ಒಟ್ಟು 93 ಕಡೆಗಳಲ್ಲಿ , 40 ದಾಸರು , 90 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೆಂಕಟಾಚಲ ನಿವಾಸಾ-ಜಗದೀಶ ಸಂಕಟ ಹರಿಸೋ ಶ್ರೀಶಾ ಪ ಪಂಕಜಾಸನ ಪ್ರಮುಖ ಶಶಾಂಕಸುರವರಪೂಜಿತ ಅಕಳಂಕಮಹಿಮ ಖಗಾಂಕ ಚಕ್ರಗದಾ ಶಂಖಶ್ರೀಕರಕಂಜಧರಪಾಣೀ ಅ.ಪ ಲೋಕನಾಥ ಲೋಕಬಂಧು-ದಯಾಸಿಂಧು ಭಕುತರನಿಮಿತ್ತಬಂಧು-ಎಂದೆಂದೂ ಭಕುತರ ಬೆಂಬಲನು ಎಂದೂ-ಇಂತೆಂದೂ ಪಾಕಶಾಸನಪೂಜ್ಯ ಪಿನಾಕಿಪಿತ ಸುರಜೇಷ್ಠವಂದ್ಯ ಏಕಮೇವ ನೀ ಕೈಬಿಡದೆ ಕರ್ಮ- ಪಾಕಮಾಡಿಸೋ-ಕಾಲನಾಮಕ1 ಬಂಧಕಗಳ ತಂದೊಡ್ಡೀ-ಭಕುತರ ಮನ ಪರಿ ಧೃಢಮಾಡಿ-ಪರಿಯುನೋಡಿ ಬಂದ ಬಂಧವ ಹರಿಸಿ-ಹೃದ್ವಾಸೀ ಹಿಂದುಮುಂದೂಕಾಣದ ಮಹ- ಅಂಧಕಾರಣ್ಯದಲಿ ಸಲಹಿದೆ ಬಂಧ ಮೋಚಕನಹುದೋ ಅನಾಥ ಬಂಧು ನೀನೆಂದು ನಂಬಿದೇ 2 ಕರುಣಾಸಾಗರನೇ ನಿನ್ನಾ-ನಾ ನಂಬಿದೆ ಸ್ಮರಣೆಯೊಂದನೆ ಪಾಲಿಸೋ ಈ ಜನುಮದೀ ಪರಮಸಾಧನ ಕಾಣದೇ-ಪರಿತಪಿಸುವೇ ನಿರುತ ಭವಸಂಕೋಲೆಯಾ ಕಡಿದು ಪೊರೆಯುವುದೋ ಶ್ರೀ ವೆಂಕಟೇಶನೆ ಸ್ಮರಿಪರಘ ಪರಿಹರಿಪ ಶ್ರೀ- ಉರಗಾದ್ರಿವಾಸವಿಠಲ ಪ್ರಭೋ 3
--------------
ಉರಗಾದ್ರಿವಾಸವಿಠಲದಾಸರು
ಶ್ರೀರಮಣನೆ ಕಾಯೊ ದಯಮಾಡು ರಂಗಶ್ರೀರಮಣನೆ ಕಾಯೊ ಏ ಕರುಣದಿ ಪ. ನೀರಜಭವಜನಕ ತಾರಿದೆ ಭವದಿಂದ ಏ ಮುರಹರೆಸೇರಿದೆ ನಿನ್ನ ಪದವ ಶ್ರೀರಮಣನೆ ಕಾಯೊ ಅ.ಪ. ಕರುಳ ಸಂಬಂಧವೆಂಬೊ ಎನ್ನ ಕೊರಳಿಗೆಉರುಳುಗಳನೆ ಸಿಲುಕಿ [ಸಿ]ಬರಿದೆ ಮದಗಳೆಂಬ ಈಕರಿಗಳ ಧುರತಗ್ಗದು ಹರಿಯೆ 1 ಅರಿಷಡ್ವರ್ಗವೆಂಬ ಈ ಮಹಾಉರಗಭಯಕೆ ಸಿಲುಕಿಬರಿದೆ ಮದಗಳೆಂಬ ಈ ಕರಿಗಳ ಧುರತಗ್ಗದು ಹರಿಯೆ 2 ಬಲುದುರ್ವಿಷಯಂಗಳ ಈ ಬಲೆಗಳಸಾಲಿಗೆ ಒಳಗಾದೆಕಲಾವತಿ ಜನರೆಂಬ ಈಖಳರ ಒಳಬಿದ್ದೆನೊ ಹರಿಯೆ3 ಜರೆನರೆಗಳು ಬಂದು ಇರುವಾಗಪರಸತಿಯರ ಕಾಟನರನಾಯಿಗಳಂತೆ ಈ-ಪರಿ ನೆರೆಹೊರೆಗಳ ಕೂಟ 4 ದಯವಿಲ್ಲದ ಸತಿಯು ಈ ದುರುಳರುನಯಹೀನರು ಸುತರುಭಯದಿಂದಲಿ ನೊಂದೆದಯಾಂಬುಧೇ ಹಯವದನ ನೀ ಬಂಧು 5
--------------
ವಾದಿರಾಜ
ಶ್ರೇಯ ಸುಖ ಬೀರುತ ಸದೋದಿತ ಮೂಡಿ ಧ್ರುವ ಪೂರ್ವ ಪುಣ್ಯಾಚಲದಿ ಉದಯವಾದ ತೋರ್ವ ಭವಬಂಧವೆಂಬ ಕಗ್ಗತ್ತಲೆ ಹರಿಸಿದ 1 ಹೃದಯ ಕಮಲವಾಯಿತು ಸುವಿಕಾಸ ದ್ವ್ವಿಧಾ ಭಾವೆಂಬ ಚಕ್ರವಾ ಕೊಂದಾಯಿತು ಹರುಷ 2 ಸಂಚಿತ ಪ್ರಾಲಬ್ಧ ಕ್ರಿಯಮಾಣ ವಂಚನಿಲ್ಲದಾಯಿತು ಸಮರ್ಪಣ ಆಘ್ರ್ಯದಾನ 3 ಮಹಿಪತಿಗಾಯಿತು ಆನಂದೋದಯ ಸ್ವಹಿತದೋರಲು ಬಂದೆನಗೆ ತತ್ವೋಪಾಯ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ಲೋ||ಶª-Àುದಮ ಸಹಿತೇನಸ್ವಾನುಭಾವೇನ ನಿತ್ಯಂಸಮಮತಿಮನುಯವ್ಯಣ ಸರ್ವದಾ ಸೇವಕಾನಾಂಯಮ ನಿಯಮ ಪರಾಣಾಮೇಕ ತತ್ಪಾದರಾಣಾಮಮಿತನಿಜ ಮಹಿಮ್ನಾ ದೇಶಿಕೇಂದ್ರೊ ವಿಭಾತಿಯೇನು ವಿಚಿತ್ರ ಪೇಳೆ ಯೇ ಮತಿಯೆ ನಿದಾನವನೆನ್ನೊಡನೆಮಾನಸ ವೃತ್ತಿಯಾತ್ಮನ ಕೂಡಿಬರಲೊಂದು ಗಾನ ತೋರುವುದಿದೇನೆ ಪಎಲ್ಲವನುಳಿದೀಗಲೂ ಬಗೆಗೊಂಡು ಮುದದಿಂದ ಬಂದು ನಿಂದುಸಲ್ಲಲಿತಾನಂದ ಪದವ ನೋಡುವೆನೆಂದು ಸವರಿಸಿ ಬರಲು ಮುಂದುಇಲ್ಲ ಮತ್ತೊಂದಾತ್ಮನಿಂದಧಿಕವೆಂದು ನಿಲ್ಲದೆ ಧ್ಯಾನಿಸಲುಝಲ್ಲನೆ ಜಲಧಿಯ ಮೊರವಿನಂದದಿ ತೋರಲಲ್ಲಿ ನಾ ಬೆರಗಾದೆನು 1ಅಂಜದೆ ಚಿಂತಿಸಲು ಮುರಜ ಭೇರಿ ಮಂಜುಳ ವೀಣೆಗಳಸಿಂಜಿತಗಳು ಮೇಘನಾದ ಮುಂತಾದವು ಸಂಜನಿಸಿದವೊಳಗೆರಂಜನೆುಂದವನು ಕೇಳುತ ಹೃತ್ಕಂಜದೊಳ್ಬೋಧೆಯೆಂಬಅಂಜನವಚ್ಚಲು ಬಿಂದು ಪೊಳೆುತು ನಿರಂಜನ ರೂಪಿನಲಿ 2ಮತ್ತೆ ಮುಂದೆ ನೋಡಲು ಬಿಂದುವೆಂಬುತ್ತಮ ಹಿಮಕರನಕತ್ತಲೆಗವಿದುದು ಅದ ನೋಡುತ ಮನ ತತ್ತರಿಸಿತು ನಿಲ್ಲದೆಚಿತ್ತವನಲುಗದೆ ಗುರುಪಾದವ ಧೃತಿವೆತ್ತು ಚಿಂತಿಸುತಿರಲುಕತ್ತಲೆ ಪರಿದು ಕಳಾ ವಿಶೇಷ ನೋಡಲೆತ್ತಲೆತ್ತಲು ತುಂಬಿತು 3ಛಂದದಿತೇಜವನು ನೋಡುತಲದರಿಂದಲಧಿಕ ಸುಖವೂಮುಂದೆ ಪುಟ್ಟಲದರನುಭವದಲಿ ಹಿಗ್ಗಿ ನಿಂದು ಜುಂಮುದಟ್ಟಲುಎಂದೆಂದು ಕಾಣದ ಸುಖದೊಳು ಮನ ಬಳಿಸಂದು ಲಯವನೈದಲುಒಂದಲ್ಲದೆರಡಿಲ್ಲದ ನಿಜ ನಿತ್ಯಾನಂದವೆ ನಾನಾದೆನೂ 4ತಾಪತ್ರಯಗಳಡಗಿ ಕರ್ಮಕಲಾಪವಿಲ್ಲದೆ ಪೋದುದುಗೋಪಾಲಾರ್ಯರ ಕೃಪೆುಂದ ಭವಬಂಧವೀ ಪರಿ ಬಯಲಾದುದುವ್ಯಾಪಾರವೆಲ್ಲವನಿತ್ಯವಾದವು ನಿರ್ಲೇಪತೆಯೆನಗಾದುದುದೀಪಿತ ವಿಜ್ಞಾನ ರತ್ನವೆಂದೆನಿಸುವ ದೀಪ ಸುಸ್ಥಿರವಾುತೂ 5
--------------
ಗೋಪಾಲಾರ್ಯರು
ಸಂಸಾರವನು ಮಾಡಿ ಸಕಲ ಜನರೂ ಪ ಕಂಸಾರಿ ಶ್ರೀಕೃಷ್ಣ ಕೈಪಿಡಿದು ಸಲಹುವನು ಅ.ಪ. ಬುದ್ಧಿಯೆಂದೆಂಬ ಕನ್ನಿಕೆಯ ಮದುವೆಯ ಮಾಡಿಸದ್ಧರ್ಮದಭಿಮಾನದಿಂದ ಬೆಳಸೀ ||ಶುದ್ಧ ಭಕ್ತಿಗಳೆಂಬ ಮಕ್ಕಳನು ಪಡೆದು ಬಹುಅದ್ಭುತ ಭವಾಬ್ಧಿಯನು ದಾಟಿರಯ್ಯಾ 1 ಚಾರು ಸುಜ್ಞಾನವೆಂಬುವ ಮುದ್ದು ಮಗನ್ಹಡೆದುವೈರಾಗ್ಯವೆಂಬ ಭಾಗ್ಯವನೆ ಬೇಡೀ ||ಸಾರ ಹರಿನಾಮಗಳ ರಸ ಪದಾರ್ಥಗಳುಣಿಸಿಕಾರುಣ್ಯದಲಿ ಬೆಳೆಸಿರಯ್ಯ ಮಕ್ಕಳನೂ 2 ಯಮ ನಿಯಮ ಅಷ್ಟಾಂಗ ಅಣಿಮಾದಿಗಳುಕ್ಷಮೆ ದಮಾದಿಗಳೆಂಬ ಬಂಧು ಬಳಗಾ ||ಮಮತೆ ಪೆರ್ಚಿಸಿಕೊಂಡು ಬೀಗತನ ಮೊದಲಾದಅಮರಿಕೆಯ ಸಂಬಂಧವನೆ ಮಾಡಿರಯ್ಯಾ 3 ಶೀಲ ಸನಕಾದಿಗಳು ಮುನಿ ದೇವತಾದಿಗಳುತಾಳಿ ತಮ್ಮೊಳಗೆ ಸಮ ವಿಷಯರಾಗಿ ||ಆಲಂಪಟಗಳ್ಹಚ್ಚಿಕೊಂಡು ಭವನಿಧಿ ದಾಟಿಸಾಲೋಕ್ಯ ಮೊದಲಾದ ಮುಕ್ತಿಗೈದಿದರೂ 4 ಸತಿ ಸುತರು ಭಾಗ್ಯವೆ ನಿಮಗೆಹರಿಯಿತ್ತ ಕಾಲಕ್ಕು ಹೃದಯದೊಳಗೇ ||ಮರೆಯಲಾಗದು ಹಿಂದೆ ಸಂಸಾರದಾ ಬಾಧೆ ದುರಿತಾರಿ ವ್ಯಾಸ ವಿಠ್ಠಲ ಬ್ಯಾಗ ಒಲಿವಾ 5
--------------
ವ್ಯಾಸವಿಠ್ಠಲರು
ಸಿಕ್ಕ ಸಮಯ ನಿಜ ತಿಳಿಯದಲೆ ಬರಿ ಕಕ್ಕುಲಾತಿ ನಿನಗ್ಯಾಕಲೆ ಮರುಳೆ ಪ ಬೊಕ್ಕಸ ಭಂಡಾರವೆಲ್ಲ ಸುಳ್ಳೆ ಸುಳ್ಳೆ ನಿನ್ನ ನಿಕ್ಕುವ ಮನೆ ಊರ್ಹೊರಗಿದೆಲೆ ಅ.ಪ ಮೇಲುಮಾಳಿಗೆಮನೆ ಸ್ಥಿರವಲ್ಲ ಬಹು ಬಾಳುವೆ ಧನಸಿರಿ ನಿನಗಿಲ್ಲ ನಾಳೆ ಬಂದೊದಗಲು ಯಮಶೂಲ ಹಿಂ ಬಾಲಿಸಿ ನಿನಗೊಂದು ಬರೋದಿಲ್ಲ 1 ಬಂಧುರ ಬುವಿಯಧಿಕಾರ ನಿಖಿಲ ಮಹ ಅಂದಣೈಶ್ವರ್ಯ ಛತ್ರ ನಂಬಿಗಿಲ್ಲ ತಂದೆ ತಾಯಿ ಬಂಧು ಬಳಗೆಲ್ಲ ನಿನ ಗೊಂದುಕೊಂದು ಸಂಬಂಧವಿಲ್ಲ 2 ಅತಿರಥರೆಲ್ಲರೀ ಭೂಮಿ ಸುಖ ನೆಚ್ಚಿ ಮತಿಗೆಟ್ಟು ಪೊಂದದಿರತಿ ದು:ಖ ಜತೆಯಲಾರ್ವೊಯ್ಯಲಿಲ್ಲಂತೆಕ್ಕ ಸುಳ್ಳೆ ವ್ಯಥೆ ಬಟ್ಟರು ತಿಳಿಯದಿದರ ಲೆಕ್ಕ 3 ಕ್ಷೋಣೆ ಪಾರುಪತ್ಯತನವೆಲ್ಲ ತಿಳಿ ಆನೆ ಕುದುರೆ ಒಂಟೆ ನಿನ್ನದಲ್ಲ ಕಾಣುವುದೆಲ್ಲ ಮಾಯಭವಜಾಲ ಮತ್ತು ಮನುಷ್ಯಜನುಮ ಸೀಗೋದಲ್ಲ 4 ನಾನು ನೀನೆಂಬುವ ದುಷ್ಟಮದ ಸುಟ್ಟು ಜ್ಞಾನದೊಡನೆ ಗೆಲಿ ಭವಬಾಧೆ ಧ್ಯಾನದಾಯಕ ಶ್ರೀರಾಮಪಾದ ನಿಜ ಧ್ಯಾನವಿಡಿದು ಪಿಡಿ ಮುಕ್ತಿಪದ 5
--------------
ರಾಮದಾಸರು
ಸಿಕ್ಕಲು ನೋಡೇ ಸತ್ಸಂಗ | ಯನ | ಗಕ್ಕಿತು ಸ್ವಾನುಭವದಂಗ | ಮಿಕ್ಕಿನವಿಷಯದಿ ಹಂಗಿಲ್ಲಾ | ಒಳ | ವಕ್ಕಲವಾದನು ಶ್ರೀನಲ್ಲಾ ಪ ಜ್ಞಾನಾಂಜನವನು ತಂದಿಡಲಿ | ಅ | ಪರಿ ಬಿಡಲಿ | ಪರಿ ಭಾಸುವ ಕೋಶದಲೀ | ತಾನೇ ದೋರುವ ಜಗದೀಶಾ 1 ಭವ ಬಂಧವ ತಿಳಿಯಲು ನೆಲೆಯಾ | ತಾ | ಅವನಿಲಿ ಶುಕನಳಿ ಕನ್ಯಾಯಾ | ವಿವರಿಸಿಯನ್ನೊಳಗೆಚ್ಚರಿಸಿತೆ | ನಾ | ತವಕದಿ ಚಿದ್ಘನದೊಳು ಬೆರೆತೇ 2 ಏನೆಂದ್ಹೇಳಲಿ ಅಮ್ಮಮ್ಮಾ | ಯನ್ನಾನಂದದ ಸುಖ | ಸಂಭ್ರಮಾ | ಶ್ರೀನಿಧಿಗುರು ಮಹಿಪತಿ ಬೋಧಾ | ಸಲೆ | ತಾ ನಳಿಯಿತು ಕಲ್ಪನೆ ಬಾಧಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಿಂಧುಶಯನನೆ ಸರ್ವಬಂಧುಬಳಗ ನೀನೆ ತಂದೆ ನೀ ಬಿಟ್ಟರೆ ಬಂಧುಗಳ್ಯಾರಿಲ್ಲ ಪ ಒಂದು ವೃಕ್ಷದಿ ಬಂದು ಪಕ್ಷಿಗ ಳ್ವøಂದ ಗೂಡಗಲ್ಹೋಗುವಂದದಿ ಒಂದಕೊಂದು ಸಂಬಂಧವಿಲ್ಲದ ಬಂಧುವೆಂಬುವರೆಲ್ಲ ಪುಸಿಯು ಅ.ಪ ಕೊಳದಿ ಮಕರಿಗೆ ಸಿಲ್ಕಿ ಬಳಲುತಿರುವ ಕÀರಿಯ ಬಲವಾಗುಳಿಸಿದರಾರು ಬಳಗ ಹಿಂಡುಗಳಿರ್ದು ನಳಿನಲೋಚನ ನೀನೆ ಗತಿಯೆನೆ ಒಲದು ಆ ಕ್ಷಣ ಕರಿಯನುಳುಹಿದಿ ತಿಳಿದು ಭಜಿಸುವ ದಾಸಜನಕತಿ ಸುಲಭನೆಲೊ ನೀ ಜಲಜನಾಭ 1 ಕುರುಪತಿಸಭೆಯೊಳು ಇರುತಿರೈವರು ಪರಿ ದುರುಳ ಕೊಳ್ಳುತಲಿರೆ ನೆರೆದ ಪತಿಗಳು ಸುಮ್ಮನಿರುತಿರೆ ಹರಿಯೆ ಗತಿಯೆಂದು ತರುಣಿ ಮೊರೆಯಿಡೆ ಮಾನವ ಕಾಯ್ದಿ ಚರಣಭಕ್ತರ ನಿರುತರಸುರಧೇನು 2 ದೃಢದಿ ಶ್ರೀಹರಿಯೆಂದು ನುಡಿಯುವ ಬಾಲಗೆ ಹಿರಣ್ಯ ಕಡುವೈರಿಯಾಗಿ ಗಡನೆ ತೋರ್ಹರಿ ಮೂಢ ಎಲ್ಲೆನೆ ಒಡನೆ ಕಂಬದಿ ಮೂಡಿ ದುರುಳನ ಒಡಲ ಬಗಿದು ಪಿಡಿದು ಭಕ್ತನ ಬಿಡದೆ ಸಲಹಿದಿ ಕಡುದಯಾನಿಧೆ 3 ಇಳೆಪತಿ ಪಿತನಿದಿರೊಳ್ ಮಲತಾಯಿಕೃತಿಯಿಂದ ಬಲುನೊಂದು ಧ್ರುವರಾಜ ಕಳವಳಗೊಂಡು ಜಲಜನಾಭನ ಮೊರೆಯನಿಟ್ಟು ಚಲಿಸದೆ ಮನಮುಟ್ಟಿ ತಪಿಸಲು ಒಲಿದು ಧ್ರುವಪದವಿತ್ತಿ ಭಕ್ತರ ಕಲ್ಪಿತವನೀವ ಕಲ್ಪತರು ನೀನು 4 ಪ್ರಾಣೇಶ ಶ್ರೀರಾಮ ಧ್ಯಾನಿಪರಿಗೆ ಸತ್ಯ ನಾನಾದೈವದ ಬಲವು ನೀನೆಯಾಗಿರುವಿ ಕಾನನದಿ ಕಲ್ಲನ್ನು ತುಳಿದು ದಾನ ಕೊಟ್ಟೆಯ ಜೀವ ಸುದತಿಗೆ ಜ್ಞಾನವಿಲ್ಲದಧಮ ಎನಗೇನು ಶಕ್ಯ ನಿನ್ನ ಮಹಿಮೆ ಪೊಗಳಲು 5
--------------
ರಾಮದಾಸರು
ಹರಿಭಜನವೇ ಬಹುಮಿಗಿಲು ನರನಿಗೆ ಧರೆಯಸುಖವೆಲ್ಲ ಸುಳ್ಳೊ ಸುಳ್ಳೋ ಪ ತಂದೆತಾಯಿಗಳು ಮಂದಿ ಮಕ್ಕಳು ಬಂಧುಬಳಗ ಒಂದು ಸಂಬಂಧವಿಲ್ಲ 1 ಕೋಟಿಕೊತ್ತಲ ಕೋಟಿಧನಬಲ ನೀಟಾದ ಮಹಲು ನಿಜವಿಲ್ಲ ಇಲ್ಲ 2 ರಾಜ್ಯಭಂಡಾರ ಪ್ಯಾಟೆ ತೇಜಿ ಆನೆ ಒಂಟಿ ರಾಜಿಪುದೆಲ್ಲ ಸುಳ್ಳ ಮುಷ್ಟಿಮುಷ್ಟಿ 3 ಸಿರಿ ಅಂದಣ ಭಾರಿ ನಂದಿಪೋಗುವುದೆಲ್ಲ ಹಾರಿ ಹಾರಿ 4 ವರದ ಶ್ರೀರಾಮನ ಚರಣಸ್ಮರಣಿಲ್ಲದ ನರರ ಜನುಮವೆಲ್ಲ ಹಾಳು ಹಾಳು 5
--------------
ರಾಮದಾಸರು
ಹುಟ್ಟಿ ಹುಟ್ಟಿ ಹೊಂದಲಾರೆನಯ್ಯ ಕೃಷ್ಣನೆ ುೀಕಷ್ಟವನ್ನು ಬಿಡಿಸಿ ಕಾಯಬೇಕು ಕೃಷ್ಣನೆ ಪಇಷ್ಟು ದಿವಸ ನಿನ್ನನರಿಯದಿದ್ದೆ ಕೃಷ್ಣನೆ ನೀನುದ್ಟೃುಟ್ಟು ಹುಟ್ಟದಂತೆ ಮಾಡು ಕೃಷ್ಣನೆಅ.ಪಗರ್ಭದೊಳು ನವಮಾಸ ಸಿಕ್ಕಿ ಕೃಷ್ಣನೆ ನೊಂದೆನರ್ಭಕತ್ವದಲ್ಲಿ ಮುಗ್ಧನಾದೆ ಕೃಷ್ಣನೆನಿರ್ಬಂಧವಾುತು ವಿದ್ಯದಲ್ಲಿ ಕೃಷ್ಣನೆ ಮತ್ತೆನಿರ್ಭರದ ಪ್ರಾಯದಲ್ಲಿ ಬೆರೆತೆ ಕೃಷ್ಣನೆ 1ಮದಗಳೆಂಟರಿಂದ ಮೈಯ ಮರೆತೆ ಕೃಷ್ಣನೆ ಬೇಗಹುದುಗಿ ಕ್ಲೇಶವೈದರಲ್ಲಿ ಬಿದ್ದೆ ಕೃಷ್ಣನೆವೊದಗಿ ಪಾಶವೆಂಟರಿಂದ ಬಿಗಿದೆ ಕೃಷ್ಣನೆ ಹಮ್ಮುಇದಕೆ ಮೂಲವಾುತು ಕರ್ಮದಿಂದ ಕೃಷ್ಣನೆ 2ಅರಿಗಳರುವರಿಂದ ಕೊರಗುತಿಹೆನು ಕೃಷ್ಣನೆ ಮುಂದನರಿಯದವರ ಸಂಗವನ್ನು ಮಾಡಿ ಕೃಷ್ಣನೆಉರುಳಿಬಿದ್ದೆ ವಿಷಯಕೂಪದಲ್ಲಿ ಕೃಷ್ಣನೆ ುದನುಪರಿವ ಶಕ್ತಿಯನ್ನು ಕಾಣೆನಯ್ಯ ಕೃಷ್ಣನೆ 3ಮಾಯಾಕಾರ್ಯ ದೇಹವೆನ್ನದೆಂದು ಕೃಷ್ಣನೆ ಅದುಹೇಯವೆಂದು ಕಾಣದಾದೆನಯ್ಯ ಕೃಷ್ಣನೆ ನೋಯದಂತೆ ಪೋಷಣೆಯ ಮಾಡಿ ಕೃಷ್ಣನೆ ುೀಗ ನೋಯಲಾಗಿ ಭಯವು ಜನಿಸಿತಯ್ಯ ಕೃಷ್ಣನೆ 4ಹರಿವ ನದಿಯ ನಡುವೆ ಪರ್ಣ ಸಿಕ್ಕಿ ಕೃಷ್ಣನೆ ಸುಳಿಯಬೆರಸಿ ತಡಿಯ ತಾನು ಸೇರದಂತೆ ಕೃಷ್ಣನೆಕುರುಡ ಕೂಪವರಿಯದುರುಳುವಂತೆ ಕೃಷ್ಣನೆ ಕಾಲಶರಧಿಯಲ್ಲಿ ಮುಳುಗಿ ನೆಲೆಯ ಕಾಣೆ ಕೃಷ್ಣನೆ 5ಇರುಹೆ ಕಡೆಯು ಬ್ರಹ್ಮನಾದಿಯಾಗಿ ಕೃಷ್ಣನೆ ಲೋಕಮರುಳುಗೊಂಡು ಮಾಯೆುಂದ ಮರುಗಿ ಕೃಷ್ಣನೆ ಕೊರಗುತಿದೆ; ಮಾಯೆಯನ್ನು ದಾಟಿ ಕೃಷ್ಣನೆ ಬೇಗಪರಮನೊಳು ಬೆರೆಸಿ ಕೊರಗ ಬಿಡಿಸು ಕೃಷ್ಣನೆ 6ರಜ್ಜು ಸರ್ಪನಾಗಿ ತೋರಿ ಬೆದರೆ ಕೃಷ್ಣನೆ ಅದರಬೆಜ್ಜರವ ಪರಿವ ಮಂತ್ರವುಂಟೆ ಕೃಷ್ಣನೆರಜ್ಜುವೆಂದು ತಿಳಿವುದೊಂದೆ ಮಂತ್ರ ಕೃಷ್ಣನೆ ಹಾಗೆರಜ್ಜು ಸ್ಥಾನ ನಿನ್ನ ನಿಜವ ತೋರು ಕೃಷ್ಣನೆ 7ಕರ್ಮವೆ ಜನ್ಮಕ್ಕೆ ಹೇತುವೆನಲು ಕೃಷ್ಣನೆ ಅಂದುಬ್ರಹ್ಮವತ್ಸಪಾಲರಪಹರಿಸೆ ಕೃಷ್ಣನೆಕರ್ಮವಿತ್ತೆ ಬದುಲ ನಿರ್ಮಿಸಲು ಕೃಷ್ಣನೆ ಹಾಗೆಕರ್ಮವೆನ್ನದೀಗಲೆನ್ನ ಸಲಹು ಕೃಷ್ಣನೆ 8ದುರಿತ ದುಃಖದಿಂದ ನೋವ ಜನರ ಕೃಷ್ಣನೆ ಅವರದುರಿತಗಳ ನೂಕಿ ನಿನ್ನೊಳಿರಿಸು ಕೃಷ್ಣನೆತಿರುಪತೀಶ ದೇವ ವೆಂಕಟೇಶ ಕೃಷ್ಣನೆ ಮಾಯಾತೆರೆಯ ತೆಗೆದು ನಿನ್ನ ನಿಜವ ತೋರು ಕೃಷ್ಣನೆ 9ಓಂ ಸತ್ಯಸಂಕಲ್ಪಾಯ ನಮಃ
--------------
ತಿಮ್ಮಪ್ಪದಾಸರು
ಹೇಮಾಂಬರ ಕದಂಬ ವೆಂಕಟರಾಯಾ ಅ.ಪಎಷ್ಟೆಂದುಸುರೆ ಕೋಟಲೆಗಳಇಷ್ಟ ಮೂರುತಿಯೆ ಅಟ್ಟಿ ಬರುತ 'ಷಹುಟ್ಟು ಹೊಂದುಗಳೆಂಬ ಕಷ್ಟವ ಬಿಡಿಸೊ 'ಶಿಷ್ಟ ವೆಂಕಟರಾಯಾ1ದಂದುಗದಿಂದಾ ಎನ್ನಯಮನ ಕಂದಿಕುಂದುತಿದೆ ಇಂದು ನೀ ಬೆದರದಿರೆಂದಭಯವನಿತ್ತು ಬಂಧವ ಕಳೆಯೆನ್ನತಂದೆ ವೆಂಕಟರಾಯಾ 2ಕಡು ಮನೋವ್ಯಥೆಯಾ 'ಭಾಡಿಸುನುಡಿಯಾಲಿಸಯ್ಯಾ ಬಿಡದೆ ನೀ ಎನ್ನ ಕೈಪಿಡಿದು ಸಂಸøತಿಯೆಂಬ ಕಡಲ ದಾಂಟಿಸೊ ಎನ್ನೊಡೆಯ ವೆಂಕಟರಾಯಾ 3ಗತಿ ನೀನೆಯೆಂದು ಸಾರಿದೆ ನಿನ್ನನತಿ ದೀನ ಬಂಧು ಪತಿತ ಪಾವನ ನೆಂದತಿಶಯದಿಂ ಶೃತಿ ನುತಿಸುತಲಿದೆ ತಿರುಪತಿಯ ವೆಂಕಟರಾಯ 4ಅಪರಾಧ ಶತವಾ ಮಾಡಿದೆ ನಾನುಕೃಪೆುಂದ ಕ್ಷ'ುಸೈ ಜಪತಪವರಿಯದಚಪಲ ಚಿತ್ತನು ನಾನು 'ಮಲಪರಾನಂದನಿಪುಣ ವೆಂಕಟರಾಯಾ 5'ಪ್ರವತ್ಸಲನೆ ಯನಗೆ ನೀನುಸುಪ್ರೀತನಾಗೈ ತಪ್ಪುಗಳೆಲ್ಲವನೊಪ್ಪುಗೊಳ್ಳುತ ಸಲಹಪ್ಪ ನಿಚ್ಚಲು ತಿಮ್ಮಪ್ಪ ವೆಂಕಟರಾಯಾ 6ದುರಿತ ಭಂಜನನೆ ಮಹಾಪುಣ್ಯಚರಿತ ರಾಜಿತನೆ ನೆರೆ ನಂಬಿದರ ಪತಿಕರಿಸುವ ಬಿರುದುಳ್ಳ ಪರಮಾತ್ಮ ಮೂಡಲಗಿರಿಯ ವೆಂಕಟರಾಯಾ 7ವಾರಿಜನಾಭ ಮಹೋನ್ನತವಾರಣಾಧಾರಾ ಗಾರುಗೊಳಿಸುವ ಸಂಸಾರ ದುಃಖವನಿದನಾರಿಗುಸುರುವೆ ಕೊನೇರಿ ವೆಂಕಟರಾಯಾ 8ಮಂಗಳಾತ್ಮಕನೆ ಸೀತಾಕಾಂತಮಂಗಳ ಮ'ಮ ಮಂಗಳಗಿರಿ ನರಸಿಂಗರಾಘವ ರಘುಪುಂಗವ ಅಲಮೇಲುಮಂಗ ವೆಂಕಟರಾಯಾ9
--------------
ತಿಮ್ಮಪ್ಪದಾಸರು
139-3ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ಹರಿದಾಸ ಶ್ರೇಷ್ಠವರ ಕರುಣಿ ಪುರಂದರಾರ್ಯಗುರುಮಹಂತರು ಕೃಪಾನಿಧಿಯು ವಿಜಯಾರ್ಯಈರ್ವರನು ಸಂಸ್ಮರಿಸಿ ಗೋಪಾಲದಾಸರುಪರಮದಯ ತೋರಿದರು ಆಚಾರ್ಯರಲ್ಲಿ1ಹರಿದಾಸ ಪಂಥದಲಿ ಆಚಾರ್ಯರು ಸೇರಿಹರಿವಾಯು ಸೇವೆಯು ಸಜ್ಜನೋದ್ಧಾರಧರೆಯಲ್ಲಿ ಮಹತ್ಕಾರ್ಯ ಆಗುವುದು ಎಂದುಅರಿವರು ಗೋಪಾಲದಾಸರು ಮೊದಲೇ 2ಹರಿದಾಸಗೋಷ್ಠಿಯು ವೆಂಕಟಾಚಲ ಯಾತ್ರೆಚರಿಸೆ ವೆಂಕಟ ರಮಣನಾಲಯದಲ್ಲಿಶ್ರೀ ಶ್ರೀನಿವಾಸನು ಈ ಆಚಾರ್ಯಗೆನೇರವಾಗಿ ತಾನೆ ಕೊಟ್ಟಿಹ ಪ್ರಸಾದ 3ನೆನೆದರು ಈಗ ಗೋಪಾಲದಾಸಾರ್ಯರುತನ್ನ ರೂಪದಿ ಅಂದುಬಂದು ವಾತ್ಸಲ್ಯದಿಅನ್ನ ನಾಮಾವೆಂಕಟಕೃಷ್ಣ ಜಗದೀಶಅನ್ನ ಕೊಟ್ಟು ಒಲಿದಿಹನು ಆಚಾರ್ಯಗೆ 4ಪುರಂದರದಾಸಾರ್ಯರು ಒಲಿದು ದಯದಿ ತಾನೆಯಾರಿಗೆ ತಿಮ್ಮಣ್ಣಾರ್ಯರದ್ವಾರ ಉಪದೇಶಅನುಗ್ರಹ ನಾಮಾಂಕಿತವ ಇತ್ತರೋ ಆನರಸಿಂಹ ದಾಸಾರ್ಯರ ಪುತ್ರರು ಇವರು 5ಹರಿದಾಸರ ಪುತ್ರರಿವರು ಯೋಗ್ಯರು ಎಂದುಹರಿದಾಸಪದ್ಧತಿ ಆರಾಧನಾಕ್ರಮಶಾಸ್ತ್ರ ಜಿಜ್ಞಾಸೆಅನುಸಂಧಾನರೀತಿಯೂಅರುಪಿದರು ಆಚಾರ್ಯರಿಗೆ ದಾಸಾರ್ಯ 6ನೆರೆದಿದ್ದರೂ ಗೋಪಾಲದಾಸಾರ್ಯರಪರಮಪ್ರೀತಿ ಪಾತ್ರ ಈಮಹಂತರುವರದ ಗೋಪಾಲರು ತಂದೆ ಗೋಪಾಲರುಗುರುಗೋಪಾಲದಾಸಾದಿಸೂರಿಗಳು7ಭಾರತೀಪತಿ ಅಂತರ್ಗತಹರಿಶ್ರೀಶಗುರುಗಳ ಒಳಗಿದ್ದು ಜ್ಞಾನೋಪದೇಶಹರಿದಾಸತ್ವದ ವರನಾಮಾಂಕಿತವಕಾರುಣ್ಯದಿಈವಅಧಿಕಾರಿಗಳಿಗೆ8ವನರುಹೇಕ್ಷಣ ಯಜÕನಧಿಷ್ಠಾನ ಯಜÕನವನಜಪಾದ ದ್ವಯವು ಮನವಾಕ್ಕಿಲಿಹುದುಅನಿಲ ಸೋಕಿದ ತೂಲರಾಶಿಯಂದದಲಿಏನು ಮೈಲಿಗೆಯಾದರು ಸುಟ್ಟು ಪೋಪುವು 9ತುಳಸಿದಳ ನಿರ್ಮಾಲ್ಯ ಹರಿಗೆ ಅರ್ಪಿತವಾದ್ದುಜಲಸ್ನಾನ ತರುವಾಯ ಧ್ಯಾನ ಸ್ನಾನಜಲಜನಾಭನ ದಿವ್ಯನಾಮ ಸಂಕೀರ್ತನೆಎಲ್ಲ ಮೈಲಿಗೆ ದೋಷ ಪರಿಹರಿಸುವುವು 10ಶೀಲ ತನುಮನದಿಂದಗುರುಪರಮಗುರುದ್ವಾರಮಾಲೋಲ ಪ್ರಿಯತಮ ಜಗದೇಕ ಗುರುವೆಂದುಗಾಳಿದೇವನು ಮಧ್ವ ಭಾವಿಬ್ರಹ್ಮನ ಸ್ಮರಿಸಿಕಾಲಿಗೆ ಎರಗಿ ಶ್ರೀಹರಿಯ ಚಿಂತಿಪುದು 11ವಾಯುದೇವನ ಒಲಸಿಕೊಳ್ಳದ ಜನರಿಗೆಭಯಬಂಧ ನಿವೃತ್ತಿಯು ಸದ್ಗತಿಯು ಇಲ್ಲಮಾಯಾಜಯೇಶನಪರಮಪ್ರಸಾದವುವಾಯು ಒಲಿದರೆ ಉಂಟು ಅನ್ಯಥಾ ಇಲ್ಲ 12ಬಲಜ್ಞಾನಾದಿಗಳಲ್ಲಿ ಹ್ರಾಸ ಇಲ್ಲವು ಇವಗೆಎಲ್ಲ ಅವತಾರಗಳು ಸಮವು ಅನ್ಯೂನಶುಕ್ಲಶೋಣಿತಸಂಬಂಧವು ಇಲ್ಲವೇ ಇಲ್ಲಇಳೆಯಲಿ ಜನಿಸಿಹ ಹನುಮ ಭೀಮ ಮಧ್ವ 13ಮಾತರಿಶ್ವಸೂತ್ರಪವಮಾನ ಮುಖ್ಯ ಪ್ರಾಣತ್ರೇತೆಯಲಿ ಹನುಮ, ದ್ವಾಪರದಲಿ ಭೀಮಈತನೇ ಕಲಿಯುಗದೆ ಮಧ್ವಾಭಿದಾನದಿಬಂದಿಹನು ಸಜ್ಜನರ ಉದ್ಧಾರಕಾಗಿ 14ರಥನಾಭಿಯಲಿ ಅರವೋಲ್ ಪ್ರಾಣನಲಿ ಸರ್ವವೂಪ್ರತಿಷ್ಠಿತವು ಜೀವರ ದೇಹಕಾಧಾರತತ್ವದೇವಾದಿಗಳ ವರಿಷ್ಟ ಚೇಷ್ಟಕನುಈ ವಾಯುವೇ ಬ್ರಹ್ಮಧಾಮನಾಗಿಹನು 15ಬ್ರಹ್ಮಧಾಮನುಜೀವೋತ್ತಮವಾಯು ಆದುದರಿಂದಬ್ರಹ್ಮ ಸುಗುಣಾರ್ಣವ ಸರ್ವೋತ್ತಮ ವಿಷ್ಣೂನಅಹರ್ನಿಶಿಸ್ಮರಿಪುದು ಈ ಬ್ರಹ್ಮಧಾಮನಲಿಬ್ರಹ್ಮಪ್ರಸಾದ ಆಕಾಂಕ್ಷಿ ಅಧಿಕಾರಿ 16ಬ್ರಹ್ಮಗುಣಪೂರ್ಣಹರಿಗೋಪಾಲ ವೆಂಕಟನೆಬ್ರಹ್ಮಾಂಡ ಸರ್ವವ ಪಾಲಿಸುವ ಪ್ರಭುವುಅಹೋರಾತ್ರಿ ಏಳುದಿನ ಗಿರಿ ಎತ್ತಿ ಮಳೆ ತಡೆದಮಹಾದ್ರಿಧೃಕ್ ಅನ್ನಾದ ಅನ್ನದ ಜಗನ್ನಾಥ 17ಗೋವರ್ಧನಗಿರಿ ಎತ್ತಿ ಜನ ಪಶು ಕಾಯ್ದಶ್ರೀವರ ಗೋಪಾಲ ವಿಠ್ಠಲ ರುಕ್ಮಿಣೀಶದಿವ್ಯ ಮಂದಿರದಲ್ಲಿ ಭೀಮರತಿಯ ತೀರದಲಿದೇವ ನಿಂತಿಹ ಶ್ರೀನಿವಾಸ ಜಗನ್ನಾಥ 18ಶ್ರೀನಿವಾಸ ವೆಂಕಟನೆ ಗೋಪಾಲ ವಿಠ್ಠಲನುತನ್ನ ಭಕ್ತನಿಗೊಲಿದು ಪಂಢರೀಪುರದಿತಾನೆ ಬಂದು ಅಲ್ಲೇ ನಿಂತು ಭಕ್ತರು ಮಾಳ್ಪಗಾನ ಸೇವಾ ಕೇಳುತ ಪಾಲಿಸುತಿಹನು 19ಸರ್ವಕ್ಷರ ಉತ್ತಮನು ಸರ್ವೇಶಸರ್ವ ಐಶ್ವಯಾದಿ ಸಚ್ಛಕ್ತಿ ಪೂರ್ಣಶಿವ ಸುರಪುರಿಗೆ ಸುಖಜ್ಞಾನಾದಿಗಳನೀವದೇವಿ ಶ್ರೀ ಲಕ್ಷ್ಮೀಶ ಠಲಕ ವಿಠ್ಠಲನು 20ಜಡಭವ ಅಂಡದ ಸೃಷ್ಟ್ಯಾದಿ ಕರ್ತನಿವತಟಿತ್ಕೋಟಿಅಮಿತ ಸ್ವಕಾಂತಿಯಲಿ ಜ್ವಲಿಪಜಡಜ ಭವಪಿತ ಡರಕ ಜಗನ್ನಾಥ ವಿಠ್ಠಲನುನೋಡಲಿಕೆ ಕಾಣುವ ಅವನಿಚ್ಛೆ ದಯದಿ 21ಜಲದಲ್ಲಿ ಜಲರೂಪ ಜಲಜೇಕ್ಷಣನಿಹನುಜಲದಲ್ಲಿ ನೀ ಮುಳುಗಿ ಮೇಲೇಳುವಾಗಜ್ವಲಿಸುವ ಶಿರೋಪರಿ ಜಗನ್ನಾಥ ವಿಠ್ಠಲನುಒಳನಿಲುವ ಹೊರಕಾಂಬ ಎಲ್ಲರ ಸ್ವಾಮಿ 22ಇಂಥಾಸುವಾಕ್ಯ ಧಾರಾನುಗ್ರಹವಹಿತದಿ ಗೋಪಾಲದಾಸಾರ್ಯರು ಎರೆಯೆಮುದಬಾಷ್ಪ ಸುರಿಸುತ್ತ ಶ್ರೀನಿವಾಸಾಚಾರ್ಯಭಕ್ತಿಯಲಿ ನಮಿಸಿದರು ಗುರುಚರಣಗಳಿಗೆ 23ವಾಸುದೇವನ ಒಲಿಸಿಕೊಂಡ ಐಜೀಯವರುಈಶಾನುಗ್ರಹ ಪಡೆದ ದಾಸಾರ್ಯರುಗಳುಆ ಸಭೆಯಲಿ ಇದ್ದ ಹರಿಭಕ್ತ ಭೂಸುರರುಆಶೀರ್ವದಿಸಿದರು ಆಚಾರ್ಯರನ್ನು 24ಉತ್ಕøಷ್ಟ ನಿಗಮಘೋಷಗಳು ಮಂಗಳಧ್ವನಿಹರಿನಾಮ ಕೀರ್ತನ ಸುಸ್ವರ ಸಂಗೀತದಾರಿಯಲಿ ಎದುರ್ಗೊಂಡ ಶುಭಕರ ಶಕುನವುಹೊರಟರಾಚಾರ್ಯ ವಿಠ್ಠಲ ದರ್ಶನಕೆ 25ವಾರಿಜಾಸನ ಪಿತನು ಪೂರ್ಣಪ್ರಜÕರ ಹೃತ್‍ಸ್ಥಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರುಪುರಂದರವಿಜಯಗೋಪಾಲ ದಾಸಾರ್ಯರಚರಣರತ ಜಗನ್ನಾಥ ದಾಸಾರ್ಯ ಶರಣು 26- ಚತುರ್ಥ ಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಯೋಗ ಯೋಗಗಳೆಂದು ಕಸಿವಿಸಿ ತಾನೇಕೆಯೋಗವು ತಾನದೆ ಬಂಧಯೋಗವ ಬಿಟ್ಟು ತನ್ನನೆ ಬ್ರಹ್ಮನೆಂದೆನೆಯೋಗವೆ ರಾಜಯೋಗವೆಂದಪವ್ರತನೇಮ ಶೌಚದಿ ಮುಕ್ತಿಯು ಎಂದನೆವ್ರತನೇಮ ಶೌಚವು ಬಂಧಪ್ರತಿಯಿಲ್ಲದಾ ವಸ್ತು ತಾನೆಂದು ಚಿಂತಿಸೆಅತಿರಾಜಯೋಗವೆಂತೆಂದ1ಮೂರ್ತಿಧ್ಯಾನಷ್ಟಾಂಗದಲಿ ಮುಕ್ತಿಯೆಂದನೆಮೂರ್ತಿಧ್ಯಾನಷ್ಟಾಂಗ ಬಂಧಕರ್ತೃನಾ ಸರ್ವ ಕಾರಣವೆಂದು ಚಿಂತಿಸೆಕರ್ತೃರಾಜಯೋಗವೆಂದ2ಲಯ ಲಕ್ಷದಿಂದ ಮುಕ್ತಿ ಎಂದೆನೆಲಯ ಲಕ್ಷ ತಾನದು ಬಂಧಸ್ವಯಂ ಬ್ರಹ್ಮವೆಂದು ತಾನೆ ಚಿಂತಿಸಿನಿಯಮವು ರಾಜಯೋಗವೆಂದ3ಖೇಚರಿ ಭೂಚರಿಯಲಿ ಮುಕ್ತಿ ಎಂದೆನೆಖೇಚರಿ ಭೂಚರಿ ಬಂಧವಾಚಾತೀತ ವಸ್ತು ತಾನೆಂದು ಚಿಂತಿಸೆಗೋಚರ ರಾಜಯೋಗವೆಂದ4ಎರಡಕ್ಕೆ ತಾವಿಲ್ಲ ಇಹನೊಬ್ಬನೇ ತಾನೇಎರಡಾಗಿ ಕಾಂಬುದೊಂದೇ ಬಂಧಗುರುಚಿದಾನಂದನ ಸಾಕ್ಷಾತ್ಕಾರವೆಂದೆನೆಗುರಿಯದು ರಾಜಯೋಗವೆಂದ5
--------------
ಚಿದಾನಂದ ಅವಧೂತರು
ಶ್ರೀ ಗುರುವರ ! ಮಾಂ ಪಾಲಯ ಭೋ ! ಪಮಾಂ ಪಾಲಯ ಭೋ ! ಅ.ಪಆರ್ತಿಂಹÀರ,ಭವ- ವಾರ್ತಿಂ, ತವ ಸಂ-ಕೀರ್ತನಂ ದಿಶÀ ಸದಾ ಕರುಣಾಕರ ! ಭೋ ! 1ರುದ್ಧಂ, ಭವಗುಣ - ಬದ್ಧಂ, ಜನಸುವಿ -ರುದ್ಧಂ, ಗುರೋ !ಮಾ- ಮುದ್ಧರ ಭೋ !2ಮಗ್ನಂ, ಸ್ತ್ರೀ ಸುತ - ಲಗ್ನಂ, ತ್ವತ್ವದಲಗ್ನಂ, ಕುರು ಕರುಣಾಕರ ಭೋ ! 3ಪುತ್ರಂ, ಸಜ್ಜನ - ಮಿತ್ರಂ, ತ್ವದ್ಗುಣ -ಚಿತ್ರಂ ಜ್ಞಾಪಯ ಶತೃಹ ! ಭೋ ! 4ಹೀನಂ, ದುರ್ಗುಣ - ಮಾನಿಂ, ತ್ವದ್ಗುಣಜ್ಞಾನಿಂ ಕುರು ಕರುಣಾಕರ ಭೋ ! 5ಭಕ್ತಂ, ಸಜ್ಜನ - ಸಕ್ತಂ, ವಿಷಯ ವಿ -ರಕ್ತಂ ಕುರು ಕರುಣಾಕರ ಭೋ ! 6ದೂತಂ,ಭವಭಯ- ಭೀತಂ ಸದ್ಗುಣಖ್ಯಾತಂ, ಯತಿವರ ! ಕರು ಮಾಂ ಭೋ ! 7ಪೋತಂ,ಶ್ರುತಿಸ್ಮøತ್ಯ- ದೀತಂ, ಪಾಪ ವಿ-ಧೂತಂ ಕುರು ಸತ್ವರ ಮಾಂ ಭೋ ! 8ದಾಸಂ, ಸ್ತ್ರೀಕರ ವಾಸಂ - ತ್ವತ್ಸಹ -ವಾಸಂ ಸಂದಿಶ ಸಂತತ ಭೋ ! 9ಮೂಢಂ, ಭವನಿಧಿ -ಗಾಢಂ, ತ್ವತ್ವದರೂಢಂ, ಗುರುವರ ! ಕುರು ಮಾಂ ಭೋ ! 10ಚಾರಂ, ನಿರ್ಗತ - ಸಾರಂ, ಬಂಧವಿದೂರಂ ಕುರು ಕರುಣಾರ್ಣವ ! ಭೋ 11ಬಾಲಂ, ತ್ವದ್ಗುಣ - ಶೀಲಂ, ತತ್ಪದಲೋಲಂ ಕುರು ತ್ವಂ ಕುರು ಮಾಂ ಭೋ ! 12ಪೋತಂ, ಸ್ವಾಮ್ಯವ - ಧೂತಂ , ವಿಸ್ತ್ರುತ -ಖ್ಯಾತಿಂ ಕಾರಯ ಕಾರಯ ಭೋ ! 13ವ್ಯರ್ಥಂ, ದಾಪಯ - ಮೇರ್ಥಂ, ಕುರು ಸುಕೃ -ತಾರ್ಥಂ ಯತಿವರ ! ಮಾಮವ ಭೋ ! 14ದಾತಾಗುರುಜಗ - ನ್ನಾಥಾ ವಿಠಲದೂತಾಗ್ರೇಸರ ಪಾಲಯ ಭೋ ! 15
--------------
ಗುರುಜಗನ್ನಾಥದಾಸರು
ಸಂಸಾರ ಸಂಸಾರವೆಂಬೆರಿ ಸರ್ವದಿವಾರಾತ್ರಿಯಲಿಸಂಸಾರ ಎನಗೊಂದೆ ಅಲ್ಲದೆ ಸಂಸಾರ ಎನಗುಂಟೇನಯ್ಯಪಸತ್ಯವೆಂಬುದೆನ್ನಸತಿಯು ಶಾಂತವೆಂಬುದೆನ್ನಸುತನುಸತ್ಯವೆಂಬುದೆನ್ನ ಸೊಸೆಯು ನಿಜವಿದೀಗಅತ್ಯಧಿಕ ಗುಣಿಯೆಂಬ ಅಗಣಿತದ ಪಿತನಿರಲುಮಿಥ್ಯವಾದ ಸಂಸಾರದಲಿ ಮಗ್ನರಹರೇ1ಬುದ್ಧಿ ಎಂಬುದೆನ್ನಭ್ರಾತೃ ಭಾವನೆ ಎಂಬುದೆನ್ನಭಾವಅದ್ವೈತವೆಂಬ ಅತ್ತೆ ಅಂತಃಕರಣವೆಂಬ ಮಾವಶುದ್ಧಾತ್ಮವೆಂಬ ಬಂಧು ಸಂಬಂಧವೆನಗಿರಲಾಗಿಈ ದ್ವೈತಸಂಸಾರದಲ್ಲಿ ಮಗ್ನರಹರೇ2ಇಂತು ಸಂಸಾರ ಸುಖ ನಿಜದೊಳಗೆನಗಿರಲುಭ್ರಾಂತದಲ್ಲವೆ ನಿಮ್ಮ ಮಾತಿದೆಲ್ಲಚಿಂತಯಕ ಚಿದಾನಂದ ಚಿನ್ಮಯನೆ ತಾ ಬಲ್ಲಅಂತರಂಗದ ಮಾಟಕೆ ಅವನೆ ಸಾಕ್ಷಿ3
--------------
ಚಿದಾನಂದ ಅವಧೂತರು