ಒಟ್ಟು 181 ಕಡೆಗಳಲ್ಲಿ , 27 ದಾಸರು , 154 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣಮತ ನರಸಿಂಹ | ವಿಠಲ ಪೊರೆ ಇವಳಾ ಪ ಜ್ಞಾನಗಮ್ಯನೆ ದೇವ | ಅನ್ನಂತ ಮಹಿಮಾ ಅ.ಪ. ಹಿಂದಿನದ ಸತ್ಸುಕೃತ | ದಿಂದ ವೈಷ್ಣವಪತಿಯಪೊಂದಿಹಳೊ ದೇವೇಶ | ಮಂದರೋದ್ಧಾರಿ |ಚೆಂದುಳ್ಳ ಮಧ್ವಮತ | ಸಂಧಾನ ತಿಳಿಯಲ್ಕೆ |ಇಂದೀವರಾಕ್ಷ ಹರಿ | ಚೋದಿಸೋ ಇವಳಾ 1 ಬೋಧ ಬೋಧ ದೊರಕಿಸುದೇವಆದಿ ಮೂರುತಿ ಹರಿಯೆ | ಬಾದರಾಯಣನೆ2 ಪತಿಸುತರು ಹತರಲ್ಲಿ | ವ್ಯಾಪ್ತನಾಗಿಹ ನಿನ್ನಸ್ಥಿತಿಗತಿಯನೇ ತಿಳಿದು | ಚಿಂತಿಸುವ ಪರಿಯಾಹಿತದಿಂದ ತಿಳಿಸುತ್ತ | ಸಾಧನ ಸುಸತ್ಪಥದಿರತಿಯನೆ ಕೊಟ್ಟಿವಳ | ಉದ್ದರಿಸೋ ದೇವಾ 3 ತೊಡರು ಬರಲಿ | ಅಡವಿಯಲಿ ತಾನಿರಲಿಮೃಡನುತನೆ ನಿನ್ನ ಸ್ಮøತಿ | ಬಿಡದಲೇ ಕೊಟ್ಟುಕಡು ಗುಂಭ ಸಂಸ್ಕøತಿಯ | ಮಡುವಿನಿಂದಡಬಾಕಿಬಿಡದಿವಳ ಪೊರೆಯುವುದು | ಕಡುದಯಾ ಪೂರ್ಣ4 ಗುರುಭಕ್ತಿ ಹರಿಭಕ್ತಿ | ವೈರಾಗ್ಯ ಭಾಗ್ಯದಲಿಪರಮರತಿಯನೆ ಕೊಟ್ಟು | ಹರಿ ಸ್ಮರಣೆಯೆಂಬಾವರವಜ್ರ ಕವಚವನೆ | ತೊಡಿಸೆಂದು ಪ್ರಾರ್ಥಿಸುವೆಮರುತಾಂತರಾತ್ಮಗುರು | ಗೋವಿಂದ ವಿಠಲಾ5
--------------
ಗುರುಗೋವಿಂದವಿಠಲರು
ಪ್ರಾಣಸನ್ನುತ ನರಸಿಂಹ | ವಿಠಲ ಪೊರೆ ಇವಳಾ ಪ ಕಾಣೆನಾನನ್ಯರನು | ಕಾರುಣ್ಯ ಮೂರ್ತೇ ಅ.ಪ. ವಾಸುದೇವ ಹರೀ |ಕೇಶವನೆ ಪೂಜಿಸೀ | ವೇಷದಲಿ ಸೂಚ್ಯ ಪರಿಆಶಿಷವನಿತ್ತು ಉಪ | ದೇಶ ಮಾಡಿಹೆನೋ 1 ಕಾಮಾರಿ ಸಖಕೃಷ್ಣ | ಕಾಮಿತವನೇ ಇತ್ತುಭಾಮಿನಿಯ ಸಲಹೆಂದು | ನೇಮದಲಿ ಬೇಡ್ವೇಶ್ರೀ ಮನೋಹರ ಹರಿಯೆ | ದುರಿತಾಳಿ ಪರಿಹರಿಸಿನಾಮಸ್ಮøತಿ ಸುಖ ಕೊಟ್ಟು | ಭವವನುತ್ತರಿಸೋ 2 ಪಾದ ಮಾನಿಯ ಪ್ರೀಯಪಾವನ್ನ ತವನಾಮ | ನಾಲಿಗ್ಯೆ ಒದಗೀಜೀವನದಿ ಸಂತೋಷ | ಒದಗಲೀ ಎನುತ ಹರಿದೇವ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 3
--------------
ಗುರುಗೋವಿಂದವಿಠಲರು
ಪ್ರಾರ್ಥಿಸುವೆ ರಘುನಾಥತೀರ್ಥರ ಪ್ರಾರ್ಥಿಸುವೆ ಪುರುಷಾರ್ಥಪ್ರದರ ಪ ಸಾರ್ಥಕವಾಗಲು ಪಾರ್ಥಿವ ದೇಹವು ಜಗದಲಿ ಕೀರ್ತಿಗಳಿಸಿದವರ ಅ.ಪ ನೇದೃಶಂ ಸ್ಥಲಿಮಲಂ ಶಮಲಘ್ನಂ ನಾಸ್ಯತೀರ್ಥಂ ಸಲಿಲಸ್ಯಸಮಂ ವಾಃ ನಾಸ್ತಿ ವಿಷ್ಣುಂ ಸದೃಶಂ ನನುದೈವಂ ಸತ್ಯ ವಚನಗಳಿವೆಂದು ಸೂಚಿಸುತ ಆಸ್ತಿಕ ಜನಮನ ರಂಜಕ ತ್ರಿಮಕುಟ ಕ್ಷೇತ್ರನಿವಾಸ ಪವಿತ್ರತಮ ಚರಿತರ 1 ವ್ಯಾಸರಾಜ ಗುರುವರ್ಯ ರಚಿತ ತಾ ತ್ಪರ್ಯ ಚಂದ್ರಿಕಾ ಗ್ರಂಥವನು ವಾಸುದೇವ ನರಹರ್ಯನುಗ್ರಹದಿ ಉರ್ವರಿತವ ವಿರಚಿಸಿ ಮೆರೆದ ಶೇಷಚಂದ್ರಿಕಾಚಾರ್ಯರೆಂಬೊ ಗುರು ವ್ಯಾಸರಾಜರ ಪರಾವತಾರರ 2 ರಾಗ ದ್ವೇಷಗಳ ತೊರೆಯುತ ತ ನ್ನನು ರಾಗದಿಂದ ಭಜಿಸುವ ಜನಕೆ ಭೂಗಕಲ್ಪ ತರುವಂತೆ ಅರಿಷ್ಠವ ನೀಗಿ ಸಾಧು ಭೋಗಗಳೀವ ಯೋಗಿಜನ ಮನೋನಯನ ಪ್ರಸನ್ನ ಶ್ರೀ ರಾಘವೇಂದ್ರರಪರಾವತಾರರ 3
--------------
ವಿದ್ಯಾಪ್ರಸನ್ನತೀರ್ಥರು
ಪ್ರಿಯ ಹಯಾಸ್ಯವಿಠಲ | ದಯದಿ ಪೊರೆ ಇವನಾ ಪ ನಯವಿನಯದಿಂ ಬೇಡ್ವ | ದಾಸತ್ವ ದೀಕ್ಷಾ ಅ.ಪ. ದಾಸರಾಯರ ಕರುಣ | ಪಾತ್ರ ನಿರುವನು ಈತಸೂಸಿದತಿಭಕುತಿಯಿಂ | ಸೇವೆಯನು ಗೈವಾ |ಏಸೊ ಜನ್ಮದ ಪುಣ್ಯ | ರಾಶಿ ಬಂದೊದಗುತಲಿಆಶಿಸುತ್ತಿರುವನೂ | ದಾಸದೀಕ್ಷೆಯನು 1 ಅಂಕಿತವ ನಿತ್ತಿಹೆನೊ | ಪಂಕಜಸನ ವಂದ್ಯಶಂಕೆಯಿಲ್ಲದೆ ಸ್ವಪ್ನ | ಸೂಚ್ಯದಂತೇವೆಂಕಟೇಶನೆ ಇವನಾ | ಮಂಕುಮತಿಯನೆ ಕಳೆದುಬಿಂಕದಿಂ ಪೊರೆಯಲ್ಕೆ | ಪ್ರಾರ್ಥಿಸುವೆ ಹರಿಯೇ 2 ಶ್ರದ್ಧೆಯಿಂದಲಿ ಇವನು | ಮಧ್ವಮತ ದೀಕ್ಷೆಯಲಿಬದ್ಧವಾಗಲಿ ಹರಿಯೆ | ಸಿದ್ದ ಮುನಿವಂದ್ಯಾಶುದ್ದ ತತ್ವಗಳೆಲ್ಲ | ಬುದ್ದಿಗೇ ನಿಲುಕಿಸುತಶುದ್ದೋದ ನೀನು ತವ | ಪ್ರಧ್ವಂಸಗೊಳಿಸೊ 3 ಹರಿಯರಲಿ ಸದ್ಭಕ್ತಿ | ಕರುಣಿಸುತ ತೋಕನಿಗೆ ಪರಿಪರಿಯಲಿಂ ಕೀರ್ತಿ | ಸಂಪನ್ನನೆನಿಸೋಮರುತಂತರಾತ್ಮ ಹರಿ | ದುರಿತಾಳಿ ಪರಿಹರಿಸಿಕರುಣದಿಂ ಕೈಪಿಡಿದು | ಉದ್ದರಿಸೊ ಹರಿಯೇ 4 ಕೈವಲ್ಯದರಸಾಗಿ | ಭಾವಮೈದುನಗೊಲಿದುಬೋವ ಬಂಡಿಗೆ ಆದೆ | ಶ್ರೀವರನೆ ಹರಿಯೇಗೋವತ್ಸದನಿ ಕೇಳಿ | ಆವು ಧಾವಿಸುವಂತೆನೀವೊಲಿದು ಪೊರೆಯೊ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಬದರೀ ಪ್ರಸನ್ನವಿಠಲ | ಮುದದಿ ಪೊರೆ ಇವನಾ ಪ ವಿಧಿ ಭವಾದೀ ವಂದ್ಯ | ಸಕಲ ಜಗತ್ರಾಣಅ.ಪ. ಬುದ್ಧಿಯಲಿ ನೀ ಸ | ದ್ಭುದ್ಧಿ ಪ್ರೇರಕನಾಗಿಮಧ್ವಮತ ದೀಕ್ಷೆಯಲಿ | ಬದ್ಧವೆನಿಸಿವನಾಹೆದ್ದಾರಿ ಮೀರದಲೆ | ಶುದ್ಧ ಸಾಧನಗೈಸಿಉದ್ಧಾರ ಮಾಡೋಹರಿ | ಬದರೀ ನಿವಾಸ 1 ಗುರುಹಿರಿಯನುಸರಿಪ | ವರಮತಿಯ ಕರುಣಿಸುತತರಳನನು ಕೈಪಿಡಿದು | ತೋರೋ ಸನ್ಮಾರ್ಗಅರಹುಲೇನಿಹುದಿನ್ನು | ಸರ್ವಜ್ಞ ನೀನನ್ನುದರ್ವಿ ಜೀವನ ಕಾವ | ಹವಣೆ ನಿನದಲ್ಲೇ 2 ಸತ್ಸಂಗ ಇವಗಿತ್ತು | ಕುತ್ಸಿತವ ಹೊರದೂಡಿವತ್ಸಾರಿ ಶ್ರೀಹರಿಯೆ | ವತ್ಸನ್ನ ಪೊರೆಯೇ |ಮತ್ಸಕೇತನ ಜನಕ | ಉತ್ಸವದಿ ಮೆರೆವಂಥಸತ್ಸ್ವಭಾವನೆ ದೇವ | ಭಿನ್ನವಿಪೆ ನಿನಗೆ 3 ಜ್ಞಾನ ಭಕ್ತಾದಿಗಳ | ನೀನಾಗಿ ಕೊಟ್ಟವಗೆಮಾನನಿಧಿ ಪೊರೆಇವನ | ಧೀನಜನಬಂದೊಕಾಣೆ ಮೂರ್ಲೋಕದೊಳು | ನಿನ್ನಂಥ ಕರುಣಿಗಳಶ್ರೀನಿವಾಸನೆ ತೋರೋ | ಹೃದ್ಗುಹದಿ ಇವಗೇ 4 ಸುಪ್ತೀಶ ನೀನಾಗಿ | ಗೊತ್ತು ಮಾಡ್ಡಂಕಿತವಇತ್ತಿಹೆನೊ ತರಳನಿಗೆ | ವ್ಯಾಪ್ತ ಮೂರುತಿಯೇಇತ್ತು ಮನದಿಪ್ಟವನಾ | ಎತ್ತು ಭವದಿಂದೆಂದುಗೋಪ್ತ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 5
--------------
ಗುರುಗೋವಿಂದವಿಠಲರು
ಬರಬಾರದೇನೋ ಹರಿಯೇ | ಹೇ ದೊರೆಯೆ ಪ ಕರೆದು ಚೀರುತಲಿರೇ | ಮರೆಯಲಿಪ್ಪುದು ಥರವೇ ಅ.ಪ. ಅಕ್ಷಯ ಹಾಕೀ | ಭರದಿ ಸಲಹಿದೆ ಅಂದೂ1 ಸರಿ ಅಧಿಕರು ನಿನಗೇ | ನರ ಸುರರಲಿ ಯಾರೂಇರರು ಎಂಬುದ ತಿಳಿದು | ಗರುವ ಮಾಡುವಿ ಏನೊ 2 ಬಂಧು ನೀನಲ್ಲವೇನೋ | ಎಂದೆಂದಿಗೂ ನೀನುಇಂದು ಎನ್ನಯ ಕಣ್ಣಾ | ಮುಂದಕೆ ಬಂದು ನಿಲ್ಲೋ3 ದೇಹದಿ ಜೀವಾಂತರದೀ | ಬಹಿರಂತರದಿ ವ್ಯಾಪ್ತಮುಹುರ್ಮುಹು ಪ್ರಾರ್ಥಿಸುವೇ | ಮಹ ಮಹಿಮನೆ ಬಾರೊ 4 ಗುರು ಗೋವಿಂದ ವಿಠಲಾ | ಸುರ ಶತೃಗಳು ಪಟಳಾಹರಿಸೆನ್ನ ವಿದ್ಯಾಪಟಲಾ | ತೋರೋ ನಿನ್ನ ಮುಖ ಕಮಲಾ 5
--------------
ಗುರುಗೋವಿಂದವಿಠಲರು
ಬಲುಕಷ್ಟ ಬರಗಾಲ ಬಂದಿತಯ್ಯ ವೈರಿ ಜನಕೆ ಬರಬಾರದಯ್ಯ ಪ ಶಿಶುಗಳಿಗೆ ಹಾಲಿಲ್ಲ ಪಶುಗಳಿಗೆ ಮೇವಿಲ್ಲ ಉಸರಲು ಬಾಯಿಲ್ಲ ವೃದ್ಧ ಜನಕೇ ಅಶನ ವಸನಕ್ಕಾಗಿ ವ್ಯಸನ ಪೂರಿತರಾಗಿ ನಿಶಿ ಹಗಲು ಜನರೆಲ್ಲ ಉಸುರು ಹಾಕುತಲಿಹರು 1 ಧÀವಸಧ್ಯಾನ್ಯದ ಬೆಲೆಯು ದಿವಸ ದಿವಸಕೆ ಮಹಾ ಪ್ರವಾಹದಂದದಿ ವೃಧ್ಧಿಯಾಗುತಲಿಹುದು ಅವಸರಕೆ ಬೇಡಿದರೆ ಲವಣದೊರೆಯದು ಮೇಲೆ ಶಿವಶಿವಾಯೆಂದು ಭವಣಿಯನನುಭವಿಸುವರು 2 ಶಾರೆ ಕಾಳು ಭಿಕ್ಷೆಕೆರೆಯುವದಕೆ ಗತಿಯಿಲ್ಲಾ ಶರಗೊಡ್ಡಿ ಕರೆದರೂ ಕೊಂಡರೊಬ್ಬರುಯಿಲ್ಲಾ ಅರೆಹೊಟ್ಟಿಯುಂಡು ಹರಕು ಬಟ್ಟಯನುಟ್ಟ ಮರಮರನೆ ಮನದೊಳಗೆ ಮರುಗುವರು ಬಡಜನರೂ 3 ಜೋಳನವಣಿ ಸಜ್ಜಿ ಕಾಳಿಗೇರಿದ ಬೆಲೆಗೆ ತಾಳಿ ಮನದಲಿ ವ್ಯಥಿಯ ಕೂಲಿ ಜನರು ಕೂಳಿಗಾಗದು ಎಂದು ಬಾಳುವೆಯ ಗೈಯುವಂಥ ಕೂಲಿವಲ್ಲೆವು ಎನುತ ಗೋಳಿಡುತಲಿಹರು 4 ಕಡಲೆ ಕಾಣದ ಹರಿಯು | ಕಡಲೊಳಡಗಿದ ಮೃಡನು ಸೊಡರೆಣ್ಣೆಸಿಗದೆಂದು ಸುಡುಗಾಡು ಸೇರಿದಾ ಅಡಕಿ ಸಕ್ಕರೆ ಗೋಧಿ ಕೊಡುವ ಬೆಲೆಯನು ಕೇಳಿ ಮಿಡುಕಿ ಮನದೊಳು ಕಣ್ಣ ಬಿಡುತಿಹರು ಸುಮನಸರು 5 ಮಳೆರಾಯ ಮುನಿದುದಕೆ ಹೊಲ ಬೆಳೆಯದಿದ್ದುದಕೆ ಬಳುತಿಹವು ಬಡಜನರ ಕಣ್ಣಿಂದ ನೀರು ಜಲಹರಿಸುವದು ನೋಡಿ ನಲಿದಾಡಿ ನಗುತಿಹಳುಕ್ಷಾಮದೇವಿ 6 ಕ್ಷಾಮದೇವಿಗೆ ತನ್ನ | ಧಾಮಸೇರುವಂತೆ ನೀಡಿ ಮಾಡಿ ಸಾಕು ನಮ್ಮ ಸಕಲ ಜನಕೇ | ಕ್ಷೆಮ ಸೌಖ್ಯವಗರೆದು | ಪ್ರೇಮದಲಿ ಪೊರೆ ಕರವ ನಾ | ಮುಗಿದು ಪ್ರಾರ್ಥಿಸುವೆ ಶಾಮಸುಂದರ ಸ್ವಾಮಿ 7
--------------
ಶಾಮಸುಂದರ ವಿಠಲ
ಬಾರಯ್ಯ ಬಾರಯ್ಯ ಭಕ್ತವತ್ಸಲ ಹರಿ ಶ್ರೀಕೃಷ್ಣ ಪ ಭಕ್ತರು ಬಂದು ದ್ವಾರದಿ ನಿಂದು ಭಕ್ತಿಲಿ ಹಾಡುತ ಪಾಡುತಲಿರುವರು ಮುಕ್ತಿದಾತ ನೀನಲ್ಲದೆ ಸರ್ವ- ಶಕ್ತರಿನ್ಯಾರಿಹರೈ ಎನ್ನುತ ಪೊಗಳ್ವರು 1 ತಾಳಮೇಳದವರೆಲ್ಲರು ನಿನ್ನಯ ಊಳಿಗ ಮಾಡಬೇಕೆನುತಲಿ ಬಂದು ವೇಳೆ ವೇಳೆಗೆ ತಮ್ಮ ಸೇವೆಯ ಸಲಿಸುತ ಭಾಳ ಸಂಭ್ರಮದಿಂದ ಹಾರೈಪರೊ ಹರಿ 2 ತುಂಬುರು ನಾರದರ್ವೀಣೆಯ ನುಡಿಸಲು ರಂಭಾದ್ಯಪ್ಸರ ಸ್ತ್ರೀಯರು ನರ್ತಿಸೆ ವಿಶ್ವ ಕು- ಟುಂಬಿಯೆ ಬಾ ಬಾರೆನ್ನುತ ಸ್ತುತಿಪರು3 ಅಂಬರದಲಿ ದೇವತೆಗಳೆಲ್ಲರು ನೆರೆದು ತುಂಬಿ ಪುಷ್ಪವೃಷ್ಟಿಗಳನೆ ಮಾಡುತ ಕುಸುಮ ಮಳೆ ಗಂಭೀರದಿ ಸುರಿಸುತ ಪ್ರಾರ್ಥಿಸುವರು 4 ಅತ್ರಿ ವಸಿಷ್ಠ ಗೌತಮ ಮೊದಲಾಗಿ ರಾತ್ರಿಹಗಲು ಎಡೆಬಿಡದಲೆ ಸ್ತುತಿಸುತ ವೃತ್ರಾರಿಯ ಸುತನಿಗೆ ಸಾರಥಿಯೆ ವಿ- ಚಿತ್ರ ವ್ಯಾಪಾರಿ ಶ್ರೀಹರಿ ಎಂದು ಪೊಗಳ್ವರು 5 ಅಣುಮಹದ್ರೂಪನೆ ಘನಮಹಿಮನೆ ನಿನ್ನ ಮಣಿದು ಬೇಡಿ ಕೈಮುಗಿಯುತ ಸ್ತುತಿಪರು ಪ್ರಣವ ಪ್ರತಿಪಾದ್ಯನೆ ನಿನ್ನ ಗುಣಗಳ ಎಣಿಸಲಸಾಧ್ಯವೆನುತ ಕೊಂಡಾಡ್ವರು 6 ನವನವ ರೂಪದಿ ನಲಿಯುವ ದೇವನೆ ನವವಿಧ ಭಕುತರು ನಮಿಸುತ ಕರೆವರು ಭುವನ ಮೋಹನ ಸುಂದರಮೂರ್ತಿಯೆ ಎಂದು ಕವಿಗಳು ಪೊಗಳುತ ಕುಣಿಯುತಲಿರುವರು 7 ಎಡಬಲದಲಿ ಶ್ರೀ ಭೂದೇವಿಯರಿರೆ ಬಿಡದೆ ಛತ್ರಚಾಮರಗಳಿಂದೊಪ್ಪುತ ತಡಮಾಡದೆ ಬಾ ಮಡದಿಯರ ಸಹಿತದಿ ದಡ ದಡ ಬಾರೆಂದು ಬಡ ಬಡ ಕರೆವರು 8 ವಿಶ್ವರೂಪಕ ವಿಶ್ವನಾಮಕ ವಿಶ್ವತೋಮುಖ ವಿಶ್ವನಾಟಕ ವಿಶ್ವವ್ಯಾಪಕ ವಿಶ್ವಾಧಾರಕ ವಿಶ್ವ ಕುಟುಂಬಿಯೆ ವಿಶ್ವಾಸದಿ ಬಾ 9 ವಿರೋಧಿಕೃತು ಸಂವತ್ಸರ ಬರುತಿರೆ ಪರೋಪಕಾರವ ಮಾಡುತ ಸುಜನರು ವಿರೋಧಿಗಳ ದೂರಿಡುತಲಿ ಶ್ರೀ ಹರಿ ಸರೋಜದಳ ನೇತ್ರನÀ ಸ್ತುತಿಸುವರು 10 ಕಮಲಾಕ್ಷಿಯ ಒಡಗೂಡುತ ಬಾ ಬಾ ಕಮಲಾಸನ ಜನಕನೆ ಹರಿ ಬಾ ಬಾ ಕಮಲನಾಭ ವಿಠ್ಠಲ ಬೇಗ ಬಾರೆಂದು ಸುಮನಸ ವಂದ್ಯನ ಸ್ಮರಿಸುತ ಕರೆವರು11
--------------
ನಿಡಗುರುಕಿ ಜೀವೂಬಾಯಿ
ಬಾರೆ ಪಾರ್ವತಿ ಸಾರೆ ಸುಖವ ತೋರೆ ನಿನ ದಯವ ಪ ಬಾರಿ ಬಾರಿಗು ಪ್ರಾರ್ಥಿಸುವೆನೆ ಸಾರಸಾಕ್ಷಿಯೆ ಸರ್ಪವೇಣಿಯೆ ಅ.ಪ ದಕ್ಷಕುವರಿಯೆ ಈಕ್ಷಿಸೆನ್ನನು- ಪೇಕ್ಷೆ ಮಾಡದಲೆ ಅಕ್ಷಿತ್ರಯನ ಸತಿಯೆ ಭಕ್ತರ ಕಷ್ಟ ಬಡಿಸುತಲಿ ಸೂಕ್ಷ್ಮ ಮತಿಯನಿತ್ತು ಕೃಷ್ಣನ ಸ್ತೋತ್ರಗಾನದಲಿ ಅ- ಪೇಕ್ಷೆಯೊದಗುವ ಮನವ ಪಾಲಿಸು ರಕ್ಷಿಸೀಗಲೆ ಭಕ್ತವತ್ಸಲೆ 1 ಮಂದಗಮನೆ ಮತ್ತೊಂದು ಪೇಳುವೆ ನಂದಿವಾಹನನಾ ಮುಂದೆ ಸ್ತುತಿಪ ಭಕ್ತವೃಂದ ವಿ- ದೆಂದು ಪೇಳಿದೆ ನಾ ಸುಂದರ ಶ್ರೀ ಹರಿಯ ಸೇವೆಗೆ ಪೊಂದಿಸೆನ್ನ ಮನ ಚಂದದಿಂದ ಪ್ರಾರ್ಥಿಸುವೆನೆ ಸುಂದರಾಂಗಿಯೆ ನಿನ್ನನನುದಿನ 2 ಕಮಲನೇತ್ರೆಯೆ ವಿಮಲ ಸದ್ಗುಣಗುಣಿಯೆ ಪಾರ್ವತಿ ಕಮಲಸಂಭವ ಭವಸುರಾರ್ಚಿತನ ಸ್ಮರಿಸುವ ಮತಿ ಹೃ- ತ್ಕಮಲದೊಳಗೆ ನಿಲಿಸುವಂತೆ ಮಾಡು ಸದ್ಗತಿ ಕಮಲನಾಭ ವಿಠ್ಠಲ ಕೊಡುವ ನೆನುತ ಕೀರುತಿ 3
--------------
ನಿಡಗುರುಕಿ ಜೀವೂಬಾಯಿ
ಬೆಳಗಾಗಲು ಅರಘಳಿಗೆಯು ಇರುತಿರೆ ಸ್ಮರಿಸುವೆ ವಿಶ್ವಮೂರುತಿಯನ್ನು ಬೆಳಗಾಗಲು ಹರಿಧ್ಯಾನವ ಮಾಡುತ ಬಹಿರ ಭೂಮಿಗ್ಹೋಗುತ ಮುನ್ನು 1 ಕಲಿ ಮೊದಲಾಗಿಹ ದೈತ್ಯರನೆಲ್ಲಾ ವಿ- ಸರ್ಜನೆ ಮಾಡುತ ಮತ್ತಿನ್ನೂ ದಂತ ಧಾವನೆಯ ಮಾಡುತ ಶ್ರೀ ಮಾ- ಧವನನು ಸ್ಮರಿಸುವೆ ನಾನಿನ್ನೂ 2 ಮುಖವನು ತೊಳೆಯುತ ಮುರಹರಿ ಧ್ಯಾನದಿ ಶ್ರೀತುಳಸಿಯ ನಮಿಸುತಲಿನ್ನೂ ಮೀಸಲ ನೀರನು ಎರೆಯುತ ಬೇಗದಿ ಮೃತ್ತಿಕಿ ಫಣಿಗಿಡುತಲಿ ಇನ್ನು 3 ಮೂರು ಪ್ರದಕ್ಷಿಣಿ ಮಾಡುತ ಬೇಗದಿ ಮುದದಿ ನಮಸ್ಕರಿಸುತಲಿನ್ನೂ ದೇವರ ಮನೆಕಡೆ ಪೋಗುತ ನಿಂದಿಹ ಜಯವಿಜಯರಿಗೊಂದಿಸಿ ಮುನ್ನು 4 ದೇವರ ದರ್ಶನಕಾಜ್ಞೆಯ ಕೇಳುತ ದೇವರ ಗೃಹದೊಳು ಪೋಗುತಲಿ ಮಾಯಾ ಪತಿಯನು ಮನದೊಳು ಧ್ಯಾನಿಸಿ ವಂದನೆ ಮಾಡುತ ಬೇಗದಲಿ 5 ದೇವರ ಮನೆಯನು ಸಾರಿಸಿ ಶಂಖುಚಕ್ರವುಗದೆ ಪದುಮನ್ಹಾಕುತಲಿ ಗಜವರದನ ಕೊಂಡಾಡುತ ಮುದದಿ ಗಜೇಂದ್ರ ಮೋಕ್ಷನ ಸ್ಮರಿಸುತಲಿ 6 ಗೋವೃಂದದ ಕಡೆ ಪೋಗುತ ಶ್ರೀ- ಗೋವಿಂದನ ಸ್ಮರಿಸುತ ನಿತ್ಯದಲಿ ಗೋಪೀ ಬಾಲನ ಗೋಕುಲವಾಸನ ಗೋವ್ಗಳ ಮಧ್ಯದಿ ಸ್ಮರಿಸುತಲಿ 7 ಬಾಲಕೃಷ್ಣನ ಲೀಲೆಯ ಪೊಗಳುತ ಬಾಲಲೀಲೆಗಳ ಕೇಳುತಲಿ ಪುರಾಣವ ಪೇಳುವ ದ್ವಿಜರಿಗೆ ವೃದ್ಧರಿಗೆರಗುತ ಪ್ರತಿನಿತ್ಯದಲಿ 8 ಮುರಳಿಯನೂದುತ ಮೆರೆಯುವ ಕೃಷ್ಣನ ಅನುದಿನ ಮಾಡುತಲಿ ಸರಸಿಜನಾಭನ ಸ್ಮರಿಸುತ ಮನದಲಿ ಸ್ನಾನಕೆ ತೆರಳುತ ಶೀಘ್ರದಲಿ 9 ನದಿಯ ಸ್ನಾನಕೆ ಪೋಗುವ ಸಮಯದಿ ನಾರದವಂದ್ಯನ ಸ್ಮರಿಸುತಲಿ ಭಾಗೀರಥಿಯಲಿ ಸ್ನಾನವು ಮಾಡುತ ಬಾಗುತ ಸಿರವನು ಬೇಗದಲಿ10 ಫಣಿರಾಜನ ಶಯನದಿ ಮಲಗಿಹ ಶ್ರೀ- ಪರಮಾತ್ಮನ ನೋಡುತ ಬೇಗ ಪಾದಗಳ ಸೇವಿಪ ಶ್ರೀ ಭೂದೇವಿಯ- ರೇನುಧನ್ಯರೆಂದೆನುತಾಗ11 ಪೊಕ್ಕಳ ಮಧ್ಯದಿ ಪೊರಟಿಹ ನಾಳದ ತುದಿಯಲಿ ರಂಜಿಪ ಕಮಲದಲಿ ಉದ್ಭವಿಸಿದ ನಾಲ್ಮೊಗನನು ನೋಡುತ ಬಗೆ ಬಗೆ ಪ್ರಾರ್ಥಿಸುತಲಿ ಇನ್ನು 12 ನೆರೆದಿಹ ಸುರ ಪರಿವಾರವೆಲ್ಲ ಶ್ರೀ- ಹರಿಯನು ವಾಲೈಸುತಲಿನ್ನೂ ಪರಮವೈಭವದಿ ಮೆರೆಯುವ ದೇವನ ಸ್ಮರಿಸುವೆ ಜಲಮಧ್ಯದೊಳಿನ್ನು 13 ದೇವರ ರಥವನು ತೊಳೆಯುವೆನೆಂಬ- ನುಸಂಧಾನದಿ ಸ್ನಾನವು ಮಾಡಿ ದೇವರ ರಥ ಶೃಂಗರಿಸುವೆನೆನ್ನುತ ಶ್ರೀಮುದ್ರೆಗಳ್ಹಚ್ಚುತ ಪಾಡಿ 14 ನಿತ್ಯ ಕರ್ಮಮುಗಿಸುವ ಬೇಗದಿ ಶ್ರೀ- ಹರಿಪೂಜೆಗೆ ಅಣಿಮಾಡುತಲಿ ಪುಷ್ಪಗಳನು ಗಂಧಾಕ್ಷತೆ ಶ್ರೀ ತುಳಸಿಯ ತಂದಿಡುವೆನು ಮೋದದಲಿ 15 ಪಂಚಭಕ್ಷ ಪಾಯಸಗಳ ಮಾಡುತ ಪಂಚಾತ್ಮಕ ನ ಸ್ಮರಿಸುತಲಿ ಮಿಂಚಿನಂತೆ ಹೊಳೆಯುವ ತಬಕಿಲಿ ತಾಂಬೂಲವ ನಿರಿಸುತ ಬೇಗದಲಿ 16 ಬ್ರಹ್ಮನು ಈ ವಿಧ ಪೂಜೆಯ ಪ್ರತಿದಿನ ಬ್ರಹ್ಮನ ಪಿತಗರ್ಪಿಸುತಲಿರಲು ಸುಮ್ಮಾನದಿ ಮಹಲಕುಮಿಯು ಇದ- ನೊಯ್ಯತ ಸುರಮುನಿ ವಂದ್ಯನಿಗೆ ತಾನರ್ಪಿಸಲು17 ಪರಮಾತ್ಮನು ಈ ವಿಧ ಸೇವೆಯ ಕೈ- ಗೊಳುತಲಿ ಸಂತಸ ಪಡಲಿನ್ನು ಅರಿತವರೆಲ್ಲರು ನಿರುತದಿ ಹರಿ ಧ್ಯಾ- ನವ ಮಾಡುತಲಿರೆ ತಾವಿನ್ನು 18 ದೇವಪೂಜೆ ವೈಶ್ವದೇವವು ನಿತ್ಯದಿ ಗೋಬ್ರಾಹ್ಮಣನರ್ಚಿಸಿ ಇನ್ನು ಸಾಯಂ ಸಮಯದಿ ಸಾಧುಗಳೊಡನೆ ದೇವರ ಕಥೆ ಕೇಳುತಲಿನ್ನೂ 19 ಝಾಮಝಾಮದಿ ಜಯಶಬ್ದಗಳಿಂ ಜಯಾಪತಿಯನು ಪೊಗಳುತಲಿ ಆರತಿ ಜೋಗುಳ ಹಾಡುತ ಮುದದಲಿ ಮಧ್ವೇಶಾರ್ಪಣ ಪೇಳುತಲಿ 20 ಮಲುಗುವಾಗ ಮುಕುಂದನ ಸ್ಮರಿಸುತ ಲಯ ಚಿಂತನೆಯನು ಮಾಡುತಲಿ ಕರಮುಗಿಯುತ ಕಾಯೇನ ವಾಚಾ ಎಂ- ದ್ಹೇಳುತ ಪ್ರಾಜ್ಞನ ಸ್ಮರಿಸುತಲಿ 21 ಝಾಮಝಾಮದಿ ಶ್ರೀ ಹರಿ ಮಾಧವ ಆಗಲು ಬೆಳಗಿನ ಝಾವದಿ ಸೃಷ್ಟಿಯ ಚಿಂತನೆ ಮಾಡಿ ಎಂದೆನುತ22 ಮಳಲಗೌರಿ ನೋಂತಿಹ ಸತಿಯರಿಗೆ ಮುರಳೀಧರ ಒಲಿದಿಹನೆನ್ನುತ ಉದಯವಾಗಲು ವಿಶ್ವನ ಸ್ಮರಿಸುತ ವಿಧಿ ನೇಮಗಳನುಸರಿಸುತ್ತ 23 ನಿತ್ಯದಿ ಈ ತೆರವಾಚರಿಸುವ ನರ ಮುಕ್ತನು ಧರೆಯೊಳಗೆಂದೆನುತ ಅತ್ಯುತ್ಸಾಹದಿ ಬರೆದೋದುತಲಿ- ದರರ್ಥವ ತಿಳಿದಾಚರಿಸುತ್ತ24 ಈ ವಿಧ ಚಿಂತನೆ ಮಾಡುವ ಮನುಜಗೆ ದಾರಿದ್ರ್ಯವು ದೂರಾಗುವದು ಮಾರಮಣನು ತನ್ನವರೊಡಗೂಡುತ ವಾಸವಾಗುವನೆಂಬುವ ಬಿರುದು25 ಕರೆಕರೆಗೊಳ್ಳದೆ ಕೇಳಿರಿ ನಿತ್ಯವು ಕನಕಗಿರಿವಾಸನ ಮಹಿಮೆ ಕನಲಿಕೆ ಕಳೆವುದು ಕಮಲನಾಭ- ವಿಠ್ಠಲನು ಕೊಂಡಾಡುತ ಮಹಿಮೆ 26
--------------
ನಿಡಗುರುಕಿ ಜೀವೂಬಾಯಿ
ಬೇಗನೆ ಬಾರೊ ಶ್ರೀ ಹರಿಯನೆ ತೊರೋ ಶ್ರೀ ಗುರುವೇ ದಯದಿ ಪ. ಬೇಗನೆ ಬಾರೊ ಯೊಗಿಗಳೊಡೆಯ ನಾಗಶಯನ ಪ್ರೀತ ತ್ವರಿತದಿ ಅ.ಪ. ಭಕ್ತರೆಲ್ಲರು ನಿಮ್ಮ ದಾರಿಯನೆ ನೋಡುತಾ- ಸಕ್ತಿಯಿಂದಿರುತಿಹರೊ ಮೋದ ಗುರುವೆ ನಿಮ್ಮ ಶಕ್ತಿಗೆ ಎದುರ್ಯಾರೊ ಧರೆಯೊಳು 1 ಕಾಣದೆ ಕಂಗಳು ಕಾತರಗೊಳ್ಳುತ ತ್ರಾಣಗೆಡುತಲಿಹವೊ ಪ್ರಾಣವ ರಕ್ಷಿಪ ಪ್ರಾಣಪತಿಯ ಪ್ರಿಯ ಕಾಣೆ ನಾನನ್ಯರನಾ ಜಗದೊಳು 2 ಪರಮಪ್ರಿಯರು ಎಂದು ಪರಮ ಬಿರುದು ಪೊಂದಿ ಪರಮಾತ್ಮನನು ಕಂಡು ಪರಮಾತ್ಮ ತತ್ವ ಪರಮಯೊಗ್ಯರಿಗರುಹಿ ದುರಿತ ತ್ವರಿತದಿ 3 ಕಮಲಾಕ್ಷನನು ಹೃತ್ಕಮಲದಲಿ ಕಾಂಬ ಕಮಲಾಪ್ತ ಅತಿ ಪ್ರೀತ ಕಮಲಸಂಭವಪಿತ ಕಮಲಾಕ್ಷ ಹರಿಯ ಹೃ ತ್ಕಮಲದಲಿ ತೋರೋ ಗುರುವರ 4 ಗೋಪಾಲಕೃಷ್ಣವಿಠ್ಠಲನ ಸೌಂದರ್ಯದ ರೂಪವೆನಗೆ ತೋರೊ ತಾಪವ ಹರಿಸುತ ಕಾಪಾಡಬೇಕೆಂದು ನಾ ಪ್ರಾರ್ಥಿಸುವೆ ಗುರುವೆ ತ್ವರಿತದಿ 5
--------------
ಅಂಬಾಬಾಯಿ
ಭಕ್ತಾರ್ತಿ ಹರ ವಿಠಲ | ತೆತ್ತಿಗನ ಪಾಲಿಸೋ ಪ ಮುಕ್ತೀಶ ಕರುಣಾಳು | ಪ್ರಾರ್ಥಿಸುವೆ ನಿನ್ನಾ ಅ.ಪ. ಕರ ಪಿಡಿದು ಸಲಹೋ 1 ಭವ ತಾಪ | ಕಾರುಣ್ಯನಿಧಿಯೇ 2 ಯತಿಗಳ ಕಾರುಣ್ಯ | ಪಾತ್ರನಿರುವನುಯೀತಅತಿಶಯದ ಸೇವೆಗೆ | ಕಾತುರನು ಇರುವಾಮತಿಯಿತ್ತುಸತ್ಪಥಾ | ಪಥರಲ್ಲಿ ನಡಿಸಿವನರತಿಯು ಶ್ರೀ ಹರಿದಾಸ | ಶತ ಪತ್ರದೊಳಗೆ 3 ಪಾದ | ಅದ್ದೂರಿಯಲಿ ಭಜಿಪಶುದ್ಧ ಬುದ್ಧಿಯನಿತ್ತು | ಉದ್ಧರಿಸೊ ಹರಿಯೇ |ಅದ್ವೈತ ತ್ರಯದರಿಪು | ಬುದ್ಧಿಗೇ ಸಿಲುಕಲೀಶ್ರದ್ಧಾಳುವಿನ ಸಲಹೋ | ಶಬ್ಧ ಗೋಚರನೇ 4 ಕಾಮದಾನತಜನವ | ಶ್ರೀ ವರನೆ ಸರ್ವೇಶ ನೀವೊಲಿಯದಿನ್ನಿಲ್ಲ | ಪಾವನ್ನ ಮೂರ್ತೇಭಾವ ಕೋವಿಯುವ ದೇವ | ಭಾವದಲಿ ಮೈದೊಲೊಗೋವಿಂದಾಂಪತಿ ಗುರೂ | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಭಕ್ತಿಯಲಿ ತನುಮನವು ಸತತ ಬಗ್ಗಿರಲಯ್ಯ ಭುಕ್ತಿಯೆ ಮಹಾಭಕ್ತಿ ನೀಡು ಎನಗೆ ಪ ಯುಕ್ತಿ ಶಕ್ತಿಗಳೆಲ್ಲ ಬಿಡದಿರಲಿ ತತ್ಪಾದ ಶಕ್ತಿಯನು ಎಂದೆಂದು ಗುಣಪೂರ್ಣ ನಿಧಿಯೆ ಅ.ಪ ಇಹಭೋಗ ಬಿಡಿಸಯ್ಯ ಮಹದಾದಿ ದೇವೇಶ ಗುಹಪಿತನಸಖ ನರನಸೂತ ಬಂಧು ಮುಹುರ್ಮುಹು ಪ್ರಾರ್ಥಿಸುವೆ ಮಹಿದಾಸ್ಯ ಹರಿದಾಸ್ಯ ಮಹಪದವಿ ಕರುಣಿಸಯ್ಯ ಮರುತ ಮಂದಿರ ವಿಭುವೆ 1 ಪಂಚಬೇಧ ಜ್ಞಾನ ಅನುಷ್ಠಾನದಿ ಇರಲಿ ಚಂಚಲಿಲ್ಲದ ಭಕ್ತಿ ಇತ್ತು ಮೆಚ್ಚಿ ವಂಚಿಸದೆ ಸಂಸಾರ ಯಾತ್ರೆಯಲಿ ಒಡನಾಡು ಪಂಚಾತ್ಮ ಜಯೇಶವಿಠಲನೆ ಮದ್ಬಿಂಬ 2
--------------
ಜಯೇಶವಿಠಲ
ಭಾರತೀ ಪತಿನುತ ವಿಠಲ ನೀನಿವಳ ಉದ್ಧಾರ ಮಾಡುವುದು ಹರಿಯೇ ಪ ತಾರಕನು ನಿನಗನ್ಯ ಉಂಟೇ ಈರೇಳು ಲೋಕದಲಿ ಧೊರೆಯೇ ಅ.ಪ. ಜನ್ಮಜನ್ಮದಲಿ ಬಲುನೊಂದು ಸತ್ಪುಣ್ಯಗಳನೇ ಮಾಡಿಜನ್ಮಪೊಂದುತಲಿ ಸತ್ಕುಲದಿ ಸನ್ಮತದವನ ಕೈಯ ಪಿಡಿದು |ಸನ್ಮಧ್ವಮತ ದೀಕ್ಷೆಗಳ - ಒಮ್ಮನದಿ ತಾಳುತ್ತನಿಮ್ಮಡಿಯ ನಾಶ್ರಯಿಸಿ ಬಂದಿಹಳ ಸಲಹುವುದು 1 ತರತಮ ಜ್ಞಾನದಲಿ - ಉರುತರೋತ್ಸುಕತೆಯನುನಿರತ ಹರಿಗುರುಗಳಲಿ ಉರುತರದ ಭಕ್ತಿಯನೂ |ಹಿರಿಯರನು ವಿನಯದಿಂ ಪರಿಚರಿಪ ಮತಿಯನ್ನುಕರುಣಿಸೀ ಸಲಹಯ್ಯ ಮರುತಾಂತರಾತ್ಮಾ 2 ಪಂಚಭೇಧದ ಜ್ಞಾನ ಸಂಚಿಂತನೆಯನೇ ಕೊಟ್ಟುಮಿಂಚಿನಂದದಿ ತೋರೊ - ಹೃತ್ಪಂಕಜನಲೀಅಂಚೆವಹಪಿತ ನಿನ್ನ ಪದಕಮಲ ಭಜಿಪಳಿಗೆವಾಂಛಿತಾರ್ಥದನಾಗಿ - ಸಲಹ ಬೇಕಿವಳಾ 3 ಪತಿ ನೀನೆ ಎಂಬಂಥಮತಿಯಿತ್ತು ಭವಗಳನ ಉತ್ತರಿಸು ಹರಿಯೇ 4 ನಿನ್ನ ಪದ ಕಮಲದಲಿ ಜ್ಞಾನಭಕುತಿಗಳಿತ್ತುನನ್ನೆ ಯಿಂದಿವಳ ಚೆನ್ನಾಗಿ ಸಲಹೊ ಹರಿಯೇ |ಸನ್ನುತಿಸಿ ಪ್ರಾರ್ಥಿಸುವೆ - ಮನ್ನಿಸೆನ ಬಿನ್ನಪವಘನ್ನ ಮಹಿಮನೆ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಭಾರತೀ ರಮಣ ಸುರವಿನುತ ಚರಣ ಶಾರದಾ ಪುರ ಶರಣ ಪ ನೂರು ಯೋಜನಮಿರ್ದವಾರಿಧಿ ಲಂಘಿಸಿ ಬೇಗ ಧಾರುಣಿ ಸುತೆಯ ಕಂಡು ದೂರ ನಮಿಸಿ ಸಾರಿ ಮುದ್ರಿಕೆಯ ನಿತ್ತು ತೋರಿರಾಕ್ಷಸಗೆ ಭಯ ಶ್ರೀರಾಮಗೆ ಬಂದು ಕ್ಷೇಮ ವಾರುತಿಯ ಪೇಳಿದಂಥ 1 ಇಂದು ಕುಲದಲ್ಲಿ ಪಾಂಡುನಂದನನೆನಿಸಿ ಜರಾ ಸಂಧ ಮುಖರನು ಗದೆಯಿಂದವರಸಿ ಅಂದುರಣದಲ್ಲಿ ಕರುವೃಂದವ ಮಥಿಸಿ ಆ ನಂದ ಕಂದನೊಲಿಮೆಯ ಛಂದದಿ ಪಡೆದು ಗುರು 2 ಮೇದಿನಿ ಮೋದ ತೀರ್ಥರೆಂದೆನಿಸಿ ವಾದದಿಂದಲಿ ವಾದಿ ಮತ್ತ ವಾರಣ ಮೃಗಾಧಿಪರೆನಿಸಿ ಪಂಚ ಬೇಧ ಬೋಧಿಸುವ ಶಾಸ್ತ್ರ ಸಾದರದಿ ವಿರಚಿಸಿದ 3 ಕಾಲಕಾಲದಲಿ ದ್ವಿಜರಾಲಯದಿ ಬಂದು ನಿನ್ನ ಬಾಲವನಿತೆರ ಸಹ ಶೇವಿಸುವರು ಪಾಲಿಕಿ ಉತ್ಸವದಲ್ಲಿ ಶೇರುವದು ಪೌರಜನ ಪಾಲಿಸಬೇಕಯ್ಯ ಪಾಂಚಾಲಿರಮಣನೆ ನಮೊ 4 ಭವ ಕೂ ಪಾರ ನಾವಿಕನೆ ಎಂದು ಪ್ರಾರ್ಥಿಸುತಲಿ ಸೇರಿದ ಸಜ್ಜನರಘ ದೂರಮಾಡಿ ಪೊರೆವಂಥಕಾರ್ಪರ ನಿಲಯ ಸಿರಿನಾರಸಿಂಹ ನೊಲಿಸಿದ 5
--------------
ಕಾರ್ಪರ ನರಹರಿದಾಸರು