ಒಟ್ಟು 1740 ಕಡೆಗಳಲ್ಲಿ , 115 ದಾಸರು , 1388 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಡವಿನಿಲಯ ನಿನ್ನಡಿಗೆರಗುವೆ ಕರ ಪಿಡಿದು ಪಾಲಿಸಯ್ಯ ಪ ಮೃಡನುತ ಭಾರತಿ ಒಡೆಯನೆ ಪ್ರಾರ್ಥಿಪೆ | ಮಾಯಾ ಅ.ಪ ನಿನ್ನ ದರುಶನದಿ ಎನ್ನ ಜನ್ಮ ಪಾ | ವನ್ನ ವಾಯಿತಯ್ಯ | ನಿನ್ನನುಗ್ರಹಪಡೆದ ಸಂ | ಪನ್ನರೊಳಿಡು ಜೀಯಾ 1 ತರುಚರನರದ್ವಿಜ | ವರರೂಪತ್ರಯ | ಧರಿಸಿದಂಥ ದೇವ || ಶರಣರ ಸಂಜೀವಾ 2 ಸೃಷ್ಟಿಯೊಳಗೆ ಅತಿ ಶ್ರೇಷ್ಟನೆಂದೆನಿಸಿದ | ಕುಷ್ಟಗಿ ಮೂರುತಿ ಪುರವಾಸ ಧಿಟ್ಟ ಮೂರುತಿ ಶಾಮಸುಂದರ ವಿಠಲ ಪ್ರಿಯದಾಸ 3
--------------
ಶಾಮಸುಂದರ ವಿಠಲ
ಅಥ ಹನುಮದ್ವ್ರತ ಕಥಾ ಸುಳಾದಿ ಧ್ರುವ ತಾಳ ವೃತವೆ ಉತ್ತಮ ವೃತವೆಂದು ಪೇಳಿಹರು ಅತುಳ ಜ್ಞಾನನಿಧಿ ವಿಜಯಾಖ್ಯ ಗುರುಗಳು | ಸತತ ಅಧ್ಯಾತುಮ ಅನಂತ ವೃತವೆಂದು | ಕ್ಷಿತಿಯೊಳು ಈ ವೃತಕೆÀ ಸರಿಗಾಣೆನೊ | ಪತಿತ ಮಾನವರ ಉದ್ಧಾರಗೋಸುಗವಾಗಿ ದ್ವಿತಿಯ ಉತ್ತಮ ವೃತವು ಹನುಮದ್ಪ್ರತವೂ | ಯತನ ಜ್ಞಾನೇಚ್ಛಾ ಶಕ್ತ್ಯಾದಿಗಳಿಗೆ ನಿರುತ | ಜತೆಯಾಗಿ ಕಾರ್ಯ ಮಾಳ್ಪ ಜ್ಞಾನಾಖ್ಯವೃತವೊ | ಅತಿಶಯವಾದ ಜ್ಞಾನ ಭಕ್ತಿ ವಿರಕ್ತಿವೀವುದು | ಮತಿವಂತರು ಮನಕೆ ತಂದು ತಿಳಿದು | ಕ್ಷಿತಿಪತಿ ಧರ್ಮರಾಜನೆಸಗಿದ ಮಹಾ ವೃತವೊ | ಪತಿಭಕುತಿಯುಕುತಳಾದ ದ್ರೌಪದಿಯು | ಪತಿ ಮೂರ್ಲೋಕದ ಶ್ರೀ ಕೃಷ್ಣನುಪದೇಶದಂತ್ಯೆ | ಮಿತ ಜ್ಯಾನದಿಂದ ಚರಿತ ವ್ರತವೊ | ಹಿತವಂತ ಹನುಮಂತ ಪಿತ ರಾಮನಿಗೆ ಪೇಳೆ ಆ | ಚ್ಯುತನಾದ ರಾಮನುಮತಿವಾನ್ ಹನು | ಮಂತನ ಭಕುತಿಗೊಲಿದು ಮಾಡ್ಡ ವೃತವೊ | ಸತತ ಸೂತರು ಶೌನಕಾದ್ಯರಿಗಿದರ ಮಹಿಮೆ | ಮಿತಿ ಇಲ್ಲದೇ ಪೇಳಿ ಮಾಡಿಸಿದ ವೃತವೊ | ವೃತತಿಜಾಸನ ಪ್ರಿಯ ಸುತ ಸುಂದರ ವಿಠಲನ ಭ | ಕುತಿ ಜ್ಞಾನವೀವ ಮಹಾ ಶ್ರೇಷ್ಠ ವೃತವೊ 1 ಮಟ್ಟತಾಳ ಜಾನ್ಹವೀ ತೀರದಲಿ ಶೌನಕಾದ್ಯ ಮುನಿಗಳು | ಧ್ಯಾನಿ ಸೂತರ ಕುರಿತು ಸಾನುರಾಗದಿ ನಮಿಸಿ | ಮೇಣು ಭಕುತಿಯಿಂದ ಙÁ್ಞನವಂತರೆ ನಿಮ್ಮಿಂ | ನಿತ್ಯ | ಧೇನಿಸುವೆವು ಹರಿಯಾ ಪುನೀತರ ಮಾಡುವಾ | ಕಾಣೋವನ್ಯ ವೃತವು ಆವುದುಪೇಳೆನಲು | ನಿತ್ಯ ಶೂದ್ರಾದಿ ನಾಲ್ಕು | ಜಾಣ ವರ್ಣರಿಂದ ಮಾಡ್ವದಕ್ಕೆ ಯೋಗ್ಯವೊ | ಏನು ಬೇಡಿದರೆ ತಡಿಯದೆ ಕೊಡುವುದೊ | ಜ್ಞಾನಿ ಜನಗಳಿಗೆಲ್ಲ ಮಂಗಳತಮ ವೃತವು | ಪುತ್ರಾದಿಗಳೀವುದು ಶ್ರೇಣಿ ದಿನ ಪ್ರತಿ ದಿನದಲ್ಲಿ ವರವಿದ್ಯ ಪ್ರದವೊ ಹಾನಿ ಲಾಭಗಳಲ್ಲಿ ಹನುಮಂತನ ನೆನಸೆ | ಮಾನನಿಧಿ ಸುತ ಸುಂದರ ವಿಠಲನ | ಧ್ಯಾನ ಧಾರಣವೀವ ಉತ್ತುಮಾಮಹವೃತವೊ 1 ರೂಪಕ ತಾಳ ಒಂದಾನೊಂದು ಸಮಯದಲ್ಲಿ ಶ್ರೀ ವ್ಯಾಸ ಶಿಷ್ಯ | ವೃಂದದಿಂದೊಡಗೂಡಿ ಯುಧಿಷ್ಠರನ ನೋಡಲು | ಅಂದುಳ್ಳ ದ್ವೈತ ವನಕೆ ನಡೆತಂದರು ಏನಂಬೆ | ಚಂದಾದ ನಿರ್ವೈರ ಮೃಗವೃಂದಗಳಿಂ ಕೂಡಿರುವ | ಕುಂದ ಮಂದಾರಾದಿ ಪುಷ್ಪಫಲ ವೃಕ್ಷಗಳಿಂ ಶೋಭಿಪ | ಕುಂದು ದೂರೋಡಿಸಿದ ಜ್ಞಾನಿಗಳ ಸಮೂಹವು | ಛಂದದಲಿ ಕಾವ್ಯಷಡಂಘ್ರಿ ನಿರತರಾಗಿ | ಮುಂದೆ ಅಧ್ಯಯನ ಶ್ರುತಸಂಪನ್ನರಾದವರು | ಒಂದೊಂದು ವೇದ ಋಗು ಯಜು:ಸಾಮಾಥರ್ವಣ ಒಂದೋಂದು ಶಾಖಾಶಾಸ್ತ್ರದಿ ಪ್ರವಚನಾಸಕ್ತರು | ಮಿಂದು ಹರಿಪದಜಲದಿ ಚತುರ ವೇದ ಘೋಷದಿ | ಸಂದೇಹವಿಲ್ಲದಲೇ ಭಗವದ್ಗೀತಾ ಲೀಲಾ | ಎಂದೆಂಬುವ ಹರಿಕಥಾಮೃತ ಪಾನ ಮಾಡುವ | ಸಂದೋಹ ಮುನಿಗಳಿಗೆ ನಿತ್ಯನ್ನದಾನವ ಮಾಡಿ | ಬಂಧುಗಳಿಂ ಸಹಿತ ಇರುವ ಯುಧಿಷ್ಟರನನ್ನು | ಸುಂದರ ವಿಠಲಾತ್ಮಕ ವ್ಯಾಸದೇವನು | ಅಂದು ದ್ವೈತವನದಲ್ಲಿ ಕೃಪಾ ದೃಷ್ಟಿಯಿಂದ ನೋಡಿದನು 3 ಕೃಷ್ಣದ್ವೈಪಾಯನಾ ಮುನಿಗಳಾಗಮ ಕೇಳಿ | ಕೃಷ್ಣೆ ಸಹಿತಾ ಅನುಜರೊಡನೆ ಕೂಡಿ | ಜೇಷ್ಠನಾದ ಯುಧಿಷ್ಠರನು ತಾ ದೂರ ನಡೆತಂದುವಾ | ಸಿಷ್ಟ ಕೃಷ್ಣಗೆ ಸಾಷ್ಟಾಂಗ ಪ್ರಣಾಮಗಳ ಮಾಡಿ ನಿ | ರ್ದಿಷ್ಟವಾದೆಕಾಂತ ಸ್ಥಳಕೆ ಕರೆತಂದು | ಶ್ರೇಷ್ಠವಾದಾಸನದ ಮೇಲೆ ಕುಳ್ಳಿರಿಸಿ | ಜೇಷ್ಟಾದಿಕೃಷ್ಣೇಯೊಡನೆ ಉತ್ಕøಷ್ಠ ಪೂಜೆಯ ಮಾಡೆ ಪರ ಮೇಷ್ಠಿ ಜನಕನು ತಾನು ತುಷ್ಟ ನಾಹೆ | ಶಿಷ್ಟಾಚಾರದಂತೆ ಕುಶಲ ಪ್ರಶ್ನೆಯು ಮಾಡ್ದ ನಿ | ರ್ದುಷ್ಟ ಭೀಮಾರ್ಜುನರೆ ಅಶ್ವಿನಿಯರೇ ಮನ | ಮುಟ್ಟಿ ಹರಿಪಾದ ಭಜನೆಯ ಮಾಡಿ ಸುಖಿಗಳಾಗಿಹ್ಯರೇ? ಧಿಟ್ಟತನದಲೆ ತಪವನೆಸಗಿ ಕಿರಿಟಯು | ನಿಷ್ಠಿಯಲಿ ಮಹರುದ್ರನೊಲಿಸಿ ಪಾಶುಪತವೆಂಬು | ತ್ಕøಷ್ಟಾಸ್ತ್ರ ಸಂಪಾದನೆಯ ಮಾಡಿದದು ಕೇಳಿ | ಹೃಷ್ಟನಾದೆನೊ ನಾನು ನಿಮ್ಮಿಂದಲಿ ಕೂಡಿ | ಕಷ್ಟಬಡುತಿರುವ ನಿನ ದುಃಖ ಶಾಂತ್ಯರ್ಥ | ಇಷ್ಟವೀವುದಕಾಗಿ ಬಂದಿಹನು ರಾಜಾಯು | ದ್ಯಿಷ್ಟರನೆ ಕೇಳುತ್ತಮ ವೃತವು ನಿನಗೋಸುಗ | ನಿಷ್ಠಿಯಿಂದಲಿ ಧರ್ಮತನಯ ನುಡಿದನು 4 ತ್ರಿವಿಡಿ ತಾಳ ನಮೊ ನಮೊ ತಾತ ಮಹಾ ಖ್ಯಾತವಂತರೆ ನಿಮಗೆ | ನಮೊ ನಮೊ ನಮೊ ಎಂದು ಬಿನ್ನೈಸುವೆ | ಶ್ರಮ ಪರಿಹರವೃತವಾವುದದÀರ ಮಹಿಮೆ | ಸುಮನಸರೊಡೆಯನೆ ಪೇಳಯ್ಯಾ ಜೀಯ್ಯಾ | ಕುಮತಿ ಪರಿಹರಿಸುವ ದೇವತೆ ಆರು ಉ | ತ್ತಮ ನಿಯಮ ಆವುದು ಪೂಜಾ ಕ್ರಮವು | ಶಮೆ ದಮೆವೀವ ನಿಯಮ ತಿಥಿ ಆವುದು | ರಮೆ ರಮಣನೆÉ ಆವ ಮಾಸದಲಿ ಮಾಡೋದು | ಶಮಲ ವಿವರ್ಜಿತ ವ್ಯಾಸದೇವನೆ ನಿಮ್ಮಾ | ಗಮನವು ಎಮ್ಮಯ ಕಷ್ಟ ದೊರೋಡಿಸಲು | ಸಮೀಚೀನ ಮತಿಯಿತ್ತು ಭಕ್ತರ ಪಾಲಿಪುದೆನುತ | ಸಮಚಿತ್ತ ಉಳ್ಳ ಮುನಿಗಳ ಕೂಡ ನಮಿಸಲು | ಭ್ರಮಣ ಮತಿಯ ಕಳೆವ ಹನುಮಾನ್ ಹ ನುಮನ್ನಾಮ ಪುನಃ ಪುನಃ ಸ್ಮರಿಸಿ ಶ್ರೀವ್ಯಾಸರು | ಆಮಮ ಪೇಳಲೇನೊ ಹನುಮದ್ವ್ರತವೋ | ಧೀಮಂತ ಹನುಮಂತನ ನಾಮೋಚ್ಚಾರಣೆಯಿಂದ | ಸಮಸ್ತ ಕಾರ್ಯ ಸಿದ್ದಿಪದು ಸಂಶಯ ಬ್ಯಾಡಿ | ಆ ಮಹಾ ದುಷ್ಟ ಗ್ರಹೋಚ್ಛಾಟನ ಜ್ವರಾದಿ | ತಾಮಸ ರೋಗ ನಿವರಣವಾಗುವದು | ಪ್ರೇಮದಿಂದಲಿ ಕೇಳು ಬಹು ವಾಕ್ಯಗಳಿಂದೇನು ? ಸೀಮೆಗಾಣದ ಅಭೀಷ್ಟಪ್ರದಾಯಕವೊ ನೀ ಮರೆಯದಿರು ಹಿಂದೆ ದ್ವಾರಕಿಯಲ್ಲಿ ಶ್ರೀ ಮದ್ವಿಷ್ಣುವೆ ಕೃಷ್ಣ ಪಾಂಚಾಲಿಯನಿ ಸ್ಸೀಮ ಭಕುತಿಗೆ ವೊಲಿದು ಈ ಮಹಾ ಹ ನುಮದ್ವ್ರತವನ್ನು ಉಪದೇಶಿಸಿ | ನೇಮದಿಂದಲೀ ವ್ರತವು ಮಾಡಿರೆನಲು ಕಾಮಿತಫಲವೀವಾ ವ್ರತದ ಮಹಿಮೆ ಆ | ಸ್ವಾಮಿ ಅನುಗ್ರಹದಿ ಸಂಪದೈಶ್ವರ್ಯದಿ ಆ ಮಹಾ ಸ್ತೋಮಗಳು ಪ್ರಾಪ್ತವಾಗಲು ನಿಮಗೆ | ಈ ಮಹಾ ವೃತ ಮಹಿಮೆ ತಿಳಿಯದ ಪಾರ್ಥನು ಪ್ರೇಮದಿಂ ದ್ರೌಪದಿ ಧರಿಸಿದ ದೋರವ ನೋಡಿ ಹೇ ಮಹಿಷಿಯೆ ಇದೆನೆನ್ನಲಾಗಿ | ತಾಮರಸನಯನೆ ಶ್ರೀ ಹನುಮದ್ದೋರವನ್ನೆ | ಆ ಮಹಾ ಐಶ್ವರ್ಯ ಗರ್ವಿಕೆ ಕ್ರೋಧಾದಿ ನಿ ಸ್ಸೀಮ ಪರಾಕ್ರಮಿ ನುಡಿದ ಅರ್ಜುನನು ಕಾಮಿನಿಯೆ ಕೇಳು ಆ ಹನುಮನೆಂಬೊ ಕಪಿ ನಾ ಮುದದಿ ಧ್ವಜದಲ್ಲಿ ಧರಿಸಿರುವೆನು ಈ | ಮರ್ಮವನು ತಿಳಿಯದೆ ಆ ವನಚರ ಶಾಖಾಮೃಗ | ಕಾಮಿತ ಫಲ ಕೊಡಬಲ್ಲದೆ ಕೇಳಿನ್ನು ಪಾಮರ ವ್ರತದಿಂದ ವಂಚಿಸಿದೆಲ್ಲದೇ ನೀನು ಕಾಮಿ ಜನರ ತೆರದಿಂದಲಿ ಅರ್ಜುನನು ಭಾಮೆ ದ್ರೌಪದಿ ಧರಿಸಿದ ತ್ರಯೋದಶ ಗ್ರಂಥಿಯುಕ್ತ ಆ ಮುದದ ದೋರವನು ಹರಿದು ಬಿಸಾಟಲು ಹೇಮಾದಿ ಸಕಲ ಸಂಪದೈಶ್ವರ್ಯ ರಾಜ್ಯವು ಭೂಮಿ ಸಹಿತ ಪ್ರಾಪ್ತವಾದುದೆಲ್ಲ ಪೋಗೆ | ಶ್ರಿಮದಾಂಧದಿಂದ ಪ್ರಾಪ್ತವ್ಯ ದುಃಖ ಫಲವು | ಪರಿಯಂತ | ರಾಮ ಮನೊರಮನು ಇನಿತು ನುಡಿಯೆ | ಸ್ವಾಮಿ ಆಜ್ಞವ ತಿಳಿದ ದ್ರೌಪದಿ ದೇವಿಯು | ಹೇ ಮಹತ್ಮರೆ ಶ್ರೀವ್ಯಾಸರ ನುಡಿ ನಿಜವೋ ನೇಮಗಳೆಲ್ಲಾ ತಿಳಿಯಲೋಶವೆ ಎಂದಿಗು 5 ಧ್ರುವ ತಾಳ ಕೇಳಯ್ಯಾ ಧರ್ಮರಾಜ ಆಲಸ ಮಾಡದೆ | ಪೇಳುವೆ ನಿನಗೊಂದು ಪುರಾತನ ಕಥೆಯು | ಆಲಿಸಿ ಮನಕೆ ತಂದು ಬಾಳು ಚನ್ನಾಗಿ ನೀನು | ಶೀಲೆ ಸೀತೆಯ ನೋಡುವ ಇಚ್ಛಾಉಳ್ಳ ಮಾ ನಿತ್ಯ ಲಕ್ಷ್ಮಣನೊಡಗೂಡಿ | ಮೇಲಾದ ಋಷ್ಯಮೂಕ ಗಿರಿಯ ಮಧ್ಯದಲ್ಲಿ ಶೀಲ ಭಕುತಿಯುಳ್ಳ ಹನುಮಂತನ ದರ್ಶನಾಗೆ ಆಳುವ ಕಪಿ ರಾಜ್ಯ ಸುಗ್ರೀವನ ಸಖ್ಯವನು ಬ ಹಾಳ ಮತಿಯುಳ್ಳ ವಾಯುಜ ಮಾಡಿಸೆ | ಮಾಸ ಮಳೆಗಾಲವು ವಾಸ ಮಾಡ್ಡ | ಕಾಲದಲಿ ಹನುಮನು ರಾಮದೇವಗೆ ನಮಿಸಿ | ನೀಲ ಮೇಘ ಶ್ಯಾಮ ಶ್ರೀ ರಾಮ ನೀನಿನ್ನ | ಬಾಲನ ಬಿನ್ನಪ ಮನಕೆ ತರಲು | ಪೇಳುವೆ ನಿಮ್ಮ ಸನ್ನಿಧಾನದಲೆನ್ನ ನಾಮ ಮಹಿಮೆ ಮೇಲುಸಿಲೆಯನದ್ಧರಿಸಿದ ಶ್ರೀರಾಮ ನೀನಙ್ಞನೆ | ಕಾಲ ಜನನದಲಿ ಇಂದ್ರನಿಂದಲಿ ಎನ್ನ ಮೇಲಾದ ವಜ್ರಾಯುಧದಿಂದ ಹನುಘಾತಿಸಲು ಭೂಲೋಕದಲ್ಲಿ ಅಂದಿನಾರಭ್ಯ ಹನುಮನೆಂದು ಖ್ಯಾತನಾಗಿ | ಕೇಳಯ್ಯಾ ಅಂಜನಾದ್ರಿಯಲ್ಲಿ ಸೂರ್ಯೋದಯ | ಕಾಲಕೆ ಪ್ರಕಟನಾದ ಬಾಲ ರವಿಯ ನೋಡಿ ಹಣ್ಣೆಂದು | ಮೇಲಾಗಿ ಭಕ್ಷಿಪುದಕೆ ಉಡ್ಡಾಣ ಮಾಡಲಾಗಿ | ಈ ಲೀಲೆಯ ತಿಳಿದು ಲೋಕ ಶಿಕ್ಷಣ ಗೋಸುಗ | ಕಾಲವಜ್ರಾಯುಧದಿಂದ ಹೊಡೆಯಲು ಮೂರ್ಛಿತ | ಬಾಲನಂತೆ ಬಿದ್ದವನೆನ್ನ ನೋಡಿ ಸ್ವಾಹಾ | ಲೋಲನ ಸಖನಾದ ವಾಯುದೇವನು ಎನ್ನ | ಮೇಲಿನ ಪ್ರೀತಿಯಿಂದ ಸರ್ವಜೀವರ ಶ್ವಾಸ | ಕಾಲನಾಮಕ ಭಗವಾನಿಚ್ಛೆಯಂತ ತೃಟಿ | ಕಾಲಬಿಡದೆ ಮಾಡ್ವ ಶ್ವಾಸ ನಿರೋಧಿಸೆ ಶಚಿ | ಲೋಲನಿಂದನ್ನ ಪುತ್ರನ ಕೆಡಹಿರಲವನನ್ನು ಈ | ಕಾಲಲವದಲ್ಲಿ ಕೆಡಹೆನೆನಲು ಆ | ಕಾಲದಲಿ ಬ್ರಹ್ಮಾದಿ ದೇವತೆಗಳು ಸಾಕ್ಷಾತ್ಕಾರರಾಗಿ | ಓಲೈಸಿ ಪೆಳ್ದ ಮಾತು ಎನಗೋಸುಗ ಆಂಜನೇಯಾ | ಬಾಲನೆ ಚಿರಜೀವಿಯಾಗು ನೀನೆ ಪರಾಕ್ರಮಿ | ಮೇಲೆನಿಪ ಶ್ರೀರಾಮನ ಕಾರ್ಯಸಾಧಕನಾಗೆನುತ | ಬಾಲ ಹನುಮನ ಪೂಜೆ ಮಾಡ್ಡರು ದೇವತೆಗಳು | ಮೇಲಾದ ಮಾರ್ಗಶಿರ ಶುದ್ಧ ತ್ರಯೋದಶಿ | ಕಾಲ ಅಭಿಜಿನ್ ಮೂಹೂರ್ತದಲ್ಲಿ ಆರು ಪೂಜಿಪರೊ | ಆಲಸವಿಲ್ಲದೆ ಪುರುಷಾರ್ಥ ಹೊಂದುವರೆಂದು | ತಾಳ ಮ್ಯಾಳರೊಡನೆ ವರವ ನೀಡಿ ಪೋದರು | ಆಲಯಾ ಸ್ವರ್ಗ ಸತ್ಯಾದಿ ಲೋಕಕೆ ಅಂದು ಹೀಗೆ | ಪೇಳೆ ಸುಂದರ ವಿಠಲ ರಘುರಾಮನು ನಸುನಗೆ | ಯಾಲಿ ಒಲಿದು ಹನುಮಗೆ ಹಸನ್ಮುಖನಾಗಿ ಇರಲು 6 ಮಟ್ಟತಾಳ ಭಕುತ ವತ್ಸಲ ನೀನು ಭಕುತರಿಚ್ಛವ ನೀನು | ಭಕುತ ಭಾಂಧವ ನೀನು ಭಕುತರೊಡಿಯ ನೀನು | ಭಕುತ ಪಾಲಕನೆಂಬ ಬಿರುದುಳ್ಳವ ನೀನು | ಭಕುತರಿಂದಲಿ ನೀನು ನಿನ್ನಿಂದಲೆ ಭಕುತರು | ಅಕಳಂಕ ಐಶ್ವರ್ಯ ಸತು ಚಿತು ಆನಂದಾತ್ಮಾ | ಮುಕುತಿ ಪ್ರದಾತನೆ ಸರ್ವ ಸ್ವಾಮಿ ನೀನು | ಸಕಲ ಲೋಕಗಳೊಡೆಯ ನಿನ್ನಿಂದಲೆ ಸರ್ವ ವ್ಯಕುತವಾಗ್ವದು ಸತ್ಯ ಸರ್ವಙ್ಞನು ನೀನು | ಭಕುತರ ಮನದಿಂಗಿತ ತಿಳಿಯದವನೆ ನೀನು | ಅಖಿಳ ಬ್ರಹ್ಮಾಂಡÀರಸನೆ ನಮೊ ನಮೊ ನಮೊ ನಮೊ | ಭಕುತರಿಂದಲೇ ನಿನ್ನ ಖ್ಯಾತಿ ಮೂರ್ಲೋಕಕ್ಕೆ ಭಕುತರೇ ನಿನ್ನಯಾ ಮಹಿಮೆಯ ಹೊಗಳುವರು | ಭಕುತರು ನಿನ್ನಿಂದಲೆ ಕೀರ್ತಿವಂತರÀಹರು | ಅಕುಟಿಲ ಪ್ರಭೋ ನೀನು ನಾ ನಿನ ನಿಜ ಭಕ್ತ | ಸಕಲ ಕಾಲದಲ್ಲಿ ನಿನ್ನನಾ ಮರೆಯದಲೇ | ಮಾಳ್ಪದು ನಿಜವಾಗೆ | ಶಕುತನೆ ಎನ ಕೀರ್ತಿ ನಿನ್ನಿಂದಾಗಲಿ ವಿಭೋ | ಉಕುತಿ ಲಾಲಿಸು ಪ್ರಭೋ ತವಚಿತ್ತವ ಧಾರೆ | ಭಕುತ ಹನುಮಂತ ಇನಿತು ವಿಙÁ್ಞಪಿಸಿ ನಿಲಲು | ಪ್ರಕಟಿತ ಅಶರೀರ ವಾಕ್ಯವು ಬಿಡದಲೆ | ಸಕಲ ನುಡಿ ಹನುಮಾ ಸತ್ಯನಾಡಿದನೆನಲು | ಸುಕರ ಏಕಮೇವ ದ್ವಿತಿಯ ಸುಂದರವಿಠಲ ತುಷ್ಟನಾಹೆ 7 ಝಂಪಿತಾಳ ಮಾಸಮಾರ್ಗಶೀರ್ಷ ಶುದ್ಧ ತ್ರೊಯೋದಶಿ | ಆ ಸುಮುಹೂರ್ತ ಜಯಾ ಅಭಿಜಿನ್ ಕಾಲಕೆ | ಶ್ರೀಶರಾಮನು ಹನುಮದ್ವ್ರತವ ಮಾಡ್ಡ ತ್ರಯೋ | ದಶ ಗ್ರಂಥಿüಯುತ ಹರಿದ್ರಾದೋರಗಳಲಿ | ಭಾಸುರಾಮತಿವೀವ ಹನುಮನಾವ್ಹಾನಿಸಿ | ಪೇಶಲಾಪೀತಗಂಧ ವಸ್ತ್ರ ಪುಷ್ಟಿಗಳಿಂದಲೀ | ಶ್ರೀಸೀತೆವಕ್ಷಸ್ಥಳದಿಪ್ಪ ನಿತ್ಯಾವಿಯೋಗಿನಿ | ಆ ಸುಗ್ರೀವ ಲಕ್ಷ್ಮಣಾದಿಗಳೊಡನೆ ನೆಸಗಿದನೇನೆಂಬೆ | ಲೇಶಬಿಡದೇ “ಓಂ ನಮೋಭಗವತೇ ವಾಯುನಂದನಾಯ” | ಈ ಸುಮಂತ್ರವ ಜಪಿಸಿ ತಾ ಸಹಸದಿ ಮಾಡ್ಡನೋ | ದೇಶಪರಿಮಿತ ಪ್ರಸ್ಥತ್ರಯೋಶಗೋಧೂಮವನು | ಆ ಸುದಕ್ಷಣೆ ತಾಂಬೂಲ ಸಹ ದ್ವಿಜರಿಗಿತ್ತದಾನ | ಮೀಸಲಾ ಮನದಿ ಈ ಸತ್ಕಥೆಯನು ಕೇಳಿ | ಭೇಶಮುಖಿ ಸೀತಿಯಳ ಕೊಡ್ದನೆಂಬದು ಖ್ಯಾತಿ | ಆ ಸತ್ಯಲೋಕರಿಗೆ ಆದುದು ಅಚ್ಚರವೆ ಪೂರ್ಣಕಾಮನಿಗೆ | ಕ್ಲೇಶನಾಶನವು ಸುಗ್ರೀವನಿಗೆ ವಿಶೇಷವಾದುದು ಸತ್ಯವೆನ್ನಿ | ತೋಷದಲಿ ವಿಭೀಷಣ ಶ್ರೀರಾಮನಾಙÉ್ಞಯಿಂ ಮಾಡ್ಡು | ದೇಶಲಂಕೆಯ ರಾಜ್ಯವನು ಪಡೆದನು | ಹೇ ಸುಮತಿಯೇ ಕೇಳಂದಿನಾರಭ್ಯ ಭೂಲೋಕಕೆ | ಲೇಸುವಿಶ್ರುತವಾದಿತೈ ಹನುಮದ್ವ್ರತವೂ | ಪರಿಯಂತ ಮಾಡ್ಡುದ ಕೀಸು ಉದ್ಯಾಪನೆಯಯ್ಯಾ ಆದಿ ಮಧ್ಯಾಂತಕೆ | “ಮಾಸಾನಾಂ ಮಾರ್ಗಶೀರ್ಷೋಹಂ” ಎಂದು ಗೀತೆÀಯಲಿ ಆ ಸ್ವಾಮಿ ದಿವ್ಯನುಡಿಯುಂಟು ಕೇಳ್ ಧರ್ಮಜನೆ | ಸ್ತ್ರೀಸಹಿತ ಅನುಜರೊಡನೇ ಈ ವ್ರತವನು | ಮೇಶನಾಜ್ಞೆಯಿದೆಂದು ಮಾಡಲು ನಿನಗೆ ರಾಜ್ಯ | ಕೋಶ ಭಾಂಡಾರಪ್ರಾಪ್ತಿಯಾಗುವದು | ಲೇಶ ಸಂಶಯ ಬ್ಯಾಡೆನಲು ಶ್ರೀ ವ್ಯಾಸ | ಆ ಸುಂದರ ವಿಠಲನ ಭಕುತರು ಮುದಭರಿತರಾಗೆ 8 ರೂಪತಾಳ ರವಿಯು ವೃಶ್ಚಿಕ ರಾಶಿಗೆ ಬರಲಾಗಿ | ಸವೆಯಾದ ಪದವೀವ ವ್ರತವಮಾಡುವದಕ್ಕೆ | ಕವಳಾ ಅಜ್ಞಾನಾಖ್ಯ ರಾತ್ರಿಕಳೆದು | ಸುವಿಮಲಾಜ್ಞಾನಾಖ್ಯ ಪ್ರಾತಃ ಕಾಲದಲೆದ್ದು | ಕವಿವ್ಯಾಸರ ಮುಂದೆ ಮಾಡಿ ಧರ್ಮಜನು | ಸುವಿವೇಕಬುದ್ಧಿಯಿಂ ಸ್ನಾನಾದಿಗಳ ಮಾಡಿ | ಹವಿಷಾದಿ ದ್ರÀ್ರವ್ಯಗಳಲಿ ಹರಿಯಚಿಂತಿಸಿ ಮಾ | ಧವÀನಾಜ್ಞೆಯಂತೆ ಉದ್ಯಾಪನವಂಗೈದು | ಕವ್ಯವಾಹನನಲ್ಲಿ ಮೂಲಮಂತ್ರದಿಂದ | ಲವಕಾಲ ಬಿಡದಲೆ ವೇದಸೂಕ್ತಗಳಿಂ ಹೋಮಿಸಿ | ನವಭಕುತಿಯಲಿ ಹನುಮಂತನ ವ್ರತಾಚರಿಸಲು | ಹವಣಿಸಿ ಸಂವತ್ಸರವು ಪೋಗಲು ಪಾಂಡವರು | ಬವರದಲ್ಲಿ ಕೌರವರಗೆ
--------------
ಸುಂದರವಿಠಲ
ಅದ್ಭುತ ಅದ್ಭುತ ಪರಮಾದ್ಭುತನೆ ಪ ಮಧ್ವರ ಚರಣದಿ ಬಿದ್ದ ಜನರಪರಿ ಶುದ್ಧಗೈದು ಸುಖ ಸಿದ್ಧಿಗೊಳಿಪ ಹರಿ ಅ.ಪ ಅನವದ್ಯ ಪರಾತ್ಪರ ಶುದ್ಧ ಸುಖಾತ್ಮಕ ಕದ್ದನೆ ಬೆಣ್ಣೆಯನು ಮಧ್ವರ ದೇವನು ಪದ್ಮಾಲಯ ಪತಿ ಸಿದ್ಧಿ ಸುವಂದಿತ ಕದ್ದನೆ ಕನ್ಯೆಯನು 1 ಮೇದಿನಿ ತಂದವ ಮೇದಿನಿ ಅಳಿಯನೆ ವೇದವ ತಂದವ ವೇದಸು ಬÉೂೀಧಕ ಬುದ್ಧನು ಆಗುತ ವೇದವ ನುಳುಹಿದನೆ 2 ಸತ್ಯವತೀ ಸುತ ಸತ್ಯನ ಸತ್ಯನು ಬತ್ತಲೆ ನಿಲ್ಲುತ ಸತಿಯರ ಕೆಡಸಿದನೆ ಕತ್ತಲೆ ಕಾಣದ ಉತ್ತುಮ ದೇವನು ಮಿಥ್ಯಾಜ್ಞಾನವ ಬಿತ್ತಿದನೆ 3 ಅನ್ನಾದನ್ನನು ಅನ್ನದ ಬೃಹತೀ ಅನ್ನನು ಸತಿಯರ ಅನ್ನವ ಬೇಡಿದನೆ ಉಣ್ಣದೆ ರಾಜನ ಅನ್ನವ ವಿದುರನ ಅನ್ನವ ನುಂಡನು ಸಣ್ಣವನೆನ್ನದಲೆ 4 ನಿಂದೆಯ ಸುರಿಸಿರೆ ನಂದವ ನೀಡಿದ ವಂದಿಸಿ ರಾಜ್ಯವ ಮುಂದಿಡೆ ಜರಿದವನೆ 5 ಅಣ್ಣನ ಕೊಂದು ತಮ್ಮನ ಸಲಹಿದ ಸಣ್ಣನು ತಮ್ಮನ ಅಣ್ಣನ ಮಾಡಿದ ಅಣ್ಣ ತಮ್ಮಂದಿರ ನುಣ್ಣಗೆ ಸವರಿದ ಅಗಣ್ಯ ಮಹಿಮ ಮೈಗಣ್ಣಗೆ ವಲಿದಿಹನೆ 6 ಭಾರೀ ಗಿರಿಧರ ನಾರಿಯು ಆದನು ಮಾರನ ಪಡೆದವ ನಾರೇರಿ ಗೊಲಿದನೆ ನಾರಿಯು ಮೊರೆಯಿಡೆ ಸೀರೆಯ ಕರೆದವ ಜಾರನು ಎನಿಸುತ ಶೀರೆಯ ಚೋರನೆ 7 ಇಲ್ಲಿಹೆ ಅಲ್ಲಿಹೆ ಎಲ್ಲಾಕಡೆಯಿಹ ಎಲ್ಲರ ಒಳಗಿಹ ಎಲ್ಲರ ಹೊರಗಿಹ ಎಲ್ಲವ ಬಲ್ಲನು ಬಲ್ಲ ವರಿಲ್ಲವೆ 8 ಅಣುಕಿವÀ ಅಣುತಮ ಘನಕಿವ ಘನತಮ ಅಣು ಘನ ಮಾಡುವ ಘನ ಅಣುಮಾಡುವ ಅಣುವಲಿ ಅಡಗಿಪ ಘನವನು ಬಲ ಬಲ ತೃಣ ಸಹ ಚಲಿಸದು ಚಿನುಮಯ ನಿಲ್ಲದೆ 9 ಜಾಗರ ಸ್ವಪ್ನ ಸುಷುಪ್ತಿಗಳೆಲ್ಲವ ಆಗಿಸಿ ಕಾಯುವ ಯೋಗಸು ಭೋಕ್ತನು ಬೀಗರ ಮನೆಯಲಿ ಸಾಗಿಸಿ ಯಂಜಲ ತೇಗಿದ ತಿನ್ನುತ ಶಾಖವ ನಿಜಕರುಣಿ 10 ಲೋಕವ ಸೃಜಿಸುವ ಲೋಕವ ನಳಿಸುವ ಲೋಕನು ಪಾಲಕ ಲೋಕ ವಿಲಕ್ಷಣನೆ ನಾಕರ ನಾಯಕ ನಾಕಗತಿ ಪ್ರದ ಶೋಕವಿದೂರಗೆ ತಾಕಿತು ಕೊಡಲಿ ಬತ 11 ಎಲ್ಲಾ ನಾಮವು ಇವನದೆ ಸರಿಸರಿ ಎಲ್ಲಾ ರೂಪವು ಕೂಡ್ರವ ದಿವನಿಗೆ ಎಲ್ಲಾ ಚೇತನ ಜಡದಿಂ ಭಿನ್ನನು ಎಲ್ಲಾ ಕಾಲದಿ ಒಂದೇ ಸಮನಿಹ 12 ಎಲ್ಲಾ ರೂಪಗಳೊಂದೇ ಸಮ ಬತ ಎಲ್ಲಾ ರೂಪದನಂತ ಗುಣಂಗಳು ಎಲ್ಲಾ ರೂಪವು ನಿತ್ಯಸು ಪೂರ್ಣವು ಎಲ್ಲಾ ಮಹಿಮೆಯ ಯಾರು ಕಾಣರು 13 ಜೀವರ ಬಿಂಬನು ಜೀವನ ಸಹವಿಹ ಜೀವರಿ ಗುಣಿಸುವ ಸುಖ ದುಃಖಂಗಳ ಸಾರ ಸುಭೋಕ್ತನು ಜೀವರಿ ಗಲ್ಲವೆ ಕರ್ಮದ ಲೇಪವು 14 ಅಗಣಿತ ಮಹಿಮನು ನಗೆಮೊಗ ಶ್ರೀ ಕೃಷ್ಣವಿಠಲ ಪರಾತ್ಪರ ಸಿಗುವನು ಭಕ್ತಿಗೆ ಸರಿಮಿಗಿಲಿಲ್ಲವೆ ಬಗೆಯನೆ ದೋಷವ ಶರಣೆಂದವರ15
--------------
ಕೃಷ್ಣವಿಠಲದಾಸರು
ಅಧ್ಯಾಯ ಎರಡು ಪದ ಪದುಮ ನಾಭನ ಸ್ಮರಿಸಿ ಮುದದಿ ಹಿಮಗಿರೀಂದ್ರನು ಮದುವೆಯಕಾರ್ಯಕೆ ತೊಡಗಿದ ಮಗಳ ಹುಡುಕಿದ 1 ಅಲ್ಲೆ ಮನೆಯೊಳಗಿಲ್ಲ ಎಲ್ಲಿ ಹುಡುಕಿದರಿಲ್ಲ ಅಲ್ಲೆ ಇಲ್ಲೆಂದು ಇಲ್ಲ ಎಲ್ಲೆಲ್ಲಿ ಇಲ್ಲಾ 2 ಘನಹಿಮ ಗಿರೀಂದ್ರ ದಮ್ಮನೆ ದಣಿದು ಮಾತಾಡಿದನು ಮನೆಮನೆಯಲ್ಲಿ ಹುಡುಕಿ ಮನದೊಳು ಮಿಡುಕಿ3 ಮಾನವಂತಿ ಮಗಳೆಲ್ಲೆ ತಾನು ಹೋದಳು ನಾನಿ ನ್ನೇನು ಪಾಯವ ಮಾಡಲಿ ಎಲ್ಲೆ ನೋಡಲಿ 4 ಅಚ್ಯುತಾನಂತಾದ್ರೀಶ ನಿಚ್ಛೆ ತಿಳಯದು ಎಂದು ಎಚ್ಚರಿಲ್ಲದೆ ಬಿದ್ದನು ಮೂರ್ಛಿತನಾದನು 5 ಪದ ಏಳೆಏಳೆಂದು ಆಕಾಲದಲಿ ಆಜನರು ಹೇಳಿ ಎಬ್ಬಿಸಲಾಗ ಏಳಲೊಲ್ಲವನು ಆ ಮೇಲೆ ಹಾ ಇದು ಎಂಥ ವೇಳೆ ಬಂದಿತು ಎಂದು ಬಹಳ ಗಾಬರಿಯಿಂದ ಗಾಳಿ ಹಾಕಿದರು ಶ್ರೀಶೈಲೇಂದ್ರ ತಾನು ಆಮೇಲೆ ಏಳುತ ಮೈಮೇಲೆ ಎಚ್ಚರ ಹುಟ್ಟು ಆಲಯದೊಳಗಿರುವ ಶೇಲಾದ ಮಗಳನ್ನು ಕಾಣದಲೆ ಕಣ್ಣು ಕ ಗ್ಗಾಳಿಗೈಯುತ ಶೋಕ ಬಹಳ ಮಾಡಿದನು 1 ಪದ ಎಲ್ಲಿ ಪೋದಳೆಲ್ಲಿ ಹುಡುಕಲಿ ಮಗಳಿಲ್ಲ ಮನೆಯೊಳೆಲ್ಲಿ ಇರುವಳಲ್ಲಿ ಪೋಗಲಿ ಎಲ್ಲಿ ಪೋದಳೆಲ್ಲಿ ಹುಡುಕಲೆಲ್ಲಿ ಮಗಳು ಇಲ್ಲ ಪ್ರಾಣ ನಿಲ್ಲ ಲೊಲ್ಲದಿಲ್ಲೆ ಮನಸು ಕಲ್ಲುಮಾಡಿಯೆಲ್ಲಾ ಬಿಟ್ಟು ಪ ಚಾರು ಮುಖಿಯ ಯಾರು ಒಯ್ದರೋ ವಿಚಾರ ಮಾಳ್ಪರಾರ ಇಲ್ಲ ಚೋರರೊಯಿದರೋ ಕ್ರೂರದೈತ್ಯ ವರ್ಯರೋ ಉದಾರಗಂಧರ್ವರೋ ಪೂರ್ವವಯದ ಪಾರ್ವತಿಯ ಯಾರು ವೈದಿದಾರು ಮತ್ತೆ1 ಇಂದ್ರತಾನು ಬಂದು ಒಯ್ದನೋ ಆ ಚಂದ್ರ ಮುಖಿಯ ಚಂದ್ರ ಬೇಕೆಂದು ಒಯ್ದನೋ ಮುಂದೆ ಯಾರು ಬಂದು ಒಯ್ದರೆಂದು ತಿಳಿಯದಿಂದು ಎನಗೆ ಬಂದ ತಾಪದಿಂದ ಬಹಳ ಬೆಂದೆನಾರ ಮುಂದೆ ಹೇಳಲಿ 2 ಎಂತು ನಾನು ಚಿಂತೆ ಮಾಡಲಿ ಧೀಮಂತ ಮುನಿಗೆ ನಿಂತು ಏನಂತ ಹೇಳಲಿ ಎಂಥ ಕಷ್ಟ ಬಂತÀು ಈ ಚಿಂತೆಗಿನ್ನು ಪ್ರಾಂತಗಾಣೆ ಪ್ರಾಂತಕಾನಂತ ಗಿರಿಯ ಕಾಂತಗೇನಂತ ಹೇಳಲಿ 3 ಪದ್ಯ ಮುನ್ನಯೀಪರಿ ಶೋಕವನ್ನು ಮಾಡುತಲೆದ್ದು ಘನ್ನ ಆ ಗಿರಿರಾಜ ನಿನ್ನೇನು ಗತಿಯೆಂದು ಕಣ್ಣೀರು ಸುರಿಸುತಲೆ ಹೆಣ್ಣು ಮಗಳನು ನೆನಸಿ ಉಣ್ಣದಲೆ ತಾನು ಅರಣ್ಯದಲಿ ನಡೆದ ಕಣ್ಣಿಟ್ಟು ನಾಕುಕಡೆ ಚನ್ನಾಗಿ ನೋಡಿದನು ಮುನ್ನಲ್ಲೆ ಕುಳಿತಿರುವ ತನ್ನ ಮಗಳನು ಕಂಡು ಕನ್ನಡಿಯ ಪರಿಹೊಳೆವ ಮುನ್ನವಳಗಲ್ಲವನು ಚೆನ್ನಾಗಿ ಪಿಡಿದು ಬಹು ಬಣ್ಣಿಸುತ ನುಡಿದ ಪದ ಪ್ರೀತಿ ಮಗಳೆ ನೀನು ಈ ವನದಲ್ಲಿ ಕೂತ ಕಾರಣವೇನು ಅಮ್ಮಯ್ಯಾ ಪ್ರೀತಿಯ ಮಗಳೆ ಇಲ್ಲೇತಕೆ ಬಂದೆ ನೀ ಪ್ರೀತನಾದ ಶ್ರೀನಾಥ ಮನೆಗೆ ನಡಿ ಪ ಮದುವಿ ನಿಶ್ಚಯವಿಂದು ಮಧುಸೂದನನಿಗೆ ನಾ ಮುದದಿ ನಿನ್ನನ್ನು ಕೊಟ್ಟು ಮದುವೆ ಮಾಡುವೆನು ಮುದದಿ ಮನೆಗೆ ನಡಿ 1 ಮನಸಿನೊಳಗೆ ಮಿಡುಕೀ ಮನೆಯ ಬಿಟ್ಟು ವನವನವÀ ಚರಿಸುವರೇ 2 ಮನೆಗೆ ನಡಿಯೆ ನಿನ್ನ ಮನಸಿನಂತಾಯಿತು ಏಸು ಜನ್ಮಕೆ ಬಂದು ಮಾಡಿದ ಪುಣ್ಯರಾಶಿ ಫಲಿಸಿತಿಂದು ವಾಸುದೇವ ಸರ್ವೇಶ ಅನಂತಾದ್ರೀಶ ನೀನ್ನ ಕೈವಶವಾದನಡಿ 3 ಪದ ಪಡೆದ ತಂದೆಯ ಮಾತು ದೃಢವಾಗಿ ಕೇಳುತಲೆ ಬಿಡದೆ ಆ ನಾರದನ ನುಡಿ ಸ್ಮರಿಸಿ ಪಾರ್ವತಿಯು ಎಡವಿದಾ ಬಟ್ಟುಮ ತ್ತೆಡವಿದಂತೆ ದು:ಖ ಬಡುವುತಲೆ ಮನದಲ್ಲೆ ಮಿಡುಕಿದಳು ತಾನು ಅಡವಿಯಲಿ ನಾ ಬಂದು ಅಡಗಿದರು ಇದು ಎನ್ನ ಬಿಡಲಿಲ್ಲ ಮತ್ತಿನ್ನ ತುಡುಗುತನವು ಯಾಕೆ ನುಡಿಬೇಕೆಂದು ತನ್ನ ಒಡಲೊಳಗಯಿದ್ದದ್ದು ಒಡೆದು ಆಡಿದಳಾಗ ಭಿಡೆಯಬಿಟ್ಟು ಪದ ಅಪ್ಪಯ್ಯ ಒಲ್ಲೆ ನಾ ವಿಷ್ಣುವ ಒಲ್ಲೆನಾ ವಿಷ್ಣುವ ಎಲ್ಲಿ ಹುಡುಕಿ ತಂದಿ ಬಲ್ಲಿದ ಶಿವಯೆನ್ನ ವಲ್ಲಭನಯ್ಯಾ ಪ ಧೀರ ಕೇಳವನ ವಿಚಾರಯೆನ್ಹೇಳಲಿ ನೀರು ಮನೆಯಮಾಡಿ ಭಾರವಗೆಲುವ ಮಣ್ಣು ಮೆಲುವಾ ಬಿಟ್ಟು ಅವದಾವ ಚೆಲುವಾ 1 ನಿತ್ಯ ಕ್ರೂರನಾಗಿ ಮತ್ತೆ ಬಲಿಯ ತಳಕೊತ್ತಿ ತುಳಿದನವ ಕುಹಕ ಕುತ್ತಿಗೆ ಕೊಯಿಕಾ ಅವಗೆಲ್ಲಿ ವಿವೇಕಾ 2 ಶುದ್ಧ ಕೋತಿಯ ಕೂಡಿ ಕದ್ದು ಬೆಣ್ಣೆಯ ಬತ್ತ ಲಿದ್ದು ತೇಜಿಯ ಬಿಟ್ಟು ಅನಂತಾದ್ರಿಯಲ್ಲಿಹನು 3 ಪದ ವನದಲ್ಲೆ ಇರುವ ಆ ವನಜ ಮುಖಿ ಪಾರ್ವತಿಯು ವಿನಯದಿಂದೀಶ್ವರನ ಮನದಲ್ಲೆ ಸ್ಮರಿಸುತ್ತಲೆ ಮನಸಿನ ಭಾವವನ್ನು ಅನುಮಾನ ಬಿಟ್ಟು ತನಗನುಕೂಲವಾಗಿ ಘನ ಹಿಮಾಚಲ ಜನಾರ್ದನಗೆ ಕೊಡಬೇಕೆಂದು ಮನದಲ್ಲೆ ಆತನ ನೆನವುತಲೆ ಭಕ್ತಿಯಲಿ ಮುನಿದಿರುವ ಪಾರ್ವತಿಯ ಮನಸಿನ ಭಾವವನು ಮನಸಿಗೆ ತಾರದಲೆ ಮನೆಗೆ ನಡೆಯೆಂದ 1 ಪದ ಮನೆಗೆ ನಡೆಯೆ ಪಾರ್ವತಿ ನೀನು ಎನ್ನ ಮನಸಿನಂತಾದರೆ ಬರುವೆನು 1 ನಿನ್ನ ಮನೋರಥ ವದುಯೇನು ಬಹು ಮನ್ನಿಸಿ ಶಿವಗೆನ್ನ ಕೊಡು ನೀನು 2 ಹರಿಗೆ ನಿಶ್ಚಯ ಮಾಡಿದೆ ನಾನು ಬಿಡು ಹರಗೆ ನಿಶ್ಚಯ ಮಾಡೆಲೋ ನೀನು 3 ಬಾಲೆ ಕೊಟ್ಟ್ಹಣ್ಣು ತಿರುಗೂದಿಲ್ಲೆ ಶಿಶುಪಾಲನ ರುಕ್ಮಿಣಿ ಬಿಡಲಿಲ್ಲೆ 4 ಗೆದ್ದೊಯ್ದ ಆಕೆಯ ಹರಿ ತಾನು ನಾನು ಗೆದ್ದವರಿಗೆ ಮಾಲೆ ಹಾಕುವೆನು 5 ಯಾವ ಪುರುಷ ನಿನ್ನ ಗೆದ್ದವನು ಮಹದೇವನೆ ನಿಶ್ಚಯ ತಿಳಿ ನೀನು 6 ಗೆದ್ದಿಹ ನಿನ್ನಾನಂತಾದ್ರೀಶಾ ನಿನಗದರ ಚಿಂತೆಯಾಕೋ ಶೈಲೇಶಾ7 ಪದ ಅವನು ಹಿಮವಂತನೆಂಬುವನು ತನ್ನ ಮಗಳು ಆದವಳಿಗೀಪರಿ ನುಡಿದಾ ಶಿವನನಾಮದುವೆ ಆಗುವೆನು ಎಂಬುವೆ ನೀನು ಶಿವನುಯೆಂದೆನಿಸಿಕೊಂಬುವನು ಅವ ಮತ ಎಂಥವನು ಪೇಳೆ ಅವನ ಮಾತನು ಕೇಳಿ ಯುವತಿಮಣಿ ಪಾರ್ವತಿಯು ಶಿವನ ಸ್ಮರಿಸುತ ಮತ್ತೆ ಶಿವನ ಸರಿಯಿಲ್ಲ ಈ ಭುವನದೊಳು ಎಂತೆಂದು ಅವನ ಕೊಂಡಾಡುತಲೆ ಸ್ತವನ ಮಾಡುತ ನುಡಿದಳವನ ಪತಿಯೆಂದು 1 ಪದ ಅವನೆ ಪತಿಯು ಶಿವನು ಎನಿಸುವಾ ಅಪ್ಪಯ್ಯ ಕೇಳೋ ಅವನೆ ಪತಿಯು ಶಿವನು ಎನಿಸುವವನು ಸರ್ವÀಭುವನದೊಡೆಯ ಅವನೆ ಯನಗೊಪ್ಪುವನು ಸತ್ಯ ಅವನೀಶನೆ ಯೆನ್ನವಗರ್ಪಿಸು ಪ ಭಕ್ತಪ್ರಿಯ ತ್ರೀನೇತ್ರನಾಥನು ತಾ ನಿತ್ಯ ನದಿಯ ನೆತ್ತಿಯಲಿ ಪೊತ್ತಿಹಾತನು ಪ್ರಖ್ಯಾತನು ಸತ್ಯಶೀಲಕೃತ್ತಿವಾಸಕ್ಲøಪ್ತ ಅವನೆ ಚಿತ್ತದೊಡೆಯ ಅವಗಗತ್ಯ ಕೊಡುನೀ 1 ಬಂದದುರಿತ ಹಿಂದೆ ಮಾಡುವ ಭಕ್ತಿಂದ ನಡದು ನಡದು ಬಂದವರಿಗಾನಂದ ಮಾಡುವ ದಯಮಾಡುವ ತಂದು ಕೊಡುವ ತಂದೆ ಕೇಳಾನಂದಮೂರುತಿ ನಂದಿವಾಹನ ಚಂದ್ರಶೇಖರ ಅಂಥ ಇಂಥ ಕಾಂತನಲ್ಲವೋ ಭೂಪ್ರಾಂತದೊಳವನಂಥ ದಯಾವಂತರಿಲ್ಲವೋಸುಳ್ಳಲ್ಲವೋ ಕಂತುಪಿತ ಅನಂತಾದ್ರೀಶನಂಥ ಕಪಟವಂತರಿಲ್ಲ ಅಂತರಂಗದ ಕಾಂತ ಶಿವನೇ ಚಿಂತೆಯಾಕ್ಹಿಮವಂತ ಇನ್ನು ಪದ ಇಂಥ ಮಾತನು ಕೇಳಿ ಸಂತೋಷದಲಿ ಹಿಮವಂತ ರಾಜೇಂದ್ರ ತಾನು ಮಾತಾಡಿದನು 1 ಮನೆಗೆ ಬಂದನು ಉದ್ರೇಕದಲ್ಲಿ ಸ್ನೇಹಬದ್ಧಾಗಿ ಸ್ವಯಂವರ ದುದ್ಯೋಗ ಮಾಡಿದನು 2 ಲೇಸಾಗಿ ತಾ ಸರ್ವದೇಶಕ್ಕೆ ದುಂದುಭಿ ಘೋಷವ ಮಾಡಿಸಿದಾ ತೋಷದಿ ಸರ್ವಲೋಕೇಶರನೆಲ್ಲಾ ಕರೆ ಕಳುಹಿದಾ 3 ಇಂದ್ರ ತಾ ಬಂದ ಅಲ್ಲಿಂದ ಅಗ್ನಿಯು ಬಂದಾ ಮುಂದೆ ಆ ಯಮನು ಬಂದಾ ಬಂದಾ ನಿರುತಿಮತ್ತೆ ಬಂದ ವರುಣ ವಾಯು ಬಂದ ಕುಬೇರ ತಾನು 4 ನಿಲ್ಲದೆ ಸ್ವಯಂವರಕೆ ಬಲ್ಲಿದನಂತಾದ್ರಿ ವಲ್ಲಭ ತಾ ಬಂದ ಎಲ್ಲರು ಬಂದರಾಗ 5 ಪದ ಗಿರಿರಾಜ ಮುಂದೆ ಆ ಸುರರಲ್ಲಿ ಬಹುಸ್ನೇಹ ಸುರಿಸುತಲೆ ಆಸನವ ತರಿಸಿ ಎಲ್ಲರನು ಕುಳ್ಳಿರಿಸಿ ಕರಗಳ ಮುಗಿದು ಹರಿ ಮೊದಲು ಮಾಡಿಕೊಂ- ಡ್ಹರುಷದಿಂದಲಿ ಸರ್ವ ಸುರರಿಗರ್ಚಿಸಿದ ಸುರಸಾದ ಈ ಕಥೆಯ ಸರಸಾಗಿ ಕೇಳಿದರೆ ಸುರರು ವೊಲಿವುವರೆಲ್ಲ ಸರಸಿಜಾಕ್ಷಿಯ ಸ್ವಯಂವರಕೆ ಬಂದಿಹ ಸರ್ವ ಸುರರನುಗ್ರಹದಿಂದ ಸರಸರನೆ ಮುಗಿದಿತಿಲ್ಲಿಗೆರಡು ಅಧ್ಯಾಯ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಎರಡು ಪದ:ರಾಗ:ಯರಕಲಕಾಂಬೋದಿ ತಾಳ:ಬಿಲಂದಿ, ಸ್ವರ ಷಡ್ಜ ದೇವಕಿಯಲಿ ಅವತರಿಸಿದ ದೇವಾಧೀಶನ ಕಂಡು ಆ ವಸುದೇವನು ಸ್ತುತಿಸಿದ ಕೇವಲ ಭಕುತಿಯಲಿ | ಲಾವಣ್ಯಾಂಬುಧಿಯನಿಸುವ ಭಯದಿಂದ || 1 ಲೋಕಾಧೀಶನೆ ನಿನ್ನ ಅತೌಕಿಕ ರೂಪಾವು ಕಂಡು ಆ ಕಂಸನ ಭಯದಲ್ಲಿ ನಾ ವ್ಯಾಕುಲಳಾಗಿರುವೆ| ಸಾಕೀಕಾಲಕ ಈ ಅಪ್ರಾಕೃತರೂಪವು ಎÀÀನಲು ಶ್ರೀಕಾಂತನು ಆಕ್ಷಣದಲಿ ಪ್ರಾಕೃತ ಶಿಶುವಾದಾ|| 2 ಆ ಕಾಲದಲ್ಯಾದುರ್ಗಾ ತಾ ಕಾಲವ ಕಳಿಯದಲೆ ಗೋಕುಲದಲ್ಲಿ ಪುರುಷೆಂದಾಕಿಯು ತಿಳಿಯದೆ ನಿದ್ರಿಲಯಲ್ಯಾಕ್ರಾಂತಾದಳು ಹುಟ್ಟಿರುವಾಕಿಯ ಮಹಿಮೆ ಇದು|| 3 ಪಟ್ಟಣದಲಿ ಸರ್ವರು ಭಯಬಿಟ್ಟು ನಡರಾತ್ರಿಯೋಳ್ ತಟ್ಟಲು ಬಹುನಿದ್ರಿ ಸೃತಿಗೆಟ್ಟು ಮಲಗಿರಲು | ಹÀುಟ್ಟಿದ ಬಾಲಕನ ನಾ ಬಚ್ಚಿಟ್ಟು ಬರುವೆನೆಂದ ಥಟ್ಟನೆ ನಡದನು ಕೃಷ್ಣನ ಘಡ್ದ್ಹಡದು ಶೌರಿ|| 4 ಕಾಲೊಳಗಿನ ಬೇಡಿಯು ತತ್ಕಾಲಕ ಕಡದಿತು ಬಾಗಿಲಕೀಲಿಗಳೆಲ್ಲಾ ಸಾಲ್ಹಿಡದಿಂದ್ಗರಂತೆ| ಬೈಲಾದವು ಬಾಗಿಲಗಳಾ ಕಾಲದಿ ಹೀಂಗಾದದ್ದು ಬಾಲಕ ಹರಿ ಬದಿಲಿದ್ದ ಮ್ಯಾಲೇನಾಶ್ಚರ್ಯ 5 ವಾಸದ ವೃಷ್ಟಿಯ ಮಾಡಲು ಶೇಷನು ಬೆನ್ನಿಲೆ ಬಂದು ಸೂಸಿ ಬಾಹುವ ಯಮುನಿ ವಾಸುದೇವನ ಕಂಡು ಘಾಸಿಯು ಮಾಡದೆ ಕೂಟ್ಟಳು ಅಸಮಯಕೆ ಹಾದಿ 6 ಗೋಕುಲಕ್ಹೋಗುತ ಶೌರಿಯು ಶ್ರೀ ಕೃಷ್ಣನ ಅಲ್ಲಿಟ್ಟು ಆ ಕನ್ನಿಕೆಯ ತಂದು ತನ್ನಕಿಯ ಬದಿಲಿಟ್ಟಾ| ಆ ಕಾಲಕ ಆ ಬೇಡಿಯ ತಾಕಾಲಗಳಲ್ಲಿತಟ್ಟು|| ಶ್ರೀ ಕಾಂತನ ಸ್ಮರಿಸುತಲೆ ಏಕಾಂತದಲ್ಲಿರುವಾ|| 7 ಬಾಗಿಲುಗಳು ಎಲ್ಲಾ ಮತ್ಥಾಂಗೆ ಕೀಲಿಗಳ್ಯಲ್ಲಾ ಬ್ಯಾಗನೆ ಆದವು ಮುಂಚಿನ್ಹಾಂಗೆ ತಿಳಿಗೂಡದೆ| ಆಗಾ ಕೂಸಿನ ಧ್ವನಿ ಛಂದಾಗಿ ಕಿವಿಯಲಿ ಬೀಳಲು ಬಾಗಿಲಕಾಯುವ ಭೃತ್ಯರು ಬ್ಯಾಗನೆದ್ದರು ಭಯದಿ|| 8 ಗಡಿಬಿಡಿಯಿಂದಲ್ಯವರು ಯಡವುತ ಮುಗ್ಗುತ ತ್ಯೋಡುತ ನಡಿದರು ನಿಂದಿರದಲೆ ಬಹುಸಡಗರದರಮನಿಗೆ| ಒಡಿಯಾನಂತಾದ್ರೀಶನ ಖಡುದ್ವೇಷ ಆಸವಗೆ ನುಡಿದರು ದೇವಕಿದೇವಿಯು ಹಡಿದಾಳೆಂತೆಂದು|| 9 ಪದ್ಯ ನುಡಿಯ ಕೇಳೀಪರಿಯ ಖಡುಪಾಪಿ ಕಂಸ ಗಡವಡಿಸಿ ಕೊಂಡೆದ್ದು ಭಯ ಬಡುವತಲೆ ಶ್ವಾಸವನು ಬಿಡುವುತಲೆ ಭರದಿಂದ ಎಡವುತಲೆ ಮುಗ್ಗುತಲೆ ನಡದನಾ ದೇವಕಿಗೆ ಕುಡು ಕೂಸು ಎಂತ್ಯಂದು ನುಡಿಕೇಳಿ ಮನದಲ್ಲಿ ಮಿಡುಕುತಲೆ ದೇವಕಿಯು ದೃಢವಾಗಿ ಕೈಯೊಳಗೆ ಹಿಡಿದು ಆಕೂಸಿನಾ ಕುಡದೆ ಕಂಸನ ಮುಂದೆ ನುಡಿದಳೀ ಪರಿಯು|| 1 ಪದ:ರಾಗ:ನೀಲಾಂಬರಿ ತಾಳ:ತ್ರಿವಿಡಿ ಕುಡಲಾರೆ ಕೂಸಿನ್ನನಾ ನಿನಗೆ || ಅಣ್ಣ ಕುಡಲಾರೆ ಒಡ್ಡಿ ಬೇಡುವೆ ಕಡಿ ಹುಟ್ಟ ಹೆಣ್ಣದು|| ಪ ಸೂಸಿಯು ನಿನಗೆ ಈಕಿ ತಿಳಿ ನೀನು | ಮತ್ತು ಹಸಗೂಸು ಎಂಬುವದರಿಯೇನು | ಇಂಥಾ ಶಿಶುವಿನಳಿದಾರೆ ಪಾಪ ಬರದೇನು| ವಸುಧಿ ಒಳಗೆ ಬಹು ಹೆಸರಾದವನೋ ನೀನು|| 1 ಹಿರಿಯಣ್ಣನಲ್ಲೇನೊ ನೀ ಎನಗೆ | ಸ್ವಲ್ಪ ಕರುಣಾವಿಲ್ಲವೋ ಎನ್ನೊಳು ನಿನಗೆ|| ಮಕ್ಕಳಿರಧಾಂಗ ಮಾಡಿದಿ ಮನಿಯೋಳಗೆ ಗುರುತಕ್ಕಿದು ಒಂದು ನೋಡಿ ಮರೆತೆನ್ಹಿಂದಿನ ದುಃಖ|| 2 ನಾ ಏನು ನಿನಗೆ ಮಾಡಿದೆ ಪೇಳು | ಬಹು ಬಾಯಿತಗುವೆ ಕೋಪವು ತಾಳು| ಇಂಥಾ ಮಾಯಾ ಮೋಹತಳಿಗಿ|| 3 ಪದ್ಯ ಅಪ್ಪ ಕುಡಲಾರೆಂದು ತಪ್ಪದಲೆ ಆ ಕೂಸಿನಪ್ಪಿಕೊಂಡಳುವಾಗ ಕಲ್ಲ ಮ್ಯಾಲಪ್ಪಳಿಸಲಾಕೂಸು ತಪ್ಪನ್ಹಾರಿತು ಮ್ಯಾಲೆ ಅಷ್ಟು ಚಿನ್ಹಿಗಳಂದ ಉಟ್ಟ ಪೀತಾಂಬರದಿ ತೊಟ್ಟ ಹೀಂಗೆ ಸ್ಪಷ್ಟಪೇಳಿದಳು| ಪದ ರಾಗ:ತೋಡಿ ತಾಳ ಬಿಲಂದಿ ಮಂದ ಮತಿಯೇ ಕಂದರನ್ನ ಕೂಂದರೇನು ಫಲವೂ| ಇಂದು ಎನ್ನ ಕೂಂದ ವ್ಯೂಲ ಮುಂದೆ ಬರುವದೇನು| 1 ವೈರಿ ಅನ್ಯರಲ್ಲಿ ಇನ್ನ ಬೆಳೆವುತಿಹನೊ| ಮುನ್ನ ಬಂದು ತನ್ನ ಬಲದಿ ನಿನ್ನ ಕೊಲ್ಲುವೊನು 2 ಅಂತಕನ್ನ ನಿಂತು ಕೊಲ್ಲುವ ಭ್ರಾಂತಿ ಬಿಡೆಲೊ ನೀನು| ಅನಂತಾನಂತಾದ್ರೀಶನಂತು ತಿಳುವದೇನೇ|| 3 ಪದ್ಯ ಆ ಮಹಾ ಪಾಪಿ ಗ್ಯಾಡೀ ಮಾತು ದೇವಿ ತಾ ಭೂಮಿಯಲಿ ಬಂದು ಬಹುಗ್ರಾಮದಲೆ ನಿಂತು ಬಹುನಾವು ಉಳ್ಳವಳಾಗಿ ಕಾಮಿತಾರ್ಥಗಳನ್ನೂ ಪ್ರೇಮದಲಿ ಕುಡುತಿಹಳು ನೇಮದಿಂದಾ|| ಆ ಮಾಯಿ ವಚÀನವನು ಪಾಮರನು ತಾ ಕೇಳಿ ರೋಮಾಂಚಗಳು ಉಬ್ಬಿ ನಾ ಮಾಡಿದಲ್ಲೆಂದು ನೇಮದಲಿ ಇಬ್ಬರಿಗೆ ನೇಮಿಸಿದ ಬೇಡಿಯನು ತಾ ಮೋಚನವು ಮಾಡಿ ಪ್ರೇಮದಿ ನುಡದಾ|| 1 ಪದ:ರಾಗ :ಸಾರಂಗ ಅದಿತಾಳ ಸ್ವರ ಮಧ್ಯಮ ಎಲೆ ತಂಗಿಯೆ ಎಲೊ ಶಾಲಕ ಬಲು ಪಾಪಿಯು ನಾನು| ಬಲು ಮಂದಿ ಮಕ್ಕಳನ ಛಲದಿಂದ ಕೊಂದೆ| ತಿಳಿಯದೆ ನಾ ಇಂಥ ಕೆಲಸಕ್ಕೆ ತೊಡಕಿ ಪರಿ ಪಾಪದ ಫಲ ಭೋಗಿಯು ಆದೆ|| 1 ಅಶರೀರದ ವಾಣಿಯು ಹುಸಿ ಅಯಿತು ಇಂದು ವಸುಧಿಯೋಳಿರುವಾ ಮಾನುಷರಾ ಪಾಡೇನು|| ಶಶಿಮುಖಿ ನಾನಿಮ್ಮ ಶಿಶುಗಳ ಕೂಂದೆ||2 ಅಮಿತಾ ಅಪರಾಧಾಯಿತು ಕ್ಷಮಾ ಮಾಡಿರಿ ನೀವು|| ವಿಮಲ ಮನಸಿನಿಂದ ನಮಿಸಿದೆ ನಿಮಗೆ|| ಕಮಲೋದ್ಭವ ಬರದಂಥಾ ಕ್ರಮ ತಪ್ಪದು ಎಂದು ಶ್ರಮಯಾತಕ ಸುಖದುಃಖವ ಸಮಮಾಡಿರಿ ನೀವು|| 3 ತಿಳಗೇಡಿಯು ಆ ಕಂಸ ತಿಳಿಹೇಳಿಪರಿಯು ಸ್ಥಳಬಿಟ್ಟು ತಾ ತನ್ನ ಸ್ಥಳಕ್ಹೋದನು ಬ್ಯಾಗೆ\ ಬ್ಯಳಗಾಗಲು ಎಲ್ಲಾರಿಗೆ ತಿಳಿಸೀದನು ಆಗೆ ಹೊಳುವಾ ದೇವಿಯ ಮಾತುಗಳನೆಲ್ಲ ಬಿಡದೆ || 4 ಖಳರಂದರು ನಾವಿನ್ನ ಇಳಿಯೊಳ್ಹುಟ್ದರುವಾ| ಉಳದಾ ಬಾಲಕೃಷ್ಣಕರನ್ನ ಕೊಲ್ಲು ವುದ ಸತ್ಯಾ| ತಿಳದೀಪರಿ ಅವರನ್ನ ಕಳಸೀದ ಕಂಸಾ ಚಲುವಾನಂತಾದ್ರೀಶನ ಕೊಲ್ಲವೊದು ಎಂದು|| 5 ಪದ್ಯ ಮುಂದ ಗೋಕುಲದಲ್ಲಿ ನಂದಗೋಪನು ತನ್ನ ಕಂದನಾ ಮುಖವನ್ನು ಛಂದದಲಿ ನೋಡಿ ಆನಂದ ಹಿಡಿಸದೆ ತಾನು ಬಂದ ಬಂದವರಿಗ್ಯಾನಂದ ಬಡಸಿದ ಮನಕ ಬಂದದ್ದು ಕೂಟ್ಟು| ನಂದನಂದನನ ವದನೇಂದು ದರ್ಶನಕಾಗಿ ಬಂಧು ಬಾಂಧವರೆಲ್ಲ ಬಂದು ಒದಗಿದರಲ್ಲೆ ದುಂದುಬಿಯು ಮೊದಲಾದ ಛಂದಾದ ವಾದ್ಯಗಳು ಒಂದಾಗಿ ನುಡದÀವಾನಂದದಿಂದಾ| ಗೀತ ಬಲ್ಲವರು ಸಂಗೀತವನು ಮಾಡಿದರು ಪ್ರೀತಿಯಲಿ ಪಾಡಿದರು ಶ್ರೋತ್ರಸುಖರಾಗಿ ಮಾಡಿದರು ಪ್ರೀತಿಯಲಿ ಪಾಡಿದರು ಶ್ರೋತ್ರಸುಖರಾಗಿ ತಾತನವ ತನ್ನಲ್ಲೆ ಜಾತನಾಥಂಥವಗೆ ಜಾತಕರ್ಮವು ಮಾಡಿ ಪ್ರೀತನಾದಾ| ಪ್ರೀತಗೋಕುಲದಲ್ಲಿ ನೂತನೈಶ್ವರ್ಯಗಳು ಜಾತವಾದವು ಸರ್ವಜಾತಿಗಳಿಗ್ಯಾದರೂ ಯಾತಕ್ಕೂ ಕಡಿಮಿಲ್ಲ ಸೋತಂಥ ದಾರಿದ್ರ್ಯ ಯಾತಕಿರುವದು ರಮಾನಾಥ ಇರಲು|| 1 ಸ್ಥಿರ ಮನಸಿನಿಂದಲ್ಲೆ ಸ್ಥಿರವಾಗಿ ಕುಳಿತು ಈ ಚರಿತವನು ಕೇಳಿದವರ ಪರಿಪರಿಯ ಅಭಿಲಾಷ ಪರಿಪೂರ್ಣವಾಗುವದು ಚರಿಸದಲೆ ಅವರಲ್ಲಿ ಸ್ಥಿರಳಾಗಿ ಇರುವವಳು ವರಮಹಾಲಕ್ಷ್ಮೀ| ಧರಿಯೊಳಗ ಇರುವಂಥ ವರಕವೀಶ್ವರರಂತೆ ಸ್ಥಿರವಲ್ಲ ಗೋಕುಲದಲ್ಲಿ ತ್ವರ ಅವನೇ ಮುಗಿಸಿದಿಲ್ಯರಡು ಅಧ್ಯಾಯಾ|| 2 “ಶ್ರೀ ಕೃಷ್ಣಾರ್ಪಣ ಮಸ್ತು” ಎರಡನೆಯ ಅಧ್ಯಾಯವು ಸಂಪೂರ್ಣವು”
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಎರಡು ಮೃಗ ಬ್ಯಾಟಯಲಿ ಹೊರಟ್ಹೋಗುವಾ ಯಕ್ಷಾನುಗರಿಂದ ತಾ ಮೃತನಾಗುವಾ ಮಗ ಬಾರಾನೆಂದು ತಾಯಿ ಮಿಡುಕುತಾ ರಾಜ್ಯ ಅಗಲಿ ಹೋಗ್ವಳು ತಾ ಹುಡುಕುತಾ 7 ಅಂತ:ಕರುಣ ತಾಪದಲಿ ಕಾಡಾಕಿಚ್ಚಿ ನಂತದೊಳಗೆ ಬೀಳೋಳು ಗಾಡಾ ಚಿಂತೆಯಾಕೆ ನೃಪಹೋಗಿನ್ನ ನಿ ಶ್ಚಿಂತೆಯಿಂದಲಿ ರಾಜ್ಯ ಮಾಡಿನ್ನ 8 ಎಂದು ಹಸ್ತವ ಶಿರದಲ್ಲಿಟ್ಟು ಆ ನಂದದಿಂದಲಿ ವರಗಳನು ಕೊಟ್ಟು ಮುಂದನಡೆದ ಪಕ್ಷಿವಾಹನನು ಜಗ ದ್ವಂದ್ಯ 'ಶ್ರೀ ಅನಂತದ್ರೀಶ' ನು 9 ಪದ ಆದಿ ಮೂರುತಿ ಶ್ರೀರಮೇಶಾ ತನ್ನ ಧಾಮಕ್ಕ್ಹೋದನು ಮೋದರಹಿತನಾಗಿ ಬಾಲದೀರ್ಘ ಉಸುರಗಳದನು ಪೋದನೆಂದು ದು:ಖದಿಂದ ತಿರುಗಿ ಪುರಕ ನಡದನು ಯಾದವೇಶ ಹಾ ಮುರಾರಿ ಎಂದು ಆಗ ನುಡದನು 1 ಪೂರ್ವ ಪುಣ್ಯದಿಂದ ನಿನ್ನ ರೂಪ ಯನಗ ತೋರಿದಿ ಶರ್ವಮಿತ್ರಯೆನ್ನಾ ವಿಷಯ ಮಡುವಿನೊಳಗ ಹಾಕಿದಿ ಸರ್ವಕಾರ್ಯ ಬಿಟ್ಟು ಕರುಣಾದಿಂದ ಆಗ ನೋಡಿದಿ ಗರ್ವಯುಕ್ತನಾಗಿ ಯನ್ನಬಿಟ್ಟು ಈಗವೋಡಿದಿ 2 ಸಿಕ್ಕಿದಂಥ ದಿವ್ಯಮಾಣಿಕ್ಯ ಕಳದಂತಾಯಿತು ಫಕ್ಕನೆದ್ದು ಕುಳಿತು ಕಂಡಾಕನಸಿನಂತಾಯಿತು ಮಿಕ್ಕ ವಿಷಯ ಭೋಗ ಬೇಡಿ ಜನ್ಮ ವ್ಯರ್ಥವಾಯಿತು ತಕ್ಕ ಮುಕ್ತಿ ಬೇಡಲಿಲ್ಲಾ ಯನ್ನ ಬುದ್ಧಿ ಹೋಯಿತು 3 ಕ್ಲೇಶ ಬಿಟ್ಟು ಈಗ ಬಹಳ ವಿಷ್ಯ ಸೌಖತು” ಏಸು ಜನ್ಮ ಪೂಜೆ ಮಾಡಿದಾರು ದೇವ ದೊರಕನು ಮಾಸ ಪಂಚದಿಂದ ಯನ್ನ ದೃಷ್ಟಿ ವಿಷಯ ನಾದನು 4 ಆಶಿಇಂದ ಆಗ ವಿಷಯ ಸËಖ್ಯವನು ದೈವಕೆ ಮಾಡಿಕೊಂಡು ಹೀಂಗ ಮನಸ್ಸಿನಲ್ಲಿ ಬಂದ ಪಟ್ಟಣಕೆ ಕೊಂಡ ಪುರಸಮೀಪಕೆ 5 ಶ್ಲೋಕ ಆಗ ನೋಡಿದ ಒಬ್ಬ ಧ್ರುವನ್ನಾ ವೇಗ ಪುಟ್ಟಿತು ಮನಸಿಗೆ ತನ್ನ ಬ್ಯಾಗ ಪೇಳಿದ ಅರಿಸಿನ ಮುಂದಾ ಬಾಗಿ ಬಿನ್ನಯಿಸಿ ತಾನಯ ದಿಂದಾ 1 ಪದ ರಾಜಭೂಪಾನೆ ನಿನ ಕಂದ ಬಂದಾ|| ಪೂಜಿಸಿ ದೇವೇಶನ ಛಂದದಿಂದ || ಪರಿಪರಿಯಿಂದಾ ಗುರುಕೃಪೆಯಿಂದಾ | ತಿರುಗಿ ಇಲ್ಲಿಗೆ ಕ್ಷೇಮದಿಂದಲಿಂದಾ 1 ಪುಣ್ಯಗಳಿಂದಾರಣ್ಯದಲಿಂದಾ ಸಣ್ಣಬಾಲನು ಭಾಳನಂದದಿಂದಾ 2 ಅನಂತರದಿಂದಾ ಅನಂತ ಸÉೀವಿಂದಾ 'ನಂತ್ರಾದೀಶನಾ’ ದಯದಿಂದ ಲಿಂದಾ 3 ಆರ್ಯಾ ಕಾಂಬೆನು ಯಂದಾ ಹುಟ್ಟಿತು ಆನಂದಾ1 ಪದ ರಾಗ :ಶಂಕರಾಭರಣ ಆದಿತಾಳ ಸುದ್ದಿ ಹೇಳಿದಾತಾಗೆ ಬೇಕಾದ್ದು ಕೊಟ್ಟು ಹರುಷದಿಂದ ಯದ್ದು ರಥವಾನೇರಿ ತಾ ಸನ್ನದ್ಧ ನಾದನು 1 ಇಬ್ಬರ ಹೆಂಡಿರ ಕೂಡಿ ಒಬ್ಬ ಪುತ್ರನಿಂದ ಕೂಡಿ ಅಬ್ಬರದಿಂದಲಿ ತಾ ಉಬ್ಬುಬ್ಬಿ ನಡದಾನು 2 ಮಂತ್ರಿಗಳು ವಿಪ್ರಾರು(ಗಳು) ಮಂತ್ರಜ್ಞಾರು ಮಾನವಾರು ಸಂತ್ರೋಧಾರ ನಡದಾರು ಬಜಂತ್ರಿ ಘೋಷಾದಿ 3 ಮೃದಂಗ ಘೋಷ ಸಾರಿಸಾರಿ ನುಡದಾವು ಅಬ್ಬಾರದಿಂದಲಿ 4 ತಂಬೂರಿಘೋಷಾ ಜಾಣೆ ರಾಮಂಜುಳಗೀತಾವಾಣಿ ಘೋಷಾವು 5 ಅಂಗಾನೇರು ಕುಂಕುಮಾದಿ ಮಂಗಲ ಭೂಷಾದಿಂದ ಶೃಂಗಾರಿಸಿ ಕೊಂಡಾರು ಕುರಂಗ ನೇತೆÀ್ರರು 6 ಧಟ್ಟಿ ಪೀತಾಂಬರನುಟ್ಟ ಬಟ್ಟಾ ಕುಚದಲ್ಯೊಪ್ಪುವಾ ಕಠ್ಠಾಣಿ ಮೋಹನ ಮಾಲೆನಿಟ್ಟು ಕೊರಳಿಗೆ 7 ರಂಬೇರು ವೀಳ್ಯವ ಮೆದ್ದು ತಾಂಬೂಲಗಲ್ಲಾದಲ್ಯೊತ್ತಿ ತುಂಬಿ ಹರುಷದಿಂದ ಚಂದ್ರ ಬಿಂಬ ಮುಖಿಯರು 8 ಮೀರಿದಾ ಸಂಭ್ರಮದಿ ಶೃಂಗಾರವನು ಮಾಡಿಕೊಂಡು ಥೋರಾಗನ್ನಡಿಲಿ ತಮ್ಮ ಮಾರಿ ನೋಡೋರು 9 ಕುಡಿಗಣ್ಣ ನೋಟಾದವರು ನಡಸಣ್ಣಾದಿ ಬಳಕುವರು ಮಂದ ನಡಗಿ ವಂತರು 10 ಪಟ್ಟಾಣದಿಂದಲಿ ವಳ್ಳೇ ಧಿಟ್ಟನಾರಿಯರು ಕಾಲಾ ಬಟ್ಟಿನಲಿ ಕಾಲುಂಗುರ ಮೆಟ್ಟಿ ನಡದಾರು11 ಪರಿಪರಿ ವಿಲಾಸದಿಂದ ಕರದಲ್ಲಿ ಕರತಳಾನಿಕ್ಕಿ ಕಿರಿನಗಿಯಿಂದಲ್ಲೆ ನಗುತಾ ಬರುವುತೀಹರು 12 ಹಿಂಡುಜನರಾಗಳ ಕೂಡಿಕೊಡು ರಾಜಾಬಂದು ಮಗನಾರಥವಾನಿಳುದು ಅಪ್ಪಿಕೊಂಡಾ ಹರುಷದಿ 13 ಮೂಸಿ ನೋಡಿತನ್ನ ಜಲಜಾ ಲೋಚನಗಳಿಂದ ಜಲವಾಧರಿಸಿದ 14 ಛಂದಾದಿ ಬಾಲಾನು ತನ್ನ ತಂದಿ ಪಾದಾದೊಳು ಯರಗಿ ಪಾದ ಬಂದು ಯರಗಿದ 15 (ತಾಯಿಯರ ಪಾದಗಳಿಗೆ ಪೋರ ಬಂದು ಯರಗಿದ) ಸಾಧುತಂದಿತಾಯಿ ಆಶೀರ್ವಾದ ಯುಕ್ತನಾಗಿ ತನ್ನ ಮೋದ ಬಟ್ಟಾಳು 16 ಏಳಯ್ಯಾ ಎಳಯ್ಯಾಯೆಂದು ಭಾಳಾನಂದಾದಿಂದ ಲ್ಯಪ್ಪಿ ಭಾಳಾಯುಷ್ಯಾವಂತನಾಗೊ ಬಾಲಾಯೆಂದಾಳು 17 ಉತ್ತಮ ಧ್ರುವನು ತಾತಾ ಗುಣೋತ್ತಮ ಇಬ್ಬರು ಕೂಡಿ ಅತ್ಯಂತ ಹರುಷಗೊಂಡಾರಂತ:ಕರುಣದಿ 18 ಇಂದಿಗೆ 'ಅನಂತಾದ್ರೀಶಾ’ ಹೊಂದಿಸಿದಾ ನಮ್ಮಿಬ್ಬರಾ ನೆಂದು ಮಾತನಾಡಿದರು ಕಂದರಿಬ್ಬಾರು 19 ಛಂದ ಹೆತ್ತ ತಾಯಿಗೆ ಚಿತ್ತಸಂಭ್ರಮಾ ಮತ್ತ ಜನರಿಗೆ ಚಿತ್ತ ವಿಭ್ರಮಾ ಪುತ್ರನಷ್ಟಿ ತಾ ಯೆತ್ತಿಕೊಂಡಳು ಸುತ್ತ ಚಿಂತಿಯಾ ಮರ್ತುಬಿಟ್ಟಳು 1 ಸುಂದರಾಂಗಿಯ ಆನಂದ ಬಾಷ್ಪದಾ ಬಿಂದು ಸ್ನಾನವು ಕಂದ ಮಾಡಿದಾ ಮುಂದ ರಥದಲ್ಲಿ ಬಂದು ಕುಳಿತನು ಮುಂದಿರುವ ಬಾಲನ ಒಲಿದು ನೋಡುತಾ ಮೊಲಿಯ ಪಾಲು ಚೆಮ್ಮಿ ತಲಿಯಲಿ ಹರುತಾ ಹಲವು ರಾಜ್ಯಕೆ ಮುಂದ ಸೂಚನಾ2 ಕುದರಿಸೈನ್ಯದಿಂದ ನಡದನು ಭಾಳ ಬಿರುದಿನಾ ಕಾಳಿ ಊದುತಾ ತಾಳ ವಾದ್ಯವು ಭಾಳ ನುಡುವುತಾ ಕೇಳಿಪುರದಲ್ಲಿ ಬಾಲಪುರುಷರು ಮಾಳಿಗಿಯಲಿ ಭಾಳ ನಿಂತರು 3 ಉತ್ತಮಾರ್ಯರು ಮತ್ತ ಸ್ತ್ರೀಯರು ಹತ್ತಿ ಮಾಳಿಗಿ ಸುತ್ತ ನಿಂತರು ಯೆತ್ತ ನೋಡಲು ರತ್ನ ಭೂಷಿತಾ ಉತ್ತುಮಾ ಪುರಿ ಭರ್ತ ಪಾಲಿತಾ 4 ಸಾಲು ಸಾಲಕೆ ವಿಶಾಲ ಮಂಟಪಾ ಸಾಲ ದೀಪದಿ ಭಾಳ ಶೋಭಿಪಾ ಸೆಲ (ಚೆಲ್ವ?) ಮುತ್ತಿನ ಸಾಲಯಳಿಗಳು ಮ್ಯಾಲ ಮಲ್ಲಗಿ ಮಾಲಕಿಗಳು 5 ಆರ್ಯಾ ಮಂದ ಮಾರುತಾನಿಂದ ಭಾಳಮಕರಂದ ಪುಷ್ಟದಾ ವಾಸನವು ಮುಂದ ಪತಾಕಿಗಳಿಂದ ಕಣ್ಣಿಗೆ ಛಂತ ತೋರಿಪಾ ಪಟ್ಟಣ್ಣವು 1 ವೇಗದಿಂದ ರಥ ಸಾಗಿಸಿ ಧ್ರುವ ಛಂ ದಾಗಿ ನಡೆದನು ಪುರದೊಳಗೆ ಬ್ಯಾಗ ಗೋಪುರದ ಬಾಗಿಲದಾಟಿ ಪೋಗಿ ಕುಳಿತನು ಸಭಿಯೊಳಗೆ 2 ಬಾಲನ ಕಂಡು ಭೂಪಾಲನು ಹಿಗ್ಗುತಾ ಭಾಳಪುಟ್ಟಿ ಮನದುದ್ರೇಕಾ ಕಾಲ ಮೂಹೂರ್ತದ ವ್ಯಾಳಯವು ಸಾಧಿಸಿ ಬಾಲಗ ಮಾಡಿದ ನಭಿಷೇಕಾ3 ಕೊಟ್ಟರಾಜ್ಯವನು ಪಟ್ಟಗಟ್ಟಿ ಮುಂ ದಿಟ್ಟ ಶಿಖಾ ಮುದ್ರಿಕಿಯನ್ನು ಅಷ್ಟ ವಿಭೂತಿಗ¼ಷ್ಟು ಕೊಟ್ಟು ಸಂ ತುಷ್ಟನಾದ ಭೂಪತಿ ತಾನು 4 ಛಂದದಿ ದೇವರಿಗೊಂದಿಸಿ ಧ್ರುವ ಆ ನಂದದಿ ಬ್ರಾಹ್ಮರಿಗೆರಗಿದನು ತಂದಿ ತಾಯಿಗಳಿಗೊಂದಿಸಿ ಬಹುತ್ವರ ದಿಂದ ಏರಿದಾ ಪೀಠವನು 5 ಸುಂದರ ಸಭಿಯಲಿ ಬಂದು ಕೂಡಲು ದೇ ವೇಂದ್ರನಂತೆ ಬಹು ಶೋಭಿಸಿದಾ ಬಂಧು ಜನರಿಗ್ಯಾನಂದವ ತೋರುತ ಚಂದ್ರಮನಂತೆ ಶೋಭಿಸಿದ 6 ಝಗಿಝಗಿ ತೋರುವ ಬಗಿಬಗಿ ಕುಪ್ಪುಸ ಬಿಗಿಬಿಗಿ ಇಂದಲಿ ತೊಟ್ಟವರು ಲಗು ಬಗೆಯಿಂದಲಿ ನಗಿನಗಿ ಮಾತಿನ ಸೊಗಸು ಗಾರಿಕೆ ಬಲ್ಲವರು 7 ಥೊರಮುತ್ತು ಜರತಾರ ಮಯದ ಉಡ ಗೊರಿ ತಂದರು ಆ ಜನರು ಸಾರ ಸಿಂಹಾಸನಯೇರಿದ ಧ್ರುವನಿಗೆ ಆರುತಿ ತಂದರು ನಾರಿಯರು 8 ಮುತ್ಹಚ್ಚಿದ ಹೊಸ ನತ್ತುಗಳಿಂದಲಿ ಮತ್ತಿಷ್ಟೊಪ್ಪುವ ಮುಖದವರು ಪುತ್ಥಳಿ ಸರಘುನ ಮುತ್ತಿನ ಸರಗಳು ಉಳ್ಳವರು9 ಹತ್ಹೊರಷುದ ಮ್ಯಾಲ್ಮತ್ತೆರಡೊರ್ಷದ ಉತ್ತಮ ಪ್ರಾಯದ ಬಾಲಿಯರು ಮತ್ತ ಕಾಲುಂಗರ ವತ್ತೊತ್ತಿ ನಡುವುತ ಗತ್ತಿನಿಂದಲೆ ನಡುವುವರು 10 ಪದ ತಂದ್ರು ಆರುತಿ ಚಂದ್ರ ಮುಖಿಯಾರು ತಂದ್ರು ಆರುತಿ ಬಹು ಸುಂದರ ಸುಗುಣೇರು ಪ ಚಂದುಟಿ ಕಚ್ಚುತ ನಿಂದ್ರದ ಮದದ ಗ ಜೇಂದ್ರ ಗಮನಿಯರು ಬಂದ್ರಾಗಲೇ ದೇ ವೇಂದ್ರನ ಸಮರಾಜೇಂದ್ರನÀ ಸುತಗೆ ಅ.ಪ ಬಣ್ಣಗಾರಿಕೆಯಲಿ ಸಣ್ಣಕುಂಕುಮನಿಟ್ಟ ಕಣ್ಣಕುಡಿ ಹುಬ್ಬು ಕುಣಿಕುಣಿಸ್ಯಾಡುತ ಹೆಣ್ಕೋಕಿಲ ಸ್ವರ ಸಣ್ಕಂಠದಿ ನುಡಿ ಸಣ್ಕದಿ ಪಾಡುತ 1 ಕೈ ಬೆರಳಿಗೊಪ್ಪುವ ಹರುಳಿನುಂಗುರ ಇಟ್ಟವರು ಯರಳಿಯಂತೆ ಹೊರಹೊರಳಿ ನೋಡಿ ಮುಂ ಗುರುಳ ಗೂದಲಾ ತೀಡುವರು ಜಾಣಕಾಂತಿಯರು 2 ಮೇಲ್ಮಾಟದ ಬಗಿಯುಲ್ಮಾತಾಡುತ ಬಲ್ಮೋಹದಿ ಬಹು ಮೆಲ್ಲಮೆಲ್ಲನೆ ಹೆಜ್ಜೆ ನೆಲ್ಲ ಮ್ಯಾಲಿಕ್ಕುತ ಸೊಲ್ಮುಡಿನೇವರಿಸಿ ಮ್ಯಾಲ್ಮಲ್ಲಿಗಿ ಸರಗಳ ಮುಡಿಯವರು 3 ಸದ್ರಸ ಕುಂಕುಮ ಮುದ್ರಾಂಕಿತ ಕುಚ ಘದ್ರಿಸುತಲಿ ಬಹು ಉದ್ರೇಕದಿ `ಅನಂತಾದ್ರೀಶನ ' ಮುದ್ರಿಕಿ ಪದಗಳು ಘದ್ರಿಸಿ ನುಡಿವುತಾ ಭದ್ರಾಂಗಿಯರು 4 ಪದ ಮಂಗಳ ಮೂರುತಿ ಬಾಲಾಗೆ ಶ್ರೀ ನೃಪಾಲಾಗೆ ಮಂಗಳ ಗುಣಶೀಲಾಗೆ ಮಂಗಳಮೂರುತಿ ಛಂದಾ ಬಗಿಯಿಂದಾ ಪ ಶುಭದಿಂದಾ ಆನಂದದಿಂದಾ ಅಂಬೂಧಿಯೊಳಗಾಡಿ ಗಂಭೀರಾಗಿರಿಪೊತ್ತಾ ಜಾಂಬುನದಾಕ್ಷಾರಿ ವರ ಪ್ರಿಯಾಗೆ ಗಂಭೀರಾ ನೃಸಿಂಹಾನ ನೆಂಬಿ ರಕ್ಷಿತ ನೀಗೆ ರಂಭೇರು ಕರುಣಾದಿ ನೋಡಿ ಒಡಗೂಡಿ ಕೊಂಡಾಡಿ ತ್ವರಗೂಡಿ ಪಾಡಿ 1
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಐದು ಶ್ರೀ ಕಾಲಿಯ ಫಣಾರ್ಪಿತ ಪಾದಾಂಬುಜಾಯನಮ ಶ್ರೀ ಗುರುಭ್ಯೋನಮಃ ಪದ, ರಾಗ ಸೌರಾಷ್ಟ ತಾಳ ತಿವಿಡೆ ಸ್ವರ ಋಷಭ ಬಿಡದೆ ಕೃಷ್ಣನ ಅಪ್ಪಿ ತಾಯಿಯು ನಡದಳಾ ಗೃಹಕಾರ್ಯದಲ್ಲೆ ನಡೆದವನು ಜೋಡ್ಯರಡು ಮತ್ತೀ ಗಿಡಗಳಿದ್ದಲ್ಲೇ ನಡೆದವುಗಳ ಮತ್ತವು ತಡದು ಅಡ್ಡಾಯಿತು ಊಲೂಬಲ ಕಡಕಡೆನುತಲಿ ಕಡದು ಬಿದ್ದವುಗಿಡಗಳವು ಎರಡು|| 1 ಪತಿತ ವೃಕ್ಷಗಳಿಂದ ಹೊರಟರು ಅತಿಸುರೂಪರು ಅತಿ ಮದೋನ್ಮತ್ತರು ಕುಬೇರನ ಸುತರು ಮಂಚೆವರು| ಪೃಥಿವಿಯಲಿ ತರುಜನ್ಮಕೊಂಡರು ಪ್ರಥಮ ನಳಕೂಬರನು ಎನಿಸುವ ದ್ವಿತಿಯ ಮಣಿಗ್ರಿವಾ|| 2 ವೃಕ್ಷ ಜನ್ಮದಿ ಮುಕ್ತರಾದರಧೋಕ್ಷಜನ ದಯದಿಂದ ಇಬ್ಬರು ವೃಕ್ಷ ಶಬ್ದವ ಕೇಳಿ ನೆರೆದರು ಆ ಕ್ಷಣಕೆ ಜನರು ಲಕ್ಷ್ಮಿ ಇಲ್ಯಲ್ಲರಿಗೆ ಹರಿ ಪುತ್ಯಕ್ಷ ಅಲ್ಲಿರಲು|| 3 ತನ್ನ ಮಗನಾಟವನು ತಿಳಿಯದೆ ಚನ್ನಿಗನು ಆನಂದಗೋಪನು ಮುನ್ನವನು ಕರಕೊಂಡು ನಡಿದನು ಕಣ್ಣಿಯನು ಬಿಟ್ಟಿ|| ಆದಾವೆಂದು ಚಿಂತಿಸಿ ತನ್ನ ಮನದೊಳಗೆ 4 ಹೂಡಿ ಭಂಡಿಗಳನ್ನು ಮರುದಿನ ಮಾಡಿಸಿದ್ಧವು ಎಲ್ಲರಿಂದಲಿ ಕೂಡಿ ವೃಂದಾವನಕ ಪೋಗುತ ಮಾಡಿದಾಶ್ರಯವು | ನೋಡಿ ಆ ವೃಂದಾವನ ಸ್ಥಳ ಗಾಢ ಹರುಷದಲಿ ಬಾಲರೆಲ್ಲರು ಕೂಡಿದರು ಕುಣಿದಾಡಿದರು ಙಡ್ಯಾಡಿದರು ಅಲ್ಲೆ5 ಸ್ವಚ್ಛ ಯಮುನಾ ತೀರದಲಿ ತನ್ನಿಚ್ಛಿಯಿಂದ ವಿಚಾರ ಮಾಡುವ ವತ್ಸಗಳ ಕಾಯುವನು ತಾ ಶ್ರೀ ವತ್ಸಲಾಂಧನನು| ವಂತ್ಸರೂಪದಿ ಬಂದ ಅಸುರನ ಪುಚ್ಛ ಹಿಂಗಾಲ್ಹಿಡದು ತಿರಿಗಿಸಿ ಉತ್ಸವದಿ ಮ್ಯಾಲೊಗೆದ ಬಿದ್ದಾವತ್ಸಹತವಾಗಿ|| 6 ನಳಿನನಾಭನು ಮುಂದ ಆತರಗಳಿಗೆ ತಾ ನೀರಕುಡಿಸಿ ತೀರದ ಮಳಲಿನೂಳಗಾಡುವನು ಮತ್ತಾ ಗೆಳೆಯರನ ಕೂಡಿ| ಖಳ ಅಸುರ ಬಕಪಕ್ಷಿ ರೂಪದಿ ಸುಳದು ಮೆಲ್ಲನೆ ಬಂದು ಬಾಲಕರೂಳಗಿರುವ ಕೃಷ್ಣನ್ನ ತಾ ಬಾಯ್ವಳಗ ನುಂಗಿದನು||7 ಸುಡುವ ಕೃಷ್ಣನ ಉಂಡು ದಕ್ಕಿಸಿಕೊಳದೆ ಘಾಬರಿಗೊಂಡು ಕಾರಿದನು| ತುಂಡು ಮಾಡಿಯೊಗದಾ||8 ಘಾಸಿ ಆಗದೆ ಉಳದನೆಂದು ತೀಸವಾಗ್ಯಲ್ಲಾರು ಬಹಳುಲ್ಹಾಸವನು ಬಟ್ಟು ಏಸುಕಾಲಕೆ ಬಿಡದೆ ನಮ್ಮನ್ನು ಘಾಸಿಮಾಡದೆ ಗುರು ಅನಂತಾದ್ರೇಶ ರಕ್ಷಿಸುವೋನು ಎಂದು ಆ ಸಮಯದಲ್ಲಿ 9 ಪದ್ಯ ಸಾಧು ಹಿತಕರ ಕೃಷ್ಣಯಾದವರಲ್ಯವ ತರಿಸಿ ಐದು ವರ್ಷಾದ ಮ್ಯಾಲ್ಕಾಯ್ದನು ಆಕಳುಗಳನು ಆದರದಿ ಮತ್ತು ರಾಮಾದಿಗಳಕೂಡಿ ಬೇಕಾದ ಆಟಗಳಾಡಿ ಅನುಸರಿಸಿ ಆ ಧೇನುಕಗಳ ಕೂಡಿ ಸ್ವಾದು ಫಲಗಳು ಕೋಮಲಾದ ತೃಣ ಇದ್ದಲ್ಲೆ ಆದಿಯಲಿ ಬಲರಾಮ ಹಾದಿಯನು ಮಾಡಿ ಮುಂಧೋದ ಆ ಸ್ಥಳಕ್ಕೆ || 1 ನೋಡ್ಯಲ್ಲೆ ತಾಳಾಖ್ಯ ಪ್ರೌಢ ವೃಕ್ಷಗಳನ್ನು ಆ ಫಳಗಳನ್ನು ಪ್ರೌಢಫಲಗಳು ನೋಡಿ ಅಬ್ಬರದಿಂದ ಓಡಿ ಬಂದನು ಅಸುರ ಕೂಡಿ ತನ್ನವರಿಂದ ಕಾಡ ಖರರೂಪಿ ಅವ ಮಾಡಿ ಕ್ರೂರಧ್ವನಿಯ ಮಾಡಿದನು ಮೂಢಧೇನುಕನು 2 ಖಡುಕೋಪದಲಿ ರಾಮ ಹಿಡಿದು ಹಿಂಗಾಲುಗಳ ತಡಿಯದಲೆ ತಿರಿವ್ಯಾಡಿ ಗಿಡದ ಮ್ಯಾಲೊಗದ ಆ ಗಿಡಕ ಭಾರಾಗ್ಯವನು ಗಿಡಸಹಿತ ಪ್ರಾಣ ವನು ಬಿಡುತಲೆ ಬಿದ್ದನು ತೆಳಗೆ ತಡವು ಇಲ್ಲದಲೆ| ಬಿಡದೆ ವಸುದೇವಜರು ಬಿಡಿ ಮೆಂದಿಗಳ ಕೊಂಡು ಖಡು ಹರುಷದಿಂದಲ್ಲೆ ಬಿಡದೆ ಗೋಪಾಲರಿಂದೊಡಗೂಡಿ ಎಲ್ಲಾರು ಖಡು ರುಚಿಕರಾಗಿರುವ ಗಿಡದ ಫಲಗಳ ತಿಂದು ನಡದರಾಲಯಕೆ|| 3 ಬಂದು ದಿನದಲಿ ದಿವಿಜವಂದಿತನು ಶ್ರೀ ಕೃಷ್ಣವಂದಿಸ್ಯಗ್ರಜಗ ಅವನ ಮಂದಿರದಲಿಟ್ಟು ಬಹು ಛಂದವಾಗಿರುವ ಕಾಳಿಂದಿಯಾ ತೀರದಲಿ ಬಂದÀ ಗೋಗೋಪಾಲ ವೃಂದವನು ಕಾಲಂದಿಯಲಿ ವಿಷಜಲವು ಛಂದಾಗಿ ಕುಡದುಮರಣ ಬದಿಕಿಸಿದ ಗೋವಿಂದ ಎಲ್ಲಾರನಾ|| 4 ಚಾರು ಕಾಲಿಂದಿಯಲಿ ನೀರು ವಿಷವಾದಕ್ಕೆ ಕಾರಣ ಹುಡುಕುವೆನೆಂದ ಶೌರಿಸುತ ಶ್ರೀಕೃಷ್ಣಸಾರ ಕಡಹಾಲ ಮರನೇರಿ ಆ ಮಡಿವಿನಲಿ ಹಾರಿದಾಕ್ಷಣಕ್ಕೆ ಉಕ್ಕೇರಿದಳು ಸಾರ ಮದಗಜದಂತೆ ನೀರೊಳಗೆ ಗಡಬಡಿಸಿ ಸಾರ ಸರ್ಪನ ಹಿಡಿದ ಕ್ರೂರನವ ಮೈಮ್ಯಾಲೇರಿ ಕಚ್ಚುತ ತನ್ನ ಶರೀರಪಾಶದಿ ಹರಿ ಶರೀರ ಸುತ್ತಿದನು||5 ದುಷ್ಟಾಹಿಯಿಂದ ನಿಶ್ಚೇಷ್ಟನಾದನು ಕೃಷ್ಣದೃಷ್ಟಿಯಿಂದಲಿ ನೋಡಿ ಅಷ್ಟು ಗೋಗಳು ಮತ್ತೆ ಅಷ್ಟೆಗೋಪಾಲಕರು ಕಷ್ಟವನು ಬಟ್ಟು ಉತ್ಕøಷ್ಟ ತಾಪದಲೆ ನಿಶ್ಬೇಷ್ಟರಾದರು ಅಲ್ಲೆ ಕಾಷ್ಟಮೂರ್ತಿಗಳಂತೆ ಸ್ಪಷ್ಟತೋರಿದರು| ಗೋಷ್ಟದಲಿ ಮತ್ತೆಲ್ಲ ದುಷಚಿನ್ಹವು ಕಂಡು ಶೇಷ್ಠ ನಂದಾದಿಗಳು ಕÀಷ್ಟದನು ಬಟ್ಟಸಂತುಷ್ಟರಾಮನ ಕೂಡಿ ಅಷ್ಟೂರು ನಡದರಾ ವೃಷ್ಣಿಕುಲ ತಿಲಕ ಶ್ರೀಕೃಷ್ಣ ಇದ್ದಲ್ಲೆ||6 ಮುಂದವನ ತಾಯಿ ಆಕಂದನಾ ಕಂಡು ಕಾಳಿಂದಿಯಲಿ ಧುಮುಕಬೇಕೆಂದು ಧಾವಿಸಲಾಗಿ ಮಂದಗಮನಿಯರೆಲ್ಲ ಹಿಂದಕ್ಕ ಸರಿಸಿದರು ನಂದಗೋಪನ ಹಿಡಿದು ಹಿಂದಕ್ಕ ಸರಿಸಿದನು óಛಂದದಲಿ ರೋಹಿಣಿಯ ಕಂದ ಬಲರಾಮಾ| ಮುಂದೆರಡು ಫಳಿಗಿ ಮ್ಯಾಲೆ ಛಂದಾಗಿ ಎಚ್ಚÀ್ಚರಿಕಿಯಿಂದ ಸರ್ಪನ ಹಿಡಿದು ಹಿಂದೊತ್ತಿ ಹೆಡಿಮೇಲೆ ಛóಂದಾಗಿ ಮಂದ ಹಾಸ್ಯದಿ ನಗುತ ನಂದಸುತ ಕುಣಿದ ಆನಂದದಿಂದಾ|| 7 ಪದ, ರಾಗ:ಆನಂದ ಭೈರವಿ ಆದಿತಾಳ ರಂಗ ಕುಣಿದ ಕಾಳಿಂಗನ ಹೆಡಿಮ್ಯಾಲ ಕಂಗಳಿಂದಲಿ ನೋಡಿ ಹಿಂಗದೆ ಸುರಕಿಲ್ಲ ಸಂಗೀತ ಸಹಿತ ಸಾರಂಗ ಮೃದಂಗ ತಾಲಂಗಳ ನುಡಿಸಿದರು ಹಿಂಗದಲೆ||ಪ ಹಿಂಗದೆ ಯಮುನಿ ತರಂಗಗಳಿಂದಲೆ ಮಂಗಳಾಂಗನ ಪಾದಂಗಳ ತೊಳುವಳು | ಅಂಗಾಲಿಲ್ಯವನು ಕಾಳಿಂಗನ ಮರ್ದಿಸಿ ಮಂಗಳ ಕೂಡುವ ಜಗಂಗಳಿಗೆ | ಮಂಗಳಕರ ಪುಷ್ಟಂಗಳ ದೃಷ್ಟಿಯ ರಂಗಗ ಮಾಳ್ಪರು ಹಿಂಗದೆ ದಿವಿಜರು ಭೃಂಗಕೋಕಿಲ ಮಯೂರಂಗಳು ಮಾಳ್ಪವು ರಂಗನ ಸಂಗಾತ ಸಂಗೀತವು|| 1 ಮುನ್ನಾಗಿ ಬಹುವರ್ಷ ತನ್ನ ಸಂದರ್ಶನವನ್ನು ಬಯಸುವಂಥ ಮಾನ್ಯಾದ ಮುನಿಗಳಿಗೆ ಚೆನ್ನಾಗಿ ಶ್ರೀಹರಿ ತನ್ನ ಕೃಷ್ಣರೂಪವನ್ನು ತೋರಿಸುತ ಪ್ರಸನ್ನನಾಗಿ| ಉನ್ನತವಾಗಿಹ ಪನ್ನಗಾಧೀಶನ ಉನ್ನತವಾಗಿಹ ಘನ್ನ ಹೆಡಿಗಳಲ್ಲಿ| ರನ್ನದಂಥೊಳುವಂಥಾ ತನ್ನ ಪಾದಗಳಟ್ಟು ತನ್ನಂಗಡ ಧಿನ್ನಂ ಗಡ ಧಿಕ್ಕಡ ಥೌ ಎಂದು|| 2 ಎಂತು ವರ್ಣಿಸಲಿ ಅನಂತ ಮಹಿಮಿಯು ಎಂಥವರಿಗೆ ಬಹಿರಂತವ್ರ್ಯಾಪತನಾಗ್ಯನಂತ ಪ್ರಾಣಿಗಳಲ್ಲಿ ನಿಂತಿರುವಾ| ಅಂತ್ಹತ್ತಗುಡದೆ ತನ್ನಂತೆ ತಾ ಕುಣಿದಾಡುವಂಥದಗನ್ಯ ದೃಷ್ಟಾಂತವೆಂಬುದಿಲ್ಲ ಇಂಥ ಎಲ್ಲರು ಭ್ರಾಂತರಾಗಿ|| 3 ಆರ್ಯಾ ಪದ, ರಾಗ :ಜಾಂಗಲಾ ಶ್ರೀ ಪತಿಯೇ ನಮ್ಮ ಪ್ರಾಣಪತಿಯ ಪಾಲಿಸು ಶ್ರೀ ಪತಿಯೆ|| ಪ ಪತಿಯು ಪಾವಿತನಾದ ಹಿತವಾಯಿತು||1 ಫಣಿಯ ಫಣಗಳಲ್ಲಿ ಪ್ರಣಯದಲಿ ಕಾಲಿಟ್ಟ ಶುಣಿಕುಣಿ ದಾಡಿದ್ದು ಗುಣವಾಯಿತು|| 2 ಮುದ್ದು ಮುಖದ ಅನಂತಾದ್ರೀಶ ದುಃಖ ಸಮುದ್ರದಿಂದ ನಮ್ಮನ್ನು ಉದ್ಧಾರ ಮಾಡು 3 ಆರ್ಯಾ ಕೃಷ್ಣ ವೇಣಿಯರ ಕಷ್ಟನೋಡಿ ಶ್ರೀ ಕೃಷ್ಣ ಅವನ ಬಿಟ್ಟನುಬ್ಯಾಗೆ| ಕೃಷ್ಣನೇ ಸಾಕ್ಷಾದ್ದಿಷ್ಣುನೆಂದು ಆ ಕೃಷಸರ್ಪ ನುಡಿದನು ಹೀಂಗೆ|| 3 ಭಕುತಿಯ ಕೊಡು ಮೋಹನಾ|| ಪ ಚನ್ನಾಗಿಕೊಡು ನೀನಿನ್ನಲ್ಲಿ ಧ್ಯಾನಾ||1 ಲೋಕನಾಥನೆ ನಿನ್ನ ತೋಕನೆಂದರಿತು|| 2 ಹರಿಯೆ ಅನಂತಾದ್ರಿ ದೊರಿಯೆ ಎಂದೆಂದು|| 3 ಆರ್ಯಾ ಕಾಳಿಯ ನುಡಿಯನು ಕೇಳುತ ಶ್ರೀ ಪತಿ ಭಾಳ ಪ್ರೇಮದಲಿ ಹೀಗೆಂದಾ | ಹೇಳುವೆ ಕಾಳಿಯ ಕೇಳ್ಯನ್ನಯ ವಚನಾ ಏಳು ಶೀಘ್ರದಲಿ ಇಲ್ಲಿಂದಾ|| 1
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ನಾಲ್ಕು ವಚನ ಮುಂದೆ ಬ್ರಹ್ಮಾದಿಗಳು ಇಂದಿರಾದೇ ವಿಗ್ಹೀಗೆಂದು ಮಾತಾ ಇಂದು ಕುಳಿತಿರುವ ನೀ ಮುಂದ್ಹೋ ಮಂದ ಗಮನೆಯು ತಾನು ಕಾರ್ಯ ನನ್ನಿಂದ ಆಗದು ಕಳುಹಿಸಲವನು ಹರಿಚರಣಾರವಿಂದಲಿ ಸಾಷ್ಟಾಂಗ ತಲೆಯ ಮೇಲೆ ಚಂದಾಗಿ ಕೈಯಿ ಪ್ರಹ್ಲಾದ ಹೀಗೆಂದು ಪ್ರಾರ್ಥಿಸಿದಾ 1 ರಾಗ ದಯಮಾಡೊ ಹರಿಯೆ ದಯಮಾಡೊ ಪ ದಯಮಾಡ್ಹರಿಯೆ ಅಭಯಕೊಟ್ಟು ನೋಡೋ ಅ.ಪ ನಿನ್ನ ಕೋರೆಗಂಜುವ ಪಾರುಮಾಡೋ 1 ಭಯಾಂಕಿತನಲ್ಲವೋ ಭಯಾಂಕಿತನಾದೆನು ಶಂಕಿಸಬೇಡೋ 2 ಬೀಳದೆ ಕದನ ನಡುಗವೆ ಒದಗಿ ಬೇಗನೆ ಬಂದು ಬದಿಯಲಿ ಕೂಡೋ 3 ಮಾಳ್ಪ ಪರಮಪರಾಧವ ನಾನಿನ್ನ ಮರೆತರು ನೀನೆನ್ನ ಮರೆಯಲು ಬೇಡವೋ 4 ನಿನ್ನಡಿಗಳ ಮರಗುವೆ ಮರೆಯದಂಥ ವರತ್ವರದಲಿ ನೀಡೋ 5 ವಚನ ವ್ಯಾಪಿಸಿರುವಂಥ ಆಕೋಪ ಕೋಪವದು ಆಜಗದ್ವ್ಯಾಪ ಶ್ರೀಪತಿಯ ಸೇವೆಯಲಿ ವ್ಯಾಪರಕ್ಹಿಗ್ಗುತ ನಿಶಾಪತಿ ಪ್ರಸನ್ನನಾಗುತಲೆ ಈ ಪರಿಯ ನುಡಿದಾ 1 ರಾಗ ಹಿಡಿ ನೀ ವರವಾ ಹಿಡಿ ನೀ ವರವಾ ದೃಢವಾಗಿರುವಾÀ ಪ ಕಡು ಪ್ರಹ್ಲಾದನೆ ಬಿಡುಸಂಶಯವಾಅ.ಪ ನೇಮಿಸಿ ಕೊಡುವೆ 1 ಮಾನ್ಯರಾಗುವರು 2 ಬಿಟ್ಟು ಬಂದಿರುವೆ3 ವಚನ ಅಚ್ಚಸ್ನೇಹವ ಮಾಡಿ ಇಚ್ಛಿಸದೆ ಮನ ಭಕುತಿಯನು ಅಚ್ಯುತನ ವತ್ಸರೊಳು ಗಣನಿಲ್ಲ ಜ್ಞಾನದಲಿ ಹೆಚ್ಚಿನವ ತಾನು ಬೇರಿಚ್ಛೆ ಯವನಲ್ಲ ತನ್ನಿಚ್ಛೆಯಿಂದಲಿ ನುಡಿದ ಸ್ವಚ್ಛ ನರಹರಿಗೆ 1 ರಾಗ ನಾವೆಲ್ಲನು ವರಗಳ ಹರಿಯೆ ನಾವಲ್ಲೆನು ಪ ವಲ್ಲೆನು ವರ ಲಕ್ಷ್ಮೀವಲ್ಲಭನೆ ಅ.ಪ ಕೊಟ್ಟೆನ್ನ ವಂಚಿಸಬೇಡಾ 1 ಮುಕ್ತಿಯಾದರು 2 ಬಡುವೆ ಅನಂತಾದ್ರೀಶನೆ 3 ರಾಗ ಹೀಗೆಂದು ನುಡಿದನು ನೃಪಗೆ ನರಸಿಂಹಾ ಪ ಇಂಥಾ ಬಲ್ಲಿದ ಆಗ್ರಹವೇಕೋ ನರಸಿಂಹಾ1 ಭಕ್ತನೋ ನಾನು ನರಸಿಂಹಾ 2 ಭಕ್ತನೆಂದು ತಿಳಿದುಕೊಡುವೆ ನೃಪಸಿಂಹಾ ಸ್ವಚ್ಛ ಭಕ್ತಿಯೊಂದೆ ಸಾಕೊ ಎನಗೆ ನರಸಿಂಹ3 ಐಶ್ವರ್ಯವ ಭೋಗಿಸು ನೀನು ನೃಪಸಿಂಹಾ ಅಷ್ಟು ಐಶ್ವರ್ಯ ಸಲ್ಲೋದು ನಿನಗೆ ನರಸಿಂಹಾ 4 ರಾಜ್ಯದಿಂದ ಫಲವೇನೊ ನರಸಿಂಹಾ 5 ಕೊಂಡಾಡುವೆ ನರಸಿಂಹಾ 6 ನಿಷ್ಕಾಮುಕನೆಂಬುದರಿಯಾ ನರಸಿಂಹಾ 7 ಮುಕ್ತಿಯನ್ನು ತಂದೆಗೆ ಕೊಡು ನೀ ನರಸಿಂಹಾ 8 ಅನಂತಾದ್ರೀಶ ನರಸಿಂಹಾ 9 ವಚನ ಕೊಟ್ಟವರ ಬಿಡಬೇಡ ಬಿಟ್ಟು ನನ್ನಲಿ ಚಿತ್ತ ಬಿಟ್ಟುಸಂಶಯ ಮುಂದೆ ಇಷ್ಟುಮಾತುಗಳಾಡಿ ತಟ್ಟನವನೊ ಮೇಲಭಯವನು ಸೃಷ್ಟಿಕರ್ತನೆ ಕರಕೊಂಡು ಪಟ್ಟಗಟ್ಟಿದವಗೆ ಆ ಪಟ್ಟದಾಸನದಲ್ಲಿ ಕುಳಿತಾ 1 ಕೊಟ್ಟರಾಕಾಲದಲಿ ಪಟ್ಟಿಯನು ನಡುವಿನಲಿ ಇಟ್ಟು ಸಕಲಾಭರಣ ಅಷ್ಟು ಆಭರಣದಲೆ ದಿಟ್ಟಾಗಿ ಕಸ್ತೂರಿ ಬಟ್ಟಿಟ್ಟ ಕೈಯಲ್ಲಿ ಪಟ್ಟದಾನೆಯ ಭಯಪಟ್ಟು ಬಳಕುತ ಪ್ರಹ್ಲಾದನ್ನ ದೃಷ್ಟಿಯಿಂದಲಿ ಬೆಳಗಿದರು ದಿಟ್ಟನಾರಿಯರು 2 ರಾಗ ಮಂಗಲಂ ಜಯ ಮಂಗಲಂ ತಿಳಿದವಗೆ ಹಿರಣ್ಯ ಪತ್ನಿಯ ಗರ್ಭದಲಿರುತಲಿ ಗುರುನಾರದನಿಂದರಿತವಗೆ 1 ವೃದ್ಧನಾದವಗೆ ಶೋಧಿಸಿ ಪುತ್ರ ಪ್ರಹ್ಲಾದನಿಗೆ 2 ಪೇಳ್ದವಗೆ ಭೂಲೋಕ ಮುಖ್ಯದಿ ಮೂಲನಿಗೆ 3 ಇರುವವಗೆ ಸಿರಿಯು ಸಿಟ್ಟು ಬಿಡಿಸಿರುವವಗೆ 4 ಸಂತತ ನಿಸ್ಪøಹನಾದವಗೆ ಸಂತೋಷದಿ ಕುಳಿತಿರುವ ಸತತ ಶ್ರೀ ಮದನಾಂತಾದ್ರೀಶನ ಚಿಂತನದಿಂದಿರುವಂಥವಗೆ 5 ವಚನ ಮುಂದೆ ಪ್ರಹ್ಲಾದ ತಾನಿಂದಿರೇಶನ ಆಜ್ಞೆ ಯಿಂದ ಇದು ಹರಿಸೇವೆಯೆಂದು ರಾಜ್ಯವ ಮಾಡಿ ಬಂದ ಬಂದವರಿಗೆ ಮುಂದಕ್ಕೆ ಕರೆದು ಆ ನಂದದಿಂದತಿ ಮನಕೆ ಬಂದದ್ದು ಕೊಟ್ಟುತ್ವರ ದಿಂದ ಮಾಡಿದ ಪುಣ್ಯ ಅಂದಿಗರ್ಪಿಸಿ ಹರಿಗೆ ಚಂದಾಗಿ ನಿರ್ಲಿಪ್ತನೆಂದೆನಿಸಿಕೊಂಡಾ ಮುಂದೆ ಈ ಕಾಲದಲಿ ಹಿಂದೆ ಮಾಡಿದ ಪುಣ್ಯ ಮುಂದೆ ಮೋಕ್ಷಕ್ಕೆ ಒಂದು ಉಪಯುಕ್ತವಲ್ಲ ಬಂದ ಬಂದವರಿಗೊಂದೊಂದು ನಾ ಕೊಡುವೆನು ಎಂದು ಪ್ರಹ್ಲಾದ ರಾಜೇಂದ್ರನೆ ಶ್ರೀರಾಘ ವೇಂದ್ರ ರಾಯರು ಎನಿಸಿ ಬಂದು ಮಂತ್ರಾಲಯಕೆ 1 ಮುಂದೆ ಅಲ್ಲಿರುವ ಬಹುಚಂದದಿಂದ ಲೋಕದಲಿ ಪ್ರಹ್ಲಾದನೀ ಕಥೆಯ ಕೇಳ್ವವರು ಲೋಕÀಮಾನಿತರವರು ಬೇಕಂತ ಭಕ್ತಿಯಲಿ ಸ್ವೀಕರಿಸಿ ಪಠಿಸಿದರೆ ವಾಕ್ಚಪಲರಾಗುವರು ತೂಕ ಇಲ್ಲವರಿಗೆ ಬೇಕಾದ ಸ್ಥಳದಲಿ ಬೇಕಾದ್ದು ಬರುವದು ತೋಕರುಗಳಾಗುವರು ತಾ ಕರೆದು ಕೊಡುವ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಮೂರು ಪದ್ಯ ಭಕ್ತರಭಿಮಾನಿ ಶಿವಶಕ್ತಿ ಎಂಬುವ ಸೂರ್ಯದೈತ್ಯವರ್ಯನು ಎಂಬೊ ಕತ್ತತಿಯ ಸಂಹರಿಸಿ ಮತ್ತು ದಿತನಾಗಿರಲು ಇತ್ತ ಅನುಭೂತಿಯಾಗುತ್ತಾದ ಮುಖಕಮಲ ಮತ್ತಳಿತಾಗೆ|| ಸತ್ಯವಂತಿಯು ದೇವಿ ಸತ್ಯದಿಂದನು ಭೂತಿಗಿತ್ತುತ ಬಾಯಂದು ಮತ್ತೆ ಮುಂದಕೆ ಕರೆದು ಹೆತ್ತ ತಾಯಿಯಂತೆ ಅತ್ಯಂತ ಸ್ನೇಹವ ಸುರಿಸಿ ಒತ್ತಿ ಮಾತಾಡಿದಳು ಮತ್ತೆ ಈ ಪರಿಯ|| 1 ಪದ ರಾಗ :ಶಂಕರಾಭರಣ ಅಟತಾಳ ಸ್ವರ ಷಡ್ಜ ಮತ್ತೇನು ಬೇಕು ನೀಬೇಡಮ್ಮ|| ನಿನ್ನ ಚಿತ್ತದೊಳು ಸಂಶಯ ಬೇಡಮ್ಮ|| ಪ ದೈತ್ಯನ ಸಂಹಾರ ಮಾಡಿದೆ| ನಾ ಮತ್ತೆ ಬಂದು ನಿನ್ನಕೂಡಿದೆ|| ಅಂತಃ ಕರುಣದಿಂದ ನೋಡಿದೆ || ನಿನ್ನೊಳತ್ಯಂತ ಸ್ನೇಹವಮಾಡಿದೆ|| 1 ದಾರು ಧನ್ಯರೆನಿಸಿ ಲೋಕಮಾನ್ಯರು|| 2 ಮಿತ್ರಾನಂತಾದ್ರೀಶಹ್ನಿಡುವವರು||3 ಆರ್ಯಾ ಪರಿ ಪರಿ ಅನುಭೂತಿ ತಿಳಿದಳು ಎಂಬುವರು ಸುಖಸಾರ|| 1 ಸಂಶಯ ಬಿಟ್ಟಾಡಿದಳು ಹೀಗೆಂದೂ||2 ಪದ ರಾಗ:ಕಾಪಿ ತಾಳಬಿಲಂದಿ ಸ್ವರ:ಪಂಚಮ ಇಂದು ತಾಯಿಯೆ|| ಇಂದು ಎಂದೆಂದೂ ದಯಾ ಒಂದೆ ಸಾಕು|| ಪ ದಾವ ಕಾಲಕು ದೇವಿ ನಿನ್ನ ಸೇವೆ ಇರಲಿ|| 1 ನತಿಯು ಮಾಡುವೆ|| ಮತಿಯು ಬೇಡುವೆ|| ಮತಿಯಿಂದಲೆ ಪತಿಯ ಸೇವಿಸಿ ಪತಿಯಿಂದಲೆ ಗತಿಯು ಆಗಲಿ|| 2 ಪ್ರಾತಗಾಣಿ ಸೆ || ಪಂಥಗೆಲ್ಲಿಸೆ || ಸಂತತಾನಂತಾ ಧ್ರೀಶನ ಅಂತರಂಗದಿ ಚಿಂತಿಸುವೆನು||3 ಆರ್ಯಾ ಅನುಭೂತಿಯ ಅನುಸರಿಸಿ || ಅನುಕೂಲ ಸ್ಥಾನ ಅನುದಿನ ಕರದ್ಹೇಳಿದಳು ಹೀಗೆಂದೂ|| ಪದ ರಾಗ:ಕಾನಡಾ ಆದಿತಾಳ ಸ್ವರ ಪಂಚಮ ಬಾರೋ ಬ್ಯಾಗನೆ ಭೈರವಾ|| ನೀ ಪೋಗೀ || ಬ್ಯಾ|| ಯಮುನಾ ತೀರಕೆಪೋಗಿ|| ಪ ದೊಡ್ಡದು|| ಶ್ಯಲವಾಗಿ ಈ ಕಾಲಕ ಅಲ್ಲೊಂದಾಲಯ ನಿರ್ಮಿಸಿಕಾಲಗಳ್ಹಿಯದೆ|| 1 ಬರುವೆನು|| ನಿಂದಿರಲೆ ತ್ವರದಿಂದಲೆ ಪೋಗುತ ಇಂದ ಈ ಕಾರ್ಯವ ಚಂದದಿ ಮಾಡಿ|| 2 ಯಮುನಾದ್ರಿಗೆ ಪೋಗಿ|| 3 ಆರ್ಯಾ ಆ ದೇವಿಯ ಆಜ್ಞಾವನೂ|| ಆದರದಿಂದಲೇ ಧರಿಸಿ ಹೋದಾತನು ಅಲ್ಲೇನಿಂತ ನಿತ್ಯದಲಿ|| 1 ಬರಲಿಲ್ಲಾಕೆಂತೆಂದು|| ತುಳುಜಾ ತಾನಾಗಿ ಅಲ್ಲಿಗೆ ಬಂದು || ಪರಮಾಜ್ಞಾಧಾರಕನಾ || ತ್ವರದಲಿ ನೋಡ್ಯಾಡಿದಳು ಈ ವಚನಾ|| 2 ಪದ ರಾಗ :ಶಂಕರಾಭರಣ ಅಟತಾಳ ಸ್ವರ ಪಂಚಮ ಕಾರ್ಯವಂತಯಂದು ನಿನ್ನ ಉಳಸಿದೆ|| 1 ಇಲ್ಲಿಗೆ ಬಂದ್ಯೋನಿ ಕಾರ್ಯಾರ್ಥಿ|| ಬರದೆ ಇಲ್ಲೇ ನಿಂತಿ ಪಡದಿ ನೀನು ಅಪಕೀರ್ತಿ||2 ಅನಂತಾದ್ರೀಶನ ಆಣೆ ನಿನಗುಂಟು|| 3 ಆರ್ಯಾ ಈ ರೀತಿಯ ನುಡಿ ಕೇಳಿ || ಹೇರಿದ ಅಪರಾಧ ಭಾರವನು ತಾಳಿ|| ಘೋರವು ಬಂತಿದು ಎಂದಾ|| ಭೈರವ ಮಾತಾಡಿದನು ಭಯದಿಂದಾ|| 1 ಪದ ರಾಗ:ಆನಂದ ಭೈರವಿ ಆದಿತಾಳ ಸ್ವರ ಪಂಚಮ ಎನ್ನ ಪರಾಧಾ ಹಿಡಿಬ್ಯಾಡಮ್ಮಾ|| ತಾಯಿಎನ್ನಾ ||ಅಂ|| ಬಹುಕಾಲ ನಿನ್ನವನಾದ ಮ್ಯಾಲೆ|| ಪ ಮದದಿಂದೆ|| ಈಗ ನನ್ನ ಅಪರಾಧದಿಂದ ನಾನೊಂದೆ || ನಿನ್ನ ಹೊರತು ಎನಗಿನ್ಯಾರ್ಹಿತಕರುಂಟು|| 1 ಮಂಗಳಾಂಗನೆ ನಾನು ಮಂಗನಂತಲಿ ನಿಂತೆ|| 2 ಅಚ್ಯುತಾನಂತಾದ್ರೀಶನಿಚೆÀ್ಛಗೆ ಬಂತಿದೆ|| 3 ಪದ್ಯ ಈ ರೀತಿ ನುಡಿಕೇಳಿ ಕಾರುಣ್ಯನಿಧಿ ದೇವಿ ತೋರಿಸ್ನೇಹವು ನಗುತ ಭೈರವನ ಶಿರದಲ್ಲಿ ಚಾರುಹಸ್ನದಿ ಹೊಡೆದಳ್ಹಾರ್ಯ ಭಾವದಲಿ ಆ ಭೈರವನು ಆ ಹಸ್ತಭಾರದಲಿ ವಟುಕಾದ ಉರ್ವಿಯಲಿ ತಾ ಡೋಳ್ಹಭೈರವನು ಎನಿಸಿ || ಪಾರ್ವತಿಯು ಚಾರು ಉರ್ವಿಯಲಿ ಜನರನುದ್ಧಾರ ಮಾಡುತ ಬಿಡದೆ ಸಾರಗಿರಿಯಲಿ
--------------
ಅನಂತಾದ್ರೀಶ - ಕಥನಕಾವ್ಯಗಳು
ಅಧ್ಯಾಯ ಹತ್ತು ತಾಕ್ರ್ಷಸ್ಕಂಧ ಸಮಾರೂಢಃ ಶ್ರೀ ಬ್ರಹ್ಮಾದಿಭಿರಾವ್ನತಃ | ಧ್ವನಿ ಪರಿ ಪರಿ ಪ ಗರುಡನೇರಿದ ಶ್ರೀನಿವಾಸನು ರಾಜ ವರ ಹಂಸವನೇರಿದ ಬ್ರಹ್ಮನು ತ್ವರ ನಂದಿಯೇರಿದ ರುದ್ರನು ಅ ವರ ನಡುಮಧ್ಯೆ ನಡೆದ ಶ್ರೀಹರಿ ತಾನು 1 ದೇವಿಯೇರಿದಳಾಗ ರಥದಲಿ ಬಕುಲಾ ದೇವಿ ಯೇರಿದಳೊಂದು ರಥದಲಿ ಕೇವಲ ತಮ್ಮ ತಮ್ಮ ರಥದಲಿ ಉಳಿದ ದೇವಿಯರೇರಿ ಕೊಂಡರು ಅಲ್ಲಿ 2 ಉತ್ತಮ ಮಂಗಳವಾದ್ಯವು ನË ಬತ್ತು ನಗಾರಿಗಳಾದವು ಮತ್ತೆ ಉಳಿದ ಎಲ್ಲ ವಾದ್ಯಗಳು ಬಹು ವತ್ತಿ ಶಬ್ದಮಾಡಿ ನುಡಿದವು 3 ನಡೆದರು ಋಷಿಗಂಧರ್ವರು ಬಹು ಸಡಗರದಿಂದಲ್ಲೆ ಅಪ್ಸರರು ಬಡವ ಬಗ್ಗರು ಉಳಿದ ಮನುಜರು ಬಹು ಗಡಿಬಿಡಿಯಿಂದಲ್ಲೆ ನಡೆದರು 4 ಕುಂಟರು ಕುರುಡರು ಕಲ್ಲು ಕಂಟಕ ಕಾಲಿಲೆ ತುಳಿವವರೂ ಗಂಟು ತಲಿಯಲಿಟ್ಟುನಡಿಯುವರು ತಪ್ಪ ಗಂಟಾಗಿ ಒದರುತಲಿಹರು 5 ಕೆಲವರು ಗಂಡನ ಒದರುವರು ಮತ್ತ ಕೆಲವರು ಮಕ್ಕಳನೊದರುವರು ಕೆಲವರು ಎಡವುತಲಿರುವರು ಮತ್ತು ಕೆಲವರು ಭರದಿಂದ ಬೀಳುವರು 6 ಕೆಲವರೆಳೆದು ಎಬ್ಬಿಸುವರು ಮತ್ತು ಕೆಲವರು ನೋಡುತ ನಗುವವರು ಬಾಲರಳುವ ಧ್ವನಿ ಆಯಿತು ಜಗತ್ ಪಾಲನಸೈನ್ಯ ನಡೆಯಿತು ಮೇಲಾದನಂ ತಾಂದ್ರೀ ಇಳಿಯಿತು ಭೂಪಾಲಪುರದ್ಹಾದಿ ಹಿಡಿಯಿತು7 ವಚನ ಶೈಲವನು ಹಿಡಿದು ಭೂಪಾಲನಪುರತನಕ ಸಾಲ್ಹಿಡಿದು ನಡೆವಂಥ ಕಾಲದಲಿ ಮತ್ತಲ್ಲಿಡುವದಕ್ಕೆ ಎಳ್ಳು ಕಾಳಷ್ಟು ಸ್ಥಳವಿಲ್ಲ ಶ್ರೀಲಲಾಮನು ಮಧ್ಯಸಾಲಿನ ಮಧ್ಯಾಹ್ನ ಕಾಲ ದಲಿ ಶುಕಮುನಿಯ ಆಲಯಕೆ ಬಂದು ಕಾಲಿಗೆರಗಿದನು ಆಕಾಲಕೆ ಮುನಿ ಬಂದು ಹೇಳಿಕೊಂಡೀ ಪರಿಯು ಶೈಲ ಭೋಜನವು ಎನ್ನ ಮೇಲೆ ಕರುಣಿಯಿಂದಾ 1 ಹೀಗೆಂದು ನುಡಿದ ಶುಕಯೋಗಿಯ ವಚನವ ಕೇಳಿ ಬಾಗಿ ತಾ ನಮಿಸುತಲೆ ಆಗ ಶ್ರೀಹರಿ ನುಡಿದ ಯೋಗಿಗಳು ನಾ ಸಂಸಾರಿ ಆಗಿ ಇರವೆ ಇಲ್ಲೆ ಉಂಡರೆ ಮಿತಿಯ ಇಲ್ಲದಲೆ ಪುರದಲ್ಲೆ ಪೋಗುವುದು 2 ಮುನಿ ಮಂಡಲೇಶನು ಕೇಳಿಕೊಂಡು ಹೀಗೆಂದು ಬ್ರಹ್ಮಾಂಡ ಪತಿಯೆ ಒಬ್ಬ ಉಂಡರೆ ಜಗವೆಲ್ಲ ಉಂಡಂತೆ ಆಗುವುದು ಪುಂಡರೀಕಾಕ್ಷಾ ಭಾಳ ಕೇಳುತಲೆ ಮುಂದೆ ಬಾಲಕನ ಮುಖನೊಡಿ ಬಾಲೆ ನುಡಿದಳು ಬಕುಲ ಮಾಲಿಕೆಯು ತಾನು3 ಧ್ವನಿ:ವಸಂತಭೈರವಿ ಆದಿತಾಳ ತರವೆ ಹರಿಯೆ ಈ ಪರಿಯ ಮಾಡುವದುಪ ಸುಖಕರವಾಗಿಹ ಶುಕಮುನಿ ವಚನವು || ಲಕ್ಷಿಸದೆ ಶುಭಕಾರ್ಯಕೆ ಪೋಗುವದೂ 1 ಬಲ್ಲಿದ ಶಕುನವು ಇಲ್ಲೆನಿನಗೆ ತಿಳಿ| ಊಟಕೆ ಒಲ್ಲೆನೆಂಬುವದೂ 2 ಶ್ರೀಶ ಅನಂತಾದ್ರೀಶ ಮಹಾತ್ಮರ|| ಭಾಷೆಯ ಕೇವಲುದಾಸೀನ ಮಾಳ್ಪುದು 3 ವಚನ ಹೆತ್ತಾಯಿ ಪರಿಯಾಗಿ ಹೊತ್ತು ಹೊತ್ತಿಗೆ ತನಗೆ ಅತ್ಯಂತ ಹಿತ ಮಾಡುತಿರ್ದ ಬಕುಲಾವತಿ ಸತ್ಯವಚನ ಹರಿಯು ಮತ್ತು ಶುಕಮುನಿಗೆ ಉತ್ತರವ ಕೇಳಿ ಮುನಿ ಉತ್ತರಣೆಯು ಬೀಜ ಒತ್ತಿಕೈಯಲಿ ಮಾಡಿ ವೃತ್ತಾದ ಗುಳ್ಳ ಫಲದುತ್ತಮೋತ್ತಮಶಾಕ ತಿಂತ್ರಿಣಿಯ ರಸಸಹಿತ ಪಾತ್ರದಲಿ ಬಡಿಸಿ ಸತ್ಪಾತ್ರನಾಗಿರುವ ಸರ್ವೋತ್ತಮಗೆ ಅರ್ಪಿಸಿದ ಭಕ್ತಿಯಿಂದ 1 ತೃಪ್ತನಾದನು ನಿತ್ಯತೃಪ್ತ ಹರಿ ತಾ ಉಂಡು ಮತ್ತೆ ಮುನಿಗಳು ಎದ್ದರತ್ಯಂತ ಕೋಪದಲಿ ಚಿತ್ತಜನ ಪಿತ ಅವರ ಚಿತ್ತವೃತ್ತಿ ಸತ್ಯದಲಿ ಎಲ್ಲರಿಗೂ ತೃಪ್ತಿಯಾಗಲಿ ಎಂದು ತಿಳಿದು ಪೂತ್ಕಾರ ಮಾಡಿದನು ತತ್ಕಾಲದಲ್ಲಿ ಉತ್ತಮಳು ಶ್ರೀರಮಾ ಮತ್ತೆ ಬ್ರಹ್ಮಾದಿಗಳು ಸುತ್ತಸನ ಶುಕ ಸತ್ವ ಶೀಲರು ಉಳಿದ ಸುತ್ತೆಲ್ಲ ಜನರು ಸಂತೃಪ್ತರಾದರು ಹರಿಯ ಫೂತ್ಕಾರದಿಂದ 2 ನಿದ್ರೆಯನು ಮಾಡಿ ಅಲ್ಲಿದ್ದು ಆ ರಾತ್ರಿಯಲಿ ಎದ್ದು ಮರು ಕೂಡಿ ವಾದ್ಯ ವೈಭವ ದಿಂದ, ಸಿದ್ಧಾಗಿ ಬಂದರು ವಿಯದ್ರಾಜನ ಪುರಕೆ ಶುದ್ಧ ಸಂಜೆಯಲಿ ಮುದ್ದು ವೇಂಕಟ ಬಂದ ಸುದ್ದಿಯನು ಕೇಳುತ ವಿಯದ್ರಾಜ ತಾ ಬಹಳ ಉದ್ರೇಕದಿಂದಲೆ ಇದ್ದ ಜನರನು ವೈಭವದಿಂದ ಸಿದ್ಧನಾಗಿ3 ಧ್ವನಿ:ಕಾಂಬೋಧಿ ಆದಿತಾಳ ಆಕಾಲದಲಿ ಕಂಡನು ಹರಿಯಮುಖ ಆಕಾಲದಲಿ ಕಂಡನು ಎಲ್ಲರ ಕೂಡ ಆಕಾಶ ರಾಜನು ತಾನು1 ಹರುಷದಿಂದಲಿ ಉಬ್ಬಿದ ಹರಿಯ ಕಂಡು ಹರುಷದಿಂದಲಿ ಎದರುಗೊಂಡು ವರಪೂಜೆಯನು ಮಾಡಿದ 2 ಅಳಿಯಗಾಭರಣವನು ವಸ್ತ್ರವ ಕೊಟ್ಟು ಅಳಿಯಗಾಭರಣವನು ಉತ್ಸವದಿಂದೆ ಕಳಿಸಿ ಮನೆಗೆ ಪೋದನು3 ಶ್ರೀನಾಥದೇವ ತಾನು ಆ ಕಾಲಕ್ಕೆ ಶ್ರೀನಾಥದೇವ ತಾನು ಕರೆದುತೊಂಡ ಮಾನರಾಜಗೆ ನುಡಿದನು 4 ಹಸಿದು ಬಂದೆವು ನಾವೆಲ್ಲ ಉಣ್ಣದೆ ಬಹಳ ಹಸಿದು ಬಂದೆವು ನಾವೆಲ್ಲ ಬೇಗನೆ ಪಾಕ ಹಸನಾಗಿ ಮಾಡಿಸೆಲ್ಲ5 ಅಕ್ಕರದಲಿ ರಾಜನು ಆನುಡಿ ಕೇಳಿ ಅಕ್ಕರದಲಿ ಮಾಡಿಸಿದನು ರುಕ್ಕೋತದಡಿಗೆಯನು 6 ಮಂಡಿಗೆ ಗುಳ್ಳೋರಿಗೆ ಶಾವಿಗೆ ಮೊದಲು ತೊಂಡಮಾನÀನು ಚಂದಾಗಿ 7 ಹರಿಗೆ ಅರ್ಪಣೆ ಮಾಡಿದ ಎಲ್ಲರ ಕೂಡಿ ಹರಿಯು ಭೋಜನ ಮಾಡಿದ 8 ಆನಂದದಿಂದಿದ್ದನು ಆ ರಾತ್ರಿಯೊಳ್ ಆನಂದದಿಂದಿದ್ದನು ಮಾಡಿದ ನಿದ್ರೆ `ಅನಂತಾದ್ರೀಶ' ತಾನು 9 ವಚನ ಶ್ರೀನಿವಾಸ ಎದ್ದು ತಾನು ಮರುದಿನದಲಿ ಮಾನಿತ ವಶಿಷ್ಠ ಲಕ್ಷ್ಮೀಸಹಿತ ನೀನು ಬ್ರಹ್ಮನು ಮತ್ತೆ ಮಾನಿತಳು ಎನ್ನತಾಯಿ ತಾನು ಐವರು ಅನ್ನಹೀನರಗಿರುವುದು ಖೂನದಲಿ ಕನ್ನಿಕೆಯ ದಾನ ಪರ್ಯಂತ ಮಾನಿತನು ಆರಾಜಮಾನಿನಿಯು ಮತ್ತೆ ವಸು ದಾನರಾಜನು ಅನ್ನರಹಿತರೈವರು ಅವರು ಖೂನದಲಿ ಕನ್ನಿಕೆಯ ದಾನಪರ್ಯಂತ 1 ಪೇಳು ಅರಸನಿಗೆಂದು ಹರಿಯು ಹೇಳಿದಂತಾ ಭೂಮಿಪಾಲ ಮಾಡಿದನು ಮುನಿಹೇಳಿದಂತೆ ಮೇಲೆ ಮುನ್ನ ಸಾಯಾಹ್ನಕಾಲದಲಿ ಚತುರಂಗ ಸಾಲ ಸೈನ್ಯವು ನಡೆಸಿ ಕಾಳಿ, ಕರ್ಣಿಯ ತೂರ್ಯ, ತಾಳಮದ್ದಲೆ ಮೊದಲು ಭಾಳವಾದ್ಯ ಗಳಿಂದ ಮೇಲಾದ ಗುರುಮುಂದೆ ಮೇಲೆ ತನ್ನವರಿಂದ ಕಾಲನಡುತಿಯಲೆ ಹರಿಯ ಆಲಯಕೆ ಬಂದ 2 ಈ ವ್ಯಾಳ್ಯದಲಿ ಧರಣಿದೇವಿ ತಾ ಲಜ್ಜೆಯಲಿ ದೇವ ಗುರು ಬ್ರಹಸ್ಪತಿಯ ಕೇವಲಾಜ್ಞದಿ ದೇವದೇವ ಎನಿಸುವ ಅಳಿಯ ಶಾವಿಗೆಯ ಪರಮಾನ್ನ ವಿಯದ್ರಾಜ ಮುಂದಾ ವೇಳೆಯಲಿ ಐರಾವತದ ಮೇಲೆ ದೇವನ ಕುಳ್ಳಿರಿಸಿ ಬಂದನು ಮನೆಗೆ ತೀವ್ರದಿಂದ 3 ಆಕಾಲದಲಿ ತೋಂಡ ಸತಿ ನಿವಾಳಿಸುವತ ಚಲ್ಲಿದಳು ಶೈಲದೊಡೆಯನು ಗಜದ ಮೇಲಿಂದ ಇಳಿದು ಆಮೇಲೆ ತಾ ಬಂದಾ ಸುವಿಶಾಲ ಮಂಟಪಕೆ ಮೇಲಾದ ಗದ್ದಿಗೆಯ ಮೇಲೆ ವೇಂಕಟರಮಣನು ಕಾಲಿಟ್ಟು ಕುಳಿತನಾಮೇಲೆ ಬ್ರಹ್ಮಾದಿ ಗಳು ಗಾಲವ, ವಶಿಷ್ಠಮುನಿ ವಾಲ್ಮೀಕಿ ಭೃಗು ಜಟಾಜಾಲ ಸಂಪನ್ನ, ಶುಕ, ದಾಲ್ಭ್ಯ ಮೊದಲಾದವರು ಸಾಲ್ಹಿಡಿದು ಕುಳಿತರಾ ಕಾಲಕ್ಕೆ ಎಲ್ಲಾ ಒದಗಿ ಬೇಗನೆ ವಿಷ್ಣು ಪದರಾಜ4 ತೊಳೆದು ಆ ಉದಿಕ ಮಧುಸೂದನನ ಪೂಜೆ ಮಧುಪರ್ಕದಿಂದ ಬುಧಜನರು ಪೇಳಿದಾಜ್ಞೆಯಲಿ ಗೃಹ ದೇವತಾಸನದಲಿ ಹರಿಯ ಧ್ಯಾನದಲಿ ಇರುತಿರುವ ಮದನ ಮೋಹನ ಸನ್ನಿಧಿಗೆ ಸಮ್ಮುಖವಾಗಿ ಮುದದಿ ಇರಿಸಿದನಾಗ ಬದಿಲಿದ್ದ ಬೃಹಸ್ಪತಿಯ ಒದಗಿ ವಧು ವರಗಳಿಗೆ ವಿಹಿತದ ಅಂತಃಪÀಟವ ಮುದದಿ ಮಧ್ಯದಲ್ಲಿ ಪಿಡಿದು ಒದರಿದನು ಈ ಪರಿಯು ಮದವೆಯ ಕಾಲಕ್ಕೆ ಮಧುರÉೂೀಕ್ತಿಯಿಂದ5 ಧ್ವನಿ:ಸೌರಾಷ್ಟ್ರ ಅಟತಾಳ ಸಾವಧಾನ ಧೇ ವಾಧೀಶನ ಲಗ್ನ ದಿವ್ಯ ವೇಳೆಯಲ್ಲಿ ಸಾವಧಾನ ಪ ಪದ್ಮನಾಭನೆ ನೀನು ಸಿದ್ಧಾಗಿ ಇರು ಕಂಡ್ಯ ಸಾವಧಾನ ಪದ್ಮಾವತಿಯೆ ನೀನು ಪದ್ಮನಾಭನ ಸ್ಮರಿಸು ಸಾವಧಾನ 1 ಫಲಕಾಲದಲಿ ಚಂಚಲರಾಗದಲೆ ನೀವು ಸಾವಧಾನ ಕುಲದೇವಿ ಸ್ಮರಣಿ ನಿರ್ಮಲವಾಗಿ ಮಾಡಿರಿ ಸಾವಧಾನ 2 ಶ್ರೇಷ್ಠಾದ ಅತಿ ವಶಿಷ್ಠ ಮುನಿಗಳೆಲ್ಲ ಸಾವಧಾನ ಸ್ಪಷ್ಟಾಗಿ ಶ್ರೀ ಮಂಗಳಾಷ್ಟಕ ಪಠಿಸಿರಿ ಸಾವಧಾನ 3 ಮಂಗಳ ಮೂರುತಿ ಮನದಿಂ ಸ್ಮರಿಸಿರಿ ಸಾವಧಾನ
--------------
ಅನಂತಾದ್ರೀಶ - ಕಥನಕಾವ್ಯಗಳು
ಅನಂತ ಗುಣ ಪೂರ್ಣ | ವಿಠಲ ಪೊರೆ ಇವನಾ ಪ ವಿನಯದಲಿ ತವದಾಸ್ಯ | ವನು ಕಾಂಕ್ಷಿಸುವನಾ ಅ.ಪ. ಸ್ವಪ್ನದಲಿ ದೇವ ಗೃಹ | ಒಪ್ಪವೋ ಹರಿರೂಪಅಪ್ಪ ಸಮ್ಮುಖದಿ ಸ್ತುತಿ | ವಪ್ಪಿಸುತ್ತಿರುವಾ |ನೆಪ್ಪಿನ ಗುರೂ ರೂಪ | ತಪ್ಪದಲೆ ತಾ ಕಂಡುಸೊಪ್ಪಿನಾ ಭಾವದಲಿ | ಅಪ್ಪಿದನು ನೆಲವಾ 1 ವಿತತ ಮಹಿಮನ ಗುಣನ | ತುತಿಸುತಿಹ ಗುರುವಿನೆಂಹಿತದಿ ಅಂಕಿತಯುಕ್ತ | ತುತಿಯ ಉಪದೇಶಾಕೃತವಾಯ್ತು ಭಾವುಕಗೆ | ಅತಿ ಚಿತ್ರ ಪೇಳಿಲ್ಕೆಮತಿಗೆ ಸಿಲುಕದೆ ಹೋಯ್ತು | ಮತ್ತೆ ಎಚ್ಚರದೀ 2 ಸುಪ್ರೀಶ ಚರ್ಯವನು | ಅಪ್ಪಿ ಇವಗಂಕಿತವಗೊಪ್ಪದಲಿ ಇತ್ತಿದೆನೊ | ಅಪ್ಪ ಹಯವದನಾ |ಅಪ್ರಮೇಯಾ ನಂತ | ಸ್ವ ಪ್ರಕಾಶಕ ಹರಿಯೆಕೃಪೆಯಿಂದಲಿ ಇವನ | ಒಪ್ಪಿ ಕೈ ಪಿಡಿಯೋ 3 ನಿದ್ರೆಯಲ್ಲಿಹನ ಪ್ರ | ಬುದ್ಧನನ ಗೈಯ್ಯುತ್ತಮಧ್ವಮತ ದೀಕ್ಷೆಯನು | ತಿದ್ದಿ ಇವನಲ್ಲೀಶ್ರದ್ಧಾಳು ಎಂದೆನಿಸೊ | ಸಿದ್ಧಾಂತ ಪಂಥದಲಿಅಢ್ವದೇಡ್ಯನೆ ಹರಿಯೆ | ಮುದ್ದು ನರಹರಿಯೇ 4 ಕೈವಲ್ಯ ಪ್ರದ ಹರಿಯೆಆವ ತವನಾಮ ಸ್ಮøತಿ | ಸಾರ್ವ ಕಾಲದಲೀತಾವಕಗೆ ನೀನಿತ್ತು ಕಾವುದೆಂಬೆನೊ ಗುರೂಗೋವಿಂದ ವಿಠಲಯ್ಯ | ಗೋವುಗಳ ಪಾಲಾ 5
--------------
ಗುರುಗೋವಿಂದವಿಠಲರು
ಅನಿರುದ್ಧ ನೀಯನ್ನ ಮಾಧವ ಕೃಷ್ಣಾ ಪ ಪಾಂಡುತನಯ ಪರಿಪಾಲನ ಹರಿ ವೆತಂಡ ವರದ ಶ್ರೀಕುಂಡಲಿ±ಯÀನ 1 ಅಂಡಜಗಮನ ಪ್ರಂಚಂಡ ಮಹಿಮಾ ಭವ ಖಂಡನ ಮುನಿನುತ ಮಂಡನಭೀಮ 2 ನವನೀತ ಚೋರ ಗೋ ಪಾಲ ಮುರಾರಿ ದಯಾಲು ರಮೇಶ 4 ಕಂಬುಕಂಠ ಕನ ಕಾಂಬರಧರ ಶಶಿ ಬಿಂಬ ವಿಜಿತ ಮುಖ ಅಂಬುರುಹಾಕ್ಷ 5 ಪಾಪರಹಿತ ನಿರ್ಲೇಪ ನಿರಂಜನ ಶ್ರೀಪತಿ ಘನ ಹೆನ್ನೆಪುರನಿಲಯ 6
--------------
ಹೆನ್ನೆರಂಗದಾಸರು
ಅನಿಲ ಹೃತ್ಕಮಲಸ್ಥ | ಮುನಿ ವೇದವ್ಯಾಸಎನಗಿನ್ನು ತವಧ್ಯಾನ | ಸುಖವೀಯೊ ಶ್ರೀಶಾ ಪ ಚಿದಚಿದ್ವ ಲಕ್ಷಣನೆ | ಚಿತ್ರ ಚಾರಿತ್ರನೇಚತುರಾಸ್ಯ ಪಿತ ನೀನು | ಸುರ ಚಕ್ರವರ್ತೀ |ಚತುರ ರೂಪವ ಧರಿಸಿ | ಚತುರ ವ್ಯೂಹವ ರಚಿಸಿಚತುರ ವಿಧ ಸೃಷ್ಟಿಯನು | ಚತುರ ವಿರಚಿಸಿದೇ1 ಮುನಿ ಪರಾಶರ ತನುಜ | ಶ್ರೀನಿಕೇತನ ಹರಿಯೆಎನಗರುಹು ವೇದಾರ್ಥ | ವೇದವೇದ್ಯಾ |ಘನ ಮಹಿಮ ಕೋಟಿ | ನಿಖಿಲಾಂಡ ನಾಯಕನೆಅನಘ ನೀ ಸಲಹಯ್ಯ | ಕಪಿಲ ರೂಪಾತ್ಮ 2 ಸಚ್ಛಾಸ್ತ್ರ ಕರ್ತೃ ಸತ್ | ಸೂತ್ರಗಳ ನಿರ್ಮಾತೃಸಚ್ಛಾಸ್ತ್ರ ಭಾವಗಳ | ಅರುಹೆ ವಿಬುಧರಿಗೇ |ಮತ್ಸ್ಯಾದಿ ರೂಪನಿ | ನ್ನಿಚ್ಛೆಯಿಂದಲಿ ಪೊಂದಿವತ್ಸರ್ಗೆ ಭೋದಿಸಿದೆ | ಸಚ್ಚಿದಾನಂದಾ 3 ಮೂಲ ಪ್ರಕೃತಿಯ ಮಾನಿ | ಮಹಾಲಕ್ಷ್ಮಿ ನಿನ್ನಯಶೀಲಗಳನನುಸರಿಸಿ | ಸೇವಿಸುವಳೂ |ಪ್ರಲಯ ಕಾಲದಿ ನಿನ್ನ | ಒಲುಮೆಗೋಸುಗ ವಟದಎಲೆಯ ರೂಪದಿ | ಮಲಗಲನು ವಾದಳಯ್ಯ 4 ಮೂರ್ತಿ | ಬದರಿ ಕ್ಷೇತ್ರದಿ ಪೂರ್ಣಭೋದರ ಸುಸೇವೆಯನೆ | ಸತತ ಕೊಳುತಾ |ಮೋದ ಗುಣ ಪೂರ್ಣ ಗುರು | ಗೋವಿಂದ ವಿಠ್ಠಲನೆಹೇ ದಯಾಂಬುಧೆ ನಿನ್ನ | ಪಾದಾಬ್ಜ ತೋರೋ 5
--------------
ಗುರುಗೋವಿಂದವಿಠಲರು
ಅನುಜ ಭಾವಿ ಮುಖ್ಯಪ್ರಾಣನೆ ಪ ಚರಣಭಕ್ತರಲ್ಲಿ ಮುನ್ನ ಇರಿಸಿ ಸಲಹೊ ಕರುಣಶರಧಿಯೆ ಅ.ಪ. ಹರಿಯಮುಂದೆ ನಿಂದು ಸೇರಿ ಸ್ತುತಿಸೆ ದಿವಿಜವೃಂದ ಧೀರ ಲಾತವ್ಯ ಬಂದೆ ಹಾ ಚಾರು ಯುಕ್ತಿಮಲ್ಲಿಕಾದಿ ಸಾರಗ್ರಂಥರಾಶಿ ಇತ್ತು ಈರಮತವ ಮೆರೆಸಿ ಮೆರೆದ ಶೂರ ನಿನ್ನ ಪೊಗಳಬಲ್ಲೆವೆ 1 ಎರಡು ಹತ್ತು ಮೇಲೆ ನೂರುವರುಷ ಪೊರೆದು ಶಿಷ್ಯಸಂಘ ಕಾಯ ಕುಳಿತೆ ಭರದಿ ವೃಂದಾವನದಲೀ ತೊರೆಯಲಾಗದೇನೆ ನಿನ್ನ ತುರಗವದನ ರಾಮಕೃಷ್ಣ ಅರವಿದೂರ ವೇದವ್ಯಾಸ ಪೊರೆವರೆಲ್ಲ ಸೇವೆಕೊಳ್ಳುತಾ 2 ಸುರರು ಎಲ್ಲ ಮಣಿದು ಕುಣಿದು ನಿನ್ನ ಸಹಿತ ಮಣಿದು ಹರಿಯ ಭಜಿಸುತಿಹರು ತನುವ ಕೆಡಹಿ ರಾಗದಿಂದ ನೆನೆದು ನಿನ್ನ ನೋಡೆಸದನ ಜನುಮ ಜನುಮ ದೋಷ ಕಳೆವ ಘನ ಮಹಾತ್ಮೇಗೀಡುಕಾಣೆ 3 ಎರಡು ಕಮ್ಮಿ ಎರಡುನೂರು ವರವಿರಂಚಿ ಕಲ್ಪಗಳಲಿ ನಿಮ್ಮ ಮಹಿಮೆಗೇನೆಂಬೆ ಸುರರು ವಿವಿಧ ಬಲಿಗಳಿತ್ತು ಚರಣ ಪಿಡಿದು ನಡೆವರೆನಲು ನರನು ಪೊಗಳಬಲ್ಲನೇನು ಹರನಗುರುವೆ ಶಿರವ ಬಾಗುವೆ 4 ವರವಿಮಾನದಲ್ಲಿ ಕುಳಿತು ಚರಿಸುತಿರಲು ಒಮ್ಮೆಯೇನೆ ಸುರರು ಎಲ್ಲ ಕರೆಯೆನಿನ್ನ ಧರಿಸಿ ರೂಪ ನಿಚಯ ನಡೆದೆಯಾ ವರವಿಶೇಷಪೂಜೆಕೊಂಡು ಸ್ಥಿರವಗೈದು ಪದವಿಗಳನು ಕರೆದು ಹರುಷ ದಿವಿಜಗಣಕೆ ಪೊರೆದ ನಿನಗೆ ತುಲ್ಯ ಕಾಣೆವೈ5 ಸಿರಿಯಪತ್ರ ಹರಿಗೆ ಇತ್ತು ಮರುತನಂತೆ ಪಡೆದು ವರವ ಕೊಂಡು ಭುವಿಯಲಿ ಧರಿಸಿನಿಂದು ದಂಡ ಕಾಷ್ಠ ದುರುಳವಾದಿಗಜಗಳಳಿದು ಚರಿಸಿ ದೇಶವೆಲ್ಲ ಕೊನೆಗೆ ಕುರುಹು ತೋರಿನಿಂತ ಸ್ವಾದಿಲಿ6 ಏನು ನಿಮ್ಮ ಮಹಿಮೆ ಗುರುವೆ ತಾನೆ ಬಂದು ವಾಜಿವದನ ಸಾನುರಾಗದಿಂದ ಕೊಂಬ ಹೂರ್ಣಭಕ್ಷ್ಯವೆಲ್ಲ ಪೂರ್ಣ ಪೂರ್ಣನೀನು ಜೀವಗಣದಿ ಪೂರ್ಣತನ್ನ ಕಂದನೆಂದು ದಾನಗೈದ ನಿನ್ನ ಸತಿಗೆ ಜ್ಞಾನಪೂರ್ಣಬಲನು ನೀನ ಹೋ 7 ಚಾರು ಭ್ರಾತೃನಿನ್ನ ಬದಿಲಿ ಮೀರಿ ಇಹುದು ಯಾವುದಿಲ್ಲ ಮೂರುಜಗದಿ ಸತ್ಯಸತ್ಯವೋ ಮೂರುಕಣ್ಣಿನಾತ ಮುಂದೆ ಭಾರಿಭೂತರಾಜ ನಿಮ್ಮ ಸಾರ ಚರಣ ಪಿಡಿದು ಭಜಿಪ ಯಾರು ಸಾಟಿ ಇಲ್ಲ ಸಾರುವೆ8 ಗಂಗೆಮೊದಲು ಎಲ್ಲ ತೀರ್ಥ ತಂಗಿ ಧವಳಗಂಗೆಯಲ್ಲಿ ತುಂಗ ಮಹಿಮ ನಿನ್ನ ಯಜಿಸಿ ಹಿಂಗಿಸುವರು ತಮ್ಮ ಶಮಲ ಭಂಗ ಸತ್ಯಸರ್ವಪಾಪ ಸುರರು ಕೈವಶ 9 ನಿನ್ನ ನಿಲಯ ಸುತ್ತ ನೃತ್ಯ ವನ್ನು ಗೈದು ಭಜಿಸೆ ಹರಿಯ ಘನ್ನ ಜ್ಞಾನ ಚೆನ್ನ ಪಡೆದು ಸನ್ನು ತಾಂಗ ನೆಡೆಯಕಾಣುವ ಅನ್ನಸತ್ರ ನಿನ್ನ ಕ್ಷೇತ್ರ ಅನ್ನಪತಿಯ ತೋರ್ಪನಿನಗೆ ಇನ್ನು ಸರಿಯೆ ಕಾಮಧೇನು ಚಿಣ್ಣನೆಂದು ಪಿಡಿಯೊ ಶರಣನ 10 ಹತ್ತು ಐದು ನಾಲ್ಕು ಆರು ಹತ್ತು ಐದು ಸಹಿತ ಒಂದು ಹತ್ತು ಹತ್ತು ಮತ್ತೆ ಒಂದು ಹತ್ತುನೂರು ಹಾಗನಂತ ನಿತ್ಯ ನಿತ್ಯನುತಿಪೆ ಬೃಹತಿಯಿಂದ ಸತ್ಯಪದವಿಸಿದ್ಧ ನಿನಗೆಲೈ 11 ಗಿರಿಗಳರಸು ಮಗಳ ಸಹಿತ ಕರೆದು ನಿಮ್ಮ ರತ್ನರಾಶಿ ಸುರಿದು ಶಿರದಿ ಪೂಜೆಗೈದು ಪರಮ ಧನ್ಯನಾದ ತಾನಹೋ ತರಣಿ ಜನರು ಮಾರ್ಜನಾದಿ ಪರವಿಶೇಷ ಸೇವೆಗೈದು ಕೊಡುವೆ ಕಾಮಿತಾರ್ಥವ 12 ದೀಪಸಾಲು ಹಚ್ಚಿ ಭಜಿಸೆ ಪೋಪುದೈಯ್ಯ ಭವದ ತಾಪ ಆ ಪರೇಶ ಒಲಿದು ಜ್ಞಾನ ದೀಪ ವಿಡುವ ಹೃದಯಕಮಲದಿ ತಾಪ ದೂರನಾಗಿ ಶ್ರೀಪತಿಯ ದಾಸನಾಗಿ ಕೂಪ ದಾಟ ಪೋಪ ಬೇಗಹೋ13 ಯಮನ ಪುರವ ಸಾರಿ ನೀನು ವಿಮಲರೂಪ ತೋರಿ ಹಾಗೆ ಅಮರ ಜ್ಞಾನ ಬೋಧೆಯಿತ್ತು ಯಮನ ರಾಜ್ಯ ಬರಿದುಗೈದೆಹೊ ಕಮಲೆಕಂದ ಕಾಮಕೊರಗಿ ನಮಿಪ ನಿನ್ನ ರೂಪ ನೋಡಿ ಶ್ರಮವು ಆಯ್ತುಕಾಮನಿಂದ ಅಮರಸ್ತ್ರೀವೃಂದಕ್ಕೆಲ್ಲ ವೈ14 ದುಃಖಕೊಡದ ನಿನ್ನ ಅಸ್ಥಿ ಶಂಖಚಕ್ರ ಮಯವು ಹೌದು ಪಂಕಜಾಕ್ಷ ಅಂಗದಲ್ಲೆ ಅಂಕೆರಹಿತ ಸುಖವು ನುಂಬೆಹೊ ಸೂತ್ರ ತಾನು ಕಿಂಕಿಣೀ ಸುರಾವದಿಂದ ಶಂಕೆ ಕೊಡದೆ ಸಾರುತಿಹನು ಬಿಂಕವಾಗಿ ಪದವಿಬರ್ಪುದ15 ಮೇರುಗಿರಿಯ ಶಿಖರದಲ್ಲಿ ಕ್ರೂರಮದನ ತಾಪದಿಂದ ಚಾರುಕನ್ಯೆಯೊಬ್ಬಳಿನ್ನು ತೋರೆ ಸ್ವಾಂಗ ನಿನ್ನ ಬಯಸುತ ಧೀರನೀನು ಕದಲದಿರಲು ಕ್ರೂರ ತಪದಿ ಹರಿಯ ಒಲಿಸಿ ನೀರೆ ಪಡೆದ ಲೈಯ ನಿನ್ನ ಸೇರಿ ಸುಖಿಪ ಭಾಗ್ಯಮುಂದಕೆ 16 ಗರುಡನೇರಿ ನಿನ್ನ ಸಹಿತ ಹರಿಯು ತೋರಿಸಕಲಲೋಕ ಅಮೃತ ಕರದಿ ಕುಡಿಸಿ ಅರವಿ ದೂರ ನಿನ್ನ ತಬ್ಬಿದ ಮರುತನಂತೆ ವ್ಯಾಜರಹಿತ ಚರಣಭಜರ ನಿನಗೆ ತಾನೆ ಕರೆದು ಕೊಟ್ಟ ವಾಯುಪದವಿ ತುರಗವದನ ಪ್ರಥಮ ಭಕ್ತಹೋ17 ಗೆದ್ದು ವೀರಶೈವಗುರುವ ಗದ್ದುಗೆಯನು ಏರಿ ಮೆರೆದೆ ಮೆದ್ದು ಗರವ ಸುಖದಿ ನಿಂದೆ ತಿದ್ದಪಾಟು ತೋರ್ದೆ ಉಡುಪಿಲಿ ಬದ್ಧನಾದ ವಿಠಲ ನಿನಗೆ ಬಿದ್ದ ನೃಪನ ಗೇಸಿ ಕಾಯ್ದೆ ಶುದ್ಧ ವಿಷ್ಣುಭಕಿÀ್ತ ತೋರಿ ಮಧ್ವಸುತರ ಪೊರೆದ ದಾನಿಹೋ 18 ನೂರುನೂರು ಆನೆಮೀರಿ ಭಾರಿಬಲದ ಮೆರೆವ ಶಕ್ತ ನೇರನಿಲಿಸಿ ಧ್ವಜದಸ್ತಂಭ ದೂರಗೈದೆ ಶಿಷ್ಯಕಳವಳ ಭಾರ ಹೌರ ಸ್ಥೂಲಸೂಕ್ಷ್ಮ ತೋರಬಲ್ಲೆ ಇಚ್ಛೆಯಂತೆ ಮೇರೆ ಇರದ ಮಹಿಮನೆಂದು ಸಾರಿಸಾರಿ ನುತಿಪೆ ಜೀಯನೆ 19 ಗಂಗೆಪಡೆದ ರಂಗನನ್ನು ಅಂಗನಿಂದ ತರಿಸಿ ನೆಟ್ಟು ತುಂಗವಿಭವದಿಂದ ಯಜಿಸಿ ಕಂಗಳಿಂದ ನೋಡಿ ಉತ್ಸವ ಅಂಗಮರೆತು ನಂದ ಕುಡಿದೆ ಸಂಗದಿಂದ ಕಂಡ ಜನಕೆ ಭಂಗವಾಯ್ತು ಸಕಲ ಬಂಧ ಕೊಂಗಿ ಖಳರ ಬಿಟ್ಟು ಸತ್ಯವೈ 20 ಬರಿಯ ಕವನವಲ್ಲ ಕೇಳಿ, ಗುರುವೆ ದ್ವಿಜನ ಸ್ವಪ್ನದಲ್ಲಿ ಅರುಹಿ ತನ್ನ ಚರಿತೆಯನ್ನು ಬರೆಸಿ ಇಹನು ಪೊರೆಯೆ ಶಿಷ್ಯರ ಅರಸಿ ನೋಡಿ ಧನ್ಯರಾಗಿ ಒರೆಸಿ ಕಾಮಕ್ರೋಧವೆಲ್ಲ ಚರಣಪಿಡಿಯೆ ಭಕ್ತಿಯಿಂದ ಗುರುವು ಬಿಡನು ನಿಮ್ಮನೆಂದಿಗು 21 ಸುಧೆಯ ಕರ್ತ ಜಯಮುನೀಂದ್ರ ಹೃದಯವಾಸಿ ವಾಯುವಂದ್ಯ ಪದುಮೆ ರಮಣ ಕೃಷ್ಣವಿಠಲ ಸದರದಿಂದ ಮುಕ್ತಿ ನೀಡುವ ಸದನ ವಾಜಿವಕ್ತ್ರಗೆರಗಿ ಬದರಿನಿಲಯ ನನ್ನ ನೆನೆದು ಪದವನಿದನು ಪಠಿಪ ಭಕ್ತಗೆ22
--------------
ಕೃಷ್ಣವಿಠಲದಾಸರು
ಅನ್ಯಾಯದ ಮಾತುಗಳಾಡದಿರಿ ನೀವುಹೆಣ್ಣುಗಳಿರ ಕೇಳಿಪುಣ್ಯವಂತರಾದ ಕಾರಣ ಕೃಷ್ಣನಕಣ್ಣಿಂದ ನೋಡಿದಿರಿ ಪ. ವಾರಿಜಭವಾದ್ಯರ[ಸೇರದಿರುವವ]ಸೇರೋನೆ ಸಣ್ಣವರಸೂರ್ಯನಂತೆ ತೇಜದವ ಬಂದು ನಿಶಿಯಲಿಸೂರಿಲಿ ನಿಂತಾನೇನೆ 1 ಕ್ಷೀರಸಾಗರಶಾಯಿ ಆಗಿದ್ದವನು ಪಾಲುಸೋರೆ ಕದ್ದದ್ದು ನಿಜವೆನಾರೇರೆಂದರೆ ಮನಕೆ ತಾರದ ಸ್ವರಮಣಪೋರೇರ ನೆರೆದಾನೇನೆ2 ಕಾಲಯವನನ ಕೂಡ ಕಲಹ ಕೊಟ್ಟವ ನಿಮ್ಮಬಾಲರ ಬಡಿವನೇನೆಮೂಲೋಕವನೆಲ್ಲ ಭಾರಹೊತ್ತ ಹರಿ ತಾನುಆಳುಗಳೇರುವನೇನೆ 3 ವಾಲಯದಿ ಸುರರಿಗೆ ಸುಧೆಯನಿತ್ತ ಗೋಪಾಲಮೊಲೆಯನುಂಬುವನೇನೆಪೇಳಲಿನ್ನೇನು ದನುಜಕುಲಾಂತಕÀ ಹರಿಮೂಲೆಯಲಡಗುವನೇನೆ 4 ಸುರರು ಸ್ತುತಿಸೆ ತುಟಿ ಮಿಸುÀದವ ತಾನು[ಬಿರು]ಮಾತನಾಡುವನೆಕರಿರಾಜ ಕ[ರೆ]ದರೆ ಓಡಿ ಬಂದವ ನೀವುಕರಿಯೆ ಬಾರದಿಪ್ಪನೆ 5 ಸ್ಥಿರವಾದ ವೈಕುಂಠದರ¸ನೆನಿಸುವ ಸ್ವಾಮಿಕೆರೆಭಾವಿ ತಿರುಗುವನೆಗರುಡವಾಹನನಾಗಿ ಮುರಹರ[ಕರುಗಳ]ಏರುವನೆ6 ಪುಣ್ಯ ಪ್ರೇರಿಸುವ ದೇವರ ದೇವನು ಪರ-ಹೆ[ಣ್ಣ]ನಪ್ಪಿಕೊಂಬನೆಉಣ್ಣಲಿತ್ತ ಎಡೆ ಒಲ್ಲ ನಿತ್ಯತೃಪ್ತಬೆಣ್ಣೆಯ ಮೆಲುವÀನೇನೆ7 ಕಣ್ಣಿಗೆ ಕಾಣದ ಚಿನ್ಮಯ ಸರ್ವದಾ ನಿ-ಮ್ಮನೆಯೊಳಿಪ್ಪನೇನೆಚೆನ್ನರ ಚೆಲುವ ಕಾಮನಪಿತ ನಿಮ್ಮನುಆಣಕಿಸಿ ಆಡುವನೆ 8 ಮೃದುವಾದ ಉರಗತಲ್ಪನು ಹಸಿಬಾಣಂತಿಯಅದಟ ಮಂಚದೊಳಿ[ಪ್ಪ]ನೆಎದೆಯಲಿ ಶ್ರೀವತ್ಸ ಘಮಘಮಿಸುವ ದೇವಮದಬೆಕ್ಕು ಒಯ್ದ್ದನೇನೆ 9 ಮದನಾರಿಗೆ ತಾನು ಅದ್ಭುತ ಮಾಡಿದವಇದು ಆತನ ಲೀಲೆಯೆಪದುಮಾಕ್ಷ ಸಿರಿಹಯವದನರಾಯನ ಭಜಿಸಿಮುದದಿಂದ ನೀವು ಬಾಳಿರೆ 10
--------------
ವಾದಿರಾಜ