ಒಟ್ಟು 203 ಕಡೆಗಳಲ್ಲಿ , 49 ದಾಸರು , 175 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾರತಿ ಬುದ್ಧಿಯನು ತಿದ್ದಮ್ಮ ಮಧ್ವರಮಣಿ ಪ ಸದ್ದು ಇಲ್ಲದೆ ಶಿದ್ಧಿಯನು ಕೊಟ್ಟು ಉದ್ಧರಿಸು ಮಾತೇ ಅ.ಪ. ಯೇನು ಅರಿಯದಾ ಕಂದ ನಿನ್ನನು ನಂಬಿದ ಕಾರಣದಿ 1 ಪರಮ ಕರುಣಾಸಿಂಧುಯಂದುನೀನೆ ಗತಿಯೆಂದು ಬಂದೆ 2 ಸಫಲ ಮಾಡಲೇಬೇಕು ಬಯಕೆಯನು ತಂದೆವರದಗೋಪಾಲವಿಠಲನ ಪ್ರೀಯ 3
--------------
ತಂದೆವರದಗೋಪಾಲವಿಠಲರು
ಭಾರತಿ ಗುರುವರ ಗುರುಮಾರುತಿ ಕರುಣಿಸೊ ಸಾರಿದೆ ತವ ಪದ ಸಾರಸವ ಪ ದಾಶರಧಿಗೆ ನಿಜ ದಾಸನೆನಿಸಿ | ಕಮಲಾ ಸನ ಪದವಿಯ ಪೊಂದಿದ್ಯೋ ನೀ ಭೂಸುತೆ ಚೋರನ ಭಾಸುರ ಪುರವ ಹು ಕೀಶ ನಮೋ 1 ಪುನಃ ದ್ವಾಪರದಲಿ ಜನಿಸಿ ಧ ರ್ಮಾನುಜನೆನಿಸಿ | ಭೂಭಾರ ದನುಜರ ರಣದಿ ಹೂಂಕಾರದಿ ಕುಣಿದು ಹರಿ ಮನ ಘನ ಮೆಚ್ಚಿಸಿದ ಭೀಮ ನಮೋ 2 ಶ್ರೀಮದಾನಂದ ಮುನಿ ನಾಮದಿ ಪರಾತ್ವರ ನೇಮದಿ ಭಜಪರ ಕಾಮಿತ ಗರಿಯುವ ಧಾಮ ನಮೋ 3
--------------
ಶಾಮಸುಂದರ ವಿಠಲ
ಭಾರತಿ ದೇವಿಯೆ ಮಾರುತಿ ರಾಣಿಯೆ ಪ. ಮಂದಿ ನಾಲ್ವರನು ಹೊಂದಿಸಿ ಉದರÀದಿಒಂದೆ ರೂಪದಿ ಜನರಿಗೆ ತೋರುವ ಸತಿ1 ಸೀತಾಕಾಂತನ ದೂತನಾಗಿ ಪ್ರ-ಖ್ಯಾತಿಯ ಪಡೆದನ ಪ್ರೀತಿಯ ಸತಿಯಳೆ 2 ದುಷ್ಟ ಕಲಿಯ ಕುಲಕುಟ್ಟಿ ಕೆಡಹಿದ ಭಲಕಟ್ಟಾಳು ಭೀಮನ ಪಟ್ಟದಸತಿಯಳೆ 3 ಮೂರುಏಳುಕುಲ ಮಾಯಿಗಳನು ಗೆದ್ದುಬೋರೆಮರದ ಕೆಳಗಿರುವನ ಸತಿಯಳೆ 4 ಹಗಲಿರುಳೆನ್ನದೆ ಹಯವದನನ ಪದಹೃದಯ ಕಮಲದೊಳು ಭಜಿಪನ ಸತಿಯಳೆ 5
--------------
ವಾದಿರಾಜ
ಭಾರತಿ ಪೊರೆಯೆಮ್ಮನು ಕಾರುಣ್ಯಮೂರುತಿ ಸಾರಸಭವಸತಿ ತೋರಿಸು ಸನ್ಮತಿ ಪ. ವೀಣಾಪುಸ್ತಕಧಾರಿಣಿ ಪನ್ನಗವೇಣಿ ವಾಣಿ ಗೀರ್ವಾಣಿ ಜನನೀ ಜಾಣೆ ಬ್ರಹ್ಮನ ರಾಣಿ ಸುಶ್ರೋಣಿ ಕಲ್ಯಾಣಿ 1 ನಾರದಮುನಿ ಸನ್ನುತೆ ಸಾರಸನೇತ್ರೇ ಚಾರುಚರಿತೇ ಸುರಸುತೆ ಮಾರನಯ್ಯನ ಚರಿತೆ ಸಾರುವಂತೆಸಗು ಮಾತೆ 2 ನಾಲಿಗೆಯೊಳು ನೆಲಸುತ ನಲಿನಲಿಯುತ ಮೇಲಹಕೃತಿ ನುಡಿಸುತ ಪಾಲಿಸು ಶ್ರೀಗಿರಿಲೋಲನ ಸೊಸೆ ನಿರುತ 3
--------------
ನಂಜನಗೂಡು ತಿರುಮಲಾಂಬಾ
ಭಾರತಿ ಭರತನ ರಮಣಿ ಶಿರಬಾಗುವೆ ತ್ರಿಜಗಜ್ಜನನಿ ಪ. ಭಾರತ ಭಾಗವತಾರ್ಥ ಬೋಧಿನಿ ಶಾರದೇಂದುನಿಭವದನಿ ಅ.ಪ. ಹರಿಗುರುಗಳಲಿ ಸದ್ಭಕ್ತಿ ದೃಢ ಕರುಣಿಸು ಸರಸಿಜನೇತ್ರಿ ಗಿರೀಶಾದಿ ಸರ್ವಸುರೌಘಪ್ರಣೇತ್ರಿ ಶರಣು ಶರಣು ಸುಪವಿತ್ರಿ 1 ಕಾಳಿ ದ್ರೌಪದಿ ಸುನಾಮೆ ನಮ್ಮ ಪಾಲಿಸು ಭೀಮಪ್ರೇಮ ಶ್ರೀ ಲಕ್ಷ್ಮೀನಾರಾಯಣನ ಭೃತ್ಯೆ ಕಾಲತ್ರಯ ಕೃತಕೃತ್ಯೆ 2
--------------
ತುಪಾಕಿ ವೆಂಕಟರಮಣಾಚಾರ್ಯ
ಭಾರತಿ ಭಾಗ್ಯವತಿ ಜಯತಿ ಪ. ಸೂರಿಜನೋದ್ಧರೆ ಸುಗುಣಾಲಂಕಾರ ಸಾರಸದಳನೇತ್ರಿ ಜಯತಿ 1 ಚಿತ್ರಚರಿತ್ರೆ ಚಿತ್ಸುಖಗಾತ್ರೆ ಸತಿ ಜಯತಿ 2 ಅನಘ ಲಕ್ಷ್ಮೀನಾರಾಯಣನ ಶ್ರೀಚರಣಾ- ವನತರ್ಗೆ ನೀನೆ ಗತಿ ಜಯತಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಭಾರತಿ ಮರುತನ ರಾಣಿ ಶುಭ ವಾಣಿಯಾಗಿರುವಿ ಕಲ್ಯಾಣಿ ನಾರಸಿಂಹನ ಸೊಸೆಯಾದಿ ಸರ್ವ ನಾರಿಯರಿಗೂ ನೀ ಮೇಲಾದಿ ಪ ಭೀಮನು ಶೂದ್ರನೆಂದಿರಲು ನೀನು ಶೂದ್ರೆಯೆಂದೆನಿಸುತಲಿರುವಿ ಕಾಮಿ ಕೀಚಕನಿಗೆ ಮೃತ್ಯುವಾಗಿ ನಿನ್ನ ಪ್ರೇಮವನೇನು ಬಣ್ಣಿಸಲಿ 1 ಜುಟ್ಟನು ಕೈಯೊಳು ಸೆಳೆದ ದುಷ್ಟ ದೈತ್ಯನ ಪಂಥದಿ ಮಥಿಸಿ ಪಟ್ಟದರಸನು ತೋರಿದುದದ್ಭುತವು ಸಿಟ್ಟು ನಿನಗಾಗಿ ತೋರ್ದುದಾಶ್ಚರ್ಯ 2 ರಾಜಧರ್ಮನು ಸುಮ್ಮನಿರಲು ರಾಜನಾಥ ಶ್ರೀಹಯಮುಖ ದಾಸ ರಾಜ ಭೀಮನು ತೋರ್ದ ಶಾಂತತೆಯ ರಾಜೀವಾಕ್ಷ ನಿನ್ನೊಳು ತೋರಿದ ಕರುಣ 3
--------------
ವಿಶ್ವೇಂದ್ರತೀರ್ಥ
ಭಾರತಿ ರಮಣ ಪಾಲಿಸು ಕರುಣ ಶ್ರೀರಾಮನ ಪದ ನಿಜ ಶರಣ ಪ ಭವ ಸಂಹಾರಣ ಪರಾಶರ ಮತ ವಿಸ್ತರಣಅ.ಪ. ತ್ರೇತೆಯೊಳಂಜನೆ ಉದರದಿ ಜನಿಸಿ ಸೀತಾನಾಥನ ಪಾದಕೆ ನಮಿಸಿ ದೌತ್ಯವ ವಹಿಸಿ ಕೀರ್ತಿಯ ಗಳಿಸಿ ಭಕ್ತಾಗ್ರಣಿಯೆನಿಸಿದ ಗುರುವೆ 1 ದ್ವಾಪರದಲಿ ನೃಪ ಕುಲದಲಿ ಬಂದು ಪಾಪಿ ಮಾರ್ಗದ ಪ್ರಮುಖರ ಕೊಂದು ದ್ರೌಪದಿ ಬೇಡಿದ ಸುಮವನು ತಂದು ಶ್ರೀ ಪತಿಗರ್ಥಿಯ ಸಲಿಸಿದ ಗುರುವೆ 2 ಕಲಿಯೊಳು ಕುಜನರ ಮತಗಳ ಜರಿದು ಸುಲಲಿತ ಭಕ್ತಿಯ ಮತವನು ಒರೆದು ನೆಲೆಸಲು ಲಕ್ಷ್ಮೀಕಾಂತನ ಮಹಿಮೆಯ ತುಳುವ ವಿಪ್ರನಲಿ ಉದಿಸಿದೆ ಗುರುವೆ 3
--------------
ಲಕ್ಷ್ಮೀನಾರಯಣರಾಯರು
ಭಾರತಿ ವಂದಿತೆ ಮನಸಿಜ ಮಾತೇ |ಕೋರುವೆ ತವಪದ ವನಜ ವಿಖ್ಯಾತೇ ಪ ನೀರಜ ಜಾತೆ ಅ.ಪ. ಪತಿ ಪರಿ ಸತಿ ಕೃತಿ ಸತಿ 1 ಖಗ ಗಮನನ ಪ್ರಿಯೆಬಗೆ ಬಗೆ ಹರಿಲೀಲೆ | ಲಗು ಬಗೆಯಲಿ ಪೇಳೆಸುಗುಣ ಮಣಿಯಮಾಲೆ | ಮಿಗಿಲು ಪೇಳೆ ಸುಶೀಲೆ 2 ಚಿನುಮಯ ಪ್ರಕೃತಿಯೆ | ಅಣು ಮಹದ್ರೂಪಿಯೆಇನಯನಗನುಸಾರಿ | ಕುಣಿಯುವೆ ಸುಂದರಿ |ಪ್ರಣತರ ಪಾಲ ಗುರು | ಗೋವಿಂದ ವಿಠಲನಗುಣಮಣಿ ಮಾಲೆ ಸದಾ | ಎಣಿಸುವೆ ಮೋದಾ 3
--------------
ಗುರುಗೋವಿಂದವಿಠಲರು
ಭಾರತಿದೇವಿ ಭಕ್ತಿಯನು ನೀಡಮ್ಮ ಭಾರತೀದೇವಿ ಪ. ಭಕ್ತಿ ದಾತೆಯು ಎಂದು ಶ್ರುತಿ ಶಾಸ್ತ್ರ ಸಾರುತಿವೆಅ.ಪ. ಕಾಮ ಕ್ರೋಧಗಳೆಲ್ಲ ಮನೆಮಾಡಿಕೊಂಡುತಾವೆನೇಮದಿಂ ಪರಿಪರಿ ಕಾಡುತಿಹವುಪ್ರೇಮಿ ನಿನ್ನಯ ಪಾದಕಮಲದಲಿ ಮತಿ ಕೊಟ್ಟುಕಾಮನಯ್ಯನ ತೋರು ಸೋಮಶೇಖರ ಜನನಿ 1 ಮಧ್ವಮತದಲಿ ಎನಗೆ ಶ್ರದ್ಧೆ ಪುಟ್ಟದೆ ಪೋಯ್ತುಸಿದ್ಧವಾಗಿಹುದು ಮನ ದುರ್ವಿಷಯಕೆಬುದ್ಧಿವಂತಳೆ ನಿನ್ನ ಮುದ್ದು ಮುಖವನು ತೋರಿಉದ್ಧಾರ ಮಾಡೆ ಶ್ರೀ ಹದ್ದುವಾಹನ ತನಯೆ 2 ಕರುಣವಾರಿಧಿಯೆಂದು ಮರೆಯ ಪೊಕ್ಕೆನು ತಾಯೆಕರಪಿಡಿದು ಕಾಪಾಡೆ ಉರಗವೇಣಿಕರುಣಸಾಗರ ತಂದೆವರದವಿಠಲನನ್ನುನಿರುತದಿ ಭಜಿಸುವ ಭರತರಾಜನ ರಾಣಿ 3
--------------
ಸಿರಿಗುರುತಂದೆವರದವಿಠಲರು
ಭಾರತಿದೇವಿ ಭಕ್ತರತಾಯಿಭಾರತಿ ದೇವಿ ನಿಮ್ಮ ಆರಾಧಿಸುವೆವಮ್ಮನಾರಿಯರ ಸೋಲಿಸಮ್ಮಮಾರಿ ಮೇಲಾಗಿಸಮ್ಮ ಪ. ಮದನನತ್ತಿಗೆ ರಂಭೆ ಮೊದಲಿಗೆ ಬಲಗೊಂಬೆ ಮುದದಿಂದ ಗೆಲಿಸೆಂಬೆ ಸುದತೆ ಪುತ್ಥಳಿಗೊಂಬೆ1 ಸುಪ್ಪಾಣಿ ಕಲ್ಯಾಣಿ ನಿನ್ನನುಗಾಣೆ 2 ಪ್ರದ್ಯುಮ್ನನ ಮಗಳೆ ರುದ್ರಾದಿವಂದ್ಯಳೆಮುದ್ದು ರಾಮೇಶನ ಪ್ರವಾಳೆ ಶುದ್ಧಪಾತ್ರಳೆ ಕೇಳೆ 3
--------------
ಗಲಗಲಿಅವ್ವನವರು
ಭಾರತಿದೇವಿ ಭಕ್ತಸಂಜೀವಿ ಪ ಮಾರುತನರಾಣಿ ಮಾಮಮ ಕಲ್ಯಾಣಿ ಅ.ಪ ಭಕುತಿ ವಿದೂರ ಕುಯುಕುತಿಗಳ ತರಿದು ಯುಕುತ ಮಾರ್ಗದೊಳಗಿರಿಸುವದೆಮ್ಮನು | ಜನನಿ 1 ಬುದ್ಧಿಯನು ಪರಿಶುದ್ಧಮಾಡಿಯನಿ- ರುದ್ಧನ ತೋರಿಸೆ ಪ್ರದ್ಯುಮ್ನನ ಸುಕುಮಾರಿ 2 ಸ್ಮರಿಸುವ ಶರಣರ ಚರಣಸೇವೆಯ ಕೊಡುವುದು 3
--------------
ಗುರುರಾಮವಿಠಲ
ಭಾರತಿದೇವಿ ಭರತನ ರಾಣಿ ಭಾರವು ನಿನ್ನದು ತಾಯೆ ಧಾರುಣಿಯೊಳು ನಿನ್ನಾ ಕೀರುತಿ ಕೇಳಿ ಸಾರಿದೆ ನಿನ್ನನು ಸಾರಭಕುತಿಯನಿತ್ತು ಪಾರುಗಾಣಿಸು ವೈ ಕಾರಿಕಸುರಕರವಾರಿಜ ಪೂಜಿತ ಚಾರುಚರಣಯುಗ ತೋರಿಸಿ ಎನ ಮನೋ- ನೀರಜದಲಿ ನಿಂದು ಮಾರಮಣನ ಪಾದ ಸೇರಿಪ ಭಕ್ತಿಯ ದಾರಿಯನಿತ್ತು ಭವ ದÀೂರನ ಮಾಡೆಂದು ಸಾರಿದೆ ಸಾರಿದೆ ಮಾರಜನಕ ಗುರು ಜಗನ್ನಾಥವಿಠಲನ ತೋರಿಸು ತೋರಿಸು ದೂರಮಾಡದಲೆ
--------------
ಗುರುಜಗನ್ನಾಥದಾಸರು
ಭಾರತಿದೇವಿಯೆ ನಿನ್ನನು ಭಾವದಲಿ ಭಜಿಸುವೆ ಪ್ರಬಲಿಸಮ್ಮಾ ಪ ಮಂದ ಬುದ್ದಿಯಿಂದನಾ ಬಲುಮಾನ ಹೀನನಾಗಿ ಬಾಳಿದೆ ಕೋಮಾಲಾಂಗಿಯೆ 1 ಹತ್ತು ಎಂಟು ಅಂತರದಿ ಜಿಹ್ವದಿ ತಿಳಿವಂತೆನ್ನ ಮಾಡಮ್ಮಾ ಸತ್ಯ ವಾಕ್ಯ ಪ್ರವೀಣೆ ನೀನು ಸಾರುವೆನು ನಾನು 2 ಫಾಲನೇತ್ರಾದಿಗಳಿಲ್ಲಾ ಪರಮ ಮಂಗಳತೋರುವಿ ಬಾಲರಾಮ ಪದಾಬ್ಜ ಭೃಂಗನ ಪಟ್ಟದರಸಿಯೆ 3 ಭಕ್ತಿಯಲಿ ನೀನಿತ್ತರುಂಟು ಭಾದ್ಯರಿದಕಾರು ಕಾಣೆನು ಮುಕ್ತಿ ಮಾರ್ಗವ ತೋರಿಸೆನ್ನನು ಮುಕ್ತನೆನಿಸಮ್ಮಾ 4 ಭೂಮಿಗಧಿಕ ಹೆನ್ನೆಪುರ ಹೆನ್ನೆ ವಿಠಲನ ಪಾದಪದ್ಮವ ಪ್ರೇಮದಿಂದಲಿ ಹೃದಯದಲಿ ಇಟ್ಟು ಪ್ರೀತಿ ತೋರಮ್ಮಾ 5
--------------
ಹೆನ್ನೆರಂಗದಾಸರು
ಭಾರತಿರಮಣ ನಾ ಸಾರುವೆ ಚರಣಾ ಭೂರಿ ಸುಕರುಣಾ ಪ ಮೂರು ಕಾಲದಿ ನಾನಾಮೂರೊಂದು ರೂಪಾ ಮೂರಾರು ಭಕುತಿಲಿ ಸಾರುವೆ ಸುರಪಾ 1 ಮೂರೆರಡಾರಿಂದಲಿ ಮೂರಿಂದ ತಾಪಾ ಮೂರುಮಾಡದಲೆನ್ನಾ ಪೊರೆಯಯ್ಯಾ ಭೂಪಾ 2 ಕುಟಿಲ ದುರ್ವಿಷsÀಯ ಲಂಪಟ ಬಿಡಿಸೀಗಾ ದಿಟ ಗುರುಜಗನ್ನಾಥ ವಿಠಲನ ನಣುಗಾ 3
--------------
ಗುರುಜಗನ್ನಾಥದಾಸರು