ | ರೋಮ ರೋಮ ಕೋಟಿ ಕಾಮ ಸಂಹಾರನೇ | ಭೂಮಂಡಲಧರನೆ ಭೀಮಶೈನ | ಭೀಮ ರಿಪು ಗಂಟಲಗಾಣ | ತಾಮಸ ಜ್ಞಾನವಳಿ | ಸುಳಿ | ಶ್ರೀ ಮದಾನಂದತೀರ್ಥ4 ಶ್ರೀ ಸಪುತ ಕುಜನರ | ಭಾಷ್ಯ ಮುರಿದ ಧೀರ | ಭಾಸುರ ಕೀರ್ತಿ ಹಾರಾ | ದೋಷರಾಶಿ ದೂರ | ಹ್ರಾಸವಿಲ್ಲದ ಮಹಿಮ | ಶ್ರೀಶ ವಿಜಯವಿಠ್ಠಲನ್ನ | ದಾಸರೊಳಧಿಕ ನಿನ್ನ ಲೇಶವಾದರು ಬಿಡೆ | ನಾ ಸರ್ವಥಾ ಕರೆ | ತೋಷದಲಿಡುವುದೆನ್ನ 5
--------------
ವಿಜಯದಾಸ